೦೦೦ ಸೂ ತಮತಮಗೆ ...{Loading}...
ಸೂ. ತಮತಮಗೆ ತವಕದಲಿ ಭೂಪೋ
ತ್ತಮರು ಹೋರಿದು ಬಳಲಿ ಜಾತ
ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶ್ರೇಷ್ಠ ರಾಜರು ತಮ್ಮ ತಮ್ಮಲ್ಲೇ ಆತುರದಲ್ಲಿ ಪ್ರಯತ್ನಿಸಿ ಆಯಾಸಗೊಂಡು ಕಷ್ಟ ಪ್ರಾಪ್ತವಾದವರು ಹಿಂದೆ ಸರಿದರು. ಧನುಸ್ಸು ಆ ಮಹಾರಥರನ್ನು ಗೆದ್ದಿತು.
ಪದಾರ್ಥ (ಕ.ಗ.ಪ)
ತವಕ-ಆತುರ, ಹೋರಿ-ಪ್ರಯತ್ನಿಸಿ, ಜಾತಶ್ರಮ-ಕಷ್ಟ ಉಂಟಾದವರು (?) ಹಿಮ್ಮೆಟ್ಟು-ಹಿಂದೆ ಸರಿದರು,
ಟಿಪ್ಪನೀ (ಕ.ಗ.ಪ)
ಮಹಾರಥರು-ರಥದಲ್ಲಿದ್ದು ಕೊಂಡೇ (ತನ್ನನ್ನೂ ತನ್ನ ಸಾರಥಿಯನ್ನು ಕುದುರೆಗಳನ್ನೂ ರಕ್ಷಿಸಿಕೊಂಡು) ಏಕಾಂಗಿಯಾಗಿ ಹತ್ತು ಸಾವಿರ ಯೋಧರೊಡನೆ ಯುದ್ಧ ಮಾಡುವವರು.)
ಮೂಲ ...{Loading}...
ಸೂ. ತಮತಮಗೆ ತವಕದಲಿ ಭೂಪೋ
ತ್ತಮರು ಹೋರಿದು ಬಳಲಿ ಜಾತ
ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ
೦೦೧ ಕೇಳು ಜನಮೇಜಯನೃಪತಿ ...{Loading}...
ಕೇಳು ಜನಮೇಜಯನೃಪತಿ ಪಾಂ
ಚಾಲೆ ಪೊಕ್ಕಳು ಭದ್ರಮಂಟಪ
ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ
ಬಾಲೆಯನು ನಿಜರೂಪ ದರ್ಪದೊ
ಳಾಳಲರಿದಿರೆ ಬಾಹುಬಲದಲಿ
ಸೋಲಿಸುವಡನುವಾಗಿಯೆಂದರು ಹೊಯ್ದು ಡಂಗುರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲೆಯು ಮಂಗಳ ಮಂಟಪ ಶಾಲೆಯನ್ನು ಪ್ರವೇಶಿಸಿದಳು. ಮನ್ಮಥನ ಸೈನ್ಯವು ಅವಳೊಡನೆ ಹಿಂತಿರುಗಿದುದು. “ತರುಣಿಯನ್ನು ತಮ್ಮ ರೂಪ, ದರ್ಪಗಳಿಂದ ಪಡೆಯಲು ಸಾಧ್ಯವಾಗದಿದ್ದರೆ. ಭುಜಪರಾಕ್ರಮದಿಂದ ಪಡೆಯುವುದಾದರೆ ಸಿದ್ಧವಾಗಿರಿ” ಎಂದು ಡಂಗುರ ಹೊಡೆದು ಸಾರಿದರು.
ಪದಾರ್ಥ (ಕ.ಗ.ಪ)
ಭದ್ರಮಂಟಪ-ಮಂಗಳ ಮಂಟಪ, ಒಡ್ಡು-ಸೈನ್ಯ, ಆಳು-ಪಡೆ, ಅನುವಾಗು-ಸಿದ್ಧವಾಗು
ಮೂಲ ...{Loading}...
ಕೇಳು ಜನಮೇಜಯನೃಪತಿ ಪಾಂ
ಚಾಲೆ ಪೊಕ್ಕಳು ಭದ್ರಮಂಟಪ
ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ
ಬಾಲೆಯನು ನಿಜರೂಪ ದರ್ಪದೊ
ಳಾಳಲರಿದಿರೆ ಬಾಹುಬಲದಲಿ
ಸೋಲಿಸುವಡನುವಾಗಿಯೆಂದರು ಹೊಯ್ದು ಡಂಗುರವ ॥1॥
೦೦೨ ಇದೆ ಮಹಾಧನು ...{Loading}...
ಇದೆ ಮಹಾಧನು ಬಾಣಪಂಚಕ
ವಿದೆ ನಭೋಗ್ರದಯಂತ್ರ ಹೊಳವು
ತ್ತಿದೆ ವಿಭಾಡಿಸಿ ಮೆರೆವನಾವನು ಬಾಹು ವಿಕ್ರಮವ
ಇದುವೆ ಕಬ್ಬಿನ ಬಿಲು ಶರಾವಳಿ
ಯಿದು ಕುಸುಮಮಯ ಯಂತ್ರವಬಲೆಯ
ಹೃದಯವಾತನೆ ರಮಣನಾತನೆ ಕುಸುಮ ಶರನೆಂದ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಗೋ ಇಲ್ಲಿ ಮಹಾಧನುಸ್ಸಿದೆ, ಐದು ಬಾಣಗಳ ಸಮೂಹವಿದೆ. ನಭೋಗ್ರದಲ್ಲಿ ಯಂತ್ರ ಹೊಳೆಯುತ್ತಿದೆ. ಈ ಧನುರ್ಬಾಣಗಳಿಂದ ಯಂತ್ರವನ್ನು ಭೇದಿಸಿ ಭುಜ ಪರಾಕ್ರಮವನ್ನು ಪ್ರದರ್ಶಿಸುವವರು ಯಾರು ? ಇದೇ ಕಬ್ಬಿನ ಬಿಲ್ಲು, ಈ ಬಾಣಗಳ ಸಮೂಹ ಪುಷ್ಪ ಬಾಣಗಳು, ಯಂತ್ರವೇ ಅಬಲೆಯ ಹೃದಯ. ಯಾರು ಯಂತ್ರವನ್ನು ಭೇದಿಸುತ್ತಾರೋ ಆತನೇ ಆಕೆಗೆ ಪತಿ. ಆತನೇ ಮನ್ಮಥನು” ಎಂದು ಸಭೆಯಲ್ಲಿ ಸಾರಿತು.
ಪದಾರ್ಥ (ಕ.ಗ.ಪ)
ಪಂಚಕ-ಐದುಬಾಣಗಳ ಸಮೂಹ, ವಿಭಾಡಿಸು-ಭೇದಿಸು, ಮೆರೆ-ಪ್ರದರ್ಶಿಸು, ಕುಸುಮಶರ-ಹೂವಿನ ಬಾಣಗಳುಳ್ಳವನು, ಮನ್ಮಥ
ಮೂಲ ...{Loading}...
ಇದೆ ಮಹಾಧನು ಬಾಣಪಂಚಕ
ವಿದೆ ನಭೋಗ್ರದಯಂತ್ರ ಹೊಳವು
ತ್ತಿದೆ ವಿಭಾಡಿಸಿ ಮೆರೆವನಾವನು ಬಾಹು ವಿಕ್ರಮವ
ಇದುವೆ ಕಬ್ಬಿನ ಬಿಲು ಶರಾವಳಿ
ಯಿದು ಕುಸುಮಮಯ ಯಂತ್ರವಬಲೆಯ
ಹೃದಯವಾತನೆ ರಮಣನಾತನೆ ಕುಸುಮ ಶರನೆಂದ ॥2॥
೦೦೩ ಎನ್ದು ಸಾರಿದು ...{Loading}...
ಎಂದು ಸಾರಿದು ಭಾರಿ ಧನುವನು
ತಂದು ಧರೆಗಿಳುಹಿದರು ಯಂತ್ರವ
ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು
ಮುಂದೆ ಕೂರಂಬುಗಳ ಥರಥರ
ದಿಂದ ನಿಲಿಸಿ ಸುಗಂಧದಕ್ಷತೆ
ಯಿಂದ ಪೂಜೆಯ ರಚಿಸಿದರು ವೈದಿಕ ವಿಧಾನದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಸಾರಿದ ಮೇಲೆ, ದೊಡ್ಡ ಧನುಸ್ಸನ್ನು ತಂದು ಭೂಮಿಯಲ್ಲಿ ಇಳಿಸಿದರು. ಮುಸುಕನ್ನು ತೆಗೆದು ಯಂತ್ರವನ್ನು ಗಗನದಲ್ಲಿ ಅಂದವಾಗಿ ಅಳವಡಿಸಿ ಇಟ್ಟರು. ಮುಂಭಾಗದಲ್ಲಿ ಹರಿತವಾದ ಬಾಣಗಳನ್ನು ಸಾಲಾಗಿ ನಿಲ್ಲಿಸಿ ಪರಿಮಳದ ಅಕ್ಷತೆಯಿಂದ ವೈದಿಕ ಕ್ರಮದಲ್ಲಿ ಪೂಜೆಯನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಭಾರಿ-ದೊಡ್ಡ, ಗವಸಣಿಗೆ-ಮುಸುಕು, ಕೂರಂಬು-ಹರಿತವಾದ ಬಾಣ, ಥರಥರ-ಸಾಲುಸಾಲಾಗಿ, ಸುಗಂಧ-ಪರಿಮಳ, ವಿಧಾನ-ಕ್ರಮ
ಮೂಲ ...{Loading}...
ಎಂದು ಸಾರಿದು ಭಾರಿ ಧನುವನು
ತಂದು ಧರೆಗಿಳುಹಿದರು ಯಂತ್ರವ
ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು
ಮುಂದೆ ಕೂರಂಬುಗಳ ಥರಥರ
ದಿಂದ ನಿಲಿಸಿ ಸುಗಂಧದಕ್ಷತೆ
ಯಿಂದ ಪೂಜೆಯ ರಚಿಸಿದರು ವೈದಿಕ ವಿಧಾನದಲಿ ॥3॥
೦೦೪ ಮಸಗಿದುದು ಬಹು ...{Loading}...
ಮಸಗಿದುದು ಬಹು ವಾದ್ಯರವ ನಿ
ಪ್ಪಸರದಲಿ ನಿಸ್ಸಾಳತತಿ ಗ
ರ್ಜಿಸಿದವಾವರ್ಜಿಸುವವೋಲ್ ಘನಯಂತ್ರಭೇದಿಗಳ
ಒಸಗೆಯಾಟವೊ ಬಿಲ್ಲ ಹೊಯ್ಲಿನ
ಹಸುಗೆಯಾಟವೊ ಗರುವರಿಗೆ ಗಂ
ಗಸೆಯ ಮಾಡಿತು ಚಾಪವಿತ್ತಲು ಭೂಪ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನೇಕ ವಾದ್ಯಗಳ ಗರ್ಜನೆ ವ್ಯಾಪಿಸಿದುವು. ಸಂಭ್ರಮದಲ್ಲಿ ಭೇರೀವಾದ್ಯಗಳು ಆ ಮಹತ್ವದ ಯಂತ್ರ ಭೇದಿಗಳನ್ನು ಒಲಿಸಿಕೊಳ್ಳುವಂತೆ ಗಟ್ಟಿಯಾಗಿ ಗರ್ಜಿಸಿದುವು. ಇತ್ತ ಕಡೆ ಇದೇನು ಮಂಗಳಕಾರ್ಯದ ಆಟವೋ ಅಥವಾ ಬಿಲ್ಲಿನ ಹೊಡೆತದ ಹಂಚಿಕೆಯ ಆಟವೋ ಎಂಬಂತೆ ಧನುಸ್ಸು ಬಲಶಾಲಿಗಳಿಗೆ ತೊಂದರೆಯನ್ನು ಮಾಡಿತು.
ಪದಾರ್ಥ (ಕ.ಗ.ಪ)
ರವ-ಗರ್ಜನೆ, ನಿಸ್ಸಾಳ-ಭೇರಿವಾದ್ಯ, ನಿಪ್ಪಸರ-ಸಂಭ್ರಮ, ಆವರ್ಜಿಸು-ಒಲಿಸಿಕೊಳ್ಳು, ಒಸಗೆ-ಮಂಗಳಕಾರ್ಯ, ಹಸುಗೆ-ಹಂಚಿಕೆ, ಗಂಗಸೆ-ತೊಂದರೆ
ಮೂಲ ...{Loading}...
ಮಸಗಿದುದು ಬಹು ವಾದ್ಯರವ ನಿ
ಪ್ಪಸರದಲಿ ನಿಸ್ಸಾಳತತಿ ಗ
ರ್ಜಿಸಿದವಾವರ್ಜಿಸುವವೋಲ್ ಘನಯಂತ್ರಭೇದಿಗಳ
ಒಸಗೆಯಾಟವೊ ಬಿಲ್ಲ ಹೊಯ್ಲಿನ
ಹಸುಗೆಯಾಟವೊ ಗರುವರಿಗೆ ಗಂ
ಗಸೆಯ ಮಾಡಿತು ಚಾಪವಿತ್ತಲು ಭೂಪ ಕೇಳೆಂದ ॥4॥
೦೦೫ ನೆರವಿಯಲಿ ನಾನಾ ...{Loading}...
ನೆರವಿಯಲಿ ನಾನಾ ದಿಗಂತದ
ಧರಣಿಪತಿಗಳ ಹಮ್ಮಿಕೆಯಲು
ಬ್ಬರಿಸಿ ಹೊಕ್ಕರು ಬೇರೆ ಬೇರೊಬ್ಬೊಬ್ಬರುರವಣಿಸಿ
ಹರಗಿರಿಗೆ ಹುಲುರಕ್ಕಸರು ಮ
ತ್ಸರಿಸುವಂತಾಯ್ತೇನನೆಂಬೆನು
ಧರೆಯ ಬಿಡದೀ ಧನು ವಿಭಾಡಿಸಿ ಕೆಡಹಿತವನಿಪರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನಾ ದಿಕ್ಕಿನಿಂದ ಬಂದ ರಾಜರುಗಳ ಸಮೂಹದಲ್ಲಿ ಬೇರೆಬೇರೆಯಾಗಿ ಒಬ್ಬೊಬ್ಬರು ಸಡಗರಿಸಿ ಯಂತ್ರವನ್ನು ಭೇದಿಸಲು ಅತಿಶಯವಾದ ಗರ್ವದಿಂದ ಹೊರಟರು. ಇದು ಹೇಗಾಯಿತೆಂದರೆ ಕೈಲಾಸಕ್ಕೆ ಅಲ್ಪರಾದ ರಾಕ್ಷಸರು ಹೊಟ್ಟೆಕಿಚ್ಚು ಪಡುವಂತಾಯಿತು. ಏನೆಂದು ಹೇಳುವುದು ? ಆ ಧನುಸ್ಸು ನೆಲವನ್ನು ಬಿಟ್ಟು ಏಳದೆ ರಾಜರನ್ನು ಸೋಲಿಸಿ ಬೀಳಿಸಿತು.
ಪದಾರ್ಥ (ಕ.ಗ.ಪ)
ಹಮ್ಮಿಕೆ-ಗರ್ವ, ಉಬ್ಬರ-ಅತಿಶಯ, ಉರವಣೆ-ಸಡಗರ, ಹರಗಿರಿ-ಕೈಲಾಸ, ವಿಭಾಡಿಸಿ-ಸೋಲಿಸಿ, ಕೆಡಹು-ಬೀಳಿಸು
ಮೂಲ ...{Loading}...
ನೆರವಿಯಲಿ ನಾನಾ ದಿಗಂತದ
ಧರಣಿಪತಿಗಳ ಹಮ್ಮಿಕೆಯಲು
ಬ್ಬರಿಸಿ ಹೊಕ್ಕರು ಬೇರೆ ಬೇರೊಬ್ಬೊಬ್ಬರುರವಣಿಸಿ
ಹರಗಿರಿಗೆ ಹುಲುರಕ್ಕಸರು ಮ
ತ್ಸರಿಸುವಂತಾಯ್ತೇನನೆಂಬೆನು
ಧರೆಯ ಬಿಡದೀ ಧನು ವಿಭಾಡಿಸಿ ಕೆಡಹಿತವನಿಪರ ॥5॥
೦೦೬ ಹಾರ ಹರಿದುದು ...{Loading}...
ಹಾರ ಹರಿದುದು ಕರ್ಣಪೂರದ
ಚಾರು ಮಣಿಗಳು ಸಡಲಿದುವು ಪದ
ವೀರ ನೇವುರ ನೆಗ್ಗಿದವು ಕುಗ್ಗಿದವು ನೆನಹುಗಳು
ನಾರಿಯರ ಕೈ ಹೊಯ್ಲ ನಗೆಯ ನಿ
ಹಾರ ಜಡಿದುದು ಮುಸುಕುದಲೆಯ ಮ
ಹೀ ರಮಣರೋಸರಿಸಿ ಸಿಂಹಾಸನವ ಸಾರಿದರು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾರ ಹರಿಯಿತು. ಕಿವಿಯ ಆಭರಣದ ಸುಂದರ ರತ್ನಗಳು ಸಡಿಲಗೊಂಡಿತು. ಕಾಲಿನ ವೀರ ಕಡಗ ಜಜ್ಜಿಹೋದುವು. ನೆನಪು ಕ್ಷೀಣಿಸಿದುವು. ಅವರ ಈ ಅವಸ್ಥೆಯನ್ನು ಕಂಡು ಸ್ತ್ರೀಯರು ಕೈತಟ್ಟಿ ನಗುವ ನಗೆಯ ಮಂಜು ಬಂದು ಆವರಿಸಿತು. ಭೂರಮಣರು ತಲೆಯನ್ನು ಮುಸುಕು ಹಾಕಿಕೊಂಡು ಹಿಂಜರಿದು ಅವರವರ ಸಿಂಹಾಸನದತ್ತ ತೆರಳಿದರು.
ಪದಾರ್ಥ (ಕ.ಗ.ಪ)
ಕರ್ಣಪೂರ-ಕಿವಿಯ ಆಭರಣ, ಚಾರು-ಸುಂದರ, ನೇವುರ-ಕಡಗ, ಕುಗ್ಗು-ಕ್ಷೀಣಿಸು, ನೆನಹು-ನೆನಪು, ಓಸರಿಸಿ-ಹಿಂಜರಿದು
ಪಾಠಾನ್ತರ (ಕ.ಗ.ಪ)
ಮುಸಕದಲೆ- ಮುಸುಕುದಲೆ
ಆದಿಪರ್ವ, ಮೈ.ವಿ.ವಿ.
ಮೂಲ ...{Loading}...
ಹಾರ ಹರಿದುದು ಕರ್ಣಪೂರದ
ಚಾರು ಮಣಿಗಳು ಸಡಲಿದುವು ಪದ
ವೀರ ನೇವುರ ನೆಗ್ಗಿದವು ಕುಗ್ಗಿದವು ನೆನಹುಗಳು
ನಾರಿಯರ ಕೈ ಹೊಯ್ಲ ನಗೆಯ ನಿ
ಹಾರ ಜಡಿದುದು ಮುಸುಕುದಲೆಯ ಮ
ಹೀ ರಮಣರೋಸರಿಸಿ ಸಿಂಹಾಸನವ ಸಾರಿದರು ॥6॥
೦೦೭ ಮಿಡುಕದೀ ಧನು ...{Loading}...
ಮಿಡುಕದೀ ಧನು ನಮ್ಮ ಝಾಡಿಸಿ
ಕೆಡಹಿತದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ
ನುಡಿದು ಮಾಡುವುದೇನೆನುತ ಸಿರಿ
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಧನುಸ್ಸು ಅಲ್ಲಾಡುವುದಿಲ್ಲ. ನಮ್ಮನ್ನು ಕೊಡಹಿಬೀಳಿಸಿತು. ಇನ್ನು ಯಾರು ಇದರ ಕೊರಳಲ್ಲಿ ಹೆದೆಯನ್ನು ತೊಡಿಸಿ ಬಾಣವನ್ನು ಹೂಡಿ ಯಂತ್ರವನ್ನು ಭೇದಿಸುತ್ತಾರೋ ! ಅಂಥ ಪರಾಕ್ರಮದ ಅಣ್ಣ ಬರಲಿ, ನೋಡೋಣ ಮಾತಾಡಿ ಮಾಡುವುದೇನು?” ಎಂದುಕೊಳ್ಳುತ್ತ ತಮ್ಮ ತಲೆಯ ಮೆಲೆ ಮುಸುಕನ್ನು ಹಾಕಿಕೊಂಡು ಮುಖವನ್ನು ಮರೆ ಮಾಡಿಕೊಂಡು ರಾಜರು ತೋರಿಕೆಯ ಬಿಂಕದಲ್ಲಿ ಇದ್ದರು.
ಪದಾರ್ಥ (ಕ.ಗ.ಪ)
ಝೂಡಿಸಿ-ಕೊಡಹಿ, ತಿರುವು-ಹೆದೆ, ಕಡುಹು-ಪರಾಕ್ರಮ, ಸಿರಿಮುಡಿ-ಸುಂದರವಾದ ತುರುಬು, ಮುಸುಕು-ಮರೆಮಾಡು, ಬಯಲು-ತೋರಿಕೆ, ಬಿಂಕ-ಬಿನ್ನಾಣ
ಮೂಲ ...{Loading}...
ಮಿಡುಕದೀ ಧನು ನಮ್ಮ ಝಾಡಿಸಿ
ಕೆಡಹಿತದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ
ನುಡಿದು ಮಾಡುವುದೇನೆನುತ ಸಿರಿ
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ ॥7॥
೦೦೮ ಐಸಲೇ ಸೌಭಾಗ್ಯವೆಮಗೆ ...{Loading}...
ಐಸಲೇ ಸೌಭಾಗ್ಯವೆಮಗೆ ಶ
ರಾಸನಾಕರುಷಣದೊಳತಿ ಡೊ
ಳ್ಳಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ
ಲೇಸು ತಪ್ಪೇನಿದಕೆನುತ ಭ
ದ್ರಾಸನವನಿಳಿದುಲಿವ ತೊಡರಿನ
ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮಗೆ ಸೌಭಾಗ್ಯವಲ್ಲವೇ ! ದ್ರುಪದಪುತ್ರಿಯು ಬಿಲ್ಲಿನ ಸೆಳೆತದಿಂದ ಅತಿ ವಂಚನೆಯಲ್ಲಿ ರಾಜರನ್ನು ನೋಯಿಸಿ ಗೆದ್ದಳು. ಒಳ್ಳೆಯದು. ಇದರಲ್ಲಿ ತಪ್ಪೇನು ?” ಎನ್ನುತ್ತ ಸಿಂಹಾಸನವನ್ನು ಇಳಿದು ಕಾಲಿನ ಬಿರುದಿನ ಬಳೆಯ ‘ಘಳಿಲ್ ಘಳಿಲ್’ ಸದ್ದಿನೊಂದಿಗೆ ಮಗಧರಾಜನಾದ ಜರಾಸಂಧ ನಡೆತಂದನು.
ಪದಾರ್ಥ (ಕ.ಗ.ಪ)
ಐಸಲೇ-ಅಲ್ಲವೆ, ಶರಾಸನ-ಬಿಲ್ಲು, ಡೊಳ್ಳಾಸ-ವಂಚನೆ, ಡಾವರಿಸು-ನೋಯಿಸು, ಭದ್ರಾಸನ-ಸಿಂಹಾಸನ, ತೊಡರು-ಕಾಲಿನ ಬಿರುದಿನ ಬಳೆ, ಘೋಷಣೆ-ಸದ್ದು
ಮೂಲ ...{Loading}...
ಐಸಲೇ ಸೌಭಾಗ್ಯವೆಮಗೆ ಶ
ರಾಸನಾಕರುಷಣದೊಳತಿ ಡೊ
ಳ್ಳಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ
ಲೇಸು ತಪ್ಪೇನಿದಕೆನುತ ಭ
ದ್ರಾಸನವನಿಳಿದುಲಿವ ತೊಡರಿನ
ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ ॥8॥
೦೦೯ ಬಿಲ್ಲ ಹೊರೆಗೈದಿದನು ...{Loading}...
ಬಿಲ್ಲ ಹೊರೆಗೈದಿದನು ಚೌಪಟ
ಮಲ್ಲ ನೋಡಿದನೈಸಲೇ ತ
ಪ್ಪಲ್ಲೆನುತ ಮೇಲ್ದಿರುಹಿದನು ಮುಂಗೈಯ ಸರಪಣಿಯ
ಬಿಲ್ಲನೆತ್ತಿದರಿವನನಂಗನೆ
ಯೊಲ್ಲಳೋ ಮೇಣೊಲಿವಳೋ ಮಿಗೆ
ಬಲ್ಲಿದನು ತಾನೀತನೆನುತಿರ್ದುದು ಸಖೀನಿವಹ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಸಮೀಪಕ್ಕೆ ಬಂದನು. ನಾಲ್ಕೂ ಕಡೆಗೂ ಕಾದಾಡಬಲ್ಲ ವೀರನಾದ ಜರಾಸಂಧನು ಬಿಲ್ಲನ್ನು ಚೆನ್ನಾಗಿ ನೋಡಿದನು. “ಅಲ್ಲವೆ, ತಪ್ಪೇನು ?” ಎನ್ನುತ್ತ ಮುಂಗೈಯ ಸರಪಣಿಯನ್ನು ಮೇಲಕ್ಕೆ ಸುತ್ತಿ ತಿರುಗಿಸಿದನು. “ಬಿಲ್ಲನ್ನು ಎತ್ತಿದರೆ ಇವನನ್ನು ದ್ರೌಪದಿ ಒಲ್ಲೆನೆನ್ನುತ್ತಾಳೊ ? ಅಥವಾ ಒಲಿಯುತ್ತಾಳೋ ? ಇವನು ಬಹು ಬಲಶಾಲಿಯಾದವನು” ಎಂದು ಗೆಳತಿಯರ ಸಮೂಹ ಹೇಳುತ್ತಿತ್ತು.
ಪದಾರ್ಥ (ಕ.ಗ.ಪ)
ಹೊರೆ-ಸಮೀಪ, ಚೌಪಟಮಲ್ಲ-ನಾಲ್ಕು ಕಡೆಗೂ ಕಾದಾಡ ಬಲ್ಲ ವೀರ, ಬಲ್ಲಿದ-ಬಲಶಾಲಿ
ಮೂಲ ...{Loading}...
ಬಿಲ್ಲ ಹೊರೆಗೈದಿದನು ಚೌಪಟ
ಮಲ್ಲ ನೋಡಿದನೈಸಲೇ ತ
ಪ್ಪಲ್ಲೆನುತ ಮೇಲ್ದಿರುಹಿದನು ಮುಂಗೈಯ ಸರಪಣಿಯ
ಬಿಲ್ಲನೆತ್ತಿದರಿವನನಂಗನೆ
ಯೊಲ್ಲಳೋ ಮೇಣೊಲಿವಳೋ ಮಿಗೆ
ಬಲ್ಲಿದನು ತಾನೀತನೆನುತಿರ್ದುದು ಸಖೀನಿವಹ ॥9॥
೦೧೦ ಈತ ಕುಸಿದೆತ್ತಿದಡೆ ...{Loading}...
ಈತ ಕುಸಿದೆತ್ತಿದಡೆ ಧನು ಮಾ
ರಾತುದಿವನೌಕಿದಡೆ ಕಾರ್ಮುಕ
ವೀತನಾರೆಂದರಿಯದಿವನೌಡೊತ್ತಿ ಮೈ ಬಲಿದ
ಘಾತಿಯಲಿ ಘಲ್ಲಿಸಿದಡಾ ಧನು
ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನು ಕೆಳಕ್ಕೆ ಬಗ್ಗಿ ಧನುಸ್ಸನ್ನು ಎತ್ತಲು ಹೋದರೆ ಅದು ಇವನನ್ನು ಪ್ರತಿಭಟಿಸಿತು. ಇವನು ಬಿಲ್ಲನ್ನು ಒತ್ತಿದರೆ ಅದು ಇವನು ಯಾರೆಂದು ಲಕ್ಷಿಸಲಿಲ್ಲ. ಇವನು ಹಲ್ಲುಕಚ್ಚಿ ದೇಹವನ್ನು ಬಲಪಡಿಸಿಕೊಂಡು, ಹೊಡೆತದಲ್ಲಿ ಬಿಲ್ಲನ್ನು ಅಲ್ಲಾಡಿಸಿದರೆ, ಆ ಧನುಸ್ಸು ಸೋಲುವುದೆ? ಎವೆಯಷ್ಟೂ ಚಲಿ¸ಲಿಲ್ಲ. ಅವನು ಶಕ್ತಿ ಹೀನನಾದನು. ಅವನ ಪಕ್ಕೆಗಳು ನಡುಗಿದವು.
ಪದಾರ್ಥ (ಕ.ಗ.ಪ)
ಕುಸಿ-ಬಗ್ಗು,
ಮಾರಾತು-ಪ್ರತಿಭಟಿಸು,
ಔಡು-ಕೆಳತುಟಿ,
ಘಾತಿ-ಹೊಡೆತ, ಘಲ್ಲಿಸು-ಅಲ್ಲಾಡಿಸು,
ಯವೆ-ಅಂಗುಲದ ಎಂಟನೆಯ ಒಂದು ಭಾಗ, ಗೋದಿಯ ಕಾಳು, ಧಾತುಗುಂದು-ಶಕ್ತಿಹೀನನಾಗು, ಅಳ್ಳೆ-ಪಕ್ಕೆ, ಅಳ್ಳಿರಿ-ಅಲ್ಲಾಡು, ನಡುಗು
ಟಿಪ್ಪನೀ (ಕ.ಗ.ಪ)
É
ಮೂಲ ...{Loading}...
ಈತ ಕುಸಿದೆತ್ತಿದಡೆ ಧನು ಮಾ
ರಾತುದಿವನೌಕಿದಡೆ ಕಾರ್ಮುಕ
ವೀತನಾರೆಂದರಿಯದಿವನೌಡೊತ್ತಿ ಮೈ ಬಲಿದ
ಘಾತಿಯಲಿ ಘಲ್ಲಿಸಿದಡಾ ಧನು
ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ ॥10॥
೦೧೧ ಬೆಮರನಾರಿಸಿಕೊಣ್ಡು ವಿಗತ ...{Loading}...
ಬೆಮರನಾರಿಸಿಕೊಂಡು ವಿಗತ
ಶ್ರಮನು ಮೊಳಕಾಲಿಕ್ಕಿ ದಂಡೆಯೊ
ಳಮರಿ ದೇಹವ ಬಲಿದು ವಕ್ಷದೊಳೌಂಕಿ ಗಾಢದಲಿ
ಕುಮತಿಯಲ್ಲಾಡಿದರೆ ಬಿಟ್ಟುದು
ಅಮಮ ಜವೆಮಾತ್ರಕ್ಕೆ ಘನ ವಿ
ಕ್ರಮವನೊಡೆದುದು ಸದೆದುದಾತನ ಗರ್ವವಿಭ್ರಮವ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಸ್ವಲ್ಪ ತಡೆದು ಕೆಟ್ಟ ಬುದ್ಧಿಯ ಜರಾಸಂಧನು ಬೆವರನ್ನು ನಿವಾರಿಸಿಕೊಂಡು ಆಯಾಸ ಪರಿಹಾರ ಮಾಡಿಕೊಂಡನು. ಮೊಳಕಾಲಿಕ್ಕಿ ದಂಡೆಯೊತ್ತಿ ದೇಹವನ್ನು ಬಲಪಡಿಸಿಕೊಂಡು ಬಿಲ್ಲನ್ನು ಎದೆಯಲ್ಲಿ ಬಲವಾಗಿ ಒತ್ತಿ ಅಲ್ಲಾಡಿಸಿದನು. ಅಷ್ಟು ಸಾಹಸಕ್ಕೆ ಆ ಧನುಸ್ಸು ಒಂದು ಗೋದಿ ಕಾಳಿನಷ್ಟು ಮೇಲಕ್ಕೆ ಬಂತು. ಆತನ ಶ್ರೇಷ್ಠವಾದ ಪರಾಕ್ರಮವನ್ನು ಮುರಿಯಿತು. ಆತನ ಗರ್ವದ ಬೆಡಗನ್ನು ಬಡಿದುಹಾಕಿತು.
ಪದಾರ್ಥ (ಕ.ಗ.ಪ)
ಅಮರಿ-ಒತ್ತಿ, ಗಾಢದಲಿ-ಬಲವಾಗಿ, ಕುಮತಿ-ಕೆಟ್ಟ ಬುದ್ಧಿಯವನು, ಒಡೆ-ಮುರಿ, ವಿಭ್ರಮ-ಬೆಡಗು, ಸದೆ-ಬಡಿದು ಹಾಕು
ಮೂಲ ...{Loading}...
ಬೆಮರನಾರಿಸಿಕೊಂಡು ವಿಗತ
ಶ್ರಮನು ಮೊಳಕಾಲಿಕ್ಕಿ ದಂಡೆಯೊ
ಳಮರಿ ದೇಹವ ಬಲಿದು ವಕ್ಷದೊಳೌಂಕಿ ಗಾಢದಲಿ
ಕುಮತಿಯಲ್ಲಾಡಿದರೆ ಬಿಟ್ಟುದು
ಅಮಮ ಜವೆಮಾತ್ರಕ್ಕೆ ಘನ ವಿ
ಕ್ರಮವನೊಡೆದುದು ಸದೆದುದಾತನ ಗರ್ವವಿಭ್ರಮವ ॥11॥
೦೧೨ ಕೇಳಿದನು ಕಾನ್ತಾಕದಮ್ಬದ ...{Loading}...
ಕೇಳಿದನು ಕಾಂತಾಕದಂಬದ
ಘೋಳುಗಳ ಘೋಳೆಂಬ ನಗೆಗಳ
ಕಾಳು ಮಾಡಿದನೇಕೆ ಧನು ತಾನೇಕೆ ಸುಡುಯೆನುತ
ಬೇಳುವೆಯಲುಡಿದಂಕದವೊಲು
ಬ್ಬಾಳುತನ ಪೈಸರಿಸೆ ಮುಸುಕಿನ
ಮೌಳಿ ಹಿಮ್ಮೆಟ್ಟಿದನು ಕಡೆಯವ ತಿರುಗಿ ಕಿರುದೊಡೆಗೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಸ್ತ್ರೀ ಸಮೂಹದ ಗೊಳ್ ಗೊಳ್ ಎಂಬ ನಗೆಗಳ ಸದ್ದನ್ನು ಕೇಳಿದನು. “ದ್ರುಪದನು ಕೆಟ್ಟದ್ದನ್ನು ಮಾಡಿದನು. ಈ ಧನುಸ್ಸು ಏಕೆ ? ನಾನೇತಕ್ಕೆ ? ಸುಡಲಿ” ಎನ್ನುತ್ತ, ಭಂಗಿತವಾದ ಪ್ರತಿಷ್ಠೆಯ ಚಿಂತೆಯಲ್ಲಿ, ಅವನ ಶೌರ್ಯ ಹಿಂಜರಿಯಲು, ತಲೆ ಮುಸುಕಿನೊಂದಿಗೆ, ಬಳೆಯನ್ನು ಮೀನ ಖಂಡಕ್ಕೆ ತಿರುಗಿಸಿ ಹಿಂದಕ್ಕೆ ಸರಿದು ಬಂದನು.
ಪದಾರ್ಥ (ಕ.ಗ.ಪ)
ಕಾಳು-ಕೆಟ್ಟದ್ದು, ಉಡಿ-ಮುರಿ, ಅಂಕ-ಪ್ರತಿಷ್ಠೆ, ಉಬ್ಬಾಳುತನ-ಶೌರ್ಯ, ಪೈಸರಿಸು-ಹಿಂಜರಿ, ಕಡೆಯ-ಬಳೆ, ಕಿರುದೊಡೆ-ಮೀನಖಂಡ
ಮೂಲ ...{Loading}...
ಕೇಳಿದನು ಕಾಂತಾಕದಂಬದ
ಘೋಳುಗಳ ಘೋಳೆಂಬ ನಗೆಗಳ
ಕಾಳು ಮಾಡಿದನೇಕೆ ಧನು ತಾನೇಕೆ ಸುಡುಯೆನುತ
ಬೇಳುವೆಯಲುಡಿದಂಕದವೊಲು
ಬ್ಬಾಳುತನ ಪೈಸರಿಸೆ ಮುಸುಕಿನ
ಮೌಳಿ ಹಿಮ್ಮೆಟ್ಟಿದನು ಕಡೆಯವ ತಿರುಗಿ ಕಿರುದೊಡೆಗೆ ॥12॥
೦೧೩ ಕೆರಳಿದನು ದಮಘೋಷನನ್ದನ ...{Loading}...
ಕೆರಳಿದನು ದಮಘೋಷನಂದನ
ನರರೆ ದಿಟ್ಟನ ಧನು ವಿಭಾಡಿಸಿ
ತೆರಳಿಚಿತಲಾ ವಿಗಡ ಚಕ್ರಾಯುಧನ ಮಾಗಧನ
ಹರಿಬವೆನ್ನದು ಹೊಳ್ಳುಗಳೆವೆನು
ದುರುಳ ಧನುವನು ನಗುವ ಕನ್ನೆಯ
ತುರುಬ ಕೊಯ್ಸುವೆನೆನುತ ಕಲಿ ಶಿಶುಪಾಲನೈತಂದ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ನೋಡಿ ದಮಘೋಷನ ಮಗ ಶಿಶುಪಾಲನು ಕೋಪಗೊಂಡನು. “ಅರರೇ, ಈ ಧನುಸ್ಸು ಶೂರನನ್ನು ಸೋಲಿಸಿ ಪರಾಕ್ರಮಿಯಾದ ಚಕ್ರಾಯುಧನಾದ ಜರಾಸಂಧನನ್ನು ಹಿಂತಿರುಗುವಂತೆ ಮಾಡಿತಲ್ಲಾ ! ಈ ಕರ್ತವ್ಯ ನನ್ನದು. ಈ ಕೆಟ್ಟ ಧನುಸ್ಸನ್ನು ಕಡೆಗಣಿಸುವೆನು. ನಗುತ್ತಿರುವ ಈ ಕನ್ಯೆಯ ಮುಡಿಯನ್ನು ಕತ್ತರಿಸುವೆನು” ಎನ್ನುತ್ತ ವೀರನಾದ ಶಿಶುಪಾಲನು ಬಂದನು.
ಪದಾರ್ಥ (ಕ.ಗ.ಪ)
ವಿಭಾಡಿಸು-ಸೋಲಿಸು, ವಿಗಡ-ಪರಾಕ್ರಮಿ, ಹರಿಬ-ಕರ್ತವ್ಯ, ಹೊಳ್ಳುಗಳೆ-ಕಡೆಗಣಿಸು, ತುರುಬು-ಮುಡಿ
ಮೂಲ ...{Loading}...
ಕೆರಳಿದನು ದಮಘೋಷನಂದನ
ನರರೆ ದಿಟ್ಟನ ಧನು ವಿಭಾಡಿಸಿ
ತೆರಳಿಚಿತಲಾ ವಿಗಡ ಚಕ್ರಾಯುಧನ ಮಾಗಧನ
ಹರಿಬವೆನ್ನದು ಹೊಳ್ಳುಗಳೆವೆನು
ದುರುಳ ಧನುವನು ನಗುವ ಕನ್ನೆಯ
ತುರುಬ ಕೊಯ್ಸುವೆನೆನುತ ಕಲಿ ಶಿಶುಪಾಲನೈತಂದ ॥13॥
೦೧೪ ಇವನಲೇ ರಾವಣನು ...{Loading}...
ಇವನಲೇ ರಾವಣನು ಮುನ್ನಿನ
ಭವದೊಳಗೆ ತಪ್ಪಿಲ್ಲೆನುತ ಜನ
ನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ
ಅವನಿಪತಿ ಕೇಳಣೆದನಿವ ಚಾ
ಪವನು ಬೋಳೈಸಿದನು ಬಲುಹೋ
ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವನು ಹಿಂದಿನ ಜನ್ಮದಲ್ಲಿ ರಾವಣನಲ್ಲವೇ ! ಸುಕುಮಾರವಾದ ಶರೀರದ ಇವಳ ಪುಣ್ಯ ಹೇಗಿದೆಯೋ ?” ಎನ್ನುತ್ತ ಜನರ ಸಮೂಹ ಕಂಪಿಸಿತು." ಅರಸನೇ ಕೇಳು, “ಇವನು ಬಿಲ್ಲನ್ನು ಹಿಡಿದೆತ್ತಿದನು. ಅದನ್ನು ಸವರಿದನು. “ಈ ಧನುಸ್ಸು ಬಲುಶಕ್ತಿಯದೋ ! ಶಿವ !” ಎನ್ನುತ್ತ ಅಬ್ಬರಿಸಿದನು. ಬಿಲ್ಲನ್ನು ರಭಸದಿಂದ ಹಿಡಿದನು.
ಪದಾರ್ಥ (ಕ.ಗ.ಪ)
ಮುನ್ನ-ಹಿಂದೆ,
ಭವ-ಜನ್ಮ,
ಕೋಮಲಾಂಗಿ-ಸುಕುಮಾರವಾದ ಶರೀರ ಉಳ್ಳವಳು,
ಅಣೆ-ಆವರಿಸು, ತಿವಿ.
ಬೋಳೈಸು-ಸವರು,
ಸೀವರಿಸು-ಅಬ್ಬರಿಸು, ಡಾವರಿಸು-ರಭಸದಿಂದ ಹಿಡಿ
ಮೂಲ ...{Loading}...
ಇವನಲೇ ರಾವಣನು ಮುನ್ನಿನ
ಭವದೊಳಗೆ ತಪ್ಪಿಲ್ಲೆನುತ ಜನ
ನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ
ಅವನಿಪತಿ ಕೇಳಣೆದನಿವ ಚಾ
ಪವನು ಬೋಳೈಸಿದನು ಬಲುಹೋ
ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ ॥14॥
೦೧೫ ಏನನೆಮ್ಬೆನು ಧನು ...{Loading}...
ಏನನೆಂಬೆನು ಧನು ಸಘಾಡದ
ಮಾನಭಂಗದ ಮೊದಲ ಮನೆಯೆನೆ
ಮಾನಿನಿಯರಪಹಾಸ್ಯವೀ ಜನರೀ ನೃಪಾಲಕರ
ಹೀನ ನುಡಿಗಳ ಕಂಡು ದೈತ್ಯ ಸ
ಮಾನ ಮನದಲಿ ನೊಂದು ತಿರುಗಿದ
ನೇನನೆಂಬೆನು ಸದೆದುದಾತನ ಗರ್ವವಿಭ್ರಮವ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಂದು ಹೇಳುವುದು ? ಆ ಧನುಸ್ಸು ಶೌರ್ಯದ ಮಾನಭಂಗದ ಮೊದಲ ಮನೆ ಎನ್ನುವಂತಾಯ್ತು. ಸ್ತ್ರೀಯರ ಅಪಹಾಸ್ಯ ಈ ಜನರ ಹಾಗೂ ರಾಜರ ಕೆಟ್ಟ ಮಾತುಗಳನ್ನು ಕೇಳಿದನು. ಅಸುರ ಸಮಾನನಾದ ಶಿಶುಪಾಲ ಮನಸ್ಸಿನಲ್ಲಿ ನೊಂದು ಹಿಂತಿರುಗಿದನು. ಆತನ ಗರ್ವದ ಭ್ರಾಂತಿಯನ್ನು ಭಂಗಗೊಳಿಸಿದ್ದನ್ನು ಏನೆಂದು ಹೇಳುವುದು ?
ಪದಾರ್ಥ (ಕ.ಗ.ಪ)
ಸಘಾಡ-ಶೌರ್ಯ, ಹೀನ-ಕೆಟ್ಟ, ದೈತ್ಯ-ಅಸುರ, ಸದೆ-ಅಪ್ಪಳಿಸು, ವಿಭ್ರಮ-ಭ್ರಾಂತಿ
ಮೂಲ ...{Loading}...
ಏನನೆಂಬೆನು ಧನು ಸಘಾಡದ
ಮಾನಭಂಗದ ಮೊದಲ ಮನೆಯೆನೆ
ಮಾನಿನಿಯರಪಹಾಸ್ಯವೀ ಜನರೀ ನೃಪಾಲಕರ
ಹೀನ ನುಡಿಗಳ ಕಂಡು ದೈತ್ಯ ಸ
ಮಾನ ಮನದಲಿ ನೊಂದು ತಿರುಗಿದ
ನೇನನೆಂಬೆನು ಸದೆದುದಾತನ ಗರ್ವವಿಭ್ರಮವ ॥15॥
೦೧೬ ಕಣ್ಡು ಮಾಗಧ ...{Loading}...
ಕಂಡು ಮಾಗಧ ಕರೆದನೀ ಧನು
ಚಂಡಿಯಿದು ನಮಗಲ್ಲ ನಾವ್ ಮುಂ
ಕೊಂಡು ತಪ್ಪಿತು ನೊಪ್ಪಿತಾದುದು ಭಾರಿಯಗ್ಗಳಿಕೆ
ಭಂಡರೀ ಭೂಮಿಪರು ದ್ರುಪದನ
ಗುಂಡುದೊತ್ತಿರು ನಗೆಯನಾನಲಿ
ಮಂಡೆಗಳಲಿವರೆನುತ ಹಾಯ್ದರು ತಮ್ಮಪಟ್ಟಣಕೆ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಮ್ಮೆಟ್ಟಿ ಬಂದ ಶಿಶುಪಾಲನನ್ನು ನೋಡಿ ಜರಾಸಂಧನು ಅವನನ್ನು ಹತ್ತಿರಕ್ಕೆ ಕರೆದನು. “ಈ ಧನುಸ್ಸು ಹಟಮಾರಿಯಾದದ್ದು. ಇದು ನಮಗಲ್ಲ. ನಾವು ಮುಂದಾಗಿ ಹೋದದ್ದು ತಪ್ಪಾಯಿತು. ಇದರಿಂದ ನಮ್ಮ ಮಹತ್ವ ಲಘುವಾಯಿತು. ಈ ಭೂಮಿಪರು ನಾಚಿಕೆಯಿಲ್ಲದವರು. ದ್ರುಪದನ ಸೇವಕ ಸಮೂಹವು. ನಗೆಯನ್ನು ತಂದುಕೊಳ್ಳಲಿ " ಎನ್ನುತ್ತ ತಮ್ಮ ಪಟ್ಟಣಗಳಿಗೆ ನಡೆದರು.
ಪದಾರ್ಥ (ಕ.ಗ.ಪ)
ಚಂಡಿ-ಪ್ರಚಂಡ, ಮುಂಕೊಂಡು-ಮುಂದಾಗಿ ಹೋದದ್ದು, ನೊಪ್ಪಿತು-ಲಘು, ಗುಂಡು-ಸಮೂಹ, ತೊತ್ತಿರು-ಸೇವಕರು
ಮೂಲ ...{Loading}...
ಕಂಡು ಮಾಗಧ ಕರೆದನೀ ಧನು
ಚಂಡಿಯಿದು ನಮಗಲ್ಲ ನಾವ್ ಮುಂ
ಕೊಂಡು ತಪ್ಪಿತು ನೊಪ್ಪಿತಾದುದು ಭಾರಿಯಗ್ಗಳಿಕೆ
ಭಂಡರೀ ಭೂಮಿಪರು ದ್ರುಪದನ
ಗುಂಡುದೊತ್ತಿರು ನಗೆಯನಾನಲಿ
ಮಂಡೆಗಳಲಿವರೆನುತ ಹಾಯ್ದರು ತಮ್ಮಪಟ್ಟಣಕೆ ॥16॥
೦೧೭ ಗರುವರಲ್ಲಾ ಚೈದ್ಯ ...{Loading}...
ಗರುವರಲ್ಲಾ ಚೈದ್ಯ ಮಾಗಧ
ರಿರದೆ ತಮ್ಮಯ ಪುರಕೆ ಗಮಿಸಿದ
ರರಸುಗಳೆ ಮಿಕ್ಕವರ ವಿಧಿಯನು ಕೇಳು ನರನಾಥ
ಧರಧುರದೊಳಭಿಮಾನಹಾನಿಯ
ಹುರುಳಹುದು ಬಿಲು ಹೋರಟೆಗೆ ನಿಲ
ಲರಿದೆನುತ್ತಂಗವಣೆಗುಂದಿತು ನೆರೆದ ನೃಪನಿಕರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೇದಿದೇಶದ ರಾಜ ಶಿಶುಪಾಲ, ಮಗಧ ದೇಶದ ರಾಜ ಜರಾಸಂಧ ಶ್ರೇಷ್ಠರಲ್ಲವೇ ! ಅವರು ಅಲ್ಲಿರದೆ ತಮ್ಮಯ ನಗರಗಳಿಗೆ ಹೊರಟು ಹೋದ ಮೇಲೆ ಉಳಿದವರ ಅವಸ್ಥೆಯನ್ನು ಮಹಾರಾಜ ಕೇಳು. ಅಲ್ಲಿ ಸೇರಿದ್ದ ರಾಜರ ಸಮೂಹ " ಯುದ್ಧದಲ್ಲಿ ಸೋತರೆ ಅಭಿಮಾನ ಭಂಗವುಂಟಾಗುವುದು. ಬಿಲ್ಲನ್ನು ಗೆಲ್ಲುವ ಈ ಸ್ಪರ್ಧೆಯಲ್ಲಿ ನಿಲ್ಲುವುದು ಅಸಾಧ್ಯ ಎನ್ನುತ್ತಿದ್ದ ಅವರ ಉತ್ಸಾಹ ಕುಂದಿಹೋಯಿತು.”
ಪದಾರ್ಥ (ಕ.ಗ.ಪ)
ಚೈದ್ಯ-ಚೇದಿದೇಶದ ರಾಜ,
ಮಾಗಧ-ಮಗಧ ದೇಶದ ರಾಜ,
ವಿಧಿ-ಅವಸ್ಥೆ,
ಧರಧುರ-ಯುದ್ಧ, ಹೋರಾಟ
ಹಾನಿ-ಕುಂದು,
ಅಂಗವಣೆ-ಸಾಮಥ್ರ್ಯ, ಇಲ್ಲಿ ಉತ್ಸಾಹ
ಕುಂದು-ಕುಗ್ಗು
ಮೂಲ ...{Loading}...
ಗರುವರಲ್ಲಾ ಚೈದ್ಯ ಮಾಗಧ
ರಿರದೆ ತಮ್ಮಯ ಪುರಕೆ ಗಮಿಸಿದ
ರರಸುಗಳೆ ಮಿಕ್ಕವರ ವಿಧಿಯನು ಕೇಳು ನರನಾಥ
ಧರಧುರದೊಳಭಿಮಾನಹಾನಿಯ
ಹುರುಳಹುದು ಬಿಲು ಹೋರಟೆಗೆ ನಿಲ
ಲರಿದೆನುತ್ತಂಗವಣೆಗುಂದಿತು ನೆರೆದ ನೃಪನಿಕರ ॥17॥
೦೧೮ ದುರುಳ ಪಾಞ್ಚಾಲನ ...{Loading}...
ದುರುಳ ಪಾಂಚಾಲನ ಕುಮಾರಿಯ
ವರ ಕಟಾಕ್ಷದ ಬೀಸುವಲೆಯಲಿ
ಶರ ಮಹಾಧನುವೆಂಬ ಬಲುದಡಿವಲೆಯನಳವಡಿಸಿ
ಧರಣಿಪಾಲ ಮೃಗಂಗಳನು ಸಲೆ
ಬರಿಸಿ ಸದೆದನು ಹೊಲ್ಲೆಹೇನಂ
ತಿರಲಿ ನೋಡುವೆನೆನುತ ಶಲ್ಯನೃಪಾಲನೈತಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರುಳನಾದ ಪಾಂಚಾಲನ ಮಗಳ ಉತ್ತಮವಾದ ಕಡೆಗಣ್ಣ ನೋಟವೆಂಬ ಬೀಸು ಬಲೆಯಲ್ಲಿ, ಮಹಾಬಿಲ್ಲುಬಾಣಗಳೆಂಬ ದಡಿಗಳನ್ನುಳ್ಳ ಬಲೆಯನ್ನು ಅಳವಡಿಸಿ, ಮಹಾರಾಜನು ರಾಜರೆಂಬ ಮೃಗಗಳನ್ನು ಹೆಚ್ಚಾಗಿ ಬರುವಂತೆ ಮಾಡಿ ನಾಶಮಾಡಿದನು. ಅದರಲ್ಲಿ ದೋಷವೇನು ? ಅದು ಹಾಗಿರಲಿ. ನಾನು ನೋಡಿಕೊಳ್ಳುತ್ತೇನೆ” ಎನುತ್ತ ಶಲ್ಯ ಮಹಾರಾಜನು ಎದ್ದು ಬಂದನು.
ಪದಾರ್ಥ (ಕ.ಗ.ಪ)
ಕಟಾಕ್ಷ-ಕಡೆಗಣ್ಣನೋಟ, ಬೀಸುವಲೆ-ಬೀಸುಬಲೆ, ಶರ-ಬಾಣ, ದಡಿವಲೆ-ದಡಿಗಳನ್ನುಳ್ಳ ಬಲೆ, ಹೊಲ್ಲೆಹ-ದೋಷ
ಪಾಠಾನ್ತರ (ಕ.ಗ.ಪ)
ಮರುಳೆ- ದುರುಳ
‘ಮರುಳೆ’ ಪದಕ್ಕೆ ಸೂಕ್ತ ಅರ್ಥ ಕಾಣಬರದಿರುವುದರಿಂದ ‘ದುರುಳ ಎನ್ನುವ ಪಾಠಾಂತರದ ‘ಕೆಟ್ಟ’ ಎಂಬ ಅರ್ಥ ಸಮಂಜಸವೆನಿಸುತ್ತದೆ. ಆದಿಪರ್ವ, ಮೈ.ವಿ.ವಿ.
ಮೂಲ ...{Loading}...
ದುರುಳ ಪಾಂಚಾಲನ ಕುಮಾರಿಯ
ವರ ಕಟಾಕ್ಷದ ಬೀಸುವಲೆಯಲಿ
ಶರ ಮಹಾಧನುವೆಂಬ ಬಲುದಡಿವಲೆಯನಳವಡಿಸಿ
ಧರಣಿಪಾಲ ಮೃಗಂಗಳನು ಸಲೆ
ಬರಿಸಿ ಸದೆದನು ಹೊಲ್ಲೆಹೇನಂ
ತಿರಲಿ ನೋಡುವೆನೆನುತ ಶಲ್ಯನೃಪಾಲನೈತಂದ ॥18॥
೦೧೯ ಅಗ್ಗಳೆಯನಾ ಮಗಧ ...{Loading}...
ಅಗ್ಗಳೆಯನಾ ಮಗಧ ಮಾತಿನ
ಲಗ್ಗಿಗನು ಶಿಶುಪಾಲ ಸೋಲದ
ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ
ತಗ್ಗುವುದೊ ಧನು ಧನುವಿಘಾತಿಗೆ
ಮುಗ್ಗುವನೊ ಮಾದ್ರೇಶನಿವರೊಳ
ಗಗ್ಗಳೆಯನಹನೆಂದು ನೋಡಿದರಂದು ನಾರಿಯರು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಮಾಗಧನು ಶ್ರೇಷ್ಠನು. ಮಾತಿನಲ್ಲಿ ಮುಂದಾದವನು ಶಿಶುಪಾಲನು. ಈ ಇಬ್ಬರಿಗೂ ಸೋಲಿನ ಸುಗ್ಗಿಯಾಯ್ತು. ಹಲವರಿಗೆ ಯುದ್ಧದ ಧೂಳು ಕವಿಯಿತು. ಇವನಿಗೆ ಈ ಧನುಸ್ಸು ಸೋಲುವುದೋ ಅಥವಾ ಧನುಸ್ಸಿನ ಹೊಡೆತಕ್ಕೆ ಇವನೇ ಬೀಳುವನೋ ? ಇವರೊಳಗೆಲ್ಲ ಮಾದ್ರೇಶನಾದ ಶಲ್ಯನು ಶೂರನಾದವನು” ಎಂದು ನಾರಿಯರು ಕುತೂಹಲದಿಂದ ನೋಡಿದರು.
ಪದಾರ್ಥ (ಕ.ಗ.ಪ)
ಅಗ್ಗಳೆಯ-ಶ್ರೇಷ್ಠ, ಮಾತಿನಲಗ್ಗಿದನು-ಮಾತಿನಲ್ಲಿ ಮುಂದಾದವನು, ತಗ್ಗು-ಸೋಲುÂ, ಮುಗ್ಗು-ಬೀಳು, ಅಗ್ಗಳೆಯ-ಶೂರ
ಮೂಲ ...{Loading}...
ಅಗ್ಗಳೆಯನಾ ಮಗಧ ಮಾತಿನ
ಲಗ್ಗಿಗನು ಶಿಶುಪಾಲ ಸೋಲದ
ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ
ತಗ್ಗುವುದೊ ಧನು ಧನುವಿಘಾತಿಗೆ
ಮುಗ್ಗುವನೊ ಮಾದ್ರೇಶನಿವರೊಳ
ಗಗ್ಗಳೆಯನಹನೆಂದು ನೋಡಿದರಂದು ನಾರಿಯರು ॥19॥
೦೨೦ ಬನ್ದನೀತನು ಧನುವ ...{Loading}...
ಬಂದನೀತನು ಧನುವ ಸಾರಿದು
ನಿಂದು ಸಂವರಿಸಿದನು ಕಾಂತಾ
ವೃಂದವನು ನೋಡಿದನು ಮನದಲಿ ಧಿಕ್ಕು ಧಿಗಿಲೆನುತ
ಸಂದಣಿಯ ನಭಕೊತ್ತಿ ಫಣಿಯಲಿ
ಮಂದರವ ಬಿಗಿವಂತೆ ಭುಜದಲಿ
ಮುಂದುವರಿದವುಚಿದನು ದಂಡೆಯನಿಕ್ಕಿ ಕೋಪದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನು ಧನುಸ್ಸನ್ನು ಸಮೀಪಿಸಿದನು. ಅದರ ಬಳಿ ನಿಂತು ಸಿದ್ಧನಾದನು. ಮನಸ್ಸಿನಲ್ಲಿ ಧಿಕ್ಕು ಧಿಗಿಲ್ ಎನ್ನುತ್ತ ಸ್ತ್ರೀ ಸಮೂಹವನ್ನು ಹಾಗೂ ಮುಂದಿನ ಗುಂಪನ್ನು ನೋಡಿದನು. ಸರ್ಪವು ಮಂದರವನ್ನು ಬಿಗಿಯುವಂತೆ ಮೇಲ್ಮೇಲಕ್ಕೆ ಬಿಲ್ಲನ್ನು ಒತ್ತಿ ಮೊಣಕಾಲೂರಿ ಕೋಪದಿಂದ ಮುಂದುವರಿದು ಧನುಸ್ಸನ್ನು ಭುಜದಲ್ಲಿ ಸೇರಿಸಿದನು.
ಪದಾರ್ಥ (ಕ.ಗ.ಪ)
ಸಾರು-ಸಮೀಪಿಸು, ಸಂವರಿಸು-ಸಿದ್ಧನಾಗು, ಕಾಂತಾ-ಸ್ತ್ರೀ, ಅವುಚು-ಸೇರಿಸು
ಸಂದಣಿ -ಗುಂಪು
ಮೂಲ ...{Loading}...
ಬಂದನೀತನು ಧನುವ ಸಾರಿದು
ನಿಂದು ಸಂವರಿಸಿದನು ಕಾಂತಾ
ವೃಂದವನು ನೋಡಿದನು ಮನದಲಿ ಧಿಕ್ಕು ಧಿಗಿಲೆನುತ
ಸಂದಣಿಯ ನಭಕೊತ್ತಿ ಫಣಿಯಲಿ
ಮಂದರವ ಬಿಗಿವಂತೆ ಭುಜದಲಿ
ಮುಂದುವರಿದವುಚಿದನು ದಂಡೆಯನಿಕ್ಕಿ ಕೋಪದಲಿ ॥20॥
೦೨೧ ಕೊಳ್ಳದೀ ಧನುವೀತನುಬ್ಬಿನೊ ...{Loading}...
ಕೊಳ್ಳದೀ ಧನುವೀತನುಬ್ಬಿನೊ
ಳಳ್ಳೆಗೊಬ್ಬಿನೊಳೌಕಿ ತೊಡರಿನ
ಘಲ್ಲಣೆಯ ಘನಕುಲಿಯೆ ಪಂಟಿಸಿ ನಿಮಿಷ ಮಾತ್ರದಲಿ
ಬಿಲ್ಲು ಬಿಡದವನಿಯಲಿ ಬಿದ್ದನು
ಡೊಳ್ಳು ಮೇಲಾಗಿತ್ತ ಸತಿಯರು
ಘೊಳ್ಳೆನಲು ಸುಡು ಘೋರ ಧನುವನೆನುತ್ತ ಹೊರದೆಗೆದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧನುಸ್ಸು ಈತನನ್ನು ಲೆಕ್ಕಿಸದು. ಇವನು ಉತ್ಸಾಹದಲ್ಲಿ ಮೈಗೊಬ್ಬಿನಲ್ಲಿ ಔಕಿ ಅದನ್ನು ಹಿಡಿದಲುಗಿಸಿದನು. ಹೀಗೆ ಸಾಹಸ ಮಾಡುತ್ತ ನಿಮಿಷ ಮಾತ್ರದಲ್ಲಿ ಮುಗ್ಗರಿಸಿ ಹೊಟ್ಟೆ ಮೇಲಾಗಿ ಬಿಲ್ಲನ್ನು ಬಿಡದೆ ಬಿದ್ದನು. ಬಿದ್ದ ರಭಸಕ್ಕೆ ಕಾಲು ಬಳೆಯ ಘಲ್ಘಲ್ ಎಂಬ ಗಟ್ಟಿಯಾದ ಶಬ್ದ ಸುತ್ತುವರಿಯಿತು. ಇತ್ತ ಸತಿಯರು ಘೊಳ್ಳೆಂದು ನಗತೊಡಗಿದರು. “ಸುಡು, ಈ ಭಯಂಕರ ಧನುವನ್ನು” ಎನ್ನುತ್ತ ಶಲ್ಯನು ಹೊರತೆಗೆದನು.
ಪದಾರ್ಥ (ಕ.ಗ.ಪ)
ಕೊಳ್-ಸ್ವೀಕರಿಸು, ಉಬ್ಬು-ಉತ್ಸಾಹ, ತೊಡರು-ಕಾಲಿನ ಬಳೆ,
ಪಂಟಿಸಿ-ಸುತ್ತುವರಿ,
ಡೊಳ್ಳು-ಬೊಜ್ಜು ಬೆಳೆದ ಹೊಟ್ಟೆ, ಘೋರ-ಭಯಂಕರ, ಅಳ್ಳೆಗೊಬ್ಬು-ಮೈಗೊಬ್ಬು (?)
ಮೂಲ ...{Loading}...
ಕೊಳ್ಳದೀ ಧನುವೀತನುಬ್ಬಿನೊ
ಳಳ್ಳೆಗೊಬ್ಬಿನೊಳೌಕಿ ತೊಡರಿನ
ಘಲ್ಲಣೆಯ ಘನಕುಲಿಯೆ ಪಂಟಿಸಿ ನಿಮಿಷ ಮಾತ್ರದಲಿ
ಬಿಲ್ಲು ಬಿಡದವನಿಯಲಿ ಬಿದ್ದನು
ಡೊಳ್ಳು ಮೇಲಾಗಿತ್ತ ಸತಿಯರು
ಘೊಳ್ಳೆನಲು ಸುಡು ಘೋರ ಧನುವನೆನುತ್ತ ಹೊರದೆಗೆದ ॥21॥
೦೨೨ ಹಿಙ್ಗಿದನು ಮಾದ್ರೇಶನೀ ...{Loading}...
ಹಿಂಗಿದನು ಮಾದ್ರೇಶನೀ ಧನು
ಭಂಗಿಸಿತು ಮಾನ್ಯರನು ಜಡವಿದು
ಜಂಗಮತ್ವದಲೇನಹುದೊ ಝೋಂಪಿಸಿತಲೈ ಜಗವ
ಅಂಗನಾ ಪಾಣಿಗ್ರಹಣ ರಾ
ಯಂಗೆ ತಾನೀ ದುಷ್ಟಧನುವನು
ಭಂಗಬಡಿಸದೆ ಬಿಡೆನೆನುತ ಕಲಿ ಕರ್ಣನೈತಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾದ್ರೇಶನು ಹಿಂದೆ ಸರಿದನು. ಈ ಜಡವಸ್ತು ಧನುಸ್ಸು ಗೌರವಸ್ಥರನ್ನು ಸೋಲಿಸಿತು. ಚಲನೆಯುಳ್ಳದ್ದಾದರೆ ಏನಾಗುವುದೋ ? ಇದು ಜಗವನ್ನೇ ಎಚ್ಚರ ತಪ್ಪಿಸಿತಲ್ಲ ! ರಾಜ ದುರ್ಯೋಧನನೇ ಈ ಅಂಗನೆಯನ್ನು ಕೈ ಹಿಡಿಯುವುದು. ನಾನು ಈ ಕೆಟ್ಟ ಧನುಸ್ಸನ್ನು ಭಂಗಿಸದೆ ಬಿಡುವುದಿಲ್ಲ” ಎನುತ್ತ ಕಲಿಕರ್ಣನು ಧನುಸ್ಸಿನ ಕಡೆಗೆ ನಡೆದನು.
ಪದಾರ್ಥ (ಕ.ಗ.ಪ)
ಹಿಂಗು-ಹಿಂದೆಸರಿ, ಮಾನ್ಯ-ಗೌರವಸ್ಥ, ಝೋಂಪಿಸು-ಎಚ್ಚರ ತಪ್ಪಿಸು, ಪಾಣಿಗ್ರಹಣ-ಕೈ ಹಿಡಿಯುವುದು
ಮೂಲ ...{Loading}...
ಹಿಂಗಿದನು ಮಾದ್ರೇಶನೀ ಧನು
ಭಂಗಿಸಿತು ಮಾನ್ಯರನು ಜಡವಿದು
ಜಂಗಮತ್ವದಲೇನಹುದೊ ಝೋಂಪಿಸಿತಲೈ ಜಗವ
ಅಂಗನಾ ಪಾಣಿಗ್ರಹಣ ರಾ
ಯಂಗೆ ತಾನೀ ದುಷ್ಟಧನುವನು
ಭಂಗಬಡಿಸದೆ ಬಿಡೆನೆನುತ ಕಲಿ ಕರ್ಣನೈತಂದ ॥22॥
೦೨೩ ಈತನರ್ಜುನನಲ್ಲಲೇ ರೂ ...{Loading}...
ಈತನರ್ಜುನನಲ್ಲಲೇ ರೂ
ಪಾತಿಶಯವುಳ್ಳಾತ ಯಂತ್ರವ
ನೀತ ಗೆಲಿದರೆ ಪುಣ್ಯವೈಸಲೆ ತಂಗಿಗನುಸಾರಿ
ಈತ ವರನಹುದೆನುತ ಲಲನಾ
ಜಾತವಾತನನೀಕ್ಷಿಸುತ ಸಂ
ಪ್ರೀತಿಯಲಿ ಕೊಂಡಾಡುತಿರ್ದುದು ರಾಯ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈತನು ಅರ್ಜುನನಲ್ಲವೇ ? ಅತಿಶಯವಾದ ರೂಪನ್ನು ಹೊಂದಿರುವವನು. ಯಂತ್ರವನ್ನು ಈತ ಗೆದ್ದರೆ ಪುಣ್ಯವಲ್ಲವೇ ! ತಂಗಿ ದ್ರೌಪದಿಗೆ ಈತನು ಅನುರೂಪವಾದ ವರನಾಗಿಹನು " ಎನುತ್ತ ಸ್ತ್ರೀ ಸಮೂಹ ಆತನನ್ನು ನೋಡುತ್ತ ಅತಿಶಯವಾದ ಪ್ರೀತಿಯಲ್ಲಿ ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಅನುಸಾರಿ-ಅನುರೂಪನಾದ, ಲಲನೆ-ಸ್ತ್ರೀ, ಸಂಪ್ರೀತಿ-ಅತಿಶಯವಾದ ಪ್ರೀತಿ, ಕೊಂಡಾಡು-ಹೊಗಳು
ಮೂಲ ...{Loading}...
ಈತನರ್ಜುನನಲ್ಲಲೇ ರೂ
ಪಾತಿಶಯವುಳ್ಳಾತ ಯಂತ್ರವ
ನೀತ ಗೆಲಿದರೆ ಪುಣ್ಯವೈಸಲೆ ತಂಗಿಗನುಸಾರಿ
ಈತ ವರನಹುದೆನುತ ಲಲನಾ
ಜಾತವಾತನನೀಕ್ಷಿಸುತ ಸಂ
ಪ್ರೀತಿಯಲಿ ಕೊಂಡಾಡುತಿರ್ದುದು ರಾಯ ಕೇಳೆಂದ ॥23॥
೦೨೪ ತುಡುಕಿದನು ಚಾಪವನು ...{Loading}...
ತುಡುಕಿದನು ಚಾಪವನು ಮಹಿಯಿಂ
ಮಿಡುಕದಿರೆ ಮಂಡಳಿಸಿ ಝಾಡಿಸಿ
ಜಡಿದು ಜರೆದೌಂಕಿದನು ದಂಡೆಯನಿಕ್ಕಿ ಕೋಪದಲಿ
ಹೊಡಕರಿಸಿ ಸತ್ವಾತಿಶಯವಿ
ಮ್ಮಡಿಸೆ ಸರ್ಷಪಮಾತ್ರ ತಿರುವನು
ತೊಡಿಸಲರಿಯದೆ ಹಿಂಗಿ ಮೌನದೊಳಿರ್ದನಾ ಕರ್ಣ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಹತ್ತಿರ ಬಂದು ಬಿಲ್ಲನ್ನು ಹಿಡಿದನು. ಅದು ಭೂಮಿಯಿಂದ ಅಲ್ಲಾಡದಿರಲು, ಕರ್ಣನು ಬಿಲ್ಲನ್ನು ಬಳಸಿ, ದಬಾಯಿಸಿ, ಗರ್ಜಿಸಿ, ಧಿಕ್ಕರಿಸುತ್ತ ಮೊಣಕಾಲೂರಿ ಕೋಪದಿಂದ ಒತ್ತಿದನು. ಅತಿಶಯವಾದ ಸಾಮಥ್ರ್ಯ ಎರಡರಷ್ಟಾಗಿ ಕಾಣಿಸಿ ಬಿಲ್ಲಿನ ಹೆದೆಯನ್ನು ತೊಡಿಸಹೋಗಿ ಸಾಸುವೆ ಕಾಳಿನಷ್ಟೂ ಸಾಧ್ಯವಾಗದೆ ಹಿಮ್ಮೆಟ್ಟಿ, ಕರ್ಣನು ಮೌನದಲ್ಲಿದ್ದನು.
ಪದಾರ್ಥ (ಕ.ಗ.ಪ)
ತುಡುಕು-ಹಿಡಿ, ಮಹಿ-ಭೂಮಿ, ಮಿಡುಕು-ಅಲ್ಲಾಡು, ಮಂಡಳಿಸಿ-ಬಳಸಿ, ಝೂಡಿಸಿ-ದಬಾಯಿಸಿ, ಜಡಿದು-ಗರ್ಜಿಸು, ಜರೆ-ಧಿಕ್ಕರಿಸು, ಹೊಡಕರಿಸು-ಕಾಣು, ಸತ್ವ-ಸಾಮಥ್ರ್ಯ, ಸರ್ಷಪ-ಸಾಸುವೆಕಾಳು, ತಿರು-ಬಿಲ್ಲಿನ ಹೆದೆ, ಹಿಂಗು-ಹಿಮ್ಮೆಟ್ಟು
ಮೂಲ ...{Loading}...
ತುಡುಕಿದನು ಚಾಪವನು ಮಹಿಯಿಂ
ಮಿಡುಕದಿರೆ ಮಂಡಳಿಸಿ ಝಾಡಿಸಿ
ಜಡಿದು ಜರೆದೌಂಕಿದನು ದಂಡೆಯನಿಕ್ಕಿ ಕೋಪದಲಿ
ಹೊಡಕರಿಸಿ ಸತ್ವಾತಿಶಯವಿ
ಮ್ಮಡಿಸೆ ಸರ್ಷಪಮಾತ್ರ ತಿರುವನು
ತೊಡಿಸಲರಿಯದೆ ಹಿಂಗಿ ಮೌನದೊಳಿರ್ದನಾ ಕರ್ಣ ॥24॥
೦೨೫ ಇವರು ನಾಲ್ವರಿಗೊನ್ದೆ ...{Loading}...
ಇವರು ನಾಲ್ವರಿಗೊಂದೆ ಪಥ ಹಲ
ರವಗಡಿಸಿ ಮುನ್ನಳುಕಿದರು ಬಹು
ಭುವನಪತಿಗಳು ಭಾರಿ ಧನುವಿದೆ ಭಾಮಿನಿಯ ಮುಂದೆ
ಎವಗೆ ತವಗಿದು ವಶವೆ ಬಾವ
ನ್ನವನು ವೇಷ್ಟಿಸಿ ಭುಜಗವಿದೆಯೆಂ
ದವನಿಪರು ಹೊರಗುಂದಿದರು ಭಯಮುಖದ ದುಗಡದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ನಾಲ್ವರಿಗೂ (ಜರಾಸಂಧ, ಶಿಶುಪಾಲ, ಶಲ್ಯ, ಕರ್ಣ) ಒಂದೇ ದಾರಿಯಾಯ್ತು. ಇನ್ನು ಹಲವರು ಮೊದಲು ಸಾಹಸ ಮಾಡಿ ಹಿಂಜರಿದರು. ಅನೇಕ ಭುವನಪತಿಗಳು “ಶ್ರೀಗಂಧವನ್ನು ಸುತ್ತುವರಿದಿರುವ ಸರ್ಪದಂತೆ ಭಾರಿಯ ಧನು ಭಾಮಿನಿಯ ಮುಂದಿದೆ. ನಮಗೆ ತಮಗೆ ಇದು ವಶವಾಗುತ್ತದೆಯೇ ?” ಎಂದು ಭಯಮುಖದ ಚಿಂತೆಯಲ್ಲಿ ಸ್ಪರ್ಧೆಯಿಂದ ಹೊರಗುಳಿದರು.
ಪದಾರ್ಥ (ಕ.ಗ.ಪ)
ಪಥ-ದಾರಿ, ಅಳುಕು-ಹಿಂಜರಿ, ಬಾವನ್ನ-ಶ್ರೀಗಂಧ, ವೇಷ್ಟಿಸು-ಸುತ್ತುವರಿ, ಭುಜಗ-ಸರ್ಪ, ದುಗುಡ-ಚಿಂತೆ, ಹೊರಗುಂದಿದರು-ಹೊರಗುಳಿದರು (?)
ಮೂಲ ...{Loading}...
ಇವರು ನಾಲ್ವರಿಗೊಂದೆ ಪಥ ಹಲ
ರವಗಡಿಸಿ ಮುನ್ನಳುಕಿದರು ಬಹು
ಭುವನಪತಿಗಳು ಭಾರಿ ಧನುವಿದೆ ಭಾಮಿನಿಯ ಮುಂದೆ
ಎವಗೆ ತವಗಿದು ವಶವೆ ಬಾವ
ನ್ನವನು ವೇಷ್ಟಿಸಿ ಭುಜಗವಿದೆಯೆಂ
ದವನಿಪರು ಹೊರಗುಂದಿದರು ಭಯಮುಖದ ದುಗಡದಲಿ ॥25॥
೦೨೬ ಕ್ಷಿತಿಪ ಕೇಳೈ ...{Loading}...
ಕ್ಷಿತಿಪ ಕೇಳೈ ವಿಗಡ ಚಾಪ
ವ್ಯತಿಕರಕೆ ದುರ್ಯೋಧನಾದಿ
ಕ್ಷಿತಿಪತಿಗಳಂಜಿದುದ ಕಂಡನು ನಗುತ ಬಲರಾಮ
ಕೃತಕ ಧನುವನು ಮುರಿದು ದ್ರುಪದನ
ಸುತೆಯ ಮುಂದಲೆವಿಡಿದು ತಹೆನು
ದ್ಧತನಲಾ ಪಾಂಚಾಲನೆನುತಿಳಿದನು ವರಾಸನವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಪರಾಕ್ರಮದ ಪ್ರಸಂಗಕ್ಕೆ ದುರ್ಯೋಧನ ಮೊದಲಾದ ಭೂಪತಿಗಳು ಹೆದರಿದುದನ್ನು ನಗುತ್ತ ಬಲರಾಮನು ನೋಡಿದನು “ಮೋಸದ ಧನುಸ್ಸನ್ನು ಸೋಲಿಸಿ ದ್ರುಪದ ಪುತ್ರಿಯ ಮುಂದಲೆಯನ್ನು ಹಿಡಿದು ತರುತ್ತೇನೆ. ಪಾಂಚಾಲನು ಉದ್ಧಟನಾಗಿದ್ದಾನೆ” ಎಂದು ಹೇಳುತ್ತ ಸಿಂಹಾಸನದಿಂದ ಇಳಿದನು.
ಪದಾರ್ಥ (ಕ.ಗ.ಪ)
ವಿಗಡ-ಪರಾಕ್ರಮ, ವ್ಯತಿಕರ-ಪ್ರಸಂಗ, ಕೃತಕ-ಮೋಸ, ಉದ್ಧತ-ಉದ್ಧಟ, ವರಾಸನ-ಶ್ರೇಷ್ಠವಾದ ಆಸನ, ಸಿಂಹಾಸನ
ಮೂಲ ...{Loading}...
ಕ್ಷಿತಿಪ ಕೇಳೈ ವಿಗಡ ಚಾಪ
ವ್ಯತಿಕರಕೆ ದುರ್ಯೋಧನಾದಿ
ಕ್ಷಿತಿಪತಿಗಳಂಜಿದುದ ಕಂಡನು ನಗುತ ಬಲರಾಮ
ಕೃತಕ ಧನುವನು ಮುರಿದು ದ್ರುಪದನ
ಸುತೆಯ ಮುಂದಲೆವಿಡಿದು ತಹೆನು
ದ್ಧತನಲಾ ಪಾಂಚಾಲನೆನುತಿಳಿದನು ವರಾಸನವ ॥26॥
೦೨೭ ಹಲಧರನ ಮಸಕವನು ...{Loading}...
ಹಲಧರನ ಮಸಕವನು ಕಂಡನು
ನಳಿನನಾಭನಿದೇನು ಪೀಠವ
ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ
ತಿಳುಹಿಯೆನೆ ಬೇರೇನು ಯಂತ್ರವ
ಕಳಚಿ ಬಿಸುಟು ಲತಾಂಗಿಯನು ಹಿಡಿ
ದೆಳದು ತಹೆನೆನಲೈಸಲೇ ಕೇಳ್ ಎಂದನಸುರಾರಿ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮನ ರೋಷವನ್ನು ಕಮಲನಾಭನಾದ ಕೃಷ್ಣನು ನೋಡಿದನು. “ಇದೇನು ? ಪೀಠವನ್ನು ಇಳಿದಿರಿ. ಎಲ್ಲಿಗೆ ಹೋಗುವಿರಿ? ನಿಮಗೆ ಯಾವುದು ಕಾರ್ಯಗತಿ ? ತಿಳಿಸಿ” ಎಂದು ಕೇಳಿದನು. ಅದಕ್ಕೆ ಬಲರಾಮನು “ಬೇರೆ ಏನು ? ಯಂತ್ರವನ್ನು ತೆಗೆದು ಬಿಸುಡಿ ಕೋಮಲೆಯನ್ನು ಹಿಡಿದು ಎಳೆದು ತರುತ್ತೇನೆ” ಎಂದು ಹೇಳಿದನು. ಕೃಷ್ಣನು “ಇಷ್ಟೇ ತಾನೇ ಕೇಳು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಮಸಕ-ರೋಷ, ಹಲಧರ-ಬಲರಾಮ (ನೇಗಿಲನ್ನು ಕೈಯಲ್ಲಿ ಹಿಡಿದಿರುವವನು) ಕಳಚಿ-ತೆಗೆದು, ಲತಾಂಗಿ-ಕೋಮಲೆ
ಮೂಲ ...{Loading}...
ಹಲಧರನ ಮಸಕವನು ಕಂಡನು
ನಳಿನನಾಭನಿದೇನು ಪೀಠವ
ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ
ತಿಳುಹಿಯೆನೆ ಬೇರೇನು ಯಂತ್ರವ
ಕಳಚಿ ಬಿಸುಟು ಲತಾಂಗಿಯನು ಹಿಡಿ
ದೆಳದು ತಹೆನೆನಲೈಸಲೇ ಕೇಳೆಂದನಸುರಾರಿ ॥27॥
೦೨೮ ಏನಹರು ನಿಮಗಿನ್ದು ...{Loading}...
ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಸಾನುರಾಗವೆ ಮನಕೆ ಸಂಶಯ
ವೇನಿದಕೆ ತಪ್ಪಿಲ್ಲ ಕುಂತೀ
ಸೂನುಗಳು ದ್ರೌಪದಿಗೆ ರಮಣರು ನೋಡಿ ನೀವೆಂದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮಗೆ ಕುಂತೀ ದೇವಿಯರು ಈಗ ಏನಾಗಬೇಕು ? ಅತ್ತೆಯರಲ್ಲವೇ ? ಅವರ ಮಕ್ಕಳು ಮೈದುನರಲ್ಲವೇ ? ಅವರ ಹೆಂಡತಿಯರು ತಂಗಿಯರು. ಅವರಲ್ಲಿ ಮನಸಾಯಿತೇ? ಇದರಲ್ಲಿ ಸಂದೇಹವೇನು ? ಈ ಮಾತಿಗೆ ತಪ್ಪಿಲ್ಲ. ಕುಂತೀ ಮಕ್ಕಳು ದ್ರೌಪದಿಗೆ ಪತಿಗಳು. ನೀವೇ ನೋಡುವಿರಂತೆ” ಎಂದು ಕೃಷ್ಣ ಹೇಳಿದನು.
ಪದಾರ್ಥ (ಕ.ಗ.ಪ)
ಸೂನು-ಮಕ್ಕಳು, ಸಾನುರಾಗ-ಪ್ರೀತಿ, ಸಂಶಯ-ಸಂದೇಹ
ಮೂಲ ...{Loading}...
ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಸಾನುರಾಗವೆ ಮನಕೆ ಸಂಶಯ
ವೇನಿದಕೆ ತಪ್ಪಿಲ್ಲ ಕುಂತೀ
ಸೂನುಗಳು ದ್ರೌಪದಿಗೆ ರಮಣರು ನೋಡಿ ನೀವೆಂದ ॥28॥
೦೨೯ ಮೂಗಿನಲಿ ಬೆರಳಿಟ್ಟು ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಬಲರಾಮನವನಿಯ
ನೀಗಿ ಹೋದರ ಮಾತು ಪಾಂಡವರೆತ್ತಲಿವಳೆತ್ತ
ಬೇಗುದಿಯೊಳುರಿಯರಮನೆಯೊಳೊಂ
ದಾಗಿ ಬೆಂದರು ಲೋಕವರಿಯೆ ಶ
ಠಾಗಮಿಕ ನಿನಗಂಜುವೆನು ತಾನೆನುತ ಕೈಮುಗಿದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂಗಿನಲ್ಲಿ ಬೆರಳಿಟ್ಟು ತಲೆಯನ್ನು ತೂಗಿದನು ಬಲರಾಮ. “ಭೂಮಿಯನ್ನೇ ಬಿಟ್ಟು ಹೋದವರ ಮಾತು ! ಪಾಂಡವರೆಲ್ಲಿ ? ಇವಳೆಲ್ಲಿ ? ಉರಿಯ ಅರಮನೆಯ ತೀವ್ರವಾದ ಬೇಗೆಯಲ್ಲಿ ಲೋಕವೇ ತಿಳಿದಂತೆ ಒಂದಾಗಿ ಬೆಂದು ಹೋದರು. ವಂಚನೆಯಲ್ಲಿ ಪಾರಂಗತನಾದ ನಿನಗೆ ನಾನು ಹೆದರುತ್ತೇನೆ” ಎಂದು ಬಲರಾಮ ಕೈಮುಗಿದನು.
ಪದಾರ್ಥ (ಕ.ಗ.ಪ)
ನೀಗಿ-ಬಿಟ್ಟು, ಬೇಗುದಿ-ತೀವ್ರವಾದ ಬೇಗೆ, ಶಠಾಗಮಿಕ-ವಂಚನೆಯಲ್ಲಿ ಪಾರಂಗತನಾದವನು.
ಮೂಲ ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಬಲರಾಮನವನಿಯ
ನೀಗಿ ಹೋದರ ಮಾತು ಪಾಂಡವರೆತ್ತಲಿವಳೆತ್ತ
ಬೇಗುದಿಯೊಳುರಿಯರಮನೆಯೊಳೊಂ
ದಾಗಿ ಬೆಂದರು ಲೋಕವರಿಯೆ ಶ
ಠಾಗಮಿಕ ನಿನಗಂಜುವೆನು ತಾನೆನುತ ಕೈಮುಗಿದ ॥29॥
೦೩೦ ಕ್ಷಿತಿಯೊಳವರಿಲ್ಲೆನ್ದು ...{Loading}...
ಕ್ಷಿತಿಯೊಳವರಿಲ್ಲೆಂದು ದ್ರುಪದನ
ಸುತೆಗೆ ಪತಿ ಪರರೆಂದು ಯಂತ್ರ
ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ
ಕ್ಷಿತಿಗೆ ಪಾಂಡವರಲ್ಲದಿಲ್ಲೀ
ಸತಿಗೆ ಪತಿ ಪೆರರಿಲ್ಲ ಕುಂತೀ
ಸುತರನೀಗಳೆ ತೋರುವೆನು ವಸುದೇವನಾಣೆಂದ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಸುಮ್ಮನಾಗದೆ, “ಭೂಮಿಯ ಮೇಲೆ ಅವರು ಇಲ್ಲವೆಂದೂ, ದ್ರುಪದನ ಮಗಳಿಗೆ ಪತಿ ಬೇರೆಯವರೆಂದೂ, ಯಂತ್ರ ಪತನಕ್ಕೆ ನೀವೇ ಸರಿಯೆಂದು ನಿಮ್ಮ ಚಿತ್ತದಲ್ಲಿ ತೋರಿತೇ ? ಭೂಮಿಗೆ ಪಾಂಡವರಲ್ಲದೆ ಬೇರೆ ಒಡೆಯರಿಲ್ಲ. ಈ ಸತಿಗೆ ಪತಿ ಬೇರೆ ಯಾರೂ ಇಲ್ಲ. ಕುಂತೀ ಸುತರನ್ನು ಈಗಲೇ ನಿಮಗೆ ತೋರಿಸುತ್ತೇನೆ. ವಸುದೇವನಾಣೆ” ಎಂದನು.
ಪದಾರ್ಥ (ಕ.ಗ.ಪ)
ಕ್ಷಿತಿ-ಭೂಮಿ, ಚ್ಯುತಿ-ಪತನ, ಪೆರರು-ಬೇರೆಯವರು
ಮೂಲ ...{Loading}...
ಕ್ಷಿತಿಯೊಳವರಿಲ್ಲೆಂದು ದ್ರುಪದನ
ಸುತೆಗೆ ಪತಿ ಪರರೆಂದು ಯಂತ್ರ
ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ
ಕ್ಷಿತಿಗೆ ಪಾಂಡವರಲ್ಲದಿಲ್ಲೀ
ಸತಿಗೆ ಪತಿ ಪೆರರಿಲ್ಲ ಕುಂತೀ
ಸುತರನೀಗಳೆ ತೋರುವೆನು ವಸುದೇವನಾಣೆಂದ ॥30॥
೦೩೧ ಇದು ವಿಚಿತ್ರವಲಾ ...{Loading}...
ಇದು ವಿಚಿತ್ರವಲಾ ಗತಾಸುಗ
ಳುದಿಸಿದರೆ ಲೇಸೈಸಲೇ ದ್ರೌ
ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ
ಇದುವೆ ನಿಶ್ಚಯವಾದರವರ
ಭ್ಯುದಯವೆಮ್ಮಭ್ಯುದಯವೆಂದಾ
ಪದುಮನಾಭನ ಹೊಗಳಿ ಕುಳ್ಳಿರ್ದನು ಸರಾಗದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ವಿಚಿತ್ರವಾಗಿದೆ ! ಪ್ರಾಣ ಹೋದವರು ಹುಟ್ಟಿ ಬಂದರೆ ಒಳ್ಳೆಯದೇ ಅಲ್ಲವೆ ! ದ್ರೌಪದಿಯನ್ನು ಅವರು ಪ್ರೀತಿಸಲಿ. ಭೂಮಿಯನ್ನು ಅನುಭವಿಸಲಿ. ಇದೇ ನಿಶ್ಚಯವಾದರೆ, ಅವರ ಅಭಿವೃದ್ಧಿಯೇ ನಮ್ಮ ಅಭಿವೃದ್ಧಿ” ಎಂದು ಬಲರಾಮನು ಕೃಷ್ಣನನ್ನು ಹೊಗಳಿ ನಿರಾತಂಕವಾಗಿ ಕುಳಿತುಕೊಂಡನು.
ಪದಾರ್ಥ (ಕ.ಗ.ಪ)
ಗತಾಸುಗಳು-ಪ್ರಾಣಹೋದವರು, ಅನುರಾಗ-ಪ್ರೀತಿ, ಭೋಗಿಸು-ಅನುಭವಿಸು, ಅಭ್ಯುದಯ-ಅಭಿವೃದ್ಧಿ, ಸರಾಗ-ನಿರಾತಂಕ
ಮೂಲ ...{Loading}...
ಇದು ವಿಚಿತ್ರವಲಾ ಗತಾಸುಗ
ಳುದಿಸಿದರೆ ಲೇಸೈಸಲೇ ದ್ರೌ
ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ
ಇದುವೆ ನಿಶ್ಚಯವಾದರವರ
ಭ್ಯುದಯವೆಮ್ಮಭ್ಯುದಯವೆಂದಾ
ಪದುಮನಾಭನ ಹೊಗಳಿ ಕುಳ್ಳಿರ್ದನು ಸರಾಗದಲಿ ॥31॥
೦೩೨ ಈಕೆಯನು ಮೆಚ್ಚಿಸದು ...{Loading}...
ಈಕೆಯನು ಮೆಚ್ಚಿಸದು ರಾಜಾ
ನೀಕ ಸೌಂದರ್ಯದಲಿ ಚಾಪ
ವ್ಯಾಕರಣ ಪಾಂಡಿತ್ಯವೆಂಬಡೆ ಕಾಣೆ ನಾನೀಗ
ಈಕೆಗಿನ್ನಾರೊಡೆಯರೋ ಕುಂ
ತೀ ಕುಮಾರಕರಿಲ್ಲಲೇ ಸುಡ
ಲೇಕೆ ನೆರಹಿದೆನಿವರನೆನುತಾ ದ್ರುಪದ ಚಿಂತಿಸಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಕೆಯನ್ನು ರಾಜರ ಸಮೂಹವು ಸೌಂದರ್ಯದಲ್ಲಿ ಮೆಚ್ಚಿಸಲಾರದು. ಧನುರ್ವಿದ್ಯೆಯ ಪಾಂಡಿತ್ಯವೆಂದರೋ ಅದನ್ನಿಲ್ಲಿ ನಾನು ಕಾಣೆನು. ಈಕೆಗೆ ಇನ್ನು ಯಾರು ಒಡೆಯರಾಗುತ್ತಾರೋ ? ಕುಂತೀ ಕುಮಾರರಿಲ್ಲವಲ್ಲಾ ! ಸುಡಲಿ ! ಏಕೆ ಕಲೆಹಾಕಿದೆನೋ ಈ ರಾಜ ಸಮೂಹವನ್ನು ?” ಎಂದು ದ್ರುಪದನು ಯೋಚಿಸತೊಡಗಿದನು.
ಪದಾರ್ಥ (ಕ.ಗ.ಪ)
ಚಾಪವ್ಯಾಕರಣ-ಧನುರ್ವಿದ್ಯೆ, ನೆರಹು-ಕಲೆ ಹಾಕು
ಮೂಲ ...{Loading}...
ಈಕೆಯನು ಮೆಚ್ಚಿಸದು ರಾಜಾ
ನೀಕ ಸೌಂದರ್ಯದಲಿ ಚಾಪ
ವ್ಯಾಕರಣ ಪಾಂಡಿತ್ಯವೆಂಬಡೆ ಕಾಣೆ ನಾನೀಗ
ಈಕೆಗಿನ್ನಾರೊಡೆಯರೋ ಕುಂ
ತೀ ಕುಮಾರಕರಿಲ್ಲಲೇ ಸುಡ
ಲೇಕೆ ನೆರಹಿದೆನಿವರನೆನುತಾ ದ್ರುಪದ ಚಿಂತಿಸಿದ ॥32॥
೦೩೩ ಹರಹರಾ ಇನ್ನಾರೊ ...{Loading}...
ಹರಹರಾ ಇನ್ನಾರೊ ತಂಗಿಗೆ
ವರನು ವಾರಿಧಿವಲಯದವನೀ
ಶ್ವರರು ನೆರೆದಿದೆ ರೂಪು ವಿಕ್ರಮವೆರಡು ಹೊರತಾಗಿ
ನರಪತಿಗಳಿವರೈಸಲೇಯಿ
ನ್ನರಸಿಗಾವುದು ಹದನೆನುತ ವಿ
ಸ್ತರದ ಗುಜುಗುಜು ಮಸಗಿದುದು ಕಾಂತಾ ಕದಂಬದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರಹರಾ, ಇನ್ನು ತಂಗಿಗೆ ವರನು ಯಾರೋ ? ಚತುಸ್ಸಮುದ್ರದ ಮಧ್ಯದ ಎಲ್ಲ ಭೂಮೀಶ್ವರರು ಸೌಂದರ್ಯ, ಪರಾಕ್ರಮ ಇವೆರಡನ್ನು ಹೊರತುಪಡಿಸಿ ಸೇರಿದ್ದಾರೆ. ಇವರೇ ತಾನೇ ಅರಸುಗಳಾದವರು ? ಇನ್ನು ನಮ್ಮ ರಾಜಕುಮಾರಿಯ ಸ್ಥಿತಿ ಏನಾಗುವುದೋ?” ಎಂದು ಸ್ತ್ರೀಸಮೂಹದಲ್ಲಿ ಮಿತಿಯಿಲ್ಲದ ಪಿಸುಮಾತು ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ವಾರಿಧಿ-ಸಮುದ್ರ, ಗುಜುಗುಜು-ಪಿಸುಮಾತು, ಅಪರಿಮಿತ-ಮಿತಿಯಿಲ್ಲದ, ಮಸಗು-ಹೆಚ್ಚಾಗು
ಪಾಠಾನ್ತರ (ಕ.ಗ.ಪ)
ಹರಸೆನುತ - ಹದನೆನುತ
ಆದಿಪರ್ವ, ಮೈ.ವಿ.ವಿ.
ಮೂಲ ...{Loading}...
ಹರಹರಾ ಇನ್ನಾರೊ ತಂಗಿಗೆ
ವರನು ವಾರಿಧಿವಲಯದವನೀ
ಶ್ವರರು ನೆರೆದಿದೆ ರೂಪು ವಿಕ್ರಮವೆರಡು ಹೊರತಾಗಿ
ನರಪತಿಗಳಿವರೈಸಲೇಯಿ
ನ್ನರಸಿಗಾವುದು ಹದನೆನುತ ವಿ
ಸ್ತರದ ಗುಜುಗುಜು ಮಸಗಿದುದು ಕಾಂತಾ ಕದಂಬದಲಿ ॥33॥
೦೩೪ ಅವನಿಪತಿಗಳು ಹೊಳ್ಳುವಾರಿದ ...{Loading}...
ಅವನಿಪತಿಗಳು ಹೊಳ್ಳುವಾರಿದ
ರಿವರೊಳಿಲ್ಲಲೆ ದಕ್ಷಿಣೆಯ ಹಾ
ರುವ ಮಹಾಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ
ಇವರೊಳಗೆ ಮುಂಗೈಯ ಬಲುಹು
ಳ್ಳವರು ನೆಗಹಲಿ ಧನುವನೀ ಯಂ
ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಪತಿಗಳು ನಿಷ್ಪ್ರಯೋಜಕರಾದರು. ಇವರಲ್ಲಿ ಯಂತ್ರವನ್ನು ಭೇದಿಸುವವರು ಇಲ್ಲವಾಗಿದ್ದಾರೆ. ದಕ್ಷಿಣೆಯ ಬ್ರಾಹ್ಮಣ ಮಹಾಜನರಿದ್ದಾರೆ ಸಮುದ್ರಕ್ಕೆ ಇನ್ನೊಂದು ಸಮುದ್ರ ಎನ್ನುವಂತೆ. ಇವರಲ್ಲಿ ಮುಂಗೈಯ ಶಕ್ತಿಯಿರುವವರು ಧನುಸ್ಸನ್ನು ಎತ್ತಲಿ; ಈ ಯಂತ್ರವನ್ನು ಜಯಿಸಲಿ” ಎಂದು ಧೃಷ್ಟದ್ಯುಮ್ನನು ಸಾರಿಸಿದನು.
ಪದಾರ್ಥ (ಕ.ಗ.ಪ)
ಹೊಳ್ಳು-ನಿಷ್ಪ್ರಯೋಜಕ, ಹಾರುವ-ಬ್ರಾಹ್ಮಣ, ಪಡಿ-ಇನ್ನೊಂದು, ಬಲುಹು-ಶಕ್ತಿ
ಮೂಲ ...{Loading}...
ಅವನಿಪತಿಗಳು ಹೊಳ್ಳುವಾರಿದ
ರಿವರೊಳಿಲ್ಲಲೆ ದಕ್ಷಿಣೆಯ ಹಾ
ರುವ ಮಹಾಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ
ಇವರೊಳಗೆ ಮುಂಗೈಯ ಬಲುಹು
ಳ್ಳವರು ನೆಗಹಲಿ ಧನುವನೀ ಯಂ
ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ ॥34॥