೧೮

೦೦೦ ಸೂ ದಾಯ ...{Loading}...

ಸೂ. ದಾಯ ಭಾಗದೊಳಖಿಳ ರಾಜ್ಯ
ಶ್ರೀಯ ಹಸುಗೆಯ ಕೊಂಡು ಪಾಂಡವ
ರಾಯರೊಪ್ಪಿದರಿಂದ್ರನಿರ್ಮಿತ ರಾಜಧಾನಿಯಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವಜರು ಸಮ
ಪಾಳಿಗಳ ಸೇರುವೆಯೊಳಿದ್ದರು ಸಾನುರಾಗದಲಿ
ಖೇಳಮೇಳದ ಬೇಟೆಗಳ ವೈ
ಹಾಳಿಗಳ ಜೂಜಿನ ಸಮಂಜಸ
ಲೀಲೆಗಳ ಕೇಳಿಯಲಿ ಕಳೆದರು ವರುಷಪಂಚಕವ ॥1॥

೦೦೨ ಕರೆಸಿದನು ಧೃತರಾಷ್ಟ್ರ ...{Loading}...

ಕರೆಸಿದನು ಧೃತರಾಷ್ಟ್ರ ಭೂಪತಿ
ಮುರಹರನ ದ್ರುಪದನ ಯುಧಿಷ್ಠಿರ
ನರ ವೃಕೋದರ ಭೀಷ್ಮ ಗುರು ಕೃಪ ಕರ್ಣ ಶಕುನಿಗಳ
ಎರಡು ಭಾಗವ ಮಾಡಿ ವಿಶ್ವಂ
ಭರೆಯ ರಾಜ್ಯವನುಭಯ ರಾಯರು
ಹೊರೆ ಹೊಗದೆ ಪಾಲಿಸಲಿ ಪಂಥದೊಳೆಂದನಂಧ ನೃಪ ॥2॥

೦೦೩ ಅಹುದು ಹೊಲ್ಲೆಹವಲ್ಲ ...{Loading}...

ಅಹುದು ಹೊಲ್ಲೆಹವಲ್ಲ ಖುಲ್ಲರ
ಕುಹಕ ಕೊಳ್ಳದು ಬೇರೆ ರಾಜ್ಯದೊ
ಳಿಹರೆ ಸೇರುವೆ ದೃಢವಹುದು ದಾಯಾದ ಮಾರ್ಗದಲಿ
ಗಹನವೇಕಾಮಿಷ ಸಮುದ್ಭವ
ದಹಿತತನದುತ್ತರಣವತಿ ದು
ಸ್ಸಹವಲೇ ನೀ ನೆನೆದ ಹದ ಲೇಸೆಂದನಾ ಭೀಷ್ಮ ॥3॥

೦೦೪ ಅರಸ ಕೇಳೈ ...{Loading}...

ಅರಸ ಕೇಳೈ ಸಕಲ ರಾಜ್ಯವ
ನೆರಡು ಭಾಗವ ಮಾಡಿ ಪೂರ್ವೋ
ತ್ತರದ ದಕ್ಷಿಣ ಪಶ್ಚಿಮಂಗಳ ಹೆಚ್ಚು ಕುಂದುಗಳ
ಪುರ ನಗರ ಖರ್ವಟ ಮಡಂಬ
ಸ್ಫುರಿತ ಖೇಟಗ್ರಾಮವೆಂಬವ
ನೆರಡು ಭಾಗವ ಮಾಡಿದರು ಕೂಡಿದರು ಸಮವಾಗಿ ॥4॥

೦೦೫ ಪುರ ಸುರೇನ್ದ್ರಪ್ರಸ್ಥವರಸಂ ...{Loading}...

ಪುರ ಸುರೇಂದ್ರಪ್ರಸ್ಥವರಸಂ
ಗಿರವು ಧರ್ಮಸುತಂಗೆ ಹಸ್ತಿನ
ಪುರ ಸುಯೋಧನಗುಭಯರಾಯರ ರಾಜಧಾನಿಗಳು
ಚರಮ ದಕ್ಷಿಣವಾಗಿ ಪೂರ್ವೋ
ತ್ತರ ವಿಲಂಬಿತವಾಗಿ ಹಿಮ ಸಾ
ಗರದ ಮಧ್ಯದ ಭೂಮಿಯನು ಸೇರಿಸಿದರೆರಡಾಗಿ ॥5॥

೦೦೬ ವಾರಣಪ್ರತತಿಯನಘಾಟದ ...{Loading}...

ವಾರಣಪ್ರತತಿಯನಘಾಟದ
ವಾರುವಂಗಳ ಮಣಿಮಯದ ಹೊಂ
ದೇರುಗಳನಾಭರಣವನು ತೆಗೆಸಿದರು ಸಮವಾಗಿ
ಕೌರವರು ಪಾಂಡವರುಗಳ ಮನ
ದೋರೆ ಪೋರೆಯ ತಿಳುಹಿ ವೈರ ವಿ
ಕಾರವನು ಬಿಡಿಸಿದರು ಭೀಷ್ಮಾದಿಗಳು ಹರುಷದಲಿ ॥6॥

೦೦೭ ಬಳಿಕ ಸುಮುಹೂರ್ತದಲಿ ...{Loading}...

ಬಳಿಕ ಸುಮುಹೂರ್ತದಲಿ ಹೊರಗುಡಿ
ಬಳಸಿ ಹೊಯಿದವು ರಾಣಿವಾಸದ
ನಿಳಯನಿಳಯದ ತಳಿಗೆದಂಬುಲ ಮಂಗಳಾರ್ತಿಗಳ
ಫಲಸಮೂಹದ ಕಾಣಿಕೆಯ ಕೈ
ಗೊಳುತ ಗಾಂಧಾರಿಗೆ ಮಹೀಶನ
ಲಲನೆಯರಿಗಭಿನಮಿಸಿ ಕಳುಹಿಸಿಕೊಂಡರುಚಿತದಲಿ ॥7॥

೦೦೮ ಕಳುಹಲೈತನ್ದನ್ಧನೃಪತಿಯ ...{Loading}...

ಕಳುಹಲೈತಂದಂಧನೃಪತಿಯ
ನಿಲಿಸಿದರು ನಿಳಯದಲಿ ಕೌರವ
ಕುಲದ ನೂರ್ವರ ಕರ್ಣ ಶಕುನಿ ಜಯದ್ರಥಾದಿಗಳ
ನಿಲಿಸಿದರು ಗಜಪುರದ ಯೋಜನ
ದಳತೆಯಲಿ ಗುರು ಭೀಷ್ಮ ವಿದುರರು
ಕೆಲವು ಪಯಣವ ಬಂದು ಕಳುಹಿಸಿಕೊಂಡರುಚಿತದಲಿ ॥8॥

೦೦೯ ಭೂಮಿ ಲಮ್ಬದ ...{Loading}...

ಭೂಮಿ ಲಂಬದ ನೃಪರ ಬಲದು
ದ್ದಾಮ ವಿಭವದೊಳಸುರರಿಪು ಸಹಿ
ತೀ ಮಹೀಪಾಲಕರು ಬಂದರು ಹಲವು ಪಯಣದಲಿ
ರಾಮಣೀಯಕ ರಚನೆಯಲಿ ಸು
ತ್ರಾಮ ನಗರಿಯ ಸೂತ್ರಧಾರೆಯ
ಲಾ ಮನೋಹರ ವಿಶ್ವಕರ್ಮ ವಿನಿರ್ಮಿತ ಪುರಕೆ ॥9॥

೦೧೦ ಧರಣಿಪತಿ ಚಿತ್ತೈಸಿಳಾವೃತ ...{Loading}...

ಧರಣಿಪತಿ ಚಿತ್ತೈಸಿಳಾವೃತ
ವರುಷ ಮಧ್ಯದ ಹೇಮಗಿರಿಯವೊ
ಲರಮನೆಯ ಸಿರಿ ಸೋಲಿಸಿತು ಸುರರಾಜ ವೈಭವವ
ಹರಿಯ ವೀಧಿಯ ಸೋಮ ವೀಧಿಯ
ಮುರಿವುಗಳ ಕೇರಿಗಳ ನೆಲೆಯು
ಪ್ಪರಿಗೆಗಳ ಹೊಂಗೆಲಸದಲಿ ಹೊಳೆಹೊಳೆದುದಾ ನಗರ ॥10॥

೦೧೧ ಹೇಮ ನಿರ್ಮಿತ ...{Loading}...

ಹೇಮ ನಿರ್ಮಿತ ದೇವಸದನ
ಸ್ತೋಮದಲಿ ಮಣಿಮಯದ ಫಣಿಪನ
ಹೇಮವೀಧಿಯ ವಿವಿಧ ರತ್ನಾವಳಿಯ ಹಸರದಲಿ
ಕಾಮರಿಪುವಿಂಗೊರೆಯ ಕಟ್ಟುವ
ವಾಮಲೋಚನೆಯರ ವಿಲಾಸದ
ಲಾ ಮಹಾಪುರವೆಸೆದುದಿಂದ್ರಪ್ರಸ್ಥನಾಮದಲಿ ॥11॥

೦೧೨ ವಿತತ ವಿಭವದಲಿನ್ದ್ರನಮರಾ ...{Loading}...

ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಂದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದೊಳಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳ್ ಎಂದ ॥12॥

೦೧೩ ಬನ್ದು ಕಣ್ಡುದು ...{Loading}...

ಬಂದು ಕಂಡುದು ಸಕಲ ಪುರಜನ
ವಂದು ಕಾಣಿಕೆಯಿತ್ತು ಸುಭಟರ
ಸಂದಣಿಯ ಗಜ ಹಯ ರಥದ ಪದಧೂತ ಧೂಳಿಯಲಿ
ಮಂದಿರದ ಬಾಗಿಲ ಗತಾಗತ
ವೃಂದದೊತ್ತೊತ್ತೆಯಲಿ ಪುರಜನ
ನಿಂದುದಲ್ಲಿಯದಲ್ಲಿ ಪಡೆಯದೆ ರಾಜದರ್ಶನವ ॥13॥

೦೧೪ ಅತಿಶಯವನೇನೆಮ್ಬೆನಮರಾ ವತಿಯ ...{Loading}...

ಅತಿಶಯವನೇನೆಂಬೆನಮರಾ
ವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕರತುನದಂತಿರೆ ಮೆರೆದುದಾ ನಗರ
ಸತತವೀ ಪರಿ ವಿಭವವೀ ಜನ
ವಿತತಿಗಳ ಸನ್ಮಾರ್ಗದಲಿ ಸಂ
ಗತಿಗಳೀ ವಿಸ್ತಾರವೀಪರಿ ಭೂಪ ಕೇಳ್ ಎಂದ ॥14॥

೦೧೫ ದ್ರುಪದ ಧೃಷ್ಟದ್ಯುಮ್ನ ...{Loading}...

ದ್ರುಪದ ಧೃಷ್ಟದ್ಯುಮ್ನ ಮೊದಲಾ
ದಪರಿಮಿತ ಬಾಂಧವ ನಿಕಾಯವ
ನುಪಚರಿಸಿ ಕಳುಹಿದನು ಭೂಪತಿ ಪಂಚ ಕೈಕೆಯರ
ವಿಪುಳ ಕಾರುಣ್ಯದಲಿ ಪಾಂಡವ
ನೃಪ ಜನವ ಸಂತೈಸಿ ದಾನವ
ರಿಪು ನಿಜಾವಾಸಕ್ಕೆ ಬಿಜಯಂಗೈಯಲನುವಾದ ॥15॥

೦೧೬ ಕರೆಸಿ ಕುನ್ತಿಯ ...{Loading}...

ಕರೆಸಿ ಕುಂತಿಯ ದ್ರೌಪದಿಯರನು
ಕರುಣ ವಚನಾಮೃತದ ರಸದಲಿ
ಹೊರೆದು ಕೃತ ದಾಯಾದ ವಿಷಮ ವಿರೋಧ ವರ್ತನವ
ಅರುಹಿ ಸುಯ್ದಾನದ ಸಮಾಹಿತ
ತರದ ಬುದ್ಧಿಯಗಲಿಸಿ ಯಾದವ
ರರಸ ಬಿಜಯಂಗೈದನಾ ದ್ವಾರಕಿಗೆ ಹರುಷದಲಿ ॥16॥

೦೧೭ ಕಳುಹಿದನು ಪಾಞ್ಚಾಲರನು ...{Loading}...

ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡು ಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳ್ ಎಂದ ॥17॥

೦೧೮ ಯಾಗವಹ್ನಿಯ ಧೂಮದಲಿ ...{Loading}...

ಯಾಗವಹ್ನಿಯ ಧೂಮದಲಿ ದಿಗು
ಭಾಗ ವಿವರಣವಡಗಿತು ಹವಿ
ರ್ಭಾಗ ಭೋಜನದಿಂದಲಾದುದಜೀರ್ಣವಮರರಿಗೆ
ಯಾಗ ದಕ್ಷಿಣೆಗಳಲಿ ಬಹಳ
ತ್ಯಾಗ ದಾನಕೆ ಲಟಕಟಿಸಿ ತಾ
ವಾಗಿ ಕೈಯಾನರು ಯುಧಿಷ್ಠಿರನೃಪನ ರಾಜ್ಯದಲಿ ॥18॥

೦೧೯ ಬಲಿಯ ನಹುಷನ ...{Loading}...

ಬಲಿಯ ನಹುಷನ ದುಂದುಮಾರನ
ನಳನ ಸಗರನ ನೃಗನ ಶಾಕುಂ
ತಳನ ಪುರುಕುತ್ಸನ ಹರಿಶ್ಚಂದ್ರನ ಪುರೂರವನ
ಇಳೆಯ ವಲ್ಲಭರೆನಿಪ ರಾಜಾ
ವಳಿಯ ಮನಮೆಚ್ಚುಗಳನುರ್ವೀ
ಲಲನೆ ಮರೆದಳು ಮೆರೆದಳಾ ಧರ್ಮಜನ ರಾಜ್ಯದಲಿ ॥19॥

೦೨೦ ಆದಿ ಯುಗದೊಳು ...{Loading}...

ಆದಿ ಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾ ಪ್ರಭಾವದಲಿ
ಪಾದವೆರಡಡಗಿದವು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ ॥20॥

೦೨೧ ಅರಸ ಚಿತ್ತೈಸಾ ...{Loading}...

ಅರಸ ಚಿತ್ತೈಸಾ ಯುಧಿಷ್ಠಿರ
ನರಪತಿಯ ರಾಜ್ಯಪ್ರಭಾವೋ
ತ್ಕರುಷ ವಿಸ್ತರವೇನನೆಂಬೆನು ಸಾಕದಂತಿರಲಿ
ಪರಮ ವಿಭವದೊಳೊಂದು ದಿನವೈ
ವರು ನಿಜಾಸ್ಥಾನದಲಿ ಹರಿ ವಿ
ಷ್ಟರದೊಳಿರ್ದರು ಕಂಡರತಿ ದೂರದಲಿ ನಾರದನ ॥21॥

೦೨೨ ಬನ್ದನಿವರೋಲಗಕೆ ಗಗನದಿ ...{Loading}...

ಬಂದನಿವರೋಲಗಕೆ ಗಗನದಿ
ನಿಂದುಮಂಡಲವಿಳಿವವೋಲ್ ನೃಪ
ವೃಂದವೆದ್ದಭಿನಮಿಸಿದುದು ಪದಯುಗಕೆ ಮುನಿಪತಿಯ
ಇಂದು ಧನ್ಯರು ನಾವಲಾ ಮುನಿ
ವಂದ್ಯ ದರ್ಶನವಾಯ್ತಪೂರ್ವವಿ
ದೆಂದು ಕುಂತೀ ತನುಜರಿದಿರೆದ್ದಂಘ್ರಿಗೆರಗಿದರು ॥22॥

೦೨೩ ಹರಸಿದನು ಮುನಿಯಘ್ರ್ಯಪಾದ್ಯೋ ...{Loading}...

ಹರಸಿದನು ಮುನಿಯಘ್ರ್ಯಪಾದ್ಯೋ
ತ್ಕರವ ಮಧುಪರ್ಕಾಸನಾದಿಯ
ನರಸ ಮಾಡಿದನಮರಮುನಿ ಕೈಕೊಂಡು ಹರುಷದಲಿ
ಪರಿಮಿತದ ಸಮಯದ ವಚೋ ವಿ
ಸ್ತರಣವುಂಟೆನೆ ರಾಯನೋಲಗ
ಹರಿದುದವನೀಪಾಲ ಬಿನ್ನಹ ಮಾಡಿದನು ಮುನಿಗೆ ॥23॥

೦೨೪ ಏನು ಬಿಜಯಙ್ಗೈದ ...{Loading}...

ಏನು ಬಿಜಯಂಗೈದ ಹದನೆನ
ಗೇನನುಗ್ರಹ ವಚನ ನಿಮ್ಮಡಿ
ಗೇನನಾ ಬೆಸಗೈವುದೆನಗಾಜ್ಞಾಪಿಸುವುದೆನಲು
ನೀನಘಾಟದ ರಾಜಋಷಿ ನೀ
ಮಾನವನೆ ಧರ್ಮಸ್ವರೂಪನು
ನೀನು ಭವದಾಲೋಕನಾರ್ಥವು ನಮ್ಮ ಬರವೆಂದ ॥24॥

೦೨೫ ಅನುಜರನು ಹೇಳುವರೆ ...{Loading}...

ಅನುಜರನು ಹೇಳುವರೆ ಭೀಮಾ
ರ್ಜುನರು ವಧುವಾರೆಂಬರವiರಾಂ
ಗನೆಯರಿಗೆ ನೂರೆಂಟು ಮಡಿಯೀ ದ್ರೌಪದಾದೇವಿ
ಘನ ಸಹಾಯನು ಹವಣಿನವನೆಂ
ಬೆನೆ ಚತುರ್ದಶ ಭುವನಪತಿ ನೃಪ
ನಿನಗೆ ಪಾಡೇ ಪನ್ನಗೇಂದ್ರ ಸುರೇಂದ್ರರಿಂದಿನಲಿ ॥25॥

೦೨೬ ಆದಡೊನ್ದಿಹುದೈವರಿಗೆ ವಧು ...{Loading}...

ಆದಡೊಂದಿಹುದೈವರಿಗೆ ವಧು
ವಾದಳೀ ದ್ರೌಪದಿ ಮಹೇಶ್ವರ
ನಾದಿಯಲಿ ಕರುಣಿಸಿದ ವರದಲಿ ಪುಣ್ಯ ಕಥನವಿದು
ಮೇದಿನಿಯೊಳೇಕಾಮಿಷ ಸ್ಥಿತಿ
ಯಾದಿಯಿದು ವಿಗ್ರಹಕೆ ತಮ್ಮೊಳು
ಕಾದಿದರು ಸುಂದೋಪಸುಂದರು ಭೂಪ ಕೇಳ್ ಎಂದ ॥26॥

೦೨೭ ಅರಸುಗಳು ತಾವಿಬ್ಬರೇಕೋ ...{Loading}...

ಅರಸುಗಳು ತಾವಿಬ್ಬರೇಕೋ
ದರರು ಬಲುಗೈಗಳು ಸುರಾಸುರ
ನರರೊಳಡುಪಾಯೆಯಲಿ ವೆಂಠಣಿಸಿದರು ಭೂತಳವ
ನೆರೆದು ಸುರರು ಸರೋಜ ಪೀಠಂ
ಗರುಹಿದರು ಬಳಿಕಾತನಿವರನು
ಪರಿಹರಿಸುವುದಕೇನುಪಾಯವೆನುತ್ತ ಚಿಂತಿಸಿದ ॥27॥

೦೨೮ ಬಳಿಕಸಙ್ಖ್ಯಾತದ ಸುರೋರಗ ...{Loading}...

ಬಳಿಕಸಂಖ್ಯಾತದ ಸುರೋರಗ
ಲಲನೆಯರಲಿ ತಿಲಾಂಶ ಮಾತ್ರದ
ಚೆಲುವಿಕೆಯನೇ ತೆಗೆದು ನಿರ್ಮಿಸಿದನು ವರಾಂಗನೆಯ
ಬೆಳಗಿತಾಕೆಯ ಹೆಸರು ದಿವಿಜಾ
ವಳಿಯೊಳೈದೆ ತಿಲೋತ್ತಮಾಹ್ವಯ
ದಳಿಕುಲಾಳಕಿಗಬುಜಭವ ನೇಮಿಸಿದನೀ ಹದನ ॥28॥

೦೨೯ ಅವರ ಕೆಡಿಸುವ ...{Loading}...

ಅವರ ಕೆಡಿಸುವ ಹದನ ಕೈಕೊಂ
ಡವನಿಗೈತಂದಳು ವಿನೋದದೊ
ಳಿವದಿರಿದ್ದರು ಬನದೊಳಗೆ ಮದಿರಾ ಮದೋದ್ಧತರು
ಯುವತಿಯನು ಕಂಡರು ಕಟಾಕ್ಷದ
ಸವಡಿಗೋಲಿಂದೊಡೆದುದೆದೆ ಹರಿ
ದವರು ಹಿಡಿದರು ವಾಮ ದಕ್ಷಿಣ ಕರಗಳಂಗನೆಯ ॥29॥

೦೩೦ ಎನಗೆ ವಧು ...{Loading}...

ಎನಗೆ ವಧು ತಾ ಮುನ್ನ ಕಂಡೆನು
ತನಗೆ ಸತಿ ತಾ ಮುನ್ನ ಹಿಡಿದೆನು
ತನಗೆನಗೆ ನೀ ನಿಲ್ಲು ನೀ ನಿಲ್ಲೆನುತ ಹೊಯ್ದಾಡಿ
ಜನಪರಿಬ್ಬರು ಮಡಿಯಲಮರಾಂ
ಗನೆ ಮುಗುಳ್ನಗೆ ನಗುತಲಬುಜಾ
ಸನನ ಹೊರೆಗೈದಿದಳು ಕುಂತೀತನುಜ ಕೇಳ್ ಎಂದ ॥30॥

೦೩೧ ಅದರಿನೀ ಜೀವರಿಗೆ ...{Loading}...

ಅದರಿನೀ ಜೀವರಿಗೆ ದುಸ್ಥಿತಿ
ಸುದತಿಯರ ದೆಸೆಯಿಂದ ರಾಜ್ಯದ
ಹುದುವಿನಲಿ ಮೇಣರ್ಥಗತಿಯಲನರ್ಥ ತಪ್ಪದಲೆ
ಸುದತಿ ನಿಮ್ಮೈವರಿಗೆಯೀ ದ್ರೌ
ಪದಿ ಮಹಾಸತಿ ರಾಗ ಲೋಭದ
ಕದನದಲಿ ಕಾಳಾಗದಿದ್ದರೆ ತುದಿಗೆ ಲೇಸೆಂದ ॥31॥

೦೩೨ ಅರಸ ಚಿತ್ತೈಸೊನ್ದು ...{Loading}...

ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದಡೆ ಬಳಿಕದಕೆ ಪ್ರಾಯಶ್ಚಿತ್ತ ವಿಧಿಯುಂಟು ॥32॥

೦೩೩ ಆರು ಕಣ್ಡರು ...{Loading}...

ಆರು ಕಂಡರು ಆತನೊಬ್ಬನೆ
ಧಾರುಣಿಯಲಿ ಸುತೀರ್ಥ ಯಾತ್ರಾ
ಭಾರದಲಿ ತಿರುಗುವುದು ಸುತ್ತಲು ವರುಷವೊಂದರಲಿ
ಚಾರು ನಿಷ್ಕೃತಿಯೆನಲು ಮುದದಲಿ
ನಾರದರ ದಿವ್ಯೋಪದೇಶಕೆ
ಸಾರಹೃದಯ ಹಸಾದವೆಂದನು ತಮ್ಮದಿರು ಸಹಿತ ॥33॥

೦೩೪ ಮಙ್ಗಳವು ನಿಮಗೆನ್ದು ...{Loading}...

ಮಂಗಳವು ನಿಮಗೆಂದು ಹಂಸೆಯ
ಬೆಂಗೆ ಹಾಯ್ದನು ಬಳಿಕ ನಭದೊಳ
ಭಂಗ ಮುನಿಯಡಗಿದನು ತಮ್ಮೊಳಗೆಂದರೀ ನೃಪರು
ಅಂಗನಾ ವಿಷಯದಲಿ ಸೀಮಾ
ಸಂಗತಿಯ ಸೇರಿಸಿದನೈ ಮುನಿ
ಪುಂಗವನ ಕರುಣದಲಿ ಗದುಗಿನ ವೀರನಾರಯಣ ॥34॥

+೧೮ ...{Loading}...