೧೬

೦೦೦ ಸೂ ವಿಮಲಮುನಿ ...{Loading}...

ಸೂ. ವಿಮಲಮುನಿ ಪಾಂಚಾಲ ಚಿತ್ತ
ಭ್ರಮೆಯನಪಹರಿಸಿದನು ದ್ರೌಪದಿ
ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವನೃಪತಿ ಪಯಣದ
ಮೇಲೆ ಪಯಣದಿಲೈದಿ ಹೊಕ್ಕನು ಹಸ್ತಿನಾಪುರವ
ಹೇಳಲೇನುಳಿದಖಿಳ ಧರಣೀ
ಪಾಲಕರ ದುಮ್ಮಾನವನು ಪಾಂ
ಚಾಲ ದೇಶವ ಕಳೆದು ಹೊಕ್ಕರು ತಮ್ಮ ನಗರಿಗಳ ॥1॥

೦೦೨ ಭೀತಿ ಹರಿದುದು ...{Loading}...

ಭೀತಿ ಹರಿದುದು ರಾಯದಳ ಸಂ
ಘಾತ ಸರಿದುದು ಮತ್ತೆ ಸುಜನ
ವ್ರಾತ ನೆರೆದುದು ಮೆರೆದುದವನೀದೇವರಗ್ಗಳಿಕೆ
ವಾತಜನು ಮರಗೊಂಬಿನಲಿ ಮಾ
ರಾತನನು ಮನ್ನಿಸಿ ಕುಲಾಲ ನಿ
ಕೇತನಕೆ ಬಂದೆರಗಿದನು ಧರ್ಮಜನ ಚರಣದಲಿ ॥2॥

೦೦೩ ಇತ್ತಲರ್ಜುನನಿನಸುತನ ಬೆಂ ...{Loading}...

ಇತ್ತಲರ್ಜುನನಿನಸುತನ ಬೆಂ
ಬತ್ತಿ ಮರಳಿದನವನಿ ಪಾಲರ
ಮುತ್ತಿಗೆಯ ತೆಗೆಸಿದನು ಜಯಲಕ್ಷ್ಮಿಯ ಕಟಾಕ್ಷದಲಿ
ಮತ್ತ ರಾಯರ ಬೆನ್ನಕಪ್ಪವ
ನೆತ್ತಿದುತ್ಸಹ ವದನದಲಿ ಹೊಗ
ರೆತ್ತಿದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ ॥3॥

೦೦೪ ಈತನುದಯದೊಳಿನ್ದು ಭೂಸುರ ...{Loading}...

ಈತನುದಯದೊಳಿಂದು ಭೂಸುರ
ಜಾತಿಗಾಯ್ತಗ್ಗಳಿಕೆ ಪಾರ್ಥಿವ
ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು
ಸೋತು ತೆಗೆದ ಮಹೀಶ್ವರರ ಮಾ
ತೇತಕದು ಮಝ ಪೂತೆನುತ ಜನ
ವೀತನನು ಕೊಂಡಾಡುತಿರ್ದದು ನೆರವಿ ನೆರವಿಯಲಿ ॥4॥

೦೦೫ ಬನ್ದನೀತನು ಗತಿಯ ...{Loading}...

ಬಂದನೀತನು ಗತಿಯ ಗರುವಿಕೆ
ಯಿಂದ ತರುಣಿಯ ಹೊರೆಗೆ ಬಾ ನೀ
ನೆಂದು ಕರೆದನು ಸತಿಸಹಿತ ತಿರುಗಿದನು ವಹಿಲದಲಿ
ಇಂದುಮುಖಿಯನು ಕುಂಭಕಾರನ
ಮಂದಿರದ ಹೊರಗಿರಿಸಿ ಫಲುಗುಣ
ಬಂದು ಮೈಯಿಕ್ಕಿದನು ಕುಂತಿಯ ಚರಣಕಮಲದಲಿ ॥5॥

೦೦೬ ತಾಯೆ ಬಿನ್ನಹವಿನ್ದು ...{Loading}...

ತಾಯೆ ಬಿನ್ನಹವಿಂದು ಧರಣೀ
ರಾಯರೆಲ್ಲರ ಗೆಲಿದು ತಂದೆನು
ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ
ತಾಯೆ ಚಿತ್ತೈಸಿದಿರೆಯೆನೆ ಕಡೆ
ವಾಯಿದಳು ತನಿ ಹರುಷದಲಿ ಲೇ
ಸಾಯಿತೈವರು ಕೂಡಿ ಭೋಗಿಪುದೆಂದಳಾ ಕುಂತಿ ॥6॥

೦೦೭ ಎನೆ ಹಸಾದವೆನುತ್ತ ...{Loading}...

ಎನೆ ಹಸಾದವೆನುತ್ತ ಕಮಲಾ
ನನೆಯ ಹೊಡವಂಡಿಸಿದನವ್ವೆಗೆ
ತನುಜ ನೀ ತಂದಮಲಮೌಕ್ತಿಕವಿದೆಯೊ ಶಿವಯೆನುತ
ತನಗೆ ನುಡಿ ತೊದಲಿಸಿತಲಾ ನೀ
ವಿನಿಬರುಪಭೋಗಿಸುವುದೆಂದೆನು
ವನಿತೆಯೈವರಿಗರಸಿಯೇ ಲೇಸೆಂದಳಾ ಕುಂತಿ ॥7॥

೦೦೮ ಜನನಿ ತಪ್ಪದು ...{Loading}...

ಜನನಿ ತಪ್ಪದು ನಿಮ್ಮ ನುಡಿಯೀ
ವನಜಮುಖಿಯೆಮ್ಮೈವರಿಗೆ ಸತಿ
ವಿನುತಗುರುವಚನಾಂಬುನಿಧಿ ಮಕ್ಕಳಿಗಲಂಘ್ಯವಲೆ
ಎನೆ ಯುಧಿಷ್ಠಿರ ನೃಪತಿ ಪಾರ್ಥನ
ಕನಲಿದನು ಕಲಿ ಭೀಮನಲ್ಲೆಂ
ದನು ನಕುಲ ಸಹದೇವರನುಚಿತವೆಂದರರ್ಜುನಗೆ ॥8॥

೦೦೯ ಎಲ್ಲ ಧರ್ಮದ ...{Loading}...

ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರೈ ಸಲೆ ಹೇಳ್ವುದಾವುದು
ನಿಲ್ಲಿ ನೀವ್ ಸಹದೇವ ನಕುಲರು ನಿಮಗೆ ಮಾತೇಕೆ
ಬಲ್ಲಿರಖಿಳಾಮ್ನಾಯ ಭಾಷಿತ
ದಲ್ಲಿ ನೋಡಲು ಧರ್ಮಶಾಸ್ತ್ರದೊ
ಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ ॥9॥

೦೧೦ ಮಾತೃವಚನವಲಙ್ಘ್ಯವಿದು ವಿ ...{Loading}...

ಮಾತೃವಚನವಲಂಘ್ಯವಿದು ವಿ
ಖ್ಯಾತಪದ್ಧತಿ ಲೋಕ ಯಾತ್ರಾ
ಭೀತಿಯಲಿ ಭಯವೇಕೆ ಧರ್ಮರಹಸ್ಯನಿಷ್ಠರಿಗೆ
ಏತಕೀ ಲೋಕಾನುಸರಣೆ ವಿ
ಧೂತ ಕಿಲ್ಬಿಷವಾವುದದು ಧ
ರ್ಮಾತಿಶಯವಿಹಪರಕೆ ಕಡುಹಿತವೆಂದನಾ ಪಾರ್ಥ ॥10॥

೦೧೧ ರಾಗ ಲೋಭ ...{Loading}...

ರಾಗ ಲೋಭ ವ್ಯಾಪ್ತಿಯಲಿ ನೀ
ವೀ ಗುರುವಿಗಳುಪುವರೆ ಸಲೆ ಧ
ರ್ಮಾಗಮವನಾಚರಿಸುವದಲೇ ನಮ್ಮನುಷ್ಠಾನ
ಈಗಳೀ ಗುರುವಚನ ಧರ್ಮ
ತ್ಯಾಗವೇನಿದು ಧರ್ಮವೇ ಉಪ
ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ ॥11॥

೦೧೨ ಮಾಡದಿರಿ ಸನ್ದೇಹಗಳ ...{Loading}...

ಮಾಡದಿರಿ ಸಂದೇಹಗಳ ಖಯ
ಖೋಡಿಯಿದರೊಳಗಿಲ್ಲ ಧರ್ಮದ
ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಳಸದಿರಿ
ಗೂಡು ಹಲವಿಹ ಪಕ್ಷಿಯೊಂದಿದ
ನಾಡಬಾರದು ಸಾಕು ಚಿಂತಿಸ
ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ ॥12॥

೦೧೩ ಆದುದನುಮತ ತಮ್ಮೊಳಗೆ ...{Loading}...

ಆದುದನುಮತ ತಮ್ಮೊಳಗೆ ತ
ತ್ಸೋದರರು ಸೌಹಾರ್ದದಿಂದ ತ
ಳೋದರಿಯನೊಲಿದೈವರಂಗೀಕರಿಸಿದರು ಬಳಿಕ
ಆದರಣೆಯಲಿ ಕುಂತಿ ಸೊಸೆಗೆ ವೃ
ಕೋದರನ ಭಿಕ್ಷಾನ್ನ ಭಾಗದ
ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸಿ ॥13॥

೦೧೪ ಇಳಿದನಸ್ತಾಚಲಕೆ ರವಿ ...{Loading}...

ಇಳಿದನಸ್ತಾಚಲಕೆ ರವಿ ನೃಪ
ತಿಲಕರೈವರು ವಿಹಿತಕೃತ್ಯಾ
ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ
ಜಲರುಹಾಕ್ಷನ ನಾಮಕೀರ್ತನ
ಲುಳಿತ ಪರಮಾನಂದರಸದಲಿ
ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ ॥14॥

೦೧೫ ಸಿಲುಕಿದುದು ಜನದೃಷ್ಟಿ ...{Loading}...

ಸಿಲುಕಿದುದು ಜನದೃಷ್ಟಿ ಬಲುಗ
ತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನಮಿತ್ರನ ಬೇಹುಕಾರರ
ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ ॥15॥

೦೧೬ ಇವರಿಗುಣ್ಟೇ ದೀಪ ...{Loading}...

ಇವರಿಗುಂಟೇ ದೀಪ ತೈಲ
ದ್ರವಿಣವಿಲ್ಲ ಕುಲಾಲ ಭವನಕೆ
ಕವಿವ ಕಗ್ಗತ್ತಲೆಯ ನುಗ್ಗೊತ್ತಿದುದು ಬೇರೊಂದು
ನವ ಯುವತಿಯಾಭರಣ ಮಣಿರುಚಿ
ನಿವಹವಾಕೆಯ ನಯನಕಾಂತಿಗ
ಳವನಿಪತಿ ಕೇಳ್ ನಿನ್ನ ಪಿತನ ಪಿತಾಮಹರ ಪರಿಯ ॥16॥

೦೧೭ ಜನಪ ನನ್ದನೆಗೊನ್ದು ...{Loading}...

ಜನಪ ನಂದನೆಗೊಂದು ಕೃಷ್ಣಾ
ಜಿನವನಿತ್ತರು ಶಯನ ಭಾಗಕೆ
ಜನನಿಯಂಘ್ರಿಯ ಬಳಿಯಲೊರಗಿದರೈವರೊಂದಾಗಿ
ವನಿತೆಯವರಂಘ್ರಿಗಳ ತಲೆಗಿಂ
ಬಿನಲಿ ಮಲಗಿದಳಂದಿನಾಹವ
ಜನಿತ ಕೃತಿಯನು ನುಡಿವುತಿರ್ದನು ಪಾರ್ಥನರಸಂಗೆ ॥17॥

೦೧೮ ಗೆಲಿದ ಪರಿಯನು ...{Loading}...

ಗೆಲಿದ ಪರಿಯನು ಕೌರವೇಂದ್ರನ
ದಳವ ಮುರಿದಂದವನು ಕರ್ಣನ
ನಳುಕದೆಚ್ಚ ಶರಪ್ರಯೋಗದ ಚಾಪ ಕೌಶಲವ
ಬಲಜಲಧಿ ಮುಕ್ಕುರಿಕಿದರೆ ಮಂ
ಡಲಿಸಿ ಮೊಗೆದಂದವನು ಶಸ್ತ್ರಾ
ವಳಿಯ ಸಂಹರಣವನು ವಿವರಿಸಿದನು ಮಹೀಪತಿಗೆ ॥18॥

೦೧೯ ಕುದುರೆಯೇರಾಟವನು ಮಾತಂ ...{Loading}...

ಕುದುರೆಯೇರಾಟವನು ಮಾತಂ
ಗದ ಸುಶಿಕ್ಷಾಭೇದವನು ರಥ
ವಿದಿತ ಕೌಶಲವನು ಶರಾಸನವೇದಸಂಗತಿಯ
ಮದವದರಿ ಭಂಜನವ ದಿವ್ಯಾ
ಸ್ತ್ರದಲಿ ಮುಕ್ತಾಮುಕ್ತಸಮರಂ
ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ ॥19॥

೦೨೦ ಆಯುಧದ ಲಕ್ಷಣವನಾ ...{Loading}...

ಆಯುಧದ ಲಕ್ಷಣವನಾ ದಿ
ವ್ಯಾಯುಧದ ಮಂತ್ರಪ್ರಭಾವವ
ನಾಯುಧದ ವಿವಿಧ ಪ್ರಯೋಗವನದರ ಪರಿವಿಡಿಯ
ರಾಯರಂಗದ ಶಕ್ತಿವರ್ಗದು
ಪಾಯಗುಣ ವಿಕ್ರಮ ಪರಾಕ್ರಮ
ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ ॥20॥

೦೨೧ ಮುನಿವಳೀ ಸತಿಯೆನ್ದು ...{Loading}...

ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ ॥21॥

೦೨೨ ಬನ್ದು ಧೃಷ್ಟದ್ಯುಮ್ನನಯ್ಯಂ ...{Loading}...

ಬಂದು ಧೃಷ್ಟದ್ಯುಮ್ನನಯ್ಯಂ
ಗೆಂದನಿನನಸ್ತಮಯ ಸಂಧ್ಯಾ
ವಂದನೆಯ ತರುವಾಯ ಶಸ್ತ್ರಾಸ್ತ್ರಪ್ರಸಂಗದಲಿ
ಸಂದ ಗಜ ಹಯ ರಥದ ಪರಿವಿಡಿ
ಯಿಂದವರು ನೃಪನೀತಿ ಸಂಗತಿ
ಯಿಂದ ರಾತ್ರಿಯ ಕಳೆದರಾರೆಂದರಿಯೆ ನಾನೆಂದ ॥22॥

೦೨೩ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ವಿಪ್ರರಾದರೆ
ಸರಸ ನವಭೋಜನದ ಕಥೆ ಮೇಣ್
ನಿರತಿಶಯವೇದಾಂಗವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿವಿದ್ಯಗಳೆಂದನಾ ಮುನಿಪ ॥23॥

೦೨೪ ಭೂರಿ ಧನ ...{Loading}...

ಭೂರಿ ಧನ ವರ್ಧನ ಸದಾವ್ಯವ
ಹಾರ ಲಾಭಾಲಾಭ ಚಿಂತೆಗ
ಳೂರುಜನಿತರಿಗಂತ್ಯವರ್ಣಕೆ ಕೃಷಿಯ ಮಾತಗಳು
ಆರನಾದರು ಜಾತಿಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆಗಿವರಿಂದು ಕ್ಷತ್ರಿಯರೆಂದು ಮುನಿ ನುಡಿದ ॥24॥

೦೨೫ ಇವರು ಪಾರ್ಥಿವರೊಳಗೆ ...{Loading}...

ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ
ಅವರನುಪಚರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ ॥25॥

೦೨೬ ಒಸಗೆಯಾಯಿತು ಮತ್ತೆ ...{Loading}...

ಒಸಗೆಯಾಯಿತು ಮತ್ತೆ ಗುಡಿಯೆ
ತ್ತಿಸಿತು ನಗರಿಯೊಳಧಿಕ ಹರುಷ
ಪ್ರಸರದಲಿ ರೋಮಾಳಿ ಪಲ್ಲವಿಸಿದುದು ನರಪತಿಯ
ಬಿಸಜಬಂಧುವಿನುದಯದಲಿ ನೃಪ
ವಿಸರಸಹಿತ ಕುಲಾಲಭವನದ
ವಸುಮತೀ ವಲ್ಲಭರ ಕಂಡನು ಬಂದು ಪಾಂಚಾಲ ॥26॥

೦೨೭ ಏಳಿ ಬಿಜಯಙ್ಗೈವುದೆನ್ದು ...{Loading}...

ಏಳಿ ಬಿಜಯಂಗೈವುದೆಂದು ನೃ
ಪಾಲಕರನುಚಿತದಲಿ ನಿಜ ರಾ
ಜಾಲಯಕೆ ತಂದನು ನಿರೀಕ್ಷಿಸುತನಿಬರಿಂಗಿತವ
ಮೇಲು ಮೊಗದ ಗಭೀರಗತಿಯ ಛ
ಡಾಳವನು ಕಂಡಿವರು ರಾಯರ
ಪೀಳಿಗೆಗಳಹುದೆಂದು ನಿಶ್ಚೈಸಿದನು ಮನದೊಳಗೆ ॥27॥

೦೨೮ ಮುದದಿ ಮಙ್ಗಳ ...{Loading}...

ಮುದದಿ ಮಂಗಳ ಮಜ್ಜನವ ಮಾ
ಡಿದರು ದಿವ್ಯಾಂಬರವನುಟ್ಟರು
ಸುದತಿಯರ ಹರಿವಾಣದಾರತಿಗಳನು ಕೈಗೊಳುತ
ಪದಕ ಕರ್ಣಾಭರಣ ಹಾರಾಂ
ಗದದಿನೊಪ್ಪಂಬಡೆದಿವರು ಪೂ
ಸಿದರು ಸಾದು ಜವಾಜಿ ಕತ್ತುರಿ ಯಕ್ಷಕರ್ದಮವ ॥28॥

೦೨೯ ಬಾಸಿಗದ ನೊಸಲಿನಲಿ ...{Loading}...

ಬಾಸಿಗದ ನೊಸಲಿನಲಿ ಮೆರೆವ ಮ
ಹೀಶರೈವರು ಮಂಟಪದ ನೆಲ
ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ
ಆ ಸೊಸೆಯ ಸಂಗಾತ ಕುಂತಿ ವಿ
ಲಾಸದಲಿ ಕುಳ್ಳಿರ್ದಳಾ ವಿ
ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ ॥29॥

೦೩೦ ಜಲವನಞ್ಜುಳಿಯಿನ್ದ ದ್ರುಪದನು ...{Loading}...

ಜಲವನಂಜುಳಿಯಿಂದ ದ್ರುಪದನು
ಸೆಳೆದು ಮೆರೆದವ ಬರಲಿ ಯಂತ್ರವ
ಗೆಲಿದ ಗರುವನು ಪಂಚಕರೊಳಗೆಯೆನೆ ನಗುತ
ಇಳಿದನವನಿಪ ಭೀಮನೊಯ್ಯನೆ
ಸುಳಿದನರ್ಜುನ ಹಿಂದೆ ಯಮಳರು
ನಳಿನವದನೆಯ ಹೊರೆಗೆ ಬಂದರು ಭೂಪ ಕೇಳ್ ಎಂದ ॥30॥

೦೩೧ ಬಿಸುಟನಞ್ಜುಳಿಯುದಕವನು ನಿ ...{Loading}...

ಬಿಸುಟನಂಜುಳಿಯುದಕವನು ನಿ
ಪ್ಪಸರದಲಿ ಬೆರಗಾಗಿ ಭೂಪರ
ಮುಸುಡನೆವೆಯಿಕ್ಕಿದೆ ನಿರೀಕ್ಷಿಸುತೆಂದನಾ ದ್ರುಪದ
ಅಸುರರೋ ಸುರರೋ ಭುಜಂಗರೊ
ವಸುಮತೀಶರೊ ನೀವು ದಿಟ ಮಾ
ನಿಸರ ಪರುಠವವಲ್ಲ ನೀವಾರೆಂದು ಬೆಸಗೊಂಡ ॥31॥

೦೩೨ ಈತನಗ್ಗದ ಭೀಮನರ್ಜುನ ...{Loading}...

ಈತನಗ್ಗದ ಭೀಮನರ್ಜುನ
ನೀತನಿವರೈಯಮಳರೆಂಬವ
ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು
ಮಾತೆಯೆಮ್ಮೈವರಿಗೆ ಜಗ ವಿ
ಖ್ಯಾತೆ ಕುಂತೀದೇವಿ ತಾನಿಂ
ದೀ ತಳೋದರಿಯಾದಳೆಮ್ಮೈವರಿಗೆ ವಧುವೆಂದ ॥32॥

೦೩೩ ಕೊಣ್ಡು ಹರಿದುದು ...{Loading}...

ಕೊಂಡು ಹರಿದುದು ಹರುಷವಾ ಬ್ರ
ಹ್ಮಾಂಡದಗ್ರಕೆ ಮಗಳಿಗೈವರು
ಗಂಡರೆನೆ ಮಗುಳದ್ದು ದಾತನ ಮನ ರಸಾತಳಕೆ
ಕಂಡು ಬಲ್ಲರೆ ಕಂಗಳಲಿ ಕಿವಿ
ಕೊಂಡು ಕೇಳ್ದಿರೆ ಮುನ್ನ ನಮಗೀ
ಭಂಡತನವನು ಮಾಡುವರೆ ನೀವೆಂದನಾದ್ರುಪದ ॥33॥

೦೩೪ ಲೋಕ ಸಮ್ಮತವಲ್ಲ ...{Loading}...

ಲೋಕ ಸಂಮತವಲ್ಲ ಶಾಸ್ತ್ರಾ
ನೀಕದಭಿಮತವಲ್ಲ ಕಾಪಥ
ವೇಕೆ ನಿಮಗಿದು ಪಾಂಡುಪುತ್ರರು ನೀವು ಧಾರ್ಮಿಕರು
ಪ್ರಾಕೃತರೆ ನೀವಕಟ ನಿಮ್ಮ ವಿ
ವೇಕವೇನಾಯ್ತಿಲ್ಲಿ ಇಹ ಪರ
ಲೋಕಕಿದು ಸಾಧನವೆಯೆಂದನು ದ್ರುಪದ ಭೂಪಾಲ ॥34॥

೦೩೫ ಕಾಮ ಮೋಹಿತರಲ್ಲ ...{Loading}...

ಕಾಮ ಮೋಹಿತರಲ್ಲ ವಿಷಯ
ಸ್ತೋಮಭಂಗಿತರಲ್ಲ ಧರ್ಮದ
ಸೀಮೆಯೊಳಗೆಳ್ಳೆನಿತನವಮಾನಿಸುವರಾವಲ್ಲ
ಈ ಮಹಾಸತಿಯೆಮಗೆ ಜನನಿಯ
ನೇಮದಲಿ ವಧುವಾದಳಿಂದು ವಿ
ರಾಮವೇಕೆ ವಿವೇಕಕೆಂದನು ಧರ್ಮಸುತ ನಗುತ ॥35॥

೦೩೬ ಏಕಪತಿ ಬಹುಸತಿಯರೆಮ್ಬುದು ...{Loading}...

ಏಕಪತಿ ಬಹುಸತಿಯರೆಂಬುದು
ಲೋಕಪದ್ಧತಿ ಕಂಡೆವಾವಿಂ
ದೇಕ ಪತ್ನಿಗೆ ಪುರುಷಪಂಚಕವನು ಮಹಾದೇವ
ಲೋಕಶಾಸ್ತ್ರ ವಿರುದ್ಧವನು ಕಿವಿ
ಯೋಕರಿಸುತಿವೆ ಕಣ್ಮನಕೆ ಸು
ವ್ಯಾಕುಲತೆ ಹಿರಿದಾದುದೆಂದನು ದ್ರುಪದ ಭೂಪಾಲ ॥36॥

೦೩೭ ಆ ಸಮಯದಲಿ ...{Loading}...

ಆ ಸಮಯದಲಿ ದೇವ ವೇದ
ವ್ಯಾಸಮುನಿಯೈತಂದನಲ್ಲಿ ಮ
ಹೀಶಸಭೆಯಿದಿರೆದ್ದು ಕಂಡುದು ಕಾಣಿಕೆಯ ನೀಡಿ
ದೋಷಗರ್ಭಿತಧರ್ಮವನು ನಿ
ರ್ಣೈಸಲರಿಯದ ಮೂಢಮತಿಗೆ ಮು
ನೀಶ ಕೃಪೆ ಮಾಡೆಂದು ಮೈಯಿಕ್ಕಿದನು ಪಾಂಚಾಲ ॥37॥

೦೩೮ ನೆಗಹಿದನು ದ್ರುಪದನನು ...{Loading}...

ನೆಗಹಿದನು ದ್ರುಪದನನು ಯಮಜಾ
ದಿಗಳನೆತ್ತಿದನೊಬ್ಬರೊಬ್ಬರ
ತೆಗೆದು ತಕ್ಕೈಸಿದನು ಮುದದಲಿ ಪಾಂಡುನಂದನರ
ದುಗುಡವೇಕೈ ದ್ರುಪದ ನಿನ್ನಯ
ಮಗಳ ಸೌಭಾಗ್ಯದಲರುಂಧತಿ
ಸೊಗಸಿ ರಂಜಿಸಲರಿಯಳೆಂದನು ಕೃಷ್ಣಮುನಿ ನಗುತ ॥38॥

೦೩೯ ಅಹುದಲೇ ಬಳಿಕೇನು ...{Loading}...

ಅಹುದಲೇ ಬಳಿಕೇನು ತಂಗಿಯ
ಬಹಳ ಸುಕೃತೋದಯದಲರಗಿನ
ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು
ಗಹನ ಯಂತ್ರವನೆಚ್ಚ ಪಾರ್ಥನ
ಮಹಿಳೆಗೆನ್ನ ಕುಮಾರಿಗೀಗಲು
ಬಹುಪತಿಗಳಾಯ್ತಿದನು ನೀವ್ ನಿರ್ಣೈಸಬೇಕೆಂದ ॥39॥

೦೪೦ ದ್ರುಪದ ಧೃಷ್ಟದ್ಯುಮ್ನ ...{Loading}...

ದ್ರುಪದ ಧೃಷ್ಟದ್ಯುಮ್ನ ಪಾಂಡವ
ನೃಪರು ಕಾಶ್ಯಪಗೂಡಿ ಹೊಕ್ಕರು
ವಿಪುಳತರ ಕಾರುಣ್ಯದಿಂದೇಕಾಂತ ಮಂದಿರವ
ನೃಪತಿ ಸಂಶಯವೇಕೆ ನಾವಿದ
ನಪಹರಿಸುವೆವು ಪಾಂಡುಪುತ್ರರ
ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ ॥40॥

೦೪೧ ವಿಧಿವಿಹಿತ ಲೋಕಾಪವಾದವ ...{Loading}...

ವಿಧಿವಿಹಿತ ಲೋಕಾಪವಾದವ
ನಧಿಕರಿಸಿ ವರ್ಣಾಶ್ರಮಕೆ ಸು
ವ್ಯಧಿಕರಣ ಹುಗದಂತೆ ಸದ್ವ್ಯವಹಾರ ಮಾರ್ಗದಲಿ
ವಿಧಿಸಿದರೆ ನಿಮ್ಮಂಘ್ರಿಗಳ ಸಂ
ನಿಧಿಯಲೇ ಪಾಣಿಗ್ರಹಣವನು
ವಿಧುಮುಖಿಗೆ ಮುದದಿಂದ ಮಾಡುವೆನೆಂದನಾ ದ್ರುಪದ ॥41॥

೦೪೨ ಧರಣಿಪತಿ ಕೇಳಿವರ ...{Loading}...

ಧರಣಿಪತಿ ಕೇಳಿವರ ತಾಯ್ಮುಂ
ದರಿಯದಾಡಿದಳಾ ನುಡಿಯನು
ತ್ತರಿಸಬಾರದು ಧರ್ಮವಿದು ವರಮಾತೃಭಕ್ತರಿಗೆ
ಗುರುವಚನದ ನಿಮಿತ್ತ ವರ ಪತಿ
ಕರಿಸಿ ಚರಿಸಿದ ಪೂರ್ವಜನ್ಮದ
ಸರಸಿಜಾಕ್ಷಿಯ ಕಥೆಯವನರುಪುವೆನಿನ್ನು ಕೇಳ್ ಎಂದ ॥42॥

೦೪೩ ಮುನ್ನನಾರಾಯಣಿಯೆನಿಪುದೀ ...{Loading}...

ಮುನ್ನನಾರಾಯಣಿಯೆನಿಪುದೀ
ಕನ್ನಿಕೆಯಪೆಸರೊಬ್ಬ ಗುಣ ಸಂ
ಪನ್ನ ಮುನಿಪನ ವಧು ಪತಿವ್ರತೆಯರಿಗೆ ಗುರುವೆನಿಸಿ
ಉನ್ನತೋನ್ನತ ಭಕ್ತಿಭಯದಲಿ
ತನ್ನ ಪತಿ ಪರದೈವವ್ ಎಂದು ವಿ-
ಪನ್ನನನು ಕೊಂಡಾಡುತಿರ್ದಳು ರಾಯ ಕೇಳ್ ಎಂದ ॥43॥

೦೪೪ ಆ ತಪೋನಿಧಿ ...{Loading}...

ಆ ತಪೋನಿಧಿ ಕುಷ್ಠರೋಗ ಪ
ರೀತ ಬೀಭತ್ಸೆಯಲಿ ಹುದಗಿರ
ಲೀ ತಳೋದರಿ ಭಜಿಸುತಿರ್ದಳು ಭಾವಶುದ್ಧಿಯಲಿ
ಆತನೀಕೆಯ ಕೃತ್ಯದಲಿ ಭಾ
ವಾತಿಶಯದಲಿ ಖೋಡಿಯನು ಹಿಡಿ
ವಾತನಾಗಿರಲೊಂದು ದಿನವಿಂತಾಯ್ತು ಕೇಳ್ ಎಂದ ॥44॥

೦೪೫ ಕೊಳೆತ ಬೆರಳನು ...{Loading}...

ಕೊಳೆತ ಬೆರಳನು ಭುಕ್ತ ಶೇಷದೊ
ಳಿಳುಹಿದರೆ ಕಂಡೀಕೆ ಚಿತ್ತದೊ
ಳಳುಕದುಪಭೋಗಿಸೆ ಮುನೀಶ್ವರನದಕೆ ಹರುಷದಲಿ
ಎಲೆಗೆ ಮೆಚ್ಚಿದೆನಿನ್ನು ನೀ ಮನ
ವೊಲಿದುದನು ಬೇಡೆನಲು ಬಳಿಕಾ
ಲಲನೆನುಡಿದಳು ದಿವ್ಯರೂಪಿನೊಳೆನ್ನ ನೆರೆಯೆಂದು ॥45॥

೦೪೬ ದ್ರುಪದ ಕೇಳಾ ...{Loading}...

ದ್ರುಪದ ಕೇಳಾ ಕುಷ್ಠದೇಹವ
ನಪಹರಿಸಿ ಕಂದರ್ಪರೂಪಿನೊ
ಳುಪಚರಿಸಿ ಕಾಮಿನಿಯನವನತಿ ಕಾಮಕೇಳಿಯಲಿ
ತಪಸಿ ದಣಿದನು ತನ್ನ ಮುನ್ನಿನ
ತಪವ ನೆನೆದನು ದಣಿಯದಿರೆಯೀ
ಚಪಲಲೋಚನೆ ಸೆರಗ ಹಿಡಿದಳು ಹೋಗದಿರಿಯೆನುತ ॥46॥

೦೪೭ ದಿಟ್ಟ ಹೆಙ್ಗುಸೆ ...{Loading}...

ದಿಟ್ಟ ಹೆಂಗುಸೆ ನೃಪರ ಬಸುರಲಿ
ಹುಟ್ಟು ನೀ ಹೋಗೆಂದು ಶಾಪವ
ಕೊಟ್ಟನೀಕೆಗೆ ಹಾಯ್ದನಾ ಮುನಿಪತಿ ತಪೋವನಕೆ
ನಟ್ಟಡವಿಯಲಿ ನಳಿನಮುಖಿ ಕಂ
ಗೆಟ್ಟು ಭಜಿಸಿದಳಖಿಳದುರಿತಘ
ರಟ್ಟನನು ದಿವಿಜೇಂದ್ರವಂದ್ಯನನಿಂದುಶೇಖರನ ॥47॥

೦೪೮ ಹಲವು ಕಾಲದಿ ...{Loading}...

ಹಲವು ಕಾಲದಿ ತಪದೊಳಕಟಾ
ಬಳಲಿದಳಲಾ ಮುನಿಯ ವಧುವೆಂ
ದಿಳಿದನೀಶ್ವರನಾ ತಪೋವನಕಾಕೆಯೆದುರಿನಲಿ
ಸುಳಿಯೆ ಕಂದೆರೆದಬಲೆ ಕಂಡಳು
ಸುಲಭನನು ಭಕ್ತರಿಗೆ ತರ್ಕಾ
ವಳಿಗೆ ದುರ್ಲಭನನು ದುರಾಸದ ಮಹಿಮ ಧೂರ್ಜಟಿಯ ॥48॥

೦೪೯ ತರುಣಿ ಮೈಯಿಕ್ಕಿದಳು ...{Loading}...

ತರುಣಿ ಮೈಯಿಕ್ಕಿದಳು ಕರದಲಿ
ಶಿರವ ನೆಗಹಿದನಬುಜಲೋಚನೆ
ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ
ಹರಪತಿಂ ದೇಹಿ ಪ್ರಭೋ ಶಂ
ಕರಪತಿಂ ದೇಹಿ ಪ್ರಭೋಯೆಂ
ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ ॥49॥

೦೫೦ ಆದಡೈವರು ಪತಿಗಳಹರು ...{Loading}...

ಆದಡೈವರು ಪತಿಗಳಹರು ತ
ಳೋದರಿಯೆ ನಿನಗೆನಲು ಬೆಚ್ಚಿದ
ಳೀ ದುರಿತ ತನಗೇಕೆನುತ ಸತಿ ಮುಚ್ಚಿದಳು ಕಿವಿಯ
ಆದಡಂಜದಿರಂಜದಿರು ವರ
ವೇದಬಾಹಿರವಲ್ಲ ಸತಿಯರೊ
ಳಾದಿ ಪಾತಿವ್ರತ್ಯ ನಿನಗೆಂದನು ಮಖಧ್ವಂಸಿ ॥50॥

೦೫೧ ಶ್ರುತಿಗಳೆಮ್ಬುದೆಯೆಮ್ಮ ...{Loading}...

ಶ್ರುತಿಗಳೆಂಬುದೆಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳಗೆಂದಾ ಸತಿಗೆ ಶಿವ ನುಡಿದ ॥51॥

೦೫೨ ನಿನ್ನ ಕಥನವೆ ...{Loading}...

ನಿನ್ನ ಕಥನವೆ ಪುಣ್ಯಕಥನವು
ನಿನ್ನ ಚರಿತವೆ ಪುಣ್ಯಚರಿತವು
ನಿನ್ನ ನೆನೆದಂಗನೆಗೆ ಬಹುದು ಪತಿವ್ರತಾಭಾವ
ಎನ್ನನುಜ್ಞೆಗೆ ಧವರ್iಚಿಂತಾ
ಪನ್ನೆಯಾಗದಿರೆಂದು ಕೃಪೆಯಲಿ
ತನ್ನ ಸಿರಿ ಕರತಳವನಿರಿಸಿದನುತ್ತಮಾಂಗದಲಿ ॥52॥

೦೫೩ ಹರನ ನುಡಿಯೇ ...{Loading}...

ಹರನ ನುಡಿಯೇ ವೇದ ಹರನಾ
ಚರಣೆಯೇ ಸನ್ಮಾರ್ಗ ಹರ ಪತಿ
ಕರಿಸಿ ನುಡಿದುದೆ ಪರಮ ಪಾವನ ಧರ್ಮತತ್ವವದು
ಬರಹ ಸಹಿತಾ ವಿಧಿಯನೊರಸಲು
ಹರ ಸಮರ್ಥನು ಹರನ ಬರಹವ
ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ ॥53॥

೦೫೪ ಅದರಿನೈವರಿಗೀಕೆ ವಧುವೆಂ ...{Loading}...

ಅದರಿನೈವರಿಗೀಕೆ ವಧುವೆಂ
ಬುದು ಮಹೇಶ್ವರನಾಜ್ಞೆ ನೀನಿಂ
ದಿದಕೆ ಚಿಂತಿಸಬೇಡ ಬಳಿಕಾ ಪಾಂಡುನಂದನರ
ಹದನನರುಹುವೆ ಕೇಳು ನೃಪ ಪೂ
ರ್ವದಲಿ ಸುರಪತಿ ಶಂಕರನ ಶಾ
ಪದಲಿ ನವೆದನು ಹಲವು ಯುಗ ಕೈಲಾಸ ಕುಹರದಲಿ ॥54॥

೦೫೫ ಬಳಿಕಲಿನ್ದ್ರನು ಮರವೆಯಲಿ ...{Loading}...

ಬಳಿಕಲಿಂದ್ರನು ಮರವೆಯಲಿ ಕಳ
ವಳಿಸಲಾತಂಗೀತನಂದದಿ
ಹಲವು ಯುಗ ಸೆರೆಯಾಯ್ತು ರಜತಾಚಲದ ಕುಹರದಲಿ
ಬಿಲದಲೀ ಪರಿಯೈವರಿಂದ್ರರು
ಸಿಲುಕಿದರು ಶಂಕರನ ಖತಿಯಲಿ
ಬಳಿಕ ಬಿಡುಗಡೆಯಾಯ್ತು ಕಾತ್ಯಾಯನಿಯ ದೆಸೆಯಿಂದ ॥55॥

೦೫೬ ಜನಿಸುವುದು ನೀವೈವರಿನ್ದ್ರರು ...{Loading}...

ಜನಿಸುವುದು ನೀವೈವರಿಂದ್ರರು
ಮನುಜ ಲೋಕದೊಳರಸು ಕುಲದಲಿ
ವನಿತೆ ನಿಮ್ಮೈವರಿಗೆಯಹಳೊಬ್ಬಳೆ ನಿಧಾನವಿದು
ಎನಲು ನಡುಗಿದರಕಟ ಮೊದಲಲಿ
ಮನುಜ ಜನ್ಮವೆ ಕಷ್ಟವದರೊಳು
ವನಿತೆಯೊಡ ಹುಟ್ಟಿದರಿಗೊಬ್ಬಳೆ ಶಿವಶಿವ ಎನುತ ॥56॥

೦೫೭ ಹರಹರ ತ್ರಾಯಸ್ವ ...{Loading}...

ಹರಹರ ತ್ರಾಯಸ್ವ ಕರುಣಾ
ಕರ ಮಹಾದೇವೀ ದುರಂತದ
ನರಕ ಭಾಜನಮುಚಿತವೇ ನಿಮ್ಮಂಘ್ರಿದರ್ಶನಕೆ
ಕರುಣಿಸೈ ಮತ್ತೊಂದು ಪರಿಯಲಿ
ವರವನೆನೆ ನಸುನಗುತ ಗೌರೀ
ವರನು ತಿಳುಹಿದನೈವರಿಂದ್ರರಿಗರಸ ಕೇಳ್ ಎಂದ ॥57॥

೦೫೮ ಖೇಡತನವೇಕೆಳ್ಳನಿತು ಖಯ ...{Loading}...

ಖೇಡತನವೇಕೆಳ್ಳನಿತು ಖಯ
ಖೋಡಿಯಿದರೊಳಗಿಲ್ಲ ಮುನಿವಧು
ಬೇಡಿದಳು ಪೂರ್ವದಲಿ ವರವನು ಪಂಚವಾಕ್ಯದಲಿ
ಜೋಡೆನಿಸಿದಳು ನಾರಿ ಧರ್ಮಕೆ
ಕೇಡು ಬಾರದು ನಿಮ್ಮ ನೆರೆ ಕೆ
ಟ್ಟಾಡಿದರ ಬಾಯ್ ಹುಳುವುದೆಂದನು ಬಾಲಶಶಿಮೌಳಿ ॥58॥

೦೫೯ ಎನೆ ಹಸಾದದಲಿನ್ದುಶೇಖರ ...{Loading}...

ಎನೆ ಹಸಾದದಲಿಂದುಶೇಖರ
ನನು ಸುರೇಂದ್ರರು ಬೀಳುಕೊಂಡರು
ಜನಿಸಿದರು ಬಳಿಕಿವರು ಮಹಿಯಲಿ ಮತ್ರ್ಯರೂಪಾಗಿ
ನಿನಗೆ ಮಗಳೀ ವನಿತೆ ಕುಂತಿಯ
ತನುಜರಿವರಳಿಯಂದಿರೇ ನೀ
ನೆನಿತು ಧನ್ಯನೊ ಶಿವಯೆನುತ ತಲೆದೂಗಿದನು ಮುನಿಪ ॥59॥

೦೬೦ ಎಲೆ ಮರುಳೆ ...{Loading}...

ಎಲೆ ಮರುಳೆ ಪೂರ್ವದಲಿ ತಾವ್ ತ
ಮ್ಮೊಳಗೆಯೈವರು ಜನಿಸೆ ನಿನ್ನೀ
ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು
ತಿಳಿಯದಿರೆ ನೋಡಾದೊಡೆನುತ
ಗ್ಗಳೆಯ ಮುನಿಪತಿ ದಿವ್ಯದೃಷ್ಟಿಯ
ಸಲಿಸಿದಡೆ ನೋಡಿದನು ದ್ರುಪದನು ಪಾಂಡುನಂದನರ ॥60॥

೦೬೧ ಮೆರೆವ ದೇಹಪ್ರಭೆಗಳಲಿ ...{Loading}...

ಮೆರೆವ ದೇಹಪ್ರಭೆಗಳಲಿ ಮಿರು
ಮಿರುಪ ದಿವ್ಯಾಭರಣ ಕಿರಣದ
ತುರುಗಿನಲಿ ತನಿ ಹೊಳೆವ ದಿವ್ಯಾಂಬರದ ಕಾಂತಿಯಲಿ
ಅರಿವಡಾಯ್ತೆಲ್ಲವಯವದ ಕಂ
ದೆರೆವ ತೇಜಃಪುಂಜ ರಸಮಯ
ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ ॥61॥

೦೬೨ ಮನದ ಝೊಮ್ಮಿನ ...{Loading}...

ಮನದ ಝೊಮ್ಮಿನ ಝಡಿವ ರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿ ಹೋದನವರನು ಕಂಡು ಪಾಂಚಾಲ ॥62॥ ॥

೦೬೩ ಅರಸ ಕಣ್ಡೈ ...{Loading}...

ಅರಸ ಕಂಡೈ ನರಪತಿಗಳೋ
ಸುರಪತಿಗಳೋ ಮನದ ಸಂಶಯ
ಹರಿದುದೇ ಹಳಿವಿಲ್ಲಲೇ ಲೇಸಾಗಿ ನೋಡೆನಲು
ಪರಮಋಷಿ ನೀ ಪುಣ್ಯದಲಿ ಗೋ
ಚರಿಸಿದೈ ನಿಮ್ಮಡಿಯ ನೇಮವ
ಶಿರದೊಳಾಂತೆನು ಧನ್ಯ ತಾನೆಂದರಸ ಕೈಮುಗಿದ ॥63॥

೦೬೪ ನಮ್ಬಿದೈ ಲೇಸಾಗಿ ...{Loading}...

ನಂಬಿದೈ ಲೇಸಾಗಿ ಲಗ್ನ ವಿ
ಲಂಬವಾಗದೆ ಧಾರೆಯೆರೆ ಕಲ
ಶಾಂಬುವಿದೆ ನೀ ಹೋಗು ಕಾಶ್ಯಪ ಹೋಮ ಸಾಧನವ
ತುಂಬು ವಹಿಲದಲವನಿಯಮರ ಕ
ದಂಬ ನೆರೆಯಲಿಯೆನಲು ದ್ರುಪದನ
ಹೊಂಬೆಳೆಯ ತನಿಹರುಷ ಹೊಡೆದೋರಿದುದು ಪುಳಕದಲಿ ॥64॥

೦೬೫ ಸಾರಿದರು ಮೆಟ್ಟಕ್ಕಿಗಳ ...{Loading}...

ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನ ವಿ
ಹಾರದಾಶೀರ್ವಾದದಾಯತ ರವದ ರಭಸದಲಿ
ಧಾರೆಯೆರೆದನು ದ್ರುಪದ ಪಾಂಡು ಕು
ಮಾರರಿಗೆ ನಿಜಸುತೆಯನತಿ ವಿ
ಸ್ತಾರಿಸಿತು ವೈವಾಹರಚನೆ ವಿಶಾಲವಿಭವದಲಿ ॥65॥

೦೬೬ ಹೋಮ ಸಮನನ್ತರದಲಖಿಳ ...{Loading}...

ಹೋಮ ಸಮನಂತರದಲಖಿಳ ಧ
ರಾಮರರ ಪೂಜೆಯಲಿ ಭೂತ
ಸ್ತೋಮ ತುಷ್ಟಿಯ ಮಾಡಿದುದು ಸನ್ಮಾನ ದಾನದಲಿ
ಆ ಮುನೀಂದ್ರಂಗೆರಗಿದರು ನೃಪ
ರೀ ಮಹಾಸತಿಸಹಿತ ವಿಮಲ
ಪ್ರೇಮದಲಿ ಮೈ ಮುಳುಗಿ ತೆಗೆದಪ್ಪಿದನು ಪಾಂಡವರ ॥66॥

೦೬೭ ಪರಮ ವೈಭವದಲಿ ...{Loading}...

ಪರಮ ವೈಭವದಲಿ ಚತುರ್ಥಿಯ
ಮರುದಿವಸದೋಕುಳಿಯ ಪುರಜನ
ಪರಿಜನದ ಸುಮ್ಮಾನ ಶರಧಿಯ ಸಾರ ಸಂಪದವ
ವರ ಮುನಿಪನೀಕ್ಷಿಸಿದನನಿಬರ
ಹರಸಿ ನಯನೀತಿಗಳ ಹೇಳಿದು
ಮರಳಿ ಬಿಜಯಂಗೈದು ಹೊಕ್ಕನು ಬದರಿಕಾಶ್ರಮವ ॥67॥

+೧೬ ...{Loading}...