೦೨

೦೦೦ ಸೂ ರಾಯ ...{Loading}...

ಸೂ.

ರಾಯ- ಜನಮೇಜಯಗೆ ವೈಶಂ-
ಪಾಯನನು ಹೇಳಿದನು
, ಮುನಿ ದ್ವೈ-
ಪಾಯನ್ ಅಭಿವರ್ಣಿಸಿದ ಭಾರತ ವರ-ಕಥಾಮೃತವ

೦೦೧ ಸೂತನೈತನ್ದನು ಜಗದ್ವಿ ...{Loading}...

ಸೂತನ್ ಐತಂದನು ಜಗದ್-ವಿ-
ಖ್ಯಾತ–ಶೌನಕ-ಮುಖ್ಯ-ಮುನಿ-ಸಂ-
ಘಾತ-ಪಾವನ–ನೈಮಿಶಾರಣ್ಯಕ–ವರಾಶ್ರಮಕೆ
ಆತನನು ಕಂಡುದು+++(=ಕಣ್ಡಿತು)+++. ತಪಸ್ವಿ-
ವ್ರಾತ-ಕುಶಲ-ಕ್ಷೇಮ-ಮಧುರ-
ಪ್ರೀತಿ-ವಚನಾಮೃತದಿ ಸಂಭಾವನೆಯ ಮಾಡಿದರು ॥1॥

೦೦೨ ಪರಮ ಪೌರಾಣಿಕ ...{Loading}...

ಪರಮ-ಪೌರಾಣಿಕ-ಶಿರೋಮಣಿ
ಬರವ್ ಇದ್ ಎತ್ತಣಿನ್ ಆಯ್ತು? ಕೌತುಕ-
ವರ-ಕಥಾ-ಪೀಯೂಷ-ಸಾರ-ವಿಶೇಷವ್ ಏನ್ ಉಂಟು?
ಚರಿತ-ಚತುರಾಶ್ರಮ–ತಪೋ-ನಿ-
ಷ್ಠರಿಗೆ ವಿಶ್ರಮವ್ ಐ+++(=ವೈ)+++ ಭವಾದೃಶ
ದರುಶನವು ನಮಗ್ ಎಂದು ನುಡಿದರು ರೋಮ-ಹರ್ಷಣಿಯ ॥2॥

೦೦೩ ವನ್ದಿಸಿದನೈ ವರತಪೋಧನ ...{Loading}...

ವಂದಿಸಿದನ್ ಐ+++(=ವೈ)+++ - “ವರ-ತಪೋಧನ-
ವೃಂದ ಚಿತ್ತೈಸುವುದು. ತಾನ್ ಏನ್
ಎಂದು ನುಡಿವೆನು ಕೌತುಕಾಮೃತ-ರಸದ-ಕಡು+++(=ಮಹಾ)+++-ಗಡಲ?
ಹಿಂದೆ ಕೇಳಿದುದ್ ಅಲ್ಲ ಹೇಳ್ವುದು
ಮುಂದೆ. ಹೊಸತ್ ಇದು ನಿಗಮ-ಶತವ್ ಇದರ್
ಒಂದ್ ಒರೆಗೆ+++(=ಸಮಾನಕ್ಕೆ)+++ ನೆರೆ+++(=ಪಕ್ಕಕ್ಕೆ)+++ ಬಾರದ್ ಎಂದನು ಸೂತ ಕೈಮುಗಿದು ॥3॥

೦೦೪ ಕೇಳಿದನು ಜನಮೇಜಯ ...{Loading}...

ಕೇಳಿದನು ಜನಮೇಜಯ ಕ್ಷಿತಿ-
ಪಾಲಕನು ವರ-ಸರ್ಪ-ಯಜ್ಞ–
ಸ್ಥೂಲ-ಪಾಪ–ವಿಘಾತಿಗ್ ಓಸುಗವ್+++(=ಒಲಿಯುವ್)+++ ಈ ಮಹಾಕಥೆಯ.
ಕೇಳಿದೆನು ತಾನ್ ಅಲ್ಲಿ ಮುನಿ-ಜನ–
ಮೌಳಿ–ಮಂಡಿತ–ಚರಣ-ಕಮಲ–ವಿ-
ಶಾಲ-ವೇದ–ವ್ಯಾಸ–ಕೃತ–ಭಾರತ–ಕಥಾಮೃತವ ॥4॥

೦೦೫ ಹಾ ಮಹಾದೇವಾಯಿದೆನ್ತೈ ...{Loading}...

ಹಾ ಮಹಾ-ದೇವಾಯ್! ಇದ್ ಎಂತ್ ಐ+++(=ಅಯ್ಯ)+++
ರೋಮ-ಹರ್ಷಣಿ ನಾವು ಮಾಡಿದ
ಸೋಮ-ಪಾನಾದಿಗಳ ಪುಣ್ಯ-ಸ್ತೋಮ-ತರುಗಳಿಗೆ
ಈ ಮಹಾ-ಭಾರತ ಕಥಾಮೃತ
ರಾಮಣೀಯಕ-ಫಲವ್ ಅಲಾ+++(=ಅಲ್ಲವೇ)+++! ನಿಸ್-
ಸೀಮ-ಪುಣ್ಯರು ಧನ್ಯರ್ ಆವ್+++(=ನಾವ್)+++ ಎಂದುದು ಮುನಿ-ಸ್ತೋಮ ॥5॥

೦೦೬ ಹೇಳು ಸಾಕೆಲೆ ...{Loading}...

ಹೇಳು, ಸಾಕ್ ಎಲೆ ಸೂತ! ದುರಿತ-
ವ್ಯಾಳ-ವಿಷ-ಜಾಂಗುಳಿಕವನು ನೀ
ಕೇಳಿದ್ ಅಂದದೊಳ್ ಅಂದು ಜನಮೇಜಯನ ಯಾಗದಲಿ
ಮೌಳಿಗಳಲ್ ಆನುವೆವು+++(=ಸಹಿಸುವೆವು)+++ ನಿನ್ನಯ
ಹೇಳಿಕೆಯನ್” ಎನೆ, “ನಿಖಿಳ ಮುನಿಗಳನ್
ಓಲಗಿಸುವೆನು+++(=ಒಲಿಸುವೆನು)+++ ನಿಮ್ಮ್ ಅನುಜ್ಞೆಯಲ್” ಎಂದು ಕೈಮುಗಿದ ॥6॥

೦೦೭ ಸರ್ಪಯಜ್ಞದಲಾದ ದುರಿತದ ...{Loading}...

ಸರ್ಪ-ಯಜ್ಞದಲ್ ಆದ ದುರಿತದ
ದರ್ಪವನು ಕೆಡೆ-ಬೀಳಲ್ ಒದೆಯಲು,
ತರ್ಪಣಾದಿ-ಕ್ರಿಯೆಗಳಲಿ ಸಾಮಥ್ರ್ಯವ್ ಇಲ್ಲೆಂದು
ದರ್ಪಕಾಹಿತ-ಮೂರ್ತಿ ಮುನಿ-ಮುಖ-
ದರ್ಪಣನು ಶಿಷ್ಯನನು +++(ವೈಶಂಪಾಯನನನ್ನು)+++ ಕರೆದು ಸ-
ಮರ್ಪಿಸಿದನ್ ಅರಸಂಗೆ ವೇದವ್ಯಾಸ ಮುನಿರಾಯ ॥7॥

೦೦೮ ರಾಯ ಕೇಳೈ ...{Loading}...

“ರಾಯ ಕೇಳ್ ಐ ನಿಮ್ಮ ಪಾಂಡವ
ರಾಯ-ಚರಿತವನ್” ಎಂದು ವೈಶಂ-
ಪಾಯನಿಗೆ ಬೆಸಸಿದನು+++(=ಆಜ್ಞಾಪಿಸಿದನು)+++, ಕೊಟ್ಟನು ಬಳಿಕ ಪುಸ್ತಕವ
ರಾಯನ್ ಅತಿ ಭಕ್ತಿಯಲಿ ವೈಶಂ-
ಪಾಯನಗೆ ವಂದಿಸಿ, ನಿಜಾಭಿ
ಪ್ರಾಯವನು ಕೇಳಿದನು - ಚಿತ್ತೈಸುವುದು ಮುನಿನಿಕರ ॥8॥

೦೦೯ ವಿತತ ಪುಸ್ತಕವನು ...{Loading}...

ವಿತತ-ಪುಸ್ತಕವನು ಸುಗಂಧಾ-
ಕ್ಷತೆಯೊಳ್ ಅರ್ಚಿಸಿ, ಸೋಮ-ಸೂರ್ಯ-
ಕ್ಷಿತಿ-ಜಲಾನಲ-ವಾಯು-ಗಗನಾದಿಗಳಿಗ್ ಅಭಿನಮಿಸಿ
ಶತಮಖಾದಿ-ಸಮಸ್ತ-ದೇವ-
ಪ್ರತತಿಗ್ ಎರಗಿ+++(=ನಮಿಸಿ)+++ ಸರೋಜ-ಭವ–ಪಶು-
ಪತಿಗಳಿಗೆ ಕೈಮುಗಿದು ವಿಮಲ-ಜ್ಞಾನ-ಮುದ್ರೆಯಲಿ ॥9॥

೦೧೦ ಮನದೊಳಾದ್ಯಮ್ಪುರುಷಮೀಶಾ ...{Loading}...

ಮನದೊಳ್ ಆದ್ಯಂ ಪುರುಷಮ್ ಈಶಾ-
ನನನು, ಪುರುಹೂತನ ಪುರಸ್ಕೃತನ್
ಅನಘನ್ ಏಕಾಕ್ಷರ-ಪರ-ಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನ್, ಅವ್ಯ-
ಕ್ತನನು ಸದ್-ಅಸದ್-ರೂಪನ್ ಅವ್ಯಯನ್
ಎನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ॥10॥

೦೧೧ ವೇದ ನಾಲ್ಕದರಙ್ಗವಾರ ...{Loading}...

ವೇದ ನಾಲ್ಕ್, ಅದರ್ ಅಂಗವ್ ಆರ್, ಅ-
ಷ್ಟಾದಶಾದಿ-ಪುರಾಣ-ಸ್ಮೃತಿಗಳ್, ಒ-
ಳ್ ಆದ ಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ-ವಿಲಸನ್-ನ್ಯಾಯವನು, ಶ-
ಬ್ದೋದಧಿಯನ್ ಅಳವಡಿಸಿ ರಚಿಸಿದ
ಬಾದರಾಯಣನ್ ಅಂಘ್ರಿಯನು ಭಜಿಸಿದನು ಮನದೊಳಗೆ ॥11॥

೦೧೨ ಅರಸ ಕೇಳೈ ...{Loading}...

+++(ವೈಶಮ್ಪಾಯನನು ಜನಮೇಜಯನಿಗೆ)+++
ಅರಸ ಕೇಳ್ ಐ ನಾರದಾದ್ಯರು
ಸರಸಿ-ರುಹ-ಸಂಭವನ +++(ಬ್ರಹ್ಮನ)+++ ಸಭೆಯೊಳು
ವರ ಮಹಾ-ಭಾರತವ ಕೊಂಡ್ ಆಡಿದರು ಭಕ್ತಿಯಲಿ
ವರ ಮಹತ್ವದಿ, ಭಾರವತ್ವದಿ
ವರ, ಮಹಾ-ಭಾರತವ್ ಇದ್ ಒಂದೇ
ದುರಿತ-ದುರ್ಗ-ವಿಭೇದಕವ್ ಈರ್+++(=೨x)+++ ಏಳು ಲೋಕದಲಿ ॥12॥

೦೧೩ ಹೇಳಿದನು ಪೌಲೋಮ ...{Loading}...

ಹೇಳಿದನು ಪೌಲೋಮ-ಚರಿತೋ-
ದ್ದಾಲಕಾಖ್ಯರ-ಚರಿತವನು ಮುನಿ,
ಹೇಳಿದನು ಫಣಿ-ನಿಕರ-ಗರುಡಾಸ್ತಿಕರ-ಸಂಭವವ
ಮೇಲೆ ಬಳಿಕ ಪರೀಕ್ಷಿದ್ ಅವನೀ-
ಪಾಲ-ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ
॥13॥

೦೧೪ ಕೇಳಿದನು ಜನಮೇಜಯ ...{Loading}...

ಕೇಳಿದನು ಜನಮೇಜಯ ಕ್ಷಿತಿ-
ಪಾಲ ವ್ಯೆಶಂಪಾಯನನು ತಾ+++(ನ್??)+++
ಕೀಳು-ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರ್ ಐ ಮುನಿ-ನಿಕರವ್ ಈ ಕಲಿ-
ಕಾಲದಲಿ ಫಲಿಸುವುದು ಲಕ್ಷ್ಮೀ-
ಲೋಲ-ನಾಮ-ಸ್ತುತಿ ಮಹಾ-ಭಾರತ–ಕಥಾ-ಶ್ರವಣ ॥14॥

೦೧೫ ರಾಯ ಚಿತ್ತೈಸೆನ್ದು ...{Loading}...

“ರಾಯ ಚಿತ್ತೈಸ್” ಎಂದು ವೈಶಂ-
ಪಾಯ-ಮುನಿ ಹೇಳಿದನು ಕಮಲ-ದ-
ಳಾಯತಾಕ್ಷನ ಬಾಲ-ಕೇಳಿ+++(ಲೀ)+++ ವಿಧೂತ-ಕಿಲ್ಬಿಷವ
ಕಾಯ-ಕಲ್ಮಷ-ಹರವ್ ಅಖಿಳ-ನಿ-
ಶ್ರೇಯಸದ ಸದ್-ರೂಪುವಿನ ಸಂ-
ದಾಯಕದ ನಿರ್ಮಲ-ಮಹಾ-ಭಾರತ–ಕಥಾಮೃತವ ॥15॥

೦೧೬ ಆದಿ ಸೃಷ್ಟಿಯೊಳುದಿಸಿದರು ...{Loading}...

ಆದಿ-ಸೃಷ್ಟಿಯೊಳ್ ಉದಿಸಿದರು ದ-
ಕ್ಷಾದಿ-ವಿಮಲ-ನವ-ಪ್ರಜೇಶ್ವರರ್,
ಆದರ್ ಅಂಬುಜ-ಭವನ-ಲೀಲಾ-ಮಾತ್ರ-ಸೂತ್ರದಲಿ
ಆದನ್ ಅವರ್ ಒಳಗ್ ಅತ್ರಿಮುನಿ, ಬಳಿಕ್
ಆದನ್ ಆ ಮುನಿ-ಪತಿಗೆ ಜಗದ್-ಆ-
ಹ್ಲಾದ-ಕರ ಹಿಮ-ಕಿರಣನ್, ಆತನಲ್ ಆಯ್ತು ಶಶಿ-ವಂಶ ॥16॥

೦೧೭ ಸೋಮನಿಮ್ ಬುಧನಾ ...{Loading}...

ಸೋಮನಿಂ ಬುಧನ್, ಆ ಬುಧಂಗೆಯ್ ಉ
ಭೂಮಿಯಲ್ಲಿ ಪುರೂರವನು, ಬಳಿಕ್
ಆ ಮಹೀ-ಪತಿಗ್ ಊರ್ವಶಿಯೊಳ್ ಆಯುಃ-ಕುಮಾರಕನು
ಆ ಮಹೀಶಗೆ ನಹುಷ, ನಹುಷಂಗ್
ಆ ಮಹಾತ್ಮ ಯಯಾತಿ, ಬಳಿಕ್ ಈ
ಸೋಮ-ಕುಲವ್ ಎರಡ್ ಆಯ್ತು - ಯದು ಪೂರುಗಳ ದೆಸೆಯಿಂದ ॥17॥

೦೧೮ ಯದುಪರಮ್ಪರೆಯಿನ್ದ ಯಾದವ ...{Loading}...

ಯದು-ಪರಂಪರೆಯಿಂದ ಯಾದವರ್
ಉದಿಸಿದರು, ಪೂರುವಿನ ದೆಸೆಯಿಂದ್
ಇದುವೆ ಪೌರವ-ವಂಶವ್ ಆಯ್ತು ಯಯಾತಿ-ಪೌತ್ರರಲಿ
ವಿದಿತ-ಪುರ್ವೋತ್ತರದ ಯದು-ವಂ-
ಶದ ಕಥಾ-ವಿಸ್ತಾರವನು ಹೇ-
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ॥18॥

೦೧೯ ಭರತನಾ ದುಷ್ಯನ್ತನಿನ್ದವ ...{Loading}...

ಭರತನ್ ಆ ದುಷ್ಯಂತನಿಂದ್ ಅವ-
ತರಿಸಿದನು ತತ್-ಪೂರ್ವ-ನೃಪರಿಂ
ಹಿರಿದು ಸಂದನು+++(=ಕೂಡಿದನು)+++, ಬಳಿಕ ಭಾರತ-ವಂಶವ್ ಆಯ್ತ್ ಅಲ್ಲಿ
ಭರತ-ಸೂನು ಸುಹೋತ್ರನ್, ಆತನ
ವರ-ಕುಮಾರಕ ಹಸ್ತಿ, ಹಸ್ತಿನ-
ಪುರಿಗೆ ಹೆಸರ್ ಆಯ್ತ್ ಆತನಿಂದವೆ ನೃಪತಿ ಕೇಳ್ ಎಂದ ॥19॥

೦೨೦ ವರಕುಮಾರರ ಪಙ್ಕ್ತಿಯಲಿ ...{Loading}...

ವರ-ಕುಮಾರರ ಪಂಕ್ತಿಯಲಿ ಸಂ
ವರಣನ್, ಆತಗೆ ಸೂರ್ಯ-ಪುತ್ರಿಗೆ
ಕುರು-ಮಹೀಪತಿ ಜನಿಸಿದನು ಬಳಿಕ್ ಆಯ್ತು ಕುರುವಂಶ
ವರ ಪರಂಪರೆಯೊಳ್ ಪ್ರತೀಪನು
ಧರಣಿ-ಪತಿಯ್, ಆತನಲಿ ಶಂತನು
ಧರೆಗ್ ಅಧೀಶ್ವರನ್ ಆಗಿ ಬೆಳಗಿದನ್ ಅರಸ ಕೇಳ್ ಎಂದ ॥20॥

೦೨೧ ಸರಸಿಜಾಸನ ಕೊಟ್ಟ ...{Loading}...

ಸರಸಿಜಾಸನ ಕೊಟ್ಟ ಶಾಪದಿಯ್
ಅರಸಿಯ್ ಆದಳು ಗಂಗೆ, ಬಳಿಕ್ ಇ-
ಬ್ಬರಿಗೆ ಮಕ್ಕಳು ವಸುಗಳ್ ಎಂಟು ವಸಿಷ್ಠ ಶಾಪದಲಿ
ನಿರ್-ಅಪರಾಧಿಗಳ್ ಏಳು ಜನನಾಂ-
ತರಕೆ ಮರಣವ ಕಂಡ್, ಅರುಳಿದಂಗ್
ಇರವು ಭೂ-ಲೋಕದಲಿ ಬಲಿದುದು+++(=ಬಲ-ಪಡೆದದು)+++ ಭೀಷ್ಮ-ನಾಮದಲಿ ॥21॥

೦೨೨ ಶಾಪ ಹಿಙ್ಗಿತು ...{Loading}...

ಶಾಪ ಹಿಂಗಿತು+++(=ಹಿಮ್-ಮೆಟ್ಟಿತು)+++ ಸುರ-ನದಿಗೆ, ಬಳಿಕ್
ಆ ಪರಾಕ್ರಮಿ ಭೀಷ್ಮ ಶಂತನು-
ಭೂಪತಿಗೆ ಮಗನ್ ಆಗಿ ಬೆಳಗಿದನ್ ಅಖಿಳ ದಿಕ್-ತಟವ
ಭೂಪ ಕೇಳ್ ಐ ಉಪರಿ-ಚರ-ವಸು-
ರೂಪ-ಗರ್ಭವು ಮೀನ-ಬಸುರಲಿ+++(=ಗರ್ಭದಲಿ)+++
ವ್ಯಾಪಿಸಿತು, ಜನಿಸಿದುದು ಮಿಥುನವು ಮತ್ಸ್ಯ-ಜಠರದಲಿ ॥22॥

೦೨೩ ಬಳಿಕ ಮತ್ಸ್ಯದ ...{Loading}...

ಬಳಿಕ ಮತ್ಸ್ಯದ ಬಸುರಲ್ ಉದಿಸಿದ
ನಳಿನ-ಲೋಚನೆ ಮತ್ಸ್ಯ-ಗಂಧಿನಿ
ಬೆಳೆವುತಿರ್ದಳು, ಸಂಗವಾಯ್ತು ಪರಾಶರ-ವ್ರತಿಯ
ಬಳಿಕ ಯೋಜನ-ಗಂಧಿಯಲ್ಲಿಂದ್
ಇಳಿದನ್ ಅಭ್ರ-ಶ್ಯಾಮನ್ ಉರು-ಪಿಂ-
ಗಳ ಜಟಾ-ಪರಿ-ಬದ್ಧ ವೇದ-ವ್ಯಾಸ ಮುನಿರಾಯ ॥23॥

೦೨೪ ನೆನೆ ವಿಪತ್ತಿನೊಳೆನ್ದು ...{Loading}...

“ನೆನೆ ವಿಪತ್ತಿನೊಳ್” ಎಂದು ತಾಯನು
ತನುಜ ಬೀಳ್ಕೊಂಡನು, ಪರಾಶರ-
ಮುನಿ ಪುನಃ ಕನ್ಯತ್ವವನು ಕರುಣಿಸಿದನ್ ಆ ಸತಿಗೆ
ವಿನುತ-ಯಮುನಾ-ತೀರದಲಿ ಮಾ-
ನಿನಿಯ ಕಂಡನು ಬೇಂಟೆಯ್ ಆಡುತ
ಜನಪ ಶಂತನು ಮರುಳು-ಗೊಂಡನು ಮದನನ್ ಎಸುಗೆಯಲಿ ॥24॥

೦೨೫ ಪರಿಮಳದ ಬಳಿವಿಡಿದು ...{Loading}...

ಪರಿಮಳದ ಬಳಿವ್-ಇಡಿದು+++(=ಹಿಡಿದು)+++ ಬಂದ್ ಈ
ತರುಣಿಯನು ಕಂಡ್ “ಆರು ನೀನ್” ಎಂದ್
ಅರಸ ಬೆಸ-ಗೊಳುತ್+++(=ಕೇಳುತ್ತ್)+++, ಎಸೆವ ಕಾಮನ ಶರಕೆ ಮೈಯ್ ಒಢ್ಡಿ
“ಅರಮನೆಗೆ ನಡೆಯ್” ಎನಲು “ತಂದೆಯ
ಪರಮ-ವಚನವ್ ಅಲಂಘ್ಯವ್” ಎನೆ ಕಾ-
ತರಿಸಿ ಭಗ್ನ-ಮನೋರಥನು ಮರಳಿದನು ಮಂದಿರಕೆ ॥25॥

೦೨೬ ವಿರಹದಾವುಗೆ ಕಿಚ್ಚು ...{Loading}...

ವಿರಹದ್ ಆವುಗೆ+++(=ಒಲೆ)+++-ಕಿಚ್ಚು ಭೂಮೀ-
ಶ್ವರನ ಮುಸುಕಿತು - ಬಲಿದ್+++(=ಗಟ್ಟಿಸಿದ್)+++ ಅವಸ್ಥೆಯ-
ನ್ ಅರಸ ಬಣ್ಣಿಸಲ್ ಅರಿಯೆನ್, ಏಳ್ ಎಂಟ್ ಒಂಬತರ ಬಳಿಯ
“ಮರಣವ್ ಈತಂಗ್” ಎಂಬ ಜನದ್ ಉ-
ಬ್ಬರದ ಗುಜು-ಗುಜುವ್ ಅರಿದು ಯಮುನಾ-
ವರ-ನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ +++(=ವೇಗದಲಿ)+++ ॥26॥

೦೨೭ ಕರೆಸಿದನು ಧೀವರನನಯ್ಯಂ ...{Loading}...

ಕರೆಸಿದನು ಧೀವರನನ್ - “ಅಯ್ಯಂಗ್
ಅರಸಿಯ್ ಆಗಲಿ ನಿನ್ನ ಮಗಳ್” ಎನಲ್
“ಅರಸಿಯ್ ಆದರೆ, ಮಗಳ ಮಕ್ಕಳು ರಾಜ್ಯವ್ ಆಳುವರೆ?”
ಅರಿದು ಸಲಿಸುವಡ್+++(=ಸಲಿಸುವೊಡೆ =ಸಲಿಸುವುದಕ್ಕಾಗಿ)+++ ಇದನು ನೀ, ಬರಿಯ್
ಅರಸುತನ ನಮಗ್ ಏಕ್” ಎನಲು ಧೀ-
ವರನ ಮಾತಿಂಗ್ ಈತನ್ ಎಂದನು - ರಾಯ ಕೇಳ್ ಎಂದ ॥27॥

೦೨೮ ಆದರಿಲ್ಲಿಮ್ ಮೇಲೆ ...{Loading}...

“ಆದರ್ ಇಲ್ಲಿಂ ಮೇಲೆ ನಾರಿಯರ್
ಆದವರು +++(ತಾಯಿ)+++ ಭಾಗೀರಥಿಗೆ ಸರಿ+++(→ಸಮಾನ)+++,
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ.
ಈ ದಿವಿಜರ್, ಈ ಹರಿ-ಹರ-ಬ್ರ-
ಹ್ಮಾದಿ ದೇವರು ಸಾಕ್ಷಿ; ಹೋಗ್” ಎಂ-
ದ್ ಆ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ॥28॥+++(5)+++

೦೨೯ ತರಿಸಿದನು ದಣ್ಡಿಗೆಯ ...{Loading}...

ತರಿಸಿದನು ದಂಡಿಗೆಯ+++(=ಪಲ್ಲಕ್ಕಿಯ)+++. ದಂಡಿಯ+++(=ದಂಡಧಾರಿಯರ್ ಆದ)+++
ಚರರ ನೆಲನ್ ಉಗ್ಗಡಣೆಯಲಿ+++(=ಉದ್ಘೋಷಣೆಯಲಿ)+++ ಸರ-
ಸಿ-ರುಹ-ಮುಖಿಯನು ತಂದು ಮದುವೆಯ ಮಾಡಿದನು ಪಿತಗೆ.
ಉರವ್ ಅಣಿಸಿ+++(=ನುಗ್ಗಿಸಿ)+++ ಮಗ ನುಡಿದ ಭಾಷೆಯನ್
ಅರಸ ಕೇಳಿದನು, ಬಳಿಕ ಭೀಷ್ಮಗೆ
ವರವನ್ ಇತ್ತನು - “ಮರಣವದು ನಿನ್ನ್ ಇಚ್ಛೆ - ಹೋಗ್” ಎಂದ ॥29॥

೦೩೦ ಬಳಿಕ ಯೋಜನಗನ್ಧಿಯಲಿ ...{Loading}...

ಬಳಿಕ ಯೋಜನ-ಗಂಧಿಯಲಿ ಮ-
ಕ್ಕಳುಗಳ್ ಅವತರಿಸಿದರು ದೀಪ್ತ-
ಜ್ವಲನ-ತೇಜರು ಕಲ್ಪ-ಭೂ-ಜರು ಹಿಮಕರಾನ್ವಯಕೆ.
ಲಲಿತ-ಮಂಗಳ-ಜಾತಕರ್ಮಾ-
ವಳಿಯ+++(ಲಿ)+++ ಚಿತ್ರಾಂಗದನನ್ ಆ ನೃಪ-
ತಿಲಕ ನೆಗಳೆ+++(=ಮಾಡೆ)+++ ವಿಚಿತ್ರವೀರ್ಯನ ನಾಮಕರಣದಲಿ ॥30॥

೦೩೧ ಇರಲಿರಲು ಶನ್ತನು ...{Loading}...

+++(ಹೀಗೆ)+++ ಇರಲ್ ಇರಲು, ಶಂತನು ಮಹೀಪತಿ
ಸುರರ್ ಒಳಗೆ ಸೇರಿದನು, ಬಳಿಕ್ ಈ
ಧರಣಿಯ್ ಒಡೆತನವ್ ಆಯ್ತು ಚಿತ್ರಾಂಗದ-ಕುಮಾರಂಗೆ.
ಅರಸ ಕೇಳೈ - ಕೆಲವು ಕಾಲಾಂ-
ತರದಲ್ ಆತನು ಕಾದಿ+++(=ಕಾದಾಅಡಿ)+++ ಗಂಧ-
ರ್ವರಲಿ ಮಡಿದನು, ಪಟ್ಟವಾಯ್ತು ವಿಚಿತ್ರ-ವೀರ್ಯಂಗೆ ॥31॥

೦೩೨ ರಾಯ ಕೇಳೈ ...{Loading}...

ರಾಯ ಕೇಳೈ - ಸಕಲ-ರಾಜ್ಯ-
ಶ್ರೀಯನ್ ಆತಂಗ್ ಇತ್ತು ಭೀಷ್ಮನು,
ತಾಯ ಚಿತ್ತವ ಪಡೆದು, ಮೆಚ್ಚಿಸಿದನು ಜಗ-ತ್ರಯವ
ರಾಯ ಕುವರನ ಮದುವೆಗ್ ಅಬ್ಬ ದ-
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳ್+++(=ಸೂರೆಯೊಳ್ / loot)+++ ಒಂದು ವಿವಾಹ ಮಂಟಪಕೆ ॥32॥

೦೩೩ ಅಲ್ಲಿ ನೆರೆದಾ ...{Loading}...

ಅಲ್ಲಿ ನೆರೆದ್ ಆ ಕ್ಷತ್ರ-ವರ್ಗವ
ಚೆಲ್ಲ-ಬಡಿದು ವಿವಾಹ ಶಾಲೆಯ
ಚೆಲ್ಲೆ+++(=ವಿಶಾಲ)+++-ಗಂಗಳ ಕಮಲ-ಮುಖಿಯರ ಮೂವರನು ಪಿಡಿದು
ಘಲ್ಲಣೆಯ +++(ಶಬ್ದದ)+++ ಖಂಡೆಯದ+++(=ಕತ್ತಿಯ)+++ ಚೌ-ಪಟ+++(=ಕಡೆ)+++-
ಮಲ್ಲ ಭೀಷ್ಮನು ಪುರಕೆ ತಂದ್ ಅವರ್
ಎಲ್ಲರನು ತಮ್ಮಂಗೆ ಮದುವೆಯ ಮಾಡಲ್ ಅನುವ್ ಆದ ॥33॥

೦೩೪ ಆ ಕಮಲಲೋಚನೆಯರೊಳು ...{Loading}...

ಆ ಕಮಲ-ಲೋಚನೆಯರ್ ಒಳು ಮೊದಲ್
-ಆಕೆ ಭೀಷ್ಮನ ಗಂಡನ್ ಎಂದೇ
ನೂಕಿ, ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ+++(=ಬಿಡಲಿ)+++, ಮಿಕ್ಕವರು ಬರಲ್
+ಈ ಕುಮಾರಂಗ್ ಎಂದು ವೈದಿಕ-
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ॥34॥

೦೩೫ ಅರಸ ಚಿತ್ತೈಸಮ್ಬೆಯೆಮ್ಬಳು ...{Loading}...

ಅರಸ ಚಿತ್ತೈಸ್ - ಅಂಬೆಯ್ ಎಂಬಳು
ದುರುಳೆ+++(=ಕೆಟ್ಟವಳು)+++, ಭೀಷ್ಮನ ಕೂಟವ್+++(=ಸಂಗವ್)+++-ಅಲ್ಲದೆ
ಮರಣದ್ ಎಡೆಯಲಿ ಬೆರಸಿದ್ ಅಲ್ಲದೆ ಪಂಥವ್ ಇಲ್ಲ್ ಎಂದು,
ಪರಶು-ರಾಮನ ಭಜಿಸಿ ಹಸ್ತಿನ-
ಪುರಕೆ ತಂದಳು, ಹೇಳಿಸಿದಳ್, “ಈ
ಸುರ-ನದೀ-ನಂದನನು ಮಾಡಿದ ಪರಿಯ ಕೇಳ್” ಎಂದ ॥35॥

೦೩೬ ಸತಿಯನೊಲ್ಲೆನು ಬ್ರಹ್ಮಚರ್ಯ ...{Loading}...

ಸತಿಯನ್ ಒಲ್ಲೆನು ಬ್ರಹ್ಮ-ಚರ್ಯ-
ಸ್ಥಿತಿಗೆ ತಪ್ಪುವನ್ ಅಲ್ಲ ನೀವ್ ಅನ್-ಉ-
ಚಿತವ ನೆನೆದರೆ - ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದ-ನಿಧಿ ಕುರು-ಭೂಮಿಯಲಿ ಶರ-
ತತಿಯಲ್ ಇಪ್ಪತ್ತ್-ಒಂದು ದಿನ ಭೃಗು-
ಸುತನ್ ಒಡನೆ ಕಾದಿದನು ವಿರಥನ ಮಾಡಿದನು ಭೀಷ್ಮ ॥36॥

೦೩೭ ನುಡಿಯ ಭಙ್ಗಿಸಲೆನ್ದು ...{Loading}...

ನುಡಿಯ ಭಂಗಿಸಲ್ ಎಂದು ಗುರುವ್ ಅವ-
ಗಡಿಸಿ+++(=ಪ್ರತಿಭಟಿಸಿ)+++ ಹೊಕ್ಕರೆ, ಸರಳ-ಮೊನೆಯಲಿ+++(=ತುದಿ/ಯುದ್ಧದಲಿ)+++
ಕೊಡಹಿ ಬಿಸುಟನು, ಬಿಟ್ಟುದ್ ಇಲ್ಲ ಮಹಾ-ವ್ರತ-ಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡ-ಬಡಿಸಿಕೊಳ್ಳ್ ಎಂದು ನಾರಿಗೆ
ನುಡಿದು ತನ್ನ್ ಆಶ್ರಮಕೆ ಸರಿದನು ಪರಶು-ರಾಮ-ಮುನಿ ॥37॥

೦೩೮ ಅಮ್ಬೆ ಭೀಷ್ಮನ ...{Loading}...

ಅಂಬೆ ಭೀಷ್ಮನ ಬೈದು, ಕಂಬನಿ-
ದುಂಬಿ ಹೋದಳು ತಪಕೆ, ಬಳಿಕ್ ಈ-
ಯ್ ಅಂಬಿಕೆಯನ್ ಅಂಬಾಲೆಯನು ರಮಿಸಿದನು ನೃಪ-ಸೂನು
ಬೆಂಬಲಕೆ ಕಲಿ-ಭೀಷ್ಮನ್ ಇರೆ ಚತುರ್-
ಅಂಬುಧಿಯ ಮಧ್ಯದ ನೃಪಾಲ-ಕ-
ದಂಬವ್ ಈತಂಗ್ ಇದ್-ಇರೆ? ಸಲಹಿದನ್ ಅಖಿಳ ಭೂ-ತಳವ ॥38॥

+೦೨ ...{Loading}...