ಕನ್ನಡ

ಧರ್ಮಸಿಂಧು (ಕನ್ನಡ) [1971 ರ ರಾಜ್ಯ ಪ್ರಶಸ್ತಿ ಪಡೆದ ಗ್ರಂಥರತ್ನ) ಲೇಖಕರು ಶಂಭು ಶರ್ಮಾ, ನಾಜಗಾರ ಸಂಸ್ಕೃತರತ್ನಂ-ವಿದ್ಯಾಲಂಕಾರ (ಯು.ಪಿ.), ಹೊನ್ನಾವರ Ph:26770327 VANDANA BOOK HOUS Dealers- Phies wolice Religious & Sansi Poc No.24/1, 9 : Min, 1 . S N. R. Colony, BANGALORE - 5/ ಸಮಾಜ ಪುಸ್ತಕಾಲಯ ಶಿವಾಜಿ ಬೀದಿ, ಧಾರವಾಡ-೫೮೦ ೦೦೧ ಪ್ರಕಾಶಕರು: ಮನೋಹರ ಘಾಣೇಕರ, ಸಮಾಜ ಪುಸ್ತಕಾಲಯ ಶಿವಾಜಿ ಬೀದಿ, ಧಾರವಾಡ (791616) 0.2., 29.00. ಆರನೆಯ ಮುದ್ರಣ : ೨೦೧೦ ಸಮಾಜ ಪುಸ್ತಕಾಲಯ ಅಕ್ಷರ ಜೋಡಣೆ: ವಚನ ಗ್ರಾಫಿಕ್ಸ್, ಧಾರವಾಡ © : 742049 ಮುದ್ರಕರು: ಜಗದೀಶ ಘಾಣೇಕರ, *ಇ (ಪ್ರಿಂಟಿಂಗ್) ಸರಸ್ವತಿ ಆಫ್‌ಸೆಟ್ ಪ್ರಿಂಟರ್, ಶಿವಾಜಿಬೀದಿ, ಧಾರವಾಡ ಶಿವಾಜಿ ಬೀದಿ ವಿತರಣೆ ಸಮಾಜ ಪುಸ್ತಕಾಲಯ ಸುಭಾಸ ಬೀದಿ ಕೊಪ್ಪಿಕರ ಬೀದಿ ಧಾರವಾಡ ಧಾರವಾಡ ಹುಬ್ಬಳ್ಳಿ ISBN 81-7627-012-1 ನಾಲ್ಕು ಮಾತು “ಆಚಾರ ನಮ್ಮ ಪೂಜ್ಯ ಪಿತೃಚರಣ ಶಂಭು ಶರ್ಮಾ ನಾಜಗಾರ ಅವರು 1926 ರಲ್ಲಿ ವಿಧಿಃ” ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದಲ್ಲಿಂದ ಕನ್ನಡ ಜನತೆಗೆ ಅನುಕೂಲಿಸುವ ದೃಷ್ಟಿಯಿಂದ ಜ್ಯೋತಿಷ ಹಾಗೂ ಪ್ರಯೋಗ ಮತ್ತು ವ್ರತ ಕಥೆಗಳ ಪುಸ್ತಕಗಳನ್ನು ನಿರಂತರ ಪ್ರಕಟಿಸಿ ಮುದ್ರಿಸುತ್ತಲೇ ಬಂದರು. ದ್ವಾದಶ ಭಾವ, ಜಾತಕ ಶಿಕ್ಷಕ, ಜಾತಕ ಚಂದ್ರಿಕೆ, ಸತ್ಯಗಣಪತಿ ಮತ್ತು ಸತ್ಯನಾರಾಯಣ ವ್ರತ ಕಥೆಗಳು, ಪ್ರಯೋಗಕಾರಿಕಾ ಸಂಗ್ರಹ, ಮುಹೂರ್ತ ಶತಕ, ಶ್ರಾದ್ಧ ಪ್ರಯೋಗ ಮುಂತಾದವು ಅವುಗಳಲ್ಲಿ ಪ್ರಮುಖವಾದವುಗಳು. ಈ ಎಲ್ಲ ಪುಸ್ತಕಗಳೂ ಸಹ ಹತ್ತಾರು ಮುದ್ರಣಗಳನ್ನು ಕಂಡು ಇಂದಿಗೂ ಬೇಡಿಕೆ ಹೊಂದಿರುವದು ಅವರ ಸರಳ ಸುಂದರ ವಿವರಣೆ ಮತ್ತು ಪಾಂಡಿತ್ಯಕ್ಕೆ ನಿದರ್ಶನಗಳಾಗಿವೆ. ಪ್ರಸ್ತುತ ‘ಧರ್ಮಸಿಂಧು’ವನ್ನು ಅವರು ತಮ್ಮ ೬೦ ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳಿಸಲು ಬಯಸಿ ಬರೆದಿದ್ದರು. ಅದರ ಮುದ್ರಣ ವೆಚ್ಚ ಭರಿಸುವದು ನಮ್ಮ ಅಂದಿನ ಆರ್ಥಿಕ ಸ್ಥಿತಿಗೆ ಅನುಕೂಲಿಸಲಿಲ್ಲ. ಜತೆಗೆ ಮುದ್ರಣಾಲಯಗಳಿಗೆ ಅಲೆದು ಪ್ರತಿ ತಿದ್ದುವ ಕಾರ್ಯವೂ ಅವರಿಗೆ ಅನುಕೂಲಕರವಿರಲಿಲ್ಲ. ಈ ಪರಿಸ್ಥಿತಿಯಲ್ಲಿಯೂ ತಮ್ಮ ಈ ಗ್ರಂಥಪ್ರಕಟನೆಯ ಉತ್ಕಟ ಅಭಿಲಾಷೆ ಬಿಡದ ಕಾರಣ ಒಂದು ರೀತಿಯ ಮನೋವ್ಯಾಕುಲತೆಗೆ ಒಳಗಾದರು. ಅದನ್ನು ಅರಿತಾಗ ನಾನು ಕೆಲ ಸಹೃದಯರೊಂದಿಗೆ ಸಂಪರ್ಕ ಬೆಳೆಸಿ ಪುಸ್ತಕವನ್ನು ನೀಡುವ ಭರವಸೆಯೊಂದಿಗೆ ಮುಂಗಡ ಸಂಗ್ರಹಿಸಿ, ಜತೆಗೆ ಅನೇಕ ಗುರುಪೀಠಪತಿಗಳು, ಗೃಹಸ್ಥರು ದೇಣಿಗೆ ನೀಡಿದ ಹಣದಿಂದ ಮನೆಯಲ್ಲಿಯೇ ಚಿಕ್ಕ ಮುದ್ರಣಯಂತ್ರ ಇರಿಸಿ ಆ ಕೆಲಸ ಪೂರೈಸಲಾಯಿತು. ಇದರಿಂದ ಅವರು ಸಂತೃಪ್ತರಾದರು. ಆದರೆ ನಮ್ಮ ಅಪಾರ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಅವರೆಲ್ಲರನ್ನು ಸಂತೃಪ್ತಿಗೊಳಿಸಲು ನಾವು ವಿಫಲರಾದವು. ಎರಡನೆಯ ಆವೃತ್ತಿಯಲ್ಲೂ ಬೇಡಿಕೆಯ ಮಟ್ಟಕ್ಕೆ ಪುಸ್ತಕ ಒದಗಿಸಲು ನಮಗೆ ಶಕ್ತಿ ಸಾಲಲಿಲ್ಲ. ಈ ಹಂತದಲ್ಲಿ ಸಮಾಜವುಸ್ತಕಾಲಯದ ಶ್ರೀ ಮನೋಹರ ಘಾಣೇಕರ ಅವರು ನಮ್ಮ ಹಾಗೂ ಗ್ರಾಹಕರ ಈ ಅಗತ್ಯವನ್ನು ಪೂರೈಸಲು ಮುಂದೆ ಬಂದದ್ದರಿಂದ ಅವರಿಗೆ ಈ ಜವಾಬ್ದಾರಿಯನ್ನು ಪೂರ್ತಿಯಾಗಿ ವಹಿಸುತ್ತಿದ್ದೇವೆ. ಗ್ರಾಹಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲೆಂದು ನಾವು ಹಾರೈಸುತ್ತೇವೆ. ಅಕ್ಷಯ ತೃತೀಯ ದಿ. ೧೫-೫-೨೦೦೨ ತಮ್ಮ ವಿಶ್ವಾಸಿಕ, ಗಂಗಾಧರ ಶಾಸ್ತ್ರಿ, ನಾಜಗಾರ ಹೊನ್ನಾವರ (ಉ.ಕ.) ಉಪೋದ್ಘಾತ “ಧರ್ಮವಿಶ್ವಸೃಜಗತಃಪ್ರತಿಷ್ಠಾ” (ಶ್ರುತಿ) ಧರ್ಮಾತ್ಸುಖಂ ಚಜ್ಞಾನಂ ಚಯಾರುಭಯ ಮಾಷ್ಟ್ರುಯಾತ್ ತಸ್ಮಾತ್ಸರ್ವಂ ಪರಿತ್ಯಜ್ಯ ವಿದ್ಯಾನ್ ಧರ್ಮಂ ಸಮಾಚರೇತ್ ||

  • ಸ್ಕಾಂದಪುರಾಣ. “ಧರ್ಮ” ಇದು ಇಹಪರ ಶ್ರೇಯಸ್ಸಿಗೆ ಕಾರಣವೆಂಬದರಲ್ಲಿ ಯಾವ ಶಾಸ್ತ್ರಕಾರರಲ್ಲಿಯೂ ಮತಭೇದವಿರುವದಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಸಾಧನೆಗೆ ‘ಧರ್ಮ’ವೇ ಆಧಾರವು. ಅದಿಲ್ಲದಿದ್ದರೆ ಯಾವ ಪುರುಷಾರ್ಥವೂ ಸಿದ್ಧಿಸುವದಿಲ್ಲ. ಧರ್ಮ ಶಬ್ದದ ವ್ಯಾಖ್ಯೆಯನ್ನು ಅನೇಕಶಾಸ್ತ್ರಜ್ಞರು ಅನೇಕರೀತ್ಯಾ ಮಾಡಿದ್ದರು. ಪರ್ಯಾಯದಿಂದ ಅದರ ಗುರಿಯು ಒಂದೇ ಆಗಿರುವದು. ಧರ್ಮಕ್ಕೆ ದೇಶ, ಕುಲ, ಕಾಲಗಳೆಂಬ ಭೇದವಿಲ್ಲ. ಕುಲದೇಶಾದಿಗಳಿಂದ ಅದರ ವೈವಿಧ್ಯತೆ ಮಾತ್ರವಿದೆ, ಹೊರತು ಮೂಲಭೂತ ಮತಭೇದವಿರುವದಿಲ್ಲ. ನಾವು ಗೀತೆಯನ್ನು ಗೌರವಿಸುವಂತೆ ಬಾಯಿಬಲ್, ಕುರಾನಗಳನ್ನೂ ಅಷ್ಟೇ ಗೌರವಿಸುತ್ತೇವೆ. ಇಡೀ ವಿಶ್ವದಲ್ಲಿ ಸತ್ಯವು ಒಂದೇ ಅಲ್ಲವೇ? ಧರ್ಮಶಬ್ದದ ವ್ಯಾಪ್ತಿಯು ಬಹು ವಿಶಾಲ! ಅಷ್ಟೇ ಸೂಕ್ಷ್ಮವೂ ಹೌದು. ಅಷ್ಟೇ ರಹಸ್ಯಪೂರ್ಣವೂ ಆಗಿದೆ. ಧರ್ಮಸಂಕಟಬಂದಾಗ ಎಂಥ ವಿದ್ವಾಂಸನಾದರೂ ಮೂಢನಾಗಬಹುದು. ಅಂತೆಯೇ “ಧರ್ಮಸ್ಯ ಸೂಕ್ಷ್ಮಾ ಗತಿ” ಎಂದು ಹೇಳಿರುವದು ಸರಿ. ಧರ್ಮಶಾಸ್ತ್ರ ಅನೇಕ ಶಾಸ್ತ್ರಗಳಲ್ಲಿ ಈ ಧರ್ಮಶಾಸ್ತ್ರವೂ ಒಂದು ಮಹತ್ವದ ಪಾತ್ರವನ್ನು ಹೊಂದಿರುವದು. ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ, ಯಮ, ಆಪಸ್ತಂಬ ಮೊದಲಾದ ಮಹನೀಯರು “ಧರ್ಮಶಾಸ್ತ್ರಪ್ರವರ್ತಕ’ರನ್ನಲ್ಪಡುವರು. ಈ ಶಾಸ್ತ್ರವು ಶ್ರುತಿ, ಸ್ಮೃತಿ, ಸದಾಚಾರ, ಆತ್ಮಸಾಕ್ಷಿ ಮನಸ್ಸಿನ ಸುಸ್ಥಿತಿ ಇತ್ಯಾದಿ ಮೂಲಕವಾದದ್ದೆಂದು ಹೇಳಲಾಗಿದೆ. “ಶ್ರುತಿಃಸ್ಕೃತಿಃಸದಾಚಾರಃ ಸ್ವಸ್ಥ ಚ ಪ್ರಿಯಮಾತ್ಮನಃ ಸಮ್ಯಕ್ಸಂಕಲ್ಪಜಃ ಕಾಮಃ ಧರ್ಮಮೂಲಮಿದಂಸ್ಕೃತಂ|| (ಯಾಜ್ಞವಲ್ಕ) ಸ್ಮೃತಿಪ್ರೋಕ್ತಧರ್ಮಗಳಲ್ಲಿ ಕಾಲಭೇದ ದೇಶಭೇದಾದಿಗಳಿಂದ ವಿರೋಧವೂ ಕಂಡುಬರುವದು. ಅಂಥಸಂದರ್ಭದಲ್ಲಿ ಆಚರಿಸುವವನು ದಿಟ್ಟೂಢನಾಗಬಹುದು. ಆದರೆ ಅವೆಲ್ಲ ಆರ್ಷಗ್ರಂಥಗಳಾದ ಕಾರಣ ಅನಾದರಿಸುವಂತಿಲ್ಲ. ಕಾರಣ ಅವುಗಳನ್ನೆಲ್ಲ ಕ್ರೋಢೀಕರಿಸಿ ವಿರೋಧಪರಿಹಾರದ ಮೂಲಕ ಮಾರ್ಗದರ್ಶನ ಮಾಡುವ ಮಹಾನಿಬಂಧಗಳು ಹುಟ್ಟಿಕೊಂಡವು. ಹೇಮಾದ್ರಿ, ಕಾಲಮಾಧವ, ವೈದ್ಯನಾಥಿ ಮೊದಲಾದ ಮಹಾನಿಬಂಧಗಳು ಪ್ರಖ್ಯಾತವಾಗಿವೆ. ಧರ್ಮಶಾಸ್ತ್ರದ ಮೇಲೆ ಅರ್ವಾಚೀನರೂ ಅನೇಕ ನಿಬಂಧಗಳನ್ನು ರಚಿಸಿರುವರು. ನಿರ್ಣಯಸಿಂಧು “ನಿರ್ಣಯಸಿಂಧು” ಈ ಧರ್ಮನಿಬಂಧವನ್ನು ಬರೆದವರು ಸಕಲಶಾಸ್ತ್ರಪಾರಂಗತರಾದ “ಕಮಲಾಕರ ಭಟ್ಟ” ರು. ೩೫೭ ವರ್ಷಗಳ ಹಿಂದಿನವರು. ಧರ್ಮಸಿಂಧುಕಾರರಾದರೂ ಹೆಚ್ಚಾಗಿ ವಿಷಯಕ್ರಮಗಳನ್ನೆಲ್ಲ ಇದರ ಅನುಸಾರವಾಗಿಯೇ ಬರದಿರುವರು. ಅದನ್ನು ತಮ್ಮ ಗ್ರಂಥದಲ್ಲಿ “ನಿರ್ಣಯಸಿಂಧು ಕ್ರಮೇಣಸಿದ್ದಾರ್ಥಾನ್” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಮಲಾಕರಭಟ್ಟರು ವಿದ್ಯತರಂಪರೆಯಲ್ಲಿ ಜನಿಸಿದ ಉದ್ದಾಮಪಂಡಿತರು. ‘ಆಚಾರದೀಪ’ ‘ದಾನಕಮಲಾಕರ’ ‘ಶಾಂತಿಕಮಲಾಕರ’ ಇತ್ಯಾದಿ ಅನೇಕ ವೈದಿಕಗ್ರಂಥಗಳನ್ನು ಬರೆದದ್ದಲ್ಲದೆ ‘ತಂತ್ರವಾರ್ತಿಕಟೀಕಾ’ V ‘ಶಾಸ್ತ್ರದೀಪಿಕಾಟೀಕಾ’ ಮೊದಲಾದ ತರ್ಕಜಟಿಲಗ್ರಂಥಗಳನ್ನೂ ಬರೆದಿರುವರು. ಇತ್ತಲಾಗಿ “ಕೃಷ್ಣ ಭಟ್ಟ “ರೆಂಬವರು ಈ ಗ್ರಂಥಕ್ಕೆ ವಿಸ್ತಾರವೂ, ಪಾಂಡಿತ್ಯಪೂರ್ಣವೂ ಆದ ಟೀಕೆಯನ್ನು ಬರೆದಿದ್ದು ಬೆಳಕಿಗೆ ಬಂದಿದೆ. ಇನ್ನೂ ಎಷ್ಟೋ ಭಾಷೆಗಳಲ್ಲಿ ಟೀಕೆ ಇರಬಹುದಾದರೂ ಕನ್ನಡದಲ್ಲಿ ಆಗಿಲ್ಲ. ಪುರುಷಾರ್ಥಚಿಂತಾಮಣ ಇದನ್ನು ವಿಷ್ಣು ಭಟ್ಟರೆಂಬುವವರು ಬರೆದಿರುವರು ಅವರ ಜೀವಿತಕಾಲವು ನಿಷ್ಕೃಷ್ಟವಾಗಿ ತಿಳಿಯುವಂತಿಲ್ಲವಾದರೂ ನಿರ್ಣಯಸಿಂಧುವಿನ ನಂತರದವರೆಂಬುದು ಸ್ಪಷ್ಟ ತಮ್ಮ ಪುರುಷಾರ್ಥ ಚಿಂತಾಮಣಿಯಲ್ಲಿ ನಿರ್ಣಯಸಿಂಧುವಿನ ಅನೇಕ ವಚನಗಳನ್ನುದ್ಧರಿಸುವರು ಧರ್ಮಸಿಂಧುವಿನಲ್ಲಿ ಪುರುಷಾರ್ಥ ಚಿಂತಾಮಣಿಯ ಉಲ್ಲೇಖವುಬರುವದರಿಂದ ಈ ಗ್ರಂಥಕಾರರು ನಿರ್ಣಯಸಿಂಧುವಿನ ನಂತರದವರೂ ಧರ್ಮಸಿಂಧುವಿನ ಪೂರ್ವದವರೂ ಎಂದು ನಿರ್ಧಾರವಾಗಿ ಹೇಳಬಹುದು. ಇವರು ಹೇಮಾದ್ರಿ ಮಾಧವ ವಚನಗಳ ಪರಸ್ಪರವಿರೋಧಗಳನ್ನು ಪರಿಹರಿಸಿ ನಿರ್ಣಯಿಸುವನೆಂಬ ಪ್ರತಿಜ್ಞೆಯನ್ನೇ ಮಾಡಿದಂತಿದೆ. ಈ ಪ್ರಾಚೀನ ಅರ್ವಾಚೀನ ನಿಬಂಧಗಳೆಲ್ಲ ಪಾಂಡಿತ್ಯ ಪೂರ್ಣವಾಗಿದ್ದು ಸಾಮಾನ್ಯ ಸಂಸ್ಕೃತ ಭಾಷಾಭಿಜ್ಞರಿಗೂ ದುರೂಹವಾಗಿವೆಯಂದರೆ ಅತ್ಯುಕ್ತಿಯಾಗಲಾರದು. ಧರ್ಮಸಿಂಧು ಇದರ-ಭಾಷಾಶೈಲಿ ಸುಲಭ. ವಾಕ್ಯಾರ್ಥ ಕೋಲಾಹಲವಿಲ್ಲ. ಇದನ್ನು ಇಂದಿಗೆ ೨೧೨ ವರ್ಷಗಳ ಹಿಂದೆ “ಕಾಶೀನಾಥ ಉಪಾಧ್ಯಾಯ’ರೆಂಬ ಪಂಡಿತರು ಬರೆದರು. ಇವರು ತಮ್ಮ ಗ್ರಂಥದಲ್ಲಿ ಕಾಲವನ್ನ ಪೃಥಕ್ಕಾಗಿ ಹೇಳದಿದ್ದರೂ “ಸಂಕ್ರಾಂತಿದಾನಪ್ರಕರಣ” ದಲ್ಲಿ ತೇಚ ಇದಾನೀಂ ದ್ವಾದಶಾಧಿಕ ಸಪ್ತದಶ ಶತಸಂಖ್ಯಾಕೇ (೧೭೧೨) ಶಾಲಿವಾಹನಶಕೇ ಏಕವಿಂಶತಿ (೨೧) ರಯನಾಂಶಾಃ ಹೀಗೆ ಸ್ಪಷ್ಟವಾಗಿ ಹೇಳುವದರಿಂದ ಗ್ರಂಥರಚನೆಯ ಕಾಲವು ಶಾಲಿವಾಹನ ಶಕ (೧೭೧೨) ಎಂಬುದು ನಿರ್ವಿವಾದ. ಈ ನಿಬಂಧವು ಧರ್ಮನಿಬಂಧಗಳಲ್ಲಿ ಅತ್ಯಾಧುನಿಕವೆನ್ನಬಹುದು. ಈ “ಧರ್ಮಸಿಂಧು’ವು ಮೂಲತಃ ಸಂಸ್ಕೃತವಚನರೂಪವಾದದ್ದು. ಅದನ್ನು ಕನ್ನಡದಲ್ಲಿ ಪದಶಃ (ಅಕ್ಷರಶಃ ಎಂದರೂ ತಪ್ಪೇನಿಲ್ಲ) ಭಾಷಾಂತರಿಸಿರುವನು. ಆದುದರಿಂದ ಸಂಸ್ಕೃತಮೂಲವನ್ನು ಪ್ರತ್ಯೇಕ ಬರೆಯುವ ಅವಶ್ಯಕತೆ ಕಂಡುಬರಲಿಲ್ಲ. ಪುಟಗಳನ್ನಷ್ಟು ಬೆಳೆಸಬಹುದೇ ಹೊರತು ಅದರಿಂದ ಪ್ರಯೋಜನವೇನೂ ಇಲ್ಲ. ಇದನ್ನು ಅನೇಕ ವಿದ್ವಾಂಸರು ಒಪ್ಪಿಕೊಂಡಿರುವರು. ಕಾಶೀನಾಥ ಉಪಾಧ್ಯಾಯರು ಈ ಧರ್ಮಸಿಂಧುಕಾರರಾದ ಕಾಶೀನಾಥ ಉಪಾಧ್ಯಾಯರು ಮೂಲತಃ ಕೊಂಕಣಪ್ರಾಂತದ ರತ್ನಾಗಿರಿ ಜಿಲ್ಲೆಯವರು ಸಂಗಮೇಶ್ವರ ಎಂಬ ಗ್ರಾಮದಲ್ಲಿ “ಗೋಳವಲೀ” ಎಂಬ ಅಗ್ರಹಾರವಿದೆ. ಅಲ್ಲಿ ಇವರು ಜನಿಸಿದರು. ಇವರು ಕಾಶ್ಯಪ ಗೋತ್ರದವರು. ಈ ವಂಶಜರಿಗೆ ಉಪಾಧ್ಯಾಯ (ಪಾಧ್ಯ) ಎಂಬ ಅಡ್ಡ ಹೆಸರಿದೆ. ಈ ವಂಶದವೃತ್ತಾಂತವು ಬೋಧಪ್ರದವೂ, ಮನೋರಂಜಕವೂ ಆಗಿದ್ದು ಅದನ್ನಿಲ್ಲಿ ಸಂಕ್ಷೇಪವಾಗಿ ಬರೆಯಲಾಗಿದೆ. ಮೂಲಪುರುಷ ಭಾಸ್ಕರೋಪಾಧ್ಯಾಯರಿಗೆ “ನಾರೋಪಾಧ್ಯಾಯ ರೆಂಬ ಪುತ್ರರು ಜನಿಸಿದರು. ನಾರೋಪಾಧ್ಯಾಯರಿಗೆ “ಅಂತೋಪಾಧ್ಯಾಯ ರೆಂಬ ಪುತ್ರರೂ ಈ ಅಂತೋಪಾಧ್ಯಾಯರಿಗೆ “ಕಾಶುಪಾಧ್ಯಾಯ” ರೆಂಬ ಪುತ್ರರು. ಈ ಕಾಶ್ಯುಪಾಧ್ಯಾಯರು ಧರ್ಮಸಿಂಧುಕಾರರಾದ ಕಾಶೀನಾಥ್ಪಾಧ್ಯಾಯರ ಪಿತಾಮಹರು. ಇವರು ಸಕಲವಿದ್ಯಾಪಾರಂಗತರಾಗಿದ್ದು, “ವಿದ್ವತ್ಸಾರ್ವಭೌಮ"ರನ್ನಿಸಿಕೊಂಡು ಪ್ರಖ್ಯಾತರಾದರು. ಇವರಿರುವ ಅಗ್ರಹಾರವು ಸರಕಾರದಿಂದ ಉಂಬಳಿಯಾಗಿ ಬಂದಿರುವದರಿಂದ ತೆರಿಗೆ ಇರಲಿಲ್ಲ. ಈ ಕಾಶ್ಯುಪಾಧ್ಯಾಯರ ಕಾಲದಲ್ಲಿ ೭೨ ಗ್ರಾಮಗಳು ಇವರ ಪೌರೋಹಿತ್ಯಕ್ಕೊಳಪಟ್ಟಿತ್ತಂತೆ. ಮೇಲಾಗಿ ಅರ್ಚಕತ್ವ ಜ್ಯೋತಿಷ ಧರ್ಮಶಾಸ್ತ್ರ VI ಕಥನದಲ್ಲಿ ಪ್ರಭುತ್ವಗಳೆಲ್ಲ ಇವರಿಗೇ ಸೇರಿದ್ದಿತು. ಈ ವೃತ್ತಿಯಲ್ಲಿರುವ ಇವರಿಗೆ ಕೆಲಕಾಲದಲ್ಲಿ ವಾರ್ಧಕಾವಸ್ಥೆಯು ಪ್ರಾಪ್ತವಾಯಿತು. ಇವರಿಗೆ ಯಜೇಶ್ವರ, ಅನಂತೋಪಾಧ್ಯಾಯರೆಂಬ ಇಬ್ಬರು ಪುತ್ರರು. ಇನ್ನೂ ಪ್ರೌಢಾವಸ್ಥೆಗೆ ಬಂದಿರಲಿಲ್ಲ. ಹೊಣೆಗಾರಿಕೆಯದಾದ ತಮ್ಮ ವೃತ್ತಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲದ್ದರಿಂದ ತಮ್ಮ ಶಿಷ್ಯರೊಳಗೇ ಒಬ್ಬರಾದ ಕೃಷ್ಣಜೋಶಿ ಸಂಗಮೇಶ್ವರಕರ ಎಂಬವರಿಗೆ ಕೆಲಕಾಲದಮಟ್ಟಿಗೆ ಎಂದು ಆ ವೃತ್ತಿಯನ್ನು ಅವರಿಗೆ ಒಪ್ಪಿಸಿದರು. ಆ ಕಾಲದಲ್ಲಿ ಬಾಳಾಜಿ ಬಾಜೀರಾವ್ (ನಾನಾಸಾಹೇಬ ಪೇಶವೆ) ಇವರು ಪುಣೆಯಲ್ಲಿ ಪ್ರಧಾನಪದವಿಯಲ್ಲಿದ್ದರು. ಸಂಗಮೇಶ್ವರಕರರಿಗೆ ಅವರು ಆಪ್ತರಾಗಿರುವದರಿಂದ ಸ್ವಾರ್ಥಪಾರಾಯಣರಾದ ಕೃಷ್ಣ ಜೋಶಿಯವರು ಸಮಯಸಾಧಿಸಿ ಉಪಾಧ್ಯಾಯಕುಲದ ವೃತ್ತಿಯನ್ನು ತಮ್ಮದನ್ನಾಗಿಯೇ ಮಾಡಿಕೊಳ್ಳಬೇಕೆಂದು ಪ್ರಧಾನರಿಂದ ಅಧಿಕಾರಪತ್ರವನ್ನು ಸಂಪಾದಿಸಿಕೊಂಡರು. ಇತ್ತ ಪರಂಪರಾವೃತ್ತಿಯಿಂದ ನಿವೃತ್ತರಾದ ಕಾಶ್ಯುಪಾಧ್ಯಾಯರು ೩೦ ವರ್ಷಗಳನಂತರ ಕಾಲವಶರಾದರು. ಅಷ್ಟರಲ್ಲಿ ಯಜೇಶ್ವರ ಉಪಾಧ್ಯಾಯ ಹಾಗೂ ಅನಂತೋಪಾಧ್ಯಾಯರು ಪ್ರಾಯಪ್ರಬುದ್ಧರಾಗಿ ಕೃಷ್ಣ ಜೋಶಿಯವರನ್ನು ಪುನಃ ತಮ್ಮ ವೃತ್ತಿಯನ್ನು ಕೊಡುವಂತ ವಿನಂತಿಸಿದರು. ಆದರೆ ಕೃಷ್ಣ ಜೋಶಿಯವರು ಅದು ತಮ್ಮ ಪರಂಪರೆಗೆ ಸೇರಿದ್ದೆಂದೂ ಅದರಂತೆ ಅಧಿಕೃತ ಪತ್ರವಿದೆಯೆಂದೂ ಹೇಳಿ ಅವರ ಮಾತನ್ನು ತಿರಸ್ಕರಿಸಿಬಿಟ್ಟರು. ನಿರುಪಾಯರಾಗಿ ಉಪಾಧ್ಯಾಯ ಬಂಧುಗಳು ಪುಣೆಯ ನ್ಯಾಯಾಲಯದ ಕಟ್ಟೆಯನ್ನು ಹತ್ತಬೇಕಾಯಿತು. (ಶ. ೧೬೭೮) ಪೇಶವೆಯವರು ನ್ಯಾಯಪರಿಶೀಲನೆಗಾಗಿ ಬಾಲಕೃಷ್ಣಶಾಸ್ತ್ರಿ ಎಂಬವರನ್ನು ನೇಮಿಸಿದರು. ಆಗ ಕೃಷ್ಣ ಜೋಶಿಯವರು ಶಾಸ್ತ್ರಿಗಳು ಪಾಧ್ಯ ಕುಲದ ಪಕ್ಷಪಾತಿಗಳೆಂಬ ಆರೋಪಮಾಡಿದ್ದರಿಂದ ಕೆಲ ನ್ಯಾಯಾಧೀಶರನ್ನು ನೇಮಿಸಲಾಯಿತು. ಇಷ್ಟರಲ್ಲಿಯೇ ನಾಲ್ಕು ವರ್ಷಗಳು ಸಂದವು. ಉಪಾಧ್ಯಾಯರ ದಾಖಲೆಗಳು ನ್ಯಾಯವಾಗಿದ್ದವುಗಳಾದರೂ ಕೃಷ್ಣ ಜೋಶಿಯವರ ದಾಖಲೆಗಳು ಕೃತಕಗಳಾಗಿವೆಯೆಂದು ತಿಳಿದರೂ ಪೇಳ್ವೆಯ ಮನೋಗತದಂತ ಸಂಗಮೇಶ್ವರಕರರ ವಾದವೇ ಗೆದ್ದಿತು. ಕಾಲಹರಣವಾಯಿತು. ಧನಹಾನಿಯಾಯಿತು ಆಸ್ತಿಯು ಕೈಬಿಟ್ಟಿತು. ನಿರಾಶೆಯಾಯಿತು. ಆಗ ಯಜೇಶ್ವರೋಪಾಧ್ಯಾಯರು ಈ ಅನ್ಯಾಯ ನಿರ್ಣಯ ಮಾಡಿದವರ ಪಾರುಪತ್ಯಕ್ಕೆ ನಮ್ಮ ಆರಾಧ್ಯ ದೇವತೆಯೇ ಸಾಕು-ಎಂದು ನಿಟ್ಟುಸಿರು ಬಿಟ್ಟರು. ಕಿರಿಯರಾದ ಅನಂತೋಪಾಧ್ಯಾಯರು “ಯಸ್ಮಿನ್ ದೇಶ ನ ಸಮ್ಮಾನೋ ನ ವೃತ್ತಿ” ಎಂಬ ನ್ಯಾಯದಂತೆ ಗೋಳವಲಿ ಅಗ್ರಹಾರದಲ್ಲಿರುವ ತಮ್ಮ ಮನೆಗೆ ಬೆಂಕಿ ಇಟ್ಟು, ಅದರ ಭಸ್ಮವನ್ನು ಹಿಡಿದು “ಯಾವ ಪೇಶೈಯರು ನಮ್ಮ ವೃತ್ತಿಯನ್ನಪಹರಿಸಿ ಸರ್ವನಾಶಕ್ಕೆ ಕಾರಣರಾದರೋ ಆ ಪೇಳ್ವೆ ಮನೆತನವೂ ಅದರಂತೇ ಅಳಿಯಲಿ. ಎಂದು ಆ ಭಸ್ಮವನ್ನು ಪೇಶ್ವವಾಡೆಯ ಒಳಗೆ ಚೆಲ್ಲಿದರು. ಕಾಲಕ್ರಮದಲ್ಲಿ ಹಾಗೆಯೇ ಆಯಿತು! ಪೇಶ್ವಯ ಅಧಿಪತ್ಯದಲ್ಲಿರುವ ಭೂಮಿಯಲ್ಲಿಯ ಜಲವನ್ನು ಸಹ ಮುಟ್ಟುವದಿಲ್ಲವೆಂದು ಪ್ರತಿಜ್ಞೆಮಾಡಿ ಅನಂತೋಪಾಧ್ಯಾಯರು ಪಂಢರೀಕ್ಷೇತ್ರದ ಪಾಂಡುರಂಗನ ಸನ್ನಿಧಿಯನ್ನಾಶ್ರಯಿಸಿದರು. VII ನಾನಾಸಾಹೇಬ ಪೇಳ್ವೆಯವರು ಅಲ್ಪಕಾಲದಲ್ಲಿಯೇ ತೀರಿಕೊಂಡರು ಅವರನಂತರ ಪ್ರಧಾನ ಪಟ್ಟಕ್ಕೆ ಮಾಧವರಾವ್‌ ಪೇಶ್ವ ಎಂಬುವವರು ಬಂದರು. ಅವರು ಧಾರ್ಮಿಕರೂ ಉದಾರಿಗಳೂ ಆಗಿದ್ದರು. ತಮ್ಮ ಹಿರಿಯವರು ಪಾಧ್ಯೆವಂಶಜರಿಗೆ ಅನ್ಯಾಯ ಮಾಡಿರುವರೆಂಬುದನ್ನರಿತು ಉಪಾಧ್ಯಾಯ ಕುಲದವರನ್ನು ಸಾಂತ್ವನಗೊಳಿಸಬೇಕೆಂದಿದ್ರಿಸಿ ಅನಂತೋಪಾಧ್ಯಾಯರಿಗೆ ದೂತನಮುಖದಿಂದ ನಿಮಗೆ ಮೂರುನಾಲ್ಕು ಗ್ರಾಮಗಳನ್ನು ಉಂಬಳಿಯಾಗಿ ಮತ್ತು ಒಂದು ಲಕ್ಷ ರೂಪಾಯಿಗಳನ್ನು ನಗದಾಗಿ ಕೊಡಲಾಗುವದೆಂದೂ ತಿಳಿಸಿದರು. ವಿರಕ್ತ ಅನಂತೋಪಾಧ್ಯಾಯರು ಅದನ್ನು ತಿರಸ್ಕರಿಸಿದರು. ಈ ಧರ್ಮಸಿಂಧುಕಾರರಾದ ಕಾಶೀನಾಥಪಾಧ್ಯಾಯರು-ಗೋಳವಲಿಗ್ರಾಮದಲ್ಲಿಯೇ ಜನಿಸಿ ಪ್ರಾಯಪ್ರಬುದ್ಧರಾದರು ಪಂಡರೀಕ್ಷೇತ್ರದಲ್ಲಿ ಸಂಸ್ಕೃತಪಾಠಶಾಲೆಯನ್ನು ತೆರೆದು ತಮ್ಮ ಪಾಂಡಿತ್ಯಪ್ರಕರ್ಷದಿಂದ ದೇಶದಲ್ಲಿ ಪ್ರಖ್ಯಾತರಾದರು. ಪಂಢರೀಕ್ಷೇತ್ರದಲ್ಲಿ ಅನಂತೋಪಾಧ್ಯಾಯರು ವೃದ್ಧಾಪ್ಯದಿಂದ ಪಾಂಡುರಂಗನ ಪಾದವನ್ನು ಸೇರಿದರು. ವಾರ್ಧಕಾವಸ್ಥೆಯಲ್ಲಿ ವಿಠಲನ ಅನುಗ್ರಹದಿಂದ ಒಬ್ಬ ಪುತ್ರನು ಜನಿಸಿದ್ದನು. ತಾಯಿಯಾದ ಅನ್ನಪೂರ್ಣಾ ದೇವಿಯು ಆ ಬಾಲಕನನ್ನು ಅಣ್ಣನಾದ ಕಾಶೀನಾಥ ಉಪಾಧ್ಯಾಯರ ಕೈಯಲ್ಲಿಟ್ಟು ಸಹಗಮನ ಮಾಡಿದಳಂತೆ. ತಮ್ಮನಾದ ವಿಠಲೇಶನನ್ನು ಅಧ್ಯಯನಕ್ಕಾಗಿ ಕಾಶಿಯಲ್ಲಿಟ್ಟು ಪಂಢರಿಯಲ್ಲಿ ಪಠನ- ಪಾಠನಗಳನ್ನು ಅವ್ಯಾಹತವಾಗಿ ಸಾಗಿಸುತ್ತ ಅನೇಕ ಗ್ರಂಥಗಳನ್ನು ಬರೆಯುತ್ತ ವಿಠಲನನ್ನು ಅನನ್ಯ ಭಕ್ತಿಯಿಂದ ಸೇವೆಗಯ್ಯುತ್ತ ಕಾಲವನ್ನು ಕಳೆದರು. ಇವರ ಅಪಾರ ವಿದ್ವತ್ತನ್ನು ಕೇಳಿ ಪೇಳ್ವೆಯವರು ತನ್ನ ಕೊಡುಗೆಯನ್ನು ಅನಂತೋಪಾಧ್ಯಾಯರು ನಿರಾಕರಿಸಿದರೂ, ಅವರ ಪುತ್ರರಾದ ಕಾಶೀನಾಥೋಪಾಧ್ಯಾಯರಿಗಾಗಿ ಪ್ರತಿವರ್ಷ ಹನ್ನೆರಡುನೂರು ರೂಪಾಯಿಗಳನ್ನು ಕಳಿಸುತ್ತಿದ್ದರಂತೆ. ಶ್ರೀ ಫಂಡರೀಯ ವಿಠಲನ ಅನುಗ್ರಹದಿಂದ ಸ್ಫೂರ್ತಿ ಪಡೆದ ಕಾಶೀನಾಥ ಉಪಾಧ್ಯಾಯರು “ಧರ್ಮಸಿಂಧು"ವನ್ನು ಬರೆದು ವಿಠಲನ ಕೈಯ್ಯಲ್ಲರ್ಪಿಸಿ ತಮ್ಮ ಕೃತಿಯು ವಿದ್ವನ್ಮಾನ್ಯವಾಗುವದೋ, ಇಲ್ಲವೋ ಎಂಬುದನ್ನು ಪರೀಕ್ಷಿಸಲು ಕಾಶಿಯಲ್ಲಿರುವ ತಮ್ಮ ವಿಠಲೇಶನಿಗೆ ಕಳಿಸಿ ವಿದ್ವಜ್ಜನರ ಅಭಿಪ್ರಾಯವನ್ನು ನನಗೆ ತಿಳಿಸು ಎಂದು ಪುಸ್ತಕವನ್ನು ಕಳಿಸಿದರು. ಅಮಾನ್ಯವಾದಲ್ಲಿ ಗಂಗೆಯಲ್ಲಿ ತೇಲಿಬಿಡು ಎಂದೂ ಬರೆದಿದ್ದರಂತೆ. ಕಾಶಿಯ ವಿದ್ವಜ್ಜನರೆಲ್ಲರೂ ಕೂಡಿ ಒಂದು ತಿಂಗಳ ಪರ್ಯಂತ ಗ್ರಂಥವನ್ನು ಪರಿಶೀಲಿಸಿ ಅದನ್ನು ಮುಕ್ತಕಂಠದಿಂದ ಶ್ಲಾಘಿಸಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಗಂಗಾತೀರದಲ್ಲಿ ದೀಪೋತ್ಸವ ಮಾಡಿದರಂತೆ. ಏನೇ ಇರಲಿ “ಧರ್ಮಸಿಂಧು"ವು ಆಸೇತುಹಿಮಾಚಲ ಪರ್ಯಂತ ಪ್ರಖ್ಯಾತವಾಗಿದೆಯೆಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಮೂಲತಃ ಗ್ರಂಥಕಾರರು “ಧರ್ಮಸಿಂಧುಸಾರ"ವೆಂಬ ಹೆಸರನ್ನಿಟ್ಟದ್ದು ಕ್ರಮೇಣ “ಧರ್ಮಸಿಂಧು’ ಎಂದೇ ಪ್ರಚಾರವಾಗಿದೆ. ಸುಲಭ ಶೈಲಿಯ ಕಾರಣದಿಂದ ಜನಮೆಚ್ಚುಗೆ ಪಡೆದಿದೆ. ಈ ಗ್ರಂಥಕರ್ತರು ಇನ್ನೂ ಎಷ್ಟೋ ಗ್ರಂಥಗಳನ್ನು ಬರೆದಿರುವರು. ಹೀಗೆ ಯಶಸ್ವೀಜೀವನ ನಡೆಸಿ ಕೊನೆಗೆ ಸಂನ್ಯಾಸ ಸ್ವೀಕರಿಸಿ ಮುಕ್ತರಾದರು. (೧೭೨೭) ಇದನ್ನು ವಿಶೇಷ ವಿದ್ವಜ್ಜನರಿಗಾಗಿ ಬರೆದದ್ದಲ್ಲವೆಂದೂ ಧರ್ಮಶಾಸ್ತ್ರ ರಹಸ್ಯವನ್ನು ತಿಳಿಯಬಯಸುವ ಅಜ್ಞ ಜನರ ತಿಳಿವಳಿಕೆಗಾಗಿ ಬರೆಯಲಾಗಿದೆಯೆಂದೂ ಆಯಾಯ ಪರಿಚ್ಛೇದದ ಕೊನೆಯಲ್ಲಿ ಒತ್ತಿ-ಒತ್ತಿ ಹೇಳಿದ್ದಾರೆ. “ಮೀಮಾಂಸಾಧರ್ಮ ತತ್ವಜ್ಞಾಃ ಸುಧಿಯೋsನಲಸಾಬುಧಾಃ ಕೃತಕಾರ್ಯಾ: ಪ್ರಾಜ್ಞ ಬಂಧಿಸದರ್ಥಂನಾಯಮುದ್ರಮಃ ಯೇವುನರ್ಮ೦ದಮತಯೋ’ ಇತ್ಯಾದಿಗಳನ್ನು ಲಕ್ಷಿಸತಕ್ಕದ್ದು. ನಾನಾದರೂ ಇದೇ ಮಾತನ್ನೇ ಹೇಳಬಯಸುವೆ. ಸಂಸ್ಕೃತಜ್ಞರಾದವರು ಸಂಸ್ಕೃತ ಭಾಷೆಯಲ್ಲಿರುವ ನಿಬಂಧಗಳನ್ನೋದಿ ತಿಳಿಯಬಹುದು. ಸಂಸ್ಕೃತವನ್ನರಿಯದ ಕನ್ನಡಿಗರಿಗೆ ಮಾತೃಭಾಷೆಯಿಂದ ಧರ್ಮನಿಬಂಧದ ತಾತ್ಪರ್ಯವನ್ನು ತಿಳಿಸುವದು ನನ್ನ ಮುಖ್ಯೋದ್ದೇಶವು, ನನ್ನ ೬೮ ನೇ ವಯಸ್ಸು, ಸಾವಿರ ಪುಟ, ಎರಡು ಕೈ ಪ್ರತಿಗಳನ್ನು ಬರೆಯುವ ಕಷ್ಟದ ಕೆಲಸ ಆದರೂ “ಕೇಶಃಫಲೇನಹಿಪುನರ್ನವತಾಂವಿಧ” ಎಂಬ ಕಪ್ಪುಕ್ತಿಯಂತೆ ತುಂಬ ಮನಃಸಮಾಧಾನವೇ ಆಯಿತು. ಗುರುತರವಾದ ಪ್ರಕಟನಾ ಕಾರ್ಯವು ಕರ್ನಾಟಕದ ಅನೇಕ ಮಹನೀಯರ ಸಕ್ರಿಯ ಸಹಾಯದಿಂದ ಸಾಧ್ಯವಾಯಿತು. ಇದರ ಮುದ್ರಣಕ್ಕೆ ಹಾರ್ದಿಕ ಸಹಕಾರ ನೀಡಿದ - “ಶ್ರೀ ರಾಮಚಂದ್ರಾಪುರ ಶ್ರೀ ರಾಘವೇಂದ್ರ ಭಾರತೀ”, “ಸ್ವರ್ನವ ಸರ್ವಜೇಂದ್ರ ಸರಸ್ವತೀ’, “ಶ್ರೀ ಭಗವಾನ್ ಶ್ರೀಧರಸ್ವಾಮಿ”, “ಪೇಜಾವರ ವಿಶ್ವೇಶ ತೀರ್ಥರು”, ಧರ್ಮಸ್ಥಳದ “ವಿರೇಂದ್ರ ಹೆಗ್ಗಡೆ”, ಹಾಸಣಗಿ ‘ಗಣಪತಿ ಭಟ್ಟ, ಜಿ.ಆರ್. ಪಾಂಡೇಶ್ವರ, ವಿ. ಸೀತಾರಾಮಯ್ಯ, ಹಾಗೂ ವಿಶೇಷ ಪರಿಶ್ರಮದಿಂದ ಸಹಕಾರ ನೀಡಿದ ಸಿರ್ಸಿ ಓಣಿಕೆರೆ ಕೇಶವ ರಾಮಕೃಷ್ಣ ಹೆಗಡೆ ಪಿತಾಪುತ್ರರು ಮತ್ತು ಗ್ರಂಥಪರಿಷ್ಕರಣಕ್ಕೆ ನೆರವಾದ ಶಾಸ್ತ್ರಜ್ಞ ನಾಜಗಾರ ಗಣೇಶ ಭಟ್ಟರು ಇತ್ಯಾದಿ ಮಹನೀಯರಿಗೆ ಅಭಿವಂದಿಸಿ ವಿರಮಿಸುವೆನು. ನತ್ಯೇಶಾನಂ ಗುಣಾತೀತಂ ಶಂಭುಂಗುಣವತೀಶ್ವರ|ಕರ್ಣಾಟಭಾಷಯಾ ಧರ್ಮಸಿಂಧು ಸಾರಃ ಸುಭಧನಃಗಲಿಖ್ಯತೇ ಬಾಲ ಬೋಧಾಯ ಸುಧಿಯಾ ಶಂಭು ಶರ್ಮಣಾ।। ನಾರಾಯಣ ತನೂಜೇನ ನಾಜಗಾರ ನಿವಾಸಿನಾ|| ೧೯೭೦. ವಿರ್ದಮನು ಶಂಭು ಶರ್ಮಾ, ನಾಜಗಾರ ಮಹತ್ವದ ಕೆಲ ಶುಭ ಸಂದೇಶಗಳು ಶ್ರೀಮತ್ ಸರ್ವಜೇಂದ್ರ ಸರಸ್ವತೀ ಶ್ರೀ ಸ್ವಾಮಿಭಿಃ ಸ್ವರ್ಗವಲ್ಲಿ ನಮ್ಮ ಧರ್ಮಕಾವ್ಯದಲ್ಲಿ ನಿತ್ಯೋಪಯೋಗಿಯಾದ ಸಂಸ್ಕೃತಭಾಷೆಯಲ್ಲಿರುವ ‘ಧರ್ಮಸಿಂಧು’ಗ್ರಂಥವನ್ನು ಕನ್ನಡಿಗ ಪಂಡಿತ ಪಾಮರರಿಗೂ ಸುಖವಾಗಿ ತಿಳಿಯುವಂತೆ ಕನ್ನಡ ಭಾಷೆಯಿಂದ ತಯಾರಿಸಿದ ಶ್ರೀ ನಾಜಗಾರ ಶಂಭುಶಾಸ್ತ್ರಿಗಳ ಪರಿಶ್ರಮವು ಬಹು ಸ್ತುತ್ಯವಿದೆ. ಕನ್ನಡ ಭಾಷೆಯಲ್ಲಿ ರಚಿಸಿದ ಧರ್ಮಸಿಂಧು ಗ್ರಂಥವನ್ನು ಎಲ್ಲವರೂ ಆದರದಿಂದ ಸ್ವೀಕರಿಸಿ ಇವರ ಪರಿಶ್ರಮವನ್ನು ಸಫಲವನ್ನಾಗಿ ಮಾಡಲೆಂದು ಆಶಿಸಲಾಗಿದೆ. ಕೀಲಕ ಸಂದ ಚೈತ್ರ ಶುದ್ದ ೧೫, ರವಿವಾರ ಸರ್ವಜೇಂದ್ರ ಸರಸ್ವತೀಸ್ವಾಮಿ ಸ್ವರ್ನವಲ್ಲಿ ಮಹಾಸಂಸ್ಥಾನ. ೫-೫-೧೯೬೯ ಪ ಪೂ| ಶ್ರೀ ಶ್ರೀಧರ ಸ್ವಾಮಿಗಳಿಂದ ||ಶ್ರೀ ಗುರುಪರಮಾತ್ಮನೇ ನಮಃ|| ||ಶ್ರುತಿಸ್ಮೃತ್ಯುದಿತಂ ಧರ್ಮಮನುಷ್ಯನ್ ಹಿ ಮಾನವ ಇಹಕೀರ್ತಿಮವಾಪೋತಿ ಪ್ರೇತ್ಯನುತ್ತಮಾಂಗತಿ ಶ್ರುತಿಸ್ಮೃತಿಗಳಿಂದ ವಿಧಿಸಲ್ಪಟ್ಟ ಧರ್ಮವನ್ನು ಯಾವಾತನು ನಿಷ್ಠೆಯಿಂದ ಅನುಷ್ಟಿಸುವನೋ ಆತನಿಗೆ ಈ ಲೋಕದಲ್ಲಿ ಎಲ್ಲ ವಿಧದ ಒಳ್ಳೆಯ ಕೀರ್ತಿಯೂ ಉಂಟಾಗಿ ಕೊನೆಯಲ್ಲಿ ಮೇರೆ ಮೀರಿದ ಗತಿಯೆಂದರೆ ನಿರತಿಶಯ ಸುಖಪ್ರಾಪ್ತಿ ರೂಪವಾದ ಮೋಕ್ಷವೂ ಸಿಗುವದು. ||ಜ್ಞಾತ್ವಾಶಾಸ್ತ್ರವಿಧಾನೋಕ್ತಂ ಕರ್ಮಕರ್ತುಮಿಹಾರ್ಹಸಿ|| - ಈ ಭಗವಂತನ ಆಜ್ಞೆಯ ಪ್ರಕಾರ ಶಾಸ್ತ್ರದಿಂದ ಸಾರಲ್ಪಟ್ಟ ವಿಧಿಯನ್ನರಿತು ಕರ್ಮಗಳನ್ನು ಅನುಷ್ಠಿಸುವದಾದರೆ “ಧರ್ಮಸಿಂಧು"ವಿನಂಥ ಗ್ರಂಥವು ಬಹಳ ಉಪಕಾರಕವಾದದ್ದು. ಈ “ಧರ್ಮಸಿಂಧು"ವೆಂಬ ಗ್ರಂಥವು ಮೊಟ್ಟ ಮೊದಲು ಶ್ರೀ ಕಾಶೀನಾಥ ಪಂಡಿತರಿಂದ ಸಂಸ್ಕೃತದಲ್ಲಿ ಅವತಾರತಾಳಿತು. ಅದೀಗ ಪ್ರಾಕೃತ ಭಾಷೆಯ ಜನರಿಗಾಗಿ ಕನಿಕರಗೊಂಡು “ಶ್ರೀ ಶಂಭುಶರ್ಮಾ ನಾಜಗಾರ ಶಾಸ್ತ್ರಿಗಳಿಂದ ಕನ್ನಡಭಾಷೆಯಲ್ಲಿಯೇ ಅವತಾರತಾಳಿರುವದು. ಧರ್ಮಸಿಂಧುವಿನ ವಿಚಾರವನ್ನು ಸುಲಭ ಕನ್ನಡ ಭಾಷೆಯಲ್ಲಿ ತಿಳಿಸಲೋಸುಗ ಮಾಡಿರುವ ಈ ಭಾಷಾಂತರ ಗ್ರಂಥರೂಪದಿಂದ ಶಾಸ್ತ್ರಿಗಳು ಮನೆ-ಮನೆಯಲ್ಲಿ ವಾಸಿಸುವರೆಂಬುದಕ್ಕೆ ಸಂದೇಹವಿಲ್ಲ. ಸಂಸ್ಕೃತಜ್ಞರಲ್ಲಿ ಶ್ರೀ ಕಾಶೀನಾಥ ಪಂಡಿತರು ತಮ್ಮ ಕೀರ್ತಿದೇಹದಿಂದ ಅಜರಾಮರರಾಗಿರುವಂತೆ ಕನ್ನಡಿಗರಲ್ಲಿ ತಮ್ಮ ಕೀರ್ತಿದೇಹದಿಂದ ಶ್ರೀ ಶಂಭುಶರ್ಮಾ ನಾಜಗಾರ ಶಾಸ್ತ್ರಿಗಳೂ ಸಹ ಅಜರಾಮರರಾಗಿ ಬಾಳುವರು. ಇವರ ಈ ಸ್ತುತ್ಯಕೃತಿಯು ಧರ್ಮಮಾರ್ಗದರ್ಶನವನ್ನು ಮಾಡುತ್ತ ಚಿರಂಜೀವಿಯಾಗಲೆಂದು ಧರ್ಮಪ್ರಭುವಾದ ಭಗವಂತನ ಚರಣಕಮಲಗಳಲ್ಲಿ ನನ್ನ ಅನನ್ಯ ಪ್ರಾರ್ಥನೆ. ಸನಾತನ ವಿವೇಕ ಆರ್ಯಧರ್ಮದ ಯಶೋದುಂದುಭಿಯು ವಿಶ್ವದ ಎಲ್ಲೆಡೆಯಲ್ಲಿಯೂ ಮೊಳಗುತ್ತಿರಲಿ. ಶ್ರೀಧರಾಶ್ರಮ ಸೌಸಂ ಭಾಪೂರ್ಣಿಮಾ ಗುರುವಾರ ಸರ್ವಜನಾಃ ಸುಖಿನೋಭವಂತು ಇತಿ ಶಿವಂ. ಶ್ರೀ ಶ್ರೀಧರಸ್ವಾಮಿ ಶ್ರೀಕ್ಷೇತ್ರ- ವರದಪುರ ಗಣಪತಿಭಟ್ಟ ಹಾಸಣಗಿ ನಿಮ್ಮ ಧರ್ಮಸಿಂಧು ಪ್ರಕಟನೆಯ ಸಾಹಸ ನೋಡಿ, ಅದೂ ಈ ವಯಸ್ಸಿನಲ್ಲಿ ತುಂಬಾ ಸಂತೋಷಪಟ್ಟೆ, ಸರ್ವಶಕ್ತನಾದ ಭಗವಂತನು ನಿಮಗೆ ಮಂಗಲಮಾಡಲಿ. ತಾ.೧೩-೮-೧೯೬೮ ನಿಮ್ಮವ, ಗಣಪತಿಭಟ್ಟ, ಹಾಸಣಗಿ, ಕೇಶವ ರಾಮಕೃಷ್ಣ ಹೆಗಡೆ ಧರ್ಮಶಾಸ್ತ್ರವೆಂಬುದೊಂದು ವೈದಿಕ ಕಲ್ಪವೃಕ್ಷ, ಸಂಸ್ಕೃತವನ್ನರಿಯದ ನಮ್ಮ ಕರ್ಣಾಟಕ ಬಾಂಧವರಿಗೆ ಕನ್ನಡಿಸಿದ ವಿದ್ವಾನ್ ನಾಜಗಾರ ಶಂಭು ಶಾಸ್ತ್ರಿಗಳು ನಮ್ಮ ಕರ್ಣಾಟಕಕ್ಕೆ ಅಭಿನಂದನಾರ್ಹರು. ಸೌಮ್ಯ ಸಂ|ಕಾ|ಶು। ೧, ಸೋಮವಾರ ಕೇರಾಹೆಗಡೆ, ಓಕೇರಿ, ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಸಿರ್ಸಿ, ನಿಮ್ಮ ಶೃಂಗಾರ ಮಂಟಪದ ವತಿಯಿಂದ ಪ್ರಕಟಿಸುವ ಧರ್ಮಸಿಂಧು ಮೂಲಕ ನಮ್ಮ ಸಂಸ್ಕೃತಿಯ ದರ್ಶನವು ಸಾಮಾನ್ಯರಿಗೂ ಸುಲಭಸಾಧ್ಯವಾಗುವಂತೆ ಮಾಡುವ ಈ ಪರಿಶ್ರಮವು ಸಾರ್ಥಕವಾಗಲಿ, ಜನಪ್ರಿಯವಾಗಲಿ ಎಂದು ಹಾರ್ದಿಕವಾಗಿ ಹಾರೈಸುತ್ತೇವೆ. ಡಾ|ಟಿ.ಎಂ.ಎ. ಪೈ ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ. “ಧರ್ಮಸಿಂಧು"ವಿನಂಥ ಧಾರ್ಮಿಕ ಗ್ರಂಥವನ್ನು ಬಹುಪ್ರಯತ್ನದಿಂದ ನೀವು ಪ್ರಕಟಿಸುವದು ನನಗೆ ತುಂಬ ಸಂತೋಷವನ್ನುಂಟುಮಾಡಿತು. ಈ ಗ್ರಂಥವು ಹಿಂದೂ ಧರ್ಮಶಾಸ್ತ್ರದ ಕುರಿತು ವಿವರವಾದ ಸಂಗತಿಗಳನ್ನೊಳಗೊಂಡಿದ್ದು ನಮ್ಮ ಸಂಸ್ಕೃತಿಗೇ ಒಂದು ಆಧಾರಸ್ತಂಭದಂತಿದೆ. ಇಂಥ ಒಂದು ಕೃತಿಯು ಆದಷ್ಟು ಬೇಗ ಪ್ರಕಟವಾಗುವದನ್ನು ನಿರೀಕ್ಷಿಸುತ್ತೇನೆ. ತಮ್ಮ ನಂಬುಗೆಯ ಡಾ| ಟಿ.ಎಂ. ಎ.ಪೈ. ರಜಿಸ್ಟ್ರಾರ್ ಮಣಿಪಾಲ ಮೈಸೂರು.8 ಸದೇಹಸಾತ್ವಿಕತೆಯ ವಿದ್ವನ್ಮಣಿ ಶಾಸ್ತ್ರಿಗಳು ( ಜಿ.ಆರ್. ಪಾಂಡೇಶ್ವರ ) ಕಬ್ಬಿನ ಕೋಲನ್ನು ಎಲ್ಲಿ ಕಚ್ಚಿದರೂ ಅದು ಸಿಹಿಯಾಗಿರುತ್ತದೆ. ಹಾಗೆಯ ವಿದ್ವನ್ಮಣಿಗಳಾದ ನಾಜಗಾರ ಶಂಭುಶಾಸ್ತ್ರಿಗಳ ಮನಸ್ಸು, ಮಾತು, ಮಾಟ (ನಡೆ) ಈ ಮೂರ ಕರಣಗಳು ಯಾವುದರಲ್ಲಿ ಹೊಕ್ಕರೂ ಅಲ್ಲಿ ಧಾರ್ಮಿಕತೆ, ಸಾತ್ವಿಕತೆ ಥಳಥಳಿಸುತ್ತವೆ. ಅವರ-ನನ್ನ ಸ್ನೇಹಸೌಮನಸ್ಯದ ಮೊಳಕೆಯೊಡೆದು ಇಂದಿಗೆ ೪೦ ವರ್ಷಗಳಾಗಿವೆ. ಹಿಂ ಬೆಟ್ಟದಸಾಲು, ಮುಂದೆ ಶಾಲಿಯ ಬಯಲು, ಸುತ್ತಮುತ್ತ ತೆಂಗು ಕೌಂಗುಗಳ ಹಸಿರು ಹೊದಿ ಇದ್ದ ಸುಂದರವಾದ ಹಳೆಯ ಹಳ್ಳಿ ಮುತ್ತೈದೆ ನಾಜಗಾರದಲ್ಲಿ ಅವರನ್ನು ನಾನು ೧೯೩೦ರ ಚಳಿಗಾಲು ಒಂದು ಮುಂಜಾನೆ ಕಣ್ಣುಂಬ ಕಂಡೆ! ಮೂವತ್ತು ವರ್ಷದ ತುಂಬು ಕನ್ನೆ, ಹೊಳೆವ ಕಣ್ಣು ವಿಶಾಲ ಫಾಲದ ಅವರ ದೇಹಯಷ್ಟಿ, ವೈದಿಕ ಜೀವನದ ರಸಘಟ್ಟಯಂತೆ ಸುಂದರವೂ ಸುದೃಢವ ಆಗಿತ್ತು. ಈಗ ಯಕ್ಷಗಾನ ಕಲಾಕ್ಷೇತ್ರದಲ್ಲಿ ಅನುಪಮ ಶ್ರೀಮಂತಿಕೆ ಗಳಿಸಿದ (ಅವರ ಪತ್ನಿಯ ಅಣ್ಣ) ಶ್ರೀ ಕೆರೆಮನೆ ಶಿವರಾಮ ಹೆಗಡೆಯವರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದವರು ಶ್ರೀ ಹೆಗಡೆಯವರು ಆಗಿನ್ನೂ ಯಕ್ಷಗಾನ ಬಯಲಾಟದ ಭೂಮಿಗೆ ಇಳಿದಿಲ್ಲವಾಗಿತ್ತೋ ಏನೋ ಆದರೆ ಅವರ ಆತಿಥ್ಯವನ್ನು ಒಂದೇ ದಿನ ಸವಿಯುತ್ತಿದ್ದಂತೆ ಅವರ ನನ್ನ ಮಾತುಕತೆಯಲ್ಲಿ ಕಲೆಯ ವಿಷಯ ತುಂಬಿಕೊಂಡಿತ್ತು. ಶ್ರೀ ಶಂಭುಶಾಸ್ತ್ರಿಗಳು ಅಂದು ಅವಿಭಕ್ತ ಕುಟುಂಬಿಗಳಾಗಿದ್ದರು. ಆಗಲೇ ಅವರು ಗಟ್ಟ ಮೇಲಣ ಸೀಮೆಗಳಲ್ಲೂ, ಕಡರದ ಹಳ್ಳಿಗಳಲ್ಲೂ ತಮ್ಮ ಧಾರ್ಮಿಕ ಪ್ರವಚನಗಳಿಂದ ಶುಭ್ರವಾಗಿ ಕೀರ್ತಿಯನ್ನು ಗಳಿಸಿದ್ದರು. ಕುಮಟೆಯಿಂದ ಹೊರಡುತ್ತಿದ್ದ “ಕಾನಡಾ ಧುರೀಣ ಪತ್ರಿಕೆಯಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದು, ಅದರಲ್ಲಿ ನನ್ನವೂ ಬರುತ್ತಿದ್ದುದರಿಂದ ನಾವಿಬ್ಬರು ಒಂದೇ ಗರಡಿಯ ಸಾಧಕರಾಗಿ ಪರಸ್ಪರ ಪರಿಚಿತರಾಗಿದ್ದವು. ಅಂದು ಶಾಸ್ತ್ರಿಯವರ ನೆರೆಯಲ್ಲೇ ಅವರಿಗಿಂತ ತುಸು ಹಿರಿಯರಾದ ಪ್ರವಚನ ಪಟ ಸಂಸ್ಕೃತವಿದ್ಯಾ ವಿಭೂಷಣ ಶ್ರೀ ಗಣೇಶಭಟ್ಟರದೂ ದರ್ಶನವಾಯಿತು. ಸಾತ್ವಿಕ ಷಡ್ರ ಭೋಜನಾಯ್ಕು ವಚಾರದ ನಂತರ ನಾವು ಮನೆಯ ಹಿಂದಣ ಹೆಸರು ಹೊದ್ದ ಗುಡ್ಡವೇ ಸಮುದ್ರರಾಜನ ವೈಭವವನ್ನೂ, ಪೂರ್ವದಿಕ್ಕಿನ ಸಹ್ಯಾದ್ರಿಯ ಸಸ್ಯಶ್ಯಾಮಲ ಭೀಷ ಸೌಂದರ್ಯವನ್ನೂ ನೋಡಿ ನೋಡಿ ನಲಿದೆವು. ಪ್ರಾಚೀನ ಗುರುಕುಲ ಜೀವನವನ್ನು ನೆನೆ ನೆನೆದ ಪುಲಕಿತರಾದವು. ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಮೊದಲಾದವುಗಳ ಬಗ್ಗೆ ಬಗೆದುಂಬ ಸಂಭಾಷಿಸಿದೆವು. ಅಂದಿನಿಂದ ಇಂದಿನವರೆಗಿನ ಈ ೪೦ ವರ್ಷವೂ ನಾವು ಅದೇ ಮಧುರವಾದ, ನಿರ್ಮಲವಾದ ಸ್ನೇಹ ಸೌಮನಸ್ಯದವರಾಗಿರುವವು. ಶಾಸ್ತ್ರಿಗಳ ಸಂಸ್ಕೃತ ಪಾಂಡಿತ್ಯವೂ, ಆ ರಸಾಮೃತವನ್ನು ತಮ್ಮ ಸುತ್ತು ಮುತ್ತಿನ ಸಕಲ ಸಮಾಜಗಳಿಗೂ ಉದಾರವಾಗಿ ಉಣಿಸಬೇಕೆಂಬ ಅವರ ಬಯಕೆಯೂ ಈಗ ಈ “ಧರ್ಮಸಿಂಧು” ಬೃಹದ್ಗಂಥದಿಂದಾಗುವದು, ಅವರ ಜೀವನದ ಒಂದು ಅಜರಾಮರ ಸಿದ್ದಿ ಎನ್ನಬಹುದು. ನಮ್ಮ ನಾಡಿನಲ್ಲಿ ಇಂತಹ ಸಾತ್ವಿಕ ಜೀವನದ ವಿದ್ವನ್ಮಣಿಗಳು ತೀರ ವಿರಳ. ಶಾಸ್ತ್ರಿಗಳಿಗೆ ನನ್ನ ಭಕ್ತಿಗೌರವದ ಪ್ರಣಾಮಗಳು- ಶ್ರೀಪಾದ ಹೆಗಡೆ, ಕಡವೆ ಶ್ರೀ ಶಂಭು ಶರ್ಮಾ ನಾಜಗಾರ ಇವರು ‘ಧರ್ಮಸಿಂಧು’ ಗ್ರಂಥವನ್ನು ಕನ್ನಡಿಗರ ಕೈಗೆ ಕೊಡುತ್ತಿರುವ ಸಂಗತಿ ನಿಜವಾಗಿಯೂ ಸ್ತುತ್ಯವಾದದ್ದು. ಶ್ರೀ ಶಾಸ್ತ್ರಿಯವರು ಈಗಾಗಲೇ ಹಲವು ಜ್ಯೋತಿಷ ಗ್ರಂಥಗಳನ್ನು ಮತ್ತು ಪ್ರಯೋಗ ಗ್ರಂಥಗಳನ್ನು ಕನ್ನಡಿಸಿ ಜನಪ್ರಿಯರಾಗಿದ್ದಾರೆ. ಅವರ ಈ ಸಾಹಸಕಾರವನ್ನು ಕನ್ನಡಿಗರು ಸ್ವಾಗತಿಸಿ ಸನ್ಮಾನಿಸಲೆಂದು ಹಾರ್ದಿಕವಾಗಿ ಹಾರೈಸುತ್ತೇನೆ. ಶ್ರೀಪಾದ ಹೆಗಡೆ ಸಿರ್ಸಿ ತಾ. ೧೩-೪-೧೯೬೮ ಕಡವೆ. ಧರ್ಮಸಿಂಧು ವಿಷಯಾನುಕ್ರಮಣಿಕೆ ಧರ್ಮಸಿಂಧುಕಾರರು-ಮೂರನೇ ಪರಿಚ್ಛೇದದ ಕೊನೆಯಲ್ಲಿ “ಗ್ರಂಥಪಸಂಹಾರ"ವೆಂಬ ಶ್ಲೋಕಾತ್ಮಕ ಹೇಳಿಕೆಯನ್ನು ಕೊಟ್ಟಿರುವರು. ಅದರಲ್ಲಿ ಮೊದಲಿನ ಒಂಭತ್ತು ಶ್ಲೋಕಗಳು ಸಾಮಾನ್ಯ ಗ್ರಂಥದ ಅನುಕ್ರಮಣಿಕೆಯೇ ಆಗಿದೆ. ಕಾರಣ ಅದನ್ನು ಪ್ರಾರಂಭದಲ್ಲಿ ಸೇರಿಸಿರುವೆನು. ಮುಂದೆ ಕಾಶೀನಾಥೋಪಾಧ್ಯಾಯರ ವಂಶನಿರೂಪಣೆಯಿರುವದರಿಂದ ಅವುಗಳನ್ನು ಗ್ರಂಥದ ಕೊನೆಗ ಬರೆದಿರುವನು. (ಲೇ.) ಪ್ರಥಮೇತ್ರಪರಿಚ್ಛೇದೇ ಕಾಲಖಾಮಾನ್ಯ ನಿರ್ಣಯ: | ದ್ವಿತೀಯೇಥಪರಿಚ್ಛೇದೇ ವಿಶೇಷಾತ್ಕಾಲ ನಿರ್ಣಯಃ || ಮೊದಲನೆಯ ಪರಿಚ್ಛೇದದಲ್ಲಿ ಸಾಮಾನ್ಯ ಕಾಲನಿರ್ಣಯವನ್ನು ಹೇಳಿ ದ್ವಿತೀಯ ಪರಿಚ್ಛೇದದಲ್ಲಿ ವಿಶೇಷ ಕಾಲನಿರ್ಣಯವನ್ನು ಹೇಳಲಾಗಿದೆ. ತೃತೀಯಸ್ಕ ಚ ಪೂರ್ವಾರ್ಧ ಗರ್ಭಾಧಾನಾದಿ ಸಂಸ್ಥೆಯಾಃ | ಅಗ್ನಿಕಂ ಚ ಪ್ರಕೀಣಾರ್ಥಾ ಆಧಾನಾದ್ಯಾ: ಸವಿಸ್ತರಾಃ || ತೃತೀಯವರಿಚ್ಛೇದದ ಪೂರ್ವಾರ್ಧದಲ್ಲಿ ಗರ್ಭಾಧಾನಾದಿ ಸಂಸ್ಕಾರ, ಆ ಕಪ್ರಕರಣ, ಪ್ರಕೀರ್ಣ ವಿಷಯ, ಆಧಾನಾದಿ ಕಾರ್ಯ ಇವುಗಳನ್ನು ಸವಿಸ್ತರವಾಗಿ ಹೇಳಲಾಗಿದೆ. ದೇವಪ್ರತಿಷ್ಠಾ ಶಾಂತ್ಯಾದಿ ನಿತ್ಯಂ ನೈಮಿತ್ತಿಕಂ ತಥಾ | ತಾರ್ತಿಯಿಕೋತ್ತರಾರ್ಧSಸ್ಮಿನ್ ಜೀವತ್ರಕ ನಿರ್ಣಯ: || ಶ್ರಾದ್ಧಾಧಿಕಾರ ಕಾಲಾದೇರ್ನಿಣ್ರಯ: ಶ್ರಾದ್ಧಪದ್ಧತಿಃ | ಸೂತಕಾದೇರ್ನಿಣ್ರಯಶ್ಚ ನಿರ್ಣಯೋ ದುರ್ಮತಾವಪಿ ಅಂತಸಂಸ್ಕಾರವಿಧಿ: ಸಂನ್ಯಾಸ ಸಹವಿಸ್ತರಃ| ಪ್ರಾಯಶ್ಚಿ೦ ವ್ಯವಹೃತಿಂ ಸಮದಾನದಿಂ ವಿನಾ || ಕೃಷ್ಣಪಿ ಧರ್ಮಶಾಸ್ತ್ರಾರ್ಥ: ಸಂಕ್ಷೇಪಣಾತ್ರನಿರ್ಮಿತಃ| ವಿಬುಧಾನಾಂ ಚ ಬಾಲಾನಾಂ ತುಷ್ಟಯೇಕಹಾನಯ ಹಾಗೆಯೇ ದೇವಪ್ರತಿಷ್ಠೆ, ಶಾಂತ್ಯಾದಿಗಳು ಮತ್ತು ನಿತ್ಯ ನೈಮಿತ್ತಿಕ ಕೃತ್ಯಗಳು ಹೇಳಲ್ಪಟ್ಟಿವೆ. ತೃತೀಯ ಪರಿಚ್ಛೇದದ ಉತ್ತರಾರ್ಧದಲ್ಲಿ “ಜೀವತೃಕನಿರ್ಣಯ” (ಬದುಕಿರುವ ತಂದೆಯುಳ್ಳವನ ವಿಷಯ) ಶ್ರಾದ್ಧ ಅಧಿಕಾರಗಳು, ಮತ್ತು ಕಾಲಗಳು, ಶ್ರಾದ್ಧಪದ್ಧತಿ, ಸೂತಕಾದಿನಿರ್ಣಯ, ದುರ್ಮರಣ ವಿಚಾರ, ಅಂತ್ಯೇಷ್ಟಿ ಸಂಸ್ಕಾರವಿಧಾನ, ಸವಿಸ್ತರ ಸಂನ್ಯಾಸವಿಧಿ, ಪ್ರಾಯಶ್ಚಿತ್ತ, ವ್ಯವಹಾರ, ಸರ್ವದಾನ ಇವುಗಳನ್ನು ಹೇಳಲಾಗಿದೆ. ದಾನದ ವಿಧಾನವನ್ನು ಬಿಡಲಾಗಿದೆ. ಅಂತೂ ಈ ನಿಬಂಧದಲ್ಲಿ ಎಲ್ಲ ಧರ್ಮಶಾಸ್ತ್ರ ವಿಷಯಗಳನ್ನು ಸಂಕ್ಷೇಪವಾಗಿ ಹೇಳಲಾಗಿದೆ. ಇದರಿಂದ ತಿಳಿದವರಿಗೆ ಆನಂದ, ತಿಳಿಯದವರಿಗೆ ಸುಲಭಸಾಧನವಾಗುವಂತಿದೆ. ಮೂಲಭೂತಾನಿ ಪದ್ಯಾನಿ ವಿಕೃತಾನಿಚಿಟ್ | ನಿರ್ವಿಕಾರಾಣ್ಯಪಿ ನವಾನ್ಯಪುಕಾನೃತಕಾನಿಜ್ | ಕೆಲ ಮೂಲಭೂತ ವಚನಗಳನ್ನು ಕೆಲ ಕಡೆಯಲ್ಲಿ ವಿಕೃತಗೊಳಿಸಲಾಗಿದೆ. ಕೆಲಕಡೆ ಇದ್ದ ಹಾಗೇ ಹೇಳಲಾಗಿದೆ. ಕೆಲ ಕಡೆಯಲ್ಲಿ ನೂತನ ಪದ್ಯಗಳನ್ನೂ ರಚಿಸಿ ಹೇಳಲಾಗಿದೆ. ಮೀಮಾಂಸಾಧರ್ಮಶಾಸ್ತ್ರಜ್ಞಾ ಸುಧಿಯೋನಲಸಾಬುಧಾ ಕೃತಕಾರ್ಯಾ ಪ್ರಾಡ್ಜ್‌ ಬಂಧಿಸದರ್ಥರಿನಾಯಮುದ್ರಮ: || ಯೇಪುನರ್ಮಂದಮತಯೋ ಲಸಾ ಅಜ್ಞಾತ್ಮ ನಿರ್ಣಯಂ ಧರ್ಮವೇದಿತುಮಿಚ್ಛಂತಿ ರುದಪೇಕ್ಷಯಾ ಮೀಮಾಂಸಾ, ಧರ್ಮಶಾಸ್ತ್ರ ಇತ್ಯಾದಿಗಳನ್ನು ತಿಳಿದಿರುವ ಆಲಸ್ಕರಹಿತರಾದ ವಿದ್ವಜ್ಜನರು ಪೂರ್ವನಿಬಂಧಗಳಿಂದಲೇ ಕೃತಕೃತ್ಯರಾಗುವರಾದ್ದರಿಂದ ಅವರ ಸಲುವಾಗಿ ಈ ಪ್ರಯತ್ನವಿಲ್ಲ. ಸಂಸ್ಕೃತ ಭಾಷೆಯನ್ನರಿಯದ ಜನರು ಧರ್ಮವಿಷಯದಲ್ಲಿ ನಿರ್ಣಯವನ್ನಪೇಕ್ಷಿಸಿದಾಗ ಅವರಿಗೆ ಇದು ಉಪಯೋಗವಾಗುವದೆಂದು ತಿಳಿದು ಇದನ್ನು ರಚಿಸಲಾಗಿದೆ. ವಿವರ ವಿಷಯಾನುಕ್ರಮ ಪ್ರಥಮ ಪರಿಚ್ಛೇದ ಮಂಗಲಾಚರಣ ವಿಷಯಾನುಕ್ರಮಣಿಕೆ ಪುಟ ವಿಷಯಾನುಕ್ರಮ ಕರ್ಮವಿಶೇಷದಲ್ಲಿ ನಿರ್ಣಯ ಸ್ವತಂತ್ರ ಕರ್ಮಗಳ ನಿರ್ಣಯ ೧ ಏಕಭಕ್ತಾದಿಗಳ ಸ್ವರೂಪ ಕಾಲವು ಆರು ವಿಧ ೨ |ಏಕಭಕ್ತ ನಿರ್ಣಯ ಸಂವತ್ಸರವು ಐದು ವಿಧ ಅಯನವು ಎರಡು ವಿಧ ೨ | ನಕ್ತ ನಿರ್ಣಯ ಅಯಾಚಿತ ನಿರ್ಣಯ ಪುಟ 00 00 ೧೧ GU GO ಋತುವು ಎರಡು ವಿಧ ಮಾಸವು ನಾಲ್ಕು ವಿಧ ಚಾಂದ್ರಾದಿ ಮಾಸಗಳು ಉಪವಾಸ ನಿರ್ಣಯ ೨ ವ್ರತ ಪರಿಭಾಷೆ ೧೩ ದಾನ ಸ್ವರೂಪ ೧೩ ಸಂಕ್ರಾಂತಿ ನಿರ್ಣಯ ಸಂಕ್ರಾಂತಿ ಪುಣ್ಯಕಾಲ ಏಕಭಕ್ತದಲ್ಲಿ ವಿಶೇಷ ೧೩ ೩ ನಕ್ತದಲ್ಲಿ ವಿಶೇಷ ೧೩ ಸಂಕ್ರಾಂತಿಗಳಲ್ಲಿ ದಾನ ೪ ಅಯಾಚಿತದಲ್ಲಿ ವಿಶೇಷ ಅಯನಾಂಶ ವಿಷಯ ಮಂಗಲ ಕಾರ್ಯಗಳಿಗೆ ಸಂಕ್ರಾಂತಿ ತ್ಯಾಜ್ಯ ಘಟ ಮಲಮಾರ ಅಧಿಕಮಾಸದ ಉದಾಹರಣ ಕ್ಷಯಮಾಸದ ವಿವರ ಅವರಲ್ಲಿ ವರ್ಜ-ಅವ ನಿರ್ಣಯ ಮಲಮಾಸದಲ್ಲಿ ಪ್ರಥಮಾಬ್ರಿಕ ಶ್ರಾದ್ಧಾದಿ ವಿಚಾರ ವ್ರತಾದಿ ಕರ್ತೃಪ್ರತಿನಿಧಿ ವ್ರತಾದಿಗಳಲ್ಲಿ ಸೂತಕ ಪ್ರಾಪ್ತಿ, ಸ್ತ್ರೀಯರ ರಜೋದೋಷ ಪ್ರಾಪ್ತಿ, ಜ್ವರಾದಿ ಅವತ್ತು ಬಂದಾಗ ಉಪವಾಸ, ಪಾರಣ, ಏಕಭಕ್ತಾದಿ ಒಂದೇ ದಿನ ಬಂದಲ್ಲಿ ನಿರ್ಣಯ ವ್ರತಪರಿಭಾಷೆ ಹವಿಷ್ಯಗಣ ವಿಚಾರ ೧೪ ೧೫ ೧೫ 2 ಪ್ರತಿಪದಿ ನಿರ್ಣಯ ಮಲಮಾಸದಲ್ಲಿ ವರ್ಜಗಳು ದ್ವಿತೀಯಾ ನಿರ್ಣಯ ೧೭ ಗುರು-ಶುಕ್ರಾಸ್ತ್ರ ಸಿಂಹಸ್ವಗುರು ತೃತೀಯಾ ನಿರ್ಣಯ 02 ಇವುಗಳಲ್ಲಿ ವರ್ಜಗಳು ಚತುರ್ಥಿ ನಿರ್ಣಯ 02 ಸಿಂಹಸ್ತ ಗುರು ಅಪವಾದ ವೇಧವಾದರೂ ಎರಡು ವಿಧ ಪಂಚಮೀ ನಿರ್ಣಯ ೧೮ ತಿಥಿನಿರ್ಣಯದಲ್ಲಿ ಸಾಮಾನ್ಯ ಪರಿಭಾಷೆ ಷಷ್ಠಿ ನಿರ್ಣಯ ೧೮ ೯ ಸಪ್ತಮೀ ನಿರ್ಣಯ ೧೮ ಯುಗ ವಾಕ್ಯ ನಿರ್ಣಯ OU ಅಷ್ಟಮೀ ನಿರ್ಣಯ ೧೮ XV ನವಮಿ ನಿರ್ಣಯ ຊ ದಶಮಿ ನಿರ್ಣಯ ೧೯ ΩΣ ಇಷ್ಟಿಕಾಲ ಏಕಾದಶೀ ನಿರ್ಣಯ ೧೯ ಸರ್ವ ಪ್ರತಿಪದಿಗಳ ಸಂಧಿ ನಿರ್ಣಯ ೨೯ ಸಂಧಿಯು ನಾಲ್ಕು ವಿಧ ೨೯ ಏಕಾದಶೀ ಅಧಿಕಾರಿ ನಿರ್ಣಯ ವ್ರತಾದಿ ನಿರ್ಣಯ ೨೦ |ಅಜ್ಜರ ಬೋಧಕ್ಕಾಗಿ ಸಂಧಿಯನ್ನು ಅನ್ಯ ರೀತಿಯಿಂದ ಹೇಳಿದ ವಿವರ ೨೯ ವೇಧವು ಎರಡು ವಿಧ ೨೧ ಕೌಸ್ತುಭಾದಿಗಳ ಮತ ೨೯ ಏಕಾದಶಿಯು ಎರಡು ವಿಧ ೨೧ ಹುಣ್ಣಿವೆಯಲ್ಲಿ ಅನ್ನಾಧಾನ ೩೦ ಭಾಗವತೈಕಾದಶೀ ಉದಾಹರಣ ೨೨ ಪಾರ್ವಣ ಸ್ಥಾಲೀಪಾಕ ನಿರ್ಣಯ 20 ಸ್ಮಾರ್ತೃಕಾದಶೀ ಉದಾಹರಣ ೨೨ ಅಮಾವಾಸೆಯಲ್ಲಿ ಕಾತೀಯರಿಗೆ ವಿಶೇಷ ೩೨ ವೈಷ್ಣವರ ಶುದೈಕಾದಶೀ ಭೇದ ೨೨ ಅಪರಾಹ್ನ ಸಂಧಿಯಲ್ಲಿ ನಾಲ್ಕು ಪಕ್ಷ ೩೨ ವೈಷ್ಣವರ ವಿದ್ಯೆಕಾದಶೀ ಭೇದ ೨೨ ಸಾಮಗರ ಇಷ್ಟಿ ನಿರ್ಣಯ 24 ಸ್ಮಾರ್ತರ ಶುದ್ಧಕಾದಶೀ ಭೇದ ೨೨ ಪಿಂಡಪಿತೃಯಜ್ಞ ಕಾಲ ೩೪ ಸ್ಮಾರ್ತರ ವಿದ್ವಕಾದಶೀ ಭೇದ ೨೨ ಶ್ರಾದ್ಧದಲ್ಲಿ ಅಮಾವಾಸ ನಿರ್ಣಯ ೩೪ ವೈಷ್ಣವರ ವ್ರತದಿನ ನಿರ್ಣಯ ಅನ್ಯಮತ 2,99 ಸ್ಮಾರ್ತರ ನಿರ್ಣಯ ೨೩ ಇಷ್ಟಾದಿ ಪ್ರಾರಂಭ ನಿರ್ಣಯ ೩೬ ವೇಧಗಳ ಸೌಜ್ಜಾಭೇದಗಳು ೨೪ ವಿಕೃತಿ ಕಾಲ ೩೬ ವ್ರತ ಪ್ರಯೋಗ ೨೪ ಪಶುಯಾಗ ಕಾಲ ೩೬ ಅದರಲ್ಲಿ ನಿಯಮ ೨೪ ಚಾತುರ್ಮಾಸ್ಯಕಾಲ at ಏಕಾದಶಿಯಲ್ಲಿ ನಿಯಮ ಉಪವಾಸದಲ್ಲಿ ೨೪ |ಕಾಮ್ಯನೈಮಿತ್ತಿಕಾದಿ ಇಷ್ಟಿ ನಿರ್ಣಯ ೩೭ ಅನ್ನಾಧಾನ ಕಾಲ 26 ಎಂಟು ಮಹಾದ್ವಾದಶಿಗಳು ಶ್ರಾದ್ಧಾದಿಗಳು ಪ್ರಾಪ್ತವಾದಲ್ಲಿ ನಿರ್ಣಯ ಕಾಮೋಪವಾಸದಲ್ಲಿ ಸೂತಕ ಪ್ರಾಪ್ತವಾದರೆ ನಿರ್ಣಯ ಪಾರಣಾ ವಿಚಾರ ದ್ವಾದಶೀ ನಿರ್ಣಯ ತ್ರಯೋದಶೀ ನಿರ್ಣಯ ಗ್ರಹಣ ನಿರ್ಣಯ ೨೫ ಗ್ರಹಣ ಪುಣ್ಯಕಾಲ ೩೯ ಸ್ನಾನ ನಿರ್ಣಯ ಚೂಡಾಮಣಿಯೋಗ ೩೯ ೨೫ |ದಾನ-ಪಾತ್ರಾದಿ ವಿಚಾರ 2.6 ೨೬ ಬ್ರಾಹ್ಮಣವ್ಯಬ ಹೆಸರಿಗೆ 92 ಬ್ರಾಹ್ಮಣ) ಮೊದಲಾದವರಿಗೆ ದಾನ ಫಲ ೨೮ ಮಂತ್ರೋಪದೇಶಾದಿ ವಿಚಾರ ೩೯ ಚತುರ್ದಶೀ ನಿರ್ಣಯ ೨೮ ಪುರಶ್ಚರಣ ಕ್ರಮ ಹುಣ್ಣಿವೆ-ಅಮಾವಾಸ್ಯೆ ನಿರ್ಣಯ ೨೮ ಗ್ರಹಣದಲ್ಲಿ ತ್ಯಾಜ್ಯಗಳು ೪೧ ಸೋಮವತೀ ವ್ರತ ನಿರ್ಣಯ ೨೯ ಗ್ರಹಣ ವೇಧ ವಿಚಾರ ಯತಿಗಳ ಕ್ಷೌರಾದಿ ನಿರ್ಣಯ ೨೯ ಗ್ರಸ್ತಾಸ್ತಾದಿಗಳಲ್ಲಿ ನಿರ್ಣಯ ೪೨ XVI ೪೩ ಅಕ್ಷಯ ತೃತೀಯಾ ಉದಕುಂಭದಾನ ಗ್ರಹಣದಲ್ಲಿ ಬಿಂಬದಾನ ವಿಧಿ ಮಂಗಲಗಳಲ್ಲಿ ವರ್ಜ ದಿನಗಳು ೪೩ ಸಮುದ್ರಸ್ನಾನ ನಿರ್ಣಯ ತಿಥಿ ವಿಶೇಷದಲ್ಲಿ-ನಕ್ಷತ್ರ ವಿಶೇಷದಲ್ಲಿ ವಾರಾದಿಗಳಲ್ಲಿ ವಿಧಿ ನಿಷೇಧಗಳು ದ್ವಿತೀಯ ಪರಿಚ್ಛೇದ ಚೈತ್ರಮಾಸ ಕೃತ್ಯಗಳು ವತ್ಸರಾರಂಭ ನಿರ್ಣಯ ಪ್ರಪಾ-ಉದಕುಂಭದಾನ ಕಲ್ಪಾದಿಗಳು ಚಂದ್ರವ್ರತ ದಮನಕದಿಂದ ಗೌರೀ ಪೂಜೆ ಮಾದಿ ನಿರ್ಣಯ ಷಣ್ಣವತಿ ಶ್ರಾಸ್ತ್ರಗಳು ಆಂದೋಲನವ್ರತ ದಶಾವತಾರ ನಿರ್ಣಯ ದಮನಕಾರೋಪಣಾದಿ ವಿಚಾರ ಪರಶುರಾಮ ಜಯಂತೀ na ನೃಸಿಂಹ ಜಯಂತೀ ವ್ರತ ಪ್ರಯೋಗ ೫೫ ತಿಲ-ಅಜದಾನಾದಿ ದಾನ ೪೪ ವೈಶಾಖಸ್ನಾನೋದ್ಯಾಪನ ಜೇಷ್ಠ ಮಾಸ ಕೃತ್ಯ ೪೫ ರಂಭಾವ್ರತ ನಿರ್ಣಯ ೪೬ ದಶಹರಾವ್ರತ ವಿಧಿ ೪೬ ಗಂಗಾಸ್ತೋತ್ರ ನಿರ್ಜಲಾ ವ್ರತವಿಧಿ ಆಷಾಢ ಕೃತ್ಯ ೪೬ (ಶ್ರೀ ರಾಮ ರಥೋತ್ಸವ ೪೭ ವಿಷ್ಣು ಶಯನೋತ್ಸವ ೪೭ ಚಾತುರ್ಮಾಸ್ಯ ವ್ರತಾರಂಭ ೪೭ | ಚಾತುರ್ಮಾಸ್ಯ ನಿಷಿದ್ಧಗಳು ೪೮ ಹವಿಷ್ಯಗಳು ೪೮ ಕಾವ್ಯ ವ್ರತಗಳು ಮತ್ತು ಫಲಗಳು ನಾಗಪೂಜನ ಹಯವ್ರತ ಭವಾನೀ ಉತ್ಪತ್ತಿ ಶಾಕಗಣಗಳು ಅಶೋಕಕಲಿಕಾ ಪ್ರಾಶನ ೪೮ ತಪ್ತ ಮುದ್ರಾಧಾರಣ ೫೯ ೬೩ ರಾಮನವಮಿ ನಿರ್ಣಯ ನವಮೀ ವ್ರತ ಪ್ರಯೋಗ ಶ್ರೀ ಕೃಷ್ಣ ಆಂದೋಲನೋತ್ಸವ ಅನಂಗಪೂಜನ ವ್ರತ ನೃಸಿಂಹ ದೋಲೋತ್ಸವ ವೈಶಾಖಸ್ನಾನ ಪ್ರಾರಂಭ ವಾರುಣೀಪರ್ವ ನಿರ್ಣಯ ಮಹಾವಾರುಣೀಪರ್ವ ನಿರ್ಣಯ ವೈಶಾಖಮಾಸ ಕೃತ್ಯ ವಿಷ್ಣುಜಲಾಧಿವಾಸನಾದಿಗಳು ೪೮ ಕೋಕಿಲಾವ್ರತ ೪೮ ಶಿವಪವಿತ್ರಾರೋಪಣ ಸನ್ಯಾಸಿಗಳ ಚಾತುರ್ಮಾಸ್ಯ ವ್ಯಾಸಪೂಜಾ ೫೧ ಅಶೂನ್ಯಶಯನವ್ರತ ೫೨ ಶ್ರಾವಣಮಾಸ ಕೃತ್ಯ eg とと ೫೨ ಸಿಂಹದಲ್ಲಿ ರವಿಯಿರುವಾಗ ಗೋವು ಮೊದಲಾದವುಗಳ ಜನನದಲ್ಲಿ ವಿಧಿ ೬೭ ೫೩ ಪವಿತ್ರಾರೋಪಣ ವಿಷಯ ೬೭ XVII ಸಂಕ್ಷೇಪ ಪ್ರಯೋಗ ಋಗೈದಿಗಳ ಉಪಾಕರ್ಮ ೬೭ ಆಗಸ್ಟ್‌ ಉದಯಾಸ್ತ್ರ ನಿರ್ಣಯ ಪ್ರೌಷ್ಕಪದೀಶ್ರಾದ್ಧ ಕಾಲ ನಿರ್ಣಯ 2.0 ಮಹಾಲಯ ಯಜುರ್ವೇದಿಗಳ ಉಪಾಕರ್ಮ 20 ಮಹಾಲಯಕಾಲ ಹಿರಣ್ಯಕೇಶೀಯಾದಿಗಳಿಗೆ ಉಪಾಕರ್ಮ ನಿರ್ಣಯ ΤΟ EO ಸಾಮವೇದೋಪಾಕರ್ಮ ಸರ್ವಸಾಧಾರಣ ಉಪಾಕರ್ಮ ನಿರ್ಣಯ ನೂತನೋಪಾಕರ್ಮ ವಿಧವಾಕರ್ತೃಕಶ್ರಾದ್ಧಾದಿ ಮಹಾಲಯ ದೇವಾ ೭೧ ಬ್ರಾಹ್ಮಣ ನಿಮಂತ್ರವಾದಿ 20 ಜೀವತೃಕಾದಿಗಳಿಗೆ ಸಾಂಕಿಕ ವಿಧಿ ೯೪ ೭೧ ಪ್ರತಿವಾರ್ಷಿಕಾದಿ ಪ್ರಾಪ್ತಿಯಲ್ಲಿ ೭೨ ಭರಣೀ ಶ್ರಾದ್ಧ ೯೫ ರಕ್ಷಾಬಂಧನಾದಿ ೭೪ [ಅನ್ನಷ್ಟಕ್ಕಾದಿ ಶ್ರಾದ್ಧ ೯೫ ಹಯಗ್ರೀವೋತ್ಪತ್ತಿ ಅವಿಧವಾ ನವಮೀ ೯೬ ಸಂಕಷ್ಟಚತುರ್ಥಿ ವ್ರತ ಜನ್ಮಾಷ್ಟಮೀ ವ್ರತ ೭೪ ದ್ವಾದಶಿಯಲ್ಲಿ ಸಂನ್ಯಾಸೀ ಮಹಾಲಯ ೭೪ ಮಘಾತ್ರಯೋದಶೀ ಶ್ರಾದ್ಧ ೯೭ 62 ರೋಹಿಣೀಯುಕ್ತ ಅಷ್ಟಭೇದಗಳು ಜನ್ಮಾಷ್ಟಮಿ ನಿರ್ಣಯ ಸಂಗ್ರಹ 22 ೭೪ ಚತುರ್ದಶಿಯಲ್ಲಿ ಶಸ್ತ್ರಾದಿಯಿಂದ ಹತರಾದವರ ಶ್ರಾದ್ಧ ಮತಭೇದಗಳು ೭೭ ಗಜಚ್ಛಾಯಾ ನಿರ್ಣಯ ಪಾರಣಾಕಾಲ ೭೭ ದೌಹಿತ್ರ ಶ್ರಾದ್ಧ ಜನ್ಮಾಷ್ಟಮೀ ವ್ರತವಿಧಿ ದರ್ಭಾಹರಣ ಭಾದ್ರಪದ ಕೃತ್ಯ ಹರಿತಾಲಿಕಾವ್ರತ ದೇವಿನವರಾತ್ರಾರಂಭ ಗಣೇಶ ಚತುರ್ಥಿ ೭೯ ಕಪಿಲಾಷ ನಿರ್ಣಯ ೮೩ ಸಂಕ್ಷಿಪ್ತ ವ್ರತವಿಧಿ ಆಶ್ವಿನಮಾಸ ಕೃತ್ಯ ೮೩ ಪೂಜಾಧಿಕಾರ ೧೦೦ ೧೦೦ ೧೦೧ ಋಷಿಪಂಚಮೀ ೧೦೨ ೮೪ ನವರಾತ್ರ ಗೌಣಕಲ್ಪ ೧೦೬ ದೂರ್ವಾಷ್ಟಮೀ ವಿಷ್ಣು ಪರಿವರ್ತನೋತ್ಸವ ೮೫ ನವರಾತ್ರಿ ಕರ್ತವ್ಯ ೧೦೩ ೮೫ ನವರಾತ್ರಾರಂಭ ಪ್ರಯೋಗ ೧೦೪ ಶ್ರವಣದ್ವಾದಶೀ ವ್ರತ ಚಂಡೀಪಾಠ ಪ್ರಕಾರ 00% ವಿಷ್ಣು ಶೃಂಖಲಯೋಗ ೮೬ ಪುಸ್ತಕವಾಚನ ನಿಯಮ ೧೦೫ ಪಾರಣಾ ವಿಷಯ ೮೭ ಕುಮಾರೀಪೂಜಾ ವಾಮನ ಜಯಂತೀ ೮೮ ಆಶೌಚಾದಿ ಪ್ರಾಪ್ತಿಯಲ್ಲಿ 002 ಪಯೋವ್ರತ GE ಉಪಾಂಗಲಲಿತಾ ವ್ರತ 002 ಅನಂತವ್ರತ ೮೯ ಸರಸ್ವತೀ ಆವಾಹನಾದಿ ೧೦೭ ಪತ್ರಿಕಾ ಪೂಜನ ಮಹಾಪ್ರಮ್ಮಾದಿಗಳು ನವಮಿಯಲ್ಲಿ ಹೋಮಾದಿ ಹೋಮದ್ರವ್ಯಾದಿಗಳು ಬಲಿದಾನ ಶಸ್ತ್ರ ಅಶ್ವಾದಿ ಪೂಜನ XVIII ೧೦೮ ಯಮದ್ವಿತೀಯಾ ೧೦೮ |ಗೋಪಾಷ್ಟಮೀ ೧೦೯ | ಭೀಷ್ಮಪಂಚಕವ್ರತ ೧೦೯ |ತುಲಸೀಕಾಷ್ಟ ಮಾಲಾಧಾರಣ ೧೨೬ ೧೨೬ ೧೨೭ ೧೨೭ 000 ಧಾತ್ರಿ ಮೂಲದಲ್ಲಿ ದೇವಪೂಜಾವಿಧಿ ೧೨೯ ೧೧೦ ಪ್ರಬೋಧೋತ್ಸವ, ವಾಜಿನೀರಾಜನಾದಿ ವಿಧಿ 000 ತುಲಸೀ ವಿವಾಹಗಳು ೧೩೦ ಪಾರಣಾ ವಿಸರ್ಜನಕಾಲ ೧೧೧ | ವೈಕುಂಠ ಚತುರ್ದಶೀ ೧೩೨ ಸೀಮೋಲ್ಲಂಘನ ನಿರ್ಣಯ ೧೧೨ ಚಾತುರ್ಮಾಸ್ಯ ವ್ರತದಾನಗಳು ೧೩೩ ಎರಡು ವಿಧ ವಿಜಯ ಮುಹೂರ್ತ ೧೧೩ ಲಕ್ಷಪೂಜಾ ಫಲಾದಿಗಳು ೧೩೩ ಕಾರ್ತಿಕಸ್ನಾನ ಪದ್ಮಕಯೋಗ ೧೩೪ ಕಾರ್ತಿಕ ವ್ರತ ೧೧೫ ತ್ರಿಪುರದೀಪದಾನ ೧೩೪ ಹರಿಜಾಗರ ವಿಧಿ ೧೧೫ ವೃಷೋತ್ಸರ್ಗಕಾಲ ೧೩೪ ಕಾರ್ತಿಕದಲ್ಲಿ ವರ್ಜಗಳು ಕಾಲಾಷ್ಟಮೀ ನಿರ್ಣಯ ೧೩೪ ಪುರಾಣೇತಿಹಾಸಶ್ರವಣ ೧೧೬ ಮಾರ್ಗಶೀರ್ಷಮಾನ ಕೃತ್ಯ ವ್ಯಾಸಲಕ್ಷಣ ೧೧೬ ನಾಗಪೂಜಾ ೧೩೫ ಆಕಾಶದೀಪ ೧೧೭ |ಚಂಪಾಷಷ್ಠಿ ୧ ೧೩೫ ಕೋಜಾಗರ (ರೀ)ವ್ರತ ೧೧೭ | ಸ್ಕಂದಷಷ್ಟಿ ೧೩೫ ಆಶ್ವಯುಜೀಕರ್ಮ ಆಗ್ರಯಣಕಾಲ ಆಗ್ರಯಣ ಗೌಣಕಲ್ಪ ಕರಕಚತುರ್ಥಿನಿರ್ಣಯ ಯದೀಪದಾನ ನರಕಚತುರ್ದಶಿ ೧೧೮ ದತ್ತಜಯಂತೀ ೧೩೫ ೧೧೮ ಪ್ರತ್ಯವರೋಹಣ ೧೩೫ ೧೨೦ ಅಷ್ಟಕಾಶ್ರಾದ್ದಗಳು ೧೩೫ ರವಿವಾರಗಳಲ್ಲಿ ಸೌರವ್ರತಗಳು ೧೩೬ ೧೨೧ ಪುಷ್ಯಮಾಸ ಕೃತ್ಯ UGU ಮಕರಸಂಕ್ರಾಂತಿನಿರ್ಣಯ 022 ಯಮತರ್ಪಣ ೧೨೨ ಇದರಲ್ಲಿ ಕರ್ತವ್ಯ ೧೩೭ ಲಕ್ಷ್ಮೀಪೂಜನಾದಿ ೧೨೩ ಶಿವಪೂಜಾವ್ರತ nae ಕಾರ್ತಿಕಮಾಸ ಕೃತ್ಯ ಮಾಘಸ್ನಾನ ಪ್ರತಿಪದಿ ಕೃತ್ಯ ೧೨೪ ಸ್ನಾನಕಾಲ ೧೩೯ ಬಲಿಪೂಜಾ ದೀಪೋತ್ಸವಾದಿ ಇದರಲ್ಲಿ ಅಧಿಕಾರಿಗಳು ೧೩೯ ಲಕ್ಷ್ಮೀಪೂಜಾ ಕುಬೇರಪೂಜಾ ೧೨೫ ಜಲತಾರತಮ್ಯದಿಂದ ಫಲಭದ ೧೩೯ ಗೋವರ್ಧನಪೂಜಾ ೧೨೫ ಸ್ನಾನವಿಧಿ ೧೩೯ ಮಾರ್ಗಪಾಲೀಬಂಧನಾದಿ ೧೨೬ ಅದಕ್ಕೆ ನಿಯಮಗಳು ೧೩೯ XIX ಅರ್ಥೋದಯಯೋಗ ಕಾಂಸ್ಯಪಾತ್ರದಾನ ಗುಂಜಾದಿ ಪ್ರಮಾಣಗಳು ಮಾಘಮಾಸ ಕೃತ್ಯ ತಿಲಪಾತ್ರದಾನ ಮತ್ತು ಅದರ ಪ್ರಯೋಗ ೧೪೦ ವಸಂತಾರಂಭ ಚೂತಪುಷ್ಪ ೧೪೦ ಪ್ರಾಶನಾದಿಗಳು ೧೪೧ ಪ್ರಥಮ-ದ್ವಿತೀಯ ಪರಿಚ್ಛೇದ ಶೇಷ (ಪ್ರತೀರ್ಣ ಪ್ರಕರಣ) ಚಾಂದ್ರಸಂವತ್ಸರಗಳು ೧೪೨ |ಚಾಂದ್ರಾದಿ ಸಂಕ್ರಾಂತಿ ಪುಣ್ಯಕಾಲ ೧೫೪ ೧೫೪ ಕುಡವಾದಿ ಧಾನ್ಯ ಪ್ರಮಾಣಗಳು ತುಲಸೀಪತ್ರ ಶಾಲಿಗ್ರಾಮ ದಾನ ಪ್ರಯಾಗದಲ್ಲಿ ವೇಣೀದಾನ ತ್ರಿವೇಣಿಯಲ್ಲಿ ದೇಹತ್ಯಾಗವಿಧಿ ತಿಲಸ್ನಾನಾದಿಗಳು ಶುಕ್ಲ ಚತುರ್ಥಿಯಲ್ಲಿ ಢುಂಢೀರಾಜವ್ರತ ವಸಂತ ಪಂಚಮೀ ೧೪೨ |ನವಗ್ರಹಪೀಡಾ ನಿವಾರಕ ಸ್ನಾನಗಳು ೧೫೫ ೧೪೨ |ಗ್ರಹಪ್ರೀತ್ಯರ್ಥ ದಾನಗಳು ೧೫೫ ೧೪೨ ಶನಿವ್ರತ 022 ೧೪೩ ಶನಿಸ್ತೋತ್ರ ೧೫೬ ೧೪೩ ತೃತೀಯ ಪರಿಚ್ಛೇದ (ಪೂರ್ವಾರ್ಧ) ಗರ್ಭಾಧಾನಸಂಸ್ಕಾರ ೧೫೭ ೧೪೩ ದುಷ್ಟಮಾಸಾದಿಗಳು 082 ೧೫೮ ೧೪೪ ಪ್ರಥಮ ಋತುವಿನಲ್ಲಿ ವಿಶೇಷ ೧೪೪ ರಜಸ್ವಲೆಗೆ ಅಶುಚಿ ಸ್ಪರ್ಶಾದಿಗಳಲ್ಲಿ ೧೪೪ ನಿಯಮ ರಥಸಪ್ತಮೀ ಭೀಷ್ಮಾಷ್ಟಮೀ ೧೫೯ ದ್ವಾದಶಿಯಲ್ಲಿ ತಿಲೋತ್ಪತ್ತಿ ೧೪೪ ರಜಸ್ವಲೆಯ ಪ್ರಥಮದಿನ ನಿರ್ಣಯ ೧೬೦ ಮಾಘಪೂರ್ಣಿಮಾಕೃತ್ಯ ೧೪೪ ಗರ್ಭಾಧಾನ ನಿರ್ಣಯ ೧೬೧ ಶಿವರಾತ್ರಿ ಪಾರಣಾನಿರ್ಣಯ ೧೪೫ ಭುವನೇಶ್ವರೀ ಶಾಂತಿ ೧೬೨ ೧೪೬ ಸ್ಮಾರ್ತಹೋಮಕರ್ಮ ವ್ರತಪ್ರಯೋಗ ೧೪೬ ಪೂರ್ವೋತ್ತರಾಂಗ ಕ್ರಮಗಳು ೧೬೩ ಸಾಮಾನ್ಯತಃ ಶಿವಪೂಜಾವಿಧಿ ೧೪೭ |ಪಗಮನ ವಿಚಾರ ೧೬೩ ನಾಲ್ಕುಯಾಮ ಪೂಜೆಗಳು ೧೪೯ ಗರ್ಭಾಧಾನಕಾಲ ೧೬೪ ೧೫೦ ಚಂದ್ರಬಲಾದಿ ವಿಚಾರ ಪಾರ್ಥಿವಲಿಂಗ ಪೂಜೆ ಲಿಂಗವಿಶೇಷದಿಂದ ಫಲಗಳು ಫಾಲ್ಕು ನಮಾಸ ಕೃತ್ಯ ಪಯೋವ್ರತ ಹೋಲಿಕಾನಿರ್ಣಯ ಭದ್ರಾಮುಖವುಚ್ಚಲಕ್ಷಣ ಹೋಲಿಕಾಪೂಜೆ ಕರಿದಿನ ನಿರ್ಣಯ ೧೫೦ ಹೋಮಕ್ಕಾಗಿ ಗೃಹ್ಯಾಗಿ ಉತ್ಪಾದನ ೧೬೪ ನಿಷ್ಕಪಾದ-ನಿಷ್ಕಲಕ್ಷಣ ೧೬೫ ೧೬೬ ೧೫೧ |ಗರ್ಭಾಧಾನ ಸಂಕಲ್ಪಾದಿಗಳು ೧೬೫ ೧೫೨ |ನಾಂದೀಶ್ರಾದ್ಧ ವಿಚಾರ ೧೫೨ |ಜೀವತೃಕ ನಾಂದೀಕರ್ತನ ವಿಷಯ ೧೬೭ ೧೫೩ ವೃದ್ಧಿಶ್ರಾದ್ಧದಲ್ಲಿ ಕರ್ತವ್ಯನಿರ್ಣಯ ೧೬೯ ೧೫೩ ಗರ್ಭಾಧಾನ ಕರ್ತವ್ಯ ನಾರಾಯಣ ಬಲಿ ನಾಗಬಲಿ 020 ೧೭೨ XX ಹರಿವಂಶಶ್ರವಣವಿಧಿ ಕೃಷ್ಣಾದಿಗಳ ಸ್ವರೂಪ ೧೭೪ ಸೂತಿಕಾ ಶುದ್ಧಿ ಕೃಚ್ಛಾದಿ ಪ್ರತ್ಯಾಮ್ಯಾಯ ಪ್ರಾಯಶ್ಚಿತ್ತ ಪ್ರಯೋಗ ೧೭೪ (ಆಶೌಚದಲ್ಲಿ ಕರ್ತವ್ಯ ನಿರ್ಣಯ ೧೭೬ |ಜನ್ಮಕಾಲೀನ ದುಷ್ಟಯೋಗ ಮತ್ತು ೧೯೪ ೧೯೬ 022 ಶಾಂತಿಗಳು ೧೯೬ ದಶವಿಧ ಸ್ನಾನಗಳು ೧೭೮ |ಗೋಪ್ರಸವಶಾಂತಿ ೧೯೬ ಪಂಚಗವ್ಯವಿಧಿ ೧೭೮ | ಕೃಷ್ಣ ಚತುರ್ದಶೀ ಜನನ ಶಾಂತಿ ೧೯೭ ಹರಿವಂಶಶ್ರವಣ ಸಂಕಲ್ಪಾದಿಗಳು 026 ಸಿನಿವಾಲೀ ಕುಹೂ ಜನನಶಾಂತಿ ೧೯೮ ಬೇರೆ ವಿಧಾನಗಳು ೧೮೦ ದರ್ಶಜನನ ಶಾಂತಿ ೧೯೯ ದತ್ತಕ ವಿಷಯದಲ್ಲಿ ನಕ್ಷತ್ರ ಜನನ ಶಾಂತಿ ೨೦೦ ಗ್ರಾಹಾಗ್ರಾಹ್ಯ ವಿಚಾರ ೧೮೦ ಮೂಲಾದಿ ನಕ್ಷತ್ರ ಫಲಗಳು ೨೦೦ ಋಗೈದಿಗಳ ಪುತ್ರ ಪ್ರತಿಗ್ರಹ ವ್ಯತೀಪಾತಾದಿ ಯೋಗಫಲ ೨೦೦ ಪ್ರಯೋಗ ಎಲ್ಲ ಕಾಂತಿಗಳಿಗೆ ಉಪಯುಕ್ತಕಾಲ ೨೦೧ ಯಜುರ್ವೇದಿಗಳಿಗೆ ಬೌಧಾಯನೋಕ್ಕ ಅಗ್ನಿಚಕ್ರ ನಿರ್ಣಯ ೨೦೧ ರೀತಿಯ ಪ್ರಯೋಗ ೧೮೪ ಹೋಮಾಹುತಿ ನಿರ್ಣಯ ೨೦೧ ದತ್ತಕನ ಗೋತ್ರ ಸಾಪಿಂಡ್ಯಾದಿ ಮೂಲಶಾಂತಿ ಪ್ರಯೋಗ ನಿರ್ಣಯ ೧೮೪ ಆಶ್ಲೇಷಾ ಶಾಂತಿ ಪುತ್ರಕಾಮೇಷ್ಟಿ ೧೮೫ |ಆಶ್ಲೇಷಾ ಪಾದವಿಭಾಗದಿಂದ ಪುಂಸವನಾದಿ ಸಂಸ್ಕಾರಗಳು ೧೮೭ ಫಲ ವಿಶೇಷ ೨೦೪ ಅನವಲೋಭನಕಾಲ ೧೮೭ | ಜೇಷ್ಠಾ ನಕ್ಷತ್ರ ಫಲ ೨೦೫ ಸೀಮಂತೋನ್ನಯನಕಾಲ ೧೮೮ ಜೇಷ್ಠಾ ಶಾಂತಿ ೨೦೫ ಪುಂಸವನಾದಿ ಪ್ರಯೋಗ ನಿರ್ಣಯ ೧೮೮ ಚಿತ್ರಾದಿಗಳಲ್ಲಿ ಜನಿಸಿದವರಿಗೆ ಸೀಮಂತ ಭೋಜನ ಪ್ರಾಯಶ್ಚಿತ್ತ ೧೮೯ ಪೂಜಾದಾನಾದಿಗಳು ಗರ್ಭಿಣೀ ಧರ್ಮಗಳು ೧೮೯ ವ್ಯತೀಪಾತ ವೈಧೃತಿ ಸಂಕ್ರಾಂತಿ ಶಾಂತಿ ೨೦೬ ಗರ್ಭಿಣೀ ಪತಿಧರ್ಮಗಳು ೧೮೯ ವೈಧೃತಿ ಶಾಂತಿಯಲ್ಲಿ ವಿಶೇಷ ಗರ್ಭಸ್ರಾವ ಪತಿಬಂಧಕ ವಿಧಾನ ೧೯೦ ಏಕನಕ್ಷತ್ರ ಜನನ ಶಾಂತಿ ಗುಂಜಮಾವಾದಿ ಮಾನಗಳು ಸೂತಿಕಾಗೃಹ ಪ್ರವೇಶ ಸುಖಪ್ರಸವ ವಿಧಾನ ಜಾತಕರ್ಮ ವಿಚಾರ ೧೯೦ ಗ್ರಹಣ ಜನನ ಶಾಂತಿ ೨೦೭ ೧೯೧ ನಕ್ಷತ್ರಗಂಡಾಂತ ಶಾಂತಿ ೨೦೮ ೧೯೧ ತಿಥಿಗಂಡಾಂತ ಲಗ್ನಗಂಡಾಂತ ಶಾಂತಿ ೨೦೯ ೧೯೨ ದಿನಕ್ಷಯಾದಿ ಶಾಂತಿ ೨೦೯ ಜಾತಕರ್ಮ ಪ್ರಯೋಗ ೧೯೨ ವಿಷಘಟೇಶಾತಿ ಪಂಚಮ-ಷಷದಿನಗಳಲ್ಲಿ ಷಷ್ಠಿಪೂಜನ ೧೯೪ ಯಮಲ ಜನನ ಶಾಂತಿ ಉತ್ಪಾತಾದಿ ಶಾಂತಿ OUG OUG ೨೧೧XXI ತ್ರಿಕಪ್ರಸವ ಶಾಂತಿ ಸದಂತ ಜನನ ಶಾಂತಿ ಪ್ರಸವವೈಕೃತ ಶಾಂತಿ ನಾಮಕರಣ ನಾಮಕರಣ ಕಾಲ ಕಾಲಾತಿಕ್ರಮವಾದರೆ ಅದಕ್ಕೆ ಶುಭ ತಿಥ್ಯಾದಿಗಳು ೨೧೧ ಲಗ್ನ ಶುದ್ಧಿ GUG ಉಪನಯನ ಕರ್ತೃವಿನ ೨೧೨ ಪತ್ನಿಯು ರಜಸ್ವಲೆಯಾದರೆ ೨೨೮ ಶಾಂತಿ ವಿಧಾನ ೨೨೯ ೨೧೩ ಉಪನಯನ ಸಾಮಗ್ರಿ ಸಂಗ್ರಹ ೨೨೯ ೨೨೯ ೨೧೩ |ಯಜ್ಞಪವೀತ ನಿರ್ಣಯ ೨೧೩ ಯಜ್ಞಪವೀತ ಅಭಾವದಲ್ಲಿ ನಾಲ್ಕು ವಿಧ ನಾಮಕರಣ ೨೧೪ ಪ್ರಾಯಶ್ಚಿತ್ತ ಪ್ರಯೋಗದಲ್ಲಿ ವಿಶೇಷ ೨೧೫ ಮೇಖಲಾದಂಡಾದಿಗಳ ಸಂಗ್ರಹ ೨೩೧ ಸ್ತ್ರೀಯರ ನಾಮಕರಣ ೨೧೬ ಉಪನಯನ ವಸ್ತುಗಳಲ್ಲಿ ವಿಶೇಷ ೨೩೧ ಆಂದೋಲಾರೋಹಣ ದುಗ್ಧಪಾನ ೨೧೬ ಉಪಸಂಗ್ರಹಣ ರೀತಿ ೨೩೧ ಜಲಪೂಜೆ ೨೧೬ ಪ್ರತ್ಯಭಿವಾದನ ೨೩೨ ಸೂರ್ಯಾವಲೋಕನ ನಿಮ್ಮಮಣ ೨೧೬ ವಿನಾಯಕ ಶಾಂತಿ ೨೩೨ ಭೂಮ್ಯುಪವೇಶನ ಅನ್ನಪ್ರಾಶನ ೨೧೬ ಗ್ರಹಯಜ್ಞ ವಿಧಾನ ೨೩೨ ಕರ್ಣ ವೇಧನ ೨೧೮ ಋತ್ವಿಕ್ ಸಂಖ್ಯಾ ವಿಚಾರ ೨೩೩ ಬಾಲಕನ ದೃಷ್ಟಿದೋಷದಲ್ಲಿ ೨೧೮ ಕುಂಡಸ್ಟಂಡಿಲ ನಿರ್ಣಯ Jaa ರಕ್ಷಾವಿಧಿ ೨೧೯ ಬೃಹಸ್ಪತಿ ಶಾಂತಿ ವಿಚಾರ ೨೩೪ ವರ್ಧಾಪನವಿಧಿ ೨೧೯ ಉಪನಯನಾದಿಗಳಲ್ಲಿ ಸಂಕಲ್ಪ ೨೩೫ : ಸಂಕ್ಷೇಪವಾಗಿ ಪ್ರಯೋಗ ೨೧೯ ಉಪನಯನದಿನದ ಕೃತ್ಯ ೨೩೬ జాల ಗರ್ಜಿತಾದಿ ಶಾಂತಿ ೨೩೭ ಗುರುವು ಸಿಂಹಸ್ಥನಾದಾಗ ಅಗ್ನಿನಾಶದಲ್ಲಿ ನಿರ್ಣಯ ೨೩೮ ಚೌಲಾದಿ ನಿಷೇಧ ವಿದ್ಯಾರಂಭ ೨೨೦ |ಬಟುವ್ರತ ೨೨೧ ಮಂಡಪದೇವತೋತ್ಥಾಪನ ೨೩೮ ಅನುಪನೀತನ ಧರ್ಮಗಳು ಉಪನಯನ ೨೨೨ ಮಂಟಪೋದ್ವಾಸನಪರ್ಯಂತ ೨೨೨ ನಿಷಿದ್ಧಗಳು ೨೩೯ ಉಪನಯನದಲ್ಲಿ ಅಧಿಕಾರಿಗಳು ೨೨೨ ಊನಾಂಗುಪನಯನಾದಿ ವಿಚಾರ ೨೩೯ ಪ್ರೋತ್ರಿಯ ಲಕ್ಷಣ ೨೨೩ ಕುಂಡ, ಗೋಲಕ, ಕನಿಷ್ಠ ಸಂಸ್ಕಾರ ತಿಥಿವಿಚಾರ ೨೪ ನಿಷೇಧ ೨೩೯ ನೈಮಿತ್ತಿಕ ಅನಧ್ಯಾಯ ೨೨೬ ಪುನರುಪನಯನ ೨೪೦ ವೇದಾಧಿಪ ಗುರು, ಚಂದ್ರಾದಿ ಪ್ರಾಯಶ್ಚಿತ್ತರೂಪವಾದ ಬಲ ವಿಚಾರ ೨೨೬ ಪುನರುಪನಯನ ೨೪೦ ನಕ್ಷತ್ರ ವಿಚಾರ 2وو ಜೀವಿಸಿರುವವನ ಮೃತವಾರ್ತೆ ಕೇಳಿ XXII ಅಂತ್ಯಕರ್ಮ ಮಾಡಿದಲ್ಲಿ ತೀರ್ಥಯಾತ್ರೆಯ ಹೊರತಾಗಿ ಕಲಿಂಗ ೨೪೧ ವಿರುದ್ಧ ಸಂಬಂಧ ನಿಷೇಧ ೨೬೧ ಸಂಕ್ಷಿಪ್ತ ಗೋತ್ರ ಪ್ರವರ ನಿರ್ಣಯ ೨೬೧ ಮೊದಲಾದ ದೇಶಗಳಿಗೆ ಹೋದಲ್ಲಿ ಬೇರೆ ವೇದಾಧ್ಯಯನದ ಸಲುವಾಗಿ ಪುನರುಪನಯನ ೨೪೧ ಬೈಗುಗಣಗಳು ಗೌತಮಾಂಗಿರಸರು ೨೬೩ ೨೪೨ ಭಾರದ್ವಾಜಾಂಗಿರಸರು ೨೬೪ ಪ್ರಾಯಶ್ಚಿತಾರ್ಥ ಉಪನಯನ ೨೪೨ ಕೇವಲಾಂಗಿರಸರು ೨೬೪ ಯಜುರ್ವೇದಿಗೆ ಪುನರುಪನಯನ ೨೪೩ ಅತ್ರಿಗಳು ೨೬೫ ಬ್ರಹ್ಮಚಾರಿ ಧರ್ಮಗಳು ೨೪೪ | ವಿಶ್ವಾಮಿತ್ರರು ೨೬೫ ಬ್ರಹ್ಮಚಾರಿ ವ್ರತಲೋಪದಲ್ಲಿ ೨೪೫ ಕಶ್ಯಪರು ೨೬೬ ಅನಧ್ಯಾಯಗಳು ಅಧ್ಯಯನ ಧರ್ಮಗಳು ವ್ರತಗಳು ಸಮಾವರ್ತನ ೨೪೫ ವಸಿಷ್ಠರು ೨೬೭ ೨೪೬ ಅಗಸ್ತರು 92 ೨೪೬ ದ್ವಿಗೋತ್ರದವರು ೨೬೮ ೨೬೯ ಸಮಾವರ್ತನ ವಿಚಾರ ಸಮಾವರ್ತನ ಕಾಲ ೨೪೬ ಆಚಾರ್ಯಗೋತ್ರ ವಿಷಯ ೨೪೭ ಮಾತೃಗೋತ್ರ ವರ್ಜನ ವಿಷಯ ೨೪೮ ಸಗೋತ್ರಾದಿವಿವಾಹಗಳಲ್ಲಿ ವ್ರತ ಲೋಪವಾದಲ್ಲಿ ಪ್ರಾಯಶ್ಚಿತ್ತ ಪ್ರಾಯಶ್ಚಿತ್ತ ಪ್ರಯೋಗ ೨೪೮ ಉಳಿದ ವಿವಾಹ ನಿಷೇಧಗಳು ೨೭೨ ಸಮಾವರ್ತನ ಸಂಕಲ್ಪಾದಿಗಳು ೨೪೯ ಇವುಗಳಿಗೆ ಅಪವಾದ ೨೭೧ ಸ್ನಾತಕ ವ್ರತಗಳು ೨೪೯ ಮಂಡನ-ಮುಂಡನ-ನಿರ್ಣಯ 920 ಸಮಾವರ್ತನ ಅನುಕಲ್ಪಗಳು ೨೪೯ ಪ್ರತಿಕೂಲ ವಿಚಾರ ೨೭೨ ಬ್ರಹ್ಮಚಾರಿಯ ಆಶೌಚ ನಿರ್ಣಯ ೨೫೦ ಶ್ರೀಶಾಂತಿ ೨೭೪ ವಿವಾಹ ಪ್ರಕರಣ ೨೫೧ ಅಂತ್ಯಕರ್ಮದ ಅಭಾವದಲ್ಲಿ ರಾಶಿ ನಕ್ಷತ್ರಾದಿ ಮೇಲನ ವಿಚಾರ ೨೫೧ ಪ್ರತಿಬಂಧದ ನಿರ್ಣಯ ೨೭೫ ಕನ್ನೆಯು ಅನ್ಯರಿಂದ ಚತುರ್ಥಿಕರ್ಮ ಮಧ್ಯದಲ್ಲಿ ವರಿಸಲ್ಪಡಬಾರದು ೨೫೨ ದರ್ಶಾದಿಪ್ರಾಪ್ತಿ ನಿರ್ಣಯ 928 ವಿವಾಹೋಪಯೋಗಿ ಕನ್ಯಾ ರಜೋದೋಷ ನಿರ್ಣಯ ೨೭೬ ಸಾಪಿಂಚ್ಯನಿರ್ಣಯ ೨೫೩ ಕ್ಷಯಪಕ್ಷಾದಿ ವಿಚಾರ ೨೭೮ ಸಾಪಿಂಡ ಸಂಕೋಚ ವಿಚಾರ ೨೫೭ ವಧೂವರರಿಗೆ ಗುರುರವಿಬಲ ವಿಚಾರ ೨೭೮ ಮಾತುಲಕನ್ಯಾ ಪರಿಣನಯನ ವಿಚಾರ ಸಾಪಿಂಡ ಸಂಕೋಚ ವ್ಯವಸ್ಥೆ ಸಾಮಿಪ್ಯಸಂಕೋಚ ವಿಷಯ ಸಂಗ್ರಹ ಸವತಿ ತಾಯಿಯ ಸಾಪಿಂಡ್ಕ ವಿಚಾರ ೨೫೭ ಕನ್ಯಾ ವಿವಾಹಕಾಲ ೨೭೮ ೨೫೮ ವಿವಾಹ ಭೇದಗಳು ೨೫೮ ೨೫೯ ಪರಿವೇತ್ರಾದಿ ವಿಚಾರ ಕನ್ಯಾದಾತೃಕ್ರಮ ౨లం XXIII ವಧೂವರರಿಗೆ ಮೂಲಜನವಾದಿ ಗುಣದೋಷಗಳು ಘಟಿಕಾ ಸ್ಥಾಪನೆ ೨೯೩ ೨೮೧ ಅಂತಃಪಟಾದಿಗಳು ೨೯೪ ವಿವಾಹದಲ್ಲಿ ಮಾಸಾದಿ ನಿರ್ಣಯ ಮುಹೂರ್ತ ವಿಚಾರ ೨೮೩ ಕಾದಾನ ಪ್ರಯೋಗ ೨೯೫ ೨೮೪ ಗೋದಾನಾದಿಗಳಿಗೆ ಮಂತ್ರಗಳು ೨೯೬ ಲಗ್ನದಲ್ಲಿ ವರ್ಜಗ್ರಹರು ಇಪ್ಪತ್ತೊಂದು ಮಹಾದೋಷಗಳು ಆಪತ್ತಿನಲ್ಲಿ ಗೋಧೂಲಿ ಲಗ್ನವು ಚಂದ್ರ-ತಾರಾಬಲಾದಿಗಳ ಅಭಾವದಲ್ಲಿ ದಾನಗಳು ವಿವಾಹಾಂಗ ಮಂಡವಾದಿ ವಿಚಾರ ಕನ್ನೆಯ ಜನ್ಮಕಾಲೀನ ಗ್ರಹಾದಿ ಯೋಗಗಳಿಂದ ಸೂಚಿತ ವೈಧವ್ಯ ಪರಿಹಾರೋಪಾಯ ೨೮೪ ಕಂಕಣ (ಬಳೆ) ಬಂಧಾದಿಗಳು ೨೯೬ ೨೮೪ ವಿವಾಹ ಹೋಮ ೨೯೭ ೨೮೫ ಗೃಹಪ್ರವೇಶನೀಯ ಹೋಮ ೨೯೭ ರಜೋದೋಷ-ಆಶೌಚಪ್ರಾಪ್ತಿ ೨೮೫ ಇತ್ಯಾದಿಗಳಲ್ಲಿ ನಿರ್ಣಯ ೨೮೫ ಮಂಡಪೋದ್ಘಾಸನಾನಂತರ ಕಾರ್ಯಾಕಾರ್ಯ ವಿಚಾರ ವಧೂ ಪ್ರವೇಶ ೩೦೦ ೨೮೬ |ದ್ವಿರಾಗಮನ ೩೦೦ ವೈಧವ್ಯಹರ ಕುಂಭವಿವಾಹ ೨೮೬ ವಧುವಿನ ಪ್ರಥಮಾಬ್ಬದಲ್ಲಿ ವರನಿಗೆ ಪತ್ನಿಮೃತತ್ವದೋಷ ನಿವಾಸ ವಿಚಾರ ೩೦೧ ವಿಷಯದಲ್ಲಿ ಪರಿಹಾರೋಪಾಯ ೨೮೬ ಪುನರ್ವಿವಾಹ ೩೦೧ ಮೃತಪುತ್ರತ್ವದೋಷದಲ್ಲಿ ೨೮೭ ಅಗ್ನಿದ್ವಯ ಸಂಸರ್ಗ ಪ್ರಯೋಗ ೩೦೨ ಕನ್ಯಾದಾನ ಪ್ರಶಂಸಾ ದ್ವಿತೀಯಾದಿ ವಿವಾಹ ಕಾಲ aoa ಅವಳ ಮನೆಯಲ್ಲಿ ಭೋಜನ ಅರ್ಕ ವಿವಾಹ ೩೦೩ ನಿಷೇಧಾದಿಗಳು ೨೮೭ |ಆಕ ೩೦೪ ವಾಗ್ದಾನಾದಿ ವಿಚಾರ ೨೮೭ ಮಲಮೂತ್ರಾದಿ ವಿಸರ್ಜನ ವಿಧಾನ ೩೦೪ ವಿವಾಹ ಸಂಕಲ್ಪಾದಿಗಳು ೨೮೮ ಆಚಮನ ವಿಧಿ ನಾಂದೀಶ್ರಾದ್ಧದಲ್ಲಿ ದೇವತಾವಿಚಾರ ೨೮೮ ಜೀವತೃಕಾದಿಗಳ ದೇವತಾವಿಚಾರ ೨೮೯ ಆಚಮನ ನಿಮಿತ್ತಗಳು 202 ದಂತಧಾವನ 1,02 ತಂದೆಯ ಹೊರತು ಬೇರೆಯವರು ಸಂಕ್ಷೇಪ ಸ್ನಾನವಿಧಿ 202 ಮಾಡುವ ನಾಂದೀಶ್ರಾದ್ಧ ೨೯೦ ನಿತ್ಯಸ್ನಾನ 202 ಪಾರ್ವಣ ಕ್ರಮಾದಿಗಳು ೨೯೧ ಸ್ನಾನ ನಿಮಿತ್ತಗಳು ೩೦೮ ನಾಂದೀಶ್ರಾದ್ಧದಲ್ಲಿ ಅನ್ನಾದಿಗಳ ನೈಮಿತ್ತಿಕ ಹಾಗೂ ಕಾಮಸ್ನಾನ ಗೌಣಕಲ್ಪ ೨೯೨ ಗೌಣಸ್ಥಾನಗಳು 205 ಸೀಮಾಂತ ಪೂಜನ ಗೌರೀಹರಪೂಜಾ ಆಸನ (ವಿಷ್ಟರ) ಲಕ್ಷಣ ಮಧುಪರ್ಕ ವಿಚಾರ ೨೯೨ ತಿಲಕವಿಧಿ LOE ೨೯೩ ಭಸ್ಮತ್ರಿಪುಂಡ್ರ ೩೦೯ ೨೯೩ ಸಂಧ್ಯಾವಂದನ ಕಾಲ ೩೧೦ XXIV ಸಂಕ್ಷಿಪ್ತ ಋಗ್ರೇದಿ ಸಂಧ್ಯಾ ಪ್ರಯೋಗ ೩೧೦ ಚತುರ್ಥ ಭಾಗದಲ್ಲಿ ಮಧ್ಯಾಹ್ನಸ್ನಾನ ೩೩೪ ತೈತ್ತಿರೀಯ ಸಂಧ್ಯಾ ೩೧೩ ಮಧ್ಯಾಹ್ನ ಸಂಧ್ಯಾ ೩೩೪ ಕಾತ್ಯಾಯನರ ಸಂಧ್ಯಾ ೩೧೩ | ಬ್ರಹ್ಮಯಜ್ಞ ೩೩೪ ಸಂಧ್ಯಾಫಲ ಮತ್ತು ಲೋಪಪ್ರಾಯಶ್ಚಿತ್ತ ಆಶ್ವಲಾಯನ ಬ್ರಹ್ಮಯಜ್ಞ ೩೩೪ ೩೧೫ ತರ್ಪಣಾದಿ ವಿಚಾರ ೩೩೬ ಔಪಾಸನ ಮ ೩೧೫ |ಹಿರಣ್ಯಕೇಶಿಯ ಬ್ರಹ್ಮಯಜ್ಞ ೩೩೭ ಹೋಮಾಧಿಕಾರಿ ಕಾಲಾದಿನಿರ್ಣಯ ೩೧೫ ಆಪಸ್ತಂಬಾದಿ ಬ್ರಹ್ಮಯಜ್ಞ ೩೩೮ ಆಶ್ವಲಾಯನ ಸ್ಮಾರ್ತಹೋಮ ೩೧೬ | ಕಾತ್ಯಾಯನರ ಬ್ರಹ್ಮಯಜ್ಞ aau ಹಿರಣ್ಯಕಶೀಯ ಸ್ಮಾರ್ತಹೋಮ 202 ಪಂಚಮ ಭಾಗ ಕೃತ್ಯ ಆಪಸ್ತಂಬರಿಗೆ ೩೧೭ ಪಂಚಮಹಾ ಯಜ್ಞಾದಿ ವಿಚಾರ 22€ ಕಾತ್ಯಾಯನರಿಗೆ ೩೧೭ ಪ್ರಾತಃ ಸಾಯಂ ವೈಶ್ವದೇವತಂತ್ರ ಹೋಮ ದ್ರವ್ಯಗಳು ane ಪ್ರಯೋಗ ೩೩೯ ಹೋಮಲೋಪದಲ್ಲಿ ಆಶ್ವಲಾಯನರ ವೈಶ್ವದೇವ ೩೪೧ ಪ್ರಾಯಶ್ಚಿತ್ತಾದಿಗಳು ೩೧೮ | ತೈತ್ತಿರೀಯರ ವೈಶ್ವದೇವಾದಿಗಳು ೩೪೩ ಸಮಸ್ಯ ಹೋಮ ೩೧೯ ಕಾತ್ಕಾಯನ ವೈಶ್ವದೇವಾದಿಗಳು ೩೪೪ ಪಕ್ಷ ಹೋಮ ಶೇಷ ಹೋಮಗಳು ೩೧೯ ಸರ್ವಸಾಧಾರಣ ಭೋಜನಾದಿ ವಿಧಿ ೩೪೫ ಸಮಾರೋಪ ೩೧೯ ದಿನದ ಷಷ್ಠಭಾಗ ಕೃತ್ಯ ೩೪೯ ಯಜಮಾನನಿಗೆ ಪ್ರವಾಸದಲ್ಲಿ ಕೃತ್ಯ ೩೨೦ ಸಾಯಂಸಂಧ್ಯಾದಿ ೩೪೯ ಔಪಾಸನಾಗ್ನಿಯು ನಷ್ಟವಾದರೆ ೩೨೧ | ಕಾಮ್ಯ ನೈಮಿತ್ತಿಕಾದಿ ವಿಚಾರ 280 ಪುನರಾಧೇಯ ಪ್ರಾಯಶ್ಚಿತ್ತಾದಿ ಅಗ್ನಿ ಆಧಾನ ವಿಚಾರ ೩೫೧ ವಿಚಾರ ೩೨೨ | ಶೂದ್ರಸಂಸ್ಕಾರ ವಿಷಯ 289 ಅಗ್ನಿನಾಶಕ್ಕೆ ನಿಮಿತ್ತಗಳು ೩೨೪ ವಾಪೀಕೂಪಾದಿಗಳ ಉತ್ಸರ್ಗ ೩೫೩ ಅಗ್ನಿನಾಶಕಗಳು ೩೨೫ | ವೃಕ್ಷಾದ್ಯಾರೋಪಣ ೩೫೩ ಕಾತ್ಯಾಯನೋಪಯೋಗಿ ಕೆಲ ಮೂರ್ತಿ ಪ್ರತಿಷ್ಠಾ ಉಕ್ತಿಗಳು ೩೨೭ ಪಂಚಸೂತ್ರೀ ನಿರ್ಣಯ ೩೫೫ ನಿತ್ಯದಾನ ೩೨೯ ಲಿಂಗಾಲಿಗ್ರಾಮಾದಿ ಪೂಜಾವಿಚಾರ ೩೫೫ ದಿನದ ಎರಡನೇ ಭಾಗದಲ್ಲಿ ಜಪಮಾಲಾ ಸಂಸ್ಕಾರ 282 ವೇದಶಾಸ್ತ್ರಾಭ್ಯಾಸ ೩೨೯ ರುದ್ರಾಕ್ಷಧಾರಣ ೩೫೭ ಸಂಕ್ಷಿಪ್ತ ಪೂಜಾಪ್ರಯೋಗ 220 ಶಿವವಿಷ್ಟು ಸ್ನಾನ ವಿಷಯ 282 ಪೂಜಾಫಲಾದಿಗಳು ೩೩೨ ವಿಷ್ಣಾದಿ ಪಂಚಾಯತನಗಳು ೩೫೮ ದಿನದ ತೃತೀಯ ಭಾಗದಲ್ಲಿ ಪೋಷ ಕೇಶವಾದಿ ಚತುರ್ವಿಂಶತಿ ವರ್ಗದ ಸಲುವಾಗಿ ಧನಾರ್ಜನ ೩೩೨ ಮೂರ್ತಿಲಕ್ಷಣ ೩೫೮ XXV |ಗೋಚರ ಪ್ರಕರಣ ಸಿಂಧೂನುಸಾರ ದೇವಪ್ರತಿಷ್ಠಾ ಪ್ರಯೋಗ ೩೫೯ ಪಲ್ಲೀ ಚಲಪ್ರತಿಷ್ಠಾ ಪ್ರಯೋಗ ಸ್ಥಿರಪ್ರತಿಷ್ಠೆಯಲ್ಲಿ ಕ್ರಮ ವಿಶೇಷ ಸರ್ವಸಾಧಾರಣ ಸ್ಥಿರಚಲ ಪ್ರತಿಷ್ಠೆ ಏಕಧ್ವರ ವಿಧಾನದಿಂದ ಚಲಪ್ರತಿಷ್ಠಾ ಪ್ರಯೋಗ ಪುನಃ ಪ್ರತಿಷ್ಠಾ ಪ್ರೋಕ್ಷಣ ವಿಧಿ ಜೀರ್ಣೋದ್ಧಾರ ಪ್ರತಿಮಾ ಶಿವಲಿಂಗ ಪ್ರಾಸಾದ ಕಲಶಾದಿಗಳ ಭಂಗವಾದಲ್ಲಿ ಪುಷ್ಪಾದಿ ವಿಚಾರ ಶಿವನಿರ್ಮಾಲ್ಯ ಗ್ರಹಣ ವಿಷಯ ಸಾಮಾನ್ಯ ಮುಹೂರ್ತ ವಿಚಾರ ಧಾನ್ಯ ಸಂಗ್ರಹಕ್ಕೆ ೩೮೫ ಸರಠ-ಗೌಳಿ ಪತನ ಫಲ ೩೮೫ ೩೬೦ ಪಲ್ಲೀ ಸರಠ ಶಾಂತಿ ೩೬೪ ೩೮೬ ಪಾರಿವಾಳಾದಿಗಳ ಪ್ರವೇಶ ಶಾಂತಿ aest ೩೬೫ (ಕಾಕಸ್ಪರ್ಶ, ಕಾಕಮೈಥುನ- ದರ್ಶನ ಮುಂತಾದವುಗಳಿಗೆ ಶಾಂತಿ ೩೮೬ ೩೬೯ ನಾನಾವಿಧದಿವ್ಯಭೌಮಾಂತರಿಕ್ಷ ೩೭೦ ಉತ್ಪಾತಾದಿಗಳಲ್ಲಿ ಶಾಂತಿ ೩೭೦ ಗಾಯತ್ರಿ ಪುರಶ್ಚರಣ ಪ್ರಯೋಗ ೩೮೭ ೩೭೧ ಅಪೂರ್ವ ಕಮಲಾಕರದಲ್ಲಿಯ ಅಶ್ವತೋಪನಯನ ೩೮೯ ೩೭೧ ಪುತ್ರರಹಿತ ಪುರುಷ ಅಥವಾ ಸ್ತ್ರೀಯ ೩೭೨ ವಟಪಕ್ಷ ಆಮ್ರ ಮೊದಲಾದ ೩೭೫ ವೃಕ್ಷಗಳನ್ನು ಪುತ್ರನ ಸ್ವೀಕಾರ 22.99 ಸಕಲಕರ್ಮ ಸಾಧಾರಣ ಪರಿಭಾಷೆ ೩೭೫ ಕರ್ಮವಿಶೇಷದಲ್ಲಿ ಅಗ್ನಿನಾಮಗಳು ೩೯೨ ೩೯೦ ೩೯೧ ವಸ್ತ್ರಾದಿ ಧಾರಣೆಗೆ ೩೭೬ ಕರ್ಮಾಂಗ ದೇವತೆಗಳು ೩೯೩ ಶಸ್ತ್ರಾದಿ ಧಾರಣ ೩೭೬ ಕಲಿಯುಗದಲ್ಲಿ ಕಾರ್ಯಾಕಾರ್ಯ- ನಷ್ಟದ್ರವ್ಯ ವಿಚಾರ ರಾಜಾಭಿಷೇಕ ಮುಹೂರ್ತ ಜಲಾಶಯ ಖನನಮುಹೂರ್ತ ಕ್ಷೌರವಿಚಾರ ೩೭೮ ವಿವೇಕ aga ೩೭೮ ಸ್ವಪ್ನವಿಚಾರ ages ೩೭೮ ಅನಿಷ್ಟ ಸ್ವಪ್ನ ಫಲ ೩೯೯ ೩೭೮ |ಜಾಗ್ರದವಸ್ಥೆಯಲ್ಲಿ ಅನಿಷ್ಟಗಳು ೩೯೯ ನಕ್ಷತ್ರದಲ್ಲಿ ರೋಗೋತ್ಪತ್ತಿ ಫಲ ೩೭೯ ವಿಶೇಷ ಫಲದಾಯಕ ಸ್ವಪ್ನಗಳು ೩೯೯ ಸರ್ವಸಾಧಾರಣ ನಕ್ಷತ್ರ ದುಃಸ್ವಪ್ನ ದರ್ಶನದಲ್ಲಿ ಕೃತ್ಯ ೪೦೦ ಶಾಂತಿ ಪ್ರಯೋಗ aeso ಉಪಸಂಹಾರ ಸರ್ವರೋಗ ನಾಶಕಗಳು ೩೮೦ ಅಭ್ಯಂಗ ೩೮೧ ತೃತೀಯ ಪರಿಚ್ಛೇದೋತ್ತರಾರ್ಧ ಅನುಕ್ರಮಣಿಕ ೪೦೧ ಗೃಹಾರಂಭ ೩೮೧ ಜೀವತೃಕ ಅಧಿಕಾರಿ ನಿರ್ಣಯ ೪೦೧ ಗೃಹಪ್ರವೇಶ ೩೮೨ ಪ್ರೇತ ಕರ್ಮ ಪ್ರತಿ ಪ್ರಸವ ೪೦೫ ಧನಸಂಪಾದನೆಗೆ ಪ್ರಯಾಣ ೩೮೩ ಶ್ರಾದ್ಧಾದ್ಯಧಿಕಾರಿ ನಿರ್ಣಯ ೪೦೬ ಪ್ರಜ್ಞಾನ ವಿಚಾರ ೩೮೩ ಸ್ತ್ರೀಯರಿಗೆ ದಾಹಾದ್ಯಧಿಕಾರಗಳು ೪೦೮ XXVI ಉತ್ತರ ಕ್ರಿಯಾ ಕರ್ತವ್ಯ-ಅಕರ್ತವ್ಯ ನಿರ್ಣಯ ದತ್ತಕ ಕರ್ತವ್ಯ ನಿರ್ಣಯ ಪ್ರಯೋಗ ಕ್ರಮ ೪೦೯ ಸಂಕಲ್ಪ ಕ್ಷಣಾದಿ ವಿಚಾರ ೪೩೩ ೪೧೦ |ಪಾದ್ಯ ೪೩೪ ಬ್ರಹ್ಮಚಾರಿ ವಿಷಯಕ ನಿರ್ಣಯ ೪೧೦ ಆಸನಾದಿ ನಿರ್ಣಯ ೪೩೫ ಸ್ತ್ರೀಶೂದ್ರಾದಿ ಕರ್ತವ್ಯ ನಿರ್ಣಯ ಶ್ರಾದ ಶಬ್ದಾರ್ಥ ೪೧೧ ವಿಶ್ವೇದೇವರಲ್ಲಿ ಅರ್ಥ್ಯ ಕಲ್ಪನೆ ೪೧೧ ದೈವದಲ್ಲಿ ಗಂಧಾದಿ ಪೂಜೆ ೪೩೭ ೪೩೮ ಶ್ರಾದ್ಧ ಭೇದಗಳು ೪೧೨ ಯುಕ್ತವಾದ ಪುಷ್ಪಗಳು ೪೩೮ ಪಾರ್ವಣ ವಿಚಾರ ೪೧೨ ವರ್ಜಪುಷ್ಪಗಳು ೪೩೯ ಏಕೋದ್ದಿಷ್ಟ ವಿಚಾರ ೪೧೨ ಧೂಪ-ದೀಪಾದಿಗಳು ೪೩೯ ಶ್ರಾದ್ದ ದೇಶಗಳು ೪೧೩ |ಅನ್ಯದಾನಾದಿ ವಸ್ತುಗಳು ೪೩೯ ಶ್ರಾದ್ದ ಕಾಲಗಳು ೪೧೪ ಕಾಂಡಾನುಸಮಯ ಪದಾರ್ಥಾನು ಅಪರಾಹ್ಲಾದಿ ವಿಶೇಷ ಕಾಲ ಸಮಯ ವಿಚಾರ ೪೪೦ ನಿರ್ಣಯ ೪೧೫ |ಪಿತೃ ಆಸನಾದಿಗಳು ೪೪೦ ಪ್ರತಿಸಾವಂತ್ಸರಿಕ ಮಾಸಿಕಾದಿ ಪಿತೃಗಳ ಅರ್ಥ್ ಕಲ್ಪನಾ ೪೪೦ ಕಾಲಗಳು ಅನ್ನಾದಿಗಳಿಂದ ಪಿತೃ ತೃಪ್ತಿ ವಿಚಾರ ೪೧೭ ಪಿತೃಗಳಿಗೆ ಗಂಧಾದ್ಯುಪಚಾರ ಕ್ರಮ ೪೧೫ ಸಂಸ್ರಾವ ಮುಖಾಂಜನಾದಿ ವಿಚಾರ ೪೪೨ ೪೪೨ ಶ್ರಾದ್ಧದೇವತಾ ವಿಚಾರ ೪೧೮ ಅಕರಣ ೪೪೩ ಶ್ರಾದ್ಧದಲ್ಲಿ ಬ್ರಾಹ್ಮಣರು ೪೧೯ ಹೋಮದ ಕ್ರಮ ೪೪೪ ಉತ್ತಮ ಬ್ರಾಹ್ಮಣರು ೪೨೦ ಪಾಣಿಹೋಮ ಪ್ರಕಾರ ೪೪೫ ಮಧ್ಯಮ ಬ್ರಾಹ್ಮಣರು ೪೨೦ ಅನ್ನವರಿವೇಷಣ ವರ್ಜ ಬ್ರಾಹ್ಮಣರು ೪೨೦ ಅನ್ನನಿವೇದನ ಶ್ರಾದ್ಧ ಯೋಗ್ಯ ವಸ್ತುಗಳು ೪೨೨ ಅನ್ನ ಸಮರ್ಪಣ (ತ್ಯಾಗ) ೪೪೬ ದರ್ಭೆಗಳು ಹವಿಸ್ಸು ೪೨೨ ಬ್ರಾಹ್ಮಣ ಭೋಜನಾದಿಗಳು ೪೨೩ ವಿಪ್ರವಾಂತಿಯಾದಲ್ಲಿ ೪೪೮ ವರ್ಜಗಳು ೪೨೪ ಭೋಜನಾಂತರದಲ್ಲಿ ತೃಪ್ತಿ ಶಾದಿನ ಕೃತ್ಯ ೪೨೬ ಪ್ರಶ್ನಾದಿಗಳು ೪೫೦ ಶ್ರಾದ್ಧದಲ್ಲಿ ಬ್ರಾಹ್ಮಣ ಸಂಖ್ಯೆ ೪೨೮ ಪಿಂಡಪ್ರಧಾನ ೪೫೧ ಸಾಮಾನ್ಯ ಶ್ರಾದ್ಧ ಪರಿಭಾಷೆ ೪೩೦ ಪಿಂಡವು ಒಡೆದರೆ ಅಥವಾ ಆಚಮನಗಳು ೪೩೧ [ಉಚ್ಚಿಷ್ಟಾದಿಗಳ ಸ್ಪರ್ಶವಾದರೆ ೪೫೩ ದರ್ಭೆಗಳು ೪೩೧ ಪಿಂಡನಿಷೇಧ ನಿರ್ಣಯ ೪೫೩ ವಿಚಾರ ೪೩೨ ವಿಕಿರ ಪಿಂಡವಿಚಾರ ೪೫೪ ಸಂಕ್ಷಿಪ್ತ ಆಶ್ವಲಾಯನಾದಿ ಆಶೀರ್ವಾದ ಪ್ರಾರ್ಥನಾದಿಗಳು ೪೫೪ XXVII ಶ್ರಾದ್ಧಶೇಷ ಭೋಜನ ವಿಷಯ ಶ್ರಾದ್ಧದಿನ ವೈಶ್ವದೇವ ನಿರ್ಣಯ ೪೫೬ ಆಶೌಚ ನಿರ್ಣಯ ಗರ್ಭನಾಶ ಜನನಾದ್ಯಾಶೌಚ ೪೭೩ ನಿತ್ಯಶ್ರಾದ್ಧ ೪೫೭ ಸಪಿಂಡ, ಸಮಾನೋದಕ, ಸಗೋತ್ರ ಶ್ರಾದ್ಧದಲ್ಲಿ ಗೌಣಕಲ್ಪ ೪೫೭ ನಿರ್ಣಯ ೪೭೪ ಆಮಶ್ರಾದ್ಧ ೪೫೮ ಪಿತ್ರಾದಿಗಳ ಮನೆಯಲ್ಲಿ ಕನ್ಯಾ ಹಿರಣ್ಯಶ್ರಾದ್ಧ ೪೫೮ ಪ್ರಸೂತಳಾದರೆ 428 ಪಕ್ವಾನ್ನದ್ರವ್ಯದಿಂದ ಮಾಡುವ ಮೃತವಾಗಿ ಹುಟ್ಟಿದ, ಹುಟ್ಟಿ ಸಾಂಕಲ್ಪಿಕ ಶ್ರಾದ್ಧವಿಧಿ ೪೫೯ |ಮೃತವಾದ ಜನನ ಆಶೌಚ ೪೭೬ ಇನ್ನೂ ಉಳಿದ ಅನುಕಲ್ಪಗಳು ೪೫೯ |ಮೃತಾಶೌಚ ೪೭೬ ಶ್ರಾದ್ಧಭೋಜನದಲ್ಲಿ ಪ್ರಾಯಶ್ಚಿತ್ತ ೪೬೦ ಸಜ್ಯೋತಿ ಶಬ್ದಾರ್ಥ ಕ್ಷಯಾಹಶ್ರಾದ್ಧದಲ್ಲಿ ವಿಶೇಷ ೪೭೬ ೪೬೧ ಪಕ್ಷಿಣೀ ಶಬ್ದಾರ್ಥ ೪೭೮ ಕ್ಷಯಾಹದಲ್ಲಿ ಅಜ್ಞಾನದಲ್ಲಿ ಅತಿಕಾಂತಾಶೌಚ ೪೮೨ ನಿರ್ಣಯ ೪೬೨ ಆಹಿತಾಗ್ನಿ ಅನಾಹಿತಾಗ್ನಿ ನಿರ್ಣಯ ೪೮೩ ಶ್ರಾದ್ಧವಿಘ್ನವಾದಲ್ಲಿ ನಿರ್ಣಯ ೪೬೨ ಆಶೌಚ ಸಂಪಾತದಲ್ಲಿ ನಿರ್ಣಯ ೪೮೪ ಶ್ರಾದ್ಧದಲ್ಲಿ ಆಶೌಚಪ್ರಾಪ್ತಿ ಶವಸ್ಪರ್ಶ ಅನುಗಮನಾದಿ ಜ್ಞಾನವಾದರೆ ೪೬೪ ಸಂಪರ್ಕಾಶೌಚ ೪೮೭ ಶ್ರಾದ್ಧದಿನ ಅತಿಕ್ರಮವಾದರೆ ಪತ್ನಿಯ ರಜೋದೋಷ ವಿಷಯ ಸ್ತ್ರೀಯು ಪತಿಯ ಉದ್ದಿಶ್ಯ ಅಗ್ನಿಪ್ರವೇಶ ಮಾಡಿದ್ದರೆ ತಿಲತರ್ಪಣ ೪೬೪ ಅನುಗಮನದಲ್ಲಿ ೪೬೪ ನಿರ್ವಹಣದಲ್ಲಿ ೪೮೭ ೪೮೮ ದಹನಾದಿಗಳಲ್ಲಿ ೪೮೮ ೪೬೪ ರೋದನದಲ್ಲಿ ೪೮೯ ಆಶೌಚಿಗಳ ಅನ್ನಭಕ್ಷಣದಲ್ಲಿ ೪೯೦ ೪೬೭ ಅಲ್ಪಸಂಬಂಧವಿಷಯ ಶ್ರಾದ್ಧಾಂಗ ತರ್ಪಣ ನಿಷೇಧ ೪೬೮ ಆಶೌಚದಲ್ಲಿ ಸ್ನಾನ ಆವಶ್ಯಕ ೪೯೧ ತರ್ಪಣ ಪ್ರಕಾರ ಆಶೌಚಾಪವಾದ ೪೯೧ ತಿಲತರ್ಪಣ ನಿಷೇಧಕಾಲ ತಿಥ್ಯಾದಿ ನಿಷೇಧಾಪವಾದಗಳು ನಾಂದೀಶ್ರಾದ್ದ ಪ್ರಯೋಗ ವಿಚಾರ ವಿಭಕ್ತಾವಿಭಕ್ತ ನಿರ್ಣಯ ತೀರ್ಥಶ್ರಾದ್ಧ ತೀರ್ಥಯಾತ್ರಾವಿಧಿ ೪೬೯ ಕರ್ಮಮೂಲಕ ಕರ್ತೃಮೂಲಕ ೪೯೧ ೪೯೨ ೪೬೯ ದ್ರವ್ಯಮೂಲಕ ೪೬೯ |ಮೃತದೋಷದಿಂದ ೪೭೦ ವಿಶೇಷವು ೪೯೩ ೪೯೪ ತೀರ್ಥದ ಸಮೀಪದಲ್ಲಿ ನಿಯಮ ಪರಾರ್ಥಸ್ನಾನ ವಿಷಯ ೪೭೨ ಸರ್ಪಹತನಾದವನ ವಿಷಯದಲ್ಲಿ ೪೯೬ ೪೭೨ | ದುರ್ಮರಣಾದಿಗಳಲ್ಲಿ ಪ್ರಾಯಶ್ಚಿತ್ತ ೪೯೬ ವಿಧಿವಿಹಿತಗಳಾದ ಜಲಾದಿ XXVIII ಮರಣದಲ್ಲಿ ಪತಿತಾದಿ ವಿಚಾರ ೪೯೮ ಸಾಗ್ನಿಯಾದವನಿಗೆ ವಿಶೇಷ ೫೧೦ ೪೯೯ ಶವ ಒಯ್ಯುವಿಕೆ-ಅದರ ವಿಧಾನ ೫೧೩ ಪತಿತ ಉದಕದಾನವಿಧಿ ವಿಧಾನದೆಸೆಯಿಂದ ಜೀವಿಸಿರುವವನಾದರೂ ೪೯೯ |ಆಶೌಚದಲ್ಲಿ ಭೋಜನಾದಿನಿಯಮ ೫೧೪ ೫೦೦ |ಅಸ್ಥಿಸಂಚಯನ ದಶಾಹಕೃತ್ಯ ೫೧೫ ೫೧೫ ಆಶೌಚ ಸ್ವೀಕಾರ ಪ್ರಸಂಗ ಔರ್ಧ್ವದೇಹಿಕ ಆರಂಭ ೫೦೦ |ದಶಾಹಮಧ್ಯದಲ್ಲಿ ಅಮಾವಾಸ್ಯೆ ನವಶ್ರಾದ್ದ ೫೧೬ ೫೧೭ ಉಪಯುಕ್ತ ನಾರಾಯಣಬಲ್ಯಾದಿ ದಶಮದಿನ ಮುಂಡನ ೫೧೮ ವಿಚಾರ ೫೦೦ |ಅಕ್ಷೇಪ ವಿಧಿ (ವಿಸರ್ಜನೆ) ೫೧೯ ಸರ್ಪಹತನಾದಲ್ಲಿ ವ್ರತ ೫೦೧ ತೀರ್ಥದಲ್ಲಿ ಅಸ್ತಿಕ್ಷೇಪ ೫೧೯ ಪಾಲಾಶಪ್ರತಿಕೃತಿದಾಹಾದಿ ವಿಧಿ ೫೦೨ | ಯಕ್ಷಕರ್ದಮ ಲಕ್ಷಣ ೫೨೦ ಅತೀತ ಪ್ರೇತಸಂಸ್ಕಾರ ಕಾಲ ೫೦೩ ಏಕಾದಶಾಹ ಕೃತ್ಯ ೫೨೧ ತ್ರಿಪುಷ್ಕರಯೋಗ ೫೦೩ | ವೃಷೋತ್ಸರ್ಗ ೫೨೧ ದ್ವಿಪುಷ್ಕರಯೋಗ ೫೦೩ ನೀಲವೃಷ ಲಕ್ಷಣ ಶಾಖಾಸಂಸ್ಕಾರದ ನಂತರ ಮಹೈಕೋದ್ದಿಷ್ಟ ಶ್ರಾದ್ಧ ೫೨೨ ದೇಹವು ದೊರಕಿದರ ಜೀವಿಸಿರುವವನಿಗೆ ೫೦೪ ಆದ್ಯಮಾಸಿಕಾದಿ ವಿಚಾರ ೫೨೩ ರುದ್ರಗಣಶ್ರಾದ್ಧ ೫೨೪ ಔರ್ಧ್ವದೇಹಿಕವಾದರೆ ೫೦೪ ವಸುಗಣ ಶ್ರಾದ್ಧ ೫೨೪ ಘಟಸ್ಫೋಟವಿಧಿ ಪದದಾನಗಳು ೫೨೪ ಘಟಸ್ಫೋಟ ಹೊಂದಿದವನ ಶಯ್ಯಾದಾನ ೫೨೫ ಪುನಃ ಗ್ರಾಹ್ಯ ವಿಧಾನ ೫೦೫ | ಉದಕುಂಭದಾನ ೫೨೫ ಅಂತ್ಯೇಷ್ಟಿ ನಿರ್ಣಯ ೫೦೬ | ಉದಕುಂಭ ಶ್ರಾದ್ಧವಿಧಿ ೫೨೬ ಪ್ರಾಯಶ್ಚಿತ್ತ ದಶದಾನಾದಿಗಳು ಷೋಡಶಮಾಸಿಕಗಳು ೫೨೭ ತಿಲಪಾತ್ರದಾನಾದಿಗಳು ೫೦೭ [ಅಹಿತಾಗ್ನಿಗೆ ವಿಶೇಷವು ೫೨೭ ವೈತರಣೀ ವಿಧಿ ೫೦೮ (ಊನಶ್ರಾದ್ಧಗಳಲ್ಲಿ ವರ್ಜಗಳು ೫೨೭ ಉತ್ಕಾಂತಿಧೇನು ದಾನ ಸಪಿಂಡೀಕರಣ ವಿಚಾರ ೫೨೯ ಕ್ಷೌರನಿರ್ಣಯ ೫೦೮ ಸಪಿಂಡನಾದಿ ಅಧಿಕಾರ ವಿಚಾರ ೫೨೯ ಶವಕ್ಕೆ ಅಸ್ಪಶ್ಯ ಸ್ಪರ್ಶಾದಿಗಳಲ್ಲಿ ವುಮ ಮರಣದಲ್ಲಿ ೫೩೧ ಪ್ರಾಯಶ್ಚಿತ್ತ ೫೦೯ ಸ್ತ್ರೀವಿಷಯದಲ್ಲಿ ವಿಶೇಷ ೫೩೨ ದಂಪತಿಗಳ ಏಕಕಾಲ ದಹನದಲ್ಲಿ ೫೦೯ |ವಾಥೇಯ ಶ್ರಾದ್ಧಾದಿ ವಿಚಾರ Haa ಮರಣ ಕಾಲದಲ್ಲಿ ಪುಣ್ಯಸೂಕ್ತಾದಿ ಶ್ರವಣ ಪ್ರಥಮಾಬ್ಬದಲ್ಲಿ ನಿಷಿದ್ಧಗಳು Haa ೫೦೦ ವಿಧಾನಗಳು ೫೩೪ XXIX ಧನಿಷ್ಠಾ ಪಂಚಕಮರಣದಲ್ಲಿ ತ್ರಿಪಾದನಕ್ಷತ್ರ ತ್ರಿಪುಷ್ಕರ ೫೩೪ | ಪ್ರೇಷೋಚ್ಚಾರ ೫೪೯ ಪರ್ಯಂಕಶೌಚ ಪ್ರಯೋಗ ೫೫೦ ಯೋಗದಲ್ಲಿ ಮರಣವಾದಲ್ಲಿ ೫೩೫ |ಯೋಗಪಟ್ಟ ೫೫೧ ಬ್ರಹ್ಮಚಾರಿಯ ಮರಣದಲ್ಲಿ ೫೩೬ |ಅಗ್ನಿಹೋತ್ರಿಗೆ ವಿಶೇಷ 9290 ಕುಷ್ಟಿಮರಣದಲ್ಲಿ ೫೩೭ |ಅದರಲ್ಲಿ ಬ್ರಹ್ಮಾನ್ನಾಧಾನ XHO ರಜಸ್ವಲಾದಿ ಮರಣದಲ್ಲಿ 922 ಆತುರ ಸಂನ್ಯಾಸ Ra ಗರ್ಭಿಣೀ ಮರಣದಲ್ಲಿ ೫೩೭ ಅದರ ಪ್ರಯೋಗ RЯa ಸ್ತ್ರೀಯರ ಸಹಗಮನ ೫೩೮ |ಮೃತಯತಿ ಸಂಸ್ಕಾರ ಸಹಗಮನ ಪ್ರಯೋಗ 292, es ರಜಸ್ವಲಾದಿ ಸಹಗಮನ ವಿಚಾರ ಹನ್ನೊಂದನೆದಿನ ಪಾರ್ವಣ ಶ್ರಾದ್ಧ ೫೫೫ ಹನ್ನೆರಡನೇದಿನ ನಾರಾಯಣ ಬಲಿ 29292 ಸಹಗಮನದಲ್ಲಿ ಪಿಂಡಾದಿ ವಿಚಾರ ೫೪೦ ದ್ವಾದಶಾಹ, ತ್ರಯೋದಶಾಹದಲ್ಲಿ ವಿಧವಾಧರ್ಮಗಳು ೫೪೧ ಯಥಾಚಾರ ಆರಾಧನ ೫೫೭ ಸಂನ್ಯಾಸ ಪ್ರಕರಣ ೫೪೧ ಯತಿಸಂಸ್ಕಾರಕ್ಕೆ ಅಧಿಕಾರಾದಿ ಸಂನ್ಯಾಸವು ನಾಲ್ಕು ವಿಧ ೫೪೨ ನಿರ್ಣಯ Xxes ಸಂನ್ಯಾಸ ಗ್ರಹಣ ವಿಧಿ ೫೪೩ | ಪ್ರಸಂಗಾನುಸಾರ ಯತಿ ಧರ್ಮಗಳು ೫೫೯ ಅಷ್ಟಶ್ರಾದ್ಧಗಳು ೫೪೩ ಸಂನ್ಯಾಸ ಗ್ರಹಣ ಪ್ರಯೋಗ ೫೪೬ ಗ್ರಂಥೋಪಸಂಹಾರ ಸಾವಿತ್ರಿ ಪ್ರವೇಶಾದಿಗಳು ಪರಿಶಿಷ್ಟ:೧ (ಆಶೌಚ ಸಂಗ್ರಹ) ಅಸ್ತಾತ್ತೂರ್ವ ಬ್ರಹ್ಮಾನ್ನಾಧಾನ ೫೪೬ ಪರಿಶಿಷ್ಟ:೨ (ಏಕಾದಶೀ ನಿರ್ಣಯ ವಿರಜಾಹೋಮ ೫೪೭ ಪಟ್ಟಿಕೆ) ೫೭೬ ಸರ್ವತ್ಯಾಗ ವಿಧಿ ೫೪೮ ಪರಿಶಿಷ್ಟ:೩ (ಪಾರಿಭಾಷಿಕ ಪದಕೋಶ) ೫೮೩ಪರಿಚ್ಛೇದ - ೧ ಧರ್ಮಸಿಂಧು ಪ್ರಥಮ ಪರಿಚ್ಛೇದ || ಶ್ರೀ ಗಣೇಶಾಯ ನಮಃ || ||ಶ್ರೀ ಪಾಂಡುರಂಗಾಯ ನಮಃ || ಶ್ರೀ ವಿಠಲಂ ಸುಕರುಣಾರ್ಣವಮಾಶುತೋಷಂ ದೀನೇಷ್ಟ ಪೋಷಮಘಸಂಹತಿಸಿಂಧುಶೂಷಂ| ಶ್ರೀ ರುಮತಿಮುಷಂ ಪುರುಷಂ ಪರಂ ತಂ ವಂದೇ ದುರಂತಚರಿತಂ ಹೃದಿಸಂಚರಂತಂ||l ವಂದೇಪ್ರತಿಜ್ಞಂತಮಘಾನಿಶಂಕರಂಧತ್ತಾಂಸಮಮೂರ್ಗ್ನಿರಿವಾನಿಶಂಕರಂ ಶಿವಾಂಚ ವಿಶ್ಲೇಶಮಥ ಪಿತಾಮಹಂ ಸರಸ್ವತೀಮಾಶು ಭಜೇ ಪಿತಾಮಹಂ ||೨|| ಶ್ರೀ ಲಕ್ಷ್ಮೀಂ ಗರುಡಂ ಸಹಸ್ರ ಶಿರಸಂ ಪ್ರದ್ಯುಮ್ನ ಮೀಶಂಕಪಿಂ ಶ್ರೀ ಸೂರ್ಯ೦ ವಿಧುಭೌಮವಿದ್ದುರು ಕವಿಚ್ಛಾಯಾಸುತಾನ್ ಷಣ್ಮುಖಂ|| ಇಂದ್ರಾದ್ಯಾನ್ ವಿಬುಧಾನ್ ಗುರೂಂಶ ಜನನೀಂ ತಾತಂತ್ವನಂತಾಭಿರು ನತ್ವಾರ್ಯಾನ್ ವಿತನೋಮಿ ಮಾಧವ ಮುಖಾನ್ ಧರ್ಮಾಬ್ಬಿ ಸಾರಂ ಮಿತಂ ||೩|| ದೃಷ್ಟಾಪೂರ್ವನಿಬಂಧಾನ್ ನಿರ್ಣಯಸಿಂಧುಕ್ರಮೇಣ ಸಿದ್ದಾರ್ಥಾನ್ ಪ್ರಾಯಣಮೂಲವಚನಾನ್ನುಜ್ಜಿಲಿಖಾಮಿ ಬಾಲಬೋಧಾಯ||೪|| ದಯಾಸಮುದ್ರ, ಶೀಘ್ರ ಒಲಿಯುವ, ದೀನಜನರ ಇಷ್ಟವನ್ನು ಪೂರೈಸಿ ಹರ್ಷಗೊಳಿಸುವ, ಪಾಪಸಮೂಹವೆಂಬ ಸಮುದ್ರವನ್ನು ಒಣಗಿಸುವ, ರುಕ್ಷ್ಮಿಣೀದೇವಿಯ ಚಿತ್ತವನ್ನಪಹರಿಸುವ, ಅಂತಪಾರವಿಲ್ಲದ ಚರಿತ್ರೆಯುಳ್ಳ, ನಮ್ಮ ಹೃದಯದಲ್ಲಿ ಸಂಚರಿಸುವ ಪರಮಾತ್ಮನಾದ ಶ್ರೀ ವಿಟ್ಠಲನನ್ನು ನಮಸ್ಕರಿಸುವನು ||೧|| ಪಾಪಗಳನ್ನು ನಾಶಮಾಡುವ ಶಂಕರನಿಗೆ ನಮಸ್ಕರಿಸುವನು. ಶಂಕರನು ಹಗಲು ರಾತ್ರಿಗಳಲ್ಲಿ ನನ್ನ ತಲೆಯ ಮೇಲೆ ಹಸ್ತವನ್ನಿಡಲಿ, ಪಾರ್ವತಿಯನ್ನೂ, ಗಣಪತಿಯನ್ನೂ, ಬ್ರಹ್ಮನನ್ನೂ, ಆ ಸರಸ್ವತಿಯನ್ನೂ ಭಜಿಸುವೆನು ||೨|| ಶ್ರೀ ಲಕ್ಷ್ಮಿ, ಗರುಡ, ಮಹಾಶೇಷ, ಮನ್ಮಥ, ಶಿವ, ಹನುಮಂತ, ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಸುಬ್ರಹ್ಮಣ್ಯ, ಇಂದ್ರಾದಿ ದೇವತೆಗಳು, ಗುರುಜನರು, ತಾಯಿ, ಅನಂತನೆಂಬ ತಂದೆ, ಸ್ವಜನರು ಮತ್ತು ಮಾಧವಾಚಾರ್ಯ ಮೊದಲಾದ ಧಾರ್ಮಿಕರು ಇವರನ್ನೆಲ್ಲ ನಮಸ್ಕರಿಸಿ, ಮಿತವಾದ ಈ “ಧರ್ಮಾಬ್ದಸಾರ"ವೆಂಬ ಗ್ರಂಥವನ್ನು ವಿರಚಿಸುವೆನು.||೩|| و ಧರ್ಮಸಿಂಧು ಪೂರ್ವಜನರ ಧರ್ಮ ನಿಬಂಧಗಳನ್ನು ನೋಡಿ ನಿರ್ಣಯಸಿಂಧುವನ್ನು ಬರದ ರೀತಿಯಿಂದ, ಆದರೆ ಹೆಚ್ಚಾಗಿ ಮೂಲವಚನಗಳನ್ನು ಬಿಟ್ಟು ಅವುಗಳಿಂದ ಸಿದ್ಧವಾದ ಅರ್ಥಗಳನ್ನಷ್ಟೇ ಅಜ್ಞ ಜನರ ತಿಳಿವಳಿಕೆಗಾಗಿ ಬರೆಯುತ್ತಿದ್ದೇನೆ ||೪|| ಕಾಲ ನಿರ್ಣಯ ಕಾಲವನ್ನು ಆರು ರೀತಿಯಿಂದ ವಿಭಾಗಿಸಲಾಗಿದೆ. ಸಂವತ್ಸರ, ಆಯನ, ಋತು, ಮಾಸ, ಪಕ್ಷ, ದಿವಸ ಇವೇ ಆರು ವಿಭಾಗಗಳು. ಸಂವತ್ಸರ ಚಾಂದ್ರ, ಸೌರ, ಸಾವನ, ನಾಕ್ಷತ್ರ, ಬಾರ್ಹಸ್ಪತ್ಯ ಹೀಗೆ ಸಂವತ್ಸರದಲ್ಲಿ ಐದು ವಿಧಗಳಿವೆ. ಶುಕ್ಲ ಪ್ರತಿಪದೆಯಿಂದ ಅಮಾವಾಸ್ಯೆಯ ವರೆಗೆ ಒಂದು ಮಾಸದಂತೆ ಹಿಡಿದು ಚೈತ್ರಾದಿಸಂಜ್ಞೆಗಳುಳ್ಳ ಹನ್ನೆರಡು ಮಾಸಗಳಿಂದ, ಅಧಿಕಬಂದಾಗ ಹದಿಮೂರು ಮಾಸಗಳಿಂದ ಇದು “ಚಾಂದ್ರಸಂವತ್ಸರ"ವಾಗುವದು. ಇದಕ್ಕೆ ೩೫೪ ದಿನಗಳು. ಪ್ರಭವ, ವಿಭವ ಇತ್ಯಾದಿ ೬೦ ಹೆಸರುಗಳಿವೆ. ಸೌರಸಂವತ್ಸರ ಅಂದರೆ ಸೂರ್ಯನು ಮೇಷಾದಿ ೧೨ ರಾಶಿಗಳನ್ನು ಭೋಗಿಸುವ ಕಾಲ. ಇದಕ್ಕೆ ೩೬೫ ದಿನಗಳು, ಸಾವನವತ್ಸರ ಅಂದರೆ ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯಕ್ಕಾಗುವ ಒಂದು ದಿನದಂತೆ ೩೬೦ ದಿನಗಳಿಂದ ಕೂಡಿದ್ದು.

ನಾಕ್ಷತ್ರವತ್ಸರಕ್ಕೆ ಮುಂದೆ ಹೇಳಲ್ಪಡುವ ೧೨ ನಾಕ್ಷತ್ರ ಮಾಸಗಳಾಗುವವು. ಇದಕ್ಕೆ ೩೨೪ ದಿನಗಳಾಗುವವು. ಮೇಷಾದಿ ಹನ್ನೆರಡು ರಾಶಿಗಳ ಯಾವುದಾದರೊಂದು ರಾಶಿಯಲ್ಲಿ ಗುರುವು ಸಂಚರಿಸುವ ವರ್ಷಕ್ಕೆ “ಬಾರ್ಹಸ್ಪತ್ಯ"ವೆನ್ನುವರು. ಇದಕ್ಕೆ ೩೬೧ ದಿನಗಳಾಗುವವು. ಕರ್ಮಾದಿಗಳ ಸಂಕಲ್ಪದಲ್ಲಿ ಚಾಂದ್ರ ಸಂವತ್ಸರವನ್ನೇ ಸ್ಮರಿಸತಕ್ಕದ್ದು. ಎರಡು ವಿಧ ಅಯನಗಳು-ಸೂರ್ಯನು ಕರ್ಕರಾಶಿಯಿಂದ ಆರಂಭಿಸಿ ಮಕರ ರಾಶಿವರೆಗೆ ಸಂಚರಿಸುವ ಕಾಲಕ್ಕೆ ದಕ್ಷಿಣಾಯನವನ್ನುವರು. ಮಕರದಿಂದ ಕರ್ಕದವರೆಗಿನ ಸಂಚರಿಸುವ ಕಾಲವು ಉತ್ತರಾಯಣವು (ವಾಸ್ತವವಾಗಿ ಈ ಎರಡು ಅಯನಗಳೂ ಅಯನಾಂಶದಷ್ಟು ಹಿಂದೆಯೇ ಆಗುವವು ಎಂಬುದನ್ನು ಜ್ಯೋತಿಃಶಾಸ್ತ್ರಜ್ಞರು ತಿಳಿದೇ ಇರುವರು.) ಋತುಗಳು ಆರು. ಅದರಲ್ಲೂ “ಚಾಂದ್ರ ಋತು” ಮತ್ತು “ಸೌರ ಋತು” ಎಂದು ಎರಡು ವಿಧವು. ಮೀನ ಅಥವಾ ಮೇಷದಿಂದ ಹಿಡಿದು ಎರಡೆರಡು ಮಾಸಗಳಿಂದ ಒಂದೊಂದು ಸೌರ ಋತುವಾಗುವದು. ಇವುಗಳಿಗೂ ವಸಂತ ಮೊದಲಾದ ಸಂಜ್ಞೆಗಳಿವೆ. ಚೈತ್ರಾದಿ ಎರಡೆರಡು ತಿಂಗಳಿಂದ ವಸಂತಾದಿ ಸಂಜ್ಞೆಗಳಿಂದ ಚಾಂದ್ರಋತುಗಳಾಗುವವು. ಮಲಮಾಸ ಸಂಭವಿಸಿದಾಗ ಆ ಚಾಂದ್ರ ಋತುವಿನಲ್ಲಿ ಸ್ವಲ್ಪ ಕಡಿಮೆ ೯೦ ದಿನಗಳಾಗುವವು. ಶೌತ ಸ್ಮಾರ್ತಾದಿ ಕರ್ಮಗಳಲ್ಲಿ ಈ ಚಾಂದ್ರ ಋತು ಸ್ಮರಣೆಯೇ ಪ್ರಶಸ್ತವಾದದ್ದು. ಮಾಸಗಳಲ್ಲಿ ಚಾಂದ್ರ, ಸೌರ, ಸಾವನ, ನಾಕ್ಷತ್ರ ಹೀಗೆ ನಾಲ್ಕು ವಿಧಗಳಿವೆ. ಪರಿಚ್ಛೇದ - ೧ મો. ಚಾಂದ್ರದಲ್ಲಾದರೂ ಅಮಾಂತ, ಪೂರ್ಣಿಮಾಂತ ಹೀಗೆ ಎರಡು ಪ್ರಕಾರಗಳಿವೆ. ಶುಕ್ಲ ಪ್ರತಿಪದಿ ಆದಿಯಾಗಿ ಅಮಾವಾಸ್ಯೆಪರ್ಯಂತದ ಮಾಸವು “ಅಮಾಂತ“ವು. ಬಹುಳ ಪ್ರತಿಪದಿಯಿಂದ ಹಿಡಿದು ಪೂರ್ಣಿಮೆಯವರೆಗೆ ಗಣಿಸುವ ಮಾಸವು ಪೂರ್ಣಿಮಾಂತ"ವಾಗುವದು. ಇವುಗಳಲ್ಲಿ ಶುಕ್ಲಾದಿಯೇ ಮುಖ್ಯವು. ಕೃಷ್ಣಾದಿ ಮಾಸಗಳನ್ನು ವಿಂಧೋತ್ತರಗಳಲ್ಲಿ ಆಚರಿಸುವರು. ಸಂಕಲ್ಪದ ಮಾಸಗಳನ್ನು ಚ್ಚರಿಸುವಾಗಿ ಚೈತ್ರಾದಿ ಮಾಸಗಳೇ ಪ್ರಶಸ್ತ್ರಗಳು, ಕೆಲವರು ಮೀನರಾಶಿಯನ್ನಾರಂಭಿಸಿದ ಸೌರಮಾಸಗಳಿಗೆ ಚೈತ್ರಾದಿ ಸಂಜ್ಞೆಗಳನ್ನು ಹೇಳುವರು. ಸೂರ್ಯನ ಒಂದು ಸಂಕ್ರಾಂತಿಯಿಂದ ಇನ್ನೊಂದು ಸಂಕ್ರಾಂತಿಯವರೆಗಿನ ಕಾಲಕ್ಕೆ “ಸೌರಮಾಸ"ವೆನ್ನುವರು. “ಸಾವನ"ಮಾಸಕ್ಕೆ ೩೦ ದಿನಗಳು, ಚಂದ್ರನ ಅಶ್ವಿನ್ಯಾದಿ ೨೭ ನಕ್ಷತ್ರಗಳ ಭೋಗದಿಂದ ನಾಕ್ಷತ್ರಮಾಸವಾಗುವದು. ಮಾಸಕ್ಕೆ ಎರಡು ಪಕ್ಷಗಳು. ಶುಕ್ಲ ಪ್ರತಿಪದಿಯಿಂದ ಹುಣ್ಣಿಮೆಯವರೆಗೆ ಶುಕ್ಲಪಕ್ಷವು. ಕೃಷ್ಣಪ್ರತಿಪದಿಯಿಂದ ಅಮವಾಸೆಯವರೆಗೆ ಕೃಷ್ಣಪಕ್ಷವು. ಒಂದು ದಿನಕ್ಕೆ ೬೦ ಘಟಿ. ಇಲ್ಲಿಗೆ “ಧರ್ಮಸಿಂಧುಸಾರ"ದಲ್ಲಿ ಮೊದಲನೇ ಉದ್ದೇಶವು ಮುಗಿಯಿತು. ಸಂಕ್ರಾಂತಿ ನಿರ್ಣಯ ಸೂರ್ಯನ ಮೇಷಸಂಕ್ರಾಂತಿಯಲ್ಲಿ ಹಿಂದೆ ೧೫, ಮುಂದೆ ೧೫ ಘಟಿಗಳು ಪುಣ್ಯಕಾಲವು. ಕೆಲವರು ೧೦-೧೦ ಘಟಿಗಳೆನ್ನುವರು. ವೃಷಭ ಸಂಕ್ರಾಂತಿಯಲ್ಲಿ ಹಿಂದೆ ೧೬ ಘಟಿಗಳು, ಮಿಥುನದಲ್ಲಿ ಮುಂದಿನ ೧೬ ಘಟಿಗಳು, ಕರ್ಕದಲ್ಲಿ ಹಿಂದೆ ೩೦ ಘಟಿಗಳು, ಸಿಂಹದಲ್ಲಿ ಹಿಂದೆ ೧೬ ಘಟಿಗಳು, ಕನೈಯಲ್ಲಿ ಮುಂದಿನ ೧೬ ಘಟಿಗಳು, ತುಲೆಯಲ್ಲಿ ಹಿಂದೆ ಮತ್ತು ಮುಂದೆ ೧೫-೧೫ ಘಟಗಳು, ೧೦-೧೦ ಎಂದು ಕೆಲವರ ಮತ. ವೃಶ್ಚಿಕದಲ್ಲಿ ಹಿಂದೆ ೧೬, ಧನುವಿನಲ್ಲಿ ಮುಂದಿನ ೧೬, ಮಕರದಲ್ಲಿ ಮುಂದೆ ೪೦, ಕುಂಭದಲ್ಲಿ ಹಿಂದೆ ೧೬, ಮೀನದಲ್ಲಿ ಮುಂದೆ ೧೬ ಈ ಘಟಿಗಳು ಪುಣ್ಯಕಾಲವು. ಎರಡು ಘಟಿಯಷ್ಟು ಅಲ್ಪಕಾಲ, ದಿನದ ಕೊನೆಯಲ್ಲಿ ಸಂಕ್ರಾಂತಿಯಾದರೆ-ಮಿಥುನ, ಕನ್ಯಾ, ಧನು, ಮೀನಗಳಲ್ಲಾದರೂ ಮಕರದಲ್ಲಿಯೂ ಸಹ ಹಿಂದಿನ ಘಟಿಗಳೇ ಪುಣ್ಯಕಾಲವು. ಪ್ರಭಾತ ಕಾಲದಲ್ಲಿ ಎರಡು ಘಟಿ ಮೊದಲಾದ ಅಲ್ಪಕಾಲದಲ್ಲಿ ಸಂಕ್ರಾಂತಿಯಾದಲ್ಲಿ ವೃಷ ಸಿಂಹ, ವೃಶ್ಚಿಕ, ಕುಂಭಗಳಲ್ಲಿಯೂ, ಕರ್ಕದಲ್ಲಿಯಾದರೂ ಮುಂದಿನವೇ ಪುಣ್ಯಕಾಲವು. ಕೆಲವರು ಪ್ರಭಾತಕಾಲದಲ್ಲಿ ಸಂಕ್ರಾಂತಿಯಾದರೆ ಪೂರ್ವದಿನದಲ್ಲಿ ಪುಣ್ಯವೆಂದು ಹೇಳುವರು. ರಾತ್ರಿಯಲ್ಲಿ ಸಂಕ್ರಮಣವಾದರೆ ಮಧ್ಯರಾತ್ರಿ ಒಳಗೆ ಪೂರ್ವದಿನದ ಉತ್ತರಾರ್ಧ, ಮಧ್ಯರಾತ್ರಿ ನಂತರ ಸಂಕ್ರಾಂತಿಯಾದರೆ ಪರದಿನದ ಪೂರ್ವಾರ್ಧ ಪುಣ್ಯಕಾಲವು ನಡು ಮಧ್ಯರಾತ್ರಿಯಲ್ಲಾದರೆ ಎರಡೂ ದಿನ ಅಂದರೆ ಪೂರ್ವದಿನದ ಉತ್ತರಾರ್ಧ, ಪರದಿನದ ಪೂರ್ವಾರ್ಧಗಳು ಪುಣ್ಯಕಾಲವು. ರಾತ್ರಿಯಲ್ಲಾದ ಎಲ್ಲ ಸಂಕ್ರಾಂತಿಗಳಲ್ಲಿಯೂ ಹೀಗೇ ತಿಳಿಯತಕ್ಕದ್ದು, ಆದರೆ ಮಕರ-ಕರ್ಕ ಸಂಕ್ರಾಂತಿಗಳಿಗೆ ಈ ನಿಯಮವು ಸಂಬಂಧಿಸುವದಿಲ್ಲ. ಅಯನಸಂಜ್ಜಿತವಾದ ಮಕರ ಸಂಕ್ರಾಂತಿಯು ರಾತ್ರಿಯಲ್ಲಾದರೆ ಸರ್ವತ್ರ ಪರದಿನವೇ ಪುಣ್ಯವು. ಕರ್ಕ ಸಂಕ್ರಾಂತಿಯು ರಾತ್ರಿಯಲ್ಲಾದರೆ ಪೂರ್ವದಿನವೇ ಪುಣ್ಯವು. ಸೂರ್ಯಾಸ್ತದ ನಂತರ ಮೂರುಘಟಿಕಾಲಕ್ಕೆ “ಸಾಯಂಸಂಧ್ಯಾ’ ಎನ್ನುವರು. ಆ ಸಮಯ ಮಕರ ಸಂಕ್ರಾಂತಿಯಾದರೆ ಪೂರ್ವದಿನವು ಪುಣ್ಯವು ಸೂರ್ಯೋದಯಕ್ಕಿಂತ ಮೊದಲು ಮೂರು ಘಟಿಯವರೆಗಿನ ಕಾಲಕ್ಕೆ “ಪ್ರಾತಃಸಂಧ್ಯಾ ಎನ್ನುವರು. ಅಲ್ಲಿ ಕರ್ಕಸಂಕ್ರಾಂತಿಯಾದರೆ || ಧರ್ಮಸಿಂಧು ಪರದಿನವು ಪುಣ್ಯಕಾಲವು. ಹೀಗೆ ಸಂಧ್ಯಾಕಾಲಗಳಲ್ಲಿ ವಿಶೇಷವಿದೆ ಎಂದು ಜ್ಯೋತಿಃಶಾಸ್ತ್ರದಲ್ಲಿ ಪ್ರಸಿದ್ಧವಿದೆ. ದಾನವಿಚಾರ ಮೇಷಸಂಕ್ರಾಂತಿಯಲ್ಲಿ ಕುರಿಯನ್ನು ದಾನಮಾಡತಕ್ಕದ್ದು. ವೃಷಭದಲ್ಲಿ ಗೋದಾನವು ಮಿಥುನದಲ್ಲಿ ಅನ್ನವಸ್ತ್ರಾದಿಗಳು, ಕರ್ಕದಲ್ಲಿ ಮೃತಧೇನುವು. ಸಿಂಹದಲ್ಲಿ ಛತ್ರ ಸುವರ್ಣಗಳು. ಕನ್ನೆಯಲ್ಲಿ ಗೃಹವಸ್ತ್ರಗಳು, ತುಲೆಯಲ್ಲಿ ಎಳ್ಳು, ಗೋರಸ (ಹಾಲು, ಮೊಸರು, ತುಪ್ಪ)ಗಳು. ವೃಶ್ಚಿಕದಲ್ಲಿ ದೀಪವು, ಧನುವಿನಲ್ಲಿ ವಸ್ತ್ರ, ವಾಹನಗಳು. ಮಕರದಲ್ಲಿ ಕಟ್ಟಿಗೆ, ಅಗ್ನಿ, ಕುಂಭದಲ್ಲಿ ಗೋವು, ಜಲ, ತೃಣಗಳು. ಮೀನದಲ್ಲಿ ಭೂಮಿ, ಹೂವಿನಮಾಲೆ ಇತ್ಯಾದಿ. ಹೀಗೆ ಆಯಾಯ ಸಂಕ್ರಾಂತಿಗಳಲ್ಲಿ ದಾನಮಾಡತಕ್ಕದ್ದು. ಅಯನ, ಸಂಕ್ರಾಂತಿಗಳಲ್ಲಿ ಮತ್ತು ಮೇಷ, ತುಲಾ ಸಂಕ್ರಾಂತಿಗಳಲ್ಲಿಯೂ ಹಿಂದಿನ ಮೂರು ರಾತ್ರಿ ಅಥವಾ ಒಂದು ರಾತ್ರಿಯಾದರೂ ಉಪವಾಸಮಾಡಿ ಸ್ನಾನ, ದಾನಾದಿಗಳನ್ನು ಮಾಡತಕ್ಕದ್ದು. ಕೊನೆಯ ಉಪವಾಸವನ್ನು ಸಂಕ್ರಾಂತಿಯಿರುವ ಹಗಲು ಅಥವಾ ರಾತ್ರಿ ಇವುಗಳಲ್ಲಾಗಲೀ ಅಥವಾ ಪುಣ್ಯಕಾಲವಿರುವ ಇಡೀದಿನದಲ್ಲಾಗಲೀ ಮಾಡತಕ್ಕದ್ದು, ಹೇಗೆ ಸಂಭವವಾಗುವದೋ ಹಾಗೆ ಮಾಡುವದು. ಈ ಉಪವಾಸವನ್ನು ಪುತ್ರರುಳ್ಳ ಗೃಹಸ್ಥರು ಮಾಡತಕ್ಕದ್ದಲ್ಲ. ಉಳಿದವರು ಪಾಪಕ್ಷಯ” ಕಾಮರಾಗಿ ಮಾಡತಕ್ಕದ್ದು. ಆದ್ದರಿಂದ ಇದು ‘ಕಾಮ್ಯ’ವು ಹೊರತು ‘ನಿತ್ಯ’ವಲ್ಲ. ಎಲ್ಲ ಸಂಕ್ರಾಂತಿಗಳಲ್ಲಿಯೂ ಪಿಂಡರಹಿತವಾದ ಶ್ರಾದ್ಧವನ್ನು ಮಾಡತಕ್ಕದ್ದು. ಎರಡು ಅಯನ ಸಂಕ್ರಾಂತಿಗಳಲ್ಲಾದರೋ “ಶ್ರಾದ್ಧವು ನಿತ್ಯವು, ಆಯಾಯ ಸಂಕ್ರಾಂತಿಗಳಲ್ಲಿ ಕರ್ತವ್ಯಗಳಾದ ಸ್ನಾನ, ದಾನಗಳನ್ನು ಮಾಡುವಂತೆ ಸಂಕ್ರಾಂತಿಗಳಿಂದ ಮೊದಲೇ ಬರುವ ಅಯನಾಂಶ ಪ್ರವೃತ್ತವಾದಾಗಲೂ ಮಾಡತಕ್ಕದ್ದು, ಅಯನಾಂಶಗಳು ಜ್ಯೋತಿಃಶಾಸ್ತ್ರದಲ್ಲಿ ಪ್ರಸಿದ್ಧವಾಗಿವೆ. ೧೭೧೨ ನೇ ಶಾಲಿವಾಹನಶಕೆಯಲ್ಲಿ ೨೧ ಅಯನಾಂಶಗಳು. ಆದ್ದರಿಂದ ೨೧ ದಿನಗಳ ಹಿಂದೆ “ಅಯನಾಂಶ ಪರ್ವಕಾಲ’ ಎಂದು ಅರ್ಥವಾಗುತ್ತದೆ. ಹೀಗೆ ಆಯಾಯ ಶಕೆಯಲ್ಲಿ ಬರುವ ಅಯನಾಂಶವನ್ನು ತಿಳಿಯತಕ್ಕದ್ದು. ವೃಷಭ, ಸಿಂಹ, ವೃಶ್ಚಿಕ, ಕುಂಭ ಈ ಸಂಕ್ರಾಂತಿಗಳಿಗೆ “ವಿಷ್ಣುಪದ” ಎಂಬ ಸಂಜೆಯಿದೆ. ಮಿಥುನ, ಕನ್ಯಾ, ಧನು, ಮೀನ ಸಂಕ್ರಾಂತಿಗಳಿಗೆ ‘ಷಡಶೀತಿ’ ಎನ್ನುವರು. ಮೇಷ, ತುಲೆಗಳಿಗೆ “ಎಷ್ಟು” ಸಂಜ್ಞೆಯಿದೆ. ಕರ್ಕ, ಮಕರಗಳು ಅಯನ ಸಂಸ್ಕೃತಗಳು. ಇವುಗಳಲ್ಲಿ ವಿಷ್ಣು ಪದಕ್ಕಿಂತ ಷಡಶೀತಿಗಳೂ, ಷಡಶೀತಿಗಿಂತ ವಿಷುವಗಳೂ, ವಿಷುವಕ್ಕಿಂತ ಅಯನಗಳೂ ಹೆಚ್ಚಿನ ಪುಣ್ಯಪ್ರದಗಳು. ಮಂಗಲಕಾರ್ಯ ಮಾಡುವಾಗ ಸಾಮಾನ್ಯವಾಗಿ ಎಲ್ಲ ಸಂಕ್ರಾಂತಿಗಳ ಹಿಂದೆ ಮತ್ತು ಮುಂದೆ ೧೬ ಘಟಿಗಳನ್ನು ಬಿಡತಕ್ಕದ್ದು. ಸೂರ್ಯನಂತೆ ಚಂದ್ರಾದಿ ಗ್ರಹಗಳೂ ರಾಶಿಪ್ರವೇಶಮಾಡುವಾಗ ಆಯಾಯ ಗ್ರಹಗಳ “ಸಂಕ್ರಾಂತಿ” ಎಂದು ತಿಳಿಯತಕ್ಕದ್ದು, ಚಂದ್ರಸಂಕ್ರಾಂತಿಯಲ್ಲಿ ಹಿಂದೆ ೨ ಮುಂದೆ ೨ ಘಟಿಗಳನ್ನೂ, ಕುಜ ಸಂಕ್ರಾಂತಿಯಲ್ಲಿ ೯೯ ಘಟಿಗಳನ್ನೂ, ಬುಧ ಸಂಕ್ರಾಂತಿಯಲ್ಲಿ ೨-೨ ಘಟಿಗಳನ್ನೂ, ಗುರುಸಂಕ್ರಾಂತಿಯಲ್ಲಿ ೮೪-೮೪ ಘಟಿಗಳನ್ನೂ, ಶುಕ್ರಸಂಕ್ರಾಂತಿಯಲ್ಲಿ ೬- ೬ ಘಟಿಗಳನ್ನೂ, ಶನಿ ಸಂಕ್ರಾಂತಿಯಲ್ಲಿ ೧೫೦-೧೫೦ ಘಟಿಗಳನ್ನೂ ಬಿಡತಕ್ಕದ್ದು. ರಾತ್ರಿಯಲ್ಲಿ ಸಂಕ್ರಮಣವಾದರೆ ಗ್ರಹಣಕಾಲದಂತೆಯೇ ರಾತ್ರಿಯಲ್ಲೇ ಸ್ನಾನ-ದಾನಾದಿಗಳನ್ನು ಮಾಡತಕ್ಕದ್ದೆಂದು ಪರಿಚ್ಛೇದ - ೧ 99 ಕೆಲವರು ಹೇಳುವರು. ಸಂಕ್ರಾಂತಿಯು ರಾತ್ರಿಯಲ್ಲಾದರೂ ಸ್ನಾನ ದಾನಾದಿಗಳನ್ನು ಹಗಲಿನಲ್ಲಿಯೇ ಮಾಡತಕ್ಕದ್ದು, ಹೊರತು ರಾತ್ರಿಯಲ್ಲಿಲ್ಲ-ಎಂಬ ಈ ಮತವು ಸರ್ವಸಮ್ಮತವಾದದ್ದು, ಬಹು ದೇಶಾಚಾರವೂ ಹೀಗೆಯೇ ಇದೆ. ಜನ್ಮನಕ್ಷತ್ರದಲ್ಲಿ ರವಿ ಸಂಕ್ರಾಂತಿಯಾದರೆ “ಧನಕ್ಷಯ” ಮೊದಲಾದ ಅರಿಷ್ಟಫಲವನ್ನು ಹೇಳಿದೆ. ಪರಿಹಾರಕ್ಕೆ ಕಮಲಪತ್ರಾದಿಯುಕ್ತವಾದ ಜಲದಲ್ಲಿ ಸ್ನಾನವನ್ನು ಹೇಳಿದೆ. ವಿಷುವ-ಅಯನ ಸಂಕ್ರಾಂತಿಗಳು ಹಗಲಿನಲ್ಲಾದರೆ ಹಿಂದಿನ ಮತ್ತು ಮುಂದಿನ ರಾತ್ರಿಗಳು ಮತ್ತು ಆ ಹಗಲು, ರಾತ್ರಿಯಲ್ಲಾದರೆ ಹಿಂದಿನ ಮತ್ತು ಮುಂದಿನ ಹಗಲು ಮತ್ತು ಆ ರಾತ್ರಿ-ಹೀಗೆ “ಪಕ್ಷಿಣೀ” ಸಂಕ್ರಾಂತಿಯೆಂಬುದಾಗಿ ಆ ಕಾಲದಲ್ಲಿ ಅಧ್ಯಯನ, ಅಧ್ಯಾಪನಾದಿಗಳನ್ನು ಬಿಡತಕ್ಕದ್ದು. ಹನ್ನೆರಡುಯಾಮ ಅನಧ್ಯಾಯವೆಂದು ತಿಳಿಯತಕ್ಕದ್ದು. ಹೀಗೆ ತಾತ್ಪರ್ಯವು ಅಯನ ವಿಷಯದಲ್ಲಿ ಬೇರೆ ವಿಶೇಷಗಳನ್ನು ಮುಂದೆ ಹೇಳಲಾಗುವದು. ಇಲ್ಲಿಗೆ ಸಂಕ್ರಾಂತಿ ನಿರ್ಣಯವೆಂಬ ದ್ವಿತೀಯ ಉದ್ದೇಶವು ಮುಗಿಯಿತು. ಮಲಮಾಸದ ವಿಚಾರ ಮಲಮಾಸದಲ್ಲಿ “ಅಧಿಕ” “ಕ್ಷಯ” ಎಂದು ಎರಡು ವಿಧವಿದೆ. ಸಂಕ್ರಾಂತಿರಹಿತವಾದ ಮಾಸಕ್ಕೆ “ಅಧಿಕಮಾಸ’ ಎಂದೂ, ಎರಡು ಸಂಕ್ರಾಂತಿಗಳು ಒಂದೇ ಮಾಸದಲ್ಲಿ ಬಂದಾಗ ಅದಕ್ಕೆ “ಕ್ಷಯಮಾಸ” ಎಂದೂ ಹೇಳುವರು. ಹಿಂದೆ ಆದ ಅಧಿಕ ಮಾಸಕ್ಕಿಂತ ಮುಂದಿನ ಅಧಿಕ ಮಾಸವು ೩೨ ತಿಂಗಳು ೧೬ ದಿನ ೪ ಘಟ ಸುಮಾರಿಗೆ ಬರುವದು. (ಈ ವಿಷಯವಾಗಿ ಮೂಲದಲ್ಲಿ “ಪೂರ್ವಾಧಿಮಾಸಾ ದುತ್ತರೋSಧಿಮಾಸಃ ತ್ರಿಂಶತ್ತಮ ಮಾಸಮಾರಭ್ಯ ಅಷ್ಟಸು ನವಸು ವಾ ಮಾಸೇಷ್ಟತಮೋಭವತಿ” ಎಂದಿದೆ. ಇದರ ಸರಳಾನುವಾದ ಹೀಗಾಗುವದು: ಹಿಂದೆ ಆದ ಅಧಿಕ ಮಾಸಕ್ಕಿಂತ ಮುಂದಿನ ಅಧಿಕ ಮಾಸವು ಮೂವತ್ತನೇ ತಿಂಗಳಿಂದ ಆರಂಭಿಸಿ ಎಂಟು ಅಥವಾ ಒಂಭತ್ತು ತಿಂಗಳುಗಳೊಳಗೊಂದರಲ್ಲಾಗುವದು. ಮೂವತ್ತನೇ ತಿಂಗಳಿಂದ ಹಿಡಿದು ಎಂಟನೇ ತಿಂಗಳು- ಅಂದರೆ ಮೂವತ್ತೇಳನೇ ತಿಂಗಳಾಗುವದು. ಒಂಭತ್ತನೇ ತಿಂಗಳೆಂದರೆ ಮೂವತ್ತೆಂಟನೇ ತಿಂಗಳಾಗುವದು. ಇದು ಹೇಗೂ ಸರಿಬೀಳುವದಿಲ್ಲ. ಅಂದರೆ ಮೂರು ವರ್ಷಕ್ಕೂ ಮಿಕ್ಕಿ ಆಗುವದು. ಕಾರಣ ಎರಡು ವರ್ಷಗಳ ನಂತರ ಎಂಟನೇ ತಿಂಗಳು ಅಥವಾ ಒಂಭತ್ತು ತಿಂಗಳು ಅಂದರೆ ಮೂವತ್ತು ಅಥವಾ ಮೂವತ್ತೊಂದು ಇಲ್ಲವೇ ಮೂವತ್ತೆರಡು ಇವುಗಳೊಳಗಾವುದಾದರೊಂದು ಅಧಿಕ ಮಾಸವಾಗುವದು. ಇದೇ ಅರ್ಥವು ಗ್ರಂಥಕರ್ತರ ಅಭಿಪ್ರೇತವಾಗಿರಬಹುದು. ಕಾರಣ ಸರ್ವಸಾಧಾರಣ ಸಮ್ಮತವಾದ ‘ದ್ವಾತ್ರಿಂಶರ್ಗಮರ್ಾಸ್ಯೆ’ ಇತ್ಯಾದಿ ವಚನಗಳಂತೆಯೇ ಬರೆದಿರುತ್ತೇನೆ. ಕಾರಣ ತಿಳಿದವರು ಗ್ರಂಥಕರ್ತರ ಮೂಲವಾಕ್ಯವನ್ನು ಪರಿಶೀಲಿಸುವದು. ಇದು ಸಾಮಾನ್ಯ ಮಧ್ಯಮಾನದಿಂದ ಹಿಡಿದು ಹೇಳಿದ್ದು, ಸುಟೀಕರಣದಿಂದ ಸ್ವಲ್ಪ ಹಿಂದೆ ಮುಂದೆ ಆಗುವದು. ಕ್ಷಯಮಾಸವಾದರೋ ಬಹುಕಾಲದಿಂದ ಕ್ವಚಿತ್ತಾಗಿ ಬರುವದು. ಸಾಮಾನ್ಯವಾಗಿ ೧೪೧ ವರ್ಷ ಕಳೆದ ಮೇಲೆ ಕ್ವಚಿತ್ ೧೯ ವರ್ಷಗಳಲ್ಲಿ ಬರಬಹುದು. ಅಧಿಕಮಾಸದಂತೆ ಇದು ನಿಯತವಾಗಿ ಪದೇ ಪದೇ ಬರುವಂತಿಲ್ಲ. ಕ್ಷಯಮಾಸ ಬರುವದಾದರೆ ಕಾರ್ತಿಕ, ಮಾರ್ಗಶೀರ್ಷ, ಪುಷ್ಯ ಈ ಮೂರು ಮಾಸಗಳಲ್ಲಿ ಯಾವದಾದರೊಂದರಲ್ಲಿ ಬರುವದು. ಬೇರೆ ಮಾಸಗಳಲ್ಲಿ ಧರ್ಮಸಿಂಧು ಬರುವದಿಲ್ಲ. ಕ್ಷಯಮಾಸ ಬರುವ ವರ್ಷದಲ್ಲಿ ಹಿಂದೆ ಮತ್ತು ಮುಂದೆ ಹೀಗೆ ಎರಡು ಅಧಿಕ ಮಾಸಗಳೂ ಬರುವವು. ಅಧಿಕಮಾಸದ ಉದಾಹರಣೆ ಚೈತ್ರಮಾಸದ ಅಮಾವಾಸ್ಯೆಯಲ್ಲಿ ಮೇಷಸಂಕ್ರಾಂತಿ, ಮುಂದೆ ಶುಕ್ಲ ಪ್ರತಿಪದೆಯಿಂದ ಅಮಾವಾಸ್ಯೆಯೊಳಗೆ ಸಂಕ್ರಾಂತಿಯಿಲ್ಲ. ಅದಕ್ಕೂ ಮುಂದಿನ ಶುಕ್ಲ ಪ್ರತಿಪದೆಯಲ್ಲಿ ವೃಷಭ ಸಂಕ್ರಾಂತಿಯು, ಹಿಂದಿನ ಸಂಕ್ರಾಂತಿರಹಿತವಾದ ಮಾಸವು ಅಧಿಕ ವೈಶಾಖವಾಯಿತು. ವೃಷಭಸಂಕ್ರಾಂತಿಯುಕ್ತವಾದ ಮಾಸವು ಶುದ್ಧ ವೈಶಾಖವಾಗುವದು. ಕ್ಷಯಮಾಸದ ವಿವರ ಭಾದ್ರಪದ ಕೃಷ್ಣ ಅಮಾವಾಸ್ಯೆಯಲ್ಲಿ “ಕನ್ಯಾ ಸಂಕ್ರಾಂತಿ ಯು. ಆಮೇಲೆ ಅಶ್ವಿನವು “ಅಧಿಕ"ವು. ಶುದ್ಧ ಅಶ್ವಿನ ಪ್ರತಿಪದೆಯಲ್ಲಿ ತುಲಾಸಂಕ್ರಾಂತಿ, ಕಾರ್ತಿಕಶುಕ್ಲ ಪ್ರತಿಪದಿಯಲ್ಲಿ ವೃಶ್ಚಿಕ ಸಂಕ್ರಾಂತಿ, ಮುಂದೆ ಮಾರ್ಗಶೀರ್ಷ ಶುಕ್ಲಪ್ರತಿಪದೆಯಲ್ಲಿ ಧನು ಸಂಕ್ರಾಂತಿಯು, ಅದೇ ಮಾಸದ ಅಮಾವಾಸ್ಯೆಯಲ್ಲಿ ಮಕರಸಂಕ್ರಾಂತಿಯು. ಆದ್ದರಿಂದ ಧನು, ಮಕರ ಈ ಎರಡು ಸಂಕ್ರಾಂತಿಯುಕ್ತವಾದ ಮಾಸವು- “ಕ್ಷಯಮಾಸ"ವು. ಅದು ಮಾರ್ಗಶೀರ್ಷ, ಪುಷ್ಯ ಈ ಎರಡು ಮಾಸಗಳಿಂದೊಡಗೂಡಿದ ಒಂದು ಮಾಸವಾಗುವದು. ಹೀಗಾದ ಈ ಮಾಸದ ಪ್ರತಿಪದೆ ಮೊದಲಾದ ತಿಥಿಗಳ ಪೂರ್ವಾರ್ಧಗಳು ಮಾರ್ಗಶೀರ್ಷದ್ದೆಂದೂ, ತಿಥಿಗಳ ಉತ್ತರಾರ್ಧಗಳು ಪುಷ್ಯದ್ದೆಂದೂ ತಿಳಿಯತಕ್ಕದ್ದು ಹೀಗೆ ಎಲ್ಲ ತಿಥಿಗಳೂ ಎರಡು ಮಾಸಯುಕ್ತಗಳಾಗುವವು. ಈ ಮಾಸದ ತಿಥಿಗಳ ಪೂರ್ವಾರ್ಧದಲ್ಲಿ ಮೃತನಾದವನ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಮುಂದೆ ಮಾರ್ಗಶೀರ್ಷದಲ್ಲಿ ಮಾಡತಕ್ಕದ್ದು. ಉತ್ತರಾರ್ಧದಲ್ಲಿ ಮೃತನಾದವನಿಗೆ ಪುಷ್ಯದಲ್ಲಿ ಮಾಡತಕ್ಕದ್ದು. ಹೀಗೆಯೇ ಜನನ, ವರ್ಧಾಪನ ಮೊದಲಾದವುಗಳನ್ನೂ ಮಾಡತಕ್ಕದ್ದು. ಅದಕ್ಕಿಂತ ಮುಂದೆ ಮಾಘಮಾಸದ ಅಮಾವಾಸ್ಯೆಯಲ್ಲಿ “ಕುಂಭಸಂಕ್ರಾಂತಿ"ಯು, ಮುಂದೆ ಫಾಲ್ಗುನವು “ಅಧಿಕಮಾಸವು, ಶುದ್ಧ ಫಾಲ್ಗುನ ಪ್ರತಿಪದೆಯಲ್ಲಿ “ಮೀನಸಂಕ್ರಾಂತಿ"ಯು, ಹೀಗೆ ಪೂರ್ವಾಪರ ಎರಡು ಅಧಿಕ ಮಾಸಗಳಿಂದ ಯುಕ್ತವಾದ “ಕ್ಷಯಮಾಸ’ವು ಯಾವ ವರ್ಷದಲ್ಲಾಗುವದೋ ಆ ವರ್ಷದಲ್ಲಿ ಹದಿಮೂರು ಮಾಸಗಳಿಂದ ಯುಕ್ತವಾದ-೩೯೦ ದಿನಗಳಾಗುವವು. ಕ್ಷಯಮಾಸಕ್ಕಿಂತ ಹಿಂದಿನ ಅಧಿಕಮಾಸಕ್ಕೆ “ಸಂಸರ್ಪ"ವೆಂಬ ಸಂಜ್ಞೆಯಿದ್ದು ಎಲ್ಲ ಕಾರ್ಯಗಳಿಗೂ ಅದು ನಿಷಿದ್ಧವಲ್ಲ. ಶುಭಕಾರ್ಯಾದಿಗಳನ್ನು ಬಿಡಬೇಕಾಗಿಲ್ಲ. ಕ್ಷಯಮಾಸದ ಮುಂದಿನ ಅಧಿಕಮಾಸಕ್ಕೆ “ಅಂಹಸ್ಪತಿ"ಎಂಬ ಸಂಜ್ಞೆಯಿದೆ. ಈ ಕ್ಷಯಮಾಸವೂ ಇದರ ಮುಂದಿನ, ಅಂಹಸ್ಪತಿಸಂಸ್ಕೃತ ಅಧಿಕಮಾಸವೂ ಸಕಲ ಕರ್ಮಗಳಿಗೆ ತ್ಯಾಜ್ಯವು. ಇದರಂತೆ ಮೂರುವರ್ಷಗಳಿಗೆ ಬರುವ ಅಧಿಕಮಾಸವೂ ವರ್ಜವಾದದ್ದು. ವರ್ಜ- ಅವರ್ಜ ನಿರ್ಣಯ ಅನನ್ನ ಗತಿಕ (ಅನಿವಾರ್ಯ)ವಾದ ನಿತ್ಯ, ನೈಮಿತ್ತಿಕ ಕಾವ್ಯ ಕರ್ಮಗಳನ್ನು ಅಧಿಕಮಾಸ, ಕ್ಷಯಮಾಸದಲ್ಲಿ ಮಾಡಬಹುದು. ಸಗತಿಕ (ಅವಕಾಶವಿರುವ) ನಿತ್ಯ ನೈಮಿತ್ತಿಕ ಕಾಮ್ಯ ಕರ್ಮಗಳನ್ನು ಮಾಡತಕ್ಕದ್ದಲ್ಲ. ಹೇಗೆಂದರ ಸಂಧ್ಯಾವಂದನ, ಅಗ್ನಿಹೋತ್ರ ಮೊದಲಾದವುಗಳು “ನಿತ್ಯ"ಗಳು. ಪರಿಚ್ಛೇದ - ೧ ಗ್ರಹಣ ಸ್ನಾನಾದಿಗಳು ನೈಮಿತ್ತಿಕಗಳು. ಕಾರಿರೀಷ್ಟಿ ಬ್ರಹ್ಮರಾಕ್ಷಸಾದಿಗಳಿಂದ ಪೀಡಿತರಾದವರಿಗೆ ಮಾಡಬೇಕಾದ “ರಕ್ಷಘೋಷ್ಮಾದಿ” ಇವು ಕಾವ್ಯಗಳು. ಈ ರೀತಿಗಳಾದ ನಿತ್ಯ, ನೈಮಿತ್ತಿಕ, ಕಾಮ ಕರ್ಮಗಳನ್ನು ಮಲಮಾಸದಲ್ಲಿಯಾದರೂ ಮಾಡಬಹುದು. ಇನ್ನು ನಿತ್ಯಗಳಾದ “ಜ್ಯೋತಿಷ್ಟೋಮಾ"ದಿ, ನೈಮಿತ್ತಿಕಗಳಾದ “ಜಾತೇಷ್ಮಾ"ದಿ, ಕಾಮಗಳಾದ “ಪುತ್ರಕಾಮೇಷ್ಮಾ"ದಿ ಇವುಗಳನ್ನು ಮಾಡತಕ್ಕದ್ದಲ್ಲ. ಇವುಗಳನ್ನು ಶುದ್ಧಮಾಸದಲ್ಲೇ ಮಾಡತಕ್ಕದ್ದು. ಮೊದಲೇ ಪ್ರಾರಂಭಿಸಿರುವ ಕಾವ್ಯ ಕರ್ಮಗಳನ್ನು ಮಲಮಾಸದಲ್ಲಿಯಾದರೂ ಮಾಡಬಹುದು. ಹೊಸದಾದ ಆರಂಭ, ಸಮಾಪ್ತಿಗಳನ್ನು ಮಾಡಕೂಡದು. ಇನ್ನು ಈಗಲೇ ಮಾಡದಿದ್ದರೆ ಮುಂದೆ ಅಸಾಧ್ಯವಾಗುವಂತಿರುವ ಪೂಜಾಲೋಪ ಮೊದಲಾದ ನಿಮಿತ್ತದಿಂದ ಮಾಡಬೇಕಾದ ಪುನರ್ಮೂತಿ್ರ ಪ್ರತಿಷ್ಠೆ ಹಾಗೂ ಗರ್ಭಾಧಾನಾದಿ ಅನ್ನಪ್ರಾಶನಾಂತ ಸಂಸ್ಕಾರ ಇತ್ಯಾದಿಗಳನ್ನು ಮಾಡಲಡ್ಡಿ ಇಲ್ಲ. ಮತ್ತು ಜ್ವರಾದಿ ರೋಗಶಾಂತಿ, ಅಲಭ್ಯಯೋಗ ಪ್ರಾಪ್ತವಾದ ಶ್ರಾದ್ಧ, ವ್ರತ, ನೈಮಿತ್ತಿಕಪ್ರಾಯಶ್ಚಿತ್ತ, ನಿತ್ಯಶ್ರಾದ್ಧ, ಊನಮಾಸಿಕಾದಿಶ್ರಾದ್ಧ, ದರ್ಶಶ್ರಾದ್ದ ಇತ್ಯಾದಿಗಳನ್ನೆಲ್ಲ ಮಲಮಾಸದಲ್ಲಿಯಾದರೂ ಮಾಡಲಡ್ಡಿಯಿಲ್ಲ. ಚೈತ್ರಾದಿಮಾಸಗಳು ಅಧಿಕವಾಗಿದ್ದಾಗ,ಮೃತರಾದವರ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಮುಂದೆ ಕದಾಚಿತ್, ಅದೇ ಚೈತ್ರಾದಿಮಾಸವು ಅಧಿಕವಾಗಿ ಬಂದಲ್ಲಿ ಅಧಿಕಮಾಸದಲ್ಲಿಯೇ ಮಾಡತಕ್ಕದ್ದು. ಚೈತ್ರಾದಿ ಶುದ್ಧ ಮಾಸಗಳಲ್ಲಿ ಮೃತರಾದವರ ಶ್ರಾದ್ಧವನ್ನು ಶುದ್ಧ ಮಾಸದಲ್ಲಿಯೇ ಮಾಡತಕ್ಕದ್ದು. ಶುದ್ಧ ಮಾಸದಲ್ಲಿ ಮೃತರಾದವರ"ಪ್ರಥಮಾದ್ದಿಕವು ಮಲಮಾಸದಲ್ಲಿ ಪ್ರಾಪ್ತವಾದರೆ ಮಲಮಾಸದಲ್ಲೇ ಮಾಡತಕ್ಕದ್ದು, ಶುದ್ಧದಲ್ಲಿ ಮಾಡತಕ್ಕದ್ದಲ್ಲ. ದ್ವಿತೀಯಾದಿ ಪ್ರತಿಸಾಂವತ್ಸರಿಕ ಶ್ರಾದ್ಧಗಳನ್ನು ಶುದ್ಧ ಮಾಸದಲ್ಲಿಯೇ ಮಾಡತಕ್ಕದ್ದು. ಏಕಾದಶಾಹ ಪರ್ಯಂತದ ಕರ್ಮಗಳು ಹಾಗೂ ಸಪಿಂಡೀಕರಣ ಇವುಗಳಿಗೆ ಮಲಮಾಸದಲ್ಲಿ ತ್ಯಾಜ್ಯತ್ವವಿಲ್ಲ. ದ್ವಿತೀಯಾದಿಮಾಸಿಕ ಶ್ರಾದ್ಧವನ್ನು ಮಲಮಾಸ ಮತ್ತು ಶುದ್ಧಮಾಸ ಈ ಎರಡೂ ಮಾಸಗಳಲ್ಲಿ ಮಾಡತಕ್ಕದ್ದು. ದ್ವಾದಶಮಾಸಕ್ಕೆ ಅಧಿಕಮಾಸವಾದಾಗ ಮಲಮಾಸ ಮತ್ತು ಶುದ್ಧಮಾಸ ಈ ಎರಡೂ ಮಾಸಗಳಲ್ಲಿ ಮಾಡಿ ಊನಾಡಿ ಕಾಲದಲ್ಲಿ ಊನಾಬ್ಲಿಕವನ್ನು ಮಾಡಿ ಹದಿನಾಲ್ಕನೇ ಮಾಸದಲ್ಲಿ ಪ್ರಥಮಾಕವನ್ನು ಮಾಡತಕ್ಕದ್ದು. ಕ್ಷಯಮಾಸದ ಹಿಂದಿನ ಮಾಸವೇ ಅಧಿಕವಾದಲ್ಲಿ ಅಂದರೆ, ಅಂತರರಹಿತವಾಗಿ ಬಂದರೆ ಕಾರ್ತಿಕವು ಅಧಿಕವು. ಅದರ ಮುಂದಿನ ಮಾಸವು ವೃಶ್ಚಿಕ, ಧನು, ಸಂಕ್ರಾಂತಿಗಳಿಂದ ಯುಕ್ತವಾದಲ್ಲಿ ಅದು “ಕ್ಷಯಮಾಸ"ವಾಗುವದು. ಆಗ ಕಾರ್ತಿಕದಲ್ಲಿ ಮಾಡಬೇಕಾದ “ಪ್ರತ್ಯಾಬ್ಲಿಕ"ವನ್ನು ಹಿಂದಿನ ಅಧಿಕಮಾಸದಲ್ಲಿಯೂ ಮುಂದಿನ ಕ್ಷಯಮಾಸದಲ್ಲೂ ಮಾಡತಕ್ಕದ್ದು. ಇನ್ನು ಕ್ಷಯಮಾಸಕ್ಕೆ ಬಿಡಿಯಾಗಿ ಅಂದರೆ-ಆಶ್ವಿನವು ಅಧಿಕವು, ಮಾರ್ಗಶೀರ್ಷವು ಕ್ಷಯಮಾಸವು. ಅಲ್ಲಾದರೂ ಆನಮಾಸಗತವಾದ ಶ್ರಾದ್ಧವನ್ನು ಅಧಿಕಮಾಸದಲ್ಲಿಯೂ, ಶುದ್ಧದಲ್ಲಿಯೂ (ಆಶ್ವಿನ) ಮಾಡತಕ್ಕದ್ದು. ಎರಡು ಮಾಸಗಳೂ ಕರ್ಮಾರ್ಹವೆಂದು ತೋರುತ್ತದೆ. ಅಂತರವಾಗಿರುವ ಕ್ಷಯಮಾಸಗತವಾದ ಶ್ರಾದ್ಧವನ್ನಾದರೆ ಕ್ಷಯಮಾಸದಲ್ಲೇ ಮಾಡತಕ್ಕದ್ದು. ಹಿಂದೆ ಹೇಳಿದ ಮಾರ್ಗಶೀರ್ಷಕ್ಷಯದ ಉದಾಹರಣೆಯಂತೆ ಶ್ರಾದ್ಧ ಪ್ರಾಪ್ತವಾದಾಗ ಮಾರ್ಗಶೀರ್ಷಗತ ಹಾಗೂ ಪುಷ್ಯಗತ ಶ್ರಾದ್ಧವನ್ನು ಆ ಒಂದೇ ಮಾಸದಲ್ಲಿ ತಿಥಿಪೂರ್ವಾರ್ಧ ಉತ್ತರಾರ್ಧಾದಿ ವಿಭಾಗಗಳನ್ನು ಬಿಟ್ಟೇ ಮಾಡತಕ್ಕದ್ದು. ಧರ್ಮಸಿಂಧು ಮಲಮಾಸದಲ್ಲಿ ವರ್ಜಗಳು ಉಪಾಕರ್ಮ ಉತ್ಸರ್ಜನ ಅಷ್ಟಕಾಶ್ರಾದ್ಧ, ಚೌಲ, ಉಪನಯನ, ವಿವಾಹ, ತೀರ್ಥಯಾತ್ರಾ, ವಾಸ್ತು ಕಾರ್ಯ, ಗೃಹಪ್ರವೇಶ, ದೇವಪ್ರತಿಷ್ಠಾ, ಬಾವಿ, ಉದ್ಯಾನಾದಿಗಳ ನಿರ್ಮಾಣ, ನೂತನ ವಸ್ತ್ರಾಭರಣ, ತುಲಾಭಾರ ಮೊದಲಾದ ದಾನ, ಯಜ್ಞ ಕಾರ್ಯ ಆಧಾನ, ಹಿಂದ ನೋಡದಿರುವ ತೀರ್ಥ, ದೇವತಾದರ್ಶನ, ಸಂನ್ಯಾಸ, ಕಾಮ್ಯ ವೃಷೋತ್ಸರ್ಗ, ರಾಜ್ಯಾಭಿಷೇಕ, ವ್ರತ, ಅವಕಾಶವಿರುವ ಅನ್ನಪ್ರಾಶನ, ಸಮಾವರ್ತನ, ಅತಿಕ್ರಾಂತಗಳಾದ ನಾಮಕರಣಾದಿಸಂಸ್ಕಾರ, ಪವಿತ್ರಾರೋಪಣ, ದಮನಕಾರ್ಪಣ ಶ್ರವಣಾಕಾರ್ಯ, ಸರ್ಪಬಲ್ಯಾದಿ ಪಾಕಸಂಸ್ಥಾ, ವಿಷ್ಣು ಶಯನ ಪರಿವರ್ತನ ಇತ್ಯಾದಿ ಉತ್ಸವ, ಶಪಥ, ದಿವ್ಯ ಇತ್ಯಾದಿಗಳೆಲ್ಲ ಮಲಮಾಸದಲ್ಲಿ ವರ್ಜಗಳು. ರಜೋದರ್ಶನಶಾಂತಿ, ವಿಚ್ಛಿನ್ನವಾದ ಅಜ್ಞಾಧಾನ, ಪುನಃಪ್ರತಿಷ್ಠಾ ಮೊದಲಾದ ನೈಮಿತ್ತಿಕ ಕಾರ್ಯಗಳನ್ನು ಆಯಾಯ ನಿಮಿತ್ತ ಉಂಟಾದ ಕೂಡಲೇ ಮಾಡುವದಿದ್ದಲ್ಲಿ ಮಲಮಾಸ ದೋಷವಿಲ್ಲ. ಕಾಲವು ಅತೀತವಾಗಿದ್ದರೆ ಶುದ್ಧಮಾಸವನ್ನೇ ನಿರೀಕ್ಷಿಸತಕ್ಕದ್ದು. ದುರ್ಭಿಕ್ಷಾದಿ ಆಪತ್ಕಾಲದಲ್ಲಿ “ಆಗ್ರಯಣ"ವನ್ನು ಮಲಮಾಸದಲ್ಲಿಯಾದರೂ ಮಾಡತಕ್ಕದ್ದು. ಆಪತ್ತಿಲ್ಲದಾಗ ಶುದ್ಧದಲ್ಲಿಯೇ ಮಾಡತಕ್ಕದ್ದು. ಯುಗಾದಿ ಮನ್ನಾದಿಶಾಸ್ತ್ರಗಳನ್ನು ಎರಡೂ ಮಾಸಗಳಲ್ಲಿಯೂ ಮಾಡತಕ್ಕದ್ದು. ಕ್ಷಯಮಾಸದ ಹಿಂದಿನ ಮಾಸವೇ “ಸಂಸರ್ಪ” ಎಂಬ ಸಂಜ್ಞೆಯಿರುವದನ್ನು ಹಿಂದೆಯೇ ಹೇಳಿದೆ. ಅದರಲ್ಲಿ ಚೌಲ, ಉಪನಯನ, ವಿವಾಹ, ಅಗಾಧಾನ, ಯಜ್ಞ, ಉತ್ಸವ, ಮಹಾಲಯ, ರಾಜ್ಯಾಭಿಷೇಕ ಇವು ವರ್ಜಗಳು, ಉಳಿದ ಕಾರ್ಯಾದಿ ವಿಷಯದಲ್ಲಿ ಪ್ರಾರಂಭಿಸದೇ ಇರುವ ವ್ರತಾರಂಭ, ಸಮಾಪ್ತಿಗಳೂ ಮಲಮಾಸದಲ್ಲಿ ವರ್ಜಗಳು. ಮೊದಲು ಆರಂಭಮಾಡಿರುವ ಮಾಘಸ್ನಾನ ಸಮಾಪ್ತಿಗಳನ್ನು ಕ್ಷಯಮಾಸವಾದರೂ ಮಾಡಬಹುದು. ಮಕರಸಂಕ್ರಾಂತಿಯುಕ್ತವಾದ ಕ್ಷಯಮಾಸದಲ್ಲಿ ಪ್ರಾಪ್ತವಾದ ಹುಣ್ಣಿವೆಯಲ್ಲಿ ಮಾಘಸ್ನಾನವನ್ನಾರಂಭಿಸಿ ಕುಂಭಸಂಕ್ರಾಂತಿಯುಕ್ತವಾದ ಮಾಘ ಹುಣ್ಣಿವೆಯಲ್ಲಿ ಸಮಾಪ್ತಿ ಮಾಡುವದು. ಹೀಗೆ ಕಾರ್ತಿಕಸ್ನಾನದಲ್ಲಿಯೂ ಊಹಿಸತಕ್ಕದ್ದು. ವೈಶಾಖಾದಿಗಳು ಅಧಿಕವಾದಾಗ ವೈಶಾಖಸ್ನಾನಾದಿ ಮಾಸವ್ರತಗಳನ್ನು ಚೈತ್ರ ಹುಣ್ಣಿಮೆಯಲ್ಲಾರಂಭಿಸಿ ಶುದ್ಧ ವೈಶಾಖ ಹುಣ್ಣಿವೆಯಲ್ಲಿ ಸಮಾಪನ ಮಾಡತಕ್ಕದ್ದು. ಹೀಗೆ ಎರಡು ಮಾಸಗಳಲ್ಲಿ ಅನುಷ್ಠಾನ ಮಾಡತಕ್ಕದ್ದು. ಸಾಮಾನ್ಯವಾಗಿ ಮಲಮಾಸದಲ್ಲಿ ವರ್ಜವಾದವುಗಳು ಗುರು-ಶುಕ್ರಾಸ್ತ, ಬಾಲ್ಯ, ವಾರ್ಧಕಗಳಲ್ಲಿಯೂ ವರ್ಜವೆಂದು ತಿಳಿಯುವದು. ಅಸ್ತ್ರಕ್ಕಿಂತ ಮೊದಲು ಏಳು ದಿನಗಳು “ವಾರ್ಧಕವು, ಉದಯದ ನಂತರ ಏಳು ದಿನಗಳ ಕಾಲಕ್ಕೆ “ಬಾಲ್ಯವನ್ನುವರು. ಇದು ಸಾಮಾನ್ಯ ಪಕ್ಷವು, ಹದಿನೈದು ದಿನಗಳೆಂದು, ಐದು ದಿನಗಳೆಂದು, ಮೂರು ದಿನಗಳೆಂದು ಹೇಳುವ ಪಕ್ಷಗಳೂ ಇವೆ. ಆಪತ್ತು, ಅನಾಪತ್ತು ಇವುಗಳನ್ನು ಪರ್ಯಾಲೋಚನೆ ಮಾಡಿ ದೇಶಾಚಾರಗಳನ್ನು ತಿಳಿದು ಅನೇಕ ವಿಧವಾಗಿ ಹೇಳಿದ ದಿನಸಂಖ್ಯೆಗಳನ್ನು ವ್ಯವಸ್ಥಿತಗೊಳಿಸತಕ್ಕದ್ದು. ಗುರುವು ಸಿಂಹರಾಶಿಗತನಾದಾಗಲೂ ಸಾಮಾನ್ಯ ಇದರಂತೆಯೇ ವರ್ಚಾವರ್ಜ ನಿರ್ಣಯವನ್ನು ತಿಳಿಯುವದು. ಅದರಲ್ಲಿ ಸ್ವಲ್ಪ ವಿಶೇಷವಿದೆ. ಕರ್ಣವೇಧ, ಚೌಲ, ಉಪನಯನ, ಪರಿಚ್ಛೇದ - ೧ E ವಿವಾಹ, ದೇವೋತ್ಸವ, ವ್ರತ, ವಾಸ್ತು ಕಾರ್ಯ, ದೇವಪ್ರತಿಷ್ಠಾ, ಸಂನ್ಯಾಸ ಇವು ವಿಶೇಷವಾಗಿ ವರ್ಜಗಳು. ಈ “ಸಿಂಹಸ್ಥಗುರು” ದೋಷಕ್ಕೆ ಅಪವಾದಗಳಿವೆ. ಗುರುವು ಮಘಾ ನಕ್ಷತ್ರದಲ್ಲಿರುವಾಗ ಅಥವಾ ಸಿಂಹನವಾಂಶ(ಹುಬ್ಬೆಯ ಪ್ರಥಮಪಾದದಲ್ಲಿರುವಾಗ ಎಲ್ಲ ದೇಶಗಳಲ್ಲಿಯೂ ಎಲ್ಲ ಮಂಗಲ ಕಾರ್ಯಗಳನ್ನು ಬಿಡತಕ್ಕದ್ದು. ಸಿಂಹಾಂಶದಿಂದ ಮುಂದೆ ಗುರುವು ಹೋದ ನಂತರ ಗೋದಾವರಿಯ ದಕ್ಷಿಣದಲ್ಲೂ, ಭಾಗೀರಥಿಯ ಉತ್ತರದಲ್ಲಿಯೂ ಸಿಂಹಸ್ಥದೋಷವಿಲ್ಲ. ಗಂಗಾ-ಗೋದಾವರಿ ಮಧ್ಯದಲ್ಲಾದರೋ ಪೂರ್ಣಸಿಂಹರಾಶಿಯಲ್ಲಿ ಗುರುವಿರುವಾಗ ವಿವಾಹ, ಉಪನಯನಗಳಿಗೆ ದೋಷವು. ಉಳಿದ ಮಂಗಲಕಾರ್ಯಗಳನ್ನು ಸಿಂಹಾಂಶಾನಂತರ ಎಲ್ಲ ದೇಶಗಳಲ್ಲಿಯೂ ಮಾಡಬಹುದು. ಸೂರ್ಯನು ಮೇಷರಾಶಿಗತನಾದಾಗ ಸಿಂಹದಲ್ಲಿ ಗುರುವಿದ್ದರೂ ಯಾವ ದೇಶದಲ್ಲಿಯೂ ಮಂಗಲ ಕಾರ್ಯಗಳಿಗೆ ಅಡ್ಡಿಯಿಲ್ಲ. ಕೆಲ ಗ್ರಂಥಕಾರರು ಸೂರ್ಯನು ವೃಷಭರಾಶಿಯಲ್ಲಿರುವಾಗಲೂ ದೋಷವಿಲ್ಲವೆನ್ನುವರು. ಗುರುವು ಸಿಂಹರಾಶಿಯಲ್ಲಿರುವಾಗ ಗೋದಾವರಿಯಲ್ಲಿಯೂ, ಕನ್ಯಾರಾಶಿಯಲ್ಲಿರುವಾಗ ಕೃಷ್ಣಾ ನದಿಯಲ್ಲಿಯೂ ಸ್ನಾನವು ಬಹುಪುಣ್ಯಕರವಾದದ್ದು. ಗೋದಾವರಿಯಲ್ಲಿ ಯಾತ್ರಿಕರಿಗೆ ಮುಂಡನ (ಕ್ಷೌರ), ಉಪವಾಸಗಳು ಆವಶ್ಯಕಗಳು. ಅದರ ತೀರದಲ್ಲಿರುವವರಿಗೆ ಈ ನಿಯಮವಿಲ್ಲ. ಪತ್ನಿಯು ಗರ್ಭಿಣಿಯಾದಾಗ ಮತ್ತು ವಿವಾಹಾದಿ ಮಂಗಲಕಾರ್ಯದ ನಂತರ ಮುಂಡನ ಮಾಡಬಾರದೆಂದಿದೆ. ಆದರೂ ಗೋದಾವರಿಯಲ್ಲಿ ಅದಕ್ಕೆ ನಿಷೇಧವಿಲ್ಲ. ಗಯಾ ಮತ್ತು ಗೋದಾವರಿಯಲ್ಲಿ ಮಲಮಾಸ ಮತ್ತು ಗುರು-ಶುಕ್ರಾಸ್ತಾದಿ ದೋಷವಿಲ್ಲ. ಮಲಮಾಸದಲ್ಲಿ ಮಾಡತಕ್ಕ ಕೆಲ ವಿಶೇಷ ವ್ರತಾದಿಗಳಿವೆ. ಅವುಗಳನ್ನು ನಿರ್ಣಯಸಿಂಧು ಮೊದಲಾದ ಗ್ರಂಥಗಳಿಂದ ತಿಳಿಯತಕ್ಕದ್ದು. ಹೀಗೆ ಮಲಮಾಸ, ಗುರು-ಶುಕ್ರಾಸ್ತ್ರ, ಸಿಂಹಸ್ಥಗುರು ಇವುಗಳ ವರ್ಚಾವರ್ಜ ನಿರ್ಣಯವೆಂಬ ಮೂರನೆ ಉದ್ದೇಶವು ಮುಗಿಯಿತು. ತಿಥಿ ನಿರ್ಣಯ ವಿಷಯದಲ್ಲಿ ಸಾಮಾನ್ಯ ಪರಿಭಾಷೆ ತಿಥಿಯು “ಪೂರ್ಣಾ”, “ಸಖಂಡಾ” ಎಂದು ಎರಡು ವಿಧವಾಗಿದೆ. ಸೂರ್ಯೋದಯದಿಂದ ಹಿಡಿದು ಅರವತ್ತು ಘಟಿಗಳಿಂದ ವ್ಯಾಪ್ತವಾದದ್ದು “ಪೂರ್ಣತಿಥಿ"ಯು. ಇದಕ್ಕೆ ಹೊರತಾದದ್ದು “ಸಖಂಡಾ” ಎಂದಾಗುವದು. “ಸಖಂಡಾ” ತಿಥಿಯಲ್ಲಿಯೂ “ಶುದ್ಧಾ” “ವಿದ್ದಾ’ ಎಂದು ಎರಡು ಭೇದವಿದೆ. ಸೂರ್ಯೋದಯದಿಂದ ಆರಂಭಿಸಿ ಅಸ್ತಮಾನ ಪರ್ಯಂತವಾದ ಮತ್ತು ಶಿವರಾತ್ಮಾದಿಗಳಲ್ಲಿ ಮಧ್ಯರಾತ್ರಿ ಪರ್ಯಂತವಾಗಿರುವ ತಿಥಿಯು “ಶುದ್ಧವು ಇದಕ್ಕೆ ಹೊರತಾದದ್ದು “DT “J). ವಿದ್ಧ ಅಂದರೆ ವೇದವನ್ನು ಹೊಂದಿದ್ದು, ಅಂದರೆ ಒಂದು ತಿಥಿಯು ಇನ್ನೊಂದು ತಿಥಿಯಲ್ಲಿ ಕೂಡಿದ್ದು ಎಂದರ್ಥ. ವೇಧದಲ್ಲಿ “ಪ್ರಾತರ್ವೇಧ” ಮತ್ತು “ಸಾಯಂವೇಧ” ಎಂದು ಎರಡು ವಿಧವಿದೆ. ಸೂರ್ಯೋದಯದಿಂದ ಹಿಡಿದು ಆರು ಘಟಿಗಳವರೆಗೆ ವ್ಯಾಪಿಸಿದ್ದು ಮುಂದೆ ಬೇರೆ ತಿಥಿಯು ಬಂದರೆ " ಪ್ರಾತರ್ವಧ” ಎಂದಾಗುವದು. ಸೂರ್ಯಾಸ್ತಕ್ಕಿಂತ ಮೊದಲು ಆರು ಘಟವರೆಗೆ ವ್ಯಾಪಿಸಿದ ಬೇರೆ ತಿಥಿಯು ಇದ್ದಾಗ “ಸಾಯಂವೇಧ’ ಎಂದಾಗುವದು. ಏಕಾದಶೀವ್ರತ OU ಧರ್ಮಸಿಂಧು ವಿಷಯಕವಾದ ‘ವೇಧ’ ವಿಷಯವನ್ನು ಮುಂದೆ ಹೇಳಲಾಗುವದು. ಕೆಲ ತಿಥಿ ವಿಷಯದಲ್ಲಿ ವೇಧವು ಹೆಚ್ಚಾಗಿರುತ್ತದೆ. ಹೇಗೆಂದರೆ-ಪಂಚಮಿಯು ಹನ್ನೆರಡು ಗಳಿಗೆಗಳಿಂದ ಷಷ್ಠಿಯನ್ನು ವೇಧಿಸುತ್ತದೆ. ಅಂದರೆ ಷಷ್ಟಿಯು ಪಂಚಮೀವಿದ್ದ ಎಂದಾಗಬೇಕಾದರೆ ಪಂಚಮಿಯು ಅಷ್ಟು ಘಟಿಗಳಿರಬೇಕಾಗುತ್ತದೆ. ದಶಮಿಯು ಹದಿನೈದು ಘಟಗಳಿಂದ ಏಕಾದಶಿಯನ್ನು ವೇಧಿಸುತ್ತದೆ. ಚತುರ್ದಶಿಯು ಹದಿನೆಂಟು ಘಟಿಗಳಿಂದ ಹುಣ್ಣಿವೆಯನ್ನು ವೇಧಿಸುತ್ತದೆ-ಇತ್ಯಾದಿ. ವಿದ್ಧವಾದ ತಿಥಿಗಳು ಕೆಲವು ಕರ್ಮಗಳಿಗೆ ಗ್ರಾಹ್ಯ, ಕೆಲವು ಕರ್ಮಗಳಿಗೆ ತ್ಯಾಜ್ಯಗಳಾಗುವದುಂಟು. ಪೂರ್ಣ ಹಾಗು ಶುದ್ಧವಾದ ತಿಥಿಗಳಲ್ಲಿ ನಿರ್ಣಯವು ಬೇಕಾಗಿಲ್ಲ. ಯಾಕೆಂದರೆ ಅದರಲ್ಲಿ ಸಂಶಯವು ಬರುವಂತಿಲ್ಲ. ಸಖಂಡಾ ತಿಥಿಯಾದರೂ ನಿಷೇಧ ವಿಷಯ"ದಲ್ಲಿ ನಿರ್ಣಯಕ್ಕೆ ಅರ್ಹವಾಗುವದಿಲ್ಲ. “ನಿಷೇಧಸ್ತು ನಿವೃತಾತ್ಮಾಕಾಲಮಾತ್ರಮಪೇಕ್ಷತೇ” ಎಂಬ ವಚನದಂತೆ ನಿವೃತ್ತರೂಪವಾದ ನಿಷೇಧವು “ಕಾಲಮಾತ್ರ"ವನ್ನಪೇಕ್ಷಿಸುತ್ತದೆ. ಹೇಗೆಂದರೆ ಅಷ್ಟಮಿಯಲ್ಲಿ ನಾಳಿಕೇರ ಭಕ್ಷಣ ಮಾಡಬಾರದು ಎಂಬ ನಿಷೇಧವಿದೆ. ಅಷ್ಟಮಿಯು ಎಷ್ಟು ಕಾಲದವರೆಗೆ ಇರುತ್ತದೋ ಅಷ್ಟು ಕಾಲ ನಾಳಿಕೇರ ಭಕ್ಷಣ ಮಾಡಬಾರದು. ಇದರಿಂದ ಬೇರೆ ನಿರ್ಣಯವೇ ಬೇಕಾಗಿಲ್ಲ. ವ್ರತಾದಿಗಳಿಗೆ ವಿಧಿ ವಚನವಿರುವದರಿಂದ ಆಯಾಯ ವಿಧಿಯಂತೆಯೇ ವ್ರತಾದಿಗಳನ್ನು ನಿರ್ಣಯಿಸಬೇಕಾಗುತ್ತದೆ. ಅದರ ನಿರ್ಣಯವನ್ನು ಮುಂದೆ ಹೇಳಲಾಗುವದು. ಯಾವ ಕರ್ಮಕ್ಕೆ ಯಾವ ಕಾಲವ್ಯಾಪ್ತಿಯನ್ನು ಹೇಳಿದೆಯೋ ಆ ಕರ್ಮಕ್ಕೆ ಆ ಕಾಲವ್ಯಾಪ್ತಿಯಿರುವ ತಿಥಿಯನ್ನು ಸ್ವೀಕರಿಸಬೇಕಾಗುವದು. ವಿನಾಯಕಾದಿ ವ್ರತಗಳಲ್ಲಿ ಮಧ್ಯಾಹ್ನಾದಿ ಕಾಲಗಳಲ್ಲಿ ಪೂಜಾದಿಗಳನ್ನು ವಿಧಿಸಿರುವದರಿಂದ ಮಧ್ಯಾಹ್ನಾದಿ ವ್ಯಾಪಿನೀ ತಿಥಿಗಳು ಗ್ರಾಹ್ಮಗಳಾಗುತ್ತವೆ. ಎರಡು ದಿನ ಅಂದರೆ ಹಿಂದಿನ ದಿನ ಮತ್ತು ಆ ದಿನ ಕರ್ಮಕಾಲದಲ್ಲಿ ವ್ಯಾಪಿನಿಯಾದರೆ, ಅಥವಾ ಎರಡೂ ದಿನ ವ್ಯಾಪ್ತಿಯಿಲ್ಲದಿದ್ದರೆ, ಅಥವಾ ಏಕದೇಶ (ಸ್ವಲ್ಪ ಭಾಗ) ವ್ಯಾಪಿನಿಯಾದರೂ “ಯುಗ ವಾಕ್ಯ"ವಚನಾನುಸಾರ ಪೂರ್ವವಿದ್ಧವಾದ ಅಥವಾ ಪರವಿದ್ದವಾದ ತಿಥಿಯು ಯೋಗ್ಯವಾಗುತ್ತದೋ ಅದನ್ನು ಸ್ವೀಕರಿಸತಕ್ಕದ್ದು. ಯುಗ್ಧವಾಕ್ಯ- ಅಂದರೆ “ಯುಗಾಗಿ ಯುಗಭೂತಾನಾಂ ಷಣ್ಮುನರ್ವಸು ರಂಧ್ರಯೋಗ ರುದ್ರೇಣ ದ್ವಾದಶೀ ಯುಕ್ತಾ ಚತುರ್ದಶ್ಯಾ ಚ ಪೂರ್ಣಿಮಾ ಪ್ರತಿಪದಪಮಾವಾಸ್ಕಾ ತಿಥೇರ್ಯುಗಂ ಮಹಾಫಲಂ " “ಯುಗ” ಅಂದರೆ ದ್ವಿತೀಯಾ, “ಅಗ್ನಿ” ಅಂದರೆ ತೃತೀಯಾ, ಇಲ್ಲಿ ಬಿದಿಗೆಯಿಂದ ತದಿಗೆಯು ಕೂಡಿರಲಿ, ತದಿಗೆಯಿಂದ ಬಿದಿಗೆಯು ವಿದ್ಧವಾಗಿರಲಿ ಅದು ಗ್ರಾಹ್ಯವೆಂದರ್ಥ. ಹೀಗೆ ದ್ವಿತೀಯಾ ತೃತಿಯೆಗಳ ಯುಗ್ಯ, ಚತುರ್ಥಿ-ಪಂಚಮಿಗಳ ಯು, ಪತ್ನಿ-ಸಪ್ತಮಿಗಳ ಯುಗ, ಅಷ್ಟಮಿ-ನವಮಿಗಳ ಯುದ್ಧ, ಏಕಾದಶೀ-ದ್ವಾದಶಿಗಳ ಯುಗ, ಚತುರ್ದಶೀ ಹುಣ್ಣಿವಗಳ ಯುಗ, ಅಮಾವಾಸ್ಯೆ-ಪ್ರತಿಪದಿಗಳ ಯುಗ ಹೀಗೆ ಇವು ಯುಗವಾಕ್ಯಕ್ಕೆ ನಿದರ್ಶನಗಳು, ಕೆಲ ವಿಶೇಷ ವಚನವಿದ್ದಲ್ಲಿ ಈ ನಿಯಮಕ್ಕೂ ಬಾಧೆಯುಂಟಾಗುವದು. “ಚತುರ್ಥಿ ಗಣನಾಥಸ್ಯ ಮಾತೃವಿದ್ದಾ ಪ್ರಶಸತೇ ಅಂದರೆ ಗಣೇಶಚತುರ್ಥಿಯು ತೃತೀಯಾಯುಕ್ತವಾದಲ್ಲಿ ಪ್ರಶಸ್ತವು ಎಂಬ ವಿಶೇಷ ವಚನವಿದೆ.ಪರಿಚ್ಛೇದ - ೧ ಯುಗವಾಕ್ಯದಂತೆ ತೃತೀಯಾ-ಚತುರ್ಥಿ ವೇಧತ್ವವು ಪ್ರಶಸ್ತವೆಂದಾಗುವದಿಲ್ಲ. ಆದರೂ ವಿಶೇಷ ವಚನದಿಂದ ಅದು ಗ್ರಾಹ್ಯವಾಗುತ್ತದೆ. ಇನ್ನು ಹೀಗೆ ವಚನವಶದಿಂದ ಗ್ರಾಹ್ಯವಾದ ತಿಥಿಗೆ ಕರ್ಮಕಾಲವ್ಯಾಪ್ತಿ ಇಲ್ಲದಾಗ ಅದನ್ನು ಹೇಗೆ ಗ್ರಾಹ್ಯಮಾಡುವದು? ಎಂದು ಯೋಚಿಸಬೇಕಾಗಿಲ್ಲ. “ಸಾಕಲ್ಯವಚನ"ಗಳಿಂದ ಆ ಕಾಲದಲ್ಲಿ ಇಲ್ಲದಿದ್ದರೂ ಶಾಸ್ತ್ರದಂತೆ ಅದು ಇದ್ದಂತೆಯೇ ಎಂದು ಭಾವಿಸತಕ್ಕದ್ದು. “ಸಾಕಲ್ಯವಚನ” ಅಂದರೆ “ಯಾಂತಿಥಿಂ ಸಮನುಪ್ರಾಪ್ಟ್ ಉದಯಂ ಯಾತಿ ಭಾಸ್ಕರಃ ಸಾತಿಥಿ: ಸಕಲಾಜ್ಞೆಯಾ ಸ್ನಾನದಾನ ಜಪಾದಿಷು " ಅಂದರೆ ಸೂರನು ಯಾವ ತಿಥಿಯನ್ನವಲಂಬಿಸಿ ಉದಯಿಸುವನೋ ಆ ತಿಥಿಯು ಸ್ನಾನ, ದಾನ, ಜಪ ಮೊದಲಾದ ಸಾಮಾನ್ಯ ಕಾರ್ಯಗಳಿಗೆ ಸಂಪೂರ್ಣವೆಂದೇ ತಿಳಿಯತಕ್ಕದ್ದು. (ಇಲ್ಲಿ ಉದಯವೆಂದಿದ್ದರೂ “ಯಾಂತಿಥಿಂಸಮನುಪ್ರಾಪ್ಯ ಯಾತ್ಯಸ್ತಂಯಾಮಿನೀಪತಿಃ ಸಾತಿಥಿ: ಸಕಲಾಯಾ ಸ್ನಾನ ದಾನಾದಿಕರಸು ಇತ್ಯಾದಿ ವಚನಗಳಿಂದ ಉದಯಾನಂತರ ದ್ವಿಮುಹೂರ್ತ ಅಧಿಕ ಹಾಗೂ ಅಸ್ತಾತ್‌ಪೂರ್ವ ತ್ರಿಮುಹೂರ್ತ ಅಧಿಕ. ಹೀಗೆ ಎರಡು ರೀತಿಯಿಂದ ಸಾಕಲ್ಯ ವಚನವನ್ನು ಊಹಿಸುವದು-ಎಂಬುದಾಗಿ ಕೆಲವು ಟಿಪ್ಪಣಿಕಾರರ ಮತವಿದೆ. ಇಲ್ಲಿಗೆ ಸಾಮಾನ್ಯ ಪರಿಭಾಷೆಯ ನಿರ್ಣಯವೆಂಬ ನಾಲ್ಕನೇ ಉದ್ದೇಶವು ಮುಗಿಯಿತು. ಕರ್ಮ ವಿಶೇಷ ನಿರ್ಣಯ ಕರ್ಮದಲ್ಲಿ “ದೈವ” ಮತ್ತು “ಪಿತ್ರ” ಎಂಬ ಎರಡು ಭೇದಗಳಿವೆ. ದೈವ ಕರ್ಮಗಳಲ್ಲಿ “ಏಕಭಕ್ತ, ನಕ್ತ, ಆಯಾಚಿತ ಉಪವಾಸ, ವ್ರತ, ದಾನ” ಹೀಗೆ ಆರು ಪ್ರಕಾರಗಳಿವೆ. “ಏಕಭಕ್ತ” ಅಂದರೆ ಮಧ್ಯಾಹ್ನದಲ್ಲಿ ಒಂದೇ ಬಾರಿ ಭೋಜನ ಮಾಡತಕ್ಕದ್ದು, “ನಕ್ತ” ಅಂದರೆ ರಾತ್ರಿ ಪ್ರದೋಷ ಕಾಲದಲ್ಲಿ ಭೋಜನ ಮಾಡುವದು ಅಯಾಚಿತವು, ಯಾಚನೆಯ ಹೊರತಾಗಿ ಅದೇ ದಿನದಲ್ಲಿ ಲಭ್ಯವಾದಲ್ಲಿ ಅನ್ನಾದಿಗಳನ್ನು ಭೋಜನ ಮಾಡುವದು. ಬೇರೆ ದಿನದಲ್ಲಿ ಲಭ್ಯವಾದದ್ದಿದ್ದರೂ ಅಡಿಗೆಯವ ಅಥವಾ ಸ್ತ್ರೀ ಪುತ್ರಾದಿಗಳನ್ನು ಯಾಚಿಸದೆ ಊಟ ಮಾಡುವದು “ಅಯಾಚಿತ"ವೆಂದು ಕೆಲವರೆನ್ನುವರು. ಹಗಲು-ರಾತ್ರಿ-ಇಡೀ ಭೋಜನಮಾಡದಿರುವದು “ಉಪವಾಸ"ವನ್ನಲ್ಪಡುವದು. “ವ್ರತ"ವೆಂದರೆ ಪೂಜಾದಿಸ್ವರೂಪವುಳ್ಳ ಕರ್ಮವಿಶೇಷವು. “ದಾನ"ವೆಂದರೆ ತನ್ನ ಅಧಿಕಾರ ತ್ಯಾಗಪೂರ್ವಕವಾಗಿ ಪರಸ್ಪತಿಗೆ ಒಳಪಡಿಸುವದು. ಈ “ಏಕಭಕ್ತ “ಮೊದಲಾದವುಗಳನ್ನು ವ್ರತಾದಿ ಕರ್ಮಗಳ ಅಂಗವಾಗಿ ವಿಧಿಸುವದೂ ಉಂಟು. ಏಕಾದಶ್ಯಾದಿ ಉಪವಾಸಾದಿಗಳ ಪ್ರತಿನಿಧಿ ರೂಪದಿಂದ ಹೇಳಿಯೂ ಇದೆ. ಇನ್ನು ಸ್ವತಂತ್ರವಾಗಿಯೂ ವಿಧಿಸುವದಿದೆ. ಅಂತೂ ಇವು ಅಂಗ, ಪ್ರತಿನಿಧಿ, ಸ್ವತಂತ್ರ ಹೀಗೆ ತ್ರಿವಿಧಗಳಾಗುವವು. ಇವುಗಳೆಲ್ಲ ಅನ್ಯಕರ್ಮಗಳಿಗೆ ಅಂಗಭೂತಗಳಾದಾಗ, ಇಲ್ಲವೆ ಪ್ರತಿನಿಧಿರೂಪಗಳಾದಾಗ, ಆಯಾಯ ಪ್ರಧಾನಕರ್ಮಗಳ ನಿರ್ಣಯವೇ ಇವುಗಳ ನಿರ್ಣಯವೆಂದಾಗುವದು. ಸ್ವತಂತ್ರ ಕರ್ಮಗಳ ನಿರ್ಣಯ ದಿನಮಾನವನ್ನು ಐದುಭಾಗ ಮಾಡುವದು. ಪ್ರಥಮ ಭಾಗವು “ಪ್ರಾತಃ ಕಾಲವನ್ನಲ್ಪಡುವದು. ಎರಡನೆಯ ಭಾಗವನ್ನು “ಸಂಗವ” ಎಂದು ಹೇಳುವರು. ಮೂರನೆಯ ಭಾಗವು “ಮಧ್ಯಾಹ್ನವು. ನಾಲ್ಕನೇ ಭಾಗಕ್ಕೆ “ಅಪರಾಹ್ನ” ಸಂಜ್ಞೆಯಿದೆ. ಐದನೇ ಭಾಗವು ೧೨ ಧರ್ಮಸಿಂಧು “ಸಾಯಾಹ್ನವು. ಸಾಮಾನ್ಯ ದಿವಾಪ್ರಮಾಣವು ೩೦ ಘಟಿಯಿದ್ದಾಗ ಒಂದೊಂದು ಭಾಗಕ್ಕೆ ೬ ಘಟಿಗಳ ಕಾಲವಾಗುವದು. ದಿನಮಾನ ಹೆಚ್ಚು ಕಡಿಮೆಯಿದ್ದಾಗ ಅದಕ್ಕೆ ಸರಿಯಾಗಿ ಹೆಚ್ಚು ಕಡಿಮೆಯಾಗುವದು. ಸೂರ್ಯಾಸ್ತಾನಂತರ ಮೂರು ಮುಹೂರ್ತ-ಅಂದರೆ ಆರು ಘಟಿಗಳು “ಪ್ರದೋಷ"ವೆನ್ನಲ್ಪಡುವವು. “ಏಕಭಕ್ತ"ದ ವಿಷಯದಲ್ಲಿ ಮಧ್ಯಾಹ್ನ ವ್ಯಾಪಿನಿಯಾದ ತಿಥಿಯು ಗ್ರಾಹ್ಯವು. ಅದರಲ್ಲೂ ದಿನದ ಅರ್ಧವು ಕಳೆದ ನಂತರ (ಮಧ್ಯಮಾನದಿಂದ)ಹದಿನಾರು, ಹದಿನೇಳು, ಹದಿನೆಂಟು ಈ ಮೂರು ಘಟಿಗಳು ಭೋಜನಕ್ಕೆ ಮುಖ್ಯಕಾಲವು. ಮುಂದೆ ಸಾಯಂಕಾಲಪರ್ಯಂತ ‘ಗೌಣಕಾಲವು. ಈ ತಿಥಿವ್ಯಾಪ್ತಿ ವಿಷಯದಲ್ಲಿ ಆರು ಪಕ್ಷಗಳಾಗುತ್ತವೆ. ಹೇಗೆಂದರೆ ಮುಂಚಿನ ದಿನದಲ್ಲಿ ಮುಖ್ಯ ಕಾಲದಲ್ಲಿ ವ್ಯಾಪ್ತಿ (೧), ಹಾಗೆಯೇ ಪರದಿನದಲ್ಲಿ ವ್ಯಾಪ್ತಿ (೨), ಎರಡೂ ದಿನಗಳಲ್ಲಿ ವ್ಯಾಪ್ತಿ (೩), ಎರಡೂ ದಿನ ಅವ್ಯಾಪ್ತಿ (ವ್ಯಾಪ್ತಿಯಿಲ್ಲದಿರುವಿಕೆ) (೪), ಎರಡೂ ಕಡೆಗಳಲ್ಲಿ ಸಮ ಸಮನಾಗಿ ಏಕದೇಶದಲ್ಲಿ ವ್ಯಾಪ್ತಿ (೫), ಎರಡೂ ಕಡೆಗೆ ವೈಷಮ್ಯದಿಂದ (ಹೆಚ್ಚು ಕಡಿಮೆ) ವ್ಯಾಪ್ತಿ (೬) ಹೀಗೆ ಆರು ಪಕ್ಷಗಳು. ಮೊದಲಿನ ಎರಡು ಪಕ್ಷಗಳಲ್ಲಿ ಸಂಶಯವಿರುವದಿಲ್ಲ. ಹೇಗೆಂದರೆ ಹಿಂದಿನ ದಿನವೇ ಮುಖ್ಯ ಕಾಲದಲ್ಲಿ ಬೇಕಾದ ತಿಥಿಯಿದ್ದರೆ ಪೂರ್ವದಿನ. ಮಾರನೇ ದಿನವೇ ಹಾಗಿದ್ದರೆ ಅದೇ ದಿನವೇ ಗ್ರಾಹ್ಯವಾಗುವದು. ಎರಡೂ ದಿನ ಪೂರ್ಣವ್ಯಾಪ್ತಿಯಿದ್ದಾಗ ಸಂಶಯವುಂಟಾಗುವದು. ಆಗ “ಯುವಾಕ್ಕಾ"ನುಸಾರ ನಿರ್ಣಯವನ್ನು ತಿಳಿಯತಕ್ಕದ್ದು. ಎರಡೂ ಕಡೆಗಳಲ್ಲಿ ವ್ಯಾಪ್ತಿಯಿಲ್ಲದಿದ್ದರೆ ಪೂರ್ವವೇ ಗ್ರಾಹ್ಯವಾಗುವದು. ಯಾಕೆಂದರೆ ಮುಂಚಿನ ದಿನ"ಗೌಣಕಾಲ"ವು ಸಿಗುವದು. ಸಮ-ಸಮನಾಗಿ ಎರಡೂ ದಿನ ಏಕದೇಶವ್ಯಾಪ್ತಿಯಿದ್ದಲ್ಲಿಯೂ ಪೂರ್ವ ದಿನವೇ ಗ್ರಾಹ್ಯವು. ಎರಡೂ ದಿನ ವೈಷಮ್ಯದಿಂದ ಏಕದೇಶ ವ್ಯಾಪ್ತಿಯಿದ್ದಲ್ಲಿ, ಅದೂ ಎರಡೂ ದಿನ ಕರ್ಮಕ್ಕೆ ಸಾಕಾಗುವಷ್ಟು ತಿಥಿ ಲಭ್ಯವಿದ್ದಲ್ಲಿ ಹಿಂದೆ ಹೇಳಿದ ಯುಗವಾಕ್ಕಾನುಸಾರ’ವಾಗಿ ಗ್ರಾಹ್ಯ ತಿಥಿಯನ್ನು ನಿರ್ಣಯಿಸತಕ್ಕದ್ದು, ಪರದಿನ ಕರ್ಮಕಾಲಕ್ಕೆ ಸಾಕಾಗದಂತಿದ್ದರೆ ಪೂರ್ವ ದಿನವೇ ಗ್ರಾಹ್ಯವು. ಹೀಗೆ ಏಕಭಕ್ತ ನಿರ್ಣಯವು. “ನಕ್ತ “ವಿಚಾರ-ನಕ್ಕಕ್ಕೆ ಸೂರ್ಯಾಸ್ತಾನಂತರ ಮೂರು ಮುಹೂರ್ತ ರೂಪವಾದ ಪ್ರದೋಷ ವ್ಯಾಪಿನಿಯಾದ ತಿಥಿಯು ಗ್ರಾಹ್ಯವು. ಎರಡು ದಿನಗಳೊಳಗೆ ಯಾವ ತಿಥಿಗೆ ಆ ವ್ಯಾಪ್ತಿ ಅಥವಾ ಏಕದೇಶ ವ್ಯಾಪ್ತಿ ಇದೆಯೋ ಆ ತಿಥಿಯು ಗ್ರಾಹ್ಯವು. ಭೋಜನವನ್ನು ಅಸ್ತಾನಂತರದಲ್ಲಿ ಸಂಧ್ಯಾಕಾಲವನ್ನು ಬಿಟ್ಟು ಮಾಡತಕ್ಕದ್ದು, ಸಂಧ್ಯಾಕಾಲದಲ್ಲಿ ಭೋಜನ, ನಿದ್ರಾ, ಮೈಥುನ, ಅಧ್ಯಯನ ಇವು ವರ್ಜಗಳು, ಯತಿಗಳು, ಪುತ್ರ, ಭಾರ್ಯಾರಹಿತರಾದವರು, ವಿಧವೆಯರು ನಕ್ತವನ್ನು ಸಾಯಾಹ್ನವ್ಯಾಪಿನಿಯಾದ ತಿಥಿಯಲ್ಲಿ, ದಿನದ ಎಂಟನೇ ಭಾಗದಲ್ಲಿ (ಸಾಮಾನ್ಯ ೨೬|| ಘಟಿಯಿಂದ ೩೦ ರ ಒಳಗೆ)ಮಾಡತಕ್ಕದ್ದು. ಯಾಕೆಂದರೆ - ರಾತ್ರಿಯಲ್ಲಿ ಅವರಿಗೆ ಭೋಜನ ನಿಷೇಧವಿದೆ. ಹೀಗೆಯೇ ಸೌರಮಾಸೋಕ್ತ ನಕ್ತವನ್ನೂ ಸಾಯಾಹ್ನವ್ಯಾಪಿನಿಯಾದ ತಿಥಿಯಲ್ಲಿ ಹಗಲಿನಲ್ಲಿಯೇ ಮಾಡತಕ್ಕದ್ದು. ಎರಡೂ ದಿನಗಳಲ್ಲಿ ಪ್ರದೋಷ ವ್ಯಾಪ್ತಿಯಿಲ್ಲದಿದ್ದರೆ ಮುಂದಿನ ತಿಥಿಯ ಸಾಯಾಹ್ನದ ದಿನದ ಎಂಟನೇ ಭಾಗದಲ್ಲಿ ನಕ್ಕವನ್ನು ಮಾಡತಕ್ಕದ್ದು, ರಾತ್ರಿಯಲ್ಲಿ ಮಾಡತಕ್ಕದ್ದಲ್ಲ, ಸರಿಸಮನಾಗಿ ಏಕದೇಶವ್ಯಾಪ್ತಿಯನ್ನರ ಪರದಿನವೇ ಗ್ರಾಹ್ಯವು. ಪ್ರದೋಷಕಾಲದಲ್ಲಿ ಹೆಚ್ಚು ಕಡಿಮೆಯಾಗಿ ಏಕದೇಶದಲ್ಲಿ ವ್ಯಾಪ್ತಿಯಿದ್ದರೆ ಹೆಚ್ಚಿನ ವ್ಯಾಪ್ತಿಯು ಪರಿಚ್ಛೇದ - ೧ ೧೩ -ಪೂಜಾ ಭೋಜನಪರ್ಯಂತದಷ್ಟು ಅಧಿಕವಾಗಿದ್ದರೆ ಪೂರ್ವದಿನವೂ ಗ್ರಾಹ್ಯವು ಇಲ್ಲವಾದರೆ ಸಾಮ್ಯಪಕ್ಷದಂತೆ ಅಂದರೆ ಎರಡೂಕಡೆ ಸಮಾನವ್ಯಾಪ್ತಿಯಿದ್ದರೆ ಹೇಗೋ, ಅದರಂತೆ ಮುಂದಿನ ತಿಥಿಯ ಗ್ರಾಹ್ಯವು, ಹೊರತು ಬರೇ ಅಧಿಕವಾಗಿರುವಿಕೆಯಿಂದ ಪೂರ್ವವು ಗ್ರಾಹ್ಯವಾಗಲಾರದು. ನಕ್ತವ್ರತದ ಭೋಜನವನ್ನು ರವಿವಾರ, ಸಂಕ್ರಾಂತಿಯಲ್ಲಾದರೂ ರಾತ್ರಿಯೇ ಮಾಡತಕ್ಕದ್ದು. ಯಾಕೆಂದರೆ ಅದು ವಿಧ್ಯುಕ್ತವಾದದ್ದು. ಸಾಮಾನ್ಯ ರವಿವಾರ, ಸಂಕ್ರಾಂತಿಗಳಲ್ಲಿ ರಾತ್ರಿ ಭೋಜನ ಮಾಡಬಾರದೆಂದಿರುವದಾದರೂ ಅದು ಇಚ್ಚಾಪೂರ್ವಕ ಭೋಜನವಿರುವದರಿಂದ ವಿಧ್ಯುಕ್ತಕ್ಕಿಂತ ಅದು ದುರ್ಬಲವು. ಏಕದಶ್ಯಾದಿ ಪ್ರತಿನಿಧಿಯಾಗಿ ಮಾಡಲ್ಪಡುವ ನಕ್ತವನ್ನಾದರೂ ಉಪವಾಸಕ್ಕೆ ಹೇಳಿದ ದಿನದಲ್ಲಿಯೇ ಮಾಡತಕ್ಕದ್ದು. ಅಯಾಚಿತ- ಇದು ಅಹೋರಾತ್ರ ಸಾಧ್ಯವಾದ ಕರ್ಮವಿರುವದರಿಂದ ಅದರ ನಿರ್ಣಯವನ್ನು “ಉಪವಾಸ"ದಂತೆಯೇ ತಿಳಿಯತಕ್ಕದ್ದು. ಇನ್ನು ಪಿತೃಸಂಬಂಧದ ಕರ್ಮಗಳಿಗೆ ಅಪರಾಹ್ನ ವ್ಯಾಪಕತ್ವದ ರೀತಿಯಿಂದ ನಿರ್ಣಯವಾಗತಕ್ಕದ್ದು. ಅದನ್ನು ಆಯಾಯ ಪ್ರಕರಣಗಳಲ್ಲಿ ಹೇಳಲಾಗುವದು. ಏಕಭಕ್ತ, ನಕ್ಕ, ಅಯಾಚಿತ, ಉಪವಾಸಗಳನ್ನು ವಿಧ್ಯುಕ್ತ ದಿನಗಳಲ್ಲಿ ಮಾಡಿ ಮಾರನೇ ದಿನ ತಿಥಿಯ ಅಂತ್ಯದಲ್ಲಿ ಪಾರಣೆಯನ್ನು ಮಾಡತಕ್ಕದ್ದು, ಮೂರು ಯಾಮಗಳಿಗಿಂತ ಹೆಚ್ಚಿನ ವ್ಯಾಪ್ತಿಯುಳ್ಳ ತಿಥಿಯಲ್ಲಿ ತಿಥ್ಯಂತದಲ್ಲಿ ಪಾರಣೆಯನ್ನು ಮಾಡದ ಪ್ರಾತಃಕಾಲದಲ್ಲಿಯೇ ಮಾಡತಕ್ಕದ್ದು. ಇದು ಸರ್ವತ್ರ ತಿಳಿಯತಕ್ಕದ್ದೆಂದು ಮಾಧವ ಮತವು. ಹೀಗೆ ಏಕಭಕ್ತ ಮೊದಲಾದವುಗಳ ನಿರ್ಣಯವೆಂಬ ಐದನೇ ಉದ್ದೇಶವು ಮುಗಿಯಿತು. ವ್ರತ ಪರಿಭಾಷೆ ಸ್ತ್ರೀಶೂದ್ರಾದಿಗಳಿಗೆ ಎರಡುರಾತ್ರಿಗಳಿಂತ ಹೆಚ್ಚಿನ ಉಪವಾಸದಲ್ಲಿ ಅಧಿಕಾರವಿಲ್ಲ. ಸ್ತ್ರೀಯರಿಗೆ ಗಂಡನ ಅನುಜ್ಞೆಯ ಹೊರತಾಗಿ ವ್ರತೋಪವಾಸಾದಿಗಳಲ್ಲಿ ಅಧಿಕಾರವಿಲ್ಲ. ಉಪವಾಸ ಮತ್ತು ಶ್ರಾದ್ಧದಿನ ಕಾಷ್ಟದಿಂದ ದಂತಧಾವನ ನಿಷೇಧವಿದೆ. ಎಲೆ ಮೊದಲಾದವುಗಳಿಂದ ಅಥವಾ ಹನ್ನೆರಡು ಗಂಡೂಷ (ಬಾಯಿಮುಕ್ಕಳಿಸುವಿಕೆ) ಗಳಿಂದ ಮಾಡತಕ್ಕದ್ದು. ಜಲಪೂರ್ಣವಾದ ತಾಮ್ರ ಪಾತ್ರವನ್ನು ಹಿಡಿದುಕೊಂಡು ಉತ್ತರಾಭಿಮುಖವಾಗಿ ಪ್ರಾತಃಕಾಲದಲ್ಲಿ ಉಪವಾಸಾದಿ ವ್ರತಗಳನ್ನು ಸಂಕಲ್ಪಿಸತಕ್ಕದ್ದು. ಮೊದಲು ಆರಂಭಿಸದಿರುವ ವ್ರತ, ವ್ರತೋದ್ಯಾಪನ ಇವುಗಳನ್ನು ಮಲಮಾಸದಲ್ಲಿಯೂ, ಗುರ್ವಾದಿಗಳ ಅಸ್ತ್ರದಲ್ಲಿಯೂ, ವೈಧೃತಿ, ವ್ಯತೀಪಾತ ಮೊದಲಾದ ದುರ್ಯೋಗಗಳಲ್ಲಿಯೂ, ವಿಷ್ಟಿ, ಕ್ರೂರವಾರ, ನಿಷಿದ್ಧಗಳಾದ ಅಮಾವಾಸ್ಕಾ ಇತ್ಯಾದಿಗಳಲ್ಲಿಯೂ ಮಾಡತಕ್ಕದ್ದಲ್ಲ. ಇದರಂತೆ “ಖಂಡತಿಥಿ"ಯಲ್ಲೂ ಮಾಡತಕ್ಕದ್ದಲ್ಲ. ಖಂಡತಿಥಿಯೆಂದರೆ- “ಉದಯ- ಸ್ವಾತಿಥಿರ್ಯಾಹಿನಭವೇದ್ದಿನಮಧ್ಯಭಾಕ್‌ ಸಾಖಂಡಾನವತಾನಾಂಸ್ಯಾದಾರಂಭಶ್ಚಸಮಾವನಂ” ಅ೦ದರ ಉದಯದಲ್ಲಿರುವ ತಿಥಿಯು ದಿನಮಧ್ಯವರೆಗೆ ಇಲ್ಲದಿದ್ದರೆ ಅದಕ್ಕೆ “ಖಂಡತಿಥಿ"ಎನ್ನುವರು. ಇದು ವ್ರತಗಳ ಆರಂಭ-ಸಮಾಪ್ತಿಗಳಿಗೆ ಸಾಲುವಂತಿಲ್ಲ-ಎಂದು “ಸತ್ಯವ್ರತನ ಉಕ್ತಿಯಿದೆ. ವ್ರತಗಳಲ್ಲಿ ಸಾಮಾನ್ಯವಾಗಿ ಕ್ಷಮೆ, ಸತ್ಯ, ದಯೆ, ದಾನ, ಶುಚಿತ್ವ, ಇಂದ್ರಿಯ ನಿಗ್ರಹ, ದೇವಾರ್ಚನೆ, ಹವನ, ಸಂತೋಷ, ಅಚೌರ್ಯ ಈ ನಿಯಮಗಳನ್ನು ಪಾಲಿಸತಕ್ಕದ್ದು. ೧೪ ಧರ್ಮಸಿಂಧು ವ್ಯಾಹೃತಿಹೋಮ ಇತ್ಯಾದಿಗಳನ್ನು ಕಾಮ್ಯ ವ್ರತವಿಶೇಷಗಳಲ್ಲಿ ತಿಳಿಯತಕ್ಕದ್ದು. ಯಾವ ದೇವತೆಯ ಉದ್ದೇಶದಿಂದ ಉಪವಾಸ ವ್ರತವಿದೆಯೋ ಆ ದೇವತೆಯ ಜಪ, ಧ್ಯಾನ, ಕಥಾಶ್ರವಣ, ಅರ್ಚನ, ನಾಮಶ್ರವಣ, ಕೀರ್ತನ ಮೊದಲಾದವುಗಳನ್ನು ಮಾಡತಕ್ಕದ್ದು. ಉಪವಾಸದಲ್ಲಿ ಅನ್ನದರ್ಶನ, ಆಘ್ರಾಣ, ಅಭ್ಯಂಗ, ತಾಂಬೂಲಚರ್ವಣ ಮಾಡತಕ್ಕದ್ದಲ್ಲ. ಜಲ, ಗಡ್ಡೆ, ಫಲ, ಹಾಲು, ಹವಿಸ್ಸು, ಬ್ರಾಹ್ಮಣತೃಪ್ತಿ, ಗುರುವಾಕ್ಯ, ಔಷಧ ಇವುಗಳನ್ನುಪಯೋಗಿಸಿದಾಗ ವ್ರತಗಳು ಕೆಡುವಂತಿಲ್ಲ. ಪ್ರಮಾದಾದಿಗಳಿಂದ ವ್ರತಭಂಗವಾದರೆ ಮೂರು ದಿನ ಉಪವಾಸಮಾಡಿ, ಕ್ಷೌರಮಾಡಿಸಿಕೊಂಡು, ಪುನಃ ವ್ರತವನ್ನಾಚರಿಸತಕ್ಕದ್ದು. ಅಶಕ್ತನಾದವನು ಉಪವಾಸ ಪ್ರತಿನಿಧಿ (ಬದಲಾಗಿಯಾಗಿ ಒಬ್ಬ ಬ್ರಾಹ್ಮಣನನ್ನು ಭೋಜನ ಮಾಡಿಸತಕ್ಕದ್ದು. ಅಥವಾ ಭೋಜನಕ್ಕೆ ಸಾಲುವಷ್ಟು ದ್ರವ್ಯವನ್ನು ದಾನಮಾಡುವದು. ಸಹಸ್ರಗಾಯತ್ರೀ ಜಪ ಮಾಡುವದು. ಅಥವಾ ಹನ್ನೆರಡು ಪ್ರಾಣಾಯಾಮಗಳನ್ನು ಮಾಡುವದು. ಇವು ಅದಕ್ಕೆ ಪ್ರಾಯಶ್ಚಿತ್ತವು. ಹಿಡಿದ ವ್ರತವನ್ನು ಪೂರೈಸಲು ಅಸಮರ್ಥನಾದಾಗ ಪ್ರತಿನಿಧಿಯಿಂದ ಮಾಡಿಸತಕ್ಕದ್ದು. ಮಗ, ಹೆಂಡತಿ, ಪತಿ, ಅಣ್ಣ-ತಮ್ಮಂದಿರು, ಪುರೋಹಿತ ಮಿತ್ರ, ಇವರನ್ನು “ಪ್ರತಿನಿಧಿಗಳನ್ನಾಗಿ ಮಾಡತಕ್ಕದ್ದು, ಪುತ್ರ ಮೊದಲಾದವರು, ತಂದ ಮೊದಲಾದವರ ಉದ್ದೇಶದಿಂದ ವ್ರತವನ್ನಾಚರಿಸಿದರೆ ತಾವೂ ಆ ವ್ರತದ ಫಲವನ್ನು ಹೊಂದುವರು. ಪದೇ ಪದೇ ನೀರು ಕುಡಿಯುವದರಿ೦ದ, ಒಂದಾವರ್ತಿಯಾದರೂ ತಾಂಬೂಲಚರ್ವಣಮಾಡುವದರಿಂದ, ಹಗಲು ನಿದ್ರೆ ಮಾಡುವದರಿಂದ, ಹಾಗೂ ಮೈಥುನದಿಂದ “ಉಪವಾಸ ವ್ರತ"ವು ಕೆಡುವದು. ಮೈಥುನವು ಎಂಟು ಪ್ರಕಾರವಾದದ್ದು. ಸ್ಮರಣ ಮಾಡುವದು, ವರ್ಣಿಸುವದು, ಆಡುವದು, ನೋಡುವದು, ರಹಸ್ಯದಲ್ಲಿ ಮಾತನಾಡುವದು, ಮನಸ್ಸಿನಲ್ಲಿ ಆಲೋಚನೆ ಮಾಡುವದು, ಆ ಬಗ್ಗೆ ಯತ್ನಿಸುವದು, ಪ್ರತ್ಯಕ್ಷಕ್ರಿಯೆ ಮಾಡುವದು, ಇವುಗಳಿಗೆ “ಅಷ್ಟಾಂಗ ಮೈಥುನ” ಎನ್ನುವರು. ಪ್ರಾಣಸಂಕಟದಂಥ ಆಪತ್ತಿನಲ್ಲಿ ಅನೇಕಾವರ್ತಿ ಜಲಪ್ರಾಶನಾದಿಗಳನ್ನು ಮಾಡಿದರೂ ದೋಷವಿಲ್ಲ. ಚರ್ಮಪಾತ್ರೆಯಲ್ಲಿರುವ ನೀರು, ಆಕಳ ಹೊರತಾದ ಬೇರೆ ಪ್ರಾಣಿಗಳ ಹಾಲು, ನಿಂಬೆ, ಚಿಪ್ಪಿಯಸುಣ್ಣ ಇವು ಮಾಂಸಗಣದಲ್ಲಿ ಬರುವದರಿಂದ ವ್ರತಾದಿಗಳಲ್ಲಿ ವರ್ಜಗಳು. ಕಣ್ಣೀರು ಸುರಿಸುವದು, ಸಿಟ್ಟು ಮಾಡುವದು ಇತ್ಯಾದಿಗಳಿಂದ “ವ್ರತವು ಸದ್ಯವೇ ಕೆಡುವದು. ಭೋಜನಮಾಡುವ ಅನ್ನವು ಹೆರವರದ್ದಾದ ಪಕ್ಷದಲ್ಲಿ ಅದು ಯಾರ ಅನ್ನವೋ ಅವರಿಗೆ ಅದರ ಫಲವು ಸೇರುವದು. ಹವಿಷ್ಯ ಗಣ ವಿಚಾರ ಎಳ್ಳು, ಹೆಸರು ಇವುಗಳನ್ನು ಬಿಟ್ಟು ಕಡಲೆ ಮೊದಲಾದ ಸೋಡಿಗೆ ಧ್ಯಾನ, ಉದ್ದು, ಮೂಲಂಗಿ ಇತ್ಯಾದಿ “ಕಾರ"ಗಣ, ಉಪ್ಪು, ಜೇನುತುಪ್ಪ, ಮಾಂಸ ಇತ್ಯಾದಿಗಳನ್ನು ತ್ಯಜಿಸತಕ್ಕದ್ದು. ಸಾಮಅಕ್ಕಿ, ನವಣಿ, ಗೋಧಿ ಇವು ವ್ರತದಲ್ಲಿ ಯೋಗ್ಯವಾದವುಗಳು. ಭತ್ತ, ಪಚ್ಚೆಸರು, ಜವೆಗೋಧಿ, ನವಣಿ, ನೆಲಗಡಲೆ ಮೊದಲಾದ ಧಾನ್ಯಗಳು, ಬಿಳೇಮೂಲಂಗಿ, ಪಂಜರಗಡ್ಡೆ ಮೊದಲಾದವುಗಳು, ಸೈಂಧವಲವಣ, ಆಕಳಿನ ಮೊಸರು, ಹಾಲು, ತುಪ್ಪ, ಹಲಸಿನಕಾಯಿ, ಮಾವಿನಕಾಯಿ, ತೆಂಗಿನಕಾಯಿ, ಅಳಲೇಕಾಯಿ, ಹಿಪ್ಪಲಿ, ಜೀರಿಗೆ, ಶುಂಠಿ, ಹುಣಸೆ, ಬಾಳೆ, ರಾಯನಲ್ಲಿ, ನೆಲ್ಲಿಕಾಯಿ, ಬೆಲ್ಲದಿಂದ ಹೊರತಾದ ಇನ್ನು ಪದಾರ್ಥಗಳು, ತೈಲಪಕ್ಷರಹಿತಗಳಾದ ಭಕ್ಷ್ಯಗಳು-ಇವುಗಳಿಗೆ “ಹವಿಷ್ಯ” ಪರಿಚ್ಛೇದ - ೧ ವೆನ್ನುವರು. ಗೋವಿನ ಮಜ್ಜಿಗೆ, ಎಮ್ಮೆಯ ತುಪ್ಪ ಇದಾದರೂ ಕ್ವಚಿತ್ ಆಗಬಹುದು. ವ್ರತಾದಿಗಳಲ್ಲಿ ಪ್ರತಿಮೆಯನ್ನು ಹೇಳದಿರುವಾಗ ಮಾಷ (ಮಾಸಿ) ಪರಿಮಾಣ ಇತ್ಯಾದಿ ಪ್ರಮಾಣದ ಸುವರ್ಣ ಅಥವಾ ಬೆಳ್ಳಿಯ ಪ್ರತಿಮೆ ಮಾಡಿ ಪೂಜಿಸತಕ್ಕದ್ದು, ಹೋಮಕ್ಕೆ ದ್ರವ್ಯವನ್ನು ಹೇಳದಿದ್ದಲ್ಲಿ “ಆಜ್ಯ"ದಿಂದ ಹೋಮಿಸತಕ್ಕದ್ದು. ದೇವತೆಯನ್ನು ಹೇಳದಿರುವಲ್ಲಿ “ಪ್ರಜಾಪತಿ” ದೇವತೆಯೆಂದು ಹೇಳುವದು. ಮಂತ್ರಗಳ ಉಲ್ಲೇಖ ಇಲ್ಲದಿರುವಾಗ ಸಮಸ್ತ ವ್ಯಾಹೃತಿ (ಭೂರ್ಭುವಃಸ್ವ) ಎಂದು ತಿಳಿಯತಕ್ಕದ್ದು. ಹೋಮಸಂಖ್ಯೆಯನ್ನು ಹೇಳದಿದ್ದಲ್ಲಿ ನೂರೆಂಟು ಅಥವಾ ೨೮ ಇಲ್ಲವ ೮ ಎಂದು ತಿಳಿಯುವದು. ಉಪವಾಸ ಮಾಡಿರುವಾಗ ಅದರ ಸಾಂಗತಾಸಿದ್ಧಿಗಾಗಿ ಬ್ರಾಹ್ಮಣಭೋಜನ ಮಾಡಿಸತಕ್ಕದ್ದು. ಉದ್ಯಾಪನೆಯನ್ನು ಹೇಳದಿದ್ದಾಗ ಗೋವು ಅಥವಾ ಸುವರ್ಣ ದಾನ ಮಾಡತಕ್ಕದ್ದು. ಬ್ರಾಹ್ಮಣ ಆಶೀರ್ವಾದದಿಂದ ವ್ರತವು ಸಾಂಗವಾಗುವದು. ದಕ್ಷಿಣೆಯನ್ನು ಕೊಟ್ಟೆ ಆಶೀರ್ವಾದ ಪಡೆಯತಕ್ಕದ್ದು. ಸಾಮಾನ್ಯ ಎಲ್ಲ ಕಡೆಯಲ್ಲಿಯೂ ಇದೇ ನಿಯಮವು, ಹಿಡಿದ ವ್ರತವನ್ನು ಬಿಟ್ಟರೆ ಚಾಂಡಾಲ ಸಮನಾಗುವನು, ವಿಧವೆಯರು ವ್ರತಾದಿಗಳಲ್ಲಿ ವಿಚಿತ್ರವಾದ ವಸ್ತ್ರ, ಕಂಪುವಸ್ತ್ರ ಮೊದಲಾದವುಗಳನ್ನು ಧರಿಸಬಾರದು. ಬಿಳೇ ವಸ್ತ್ರಗಳನ್ನೇ ಧರಿಸುವದು. ಸೂತಕ ಪ್ರಾಪ್ತವಾದಲ್ಲಿ, ರಜೋದರ್ಶನವಾದಲ್ಲಿ, ಜ್ವರಾದಿರೋಗ ಪ್ರಾಪ್ತವಾದಲ್ಲಿ ಹಿಡಿದ ವ್ರತವನ್ನು ಬಿಡದೆ ಶರೀರ ಸಂಬಂಧವಾದ ನಿಯಮಗಳನ್ನು ತಾನೇ ಪಾಲಿಸತಕ್ಕದ್ದು. ಪೂಜಾದಿಗಳನ್ನು ಬೇರೆಯವರ ಕಡೆಯಿಂದ ಮಾಡಿಸತಕ್ಕದ್ದು. ವ್ರತಪ್ರಾರಂಭವಾಗದಿದ್ದಾಗ ಸೂತಕ ಬಂದರೆ ಮಾಡತಕ್ಕದ್ದಲ್ಲ. ಕಾಮ್ಯಕರ್ಮಗಳನ್ನು ಪ್ರತಿನಿಧಿ"ಯಿಂದ ಮಾಡಿಸತಕ್ಕದ್ದಲ್ಲ. ನಿತ್ಯ ಹಾಗೂ ನೈಮಿತ್ತಿಕ ಕರ್ಮಗಳನ್ನು “ಪ್ರತಿನಿಧಿ” ಯಿಂದ ಮಾಡಿಸಬಹುದು. ಇನ್ನು ಕಾಮಾದಿಕರ್ಮಗಳಲ್ಲಾದರೂ ಪ್ರಾರಂಭಿಸಿದ ನಂತರ ಅಡ್ಡಿ ಬಂದಲ್ಲಿ “ಪ್ರತಿನಿಧಿಗಳಿಂದ ಮಾಡಿಸಬಹುದೆಂದು ಕೆಲವರು ಹೇಳುವರು. ‘ಮಂತ್ರ’ಗಳು ಸ್ವಾಮಿ, ದೇವ, ಅಗ್ನಿಕಾರ್ಯ ಇವುಗಳಲ್ಲಿ ಪ್ರತಿನಿಧಿಯಾಗಕೂಡದು. ನಿಷಿದ್ಧವಾದ ವಸ್ತುಗಳಿಗೆ ಎಲ್ಲಿಯೂ “ಪ್ರತಿನಿಧಿ’ಯೇ ಇಲ್ಲ. ಅನೇಕ ವ್ರತಗಳು ಒಂದೇ ಕಾಲದಲ್ಲಿ ಪ್ರಾಪ್ತವಾದಾಗ-ದಾನ, ಹೋಮ ಮೊದಲಾದವುಗಳನ್ನು ವಿರುದ್ಧವಾಗದಂತ ಕ್ರಮದಿಂದ ಮಾಡತಕ್ಕದ್ದು, ನಕ್ತ ಭೋಜನ ಉಪವಾಸಾದಿ ವಿರುದ್ಧವಾದವುಗಳಲ್ಲಿ ತಾನು ಅವುಗಳಲ್ಲಿ ಒಂದನ್ನು ಮಾಡಿ ಇನ್ನೊಂದನ್ನು ಪುತ್ರ ಅಥವಾ ಪತ್ನಿ ಇತ್ಯಾದಿಗಳಿಂದ ಮಾಡಿಸತಕ್ಕದ್ದು. ಚತುರ್ದಶೀ, ಅಷ್ಟಮಿ ಮೊದಲಾದವುಗಳಲ್ಲಿ ಹಗಲು ಭೋಜನ ನಿಷೇಧವಿದೆ. ಆಗ ಹಿಡಿದ ಬೇರೆ ವ್ರತದ ಪಾರಣೆಯನ್ನು ಮಾಡಬೇಕಾದಲ್ಲಿ ಭೋಜನವನ್ನೇ ಮಾಡತಕ್ಕದ್ದು, ಯಾಕೆಂದರೆ ಪಾರಣೆಯು “ವಿಧಿಪ್ರಾಪ್ತವಾದದ್ದು. ಅಷ್ಟಮ್ಯಾದಿ ಭೋಜನ ನಿಷೇಧವು ಸ್ಟೇಚ್ಛೆಯಿಂದ ಪ್ರಾಪ್ತವಾದದ್ದು. (ರಾಗ-ಪ್ರಾಪ್ತ) ರವಿವಾರ ರಾತ್ರಿಯಲ್ಲಿ ಭೋಜನ ಮಾಡಬಾರದೆಂದಿದೆ. ಆದರೆ ಸಂಕಷ್ಟ ಚತುರ್ಥ್ಯಾದಿಗಳು ಬಂದರೆ ವಿಶೇಷ ವಿಧಿಯಿಂದ ರಾತ್ರಿಯಲ್ಲಿ ಭೋಜನ ಮಾಡಲೇಬೇಕಾಗುವದು. ಅಷ್ಟಮ್ಯಾದಿಗಳಲ್ಲಿ ಹಗಲು ಭೋಜನ ನಿಷೇಧವಿದೆ. ರವಿವಾರಾದಿಗಳಲ್ಲಿ ರಾತ್ರಿ ಭೋಜನ ನಿಷೇಧವಿದೆ. ಅಷ್ಟಮೀದಿನ ರವಿವಾರ ಬಂದರೆ ಭೋಜನ ವಿಷಯದಲ್ಲಿ ಪರಸ್ಪರ ರವಿವಾರಾದಿಗಳಲ್ಲಿ ಇಂಥ ಸಂದರ್ಭದಲ್ಲಿ ಉಪವಾಸವನ್ನೇ ಮಾಡತಕ್ಕದ್ದು, ಪುತ್ರರುಳ್ಳ ಗೃಹಸ್ಥರಿಗೆ ಸಂಕ್ರಾಂತ್ಯಾದಿಗಳಲ್ಲಿ ೧೬ ಧರ್ಮಸಿಂಧು ನಿಷೇಧವಿದೆ. ಅರ್ಥಾತ್ ಭೋಜನಮಾಡುವದಿದೆ. ಆ ದಿನ ಅಷ್ಟಮ್ಯಾದಿಗಳು ಬಂದಾಗ ಹಗಲು ಭೋಜನ ನಿಷೇಧವಿರುತ್ತದೆ. ರವಿವಾರ ಬಂದಾಗ ರಾತ್ರಿ ಭೋಜನ ನಿಷೇಧವಿರುತ್ತದೆ. ಇಂಥ ಸಂದರ್ಭದಲ್ಲಿ ಸ್ವಲ್ಪ ಭಕ್ಷ್ಯವನ್ನು ಸೇವಿಸಿ ಉಪಾಹಾರವನ್ನೇ ಮಾಡತಕ್ಕದ್ದು. ಚಾಂದ್ರಾಯಣ ವ್ರತ ಮಧ್ಯದಲ್ಲಿ ಏಕದಶ್ಯಾದಿಗಳು ಪ್ರಾಪ್ತವಾದಾಗ ಗ್ರಾಸ ಸಂಖ್ಯಾನಿಯಮದಿಂದ ಭೋಜನವನ್ನೇ ಮಾಡತಕ್ಕದ್ದು. ಕೃಚ್ಛಾದಿ ವ್ರತಗಳಲ್ಲಿಯೂ ಇದರಂತೆ ಮಾಡತಕ್ಕದ್ದು. ಏಕಾದಶಿಯಲ್ಲಿ ಬೇರೆ ಉಪವಾಸಾದಿಗಳ ಪಾರಣೆಯು ಪ್ರಾಪ್ತವಾದರೆ ಜಲದಿಂದ ಪಾರಣ ಮಾಡಿ ಉಪವಾಸವನ್ನು ಮಾಡತಕ್ಕದ್ದು. ಹೀಗೆಯೇ ದ್ವಾದಶಿಯಲ್ಲಿ ಮಾಸೋಪವಾಸ, ಶ್ರಾದ್ಧ, ಪ್ರದೋಷ ಮೊದಲಾದ ಪಾರಣೆಗೆ ಪ್ರತಿಬಂಧವಾದ ಕರ್ಮಗಳು ಪ್ರಾಪ್ತವಾದಾಗ ಜಲದಿಂದ ಪಾರಣಮಾಡತಕ್ಕದ್ದು. ಏಕಾದಶ್ಯಾದಿಗಳಲ್ಲಿ ಹಾಗೂ ಸಂಕ್ರಾಂತಿಗಳಲ್ಲಿ ಪುತ್ರರುಳ್ಳ ಗೃಹಸ್ಥರಿಗೆ ಉಪವಾಸ ನಿಷೇಧವಿದೆ. ಏಕಾದಶಿಯ ಉಪವಾಸವೂ ಇದೆ. ಇಂಥ ಪ್ರಸಂಗದಲ್ಲಿ ಸ್ವಲ್ಪ ಜಲ, ಗಡ್ಡೆ, ಫಲ, ಹಾಲು ಇವುಗಳನ್ನು ಭಕ್ಷಿಸುವದು. ಇದರಿಂದ ಉಪವಾಸ ನಿಷೇಧವೂ, ಉಪವಾಸ ವಿಧಿಯೂ ನೆರವೇರಿದಂತಾಗುವದು. ಎರಡು ಉಪವಾಸ ಅಥವಾ ನಕ್ತ ಇಲ್ಲವೆ “ಏಕಭಕ್ತ"ಗಳು ಒಂದೇ ದಿನದಲ್ಲಿ ಪ್ರಾಪ್ತವಾದ ಸಂದರ್ಭದಲ್ಲಿ ಇಂಥ ಉಪವಾಸ” “ಇಂಥ ನಕ್ತಾದಿ"ಗಳನ್ನು ‘ತಂತ್ರಣ ಕರಿಷ್ಟೇ’ ಹೀಗೆ ಸಂಕಲ್ಪಿಸಿ ಕೂಡಿಯೇ ಉಪವಾಸ, ಪೂಜಾ, ಹೋಮಗಳ ಅನುಷ್ಠಾನ ಮಾಡತಕ್ಕದ್ದು. ಉಪವಾಸ, ಏಕಭಕ್ತಗಳು ಒಂದೇ ದಿನದಲ್ಲಿ ಬಂದರೆ ಎರಡು ಒಟ್ಟಾದ ತಿಥಿಗಳಲ್ಲಿ ಒಂದನ್ನು ಗೌಣಕಾಲವ್ಯಾಪ್ತಿಯನ್ನಾಶ್ರಯಿಸಿ -ಪೂರ್ವ ತಿಥಿಯಲ್ಲಿಯೂ, ಮತ್ತೊಂದನ್ನು ಶೇಷವಾದ ತಿಥಿಯಲ್ಲಿಯೂ ಮಾಡತಕ್ಕದ್ದು. ತಿಥಿಯು “ಅಖಂಡ"ವಾಗಿದ್ದಲ್ಲಿ ಒಂದನ್ನು ಪುತ್ರಾದಿ ಪ್ರತಿನಿಧಿಗಳಿಂದ ಮಾಡಿಸತಕ್ಕದ್ದೆಂದು ಮೊದಲೇ ಹೇಳಿದೆ. ಹೀಗೆಯೇ, “ಕಾಂ ನಿತ್ಯಸ್ಯ ಬಾಧಕಂ’ ಅಂದರೆ ಕಾವ್ಯವು ನಿತ್ಯ ಕರ್ಮವನ್ನು ಬಾಧಿಸುವದು. ಇತ್ಯಾದಿ ವಚನಗಳಿರುವದರಿಂದ ಕಾಮ್ಮನಿತ್ಯ ಇತ್ಯಾದಿಗಳ ಬಲಾಬಲ, ಬಾಧ ಅಬಾಧ, ಸಂಭವ-ಅಸಂಭವ ಮೊದಲಾದವುಗಳನ್ನು ಪರ್ಯಾಲೋಚಿಸಿ ಅನುಷ್ಠಾನ ಮಾಡುವದು. ಇಲ್ಲಿಗೆ ಸಾಮಾನ್ಯ ವ್ರತಪರಿಭಾಷಾ ಎಂಬ ಆರನೇ ಉದ್ದೇಶವು ಮುಗಿಯಿತು. ಪ್ರತಿಪದ್ಯಾದಿ ತಿಥಿ ನಿರ್ಣಯ || ಶುಕ್ಲ ಪ್ರತಿಪದೆಯು ಪೂಜಾವ್ರತಾದಿಗಳಿಗೆ ಅಪರಾಹ್ನಪರ್ಯಂತ ಇದ್ದರೆ “ಪೂರ್ವ ವಿದ್ದ ಅಂದರೆ ಅಮಾವಾಸ್ಯೆಯಿಂದ “ವಿದ್ದ"ವಾದದ್ದು ಗ್ರಾಹ್ಮವು, ಸಾಯಾಹ್ನವ್ಯಾಪಿನಿಯಾದರೂ ಪೂರ್ವವೇ ಗ್ರಾಹ್ಯವೆಂದು ಮಾಧವಾಚಾರ್ಯರ ಮತವು. ಇದಕ್ಕೆ ಹೊರತಾದಾಗ ದ್ವಿತೀಯಾಯುಕ್ತವಾದದ್ದು ಗ್ರಾಹ್ಯವು, ಕೃಷ್ಣಪಕ್ಷ ಪ್ರತಿಪದೆಯು ಎಲ್ಲವೂ ದ್ವಿತೀಯಾಯುಕ್ತವಾದದ್ದು ಗ್ರಾಹ್ಯವು, ಉಪವಾಸ ವಿಷಯದಲ್ಲಾದರೋ ಎರಡೂ ಪಕ್ಷಗಳಲ್ಲೂ ಪೂರ್ವವಿದ್ದ ಪ್ರತಿಪದೆಯೇ ಗ್ರಾಹ್ಯವು. ಅಪರಾಹ್ನವ್ಯಾಪಿನಿಯಾದ ಪ್ರತಿಪದೆಯಲ್ಲಿ ಮಾಡತಕ್ಕ ಉಪವಾಸಾದಿ ಸಂಕಲ್ಪವನ್ನು ಪ್ರಾತಃ ಕಾಲದಲ್ಲಿಯೇ ಮಾಡತಕ್ಕದ್ದು, ಸಂಕಲ್ಪ ಕಾಲದಲ್ಲಿ ಪ್ರತಿಪದೆಯಿಲ್ಲದಿದ್ದರೂ ಸಂಕಲ್ಪದಲ್ಲಿ ಪ್ರತಿಪದೆಯನ್ನೇ ಉಚ್ಚರಿಸತಕ್ಕದ್ದು. ಹೊರತು ಅಮಾವಾಸ್ಯೆಯಿದೆಯೆಂದು ಅದನ್ನು ಉಚ್ಚರಿಸತಕ್ಕದ್ದಲ್ಲ. ಪರಿಚ್ಛೇದ - ೧ 02 “ಉಪೋಷ್ಟಾದ್ವಾದಶೀಶುದ್ಧಾ” ಇತ್ಯಾದಿ ಸ್ಥಲದಲ್ಲಿ ಏಕಾದಶಿ ವ್ರತಪ್ರಯುಕ್ತ ಸಂಕಲ್ಪ ಪೂಜಾದಿಗಳಲ್ಲಿ ಏಕಾದಶೀ ಎಂದೇ ಹೇಳತಕ್ಕದ್ದು. ಹೊರತು “ದ್ವಾದಶೀ” ಎಂದಲ್ಲ. ಆದರೆ ಸಂಧ್ಯಾ -ಅಗ್ನಿ ಹೋತ್ರಾದಿ-ಬೇರೆ ಕರ್ಮಗಳಲ್ಲಿ ಆಯಾಯ ಕಾಲವ್ಯಾಪಿಯಾದ “ದ್ವಾದಶಾದಿ"ಗಳನ್ನೇ ಹೇಳತಕ್ಕದ್ದೆಂದು ನನಗೆ ಕಾಣುತ್ತದೆ. ಸಂಕಲ್ಪವನ್ನಾದರೂ ಸೂರ್ಯೋದಯಕ್ಕಿಂತ ಮೊದಲು ಉಷಃಕಾಲದಲ್ಲಿ ಹಾಗೂ ಸೂರ್ಯೋದಯಾನಂತರ “ಪ್ರಾತಃ ಕಾಲ’ವೆಂಬ ಆರು ಘಟೀಕಾಲದಲ್ಲಿ ಮೊದಲನೇ ಎರಡು ಮುಹೂರ್ತ ಅಂದರೆ ನಾಲ್ಕು ಘಟಿಗಳಲ್ಲಿ ಮಾಡುವದು ಪ್ರಸವು. “ಮೂರನೇ ಮುಹೂರ್ತವು ನಿಷಿದ್ದವು. ಇಲ್ಲಿಗೆ ಪ್ರತಿಪದೆಯ ನಿರ್ಣಯವೆಂಬ ಏಳನೇ ಉದ್ದೇಶವು ಮುಗಿಯಿತು. ಬಿದಿಗೆಯ ನಿರ್ಣಯ ಬಿದಿಗೆಯ ಶುಕ್ಲಪಕ್ಷದಲ್ಲಿ ತೃತೀಯಾ ವಿದ್ಧವಾದದ್ದು ಗ್ರಾಹ್ಯವು. ಕೃಷ್ಣ ಪಕ್ಷದಲ್ಲಿ ದಿನಪ್ರಮಾಣವನ್ನು ಎರಡು ಪಾಲುಮಾಡಿ (ಪೂರ್ವಭಾಗ-ಅಪರಭಾಗ ಹೀಗೆ) ಅದರಲ್ಲಿ ಪೂರ್ವಭಾಗ ರೂಪದ್ದಾದ “ಪೂರ್ವಾಹ್ನ"ವನ್ನು ಪ್ರವೇಶಿಸಿದ್ದರೆ ಪೂರ್ವವೇ ಗ್ರಾಹ್ಯವು, ಇಲ್ಲವಾದರೆ ಕೃಷ್ಣ ಪಕ್ಷದಲ್ಲಿಯಾದರೂ ಪರವೇ ಗ್ರಾಹ್ಯವು. ಇಲ್ಲಿಗೆ ದ್ವಿತೀಯಾ ನಿರ್ಣಯವೆಂಬ ಎಂಟನೇ ಉದ್ದೇಶವು ಮುಗಿಯಿತು. ತೃತೀಯಾ ನಿರ್ಣಯ ತದಿಗೆಯು ರಂಭಾವ್ರತದಲ್ಲಿ ಪೂರ್ವವಿದ್ಧವಾದದ್ದು ಗ್ರಾಹ್ಯವು, ಇತರ ವ್ರತಗಳಲ್ಲಿ ಮೂರು ಮುಹೂರ್ತ-ದ್ವಿತೀಯಾ ವಿದ್ಧವಾದ ಪೂರ್ವದಿನವನ್ನು ಬಿಟ್ಟು ಪರದಿನ ತ್ರಿಮುಹೂರ್ತ ವ್ಯಾಪಿನಿಯಾದದ್ದು ಗ್ರಾಹ್ಮವು, ಪೂರ್ವದಿನದಲ್ಲಿ ಮುಹೂರ್ತಕ್ಕಿಂತ ಕಡಿಮೆಯಾದ, ದ್ವಿತೀಯಾಯುಕ್ತವಾಗಿದ್ದು ಪರದಿನ ತ್ರಿಮುಹೂರ್ತ ವ್ಯಾಪ್ತಿಯಿಲ್ಲದಿದ್ದರೆ ಪೂರ್ವವೇ ಗ್ರಾಹ್ಯವು. ಪೂರ್ವದಿನದಲ್ಲಿ ತ್ರಿಮುಹೂರ್ತ ಪರ್ಯಂತ ದ್ವಿತೀಯಾ ಇದ್ದಲ್ಲಿ ಪರದಿನ ತ್ರಿಮುಹೂರ್ತಕ್ಕಿಂತ ಕಡಿಮೆಯಿದ್ದರೂ ಪರದಿನವೇ ಗ್ರಾಹ್ಯವು, ಗೌರೀ ವ್ರತದಲ್ಲಿಯಾದರೋ ಕಲಾಪರಿಮಿತ ( ೧೮ ನಿಮಿಷ) ಕಾಷ್ಠಾಪರಿಮಿತ (೩೦ ಕಲಾ) ವಾದ ಸ್ವಲ್ಪ ಬಿದಿಗೆಯುಕ್ತವಾದರೂ ನಿಷಿದ್ದವು. ಪರದಿನ ಕಲಾಕಾಷ್ಠಾದಿ ಪರಿಮಿತವಾದ ಸ್ವಲ್ಪ ತೃತೀಯಾ ಇದ್ದರೂ ಅದು ಗ್ರಾಹ್ಯವು. ದಿನ ಕ್ಷಯವಶದಿಂದ ಪರದಿನದಲ್ಲಿ ಸ್ವಲ್ಪವಾದರೂ ಚತುರ್ಥಿಯುಕ್ತವಾದ ತೃತೀಯೆಯು ಸಿಗದಿದ್ದಾಗ ಪೂರ್ವದಿನದಲ್ಲಿ ದ್ವಿತೀಯಾ ವಿದ್ದವಾದರೂ ಅದೇ ಗ್ರಾಹ್ಯವು. ದಿನವೃದ್ಧಿಯಾಗಿ ೬೦ ಗಳಿಗೆಯುಳ್ಳ ತೃತೀಯಯು ಮಿಕ್ಕಿ ವರದಿನದಲ್ಲಿ ಅಲ್ಪವಾಗಿದ್ದರೂ ಅರವತ್ತು ಗಳಿಗೆಯಿರುವ ದಿನವನ್ನು ಬಿಟ್ಟು ಚತುರ್ಥಿಯುಕ್ತವಾದ ತೃತೀಯಯೇ ಗ್ರಾಹ್ಯವು, ಗೌರೀವ್ರತಕ್ಕೆ ಹೀಗೆ ನಿರ್ಣಯವನ್ನು ತಿಳಿಯುವದು. ಇಲ್ಲಿಗೆ ತೃತೀಯಾ ನಿರ್ಣಯವೆಂಬ ಒಂಭತ್ತನೇ ಉದ್ದೇಶವು ಮುಗಿಯಿತು. ಚತುರ್ಥೀ ನಿರ್ಣಯ ಚತುರ್ಥಿಯು ಗಣೇಶವ್ರತ ಹೊರತಾಗಿ ಉಪವಾಸ ಕರ್ಮಗಳಲ್ಲಿ ಪಂಚಮೀಯುತವಾದದ್ದು ಗ್ರಾಹ್ಯವು. ಗೌರೀ ವಿನಾಯಕ ವ್ರತದಲ್ಲಿ ಮಧ್ಯಾಹ್ನ ವ್ಯಾಪಿನಿಯಾದದ್ದು ಗ್ರಾಹ್ಯವು, ಪರದಿನದಲ್ಲೇ ಮಧ್ಯಾಹ್ನ ವ್ಯಾಪಿನಿಯಿದ್ದರೆ ಪರವೇ ಗ್ರಾಹ್ಯವು, ಎರಡೂದಿನ ಮಧ್ಯಾಹ್ನವ್ಯಾಪ್ತಿ ಇದ್ದರೆ ಅಥವಾ · ಧರ್ಮಸಿಂಧು ಎರಡೂ ದಿನ ಮಧ್ಯಾಹ್ನ ವ್ಯಾಪ್ತಿ ಇಲ್ಲದಿದ್ದರೆ ಅಥವಾ ಸಮ-ಸಮವಾಗಿ ಇಲ್ಲವೇ ವೈಷಮ್ಯವಾಗಿ ಏಕದೇಶವ್ಯಾಪ್ತಿ ಇದ್ದರೆ ಪೂರ್ವವೇ ಗ್ರಾಹ್ಯವು. ಯಾಕೆಂದರೆ ಚತುರ್ಥಿಗೆ ತೃತೀಯಾಯೋಗದಿಂದ ಪ್ರಾಶಸ್ತ್ರವಿದೆ. ನಾಗವ್ರತದಲ್ಲಿ ಪೂರ್ವದಿನ ಮಧ್ಯಾಹ್ನ ವ್ಯಾಪ್ತಿಯಿದ್ದರೆ ಅದೇ ಗ್ರಾಹ್ಯವು. ಎರಡೂ ದಿನ ಮಧ್ಯಾಹ್ನ ವ್ಯಾಪ್ತಿ ಅವ್ಯಾಪ್ತಿ ಮೊದಲಾದ ನಾಲ್ಕು ವಿಧ ವ್ಯಾಪ್ತಿಗಳಲ್ಲಿ ಪ೦ಚಮೀಯುಕ್ತವಾದದ್ದ ಗ್ರಾಹ್ಯವು. ಚತುರ್ಥಿಯಾದರೂ ಚಂದ್ರೋದಯವ್ಯಾಪಿನಿಯಾದದ್ದು ಗ್ರಾಹ್ಯವು, ಪರದಿನದಲ್ಲಿ ಚಂದ್ರೋದಯ ವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು, ಎರಡೂದಿನ ಚಂದ್ರೋದಯ ವ್ಯಾಪ್ತಿಯಿಲ್ಲದಿದ್ದರೆ ಪರವೇ ಗ್ರಾಹ್ಯವು. ಇಲ್ಲಿಗೆ ಚತುರ್ಥಿ ನಿರ್ಣಯವೆಂಬ ಹತ್ತನೇ ಉದ್ದೇಶವು ಮುಗಿಯಿತು. ಪಂಚಮೀ ನಿರ್ಣಯ ಸಂಕಷ್ಟ ಪಂಚಮಿಯು ಶುಕ್ಲ ಹಾಗೂ ಕೃಷ್ಣ ಈ ಎರಡೂ ಪಕ್ಷಗಳಲ್ಲಿಯೂ ಸಾಮಾನ್ಯ ಕರ್ಮಗಳಿಗೆ ಚತುರ್ಥಿಯುಕ್ತವಾದದ್ದು ಗ್ರಾಹ್ಮವು, ಸುಬ್ರಹ್ಮಣ್ಯ ಉಪವಾಸದಲ್ಲಿ ಷಷ್ಠಿಯುಕ್ತವಾದದ್ದು ಗ್ರಾಹ್ಯವು. ನಾಗವತದಲ್ಲಿ ಪರವಿದ್ದವಾದ ಪಂಚಮಿಯು ಗ್ರಾಹ್ಯವು, ಪಂಚಮಿಯು ಪರದಿನ ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದು ಪೂರ್ವದಿನದಲ್ಲಿ ತ್ರಿಮುಹೂರ್ತಕ್ಕಿಂತ ಕಡಿಮೆ ಇರುವ ಚತುರ್ಥಿಯುಕ್ತವಾದರೆ ಪೂರ್ವದಿನವೇ ಗ್ರಾಹ್ಯವು, ಮೂರು ಮುಹೂರ್ತಕ್ಕಿಂತ ಹೆಚ್ಚಾಗಿರುವ ಚತುರ್ಥಿ ವೇಧವಾದಲ್ಲಿ ಪರದಲ್ಲಿ ಎರಡು ಮುಹೂರ್ತವಿದ್ದರೂ ಪರದಿನವೇ ಗ್ರಾಹ್ಯವು. ಇಲ್ಲಿಗೆ ಪಂಚಮೀನಿರ್ಣಯವೆಂಬ ಹನ್ನೊಂದನೆಯ ಉದ್ದೇಶವು ಮುಗಿಯಿತು. ಷಷ್ಠಿ ನಿರ್ಣಯ ಷಷ್ಠಿಯು ಸುಬ್ರಹ್ಮಣ್ಯವ್ರತದಲ್ಲಿ ಪೂರ್ವವಿದ್ದವಾದದ್ದು ಗ್ರಾಹ್ಯವು, ಬೇರೆ ವ್ರತಗಳಲ್ಲಿ ಪರವಿದ್ಧವಾದದ್ದೇ ಗ್ರಾಹ್ಯವು. ಮುಂಚಿನದಿನ ಮೂರು ಮುಹೂರ್ತಕ್ಕಿಂತ ಕಡಿಮೆಯಿರುವ ಪಂಚಮಿಯಿಂದ ಯುಕ್ತವಾದರೂ ಪೂರ್ವದಿನವೇ ಗ್ರಾಹ್ಯವು. ಷಷ್ಠಿ-ಸಪ್ತಮೀ ಇವುಗಳಿಗೆ ರವಿವಾರ ಯೋಗವಾದರೆ ಅದಕ್ಕೆ “ಪದ್ಮಕ"ಯೋಗವನ್ನುವರು. ಇಲ್ಲಿಗೆ ಷನಿರ್ಣಯವೆಂಬ ಹನ್ನೆರಡನೆಯ ಉದ್ದೇಶವು ಮುಗಿಯಿತು. ಸಪ್ತಮೀ ನಿರ್ಣಯ ಸಪ್ತಮಿಯು ಸಾಮಾನ್ಯ ಕರ್ಮಗಳಿಗೆ -ಷಷ್ಠಿಯುತವಾದದ್ದು ಗ್ರಾಹ್ಯವು. ಪೂರ್ವದಿನದಲ್ಲಿ ಷಷ್ಠಿಯು ಅಸ್ತಮಯ ಪರ್ಯಂತ ಅಂದರೆ ಇಡೀ ಹಗಲು ಇದ್ದು ಸಪ್ತಮಿಯನ್ನು ವೇಧಿಸದೆ ಇದ್ದರೆ ಮಾರನೇ ದಿನ ಅಷ್ಟಮಿಯಿಂದ ವಿದ್ಧವಾದರೂ ಅನಿರ್ವಾಹದಿಂದ ಅಷ್ಟಮೀ ವಿದ್ಧವಾದದ್ದೇ ಗ್ರಾಹ್ಯವು. ಹೀಗೆ ಬೇರೆ ಬೇರೆ ತಿಥಿ ನಿರ್ಣಯಗಳನ್ನು ಊಹಿಸುವದು. ಇಲ್ಲಿಗೆ ಸಪ್ತಮೀ ನಿರ್ಣಯವೆಂಬ ಹದಿಮೂರನೇ ಉದ್ದೇಶವು ಮುಗಿಯಿತು. ಅಷ್ಟಮೀ ನಿರ್ಣಯ ಅಷ್ಟಮಿಯು ಸಾಮಾನ್ಯ ವ್ರತಗಳಲ್ಲಿ ಶುಕ್ಲಪಕ್ಷದಲ್ಲಿ ವರವಾದದ್ದು ಗ್ರಾಹ್ಯವು. ಕೂಡಿಮಾಡುವ ಶಿವಶಕ್ತಿಗಳ ಉತ್ಸವದಲ್ಲಿ ಕೃಷ್ಣಪಕ್ಷದಲ್ಲಿ ಆದರೂ ಪರವೇ ಗ್ರಾಹ್ಯವು. ಬುಧಾಷ್ಟಮೀ (ಬುಧವಾರಯುಕ್ತವಾದ ಅಷ್ಟಮೀ) ಶುಕ್ಲಪಕ್ಷದಲ್ಲಿ ಪಾತಃಕಾಲದಿಂದ ಪ್ರಾರಂಭಿಸಿ ಪರಿಚ್ಛೇದ - ೧ ಅಪರಾಹ್ನ ಪರ್ಯಂತ ಅಷ್ಟಮಿ ಅಂದರೆ - ಅಪರಾಹ್ನದಲ್ಲಿ ಮುಹೂರ್ತಮಾತ್ರವಾದರೂ ಇದ್ದು, ಬುಧವಾರ ಯೋಗವಾದರೂ ಆ ಅಷ್ಟಮಿಯು ಗ್ರಾಹ್ಯವು, ಸಾಯಾಹ್ನದಲ್ಲಿ ಅಥವಾ ಚೈತ್ರಮಾಸದಲ್ಲಿ ಇಲ್ಲವೆ ಶ್ರಾವಣಾದಿ ನಾಲ್ಕು ಮಾಸಗಳಲ್ಲಿ ಮತ್ತು ಕೃಷ್ಣಪಕ್ಷದಲ್ಲಿಯೂ ಈ ಯೋಗವು “ಬುಧಾಷ್ಟಮಿ"ಯೆಂದು ತಿಳಿಯತಕ್ಕದ್ದಲ್ಲ. ಎಲ್ಲ ಕೃಷ್ಣಪಕ್ಷಗಳ ಅಷ್ಟಮಿಯಲ್ಲಿ “ಕಾಲಭೈರವನ ಉದ್ದೇಶದಿಂದ ಕೆಲವರು ಉಪವಾಸಮಾಡುವರು. ಮಾಗಶೀರ್ಷ ಕೃಷ್ಣಾಷ್ಟಮಿಯಲ್ಲಿ ಕಾಲಭೈರವ ಜಯಂತಿಯಿದ್ದು ಆ ನಿರ್ಣಯಾನುಸಾರವಾಗಿ ಇದರ ನಿರ್ಣಯವನ್ನು ತಿಳಿಯತಕ್ಕದ್ದು. ಅಲ್ಲಿ “ಮಧ್ಯಾಹ್ನವ್ಯಾಪಿನಿ"ಯು ಗ್ರಾಹ್ಯವೆಂದಿದೆ. ಅದರಂತೆ ಇಲ್ಲಿಯೂ ಮಧ್ಯಾಹ್ನವ್ಯಾಪಿನಿಯೇ ಗ್ರಾಹ್ಯವು. ಎರಡೂ ದಿನ ಮಧ್ಯಾಹ್ನ ವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು. ಪ್ರದೋಷವ್ಯಾಪ್ತಿಯುಳ್ಳದ್ದು ಗ್ರಾಹ್ಯವೆಂದು ಕೌಸ್ತುಭಕಾರರ ಮತವು ಈ ಕಾರಣದಿಂದ ಎರಡೂ ದಿನಗಳಲ್ಲಿ ಪ್ರದೋಷವ್ಯಾಪ್ತಿಯಿದ್ದಲ್ಲಿ ಎರಡು ವಿಧಿವಾಕ್ಯಗಳ ವಿರೋಧ ಪರಿಹಾರಕ್ಕಾಗಿ ಪರವೇ ಗ್ರಾಹ್ಯವು. ಪೂರ್ವದಿನ ಪ್ರದೋಷವ್ಯಾಪ್ತಿ, ಪರದಿನ ಮಧ್ಯಾಹ್ನವ್ಯಾಪ್ತಿ ಹೀಗಿದ್ದರೆ ಬಹುಶಿಷ್ಟಾಚಾರಾನುಸಾರವಾಗಿ ಪ್ರದೋಷವನ್ನು ಹೊಂದಿರುವ ಪೂರ್ವದಿನವೇ ಗ್ರಾಹ್ಯವು. “ಚತುರ್ದಶಷ್ಟಮೀದಿವಾ” ಅಂದರೆ ಅಷ್ಟಮೀ ‘ಚತುರ್ದಶಿಗಳಲ್ಲಿ ಭೋಜನ ನಿಷೇಧವಿದೆ. ಈ ಭೋಜನ ನಿಷೇಧವನ್ನು ಮಾತ್ರ ಪಾಲಿಸತಕ್ಕದ್ದು. ಅಲ್ಲಿ ಅದೊಂದು ವ್ರತವೆಂದು ಎಣಿಸತಕ್ಕದ್ದಲ್ಲ. “ನಿವೃತ್ತಿ ಸ್ವರೂಪವಾದ ನಿಷೇಧವಾದರೆ ಬರೇ ಅಷ್ಟು ಕಾಲಮಾತ್ರವನ್ನು ಅಪೇಕ್ಷಿಸುತ್ತದೆ ಎಂಬ ವಚನವಿರುವದರಿಂದ ಭೋಜನವನ್ನು ಮಾತ್ರ ಅಷ್ಟಮಿಯನ್ನು ಬಿಟ್ಟು ನವಮಿ ಅಥವಾ ಸಪ್ತಮೀ ಇರುವ ಕಾಲದಲ್ಲಿ ಮಾಡತಕ್ಕದ್ದು ಎಂದು ತೋರುತ್ತದೆ. ಇದು ಯುಕ್ತವೋ ಅಯುಕ್ತವೋ ಎಂಬುದನ್ನು ತಿಳಿದವರೇ ವಿಚಾರಿಸಿಕೊಳ್ಳತಕ್ಕದ್ದು, ಇಲ್ಲಿಗೆ ಅಷ್ಟಮೀ ನಿರ್ಣಯವೆಂಬ ಹದಿನಾಲ್ಕನೇ ಉದ್ದೇಶವು ಮುಗಿಯಿತು. ನವಮಿ ನಿರ್ಣಯ ನವಮಿಯು ಸರ್ವತ್ರ ಅಷ್ಟಮೀವಿದ್ಧವಾದದ್ದೇ ಗ್ರಾಹ್ಯವು. ಇಲ್ಲಿಗೆ ನವಮೀನಿರ್ಣಯವೆಂಬ ಹದಿನೈದನೆಯ ಉದ್ದೇಶವು ಮುಗಿಯಿತು. ದಶಮಿ ನಿರ್ಣಯ ದಶಮೀ ಇದು ಉಪವಾಸಾದಿಗಳಲ್ಲಿ ನವಮೀ ಯುಕ್ತವಾದದ್ದೇ ಗ್ರಾಹ್ಯವು, ನವಮೀ ವಿದ್ಧವಾಗದಿದ್ದರೆ ಪರತಿಥಿಯುಕ್ತವಾದದ್ದಾದರೂ ಗ್ರಾಹ್ಯವು. ಇಲ್ಲಿಗೆ ದಶಮೀ ನಿರ್ಣಯವೆಂಬ ಹದಿನಾರನೇ ಉದ್ದೇಶವು ಮುಗಿಯಿತು. ಏಕಾದಶೀ ನಿರ್ಣಯ ಏಕಾದಶಿ ಉಪವಾಸ ವಿಷಯದಲ್ಲಿ ಎರಡು ವಿಧವಿದೆ. ಭೋಜನ ನಿಷೇಧವನ್ನು ಪಾಲಿಸುವ ರೂಪವಾದದ್ದೊಂದು, ವ್ರತಸ್ವರೂಪವಾದದ್ದು ಇನ್ನೊಂದು. ಮೊದಲನೆಯ ವಿಷಯದಲ್ಲಿ ಪುತ್ರರುಳ್ಳ ಗೃಹಸ್ಥರಿಗೆ ಕೃಷ್ಣಪಕ್ಷದಲ್ಲಿಯೂ ಅಧಿಕಾರವಿದೆ. ವ್ರತರೂಪವಾದ ಉಪವಾಸವನ್ನು ಸಂತತಿಯುಳ್ಳ ಗೃಹಸ್ಥರು ಕೃಷ್ಣಪಕ್ಷದಲ್ಲಿ ಮಾಡತಕ್ಕದ್ದಲ್ಲ. ಇದರಲ್ಲಾದರೂ ಮಂತ್ರಸಹಿತವಾದ ಸಂಕಲ್ಪವನ್ನು ಬಿಟ್ಟು ಯಥಾಶಕ್ತಿ ನಿಯಮಯುಕ್ತವಾದ ಭೋಜನ ವರ್ಜನವನ್ನು ಮಾಡಬಹುದು. ಹೀಗೆ ಧರ್ಮಸಿಂಧು ತಿಥಿಕ್ಷಯದಲ್ಲಿ ಶುಕ್ಲ ಏಕಾದಶಿಯಲ್ಲಿಯೂ ತಿಳಿಯತಕ್ಕದ್ದು, ಶಯನೀ ಬೋಧಿನೀ ಏಕಾದಶಿಗಳ ಮಧ್ಯದಲ್ಲಿರುವ ಕೃಷ್ಣ ಏಕಾದಶಿಗಳಲ್ಲಿ ಪುತ್ರರುಳ್ಳ ಗೃಹಸ್ಥರೇ ಆದಿಯಾಗಿ ಎಲ್ಲರಿಗೂ ಅಧಿಕಾರವಿದೆ. ವಿಷ್ಣು ಸಾಯುಜ್ಯವನ್ನು ಬಯಸಿದವರೂ, ಆಯುಷ್ಯ ಪುತ್ರಾದಿಗಳನ್ನಪೇಕ್ಷಿಸುವವರೂ ಕಾಮ್ಯರೂಪವಾಗಿ ಎರಡೂ ಪಕ್ಷಗಳಲ್ಲಿ ಉಪವಾಸ ಮಾಡತಕ್ಕದ್ದು. ಆ ವಿಷಯದಲ್ಲಿ ಯಾವ ನಿಷೇಧವೂ ಇಲ್ಲ. ವೈಷ್ಣವ ಗೃಹಸ್ಥರಿಗೆ ಕೃಷ್ಣಕಾದಶಿಯಾದರೂ ನಿತ್ಯೋಪೋಷ್ಯವಾಗಿದೆ. ಈ ಏಕಾದಶೀ ವ್ರತವು ಶೈವ, ವೈಷ್ಣವ, ಸೌರ ಮೊದಲಾದ ಎಲ್ಲ ಮತ ಪಂಥದವರಿಗೂ ನಿತ್ಯವು. ಯಾಕೆಂದರೆ ಮಾಡದಿದ್ದರೆ ದೋಷವನ್ನು ಹೇಳಿದೆ. ಸಂಪತ್‌ ಪ್ರಾಪ್ತಿ ಮೊದಲಾದ ಫಲಗಳನ್ನು ಹೇಳಿರುವದರಿಂದ ಇದು “ಕಾವ್ಯವೂ ಆಗಿದೆ. ಕೆಲವರು “ಒಂದು ಮುಹೂರ್ತ ಪರಿಮಿತವಾದ ದಶಮಿಯಿದ್ದರೆ ದಶಮಿಯಲ್ಲೇ ಭೋಜನ ಮಾಡತಕ್ಕದ್ದು. (ದಶಮಿಯ ಭೋಜನ) ಸೂರ್ಯೋದಯಕ್ಕಿಂತ ಮೊದಲೇ ಪ್ರಾರಂಭವಾದ “ಶುದ್ಧಾದಿಕ-ಅಧಿಕ ದ್ವಾದಶಿ” (ಇದರ ವಿವರ ಮುಂದಿದೆ) ಯಿರುತ್ತಿರಲು ಮಧ್ಯದಲ್ಲಿ ಬಿಡದೆ ಎರಡೂ ದಿನ ಉಪವಾಸಮಾಡತಕ್ಕದ್ದೆಂದೂ, ಹೀಗೆ ಮಾಡಿದಲ್ಲಿ ‘ತಿಥಿ ಪಾಲನ ಮಾಡಿದಂತಾಗುತ್ತದೆ - ಎಂದೂ ಹೇಳುವರು. ಆದರೆ ಇದು ಯುಕ್ತವಾಗಿ ಕಾಣುವದಿಲ್ಲ. " ಎಂಟುವರ್ಷದ ನಂತರ ಎಂಭತ್ತು ವರ್ಷಗಳ ಪರ್ಯಂತ ಏಕಾದಶೀವ್ರತದಲ್ಲಿ ಅಧಿಕಾರವಿದೆ. ಪತಿಯುಳ್ಳ ಸ್ತ್ರೀಯರು ಪತಿ ಅಥವಾ ತಂದ ಮೊದಲಾದವರ ಅನುಜ್ಞೆಯ ಹೊರತು ಉಪವಾಸ-ವ್ರತಾಚರಣೆ ಮಾಡಿದರೆ ವ್ರತವು ವಿಫಲವಾಗುವದು. ಪತಿಯ ಆಯುಸ್ಪೂ ಕ್ಷೀಣವಾಗುವದು ಮತ್ತು ನರಕ ಪ್ರಾಪ್ತಿಯಾಗುವದು. ಉಪವಾಸದಲ್ಲಿ ಅಶಕ್ತರಾದವರು ನಕ್ತಭೋಜನ, ಹವಿಷ್ಯಾನ್ನ, ಫಲ, ಎಳ್ಳು, ಹಾಲು, ನೀರು, ತುಪ್ಪ, ಪಂಚಗವ್ಯ ಮತ್ತು ವಾಯುಸೇವನ ಇವುಗಳನ್ನು ಪ್ರತಿನಿಧಿಯಾಗಿ ಮಾಡತಕ್ಕದ್ದು. ಇವುಗಳಲ್ಲಿ ಹಿಂದು ಹಿಂದಿನಕ್ಕಿಂತ ಮುಂದು ಮುಂದಿನವು ಹೆಚ್ಚು ಪ್ರಶಸ್ತಿಗಳು. ಹೀಗೆ ಉಪವಾಸ ಅಥವಾ ಮೇಲೆ ಹೇಳಿದ ಪ್ರತಿನಿಧಿ ವಸ್ತುಗಳ ಸೇವನ ಇವುಗಳಲ್ಲಿ ಯಾವದಾದರೊಂದು ವಿಧಾನವನ್ನು ಮಾಡತಕ್ಕದ್ದು. ಹೊರತು ಏಕಾದಶಿಯನ್ನೇ ತ್ಯಾಜ್ಯ ಮಾಡತಕ್ಕದ್ದಲ್ಲ. ಪ್ರವಾದಾದಿಗಳಿಂದ ಏಕಾದಶಿಯಲ್ಲಿ ಉಪವಾಸಾದಿಗಳನ್ನು ಮಾಡದಿದ್ದರೆ ದ್ವಾದಶಿಯಲ್ಲಾದರೂ ವ್ರತವನ್ನಾಚರಿಸತಕ್ಕದ್ದು. ದ್ವಾದಶಿಯಲ್ಲೂ ಮಾಡಲಾಗದಿದ್ದರೆ “ಯವಮಧ್ಯ” ಚಾಂದ್ರಾಯಣ ಪ್ರಾಯಶ್ಚಿತ್ತ ಮಾಡತಕ್ಕದ್ದು. (ಚಾಂದ್ರಾಯಣಾದಿಗಳ ವಿವರಗಳು ಆಯಾಯ ಪ್ರಕರಣದಲ್ಲಿ ಹೇಳಲ್ಪಟ್ಟಿವೆ) ನಾಸ್ತಿಕತ್ವ ಮೊದಲಾದವುಗಳಿಂದ ಮಾಡದಿದ್ದಲ್ಲಿ “ಪಿಪೀಲಿಕಾಮ, ಚಾಂದ್ರಾಯಣ “ವು ಪ್ರಾಯಶ್ಚಿತ್ತವು. ಪತಿ, ತಂದೆ ಮೊದಲಾದವರು ವ್ರತದಲ್ಲಿ ಅಸಮರ್ಥರಾದರೆ ಅವರ ಸಲುವಾಗಿ ಪತ್ನಿ, ಪುತ್ರ, ಅಣ್ಣ, ತಂಗಿ ಮೊದಲಾದವರು ಪ್ರತಿನಿಧಿಗಳಾಗಿ ಮಾಡಬಹುದು. ಮಾಡಿದವರಿಗೆ ನೂರುಯಜ್ಞ ಮಾಡಿದ ಫಲವು ಸಿಗುವದು. ವ್ರತದಿನ ನಿರ್ಣಯ ಅದರಲ್ಲಿ “ವೈಷ್ಣವ, ಸ್ಮಾರ್ತ” ಎಂಬುದಾಗಿ ಎರಡು ವಿಧದ ವ್ರತಾಧಿಕಾರಿಗಳಿರುವರು. “ಯಸ್ಯದೀಕ್ಷಾಸ್ತಿ ವೈಷ್ಣವೀ” ಇತ್ಯಾದಿ ದೀಕ್ಷಾ ಬದ್ಧರಾಗಿ ಇರುವವರು “ವೈಷ್ಣವರು. (ವೈಷ್ಣವಪರಿಚ್ಛೇದ -

  • O ೨೧ ದೀಕ್ಷೆ ಹೊಂದಿದವರು) ಇತರರಲ್ಲ “ಸ್ಮಾರ್ತ"ರು. ಹೀಗೆ ಮಹಾನಿಬಂಧಗಳಲ್ಲುಕ್ತವಾಗಿದೆ. ಆದಾಗ್ಯೂ ತಮ್ಮ ಪಾರಂಪರ್ಯದಿಂದ ಬಂದು ಪ್ರಸಿದ್ಧವಾದದ್ದೇ “ವೈಷ್ಣವತ್ವ” ಹಾಗೂ “ಸ್ಮಾರ್ತತ್ವ” ಎಂಬುದಾಗಿ ವೃದ್ಧರು ತಿಳಿಯುತ್ತಾರೆ. ಹೀಗೆಂಬ ನಿರ್ಣಯಸಿಂಧುವಿನಲ್ಲಿ ಹೇಳಿದ ಪದ್ಧತಿಯೇ ಎಲ್ಲ ದೇಶಗಳಲ್ಲಿ, ಎಲ್ಲ ಶಿಷ್ಟಸಮ್ಮತವಾಗಿ ಪ್ರಚಾರವಾಗುತ್ತಿದೆ. ವೇಧ-ವೈವಿಧ್ಯ “ಅರುಣೋದಯ"ದಲ್ಲಿ ದಶಮೀವೇಧವಾಗುವದೊಂದು, ಸೂರ್ಯೋದಯದಲ್ಲಿ ದಶಮೀವೇಧವಾಗುವದು ಇನ್ನೊಂದು. ಸೂರ್ಯೋದಯಕ್ಕಿಂತ ಮೊದಲು ೪ ಘಟಿಗಳು “ಅರುಣೋದಯ"ವು. ಸೂರ್ಯೋದಯವಂತೂ ಸ್ಪಷ್ಟವೇ ಇದೆ. ಕಾರಣ ದಶಮಿಯು ೫೬ ಘಟಗಳಿಗಿಂತ ಪಳಮಾತ್ರವಾದರೂ ಹೆಚ್ಚಾದಲ್ಲಿ “ಅರುಣೋದಯವೇಧ” ಎಂದಾಗುವದು. ಇದು ವೈಷ್ಣವರ ವಿಷಯದ್ದು. ೬೦ ಘಟಿದಶಮಿಯಾಗಿ ಪರದಲ್ಲಿ ಸೂರ್ಯೋದಯಾನಂತರ ಪಳಮಾತ್ರವಾದರೂ ಹೆಚ್ಚಾದಲ್ಲಿ ಸೂರ್ಯೋದಯವೇದ” ಎಂದಾಗುವದು. ಇದು ಸ್ಮಾರ್ತವಿಷಯದ್ದು. ಜ್ಯೋತಿಷಜ್ಞರ ಮತಭೇದದಿಂದಾಗಿ ವೇಧಾದಿಗಳಲ್ಲಿ ಸಂಶಯವುಂಟಾದರೆ ಆಗ ಏಕಾದಶಿಯನ್ನೇ ಬಿಟ್ಟು ದ್ವಾದಶಿಯಲ್ಲಿ ಉಪೋಷಣ ಮಾಡತಕ್ಕದ್ದು. ಏಕಾದಶಿಯು ದ್ವಿವಿಧವಾದದ್ದು ಏಕಾದಶಿಯಲ್ಲಿ “ಶುದ್ಧಾ” ಮತ್ತು “ವಿದ್ದಾ” ಎಂದು ಎರಡು ಭೇದವಿದೆ. “ಅರುಣೋದಯ” ವೇಧವಾದದ್ದಕ್ಕೆ “ವಿದ್ಯಕಾದಶೀ ಎನ್ನುವರು. ಕಾರಣ ಅದನ್ನು ಬಿಟ್ಟು ವೈಷ್ಣವರು ದ್ವಾದಶಿಯಲ್ಲೇ ಉಪೋಷಣ ಮಾಡತಕ್ಕದ್ದು, ಅರುಣೋದಯ ವೇಧರಹಿತವಾದದ್ದಕ್ಕೆ ಶುದ್ಧಕಾದಶೀ” ಎನ್ನುವರು. ಈ ಶುಕಾದಶಿಯಲ್ಲಿ ನಾಲ್ಕು ಪ್ರಕಾರಗಳಿವೆ. ಏಕಾದಶೀ ಮಾತ್ರಾಧಿಕ (೧), ದ್ವಾದಶೀ ಮಾತ್ರಾಧಿಕ (೨), ಏಕಾದಶೀ -ದ್ವಾದಶೀ ಈ ಎರಡೂ ಅಧಿಕವಾಗಿರುವಿಕೆ (೩), ಈ ಎರಡರಲ್ಲೂ ಆಧಿಕ್ಯ ಇಲ್ಲದಿರುವಿಕೆ (೪) ಹೀಗೆ ನಾಲ್ಕು ವಿಧಗಳಾಗುತ್ತವೆ. ಇಲ್ಲಿ “ಆಧಿಕ್ಯ” ಎಂದರೆ ಸೂರ್ಯೋದಯದಿಂದ ಮುಂದೆ ಇರುವಿಕೆ ಎಂದರ್ಥ. (ವೈಷ್ಣವರಿಗೆ) ಆ ವಿಷಯದಲ್ಲಿ ಉದಾಹರಣೆ- ದಶಮೀ ೫೫/೦, ಏಕಾದಶೀ ೬೦/೧, ದ್ವಾದಶೀ ಕ್ಷಯ ೫೮/೦, ಇದು ಏಕಾದಶೀಮಾತ್ರ ಆಧಿಕ್ಯವುಳ್ಳದ್ದಾಗುವದು. ಇದು “ಶುದ್ಧಕಾದಶಿ"ಯು, ಇಲ್ಲಿ ವೈಷ್ಣವರು ಪರದಿನ ಉಪೋಷಣ ಮಾಡತಕ್ಕದ್ದು. ಸ್ಮಾರ್ತಗೃಹಸ್ಥರು ಪೂರ್ವದಿನ ಉಪವಾಸ ಮಾಡುವದು. ಇನ್ನು ದಶಮೀ 55/ ಏಕಾದಶೀ ೫೮/ ದ್ವಾದಶೀ ೬೦/೧ ಇದು ದ್ವಾದಶೀ ಮಾತ್ರಾಧಿಕ್ಕವುಳ್ಳದ್ದು. ಮತ್ತು “ಶುದ್ಧಾ” ಎಂದಾಗುವದು. ಇಲ್ಲಿ ವೈಷ್ಣವರಿಗೆ ದ್ವಾದಶಿಯಲ್ಲಿ ಉಪೋಷಣವು. ಸ್ಮಾರ್ತರಿಗೆ ಪೂರ್ವವು. ಇನ್ನು ದಶಮೀ ೫೫/೦, ಏಕಾದಶೀ ೬೦/೧, ದ್ವಾದಶೀ ೫/೦ ಇದು ಉಭಯಾಧಿಕ್ಕವುಳ್ಳ ‘ಶುದ್ಧಾ’ ಎಂದಾಗುವದು. ಇಲ್ಲಿ ಸರ್ವ ವೈಷ್ಣವರೂ ಸ್ಮಾರ್ತರೂ ಮುಂದಿನ ದಿನವೇ ಉಪವಾಸ ಮಾಡತಕ್ಕದ್ದು. ಇನ್ನು ದಶಮೀ ೫೫/ ಏಕಾದಶೀ ೫೭/೦ ದ್ವಾದಶೀ ೫೮/೦ ಇದು ಅನುಭಯಾದಿಕ್ಕವುಳ್ಳ’ಶುದ್ದಾ’ ಎಂದಾಗುವದು. ವೈಷ್ಣವರೂ ಸ್ಮಾರ್ತರೂ ಪೂರ್ವದಿನದಲ್ಲೇ ಉಪವಾಸ ಮಾಡತಕ್ಕದ್ದು. ಹೀಗೆ ಸಂಕ್ಷೇಪವಾಗಿ ವೈಷ್ಣವ ನಿರ್ಣಯವು. ೨೨ ಧರ್ಮಸಿಂಧು ಸ್ಮಾರ್ತ ನಿರ್ಣಯ ಇಲ್ಲಿ ಸೂರ್ಯೋದಯ ವೇಧವಾದದ್ದು “ವಿದ್ದಾ” ಎಂದಾಗುವದು. ಅದರಿಂದ ಹೊರತಾದದ್ದು “ಶುದ್ಧಾ” ಎಂದಾಗುವದು. ಹೀಗೆ ಎರಡು ವಿಧಗಳು. ಇವು ಪುನಃ ಪ್ರತ್ಯೇಕವಾಗಿ ನಾಲ್ಕು ವಿಧಗಳಾಗುವವು. ಏಕಾದಶೀ ಮಾತ್ರಾಧಿಕ್ಯವುಳ್ಳದ್ದು (೧), ದ್ವಾದಶೀ ಮಾತ್ರಾಧಿಕ್ಯವುಳ್ಳದ್ದು (೨), ಉಭಯಾಧಿಕ್ಕವುಳ್ಳದ್ದು (೩), ಅನುಭಯಾಧಿಕ್ಯವುಳ್ಳದ್ದು (೪) ಹೀಗೆಯೇ “ಶುದ್ಧಾ’ದಲ್ಲಿಯೂ ನಾಲ್ಕು ಭೇದಗಳು, ಅಂತೂ ಎಂಟು ವಿಧವಾದವುಗಳು. ಈ ವಿಷಯದಲ್ಲಿ ಉದಾಹರಣೆಗಳು ದಶಮೀ ೫೮/೦, ಏಕಾದಶೀ ೬೦/೦, ದ್ವಾದಶೀಕ್ಷೆಯ ೫೮/೦. ಇದು ಶುದ್ಧವಾದ ಏಕಾದಶೀಮಾತ್ರಾಧಿಕ್ಯವುಳ್ಳದ್ದು. ದಶಮೀ ೪/೦, ಏಕಾದಶೀ ೨/೦. ದ್ವಾದಶೀಕ್ಷಯವು ೫೮೦ ಇದು ವಿದ್ಧವಾದ ಏಕಾದಶೀಮಾತ್ರಾಧಿಕ್ಕವುಳ್ಳದ್ದು. ಈ ಎರಡೂ ಕಡೆಗಳಲ್ಲಿ ಸ್ಮಾರ್ತಗೃಹಸ್ಥರಿಗೆ ಪೂರ್ವವೇ ಉಪೋಷವು. ಯತಿಗಳು, ನಿಷ್ಕಾಮ ಗೃಹಸ್ಥರು, ವಾನಪ್ರಸ್ಥರು, ವಿಧವೆಯರು, ವೈಷ್ಣವರು ಇವರೆಲ್ಲರೂ ಪರದಲ್ಲಿಯೇ ಉಪವಾಸ ಮಾಡತಕ್ಕದ್ದು. ವಿಷ್ಣು ಪ್ರೀತಿಕಾಮರಾದ ಸ್ಮಾರ್ತರು ಎರಡನೇ ದಿನ ಉಪವಾಸ ಮಾಡತಕ್ಕದ್ದು ಎಂದು ಕೆಲವರೆನ್ನುವರು. ಉಭಯಾಧಿಕ್ಕ ‘ಶುದ್ಧಾ’. ಹೇಗೆಂದರ ದಶಮೀ ೫೮/೦, ಏಕಾದಶೀ ೬೦/೧, ದ್ವಾದಶೀ ೪/೦ ಇದು ಶುದ್ಧಾಧಿಕ್ಯವು. ಇನ್ನು ದಶಮೀ ೨/೦, ಏಕಾದಶೀ ೩/೦, ದ್ವಾದಶೀ ೪೦ ಇದು ಉಭಯಾಧಿಕ್ಯವುಳ್ಳ “ವಿದ್ದಾ ಎಂದಾಗುವದು. ಈ ಎರಡೂ ಕಡೆಗಳಲ್ಲಿ ಸರ್ವ ಸ್ಮಾರ್ತ-ವೈಷ್ಣವರು ಅವಶಿಷ್ಟವಾದ ಪರದಿನದಲ್ಲೇ ಉಪೋಷಣಮಾಡುವದು. ದ್ವಾದಶೀ ಮಾತ್ರಾಧಿಕ್ಯವುಳ್ಳ “ಶುದ್ಧಾ ಹೇಗೆಂದರೆ ದಶಮೀ ೫೮/೦, ಏಕಾದಶೀ ೫೯/೦, ದ್ವಾದಶೀ ೬೦/೧ ಇಲ್ಲಿ ಶುದ್ಧವಾಗಿರುವಿಕೆಯಿಂದ ಸ್ಮಾರ್ತರಿಗೆ ಏಕಾದಶಿಯಲ್ಲಿ ಉಪವಾಸವೇ ಹೊರತು ದ್ವಾದಶಿಯಲ್ಲವೆಂದು “ಮಾಧವ ಮತ"ವು. ಹೇಮಾದ್ರಿ ಮತದಲ್ಲಾದರೋ ಎಲ್ಲರಿಗೂ ಮುಂದಿನದಾದ ದ್ವಾದಶಿಯೇ ಉಪೋಷ್ಟವು. ಇನ್ನು ಕೆಲವರು ಮೋಕ್ಷಾಪೇಕ್ಷಿಗಳಾದ ಸ್ಮಾರ್ತರು ಪರದಲ್ಲಿ ಉಪವಾಸಮಾಡತಕ್ಕದ್ದು ಎಂದು ಹೇಳುವರು. ಇನ್ನು ದ್ವಾದಶೀಮಾತ್ರಾಧಿಕ್ಕವುಳ್ಳ “ವಿದ್ದಾ” ಹೇಗೆಂದರೆ -ದಶಮೀ ೧/೦, ಏಕಾದಶೀ ಕ್ಷಯ ೫೮/೦, ದ್ವಾದಶೀ ವೃದ್ಧಿ ೬೦/೧. ಇಲ್ಲಿ ದ್ವಾದಶಿಯು ಏಕಾದಶಿಯಿಂದ ವಿದ್ದವಾದ ಕಾರಣ ದ್ವಾದಶಿಯಲ್ಲಿ ಸ್ಮಾರ್ತರಿಗೂ ಉಪವಾಸವು ಏವಂಚ ಉಭಯಾಧಿಕ್ಯದಲ್ಲಿಯೂ, ದ್ವಾದಶೀ ಮಾತ್ರಾಧಿಕ್ಯದಲ್ಲಿಯೂ ಸ್ಮಾರ್ತರಿಗೆ ವಿದ್ಯೆಕಾದಶಿಯು ತ್ಯಾಜ್ಯವಾಗುವದು. ಹೊರತು ಅನ್ಯತ್ರ ತ್ಯಾಜ್ಯವಲ್ಲ. ವೈಷ್ಣವರಿಗಾದರೋ ಆರುವಿಧ ಅಧಿಕ್ಯವುಳ್ಳ ಏಕಾದಶಿಯನ್ನು ಬಿಟ್ಟು ದ್ವಾದಶಿಯು ಉಪೋಷ್ಠವಾಗುವದು. ಇನ್ನು ಅನುಭಯಾಧಿಕ್ಯವುಳ್ಳ “ಶುದ್ಧಾ” ಹೇಗೆಂದರೆ-ದಶಮೀ ೫೭/೦, ಏಕಾದಶೀ ೫೮/೦, ದ್ವಾದಶೀ ೫೯೦, ಇಲ್ಲಿ ಸ್ಮಾರ್ತರಿಗೆ ಏಕಾದಶಿಯಲ್ಲೇ ಉಪವಾಸವು. ದ್ವಾದಶಿಯಲ್ಲಲ್ಲ. ವೈಷ್ಣವರಿಗಾದರೋ ಏಕಾದಶಿಯು ವಿದ್ದವಾದ ಕಾರಣ ದ್ವಾದಶಿಯಲ್ಲಿ ಉಪವಾಸವು. ಇನ್ನು ಅನುಭಯಾಧಿಕ್ಯವತಿ “ವಿದ್ದಾ” ಹೇಗೆಂದರೆ-ದಶಮೀ ೨/೦, ಏಕಾದಶೀ ಕ್ಷಯವು ೫೬೦, ದ್ವಾದಶಿ ೫೫೦, ಇದರಲ್ಲಾದರೂ ಸ್ಮಾರ್ತರಿಗೆ ಏಕಾದಶಿಯಲ್ಲಿ ಉಪವಾಸವು, ವೈಷ್ಣವರಿಗೆ ದ್ವಾದಶಿಯಲ್ಲಿ ಉಪವಾಸವು. ಇದರ ಎರಡೂ ಅನಾಧಿಕ್ಯವತೀ ವಿದ್ಯೆಯ ಕೊನೆಯ ಭೇದದಲ್ಲಿ ಮೊದಲು ಹೇಳಿದ ಎರಡು ಭೇದಗಳಲ್ಲಿಯಂತೆಯೇ ಯತಿಗಳೂ, ಮೋಕ್ಷಾಪೇಕ್ಷಿಗಳೂ, ಪರಿಚ್ಛೇದ - ೧ ೨೩

ವಿಧವೆಯರೂ ಪರದಲ್ಲಿಯೇ ಉಪವಾಸ ಮಾಡತಕ್ಕದ್ದು. ವಿಷ್ಣು ಪ್ರೀತಿ ಕಾಮರು ಎರಡೂ ಉಪವಾಸಗಳನ್ನು ಮಾಡತಕ್ಕದ್ದೆಂದು ಸಮಾನವಾದ ಯುಕ್ತಿಯಿಂದ ತೋರುತ್ತದೆ. ಈಗ ಶಿಷ್ಟರಾದವರೋ ಹೇಮಾದ್ರಿಮತದಂತೆ ನಿಷ್ಕಾಮತ್ಯಾದಿಗಳನ್ನೂ ಆಧರಿಸದ ಮಾಧವಮತದಂತೆಯೇ ಸರ್ವ ಸ್ಮಾರ್ತ ನಿರ್ಣಯವನ್ನು ಸಾಮಾನ್ಯವಾಗಿ ಹೇಳುತ್ತಾರೆ. ಹೊರತು ಶುದ್ಧಾಧಿಕ ದ್ವಾದಶಿಕೆಯಲ್ಲಿ ಎರಡು ಉಪವಾಸಗಳನ್ನು ಹೇಳುವದಿಲ್ಲ. ಅಥವಾ ಎಲ್ಲರಿಗೂ ಪರದಿನ ಉಪವಾಸ ಒಂದನ್ನೇ ಹೇಳುತ್ತಾರೆ. ಹೀಗೆ ಎಲ್ಲಾ ದೇಶಗಳಲ್ಲಿಯೂ ಹೆಚ್ಚಾಗಿ ಮಾಧವೋಕ್ತಾನುಸಾರವಾಗಿಯೇ ಪ್ರಚಾರವಿದೆಯೆಂದು ತಿಳಿಯತಕ್ಕದ್ದು. ಇದರಿಂದ ವೈಷ್ಣವರ ಹದಿನೆಂಟು ಭೇದ ಹಾಗೂ ಸ್ಮಾರ್ತರ ಹದಿನೆಂಟು ಭೇದಗಳ ನಿರ್ಣಯವು ಸಾರ್ಥಕವಾಗುವದೆಂದು ತಿಳಿಯತಕ್ಕದ್ದು. ವಿಸ್ತರವನ್ನು ಮಹಾನಿಬಂಧಗಳಲ್ಲಿಯೇ ನೋಡತಕ್ಕದ್ದು. ಇಲ್ಲಿ ಹದಿನೆಂಟು ಭೇದಗಳನ್ನು ಪ್ರಕೃತ್ಯೇಕವಾಗಿ ಉದಾಹರಣ ಸಹಿತ ಹೇಳುತ್ತ ಹೋದರೆ ಅಜ್ಜ ಜನರಿಗೆ ವ್ಯಾಮೋಹವುಂಟಾಗಬಹುದಾದ್ದರಿಂದ ನಿರ್ಣಯವನ್ನು ಪ್ರತ್ಯೇಕ ಕೋಷ್ಟಕ ರೂಪದಿಂದ ಬರೆದು, ಪರಿಶಿಷ್ಟದಲ್ಲಿ ತಿಳಿಸಲಾಗಿದೆ. ವೈಷ್ಣವವ್ರತ ದಿನ ನಿರ್ಣಯ ಜಯಂತೀ ವ್ರತದಂತೆ ಈ ವ್ರತವನ್ನು ಮಾಡದಿದ್ದರೆ ದೋಷವುಂಟಾಗುವದರಿಂದ ಇದು “ನಿತ್ಯ"ವಾದದ್ದು. ಸಂಪತ್ಯಾದಿಫಲಪ್ರಾಪ್ತಿಯನ್ನು ಹೇಳಿರುವದರಿಂದ ಇದು “ಕಾವ್ಯವೂ ಆಗಿದೆ. ಏಕಾದಶಿಯಲ್ಲಿ ಅರುಣೋದಯ, ಸೂರ್ಯೋದಯ ದಶಮೀ ವೇಧ ವಿಷಯವನ್ನು ಮೊದಲೇ ಹೇಳಿದೆ. ಅರುಣೋದಯ ದಶಮೀ ವೇಧವು ವೈಷ್ಣವರಿಗೆ, ಸೂರ್ಯೋದಯ ದಶಮೀ ವೇಧವು ಸ್ಮಾರ್ತರಿಗೆ ಎಂದರ್ಥ. ೫೬ ಘಟೇ ಪರಿಮಿತವಾದದ್ದು ಅರುಣೋದಯವು. ಅಂದರೆ ಸೂರ್ಯೋದಯಕ್ಕಿಂತ ಮೊದಲು ನಾಲ್ಕು ಘಟಿಗಳು ಅರುಣೋದಯವೆನ್ನಲ್ಪಡುವದು. ಸೂರ್ಯೋದಯವು ಸ್ಪಷ್ಟವೇ, ವೈಷ್ಣವತ್ವ ಅಥವಾ ಸ್ಮಾರ್ತತ್ವ ಇವುಗಳನ್ನು ತಮ್ಮ ಪಾರಂಪರ್ಯದಿಂದ ಪ್ರಸಿದ್ಧವಾಗಿರುವಿಕೆಯಿಂದ ತಿಳಿಯತಕ್ಕದ್ದೆಂದು ವೃದ್ಧರು ಹೇಳುವರು. ವೈಷ್ಣವರು ವಿದ್ದಕಾದಶಿಯನ್ನೂ ಅರುಣೋದಯ ವೇಧವುಳ್ಳ ಏಕಾದಶಿಯನ್ನೂ ಬಿಡತಕ್ಕದ್ದು. ದ್ವಾದಶಿಯಲ್ಲಿ ಉಪವಾಸ ಮಾಡತಕ್ಕದ್ದು, ಏಕಾದಶೀ-ದ್ವಾದಶೀ ಎರಡರಲ್ಲಿಯೂ ಆಧಿಕ್ಯವುಂಟಾದರೆ, ಸೂರ್ಯೋದಯಾನಂತರ ಮಿಕ್ಕಿ ಇರುತ್ತಿದ್ದರೆ, ಶುದ್ಧವಾದ ಅಂದರೆ, ೬೦ ಘಟಿಯ ಏಕಾದಶಿಯನ್ನಾದರೂ ಬಿಟ್ಟು ಪರವಾದ- ಅಂದರೆ ಮಿಕ್ಕಿದ ಏಕಾದಶಿಯಲ್ಲೇ ಉಪವಾಸ ಮಾಡತಕ್ಕದ್ದು. ಹಾಗೆ ದ್ವಾದಶಿಯು ಅಧಿಕವಾದರೂ ಸಹ ಪೂರ್ವವು ತ್ಯಾಜ್ಯವು ಪರದಿನವೇ ಗ್ರಾಹ್ಯವು, ಹೀಗೆ ವೈಷ್ಣವ ನಿರ್ಣಯವು ಸ್ಮಾರ್ತ ನಿರ್ಣಯ ಏಕಾದಶಿ-ದ್ವಾದಶಿಗಳ-ವೃದ್ಧಿ ಅಂದರೆ ಮುಂಚಿನದಿನ ಘಟಿ ೬೦ ಆಗಿ ಪರದಿನ ಸೂರ್ಯೋದಯದ ನಂತರ ಇದ್ದರೆ ಆಗ ಪೂರ್ವದಿನದ ಏಕಾದಶಿಯು “ಶುದ್ಧವಾದರೂ ಸ್ಮಾರ್ತರಿಗೆ ಅದು ತ್ಯಾಜ್ಯವು. ಪರ ಏಕಾದಶಿಯೇ ಉಪೋಷವು, ಏಕಾದಶಿಯೇ ವೃದ್ಧಿಯಾದಲ್ಲಿ ಗೃಹಸ್ಥ-ಸ್ಮಾರ್ತರು ಪೂರ್ವ ಏಕಾದಶಿಯಲ್ಲಿ ಉಪೋಷಣ ಮಾಡುವದು, ಯತಿ ಮೊದಲಾದವರಿಗೆ ಮುಂದಿನದು ಗ್ರಾಹ್ಯವು. ದ್ವಾದಶಿಯೇ ವೃದ್ಧಿಯಾದರೆ ಶುದ್ಧಾ-ವಿದ್ದಾ ಇವುಗಳಿಗೆ ವ್ಯವಸ್ಥೆಯಿಂದ ೨೪ ಧರ್ಮಸಿಂಧು || ಅಂದರೆ ಏಕಾದಶಿಯು ಶುದ್ಧವಾದರೆ “ಉಪೋಷ್ಯ"ವು, ಏಕಾದಶಿಯು “ವಿದ್ದಾ ಆದರೆ ದ್ವಾದಶಿಯೇ ಉಪೋಷ್ಯವು, ಏವಂಚ ಎರಡೂ ಅಧಿಕವಾದರೆ ಅಥವಾ ದ್ವಾದಶಿಮಾತ್ರ ಅಧಿಕವಾದರೆ ಸ್ಮಾರ್ತರಿಗೆ ವಿಶ್ವಕಾದಶಿಯು ತ್ಯಾಜ್ಯವೇ ಹೊರತು, ಶುದ್ಧವಾದದ್ದು ತ್ಯಾಜ್ಯವಲ್ಲ ಎಂದರ್ಥ. ಹೀಗೆ ಸ್ಮಾರ್ತ ನಿರ್ಣಯವು. ವೇಧಗಳ ಸಂಜ್ಞಾಭೇದಗಳು ಅರ್ಧ ರಾತ್ರಿಯನ್ನು ಮೀರಿ ದಶಮಿಯಿರುತ್ತಿದ್ದರೆ ಅದಕ್ಕೆ “ಕಪಾಲ ವೇಧ” ಎನ್ನುತ್ತಾರೆ. ಐವತ್ತೆರಡು ಘಟಿ ದಶಮಿಯಿದ್ದರೆ “ಛಾಯಾವೇಧ’ ಎಂದಾಗುವದು. ೫೩ ಘಟಿ ದಶಮಿಯಿದ್ದರೆ “ಗ್ರಸ್ತ ವೇಧವು. ೫೪ ಘಟೀ ಪರ್ಯಂತ ಇದ್ದರೆ “ಸಂಪೂರ್ಣ ವೇಧ"ವು. ೫೫ ಗಳಿಗೆ ಇದ್ದರೆ “ವೇಧ’ವು. ೫೬ ಗಳಿಗೆ ಇದ್ದರೆ “ಮಹಾವೇದ"ವು. ೫೭ ಗಳಿಗೆಯಿದ್ದರೆ “ಪ್ರಲಯ ವೇಧ"ವು. ೫೮ ಘಟಿಯಿದ್ದಲ್ಲಿ “ಮಹಾ ಪ್ರಲಯ"ವು. ೫೯ ಗಳಿಗೆಯಿದ್ದರೆ “ಘೋರ” ವೇಧವು. ೬೦ ಗಳಿಗೆ ಇದ್ದರೆ ರಾಕ್ಷಸ” ವೆಂಬ ವೇಧವು. ಹೀಗೆ ವೇದ ಭೇದಗಳನ್ನು ನಾರದನು ಹೇಳಿರುವನು. ಮಧ್ಯಾದಿಮತಾನುಸಾರಿಗಳಾದ ಕೆಲವರು ಕೆಲವಿಷ್ಟನ್ನೇ ಅನುಸರಿಸುತ್ತಾರೆ. ಮಾಧವಾಚಾರ್ಯಾದಿ ಸರ್ವಸಮ್ಮತವಾದದ್ದೆಂದರೆ ೫೬ ಘಟೀ ವೇಧವೇ ಎಂದು ತಿಳಿಯತಕ್ಕದ್ದು. ಇನ್ನು ದಶಮಿಯು ಹದಿನೈದು ಘಟಿಗಳಿಂ, ಏಕಾದಶಿಯನ್ನು ವೇಧಿಸುತ್ತದೆ ಎಂದು ಸಮಾನ್ಯ ವಚನವಿದೆ. ಇದು ಉಪವಾಸಕ್ಕೆ ಹೊರತಾದ ವ್ರತಾಂಗಗಳಾದ ಸಂಕಲ್ಪ, ಅರ್ಚನ, ಮೊದಲಾದವುಗಳಿಗೆ ಎಂದು ತಿಳಿಯತಕ್ಕದ್ದು, ಮತ್ತು ಇದೇ ಕಾರಣದಿಂದ ಅಂದರೆ ಹದಿನೈದು ಘಟೀ ವಿದ್ದವೆಂಬ ಕಾರಣದಿಂದ ಅವುಗಳನ್ನಾದರೂ ತ್ಯಾಜ್ಯ ಮಾಡತಕ್ಕದ್ದಲ್ಲ. ಆದರೆ ಪ್ರಾತಃಕಾಲ ಕರ್ತವ್ಯಗಳಾದ ಸಂಕಲ್ಪ ಅರ್ಚನಾದಿಗಳನ್ನು ಮಧ್ಯಾಹ್ನ ನಂತರ ಮಾಡತಕ್ಕದ್ದು ಅಷ್ಟೇ ಎಂದು ತಿಳಿಯುವದು. ವ್ರತ ಪ್ರಯೋಗ ಉಪವಾಸದ ಮೊದಲನೇ ದಿನ ಪ್ರಾತಃಕಾಲದಲ್ಲಿಯ ನಿತ್ಯ ಕಾರ್ಯವನ್ನು ಮುಗಿಸಿ “ದಶಮೀ ದಿನಮಾರಭ್ಯ ಕರಿಷ್ಯಹಂ ವ್ರತಂ ಮಮ ತ್ರಿದಿನಂ ದೇವದೇವೇಶ ನಿರ್ವಿಘ್ನಂ ಕುರು ಕೇಶವ” ಎಂದು ಸಂಕಲ್ಪಿಸಿ ಮಧ್ಯಾಹ್ನದಲ್ಲಿ ಒಪ್ಪತ್ತು ಭೋಜನ ಮಾಡತಕ್ಕದ್ದು. ಅದರಲ್ಲಿ ನಿಯಮಗಳು-ಕಂಚಿನಪಾತ್ರೆ, ಕಾಡುಕಡಲೆ, ಮಾಂಸ, ಹಗಲುನಿದ್ರೆ, ಅತಿಭೋಜನ, ಅತಿಜಲಪಾನ, ಪುನರ್ಭೋಜನ, ಸ್ತ್ರೀ ಸಂಭೋಗ, ಮಧುಸೇವನ, ಸುಳ್ಳು ಹೇಳುವದು, ಕಡಲೆ, ಪಾರಕಧಾನ್ಯ, ತರಕಾರಿ, ಪರಾನ್ನ, ಪಗಡೆಆಟ, ಎಣ್ಣೆ, ಎಳ್ಳು, ಹಿಟ್ಟು, ತಾಂಬೂಲ, ಇತ್ಯಾದಿಗಳನ್ನು ತ್ಯಜಿಸತಕ್ಕದ್ದು. ಒಪ್ಪತ್ತು ಊಟವಾದನಂತರ ಕಟ್ಟಿಗೆಯ ತುಂಡಿನಿಂದ ಹಲ್ಲನ್ನುಜ್ಜುವದು. ರಾತ್ರಿಯಲ್ಲಿ ಭೂಶಯನ ಮಾಡತಕ್ಕದ್ದು. ಏಕಾದಶಿಯ ಬೆಳಿಗ್ಗೆ ವೃಕ್ಷದ ಎಲೆ ಮೊದಲಾದವುಗಳಿಂದ ಹಲ್ಲನ್ನುಜ್ಜುವದು ಹೊರತು ಕಟ್ಟಿಗೆ (ಕಾಷ್ಠ)ದಿಂದ ಉಜ್ಜಬಾರದು. ಸ್ನಾನಾದಿ ನಿತ್ಯಕರ್ಮಗಳ ಮೇಲೆ ಪವಿತ್ರವನ್ನು ಧರಿಸಿ ಉತ್ತರ ದಿಕ್ಕಿಗೆ ಮೋರೆಮಾಡಿ, ಜಲಪೂರ್ಣವಾದ ತಾಮ್ರ ಪಾತ್ರೆಯನ್ನು ತಕ್ಕೊಂಡು ಸಂಕಲ್ಪ ಮಾಡತಕ್ಕದ್ದು, “ಏಕಾದಶ್ಯಾಂನಿರಾಹಾರೋ ಭೂತ್ಸಾಹಮಪರೇ ಹನಿ | ಭೋಕ್ಯಾಮಿ ಪುಂಡರೀಕಾಕ್ಷ ಶರಣಂ ಮೇ ಭವಾಚ್ಯುತ” ಈ ಮಂತ್ರದಿಂದ ಪುಷ್ಪಾಂಜಲಿಯನ್ನು ಹರಿಯಲ್ಲಿ ಅರ್ಪಿಸುವದು. ಪರಿಚ್ಛೇದ - ೧ ಅಶಕ್ತನಾದವನು ಪ್ರತಿನಿಧಿಯಾಗಿ ಮಾಡತಕ್ಕ ಆಹಾರಕ್ಕೆ ಸರಿಯಾಗಿ ‘ಏಕಾದಶ್ಯಾಂ ಜಲಾಹಾರ: ಏಕಾದಶ್ಯಾಂರಭಕ್ಷ: ಏಕಾದಶ್ಯಾಂ ಫಲಾಹಾರ: ಏಕಾದಶ್ಯಾಂ ನಕ್ತಭೋಜಿ ಇತ್ಯಾದಿ ಊಹೆಯಿಂದ ಸಂಕಲ್ಪ ಮಾಡತಕ್ಕದ್ದು. “ಶೈವರಿಗೆ ರುದ್ರಗಾಯತ್ರಿಯಿಂದ ಸಂಕಲ್ಪವು. ಸೂರ್ಯೋಪಾಸಕರಿಗೆ ಸೌರಗಾಯತ್ರೀ ಅಥವಾ ನಾಮಮಂತ್ರವು ಸೂರ್ಯೋದಯದ ನಂತರ ದಶಮಿಯಿದ್ದಾಗ ಸ್ಮಾರ್ತರು ಸಂಕಲ್ಪವನ್ನು ಏಕಾದಶಿಯ ರಾತ್ರಿಯಲ್ಲಿ ಮಾಡತಕ್ಕದ್ದು. ಅರ್ಧರಾತ್ರಿಯ ನಂತರ ದಶಮೀ ವ್ಯಾಪ್ತಿಯಿದ್ದರೆ ಸರ್ವರೂ ಏಕಾದಶೀ ಮಧ್ಯಾಹ್ನದ ನಂತರ ಮಾಡತಕ್ಕದ್ದು, ಸಂಕಲ್ಪಾನಂತರದಲ್ಲಿ ಅಷ್ಟಾಕ್ಷರ ಮಂತ್ರದಿಂದ ಅಭಿಮಂತ್ರಿತವಾದ ಜಲಪ್ರಾಶನ ಮಾಡತಕ್ಕದ್ದು. ಆಮೇಲೆ ಪುಷ್ಪಗಳಿಂದ ಮಂಟಪವನ್ನು ರಚಿಸಿ ಅದರಲ್ಲಿ ಪುಷ್ಪ, ಗಂಧ, ಧೂಪ, ದೀಪ, ನೈವೇದ್ಯ, ನಾನಾವಿಧ ಸ್ತೋತ್ರ, ಗೀತ, ವಾದ್ಯ, ದಂಡವತ್ತಾದ ನಮಸ್ಕಾರ, ಜಯಶಬ್ದ ಇತ್ಯಾದಿಗಳಿಂದ ಹರಿಯನ್ನು ಪೂಜಿಸಿ ರಾತ್ರಿಯಲ್ಲಿ ಜಾಗರಣ ಮಾಡತಕ್ಕದ್ದು. ಏಕಾದಶಿಯಲ್ಲಿ ನಿಯಮಗಳು ನಾಸ್ತಿಕರ ಸಂಗಡ ಸಂಭಾಷಣ, ಅವರ ಸ್ಪರ್ಶ, ದರ್ಶನ ಇವುಗಳನ್ನು ಮಾಡಬಾರದು. ಬ್ರಹ್ಮಚರ್ಯ, ಸತ್ಯಭಾಷಣ ಇತ್ಯಾದಿ ಸಾಮಾನ್ಯ ವ್ರತಪರಿಭಾಷೆಯಲ್ಲಿ ಹೇಳಿದ ನಿಯಮಗಳನ್ನು ಪಾಲಿಸತಕ್ಕದ್ದು. ನಾಸ್ತಿಕರ ದರ್ಶನಾದಿಗಳಿಂದ ವ್ರತವು ದೂಷಿತವಾದಾಗ ಸೂರ್ಯನನ್ನು ನೋಡಿದರೆ ಶುಚಿಯಾಗುವನು. ಸ್ಪರ್ಶಮಾಡಿದಲ್ಲಿ ಸ್ನಾನಮಾಡಿ ಸೂರ್ಯದರ್ಶನ ಮಾಡತಕ್ಕದ್ದು. ಅವರೊಡನೆ ಸಂಭಾಷಣ ಮಾಡಿದರೆ ಅಚ್ಯುತನನ್ನು ಧ್ಯಾನಿಸುವದು. ಇದರಿಂದ ಶುಚಿತ್ವವುಂಟಾಗುವದು. (ಇತ್ಯಾದಿಗಳೇ ಪ್ರಾಯಶ್ಚಿತ್ತಗಳು) ಉಪವಾಸ ದಿನದಲ್ಲಿ ಶ್ರಾದ್ಧ ಪ್ರಾಪ್ತವಾದರೆ ? ಎಲ್ಲ ಪಾಕಗಳನ್ನು ಕೂಡಿಸಿದ ಅನ್ನವನ್ನು ಆಘ್ರಾಣಿಸಿ ಗೋವು ಮೊದಲಾದವುಗಳಿಗೆ ಕೊಡತಕ್ಕದ್ದು. ಇನ್ನು ಗೌಣ ಕಲ್ಪದಿಂದ ಗಡ್ಡೆ-ಗೆಣಸು ಫಲ ಮೊದಲಾದ ಆಹಾರ ಮಾಡಿ ಉಪವಾಸ ಮಾಡುವವನು ತನ್ನದಾದ ಭಕ್ಷ್ಯ-ಫಲಾದಿಗಳನ್ನು ಪಿತೃ-ಬ್ರಾಹ್ಮಣರ ಭೋಜನ ಪಾತ್ರೆಯಲ್ಲಿ ಹಾಕಿ ಉಳಿದ ಶೇಷವನ್ನು ತಿನ್ನುವದು. ಇನ್ನು “ಏಕಾದಶೀ ದಿನ, ಕದಾಚಿತ್ ಮೃತದಿನ ಪ್ರಾಪ್ತವಾದರೆ ಆ ದಿನವನ್ನು ಬಿಟ್ಟು ದ್ವಾದಶಿಯಲ್ಲೇ ಮಾಡತಕ್ಕದ್ದು.” ಇತ್ಯಾದಿ ವಚನಗಳು ಆಚಾರಾನುಸಾರಿಗಳಾದ ವೈಷ್ಣವರ ಪರಗಳು. ವೈಷ್ಣವರ ಷೋಡಶ ಮಹಾಲಯ ಇತ್ಯಾದಿಗಳನ್ನು ಮಾಡುವ ಪಕ್ಷದಲ್ಲಿ ಏಕಾದಶಿಯಲ್ಲಿಯ ಹಾಗೂ ದ್ವಾದಶಿಯ ಮಹಾಲಯಗಳನ್ನು ತಂತ್ರೇಣ ಕರಿಷ್ಯ” ಹೀಗೆ ಸಂಕಲ್ಪಿಸಿ ಮಹಾಲಯವನ್ನು ‘ದ್ವಾದಶಿ’ಯಲ್ಲೇ ಮಾಡತಕ್ಕದ್ದು. ಕಾಮೋಪವಾಸದಲ್ಲಿ ಸೂತಕ ಪ್ರಾಪ್ತವಾದರೆ ? ಶರೀರಸಂಬಂಧವಾದ ನಿಯಮವನ್ನು ತಾನು ಮಾಡಿ ಸೂತಕ ಮುಗಿದಮೇಲೆ ಪೂಜಾ, ದಾನ, ಬ್ರಾಹ್ಮಣ ಭೋಜನ ಇತ್ಯಾದಿಗಳನ್ನು ಮಾಡತಕ್ಕದ್ದು. ನಿತ್ಯೋಪವಾಸದಲ್ಲಿ ಸೂತಕ ಪ್ರಾಪ್ತವಾದರೆ ಸ್ನಾನಮಾಡಿ, ಹರಿಯನ್ನು ನಮಸ್ಕರಿಸಿ, ನಿರಾಹಾರಾಧಿನಿಯಮವನ್ನು ತಾನುಮಾಡಿ ಪೂಜಾದಿಗಳನ್ನು ಬ್ರಾಹ್ಮಣ ಮುಖದಿಂದ ಮಾಡಿಸುವದು. ದಾನಾದಿಗಳನ್ನು ಲೋಪಮಾಡತಕ್ಕದ್ದು. ಸೂತಕಾಂತದಲ್ಲಿ ಪುನಃ ಅನುಷ್ಠಾನ ಮಾಡತಕ್ಕದ್ದಲ್ಲ. ಹೀಗೆ ರಜಸ್ವಲಾದಿ ದೋಷದಲ್ಲಿಯೂ ೨೬ ಧರ್ಮಸಿಂಧು ದ್ವಾದಶಿಯಲ್ಲಿ ಪ್ರಾತಃಕಾಲ ನಿತ್ಯಪೂಜೆಯನ್ನು ಮಾಡಿ ಭಗವಂತನಿಗೆ ವ್ರತವನ್ನರ್ಪಿಸುವದು, “ಅಜ್ಞಾನ ತಿಮಿರಾಂಧಸ್ಯ ವ್ರತೇನಾನೇನ ಕೇಶವ ಪ್ರಸೀದಸುಮುಖನಾಥ ಜ್ಞಾನದೃಷ್ಟಿ ಪ್ರದೋಭವ” ಹೀಗೆ ಅರ್ಪಣ ಮಂತ್ರವು. ದಶಮ್ಯಾದಿಗಳಲ್ಲಿ ಹೇಳಿದ ನಿಯಮಗಳ ಭಂಗವಾದರೆ, ಹಗಲು ನಿದ್ರೆ ಮಾಡಿದರೆ, ಬಹು ಆವರ್ತಿ ನೀರು ಕುಡಿದರೆ, ಸುಳ್ಳು ಹೇಳಿದರೆ ಇತ್ಯಾದಿ ಆಯಾಯ ವ್ರತಭಂಗ ಪ್ರಾಯಶ್ಚಿತ್ತಕ್ಕಾಗಿ ನಾರಾಯಣಾಷ್ಟಾಕ್ಷರ ಮಂತ್ರವನ್ನು ನೂರೆಂಟಾವರ್ತಿ ಜಪಿಸುವದು. ಅಲ್ಪದೋಷದಲ್ಲಿ ೩೦೦ ನಾಮಜಪಮಾಡತಕ್ಕದ್ದು. ರಜಸ್ವಲೆ, ಚಾಂಡಾಲ, ರಜಕ, ಸೂತಕ (ಹಡದ ಬಾಣಂತಿ) ಮೊದಲಾದವರು ಶಬ್ದಗಳನ್ನು ವ್ರತ ಮಧ್ಯದಲ್ಲಿ ಶ್ರವಣ ಮಾಡಿದರೆ ೧೦೦೮ ಗಾಯತ್ರಿ ಜಪವನ್ನು ಮಾಡತಕ್ಕದ್ದು, ಆಮೇಲೆ ನೈವೇದ್ಯವಾದ ಹಾಗೂ ತುಳಸೀಯುಕ್ತವಾದ ಅನ್ನದಿಂದ ಪಾರಣ ಮಾಡತಕ್ಕದ್ದು, ಪಾರಣೆಯಲ್ಲಿ ನೆಲ್ಲಿಕಾಯಿಯನ್ನು ತಿಂದರೆ ಅಯೋಗ್ಯರ ಸಂಗಡ ಮಾಡಿದ ಸಂಭಾಷಣೆಯ ದೋಷವು ನಾಶವಾಗುತ್ತದೆ. ಪಾರಣೆಯ ವಿಚಾರ ಪಾರಣೆಯನ್ನು ದ್ವಾದಶಿಯ ಉಲ್ಲಂಘನೆಯಾದರೆ ಮಹಾ ದೋಷ ಹೇಳಿರುವದರಿಂದ “ದ್ವಾದಶಿ"ಯ ಮಧ್ಯದಲ್ಲಿ ಮಾಡತಕ್ಕದ್ದು. ರಾತ್ರಿ ಶೇಷದಲ್ಲಿ ಅಲ್ಪ ದ್ವಾದಶಿಯಿದ್ದರೆ ಮಧ್ಯಾಹ್ನದೊಳಗಿನ ಕಾರ್ಯಗಳನ್ನು ಅಪಕರ್ಷಣಮಾಡಿ ಮುಗಿಸತಕ್ಕದ್ದು. ಅಗ್ನಿ ಹೋತ್ರ ಹೋಮಕ್ಕೆ ಅಪಕರ್ಷವಿಲ್ಲವೆಂದು ಕೆಲವರ ಮತವು. ಹೀಗೆ ಶ್ರಾದ್ಧಕ್ಕೂ ಅಪಕರ್ಷ ಮಾಡಿ ಮುಗಿಸತಕ್ಕದ್ದು. ಅಗ್ನಿಹೋತ್ರ ಹೋಮಕ್ಕೆ ಅವಕರ್ಷಣ ಇಲ್ಲವೆಂದು ಕೆಲವರ ಮತವು. ಹೀಗೆ ಶ್ರಾದ್ದಕ್ಕೂ ಅಪಕರ್ಷಣವಿಲ್ಲ. ರಾತ್ರಿಯಲ್ಲಿ ಶ್ರಾದ್ಧ ನಿಷೇಧವಿರುತ್ತದೆ. ಅತಿ ಸಂಕಟದ ಸಮಯ ಶ್ರಾದ್ಧದಲ್ಲಿ ಅಥವಾ ಪ್ರದೋಷಾದಿ ವ್ರತದಲ್ಲಿ ತೀರ್ಥದಿಂದ ಪಾರಣಮಾಡತಕ್ಕದ್ದು. ದ್ವಾದಶಿಯು ಜಾಸ್ತಿಯಾಗಿದ್ದಾಗ ದ್ವಾದಶಿಯ ಪ್ರಥಮ ಭಾಗವನ್ನು ಅಂದರೆ “ಹರಿವಾಸರ” ಸಂಜ್ಞಕವಾದ ಭಾಗವನ್ನು ಕಳೆದು ಪಾರಣಮಾಡತಕ್ಕದ್ದು. ಕಲಾಮಾತ್ರವಾದರೂ ದ್ವಾದಶಿಯು ಸಿಗದಿದ್ದಲ್ಲಿ ತ್ರಯೋದಶಿಯಲ್ಲಿ ಪಾರಣಮಾಡತಕ್ಕದ್ದು. ದ್ವಾದಶಿಯು ಮಧ್ಯಾಹ್ವಾನಂತರವೂ ಇದ್ದಲ್ಲಿ ಬೆಳಿಗ್ಗೆ ಮೂರು ಮುಹೂರ್ತದ ಮಧ್ಯದಲ್ಲೇ ಪಾರಣ ಮಾಡತಕ್ಕದ್ದು. ಮಧ್ಯಾಹ್ನದಲ್ಲಿ ಮಾಡತಕ್ಕದ್ದಲ್ಲ. ಹೀಗೆ ಬಹು ಜನರ ಅಭಿಪ್ರಾಯವಿದೆ. ಅನೇಕ ಕರ್ಮಕಾಲಗಳಿಂದ ಬಾಧೆಯುಂಟಾದಲ್ಲಿ ಅಪರಾಹ್ನದಲ್ಲಿಯೇ ಪಾರಣಮಾಡತಕ್ಕದ್ದೆಂದು ಕೆಲವರು ಹೇಳುವರು. ಎಲ್ಲ ಮಾಸಗಳ ಶುಕ್ಲ ಮತ್ತು ಕೃಷ್ಣ ದ್ವಾದಶಿಗಳಲ್ಲಿ ಶ್ರವಣ ನಕ್ಷತ್ರ ಯೋಗವಾದಲ್ಲಿ ಸಮರ್ಥನಾದರೆ ಏಕಾದಶೀ-ದ್ವಾದಶಿಗಳೆರಡರಲ್ಲಿಯೂ ಉಪವಾಸ ಮಾಡತಕ್ಕದ್ದು. “ವಿಷ್ಟು ಶೃಂಖಲ ಯೋಗ"ವಿದ್ದಾಗ ಏಕಾದಶಿಯಲ್ಲಿಯೇ ಶ್ರವಣದ್ವಾದಶೀಪ್ರಯುಕ್ತವಾದ ಉಪವಾಸವನ್ನು ಸಹ ಮಾಡಿ, ಶ್ರವಣಯೋಗ ರಹಿತವಾದ ದ್ವಾದಶಿಯಲ್ಲಿ ಪಾರಣ ಮಾಡತಕ್ಕದ್ದು. ದ್ವಾದಶಿಯು ಶ್ರವಣಕ್ಕಿಂತ ಕಡಿಮೆಯಿದ್ದರೆ ಶ್ರವಣಯುಕ್ತ ದ್ವಾದಶಿಯಲ್ಲೇ ಪಾರಣ ಮಾಡತಕ್ಕದ್ದು. ದ್ವಾದಶಿಯ ಉಲ್ಲಂಘನವಾದರೆ ದೋಷವು ತಟ್ಟುವದು. “ವಿಷ್ಣು ಶೃಂಖಲಾದಿ ಯೋಗ ನಿರ್ಣಯ ವನ್ನು ಭಾದ್ರಪದ ಮಾಸಗತ ಶ್ರವಣ ದ್ವಾದಶೀ ಪ್ರಕರಣದಲ್ಲಿ ಹೇಳಲಾಗುವದು. ದಿವಾನಿದ್ರೆ, ಪರಾನ್ನ, ಪುನರ್ಭೋಜನ, ಮೈಥುನ, ಮಧುಸೇವನ, ಕಂಚಿನಪಾತ್ರೆ, ಮಾಂಸ, ತೈಲ, ಹೀಗೆ ಎಂಟು ವಿಷಯಗಳನ್ನು ತ್ಯಾಜ್ಯ ಮಾಡತಕ್ಕದ್ದು. ಮತ್ತು ಪರಿಚ್ಛೇದ - ೧ 92 ದೂತ, ಕ್ರೋಧ, ಕಡಲೆ, ಕ್ರೋಧವ (ಧಾನ್ಯ) ಎಳ್ಳು, ಹಿಟ್ಟು ಉದ್ದು, ಕಾಡು ಕಡಲೆ, ನೇತ್ರಾಂಜನ, ಸುಳ್ಳು ಹೇಳುವದು, ಲೋಭ, ಆಯಾಸ, ಪ್ರವಾಸ, ಭಾರ ಹೊರುವದು, ಅಧ್ಯಯನ, ತಾಂಬೂಲ, ಮೊದಲಾದವುಗಳನ್ನು ಬಿಡತಕ್ಕದ್ದು. ಈ ನಿಯಮಗಳೆಲ್ಲವೂ ಕಾಮ್ಮವ್ರತದಲ್ಲಿ ಆವಶ್ಯಕಗಳು. ನಿತ್ಯ ವ್ರತದಲ್ಲಾದರೋ ಸಮರ್ಥನಾದವನು ವಿಶೇಷ ನಿಯಮಗಳನ್ನು ಪಾಲಿಸತಕ್ಕದ್ದು. ಅಸಮರ್ಥನಾದವನು ಅಹೋರಾತ್ರ ಉಪವಾಸ ಮಾಡುವದು, ಇಂದ್ರಿಯಗಳನ್ನು ನಿಗ್ರಹಿಸಿ, ಶ್ರದ್ಧಾಯುಕ್ತನಾಗಿ ವಿಷ್ಣುವನ್ನು ಧ್ಯಾನಿಸುತ್ತ, ಉಪವಾಸ ಮಾಡಿದರೆ ಪಾಪದಿಂದ ಮುಕ್ತನಾಗುವನು. ಅದರಲ್ಲೇನೂ ಸಂಶಯವಿಲ್ಲ. ಇನ್ನೊಬ್ಬನಿಗೆ “ಊಟಮಾಡು” ಎಂದರೂ, ತಾನು ಊಟ ಮಾಡಿದರೂ ನರಕಕ್ಕೆ ಹೋಗುವನು. ಅಂತೂ ಏಕಾದಶೀವ್ರತದ ಆಚರಣೆಯಿಂದ ವಿಷ್ಣು ಸಾಯುಜ್ಯವನ್ನು ಹೊಂದುವನು. ಹೀಗೆ ಏಕಾದಶೀ ಅನ್ಯ ಕಾರ್ಯಗಳಲ್ಲಿ ದ್ವಾದಶೀಯುಕ್ತವಾದ ಏಕಾದಶಿಯೇ ಗ್ರಾಹ್ಯವು. ಇಲ್ಲಿಗೆ ಏಕಾದಶಿ ನಿರ್ಣಯವೆಂಬ ಹದಿನೇಳನೆಯ ಉದ್ದೇಶವು ಮುಗಿಯಿತು. ದ್ವಾದಶಿ ನಿರ್ಣಯವು · ದ್ವಾದಶಿಯು ಏಕಾದಶೀ ವಿದ್ಧವಾದದ್ದು ಗ್ರಾಹ್ಮವು. ದ್ವಾದಶಿಗಳಲ್ಲಿ ಎಂಟು “ಮಹಾದ್ವಾದಶಿ"ಗಳಿವೆ. ಶುದ್ಧಾಧಿಕವಾದ ಏಕಾದಶೀ ಯುಕ್ತವಾದ ದ್ವಾದಶಿಗೆ “ಉಶ್ಮೀಲಿನೀ” ಎಂಬ ಹೆಸರಿದೆ. ದ್ವಾದಶಿಯೇ ಶುದ್ಧಾಧಿಕವಾಗಿ ವೃದ್ಧಿಯಾದರೆ “ವಂಜುಲೀ” ಎನ್ನುವರು. ಸೂರ್ಯೋದಯದಲ್ಲಿ ಏಕಾದಶೀ ಆಮೇಲೆ ಕ್ಷಯಗಾಮಿನಿಯಾದ ದ್ವಾದಶೀ, ಎರಡನೇ ಸೂರ್ಯೋದಯದಲ್ಲಿ ತ್ರಯೋದಶೀ ಹೀಗೆ ಒಂದು ಅಹೋರಾತ್ರಿಯಲ್ಲಿ ಮೂರು ತಿಥಿಗಳ ಸ್ಪರ್ಶವಾಗುದರಿಂದ " ಈ ದ್ವಾದಶಿಯು” “ತ್ರಿಸ್ಪರ್ಶಾ” ಎಂದು ಸಂಜ್ಜಿತವಾಗುವದು. ಅಮಾವಾಸ್ಯೆಯ ಅಥವಾ ಹುಣ್ಣಿಮೆಯ ದಿನ ವೃದ್ಧಿಯಾದಾಗ “ಪಕ್ಷವರ್ಧನೀ “, ಪುಷ್ಯ ನಕ್ಷತ್ರಯುಕ್ತವಾದರೆ “ಜಯಾ”, ಶ್ರವಣ ಯುಕ್ತವಾದರೆ “ವಿಜಯಾ” ಪುನರ್ವಸು ಯುಕ್ತವಾದರೆ “ಜಯಂತೀ”, ರೋಹಿಣೀ ಯುಕ್ತವಾದರೆ “ಪಾಪನಾಶಿನೀ”-ಇತ್ಯಾದಿ ಸಂಜ್ಞೆಗಳು. ಈ ದ್ವಾದಶಿಗಳಲ್ಲಿ ಪಾಪಕ್ಷಯಕಾಮನಾದವನೂ, ಮುಕ್ತಿ ಕಾಮನಾದವನೂ, ಉಪವಾಸ ಮಾಡತಕ್ಕದ್ದು. ಶ್ರವಣಯುಕ್ತವಾದ ದ್ವಾದಶಿಯು ಏಕಾದಶಿಯಂತೆಯೇ ನಿತ್ಯವಾದದ್ದು. ಈ ಎಂಟು ಪ್ರಕಾರಗಳ ಒಳಗೆ ಏಕಾದಶೀ-ದ್ವಾದಶಿಗಳ ಏಕತ್ವವಾದಲ್ಲಿ ತಂತ್ರದಿಂದ ಉಪವಾಸ ಮಾಡತಕ್ಕದ್ದು. ಪೃಥಕ್ ಆಗಿದ್ದರೆ ಶಕ್ತನಾದವನು ಎರಡೂ ಉಪವಾಸ ಮಾಡತಕ್ಕದ್ದು. ಈ ಎರಡೂ ವ್ರತಗಳನ್ನಾರಂಭಿಸಿ ಎರಡು ಉಪವಾಸವನ್ನು ಮಾಡಲು ಅಸಮರ್ಥನಾದರೆ ಆತನು ದ್ವಾದಶಿ ಒಂದರಲ್ಲೇ ಉಪವಾಸ ಮಾಡಿದರೂ ಎರಡೂ ವ್ರತಗಳ ಪುಣ್ಯಫಲವು ಲಭಿಸುವದು. ಅದರಲ್ಲಿ ಮುಹೂರ್ತ ಮಾತ್ರ ಶ್ರವಣ ನಕ್ಷತ್ರ ಯೋಗವಿದ್ದರೂ ಅದೇ ಗ್ರಾಹ್ಯವು. ಪುಷ್ಪಾದಿ ಯೋಗವು ಸೂರ್ಯೋದಯವನ್ನಾರಂಭಿಸಿ ಅಸ್ತಮಯ ಪರ್ಯಂತ ಇದ್ದರೆ ಉಪವಾಸ ಮಾಡತಕ್ಕದ್ದು. ಪಾರಣೆಯಾದರೂ ತಿಥಿ-ನಕ್ಷತ್ರ ಸಂಯೋಗಗಳ ಪ್ರಯುಕ್ತವಾಗಿದ್ದಲ್ಲಿ ಆ ಎರಡರ ಅಂತ್ಯದಲ್ಲಿ ಅಥವಾ ಒಂದರ ಅಂತ್ಯದಲ್ಲಿ ಆಗತಕ್ಕದ್ದು. ಹೀಗೆ ಸರ್ವಸಾಧಾರಣ ನಿಯಮವು. ಇಲ್ಲಿಗೆ ದ್ವಾದಶೀ ನಿರ್ಣಯವೆಂಬ ಹದಿನೆಂಟನೆಯ ಉದ್ದೇಶವು ಮುಗಿಯಿತು. ೨೮ ಧರ್ಮಸಿಂಧು ತ್ರಯೋದಶೀ ನಿರ್ಣಯವು ಶುಕ್ಲ ತ್ರಯೋದಶಿಯು ಪೂರ್ವ ವಿದ್ದವಾದದ್ದು ಗ್ರಾಹ್ಯವು. ಕೃಷ್ಣ ತ್ರಯೋದಶಿಯು ವರವಿದ್ಧವಾದದ್ದು ಗ್ರಾಹ್ಯವು, ಶನಿವಾರಾದಿಯುಕ್ತವಾದ ಯಾವದಾದರೊಂದು ಶುಕ್ಲ ತ್ರಯೋದಶಿಯನ್ನಾರಂಭಿಸಿ ಸಂವತ್ಸರ ಪರ್ಯಂತ ಪ್ರತಿ ತ್ರಯೋದಶಿಯಲ್ಲಿ ಮಾಡತಕ್ಕ ಪ್ರದೋಷ ವ್ರತ ಇದೊಂದು ರೀತಿ, ಇನ್ನು ಶನಿವಾರಯುಕ್ತಗಳಾದ ಇಪ್ಪತ್ತುನಾಲ್ಕು ಶುಕ್ಲ ತ್ರಯೋದಶಿಗಳಲ್ಲಿ ಮಾಡತಕ್ಕ (ಶನಿ) ಪ್ರದೋಷ ವ್ರತ ಇದೊಂದು ರೀತಿ. ಇವುಗಳಲ್ಲಿ ಪ್ರದೋಷಕಾಲದಲ್ಲಿ ಶಿವಪೂಜಾ, ನಕ್ತ ಭೋಜನ ಇತ್ಯಾದಿಗಳು ಆಚರಿಸಲ್ಪಡುತ್ತವೆ. ಅದರಲ್ಲಿ ಸೂರ್ಯಾಸ್ತ ನಂತರ ತ್ರಿಮುಹೂರ್ತ ಇರುವ ಪ್ರದೋಷವ್ಯಾಪಿನಿಯಾದ ತ್ರಯೋದಶಿಯು ಗ್ರಾಹ್ಯವು. ಎರಡೂ ದಿನ ಪ್ರದೋಷವ್ಯಾಪ್ತಿಯಿದ್ದರೆ, ಸರಿಸಮನಾಗಿ ಏಕದೇಶವ್ಯಾಪ್ತಿಯಾದರೆ, ಮುಂದಿನ ತಿಥಿಯು ಗ್ರಾಹ್ಯವು. ವೈಷಮ್ಯದಿಂದ ಏಕದೇಶವ್ಯಾಪ್ತಿಯಿದ್ದರೆ, ಆಗ ಪೂರ್ವದಿನ ಹೆಚ್ಚಿದ್ದರೆ ಆ ಪೂರ್ವವಾದರೂ ಅದೇ ಗ್ರಾಹ್ಯವು. ಆದರೆ ಆ ಹೆಚ್ಚು ಅಂದರೆ ದೇವಪೂಜಾ, ಭೋಜನ ಇತ್ಯಾದಿ ಕಾಲಕ್ಕೆ ಸಾಕಾಗುವಷ್ಟಿದ್ದರೆ ಎಂದರ್ಥ. ಹೀಗಿದ್ದರೆ ಮಾತ್ರ ಪೂರ್ವವು ಗ್ರಾಹ್ಯವು. ಇಲ್ಲವಾದರೆ ಸಾಮ್ಯಪಕ್ಷದಂತೆ ಮುಂದಿನದೇ ಗ್ರಾಹ್ಯವು. ಎರಡೂ ಕಡೆಗಳಲ್ಲಿ ಏನೂ ವ್ಯಾಪ್ತಿಯಿಲ್ಲದಿದ್ದರೂ “ಪರವೇ ಗ್ರಾಹ್ಯವು. ಇಲ್ಲಿಗೆ ತ್ರಯೋದಶೀ ನಿರ್ಣಯವೆಂಬ ಹತ್ತೊಂಭತ್ತನೇ ಉದ್ದೇಶವು ಮುಗಿಯಿತು. ಚತುರ್ದಶೀ ನಿರ್ಣಯ ಚತುರ್ದಶಿಯು ಶುಕ್ಲಪಕ್ಷದಲ್ಲಿ - ಮುಂದಿನದು ಗ್ರಾಹ್ಯವು. ಕೃಷ್ಣಪಕ್ಷದಲ್ಲಿ ಪೂರ್ವವು ಗ್ರಾಹ್ಯವು, ಪ್ರತಿ ತಿಂಗಳ ಕೃಷ್ಣ ಪಕ್ಷ ಚತುರ್ದಗಳಲ್ಲಿ “ಮಾಸ ಶಿವರಾತ್ರಿ” ಅಥವಾ “ಕಾಮ್ಮ ಶಿವರಾತ್ರಿ” ವ್ರತಗಳು ಆಚರಿಸಲ್ಪಡುತ್ತವೆ. ಅವುಗಳಲ್ಲಿ ಮಹಾಶಿವರಾತ್ರಿಯಂತೆ ಮಧ್ಯರಾತ್ರಿ ವ್ಯಾಪಿನಿಯಾದದ್ದು ಗ್ರಾಹ್ಯವು. ಎರಡೂ ದಿನ ನಿಶೀಥ ವ್ಯಾಪಿನಿಯಾಗಿದ್ದರೆ ಪರವೇ ಗ್ರಾಹ್ಯವು. ಯಾಕೆಂದರೆ ಪ್ರದೋಷವು ಅಧಿಕವಾಗಿರುವದು. ಕೆಲವರು ಪ್ರದೋಷ ವ್ಯಾಪಿನಿಯಾದದ್ದು ಗ್ರಾಹ್ಯವು ಅನ್ನುವರಾದರೂ, ಅದಕ್ಕೆ ಮೂಲವು ಕಂಡುಬರುವದಿಲ್ಲ. ಇನ್ನು ಚತುರ್ದಶಿಯಲ್ಲಿ ಹಗಲು ಭೋಜನ ನಿಷೇಧವು ನಿತ್ಯವು ಎಂದು ಅದನ್ನು ಪಾಲಿಸುವಲ್ಲಿ ಭೋಜನ ಕಾಲವನ್ನು ವ್ಯಾಪಿಸಿರುವ ಚತುರ್ದಶಿಯನ್ನು ಬಿಟ್ಟು ತ್ರಯೋದಶಿ ಅಥವಾ ಹುಣ್ಣಿವೆ ಇರುವ ಕಾಲದಲ್ಲಿ ಭೋಜನ ಮಾಡತಕ್ಕದ್ದು. ಶಿವರಾತ್ರಿ ವ್ರತವಿರುವವರು ಪಾರಣೆಯನ್ನು ಚತುರ್ದಶಿಯಲ್ಲೇ ಮಾಡತಕ್ಕದ್ದು. ಹಾಗೆಂದು “ಚತುರ್ದಶ್ಯಷ್ಟಮೀ ದಿವಾ” ಎಂಬ ವಚನದಿಂದ ಈ ಭೋಜನ ನಿಷೇಧವು, ಈ ಪಾರಣೆಗೆ ಬಾಧಕವಾಗುವಂತಿಲ್ಲ. ವಿಧಿಯು ಪ್ರಾಪ್ತವಾದಲ್ಲಿ ನಿಷೇಧಕ್ಕೆಡೆಯಿಲ್ಲ. ಇಲ್ಲಿಗೆ ಚತುರ್ದಶೀ ನಿರ್ಣಯವೆಂಬ ಇಪ್ಪತ್ತನೆಯ ಉದ್ದೇಶವು ಮುಗಿಯಿತು. ಪೂರ್ಣಿಮಾ ಅಮಾವಾಸ್ಯೆಗಳ ನಿರ್ಣಯವು ಹುಣ್ಣಿವೆ-ಅಮವಾಸ್ಯೆಗಳು ಸಾವಿತ್ರಿ ವ್ರತಹೊರತಾಗಿ ಪರವಾದವುಗಳು ಗ್ರಾಹ್ಮವು. ಇನ್ನು ಕೆಲವರು ಶ್ರಾವಣೀಹುತಾಶನೀ (ಫಾಲ್ಗುಣ ಪೂರ್ಣಿಮಾ) ಪೂರ್ಣಿಮಗಳನ್ನು ಕುಲಧರ್ಮದಂತೆ ಆಚರಿಸುವಲ್ಲಿ ಪೂರ್ವವಿದ್ಧವಾದದ್ದು “ಗ್ರಾಹ್ಯ” ಎನ್ನುವರು. ಅಷ್ಟೇ ಮಾತ್ರದಿಂದ ಎಲ್ಲ ಪೂರ್ಣಿಮೆಗಳನ್ನು ಪೂರ್ವವಿದ್ಧವಾದದ್ದನ್ನೇ ಸ್ವೀಕರಿಸುವ ಸಲುವಾಗಿ ಮೂಲ ವಚನಗಳು ಪರಿಚ್ಛೇದ - ೧ ಸಿಗುವಂತಿಲ್ಲ. ಹದಿನೆಂಟು ಘಟಿಗಳಿಗಿಂತ ಕಡಿಮೆ ಚತುರ್ದಶಿಯಿದ್ದರೆ, ಆ ಪ್ರಕಾರದ ಚತುರ್ದಶೀ ವೇಧಕ್ಕೆ “ಭೂತೋಷ್ಟಾದಶನಾಡೀಭಿ” ಎಂಬ ವಚನದಿಂದ ದೂಷಕತ್ವವು ತೋರುತ್ತದೆ. ಅಥವಾ ಅಂಥ ಕಡೆಗಳಲ್ಲಿ ಕುಲಧರ್ಮವಿದ್ದಂತೆ ಪೂರ್ವವನ್ನು ಗೃಹೀತಮಾಡಬಹುದು. ಹದಿನೆಂಟು ಘಟಿಗಿಂತ ಹೆಚ್ಚಿನ ಚತುರ್ದಶೀ ವೇಧವಾದರೆ ಪೂರ್ವವಿದ್ಧವಾದ ಪೂರ್ಣಿಮೆಯು ಗ್ರಾಹ್ಯವಲ್ಲವೆಂದು ನನಗೆ ತೋರುತ್ತದೆ. ಅಮಾವಾಸ್ಯೆಯು ಮಂಗಳವಾರ-ಸೋಮವಾರ ಯುಕ್ತವಾದರೆ ಆಗ ಸ್ನಾನ, ದಾನಾದಿಗಳನ್ನು ಮಾಡಿದರೆ ಮಹಾಪುಣ್ಯವು ಲಭಿಸುವದು. ಸೋಮವಾರ ಯುಕ್ತವಾದ ಅಮಾವಾಸ್ಯೆಯಲ್ಲಿ ಅಶ್ವತ್ಥ ಪೂಜಾದಿಸ್ವರೂಪದ “ಸೋಮವತೀ ವ್ರತದ ಆಚರಣೆಯಿದೆ. ಅಲ್ಲಿ ಅಪರಾಹ್ನ ಪರ್ಯಂತದಲ್ಲಿ ಒಂದು ಮುಹೂರ್ತವಿದ್ದರೂ ವ್ರತವನ್ನು ಮಾಡತಕ್ಕದ್ದು. ಸಂಜೆ ಆರು ಘಟೇ ಸ್ವರೂಪದ ಸಾಯಾಹ್ನಯೋಗ ಮತ್ತು ರಾತ್ರಿ ಯೋಗದಲ್ಲಿ ಮಾಡತಕ್ಕದ್ದಲ್ಲ ಎಂದು ಶಿಷ್ಟಾಚಾರವಿದೆ. ಯತಿಗಳ ಕ್ಷೌರಾದಿಗಳಲ್ಲಿ ಉದಯಕಾಲಕ್ಕೆ ತ್ರಿಮುಹೂರ್ತ ವ್ಯಾಪಿನಿಯಾದ ಹುಣ್ಣಿವೆಯು ಗ್ರಾಹ್ಯವು, ಮೂರನೇ ಮುಹೂರ್ತ ಸ್ಪರ್ಶವಿಲ್ಲದಾಗ ಚತುರ್ದಶೀ ಯುಕ್ತವಾದದ್ದು ಗ್ರಾಹ್ಯವು. ಇಲ್ಲಿಗೆ ಪಂಚದಶೀ ನಿರ್ಣಯವೆಂಬ ಇಪ್ಪತ್ತೊಂದನೇ ನಿರ್ಣಯೋದ್ದೇಶವು ಮುಗಿಯಿತು. ಇಷ್ಟಕಾಲ ನಿರ್ಣಯ ಪಕ್ಷಾಂತಗಳಲ್ಲಿ ಉಪವಾಸ ಮಾಡತಕ್ಕದ್ದು. ಪಕ್ಷಾದಿಗಳಲ್ಲಿ ಯಾಗಮಾಡತಕ್ಕದ್ದು. ಹೀಗೆ ವಚನವಿದೆ. ಇಲ್ಲಿ ಉಪವಾಸವೆಂದರೆ ಅನಾಧಾನ’ವೆಂಬ ಕರ್ಮವಿಶೇಷವು. ಪರ್ವದ ನಾಲ್ಕನೇ ಭಾಗ ಪ್ರತಿಪದಿಯ ಆದಿಯ ಮೂರುಭಾಗ, ಇದು ಯಾಗಕ್ಕೆ ಉಕ್ತವಾದ ಕಾಲವು. ಪ್ರಾತಃ ಕಾಲದಲ್ಲಿ ಮಾಡತಕ್ಕದ್ದೆಂದು ತಿಳಿದವರು ಹೇಳುವರು. ಪ್ರತಿಪದೆಯ ನಾಲ್ಕನೇ ಭಾಗದಲ್ಲಿ ಯಾಗ (ಇಷ್ಟಿ)ವನ್ನು ಮಾಡಬಾರದೆಂಬ ವಿಧಿ ವಚನವಿದೆ. ಪರ್ವ ಹಾಗೂ ಪ್ರತಿಪದಗಳು ಪೂರ್ಣಗಳಾಗಿದ್ದಾಗ ಸಂದೇಹವೇ ಇರುವದಿಲ್ಲ. ಯಾಕೆಂದರೆ ಪರ್ವದಲ್ಲಿ ಅನ್ನಾಧಾನ, ಪ್ರತಿಪದೆಯಲ್ಲಿ ಯಾಗ ಇವುಗಳಿಗೆ ಯಥೋಕ್ತ ಕಾಲಗಳು ಲಭಿಸುತ್ತವೆ. ಪರ್ವ-ಪ್ರತಿಪದಿಗಳ ಸಂಧಿ ನಿರ್ಣಯ ಪರ್ವತಿಥಿಯು ಖಂಡವಾಗಿದ್ದಲ್ಲಿ ಪರ್ವತಿಥಿಗಿಂತ ಪ್ರತಿಪದಿಯು ಎಷ್ಟು ಪ್ರಾಸವಾಗಿದೆ? ಎಷ್ಟು ವೃದ್ಧಿಯಾಗಿದೆ? ಎಂಬುದನ್ನಣಿಸಿ ಹಾಸವಿದ್ದಲ್ಲಿ ಪ್ರಾಸಗಳಿಗೆಗಳ ಅರ್ಧವನ್ನು ಪರ್ವಘಟಿಗಳಲ್ಲಿ ಕಳೆಯುವದು. ವೃದ್ಧಿಯಾದಲ್ಲಿ ಕೂಡಿಸುವದು. ಹೀಗೆ “ಸಂಧಿಕಾಲ"ವನ್ನು ಅನ್ನಾಧಾನಾದಿ ಕರ್ಮಗಳನ್ನು ನಿರ್ಣಯಿಸಿಕೊಳ್ಳುವದು. ಪ್ರಾಸ ವೃದ್ಧಿಗಳಿಲ್ಲದಿದ್ದರೆ ಅಲ್ಲಿ ಇದ್ದಂತೆಯೇ ಸಂಧಿಯು ಸ್ಪಷ್ಟವಿರುತ್ತದೆ. ಸಂಧಿಯಲ್ಲಿ ನಾಲ್ಕು ವಿಧವಿದೆ. ಪೂರ್ವಾಹ್ನ ಸಂಧಿ ಮಧ್ಯಾಹ್ನ ಸಂಧಿ, ಅಪರಾಹ್ನ ಸಂಧಿ, ರಾತ್ರಿ ಸಂಧಿ, ಹೀಗೆ ನಾಲ್ಕು ವಿಧ. ಪೂರ್ವಾಹ್ನ ಅಂದರೆ ದಿನಮಾನವನ್ನು ಎರಡು ಭಾಗ ಮಾಡಿದರೆ ಪೂರ್ವಾರ್ಧವು “ಪೂರ್ವಾಹ್ನ” ಎಂದಾಗುವದು. ಅಪರಾರ್ಧವು “ಅಪರಾಹ್ನ ವು. ಈ ಪೂರ್ವಾಹ್ನ-ಅಪರಾಹ್ನಗಳ ಸಂಧಿಯಲ್ಲಾದರೂ ಘಟೀದ್ವಯರೂಪವಾದ ಮುಹೂರ್ತಕ್ಕೆ ಮಧ್ಯಾಹ್ನ ಆವರ್ತನ ಎಂಬ ಕಾಲಸಂಜ್ಞೆಯನ್ನು ಕೌಸ್ತುಭದಲ್ಲಿ ಹೇಳಿದ. ಉಭಯ ಸಂಧಿಯಲ್ಲಿ ಒಂದೇ ಪಳೆ ಮಾತ್ರ “ಮಧ್ಯಾಹ್ನ"ವು. ಹೊರತು ಎರಡು ಘಟಿಗಳಲ್ಲ, ಎಂದು ಹೆಚ್ಚಾಗಿ ಶಿಷ್ಯರ ಅಭಿಪ್ರಾಯವು. ಹಿಂದೆ ಹೇಳಿದಂತೆ ಹಾಸ 10 ಧರ್ಮಸಿಂಧು ವೃದ್ಧಿಗಳ ಕಳೆಯುವಿಕೆ-ಕೂಡಿಸುವಿಕೆಗಳಿಂದ ನಿರ್ಣಯಿಸಲ್ಪಟ್ಟ ಪರ್ವ ಪ್ರತಿಪದಿಗಳ ಸಂಧಿಯ ಪೂರ್ವಾಹ್ನ ಅಥವಾ ಮಧ್ಯಾಹ್ನದಲ್ಲಿ ಸಂಭವಿಸಿದರೆ ಆಗ ಸಂಧಿದಿನದ ಪೂರ್ವದಿನದಲ್ಲಿ ಅಷ್ಟಾಧಾನ ಮಾಡತಕ್ಕದ್ದು. ಪರದಲ್ಲಿ ಯಾಗವು. ಉದಾಹರಣೆ • ಪರ್ವ ಘಟ್ ೧೭/೦, ಪ್ರತಿಪದಿ ಘಟ್ ೧೧೦ ಹೀಗಿದೆಯೆಂದು ತಿಳಿಯೋಣ. ಇಲ್ಲಿ ಪ್ರತಿಪದಿಯು ೬ ಘಟ ಪ್ರಾಸವಾಯಿತು. ಅದರ ಅರ್ಧ ಅಂದರೆ ೩ ಘಟಿ ಇದನ್ನು ಪರ್ವಘಟ ೧೭/ರಲ್ಲಿ ಕಳೆದರೆ ೧೪ ಘಟಿಯಾಯಿತು, ಇದು ಸಂಧಿಯಾದಂತಾಗುತ್ತದೆ. ದಿನಮಾನ ಸಾಮಾನ್ಯ ೩೦ ಘಟಿಯಿದ್ದಾಗ ಇದು ಪೂರ್ವಾಹ್ನ ಸಂಧಿಯಾದಂತಾಗುವದು. ಇದೇ ದಿನಮಾನವು ೨ ಘಟಿಯಾದಾಗ ಇದು ಮಧ್ಯಾಹ್ನ ಸಂಧಿ ಎಂದಾಗುವದು. ಇಲ್ಲಿ ಸಂಧಿ ದಿನದಲ್ಲಿ “ಯಾಗವು ಪೂರ್ವದಿನದಲ್ಲಿ ‘ಅಷ್ಟಾಧಾನ’ವು. ಇನ್ನು ಪರ್ವ ಘಟ್ ೧೪೦, ಪ್ರತಿಪದಿ ೧೯೦, ಇಲ್ಲಿ ಪ್ರತಿಪದಿಯು ೫ ಘಟಗಳಿಂದ ವೃದ್ಧಿಯಾದಂತಾಯಿತು. ಇದರ ಅರ್ಧ ೨|| ಘಟ. ಇದನ್ನು ಪರ್ವಘಟಿ ೧೪ ಕ್ಕೆ ಕೂಡಿಸಲಾಗಿ ಉಂಟಾದ ಸಂಧಿ ಘಟಿ ೧೬|| ಆಯಿತು. ಇದು ಅಪರಾಹ ಸಂಧಿಯಾದಂತಾಯಿತು. ಇಲ್ಲಿ ಸಂಧಿಯದಿನ “ಅನ್ನಾಧಾನ ಮತ್ತು ಮಾರನೇದಿನ “ಯಾಗ’ವು. ಈಗ ಅಜ್ಞರ ಬೋಧಕ್ಕಾಗಿ ಪ್ರಕಾರಾಂತರದಿಂದ ಹೇಳಲಾಗುತ್ತಿದೆ. ಪರ್ವತಿಥಿಯು ಸೂರ್ಯೋದಯಾನಂತರ ಎಷ್ಟು ಘಟೀ ಪರ್ಯಂತವಿದೆಯೋ, ಇದರಂತೆ ಪ್ರತಿಪದಿಯ ಘಟ ಎಷ್ಟು ಇದೆಯೋ ಅವುಗಳನ್ನು ಕೂಡಿಸುವದು. ಆ ಘಟಿಗಳು ದಿನಮಾನದ ಘಟಿಗಳಿಗಿಂತ ಕಡಿಮೆಯಾದರೆ ಆಗ ಪೂರ್ವಾಹ್ನ ಸಂಧಿ ಎಂದಾಗುವದು. ದಿನಪ್ರಮಾಣಕ್ಕೆ ಸರಿಯಿದ್ದರೆ ಆಗ ಮಧ್ಯಾಹ್ನ ಸಂಧಿ ಎಂದಾಗುವದು. ದಿನಮಾನಕ್ಕಿಂತ ಹೆಚ್ಚಾದರೆ “ಅಪರಾಹ್ನ “ಸ೦ಧಿ ಸೂರ್ಯೋದಯಾನಂತರ ಪ್ರವೃತ್ತವಾದ ಪರ್ವ-ಪ್ರತಿಪದಿಗಳ ಕ್ಷಯ-ವೃದ್ಧಿಗಳಿಂದ “ಸಂಧಿ"ಯನ್ನು ನೋಡುವ ಪದ್ಧತಿಯು ಈ ಕಾಲದಲ್ಲಿ ಸರ್ವತ್ರ ಶಿಷ್ಟಾಚಾರದಲ್ಲಿ ಬಂದಿದೆ. “ಕೌಸ್ತುಭದಲ್ಲಿ ಬೇರೆಯೇ ಒಂದು ರೀತಿಯಿಂದ ನೋಡುವಂತೆ ಹೇಳಿದೆ. ಚತುರ್ದಶೀದಿನದಲ್ಲಿರುವ ಉದಯಕ್ಕಿಂತ ಹಿಂದಿನ ಪರ್ವದ ಗತಘಟಿ ಹಾಗೂ ಉದಯಕ್ಕಿಂತ ಮುಂದಿರುವ ಏಷ್ಯಘಟಿಗಳನ್ನೂ, ಇದರಂತ ಪ್ರತಿಪದಿಯ ಸೂರ್ಯೋದಯಕ್ಕಿಂತ ಮುಂದಿನ ಘಟಗಳನ್ನೂ ಕೂಡಿಸುವದು. ಪರ್ವಕ್ಕಿಂತ ಪ್ರತಿಪದಿಯು ಘಟಿಗಳು ಪ್ರಾಸವಾಗಿವೆಯೋ ವೃದ್ಧಿಯಾಗಿವೆಯೋ ಎಂಬುದನ್ನು ತಿಳಿಯತಕ್ಕದ್ದು. ಹೇಗೆಂದರೆ ಚತುರ್ದಶೀ ೨೨||, ಪರ್ವ ೧೭||, ಚತುರ್ದಶಿಯ ದಿನ ಇರುವ ಪರ್ವ ಘಟಿ ೩೮ll ಮುಂದಿನ ದಿನ ೧೭||, ಒಟ್ಟು ೫೫. ಪರ್ವದಿನದಲ್ಲಿರುವ ಪ್ರತಿಪದಿಯ ಘಟಿಗಳು ೪೩ ಮುಂದಿನ ದಿನದಲ್ಲಿ ೧೧|1 ಒಟ್ಟು ೫೪II, ಇಲ್ಲಿ ಒಂದುಗಳಿಗೆ ಪ್ರತಿಪದಿಯ ಕ್ಷಯವಾದಂತಾಯಿತು ಅದರ ಅರ್ಧ ೩೦ ಅಂದರೆ ಪಳೆ, ಇದನ್ನು ಪರ್ವದಲ್ಲಿ ಕಳೆದರೆ ೧೬/೩೦ ಆಯಿತು. (ಪರ್ವ ಘ ೧೭) ಇದು ಅಪರಾಹ್ನ ಸಂಧಿಯಾಯಿತು. ಹಿಂದೆ ಹೇಳಿದ ಮತದಂತೆ ಇಲ್ಲಿ ಪೂರ್ವಾಹ ಸಂಧಿಯಾಗುತ್ತದೆ. ಹಾಗೆಯೇ ಚತುರ್ದಶೀ ೨೪/ ಪರ್ವ ೧. ಹಿಂದೆ ಗತಘಟಿ ೩೬/ ಏಷ್ಯಕ್ಕೆ ಕೂಡಿಸಲಾಗಿ ೫೩/ಪ್ರತಿಪದಿ ೧೧/ ಗತ-ಏಷ್ಯಗಳನ್ನು ಕೂಡಿಸಿದರೆ ೫೪/ ಪೂರ್ವೋಕ್ತರೀತಿಯಿಂದಪರಿಚ್ಛೇದ - ೧ ೩೧ ಕ್ಷಯೋದಾಹರಣೆಯಲ್ಲಿಯೇ ಒಂದು ಘಟೀವೃದ್ಧಿ. ಅದರ ಅರ್ಧವನ್ನು ಕೂಡಿಸಲಾಗಿ ೧೭||ಘಟೀ ಇದು ಅಪರಾಹ್ನ ಸಂಧಿಯಾಯಿತು. ಏವಂಚ ಹಿಂದಿನ ಮತ್ತು ಈಗಿನ ಮತಗಳಿಗೆ ಅತ್ಯಂತ ವಿರೋಧವಾಗುವದು. ವೃದ್ಧಿಕ್ಷಯಾದಿಗಳೆಲ್ಲ ವ್ಯತ್ಯಸ್ತಗಳಾಗುವವು. ಎರಡು ಘಟಿ ವೃದ್ಧಿಯಾಗಲೀ ಹ್ರಾಸವಾಗಲೀ ಸಂಭವಿಸುವದಿಲ್ಲವೆಂದು ಈ ಮತದ ಅಭಿಪ್ರಾಯವು, ಮುಂದಿನ ದಿನ “ಪರೇಹಿಘಟಿಕಾನೂನಾ ತಥೈವಾಭ್ಯಧಿಕಾಶ್ಚಯಾಃ” ಎಂಬಲ್ಲಿಯ ಬಹುವಚನವು “ಅಸಂಗತ “ವೆಂದು * ಪುರುಷಾರ್ಥಚಿಂತಾಮಣಿ"ಯಲ್ಲಿ ಹೇಳಿದೆ. ಹುಣ್ಣಿವೆಯಲ್ಲಿ ವಿಶೇಷ ಸಂಗವ ಕಾಲಾನಂತರ ೧೩ ಘಟಿಯಿಂದಾರಂಭಿಸಿ ಅಂದರೆ ೧೩-೧೪ ಘಟೀ ಇತ್ಯಾದಿಯಲ್ಲಿ ಅರ್ಧದಿಂದ (ದಿನಾರ್ಧ) ಕ್ಕಿಂತ ಮೊದಲು ಸಂಧಿಯಾದಲ್ಲಿ ಅದಕ್ಕೆ ಸದ್ಯಸ್ಕಾಲ ಪೂರ್ಣಿಮೆ"ಯನ್ನುವರು. ಆ ಸಂಧಿ ದಿನದಲ್ಲಿಯೇ ಅನ್ಯಾಧಾನ ಮತ್ತು ಯಾಗಗಳನ್ನು ಮಾಡತಕ್ಕದ್ದು. ಈ ಹುಣ್ಣಿವೆಯಲ್ಲಿ “ಸದ್ಯಸ್ಕಾಲತ್ವವು ವೈಕಲ್ಪಿಕವೆಂದು ಕೆಲವರು ಹೇಳುವರು. ಅಮಾವಾಸ್ಯೆಯಲ್ಲಿ ಎರಡು ಬೇರೆ ಬೇರೆ ಕಾಲಗಳಿರುತ್ತವೆ (ಹಾಲತ್ವ) ಹೊರತು ಸದಸ್ಕಾಲತ್ವವಿರುವದಿಲ್ಲ. ಹುಣ್ಣಿವ ಅಥವಾ ಅಮಾವಾಸ್ಯೆಯಲ್ಲಿ ಅಪರಾಹ್ನ ಸಂಧಿಯಲ್ಲಿ ಪ್ರತಿಪದಿಯ ನಾಲ್ಕನೇ ಭಾಗದಲ್ಲಿ ಯಾಗ ಮಾಡಿದ್ದರಿಂದ ದೋಷವಿಲ್ಲ. ಬೋಧಾಯನರಿಗೆ ಚಂದ್ರದರ್ಶನ ನಿಷೇಧ ಹೇಳಿದೆ. ಪ್ರತಿಪದಿಯಲ್ಲಿ ಮೂರು ಮುಹೂರ್ತಕ್ಕಿಂತ ಹೆಚ್ಚಿಗೆ ದ್ವಿತೀಯಾ ಪ್ರವೇಶವಾದರೂ ಚಂದ್ರದರ್ಶನವಾಗುವ ಸಂಭವವಿದೆ. ಕಾರಣ ಅಮವಾಸ್ಯೆಯ ಅಪರಾಹ್ನ ಸಂಧಿಯಲ್ಲಾದರೂ “ಯಾಗ"ವು ಚತುರ್ದಶಿಯಲ್ಲಿ ಅನ್ನಾಧಾನವು. ಅಮಾವಾಸ್ಯೆಯಲ್ಲಿ ಏಳು ಘಟೇ ಪರಿಮಿತವಾದ ಘಟಿಯು ಇಲ್ಲದಿರುವಾಗ ಚಂದ್ರದರ್ಶನವಾದರೂ ಬೋಧಾಯನಾದಿಗಳು ಪ್ರತಿಪದಿಯಲ್ಲೇ “ಇಷ್ಟಿ"ಮಾಡತಕ್ಕದ್ದು. ಆಶ್ವಲಾಯನ ಆಪಸ್ತಂಬಾದಿಗಳಿಗಂತೂ ಚಂದ್ರದರ್ಶನ ನಿರ್ಬಂಧವಿಲ್ಲದ್ದರಿಂದ ಪ್ರತಿಪದಿಯಲ್ಲಿಯೇ “ಇಷ್ಟಿಯು, ಸಂಧಿದಿನದಲ್ಲಿಯ ಇಷ್ಟಿಯನ್ನು ಪ್ರತಿಪದಿಯಲ್ಲೇ ಮುಗಿಸುವದು. ಹೊರತು ಪರ್ವದಿನದಲ್ಲಿ ಕೂಡದು. ಪರ್ವದಲ್ಲಿ ಯಾಗ ಸಮಾಪ್ತಿಯಾದರೆ ಪುನರ್ಯಾಗ ಮಾಡತಕ್ಕದ್ದು. ಹೀಗೆ ಸ್ಮಾರ್ತ ಕರ್ಮಗಳಲ್ಲಿಯೂ ತಿಳಿಯತಕ್ಕದ್ದು. ಪಾರ್ವಣ ಸ್ಥಾಲೀಪಾಕ ನಿರ್ಣಯ ಕೆಲವರು ಸ್ಮಾರ್ತಕಾರ್ಯದಲ್ಲಿ ಸ್ಥಾಲೀಪಾಕವನ್ನು ಪ್ರತಿಪದಿಯಲ್ಲಿಯೇ ಮುಗಿಸಬೇಕೆಂಬ ನಿಯಮವಿಲ್ಲ. ಪೂರ್ವಾಹ್ನದಲ್ಲಿಯೇ ಸ್ಥಾಲೀಪಾಕವನ್ನು ಮುಗಿಸಿ ಸಂಧಿಗಿಂತ ಮುಂದೆ ಪ್ರತಿಪದಿಯಲ್ಲಿ ಬ್ರಾಹ್ಮಣ ಭೋಜನವನ್ನು ಮಾತ್ರ ಮಾಡತಕ್ಕದ್ದು. “ಜಯಂತ"ನಾದರೂ ಸಂಧಿಗೆ ಸಮೀಪಿಸಿರುವ ಪ್ರಾತಃಕಾಲದಲ್ಲಿಯೇ ಸ್ಥಾಲೀಪಾಕವನ್ನು ಹೇಳಿದ್ದಾನೆ, ಎಂದು ವಿಶೇಷವನ್ನು . ಹೇಳುವರು. ಶೌತದಲ್ಲಿಯಾದರೂ ಬ್ರಾಹ್ಮಣ ಭೋಜನವನ್ನು ಮಾತ್ರ ಪ್ರತಿಪದೆಯಲ್ಲಿ ಮಾಡತಕ್ಕದ್ದು. ಉಳಿದ ತಂತ್ರಗಳನ್ನೆಲ್ಲಾ ಪೂರ್ವಾಹ್ನದಲ್ಲಿಯೇ ಮುಗಿಸತಕ್ಕದ್ದು, ಹೊರತು ಅದಕ್ಕೆ ಪ್ರತಿಪದಿಯ ಅಪೇಕ್ಷೆಯಿಲ್ಲ. ಹೀಗೆ ಪುರುಷಾರ್ಥ ಚಿಂತಾಮಣಿಯಲ್ಲಿ ಹೇಳಿದ. ಕಾತ್ಯಾಯನರಿಗೆ ಪೌರ್ಣಮಾಶೇಷಿ ನಿರ್ಣಯವು ಹಿಂದೆ ಹೇಳಿದಂತೆ ಸರ್ವ ಸಾಧಾರಣವು ಅದರಲ್ಲೇನೂ ವಿಶೇಷವಿಲ್ಲ. ಹೀಗೆ ನಿರ್ಣಯಸಿಂಧು ಮೊದಲಾದ ಬಹು ಗ್ರಂಥಸಮ್ಮತವು, ಇನ್ನು ಕೆಲವರು ೩೨ ಧರ್ಮಸಿಂಧು ಪೂರ್ವಾಹ್ನ ಸಂಧಿಯಾದಲ್ಲಿ ಸಂಧಿದಿನದಲ್ಲಿ ಅಷ್ಟಾಧಾನವು, ಮುಂದಿನ ದಿನದಲ್ಲಿ ಯಾಗವು ಹೀಗೆ ಹುಣ್ಣಿವೆಯ ವಿಷಯದಲ್ಲಿ ಕಾತೀಯರಿಗೆ ವಿಶೇಷವನ್ನು ಹೇಳುವರು. ಅಮವಾಸ್ಯೆಯಲ್ಲಿ ಕಾತೀಯರಿಗೆ ವಿಶೇಷ ಅಮಾವಾಸ್ಯೆಯ ವಿಷಯದಲ್ಲಿ ದಿವಾಪ್ರಮಾಣ ಘಟಿಗಳನ್ನು ಮೂರುಪಾಲು ಮಾಡಿದಲ್ಲಿ ಪ್ರಥಮಭಾಗವು “ಪೂರ್ವಾಹ” ವಾಗುವದು. ಎರಡನೇ ಭಾಗವು “ಮಧ್ಯಾಹ್ನ “ವು. ಮೂರನೇ ಭಾಗವು ಅಪರಾಹ್ನ’ವು ರಾತ್ರಿ ಸಂಧಿಯಲ್ಲಿ ಪ್ರತಿಪದಿಯಲ್ಲಿ ಚಂದ್ರದರ್ಶನವಾದರೂ ಇತರರಂತೆ ಕಾತೀಯರಾದರೂ ಸಂಧಿದಿನದಲ್ಲಿ ಪಿಂಡಪಿತೃಯಜ್ಞವನ್ನೂ, ಅನ್ನಾಧಾನವನ್ನೂ ಸಹ ಮಾಡಿ, ಪರದಿನದಲ್ಲಿ ಇಷ್ಟಿಯನ್ನು ಮಾಡತಕ್ಕದ್ದು, ಎಂಬುದು ನಿರ್ವಿವಾದವಾದದ್ದು. ಪೂರ್ವಾಹ್ನ ಹಾಗೂ ದಿನದ ದ್ವಿತೀಯಭಾಗವಾದ ಮಧ್ಯಾಹ್ನದಲ್ಲಿ ಸಂಧಿಯಾದರೆ, ಸಂಧಿ ಪೂರ್ವದಿನದಲ್ಲಿ ಅನ್ನಾಧಾನಮಾಡಿ, ಪಿಂಡಪಿತೃಯಜ್ಞಗಳನ್ನೂ ಮುಗಿಸಿ, ಸಂಧಿದಿನದಲ್ಲಿ ಇಷ್ಟಿಯನ್ನು ಮಾಡತಕ್ಕದ್ದು, ಚತುರ್ದಶೀದಿನದಲ್ಲಿ ಅಮಾವಾಸ್ಯೆಯ ದಿನದ ತೃತೀಯಭಾಗವಾದ ಅಪರಾಹ್ನದಲ್ಲಿ ಪೂರ್ಣವ್ಯಾಪ್ತಿಯಿದ್ದರೆ ಅಮಾಯುಕ್ತವಾದ ಅಪರಾಹ್ನದಲ್ಲಿ ಪಿಂಡಪಿತೃಯಜ್ಞವನ್ನು ಮಾಡತಕ್ಕದ್ದೆಂಬುದರಲ್ಲಿ ಸಂಶಯವಿಲ್ಲ. ಇನ್ನು ತೃತೀಯಾಭಾಗರೂಪವಾದ ಅಪರಾಹ್ನದ ಅಂತ್ಯಭಾಗದಲ್ಲಿ, ಅದೇ ಅಪರಾಹ್ನದ ಏಕದೇಶದಲ್ಲಿ ಅಮಾವಾಸ್ಯೆಯ ವ್ಯಾಪ್ತಿಯಿದ್ದರೆ ಪ್ರಾಪ್ತವಾದ ಅಮಾವಾಸ್ಯೆಯಲ್ಲಿ ಪಿಂಡಪಿತೃಯಜ್ಞ ಮಾಡತಕ್ಕದ್ದು. ಹೊರತು ಚತುರ್ದಶಿಯಲ್ಲಿಲ್ಲ. ಎಂಬುದೊಂದು ಪಕ್ಷವಿದೆ. ಅಪರಾಹ್ನ ಸಂಧಿಯಲ್ಲಿ ನಾಲ್ಕು ಪಕ್ಷಗಳು ಸಂಧಿದಿನದಲ್ಲಿಯೇ ದಿನದ ತೃತೀಯ ಭಾಗವಾದ ಅಪರಾಹ್ನದಲ್ಲಿ ಅಮಾವಾಸೆಯ ಪೂರ್ಣವ್ಯಾಪ್ತಿಯಿರುವಿಕೆ ಇದು ಒಂದು ಪಕ್ಷವು. ಹೇಗೆಂದರೆ ಚತುರ್ದಶೀ ೨೯/ ಅಮಾವಾಸ ೩೦/ ಪ್ರತಿಪದಿ ೨೯/ ದಿನಮಾನ ೩೦/ ಇಲ್ಲಿ ಸಂಧಿದಿನದಲ್ಲಿ ಅನ್ನಾಧಾನ ಪಿತೃಯಜ್ಞಗಳನ್ನು, ಪರದಿನದಲ್ಲಿ ಯಾಗವನ್ನು ಮಾಡತಕ್ಕದ್ದು. ಸಂಧಿಪೂರ್ವದಿನದಲ್ಲಿಯೇ ಹೇಳಿದ ಅಪರಾಹ್ನದಲ್ಲಿ ಅಮಾವಾಸ್ಯೆಯ ಪೂರ್ಣವ್ಯಾಪ್ತಿಯಿರುವಿಕೆ ಇದು ಎರಡನೇ ಪಕ್ಷ, ಹೇಗೆಂದರೆ ಚತುರ್ದಶೀ ೨೦/ ಅಮಾವಾಸೆ ೨೨/ಪ್ರತಿಪದಿ ೨೪/ದಿನಮಾನ ೩೦/ ಇಲ್ಲಿ ಸಂಧಿದಿನದ ಮುಂದಿನ ದಿನದಲ್ಲಿ ಮೂರು ಮುಹೂರ್ತ ರೂಪವಾದ ಪ್ರಾತಃಕಾಲದಲ್ಲಿ ಪ್ರತಿಪದಿಯ ಮೂರು ವಾದಗಳೊಳಗೆ ಬರುವ ಯಾಗಕಾಲವು ಲಭಿಸುವದರಿಂದ ಸಂಧಿಯಲ್ಲ. ಅನ್ನಾಧಾನ -ಪಿತೃಯಜ್ಞವನ್ನು ಮಾಡಿ ಪ್ರತಿಪದಿಯಲ್ಲಿ “ಇಷ್ಟಿಯನ್ನು ಮಾಡತಕ್ಕದ್ದು. ಹೀಗೆಂದು ‘ಕೌಸ್ತುಭ’ ಮತವು, ಬೇರೆ, ಕಲ ಆಧಾರದಂತೆಯೂ ಚತುರ್ದಶಿಯಲ್ಲಿ ಪಿಂಡ-ಪಿತೃಯಜ್ಞಗಳನ್ನು ಮಾಡಿ ಉಪವಾಸವನ್ನು ಮಾಡಿ ಸಂಧಿಯಲ್ಲಿ ಇಷ್ಟಿಯನ್ನು ಮಾಡತಕ್ಕದ್ದೆಂದು ಬೇರೆ ಒಂದು ಮತವು. ಈಗ ಮತ್ತೊಂದು ಎರಡನೇ ಪರೋದಾಹರಣೆಯು ಚತುರ್ದಶೀ ೧೮/ ಅಮಾವಾಸೆ ೧೮/ ಪ್ರತಿಪದಿ ೧೯/ದಿನಮಾನ ೨೭/ ಇಲ್ಲಿ ಪ್ರತಿಪದಿ ದಿನದಲ್ಲಿ ಬೆಳಿಗ್ಗೆ ಮೂರು ಪಾದಗಳೊಳಗೆ ಯಾಗಕಾಲವು ಲಭಿಸುವದಿಲ್ಲವಾದ್ದರಿಂದ ಕಾತ್ಯಾಯನರಿಗೆ -ಸಂಧಿ ದಿನದಲ್ಲಿಯೇ ಸರ್ವಸಮ್ಮತವಾದ “ಇಷ್ಟಿಯು”. ಪೂರ್ವದಿನದಲ್ಲಿ ಪಿಂಡ, ಪರಿಚ್ಛೇದ - ೧ ೩೩ ಪಿತೃಯಜ್ಞಪವಾಸಗಳನ್ನು ಮಾಡತಕ್ಕದ್ದು. ಇನ್ನು ಎರಡೂ ದಿನಗಳಲ್ಲಿ ಸಮತ್ವದಿಂದ ಅಥವಾ ವೈಷಮ್ಯದಿಂದ ಏಕದೇಶವ್ಯಾಪ್ತಿಯಿರುವಿಕೆ ಇದು ಮೂರನೇ ಪಕ್ಷವು, ಹೇಗೆಂದರೆ ಚತುರ್ದಶೀ ೨೫/ ಅಮಾವಾಸೆ ೨೫/ ಪ್ರತಿಪದಿ ೨೪/ ದಿನಮಾನ ೩೦/ ಇಲ್ಲಿ ಸಾಮ್ಯದಿಂದ “ಅಪರಾಹ್ನವ್ಯಾಪ್ತಿ” ಯಿದೆ. ಇಲ್ಲಿ ಕೌಸ್ತುಭಮತ ಮತ್ತು ಪರಮತೋಕ್ತರೀತಿಯಿಂದ ಎರಡೂವಿಧವಾಗಿ ನಿರ್ಣಯಿಸತಕ್ಕದ್ದು. ಹೇಗೆಂದರೆ ಚತುರ್ದಶೀ ೨೫ ಅಮಾವಾಸೆ ೨೦/ ಪ್ರತಿಪದಿ ೧/ ದಿನ ೨೭/ ಇದಾದರೂ ಸಾಮ್ಯದಿಂದ ಏಕದೇಶ ವ್ಯಾಪ್ತಿಯಾದದ್ದು. ಇಲ್ಲಿ ಕಾತೀಯರಿಗೆ ಸರ್ವಸಮ್ಮತದಂತೆ ಸಂಧಿ, ದಿನದಲ್ಲಿಯೇ ಇಷ್ಟಿಯು ಮತ್ತು ಪೂರ್ವದಿನ ಪಿಂಡಪಿತೃಯಜ್ಞಪವಾಸಗಳು. ಇನ್ನು ವೈಷಮ್ಯದಿಂದ ಏಕದೇಶವ್ಯಾಪ್ತಿ ಚತುರ್ದಶೀ ೨೫/ ಅಮಾ ೨೩/ ಪ್ರತಿಪದಿ ೨೩/ ದಿನ ೩೦/. ಇಲ್ಲಾದರೂ ಪೂರ್ವೋಕ್ತ ಎರಡೂ ಮತದಂತೆ ಎರಡು ವಿಧ ನಿರ್ಣಯಗಳು, ಹೇಗೆಂದರೆ ಚತುರ್ದಶೀ ೨೫/ ಅಮಾ ೨೨/ಪ್ರತಿಪದಿ ೧೮/ ದಿನ ೩೦/ ಇದಾದರೂ ವೈಷಮ್ಯದಿಂದ ಏಕದೇಶವ್ಯಾಪ್ತಿಯು, ಇಲ್ಲಾದರೂ ಕಾತೀಯ ಇಷ್ಟಿಯು ಸಂಧಿದಿನದಲ್ಲಾಗುವದು. ಹಾಗೂ ಚತುರ್ದಶಿಯಲ್ಲಿ ಪಿಂಡ ಪಿತೃಯಜ್ಞಪವಾಸಗಳು ಇನ್ನೊಂದು ಚತುರ್ದಶಿ ೨೫/ ಅಮಾ ೨೭/ ಪ್ರತಿಪದಿ ೨೯/ ದಿನ ೩೦/ ಇಲ್ಲಿ ಸಂಧಿ ದಿನದಲ್ಲಿ ಅನ್ವಾಧಾನ ಪಿತೃಯಾಗಗಳ, ಪ್ರತಿಪದಿಯಲ್ಲಿ ಇಷ್ಟಿಯು. ಇನ್ನು ಸಂಧಿ ದಿನದಲ್ಲಿಯೇ ಏಕದೇಶವ್ಯಾಪ್ತಿಯೆಂಬುದೊಂದು ನಾಲ್ಕನೇ ಪಕ್ಷವು, ಹೇಗೆಂದರೆ ಚತುರ್ದಶೀ ೩೧/ ಅಮಾ ೨೬/ ಪ್ರತಿಪದಿ ೨೩/ ದಿನ ೩೦. ಇನ್ನೂ ಹೇಗೆಂದರೆ ಚತುರ್ದಶೀ ೨೮|ಅಮಾ ೨೨| ಪ್ರತಿಪದಿಯು ೧೭/ ದಿನಮಾನ ೨೭/ ಇಲ್ಲಿ ಎರಡೂ ಕಡೆಗಳಲ್ಲಿ ಸಂಧಿ ದಿನದಲ್ಲಿಯೇ ಪಿಂಡ ಪಿತೃಯಜ್ಞ ಅನ್ನಾಧಾನಗಳು, ಯಾಗವನ್ನಾದರೋ ಮುಂದಿನ ದಿನವಾದ ಪ್ರತಿಪದಿಯಲ್ಲಿ ಮಾಡತಕ್ಕದ್ದು. ಏವಂಚ ಕಾತ್ಯಾಯನ ಮತದಲ್ಲಿಯೂ ಎಲ್ಲ ಉದಾಹರಣೆಗಳಲ್ಲಿ ಚಂದ್ರದರ್ಶನ ನಿಷೇಧ ಪ್ರತಿಪಾಲನೆಯು ಸಂಭವಿಸುವದಿಲ್ಲ. ಆದರೆ ಕೆಲಕಡೆಯಲ್ಲಿ ನಿಷೇಧವನ್ನು ಆದರಿಸುವದರಿಂದ ಹಿಂದಿನ ದಿನಗಳಲ್ಲಿ ಯಾಗಾದಿಗಳು ಮಾಡಲ್ಪಡುವವು. ಕೆಲಕಡೆಯಲ್ಲಿ ಚಂದ್ರದರ್ಶನವುಳ್ಳ ದಿನದಲ್ಲಿಯೇ ಮಾಡಲ್ಪಡುವವು. ಹೀಗೆ ಪಿಂಡಪಿತೃಯಜ್ಞಗಳೂ ಸಹ ಕರ್ತವ್ಯಗಳು. ದರ್ಶ ಶ್ರಾದ್ಧದ ಸಲುವಾಗಿ ಅಮಾವಾಸ್ಯೆಯ ನಿರ್ಣಯವನ್ನು ಮುಂದೆ ಪೃಥಕ್ ಆಗಿ ಹೇಳುವವು. ಸಾಮಗರ ಇಷ್ಟ ನಿರ್ಣಯ ಹುಣ್ಣಿವೆಯ ವಿಷಯದಲ್ಲಿ ಸರ್ವಸಾಧಾರಣ ಮೊದಲು ಹೇಳಿದಂತೆಯೇ ನಿರ್ಣಯವು ಅಮಾವಾಸೆಯಲ್ಲಾದರೋ ರಾತ್ರಿಸಂಧಿಯಲ್ಲಿ ಚಂದ್ರದರ್ಶನವಾದರೂ ಪ್ರತಿಪದಿಯಲ್ಲಿಯೇ “ಯಾಗ” ಮಾಡತಕ್ಕದ್ದು. ಅಪರಾಹ್ನ ಸಂಧಿಯಲ್ಲಾದರೆ ಪ್ರಾತಃಕಾಲದಲ್ಲಿ ತ್ರಿಮುಹೂರ್ತರೂಪವಾದ ಪ್ರತಿಪದಿಯ ಆದಿಪಾದತ್ರಯರೂಪವಾದ “ಯಾಗಕಾಲವು ಲಭಿಸಿದಲ್ಲಿ ಪ್ರತಿಪದಿಯಲ್ಲಿ ಚಂದ್ರದರ್ಶನವಾದರೂ ಯಾಗವನ್ನು ಮಾಡತಕ್ಕದ್ದು. ಮತ್ತು ಸಂಧಿದಿನದಲ್ಲಿ ಉಪವಾಸ, ಪಿಂಡ- ಪಿತೃಯಜ್ಞಗಳನ್ನು ಮಾಡತಕ್ಕದ್ದು. ಹೇಳಿದ ಯಾಗಕಾಲವು ಸಿಗದಿದ್ದಲ್ಲಿ ಸಂಧಿ ದಿನದಲ್ಲಿ “ಯಾಗ” ಮಾಡತಕ್ಕದ್ದು, ಪೂರ್ವದಿನದಲ್ಲಿ ಅಂದರೆ ಚತುರ್ದಶಿಯಲ್ಲಿ ಪಿತೃಯಜ್ಞ-ಉಪವಾಸಗಳನ್ನು ಮಾಡತಕ್ಕದ್ದು. ಏವಂಚ, ಸಾಮಗರಾದರೂ ಕಾತೀಯರಂತೆ ಚಂದ್ರದರ್ಶನ ನಿಷೇಧವನ್ನು ಯಥಾಸಂಭವವಾಗಿ ಪಾಲಿಸತಕ್ಕದ್ದು. ಹೀಗೆ ಸಾಮಗರ ನಿರ್ಣಯವು ೩೪ ಧರ್ಮಸಿಂಧು ಪಿಂಡಪಿತೃಯಜ್ಞ ಕಾಲನಿರ್ಣಯ ಅದರಲ್ಲಿ ಅಶ್ವಲಾಯನರು ಯಾವ ಅಹೋರಾತ್ರಿಯಲ್ಲಿ ಅಮಾವಾಸ, ಪ್ರತಿಪದಿಗಳ ಸಂಧಿಯಾಗುವದೋ ಆ ದಿನದ ಅಪರಾಹ್ನದಲ್ಲಿ ಅಂದರೆ ದಿನಮಾನವನ್ನು ಐದುಪಾಲು ಮಾಡಿದ ನಾಲ್ಕನೇ ಭಾಗದಲ್ಲಿ ಪಿಂಡ ಪಿತೃಯಜ್ಞವನ್ನು ಮಾಡತಕ್ಕದ್ದು. ಅದಾದರೂ ಅಪರಾಹ್ನ ಸಂಧಿಯಲ್ಲಿ ಅನ್ನಾಧಾನ ದಿನದಲ್ಲೇ ಆಗುವದು. ಮಧ್ಯಾಹ್ನದಲ್ಲಿ ಅಥವಾ ಪೂರ್ವಾಹ್ನದಲ್ಲಿ ಸಂಧಿಯಾದರೆ ಯಾಗದದಿನದಂದು, ಯಾಗಕ್ಕಿಂತ ಮುಂದೆ ಅಪರಾಹ್ನದಲ್ಲಿ ಮಾಡತಕ್ಕದ್ದು. ಅಹೋರಾತ್ರ ಸಂಧಿಯಲ್ಲಿ ತಿಥಿ ಸಂಧಿಯಾದರೆ ಆಗ ಅಷ್ಟಾಧಾನದಿನದಲ್ಲೇ ಪಿಂಡ ಪಿತೃ ಯಜ್ಞವನ್ನು ಮಾಡತಕ್ಕದ್ದು. ಹೀಗೆ ಆಪಸ್ತಂಬ, ಹಿರಣ್ಯಕೇಶಿ ಮತಾನುಸಾರಿಗಳೂ ಸಂಧಿದಿನದಲ್ಲಿಯೇ ಪಿತೃಯಜ್ಞವನ್ನು ಮಾಡತಕ್ಕದ್ದು. ಅದನ್ನು ಅಪರಾಹ್ನದಲ್ಲಿ ನಾಲ್ಕನೇ ಭಾಗ ಅಥವಾ ಒಂಭತ್ತು ಪಾಲು ಮಾಡಿದ ದಿನದ ಏಳನೇ ಭಾಗ, ಸಾಂಖ್ಯಾಯನ, ಕಾತ್ಕಾಯನ, ಮತ್ತು ಸಾಮಗರು ಅನ್ವಾಧಾನ ದಿನದಲ್ಲೇ ಪಿಂಡ ಪಿತೃಯಜ್ಞವನ್ನು ಮಾಡತಕ್ಕದ್ದೆಂದು ಮೊದಲೇ ಹೇಳಿದೆ. ಅದನ್ನು ಮೂರು ಪಾಲು ಮಾಡಿದ ದಿನದ ಮೂರನೇ ಭಾಗರೂಪವಾದ ಅಪರಾಹ್ನದಲ್ಲಿ ಮಾಡತಕ್ಕದ್ದು. ಅಗ್ನಿಹೋತ್ರಿಗಳಾದ ಋಗ್ವದಿಗಳಿಗೆ ದರ್ಶಶ್ರಾದ್ದ ಪಿಂಡ ಪಿತೃಯಜ್ಞಗಳು ಒಂದೇ ದಿನ ಪ್ರಾಪ್ತವಾದರೆ “ವೃತಿಷಂಗದಿಂದ ಅನುಷ್ಠಾನ ಮಾಡತಕ್ಕದ್ದು. “ವೃತಿಷಂಗ"ವೆಂದರೆ ಎರಡನ್ನೂ ಹೊಂದಿಸಿ ಮಾಡತಕ್ಕದ್ದು. (ಕೂಡಿಯೇ ಮಾಡುವದು) ಖಂಡ ಪರ್ವದಲ್ಲಾದರೋ ಪೂರ್ವದಿನದಲ್ಲಿ ಕೇವಲ ದರ್ಶ ಶ್ರಾದ್ಧ. ವರದಿನದಲ್ಲಿ ಕೇವಲ ಪಿಂಡಪಿತೃಯಜ್ಞ ಮಾಡತಕ್ಕದ್ದು. ಶೌತಾಗ್ನಿಯುಳ್ಳವರು ಕೇವಲ ಪಿಂಡಪಿತೃಯಜ್ಞವನ್ನೇ ದಕ್ಷಿಣಾಗ್ನಿಯಲ್ಲಿ ಮಾಡತಕ್ಕದ್ದು, ಹೊರತು “ವೃತಿಷಂಗ"ದಿಂದ ಮಾಡತಕ್ಕದ್ದಲ್ಲ. ಶೌತಾಗ್ನಿಯುಳ್ಳವರಿಗೆ ಪೂರ್ಣವಾದ ಅಮಾವಾಸೆಯಲ್ಲಿ ಕ್ರಮವು ಹೀಗಿದೆ. ಏನೆಂದರೆ -ಆದಿಯಲ್ಲಿ ಅನ್ವಾಧಾನವು, ಆಮೇಲೆ ವೈಶ್ವದೇವ, ನಂತರ ಪಿತೃಯಜ್ಞ ಅನಂತರ ದರ್ಶಶ್ರಾದ್ಧ ಹೀಗೆ ಕ್ರಮವು ಜೀವತ್ಯಕನಾದ (ತಂದೆಯಿದ್ದವ) ಅಗ್ನಿಹೋತ್ರಿಯು ಹೋಮಾಂತದಲ್ಲಾಗಲೀ ತಂದೆಯ ಪಿತ್ರಾದಿತ್ರಯದ ಉದ್ದೇಶದಿಂದ ಪಿಂಡಸಹಿತ ಪಿಂಡ ಪಿತೃಯಜ್ಞವನ್ನು ಮಾಡತಕ್ಕದ್ದು. ಅಥವಾ ತಂದೆಯು ಬದುಕಿದ್ದವನು ಪಿಂಡಪಿತೃಯಜ್ಞವನ್ನಾರಂಭಿಸಲೇಬಾರದು. ಯಾಗಲೋಪವಾದಲ್ಲಿ “ಪಾದಕೃಚ್ಛ ಪ್ರಾಯಶ್ಚಿತ್ತವು. ಎರಡು ಇಷ್ಟಿಗಳು ಲೋಪವಾದಲ್ಲಿ “ಅರ್ಧಕೃಚ್ಛ"ವು, ಮೂರು ಇಷ್ಟಿಗಳ ಲೋಪವಾದಲ್ಲಿ ಅಗ್ನಿಯು ನಷ್ಟವಾಗುವದರಿಂದ ಪುನರಾಧಾನ ಮಾಡತಕ್ಕದ್ದು. ಪಿಂಡ ಪಿತೃಯಜ್ಞಲೋಪವಾದಲ್ಲಿ “ವೈಶ್ವಾನರೇಷ್ಟಿ"ಯು ಪ್ರಾಯಶ್ಚಿತ್ತವು. ಅಥವಾ “ಇಷ್ಟಿ"ಯ ಸಲುವಾಗಿ (ಬದಲಾಗಿ) “ಸಪ್ತ ಹೋತಾರಂ ಹೋಷ್ಮಾಮಿ” ಎಂದು ಸಂಕಲ್ಪಿಸಿ, ಇದೇ ಮಂತ್ರದಿಂದ ಚತುರ್ಗಹೀತಾಜ್ಯದಿಂದ ಪೂರ್ಣಾಹುತಿ ಹೋಮಮಾಡತಕ್ಕದ್ದು. ಇಲ್ಲಿಗೆ ಪಿಂಡಪಿತೃಯಜ್ಞ ನಿರ್ಣಯೋದ್ದೇಶವು ಮುಗಿಯಿತು. ದರ್ಶಶ್ರಾದ್ಧ ನಿರ್ಣಯ ಅಮಾವಾಸ್ಯೆಯಲ್ಲಿ ಮಾಡತಕ್ಕ ದರ್ಶ ಶ್ರಾದ್ಧದಲ್ಲಿ ದಿನದ ಪಂಚಧಾ ವಿಭಾಗ ಮಾಡಿದ ನಾಲ್ಕನೇಭಾಗ ರೂಪವಾದ ಅಪರಾಹ್ನ ವ್ಯಾಪಿನಿಯಾದ ಅಮಾವಾಸೆಯು ಗ್ರಾಹ್ಯವು ಪರಿಚ್ಛೇದ - ೧ 8.99 ಪೂರ್ವದಿನದಲ್ಲಿ ಪೂರ್ಣ ಅಪರಾಷ್ಟ್ರವ್ಯಾಪ್ತಿಯಿದ್ದರೆ ಪೂರ್ವವು ಗ್ರಾಹ್ಯವು, ಪರದಿನದಲ್ಲಿ ಪೂರ್ಣವ್ಯಾಪ್ತಿಯಿದ್ದರೆ ಪರವು ಗ್ರಾಹ್ಯವು ಎರಡೂ ದಿನ ಅಪರಾಹ್ನದಲ್ಲಿ ವೈಷಮ್ಯದಿಂದ ಅಥವಾ ಏಕದೇಶಿತ್ವದಿಂದ ವ್ಯಾಪ್ತಿಯಾದಾಗ ಯಾವ ದಿನದಲ್ಲಿ ಹೆಚ್ಚು ವ್ಯಾಪ್ತಿಯೋ ಆ ದಿನವು ಗ್ರಾಹ್ಯವು ಎರಡೂ ದಿನ ಸರಿಸಮನಾಗಿ ಏಕದೇಶ ವ್ಯಾಪ್ತಿಯಿದ್ದರೆ ತಿಥಿಕ್ಷಯವಾದಲ್ಲಿ ಪೂರ್ವ ತಿಥಿವೃದ್ಧಿ - ಅಥವಾ ಸಾಮ್ಯವಿದ್ದಲ್ಲಿ ಪರದಿನವು ಗ್ರಾಹ್ಯವು ಸಮವ್ಯಾಪ್ತಿಯಲ್ಲಿ ತಿಥಿವೃದ್ಧಿ, ಕ್ಷಯ, ಸಾಮ್ಯ, ಇವುಗಳಲ್ಲಿ ಉದಾಹರಣೆ: ಚತುರ್ದಶೀ ೧೯/ ಅಮಾ ೨೩/ದಿನಮಾನ ೩೦/ ಇಲ್ಲಿ ಎರಡೂ ಕಡೆಗೆ ೫ ಘಟಿ ಸಮನಾಗಿ ಏಕದೇಶ ವ್ಯಾಪ್ತಗಳಾಗಿವೆ. ಚತುರ್ದಶಿಗಿಂತ ಅಮಾವಾಸೆಯು ೪ ಘಟೀ ವೃದ್ಧಿಯಾಗಿದೆ. ಆದ್ದರಿಂದ ಮುಂದಿನದೇ ಗ್ರಾಹ್ಯವು. ಹಾಗೆಯೇ ಚತುರ್ದಶೀ ೨೩/ ಅಮಾವಾಸ್ಯೆ ೧೯ ಇಲ್ಲಿ ಒಂದುಗಳಿಗೆ ಸಾಮ್ಯದಿಂದ ಏಕದೇಶ ವ್ಯಾಪ್ತವಾಗಿದೆ. ೪ ಘಟಿಯಿಂದ ಅಮಾವಾಸ್ಯೆಯು ಕ್ಷೀಣವಾಗಿದೆ. ಆದ್ದರಿಂದ ಪೂರ್ವದಿನವು ಗ್ರಾಹ್ಯವು. ಇನ್ನು ಚತುರ್ದಶೀ ೨೧/ ಅಮಾ ೨೧/ ಇಲ್ಲಿ ಎರಡೂ ದಿನ ಮೂರು ಗಳಿಗೆಗಳಿಂದ ಅಂಶತಃ ಸಮವ್ಯಾಪ್ತಿ ಹಾಗೂ ತಿಥಿವೃದ್ಧಿಯಾದ್ದರಿಂದ ಪರವು ಗ್ರಾಹ್ಯವು ಎರಡೂ ದಿನ ಅಪರಾಹ್ನ ವ್ಯಾಪ್ತಿಯಿಲ್ಲದಿರುವಾಗ ಆಗ ಗೃಹಾಗ್ನಿ (ಔಪಸನಾಗ್ನಿ)ಯುಳ್ಳವರು ಹಾಗೂ ಶೌತಾಗ್ನಿಯುಳ್ಳವರು ಸಿನೀವಾಲೀ ಸಂಜ್ಞಕ - ಚತುರ್ದಶೀ ಮಿಶ್ರವಾದ ಪೂರ್ವದಿನವನ್ನು ಗ್ರಾಹ್ಯ ಮಾಡತಕ್ಕದ್ದು. ನಿರಗ್ನಿಗಳೂ, ಸ್ತ್ರೀ ಶೂದ್ರರೂ “ಕುಹೂ” ಸಂಜ್ಞಕವಾದ ಪ್ರತಿಪದಿ ಮಿಶ್ರವಾದ ಅಪರ ದಿನವನ್ನು ಗ್ರಹಿಸತಕ್ಕದ್ದು. ಹೀಗೆ ಮಾಧವಾಚಾರ್ಯ ಸಮ್ಮತವಾದ ದರ್ಶನಿರ್ಣಯವನ್ನು ಪ್ರಾಯಶಃ ಸರ್ವಶಿಷ್ಟರೂ ಆದರಿಸುತ್ತಾರೆ. “ಪುರುಷಾರ್ಥಚಿಂತಾಮಣಿ"ಯಲ್ಲಾದರೋ ಸಾಗ್ನಿಕರಾದ ಬಹ್ಮಚರು ಹಾಗೂ ತೈತ್ತರೀಯರು ಅಪರಾಹ್ನ ವ್ಯಾಪ್ತಿಯಿಲ್ಲದಿದ್ದರೂ ಇದಿನಕ್ಕಿಂತ ಪೂರ್ವ ದಿನದಲ್ಲಿಯೇ ದರ್ಶ ಶ್ರಾದ್ಧವನ್ನು ಮಾಡತಕ್ಕದ್ದು. ಹಾಗೆಯೇ ಎರಡೂ ದಿನ ಅಪರಾಹ್ನ ಪೂರ್ಣ ವ್ಯಾಪ್ತಿಯಿದ್ದರೆ, ಪರದಲ್ಲಿಯೇ “ದರ್ಶಶ್ರಾದ್ಧ"ವನ್ನು ಮಾಡತಕ್ಕದ್ದು. ಏಕದೇಶದಿಂದ ಅಪರಾಹ್ನ ವ್ಯಾಪ್ತಿಯಾದರೆ, ಪ್ರತಿಪದಿಯ ವೃದ್ಧಿಯ ನಿಮಿತ್ತದಿಂದ ಪ್ರತಿಪದಿಯ ಇಷ್ಟಿಯಾಗುವ ಪ್ರಸಂಗ ಬಂದರೆ ಮುಂದಿನ ಅಮಾವಾಸ್ಯೆಯಲ್ಲಿಯೇ ದರ್ಶಶ್ರಾದ್ಧ ಮಾಡತಕ್ಕದ್ದು. ದ್ವಿತೀಯ ದಿನದಲ್ಲೇ ಅಪರಾಹ್ನ ವ್ಯಾಪ್ತಿಯಾಗಿದ್ದು, ಪ್ರತಿಪದಿಯ ಕ್ಷಯವಶದಿಂದ ದರ್ಶದಿನದಲ್ಲಿಯೇ “ಇಷ್ಟಿ"ಯು ಪ್ರಾಪ್ತವಾದರೆ ಆಗ ಬಹಚರಿಗೆ “ಸಿನೀವಾಲಿ”, ತೈತ್ತಿರೀಯರಿಗೆ “ಕುಹೂ” ಇವು ಗ್ರಾಹ್ಮಗಳು. ಸಾಮಗರಿಗೆ ವಿಕಲ್ಪದಿಂದ ಎರಡೂ ಗ್ರಾಹ್ಯಗಳು, ಪೂರ್ವದಿನ ಅಪರಾಹ್ನದಲ್ಲಿ ಅಧಿಕವ್ಯಾಪ್ತಿಯಿದ್ದಾಗ ಪರದಿನ ಅಲ್ಪವ್ಯಾಪ್ತಿಯಿದ್ದಾಗ, ಸಾಮಗರಿಗೆ ಪೂರ್ವವು ತೈತ್ತಿರೀಯರಿಗೆ ಪರವು ಎರಡೂ ಕಡೆಗಳಲ್ಲಿ ಸ್ಪರ್ಶವಿಲ್ಲದಿದ್ದರೂ ಸಾಮಗರಿಗೆ ಪೂರ್ವವು, ತೈತ್ತಿರೀಯರಿಗೆ ಪರದಿನವು, ಇತ್ಯಾದಿ ಹೇಳಲಾಗಿದೆ. ಇನ್ನು “ಸಂಪಾತ” ಅಂದರೆ ಒಂದಕ್ಕಿಂತ ಹೆಚ್ಚು ಕರ್ಮಗಳು ಒಂದೇ ಕಾಲದಲ್ಲಿ ಪ್ರಾಪ್ತವಾಗುವಿಕೆಯಲ್ಲಿ, ಹೇಗೆಂದರೆ - ಅಮಾವಾಸೆಯಲ್ಲಿ ದರ್ಶಶ್ರಾದ್ಧ ವರ್ಷಶ್ರಾದ್ಧ,

  • ದರ್ಶಶ್ರಾದ್ಧ -ಮಾಸಿಕಶ್ರಾದ್ಧ, ದರ್ಶಶ್ರಾದ್ಧ ಉದಕುಂಭಶ್ರಾದ್ಧ ಪ್ರಾಪ್ತವಾದಲ್ಲಿ ದೇವತಾಭೇದವಿರುವ ಕಾರಣ ಎರಡು ಶ್ರಾದ್ಯಗಳನ್ನು ಮಾಡತಕ್ಕದ್ದು. ಆದಿಯಲ್ಲಿ ಮಾಸಿಕ ಅಬ್ಬಿ ಕಾದಿ ಶ್ರಾದ್ಧವನ್ನು ಮಾಡಿ, ಬೇರೆ ಪಾಕದಿಂದ ದರ್ಶಶ್ರಾದ್ಧವನ್ನು ಮಾಡತಕ್ಕದ್ದು. ೩೬ ಧರ್ಮಸಿಂಧು ವೈಶ್ವದೇವವನ್ನು ಆಬ್ಲಿ ಕಾದಿಶ್ರಾದ್ಧ ಶೇಷಾನ್ನದಿಂದಾಗಲೀ, ಪೃಥಕ್ ಪಾಕದಿಂದಾಗಲೀ, ದರ್ಶಶ್ರಾದ್ಧಕ್ಕಿಂತ ಮೊದಲು ಮಾಡತಕ್ಕದ್ದು. ಆಹಿತಾಗ್ನಿ ಯಾದವನು ವೈಶ್ವದೇವವನ್ನೂ, ಪಿಂಡಪಿತೃ ಯಜ್ಞವನ್ನೂ ಮಾಡಿ ನಂತರ ಅಬ್ಬಕವನ್ನು ಮಾಡತಕ್ಕದ್ದು. ದರ್ಶಶ್ರಾದ್ಧವನ್ನು ಅನುಪನೀತರೂ, ವಿಧುರರೂ, ಪ್ರವಾಸದಲ್ಲಿರುವವರಾದರೂ ಮಾಡತಕ್ಕದ್ದು. ಅಮಾಶ್ರಾದ್ಧ ಅತಿಕ್ರಮವಾದರೆ “ನ್ಯೂಷುವಾಚಂ” ಎಂಬ ಋಕ್ಕನ್ನು ನೂರೆಂಟಾವರ್ತಿ ಜಪಿಸತಕ್ಕದ್ದು. ಹೀಗೆ ದರ್ಶನಿರ್ಣಯೋದ್ದೇಶವು. ಇಷ್ಟಾದಿ ಪ್ರಾರಂಭ ನಿರ್ಣಯ ಇಷ್ಟಿ, ಸ್ಥಾಲೀಪಾಕ ಇವುಗಳನ್ನು ಹುಣ್ಣಿವೆಯಲ್ಲಿ ಪ್ರಾರಂಭಿಸತಕ್ಕದ್ದು, ಅಮಾವಾಸ್ಯೆಯಲ್ಲಲ್ಲ. ಆಧಾನ ಗೃಹ ಪ್ರವೇಶನೀಯ ಹೋಮಾನಂತರವೇ (ಸದ) ದರ್ಶ ಪೌರ್ಣಮಾಸಾರಂಭವನ್ನು ಮಾಡುವದಾದಲ್ಲಿ ಮಲಮಾಸ, ಪುಷ್ಯಮಾಸ, ಶುಕ್ರಾಸ್ತ್ರ ಇತ್ಯಾದಿ ದೋಷವಿರುವದಿಲ್ಲ. ಆ ಕಾಲವು ಅತಿಕ್ರಮವಾದಲ್ಲಿ ಶುದ್ಧ ಮಾಸಾದಿಗಳನ್ನು ನಿರೀಕ್ಷಿಸತಕ್ಕದ್ದು. ಎಂದು ಕೆಲವರು ಹೇಳುವರು. ಸರ್ವಥಾ ಶುದ್ಧ ಕಾಲದಲ್ಲಿಯೇ “ಆರಂಭ’ವು ಎಂದು ಕೆಲವರು ಹೇಳುವರು. ಹೀಗೆ ಇಷ್ಟಾದಿ ಪ್ರಾರಂಭನಿರ್ಣಯೋದ್ದೇಶವು. ವಿಕೃತಿ ಕಾಲವು ವಿಕೃತೀಷ್ಟಗಳಲ್ಲಿ -ಮೂರು ವಿಧಗಳಿವೆ. ನಿತ್ಯಗಳಾದ ಆಗ್ರಋಣ, ಚಾತುರ್ಮಾಸ್ಯಾದಿಗಳು (೧) ನೈಮಿತ್ತಿಕಗಳಾದ ಜಾತೇಷ್ಮಾದಿಗಳು (೨) ಕಾಮ್ಯಗಳಾದ “ಸೌರ್ಯಾ"ದಿಗಳು (೩)ಇವುಗಳೇ ಪುರುಷಾರ್ಥಗಳು, (ಧರ್ಮಾರ್ಥ ಕಾಮಮೋಕ್ಷ-ಸಾಧಕಗಳು) ಯಜ್ಞಾಂಗಭೂತಗಳಾದ “ವಿಕೃತಿ ಗಳಾದರೂ ಎರಡು ವಿಧವಾಗಿವೆ. ನಿತ್ಯ ಮತ್ತು ನೈಮಿತ್ತಿಕ ಹೀಗೆ ಎರಡುವಿಧ. ವಿಕೃತಿಗಳಲ್ಲಿ “ಸಸ್ಕಾಲತ್ವ” “ಹಕಾಲತ್ವ” ಗಳೆಂಬೆರಡರಲ್ಲಿ ವಿಕಲ್ಪವು ಪರ್ವದಿನದಲ್ಲಿ ಅಥವಾ ಶುಕ್ಲಪಕ್ಷಗತಗಳಾದ ದೇವನಕ್ಷತ್ರಗಳಲ್ಲಿ ಯಾವುದಾದರೊಂದರಲ್ಲಿ ಆಗತಕ್ಕದ್ದು. ಹೀಗೆ ವಿಕಲ್ಪವು. ಇನ್ನು ಪರ್ವದಲ್ಲಿ ಮಾಡುವಪಕ್ಷದಲ್ಲಿ ಅಪರಾಹ್ವಾದಿ ಸಂಧಿಯಿದ್ದರೆ ಸಂಧಿದಿನದಲ್ಲಿ “ಸದ್ಯಸ್ಕಾಲಿಕ ಅಥವಾ ದೈಹಕಾಲಿಕವಾದ ವಿಕೃತಿಯನ್ನು ಮಾಡಿ ಪ್ರಕೃತಿಯ ಅನ್ನಾಧಾನವನ್ನು ಮಾಡತಕ್ಕದ್ದು. ಮಧ್ಯಾಹ್ನದಲ್ಲಾಗಲೀ ಪೂರ್ವಾಹ್ನದಲ್ಲಾಗಲೀ ಸಂಧಿಯಾದರೆ ಸಂಧಿ ದಿನದಲ್ಲಿ ಪ್ರಕೃತಿಯನ್ನು ಮುಗಿಸಿ ಸದ್ಯಸ್ಕಾಲಿಕ ವಿಕೃತಿಯನ್ನು ಮಾಡತಕ್ಕದ್ದು. ಕೃತ್ತಿಕಾದಿ ವಿಶಾಖಾಂತ ೧೪ ನಕ್ಷತ್ರಗಳು ದೇವನಕ್ಷತ್ರಗಳೆಂದು ಹೇಳಲ್ಪಡುತ್ತವೆ. ಅನ್ಸಾರಂಭಣೇಷ್ಟಿಯನ್ನು ಚತುರ್ದಶಿಯಲ್ಲಿ ಮಾಡತಕ್ಕದ್ದು. ಹೀಗೆ ವಿಕೃತಿಸಾಮಾನ್ಯ ನಿರ್ಣಯೋದ್ದೇಶವು. ಪಶುಯಾಗವನ್ನು ವರ್ಷಋತುವಿನಲ್ಲಿ ಶ್ರಾವಣಾದಿ ನಾಲ್ಕು ಪರ್ವಗಳೊಳಗ ಯಾವದಾದರೊಂದು ಪರ್ವದಲ್ಲಿ ದಕ್ಷಿಣಾಯನ ಅಥವಾ ಉತ್ತರಾಯಣ ದಿನಗಳಲ್ಲಾಗಲಿ! ಮಾಡತಕ್ಕದ್ದು. ಖಂಡ ಪರ್ವ ಬಂದಲ್ಲಿ ವಿಕೃತಿ ಸಾಮಾನ್ನೋಕ್ತ ಪರ್ವದಂತೆಯೇ ನಿರ್ಣಯವು ಹೀಗೆ ಪಶುಯಾಗೋದ್ದೇಶವು. ಚಾತುರ್ಮಾಸ್ಯ ಕಾಲವು ಆ ಪ್ರಯೋಗದಲ್ಲಿ ನಾಲ್ಕು ಪಕ್ಷಗಳು, ಫಾಲ್ಗುಣ ಅಥವಾ ಚೈತ್ರ ಹುಣ್ಣಿವೆಯಲ್ಲಿ ಪರಿಚ್ಛೇದ - ೧ 22 Н ವೈಶ್ವದೇವ ಪರ್ವವನ್ನು ಮಾಡಿ, ಆಷಾಢಾದಿ ನಾಲ್ಕು ನಾಲ್ಕು ಮಾಸಗಳಲ್ಲಿ ಒಂದೊಂದು ಪರ್ವದಂತ ಯಾವಜೀವ ಅನುಷ್ಠಾನ ಮಾಡುವದು; ಇದಕ್ಕೆ “ಯಾವಜೀವ ಪಕ್ಷ” ಎನ್ನುವರು. ಹೇಳಿದ ರೀತಿಯಂತೆ ಸಂವತ್ಸರ ಪರ್ಯಂತ ಅನುಷ್ಠಾನ ಮಾಡಿ ಸವನೇಷ್ಟಿಯಿಂದ ಅಥವಾ ಪಶುಯಾಗದಿಂದ ಇಲ್ಲವೇ ಸೋಮಯಾಗದಿಂದ ಮುಗಿಸುವದು, ಇದಕ್ಕೆ “ಸಾಂವತ್ಸರ ಪಕ್ಷ ವೆನ್ನುವರು. ಪ್ರಥಮ ದಿನದಲ್ಲಿ ವೈಶ್ವದೇವಪರ್ವ, ನಾಲ್ಕನೇ ದಿನದಲ್ಲಿ ವರುಣ ಪ್ರಘಾಸ ಪರ್ವ, ಎಂಟು ಒಂಭತ್ತನೇ ದಿನಗಳಲ್ಲಿ ಸಾಕಮೇಧ ಪರ್ವ, ಹನ್ನೆರಡನೇ ದಿನದಲ್ಲಿ ಶುನಾಸೀರೀಯ ಪರ್ವ, ಈ ರೀತಿಯ ಅನುಷ್ಠಾನಕ್ಕೆ “ದ್ವಾದಶಾಹಪಕ್ಷ’ ವೆನ್ನುವರು. ಐದು ದಿನಗಳಿಂದ ಸಮಾಪ್ತಿಯಾಗುವ ಪ್ರಸಂಗದಲ್ಲಿ “ಯಥಾ ಪ್ರಯೋಗ ಪಕ್ಷ” ವೆನ್ನುವರು. ದ್ವಾದಶಾಹ ಯಥಾ ಪ್ರಯೋಗಗಳ ಆರಂಭವನ್ನು ಉತ್ತರಾಯಣ ಶುಕ್ಲಪಕ್ಷ ದೇವನಕ್ಷತ್ರಗಳಲ್ಲಿ ಮಾಡಿ ಶುಕ್ಲಪಕ್ಷದಲ್ಲಿಯೇ ಮುಗಿಸತಕ್ಕದ್ದೆಂದು ಬಹುಜನರ ಅಭಿಪ್ರಾಯವು ಕೃಷ್ಣಪಕ್ಷದಲ್ಲಿಯಾದರೂ ಸಮಾಪ್ತಿ ಮಾಡಬಹುದೆಂದು ಕೆಲವರನ್ನುವರು. ದ್ವಾದಶಾಹ, ಪಂಚಾಹ ಪಕ್ಷಗಳಲ್ಲಾದರೂ ಸವನೇಷ್ಟಾದಿಗಳಿಂದ ಸಮಾಪನ ಮಾಡಿದರೆ ಸಕೃತ್‌ರಣ ಮಾಡತಕ್ಕದ್ದು. (ಒಂದಾವರ್ತಿ ಮಾಡುವದು) ಅದಾಗದಿದ್ದರೆ ಪ್ರತಿಸಂವತ್ಸರದಲ್ಲೂ ಅನುಷ್ಠಾನ ಮಾಡತಕ್ಕದ್ದು, ಕೆಲವು ಕಡೆಯಲ್ಲಿ ಐಕಾಹಿಕ (ಒಂದೇ ದಿನ ಪ್ರಯುಕ್ತ) ಪಕ್ಷವೂ ಉಕ್ತವಾಗಿದೆ. ಅದನ್ನಾದರೂ ಚೈತ್ರಾದಿ ನಾಲ್ಕು ಪೂರ್ಣಿಮೆಗಳೊಂದರಲ್ಲಿ ಮಾಡತಕ್ಕದ್ದಿದೆ. ಕೆಲವು ಕಡೆಗಳಲ್ಲಿ “ಸಪ್ತಾಹ ಪಕ್ಷ” ಹೇಳಿದೆ. ಅದು ಹೇಗೆಂದರೆ ಎರಡು ದಿನಗಳಲ್ಲಿ ವೈಶ್ವದೇವ ಪರ್ವ, ಮೂರನೇ ದಿನ ವರುಣ ಪ್ರಘಾಸವು ನಾಲ್ಕನೇ ದಿನ ಗೃಹಮೇಧೀಯ, ಐದನೇ ದಿನ ಮಹಾಹವಿಸ್ಸು, ಆರನೇ ದಿನ ಪಿತೃಯಜ್ಞಾದಿ ಸಾಕಮೇಧ ಪರ್ವಶೇಷವು ಏಳನೇದಿನ ಶುನಾಸೀರೀಯ ಪರ್ವ, ಹೀಗೆ ಸಪ್ತಾಹ ಪಕ್ಷವು, ಇಲ್ಲಿ ಶುಕ್ಲಪಕ್ಷಾದಿ ಪಕ್ಷಕ್ತಕಾಲಗಳನ್ನ ಗ್ರಾಹ್ಯ ಮಾಡತಕ್ಕದ್ದು. ಹೀಗೆ ಚಾತುರ್ಮಾಸ್ಯ ಕಾಲನಿರ್ಣಯೋದ್ದೇಶವು, ಕಾಮ್ಯನೈಮಿತ್ತಿಕಾದಿ ಇಟ್ಟ ನಿರ್ಣಯ ಕಾಮಗಳಾದ ಇಷ್ಟಗಳ ಅನುಷ್ಠಾನವನ್ನು ವಿಕೃತಿಸಾಮಾನ್ಯ ನಿರ್ಣಯಾನುಸಾರವಾಗಿ ಅನುಷ್ಠಾನಮಾಡತಕ್ಕದ್ದು. ಅಥವಾ ಶುಕ್ಲಪಕ್ಷದಲ್ಲಿರುವ ದೇವನಕ್ಷತ್ರಗಳಲ್ಲಿ ಮಾಡತಕ್ಕದ್ದು, ಜಾತೇಷ್ಟಿಯನ್ನಾದರೋ ಪತ್ನಿ ಜನನವಾದಮೇಲೆ ಕರ್ಮಾರ್ಹದಿನ ಪ್ರಾಪ್ತವಾದ ಮೇಲೆ (ಇಪ್ಪತ್ತು ರಾತ್ರಿ ಕಳೆದಮೇಲೆ ಎಂದರ್ಥ) ಪರ್ವದಲ್ಲಿ ಮಾಡತಕ್ಕದ್ದು. ಗೃಹದಾಹೇಷ್ಟಾದಿ ನೈಮಿತ್ತಿ ಕೇಪ್ಟಿಗಳನ್ನು ನಿಮಿತ್ತಾ ನಂತರವೇ ಮಾಡತಕ್ಕದ್ದು. ಅದಕ್ಕೆ ಪರ್ವಾದಿಗಳ ಅಪೇಕ್ಷೆಯಿಲ್ಲ. ಅದು ಅಸಂಭವವಾದರೆ “ಪರ್ವಾದಿಗಳನ್ನಪೇಕ್ಷಿಸತಕ್ಕದ್ದು, ನಿತ್ಯಗಳಾದ ಕ್ರತ್ವರ್ಥ(ಯಜ್ಞಾಂಗರೂಪಗಳಾದ ಇಸ್ತ್ರಿಗಳು) ಗಳನ್ನು ಕ್ರತುವಿನಿಂದ ಕೂಡಿಯೇ ಮಾಡತಕ್ಕದ್ದು. ಅವುಗಳಿಗೆ ಪ್ರತ್ಯೇಕ ಕಾಲಾಪೇಕ್ಷೆಯಿಲ್ಲ. ಹೋಮಸಂಬಂಧಗಳಾದ ವಸ್ತುಗಳು ದೋಷಯುಕ್ತಗಳಾದಾಗ ಆ ನಿಮಿತ್ತದಿಂದ ಪ್ರಾಯಶ್ಚಿತ್ತೇಷ್ಟಿಯನ್ನು ಮಾಡತಕ್ಕದ್ದಿದೆ. ಆದರೆ ಆ ದೋಷವು ಸ್ವಿಷ್ಟಕೃತ್‌ಕರ್ಮಾನಂತರ “ಸಮಷ್ಟಿಯಜು” ಸಂಜ್ಞಕ ಹೋಮದ ಪೂರ್ವದಲ್ಲಿ ಸ್ಮರಣೆಗೆ ಬಂದರೆ - ಅದೇ ವೇಳೆಯಲ್ಲಿ ಅದೇ ತಂತ್ರದಿಂದ “ನಿರ್ವಾಪ” ಮೊದಲಾದವುಗಳನ್ನು ಮಾಡತಕ್ಕದ್ದು. ಆ ದೋಷವು ಅದರ ac ಧರ್ಮಸಿಂಧು ವೈಶ್ವದೇವವನ್ನು ಅದ್ದಿ ಕಾದಿಶ್ರಾದ್ಧ ಶೇಷಾನ್ನದಿಂದಾಗಲೀ, ಪೃಥಕ್ ಪಾಕದಿಂದಾಗಲೀ, ದರ್ಶಶ್ರಾದ್ಧಕ್ಕಿಂತ ಮೊದಲು ಮಾಡತಕ್ಕದ್ದು. ಆಹಿತಾಗ್ನಿ ಯಾದವನು ವೈಶ್ವದೇವವನ್ನೂ, ಪಿಂಡಪಿತೃ ಯಜ್ಞವನ್ನೂ ಮಾಡಿ ನಂತರ ಆಬ್ಲಿಕವನ್ನು ಮಾಡತಕ್ಕದ್ದು, ದರ್ಶಶ್ರಾದ್ಧವನ್ನು ಅನುಪನೀತರೂ, ವಿಧುರರೂ, ಪ್ರವಾಸದಲ್ಲಿರುವವರಾದರೂ ಮಾಡತಕ್ಕದ್ದು. ಅಮಾಶ್ರಾದ್ಧ ಅತಿಕ್ರಮವಾದರೆ “ನ್ಯೂಮವಾಚಂ” ಎಂಬ ಋಕ್ಕನ್ನು ನೂರೆಂಟಾವರ್ತಿ ಜಪಿಸತಕ್ಕದ್ದು. ಹೀಗೆ ದರ್ಶನಿರ್ಣಯೋದ್ದೇಶವು, ಇಷ್ಮಾದಿ ಪ್ರಾರಂಭ ನಿರ್ಣಯ ಇಷ್ಟಿ, ಸ್ಥಾಲೀಪಾಕ ಇವುಗಳನ್ನು ಹುಣ್ಣಿವೆಯಲ್ಲಿ ಪ್ರಾರಂಭಿಸತಕ್ಕದ್ದು. ಅಮಾವಾಸ್ಯೆಯಲ್ಲಲ್ಲ. ಆಧಾನ ಗೃಹ ಪ್ರವೇಶನೀಯ ಹೋಮಾನಂತರವೇ (ಸದ) ದರ್ಶ ಪೌರ್ಣಮಾಸಾರಂಭವನ್ನು ಮಾಡುವದಾದಲ್ಲಿ ಮಲಮಾಸ, ಪುಷ್ಯಮಾಸ, ಶುಕ್ರಾಸ ಇತ್ಯಾದಿ ದೋಷವಿರುವದಿಲ್ಲ. ಆ ಕಾಲವು ಅತಿಕ್ರಮವಾದಲ್ಲಿ ಶುದ್ಧ ಮಾಸಾದಿಗಳನ್ನು ನಿರೀಕ್ಷಿಸತಕ್ಕದ್ದು. ಎಂದು ಕೆಲವರು ಹೇಳುವರು. ಸರ್ವಥಾ ಶುದ್ಧ ಕಾಲದಲ್ಲಿಯೇ “ಆರಂಭ"ವು ಎಂದು ಕೆಲವರು ಹೇಳುವರು. ಹೀಗೆ ಇಷ್ಟಾದಿ ಪ್ರಾರಂಭನಿರ್ಣಯೋದ್ದೇಶವು ವಿಕೃತಿ ಕಾಲವು ವಿಕೃತೀಷ್ಟಗಳಲ್ಲಿ -ಮೂರು ವಿಧಗಳಿವೆ. ನಿತ್ಯಗಳಾದ ಆಗ್ರಋಣ, ಚಾತುರ್ಮಾಸ್ಯಾದಿಗಳು (೧) ನೈಮಿತ್ತಿಕಗಳಾದ ಜಾತೇಷ್ಮಾದಿಗಳು (೨) ಕಾಮ್ಮಗಳಾದ “ಸೌರ್ಯಾ"ದಿಗಳು (೩)ಇವುಗಳೇ ಪುರುಷಾರ್ಥಗಳು, (ಧರ್ಮಾರ್ಥ ಕಾಮಮೋಕ್ಷ-ಸಾಧಕಗಳು) ಯಜ್ಞಾಂಗಭೂತಗಳಾದ “ವಿಕೃತಿ” ಗಳಾದರೂ ಎರಡು ವಿಧವಾಗಿವೆ. ನಿತ್ಯ ಮತ್ತು ನೈಮಿತ್ತಿಕ ಹೀಗೆ ಎರಡುವಿಧ. ವಿಕೃತಿಗಳಲ್ಲಿ “ಸಸ್ಕಾಲತ್ವ” “ಹಕಾಲ” ಗಳೆಂಬೆರಡರಲ್ಲಿ ವಿಕಲ್ಪವು ಪರ್ವದಿನದಲ್ಲಿ ಅಥವಾ ಶುಕ್ಲಪಕ್ಷಗತಗಳಾದ ದೇವನಕ್ಷತ್ರಗಳಲ್ಲಿ ಯಾವುದಾದರೊಂದರಲ್ಲಿ ಆಗತಕ್ಕದ್ದು. ಹೀಗೆ ವಿಕಲ್ಪವು ಇನ್ನು ಪರ್ವದಲ್ಲಿ ಮಾಡುವಪಕ್ಷದಲ್ಲಿ ಅಪರಾಹ್ಲಾದಿ ಸಂಧಿಯಿದ್ದರೆ ಸಂಧಿದಿನದಲ್ಲಿ “ಸದ್ಯ ಸ್ಕಾಲಿಕ” ಅಥವಾ ಗೃಹಕಾಲಿಕವಾದ ವಿಕೃತಿಯನ್ನು ಮಾಡಿ ಪ್ರಕೃತಿಯ ಅಷ್ಟಾಧಾನವನ್ನು ಮಾಡತಕ್ಕದ್ದು. ಮಧ್ಯಾಹ್ನದಲ್ಲಾಗಲೀ ಪೂರ್ವಾಹ್ನದಲ್ಲಾಗಲೀ ಸಂಧಿಯಾದರೆ ಸಂಧಿ ದಿನದಲ್ಲಿ ಪ್ರಕೃತಿಯನ್ನು ಮುಗಿಸಿ ಸದ್ಯಸ್ಕಾಲಿಕ ವಿಕೃತಿಯನ್ನು ಮಾಡತಕ್ಕದ್ದು. ಕೃತ್ತಿಕಾದಿ ವಿಶಾಖಾಂತ ೧೪ ನಕ್ಷತ್ರಗಳು ದೇವನಕ್ಷತ್ರಗಳೆಂದು ಹೇಳಲ್ಪಡುತ್ತವೆ. ಅನ್ಸಾರಂಭಣೇಷ್ಟಿಯನ್ನು ಚತುರ್ದಶಿಯಲ್ಲಿ ಮಾಡತಕ್ಕದ್ದು. ಹೀಗೆ ವಿಕೃತಿಸಾಮಾನ್ಯ ನಿರ್ಣಯೋದ್ದೇಶವು. ಪಶುಯಾಗವನ್ನು ವರ್ಷಋತುವಿನಲ್ಲಿ ಶ್ರಾವಣಾದಿ ನಾಲ್ಕು ಪರ್ವಗಳೊಳಗೆ ಯಾವದಾದರೊಂದು ಪರ್ವದಲ್ಲಿ ದಕ್ಷಿಣಾಯನ ಅಥವಾ ಉತ್ತರಾಯಣ ದಿನಗಳಲ್ಲಾಗಲೀ ಮಾಡತಕ್ಕದ್ದು. ಖಂಡ ಪರ್ವ ಬಂದಲ್ಲಿ ವಿಕೃತಿ ಸಾಮಾನ್ನೋ ಪರ್ವದಂತೆಯೇ ನಿರ್ಣಯವು. ಹೀಗೆ ಪಶುಯಾಗೋದ್ದೇಶವು. ಚಾತುರ್ಮಾಸ್ಯ ಕಾಲವು ಆ ಪ್ರಯೋಗದಲ್ಲಿ ನಾಲ್ಕು ಪಕ್ಷಗಳು, ಫಾಲ್ಗುಣ ಅಥವಾ ಚೈತ್ರ ಹುಣ್ಣಿವೆಯಲ್ಲಿ ಪರಿಚ್ಛೇದ - ೧ 22 ವೈಶ್ವದೇವ ಪರ್ವವನ್ನು ಮಾಡಿ, ಆಷಾಢಾದಿ ನಾಲ್ಕು ನಾಲ್ಕು ಮಾಸಗಳಲ್ಲಿ ಒಂದೊಂದು ಪರ್ವದಂತೆ ಯಾವಜೀವ ಅನುಷ್ಠಾನ ಮಾಡುವದು; ಇದಕ್ಕೆ ಯಾವಜೀವ ಪಕ್ಷ” ಎನ್ನುವರು. ಹೇಳಿದ ರೀತಿಯಂತೆ ಸಂವತ್ಸರ ಪರ್ಯಂತ ಅನುಷ್ಠಾನ ಮಾಡಿ ಸವನೇಷ್ಟಿಯಿಂದ ಅಥವಾ ಪಶುಯಾಗದಿಂದ ಇಲ್ಲವೇ ಸೋಮಯಾಗದಿಂದ ಮುಗಿಸುವದು, ಇದಕ್ಕೆ “ಸಾಂವತ್ಸರ ಪಕ್ಷ ವೆನ್ನುವರು. ಪ್ರಥಮ ದಿನದಲ್ಲಿ ವೈಶ್ವದೇವಪರ್ವ, ನಾಲ್ಕನೇ ದಿನದಲ್ಲಿ ವರುಣ ಪ್ರಘಾಸ ಪರ್ವ, ಎಂಟು ಒಂಭತ್ತನೇ ದಿನಗಳಲ್ಲಿ ಸಾಕಮೇಧ ಪರ್ವ, ಹನ್ನೆರಡನೇ ದಿನದಲ್ಲಿ ಶುನಾಸೀರೀಯ ವರ್ವ, ಈ ರೀತಿಯ ಅನುಷ್ಠಾನಕ್ಕೆ “ದ್ವಾದಶಾಹಪಕ್ಷ’ ವೆನ್ನುವರು. ಐದು ದಿನಗಳಿಂದ ಸಮಾಪ್ತಿಯಾಗುವ ಪ್ರಸಂಗದಲ್ಲಿ “ಯಥಾ ಪ್ರಯೋಗ ಪಕ್ಷ” ವನ್ನುವರು. ದ್ವಾದಶಾಹ ಯಥಾ ಪ್ರಯೋಗಗಳ ಆರಂಭವನ್ನು ಉತ್ತರಾಯಣ ಶುಕ್ಲಪಕ್ಷ ದೇವನಕ್ಷತ್ರಗಳಲ್ಲಿ ಮಾಡಿ ಶುಕ್ಲಪಕ್ಷದಲ್ಲಿಯೇ ಮುಗಿಸತಕ್ಕದ್ದೆಂದು ಬಹುಜನರ ಅಭಿಪ್ರಾಯವು. ಕೃಷ್ಣಪಕ್ಷದಲ್ಲಿಯಾದರೂ ಸಮಾಪ್ತಿ ಮಾಡಬಹುದೆಂದು ಕೆಲವರನ್ನುವರು. ದ್ವಾದಶಾಹ, ಪಂಚಾಹ ಪಕ್ಷಗಳಲ್ಲಾದರೂ ಸವನೇಷ್ಟಾದಿಗಳಿಂದ ಸಮಾಪನ ಮಾಡಿದರೆ ಸಕೃತ್‌ರಣ ಮಾಡತಕ್ಕದ್ದು. (ಒಂದಾವರ್ತಿ ಮಾಡುವದು) ಅದಾಗದಿದ್ದರೆ ಪ್ರತಿಸಂವತ್ಸರದಲ್ಲೂ ಅನುಷ್ಠಾನ ಮಾಡತಕ್ಕದ್ದು. ಕೆಲವು ಕಡೆಯಲ್ಲಿ ಐಕಾಹಿಕ (ಒಂದೇ ದಿನ ಪ್ರಯುಕ್ತ) ಪಕ್ಷವೂ ಉಕ್ತವಾಗಿದೆ. ಅದನ್ನಾದರೂ ಚೈತ್ರಾದಿ ನಾಲ್ಕು ಪೂರ್ಣಿಮೆಗಳೊಂದರಲ್ಲಿ ಮಾಡತಕ್ಕದ್ದಿದೆ. ಕೆಲವು ಕಡೆಗಳಲ್ಲಿ ಸಪ್ತಾಹ ಪಕ್ಷ” ಹೇಳಿದೆ. ಅದು ಹೇಗೆಂದರೆ ಎರಡು ದಿನಗಳಲ್ಲಿ ವೈಶ್ವದೇವ ಪರ್ವ, ಮೂರನೇ ದಿನ ವರುಣ ಪ್ರಘಾಸವು ನಾಲ್ಕನೇ ದಿನ ಗೃಹಮೇಧೀಯ, ಐದನೇ ದಿನ ಮಹಾಹವಿಸ್ಸು, ಆರನೇ ದಿನ ಪಿತೃಯಜ್ಞಾದಿ ಸಾಕಮೇಧ ಪರ್ವಶೇಷವು ಏಳನೇದಿನ ಶುನಾಸೀರೀಯ ಪರ್ವ, ಹೀಗೆ ಸಪ್ತಾಹ ಪಕ್ಷವು. ಇಲ್ಲಿ ಶುಕ್ಲಪಕ್ಷಾದಿ ಪಕ್ಷಕ್ತ ಕಾಲಗಳನ್ನ ಗ್ರಾಹ್ಯ ಮಾಡತಕ್ಕದ್ದು. ಹೀಗೆ ಚಾತುರ್ಮಾಸ್ಯ ಕಾಲನಿರ್ಣಯೋದ್ದೇಶವು. ಕಾಮ್ಯನೈಮಿತ್ತಿಕಾದಿ ಇ ನಿರ್ಣಯ ಕಾಮಗಳಾದ ಇಷ್ಟಿಗಳ ಅನುಷ್ಠಾನವನ್ನು ವಿಕೃತಿಸಾಮಾನ್ಯ ನಿರ್ಣಯಾನುಸಾರವಾಗಿ ಅನುಷ್ಠಾನಮಾಡತಕ್ಕದ್ದು. ಅಥವಾ ಶುಕ್ಲಪಕ್ಷದಲ್ಲಿರುವ ದೇವನಕ್ಷತ್ರಗಳಲ್ಲಿ ಮಾಡತಕ್ಕದ್ದು. ಜಾತೇಷ್ಟಿಯನ್ನಾದರೋ ಪತ್ನಿ ಜನನವಾದಮೇಲೆ ಕರ್ಮಾರ್ಹದಿನ ಪ್ರಾಪ್ತವಾದ ಮೇಲೆ (ಇಪ್ಪತ್ತು ರಾತ್ರಿ ಕಳೆದಮೇಲೆ ಎಂದರ್ಥ) ಪರ್ವದಲ್ಲಿ ಮಾಡತಕ್ಕದ್ದು. ಗೃಹದಾಹಾದಿ ನೈಮಿತ್ತಿ ಕೇಷ್ಟಿಗಳನ್ನು ನಿಮಿತ್ತಾ ನಂತರವೇ ಮಾಡತಕ್ಕದ್ದು. ಅದಕ್ಕೆ ಪರ್ವಾದಿಗಳ ಅಪೇಕ್ಷೆಯಿಲ್ಲ. ಅದು ಅಸಂಭವವಾದರೆ “ಪರ್ವಾದಿಗಳನ್ನ ಪೇಕ್ಷಿಸತಕ್ಕದ್ದು. ನಿತ್ಯಗಳಾದ ಕ್ರತ್ವರ್ಥ(ಯಜ್ಞಾಂಗರೂಪಗಳಾದ ಇಷ್ಟಿಗಳು) ಗಳನ್ನು ಕ್ರತುವಿನಿಂದ ಕೂಡಿಯೇ ಮಾಡತಕ್ಕದ್ದು. ಅವುಗಳಿಗೆ ಪ್ರತ್ಯೇಕ ಕಾಲಾಪೇಕ್ಷೆಯಿಲ್ಲ. ಹೋಮಸ೦ಬ೦ಧಗಳಾದ ವಸ್ತುಗಳು ದೋಷಯುಕ್ತಗಳಾದಾಗ ಆ ನಿಮಿತ್ತದಿಂದ ಪ್ರಾಯಶ್ಚಿತ್ತೇಷ್ಟಿಯನ್ನು ಮಾಡತಕ್ಕದ್ದಿದೆ. ಆದರೆ ಆ ದೋಷವು ಸ್ವಿಷ್ಟಕೃತ್‌ಕರ್ಮಾನಂತರ “ಸಮಷ್ಟಿಯಜು” ಸಂಜ್ಞಕ ಹೋಮದ ಪೂರ್ವದಲ್ಲಿ ಸ್ಮರಣೆಗೆ ಬಂದರೆ - ಅದೇ ವೇಳೆಯಲ್ಲಿ ಅದೇ ತಂತ್ರದಿಂದ “ನಿರ್ವಾಪ” ಮೊದಲಾದವುಗಳನ್ನು ಮಾಡತಕ್ಕದ್ದು. ಆ ದೋಷವು ಅದರ ac ಧರ್ಮಸಿಂಧು ನಂತರ ಸ್ಮರಣೆಯಲ್ಲಿ ಬಂದರೆ ಆ ಪ್ರಯೋಗವನ್ನು ಮುಗಿಸಿ ಪುನರಾಧಾನಾದಿ ವಿಧಿಯಿಂದ ಮಾಡತಕ್ಕದ್ದು. ಹೀಗೆ ಕಾವ್ಯ ನೈಮಿತ್ತಿಕಾದಿ ಇಷ್ಟಿಗಳ ನಿರ್ಣಯೋದ್ದೇಶವು ಅನ್ನಾಧಾನ ಕಾಲವು “ಆಧಾನ"ವನ್ನು ಪರ್ವದಲ್ಲಿಯೂ ನಕ್ಷತ್ರಗಳಲ್ಲಿಯೂ ಹೇಳಿದೆ. ಪರ್ವದಲ್ಲಿ ಮಾಡುವದಾದರೆ ಸಂಕಲ್ಪದಿಂದ ಪೂರ್ಣಾಹುತಿ ಪರ್ಯಂತ ಪ್ರಯೋಗಕ್ಕೆ ಸಾಕಾಗುವಷ್ಟಿದ್ದರೆ ಮಾಡುವದು, ಇಲ್ಲವಾದರೆ ಗಾರ್ಹಪತ್ಯಾದಿ ಆಹವನೀಯಾಧಾನ ಪರ್ಯಂತ ಇರುವ ಪರ್ವವು “ಗ್ರಾಹ್ಯ"ವು. ನಕ್ಷತ್ರ ನಿರ್ಣಯವನ್ನೂ ಹೀಗೆಯೇ ತಿಳಿಯತಕ್ಕದ್ದು, ಪರ್ವವು ಎರಡೂ ದಿನ ಕರ್ಮಕಾಲವ್ಯಾಪ್ತವಾಗಿದ್ದರೆ ಆಗ ಉಕ್ತವಾದ ನಕ್ಷತ್ರವು ಯಾವ ದಿನ ಬರುವದೋ ಆ ದಿನವು ಗ್ರಾಹ್ಯವು, ವಸಂತ ಋತು ಪರ್ವ ಹೇಳಿದ ನಕ್ಷತ್ರ ಹೀಗೆ ಒಟ್ಟುಗೂಡಿದರೆ ಅತಿಪ್ರಶಸ್ತವು ಋತು ಇಲ್ಲದಿದ್ದರೆ ಮಧ್ಯಮವು ಕೇವಲ ಪರ್ವ ಅಥವಾ ಕೇವಲ ನಕ್ಷತ್ರವಿದ್ದರೆ ಅಧಮವು. ಹೇಳಿದ ನಕ್ಷತ್ರಗಳು ಕೃತ್ತಿಕಾ, ರೋಹಿಣಿ, ವಿಶಾಖಾ, ಹುಬ್ಬಾ, ಉತ್ತರಾ, ಮೃಗಶಿರ, ಉತ್ತರಾಭದ್ರಾ, ಇವು ಏಳು ಆಶ್ವಲಾಯನೋಕ್ತಗಳು, ಕೃತ್ತಿಕಾ, ರೋಹಿಣಿ, ಉತ್ತರಾ, ಉತ್ತರಾಷಾಢಾ, ಉತ್ತರಾಭದ್ರ, ಮೃಗಶಿರ, ಪುನರ್ವಸು, ಪುಷ್ಯ, ಹುಬ್ಬಾ, ಪೂರ್ವಾಷಾಢಾ, ಹಸ್ತ, ಚಿತ್ರಾ, ವಿಶಾಖಾ, ಅನುರಾಧಾ, ಶ್ರವಣ, ಜೇಷ್ಠಾ, ರೇವತಿ, ಹೀಗೆ ಬೇರೆ ಬೇರೆ ಸೂತ್ರೋಕ್ತ ನಕ್ಷತ್ರಗಳು. " ನರ್ತುಂಪೃಚ್ಛನ್ನ ನಕ್ಷತ್ರಂ” ಈ ವಚನದಂತೆ ಸೋಮಯಾಗಕ್ಕನುಸರಿಸಿ ಆಧಾನಮಾಡತಕ್ಕದ್ದು. ಹೊರತು ಪೃಥಕ್ಕಾಗಿ ಕಾಲವಿಚಾರ ಮಾಡತಕ್ಕದ್ದಲ್ಲ. ಅಂದರೆ ಸೋಮಯಾಗಪೂರ್ವಕ ಆಧಾನ ಮಾಡುವಲ್ಲಿ ಎಂದು ಅಭಿಪ್ರಾಯ. ಹೀಗೆ ಆಧಾನಕಾಲೋದ್ದೇಶವು. ಗ್ರಹಣ ನಿರ್ಣಯ ಚಂದ್ರ-ಸೂರ್ಯರ ಗ್ರಹಣವು ಎಷ್ಟು ಕಾಲ ದೃಗ್ಗೋಚರವಾಗುವದೋ ಅಷ್ಟು ಪುಣ್ಯ ಕಾಲವು ಆದ್ದರಿಂದ ಗ್ರಸ್ತಾಸ್ತವಾದಾಗ ಅಸ್ತಾನಂತರ ಇಲ್ಲಿ ದೃಗ್ಗೋಚರವಿಲ್ಲವಾದ ಕಾರಣ (ದ್ವೀಪಾಂತರದಲ್ಲಿ ಗ್ರಹಣವಿದ್ದರೂ) “ಪುಣ್ಯಕಾಲ” ಎಂದಾಗುವದಿಲ್ಲ. ಶಾಸ್ತ್ರಾದಿಗಳಿಂದ ಸ್ಪರ್ಶ-ಮೋಕ್ಷಗಳನ್ನು ತಿಳಿದು ಸ್ನಾನ-ದಾನಾದಿಗಳನ್ನಾಚರಿಸತಕ್ಕದ್ದು. ರವಿವಾರ ಸೂರ್ಯ ಗ್ರಹಣವಾದರೆ, ಚಂದ್ರವಾರದಲ್ಲಿ ಚಂದ್ರಗ್ರಹಣವಾದರೆ ಅದಕ್ಕೆ “ಚೂಡಾಮಣಿ” ಎಂದು ಹೆಸರು. ಅದರಲ್ಲಿ ಮಾಡಿದ ದಾನಾದಿಗಳಿಗೆ ಅನಂತ ಫಲವು. ಗ್ರಹಣ ಸ್ಪರ್ಶಕಾಲದಲ್ಲಿ - ಸ್ನಾನ, ಗ್ರಹಣ ಮಧ್ಯಕಾಲದಲ್ಲಿ - ಹೋಮ, ದೇವಾರ್ಚನೆ, ಮತ್ತು ಶ್ರಾದ್ಧವು, ಬಿಡುವ ಸಮಯದಲ್ಲಿ-ದಾನ, ಮೋಕ್ಷಾನಂತರ ಪುನಃಸ್ನಾನ, ಹೀಗೆ ಕ್ರಮವು. ಸ್ನಾನದ ಜಲಗಳಲ್ಲಿ ತಾರತಮ್ಯವಿದೆ. ಉದ್ಯೋದಕಕ್ಕಿಂತ ಶೀತ ಜಲವೂ, ಬೇರೆಯವರ ಜಲಕ್ಕಿಂತ ಸ್ವಂತ ಜಲವೂ, ಎತ್ತುವ ನೀರಿಗಿಂತ ಭೂಮಿಯಲ್ಲಿರುವ ಜಲವೂ ಪುಣ್ಯಕರವಾದದ್ದು. ಇವುಗಳಿಗಿಂತ ಕೆರೆಯ ನೀರು, ಅದಕ್ಕಿಂತ ಸರೋವರ, ಅದಕ್ಕಿಂತ ನದೀಜಲ, ಅದರಲ್ಲೂ ಗಂಗಾಜಲ, ಇವೆಲ್ಲವುಗಳಿಗಿಂತ ಸಮುದ್ರಜಲ ಇವುಗಳ ಸ್ನಾನವು ಹೆಚ್ಚಿನ ಪುಣ್ಯತಮವಾದದ್ದು. ಗ್ರಹಣದಲ್ಲಿ “ಸತೈಲ ಸ್ನಾನ” (ಉಟ್ಟಿದ್ದ ಬಟ್ಟೆ ಸಹಿತ) ಮಾಡತಕ್ಕದ್ದು. ಈ ಸಜೈಲಸ್ನಾನವು ಗ್ರಹಣ ಮೋಕ್ಷವಾದಮೇಲೆ ಆಗತಕ್ಕದ್ದೆಂದು ಕೆಲವರು ಹೇಳುವರು. ಮೋಕ್ಷಾನಂತರ ಸ್ನಾನ ಮಾಡದಿದ್ದರೆ ಗ್ರಹಣ ಸೂತಕವು ನಿವೃತ್ತವಾಗುವದಿಲ್ಲ. ಗ್ರಹಣದಲ್ಲಿಪರಿಚ್ಛೇದ - ೧ &E ಅಮಂತ್ರಕವಾಗಿ ಸ್ನಾನ ಮಾಡತಕ್ಕದ್ದು. ಸುವಾಸಿನೀ ಸ್ತ್ರೀಯರು ಕಂಠಸ್ನಾನಮಾತ್ರ ಮಾಡತಕ್ಕದ್ದು. ಶಿಷ್ಯರಾದ ವರಸ್ತ್ರೀಯರು ಗ್ರಹಣದಲ್ಲಿ ಶಿರಸ್ಥಾನ ಮಾಡುತ್ತಾರೆ. ಜಾತಾಶೌಚ, ಮೃತಾಶೌಚವಿದ್ದರೂ ಗ್ರಹಣ ನಿಮಿತ್ತವಾದ ದಾನ, ಸ್ನಾನ, ಶ್ರಾದ್ಧಾದಿಗಳನ್ನು ಮಾಡಲೇಬೇಕು. ಹೀಗೆ ನೈಮಿತ್ತಿಕ ಸ್ನಾನವು ಪ್ರಾಪ್ತವಾದರೆ ರಜಸ್ವಲೆಯಾದ ಸ್ತ್ರೀಯು ಬೇರೆ ಪಾತ್ರದಲ್ಲಿ ಜಲವನ್ನು ತುಂಬಿಕೊಂಡು ಸ್ನಾನಮಾಡತಕ್ಕದ್ದು. ವಸ್ತ್ರವನ್ನೊಗೆಯಬಾರದು. ಬೇರೆ ವಸ್ತ್ರವನ್ನೂ ಧರಿಸಬಾರದು. ಮೂರುರಾತ್ರಿ ಅಥವಾ ಒಂದು ರಾತ್ರಿ ಉಪೋಷಣಮಾಡಿ ಗ್ರಹಣ ಕಾಲದಲ್ಲಿ ಸ್ನಾನ, ದಾನಾದಿ ಅನುಷ್ಠಾನ ಮಾಡಿದರೆ ಮಹಾಪುಣ್ಯ ಫಲವಿದೆ. ಒಂದೇರಾತ್ರಿ ಉಪವಾಸ ಮಾಡುವದಿದ್ದಲ್ಲಿ ಗ್ರಹಣದಿನಕ್ಕಿಂತ ಮುಂಚಿನ ದಿನ ಉಪವಾಸ ಮಾಡತಕ್ಕದ್ದೆಂದು ಕೆಲವರು ಹೇಳುವರು. ಇನ್ನು ಕೆಲವರು ಗ್ರಹಣ ಸಂಬಂಧವಾದ ಅಹೋರಾತ್ರಿ ಉಪವಾಸ ಮಾಡತಕ್ಕದ್ದೆಂದು ಹೇಳುವರು. ಪುತ್ರರುಳ್ಳ ಗೃಹಸ್ಥರಿಗೆ ಗ್ರಹಣ ಸಂಕ್ರಾಂತ್ಯಾದಿಗಳಲ್ಲಿ ಉಪವಾಸವಿಲ್ಲ. ಇಲ್ಲಿ “ಪುತ್ರರುಳ್ಳವರು” ಎಂಬುದರಿಂದ ಪುತ್ರಿಯರುಳ್ಳವರೂ ಎಂದು ಉಪಲಕ್ಷಣದಿಂದ ತಿಳಿಯತಕ್ಕದ್ದು. ಹೀಗೆ ಕೆಲವರ ಮತವು. ಕೆಲವರು ಗ್ರಹಣದಲ್ಲಿ ದೇವಪಿತೃ ತರ್ಪಣವನ್ನು ಮಾಡತಕ್ಕದ್ದು ಅನ್ನುವರು. ಎಲ್ಲ ವರ್ಣದವರಿಗೂ ಗ್ರಹಣಸೂತಕವಿರುವದರಿಂದ ಗ್ರಹಣ ಕಾಲದಲ್ಲಿ ಮುಟ್ಟಿದ ವಸ್ತ್ರ ಮೊದಲಾದವುಗಳನ್ನು ತೊಳೆದು ಶುದ್ಧಮಾಡತಕ್ಕದ್ದು. ದಾನಪಾತ್ರಾದಿ ವಿಚಾರ ಗ್ರಹಣದಲ್ಲಿ ಗೋವು, ಭೂಮಿ, ಹಿರಣ್ಯ, ಧಾನ್ಯ, ಮೊದಲಾದವುಗಳ ದಾನದಿಂದ ಮಹಾಫಲವು. ಮುಖ್ಯವಾಗಿ ತಪಸ್ಸು, ವಿದ್ಯಾ, ಈ ಎರಡು ಗುಣಗಳಿಂದ ಯುಕ್ತನಾದವನು ದಾನಕ್ಕೆ “ಸತ್ಪಾತ್ರನು. ಸತ್ಪಾತ್ರನಲ್ಲಿ ಮಾಡಿದ ದಾನವು ವಿಶೇಷ ಪುಣ್ಯಕರವು. ಗ್ರಹಣದಲ್ಲಿ “ಎಲ್ಲ ದಾನವೂ ಭೂದಾನಕ್ಕೆ ಸಮಾನವಾದದ್ದು. ಎಲ್ಲ ಜಲವೂ ಗಂಗಾ ಜಲಕ್ಕೆ ಸಮಾನವು. ಎಲ್ಲ ಬ್ರಾಹ್ಮಣರೂ ವ್ಯಾಸ ಸಮಾನರು” ಎಂಬ ವಚನವಿದೆ. ಅಂದರೆ ಗ್ರಹಣಕಾಲಕ್ಕೆ ಅಷ್ಟು ಮಹತ್ವವಿದೆ ಎಂದರ್ಥ. ತಾತ್ಪರ್ಯವೇನೆಂದರೆ ಗ್ರಹಣಕಾಲದಲ್ಲಿ ಪ್ರಾಪ್ತನಾದ ಎಂಥ ಬ್ರಾಹ್ಮಣನೇ ಇರಲಿ ತಾರತಮ್ಯವಿಲ್ಲದ ತತ್ಕಾಲದಲ್ಲಿ ದಾನಮಾಡಬೇಕೆಂದರ್ಥ. ಈ ವಚನಾನುಸಾರ ಕೇವಲ ಅಬ್ರಾಹ್ಮಣನಿಗಾದರೂ ಆ ಕಾಲದಲ್ಲಿ ದಾನಮಾಡಿದರೆ ದಾನ ಸಾಮಾನ್ಯ ಫಲಪ್ರಾಪ್ತಿಯಿದೆ. ಬ್ರಾಹ್ಮಣ ಸಮನಾದವನಿಗೆ ದಾನಮಾಡಿದರೆ ಆ ಪುಣ್ಯವು ಎರಡುಪಟ್ಟಾಗುವದು. ಪ್ರೋತ್ರಿಯನಲ್ಲಿ ಹತ್ತು ಸಾವಿರ ಪಟ್ಟಾಗುವದು. ಹಿಂದೆ ಹೇಳಿದ- ಪಾತ್ರ ಲಕ್ಷಣ ಉಳ್ಳವನಿಗೆ ದಾನಮಾಡಿದರೆ ಅನಂತವಾಗುವದು-ಹೀಗೆ ತಾರತಮ್ಮ ಹೇಳುವ ವಚನವಿದೆ. ಬರೇ ಜಾತಿಯಲ್ಲಿ ಹುಟ್ಟಿದವನಾಗಿದ್ದು ಸಂಸ್ಕಾರಾದಿ ರಹಿತನಾದವನಿಗೆ “ಅಬ್ರಾಹ್ಮಣ” ಎನ್ನುವರು. ಗ್ರಹಣ ಕಾಲದಲ್ಲಿ ಇಂಥವನಿಗೆ ದಾನಮಾಡಿದರೆ ಇತರ ಕಾಲದಲ್ಲಿ ದಾನದಿಂದ ಯಾವ ಫಲವು ಪ್ರಾಪ್ತಿಯಾಗುವದೋ ಅಂಥ ಸಾಮಾನ್ಯ ಫಲವು ಸಿಗುವದು. ಗರ್ಭಾಧಾನಾದಿ ಸಂಸ್ಕಾರಯುಕ್ತನಾಗಿದ್ದು ವೇದಾಧ್ಯಯನ-ಅಧ್ಯಾಪನ ರಹಿತನಾದವನು “ಬ್ರಾಹ್ಮಣಬ್ರವ"ನು. (ಬ್ರಾಹ್ಮಣ ಸಮ) ಇವನಿಗೆ ಗ್ರಹಣದಲ್ಲಿಯ ಅದೇ ದಾನವು ದ್ವಿಗುಣವಾಗುವದು. ವೇದಾಧ್ಯನಮಾಡಿದ ಪ್ರೋತ್ರಿಯನಲ್ಲಿ ಸಹಸ್ರ ಗುಣವಾಗುವದು. ವಿದ್ಯಾ -ಸದಾಚಾರ-ಸಂಪನ್ನನಾದ ಪಾತ್ರನಲ್ಲಿ ಅನಂತವಾಗುವದು, ಹೀಗೆ ವಚನಾರ್ಥವು ಗ್ರಹಣದಲ್ಲಿ ಧರ್ಮಸಿಂಧು ಶ್ರಾದ್ಧವನ್ನು ಆಮದಿಂದ ಇಲ್ಲವೆ ಹಿರಣ್ಯದಿಂದ ಮಾಡತಕ್ಕದ್ದು. ಸಂಪನ್ನನಾಗಿದ್ದರೆ ಪಕ್ವಾನ್ನದಿಂದಲೂ ಮಾಡಬಹುದು. ಸೂರ್ಯಗ್ರಹಣದಲ್ಲಿ ತೀರ್ಥಯಾತ್ರಾಂಗ ಶ್ರಾದ್ಧದಂತೆ ಘ್ರತಪ್ರಧಾನವಾದ ಅನ್ನದಿಂದ ಶ್ರಾದ್ಧ ಮಾಡತಕ್ಕದ್ದು. ಇಂಥ ಗ್ರಹಣ ಶ್ರಾದ್ಧಾದಿಗಳಲ್ಲಿ ಭೋಜನ ಮಾಡಿದರೆ ಮಹಾದೋಷವು. ಸಂಪನ್ನನಾದವನು ಗ್ರಹಣಕಾಲದಲ್ಲಿ ತುಲಾಭಾರಾದಿ ಮಹಾದಾನಗಳನ್ನು ಮಾಡತಕ್ಕದ್ದು. ಮಂತ್ರೋಪದೇಶಾದಿ ವಿಚಾರ ಚಂದ್ರ ಸೂರ್ಯರ ಗ್ರಹಣಕಾಲದಲ್ಲಿ, ತೀರ್ಥದಲ್ಲಿ, ಮಹಾಪರ್ವದಿನಗಳಲ್ಲಿ, ಮಂತ್ರದೀಕ್ಷೆಯ ಸ್ವೀಕಾರಕ್ಕೆ-ಮಾಸ ನಕ್ಷತ್ರಾದಿಗಳನ್ನು ವಿಚಾರಿಸತಕ್ಕದ್ದಲ್ಲ. ಮಂತ್ರದೀಕ್ಷಾ ವಿಧಾನವನ್ನು ತಂತ್ರಶಾಸ್ತ್ರದಿಂದ ತಿಳಿಯತಕ್ಕದ್ದು, ಇಲ್ಲಿ ದೀಕ್ಷಾ ಎಂದು ಹೇಳಿದ್ದು ಉಪದೇಶಕ್ಕೂ ಉಪಲಕ್ಷಣವು. ಬೇರೆ ಬೇರೆ ಯುಗಗಳಲ್ಲಿ ದೀಕ್ಷೆಯನ್ನು ಕೊಟ್ಟು ಉಪದೇಶ ಕೊಡುವದಿತ್ತು. ಕಲಿಯುಗದಲ್ಲಿ “ಉಪದೇಶವೇ ದೀಕ್ಷೆಯು, ಸೂರ್ಯ ಗ್ರಹಣದಲ್ಲಿಯೂ, ತೀರ್ಥದಲ್ಲಿಯೂ, ಸಿದ್ಧಕ್ಷೇತ್ರದಲ್ಲಿಯೂ, ಶಿವಾಲಯದಲ್ಲಿಯೂ, ಮಂತ್ರಮಾತ್ರವನ್ನು ಉಪದೇಶಿಸಿದರೆ ಅದು “ದೀಕೋಪದೇಶ"ವೇ ಆಗುವದು. ಮಂತ್ರ ಗ್ರಹಣಕ್ಕೆ ಸೂರ್ಯಗ್ರಹಣವೇ ಮುಖ್ಯವು. ಚಂದ್ರಗ್ರಹಣದಲ್ಲಿ ದಾರಿದ್ರಾದಿ ದೋಷಗಳನ್ನು ಹೇಳಿರುವದೆಂದು ಕೆಲವರೆನ್ನುವರು. ಚಂದ್ರ- ಸೂರ್ಯ ಗ್ರಹಣಗಳಲ್ಲಿ ಮೊದಲು ಸ್ನಾನ ಮಾಡಿ ಉಪವಾಸವಿದ್ದು ಸ್ಪರ್ಶಾದಿ- ಮೋಕ್ಷಪರ್ಯಂತವಾಗಿ ಸಮಾಧಾನ ಮನಸ್ಕನಾಗಿ ಮಂತ್ರವನ್ನು ಜಪಿಸತಕ್ಕದ್ದು, ಆಮೇಲೆ ಜಪದ ದಶಾಂಶಹೋಮ ಮಾಡತಕ್ಕದ್ದು. ಹೋಮ ದಶಾಂಶ ತರ್ಪಣ ಮಾಡತಕ್ಕದ್ದು. ಹೋಮದಲ್ಲಿ ಅಸಮರ್ಥನಾದರೆ ಹೋಮ ಸಂಖ್ಯೆಯ ನಾಲ್ಕುಪಟ್ಟು ಜಪವನ್ನೇ ಮಾಡತಕ್ಕದ್ದು. ಪುರಶ್ಚರಣ ಕ್ರಮ ಮೊದಲು ಮೂಲ ಮಂತ್ರವನ್ನು ಚ್ಚಾರಮಾಡಿ ಅದರ ತುದಿಯಲ್ಲಿ ದ್ವಿತೀಯಾ ವಿಭಕ್ತಿಯುಕ್ತವಾದ ಮಂತ್ರದೇವತಾನಾಮವನ್ನುಚ್ಚರಿಸಿ “ಅಮುಕಾಂದೇವತಾಂ ಅಹಂ ತರ್ಪಯಾಮಿ ನಮಃ” ಹೀಗೆ ಹೇಳಿ ಯವ ಮೊದಲಾದವುಗಳಿಂದ ಯುಕ್ತಗಳಾದ ಜಲಾಂಜಲಿಗಳಿಂದ ತರ್ಪಣವನ್ನು ಹೋಮಸಂಖ್ಯೆಯ ದಶಾಂಶದಿಂದ ಮಾಡತಕ್ಕದ್ದು. ಹೀಗೆಯೇ ನಮಃ ಶಬ್ದವೇ ಅಂತ್ಯವಾಗುಳ್ಳ ಮೂಲಮಂತ್ರವನ್ನು ಹೇಳಿ “ಅಮುಕಾಂ ದೇವತಾಮಹಮಭಿಷಿಂಚಾಮಿ” ಎಂದು ಉಚ್ಚರಿಸಿ ಜಲದಿಂದ ತನ್ನ ತಲೆಯಮೇಲೆ ಅಭಿಷೇಕ ಮಾಡುವದು ಇದೇ “ಮಾರ್ಜನ"ವು. ಇದನ್ನು ತರ್ಪಣ ದಶಾಂಶದಿಂದ ಮಾಡತಕ್ಕದ್ದು. ಮಾರ್ಜನದ ದಶಾಂಶದಂತ ಬ್ರಾಹ್ಮಣ ಸಂತರ್ಪಣಮಾಡುವದು. ಹೀಗೆ ಜವ, ಹೋಮ, ತರ್ಪಣ, ಮಾರ್ಜನ, ವಿಪ್ರಭೋಜನ, ಈ ಐದು ರೀತಿಯಿಂದ ಆಚರಿಸುವದಕ್ಕೆ “ಪುರಶ್ಚರಣ ಎನ್ನುವರು. ತರ್ಪಣಾದಿಗಳ ಅಭಾವದಲ್ಲಿ ತರ್ಪಣಾದಿಗಳ ಸಂಖ್ಯೆಯ ನಾಲ್ಕುಪಟ್ಟು ಜಪವನ್ನೇ ಮಾಡತಕ್ಕದ್ದು. ಈ ಗ್ರಹಣ ಪುರಶ್ಚರಣ ರೀತಿಯು ಗ್ರಸ್ತೋದಯ ಗ್ರಸ್ತಾಸ್ತ್ರಗಳಲ್ಲಿ ಸಂಬಂಧವಿಲ್ಲ. ಪುರಶ್ಚರಣಾಂಗ ಉಪವಾಸವನ್ನು ಪುತ್ರವಹಸ್ಥನಾದರೂ ಮಾಡತಕ್ಕದ್ದು. ಪುರಶ್ಚರಣ ಕರ್ತೃವಿಗೆ ಸ್ನಾನ, ದಾನ ಮೊದಲಾದ ನೈಮಿತ್ತಿಕ ಕರ್ಮಲೋಪವಾದಲ್ಲಿ ಪ್ರತ್ಯವಾಯ (ದೋಷ) ಸಂಭವಿಸುವದರಿಂದ ನೈಮಿತ್ತಿಕವಾದ ಸ್ನಾನ, ದಾನಾದಿಗಳನ್ನು ಪತ್ನಿ ಪುತ್ರಮೊದಲಾದ ಪ್ರತಿನಿಧಿಗಳ ಮೂಲಕ ಮಾಡಿಸುವದು. ಪರಿಚ್ಛೇದ - ೧ ೪೧ ಸ್ಪರ್ಶಕಾಲಕ್ಕಿಂತ ಮೊದಲು ಸ್ನಾನಮಾಡಿ “ಅಮುಕ ಗೋತ್ರೋsಮುಕ ಶರ್ಮಾಹಂ ರಾಹುಗ್ರಸ್ತ ದಿವಾಕರೇ ಅಥವಾ ನಿಶಾಕರೇ, ಅಮುಕ ದೇವತಾಯಾ ಅಮುಕ ಮಂತ್ರ ಸಿದ್ಧಿ ಕಾಮೋ ಗ್ರಾಸಾದಿ ಮುಕ್ತಿ ಪರ್ಯಂತಂ ಅಮುಕ ಮಂತ್ರ ಜಪರೂಪಂ ಪುರಶ್ಚರಣಂ ಕರಿಷ್ಯ” ಎಂದು ಸಂಕಲ್ಪ ಮಾಡಿ ಆಸನಬಂಧ, ನ್ಯಾಸಾದಿಗಳನ್ನು ಸ್ಪರ್ಶಕ್ಕಿಂತ ಮೊದಲೇ ಮುಗಿಸಿ ಸ್ಪರ್ಶಾದಿ ಮೋಕ್ಷಪರ್ಯಂತ ಮೂಲಮಂತ್ರ ಜಪವನ್ನು ಮಾಡತಕ್ಕದ್ದು. ನಂತರ ಮುಂದಿನ ದಿನ ಸ್ನಾನಾದಿ ನಿತ್ಯ ಕರ್ಮಗಳನ್ನು ಮಾಡಿ “ಅಮುಕಮಂತ್ರಸ್ಯ ಕೃತ, ಹಣಕಾಲಿಕ ಅಮುಕಸಂಖ್ಯಾಕ ಪುರಶ್ಚರಣ ಜನಸಾಂಗತಾರ್ಥಂ ತನ್ನ ಶಾಂಶಹೋಮ ತದ್ದ ಶಾಂಶತರ್ಪಣ ತದ್ದ ಶಾಂಶಮಾರ್ಜನ ತದ್ದಶಾಂಶಬ್ರಾಹ್ಮಣ ಭೋಜನಾನಿಕರಿ” ಎಂದು ಸಂಕಲ್ಪಮಾಡಿ ಹೋಮಾದಿಗಳನ್ನು ಮಾಡತಕ್ಕದ್ದು. ಶಕ್ಯವಿಲ್ಲದಲ್ಲಿ ಅವುಗಳ ಚತುರ್ಗುಣ ಅಥವಾ ದ್ವಿಗುಣ ಜವಗಳನ್ನಾಗಲೀ ಮಾಡತಕ್ಕದ್ದು. ಗ್ರಹಣಕಾಲದಲ್ಲಿ ಯಜಮಾನನ ಸಲುವಾಗಿ ಪ್ರತಿನಿಧಿಯಾಗಿ ಮಾಡುವವನು, “ಅಮುಕಶರ್ಮಣೋsಮುಕಗೋತ್ರಸ್ಯ ಅಮುಕಗ್ರಹಣ ಸ್ಪರ್ಶಸ್ನಾನಜನಿತ ಶ್ರೇಯಃ ಪ್ರಾಪ್ತರ್ಥಂ ಸ್ಪರ್ಶಸ್ನಾನಂ ಕರಿಷ್ಯ ಹೀಗೆ ಸಂಕಲ್ಪ ಪೂರ್ವಕವಾಗಿ ಯಜಮಾನನ ಬಂಧವಾದ ಸ್ನಾನ ದಾನಾದಿಗಳನ್ನು ಮಾಡತಕ್ಕದ್ದು. ಪುರಶ್ಚರಣ ಮಾಡದವರಾದರೂ ಗುರೂಪದೇಶವನ್ನು ಹೊಂದಿರುವ ಇಷ್ಟದೇವತಾ ಮಂತ್ರ ಜಪ, ಗಾಯತ್ರೀಜಪವನ್ನೂ ಗ್ರಹಣದಲ್ಲಿ ಅವಶ್ಯವಾಗಿ ಮಾಡತಕ್ಕದ್ದು, ಇಲ್ಲದಿದ್ದರೆ ಮಂತ್ರಕ್ಕೆ ಮಾಲಿನ್ಯವುಂಟಾಗುತ್ತದೆ. ಗ್ರಹಣಕಾಲದಲ್ಲಿ ನಿದ್ರೆಮಾಡಿದರೆ ರೋಗಿಯಾಗಿಯೂ, ಮಲವಿಸರ್ಜನೆಮಾಡಿದರೆ ಕೃಮಿಯಾಗಿಯೂ, ಮೈಥುನ ಮಾಡಿದರೆ ಊರಹಂದಿಯಾಗಿಯೂ, ಅಭ್ಯಂಗ ಮಾಡಿದರೆ ಕುಷ್ಠರೋಗಿಯಾಗಿಯೂ ಹುಟ್ಟುವರು. ಮೂತ್ರವಿಸರ್ಜನೆ ಮಾಡಿದರೆ ದಾರಿದ್ರವೂ, ಭೋಜನ ಮಾಡಿದರೆ ನರಕವೂ ಪ್ರಾಪ್ತಿಯಾಗುವದು. ಗ್ರಹಣಕಾಲದಲ್ಲಿ ತ್ಯಾಜ್ಯಗಳು " ಗ್ರಹಣಕ್ಕಿಂತ ಮೊದಲು ಬೇಯಿಸಿದ ಅನ್ನವು ಗ್ರಹಣಾನಂತರ ತ್ಯಾಜ್ಯವು, ಮೊದಲು ಇಟ್ಟಿರುವ ಜಲಪಾನ ಮಾಡಿದರೆ “ಪಾದಕೃಚ್ಛ"ಪ್ರಾಯಶ್ಚಿತ್ತ ಹೇಳಿದೆ. ಕಾಂಜಿಕ, (ಅಂಬಲಿ) ಮಜ್ಜಿಗೆ, ತುಪ್ಪ, ತೈಲದಿಂದ ಬೇಯಿಸಿದ ಪಕ್ಷ, ಹಾಲು, ಇವು ಹಿಂದಿನವುಗಳಾದರೂ ಗ್ರಾಹ್ಯಗಳು. ಗ್ರಹಣ ಕಾಲದಲ್ಲಿ ಸಂಧಿತ ಉಪ್ಪಿನಕಾಯಿ, ಹಾಲು, ಮೊಸರು, ತುಪ್ಪ, ಇತ್ಯಾದಿಗಳನ್ನು ದರ್ಭೆಯಿಂದ ಮುಚ್ಚಿಡಬೇಕು. ವೇಧ ವಿಚಾರ ಸೂರ್ಯ ಗ್ರಹಣದಲ್ಲಿ ಗ್ರಹಣಯಾಮಕ್ಕಿಂತ ಮೊದಲು ನಾಲ್ಕು ಯಾಮಗಳೂ (೭ ೧/೨ ಘಟಿಗೆ ೧ ಯಾಮ) ಚಂದ್ರಗ್ರಹಣದಲ್ಲಿ ಮೂರು ಪ್ರಹರಗಳು ವೇಧವು, ದಿನದ ಪ್ರಥಮ ಯಾಮದಲ್ಲಿ ಸೂರ್ಯಗ್ರಹಣವಾದರ ಹಿಂದಿನ ರಾತ್ರಿಯ ನಾಲ್ಕು ಯಾಮಗಳೂ, ಎರಡನೇ ಯಾಮದಲ್ಲಿ ಗ್ರಹಣವಾದರೆ ಪೂರ್ವರಾತ್ರಿಯ ಎರಡನೇ ಯಾಮದಿಂದಲೂ ಭೋಜನವು ನಿಷಿದ್ಧವು. ಹೀಗೆ ರಾತ್ರಿಯ ಪ್ರಥಮ ಯಾಮದಲ್ಲಿ ಚಂದ್ರ ಗ್ರಹಣವಾದರೆ ಆ ದಿನದ ಹಗಲಿನ ಎರಡನೇ ಯಾಮಾದಿಗಳಲ್ಲಿ ಭೋಜನ ಮಾಡಬಾರದು. ರಾತ್ರಿಯ ಯಾಮಾದಿಗಳಲ್ಲಾದರೆ ದಿನದ ಧರ್ಮಸಿಂಧು ಮೂರನೇ ಯಾಮಾದಿಗಳಲ್ಲಿ ಭೋಜನ ನಿಷೇಧವು. ಬಾಲ, ವೃದ್ಧ, ರೋಗಿ, ಇವರ ವಿಷಯದಲ್ಲಿ ಒಂದೂವರೆ ಯಾಮ ಅಥವಾ ಮೂರು ಮುಹೂರ್ತ (೬ ಘಟಿ) ವು ವೇಧವು. ಶಕ್ತನಾದವನು ವೇಧ ಕಾಲದಲ್ಲಿ ಭೋಜನ ಮಾಡಿದರೆ ಮೂರುದಿನ ಉಪವಾಸ ಮಾಡುವದೇ ಪ್ರಾಯಶ್ಚಿತ್ತವು. ಗ್ರಹಣ ಕಾಲದಲ್ಲಿ ಭೋಜನ ಮಾಡಿದರೆ “ಪ್ರಾಜಾಪತ್ಯ ಕೃಚ್ಛ” ಪ್ರಾಯಶ್ಚಿತ್ತವು. ಚಂದ್ರನ ಗ್ರಸ್ತೋದಯದಲ್ಲಿ ನಾಲ್ಕುಯಾಮ ವೇಧವಿರುವದರಿಂದ ಅದರ ಹಿಂದಿನ ಹಗಲಿನಲ್ಲಿ ಭೋಜನವು ನಿಷಿದ್ದವು. ಕೆಲವರು ಚಂದ್ರನ ಪೂರ್ಣ ಗ್ರಾಸವಾದರೆ ನಾಲ್ಕು ಯಾಮ, ಖಂಡ ಗ್ರಾಸವಾದರ ಮೂರು ಯಾಮ ವೇಧಗಳೆಂದು ಹೇಳುವರು. ಸೂರ್ಯ ಚಂದ್ರರ ಗ್ರಸ್ತಾಸ್ತ್ರ ಗ್ರಹಣದಲ್ಲಿ ಮಾರನೇದಿನ ಉದಯವಾದಮೇಲೆ ಸ್ನಾನದಿಂದ ಶುದ್ಧನಾಗಿ ಭೋಜನ ಮಾಡತಕ್ಕದ್ದು. ಇಲ್ಲಿ “ಸ್ನಾತ್ವಾ ಶುದ್ಧ” ಹೀಗೆ ಮೂಲವಚನವಿರುವದರಿಂದ ಶುದ್ಧ ಮಂಡಲ ದರ್ಶನನಂತರದ ಸ್ನಾನಕ್ಕಿಂತ ಮೊದಲು ಸಾಮಾನ್ಯವಾಗಿ ಅಶುದ್ಧಿ ಹೇಳಿರುವದರಿಂದ ಆ ಕಾಲದಲ್ಲಿ ನೀರು ತರುವದು, ಪಾಕ ಮಾಡುವದು ಮೊದಲಾದವುಗಳನ್ನು ಶುದ್ಧಬಿಂಬದರ್ಶನಾನಂತರದ ಸ್ನಾನಕ್ಕಿಂತ ಮೊದಲು ಮಾಡುವದು ಯುಕ್ತವಲ್ಲವೆಂದು ತೋರುತ್ತದೆ. ಸೂರ್ಯನ ಗ್ರಸ್ತಾಸ್ತಾದಿಗಳಲ್ಲಿ ಪುತ್ರರುಳ್ಳ ಗೃಹಸ್ಥರಿಗೆ ಉಪವಾಸ ನಿಷೇಧವಿರುವದರಿಂದ ಆರು ಮುಹೂರ್ತಾತ್ಮಕವಾದ ವೇಧಕಾಲವನ್ನು ಬಿಟ್ಟು ಮೊದಲು ಭೋಜನ ಮಾಡಬಹುದೆಂದು ಕೆಲವರು ಹೇಳುವರು. ಪುತ್ರವಗೃಹಸ್ಥರಿಗಾದರೂ ಅಲ್ಲಿ ಉಪವಾಸವು ಕರ್ತವ್ಯವೇ, ಎಂಬ ಮಾಧವ ಮತವು ಶಿಷ್ಟಪರಿಗೃಹೀತವಾಗಿರುವದರಿಂದ ಅದು ಯುಕ್ತವು, ಸೂರ್ಯನ ಪ್ರಸ್ತಾಸ್ತದಲ್ಲೂ, ಚಂದ್ರನ ಗ್ರಸ್ತೋದಯದಲ್ಲಿಯೂ ಅಹಿತಾಗ್ನಿಯಾದವನು ಅನ್ನಾಧಾನವನ್ನು ಮಾಡಿ ಜಲದಿಂದ ವ್ರತವನ್ನು ಮಾಡತಕ್ಕದ್ದು, ಹೊರತು ಭೋಜನ ಮಾಡಕೂಡದು. ಚಂದ್ರನ ಗ್ರಸ್ತಾಸ್ತ್ರದಲ್ಲಿ ಮಾರನೇದಿನ ಸಂಧ್ಯಾವಂದನ, ಹೋಮಾದಿಗಳಿಗೆ ದೋಷವಿಲ್ಲ. ಸ್ವಲ್ಪ ಕಾಲದೊಳಗೆ ಮುಕ್ತಿಕಾಲವು ಜ್ಯೋತಿಃಶಾಸ್ತ್ರಮೂಲಕ ಗೊತ್ತಾಗುವದರಿಂದ ಮೋಕ್ಷಾನಂತರ ಸ್ನಾನ ಮಾಡಿ ಹೋಮಾದಿಗಳನ್ನು ಮಾಡತಕ್ಕದ್ದು. ಹೆಚ್ಚು ಕಾಲದಿಂದ ಮೋಕ್ಷವಾಗುವಲ್ಲಿ ಹೋಮ ಕಾಲಾತಿಕ್ರಮ ಪ್ರಸಂಗವುಂಟಾಗುವದರಿಂದ ಗ್ರಸ್ತೋದಯದಲ್ಲಿ ಮಾಡುವಂತೆಯೇ ಗ್ರಹಣ ಮಧ್ಯದಲ್ಲೇ ಸಂಧ್ಯೆಯನ್ನೂ, ಹೋಮವನ್ನೂ ಮಾಡಿ ಶಾಸ್ತ್ರದಂತೆ ಮುಕ್ತಿಯಾದಾಗ ಸ್ನಾನಮಾಡಿ, ಬ್ರಹ್ಮಯಜ್ಞಾದಿ ನಿತ್ಯಕರ್ಮವನ್ನು ಮಾಡತಕ್ಕದ್ದೆಂದು ತೋರುತ್ತದೆ. ದರ್ಶದಲ್ಲಿ ಗ್ರಹಣನಿಮಿತ್ತಕವಾದ ಶ್ರಾದ್ಧ ಮಾಡುವದರಿಂದಲೇ ದರ್ಶಶ್ರಾದ್ಧ, ಸಂಕ್ರಾಂತಿಶ್ರಾದ್ಧಗಳ ಪ್ರಸಂಗ ಸಿದ್ಧಿಯಾಗುತ್ತದೆ. ದರ್ಶಶ್ರಾದ್ಧ ಪ್ರಸಂಗದಿಂದಲೇ ಅವುಗಳನ್ನು ಮಾಡಿದಂತೆಯೇ ಅವು ಸಿದ್ಧಿಸುತ್ತವೆ. ಗ್ರಹಣ ದಿನದಲ್ಲಿ ತಂದೆ ಮೊದಲಾದವರ ವಾರ್ಷಿಕ ಶ್ರಾದ್ಧ ಪ್ರಾಪ್ತವಾದರೆ ಸಾಧ್ಯವಿದ್ದಲ್ಲಿ ಅನ್ನದಿಂದಲೇ ಮಾಡತಕ್ಕದ್ದು. ಬ್ರಾಹ್ಮಣಾದಿಗಳ ಅಭಾವವಾದರೆ ಆಮ ಅಥವಾ ಹಿರಣ್ಯದಿಂದ ಮಾಡತಕ್ಕದ್ದು. (ಇಲ್ಲಿ ಗ್ರಹಣವೇಧದಲ್ಲಿ ಶ್ರಾದ್ಧವನ್ನು ಮಾಡದೇ ಉಪವಾಸವಿದ್ದು ಮಾರನೇದಿನ ಮಾಡುವ ರೂಢಿಯು ಕಂಡುಬರುತ್ತದೆ. ಅದಕ್ಕೂ ಆಧಾರವಿದೆ.) ತನ್ನ ಜನ್ಮರಾಶಿಯಿಂದ (ಚಂದ್ರನಿರುವ ರಾಶಿ)ತೃತೀಯ, ಷಷ್ಟ, ಏಕಾದಶ, ದಶಮ ರಾಶಿಗಳಲ್ಲಿ ಗ್ರಹಣವಾದರೆ ಶುಭವು, ದ್ವಿತೀಯ, ಸಪ್ತಮ, ನವಮ, ಪಂಚಮ ರಾಶಿಗಳಲ್ಲಾದರೆ ಪರಿಚ್ಛೇದ - ೧ ೪೩ ಮಧ್ಯಮವು (ಅಷ್ಟು ಶುಭವೂ ಅಲ್ಲ ಅಷ್ಟು ಅಶುಭವೂ ಅಲ್ಲ) ಜನ್ಮ ಚತುರ್ಥ, ಅಷ್ಟಮ, ದ್ವಾದಶ ರಾಶಿಗಳಲ್ಲಾದರೆ ಅಶುಭವು. ಜನ್ಮರಾಶಿ ಅದರಲ್ಲೂ ಜನ್ಮ ನಕ್ಷತ್ರದಲ್ಲಿ ಗ್ರಹಣವಾದರೆ ಆತನಿಗೆ ವಿಶೇಷ ಅರಿಷ್ಟವು. ಆದುದರಿಂದ ಗರ್ಗೊಕಾದಿ ಶಾಂತಿಯನ್ನು ಅಥವಾ ಬಿಂಬದಾನವನ್ನಾದರೂ ಮಾಡತಕ್ಕದ್ದು. ಚಂದ್ರಗ್ರಹಣದಲ್ಲಿ ಬೆಳ್ಳಿಯ ಚಂದ್ರಬಿಂಬ, ಸುವರ್ಣದಿಂದ ನಾಗಬಿಂಬ, ಸೂರ್ಯಗ್ರಹಣದಲ್ಲಿ, ಸುವರ್ಣದಿಂದ ಸೂರ್ಯಬಿಂಬ ಮತ್ತು ನಾಗಬಿಂಬ ಹೀಗೆ ಮಾಡಿ ತುಪ್ಪವನ್ನು ತುಂಬಿದ ತಾಮ್ರ ಪಾತ್ರೆಯಲ್ಲಿ ಅಥವಾ ಕಂಚಿನ ಪಾತ್ರೆಯಲ್ಲಿ ತುಪ್ಪವನ್ನು ತುಂಬಿ ಆ ಪಾತ್ರೆಯಲ್ಲಿ ಬಿಂಬವನ್ನಿಟ್ಟು ಎಳ್ಳು, ವಸ್ತ್ರ, ದಕ್ಷಿಣೆ ಮೊದಲಾದವುಗಳಿಂದ ಸಹಿತವಾಗಿ “ಮಮಜನ್ಮರಾಶಿ, ಜನ್ಮನಕ್ಷತ್ರಸ್ಥಿತ-ಅಮುಕಗ್ರಹಣಸೂಚಿತ-ಸರ್ವಾನಿ ಪ್ರಶಾಂತಿ ಪೂರ್ವಕಂ ಏಕಾದಶಸ್ಥಾನಸ್ಥಿತ ಗ್ರಹಣಸೂಚಿತ ಶುಭಫಲಾವಾಪ್ತಯೇ ಬಿಂಬದಾನಂ ಕರಿಷ್ಯ ಹೀಗೆ ಸಂಕಲ್ಪ ಮಾಡಿ ಸೂರ್ಯ-ಚಂದ್ರ-ರಾಹುಗಳನ್ನು ಆಯಾಯ ಗ್ರಹಣದಂತೆ ಧ್ಯಾನಿಸಿ “ತಮೋಮಯ ಮಹಾಭೀಮ ಸೋಮ ಸೂರ್ಯವಿಮರ್ದನ ಹೇಮತಾರಾಪ್ರದಾನೇನ ಮಮಶಾಂತಿಪ್ರದೋಭವ, ವಿಧುಂ ತುದನಮಸ್ತುಭ್ಯಂ ಸಿಂಹಿಕಾನಂದನಾಚ್ಯುತದಾನೇ ನಾನೇನ ನಾಗಸ್ಯ ರಕ್ಷಮಾಂ ವೇಧಜಾದ್ಧಯಾತ್” ಹೀಗೆ ಉಚ್ಚಾರ ಮಾಡಿ ನಮಸ್ಕರಿಸಿ “ಇದಂ ಸೌವರ್ಣ ರಾಹುಬಿಂಬಂ ನಾಗಂ ಸೌವರ್ಣಂ ರವಿಬಿಂಬಂ- ರಾಜತಂಚಂದ್ರಬಿಂಬಂ (ವಾ) ವ್ರತ ಪೂರ್ಣ ಕಾಂಸ್ಯ ಪಾತ್ರಸಹಿತಂ ಯಥಾಶಕ್ತಿ ತಿಲವಸ್ತ್ರ ದಕ್ಷಿಣಾಸಹಿತಂ ಗ್ರಹಣಸೂಚಿತ ಅರಿಷ್ಟವಿನಾಶನಾರ್ಥಂ ತುಭ್ರಮಹಂಸಂಪ್ರದದೇ” ಹೀಗೆ ದಾನ ಮಂತ್ರದಿಂದ ಪೂಜಿತ ಬ್ರಾಹ್ಮಣನಿಗೆ ದಾನಮಾಡತಕ್ಕದ್ದು: ಹೀಗೆ ಜನ್ಮರಾಶಿಯಂತ ಚತುರ್ಥ ಮೊದಲಾದ ಅರಿಷ್ಟ ಸ್ಥಾನಗಳಲ್ಲೂ ಮಾಡತಕ್ಕದ್ದೆಂದು ತೋರುತ್ತದೆ. ಜನ್ಮರಾಶಿಯಲ್ಲಿ ಗ್ರಹಣವಾದಾಗ ಆತನು ಗ್ರಹಣಹಿಡಿದಾಗ ಸೂರ್ಯಚಂದ್ರರ ಬಿಂಬವನ್ನು ನೋಡಬಾರದು. ಇತರ ಜನರು ವಸ್ತ್ರ, ಜಲ ಮೊದಲಾದ ಸಾಧನಗಳಿಂದ ನೋಡತಕ್ಕದ್ದು. ಸಾಕ್ಷಾತ್ತಾಗಿ ನೋಡತಕ್ಕದ್ದಲ್ಲ. ಮಂಗಲ ಕಾರ್ಯಗಳಿಗೆ ಪೂರ್ಣಗ್ರಾಸ ಚಂದ್ರ ಗ್ರಹಣದಲ್ಲಿ ಅದೇ ಪೂರ್ವದ ದ್ವಾದಶಿಯಿಂದ ಮುಂದಿನ ತದಿಗೆಯ ತನಕದ ಏಳುದಿನಗಳನ್ನು ಬಿಡತಕ್ಕದ್ದು. ಸೂರ್ಯನ ಪೂರ್ಣಗ್ರಾಸದಲ್ಲಿ ಏಕಾದಶ್ಯಾದಿ ಚತುರ್ಥಿವರೆಗಿನ ಒಂಭತ್ತು ದಿನಗಳು, ಖಂಡ ಗ್ರಹಣದಲ್ಲಿ ಚತುರ್ದಶ್ಯಾದಿ ಮೂರುದಿನಗಳು ವರ್ಜಗಳು, ಜ್ಯೋತಿಷ ನಿಬಂಧಗಳಲ್ಲಿ ಗ್ರಾಸದ ಅಂಶ (ಪಾದ) ತಾರತಮ್ಯದಿಂದ ದಿನಗಳ ಹೆಚ್ಚುವಿಕೆ ಕಡಿಮೆಯಾಗುವಿಕೆಗಳನ್ನು ಹೇಳಿದೆ. ಗ್ರಸ್ತಾಸ್ತ್ರದಲ್ಲಿ ಹಿಂದಿನ ಮೂರುದಿನಗಳೂ, ಗ್ರಸ್ತೋದಯದಲ್ಲಿ ಮುಂದಿನ ಮೂರು ದಿನಗಳೂ ವರ್ಜಗಳು, ಪೂರ್ಣಗ್ರಾಸವು ಯಾವ ನಕ್ಷತ್ರದಲ್ಲಾಗಿದೆಯೋ ಆ ನಕ್ಷತ್ರವು ಆರು ತಿಂಗಳು ವರ್ಜವು, ಪಾದ ಅರ್ಧ, ಗ್ರಾಸಾದಿಗಳಲ್ಲಿ ಒಂದೂವರೆ ತಿಂಗಳು ಇತ್ಯಾದಿ ತಾರತಮ್ಯದಿಂದ ವರ್ಜಗಳಾಗುವವು. ಸಂಕಲ್ಪಿಸಿದ ದಾನ ವಸ್ತುವನ್ನು ಗ್ರಹಣಾನಂತರ ದಾನಮಾಡುವಾಗ ದ್ವಿಗುಣ ದಾನಮಾಡತಕ್ಕದ್ದು. ಹೀಗೆ ಗ್ರಹಣ ನಿರ್ಣಯೋದ್ದೇಶವು. ಸಮುದ್ರಸ್ನಾನ ನಿರ್ಣಯ ಸಮುದ್ರದಲ್ಲಿ ಹುಣ್ಣಿವ-ಅಮಾವಾಸ್ಯೆ ಮೊದಲಾದ ಪರ್ವಗಳಲ್ಲಿ ಸ್ನಾನ ಮಾಡತಕ್ಕದ್ದು. ಶುಕ್ರವಾರ-ಮಂಗಳವಾರ ಸ್ನಾನ ಮಾಡಬಾರದು. ‘ಅಶ್ವತ್ಥ, ಸಮುದ್ರಗಳು ಸೇವ್ಯವಾದವುಗಳು. ಆದರೆ ಸ್ಪರ್ಶ ಮಾಡತಕ್ಕದ್ದಲ್ಲ. ಶನಿವಾರ ಅಶ್ವತ್ಥವನ್ನೂ, ಪರ್ವಕಾಲದಲ್ಲಿ ಸಮುದ್ರವನ್ನೂ ೪೪ ಧರ್ಮಸಿಂಧು ಸ್ಪರ್ಶಮಾಡತಕ್ಕದ್ದು. " ಸೇತುವಿನಲ್ಲಿ (ರಾಮೇಶ್ವರಾದಿ) ಸ್ನಾನಮಾಡುವದಕ್ಕೆ ಕಾಲನಿಯಮವಿಲ್ಲ. ಸಮುದ್ರಸ್ನಾನ ಪ್ರಯೋಗವನ್ನು ಬೇರೆ ಗ್ರಂಥಗಳಿಂದ ತಿಳಿಯತಕ್ಕದ್ದು. ಹೀಗೆ ಸಮುದ್ರಸ್ಥಾನ ನಿರ್ಣಯವು. ತಿಥಿ-ನಕ್ಷತ್ರ-ವಾರ ವಿಶೇಷಗಳಲ್ಲಿ ವಿಧಿನಿಷೇಧಗಳು ಸಪ್ತಮೀ ದಿನದಲ್ಲಿ ಎಣ್ಣೆಯನ್ನು ಮುಟ್ಟಬಾರದು. ಮತ್ತು ಕರೇವಸ್ತ್ರವನ್ನು ಧರಿಸಬಾರದು. ನಲ್ಲಿ ಹುಡಿಗಳಿಂದ ಸ್ನಾನ ಮಾಡಬಾರದು. ಜಗಳವನ್ನು ಮಾಡಲಾಗದು. ತಾಮ್ರ ಪಾತ್ರದಲ್ಲಿ ಭೋಜನಮಾಡಬಾರದು. ನಂದಾ ತಿಥಿ (೧೬-೧೧) ಗಳಲ್ಲಿ ಅಭ್ಯಂಗವನ್ನು ಮಾಡಬಾರದು. ರಿಕ್ಷಾ ತಿಥಿ (೪-೯-೧೪) ಗಳಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು. ಜಯಾತಿಥಿ (೩-೮-೧೩) ಗಳಲ್ಲಿ ಶೂದ್ರಾದಿಗಳು ಮಾಂಸವನ್ನು ತಿನ್ನಬಾರದು. ಪೂರ್ಣಾತಿಥಿ (೫-೧೦-೧೫-೩೦) ಗಳಲ್ಲಿ ಸ್ತ್ರೀಯು ವರ್ಜಳು. ರವಿವಾರದಲ್ಲಿ ಅಭ್ಯಂಗ, ಮಂಗಳವಾರ ಕ್ಷೌರ, ಬುಧವಾರ ಸ್ತ್ರೀ, ಇವು ವರ್ಜಗಳು, ಚಿತ್ರಾ, ಹಸ್ತ, ಶ್ರವಣಗಳಲ್ಲಿ ಎಣ್ಣೆಯು ವರ್ಜವು. ವಿಶಾಖ, ಪ್ರತಿಪದಿಗಳಲ್ಲಿ ಕ್ಷೌರವು ವರ್ಜವು, ಮಘಾ, ಕೃತ್ತಿಕಾ, ಉತ್ತರಾ, ಉತ್ತರಾಷಾಢಾ, ಉತ್ತರಾಭದ್ರ ಇವುಗಳಲ್ಲಿ ಸ್ತ್ರೀಯು ವರ್ಜಳು, ಸಪ್ತಮಿಯಲ್ಲಿ ತಿಲತರ್ಪಣ, ತಿಲಭಕ್ಷಣಗಳನ್ನೂ, ಅಷ್ಟಮಿಯಲ್ಲಿ ತೆಂಗಿನಕಾಯಿಯನ್ನೂ, ನವಮಿಯಲ್ಲಿ ಹಾಲುಸೋರೆಯಕಾಯಿಯನ್ನೂ, ದಶಮಿಯಲ್ಲಿ ಪಟ್ಟಲ- ಕಾಯಿಯನ್ನೂ ಏಕಾದಶಿಯಲ್ಲಿ ಅವರೆಯನ್ನೂ, ದ್ವಾದಶಿಯಲ್ಲಿ ನೆಲಗಡಲೆಯನ್ನೂ, ತ್ರಯೋದಶಿಯಲ್ಲಿ ಬದನೇಕಾಯಿಯನ್ನೂ ಬಿಡತಕ್ಕದ್ದು. ಹುಣ್ಣಿವೆ, ಅಮಾವಾಸ್ಯೆ, ಸಂಕ್ರಾಂತಿ, ಚತುರ್ದಶೀ, ಅಷ್ಟಮಿ, ದಿನಗಳಲ್ಲಿ ಎಣ್ಣೆ, ಸ್ತ್ರೀ, ಮಾಂಸಗಳನ್ನು ಸೇವಿಸಿದರೆ ಚಾಂಡಾಲಯೋನಿಯು ಪ್ರಾಪ್ತವಾಗುವದು. ಹುಣ್ಣಿವೆ, ಸಂಕ್ರಾಂತಿ, ಅಮಾವಾಸ್ಯೆ, ದ್ವಾದಶಿ ಶ್ರಾದ್ಧದಿನಗಳಲ್ಲಿ ವಸ್ತ್ರವನ್ನೊಗೆಯಬಾರದು. ರಾತ್ರಿಯಲ್ಲಿ ಮಣ್ಣು, ಗೋಮಯಗಳನ್ನು ಮನೆಗೆ ತರಬಾರದು. ಜಲವನ್ನೂ ಸಹ ರಾತ್ರಿಯಲ್ಲಿ ತರಬಾರದು. ಪ್ರದೋಷಕಾಲದಲ್ಲಿ ಗೋಮೂತ್ರವನ್ನು ಹಿಡಿಯಬಾರದು. ಅಮಾವಾಸ್ಯೆ ಮೊದಲಾದ ಪರ್ವಗಳಲ್ಲಿ ಶಾಂತಿಗಾಗಿ ಅವಶ್ಯ ತಿಲಹೋಮ ಮಾಡತಕ್ಕದ್ದು. ಸ್ವಸಂರಕ್ಷಣೆಗಾಗಿ ದಾನಾದಿಗಳನ್ನೂ ಮಾಡತಕ್ಕದ್ದು. ಪರ್ವಗಳಲ್ಲಿ ಅಧ್ಯಯನ ಮಾಡಬಾರದು. ಶೌಚಾಚಾರ, ಆಚಮನ, ಬ್ರಹ್ಮಚರ್ಯ ಮೊದಲಾದ ನಿಯಮಗಳನ್ನು ಪಾಲಿಸತಕ್ಕದ್ದು. ಪ್ರತಿಪದಾ, ಅಮಾವಾಸ್ಯೆ, ಷಷ್ಠಿ, ನವಮಿ ತಿಥಿಗಳಲ್ಲಿ ಶ್ರಾದ್ಧ, ವ್ರತ, ಉಪವಾಸ, ರವಿವಾರ, ಮತ್ತು ಮಧ್ಯಾಹ್ನ ಸ್ನಾನದಲ್ಲಿಯೂ ಕಾಷ್ಟ್ರದಿಂದ ಹಲ್ಲನ್ನು ತಿಕ್ಕಬಾರದು. ಈ ನಿಷಿದ್ಧ ತಿಥಿಗಳಲ್ಲಿ ಹನ್ನೆರಡಾವರ್ತಿ ಬಾಯಿ ಮುಕ್ಕಳಿಸುವದು. ಅಥವಾ ಎಲೆಗಳಿಂದ ಬಾಯಿಯನ್ನು ಚೊಕ್ಕಮಾಡುವದು. ಈ ಹಿಂದೆ ಹೇಳಿದ ಎಲ್ಲ ತಿಥಿಗಳೂ ತತ್ತತ್ಕಾಲವ್ಯಾಪಿನಿಗಳು ಗ್ರಾಹ್ಯವು. ಪ್ರತಿಪದೆಯಲ್ಲಿ ಹಲ್ಲನ್ನು ಬಾರದು. ಅಂದರೆ ಎಲ್ಲಿಯ ವರೆಗೆ ಪ್ರತಿಪದೆ ಇರುವದೋ ಅಲ್ಲಿಯ ಪರ್ಯಂತ ಎಂದು ತಿಳಿಯತಕ್ಕದ್ದು. ಹೀಗೆ ಅಮಾವಾಸ್ಯೆ ಮುಂತಾದವುಗಳನ್ನೂ ತಿಳಿಯುವದೆಂದರ್ಥ. ಹೀಗೆ ಮೂವತ್ತು ಮೂರನೇ ಉದ್ದೇಶ ಹಾಗೂ ಪ್ರಥಮ ಪರಿಚ್ಛೇದವು ಮುಗಿಯಿತು. ದ್ವಿತೀಯ ಪರಿಚ್ಛೇದ ಮೊದಲು ಚೈತ್ರಮಾಸಕೃತ್ಯವು ಪ್ರಥಮ ಪರಿಚ್ಛೇದದಲ್ಲಿ ಮಾಸವಿಶೇಷಗಳನ್ನಪೇಕ್ಷಿಸದೆ ಸಾಮಾನ್ಯ ತಿಥ್ಯಾದಿ ನಿರ್ಣಯವನ್ನು ಹೇಳಲಾಯಿತು. ಈ ಎರಡನೇ ಪರಿಚ್ಛೇದದಲ್ಲಿ ಚೈತ್ರಾದಿ ಮಾಸವಿಶೇಷಗಳ ಪ್ರತಿಪಾದನೆಯಿಂದ ಪ್ರತಿಪದ ಮೊದಲಾದವುಗಳಲ್ಲಿ ವಿಹಿತವಾದ ಇಡೀ ಸಂವತ್ಸರದ ಕೃತ್ಯಗಳನ್ನು ಸಾರರೂಪದಿಂದ ಸಂಗ್ರಹಿಸಿ ಹೇಳಲಾಗುವದು. ಇಲ್ಲಿ ಸಾಮಾನ್ಯ ಶುಕ್ಲ ಪ್ರತಿಪದೆಯಿಂದ ಅಮಾವಾಸ್ಯೆಯವರೆಗಿನ ಮಾಸ (ಅಮಾಂತಮಾಸ) ವನ್ನೇ ಹೇಳಲಾಗುತ್ತಿದೆ. ದಾಕ್ಷಿಣಾತ್ಯರು ಹೆಚ್ಚಾಗಿ ಈ ಅಮಾಂತ ಮಾಸವನ್ನೇ ಆದರಿಸುವದರಿಂದ ಇದನ್ನಾಧರಿಸಿ ನಿರ್ಣಯವು ಹೇಳಲ್ಪಡುತ್ತದೆ. ಇದರಲ್ಲಿ ಕೆಲ ವಿಷಯಗಳು ಪ್ರಥಮ ಪರಿಚ್ಛೇದದಲ್ಲಿ ಹೇಳಲ್ಪಟ್ಟಿವೆ. ಈ ವಿಶೇಷೋಕ್ತಿಗಳಿಂದ ಅವುಗಳನ್ನೇ ದೃಢೀಕರಿಸಿ ಹೇಳಿರುವುದರಿಂದ ಪುನರುಕ್ತಿ ದೋಷವನ್ನೆಣಿಸತಕ್ಕದ್ದಲ್ಲ. ಮೇಷಸಂಕ್ರಾಂತಿಯಲ್ಲಿ ಹಿಂದಿನ ಮತ್ತು ಮುಂದಿನ ಹತ್ತು ಹತ್ತು ಘಟಿಗಳು ಪುಣ್ಯಕಾಲವು. ರಾತ್ರಿಯಲ್ಲಿ ಅರ್ಧರಾತ್ರಿಯ ಒಳಗೆ ಸಂಕ್ರಮಣವಾದರೆ ಪೂರ್ವದಿನದ ಉತ್ತರಾರ್ಧವು ಪುಣ್ಯಕಾಲವು ಅರ್ಧರಾತ್ರಿಯ ನಂತರವಾದರೆ ಮಾರನೆಯ ದಿನದ ಪೂರ್ವಾರ್ಧವು ಪುಣ್ಯಕಾಲವು. ಚೈತ್ರ ಶುಕ್ಲ ಪ್ರತಿಪದೆಯಲ್ಲಿ ವತ್ಸರಾರಂಭವಾಗುವದು. ಅದರಲ್ಲಿ ಸೂರ್ಯೋದಯವ್ಯಾಪಿನಿಯು ಗ್ರಾಹ್ಯವು. ಎರಡೂ ದಿನ ಉದಯವ್ಯಾಪ್ತಿಯಿದ್ದರೆ ಅಥವಾ ವ್ಯಾಪ್ತಿಯಿರದಿದ್ದರೆ ಪೂರ್ವದಿನವೇ ಗ್ರಾಹ್ಯವು, ಚೈತ್ರವು ಅಧಿಕ ಮಾಸವಾದರೆ ಹೊಸ ಸಂವತ್ಸರಾರಂಭದಲ್ಲಿ ಮಾಡತಕ್ಕ “ತೈಲಾಭ್ಯಂಗ” ಸಂಕಲ್ಪಾದಿಗಳಲ್ಲಿ ಹೊಸ ಸಂವತ್ಸರದ ನಾಮ ಕೀರ್ತನ ಮೊದಲಾದವುಗಳನ್ನು ಮಲಮಾಸ ಪ್ರತಿಪದೆಯಲ್ಲೇ ಮಾಡತಕ್ಕದ್ದು, ಮನೆಗಳ ಮೇಲೆ ಮಾಡುವ ಧ್ವಜಾರೋಹಣ, ನಿಂಬಪತ್ರಪ್ರಾಶನ, ವತ್ಸರಾದಿ ಫಲ ಶ್ರವಣ, ನವರಾತ್ರಾರಂಭ, ಹಾಗೂ ನವರಾತ್ರೋತ್ಸವಾದಿಗಳ ನಿಮಿತ್ತದಿಂದ ಮಾಡುವ ಅಭ್ಯಂಗ, ಮೊದಲಾದವುಗಳನ್ನು ಶುದ್ಧಮಾಸದ ಪ್ರತಿಪದೆಯಲ್ಲಿ ಮಾಡತಕ್ಕದ್ದು. ವತ್ಸರಾರಂಭ ನಿಮಿತ್ತಕವಾದ ಅಭ್ಯಂಗವನ್ನಾದರೂ ಶುದ್ಧ ಪ್ರತಿಪದೆಯಲ್ಲೇ ಮಾಡತಕ್ಕದ್ದೆಂದು “ಮಯೂಖ"ದಲ್ಲಿ ಹೇಳಿದೆ. ಇದರಲ್ಲಿ ತೈಲಾಭ್ಯಂಗವು ನಿತ್ಯವು, ಮಾಡದಿದ್ದರೆ ದೋಷವನ್ನು ಹೇಳಿದೆ. ಧರ್ಮಸಿಂಧು ಇದೇ ಪ್ರತಿಪದೆಯಲ್ಲಿ “ದೇವಿನವರಾತ್ರಾರಂಭವು ಉಕ್ತವಾಗಿದೆ. ಪರಯುತವಾದ ಪ್ರತಿಪದೆಯು ಮುಹೂರ್ತ ಮಾತ್ರವಿದ್ದರೂ ಗ್ರಾಹ್ಯವು, ಮುಹೂರ್ತ ಎಂದರೆ ಎರಡು ಘಟಿಗಳು, ದಿನಮಾನ ಹೆಚ್ಚು ಕಡಿಮೆಯಾದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗುವದು. ಇದರಂತೆ ರಾತ್ರಿಯಲ್ಲಿಯೂ ತಿಳಿಯುವದು. ದಿನದ ಅಥವಾ ರಾತ್ರಿಯ ಹದಿನೈದನೇ ಒಂದಂಶಕ್ಕೆ ಮುಹೂರ್ತ ಸಂಜ್ಞೆಯಿದ ಎಂದರ್ಥ. ಪಾರಣಾದಿ ವಿಶೇಷನಿರ್ಣಯವನ್ನು ಶರತ್ಕಾಲದ ನವರಾತ್ರಿಯಂತೆಯೇ ತಿಳಿಯತಕ್ಕದ್ದು. ಇದರಲ್ಲಿಯೇ ಪ್ರವಾದಾನ” ಆರಂಭವನ್ನು ಹೇಳಿದ (ಪ್ರಪಾದಾನ ಅಂದರೆ ಅರವಟ್ಟಿಗೆಯನ್ನಿಟ್ಟು ಪಥಿಕರಿಗೆ ಜಲವನ್ನು ಕೊಡುವದು) “ಪ್ರಪೇಯಂ ಸರ್ವ ಸಾಮಾನ್ಯ ಭೂತಭ: ಪ್ರತಿಪಾದಿತಾ| ಅಸ್ಕಾಃ ಪ್ರಸಾದಾತರಃ ತೃಪ್ಯಂತು ಹಿ ಪಿತಾಮಹಾಃ’ ಈ ಮಂತ್ರದಿಂದ ಎಡೆಬಿಡದೆ ನಾಲ್ಕು ತಿಂಗಳ ಪರ್ಯಂತ ಜಲದಾನಮಾಡತಕ್ಕದ್ದು. ಪ್ರಪಾದಾನಮಾಡಲಸಮರ್ಥನಾದರೆ ಪ್ರತಿದಿನ ಉದಕುಂಭವನ್ನು ಬ್ರಾಹ್ಮಣರ ಮನೆಗೆ ಒಯ್ದು ಕೊಡತಕ್ಕದ್ದು. ಅದಕ್ಕೆ ಮಂತ್ರವಿದೆ. “ಏಷಧರ್ಮಘಟೋದ ಬ್ರಹ್ಮವಿಷ್ಣು ಶಿವಾತ್ಮಕಃ|ಅಸ್ಕಪ್ರದಾನಾತ್ಸಕಲಾಮಮಸಂತು ಮನೋರಥಾ’ ಎಂದು ಹೇಳಿಕೊಡತಕ್ಕದ್ದು. ಈ ಪ್ರತಿಪದೆಯು “ಕಲ್ಪಾದಿಯೂ ಆಗಿದೆ. ವೈಶಾಖ ಶುಕ್ಲ ತೃತೀಯಾ, ಫಾಲ್ಕುನ ಕೃಷ್ಣ ತೃತೀಯಾ, ಚೈತ್ರ, ಶುಕ್ಲ ಪಂಚಮೀ ಮಾಘ, ಶುಕ್ಲ ತ್ರಯೋದಶೀ, ಕಾರ್ತಿಕ ಶುಕ್ಲ ಸಪ್ತಮೀ, ಮಾರ್ಗಶೀರ್ಷ ಶುಕ್ಲ ನವಮೀ, ಇವೂ “ಕಲ್ಪಾದಿ’ಗಳೇ ಎಂದು ತಿಳಿಯುವದು. ಇವುಗಳಲ್ಲಿ ಶ್ರಾದ್ಧ ಮಾಡಿದರೆ ಪಿತೃತೃಪ್ತಿಯಾಗುವದು. ಕೆಲವರು ಚೈತ್ರ ಶುಕ್ಲ ಪ್ರತಿಪದೆಯು “ಮತ್ಸಜಯಂತಿ ಎನ್ನುವರು. ಚೈತ್ರದಲ್ಲಿ ಮೊಸರು, ಹಾಲು, ತುಪ್ಪ, ಜೇನುತುಪ್ಪ ಇವುಗಳನ್ನು ವರ್ಜಮಾಡಿ ದಂಪತೀಪೂಜಾರೂಪವಾದ “ಗೌರೀವ್ರತ"ವನ್ನು ಮಾಡತಕ್ಕದ್ದು. ಚೈತ್ರ ಶುಕ್ಲ ದ್ವಿತೀಯಾ ಸಂಜೆಯಲ್ಲಿ ಬಾಲೇಂದು ಪೂಜಾರೂಪವಾದ “ಚಂದ್ರವ್ರತ” ವನ್ನು ಹೇಳಿದೆ. ಇದರಲ್ಲಿಯೇ “ದಮನಕ"ದಿಂದ (ದಮನಕವೆಂದರೆ ಸಾಮಾನ್ಯ ಕಾಡುತುಳಸಿಗೆ ಹೋಲುವ ಒಂದು ವನಸ್ಪತಿ ವಿಶೇಷ. ಮರಾಠಿಯಲ್ಲಿ “ದವಣಾ"ಎನ್ನುವರು.) ಗೌರೀ -ಶಿವಪೂಜೆಯನ್ನು ಹೇಳಿದೆ. ಚೈತ್ರ ಶುಕ್ಲ ತೃತೀಯೆಯಲ್ಲಿ ಶಿವಸಹಿತಳಾದ ಗೌರಿಯನ್ನು ಪೂಜಿಸಿ “ಆಂದೋಲನವ್ರತವನ್ನು ಮಾಸವಿಡೀ ಮಾಡತಕ್ಕದ್ದು. ತೃತೀಯೆಯು ಮುಹೂರ್ತಮಾತ್ರವಿದ್ದರೂ ಚತುರ್ಥಿಯುಕ್ತವಾದದ್ದು ಗ್ರಾಹ್ಯವು. ದ್ವಿತೀಯಾ ಯುಕ್ತವಾದದ್ದನ್ನು ಬಿಡತಕ್ಕದ್ದು, ಚತುರ್ಥಿಯುಕ್ತವಾದ ತೃತೀಯಯಲ್ಲಿ ವೈಧೃತಿ ಮೊದಲಾದ ಯೋಗವಿರುತ್ತಿದ್ದರೂ ಅದೇ ಗ್ರಾಹ್ಯವು. ಯಾಕೆಂದರೆ ದ್ವಿತೀಯಾಯೋಗನಿಷೇಧವು ಬಲವಾದದ್ದು. ಇದೇ ತದಿಗೆಯಲ್ಲಿ ಶ್ರೀರಾಮಚಂದ್ರ “ದೋಲೋತ್ಸವ” ಹಾಗೂ ಇತರ ದೇವತಾ ದೋಲೋತ್ಸವಗಳನ್ನಾರಂಭಿಸಿ ಇಡೀ ತಿಂಗಳು ಪೂಜಾದಿಗಳಿಂದ ಉತ್ಸವವನ್ನಾಚರಿಸತಕ್ಕದ್ದು. ಈ ತದಿಗೆಯು “ಮಾದಿ"ಯೂ ಆಗಿದೆ. ಮನಾದಿಗಳು ಹದಿನಾಲ್ಕು ಇವೆ. ಅವುಗಳನ್ನೆಲ್ಲ ಇಲ್ಲಿಯೇ ಹೇಳಲಾಗುತ್ತಿದೆ. ಚೈತ್ರದಲ್ಲಿ ಶುಕ್ಲ ತೃತೀಯಾ ಮತ್ತು ಹುಣ್ಣಿವೆ (೨) ಜೇಷ್ಠದಲ್ಲಿಯ ಹುಣ್ಣಿಮೆ (೩) ಆಷಾಢ ಶುಕ್ಲ ದಶಮೀ ಮತ್ತು ಹುಣ್ಣಿವೆ (೫) ಶ್ರಾವಣ ಕೃಷ್ಣ ಅಷ್ಟಮಿ (೬) ಭಾದ್ರಪದ ಶುಕ್ಲ ತೃತೀಯಾ (೭) ಆಶ್ವಿನ ಶುಕ್ಲ ನವಮಿ(೮) ಕಾರ್ತಿಕ ಶುಕ್ಲ ದ್ವಾದಶಿ ಮತ್ತು ಹುಣ್ಣಿವೆ (೧೦) ಪುಷ್ಯ ಶುಕ್ಲ ಏಕಾದಶೀ (೧೧) ಮಾಘ ಶುಕ್ಲ ನವಮೀ (೧೨) ಫಾಲ್ಗುನ ಹುಣ್ಣಿವೆ ಅಮಾವಾಸ್ಯೆಗಳು (೧೪) ಹೀಗೆ ಹದಿನಾಲ್ಕು ಮಾದಿಗಳಿವೆ. ಶುಕ್ಲಪಕ್ಷದಲ್ಲಿಯ ಮಾದಿಗಳು ದೈವ ಮತ್ತು ಪಿತೃಕರ್ಮಗಳಿಗೆ ಪರಿಚ್ಛೇದ - ೨ ೪೭ ಪೂರ್ವಾಹ್ನವ್ಯಾಪಿನಿಗಳು ಗ್ರಾಹ್ಯಗಳು. ಇಲ್ಲಿ “ಪೂರ್ವಾಹ್ನ” ವೆಂದರೆ ದಿನವನ್ನು ಎರಡು ಪಾಲು ಮಾಡಿದ ಪೂರ್ವಭಾಗ. ಇದರಲ್ಲಿಯೇ ಶ್ರಾದ್ಧಾದಿಗಳನ್ನು ಮಾಡತಕ್ಕದ್ದು. ಪೂರ್ವಾಹ್ನ ಶ್ರಾದ್ಧದಲ್ಲಿ ತೊಂದರೆಯಾದಾಗ “ಅಪರಾಹ್ನ"ದಲ್ಲಿ ಶ್ರಾದ್ಧಮಾಡತಕ್ಕದ್ದು. ಹೊರತು ದಿನದ ಉತ್ತರಭಾಗದಲ್ಲಿಯ ಮಧ್ಯಾಹ್ನದಲ್ಲಿ ಮಾಡತಕ್ಕದ್ದಲ್ಲ ಎಂದಭಿಪ್ರಾಯ. ಕೃಷ್ಣಪಕ್ಷದಲ್ಲಿ ಐದು ವಿಭಾಗ ಮಾಡಿದ ದಿನದ ನಾಲ್ಕನೇ ಭಾಗವಾದ ಅಪರಾಹ್ನವ್ಯಾಪಿನಿಯಿರುವ ತಿಥಿಯು ಗ್ರಾಹ್ಯವು. ಮಾದಿಗಳಲ್ಲಿ ದೈವಕಾರ್ಯವಿರಲಿ, ಪಿತೃಕಾರ್ಯವಿರಲಿ ಪಿಂಡರಹಿತವಾಗಿ ಶ್ರಾದ್ಧ ಮಾಡತಕ್ಕದ್ದು. ಇವುಗಳಲ್ಲಿ ಶ್ರಾದ್ಧ ಮಾಡಿದರೆ ಎರಡು ಸಹಸ್ರವರ್ಷ ಪರ್ಯಂತ ಪಿತೃಗಳು ತೃಪ್ತರಾಗಿರುತ್ತಾರೆ. ಮಾದಿಶ್ರಾದ್ಧಗಳು ನಿತ್ಯಗಳಾಗಿವೆ. ಇವುಗಳನ್ನು ಮಾಡಲಾಗದಿದ್ದರೆ “ತ್ವಂ ಭುವಃ ಪ್ರತಿಮಾನಂ” ಎಂಬ ಋಗ್ವದ ಮಂತ್ರವನ್ನು ನೂರಾವರ್ತಿ ಜಲದಲ್ಲಿ ನಿಂತು ಜಪಮಾಡತಕ್ಕದ್ದು. ಇದು ಅದಕ್ಕೆ ಪ್ರಾಯಶ್ಚಿತ್ತವು. ಇದರಂತ ಷಣ್ಣವತಿ (೯೬) ಶ್ರಾದ್ಧಗಳೂ ನಿತ್ಯಗಳೇ ಆಗಿವೆ. ಅಮಾವಾಸ್ಯೆ (೧೨) ಯುಗಾದಿ ಅಥವಾ ಕಲ್ಪಾದಿಗಳು (೪) ಮಾದಿ (೧೪) ಸಂಕ್ರಾಂತಿ (೧೨) ವೈಧೃತಿ (೧೨) ವ್ಯತೀಪಾತ (೧೨) ಮಹಾಲಯ (೧೫) ಅಷ್ಟಕಾ (೫) ಅನ್ನಷ್ಟಕಾ (೫) ಪೂರ್ವದು (೫) ಅಂತೂ ತೊಂಬತ್ತಾರು ಶ್ರಾದ್ಧಗಳು. ದಶಾವತಾರ ಜಯಂತೀ ನಿರ್ಣಯ ಚೈತ್ರ ಶುಕ್ಲ ತದಿಗೆಯ ಅಪರಾಹ್ನದಲ್ಲಿ “ಮತ್ಸಾವತಾರ"ವಾಗಿದೆ. ಕಾರಣ ಇದು “ಮಜಯಂತೀ. “ವೈಶಾಖ ಹುಣ್ಣಿಮೆ ಸಾಯಂಕಾಲದಲ್ಲಿ ಕೂರ್ಮಾವತಾರವಾಗಿದೆ. ಭಾದ್ರಪದ ಶುಕ್ಲ ತೃತೀಯೆಯ ಅಪರಾಹ್ನದಲ್ಲಿ “ವರಾಹ ಅವತಾರವು ವೈಶಾಖ ಶುಕ್ಲ ಚತುರ್ದಶಿಯ ಸಾಯಂಕಾಲದಲ್ಲಿ ನರಸಿಂಹ ಅವತಾರ"ವು. ಭಾದ್ರಪದ ಶುಕ್ಲ ದ್ವಾದಶಿಯ ಮಧ್ಯಾಹ್ನದಲ್ಲಿ “ವಾಮನಾವತಾರವು ವೈಶಾಖ ಶುಕ್ಲ ತೃತೀಯೆಯ ಮಧ್ಯಾಹ್ನದಲ್ಲಿ “ಪರಶುರಾಮಾವತಾರವು”, ಇದು ಪ್ರದೋಷದಲ್ಲಾಗಿದೆಯೆಂದು ಕೆಲವರ ಮತವು. ಚೈತ್ರ ಶುಕ್ಲ ನವಮಿಯ ಮಧ್ಯಾಹ್ನದಲ್ಲಿ “ದಾಶರಥಿರಾಮಾವತಾರವು. ಶ್ರಾವಣ ಕೃಷ್ಣ ಅಷ್ಟಮಿಯ ಅರ್ಧರಾತ್ರಿಯಲ್ಲಿ “ಶ್ರೀಕೃಷ್ಣಾವತಾರವು ಅಶ್ವಿನ ಶುಕ್ಲ ದಶಮಿಯ ಸಾಯಂಕಾಲದಲ್ಲಿ “ಬೌದ್ಧಾವತಾರವು, ಶ್ರಾವಣ ಶುಕ್ಲ ಷಷ್ಠಿಯ ಸಾಯಂಕಾಲದಲ್ಲಿ “ಕವತಾರವು”. ಇವುಗಳೆಲ್ಲ ಆಯಾಯ ಅವತಾರಗಳ ಉತ್ಪತ್ತಿಯ ಕಾಲವ್ಯಾಪಿನಿಯಾದವುಗಳು ಗ್ರಾಹ್ಯಗಳು, ಮತ್ಸ, ಕೂರ್ಮ, ವರಾಹ, ಬುದ್ಧ, ಕಲ್ಕಿ, ಇವುಗಳ ಉತ್ಪತ್ತಿ ಕಾಲದಲ್ಲಿ ಮತಭೇದವಿದೆ. ಆಷಾಢಾದಿ ಬೇರೆ ಬೇರೆ ಮಾಸಗಳನ್ನು ಹೇಳಿದೆ. ಏಕಾದಶ್ಯಾದಿ ತಿಥಿಗಳನ್ನೂ ಪ್ರಾತಃಕಾಲಾದಿ ಬೇರೆ ಕಾಲಾಂತರಗಳನ್ನೂ ಕೆಲಗ್ರಂಥಗಳಲ್ಲಿ ಹೇಳಲಾಗಿದೆ. ಹೀಗೆ ವಚನಾಂತರಗಳು ಕಲ್ಲಭೇದದಿಂದ ಹೇಳಲ್ಪಟ್ಟಿವೆಯೆಂದು ತಿಳಿಯತಕ್ಕದ್ದು. ಸ್ವೀಕೃತವಾದ ಪಕ್ಷಕ್ಕೆ ಅನುಸರಿಸಿ ಆಯಾಯ ಉಪಾಸಕರು ಉಪೋಷಣ ಮಾಡತಕ್ಕದ್ದು. ಇವುಗಳಲ್ಲಿ ರಾಮಜಯಂತಿ, ಕೃಷ್ಣಜಯಂತಿ, ನೃಸಿಂಹಜಯಂತಿಗಳು ನಿತ್ಯಗಳು. ಎಲ್ಲರೂ ಉಪೋಷಣಮಾಡತಕ್ಕದ್ದು. ದಮನಕಾರೋಪಣಾದಿ ವಿಚಾರ ಚೈತ್ರ ಶುಕ್ಲ ಚತುರ್ಥಿಯಲ್ಲಿ (ಮಧ್ಯಾಹ್ನವ್ಯಾಪಿನಿ) ಲಡ್ಡು ಮೊದಲಾದವುಗಳಿಂದ ಶ್ರೀ ಗಣಪತಿಯನ್ನರ್ಚಿಸಿ ದಮನಕಾರೋಪಣ ಮಾಡತಕ್ಕದ್ದು. ವಿಘ್ನನಾಶಕನಾದ ಗಣಪತಿಯನ್ನು ಎಲ್ಲ ಧರ್ಮಸಿಂಧು ವಿಧದಿಂದ ತೃಪ್ತಿಪಡಿಸತಕ್ಕದ್ದು. ಚೈತ್ರ ಶುಕ್ಲ ಪಂಚಮಿಯಲ್ಲಿ ಅನಂತಾದಿನಾಗಗಳನ್ನು ಪೂಜಿಸಿ, ಹಾಲು, ತುಪ್ಪಗಳನ್ನು ನೈವೇದ್ಯ ಮಾಡುವದು. ಇದೇ, ಪಂಚಮಿಯಲ್ಲಿ ಲಕ್ಷ್ಮೀಪೂಜೆ ಹಾಗೂ ಉಚ್ಚಶ್ರವಸ್ ಮೊದಲಾದವುಗಳ ಪೂಜಾರೂಪವಾದ “ಹಯವ್ರತವೂ ಹೇಳಲ್ಪಟ್ಟಿದೆ. ಇಲ್ಲಿ ಸರ್ವತ್ರ ಪಂಚಮಿಯು ಸಾಮಾನ್ಯ ನಿರ್ಣಯಾನುಸಾರ ಗ್ರಾಹ್ಯವು. ಎಲ್ಲಿ ವಿಶೇಷ ನಿರ್ಣಯವನ್ನು ಹೇಳಿಲ್ಲವೋ ಅಲ್ಲಿ ಪ್ರಥಮಪರಿಚ್ಛೇದೋಕ್ತ ಸಾಮಾನ್ಯ ನಿರ್ಣಯವನ್ನೇ ಸ್ವೀಕರಿಸತಕ್ಕದ್ದು. ಷಷ್ಠಿಯಲ್ಲಿ ಸುಬ್ರಹ್ಮಣ್ಯನಿಗೆ ದಮನಕಾರೋಪಣ ಮಾಡತಕ್ಕದ್ದು. ಸಪ್ತಮಿಯಲ್ಲಿ ಸೂರ್ಯನಿಗೆ ದಮನಕ ಪೂಜೆಯು, ನವಮಿಯಲ್ಲಿ ದೇವಿಗೆ ಅರ್ಪಿಸುವದು. ಎಲ್ಲ ದೇವತೆಗಳಿಗೂ ಪೂರ್ಣಿಮೆಯಲ್ಲಿ ದಮನಕವನ್ನರ್ಪಿಸುವದು. ಇದರ ವಿವರವನ್ನು ಬೇರೆ ಗ್ರಂಥಗಳಲ್ಲಿ ನೋಡುವದು, ಚೈತ್ರ ಶುಕ್ಲ ಅಷ್ಟಮಿಯಲ್ಲಿ ‘ಭವಾನಿ ದೇವಿ’ಯ ಉತ್ಪತ್ತಿಯು. ಈ ವಿಷಯದಲ್ಲಿ ನವಮೀ ಯುಕ್ತವಾದದ್ದು ಗ್ರಾಹ್ಯವು, ಪುನರ್ವಸುಯುಕ್ತವಾದ ಈ ಅಷ್ಟಮಿಯಲ್ಲಿ ಅಷ್ಟ ಅಶೋಕಕಲಿಕಾ (ಎಂಟು ಅಶೋಕಮೊಗ್ಗೆ) ಪ್ರಾಶನ ಮಾಡತಕ್ಕದ್ದಿದೆ. “ತ್ಯಾಮಶೋಕ ನರಾಭೀಷ ಮಧುಮಾಸ ಸಮುದ್ಭವ | ಪಿಬಾಮಿ ಶೋಕಸಂತ ಮಾಮಶೋಕಂ ಸದಾ ಕುರು||” ಈ ಮಂತ್ರದಿಂದ ಪ್ರಾಶನಮಾಡತಕ್ಕದ್ದು. ಇದರಲ್ಲಿ ಕೆಲ ಯೋಗವಿಶೇಷದಿಂದ ಕೆಲ ಕೃತ್ಯಗಳಿವೆ. ಚೈತ್ರ ಮಾಸದ ಈ ಶುಕ್ಲಾಷ್ಟಮಿಗೆ ಪುನರ್ವಸು - ಬುಧವಾರ ಯೋಗವಾದಾಗ ಪ್ರಾತಃಸ್ನಾನ ಮಾಡಿದರೆ “ವಾಜಪೇಯಯಜ್ಞದ ಫಲವು ಸಿಗುವದು. ಚೈತ್ರ ಶುಕ್ಲ ನವಮಿ ಇದು ರಾಮನವಮಿ, ಶ್ರೀರಾಮನ ಜನ್ಮದಿನ, ಚೈತ್ರ ಶುಕ್ಲ ನವಮಿ ಪುನರ್ವಸು ನಕ್ಷತ್ರ, ಕರ್ಕಲಗ್ನ, ಮಧ್ಯಾಹ್ನ ಸಮಯ ಐದು ಗ್ರಹರು ಉಚ್ಚರು. ಹೀಗಿರುವಾಗ ಶ್ರೀರಾಮನ ಜನನವು ಎಂದು ಹೇಳಿದೆ. ಮಧ್ಯಾಹ್ನವ್ಯಾಪಿನಿಯಾದ ನವಮಿಯಲ್ಲಿ ಉಪವಾಸ ಮಾಡತಕ್ಕದ್ದು. ಮುಂದಿನ ದಿನ ಮಧ್ಯಾಹ್ನವ್ಯಾಪಿನಿಯಾದರೆ ಅದನ್ನೇ ಸ್ವೀಕರಿಸತಕ್ಕದ್ದು. ಎರಡೂ ದಿನ ಮಧ್ಯಾಹ್ನವ್ಯಾಪ್ತಿ ಅಥವಾ ಅವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು. ಅಷ್ಟಮೀ ವಿದ್ಧವಾದದ್ದು ನಿಷಿದ್ದವು. ಆದಕಾರಣ ಮುಂಚಿನದಿನ ಪೂರ್ಣಮಧ್ಯಾಹ್ನ ವ್ಯಾಪ್ತಿಯಿದ್ದರೂ ಅದನ್ನು ಬಿಟ್ಟು, ಮಧ್ಯಾಹ್ನ ಏಕದೇಶವ್ಯಾಪಿನಿಯಾದರೂ ಪರವೇ ಗ್ರಾಹ್ಯವು. ಇನ್ನು ಕೆಲವರು ಪುನರ್ವಸುಯುಕ್ತ ಹಾಗೂ ಮಧ್ಯಾಹ್ನವ್ಯಾಪ್ತ, ಆದರೆ ಅಷ್ಟಮೀವಿದ್ದ ಆಗ ಅಷ್ಟಮೀ ವಿದ್ದವಾದದನ್ನು ಬಿಟ್ಟು ಮಾರನೇದಿನ ನವಮಿಯು ಮೂರು ಮುಹೂರ್ತವಿದ್ದರೂ ನವಮಿಯಲ್ಲಿಯೇ ಸರ್ವರೂ ಉಪೋಷಣಮಾಡತಕ್ಕದ್ದು. ದಶಮಿಯು ಪ್ರಾಸವಾಗಿ ಸ್ಮಾರ್ತರಿಗೆ ಏಕಾದಶಿ ವ್ರತ ಪ್ರಾಪ್ತವಾಗಿ ಪಾರಣೆಯು ಸಂಭವಿಸುವಾಗ ಸ್ಮಾರ್ತರು ಅಷ್ಟಮೀ ವಿದ್ಧವಾದದ್ದರಲ್ಲಿ ಉಪೋಷಣ ಮಾಡತಕ್ಕದ್ದು. ವೈಷ್ಣವರು ಮೂರು ಮುಹೂರ್ತಗಳುಳ್ಳ ಪರದಿನವೇ ಉಪವಾಸಮಾಡತಕ್ಕದ್ದು. ಶುದ್ಧ ನವಮಿಯು ಲಭಿಸದಿರುವಲ್ಲಿ ಅಂಥ ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದರೂ ಸರ್ವರೂ ಅಷ್ಟಮೀ ವಿದ್ಧವಾದ ನವಮಿಯಲ್ಲಿಯೇ ಉಪವಾಸ ಮಾಡತಕ್ಕದ್ದು ಎಂದು ಹೇಳುವರು. ಈ ವ್ರತವು ನಿತ್ಯ ಹಾಗೂ ಕಾಮ್ಯವಾಗಿದೆ. ವ್ರತಪ್ರಯೋಗವು ಅಷ್ಟಮಿಯಲ್ಲಿ ಆಚಾರ್ಯನನ್ನರ್ಚಿಸಿ “ಶ್ರೀರಾಮ ಪ್ರತಿಮಾದಾನಂ ಕರಿಷ್ಯಹಂಪರಿಚ್ಛೇದ - ೨ VE ದ್ವಿಜೋತ್ತಮ|| ತತ್ರಾಚಾರ್ಯ ಭವಪ್ರೀತಃ ಶ್ರೀ ರಾಮೋಸಿ ತ್ವಮೇವ ಮೇ||” ಹೀಗೆ ಆಚಾರ್ಯನನ್ನು ಪ್ರಾರ್ಥಿಸುವದು. “ನವಮ್ಮಾ ಅಂಗಭೂತೇನ ಏಕ ಭಕ್ತನ ರಾಘವ ಇಕ್ಷಾಕುವಂಶ ತಿಲಕ ಪ್ರೀತೋಭವ ಭವಪ್ರಿಯ” ಹೀಗೆ “ಏಕಭಕ್ತವ್ರತ"ವನ್ನು ಸಂಕಲ್ಪಿಸತಕ್ಕದ್ದು. ಆಚಾರ್ಯಸಹಿತನಾಗಿ ಹವಿಷ್ಟಾನ್ನವನ್ನೂಟಮಾಡತಕ್ಕದ್ದು. ಪೂಜಾಮಂಟಪ ಹಾಗೂ ವೇದಿಕೆಯನ್ನು ನಿರ್ಮಿಸತಕ್ಕದ್ದು. ನವಮಿಯ ಪ್ರಾತಃಕಾಲದಲ್ಲಿ “ಉಪೋಷ ನವಂತ್ವದ ಯಾಮೇಷ್ಟಷ್ಟಸುರಾಘವ ತೇನ ಪ್ರೀತೋಭವ ತ್ವಂ ಮೇ ಸಂಸಾರಾತ್ ತಾಹಿ ಮಾಂ ಹರೇ” ಹೀಗೆ ಉಪವಾಸವನ್ನು ಸಂಕಲ್ಪಿಸಿ’ಇಮಾಂಸ್ವರ್ಣಮಯೀಂರಾಮ ಪ್ರತಿಮಾಂಸ್ಟಾಂಪ್ರಯತ್ನತಃ ಶ್ರೀ ರಾಮಪ್ರೀತಿಯೇ ದಾ ರಾಮಭಕ್ತಾಯ ಧೀಮತ|| ಹೀಗೆ ಪ್ರತಿಮಾದಾನವನ್ನೂ ಸಂಕಲ್ಪಿಸತಕ್ಕದ್ದು. “ಶ್ರೀ ರಾಮನವಮೀ ವ್ರತಾಂಗಭೂತಾಂ ಷೋಡಶೋಪಚಾರ: ಶ್ರೀರಾಮಪೂಜಾಂ ಕರಿಷ್ಯ ಹೀಗೆ ಸಂಕಲ್ಪಿಸಿ ವೇದಿಕೆಯಲ್ಲಿ ಬರೆದ ಸರ್ವತೋಭದ್ರ ಮಂಡಲದಲ್ಲಿ ಕಲಶವನ್ನು ಸ್ಥಾಪಿಸಿ ಅದರಲ್ಲಿ ವಸ್ತ್ರಸಹಿತವಾದ ಪೂರ್ಣಪಾತ್ರೆಯನ್ನಿಟ್ಟು ಶ್ರೀರಾಮ ಪ್ರತಿಮೆಯನ್ನು ಅಗುತ್ತಾರಣಾದಿ ವಿಧಿಯಿಂದ ಸಂಸ್ಕರಿಸಿ ಅದರಲ್ಲಿಟ್ಟು ಪುರುಷಸೂಕ್ತದಿಂದ ಷೋಡಶೋಪಚಾರ ಪೂಜೆಮಾಡಿ ಪೂಜೆಯ ಅಂತ್ಯದಲ್ಲಿ “ರಾಮಸ್ಥ ಜನನೀಚಾಸಿ ರಾಮಾತ್ಮಕಮಿದಂ ಜಗತ್| ಅತಾಂ ಪೂಜಯಾಮಿ ಲೋಕಮಾತರ್ನಮೋಸ್ತುತೇ||” ಹೀಗೆ ಕೌಸಲ್ಯಯನ್ನು ಪೂಜಿಸಿ “ಓಂ ನಮೋ ದಶರಥಾಯ” ಹೀಗೆ ದಶರಥನನ್ನು ಪೂಜಿಸಿ ಸರ್ವಪೂಜೆಯನ್ನೂ ಮುಗಿಸತಕ್ಕದ್ದು, ಮಧ್ಯಾಹ್ನದಲ್ಲಿ ಫಲಪುಷ್ಪಜಲಾದಿ ಪೂರ್ಣವಾದ ಶಂಖದಿಂದ “ದಶಾನನ ಪಧಾರ್ಥಾಯ ಧರ್ಮ ಸಂಸ್ಥಾಪನಾಯ ಬ ದಾನವಾನಾಂ ವಿನಾಶಾಯ ದೈತ್ಯಾನಾಂನಿಧನಾಯ ಚ ಪರಿತ್ರಾನಾಯಸಾಧನಾಂ ಜಾತೂರಾದು ಸ್ವಯಂಹರಿಗೆ ಗೃಹರ್ಸಾ೦ ದುಯಾದಂ ಭ್ರಾತೃಭಿನಹಿನ ಈ ಮಂತ್ರದಿಂದ ಅರ್ಘವನ್ನು ಕೊಡತಕ್ಕದ್ದು, ರಾತ್ರಿಯಲ್ಲಿ ಜಾಗರಣೆ ಮಾಡಿ ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿ ಮೂಲಮಂತ್ರದಿಂದ ಪಾಯಸದಿಂದ ನೂರಾಎಂಟು ಆಹುತಿಗಳಿಂದ ಹೋಮಿಸತಕ್ಕದ್ದು. ಆಮೇಲೆ ಪೂಜಾವಿಸರ್ಜನ, “ಇಮಾಂ ಸ್ವರ್ಣಮಂ ರಾದು ಪ್ರತಿಮಾಂ ಸಮುಲಂಕೃತಾಂ ಶುಭವಸ್ಮಯುಗಚ್ಛನ್ನಾಗಿ ರಾಮೋ ರಾಧದಾಯತ” ಈ ಮಂತ್ರದಿಂದ ಆಚಾರ್ಯನಿಗೆ ಪ್ರತಿಮಯನ್ನು ದಾನಮಾಡತಕ್ಕದ್ದು “ತಪ್ರಸಾದಂ ಕೃತ್ಯ ಕ್ರಿಯತೇತಾರನಾದುಯಾವ್ರತೇನಾನೇನ ಸಂತುಷ್ಟ ಸ್ವಾಮಿನ್‌ ಭಕ್ತಿಂ ಪ್ರಯಭ್ರಮ ಹೀಗೆ ಪ್ರಾರ್ಥಿಸಿ ನವಮಿಯ ಅಂತ್ಯದಲ್ಲಿ ಪಾರಣೆಯನ್ನು ಮಾಡತಕ್ಕದ್ದು. ಈ ವ್ರತವನ್ನು ಮಲಮಾಸದಲ್ಲಿ ಮಾಡಬಾರದು. ಹೀಗೆ ಜನ್ಮಾಷ್ಟಮೀ ವ್ರತವನ್ನೂ ಮಲಮಾಸದಲ್ಲಿ ಮಾಡತಕ್ಕದ್ದಲ್ಲ. ಇದೇ ನವಮಿಯಲ್ಲಿ ದೇವೀನವರಾತ್ರಿ ಸಮಾಪ್ತಿಯನ್ನು ಮಾಡತಕ್ಕದ್ದು. ಆಶ್ವಿನ ನವರಾತ್ರ ನಿರ್ಣಯದಂತೆಯೇ ಇದನ್ನು ತಿಳಿಯತಕ್ಕದ್ದು. ಚೈತ್ರ ಶುಕ್ಲ ಏಕಾದಶಿಯಲ್ಲಿ “ಶ್ರೀ ಕೃಷ್ಣನ ಆಂದೋಲನೋತ್ಸವವನ್ನು ಹೇಳಿದ. ಕಲಿದೋಷವನ್ನು ನಿವಾರಿಸುವ ದೋಲಾ (ತೊಟ್ಟಿಲು) ರೂಢನಾಗಿದ್ದಾಗ ಯಾರು ಅವನನ್ನು ನೋಡುತ್ತಾರೋ ಅವರು ಸಹಸ್ರ ಅಪರಾಧದಿಂದ ಮುಕ್ತರಾಗುವರು. ಆತನ ದರ್ಶನವಾಗುವ ವರೆಗೆ ಅನೇಕ ಕೋಟಿಜನ್ಮಾರ್ಜಿತ ಪಾಪಗಳಿರುತ್ತವೆ. ಇಂಥ ಪಾಪಗಳು ದೋಲಾರೂಢನಾದ 90 ಧರ್ಮಸಿಂಧು ಕೃಷ್ಣನ ದರ್ಶನದಿಂದ ನಾಶವಾಗುತ್ತದೆ-ಎಂದರ್ಥ, ಮತ್ತು ಅಂಥವರು ವೈಕುಂಠಲೋಕದಲ್ಲಿ ವಿಷ್ಣುವಿನೊಡನೆ ಪೂಜಿಸಲ್ಪಡುತ್ತಾರೆ. ಇತ್ಯಾದಿ ಅದರ ಮಹಿಮೆಯಿದೆ. ಚೈತ್ರ ಶುಕ್ಲ ದ್ವಾದಶಿಯಲ್ಲಿ ವಿಷ್ಣುವಿನ ದಮನೋತ್ಸವವಿದೆ. ಅದು ವಾರಣೆಯದಿನವೂ ಆಗಿದೆ. ಪಾರಣೆಯ ದಿನ ಒಂದು ಗಳಿಗೆಯೂ ಸಿಗದಿದ್ದರೆ ಪವಿತ್ರ ಹಾಗೂ ದಮನಕಾರೋಪಗಳಿಗೆ ತ್ರಯೋದಶಿಯು ಗ್ರಾಹ್ಯವು. ಶಿವಪವಿತ್ರಾದ್ಯಾರೋಪಣವನ್ನು ಚತುರ್ದಶಿಯಲ್ಲಿ ಮಾಡತಕ್ಕದ್ದು. ಈಗ ಅದರ ಪ್ರಯೋಗ ಕ್ರಮ ಉಪವಾಸದಿನದಲ್ಲಿ ನಿತ್ಯಪೂಜೆಯನ್ನು ಮಾಡಿ ದಮನಕ ವನಸ್ಪತಿಯಿದ್ದಲ್ಲಿ ಹೋಗಿ ಕ್ರಯರೂಪದಿಂದ ಅದನ್ನು ತಂದು ಗಂಧಾದಿಗಳಿಂದ ಪೂಜಿಸಿ “ಶ್ರೀ ಕೃಷ್ಣ ಪ್ರೀತ್ಯರ್ಥಂ ತ್ವಾಂ ನೇಷ್ಟೇ” ಎಂದು ಪ್ರಾರ್ಥಿಸಿ ನಮಸ್ಕರಿಸುವದು. ಬೇರೆದೇವತೆಗಳಿಗೆ ಆಯಾಯ ದೇವತಾ ಪ್ರೀತ್ಯರ್ಥ ಎಂದು ಊಹಿಸತಕ್ಕದ್ದು. ಆಮೇಲೆ ದಮನಕವನ್ನು ಮನೆಗೆ ತಂದು ಪಂಚಗವ್ಯ ಮತ್ತು ಶುದ್ಧೋದಕದಿಂದ ತೊಳೆದು ದೇವರ ಮುಂದಿಟ್ಟು ಅದರಲ್ಲಿ ಕಾಲ-ವಸಂತ-ಕಾಮ ಇವರನ್ನಾವಾಹಿಸಿ, ಅಥವಾ ಕೇವಲ ಕಾಮನನ್ನಾವಾಹಿಸತಕ್ಕದ್ದು. ಮತ್ತು ಗಂಧಾದಿಗಳಿಂದ ಪೂಜಿಸತಕ್ಕದ್ದು. “ನಮೋಸ್ತು ಪುಷ್ಪಬಾಣಾಯ ಜಗದಾಹ್ಲಾದಕಾರಿಣೇ। ಮನ್ಮಥಾಯ ಜಗನ್ನೇ ರತಿಪ್ರೀತಿಪ್ರಿಯಾಯತೇ” ಈ ಮಂತ್ರದಿಂದ ಕಾಮನ ಆವಾಹನೆಯು, “ಕಾಮಭಸ್ಮಸಮುದ್ರತ ರತಿಬಾಷ್ಪ ಪರಿಪ್ಪುತ|ಋಷಿಗಂಧರ್ವದೇವಾದಿ ವಿಮೋಹಕ ನಮೋಸ್ತುತೇ ಹೀಗೆ ದಮನಕವನ್ನು ಪ್ರಾರ್ಥಿಸಿ ‘ಓಂ ಕಾಮಾಯನಮಃ’ ಎಂಬ ಮಂತ್ರದಿಂದ ಪರಿವಾರಸಹಿತ ಕಾಮರೂಪಿಯಾದ ದಮನಕವನ್ನು ಗಂಧಾದಿಗಳಿಂದ ಉಪಚರಿಸತಕ್ಕದ್ದು. ಆದಿನ ರಾತ್ರಿಯಲ್ಲಿ ದೇವನನ್ನು ಪೂಜಿಸಿ “ಅಧಿವಾಸ’ವನ್ನು ಮಾಡತಕ್ಕದ್ದು. ಅಧಿವಾಸಕ್ರಮ :- ದೇವನ ಮುಂಗಡೆಯಲ್ಲಿ ಸರ್ವತೋಭದ್ರ ಮಂಡಲವನ್ನು ಬರೆದು, ಕಲಶಸ್ಥಾಪನೆಯನ್ನು ಮಾಡುವದು. ದಮನಕವನ್ನು, ತೊಳದ ವಸ್ತ್ರದಿಂದ ಮುಚ್ಚಿ, ಬಿದಿರಿನ ಪಾತ್ರೆಯಲ್ಲಿಟ್ಟು ಕಲಶದಲ್ಲಿ ಸ್ಥಾಪಿಸತಕ್ಕದ್ದು. “ಪೂಜಾರ್ಥಂ ದೇವ ದೇವಸ್ಯ ವಿಷ್ಣರ್ಲಕ್ಷ್ಮೀಪತೇಃ ಪ್ರಭೋ: ದಮನ ತೃಮಿಹಾಗಚ್ಛ ಸಾನಿಧ್ಯಂ ಕುರುತೇ ನಮಃ” ಈ ಮಂತ್ರದಿಂದ ದಮನಕ ದೇವತೆಯನ್ನಾವಾಹಿಸಿ ಪೂರ್ವಾದಿ ಎಂಟು ದಿಕ್ಕುಗಳಲ್ಲಿ “ಕೀರಿ ಕಾಮದೇವಾಯ ನಮೋ ಕ್ರೀಂ ರತ್ನ ನಮಗೆ೧ಕೀಂ ಭಸ್ಮಶರೀರಾಯ ನಮೋ ಶ್ರೀಂ ರತ್ನನಮಃ|೨||ಕೀಂ ಅನಂಗಾಯ ನಮೋ ಹೀಂ ರನಮ೩! ಕೀಂ ಮನ್ಮಥಾಯ ನಮೋ ಹೀಂ ರತ್ನನಮ: |೪|| ವಸಂತಸಖಾಯ ನಮೋ ಕ್ರೀಂ ರ ನಮ:|೫ ಕೀಂ ಸ್ಮರಾಯ ನಮೋ ಹೀಂ ರ ನಮ|೬|| ಕೀ ಇಕ್ಷುಚಾಪಾಯ ನಮೋ ಹೀಂ ರತ್ನನಮ:|೭||ಕೀಂ ಪುಷ್ಪಬಾಣಾಸ್ತ್ರಾಯ ನಮೋ ಹೀಂ ರನಮಃ |೮|| ಹೀಗೆ ಪೂಜಿಸತಕ್ಕದ್ದು “ತತ್ಪುರುಷಾಯ ವಿದ್ಮಹೇ ಕಾಮದೇವಾಯ ಧೀಮಹಿ ತನ್ನೋSನಂಗ ಪ್ರಚೋದಯಾತ್” ಈ ಗಾಯಿತ್ರಿ ಮಂತ್ರದಿಂದ ದಮನಕವನ್ನು ನೂರೆಂಟಾವರ್ತಿ ಅಭಿಮಂತ್ರಿಸುವದು. ಆಮೇಲೆ ಗಂಧಾದಿಗಳಿಂದ ಪೂಜಿಸಿ “ಓಂ ನಮ:” ಎಂದು ಹೇಳಿ ಪುಷ್ಪಾಂಜಲಿಯನ್ನು ಕೊಡತಕ್ಕದ್ದು. “ನಮೋಸ್ತು ಪುಷ್ಪಬಾಣಾಯ” ಎಂಬ ಹಿಂದೆ ಹೇಳಿದ ಆವಾಹನ ಮಂತ್ರದಿಂದ ನಮಸ್ಕರಿಸುವದು. “ಕ್ಷೀರೋದಧಿ ಮಹಾನಾಗಶಯ್ಯಾವಸ್ಥಿತ ವಿಗ್ರಹ ಪ್ರಾತಾಂ ಪೂಜಯಿಷ್ಯಾಮಿ ಸನ್ನಿಧೇ ಭವತೇ ನಮ:” ಹೀಗೆ ದೇವನನ್ನು ಪ್ರಾರ್ಥಿಸಿ ಪುಷ್ಪಾಂಜಲಿಯನ್ನು ಕೊಟ್ಟು

ಪರಿಚ್ಛೇದ - ೨ ಏಕಾದಶಿಯಲ್ಲಿ ರಾತ್ರಿ ಜಾಗರಣ ಮಾಡತಕ್ಕದ್ದು. ಪ್ರಾತಃಕಾಲದಲ್ಲಿ ನಿತ್ಯ ಪೂಜೆಯನ್ನು ಮುಗಿಸಿಕೊಂಡು ಪುನಃ ದೇವನನ್ನು ಪೂಜಿಸಿ ಪೂರ್ವ, ಗಂಧ, ಅಕ್ಷತೆಗಳಿಂದ ಯುಕ್ತವಾದ ದಮನಕದ ಗೊಂಚಲನ್ನು ತಕ್ಕೊಂಡು ಮೂಲಮಂತ್ರವನ್ನು ಪಠಿಸಿ, “ದೇವದೇವ ಜಗನ್ನಾಥ ವಾಂಛಿತಾರ್ಥ ಪ್ರದಾಯಕಹೃತಾನ್ ಪೂರಯ ಮ ಎಷ್ಟೋ ಕಾಮಾನ್ ಕಾಮೇಶ್ವರಿಪ್ರಿಯ|| ಇದಂ ದಮನಕು ದೇವ ಗ್ರಹಾಣ ಮದನುಗ್ರಹಾತ್ ಇಮಾಂ ಸಾಂ ವತ್ಸರೀಂ ಪೂಜಾಂ ಭಗವನ್ ಪರಿಪೂರಯ!!” ಹೀಗೆ ಹೇಳಿ ಪುನಃ ಮೂಲಮಂತ್ರವನ್ನು ಜಪಿಸಿ ( ಅಂದರೆ ಮೂಲಮಂತ್ರ ಸಂಪುಟಿತವಾಗಿ ) ದೇವನಲ್ಲಿ ದಮನಕವನ್ನರ್ಪಿಸತಕ್ಕದ್ದು. ಹಾಗೆಯೇ ಅಲಂಕಾರಮಾಡಿ ಅಂಗದೇವತೆಗಳಿಗೂ ಕೊಟ್ಟು ದೇವನನ್ನು ಪ್ರಾರ್ಥಿಸುವದು. “ಮನವಿದ್ರುಮ ಮಾಲಾಭಿ: ಮಂದಾರ ಕುಸುಮಾದಿಭಿ: ಇಯಂಸಾಂವತ್ಸರೀ ಪೂಜಾ ತವಾಸ್ತು ಗರುಢಧ್ವಜ||೧|| ವನಮಾಲಾಂ ಯಥಾದೇವ ಕೌಸ್ತುಭಂ ಸತತಂ ಹೃದಿ ತಾಮನಕೀ೦ ಮಾಲಾಂ ಪೂಜಾಂ ಚ ಹೃದಯವಹ||೨|| ಜಾನತಾ ಜಾನತಾವಾಪಿ ನಕೃತಂ ಯುವಾರ್ಚನಂ ತತ್ಸರ್ವಂ ಪೂರ್ಣತಾಂ ಯಾತುತ್ವತ್ಪಸಾದಾದ್ರಮಾಪತೇ||೩|| ಜಿತಂ ತೇ ಪುಂಡರೀಕಾಕ್ಷ ನಮಸ್ತ ವಿಶ್ವಭಾವನ ಹೃಷಿಕೇಶ ನಮಸ್ತೇಸ್ತು ಮಹಾಪುರುಷ ಪೂರ್ವಜ||೪||” ಮತ್ತು “ಮಂತ್ರಹೀನಂ ಕ್ರೀಯಾ ಹೀನಂ” ಇತ್ಯಾದಿಗಳಿಂದಲೂ ಪ್ರಾರ್ಥಿಸಿ ಪುನಃಪಂಚೋಪಚಾರಗಳಿಂದ ಪೂಜಿಸಿ, ಆರತಿಮಾಡಿ, ಬ್ರಾಹ್ಮಣರಿಗೆ ದಮನಕವನ್ನು ಕೊಟ್ಟು ಉಳಿದದ್ದನ್ನು ತಾನು ಧರಿಸಿ, ಮಿಶ್ರಯುತನಾಗಿ ಪಾರಣೆಯನ್ನು ಮಾಡತಕ್ಕದ್ದು. ಮಂತ್ರದೀಕ್ಷೆಯನ್ನು ಹೊಂದದಿದ್ದವರು ನಾಮಮಂತ್ರದಿಂದ ಅರ್ಪಿಸತಕ್ಕದ್ದು. ಈ ದಮನಕೋತ್ಸವಕ್ಕೆ ಶ್ರಾವಣ ಮಾಸ ಪರ್ಯಂತ ಗೌಣಕಾಲವಿದೆ. ಇದನ್ನು ಮಲಮಾಸದಲ್ಲಿ ಮಾಡತಕ್ಕದ್ದಲ್ಲ. ಶುಕ್ರಾಸ್ತಾದಿಗಳಲ್ಲಿ ಮಾಡಬಹುದು. ಇಲ್ಲಿಗೆ ದಮನಕಾರೋಪಣ ವಿಧಿಯು ಮುಗಿಯಿತು. ಈ ವಿಷಯಕ್ಕೆ ಮಹಾಭಾರತದಲ್ಲಿ “ಚೈತ್ರ ದ್ವಾದಶಿಯ ಅಹೋರಾತ್ರಿಯಲ್ಲಿ ವಿಷ್ಣು ವಿಷ್ಣು ಎಂದು ಸ್ಮರಿಸಿದರೆ ಪೌಂಡರೀಕಯಾಗದ ಫಲವು ಸಿಗುವದಲ್ಲದೆ ದೇವಲೋಕವನ್ನು ಹೊಂದುವನು ಎಂದು ಮಹಿಮಾತಿಶಯವನ್ನು ಹೇಳಿದೆ. ಚೈತ್ರ ಶುಕ್ಲ ತ್ರಯೋದಶಿಯಲ್ಲಿ “ಅನಂಗಪೂಜನವ್ರತ"ವಿದೆ. ಅದಕ್ಕೆ ಪೂರ್ವವಿದ್ದ ತ್ರಯೋದಶಿಯು ಗ್ರಾಹ್ಯವು, ಮುಂದೆ ಚತುರ್ದಶಿಯಲ್ಲಿ “ನೃಸಿಂಹ ದೋಲೋತ್ಸವ"ವನ್ನು ಮಾಡತಕ್ಕದ್ದು. ಇದರಲ್ಲಿಯೇ ಶ್ರೀಶಿವ- ಏಕವೀರ-ಭೈರವ ಇವರಿಗೆ ದಮನಕ ಪೂಜೆಯನ್ನು ಹೇಳಿದೆ. ಇಲ್ಲಿ ಚತುರ್ದಶಿಯು ಪೂರ್ವವಿದ್ಧ ಹಾಗೂ ಅಪರಾಹ್ನವ್ಯಾಪಿನಿಯಾದದ್ದು ಗ್ರಾಹ್ಯವು. ಆ ದಿನ ಅಪರಾಹ್ನವ್ಯಾಪಿಯಿಲ್ಲದಲ್ಲಿ ಅಪರಾಹ್ನ ಸ್ಪರ್ಶಿನಿಯಾದರೂ ಪೂರ್ವವು ಗ್ರಾಹ್ಯವು. ಅದರ ಅಭಾವದಲ್ಲಿ ಪರವು ಗ್ರಾಹ್ಯವು. ಚೈತ್ರ ಪೂರ್ಣಿಮೆಯು ಸಾಮಾನ್ಯನಿರ್ಣಯಾನುಸಾರವಾಗಿ ಪರವು ಗ್ರಾಹ್ಯವು. ಈ ಹಿಂದೆ ಹೇಳಿದ ದಮನಕ ಪೂಜೆಯನ್ನು ಆಯಾಯ ಕಾಲದಲ್ಲಿ ಮಾಡಲಾಗದಿದ್ದರೆ, ಈ ಹುಣ್ಣಿವೆಯಲ್ಲಿಯೇ ಸಕಲ ದೇವತೆಗಳಿಗೂ ದಮನಪೂಜೆಯನ್ನು ಮಾಡತಕ್ಕದ್ದು. ಚಿತ್ರಾನಕ್ಷತ್ರಯುಕ್ತವಾದ ಈ ಹುಣ್ಣಿವೆಯಲ್ಲಿ ಚಿತ್ರ ವಸ್ತ್ರದಾನ ಮಾಡಿದರೆ ಸೌಭಾಗ್ಯ ಪ್ರಾಪ್ತವಾಗುವದು. ರವಿ, ಗುರು, ಶನಿವಾರಯುಕ್ತವಾದ ಈ ಹುಣ್ಣಿವೆಯಲ್ಲಿ ಸ್ನಾನ, ದಾನ, ಶ್ರಾದ್ಧಾದಿಗಳನ್ನು ಮಾಡಿದರೆ ಧರ್ಮಸಿಂಧು ಅಶ್ವಮೇಧಯಾಗಮಾಡಿದ ಫಲವು ಸಿಗುವದು. ವೈಶಾಖಸ್ನಾನಾರಂಭವನ್ನು ಚೈತ್ರ ಶುಕ್ಲ ಏಕಾದಶೀ ಅಥವಾ ಹುಣ್ಣಿವೆ ಇಲ್ಲವೆ ಮೇಷಸಂಕ್ರಾಂತಿ ಇವುಗಳಲ್ಲಿ ಮಾಡತಕ್ಕದ್ದು. “ವೈಶಾಖಂ ಸಕಲಂ ಮಾಸಂ ಮೇಷ ಸಂಕ್ರಮಣೇ ರವೇಪ್ರಾತಃ ಸನಿಯಮ: ಸ್ನಾ ಪ್ರೀಯತಾಂ ಮಧುಸೂದನಃ|೧|| ಮಧುಹಂತು: ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್” “ನಿರ್ವಿಘ್ನ ಮತ್ತು ಮೇ ಪುಣ್ಯಂ ವೈಶಾಖ ಸ್ನಾನ ಮಹಂ|೨|| ಮಾಧವೇ ಮೇಷ ಭಾನ ಮುರಾರೇ ಮಧುಸೂದನ ಪ್ರಾತಸ್ನಾನೇನ ಮೇ ನಾಥ ಫಲದೋಭವ ಪಾಪಹನ್ ಈ ಮಂತ್ರಗಳಿಂದ ಸ್ನಾನಾರಂಭಮಾಡತಕ್ಕದ್ದು, ಇದರಲ್ಲಿ ಹವಿಷ್ಠಾನ್ನ ಭಕ್ಷಣ ಬ್ರಹ್ಮಚರ್ಯಾದಿ ನಿಯಮಗಳನ್ನು ಪಾಲಿಸತಕ್ಕದ್ದು, ಇಡೀ ಮಾಸದ ಸ್ನಾನದಲ್ಲಿ ಅಶಕ್ತನಾದರೆ ತ್ರಯೋದಶಿ ಮೊದಲಾದ ಅಂತ್ಯದ ಮೂರು ದಿನಗಳಲ್ಲಾದರೂ ಸ್ನಾನಮಾಡತಕ್ಕದ್ದು. ಇದು “ಮಾದಿ"ಯೆಂದು ಮೊದಲೇ ಹೇಳಿದೆ. ಶತಭಿಷನಕ್ಷ ತ್ರಯುಕ್ತವಾದ ಚೈತ್ರ ಕೃಷ್ಣ ತ್ರಯೋದಶಿಗೆ “ವಾರುಣೀ” ಎಂಬ ಸಂಜ್ಞೆಯಿದೆ. ಇದರಲ್ಲಿ ಸ್ನಾನಾದಿಗಳನ್ನು ಮಾಡಿದರೆ ಗ್ರಹಣಾದಿ ಪರ್ವಗಳಲ್ಲಿ ಸ್ನಾನಮಾಡಿದ ಫಲವು ಸಿಗುತ್ತದೆ. ಇದೇ ಶನಿವಾರ ಯುಕ್ತವಾದಾಗ “ಮಹಾವಾರುಣೀ” ಎಂಬ ಸಂಜ್ಞೆಯನ್ನು ಹೊಂದುತ್ತದೆ. ಶುಭಯೋಗ-ಶನಿವಾರ-ಶತಭಿಷ, ಹೀಗೆ ಮೂರು ಕೂಡಿದರೆ “ಮಹಾಮಹಾ ವಾರುಣೀ” ಎಂಬ ಸಂಜ್ಞೆ ಬರುತ್ತದೆ. ವಾರುಣೀ ಯೋಗದಲ್ಲಿ ಕೃಷ್ಣಾದಿ-ಪೌರ್ಣಿಮಾಂತ ಮಾಸವನ್ನು ಹಿಡಿಯತಕ್ಕದ್ದು. ಆದುದರಿಂದ ಫಾಲ್ಕುನ ಕೃಷ್ಣ-ತ್ರಯೋದಶಿಯು ಗ್ರಾಹ್ಮವು, ಚೈತ್ರ ಕೃಷ್ಣ ತ್ರಯೋದಶಿಯಲ್ಲಿ- ಶಿವಸನ್ನಿಧಿಯಲ್ಲಿ ಸ್ನಾನಮಾಡಿದರೆ ಪಿಶಾಚತ್ವ ನಿವಾರಣೆಯಾಗುವದು. ಇಲ್ಲಿಗೆ ಚೈತ್ರ ಮಾಸ ಕೃತ್ಯೋದ್ದೇಶವು ಮುಗಿಯಿತು. ವೈಶಾಖಮಾಸ ಕೃತ್ಯಗಳು ವೃಷಭಸಂಕ್ರಾಂತಿಯಲ್ಲಿ ಹಿಂದಿನ ಹದಿನಾರು ಘಟಿಗಳು ಪುಣ್ಯಕಾಲವು. ರಾತ್ರಿಯಲ್ಲಿ ಸಂಕ್ರಮಣವಾದರೆ ಹೇಗೆಂಬ ನಿರ್ಣಯವನ್ನು ಮೊದಲೇ ಹೇಳಿದೆ. ಈ ವೈಶಾಖದಲ್ಲಿ ಪ್ರಾತಃಸ್ನಾನ, ತಿಲಗಳಿಂದ ಪಿತೃತರ್ಪಣ, ಧರ್ಮ ಘಟದಾನ, ಇವು ಕರ್ತವ್ಯಗಳು. ಇದರಲ್ಲಿ ಬ್ರಾಹ್ಮಣರಾದವರು ಗಂಧ, ಮಾಲ್ಯ, ಪಾನಕ, ಬಾಳೆಯ ಹಣ್ಣು, ಮೊದಲಾದವುಗಳಿಂದ ವಸಂತ ಪೂಜೆಯನ್ನು ಮಾಡತಕ್ಕದ್ದು. ವೈಶಾಖ ಅಥವಾ ಜೇಷ್ಟ ಮಾಸದಲ್ಲಿ ಸೆಕೆಯು ತೀವ್ರವಾದಾಗ ಪ್ರಾತಃಕಾಲದಲ್ಲಿ ನಿತ್ಯ ಪೂಜೆಯನ್ನು ಮಾಡಿ ಗಂಧೋದಕ ಪೂರ್ಣವಾದ ಪಾತ್ರದಲ್ಲಿ ವಿಷ್ಣುವನ್ನು ಸ್ಥಾಪಿಸಿ, ಪಂಚೋಪಚಾರ ಪೂಜೆಯನ್ನು ಮಾಡಿ, ಅದೇ ಜಲದಲ್ಲಿ ಸೂರ್ಯಾಸ್ತಪರ್ಯಂತ ಅಧಿವಾಸಮಾಡಿ ರಾತ್ರಿಯಲ್ಲಿ ಸ್ವಸ್ಥಾನದಲ್ಲಿಟ್ಟು, ಪಂಚೋಪಚಾರಗಳಿಂದ ಪೂಜಿಸತಕ್ಕದ್ದು. ಆ ತೀರ್ಥೋದಕದಿಂದ ಮನೆಯನ್ನು, ಪತ್ನಿಪುತ್ರರಿಂದೊಡಗೂಡಿ ಪಾವನಮಾಡಿಕೊಳ್ಳತಕ್ಕದ್ದು. ಆದರೆ ಇದನ್ನು ದ್ವಾದಶಿಯ ಹಗಲಿನಲ್ಲಿ ಮಾಡಬಾರದು. ರಾತ್ರಿಯಲ್ಲಿ ಸ್ವಲ್ಪಕಾಲ ಜಲದಲ್ಲಿರುವ ದೇವನನ್ನು ಪೂಜಿಸಿ ಸ್ವಸ್ಥಾನದಲ್ಲಿ ಸ್ಥಾಪಿಸತಕ್ಕದ್ದು, ಈ ಮಾಸದಲ್ಲಿ “ಕೃಷ್ಣಗೌರ"ವೆಂಬ ತುಳಸಿಗಳಿಂದ ವಿಷ್ಣುವನ್ನು, ತ್ರಿಕಾಲದಲ್ಲಿ ಅರ್ಚಿಸಿದರೆ ಮುಕ್ತಿಯು ದೊರೆಯುವದು. ಪ್ರಾತಃಕಾಲದಲ್ಲಿ ಸ್ನಾನಮಾಡಿ ಅಶ್ವತ್ಥದ ಬುಡಕ್ಕೆ ಚೆನ್ನಾಗಿ ನೀರನ್ನು ಹಾಕತಕ್ಕದ್ದು. ಮತ್ತು ಪ್ರದಕ್ಷಿಣ ಮಾಡುವದು. ಇದರಿಂದ ಕುಲೋದ್ಧಾರವಾಗುವದು. ಹೀಗೆಯೇ ಗೋವುಗಳ ಮೈತುರಿಸುವಿಕೆಯಿಂದಲೂ ಕುಲದ ಉದ್ಧಾರವಾಗುವದು. ಈ ಮಾಸದಲ್ಲಿ ಏಕಭಕ್ತ, ನಕ್ತ, ಅಯಾಚಿತ, ವ್ರತಗಳನ್ನಾಚರಿಸಿದರೆ ಸಕಲ ಪರಿಚ್ಛೇದ ಇಷ್ಟಾರ್ಥ ಸಿದ್ಧಿಯಾಗುವದು. ಈ ಮಾಸದಲ್ಲಿ ಪ್ರಪಾದಾನ ಅರವಟ್ಟಿಗೆ ಇಡುವದು) ಮತ್ತು ದೇವರಿಗೆ ಗಲಂತಿಕಾ ಬಂಧನ (ಜಲದ ಕಲಶ-ಗಿಂಡಿಯನ್ನು ಕಟ್ಟುವದು) ಹಾಗೂ ಬೀಸಣಿಗೆ, ಛತ್ರ, ಕಾಲುಮೆಟ್ಟು, ಚಂದನ ಮೊದಲಾದವುಗಳನ್ನು ದಾನಮಾಡಿದರೆ ಮಹಾಫಲವಿದೆ. ವೈಶಾಖವು ಅಧಿಕಮಾಸವಾದರೆ ಮಲಮಾಸದಲ್ಲಿ ಕಾಮ್ಯಕರ್ಮಗಳ ಸಮಾಪ್ತಿಯು ನಿಷಿದ್ಧವಿರುವದರಿಂದ ಅಧಿಕಮಾಸ ಹಾಗೂ ಶುದ್ಧಮಾಸಗಳೆರಡರಲ್ಲೂ ವೈಶಾಖಸ್ನಾನ ಹವಿಷ್ಯಾನ್ನ ಭೋಜನ ಮೊದಲಾದ ನಿಯಮಗಳನ್ನು ಪಾಲಿಸಿ ಶುದ್ಧ ಮಾಸದಲ್ಲಿ ಸಮಾಪ್ತಿ ಮಾಡತಕ್ಕದ್ದು, ಚಾಂದ್ರಾಯಣಾದಿಗಳ ಸಮಾಪನವನ್ನು ಮಲಮಾಸದಲ್ಲಿಯಾದರೂ ಮಾಡತಕ್ಕದ್ದು. ವೈಶಾಖ ಶುಕ್ಲ ತೃತೀಯೆಗೆ ಅಕ್ಷಯತೃತೀಯೆಯೆಂಬ ಹೆಸರಿದೆ. ಇದರಲ್ಲಿ ಗಂಗಾಸ್ನಾನ, ಯವಹೋಮ, ಯವದಾನ, ಯವಾಶನ, ಇವುಗಳನ್ನಾಚರಿಸಿದರೆ ಸಕಲ ಪಾಪಪರಿಹಾರವಾಗುವದು. ಕೃಷ್ಣನನ್ನು ಗಂಧದಿಂದ ಅಲಂಕಾರ (ಗಂಧಲೇಪನ) ಮಾಡಿ ಆರಾಧಿಸಿದರೆ ವೈಕುಂಠಲೋಕಪ್ರಾಪ್ತಿಯಾಗುವದು. ಈ ಅಕ್ಷಯ ತದಿಗೆಯಲ್ಲಿ ಅಲ್ಪವಾಗಿ ಮಾಡಿದ ಜಪ, ಹೋಮ, ತರ್ಪಣ, ದಾನ, ಮೊದಲಾದವುಗಳು ಅಕ್ಷಯವಾಗಿ ಪರಿಣಮಿಸುವದು. ಇದರಲ್ಲಿ ರೋಹಿಣಿ ಬುಧವಾರಯೋಗವಾದರೆ ಮಹಾಪುಣ್ಯಕರವು. ಈ ಸಂಬಂಧವಾದ ಜವ ಹೋಮಾದಿ ಕಾರ್ಯಗಳಿಗೆ ಮುಂದೆ ಹೇಳುವ ಯುಗಾದಿಗಳಂತೆ ನಿರ್ಣಯವೆಂದು ತಿಳಿಯತಕ್ಕದ್ದು. ಇದು ಕೃತಯುಗದ “ಆದಿ"ಯ ದಿನವು. ಇದರಲ್ಲಿ ಯುಗಾದಿ ಸಂಬಂಧವಾದ ಶ್ರಾದ್ಧವನ್ನು ಪಿಂಡರಹಿತವಾಗಿ ಮಾಡತಕ್ಕದ್ದು. ಶ್ರಾದ್ದವು ಅಸಂಭವವಾದರೆ ತಿಲತರ್ಪಣವನ್ನಾದರೂ ಮಾಡತಕ್ಕದ್ದು. ಶುಕ್ಲ ಯುಗಾದಿಕೃತ್ಯವನ್ನು ಪೂರ್ವಾಹ್ನದಲ್ಲಿ ಮಾಡತಕ್ಕದ್ದು. ಸಾಧ್ಯವಾಗದಿದ್ದರೆ ಅಪರಾಹ್ನದಲ್ಲಿಯಾದರೂ ಮಾಡಬಹುದು. ಕೃಷ್ಣ ಪಕ್ಷದಲ್ಲಿ ಬರುವ ಯುಗಾದಿಕೃತ್ಯವನ್ನು ಅಪರಾಹ್ನದಲ್ಲಿಯೇ ಮಾಡತಕ್ಕದ್ದು. ಇತ್ಯಾದಿ ನಿರ್ಣಯವನ್ನು ಮಾದಿಪ್ರಕರಣದಲ್ಲಿಯೇ ಹೇಳಲಾಗಿದೆ. ದಿನಮಾನದ ಪೂರ್ವಾರ್ಧವು ಪೂರ್ವಾಹ್ನವು. ಅಪರಾರ್ಧವು ಅಪರಾಹ್ನವು. ಇಲ್ಲಿ ಈ ಕ್ರಮದಿಂದ ಪೂರ್ವಾಹ್ನ-ಅಪರಾಹ್ನಗಳನ್ನೂಹಿಸತಕ್ಕದ್ದು. ಪೂರ್ವಾಹವು ಏಕದೇಶಿಯಾಗಿ ಸಿಗುವ ದಿನವು ಇಲ್ಲಿ ಗ್ರಾಹ್ಯವು. ಎರಡೂ ದಿನ ವ್ಯಾಪ್ತಿಯಿದ್ದರೆ ಮೂರು ಮುಹೂರ್ತವಿದ್ದರೂ ಪರವು ಗ್ರಾಹ್ಯವು, ಮೂರು ಮುಹೂರ್ತಕ್ಕಿಂತ ಪರದಿನದಲ್ಲಿ ಕಡಿಮೆಯಿದ್ದರೆ ಪೂರ್ವದಿನವು ಗ್ರಾಹ್ಮವು. “ಮನ್ವಾದಿ ಯುಗಾದಿ, ಚಂದ್ರಸೂರ್ಯಗ್ರಹಣ, ವ್ಯತೀಪಾತ, ವೈಧೃತಿ ಇವು ತತ್ಕಾಲವ್ಯಾಪಿನಿಗಳು” ಇತ್ಯಾದಿ ವಚನವಿದ್ದರೂ “ಸಾಕಲ್ಯವ್ಯಾಪ್ತಿ ವಾಕ್ಯಗಳು ಅದಕ್ಕೆ ಅಪವಾದಾತ್ಮಕಗಳಾದ್ದರಿಂದ ಶ್ರಾದ್ಧಾದಿಗಳನ್ನು ತೃತೀಯಾ ಮಧ್ಯದಲ್ಲಿಯೇ ಮಾಡತಕ್ಕದ್ದು. ಪುರುಷಾರ್ಥ ಚಿಂತಾಮಣಿಯಲ್ಲಿ - ಗಾಂಧರ್ವ, ಕುತಪ, ರೌಹಿಣ ಸಂಸ್ಕೃತಗಳಾದ ಸಪ್ತಮ, ಅಷ್ಟಮ, ನವಮ ಮುಹೂರ್ತಗಳು ಶ್ರಾದ್ಧ ಕಾಲಗಳಾದ್ದರಿಂದ ಶುಕ್ಲಪಕ್ಷದಲ್ಲಿ ಮಧ್ಯಮ ದಿನವಿದ್ದಾಗ ಹದಿಮೂರರಿಂದ ಹದಿನೈದು, ಈ ಮೂರು ಘಟಿಸಿಗುವ ದಿನದಲ್ಲಿ ಶ್ರಾದ್ಧ ಮಾಡತಕ್ಕದ್ದು. ಕೃಷ್ಣ ಪಕ್ಷದಲ್ಲಿ ಹದಿನಾರರಿಂದ ಮೂರು ಘಟಿಗಳಲ್ಲಿ ಶ್ರಾದ್ಧ ಮಾಡತಕ್ಕದ್ದು. ಎರಡೂ ದಿನ ಆ ಪ್ರಕಾರದ ಮೂರು ಘಟೀವ್ಯಾಪ್ತಿಯಾದಲ್ಲಿ - ಅಥವಾ ವ್ಯಾಪ್ತಿಯಿಲ್ಲದ್ದಿದರೂ ಶುಕ್ಲಪಕ್ಷದಲ್ಲಿ ಪರವೇ ಗ್ರಾಹ್ಯವು, ತೃತೀಯೆಯು ವರದಿನದಲ್ಲಿ ಹದಿಮೂರು ಘಟಿಗಳಿಗಿಂತ ಪೂರ್ವದಲ್ಲಿ ಸಮಾಪ್ತವಾದರೆ ೫೪ ಧರ್ಮಸಿಂಧು ಪೂರ್ವದಿನ ಹದಿಮೂರರಿಂದ ಮೂರುಘಟಿಗಳಲ್ಲಿ ಅಥವಾ ಏಕದೇಶದಲ್ಲಿ ತೃತೀಯೆಯಿದ್ದರೆ ಆಗ ಕರ್ಮಕಾಲವ್ಯಾಪ್ತಿಶಾಸ್ತ್ರ ಪ್ರಾಶಸ್ತ್ರದಿಂದ ಪೂರ್ವವೇ ಗ್ರಾಹ್ಯವು. ಹೀಗೆ ಹೇಳಲಾಗಿದೆ. ಈ ಪುರುಷಾರ್ಥಚಿಂತಾಮಣಿಕಾರರ ಮತವೇ ಯುಕ್ತವೆಂದನ್ನಿಸುತ್ತದೆ. ಈ ತೃತೀಯಯಲ್ಲಿ ದೇವತೋದ್ದೇಶ ಹಾಗೂ ಪಿತೃುದ್ದೇಶದಿಂದ “ಉದಕುಂಭದಾನವನ್ನು ಹೇಳಿದೆ. -“ಶ್ರೀ ಪರಮೇಶ್ವರ ಪ್ರೀತಿದ್ವಾರಾ ಉದಕುಂಭದಾನ ಕಕ್ತಫಲಾವಾರ್ಥ೦ ಬ್ರಾಹ್ಮಣಾಯ ಉದಕುಂಭದಾನಂ ಕರಿಷ್ಯ ಹೀಗೆ ಸಂಕಲ್ಪಿಸಿ ಸೂತ್ರದಿಂದ ವೇಷ್ಟಿತವಾದ ಗಂಧ-ಫಲ-ಯವಾದಿಗಳಿಂದ ಯುಕ್ತವಾದ ಕಲಶವನ್ನು ಮತ್ತು ಬ್ರಾಹ್ಮಣನನ್ನೂ ಪಂಚೋಪಚಾರಗಳಿಂದ ಪೂಜಿಸಿ “ಏಷಧರ್ಮಘಟೋದ ಬ್ರಹ್ಮವಿಷ್ಣುಶಿವಾತ್ಮಕ ಅ ಪ್ರದಾನಾತ್ಮಕಲಾ ಮಮಸಂತು ಮನೋರಥಾ” ಈ ಮಂತ್ರವನ್ನು ಹೇಳಿ ದಾನ ಮಾಡತಕ್ಕದ್ದು. ಪಿತೃಗಳನ್ನುದ್ದೇಶಿಸಿ ಕೊಡುವಾಗ “ಪಿತೃಣಾಂ ಅಕ್ಷಯ್ಯ ತೃಪ್ತರ್ಥ೦ ಉದಕುಂಭದಾನಂ ಕರಿಷ್ಯ” ಹೀಗೆ ಸಂಕಲ್ಪಿಸಿ ಹಿಂದೆ ಹೇಳಿದಂತೆ ಕುಂಭ ಮತ್ತು ಬ್ರಾಹ್ಮಣನನ್ನು ಪೂಜಿಸಿ ಉದಕುಂಭದಲ್ಲಿ ಗಂಧ, ತಿಲ ಫಲಾದಿಗಳನ್ನು ಹಾಕಿ “ಏಷಧರ್ಮಘಟೋದ ಬ್ರಹ್ಮವಿಷ್ಣು ಶಿವಾತ್ಮಕ:! ಅಸ್ಕ ಪ್ರದಾನಾತ್ ತೃಪ್ಯಂತು ಪಿತರೋಪಿ ಪಿತಾಮಹಾಃ ಗಂಧೋದಕ ತಿಲೈರ್ಮಿಂ ಸಾನ್ನಂ ಕುಂಭಂ ಫಲಾನ್ವಿತಂ | ಪಿತೃಭ: ಸಂಪ್ರದಾಸ್ವಾಮಿ ಅಕ್ಕಯ್ಯ ಮುಪತಿಷ್ಠತು” ಈ ಮಂತ್ರವನ್ನು ಹೇಳಿ ಕೊಡತಕ್ಕದ್ದು. ಯುಗಾದಿ ದಿನದಲ್ಲಿ ಸಮುದ್ರ ಸ್ನಾನದಿಂದ ವಿಶೇಷ ಫಲವಿದೆ. ವೈಶಾಖಮಾಸವು ಅಧಿಕವಾದರೆ ಎರಡೂ ಮಾಸಗಳಲ್ಲಿ ಯುಗಾದಿ ನಿಮಿತ್ತ ಶ್ರಾದ್ಧವನ್ನು ಮಾಡತಕ್ಕದ್ದು. ಯುಗಾದಿಗಳಲ್ಲಿ ಉಪವಾಸ ಮಾಡುವದರಿಂದ ಮಹಾಫಲ ಪ್ರಾಪ್ತಿಯಾಗುವದು. ಯುಗಾದಿ ಮನ್ನಾದಿಗಳಲ್ಲಿ ರಾತ್ರಿ ಭೋಜನ ಮಾಡಿದರೆ “ಅಭಿಸ್ವವೃಷ್ಟಿಂ” ಎಂಬ ಮಂತ್ರವನ್ನು ದೋಷಪರಿಹಾರಕ್ಕಾಗಿ ಪಠಿಸತಕ್ಕದ್ದು. ಯುಗಾದಿ ಶ್ರಾದ್ಧ ಲೋಪವಾದಲ್ಲಿ “ಯುಗಾದಿ ಶ್ರಾದ್ಧ ಲೋಪಜನ್ಯ ಪ್ರತ್ಯವಾಯ ಪರಿಹಾರಾರ್ಥಂ ಋಗ್ವಿಧಾನೋಕ್ತಂ ಪ್ರಾಯಶ್ಚಿತ್ತಂ ಕರಿಷ್ಯ ಹೀಗೆ ಸಂಕಲ್ಪಿಸಿ “ನಯಸ್ಮಧ್ಯಾವ” ಎಂಬ ಋಂತ್ರವನ್ನು ನೂರಾವರ್ತಿ ಜಪಿಸುವದು. ಈ ನಿರ್ಣಯವನ್ನು ಸರ್ವ ಯುಗಾದಿಗಳಲ್ಲಿಯೂ ತಿಳಿಯತಕ್ಕದ್ದು. ಹೀಗೆ ಅಕ್ಷಯ್ಯ ತೃತೀಯಾ ನಿರ್ಣಯವು. ಇದೇ ತೃತೀಯೆಯು “ಪರಶುರಾಮಜಯಂತಿ"ಯಾಗಿದೆ. ಇದರಲ್ಲಿ ರಾತ್ರಿಯ ಪ್ರಥಮಯಾಮ ವ್ಯಾಪ್ತಿಯಾದದ್ದು ಗ್ರಾಹ್ಯವು. ಪೂರ್ವದಿನದಲ್ಲಿಯೇ ಪ್ರಥಮಯಾಮ ವ್ಯಾಪ್ತಿಯಿದ್ದಲ್ಲಿ ಪೂರ್ವಗ್ರಾಹ್ಯವು. ಎರಡೂ ದಿನ ರಾತ್ರಿಯಲ್ಲಿ ಪ್ರಥಮಯಾಮದಲ್ಲಿ ಸಾಮ್ಯದಿಂದ ಅಥವಾ ವೈಷಮ್ಯದಿಂದ ಏಕದೇಶವ್ಯಾಪ್ತಿಯಿದ್ದಲ್ಲಿ ಪರದಿನವು ಗ್ರಾಹ್ಯವು. ಪ್ರದೋಷಕಾಲದಲ್ಲಿ ಪರಶುರಾಮನನ್ನು ಪೂಜಿಸಿ “ಜಮದಗ್ನಿಸುತೋವೀರ ಕ್ಷತ್ರಿಯಾಂತಕರಪ್ರಭೋಗೃಹಾಣಾರ್ಘ ಮಯಾದತ್ತಂ ಕೃಪಯಾ ಪರಮೇಶ್ವರ” ಈ ಮಂತ್ರದಿಂದ ಅರ್ಥ್ಯವನ್ನು ಕೊಡತಕ್ಕದ್ದು. ವೈಶಾಖ ಶುಕ್ಲ ಸಪ್ತಮಿಯಲ್ಲಿ ಗಂಗೋತ್ಪತ್ತಿಯಾಗಿದೆ. ಮಧ್ಯಾಹ್ನವ್ಯಾಪಿನಿಯಾದ ಸಪ್ತಮಿಯಲ್ಲಿ ಪೂಜೆಯನ್ನು ಮಾಡತಕ್ಕದ್ದು. ಎರಡೂ ದಿನ ಸಮವ್ಯಾಪ್ತಿ ಅಥವಾ ಏಕದೇಶವ್ಯಾಪ್ತಿಯಿದ್ದಲ್ಲಿ ಪೂರ್ವವೇ ಗ್ರಾಹ್ಯವು. ವೈಶಾಖ ಮಾಸದ ದ್ವಾದಶಿಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಿದರೆ ಅಗ್ನಿಷ್ಟೋಮಮಾಡಿದ ಪುಣ್ಯ ಸಿಗುವುದಲ್ಲದೆ ಚಂದ್ರಲೋಕಪ್ರಾಪ್ತಿಯಾಗುವದು. ಮುಚ್ಛೇದ - ೨ ವೈಶಾಖ ಶುಕ್ಲ ಚತುರ್ದಶಿಯು “ನೃಸಿಂಹಜಯಂತಿ"ಯು. ಅದನ್ನು ಸೂರ್ಯಾಸ್ತಮಯ ಕಾಲವ್ಯಾಪಿನಿಯನ್ನು ಸ್ವೀಕರಿಸುವದು. ಎರಡೂ ದಿನ ಆ ವ್ಯಾಪ್ತಿಯಿಲ್ಲದಿದ್ದರೆ ಅಥವಾ ಎರಡೂ ದಿನ ವ್ಯಾಪ್ತಿಯಿದ್ದರೂ ಪರವೇ ಗ್ರಾಹ್ಯವು, ಸ್ವಾತಿ ನಕ್ಷತ್ರ ಶನಿವಾರ ಮೊದಲಾದ ಯೋಗವಾದಲ್ಲಿ ಅದು ಅತಿಪ್ರಶಸ್ತವು. ಅದರ ವ್ರತಪ್ರಯೋಗ ಹೇಗೆಂದರೆ - ತ್ರಯೋದಶಿಯಲ್ಲಿ ಏಕಭುಕ್ತಮಾಡಿ ಚತುರ್ದಶಿಯ ಮಧ್ಯಾಹ್ನದಲ್ಲಿ ತಿಲಾಮಲಕಕಲ್ಕ (ಎಳ್ಳು-ನಲ್ಲಿ ಹಿಂಡಿ)ದಿಂದ ಸ್ನಾನಮಾಡಿ ‘ಉಪೋsಹಂ ನಾರಸಿಂಹ ಭುಕ್ತಿಮುಕ್ತಿ ಫಲಪ್ರದ ಶರಣಂ ತ್ವಾಂ ಪ್ರವನ್ನೋ ಭುಕ್ತಿಂ ಮೇ ಬೃಹರೇ ದಿಶ” ಈ ಮಂತ್ರದಿಂದ ವ್ರತವನ್ನು ಸಂಕಲ್ಪಿಸಿ ಆಚಾರ್ಯನನ್ನು ವರಿಸುವದು. ಸಾಯಂಕಾಲ ಧಾನ್ಯದಲ್ಲಿ ಪೂರ್ಣಪಾತ್ರಸಹಿತವಾದ ಜಲಕುಂಭವನ್ನಿಟ್ಟು ಅದರ ಮೇಲೆ ಬಂಗಾರದ ಪ್ರತಿಮೆಯನ್ನಿಡತಕ್ಕದ್ದು, ದೇವನನ್ನು ಷೋಡಶೋಪಚಾರಗಳಿಂದ ಪೂಜಿಸಿ “ಪರಿತ್ರಾಣಾಯ ಸಾಧೂನಾಂ ಜಾತೋ ವಿಷ್ಟೋಕೇಸರೀ ಗೃಹಾಣಾರ್ಥ್ಯ ಮಯಾರಂ ಸಲಕ್ಷ್ಮೀರ್ನೃಹರಿ: ಸ್ವಯಂ” ಈ ಮಂತ್ರದಿಂದ ಅರ್ಘವನ್ನು ಕೊಡತಕ್ಕದ್ದು, ರಾತ್ರಿಯಲ್ಲಿ ಜಾಗರಣಮಾಡಿ ಮರುದಿನ ಪ್ರಾತಃ ಕಾಲದಲ್ಲಿ ದೇವನನ್ನು ಪೂಜಿಸಿ ವಿಸರ್ಜಿಸತಕ್ಕದ್ದು. ಆಮೇಲೆ ಆಚಾರ್ಯನಿಗೆ “ನೃಸಿಂಹಾಚ್ಯುತ ಗೋವಿಂದ ಲಕ್ಷ್ಮೀಕಾಂತ ಜಗತ್ಪತೇ ಅನೇನಾರ್ಚಾಪ್ರದಾನೇನ ಸಫಲಾಃ ಸುರ್ಮನೋರಥಾ: ಈ ಮಂತ್ರದಿಂದ ಧೇನುಯುತವಾದ ಪ್ರತಿಮೆಯನ್ನು ದಾನಕೊಡತಕ್ಕದ್ದು, ಆಮೇಲೆ “ಮಧ್ವಂಶ ಯೇನರಾಜಾತಾ ಯೇಜನಿಷ್ಕಂತಿಚಾಪರೇ ತಾಂಮುದ್ಧರದೇವೇಶ ದುಃಸಹಾದ್ಭವಸಾಗರಾತ್ ಪಾತಕಾರ್ಣವವಗ್ನ ವ್ಯಾಧಿ ದುಃಖಾಂಬು ವಾರಿ ನೀಚೈಶ್ಚ ಪರಿಭೂತ ಮಹಾ ದು: ಖಾಗತಸ್ಯಮೇಕರಾವಲಂಬನಂದೇಹಿ ಶೇಷಶಾಯಿಸ್ ನಮೋಸ್ತುತೇ ||ಶ್ರೀ ನೃಸಿಂಹರಮಾಕಾಂತ ಭಕ್ತಾನಾಂಭಯನಾಶನ ಕ್ಷೀರಾಂಬುಧಿನಿವಾಸಂ ಚಕ್ರಪಾಣೇ ಜನಾರ್ದನ ವ್ರತೇನಾನೇನದೇವೇಶ ಭುಕ್ತಿಮುಕ್ತಿ ಪ್ರದೋಭವ” ಹೀಗೆ ಪ್ರಾರ್ಥಿಸಿ ಬ್ರಾಹ್ಮಣರಿಂದ ಸಹಿತನಾಗಿ ಪಾರಣ ಮಾಡತಕ್ಕದ್ದು. ಪಾರಣೆಯನ್ನು ತಿಥಿಯ ಅಂತ್ಯದಲ್ಲಿ ಮಾಡತಕ್ಕದ್ದು. ಯಾಮತ್ರಯಕ್ಕಿಂತ ಹೆಚ್ಚಾಗಿರುವ ಚತುರ್ದಶಿಯಲ್ಲಿ ಪೂರ್ವಾಹ್ನದಲ್ಲಿಯೇ ಪಾರಣ ಮಾಡತಕ್ಕದ್ದು. ಇದೇ ಹುಣ್ಣಿವೆಯಲ್ಲಿ ಪಕ್ವಾನ್ನ ಸಹಿತವಾದ ಉದಕುಂಭದಾನಮಾಡಿದರೆ ಗೋದಾನ ಮಾಡಿದ ಫಲವು ಸಿಗುವದು. ಸುವರ್ಣ- ತಿಲ ಯುಕ್ತಗಳಾದ ಹನ್ನೆರಡು ಉದಕುಂಭ ದಾನ ಮಾಡಿದರೆ ಬ್ರಹ್ಮಹತ್ಯಾಪಾಪವು ನಿವೃತ್ತವಾಗುವದು. ಇದರಲ್ಲಿ ಯಥಾವಿಧಿಯಾಗಿ ಕೃಷ್ಣಾಜಿನದಾನ ಮಾಡಿದರೆ ಭೂಮಿದಾನಮಾಡಿದಷ್ಟು ಪುಣ್ಯ ಸಿಗುವದು. ಇದರಲ್ಲಿ ಸುವರ್ಣ, ಜೇನುತುಪ್ಪ, ಎಳ್ಳು, ಧೃತಯುಕ್ತವಾದ ಕೃಷ್ಣಾಜಿನ ಇವುಗಳನ್ನು ದಾನ ಮಾಡಿದರೆ ಸಕಲಪಾಪ ಪರಿಹಾರವಾಗುವದು. ತಿಲಸ್ನಾನ, ತಿಲಹೋಮ, ತಿಲಪಾತ್ರದಾನ, ತಿಲತೈಲಯುಕ್ತವಾದ ದೀಪದಾನ, ತಿಲಗಳಿಂದ ಪಿತೃತರ್ಪಣ, ಮಧುಯುಕ್ತವಾದ ತಿಲದಾನ ಇವುಗಳಿಂದ ಮಹಾಪುಣ್ಯಫಲವು. “ತಿಲಾವೈಸೋಮ‌ವಾ: ಸುರೈ ಸೃಷ್ಟಾಸ್ತು ಗೋಸವೇ ಸ್ವರ್ಗಪ್ರದಾಃಸ್ವತಂತ್ರಾಶ್ಚ ತೇ ಮಾಂ ರಕ್ಷಂತು ನಿತ್ಯಶಃ” ಈ ಮಂತ್ರದಿಂದ ತಿಲದಾನ ಮಾಡತಕ್ಕದ್ದು. “ವೈಶಾಖಸ್ನಾನ"ದ ಉದ್ಯಾಪನೆಯನ್ನು ವೈಶಾಖ ಶುಕ್ಲ ದ್ವಾದಶೀ” ಅಥವಾ ಹುಣ್ಣಿವೆಯಲ್ಲಿ ಮಾಡತಕ್ಕದ್ದು. ಏಕಾದಶಿ ಅಥವಾ ಹುಣ್ಣಿವೆಯ ದಿನ ಉಪೋಷಣಮಾಡಿ, ಕಲಶದಲ್ಲಿ ಲಕ್ಷ್ಮೀಸಹಿತನಾದ ವಿಷ್ಣು ಪ್ರತಿಮೆಯನ್ನಿಟ್ಟು ಪೂಜಿಸಿ ಧರ್ಮಸಿಂಧು ರಾತ್ರಿಯಲ್ಲಿ ಜಾಗರಣ ಮಾಡತಕ್ಕದ್ದು. ಮರುದಿನ ಬೆಳಿಗ್ಗೆ ಗ್ರಹಪೂಜನಪೂರ್ವಕವಾಗಿ ಪಾಯಸ ಅಥವಾ ತಿಲಾಜ್ಯಗಳಿಂದ ನೂರೆಂಟಾಹುತಿಗಳಿಂದ ಹೋಮಿಸತಕ್ಕದ್ದು. “ಪ್ರತಿದ್ವಿಷ್ಟು” ಅಥವಾ “ಇದಂವಿಷ್ಣು” ಇದೇ ಹೋಮ ಮಂತ್ರವು. ಸಾಂಗತಾಸಿದ್ಧರ್ಥವಾಗಿ ಗೋವು, ಪಾದುಕಾ, ಕಾಶ್ಮೀರಿ, ಛತ್ರ, ವ್ಯಜನ, ಉದಕುಂಭ, ಶಯ್ಯಾ ಇತ್ಯಾದಿ ದಾನಮಾಡತಕ್ಕದ್ದು, ಅಶಕ್ತನಾದವನು ಕೃಸರ ಆದಿ ಅನ್ನದಿಂದ ಹತ್ತು ಬ್ರಾಹ್ಮಣರ ಭೋಜನ ಮಾಡಿಸತಕ್ಕದ್ದು. ಈ ಹುಣ್ಣಿಮೆಯಿಂದಾರಂಭಿಸಿ ಜೇಷ್ಠ ಶುಕ್ಲ ಏಕಾದಶಿಯ ವರೆಗೆ ಜಲದಲ್ಲಿರುವ ವಿಷ್ಣು ಪೂಜೋತ್ಸವವನ್ನು ಮಾಡತಕ್ಕದ್ದು. ವೈಶಾಖ ಅಮಾವಾಸ್ಯೆಗೆ “ಭಾವುಕ” ಎಂಬ ಸಂಜ್ಞೆಯಿದೆ. ಇದರ ಮಾರನೇ ದಿನಕ್ಕೆ “ಕರಿ"ದಿನವನ್ನುವರು. ಇವೆರಡನ್ನೂ ಶುಭಕಾರ್ಯದಲ್ಲಿ ಬಿಡತಕ್ಕದ್ದು. ಇಲ್ಲಿಗೆ ಧರ್ಮಸಿಂಧುಸಾರದಲ್ಲಿ ವೈಶಾಖಮಾಸದ ಕೃತ್ಯೋದ್ದೇಶವು ಮುಗಿಯಿತು. ಜೇಷ್ಠ ಮಾಸ ಕೃತ್ಯಗಳು ಮಿಥುನ ಸಂಕ್ರಾಂತಿಯಲ್ಲಿ ಮುಂದಿನ ಹದಿನಾರು ಘಟಿಗಳು ಪುಣ್ಯ ಕಾಲವು. ರಾತ್ರಿ ನಿರ್ಣಯವನ್ನು ಹಿಂದೆಯೇ ಹೇಳಿದೆ. ಜೇಷ್ಠ ಮಾಸದಲ್ಲಿ ಹಿಟ್ಟಿನಿಂದ ಬ್ರಹ್ಮನ ಮೂರ್ತಿ ಮಾಡಿ ವಸ್ತ್ರಾದಿಗಳಿಂದ ಪೂಜಿಸಿದರೆ ಸೂರ್ಯಲೋಕ ಪ್ರಾಪ್ತಿಯಾಗುವದು. ಈ ಮಾಸದಲ್ಲಿ ಜಲಧೇನು ದಾನಮಾಡಬೇಕೆಂದು ಹೇಳಿದೆ. ಜೇಷ್ಠ ಪ್ರತಿಪದೆಯಲ್ಲಿ “ಕರವೀರ ವ್ರತ"ವನ್ನು ಹೇಳಿದೆ. ಜೇಷ್ಠ ಶುಕ್ಲ ತೃತೀಯೆಯಲ್ಲಿ ‘ರಂಭಾವ್ರತ” ವನ್ನಾಚರಿಸತಕ್ಕದ್ದು. ಅದಕ್ಕೆ ಪೂರ್ವವಿದ್ಧವಾದ ತದಿಗೆ ಗ್ರಾಹ್ಯವು. ಪೂರ್ವವಿದ್ದ ಎಂದರೆ ಅಸ್ತಮಾನಕ್ಕೆ ಮೊದಲು ಎರಡು ಮುಹೂರ್ತಕ್ಕಿಂತ ಹೆಚ್ಚಾಗಿದ್ದದ್ದು ಎಂದು ತಿಳಿಯತಕ್ಕದ್ದು. ಅದಕ್ಕೂ ಕಡಿಮೆಯಿರತಕ್ಕದ್ದಲ್ಲ. ಈ ಪೂರ್ವವಿದ್ದವಾದ ತದಿಗೆಯು ಪರದಿನ ಸೂರ್ಯಾಸ್ತಪರ್ಯಂತವಾಗುಳಿದರೆ ಪೂರ್ವವಿದ್ದವನ್ನು ಬಿಟ್ಟು ವರವನ್ನೇ ಗ್ರಾಹ್ಯ ಮಾಡತಕ್ಕದ್ದು. ಯಾಕೆಂದರೆ ಅದು ಅಖಂಡ ಹಾಗೂ ಶುದ್ಧವಾದದ್ದಾಗುವದು. ಗ್ರಾಹ್ಯವಾದ ಪೂರ್ವವಿದ್ದ ತಿಥಿಯು ಮುಂಚಿನ ದಿನ ಮುಹೂರ್ತದ್ವಯಕ್ಕಿಂತ ಕಡಿಮೆಯಿದ್ದರೆ ಮತ್ತು ಮಾರನೇದಿನ ಅಸ್ತಮಯಕ್ಕಿಂತ ಮೊದಲು ಮುಗಿಯದಿದ್ದರೆ ಪರವೇ ಗ್ರಾಹ್ಯವು. ಹೀಗೆ ಸರ್ವತ್ರ ಊಹಿಸತಕ್ಕದ್ದು. ಈ ರಂಭಾವ್ರತದಲ್ಲಿ ಪಂಚಾಗ್ನಿತಪ್ಪ (ಮೇಲೆ ಸೂರ್ಯ ನಾಲ್ಕು ದಿಕ್ಕುಗಳಲ್ಲಿ ಅಗ್ನಿ ಇವುಗಳ ಮಧ್ಯದಲ್ಲಿ ತಪ್ತವಾಗಿರುವದು)ಳಾದ ಸ್ತ್ರೀ ಅಥವಾ ಪುರುಷನು ಭವಾನಿದೇವಿಯನ್ನು ಸ್ವರ್ಣಪ್ರತಿಮೆಯಲ್ಲಿ ಪೂಜಿಸಿ ಯಥೋಕ್ತ ವಿಧಿಯಿಂದ ಹೋಮಾದಿಗಳನ್ನು ಮಾಡಿ ಸಪಕನಾದ ಬ್ರಾಹ್ಮಣನಿಗೆ ಸಕಲಸಾಹಿತ್ಯಪೂರ್ಣವಾದ ಮನೆಯನ್ನು ದಾನಮಾಡತಕ್ಕದ್ದು. ಮತ್ತು ದಂಪತಿಭೋಜನ ಮಾಡಿಸತಕ್ಕದ್ದು. ಇದರ ವಿಶೇಷ ವಿವರನ್ನು ವ್ರತಗ್ರಂಥದಲ್ಲಿ ನೋಡತಕ್ಕದ್ದು. ಜೇಷ್ಠ ಶುಕ್ಲ ಚತುರ್ಥಿಯಲ್ಲಿ “ಉಮಾಪೂಜನ ವ್ರತವನ್ನು ಹೇಳಿದೆ. ಅಷ್ಟಮಿಯಲ್ಲಿ “ಶುಕ್ಲಾದೇವಿ"ಯನ್ನು ಪೂಜಿಸತಕ್ಕದ್ದು. ನವಮಿಯಲ್ಲಿ ಉಪವಾಸದಿಂದಿದ್ದು ದೇವಿಯನ್ನಾರಾಧಿಸತಕ್ಕದ್ದು. ಜೇಷ್ಠ ಶುಕ್ಲ ದಶಮಿಯು ಗಂಗಾವತಾರದಿನವು. ಇದಕ್ಕೆ “ದಶಹರಾ” ಎನ್ನುವರು. ಇದರಲ್ಲಿ ಹತ್ತು ಯೋಗಗಳು ಹೇಳಲ್ಪಟ್ಟಿವೆ. ಜೇಷ್ಠಮಾಸ (೧)ಶುಕ್ಲಪಕ್ಷ(೨) ದಶಮೀ(೩)ಬುಧವಾರ (೪) ಹಸ್ತನಕ್ಷತ್ರ (೫) ವ್ಯತೀಪಾತ(೬) ಗರಜಕರಣ (೭) ನಂದಾತಿಥಿ (೮) ಕನ್ಯಾ ಚಂದ್ರ (೯) ವೃಷಭ ರವಿ (೧೦)ಬುಧವಾರ ಪರಿಚ್ಛೇದ - ೨ ೫೭ -ಹಸ್ತಯೋಗವಾದರೆ ಅದಕ್ಕೆ “ಆನಂದಯೋಗ"ವೆನ್ನುವರು. ಇದರಲ್ಲಿ ದಶಮೀ ವೃತಿಪಾತಗಳು ಮುಖ್ಯಗಳು. ಆದ್ದರಿಂದ ಕೆಲ ವಿಷಯೋಗದಿಂದ ಕೂಡಿದ ದಶಮಿಯು ಪೂರ್ವಾಹ್ನದಲ್ಲಿದ್ದಾಗ ಆ ದಿನ “ದಶಹರಾ” ವ್ರತವನ್ನಾಚರಿಸತಕ್ಕದ್ದು. ಎರಡೂ ದಿನ ಇಂಥ ದಶಮಿಯಿದ್ದರೆ ಯಾವ ದಿನ ಹೆಚ್ಚಿನ ಯೋಗವಾಗಿದೆಯೋ ಆ ದಿನ ಮಾಡತಕ್ಕದ್ದು. ಜೇಷ್ಠವು ಮಲಮಾಸದಲ್ಲಿ. ಮಲಮಾಸದಲ್ಲಿಯೇ ಇದನ್ನು ಮಾಡತಕ್ಕದ್ದು. ಹೊರತು ಶುದ್ಧಮಾಸದಲ್ಲಲ್ಲ. ದಶಹರಾ ಮತ್ತು ನಾಲ್ಕು ಯುಗಾದಿಗಳಲ್ಲಿ ಮುಂದೆ ಶುದ್ಧಮಾಸದ ನಿರೀಕ್ಷೆ (ಉತ್ಕರ್ಷ)ಯು ಅಗತ್ಯವಿಲ್ಲವೆಂದು ಹೇಮಾದ್ರಿಯಲ್ಲಿ “ಋಷ್ಯಶೃಂಗನ ಉಕ್ತಿಯಿದೆ. ಕಾಶೀಕ್ಷೇತ್ರದಲ್ಲಿರುವವರು ದಶಾಶ್ವಮೇಧ ತೀರ್ಥದಲ್ಲಿ ಸ್ನಾನಮಾಡಿ ಗಂಗಾಪೂಜೆಯನ್ನು ಮಾಡತಕ್ಕದ್ದು. ಬೇರೆ ಕಡೆಯಲ್ಲಿರುವವರು ತಮಗೆ ಸಮೀಪದಲ್ಲಿರುವ ನದಿಯಲ್ಲಿ ಸ್ನಾನಮಾಡಿ ಗಂಗಾಪೂಜಾದಿಗಳನ್ನು ಮಾಡತಕ್ಕದ್ದು. ಈಗ ವ್ರತನಿಧಿಯು - ದೇಶಕಾಲಗಳನ್ನುಚ್ಚರಿಸಿ “ಮಮೃತಜ್ಞನ್ಮ ಜನ್ಮಾಂತರ ಸಮುದ್ಭತ ತ್ರಿವಿಧಕಾಯಿಕ ಚತುರ್ವಿಧ ವಾಚಿಕ ತ್ರಿವಿಧ ಮನಸೇತಿ ಸ್ಕಾಂದೋಕ್ತ ದಶವಿಧ ಪಾಪನಿರಾಸ ತ್ರಯಂಶಚ್ಛತ ಪಿತ್ರುದ್ಧಾರ ಬ್ರಹ್ಮಲೋಕಾವಾಪ್ಯಾದಿ ಫಲಪ್ರಾಪ್ತರ್ಥಂ ಜೇಷ್ಠ ಮಾಸಸಿತಪಕ್ಷ ದಶಮೀ ಬುಧವಾರ ಹಸ್ತತಾರಕಾಗರಕರಣ ವ್ಯತೀಪಾತ ಆನಂದಯೋಗ ಕನ್ಯಾರ ಚಂದ್ರ ವೃಷಸ್ಥ ಸೂರ್ಯೇತಿದಶಯೋಗ ಪರ್ವಣ್ಯಂ ಸ್ಕಾಂ ಮಹಾನದ್ಯಾಂಗ್ನಾನಂ ತೀರ್ಥ ಪೂಜನಂ ಪ್ರತಿಮಾಯಾಂ ಜಾಹ್ನವೀ ಪೂಜಾಂ ತಿಲಾದಿಗಾನು ಮೂಲಮಂತ್ರಜಪು ಆಜ್ಯಹೋಮಂ ಚ ಯಥಾಶಕ್ತಿ ಕರಿಷ್ಯ ಹೀಗೆ ಸಂಕಲ್ಪಿಸಿ ಯಥಾವಿಧಿ ದಶಸ್ನಾನವನ್ನು ಮಾಡಿ (ಹತ್ತಾವರ್ತಿಸ್ನಾನ) ಜಲದಲ್ಲಿ ನಿಂತು ಹತ್ತಾವರ್ತಿ ಅಥವಾ ಒಂದಾವರ್ತಿ ಮುಂದೆ ಹೇಳಿದ ಸ್ತೋತ್ರವನ್ನು ಪಠಿಸಿ ವಸ್ತ್ರಗಳನ್ನುಟ್ಟು ಪಿತೃತರ್ಪಣಾಂತವಾಗಿ ನಿತ್ಯಕರ್ಮವನ್ನು ಮುಗಿಸಿ, ತೀರ್ಥಪೂಜೆಯನ್ನು ಮಾಡತಕ್ಕದ್ದು, ತುಪ್ಪದಿಂದ ಯುಕ್ತವಾದ ಹತ್ತು ಮುಷ್ಟಿ ಕರೇಎಳ್ಳುಗಳನ್ನು ಅಂಜಲಿಯಿಂದ ತೀರ್ಥದಲ್ಲಿ ಚೆಲ್ಲತಕ್ಕದ್ದು. ಮತ್ತು ಬೆಲ್ಲದಿಂದ ಕಲಿಸಿದ ಹತ್ತು ಹಿಟ್ಟಿನಪಿಂಡಗಳನ್ನೂ ತೀರ್ಥದಲ್ಲಿ ಹಾಕತಕ್ಕದ್ದು. ಆಮೇಲೆ ಗಂಗಾತೀರದಲ್ಲಿ ತಾಮ್ರ ಅಥವಾ ಮಣ್ಣಿನ ಪಾತ್ರದಲ್ಲಿ ಸ್ಥಾಪಿತವಾದ ಕಲಶದಲ್ಲಿ ಸುವರ್ಣಾದಿಗಳಿಂದ ನಿರ್ಮಿಸಿದ ಪ್ರತಿಮೆಯಲ್ಲಿ ಗಂಗಾದೇವಿಯನ್ನಾ ವಾಹಿಸತಕ್ಕದ್ದು. ಆವಾಹನಮಂತ್ರ ಹೇಗೆಂದರೆ -“ನಮೋಭಗವ ದಶಪಾಪಹರಾಯ್ಕೆ ಗಂಗಾಯ್ಕೆ ನಾರಾಯಣ್ಣ ರೇವ ಶಿವಾಯ್ಕೆ ದಕ್ಷಾಯ್ಕೆ ಅಮೃತಾಯ್ಕೆ ವಿಶ್ವರೂಪಿ ನಂದಿತೇ ನಮೋನಮಃ” ಈ ಮಂತ್ರವು ಸ್ತ್ರೀಶೂದ್ರಾದಿಗಳಿಗೂ ಉಪಯುಕ್ತವು. “ಓಂ ನಮಃ ಶಿವಾಯ ನಾರಾಯಣ್‌ ದಶಹರಾಯ್ಕೆ ಗಂಗಾಯ್ಕೆ ಸ್ವಾಹಾ’ ಎಂಬ ಇಪ್ಪತ್ತು ಅಕ್ಷರಗಳ ಮಂತ್ರ ಮಾತ್ರ ಬ್ರಾಹ್ಮಣರಿಗೆ ಮೀಸಲಾದದ್ದು. ಈ ಮಂತ್ರದಿಂದ ಗಂಗೆಯನ್ನಾ ವಾಹಿಸಿ ಅದರಲ್ಲಿಯೇ ನಾರಾಯಣ, ರುದ್ರ, ಬ್ರಹ್ಮ, ಸೂರ್ಯ, ಭಗೀರಥ ಮತ್ತು ಹಿಮಾಚಲ ಇವುಗಳನ್ನು ನಾಮಮಂತ್ರದಿಂದ ಆವಾಹನಮಾಡಿ ಹಿಂದೆ ಹೇಳಿದಂತೆ ಮೂಲಮಂತ್ರವನ್ನುಚ್ಚರಿಸಿ “ಶ್ರೀ ಗಂಗಾಯ್ಕೆ, ನಾರಾಯಣ, ರುದ್ರ, ಬ್ರಹ್ಮ, ಸೂರ್ಯ, ಭಗೀರಥ, ಹಿಮವತ್ಸಹಿತಾಯ್ಕ, ಆಸನಂ ಸಮರ್ಪಯಾಮಿ ಇತ್ಯಾದಿ ಉಪಚಾರಗಳಿಂದ ಪೂಜಿಸತಕ್ಕದ್ದು. ಹತ್ತು ವಿಧವಾದ ಪುಷ್ಪಗಳಿಂದ ಪೂಜಿಸಿ ದಶಾಂಗಧೂಪವನ್ನು ಕೊಟ್ಟು ದಶವಿಧನೈವೇದ್ಯವನ್ನು ಸಮರ್ಪಿಸಿ ತಾಂಬೂಲದಕ್ಷಿಣೆಗಳನ್ನು ಕೊಟ್ಟು ಹತ್ತುಫಲಗಳನ್ನು ಸಮರ್ಪಿಸತಕ್ಕದ್ದು. ಹತ್ತು ದೀಪಗಳನ್ನು ಹಚ್ಚಿ ಪೂಜೆಯನ್ನು ಮುಗಿಸತಕ್ಕದ್ದು. ಹತ್ತು ಬ್ರಾಹ್ಮಣರಿಗೆ EROS ಧರ್ಮಸಿಂಧು ಪ್ರತ್ಯೇಕವಾಗಿ ಹದಿನಾರು ಮುಷ್ಟಿ ಎಳ್ಳು ಹಾಗೂ ಗೋದಿಯನ್ನು ದಕ್ಷಿಣಾಸಹಿತವಾಗಿ ಕೊಡತಕ್ಕದ್ದು. ಆಮೇಲೆ ಹತ್ತು ಅಥವಾ ಒಂದಾದರೂ ಗೋದಾನ ಮಾಡಿ ಬಂಗಾರದ ಅಥವಾ ಬೆಳ್ಳಿಯ ಇಲ್ಲವೆ ಹಿಟ್ಟಿನ ಮೀನ, ಕೂರ್ಮ, ಕಪ್ಪೆಗಳ ಪ್ರತಿಮೆಮಾಡಿ ಪೂಜಿಸಿ ತೀರ್ಥದಲ್ಲಿ ಬಿಡತಕ್ಕದ್ದು. ಇದರಂತ ದೀಪಗಳನ್ನೂ ನೀರಿನ ಮೇಲೆ ತೇಲಿಬಿಡತಕ್ಕದ್ದು. ಜಪಹೋಮಗಳನ್ನು ಮಾಡುವದಿದ್ದಲ್ಲಿ ಪೂರ್ವೋಕ್ತಮಂತ್ರಗಳ ಐದುಸಾವಿರ ಜಪಮಾಡಿ ಅದರ ದಶಾಂಶದಿಂದ ಹೋಮ ಮಾಡತಕ್ಕದ್ದು. ಅಥವಾ ಯಥಾಶಕ್ತಿ ಜಪ ಹೋಮಗಳನ್ನು ಮಾಡತಕ್ಕದ್ದು. “ದಶಹರಾವ್ರತಾಂಗನ ಹೋಮಂಕರಿ” ಹೀಗೆ ಸಂಕಲ್ಪಿಸಿ ಅಗ್ನಿ ಪ್ರತಿಷ್ಠೆಮಾಡಿ ಅನಾಧಾನದಲ್ಲಿ “ಚಕ್ಷುಷೀ ಆಜೇನ “ಶ್ರೀ ಗಂಗಾಂ ಅಮುಕ ಸಂಖ್ಯಯಾ ಆಜೇನ ನಾರಾಯಣಾದಿ ಷಡ್ ದೇವತಾ ಏಕೈಕಯಾಜ್ಯಾಹುತ್ಯಾ ಶೇಷೇಣ ಸ್ಪಷ್ಟಕೃದಿತ್ಯಾದಿ” ಪ್ರೋಕ್ಷಿಣೀ- ಮೊದಲಾದ ಆರು ಪಾತ್ರೆಗಳ ಆಸಾದನ ಮಾಡಿ ಆಜ್ಯವನ್ನು ಸಂಸ್ಕರಿಸಿ ಅನ್ನಾಧಾನಕ್ರಮದಿಂದ ಹೋಮಿಸತಕ್ಕದ್ದು. ಹತ್ತು ಬ್ರಾಹ್ಮಣರನ್ನೂ ಸುವಾಸಿನಿಯರನ್ನೂ ಸಂತರ್ಪಣಮಾಡಿಸುವದು. ಪ್ರತಿಪದೆಯನ್ನಾರಂಭಿಸಿ ದಶಮಿಯ ವರೆಗೆ ಸ್ನಾನಾದಿ ಪೂಜಾಂತವಿಧಿಯನ್ನಾಚರಿಸತಕ್ಕದ್ದೆಂದು ಕೆಲವರ ಮತವಿಗೆ, ಸ್ಕಾಂದಪುರಾಣದಲ್ಲಿ ಇದರ ಸ್ತೋತ್ರವು ಹೀಗಿದೆ. “ಬ್ರಹ್ಮವಾಚನಮ: ಶಿವಾಯ್ಕೆ ಗಂಗಾಯ್ಕೆ ಶಿವರಾಯೆನಮೋನಮ: ನಮಸ್ತರುದ್ರರೂಪಿ ಶಾಂರ್ಯತೇ ನಮೋ ನಮಃ||೧|| ನಮಸ್ತೇ ವಿಶ್ವರೂಪಿಶ್ಯ ಬ್ರಹ್ಮಮೂರ್ತೆ ನಮೋ ನಮಃ ಸರ್ವ ದೇವ ಸ್ವರೂಪಿ ನಮೋಭೇಷಜಮೂರ್ತಯೇ ||೨|| ಸರ್ವಸರ್ವ ವ್ಯಾಧೀನಾಂ ಭಿಷಕ್ ಶ್ರೇಷ್ಟೆ ನಮೋಸ್ತುತೇ|| ಸ್ಮಾಣುಜಂಗಮಸಂಭೂತ ವಿಷಹಂತ್ರ್ಯ ನಮೋನಮ: ||೩|ಭೋಗೋಪಭೋಗದಾಯಿನ್ಯ ಭೋಗವ ನಮೋನಮಃ! ಮಂದಾಕಿನೆ ನಮಸ್ತೇಸ್ತು ಸ್ವರ್ಗದಾಯ್ಕೆ ನಮಃ ಸಾ||೪|| ನ ಲೋಕಭೂಷಾಯ್ಕ ಜಗದ್ಧಾತ್ರ ನಮೋನಮಃ|ನಮಶುಕ್ಲ ಸಂಸ್ಥಾ ತೇಜೋವ ನಮೋನಮಃ||೫|| ನಂದಾಣಿ ಲಿಂಗಧಾರಿ ನಾರಾಯಮ್ಮ ನಮೋನಮಃ|| ನಮಸ್ತೇ ವಿಶ್ವಮುಖ್ಯಾ ರೇವತೇ ನಮೋನಮಃ||೬|| ಬೃಹತ್ ನಮಸ್ತೇಸ್ತು ಲೋಕಧಾತ್ಮ ನಮೋನಮಃ||ನಮಸ್ತೇವಿಶ್ವಮಿತ್ರಾ ನಂದಿತೇ ನಮೋನಮ ||೭|| ಪ್ರಶ್ನೆ ಶಿವಾಮೃತಾಯ್ಕೆ ಚ ಸುವೃಷಾಯ್ಕೆ ನಮೋನಮ:ಶಾಂತಾಯ್ಕೆ ಚ ವರಿಷ್ಠಾಯೆ ವರದಾಯ್ಕೆ ನಮೋನಮಃ||೮|| ಉಗ್ರಾಯ್ಕೆ ಸುಖದೋಚ ಸಂಜೀವಿನ ನಮೋನಮ: ಬ್ರಹ್ಮಷ್ಮಾಯೆ ಬ್ರಹ್ಮದಾಯ್ಕೆ ದುರಿತ ನಮೋನಮಃ ||೯|| ಪ್ರಣತಾರ್ತಿ ಪ್ರಭಂಜನ ಜಗನ್ಮಾತೇ ನಮೋಸ್ತುತೇ || ಸರ್ವಾಪತ್ತಿ ಪಕಾಯ್ಕೆ ಮಂಗಲಾಯ್ಕೆ ನಮೋ ನಮ: ||೧೦|| ಶರಣಾಗತ ದೀನಾರ್ತ ಪರಿತ್ರಾಣಪರಾಯಣೇ ಸರ್ವಸ್ವಾರ್ತಿಹರೇದೇವಿ ನಾರಾಯಣಿ ನಮೋಸ್ತುತೇ||೧೧||ನಿರ್ಲಪಾಯ್ಕೆ ದುರ್ಗಹಂತ್ರ ದಕ್ತಾಯ್ಕೆ ತೇ ನಮೋನಮಃ||ಪರಾತ್ಪರತರ ತುಭಂ ನಮಮೋಕ್ಷದೇ ಸದಾ ||೧೨|| ಗಂಗೇಮಮಾಗ್ರತೋಭೂಯಾ ಗಂಗೇ ಮೇದೇವಿಪೃಷ್ಠತಃ ಗಂಗೇ ಮೇ ಪಾರ್ಶ್ವಯೋರೇಹಿ ತೈಯಿಗಂಗಸ್ತು ಮೇ ಸ್ಥಿತಿಃ||೧೩|| ಆದೌ ತ್ವಮಂತ ಮಧ್ವ ಚ ಸರ್ವಂತ್ರಂ ಗಾಂಗಶಿವೇತ್ವಮೇವ ಮೂಲಪ್ರಕೃತಿ: ತ್ವಂಪಿ ನಾರಾಯಣ: ಪರಃ||೧೪|| ಗಂಗೇಶ್ವ ಪರಮಾತ್ಮಾ ಚ ಶಿವಸ್ತುಛಂ ನಮ: ಶಿವೇ ||೧೫|| ಯ ಇದು ಪಠತೇ ಸ್ತೋತ್ರಂ ಭಾನಿತ್ಯಂ ನರೋಪಿ ಯಪರಿಚ್ಛೇದ - ೨ M ಶೃಣುಯಾಚ್ಛದ್ಧಯಾಯುಕ್ತ: ಕಾಯವಾಕ್ ಚಿತ್ರ ಸಂಭವ:||೧೬||ದಶಧಾಸಂಸ್ಥಿರ್ದೋಷ್ಠ: ಸರ್ವರವ ಪ್ರಮುಚ್ಯತೇ। ಸರ್ವಾನ್ ಕಾಮಾನವಾಪೋತಿ ಪ್ರೇತ್ಯ ಬ್ರಹ್ಮಣಿಲೀಯತೇ ||೧೭||ಮಾಸಿ ಸಿತೇಪಕ್ಷೇ ದಶಮೀ ಹಸ್ತಸಂಯುತಾತಸ್ಯಾಂ ದಶಮ್ಯಾಮೇತಚ್ಚ ಸ್ತೋತ್ರಂ ಗಂಗಾಜಲೇತಃ ||೧೮|| ಯಃ ಪಠೇದ್ದ ಶಕೃಸ್ತು ದರಿದ್ರೋವಾಪಿ ಚಾಕ್ರಮಃ ಸೋಪಿ ತಲಮಾಪೋತಿ ಗಂಗಾಂಸಂಪೂಜ್ಯ ಯತ್ನತಃ ||೧rl ಅದಾನಾಮುಪಾದಾನಂ ಹಿಂಸಾವಾ ವಿಧಾನತಃ ಪರದಾರೋಪಸೇವಾಚಕಾಯಿಕಂ ತ್ರಿವಿಧಂಸ್ಕೃತಂ ||೨೦|| (ಕಾಯಿಕವಾದ ಮೂರು ಪಾಪಗಳೆಂದರೆ ತಾನು ಕೊಡದೆ ತಕ್ಕೊಳ್ಳುವದು, ವಿಧಿರಹಿತವಾದ ಹಿಂಸೆಮಾಡುವದು, ಪರಸ್ತ್ರೀ ಸೇವನಮಾಡುವದು.) ಪಾರುಷ್ಯಮನೃತುವ ಪೈಶೂನ್ಯಂ ಚಾಪಿ ಸರ್ವಶ ಅಸಂಬದ್ಧ ಪ್ರಲಾಪಶ್ಚ ವಾಹ್ಮಯಂಗ್ಯಾಚತುರ್ವಿಧಂ||೨೧|| (ವಾಚಿಕವಾದ ನಾಲ್ಕು ಪಾಪಗಳೆಂದರೆ- ಕ್ರೂರವಾಗಿ ನುಡಿಯುವದು, ಸುಳ್ಳು ಹೇಳುವದು, ಚಾಡಿಹೇಳುವದು, ಅಸಂಬದ್ಧವಾಗಿ ಮಾತಾಡುವದು.) “ಪರದ್ರವೃಷಭಿಧ್ಯಾನಂ ಮನಸಾನಿಷ್ಟ ಚಿಂತನಂ ವಿತಥಾಭಿನಿವೇಶಶ್ಚ ಮಾನಸಂ ವಿಧಂಸ್ಕೃತಂ||೨೨||” (ಮಾನಸಿಕ ಮೂರು ಪಾಪಗಳೆಂದರೆ-ಪರದ್ರವ್ಯಾಪಹಾರದಲ್ಲಿ ಮನಸ್ಸು ಹಾಕುವದು, ಮನಸ್ಸಿನಲ್ಲಿ ಅನ್ಯರಿಗೆ ಕೇಡುಬಯಸುವದು, ವ್ಯರ್ಥವಾಗಿ ಮನಸ್ಸಿನ ಆವೇಶಹೊಂದುವದು. ಹೀಗೆ ದಶವಿಧ ಪಾಪಗಳು. “ಏತಾನಿದಶಪಾಪಾ ನಿಹರತ್ವಂ ಮಮಜಾಹ್ನವಿಂದಶಪಾಪಹರಾಯಸ್ಮಾತ್ ತಸ್ಮಾದಶಹರಾತಾ||೨೩|| ತ್ರಯಸ್ಮಿಂಶತಂ ಪೂರ್ವಾನ್ ಪಿತ್ತೂನಥ ಪಿತಾಮಹಾನ್ ಉದ್ಧರತ್ಯೇವ ಸಂಸಾರಾತ್ ಮಂತ್ರಗಾನೇನ ಪೂಜಿತಾ||೨೪|| ನಮೋ ಭಗವ ದಶನಾಪಹರಾಯ್ಕೆ ಗಂಗಾ ನಾರಾಯಣೆ ರೇವ ಶಿವಾಯ್ ರಾಯ್ಕೆ ಅಮೃತಾಯ ವಿಶ್ವರೂಪಿ ನಂದಿತೇ ನಮೋನಮಃ| ಸಿತಮಕರನಿಷಂಗಾಂ ಶುಭ್ರವರ್ಣಾಂ ತ್ರಿನೇತ್ರಾಂ ಕರತ ಕಲಶೋತ್ಪಲಾಮಭೀಷ್ಟಾಂ ವಿಧಿಹರಿಹರರೂಪಾಂ ಸೇಂದುಕೋಟರಜುಷ್ಕಾಂ ಕಲಿತತದುಕೂಲಾಂ ಜಾಹ್ನವೀಂತಾಂ ನಮಾಮೀ||೨೫||ಆದಾವಾದಿ ಪಿತಾಮಹಸ್ಯ ನಿಗಮವ್ಯಾಪಾರ ಪಾತ್ರಜಲಂ ಪಶ್ಚಾತ್ ಪನ್ನಗಶಾಯಿನೋ ಭಗವತ: ಪಾದೋದಕಂ ಪಾವನಂ ಭೂಯ: ಶಂಭು ಜಟಾವಿಭೂಷಣಮಣಿ: ಜಹೂರ್ಮಹರ್ಷರಿಯಂ ದೇವೀ ಕಲ್ಮಷ ನಾಶಿನೀ ಭಗವತೀ ಭಾಗೀರಥೀ ದೃಶ್ಯತೇ ||೨೬||ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶರಪಿ ಮುಚ್ಯತೇ ಸರ್ವಪಾಪೇಭೋ ವಿಷ್ಣುಲೋಕಂ ಸಗಚ್ಛ ||೨೭|| ಇತ್ಯಾದಿ ಸ್ತುತಿಸಿ ಹೋಮಾಂತ್ಯದಲ್ಲಿ ಪ್ರತಿಮೆಗೆ ಉತ್ತರಪೂಜೆಯನ್ನು ಮಾಡಿ, ವಿಸರ್ಜಿಸಿ ಮೂಲಮಂತ್ರದಿಂದ ಆಚಾರ್ಯನಿಗೆ ದಾನಮಾಡತಕ್ಕದ್ದು. ಇಲ್ಲಿಗೆ ದಶಹರಾ ವಿಧಿಯು ಮುಗಿಯಿತು. ಜೇಷ್ಠ ಶುಕ್ಲಕಾದಶಿಗಳಿಗೆ “ನಿರ್ಜಲಾ” ಎಂಬ ಸಂಜ್ಞೆಯಿದೆ. ಇದರಲ್ಲಿ ನಿತ್ಯಾಚಮನಾದಿಗಳ ಹೊರತು ಜಲವನ್ನು ಸಹ ಪಾನಮಾಡದೆ ಉಪವಾಸಮಾಡಿದರೆ ಹನ್ನೆರಡು ಏಕಾದಶಿಗಳ ಉಪವಾಸದ ಫಲವು ಸಿಗುವದು. ದ್ವಾದಶಿಯಲ್ಲಿ “ನಿರ್ಜಲೋಪೋಷಿತೈಕಾದಶಿ ವ್ರತಾಂಗನ ಸಹಿರಣ್ಯ ಸಶರ್ಕರ ಉದಕುಂಭದಾನಂ ಕರಿಷ್ಟೇ” ಹೀಗೆ ಸಂಕಲ್ಪಮಾಡಿ “ದೇವ ದೇವಹೃಷಿಕೇಶ ಸಂಸಾರಾರ್ಣವತಾರಕ ಉದಕುಂಭಪ್ರದಾನೇನ ಯಾಸ್ವಾಮಿ ಪರಮಾಂಗಂ” ಎಂಬ ಮಂತ್ರದಿಂದ ಸಕ್ಕರೆ, ಹಿರಣ್ಯಗಳಿಂದ ಕೂಡಿದ ಉದಕುಂಭವನ್ನು ದಾನಮಾಡತಕ್ಕದ್ದು ಜೇಷ್ಠ ಮಾಸದ ಶುಕ್ಲ ದ್ವಾದಶಿಯಲ್ಲಿ ಇಡಿ ದಿನ ತ್ರಿವಿಕ್ರಮ ಪೂಜೆಯನ್ನು ಮಾಡಿದರೆ “ಗವಾಮಯನ"ವೆಂಬ ಯಜ್ಞಮಾಡಿದ ಫಲವು ಧರ್ಮಸಿಂಧು ದೊರೆಯುವದು. ಜೇಷ್ಠ ಹುಣ್ಣಿವೆಯಲ್ಲಿ ತಿಲದಾನ ಮಾಡುವದರಿಂದ ಅಶ್ವಮೇಧದ ಫಲವೂ ಜೇಷ್ಠಾ ನಕ್ಷತ್ರಯುಕ್ತವಾದ ಜೇಷ್ಠ ಹುಣ್ಣಿವೆಯಲ್ಲಿ ಛತ್ರ ಪಾದುಕಾ ದಾನದಿಂದ ರಾಜತ್ವ ಪ್ರಾಪ್ತಿಯೂ ಆಗುವದು. ಶ್ರೇಷ್ಠ ಪೂರ್ಣಿಮೆಯಲ್ಲಿ “ಬಿಲ್ವ ತ್ರಿರಾತ್ರ"ವ್ರತದಲ್ಲಿ ಪರವಿದ್ದವಾದ ತಿಥಿ ಯು ಗ್ರಾಹ್ಯವು. ವಟಸಾವಿತ್ರಿ ವ್ರತದಲ್ಲಿ ತ್ರಯೋದಶಾದಿ ಮೂರುದಿನ ಉಪವಾಸಮಾಡತಕ್ಕದ್ದು. ಅಶಕ್ತತೆಯಲ್ಲಿ ತ್ರಯೋದಶಿಯಲ್ಲಿ “ನಕ್ತ”, ಚತುರ್ದಶಿಯಲ್ಲಿ “ಅಯಾಚಿತ”, ಹುಣ್ಣಿವೆಯಲ್ಲಿ “ಉಪವಾಸ” ಹೀಗೆ ಮಾಡತಕ್ಕದ್ದು. ತ್ರಯೋದಶ್ಯಾದಿ ಹುಣ್ಣಿವೆಗ ತ್ರಿರಾತ್ರಿಯಾಗುವಂತೆ ತಿಥ್ಯಾದಿಗಳು ಗ್ರಾಹ್ಯಗಳು, ಹುಣ್ಣಿವೆಯ ನಿರ್ಣಯಕ್ಕೆ ಪ್ರಧಾನವು ಹುಣ್ಣಿವೆಯ ದಿನ ಸೂರ್ಯಾಸ್ತಕ್ಕಿಂತ ಮುಂಚೆ ಮೂರು ಮುಹೂರ್ತಕ್ಕಿಂತ ಹೆಚ್ಚು ವ್ಯಾಪಿನಿಯಾದ ಚತುರ್ದಶಿವಿದ್ದವಾದರೂ ಅದೇ ಗ್ರಾಹ್ಯವು, ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದಲ್ಲಿ ಪರವೇ ಗ್ರಾಹ್ಯವು. “ಹದಿನೆಂಟು ಘಟಿಗಳಿಂದ ಚತುರ್ದಶಿಯು ಪೂರ್ಣಿಮೆಯನ್ನು ದೂಷಿಸುತ್ತದೆ ಎಂಬ ವಚನವು “ಸಾವಿತ್ರೀವ್ರತಾದಿಗಳ ಹೊರತಾದವುಗಳಲ್ಲಿ"ಎಂದು ತಿಳಿಯತಕ್ಕದ್ದು. ಸಾವಿತ್ರೀವ್ರತೋಪವಾಸದಲ್ಲಿ ಹದಿನೆಂಟು ಘಟ್ ವಿದ್ಧವಾದರೂ ಗ್ರಾಹ್ಯವು, ಇನ್ನು ಕೆಲವೆಡೆಯಲ್ಲಿ ಸ್ತ್ರೀಯರು ಉಪವಾಸರಹಿತವಾಗಿ ಕೇವಲ ಪೂಜಾತ್ಮಕವಾದ ಸಾವಿತ್ರೀವ್ರತವನ್ನಾಚರಿಸುವರು. ಅಂಥಲ್ಲಿ ‘ಭೂತೋಷ್ಟಾದಶ ಈ ವೇಧವು ಸಂಬಂಧಿಸುವದು. ಈ ವೇಧವು ವ್ರತ, ದಾನಾದಿ ವಿಷಯಕವಾದದ್ದು ಹೊರತು ಉಪವಾಸದ ವಿಷಯಕ್ಕಲ್ಲ. ಹೀಗೆ ನಿರ್ಣಯಸಿಂಧುವಿನಲ್ಲಿ ಹೇಳಿದ ಮಾಧವಾನುಸಾರ ಹದಿನೆಂಟು ಘಟೀ ಚತುರ್ದಶಿಯದ್ದಲ್ಲಿ ಪೂಜಾವ್ರತದಲ್ಲಿ ಪರವೇ ಗ್ರಾಹ್ಯವು ಉಪವಾಸವ್ರತದಲ್ಲಿಯಾದರೋ ಪೂರ್ವವೇ “ಗಾಹ್ಯ” ಎಂದು ನನಗೆ ತೋರುತ್ತದೆ. ಈ ವ್ರತದ ಪಾರಣೆಯನ್ನು ಹುಣ್ಣಿವೆಯ ಅಂತ್ಯದಲ್ಲಿ ಮಾಡತಕ್ಕದ್ದು. ಸ್ತ್ರೀಯರು ರಜಸ್ವಲೆಯಾದರೆ ಪೂಜಾದಿಗಳನ್ನು ಬ್ರಾಹ್ಮಣದ್ವಾರಾ ಮಾಡಿಸುವದು. ಉಪವಾಸಾದಿ ದೈಹಿಕ ನಿಯಮಗಳನ್ನು ತಾವು ಮಾಡುವದು. ಸ್ತ್ರೀ ವ್ರತದಲ್ಲಿಯ ವಿಶೇಷಗಳನ್ನೆಲ್ಲ ಪ್ರಥಮ ಪರಿಚ್ಛೇದದಲ್ಲಿ ಹೇಳಲಾಗಿದೆ. ಪೂಜಾ ಉದ್ಯಾಪನ ಮೊದಲಾದವುಗಳನ್ನು ವ್ರತಗ್ರಂಥಗಳಿಂದ ತಿಳಿಯತಕ್ಕದ್ದು, ಈ ಜೈವ ಪೂರ್ಣಿಮೆಯಲ್ಲಿ ಬೃಹಸ್ಪತಿ ಚಂದ್ರರು ಜೇಷ್ಠಾ ನಕ್ಷತ್ರದಲ್ಲಿದ್ದರೆ -ರವಿಯು ರೋಹಿಣಿ ನಕ್ಷತ್ರದಲ್ಲಿದ್ದರೆ ಇದಕ್ಕೆ “ಮಹಾ ಯೋಗ” ಎಂಬ ಸಂಜ್ಞೆಯುಂಟಾಗುವದು. ಆಗ ಸ್ನಾನ ದಾನಾದಿಗಳಿಂದ ವಿಶೇಷ ಫಲವಿದೆ. ಈ ಹುಣ್ಣಿವೆಯು “ಮಾದಿ” ಇರುವದರಿಂದ ಪಿಂಡರಹಿತವಾದ ಶ್ರಾದ್ಧವನ್ನು ಇದರಲ್ಲಿ ಹೇಳಿದೆ. ಈ ನಿರ್ಣಯವು ಚೈತ್ರ ಮಾಸನಿರ್ಣಯದಲ್ಲಿ ಹೇಳಲ್ಪಟ್ಟಿದೆ. ಈ ಮಾಸದಲ್ಲಿ ಬ್ರಾಹ್ಮಣರಿಗೆ ಚಂದನ, ಬೀಸಣಿಗ, ಉದಕುಂಬ ಮೊದಲಾದವುಗಳನ್ನು “ತ್ರಿವಿಕ್ರಮ” ಪ್ರೀತ್ಯರ್ಥ ಕೊಡತಕ್ಕದ್ದು. ಇಲ್ಲಿಗೆ ಜೇಷ್ಠ ಮಾಸಕೃತ್ತ ಮುಗಿಯಿತು. ಆಷಾಢಮಾಸ ಕೃತ್ಯವನ್ನು ಹೇಳಲಾಗುವದು ಆಷಾಢದಲ್ಲಿ ದಕ್ಷಿಣಾಯನ ಸಂಜ್ಜಿತವಾದ ಕರ್ಕಸಂಕ್ರಾಂತಿಯು ಸಂಭವಿಸುವದು ಕರ್ಕಸಂಕ್ರಾಂತಿಯಲ್ಲಿ ಹಿಂದೆ ಮೂವತ್ತು ಘಟಿಗಳು ಪುಣ್ಯಕಾಲವು ಅದರಲ್ಲಾದರೂ ಸಂಕ್ರಾಂತಿಕಾಲ? ಹತ್ತಿರದ ಘಟಿಗಳು ಹೆಚ್ಚಿನ ಪುಣ್ಯಕಾಲವಾಗುವದು. ರಾತ್ರಿಯಲ್ಲಿ ಅರ್ಧರಾತ್ರಿಯ ಒಳಗೆ ಅಥವ ಪರಿಚ್ಛೇದ - ೨ • ಮುಂದೆ ಸಂಕ್ರಮಣವಾದರೂ ಪೂರ್ವದಿನದಲ್ಲಿಯೇ ಪುಣ್ಯಕಾಲವು ಪೂರ್ವದಿನದಲ್ಲಾದರೂ ಮಧ್ಯಾಹ್ನದ ನಂತರದ ಕಾಲವು ಹೆಚ್ಚಿನ ಪುಣ್ಯಕರವು, ಸೂರ್ಯೋದಯಾನಂತರ ಎರಡು ಘಟಿಗಳೊಳಗೆ ಸಂಕ್ರಾಂತಿಯಾದರೆ ಮುಂದಿನದೇ ಪುಣ್ಯಕಾಲವು ಸೂರ್ಯೋದಯದ ಪೂರ್ವದಲ್ಲಿ ಮೂರುಘಟೇ ಇರುವಾಗ ಅದು “ಸಂಧ್ಯ“ಯನ್ನಲ್ಪಡುವದು. ಆ ಸಮಯದಲ್ಲಿ ಸಂಕ್ರಮಣವಾದರೂ (ಕರ್ಕ) ಪರದಿನವೇ ಪುಣ್ಯಕಾಲವೆಂದು ಜ್ಯೋತಿಷಗ್ರಂಥದಲ್ಲಿ ಹೇಳಿದೆ. ಇದರಲ್ಲಿ ಮಾಡತಕ್ಕ ದಾನ - ಉಪವಾಸಾದಿ ವಿಷಯಗಳನ್ನೆಲ್ಲ ಮೊದಲನೇ ಪರಿಚ್ಛೇದದಲ್ಲಿಯೇ ಹೇಳಿದೆ. ಕರ್ಕ, ಕನ್ಯಾ, ಧನು, ಕುಂಭಗಳಲ್ಲಿ ರವಿಯಿರುವಾಗ (ಅಂದರೆ ಆಯಾಯ ಮಾಸಗಳಲ್ಲಿ) ದೇಶಕರ್ತನ (ಕೂದಲು ಕತ್ತರಿಸುವಿಕ) ಮೊದಲಾದವುಗಳು ನಿಷಿದ್ಧಗಳು, ಇಡೀ ಆಷಾಢಮಾಸದಲ್ಲಿ “ಏಕಭಕ್ತ” ವ್ರತವನ್ನಾಚರಿಸಿದರೆ ಬಹು ಧನ ಧಾನ್ಯ ಪುತ್ರಾದಿಸಂಪತ್ತು ಪ್ರಾಪ್ತವಾಗುವದು. ಈ ತಿಂಗಳಲ್ಲಿ ಪಾದುಕೆ, ಛತ್ರ, ಉಪ್ಪು, ನೆಲ್ಲಿ ಕಾಯಿ ಇವುಗಳನ್ನು “ವಾಮನ” ಪ್ರೀತ್ಯರ್ಥವಾಗಿ ದಾನಮಾಡತಕ್ಕದ್ದು, ಆಷಾಢ ಶುಕ್ಲದಲ್ಲಿ ಪುಷ್ಯ ನಕ್ಷತ್ರಯುಕ್ತವಾದ ಅಥವಾ ಕೇವಲವಾದ ಬಿದಿಗೆಯಲ್ಲಿ ಶ್ರೀರಾಮನ ರಥೋತ್ಸವವನ್ನಾಚರಿಸತಕ್ಕದ್ದು. ಆಷಾಢ ಶುಕ್ಲ ದಶಮೀ ಹುಣ್ಣಿವಗಳು “ಮಾದಿ"ಗಳು. ಇವುಗಳ ನಿರ್ಣಯವನ್ನು ಮೊದಲೇ ಹೇಳಲಾಗಿದೆ. ಈ ಶುಕಾದಶಿಯಲ್ಲಿ ವಿಷ್ಣು ಶಯನೋತ್ಸವವನ್ನು ಹೇಳಿದೆ. ಶಂಖಚಕ್ರಾದಿ ಆಯುಧಸಹಿತನಾದ, ಪಾದವನ್ನು ಸೇವಿಸುತ್ತಿರುವ ಲಕ್ಷ್ಮೀಸಹಿತನಾದ ವಿಷ್ಣು ಪ್ರತಿಮೆಯನ್ನು ಅಲಂಕೃತವಾದ ಮಂಟಪದಲ್ಲಿ ಮಲಗಿಸಿ ನಾನಾವಿಧ ಉಪಚಾರಗಳಿಂದ ಪೂಜಿಸತಕ್ಕದ್ದು. “ಸುಪ್ರೀತ್ವಯಿ ಜಗನ್ನಾಥ ಜಗತ್ತು ಭವೇದಿದಂ ವಿಬುದ್ಧಶ್ಚಯಿಬುಧೇಶ ತತ್ಸರ್ವಂ ಸಚರಾಚರಂ’ ಈ ಮಂತ್ರದಿಂದ ಪ್ರಾರ್ಥಿಸುವದು. ಹಾಗೂ ಉಪವಾಸ, ಜಾಗರಣೆಗಳನ್ನು ಮಾಡುವದು. ದ್ವಾದಶೀ ದಿನ ಪುನಃ ಪೂಜೆಮಾಡಿ ತ್ರಯೋದಶಿ ದಿನದಲ್ಲಿ ಗಾಯನ ನರ್ತನ ವಾದ್ಯಾದಿ ಸೇವೆಮಾಡತಕ್ಕದ್ದು. ಹೀಗೆ ಇದು ಮೂರು ದಿನದ ವ್ರತವು, ಸ್ಮಾರ್ತರು ಅಥವಾ ವೈಷ್ಣವರು ತಮ್ಮ ಸಂಪ್ರದಾಯದಂತೆ ಏಕಾದಶಿ ವ್ರತದಿನದಲ್ಲಿ ಶಯನೋತ್ಸವವನ್ನು ಪ್ರಾರಂಭಿಸತಕ್ಕದ್ದು, ಅದರ ಕ್ರಮ ಹೀಗಿದ. ರಾತ್ರಿಯಲ್ಲಿ ಶಯನೋತ್ಸವ, ಹಗಲಿನಲ್ಲಿ ಪ್ರಬೋಧೋತ್ಸವಗಳನ್ನು ಮಾಡತಕ್ಕದ್ದು. ದ್ವಾದಶಿಯ ಪಾರಣೆಯದಿನ ಶಯನೋತ್ಸವ ಹಾಗೂ ಪ್ರಬೋಧೋತ್ಸವಗಳನ್ನು ಮಾಡಬೇಕೆಂದು ಕೆಲವರನ್ನುವರು. ಈ ವಿಷಯದಲ್ಲಿ ದೇಶಾಚಾರದಂತೆ ಮಾಡಬಹುದು. ಈ ಉತ್ಸವವನ್ನು ಮಲಮಾಸದಲ್ಲಿ ಮಾಡತಕ್ಕದ್ದಲ್ಲ, ಅನುರಾಧಾನಕ್ಷತ್ರಯೋಗವಾಗದ ದ್ವಾದಶಿಯಲ್ಲಿ ಪಾರಣ ಮಾಡತಕ್ಕದ್ದು. ಅದರಲ್ಲಾದರೂ ಅನುರಾಧಾ ನಕ್ಷತ್ರದ ಪ್ರಥಮಪಾದವು ವಿಶೇಷವಾಗಿ ನಿಷಿದ್ಧವಾದದ್ದು. ದ್ವಾದಶಿಯು ಕಡಿಮೆಯಿದ್ದು ಈ ವರ್ಜ ನಕ್ಷತ್ರ ಭಾಗವು ದ್ವಾದಶಿಯನ್ನು ಮಿಕ್ಕಿದ್ದರೆ ಆಗ ನಿಷೇಧವನ್ನು ಮನ್ನಿಸುವ ಕಾರಣವಿಲ್ಲ. ದ್ವಾದಶಿಯಲ್ಲಿ ಪಾರಣೆ ಮಾಡತಕ್ಕದ್ದು. ಹೀಗೆ ಕೌಸ್ತುಭದಲ್ಲಿ ಹೇಳಿದೆ. ಸಂಗವಕಾಲದ ಭಾಗವನ್ನು ಬಿಟ್ಟು ಪ್ರಾತಃಕಾಲ ಅಥವಾ ಮಧ್ಯಾಹ್ನದಲ್ಲಿ ಭೋಜನ ಮಾಡತಕ್ಕದ್ದು ಎಂದು “ಪುರುಷಾರ್ಥಚಿಂತಾಮಣಿ"ಯಲ್ಲಿ ಹೇಳಿದೆ. ದ್ವಾದಶಿಯಲ್ಲಿ ಪಾರಣೆಯನ್ನು ಮಾಡಿದ ನಂತರ ಸಾಯಂಕಾಲದಲ್ಲಿ ಪೂಜೆಯನ್ನು ಮಾಡಿ “ಚಾತುರ್ಮಾಸ್ಯವ್ರತದ ಸಂಕಲ್ಪವನ್ನು ಮಾಡತಕ್ಕದ್ದು. ಹೀಗೆ ಕೌಸ್ತುಭದಲ್ಲಿ ಹೇಳಿದೆ. ನಿರ್ಣಯಸಿಂಧುವಿನಲ್ಲಿ ಏಕಾದಶೀ ದಿನವೇ ಚಾತುರ್ಮಾಸ್ಯ ವ್ರತದ ಧರ್ಮಸಿಂಧು ಸಂಕಲ್ಪ ಮಾಡತಕ್ಕದೆಂದು ಹೇಳಿದೆ. ಗುರು ಶುಕ್ರಾಸ್ತ್ರ ಆಶೌಚ ಮೊದಲಾದ ನಿಷಿದ್ಧ ಕಾಲದಲ್ಲಿ ಚಾತುರ್ಮಾಸ್ಯ ವ್ರತದ ಪ್ರಥಮಾರಂಭವನ್ನು ಮಾಡಬಾರದು. ದ್ವಿತೀಯಾದಿ ವರ್ಷಗಳಲ್ಲಿ ಅಸ್ತ ಅಶೌಚಾದಿನಿಷೇಧವಿಲ್ಲ. ಈ ಚಾತುರ್ಮಾಸ್ಯ ವ್ರತಕ್ಕೆ ಶೈವ, ಸೌರ ಇತ್ಯಾದಿ ಮತದ ಕಟ್ಟಳೆಯಿಲ್ಲ, ಜಾಜಿಯ ಪುಷ್ಪ ಮೊದಲಾದವುಗಳಿಂದ ಭಗವಂತನನ್ನು ಪೂಜಿಸಿ “ಸುಪ್ತಯಿ ಜಗನ್ನಾಥ ಜಗತ್ತುಪ್ರಂಭವೇದಿದಂತೆ ವಿಬುದ್ದೇಯಿ ಬುತ ಪ್ರಸನ್ನೋ ಭವಾಚ್ಯುತ ಹೀಗೆ ಪ್ರಾರ್ಥಿಸಿದ ನಂತರ ಎದ್ದು ನಿಂತು ಅಂಜಲಿಬದ್ಧನಾಗಿ ಚತುರೋವಾರ್ಷಿಕಾನ್ ಮಾಸಾನ್ ದೇವಸ್ಕೋತ್ಥಾಪನಾವಧಿ ಶ್ರಾವಣೇ ವರ್ಜಯೇ ಶಾಕಂ ದಧಿಭಾದ್ರಪದೇ ತಥಾ|ದುಗ್ಧಮಾಶ್ಚಯುಜೇಮಾಸಿ ಕಾರ್ತಿಕ ದ್ವಿದಲು ತಥಾ| ಇಮಂ ಕರಿಷ್ಟೇ ನಿಯಮಂ ನಿರ್ವಿಘ್ನಂ ಕುರುಮೇಚ್ಯುತ ಇದಂ ವ್ರತಂ ಮಯಾದೇವ ಗೃಹೀತಂ ಪುರತಸ್ತವನಿರ್ವಿಘ್ನಂಚಾಯ್ತು ಮೇ ದೇವ ಪ್ರಸಾದಾರಮಾಪತೇ ಗೃಹೀತೇsಸ್ಮಿನ್ ವ್ರದೇವ ಪಂಚತ್ವ ಯದಿ ಮೇ ಭವೇತ್ತದಾ ಭವತು ಸಂಪೂರ್ಣಂ ಪ್ರಸಾದಾ ರಮಾಪತೇ||” ಈ “ಶ್ರಾವಣೇಮಾಸಿ’ ಸಂಕಲ್ಪರೂಪವಾದ ಪ್ರಾರ್ಥನೆ ಮಾಡಿ ದೇವರಿಗೆ ಶಂಖದಿಂದ ಆರ್ಥ್ಯವನ್ನು ಕೊಡತಕ್ಕದ್ದು. (ಮೇಲೆ ಹೇಳಿದ ಅಂದರೆ “ಶ್ರಾವಣ ಮಾಸದಲ್ಲಿ” ಎಂದು ಇಡೀಮಾಸವನ್ನು ಹೇಳಿದ್ದರೂ ಆ ಶ್ರಾವಣಶಬ್ದದಿಂದ ಆಷಾಢಕಾದಶಿಯಿಂದ ಶ್ರಾವಣಶುಕ್ಕೆಕಾದಶೀ ವರೆಗಿನ ೧ ಮಾಸ ಎಂದೇ ತಿಳಿಯತಕ್ಕದ್ದು) ಶ್ರಾವಣದಲ್ಲಿ ಶಾಕ (ಕಾಯಿಪಲ್ಯ), ಭಾದ್ರಪದದಲ್ಲಿ “ಮೊಸರು”, ಆಶ್ವಿನದಲ್ಲಿ “ಹಾಲು”, ಕಾರ್ತಿಕದಲ್ಲಿ ದ್ವಿದಳ (ಬೇಳೆ ಮೊದಲಾದವು ಇವು ವರ್ಜಗಳು, ಈ ವ್ರತಗಳು ನಿತ್ಯವಾಗಿವೆ. ಇನ್ನೂ “ಹವಿಷ್ಯಭಕ್ಷಣ ಮೊದಲಾದ ಬೇರೆ ವ್ರತಗಳೂ ಇವೆ. ಹವಿಷ್ಯಭಕ್ಷಣ ಮೊದಲಾದ ಬೇರೆ ವ್ರತಗಳನ್ನು ಮಾಡುವ ಇಚ್ಛೆಯಿದ್ದಲ್ಲಿ ಸಂಕಲ್ಪ ಶ್ಲೋಕದಲ್ಲಿ ಅದರಂತ ತಿದ್ದು ಪಾಟು ಮಾಡುವದು. “ಶ್ರಾವಣೇ ವರ್ಜಯೇ ಶಾಕಂ” ಈ ಸ್ಥಾನದಲ್ಲಿ “ಹವಿಷ್ಠಾನ್ನಂ ಭಕ್ಷಯಿಷ್ಟೇ ದೇವಾಹಂ ಪ್ರೀತಯೇತವ” ಹೀಗೆ ಹೇಳತಕ್ಕದ್ದು. ಶಾಕವ್ರತ ಹಾಗೂ ಬೇರೆ ವ್ರತಗಳನ್ನು ಕೂಡಿ ಮಾಡುವಲ್ಲಿ ಶಾಕವ್ರತ ಮಂತ್ರವನ್ನು ಹೇಳಿ ನಂತರ ಎರಡನೇ ವ್ರತದ ಮಂತ್ರವನ್ನು ಹೇಳತಕ್ಕದ್ದು. ಇದರಂತೆ ಗುಡ (ಬೆಲ್ಲ)ವರ್ಜನ, ಯೋಗಾಭ್ಯಾಸ, ದಿನಬಿಟ್ಟು ದಿನ ಉಪವಾಸ ಮೊದಲಾದ ವ್ರತಗಳ ವಿಷಯದಲ್ಲಿ ಅವುಗಳಿಗನುಸಾರವಾಗಿ ಊಹೆಯಿಂದ ಉಚ್ಚರಿಸುವದು. “ವರ್ಜಯಿಗುಡಂದೇವ ಮಧುರಸ್ವರ ಸಿದ್ಧಯೇ/ವರ್ಜಯಿತ್ಕಲಮಹಂ ಸುಂದರಾಂಗತ್ವಸಿದ್ಧಯೇಯೋಗಾಭ್ಯಾಸೀ ಭವಿಷ್ಯಾಮಿ ಪ್ರಾಪ್ತಂ ಬ್ರಹ್ಮಪದಂಪರಯ ಮೌನವ್ರತೀ ಭವಿಷ್ಯಾಮಿ ಪ್ರಾಜ್ಞಾಪಾಲನ ಸಿದ್ಧಯೇ ಏಕಾಂತರೋಪವಾಸೀ ಚ ಪ್ರಾಪುಂ ಬ್ರಹ್ಮಪುರಂ ಪದಂ!” ಈ ರೀತಿಯಿಂದ ಊಹಿಸತಕ್ಕದ್ದು. ನಿಷಿದ್ದ ಪದಾರ್ಥಗಳನ್ನು ವರ್ಜಮಾಡುವದಿದ್ದಲ್ಲಿ “ವೃಂತಾಕಾದಿ ನಿಷಿದ್ದಾನಿ ಹರೇ ಸರ್ವಾಣಿ ವರ್ಜಯ” ಹೀಗೆ ಸಂಕಲ್ಪ ಮಾಡತಕ್ಕದ್ದು. ಚಾತುರ್ಮಾಸದಲ್ಲಿ ನಿಷಿದ್ಧ ವಸ್ತುಗಳು ಚಿಪ್ಪಿಯಸುಣ್ಣ, ಚರ್ಮಪಾತ್ರದಲ್ಲಿಯ ನೀರು, ಕಂಚಿನಿಂಬೆ, ಮಾದಲಕಾಯಿ, ವೈಶ್ವದೇವ ರಹಿತವಾದ ಹಾಗೂ ವಿಷ್ಣುವಿಗೆ ನೈವೇದ್ಯವಾಗದ ಅನ್ನ, ಹೊತ್ತಿದ ಅನ್ನ, ಕಾಡು ಕಡಲೆ, ಮಾಂಸ ಇವು ಎಂಟು ಆಮಿಷ ಗಣಗಳು. ಇವು ವರ್ಜಗಳು, ಅವರೆ, ಉದ್ದು, ಧಾನ್ಯ, ಉಪ್ಪೇರಿ, ಪರಿಚ್ಛೇದ - ೨ La ಬದನೇಕಾಯಿ, ಕಮ್ಮುಂಡ (ಕಲಿಂಗಡ) ಬಹುಬೀಜದ ಫಲ, ನಿರ್ಬೀಜ(ಬಾಳೆಹಣ್ಣು ಇತ್ಯಾದಿ) ಕೆಂಪು ಗಡ್ಡೆ ಗೆಣಸು, ಕುಂಬಳಕಾಯಿ, ಕಬ್ಬು, ಹೊಸಬುಗರ, ನೆಲ್ಲಿಕಾಯಿ, ಹುಣಸೇಫಲ ಇವುಗಳ ಸೇವನೆಯನ್ನೂ, ಮಂಚ, ಪಲ್ಲಂಗ ಮೊದಲಾದವುಗಳಲ್ಲಿ ಶಯನ, ಮತ್ತು ಋತುಕಾಲದ ಹೊರತಾಗಿ ಸ್ತ್ರೀಸಂಗ, ಪರಾನ್ನ ಭೋಜನ, ಜೇನುತುಪ್ಪ, ಪಡವಲಕಾಯಿ, ಉದ್ದು, ಹುರಳಿ, ಬಿಳೇಸಾಸಿವೆ ಇವುಗಳನ್ನೂ ವರ್ಜಿಸತಕ್ಕದ್ದು. ವೈಷ್ಣವರು ಸಾಮಾನ್ಯ ಎಲ್ಲ ಮಾಸಗಳಲ್ಲೂ ಬದನೆ, ಬೆಳವಲ್ಲ, ಅತ್ತಿ, ಕಲಿಂಗಡ, ಹೊತ್ತಿದ ಅನ್ನ ಇವುಗಳನ್ನು ಬಿಡತಕ್ಕದ್ದು. ಬೇರೆ ಗ್ರಂಥಗಳಲ್ಲಿ ಗೋವು, ಎಮ್ಮೆಗಳ ಹೊರತಾದ ಪ್ರಾಣಿಗಳ ಹಾಲು, ಹಳಸಿದಅನ್ನ, ಬ್ರಾಹ್ಮಣರಿಂದ ಕ್ರಯಕ್ಕೆ ತಕ್ಕೊಂಡ ರಸಪದಾರ್ಥ, ಭೂಮಿಯಲ್ಲುತ್ಪನ್ನವಾದ ಉಪ್ಪು ತಾಮ್ರದ ಪಾತ್ರೆಯಲ್ಲಿದ್ದ ಗೋವಿನಹಾಲು, ಹೊಂಡದನೀರು, ಕೇವಲ ತನ್ನ ಸಲುವಾಗಿ ಮಾಡಿದ ಅನ್ನ ಇವು “ಆಮಿಷಗಣ"ಗಳೆಂದು ಹೇಳಿದೆ. (ಅರ್ಥಾತ್ ವರ್ಜ) ಚಾತುರ್ಮಾಸ್ಯದಲ್ಲಿ ಹವಿಷ್ಯಾನ್ನವನ್ನುಂಡರೆ ದೋಷವಿಲ್ಲ. “ಹವಿಷ್ಯ “ಗಣದಲ್ಲಿ ಸೇರುವ ಪದಾರ್ಥಗಳೆಂದರೆ ಅಕ್ಕಿ, ಪಚ್ಛಿಸರು, ಜವೆಗೋಧಿ, ಎಳ್ಳು, ನವಣಿ, ನೆಲಗಡಲೆ, ವಾಣಿ, ಶಾಮಲಕ್ಕಿ, ಗೋಧಿ, ಬಿಳೇಗಡ್ಡೆ, ಪಂಜರಗಡ್ಡೆ, ಸೈಂಧವ ಲವಣ, ಅಣಲೆಕಾಯಿ, ಹಿಪ್ಪಲಿ, ಜೀರಿಗೆ, ಶುಂಠಿ, ಹುಣಸೆ, ಬಾಳೆ, ನಲ್ಲಿ, ನೆಲನಲ್ಲಿ, ಸಕ್ಕರೆ ಇವುಗಳೆಲ್ಲ “ಹವಿಷ್ಯ “ದಲ್ಲಿ ಬರುವವು. ಆದರೆ ಎಣ್ಣೆಯಲ್ಲಿ ಕರಿಯದೆ ಇದ್ದರೆ ಮಾತ್ರ ಹವಿಷ್ಯಗಳಾಗುವವು. ಆಕಳ ಮಜ್ಜಿಗೆ, ಎಮ್ಮೆಯ ತುಪ್ಪ ಇವುಗಳನ್ನೂ ಕೆಲ ಕಡೆಗಳಲ್ಲಿ “ಹಏಷ್ಯ"ಗಳೆಂದು ಹೇಳಿದೆ. ಕಾಮ್ಯವ್ರತಗಳು ಮತ್ತು ಫಲಗಳು ಗುಡವರ್ಜನಮಾಡಿದರೆ ಸ್ವರಮಾಧುರ್ಯವುಂಟಾಗುತ್ತದೆ. ಎಣ್ಣೆಯನ್ನು ವರ್ಜ್ಯಮಾಡಿದರೆ ದೇಹಸೌಂದರ್ಯ ಹೆಚ್ಚುತ್ತದೆ. ಯೋಗಾಭ್ಯಾಸದಿಂದ ಬ್ರಹ್ಮಪದ ವಿಪ್ರಾಪ್ತಿ, ತಾಂಬೂಲವರ್ಜನದಿಂದ ನಾನಾವಿಧಭೋಗಪ್ರಾಪ್ತಿ, ಹಾಗೂ ಸ್ವರವು ಇಂಪಾಗುವದು. ತುಪ್ಪವನ್ನು ಬಿಡುವದರಿಂದ ದೇಹವು ಮೃದುವಾಗುವದು. ಶಾಕವರ್ಜನದಿಂದ ಪಕ್ವಾನ್ನಭೋಜನವು ಲಭಿಸುವದು. ಕಾಲುಗಳಿಗೆ ತೈಲ ಅಭ್ಯಂಗಮಾಡದಿದ್ದರೆ ಶರೀರವು ಸುಗಂಧವಾಗುವದು. ಮೊಸರು, ಹಾಲು, ತುಪ್ಪಗಳನ್ನು ಬಿಡುವದರಿಂದ ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಸ್ಥಾಲ್ಕನ್ನ (ತಪ್ಪಲೆಯಲ್ಲಿ ಬೇಯಿಸಿದ ಅನ್ನ)ವನ್ನು ಬಿಡುವದರಿಂದ ವಂಶವೃದ್ಧಿಯಾಗುವದು. ನೆಲದ ಮೇಲೆ ದರ್ಭೆಯನ್ನು ಹಾಸಿ ಮಲಗಿದರೆ (ನಿದ್ರೆ ಮಾಡಿದರೆ) ಭಗವದ್ಭಕ್ತನಾಗುವನು. ನೆಲದಲ್ಲಿ ಊಟಮಾಡಿದರೆ ರಾಜ್ಯಾಧಿಕಾರ ಪ್ರಾಪ್ತಿಯಾಗುತ್ತದೆ. ಜೇನುತುಪ್ಪ, ಮಾಂಸ ಇವುಗಳನ್ನು ತ್ಯಜಿಸಿದರೆ “ಮುನಿ"ಯಾಗುತ್ತಾನೆ. ದಿನ ಬಿಟ್ಟು ದಿನ ಉಪವಾಸ ಮಾಡಿದರೆ (ಊಟಮಾಡುವ ದಿನ ಒಪ್ಪತ್ತೂಟ) ಬ್ರಹ್ಮಲೋಕಪ್ರಾಪ್ತಿಯಾಗುತ್ತದೆ. ಉಗುರು, ಕೇಶ ಇವುಗಳನ್ನು ಕತ್ತರಿಸದೆ ಇಟ್ಟುಕೊಂಡರೆ ಪ್ರತಿದಿನ ಗಂಗಾಸ್ನಾನ ಮಾಡಿದ ಫಲವು ಸಿಗುತ್ತದೆ. ಮೌನವ್ರತದಿಂದ ತಡೆಯಿಲ್ಲದ ಆಜ್ಞೆಯುಳ್ಳವನಾಗುತ್ತಾನೆ. ವಿಷ್ಣುವಿಗೆ ನಮಸ್ಕಾರ ಮಾಡುವದರಿಂದ ಗೋದಾನಮಾಡಿದ ಫಲವು ಸಿಗುತ್ತದೆ. ವಿಷ್ಣುವಿನ ಪಾದಸ್ಪರ್ಶದಿಂದ ಕೃತಕೃತ್ಯನಾಗುವನು. ದೇವರ ಸನ್ನಿಧಿಯಲ್ಲಿ ಸಾರಿಸುವಿಕೆಯಿಂದ ರಾಜ್ಯಾಧಿಕಾರವುಂಟಾಗುವದು. ವಿಷ್ಣುವಿಗೆ ನಮಸ್ಕಾರ ಮಾಡುವಿಕೆಯಿಂದ ವಿಷ್ಣುಲೋಕ ಪ್ರಾಪ್ತಿಯಾಗುವದು. “ಏಕಭಕ್ತ ಆಚರಿಸಿದರೆ ಅಗ್ನಿಹೋತ್ರದ ಫಲವು ಸಿಗುವದು. ೬೪ ಧರ್ಮಸಿಂಧು “ಅಯಾಚಿತವ್ರತ"ದಿಂದ ಬಾವಿ, ಕೆರೆ, ಧರ್ಮಶಾಲೆಗಳನ್ನು ಕಟ್ಟಿಸಿದ ಪುಣ್ಯ ಫಲವು ಸಿಗುವದು. ಹಗಲಿನ ಆರನೇ ಭಾಗದಲ್ಲಿ ಊಟಮಾಡುವದರಿಂದ ಅನೇಕ ಕಾಲ ಸ್ವರ್ಗಪ್ರಾಪ್ತಿಯಾಗುವದು. ಎಲೆಯಲ್ಲಿ ಉಣ್ಣುವದರಿಂದ ಕುರುಕ್ಷೇತ್ರದಲ್ಲಿ ವಾಸಮಾಡಿದ ಫಲವು ಸಿಗುವದು. ಶಿಲಾಪಾತ್ರದಲ್ಲಿ ಊಟಮಾಡಿದರೆ ಪ್ರಯಾಗದಲ್ಲಿ ಸ್ನಾನಮಾಡಿದ ಫಲ ಪ್ರಾಪ್ತಿಯಾಗುವದು. ಹೀಗೆ ನಾಲ್ಕು ತಿಂಗಳಿಂದ ಸಾಧ್ಯವಾದ (ಯಥಾಸಂಭವ) ವ್ರತಗಳನ್ನು ಏಕಾದಶೀ ಅಥವಾ ದ್ವಾದಶಿಯಲ್ಲಿ ಸಂಕಲ್ಪಮಾಡಿ ಶ್ರಾವಣದಲ್ಲಿ ಮಾಡತಕ್ಕ ವಿಶೇಷ ವ್ರತದಸಂಕಲ್ಪವನ್ನೂ ಇದೇ ದಿನದಲ್ಲಿ ಮಾಡತಕ್ಕದ್ದು. “ಅಹಂ ಶಾಕಂ ವರ್ಜಯಿಷ್ಟೇ ಶ್ರಾವಣೇ ಮಾಸಿ ಮಾಧವ” ಹೀಗೆ ಸಂಕಲ್ಪಿಸತಕ್ಕದ್ದು, ಇಲ್ಲಿ ಹೇಳಿದ ಶಾಕಶಬ್ದದಿಂದ ಲೋಕದಲ್ಲಿ ಪ್ರಚಾರದಲ್ಲಿರುವ ಫಲ, ಮೂಲ, ಪುಷ್ಪ, ಎಲೆ, ಅಂಕುರ, ದಂಟು, ತೊಗಟೆ ಮೊದಲಾದವುಗಳೆಲ್ಲ ಸಮಾವಿಷ್ಟವಾಗುವವು. ಅರ್ಥಾತ್ ಇವೆಲ್ಲವೂ ವರ್ಜವು ಧಾನ್ಯವರ್ಜನದಲ್ಲಿಯಾದರೂ ಬರೇ ಕುತ್ತುಂಬರಿ ಇತ್ಯಾದಿಗಳನ್ನೂ ವರ್ಜ್ಯಮಾಡತಕ್ಕದ್ದು. ಶುಂಠಿ, ಅರಿಶಿನ, ಜೀರಿಗೆ ಇತ್ಯಾದಿ ಸಂಬಾರ ವಸ್ತುಗಳನ್ನೂ ಬಿಡತಕ್ಕದ್ದು. ಇದರಂತೆ ಆ ದಿನದಲ್ಲಿ ಉತ್ಪನ್ನವಾದ ಅಥವಾ ಮೊದಲು ಉತ್ಪನ್ನವಾಗಿ ಬಿಸಿಲಿನಲ್ಲಿ ಒಣಗಿದ ಎಲ್ಲ ಶಾಕಗಳನ್ನೂ ಬಿಡತಕ್ಕದ್ದು. ಇಲ್ಲಿ ಹೇಳಿದ ಚಾತುರ್ಮಾ ವ್ರತಗಳ ಸಮಾಪ್ತಿದಿನದಲ್ಲಿ ವಿಶಿಷ್ಟ ದಾನಾದಿಗಳನ್ನು ಮಾಡತಕ್ಕದ್ದಿರುತ್ತದೆ. ಆ ವಿಷಯವನ್ನು ಮುಂದೆ ಕಾರ್ತಿಕ ಹುಣ್ಣಿಮೆಯ ಪ್ರಕರಣದಲ್ಲಿ ಹೇಳಲಾಗುವದು. ಶಯನೀ ಮತ್ತು ಬೋಧಿನೀ ಏಕಾದಶೀ ದಿನಗಳಲ್ಲಿ “ತಪ್ತ ಮುದ್ರಾ ಧಾರಣೆ"ಯನ್ನು ಮಾಡಬೇಕೆಂದು ರಾಮಾರ್ಚನ ಚಂದ್ರಿಕೆ’ಯಲ್ಲಿ ಹೇಳಿದೆ. ತಪ್ತ ಮುದ್ರಾಧಾರಣೆಯ ವಿಷಯದಲ್ಲಿ “ಆವಶ್ಯ ಮಾಡಲೇಬೇಕು” ಎಂಬ ವಚನಗಳೂ, ‘ಮಾಡಲೇಬಾರದು” ಎಂಬ ವಚನಗಳೂ ಹೇರಳವಾಗಿವೆ. ಹೀಗೆ ಪರಸ್ಪರ ವಿರೋಧ ವಚನಗಳಿರುವಾಗ ಶಿಷ್ಟಾಚಾರವೇ ಇದಕ್ಕೆ ವ್ಯವಸ್ಥಾಪಕವು. ಯಾರ ಕುಲದಲ್ಲಿ ಪಿತೃಪಿತಾಮಹಾದಿಗಳಿಂದ ತಪ್ತ ಮುದ್ರಾಧಾರಣೆಯು ಆಚರಣೆಯಲ್ಲಿರುವದೋ ಅವರು ಅದರಂತೆಯೇ ಆಚರಿಸತಕ್ಕದ್ದು. ಕುಲಸಂಪ್ರದಾಯವಿಲ್ಲದವರು ಅದು ಯುಕ್ತವಾಗಿ ಕಂಡರೂ ಮಾಡತಕ್ಕದ್ದಲ್ಲ. ಮಾಡಿದಲ್ಲಿ ದೋಷವಾಗುವದು. ಹೀಗೆ ಅದರ ತಾತ್ಪರ್ಯವು. ಆಷಾಢಶುದ್ಧ ದ್ವಾದಶಿಯಲ್ಲಿ ವಾಮನನ ಪೂಜೆಯನ್ನು ಮಾಡಿದರೆ ನರಮೇಧಯಜ್ಞವನ್ನು ಮಾಡಿದ ಫಲವುಂಟಾಗುವದು. ಪೂರ್ವಾಷಾಢಾ ನಕ್ಷತ್ರಯುಕ್ತವಾದ ಆಷಾಢ ಪೂರ್ಣಿಮೆಯಲ್ಲಿ ಅನ್ನಪಾನಾದಿಗಳನ್ನು ದಾನಮಾಡಿದರೆ ಅಕ್ಷಯ್ಯವಾದ ಅನ್ನಪಾನಾದಿ ಪ್ರಾಪ್ತಿಯಾಗುವದು. ಇದೇಪೌರ್ಣಿಮೆಯಲ್ಲಿ ಶ್ರೀಶಿವನ"ಶಯನೋತ್ಸವ"ವನ್ನು ಮಾಡತಕ್ಕದ್ದು. ಈ ಹುಣ್ಣಿವೆಯು ಪ್ರದೋಷ ವ್ಯಾಪಿನಿಯಾಗಿರಬೇಕಾಗುವದು. ಇದೇ ಹುಣ್ಣಿವೆಯಲ್ಲಿ ಕೋಕಿಲಾವ್ರತ"ವನ್ನು ಹೇಳಿದೆ. “ಸ್ನಾನಂ ಕರಿಷ್ಯನಿಯತಾ ಬ್ರಹ್ಮಚರ್ಯ ಸ್ಥಿತಾಪತೀ ಭೋಕ್ಷಾಮಿನಂ ಭೂಶಯಾಂ ಕರಿಷ್ಯ ಪ್ರಾಣಿನಾಂದಯಾಂಗ್” ಹೀಗೆ ಮಾಸವ್ರತವನ್ನು ಸಂಕಲ್ಪಿಸಿ “ಕೋಕಿಲಾ ರೂಪಳಾದ ದೇವಿಯನ್ನು ಪ್ರತಿನಿತ್ಯ ಪೂಜಿಸಿ ನಕ್ಕಭೋಜನ ಮಾಡತಕ್ಕದ್ದು, ಆಷಾಢವು ಅಧಿಕಮಾಸವಾದಲ್ಲಿ ಶುದ್ಧಮಾಸದಲ್ಲಿ ವ್ರತವನ್ನು ಮಾಡತಕ್ಕದ್ದು. ಹೀಗೆ ಆಚಾರವಿರುವದು. ಇದಕ್ಕೆ ಮೂಲವಚನಗಳು ಕಂಡುಬರುವದಿಲ್ಲ. (ಆಷಾಢವು ಅಧಿಕವಾದಲ್ಲಿ ಶುದ್ಧಮಾಸದಲ್ಲಿ ಮಾಡತಕ್ಕದ್ದು, “ನಿರ್ಮೂಲ"ವೆಂದು ಪರಿಚ್ಛೇದ - ೨ ಮೂಲದಲ್ಲಿದ್ದರೂ ವ್ರತರಾಜದಲ್ಲಿ ಉದ್ಧತವಾದ “ಮಲಮಾಸೇತೃತಿಕಾಂತೇ ಶುದ್ಧಾಷಾಡೇಸಮಾಗತೇ||” ಇತ್ಯಾದಿ “ವಾರಾಹ” ವಚನವಿರುವದರಿಂದ ಮೂಲ ಲೇಖಕರಿಗೆ ಅದು ಉಪಲಬ್ದವಾಗಿಲ್ಲವೆಂದು ತೋರುತ್ತದೆ.) ಆಷಾಢ ಅಥವಾ ಶ್ರಾವಣ ಹುಣ್ಣಿವೆ, ಚತುರ್ದಶಿ, ಇಲ್ಲವೇ ಅಷ್ಟಮಿ ಇವುಗಳಲ್ಲಿ “ಶಿವಪವಿತ್ರಾರೋಪಣ"ವನ್ನು ಮಾಡಬೇಕೆಂದು ಹೇಳಿದೆ. ಇದೇ ಪೌರ್ಣಿಮೆಯಲ್ಲಿ ಸಂನ್ಯಾಸಿಗಳ ಚಾತುರ್ಮಾಸ್ಕಾವಾಸ(ನಾಲ್ಕು ತಿಂಗಳು ಒಂದೇ ಕಡೆಯಲ್ಲಿ ವಾಸ)ವನ್ನು ಪ್ರಾರಂಭಿಸತಕ್ಕದ್ದಿದೆ. ಇದರ ಅಂಗವಾಗಿ ಕ್ಷೌರ, ವ್ಯಾಸಪೂಜಾದಿಗಳನ್ನು ಹೇಳಿದೆ. ಈ ಕಾರ್ಯಕ್ಕೆ “ಔದಯಿ” (ಸೂರ್ಯೋದಯದಿಂದ ಆರು ಘಟೀ) ತಿಥಿಯು ಗ್ರಾಹ್ಯವು. ಈ ಚತುರ್ಮಾಸ ಮಧ್ಯದಲ್ಲಿ ಯತಿಯು ಕ್ಷೌರಮಾಡಿಸಿಕೊಳ್ಳಕೂಡದು. ನಾಲ್ಕು ತಿಂಗಳು ಅಥವಾ ಎರಡು ತಿಂಗಳು ಒಂದೇ ಕಡೆಯಲ್ಲಿ ವಾಸಮಾಡತಕ್ಕದ್ದು. ಇದರ ವಿಧಾನವು ಹೇಗೆಂದರೆ, ಮೊದಲು ಕ್ಷೌರಮಾಡಿಸಿಕೊಂಡು ದ್ವಾದಶ ಮೃತ್ತಿಕಾಸ್ನಾನ ಹಾಗೂ ಪ್ರಾಣಾಯಾಮಾದಿಗಳನ್ನು ಮಾಡಿ “ವ್ಯಾಸ” ಪೂಜೆಯನ್ನು ಮಾಡತಕ್ಕದ್ದು. ಇದರ ಸಂಕ್ಷೇಪ ವಿಧಿ-ದೇಶ ಕಾಲಗಳನ್ನುಚ್ಚರಿಸಿ “ಚಾತುರ್ಮಾಸ್ಯಾವಾಸಸಂಕಲ್ಪಂ ಕರ್ತುಂ ಶ್ರೀ ಕೃಷ್ಣ ವ್ಯಾಸ ಭಾಷ್ಯಕಾರಾಣಾಂ ಸಪರಿವಾರಾಣಾಂ ಪೂಜನಂ ಕರಿಷ್ಯ ಹೀಗೆ ಸಂಕಲ್ಪಿಸಿ ಮಧ್ಯದಲ್ಲಿ ಶ್ರೀ ಕೃಷ್ಣ, ಅವನ ಪೂರ್ವದಿಂದ ಪ್ರದಕ್ಷಿಣಕ್ರಮವಾಗಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಇವರನ್ನಾ ವಾಹಿಸತಕ್ಕದ್ದು. (ಇದು ಶ್ರೀ ಕೃಷ್ಣಪಂಚಕ) ಈ ಪಂಚಕದ ದಕ್ಷಿಣಭಾಗದಲ್ಲಿ ವ್ಯಾಸ, ಅವನ ಪೂರ್ವದಿಂದ ಪ್ರದಕ್ಷಿಣ ಕ್ರಮದಿಂದ ಸುಮಂತು, ಜೈಮಿನಿ, ವೈಶಂಪಾಯನ, ಪೈಲ ಹೀಗೆ ವ್ಯಾಸಪಂಚಕವನ್ನಾವಾಹಿಸಿ ಶ್ರೀ ಕೃಷ್ಣಾದಿಗಳ ಎಡಭಾಗದಲ್ಲಿ ಭಾಷ್ಯಕಾರರಾದ “ಶಂಕರ”, ಅವನ ಪೂರ್ವಭಾಗದಲ್ಲಿ ಪ್ರದಕ್ಷಿಣಾವರ್ತನೆಯಿಂದ ಪದ್ಮಪಾದ, ವಿಶ್ವರೂಪ, ಸ್ಫೋಟಕ, ಹಸ್ತಾಮಲಕ ಈ ಆಚಾರ್ಯರನ್ನು ಆವಾಹಿಸುವದು. ಶ್ರೀ ಕೃಷ್ಣಪಂಚಕದಲ್ಲಿ ಶ್ರೀ ಕೃಷ್ಣನ ಪಾರ್ಶ್ವಗಳಲ್ಲಿ ಬ್ರಹ್ಮ, ರುದ್ರರನ್ನೂ ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ಸನಕ, ಸನಂದನ, ಸನಾತನ, ಸನತ್ಕುಮಾರರನ್ನೂ, ಶ್ರೀ ಕೃಷ್ಣಪಂಚಕದ ಮುಂಗಡೆಯಲ್ಲಿ ಗುರು, ಪರಮಗುರು, ಪರಮೇಷ್ಠಿಗುರುಗಳನ್ನೂ, ಬ್ರಹ್ಮವಸಿಷ್ಠ ಶಕ್ತಿ, ಪರಾಶರ, ವ್ಯಾಸ, ಶುಕ, ಗೌಡಪಾದ, ಗೋವಿಂದಪಾದ, ಶಂಕರಾಚಾರ್ಯ ಇವರನ್ನೂ, ಬ್ರಹ್ಮನಿಷ್ಠರನ್ನೂ ಆವಾಹಿಸಿ, ಮೂರೂ ಪಂಚಕಗಳ ಆತ್ಮೀಯದಲ್ಲಿ ಗಣೇಶನನ್ನೂ, ಈಶಾನ್ಯದಲ್ಲಿ ಕ್ಷೇತ್ರಪಾಲನನ್ನೂ, ವಾಯವ್ಯದಲ್ಲಿ ದುರ್ಗಾ, ನೈಋತ್ಯದಲ್ಲಿ ಸರಸ್ವತಿಯನ್ನೂ ಪುನಃ ಪೂರ್ವದಿಂದಾರಂಭಿಸಿ ಇಂದ್ರಾದಿ ಲೋಕಪಾಲಕರನ್ನೂ ಆವಾಹಿಸಿ ಪೂಜಿಸತಕ್ಕದ್ದು. ಕೃಷ್ಣನ ಪೂಜೆಯನ್ನು ನಾರಾಯಣ-ಅಷ್ಟಾಕ್ಷರ ಮಂತ್ರದಿಂದ ಪೂಜಿಸತಕ್ಕದ್ದು. ಉಳಿದ ದೇವತೆಗಳನ್ನೆಲ್ಲ ಓಂಕಾರಪೂರ್ವಕ ಹಾಗೂ ‘ನಮಃ’ ಅಂತವಾಗುಳ್ಳ ನಾಮಮಂತ್ರದಿಂದ ಪೂಜಿಸುವದು. ಪೂಜಾಂತದಲ್ಲಿ ಪ್ರತಿಬಂಧಕವಿಲ್ಲದಲ್ಲಿ “ಚತುರೋವಾರ್ಷಿಕಾನ್ ಮಾಸಾನ್ ಇಹವಸಾಮಿ” ಹೀಗೆ ಮನದಲ್ಲಿಯೇ ಸಂಕಲ್ಪ ಮಾಡಿ “ಅಹಂತಾವನ್ನಿ ವತ್ಸಾಮಿ ಸರ್ವಭೂತಹಿತಾಯವ ಪ್ರಾಯೋಣಪ್ರಾ ಕೃಷಿ ಪ್ರಾಣಿಸಂಕುಲಂ ವರ್ತದೃಶ್ಯತೇ|೧|| ಆತಸ್ತೇಷಾಂ ಅಹಿಂಸಾರ್ಥಂ ಪಕ್ಷಾನ್ ವೈಶ್ರುತಿಸಂಶ್ರಯಾನ್|ಸ್ಥಾ ಸಾಮಶ್ಚತು ರೋಮಾಸಾನ್ ವಾಸ ಬಾಧಕೇ|೨|| ಹೀಗೆ ಮುಖದಿಂದ ಉಚ್ಚರಿಸಿ ಸಂಕಲ್ಪಮಾಡತಕ್ಕದ್ದು. ಈ ಸಂಕಲ್ಪಕ್ಕೆ ಅಲ್ಲಿರುವ ಗೃಹಸ್ಥರು ಹೀಗೆ ಪ್ರತಿವಚನವನ್ನು ಧರ್ಮಸಿಂಧು ಹೇಳತಕ್ಕದ್ದು. ಏನೆಂದರೆ “ನಿವಸಂತು ಸುಖೇನಾತ್ರ ಗಮಿಷ್ಕಾಮಕೃತಾರ್ಥತಾಂಗೆ ಯಥಾಶಕ್ತಿಚ ಶುಶೂಪಾಂ ಕರಿಷ್ಯಾಮೋ ವಯಂ ಮುದಾ” ಹೀಗೆ ಪ್ರತಿವಚನದ ನಂತರ ವೃದ್ಧರ ಅನುಕ್ರಮದಿಂದ ಯತಿಗಳನ್ನು ಗೃಹಸ್ಥರೂ, ಗೃಹಸ್ಥರನ್ನು ಯತಿಗಳೂ ಅನ್ನೋನ್ಯವಾಗಿ ನಮಸ್ಕರಿಸುವದು. ಈ ವಿಧಿಯನ್ನು ಹುಣ್ಣಿವೆಯಲ್ಲಿ ಮಾಡತಕ್ಕದ್ದು. ಸಂಭವವಾದರೆ ದ್ವಾದಶಿಯಲ್ಲಿ ಮಾಡತಕ್ಕದ್ದು. ಆಷಾಢಕೃಷ್ಣ ಬಿದಿಗೆಯಲ್ಲಿ “ಅಶೂನ್ಯಶಯನವ್ರತವನ್ನು ಹೇಳಿದೆ. ಲಕ್ಷ್ಮೀಸಹಿತನಾದ ವಿಷ್ಣುವನ್ನು ಪಲ್ಲಂಗದಲ್ಲಿಟ್ಟು ಪೂಜಿಸಿ ದಾಂಪತ್ಯ-ಅವಿಚ್ಛೇದಕ-ಪ್ರಾರ್ಥನಾಮಂತ್ರ ಅಂದರ “ಪಭರ್ತುರ್ವಿಯೋಗಂಡ ಭರ್ತಾಭಾರ್ಯಾ ಸಮುದ್ಭವಂ ನಾನ್ನುವಂತಿಯಥಾ ದುಃಖಂ ದಂಪತ್ಯಾನಿ ತಥಾಕುರು” ಇದರಿಂದ ಪ್ರಾರ್ಥಿಸುವದು. ಆಮೇಲೆ ಚಂದ್ರನಿಗೆ ಅರ್ಥ್ಯವನ್ನು ಕೊಟ್ಟು ನಕ್ತಭೋಜನ ಮಾಡತಕ್ಕದ್ದು. ಹೀಗೆ ನಾಲ್ಕು ಮಾಸಗಳಲ್ಲಿ ಕೃಷ್ಣಪಕ್ಷದ ಬಿದಿಗೆಯಲ್ಲಿ ಪೂಜಿಸಿ ಸಪಕನಾದ ಬ್ರಾಹ್ಮಣನಿಗೆ ಶಯ್ಯಾದಾನಮಾಡುವದು. ಮತ್ತು ಸಾಲಂಕೃತವಾದ ಪ್ರತಿಮಾದಾನವನ್ನೂ ಮಾಡತಕ್ಕದ್ದು. ಈ ವ್ರತವನ್ನಾಚರಿಸಿದರೆ ಏಳುಜನ್ಮಪರ್ಯಂತ ಅಕ್ಷಯವಾದ ದಾಂಪತ್ಯ ಸೌಖ್ಯವು ದೊರಕುವದು. ಪುತ್ರ-ಧನಾದಿ ಪ್ರಾಪ್ತಿಯಾಗುವದು. ಗೃಹಸ್ಥ ಧರ್ಮವು ಚ್ಯುತಿಯಿಲ್ಲದೆ ಸಾಗುವದು. ಚಂದ್ರೋದಯದಲ್ಲಿ ಪೂಜಾದಿಗಳನ್ನು ಹೇಳಿರುವದರಿಂದ ಈ ವ್ರತದಲ್ಲಿ ಚಂದ್ರೋದಯ ವ್ಯಾಪಿನಿಯಾದ ತಿಥಿಯು ಗ್ರಾಹ್ಯವು. ಎರಡೂದಿನ ವ್ಯಾಪ್ತಿಯಿದ್ದರೆ ಅಥವಾ ಎರಡೂದಿನ ವ್ಯಾಪ್ತಿಯಿಲ್ಲದಿದ್ದರೂ ಪರವೇಗ್ರಾಹ್ಯವು. ಇಲ್ಲಿಗೆ ಆಷಾಢಮಾಸದ ಕೃತ್ಯನಿರ್ಣಯವು ಮುಗಿಯಿತು. ಇನ್ನು ಶ್ರಾವಣಮಾಸಕೃತ್ಯವು ಹೇಳಲ್ಪಡುತ್ತದೆ. ಸಿಂಹಸಂಕ್ರಾಂತಿಯು ಶ್ರಾವಣದಲ್ಲಿ ಬರುತ್ತದೆ. ಇದರಲ್ಲಿ ಮುಂದಿನ ಹದಿನಾರುಘಟಿಗಳು ಪುಣ್ಯಕಾಲವು, ರಾತ್ರಿನಿರ್ಣಯವನ್ನು ಮೊದಲೇ ಹೇಳಿದೆ. ಈ ಮಾಸದಲ್ಲಿ ಏಕಭಕ್ತವ್ರತ, ನಕ್ಕವ್ರತ, ಶಿವ ವಿಷ್ಣಾದಿ ದೇವತೆಗಳ ಅಭಿಷೇಕ ಇತ್ಯಾದಿಗಳು ಹೇಳಲ್ಪಟ್ಟಿವೆ. ಸೂರ್ಯಸಿಂಹರಾಶಿಗತನಾದಾಗ (ಸಿಂಹತಿಂಗಳಲ್ಲಿ) ಆಕಳು ಹಡೆದಲ್ಲಿ ತುಪ್ಪಮಿಶ್ರಿತ ಸಾಸಿವೆಗಳಿಂದ ವ್ಯಾಹೃತಿಮಂತ್ರದಿಂದ ಹತ್ತು ಸಾವಿರ ಹೋಮಮಾಡಿ ಆಕಳನ್ನು ದಾನಮಾಡತಕ್ಕದ್ದು. ಇದರಂತೆ ಅರ್ಧರಾತ್ರಿಯಲ್ಲಿ ಹಸುವು ಕೂಗಿದರೆ ಮೃತ್ಯುಂಜಯಮಂತ್ರದಿಂದ ಹೋಮಮಾಡಿ ಶಾಂತಿಮಾಡಿಸಿಕೊಳ್ಳುವದು. ಶ್ರಾವಣಮಾಸದ ಹಗಲಿನಲ್ಲಿ ಕುದುರೆ, ಮಾಘಮಾಸದ ಬುಧವಾರದಲ್ಲಿ ಎಮ್ಮೆ, ಸಿಂಹದಲ್ಲಿ ರವಿಯಿರುವಾಗ ಆಕಳು, ಹೀಗೆ ಪ್ರಸೂತಗಳಾದರೆ ಯಜಮಾನನಿಗೆ ಮೃತ್ಯುಪ್ರಾಪ್ತಿಯು, ಹೀಗೆ ವಚನವಿರುವದರಿಂದ ಶಾಂತಿಯನ್ನು ಶಾಂತಿ ವಿಧಾನದ ಗ್ರಂಥದಲ್ಲಿ ಹೇಳಿದಂತೆ ಮಾಡತಕ್ಕದ್ದು. ಶ್ರಾವಣದಲ್ಲಿ ಸೋಮವಾರ ವ್ರತವನ್ನು ಮಾಡತಕ್ಕದ್ದಿದೆ. ಸಮರ್ಥನಾದವನು ಉಪವಾಸ ಮಾಡತಕ್ಕದ್ದು. ಇಲ್ಲವಾದರೆ ರಾತ್ರಿಯಲ್ಲಿ ಭೋಜನಮಾಡುವದು. ಶ್ರಾವಣ ಮಂಗಳವಾರ ಬಂದಾಗ ಮಂಗಲಾ ಗೌರೀ ವ್ರತವನ್ನು ಹೇಳಿದೆ. ಶ್ರಾವಣ ಶುಕ್ಲ ಚತುರ್ಥಿಯನ್ನು ಮಧ್ಯಾಹ್ನವ್ಯಾಪಿನಿ ಮತ್ತು ಪೂರ್ವವಿದ್ಧವಾದದ್ದನ್ನು ಗ್ರಹಣಮಾಡತಕ್ಕದ್ದು. ಶ್ರಾವಣ ಶುಕ್ಲ ಪಂಚಮಿಯು ನಾಗಪಂಚಮೀ, ಉದಯದಿಂದ ಮೂರುಮುಹೂರ್ತವಿರುವ ಮತ್ತು ವರವಿದ್ದವಾದದ್ದು ಗ್ರಾಹ್ಯವು. ಮಾರನೇದಿನ ತ್ರಿಮುಹೂರ್ತಕ್ಕಿಂತ ಕಡಿಮೆಯಿದ್ದು ಚತುರ್ಥಿವಿದ್ದವಾದಾಗ ಪೂರ್ವವೇ ಗ್ರಾಹ್ಯವು, ಮೂರುಮುಹೂರ್ತಕ್ಕಿಂತ ಹೆಚ್ಚಿಗಿರುವ ಪರಿಚ್ಛೇದ - ೨ ಚತುರ್ಥಿವೇಧವಾದಾಗ ಪರದಲ್ಲಿ ಎರಡು ಮುಹೂರ್ತವಿದ್ದರೂ ಅದೇ ಗ್ರಾಹ್ಯವು. ಬರೇ ಮುಹೂರ್ತವಿದ್ದರೆ ಗ್ರಾಹ್ಯವಲ್ಲವೆಂದು ನನಗೆ ತೋರುತ್ತದೆ. ಈ ನಾಗಪಂಚಮಿಯಲ್ಲಿ ಗೋಡೆ ಮೊದಲಾದವುಗಳಲ್ಲಿ ಬರೆದ ಅಥವಾ ಮಣ್ಣಿನಿಂದ ತಯಾರಿಸಿರುವ ಅಥವಾ ಆಚಾರಪದ್ಧತಿಯಂತ ಶಿಲಾನಾಗ ಇತ್ಯಾದಿ ನಾಗಗಳನ್ನು ಪೂಜಿಸತಕ್ಕದ್ದು. ಶ್ರಾವಣ ಶುಕ್ಲ ದ್ವಾದಶಿಯಲ್ಲಿ “ಮಾಸಂಕೃತಸ್ಯ ಶಾಕವರ್ಜನ ವ್ರತಸ್ಯ ಸಾಂಗತಾರ್ಥಂ ಬ್ರಾಹ್ಮಣಾಯ ಶಾಕದಾನಂ ಕರಿಷ್ಯ” ಹೀಗೆ ಸಂಕಲ್ಪಿಸಿ ಬ್ರಾಹ್ಮಣನನ್ನು ಪೂಜಿಸಿ “ಉಪಾಯನ ಮಿದಂದೇವ ವ್ರತಸಂಪೂರ್ಣ ಹೇತನೇ ಶಾಕಂತು ದ್ವಿಜವರ್ಯಾಯ ಸಹಿರಣ್ಯಂದದಾಮ್ಯಹಂ|’ ಈ ಮಂತ್ರದಿಂದ ಪಕ್ವವಾದ ಅಥವಾ ಹಸಿಯದಾದ ಕಾಯಿಪಲ್ಲೆಯನ್ನು ದಾನಮಾಡತಕ್ಕದ್ದು, ಆಮೇಲೆ “ದಧಿಭಾದ್ರಪದೇ ಮಾಸೇ ವರ್ಜಯಿಷ್ಯ ಸದಾಹರ"ಹೀಗೆ ದಧಿವ್ರತವನ್ನು ಸಂಕಲ್ಪಿಸತಕ್ಕದ್ದು. “ದಧಿ"ಎಂದು ಹೇಳಿದ್ದರಿಂದ “ಮೊಸರು” ಮಾತ್ರ ತ್ಯಾಜ್ಯವು ಮಜ್ಜಿಗೆ ಮೊದಲಾದವುಗಳು ತ್ಯಾಜ್ಯಗಳಲ್ಲ. ಪವಿತ್ರಾರೋಪಣ ವಿಷಯ ಪಾರಣೆಯ ದಿವಸ ದ್ವಾದಶಿಯಲ್ಲಿ ವಿಷ್ಣುವಿಗೆ ಪವಿತ್ರಾರೋಪಣ ಮಾಡತಕ್ಕದ್ದು. ಪಾರಣೆಯ ದಿನ ದ್ವಾದಶಿಯಲ್ಲಿರದಿದ್ದರೆ ತ್ರಯೋದಶಿಯು ಪಾರಣೆಯ ದಿನವಾಗಬಹುದು ಅದೂ ಅಸಂಭವವಾದರೆ ಶ್ರವಣನಕ್ಷತ್ರಯುಕ್ತವಾದ ಹುಣ್ಣಿವೆಯಲ್ಲಿ ಮಾಡತಕ್ಕದ್ದು. ಶಿವಪವಿತ್ರಾರೋಪಣವನ್ನು ಚತುರ್ದಶೀ ಅಥವಾ ಅಷ್ಟಮೀ ಇಲ್ಲವೆ ಹುಣ್ಣಿವೆಯಲ್ಲಾಗಲೀ ಮಾಡತಕ್ಕದ್ದು. ದುರ್ಗಾ, ಗಣೇಶ, ದೇವೀ ಮೊದಲಾದ ದೇವತೆಗಳಿಗೆ ಚತುರ್ದಶೀ ಚತುರ್ಥಿ ತೃತೀಯಾ ನವಮಿ ಮೊದಲಾದ ತಿಥಿಗಳಲ್ಲಿ ಕುಲಚಾರದಂತ ಮಾಡತಕ್ಕದ್ದು. ಆಯಾಯ ತಿಥಿಗಳಲ್ಲ ಸಂಭವವಾದರೆ ಸಕಲ ದೇವತೆಗಳಿಗೂ ಶ್ರಾವಣ ಹುಣ್ಣಿವೆಯಲ್ಲಿ ಮಾಡಬಹುದು. ಅದರಲ್ಲಿಯೂ ಅಸಂಭವವಾದರೆ ಗೌಣಕಾಲಗಳಾದ ಕಾರ್ತಿಕದ ವರೆಗೂ ಮಾಡಬಹುದು. “ಪವಿತ್ರಾರೋಪಣ"ವನ್ನು ನಿತ್ಯ ಮಾಡದಿದ್ದಲ್ಲಿ ದುರ್ಗತಿಯಾಗುವದು. “ತಸ್ಯಸಾಂವತ್ಸರೀಪೂಜಾ ನಿಷ್ಕಲಾ” ಇತ್ಯಾದಿ ವಚನಗಳಿರುವದರಿಂದ ಇದನ್ನು ಮಾಡದಿದ್ದರೆ ಇಡೀ ಸಂವತ್ಸರದ ಪೂಜೆಯು ನಿಷ್ಪಲವಾಗುವದು. ಗೌಣಕಾಲದಲ್ಲಿಯೂ ಮಾಡಲಾಗದಿದ್ದರೆ ಆಯಾಯ ದೇವತೆಗಳ ಮೂಲಮಂತ್ರವನ್ನು ಹತ್ತು ಸಾವಿರ ಸಂಖ್ಯೆಯಂತೆ ಜಪಿಸತಕ್ಕದ್ದು. ಇದೇ ಪ್ರಾಯಶ್ಚಿತ್ತವು. ಪೂರ್ವದಿನ ಅಧಿವಾಸ ಪರದಿನ ಪವಿತ್ರಾರೋಪಣ ಹೀಗೆ ಅದರ ಕ್ರಮವು ಇನ್ನು ಎರಡುದಿನ ಮಾಡಲಾಗದಿದ್ದರೆ ಪವಿತ್ರಾರೋಪಣದಿನದಲ್ಲಿಯೇ ಮೊದಲು ಅಧಿವಾಸಮಾಡಿ ಆಮೇಲೆ ಪವಿತ್ರಾರೋಪಣ ಮಾಡತಕ್ಕದ್ದು. ಇದರ ಸಂಕ್ಷಿಪ್ತ “ಪ್ರಯೋಗ” ಹೇಗಂದರೆ -ಒಂಭತ್ತು ಎಳೆಗಳಿಂದ ಕೂಡಿದ ಹತ್ತಿಯ ದಾರವನ್ನು ಮಾಡಿ ಈ ನವಸೂತ್ರಿಯದಾರವನ್ನು ನೂರಾಎಂಟಾವರ್ತಿಯಾಗಿ ದೇವರಮೊಣಕಾಲಿಗೆ ಬರುವಂತೆ ಮಾಡಿ ಇಪ್ಪತ್ತುನಾಲ್ಕು ಗಂಟುಗಳನ್ನು ಮಾಡತಕ್ಕದ್ದು, ಈ ಪವಿತ್ರವು “ಉತ್ತಮ” ಸಂಜ್ಜಿತವಾಗುವದು. (೧) ಐವತ್ತುನಾಲ್ಕು ಆವರ್ತಿತವಾದ ಅಂಥದೇ ನವಸೂತ್ರಿಯನ್ನು ತೊಡೆಯವರೆಗೆ ಬರುವಂತೆ ಹನ್ನೆರಡು ಗಂಟುಗಳುಳ್ಳದ್ದನ್ನಾಗಿ ಮಾಡುವದು. “ಇದು ಮಧ್ಯಮಪವಿತ್ರ"ವೆನ್ನಲ್ಪಡುವದು. (೨) ಇಪ್ಪತ್ತೇಳು ಆವೃತ್ತಿ ಮಾಡಿದ ಅಂಥದೇ ಧರ್ಮಸಿಂಧು ನವಸೂತ್ರಿಯನ್ನು ನಾಭಿಗೆ ಮುಟ್ಟುವ ಅಳತೆಯಿಂದ ಮಾಡಿ ಎಂಟು ಗಂಟುಗಳಿಂದ ಯುಕ್ತವಾಗಿಮಾಡತಕ್ಕದ್ದು. ಇದು ಕನಿಷ್ಠ ಪವಿತ್ರವು. (೩) ಹೀಗೆ ಪವಿತ್ರಗಳನ್ನು ತಯಾರಿಸಿ ಇಟ್ಟುಕೊಳ್ಳುವದು. ನವಸೂತ್ರಿಯನ್ನು ನೂರಾ ಇಪ್ಪತ್ತು ಅಥವಾ ಎಪ್ಪತ್ತು ಸುತ್ತು ಮಾಡಿ ನೂರಾಎಂಟು, ಅಥವಾ ಇಪ್ಪತ್ತನಾಲ್ಕು ಗಂಟುಗಳುಳ್ಳದ್ದನ್ನಾಗಿಮಾಡಿ ದೇವರ ಪಾದಪರ್ಯಂತ ಮುಟ್ಟುವಂತೆ ಪವಿತ್ರವನ್ನು ತಯಾರಿಸುವದು. ಇದಕ್ಕೆ “ವನಮಾಲಾ ಪವಿತ್ರ"ವೆನ್ನುವರು (೪) ಇನ್ನೊಂದು ನವಸೂತ್ರಿಯನ್ನು ತೆಗೆದುಕೊಂಡು ಹನ್ನೆರಡು ಸುತ್ತು ಮಾಡಿ ಹನ್ನೆರಡು ಗ್ರಂಥಿಗಳಿಂದ ತಯಾರಿಸುವದು. ಇದು ಗಂಧ “ಪವಿತ್ರ"ವಾಗುವದು. (೫) ಇದಲ್ಲದೆ ನವಸೂತ್ರಿಯ ಇಪ್ಪತ್ತೇಳು ಸುತ್ತಿನಿಂದ “ಗುರುಪವಿತ್ರ"ವನ್ನೂ ತ್ರಿಸೂತ್ರಿ (ಮೂರಳಕೂಡಿದ್ದು) ಯಿಂದ ಅಂಗದೇವತಾ ಪವಿತ್ರಗಳನ್ನೂ ಮಾಡತಕ್ಕದ್ದು. ಶಿವಪವಿತ್ರಗಳನ್ನು ಲಿಂಗವಿಸ್ತಾರಾನುಸಾರವಾಗಿ ಮಾಡತಕ್ಕದ್ದು. ಹೀಗೆ ಎಲ್ಲ ಪವಿತ್ರಗಳನ್ನೂ ಪಂಚಗವ್ಯದಿಂದ ಪ್ರೋಕ್ಷಿಸಿ ಓಂಕಾರವನ್ನು ಹೇಳಿ ತೊಳೆದು ಮೂಲದಿಂದ ನೂರೆಂಟಾವರ್ತಿ ಮಂತ್ರಿಸಿ ಗಂಟುಗಳನ್ನು ಕುಂಕುಮದಿಂದ ರಂಜಿಸಿ ಎಲ್ಲ ಪವಿತ್ರಗಳನ್ನೂ ಬಿದಿರಿನ ಪಾತ್ರೆಯಲ್ಲಿಟ್ಟು ವಸ್ತ್ರದಿಂದ ಮುಚ್ಚಿ ದೇವರ ಮುಂಗಡೆಯಲ್ಲಿಟ್ಟು “ಕ್ರಿಯಾಲೋಪವಿಧಾನಾರ್ಥಂ ಯತ್‌ತ್ವಯಾ ವಿಹಿತಂಪ್ರಭೋಮತಯತೇದೇವ ತವತುಷ್ಟೆ ಪವಿತ್ರಕಂ||೧||” “ನಮ್ಮ ವಿಘೋಭವೇದ್ದೇವ ಕುರುನಾಥದಯಾಂ ಮಯಿ ಸರ್ವದಾ ಸರ್ವದಾವಿಷ್ಟೋ ಮಮತ್ವಂಪರಮಾಗತಿಃ||೨||” ಹೀಗೆ ಪ್ರಾರ್ಥಿಸಿ “ಅಧಿವಾಸನ ಮಾಡತಕ್ಕದ್ದು. ಹೇಗೆಂದರೆ ದೇಶಕಾಲಗಳನ್ನು “ಸಂವತ್ಸರ ಕೃತಪೂಜಾ ಫಲಾವಾರ್ಥಂ ಅಮುಕ ದೇವತಾ ಪ್ರೀತ್ಯರ್ಥಂ ಅಧಿವಾಸನ ವಿಧಿಪೂರ್ವಕಂ ಪವಿತ್ರಾರೋಪಣಂ ಕರಿಷ್ಯ” ಹೀಗೆ ಸಂಕಲ್ಪಿಸಿ ದೇವರ ಮುಂಗಡೆಯಲ್ಲಿ ಸರ್ವತೋಭದ್ರ ಮಂಡಲವನ್ನು ಬರೆದು ಅದರಲ್ಲಿ ಜಲಪೂರ್ಣಕುಂಭವನ್ನು ಸ್ಥಾಪಿಸಿ ಕುಂಭದಮೇಲೆ ಬಿದಿರಿನ ಪಾತ್ರೆಯನ್ನಿಟ್ಟು ಅದರಲ್ಲಿ ಆ ಪವಿತ್ರಗಳನ್ನಿಟ್ಟು ಅವುಗಳಲ್ಲಿ “ಸಂವತ್ಸರಸ್ಯ ಯಾಗಕ್ಕೆ ಪವಿತ್ರೀಕರಣಾಯಭೋವಿಷ್ಣು ಲೋಕಾತ್ ಪವಿತ್ರಾಜ್ಯ ಆಗಸ್ನೇಹ ನಮೋಸ್ತುತೇ"ಈ ಮಂತ್ರದಿಂದ ಹಾಗೂ ಮೂಲಮಂತ್ರದಿಂದ ಆವಾಹನಮಾಡಿ ತ್ರಿಸೂತ್ರಿಪವಿತ್ರಗಳಲ್ಲಿ ಬ್ರಹ್ಮ, ವಿಷ್ಣು, ರುದ್ರರನ್ನೂ, ನವಸೂತ್ರಿಯಲ್ಲಿ ಓಂಕಾರ, ಸೋಮ, ವಕ್ಕಿ, ಬ್ರಹ್ಮ, ನಾಗೇಶ, ಸೂರ್ಯ, ಶಿವ, ವಿಶ್ವೇದೇವ ಇವರನ್ನೂ, ಉತ್ತಮ, ಮಧ್ಯಮ, ಕನಿಷ್ಠ, ಪವಿತ್ರಗಳಲ್ಲಿ ಬ್ರಹ್ಮ, ವಿಷ್ಣು, ರುದ್ರ ಹಾಗೂ ಸತ್ಯ, ರಜ, ತಮಸ್ಸುಗಳನ್ನೂ ಆವಾಹಿಸಿ ವನಮಾಲೆಯಲ್ಲಿ ಪ್ರಕೃತಿಯನ್ನೂ ಆವಾಹನಮಾಡಿ ಮೂಲಮಂತ್ರದಿಂದ ‘ಶ್ರೀ ಪವಿತ್ರಾದಿ ಆವಾಹಿತ ದೇವತಾನಮ:’ ಇತ್ಯಾದಿ ಗಂಧಾದ್ಯುಪಚಾರಗಳಿಂದ ಪೂಜಿಸತಕ್ಕದ್ದು, ನಂತರ ಗೇಣುದ್ದದ ಹನ್ನೆರಡು ಗ್ರಂಥಿಗಳುಳ್ಳ ಗಂಧಪವಿತ್ರ"ವನ್ನು ತೆಗೆದುಕೊಂಡು “ವಿಷ್ಟು ತೇಜೋದ್ಭವಂರಮ್ಯಂ ಸರ್ವಪಾತಕನಾಶನಂ|ಸರ್ವಕಾಮ ಪ್ರದಂದೇವ ತವಾಂಗೇ ಧಾರಯಾಮ್ಯಹಂ||” ಈ ಮಂತ್ರದಿಂದ ಮೂಲಮಂತ್ರದಿಂದ ಸಂಪುಟೀಕರಣ (ಹಿಂದೆ ಮತ್ತು ಮುಂದೆ ಮೂಲಮಂತ್ರವನ್ನು ಹೇಳಿ “ವಿಷ್ಣು ತೇಜೋದ್ಭವಂ” ಈ ಮಂತ್ರವನ್ನು ಮಧ್ಯದಲ್ಲಿ ಹೇಳುವದೆಂದರ್ಥ) ಮಾಡಿ ದೇವರ ಪಾದಗಳಲ್ಲಿ ಅರ್ಪಿಸುವದು. ದೇವರ ಹಸ್ತದಲ್ಲಿ ಕಟ್ಟತಕ್ಕದ್ದೆಂದು ಕೆಲವರ ಮತವು. ಆಮೇಲೆ ದೇವರನ್ನು ಪಂಚೋಪಚಾರಗಳಿಂದ ಪೂಜಿಸಿ “ಆಮಂತ್ರಿತೋSಸಿ ದೇವೇಶ ಪುರಾಣ ಪುರುಷೋತ್ತಮ ಪ್ರಾತಸ್ವಾಂಪೂಜಯಾಮಿ ಸಾನ್ನಿಧ್ಯಂ ಕುರು “ಪರಿಚ್ಛೇದ - ೨ LE ಕೇಶವ Idli ಕ್ಷೀರೋದಧಿ ಮಹಾನಾಗ ಶಯ್ಯಾವತವಿಗ್ರಹ ಪ್ರಾತಾಂ ಪೂಜಯಿಷ್ಯಾಮಿ ಸನ್ನಿಭವ ತೇನಮಃ ||೨||” ಹೀಗೆ ಪ್ರಾರ್ಥಿಸುವದು, ಸಾಷ್ಟಾಂಗ ನಮಸ್ಕಾರಮಾಡಿ ಪುಷ್ಪಾಂಜಲಿಯನ್ನರ್ಪಿಸುವದು. ಹೀಗೆ ಅಧಿವಾಸನ ವಿಧಿಯು. ಇಲ್ಲಿ ಸರ್ವತ್ರ “ಮೂಲಮಂತ್ರ"ವೆಂದರೆ ಗುರೂಪದಿಷ್ಟವಾದ ತಾಂತ್ರಿಕ ಇಲ್ಲವೆ ವೈದಿಕ ಅಥವಾ ಆಯಾಯ ದೇವಗಾಯತ್ರಿ ಎಂದು ತಿಳಿಯತಕ್ಕದ್ದು. ರಾತ್ರಿಯಲ್ಲಿ ಸತ್ಕಥಾಶ್ರವಣಾದಿಗಳಿಂದ ಜಾಗರಣಮಾಡತಕ್ಕದ್ದು. ಅದೇದಿನ ಅಧಿವಾಸಮಾಡುವದಿದ್ದಲ್ಲಿ ಪ್ರಾತಃ ಕಾಲ ಆಕಳ ಹಾಲುಕರೆಯುವಷ್ಟರ ಕಾಲದಲ್ಲಿ “ಪವಿತ್ರಾರೋಪಣಾಂಗಭೂತಂ ದೇವಪೂಜನಂ ಪವಿತ್ರ ಪೂಜನಂಚ ಕರಿಷ್ಟೇ” ಹೀಗೆ ಸಂಕಲ್ಪಿಸಿ ದೇವರನ್ನೂ ಪವಿತ್ರಗಳನ್ನೂ ಗಂಧಾದ್ಯುಪಚಾರಗಳಿಂದ ಫಲಾದಿಉಪನೈವೇದ್ಯಾಂತವಾಗಿ ಪೂಜಿಸಿ ಗಂಧ, ದೂರ್ವಾ, ಅಕ್ಷತೆಯುಕ್ತವಾದ ಕನಿಷ್ಠ ಪವಿತ್ರವನ್ನು ತೆಗೆದುಕೊಂಡು “ದೇವದೇವ ನಮಸ್ತುಭ್ಯಂ ಗ್ರಹಾಣೇದಂ ಪತ್ರಕಂ ಪಕರಣಾರ್ಥಾಯ ವರ್ಷಪೂಜಾ ಫಲಪ್ರದಂ ||೧|| ಪವಿತ್ರ ಕಂಕುರುಪ್ಪಾದ್ಯಯನ್ಮಯಾದುಷ್ಕೃತಂಕೃತಂ|ಶುದ್‌ಭವಾಮ್ಯ ಹಂದೇವ ತತ್ಪಸಾದಾತುರೇಶ್ವರ||೨||” ಈ ಮಂತ್ರವನ್ನು ಮೂಲ ಸಂಪುಟಿತವಾಗುವಂತೆ ಹೇಳಿ ದೇವರಿಗರ್ಪಿಸುವದು. ಇದರಂತೆ ಮಧ್ಯಮ ಉತ್ತಮ ವನಮಾಲಾ ಪವಿತ್ರಗಳನ್ನು ಹಿಂದೆ ಹೇಳಿದಂತೆ ಪ್ರತಿಯೊಂದನ್ನೂ ಮಂತ್ರದಿಂದ ಅರ್ಪಿಸತಕ್ಕದ್ದು. ಅಂಗದೇವತೆಗಳಿಗೆ ನಾಮಮಂತ್ರದಿಂದ ಅರ್ಪಿಸತಕ್ಕದ್ದು. ಆಮೇಲೆ ಮಹಾನೈವೇದ್ಯ ಆರತಿ ಮಾಡಿ “ಮಣಿವಿದ್ರುಮಮಾಲಾಭಿ: ಮಂದಾರಕುಸುಮಾದಿಭಿ: ಇಯಂಸಾಂವತ್ಸರೀಪೂಜಾತವಾಸ್ತು ಗರುಡಧ್ವಜ ವನಮಾಲಾಂ ಯಥಾದೇವ ಕೌಸ್ತುಭಂ ಸತತಂ ಹೃರಿತದ್ವತ್ವಮಿತ್ರ ತಂತೂಂದ್ರಂ ಪೂಜಾಂಚ ಹೃದಯವಹ||೨|| ಜಾನತಾಜಾನತಾವಾಪಿ ಯತ್ತಂನತ ವಾರ್ಚನಂ ಕೇನಚಿದ್ವಿ ದೋಷೇಣ ಪರಿಪೂರ್ಣಂತರನ್ನು ಮ||೩|| ಅಪರಾಧ ಸಹಸ್ರಾಣಿ ಕ್ರಿಯಂತೇsಹರ್ನಿಶಂ ಮಯಾ| ದಾಸೋsಯ ಮಿಮಾಂ ಮಾಮ ಪರಮೇಶ್ವರ ||೪||ಮಂತ್ರವೇನು ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ! ಮತ್ತೂಜಿತಂ ಮಯಾದೇವ ಪರಿಪೂರ್ಣಂ ತದಸ್ತುಮೇ||” ಹೀಗೆ ಪ್ರಾರ್ಥನೆ ಮಾಡತಕ್ಕದ್ದು. ಆಯಾಯ ದೇವತೆಗಳಿಗನುಸಾರ ಪ್ರಾರ್ಥನಾಶ್ಲೋಕಗಳಲ್ಲಿ ಸ್ವಲ್ಪ ಬದಲಾವಣೆಮಾಡಿಕೊಳ್ಳಬೇಕು. “ಗರುಡಧ್ವಜ ಈ ಸ್ಥಾನದಲ್ಲಿ ಶಿವನಿಗಾದರ"ವೃಷವಾಹನ” ಎಂದು ಹೇಳತಕ್ಕದ್ದು. ವನಮಾಲಾಪ್ರಾರ್ಥನೆಯು ವಿಷ್ಣುವಿಗೆ ಮಾತ್ರ ಉಪಯುಕ್ತವು. ದೇವಿಯಲ್ಲಾದರೆ “ದೇವದೇವಸುರೇಶ್ವರ” ಈ ಸ್ಥಾನದಲ್ಲಿ “ದೇವಿದೇವಿಸುರೇಶ್ವರಿ” ಹೀಗೆ ಹೇಳುವದು. ಉಳಿದದ್ದೆಲ್ಲ ಸಮಾನವಾದದ್ದೇ. ನಂತರ ಗುರುವನ್ನು ಪೂಜಿಸಿ ಪವಿತ್ರವನ್ನು ಕೊಟ್ಟು ಉಳಿದ ಬ್ರಾಹ್ಮಣರಿಗೂ ಸುವಾಸಿನಿಯರಿಗೂ ಬೇರೆ ಬೇರೆಯಾಗಿ ಕೊಟ್ಟು ತಾನೂ ಸಕುಟುಂಬನಾಗಿ ಧರಿಸತಕ್ಕದ್ದು. ಆಮೇಲೆ ಬ್ರಾಹ್ಮಣರಿಂದ ಕೂಡಿ ಭೋಜನ ಮಾಡುವುದು, ಮೂರು ರಾತ್ರಿ ಬ್ರಹ್ಮಚರ್ಯಾದಿ ನಿಯಮಗಳನ್ನು ಪಾಲಿಸತಕ್ಕದ್ದು. ಹಾಗೂ ಪವಿತ್ರಧಾರಣ ಮಾಡಿಸುವದು. ನಿತ್ಯದೇವರ ಸ್ನಾನಾದಿ ಉಪಚಾರಮಾಡುವಾಗ ಪವಿತ್ರಗಳನ್ನು ತೆಗೆದಿರಿಸಿಕೊಂಡು ಸ್ನಾನಾದಿಗಳಾದ ನಂತರ ಪುನಃ ತೊಡಿಸುವದು. ಮೂರು ರಾತ್ರಿಯ ಕೊನೆಯಲ್ಲಿ ದೇವರನ್ನು ಪೂಜಿಸಿ ಪವಿತ್ರಗಳನ್ನು ವಿಸರ್ಜಿಸುವದು. ಶಿವಾದಿಪವಿತ್ರಾರೋಪಣದಲ್ಲಿ ಪೂರ್ವವಿದ್ಧವಾದ ಚತುರ್ದಶಿಯು ಗ್ರಾಹ್ಮವು. 20 ಧರ್ಮಸಿಂಧು ಇದರಂತೆ ಹುಣ್ಣಿವೆಯಾದರೂ ತ್ರಿಮುಹೂರ್ತ ಸಾಯಾಹ್ನ ವ್ಯಾಪ್ತವಾದ ಚತುರ್ದಶೀ ವಿದ್ಧವಾದದ್ದೇ ಗ್ರಾಹ್ಯವು, ಅಷ್ಟಮ್ಯಾದಿ ಬೇರೆ ತಿಥಿಗಳಾದರೂ ಈ ವಿಷಯದಲ್ಲಿ ಪ್ರಥಮಪರಿಚ್ಛೇದದಲ್ಲಿ ಹೇಳಿದಂತೆ ಸಾಮಾನ್ಯ ತಿಥಿನಿರ್ಣಯಾನುಸಾರ ಗ್ರಾಹ್ಯಗಳು. ಹೀಗೆ ಪವಿತ್ರಾರೋಪಣ ವಿಧಾನವು. ಉಪಾಕರ್ಮ- ಕಾಲನಿರ್ಣಯ ಋಗ್ವದಿಗಳಿಗೆ ಶ್ರಾವಣ ಶುಕ್ಲಪಕ್ಷದಲ್ಲಿ ಶ್ರವಣನಕ್ಷತ್ರ, ಪಂಚಮೀ, ಹಸ್ತನಕ್ಷತ್ರ, ಈ ಮೂರುಕಾಲಗಳು ಹೇಳಲ್ಪಟ್ಟಿವೆ. ಇವುಗಳಲ್ಲಿ “ಶ್ರವಣ"ವು ಮುಖ್ಯವು. ಅದು ಅಸಂಭವವಾದಲ್ಲಿ ಪಂಚಮ್ಮಾದಿ ಕಾಲಗಳು ಗ್ರಾಹ್ಯಗಳು, ಕಾಲತತ್ವವಿವೇಚನ ಗ್ರಂಥದ ಸಂಗ್ರಹಕಾರಿಕೆಯಲ್ಲಿ ಹುಣ್ಣಿವೆ ಶ್ರವಣಗಳು ಕೂಡಿದಾಗ ಅದು ಸಂಕ್ರಾಂತ್ಯಾದಿಗಳಿಂದ ಯುಕ್ತವಾದಾಗ ಯಜುರ್ವೇದಿಗಳೂ ಋಗ್ವದಿಗಳೂ ಉಪಾಕರ್ಮ ಮಾಡತಕ್ಕದ್ದು. ಅದರಲ್ಲಿ ಅಸಂಭವವಾದರೆ ಹಸ್ತ ಪಂಚಮಿ, ಅಥವಾ ಕೇವಲ ಹಸ್ತ, ಕೇವಲ ಪಂಚಮಿಯಲ್ಲಾದರೂ ಮಾಡತಕ್ಕದ್ದು ಎಂದು ಹೇಳಿದೆ. ಎರಡುದಿನ ಶ್ರವಣಯೋಗವಿದ್ದಲ್ಲಿ ಹಿಂದಿನ ಸೂರ್ಯೋದಯದಿಂದಾರಂಭಿಸಿ ವರದಿನ ಸೂರ್ಯೋದಯದ ನಂತರ ಮೂರು ಮುಹೂರ್ತವಿದ್ದರೆ ಆಗ ಪರದಿನದಲ್ಲೇ “ಉಪಾಕರ್ಮ ಮಾಡತಕ್ಕದ್ದು. ಯಾಕೆಂದರೆ “ಧನಿಷ್ಠಾಯೋಗ"ಕ್ಕೆ ಪ್ರಾಶಸ್ತ್ರವಿದೆ. ಅದೇ ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದರೆ ಪೂರ್ವದಿನವೇ ಗ್ರಾಹ್ಯವು. ಯಾಕೆಂದರೆ ಪೂರ್ವದಿನ ಸಂಪೂರ್ಣ ವ್ಯಾಪ್ತಿಯಾಗುತ್ತದೆ. ಪೂರ್ವದಿನ ಸೂರ್ಯೋದಯದಲ್ಲಿ ಇಲ್ಲವೆ ಪರದಿನದಲ್ಲಿ ಸೂರ್ಯೋದಯಾನಂತರ ದ್ವಿಮುಹೂರ್ತವಿದ್ದಲ್ಲಿ ಪರದಿನವೇ ಗ್ರಾಹ್ಯವಾಗುವದು. ಯಾಕೆಂದರೆ “ಉತ್ತರಾಷಾಢಾ” ವೇಧವು ನಿಷಿದ್ದವು. ಪರದಿನದಲ್ಲಿ ದ್ವಿಮುಹೂರ್ತಕ್ಕಿಂತ ಕಡಿಮೆಯಿದ್ದು ಪೂರ್ವದಿನ ಉತ್ತರಾಷಾಢಾ ವೇಧವಾದಲ್ಲಿ ಅದನ್ನು ಬಿಟ್ಟು ಪಂಚಮ್ಮಾದಿಕಾಲಗಳಲ್ಲಿ ಉಪಾಕರ್ಮವನ್ನು ಮಾಡತಕ್ಕದ್ದು. ಪಂಚಮೀ ಮತ್ತು ಹಸ್ತನಕ್ಷತ್ರ ಇವುಗಳು ಉದಯವ್ಯಾಪಿನಿಗಳಾಗಿ ಮೂರು ಮುಹೂರ್ತದ ವರೆಗಿದ್ದರೆ ಅದು ಮುಖ್ಯವು ಇಲ್ಲವಾದರೆ ಪೂರ್ವವಿದ್ಧವಾದರೂ ಆಗಬಹುದು. ಇದರಂತೆ ಭಾದ್ರಪದ ಶುಕ್ಲಪಕ್ಷದಲ್ಲಿಯೂ ಶ್ರವಣ ಪಂಚಮೀ ಹಸ್ತಗಳ ನಿರ್ಣಯವನ್ನು ತಿಳಿಯತಕ್ಕದ್ದು. ಋಗೈದಿಗಳು ಉಪಾಕರ್ಮವನ್ನು ಪೂರ್ವಾಹದಲ್ಲಿ ಮಾಡತಕ್ಕದ್ದು. ಯಜುರ್ವೇದೋಪಾಕರ್ಮ ನಿರ್ಣಯ ಋಗ್ವದಿಗಳಿಗೆ ಶ್ರವಣವು ಹೇಗೆ ಮುಖ್ಯವೋ ಯಜುರ್ವೆದಿಗಳಿಗೆ ಶ್ರಾವಣಪೂರ್ಣಿಮೆಯು ಮುಖ್ಯಕಾಲವು.. ಹುಣ್ಣಿವೆಯು ಖಂಡತಿಥಿಯಾದಲ್ಲಿ ಹುಣ್ಣಿವೆಯು ಮುಂಚಿನದಿನ ಮುಹೂರ್ತಾ ನಂತರ ಪ್ರವೃತ್ತವಾಗಿ ಮಾರನೇದಿನ ಆರುಮುಹೂರ್ತ (೧೨ ಘಟಿ) ವ್ಯಾಪಿಸಿದ್ದರೆ ಆಗ ಎಲ್ಲ ಯಜುರ್ವೇದಿಗಳಿಗೂ ಮುಂದಿನದೇ ಗ್ರಾಹ್ಯವು. ಶುದ್ಧಾಧಿಕಾ(೬೦ ಆಗಿ ಮಿಕ್ಕಿದ್ದು) ಕಾರಣದಿಂದ ಎರಡುದಿನಗಳಲ್ಲಿಯೂ ಸೂರ್ಯೋದಯ ವ್ಯಾಪಿನಿಯಾದರೆ ಎಲ್ಲ ಯಜುರ್ವೇದಿಯರಿಗೂ ಪೂರ್ವವೇ ಗ್ರಾಹ್ಯವು. ಪೂರ್ವದಿನ ಮುಹೂರ್ತಾದನಂತರ ಪ್ರವೃತ್ತವಾಗಿ ಪರದಿನ ಎರಡು ಅಥವಾ ಮೂರುಮುಹೂರ್ತ ವ್ಯಾಪ್ತವಾದರೆ (ಆರು ಮುಹೂರ್ತಕ್ಕಿಂತ ಕಡಿಮೆ ಇದ್ದರೂ) ತೈತ್ತಿರೀಯ ಶಾಖೆಯವರಿಗೆ ಪರವೇ ಗ್ರಾಹ್ಯವು. ತೈತ್ತಿರೀಯೇತರ ಯಾಜುಷರಿಗೆ ಪೂರ್ವವೇ ಗ್ರಾಹ್ಯವು. ಪೂರ್ವದಿನ ಮುಹೂರ್ತಾದನಂತರ ಪ್ರವೃತ್ತವಾಗಿ ಮಾರನೇದಿನ ಎರಡು ಪರಿಚ್ಛೇದ - ೨ 20 ಮುಹೂರ್ತಕ್ಕಿಂತ ಕಡಿಮೆಯಿದ್ದಲ್ಲಿ ಅಥವಾ ಕ್ಷಯವಶದಿಂದ ಇರದೇ ಹೋದರೆ ಆಗ ಸರ್ವಯಾಜುಷರಿಗೂ ಪೂರ್ವವೇ ಗ್ರಾಹ್ಮವು. ಹಿರಣ್ಯಕೇಶಿಯ ತೈತ್ತಿರೀಯರಿಗೆ ಶ್ರಾವಣ ಹುಣ್ಣಿವೆಯು ಮುಖ್ಯಕಾಲವು. ಅದರ ಅಸಂಭವದಲ್ಲಿ ಶ್ರಾವಣದಲ್ಲಿಯ ಹಸ್ತ ನಕ್ಷತ್ರವು ಗ್ರಾಹ್ಯವು ಶ್ರಾವಣ ಶುಕ್ಲ ಪಂಚಮಿಯು ಆಯಾಯ ಸೂತ್ರಗಳಲ್ಲಿ ಹೇಳದಿರುವದರಿಂದ ಇವರಿಗೆ ಗ್ರಾಹ್ಯವಲ್ಲ. ಈ ಎರಡು ಕಾಲಗಳು ಅಂದರೆ ಹುಣ್ಣಿವೆ, ಹಸ್ತನಕ್ಷತ್ರಗಳು ಗ್ರಾಹ್ಯಗಳು, ಭಾದ್ರಪದದಲ್ಲಿಯೂ ಇದೇ ನ್ಯಾಯವು. ಹೀಗೆ ಯಜುರ್ವೇದಿಗಳಿಗೆ ವಿಶೇಷವು. ಖಂಡ ತಿಥಿ ಬಂದಾಗ ಹೇಗೆ ನಿರ್ಣಯವೆಂಬುದನ್ನು ಹಿಂದೆಯೇ ಹೇಳಿದೆ. ಹಸ್ತನಕ್ಷತ್ರವಾದರೂ ಉದಯದಿಂದಾರಂಭಿಸಿ ಸಂಗವಕಾಲಸ್ಪರ್ಶಿಯಾದರೆ ಅದು ಗ್ರಾಹ್ಯವು ಇಲ್ಲವಾದರೆ ಪೂರ್ವವಿದ್ಧವಾದದ್ದೇ ಗ್ರಾಹ್ಯವು. ಆಪಸ್ತಂಬರಿಗೆ ವಿಶೇಷವೇನೆಂದರೆ ಶ್ರಾವಣ ಹುಣ್ಣಿವೆಯು ಮುಖ್ಯವು. ಅಭಾವದಲ್ಲಿ ಭಾದ್ರಪದ ಹುಣ್ಣಿವೆಯು ಬೌಧಾಯನರಿಗೆ ಶ್ರಾವಣ ಹುಣ್ಣಿವೆಯು ಮುಖ್ಯವು. ದೋಷ ಸಂಭವಿಸಿದಲ್ಲಿ ಆಷಾಢಹುಣ್ಣಿವೆ ಇದೇ ವಿಶೇಷವು. ಇವುಗಳ ವಿಷಯದಲ್ಲಾದರೂ ಖಂಡತಿಥಿನಿರ್ಣಯವು ಪೂರ್ವದಂತೆಯೇ ಕಾ ಮಾಧ್ಯಂದಿನ ಕಾತ್ಕಾಯನರಿಗೆ ಶ್ರಾವಣಯುಕ್ತ ಅಥವಾ ಕೇವಲ ಪೂರ್ಣಿಮಾ ಹಸ್ತಯುಕ್ತ ಅಥವಾ ಕೇವಲ ಪಂಚಮಿ ಇವು ಮುಖ್ಯ ಕಾಲಗಳು. ಆದ್ದರಿಂದ ಕೇವಲ ಶ್ರವಣದಲ್ಲಾಗಲೀ ಕೇವಲ ಹಸ್ತದಲ್ಲಾಗಲೀ ಮಾಡತಕ್ಕದಲ್ಲ. ಖಂಡ ತಿಥಿ ವಿಷಯದಲ್ಲಿ ಆರು ಮುಹೂರ್ತಕ್ಕಿಂತ ಹೆಚ್ಚಿಗಿದ್ದರೆ ಮುಂದಿನದು ಆರು ಮುಹೂರ್ತಕ್ಕೆ ಕಡಿಮೆಯಿದ್ದರೆ ಪೂರ್ವವು ಇತ್ಯಾದಿ ಹಿಂದೆ ಹೇಳಿದಂತೆ ನಿರ್ಣಯವು. ಸಾಮವೇದೋಪಾಕರ್ಮ ಸಾಮವೇದಿಗಳಿಗೆ ಭಾದ್ರಪದ ಶುಕ್ಲದಲ್ಲಿ ಹಸ್ತನಕ್ಷತ್ರವು ಮುಖ್ಯಕಾಲವು ಸಂಕ್ರಾಂತ್ಯಾದಿ ದೋಷಗಳಿಂದ ಅದರಲ್ಲಿ ಅಸಂಭವವಾದರೆ ಶ್ರಾವಣದಲ್ಲಿಯ ಹಸ್ತನಕ್ಷತ್ರವು ಗ್ರಾಹ್ಯವೆಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. ಅನ್ಯ ಕೆಲ ಗ್ರಂಥಕಾರರು ಭಾದ್ರಪದದಲ್ಲಿ ಹಸ್ತನಕ್ಷತ್ರವು ದೋಷಗ್ರಸ್ತವಾದರೆ ಶ್ರಾವಣ ಹುಣ್ಣಿವೆಯಲ್ಲಿ ಉಪಾಕರ್ಮಮಾಡಿ ಭಾದ್ರಪದ ಹಸ್ತನಕ್ಷತ್ರದ ವರೆಗೆ ವೇದಪಾಠವನ್ನು ಬಿಡತಕ್ಕದ್ದು. ಆಮೇಲೆ ಪಠಿಸತಕ್ಕದ್ದೆಂದು ಹೇಳುವರು. ಹಸ್ತನಕ್ಷತ್ರವು ಖಂಡವಾಗಿರುವಾಗ ಎರಡೂದಿನ ಅಪರಾಹ್ನ ಪೂರ್ಣವ್ಯಾಪ್ತಿಯಿದ್ದಲ್ಲಿ ಅಥವಾ ಅಪರಾಹ್ನ ಏಕದೇಶ ಸ್ಪರ್ಶವಾದಲ್ಲಿ ಪರದಿನದಲ್ಲೇ ಉಪಾಕರ್ಮವು. ಪೂರ್ವದಿನದಲ್ಲಿಯೇ ಪೂರ್ಣ ಅಪರಾಹ್ನವ್ಯಾಪ್ತಿಯಿದ್ದಲ್ಲಿ ಪೂರ್ವವೇ ಗ್ರಾಹ್ಯವು. ಸರ್ವತ್ರ ಸಾಮಶಾಖೆಯವರಿಗೆ ಉಪಾಕರ್ಮಕ್ಕೆ ಅಪರಾಹ್ನವು ಮುಖ್ಯಕಾಲವೆಂದು ಹೇಳಿದೆ. ಪೂರ್ವದಿನದಲ್ಲಿ ಅಪರಾಹ್ನದ ಏಕದೇಶವ್ಯಾಪ್ತಿಯಿದ್ದರೆ ಅಥವಾ ಎರಡೂದಿನ ಅಪರಾಹ್ನ ಸ್ಪರ್ಶವಿಲ್ಲದಿರುವಾಗ ಪರವೇ ಗ್ರಾಹ್ಯವು, ಕೆಲ ಸಾಮಗರಿಗೆ ಪ್ರಾತಃಕಾಲ ಅಥವಾ ಸಂಗವಕಾಲಗಳು ಮುಖ್ಯಕಾಲವೆಂದು ಹೇಳಿದೆ. ಅವರಿಗೆ ಪೂರ್ವದಿನದಲ್ಲಿಯ ಅಪರಾಹ್ನವ್ಯಾಪ್ತಿಯನ್ನು ಬಿಟ್ಟು ಪರದಿನದಲ್ಲಿ ಸಂಗವಕ್ಕಿಂತ ಮುಂದಿರುವ ಹಸ್ತವೇ ಗ್ರಾಹ್ಯವು ಸಾಮಗರು, ಸೂರ್ಯನು ಸಿಂಹದಲ್ಲಿರುವಾಗ (ಸಿಂಹಮಾಸದಲ್ಲಿ) ಉಪಾಕರ್ಮಮಾಡತಕ್ಕದ್ದು - ಎಂಬ ವಿಧಾನವು, ಶ್ರಾವಣದಲ್ಲಿ ಹಸ್ತವಾಗಲೀ ಪೂರ್ಣಿಮೆಯಾಗಲೀ ಇವುಗಳಲ್ಲಿ ಯಾವದು ಸೂರ್ಯನು ಸಿಂಹಸ್ಥನಿರುವಾಗ ಪ್ರಾಪ್ತವಾಗುವದೋ ಆಗ ಅದರಲ್ಲಿ ೭೨ ಧರ್ಮಸಿಂಧು ಉಪಾಕರ್ಮ ಮಾಡತಕ್ಕದ್ದು. ಸಿಂಹ ಶ್ರಾವಣದಲ್ಲಿ ಹಸ್ತ ಬಂದರೆ ಅದರಲ್ಲಿ ಅಥವಾ ಹುಣ್ಣಿವ ಸಿಕ್ಕಿದಲ್ಲಿ ಅದರಲ್ಲಿ ಮಾಡತಕ್ಕದ್ದು. ಎಂದು ಹಸ್ತ ಪೂರ್ಣಿಮಗಳಿಗೆ ವ್ಯವಸ್ಥೆ ಹೇಳಿದಂತಾಗಿದೆ. ಅನ್ಯಶಾಖೆಯವರಿಗೆ ಸಿಂಹಸ್ಥ ರವಿಯ ವಿಧಿನಿಷೇಧಗಳಿರುವದಿಲ್ಲ. ಅಥರ್ವವೇದಿಗಳಿಗೆ ಶ್ರಾವಣ ಅಥವಾ ಭಾದ್ರಪದ ಹುಣ್ಣಿವೆಯಲ್ಲಿ ಉಪಾಕರ್ಮವು. ತಿಥಿಖಂಡ ವಿಷಯದಲ್ಲಿ ಔದಯಿಕ ಸಂಗವ ಕಾಲವ್ಯಾಪಿನಿಯಾದ ತಿಥಿಯು ಗ್ರಾಹ್ಯವು. ಇನ್ನು ಸರ್ವಸಾಧಾರಣ ನಿರ್ಣಯವು ಹೀಗಿದೆ:- ಎಲ್ಲ ಶಾಖೆಗಳಿಗೆ ಶ್ರಾವಣ ಭಾದ್ರಪದ ಮಾಸಗತವಾದ ತಮ್ಮ ತಮ್ಮ ಗೃಹ್ಯಸೂತ್ರಗಳಲ್ಲಿ ಹೇಳಿದ ಕಾಲಗಳಲ್ಲಿ ಗ್ರಹಣ, ಸಂಕ್ರಾಂತಿ, ಆಶೌಚಾದಿ ದೋಷ, ಸಂಭವಿಸಿದಲ್ಲಿ ಸರ್ವಥಾ ಕರ್ಮಲೋಪವಾಗುವ ಪ್ರಸಂಗದಲ್ಲಿ ಬೇರೆ ಶಾಖೆಯವರಿಗೆ ಹೇಳಿದ ಕಾಲಗಳನ್ನು ಅವಶ್ಯವಾಗಿ ಸ್ವೀಕರಿಸತಕ್ಕದ್ದು. ಆಪಸ್ತಂಬ ಬೌಧಾಯನ ಸಾಮಗಾದಿಗಳು ಶ್ರಾವಣ ಭಾದ್ರಪದ ಗತವಾದ ಪಂಚಮೀ ಹುಣ್ಣಿವೆ ಮೊದಲಾದವುಗಳನ್ನು ಸಾಮಾನ್ಯವಾಗಿ ಸ್ವೀಕರಿಸುವ ಪ್ರಸಂಗದಲ್ಲಿ ನರ್ಮದಾನದಿಯ ಉತ್ತರಪ್ರದೇಶದವರು ಸೂರ್ಯನು ಸಿಂಹಗತನಾದಾಗ (ಸಿಂಹ ತಿಂಗಳಿರುವ) ಪಂಚಮ್ಮಾದಿಗಳನ್ನು ಸ್ವೀಕರಿಸತಕ್ಕದ್ದು. ನರ್ಮದಾ ನದಿಯ ದಕ್ಷಿಣದಲ್ಲಿರುವವರು ಸೂರ್ಯನು ಕರ್ಕಗತನಾದಾಗ (ಕರ್ಕ ತಿಂಗಳಿರುವ) ಶ್ರಾವಣಪಂಚಮ್ಯಾದಿಗಳನ್ನು ಸ್ವೀಕರಿಸುವದು. ಹೀಗೆ ಸಿಂಹ-ಕರ್ಕ ತಿಂಗಳುಗಳಿಗೆ ವ್ಯವಸ್ಥೆಯೆಂದು “ಕೌಸ್ತುಭ"ದಲ್ಲಿ ಹೇಳಿದೆ. ಅದರಿಂದ ಋಗ್ವದಿಗಳಿಗಾದರೂ ಸರ್ವಥಾ ಕರ್ಮಲೋಪ ಪ್ರಸಂಗವಾದಾಗ ಹುಣ್ಣಿವೆಯೂ ಸಹ ರವಿಯ ಸಿಂಹಸ್ಥ, ಕರ್ಕಸ್ಥ ಮೊದಲಾದ ವ್ಯವಸ್ಥೆಯಿಂದ ಗ್ರಾಹ್ಯವು, ಕರ್ಕಶ್ರಾವಣದಲ್ಲಿ ಬಂದದ್ದು ನಿಷಿದ್ಧವೆಂದರ್ಥ, ಎಂದು ನನಗೆ ತೋರುತ್ತದೆ. ಮಳೆಯ ತೊಂದರೆಯಿಂದಾಗಿ ಅಥವಾ ವನಸ್ಪತಿಗಳ ಪ್ರಾದುರ್ಭಾವವಾಗದಿದ್ದಲ್ಲಿ ಇಲ್ಲವೆ ಅಶೌಚಾದಿ ಪ್ರತಿಬಂಧಕದಿಂದಾಗಿ ಮುಖ್ಯ ಕಾಲವಾದ ಶ್ರಾವಣಮಾಸದಲ್ಲಿ ಅಸಂಭವವಾದಲ್ಲಿ ಎಲ್ಲ ಶಾಖೆಯವರೂ ಭಾದ್ರಪದ-ಶ್ರವಣಾದಿಗಳಲ್ಲಿ ಮಾಡತಕ್ಕದ್ದು. ವನೌಷಧಿ ಪಾದುರ್ಭಾವವಾಗದಿದ್ದರೂ ಶ್ರಾವಣಮಾಸದಲ್ಲಿ ಮಾಡತಕ್ಕದ್ದೆಂದು “ಕರ್ಕಾಚಾರ್ಯಾ"ದಿಗಳ ಮತವು, ಎಲ್ಲ ಶಾಖೆಯವರಿಗೂ ಗೃಹೋಕ್ತ ಮುಖ್ಯಕಾಲವೆಂದು ನಿರ್ಣಿತವಾದ ದಿನದಲ್ಲಿ ಗ್ರಹಣ ಸಂಕ್ರಾಂತಿಗಳು ಪ್ರಾಪ್ತವಾದಲ್ಲಿ ಅದರಿಂದ ರಹಿತವಾದ ಪಂಚಮ್ಯಾದಿಗಳಲ್ಲಿ ಮಾಡತಕ್ಕದ್ದು, ಉಪಾಕರ್ಮಸಂಬಂಧವಾದ ಅಹೋರಾತ್ರಿಯಲ್ಲಿ ಅಂದರೆ ಬರುವ ಮಧ್ಯರಾತ್ರಿಗಿಂತ ಮುಂಚೆ ಎರಡು ಯಾಮ, ಕಳೆದ ಮಧ್ಯರಾತ್ರಿಯ ನಂತರದ ಎರಡು ಯಾಮ, ಅಂತೂ ಎಂಟು ಯಾಮಗಳೊಳಗೆ ಗ್ರಹಣ ಸಂಕ್ರಾಂತಿ ಯೋಗವಾಗುವಲ್ಲಿ ಕರ್ಮಕ್ಕೆ ಪ್ರತಿಬಂಧಕವಾಗುವದು. ಇವುಗಳೊಳಗಿನ ಶ್ರವಣನಕ್ಷತ್ರ ಅಥವಾ ಪೂರ್ಣಿಮೆಗೆ ಸ್ಪರ್ಶವಾಗಿದ್ದರೂ ಆ ಎಂಟು ಯಾಮಗಳೊಳಗೆ ಸ್ಪರ್ಶವಾದರೆ ಪ್ರತಿಬಂಧಕವಾಗುವದು ಎಂದರ್ಥ. ಇನ್ನು ಕೆಲವರು ಈ ಎಂಟು ಯಾಮಗಳ ಹೊರತಾಗಿ ಅಂದರೆ ಈ ಎಂಟು ಯಾಮಗಳ ಹಿಂದೆ ಅಥವಾ ಮುಂದೆ ಇರುವ ಗ್ರಾಹ್ಯವಾದ ಶ್ರವಣ ನಕ್ಷತ್ರ ಅಥವಾ ಪೂರ್ವಾದಿ ತಿಥಿಗಳಿಗೆ ಸ್ಪರ್ಶವಾಗಿದ್ದರೂ ಅದು “ದೂಷಕ"ವಾಗುವದನ್ನುವರು. ನೂತನೋಪನೀತರ ಪ್ರಥಮೋಪಾಕರ್ಮವನ್ನು ಗುರುಶುಕ್ರಾಸ್ತಾದಿಗಳಲ್ಲಿ ಅಥವಾ ಮಲಮಾಸಾದಿಗಳಲ್ಲಿ, ಗುರುವು ಸಿಂಹರಾಶಿಯಲ್ಲಿರುವಾಗ ಮಾಡತಕ್ಕದ್ದಲ್ಲ. ದ್ವಿತೀಯಾದಿ ಉಪಾಕರ್ಮವನ್ನು ಮಾಡಲಡ್ಡಿಯಿಲ್ಲ. ಆದರೆ ಮಲಮಾಸದಲ್ಲಿ ಪರಿಚ್ಛೇದ - ೨ za ದ್ವಿತೀಯಾದಿ ಉಪಾಕರ್ಮವನ್ನೂ ಮಾಡತಕ್ಕದ್ದಲ್ಲ. ಪ್ರಥಮೋಪಾಕರ್ಮವನ್ನು ಪುಣ್ಯಾಹ ನಾಂದೀಪೂರ್ವಕವಾಗಿ ಮಾಡತಕ್ಕದ್ದು. ನೂತನೋಪನೀತರಾದವರಿಗೆ ಶ್ರಾವಣಮಾಸಗತವಾದ ಪಂಚಮೀ-ಶ್ರವಣಾದಿ ಕಾಲಗಳಲ್ಲಿ ಗುರು ಶುಕ್ರಾಸ್ತಾದಿಗಳು ಪ್ರಾಪ್ತವಾಗಿ ಉಪಾಕರ್ಮಕ್ಕೆ ಪ್ರತಿಬಂಧಕವಾದರೆ ಭಾದ್ರವದ ಪಂಚಮೀ-ಶ್ರವಣಾದಿಗಳಲ್ಲಿ ಮಾಡತಕ್ಕದ್ದು. ಬ್ರಹ್ಮಚಾರಿಯಾದವನು ಪ್ರತಿವರ್ಷದ ಉಪಾಕರ್ಮದಲ್ಲಿ ಮೌಂಜೀ ಯಜ್ಞಪವೀತ ಹೊಸದಂಡ, ಅಜಿನ, ಕಟಿಸೂತ್ರ, ನೂತನವಸ್ತ್ರ ಇವುಗಳನ್ನು ಧರಿಸತಕ್ಕದ್ದು. ಹೀಗೆ ಬ್ರಹ್ಮಚಾರಿಗೆ ವಿಶೇಷ ಹೇಳಿದೆ. ಉಪಾಕರ್ಮ ಉತ್ಸರ್ಜನಗಳನ್ನು ಬ್ರಹ್ಮಚಾರಿ, ಸ್ನಾತಕ, ಗೃಹಸ್ಥ ವಾನಪ್ರಸ್ಥ ಇವರೆಲ್ಲರೂ ಮಾಡತಕ್ಕದ್ದು. ಉತ್ಸರ್ಜನ ಕಾಲವನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸುವದಿಲ್ಲ. “ಉಪಾಕರ್ಮ ದಿನೇಥವಾ"ಎಂಬ ವಚನದಂತೆ ಎಲ್ಲ ಶಿಷ್ಟರೂ ಉಪಾಕರ್ಮ ದಿನದಲ್ಲಿಯೇ ಉತ್ಸರ್ಜನ ಕರ್ಮವನ್ನು ಆಚರಿಸುವದರಿಂದ ಅದರ ನಿರ್ಣಯದ ಅವಶ್ಯಕತೆ ಕಾಣುವದಿಲ್ಲ, ಉಪಾಕರ್ಮೋತ್ಸರ್ಜನಗಳನ್ನು ಬೇರೆ ಬ್ರಾಹ್ಮಣರಿಂದ ಕೂಡಿಮಾಡುವಲ್ಲಿ “ಲೌಕಿಕಾಗ್ನಿಯಲ್ಲಿ ಮಾಡತಕ್ಕದ್ದು ತಾನೊಬ್ಬನೇ ಮಾಡುವದಿದ್ದರೆ ತನ್ನ ಗೃಹ್ಯಾಗ್ನಿಯಲ್ಲಿ ಮಾಡತಕ್ಕದ್ದು. ಕಾತ್ಯಾಯನರಾದರೋ ಔಪವಸಥ್ಯ” ಅಗ್ನಿಯಲ್ಲಿಯೇ ಹೋಮಿಸತಕ್ಕದ್ದು. “ಚತುರವತ್ತಿ"ಗಳಾದ ಬಹುಜನರಿಂದಕೂಡಿ ಉಪಾಕರ್ಮವನ್ನು ಮಾಡುವಾಗ ಯಾವನೊಬ್ಬ “ಪಂಚಾವತ್ತಿಯವನು ಪ್ರಾಪ್ತನಾದರೆ ಆ “ಪಂಚಾವತಿ"ಯವನಿಗನುಗುಣವಾಗಿಯೇ ಕರ್ಮವನ್ನು ಮಾಡತಕ್ಕದ್ದು. ಚತುರವತ್ತಿಗಳಿಗಾದರೂ “ಪ೦ಚಾವತ್ತಿತ್ವವನ್ನು ವಿಕಲ್ಪದಿಂದ ಹೇಳಿರುವ ಕಾರಣ ಚತುರವತ್ತಿಗಳಿಗೆ ಕರ್ಮವೈಗುಣ್ಯವಾಗುವಂತಿಲ್ಲ. ಉಪಾಕರ್ಮ ಮಾಡದಿದ್ದರೆ ದೋಷವುಂಟಾಗುವದರಿಂದ ಪ್ರತಿವರ್ಷ ಇದನ್ನು ಅವಶ್ಯ ಮಾಡತಕ್ಕದ್ದು, ನಿರ್ಣಯಸಿಂಧು ಮೊದಲಾದ ಕೆಲಗ್ರಂಥಗಳಲ್ಲಿ ಇದನ್ನು ಮಾಡದಿದ್ದಲ್ಲಿ ಪ್ರಾಜಾಪತ್ಯಕೃಚ್ಛ ಅಥವಾ ಉಪವಾಸರೂಪವಾದ ಪ್ರಾಯಶ್ಚಿತ್ತವನ್ನು ಹೇಳಿದೆ. ಇದು ನಿರ್ಣಯಸಿಂಧುವಿನ ಎಲ್ಲ ಪುಸ್ತಕಗಳಲ್ಲಿಲ್ಲ. ಉಪಾಕರ್ಮ ಉತ್ಸರ್ಜನಗಳೆರಡಲ್ಲಿಯೂ ಋಷಿಪೂಜೆಯನ್ನು ಹೇಳಿದೆ. ಆದರೆ ಋಷ್ಯಾದಿ ತರ್ಪಣಗಳನ್ನು ಮಾತ್ರ ಉತ್ಸರ್ಜನದಲ್ಲಿಯೇ ಮಾಡತಕ್ಕದ್ದು. ವಿವಾಹಾನಂತರದಲ್ಲಿ ತಿಲತರ್ಪಣದಲ್ಲಿ ದೋಷವಿಲ್ಲ. ಸಂಕಲ್ಪದಲ್ಲಿ ‘ಅಧೀತಾನಾಂಛಂದಸಾಂ ಆಪ್ಯಾಯನ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಉಪಾಕರ್ಮದಿನೇ ಆದ ಉತ್ಸರ್ಜನಾಖ್ಯಂ ಕರ್ಮ ಕರಿಷ್ಯ ಹೀಗೆ ಉತ್ಸರ್ಜನ ಸಂಕಲ್ಪವು, ಉಪಾಕರ್ಮದಲ್ಲಿ ‘ಅಧೀತಾನಾಂ ಅಧೈಷ್ಯಮಾಣಾನಾಂ ಛಂದಸಾಂ ಯಾತಿಯಾಮತಾನಿರಾಸೇನಾಪ್ಯಾಯ ನಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ"ಹೀಗೆ ಸಂಕಲ್ಪವಿಶೇಷವು. ಉಳಿದ ಎಲ್ಲ ವಿಶಿಷ್ಟ ಪ್ರಯೋಗವನ್ನು ತಮ್ಮ ಗೃಹ್ಯಸೂತ್ರಾನುಸಾರ ತಿಳಿಯತಕ್ಕದ್ದು, ಈ ಉಪಾಕರ್ಮ ವಿಷಯದಲ್ಲಿ ನದಿಗಳ ರಜೋದೋಷವಿಲ್ಲ. ಬ್ರಹ್ಮಾದಿ ದೇವತೆಗಳೂ, ಋಷಾದಿಗಳೂ ಜಲದಲ್ಲಿ ಸಾನ್ನಿಧ್ಯವನ್ನು ಹೊಂದಿರುವದರಿಂದ ಸ್ನಾನಮಾಡಿದರೆ ಸಕಲಪಾಪ ಕ್ಷಯವಾಗುವದು. ಋಷಿ ಪೂಜೆಯ ಸ್ಥಾನದಲ್ಲಿರುವ ಜಲದ ಸ್ಪರ್ಶ, ಪಾನಗಳಿಂದ ಸಮಸ್ತ ಇಷ್ಟಾರ್ಥ ಪ್ರಾಪ್ತಿಯಾಗುವದು. ಹೀಗೆ ಎಲ್ಲ ಶಾಖೆಯವರ ಉಪಾಕರ್ಮ ಸಾಧಾರಣ ನಿರ್ಣಯವು. ೭೪ : ಧರ್ಮಸಿಂಧು ರಕ್ಷಾಬಂಧಾದಿಗಳು ಇದೇ ಹುಣ್ಣಿವೆಯಲ್ಲಿ ಭದ್ರಾಕರಣ ರಹಿತವಾದಾಗ ಮತ್ತು ಉದಯದಿಂದ ತ್ರಿಮುಹೂರ್ತ ಹೆಚ್ಚಿರುವಾಗ ಅಪರಾಹ್ನ ಅಥವಾ ಪ್ರದೋಷಕಾಲದಲ್ಲಿ “ರಕ್ಷಾಬಂಧ"ವನ್ನು ಮಾಡತಕ್ಕದ್ದು. ಉದಯಕಾಲದ ನಂತರ ತ್ರಿಮುಹೂರ್ತಕ್ಕಿಂತ ಕಡಿಮೆಯಿದ್ದಲ್ಲಿ ಪೂರ್ವದಿನ ಭದ್ರಾದಿಗಳಿಂದ ರಹಿತವಾದ ಪ್ರದೋಷ ಮೊದಲಾದ ಕಾಲಗಳಲ್ಲಿ ಮಾಡತಕ್ಕದ್ದು. ಇದನ್ನು ಗ್ರಹಣ, ಸಂಕ್ರಾಂತಿ ದಿನದಲ್ಲಾದರೂ ಮಾಡಬಹುದು. ಇದಕ್ಕೆ “ಯೇನಬಬ ರಾಜಾ ದಾನವೇಂದ್ರ ಮಹಾಬಲಃ ತೇನತ್ವಾ ಮಭಿಬಾಮಿ ರಕ್ಷಮಾಚಲ ಮಾಚಲ” ಇದು ಮಂತ್ರವು. ಈ ಹುಣ್ಣಿವೆಯಲ್ಲಿಯೇ “ಹಯಗ್ರೀವ ಉತ್ಪತ್ತಿಯು”. ಈ ಹುಣ್ಣಿವೆಯು ಕುಲಧರ್ಮಾಚರಣೆ ಮಾಡುವಾಗ ಮೂರು ಮುಹೂರ್ತ ಸಾಯಾಹ್ನವ್ಯಾಪ್ತಿಯುಳ್ಳ ಹಾಗೂ ಪೂರ್ವವಿದ್ಧವಾದದ್ದು ಗ್ರಾಹ್ಯವು, ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದರೆ ಪರವೇ ಗ್ರಾಹ್ಯವು. ಇದೇ ಹುಣ್ಣಿವೆಯಲ್ಲಿ ಅಶ್ವಲಾಯನರಿಗೆ ಶ್ರವಣಾಕರ್ಮ ಮತ್ತು ಸರ್ಪಬಲಿಯನ್ನು ರಾತ್ರಿಯಲ್ಲಿ ಹೇಳಿದೆ. ತೈತ್ತಿರೀಯರಿಗಾದರೋ ಸರ್ಪಬಲಿಯೊಂದನ್ನೇ ಹೇಳಿದ. ಕಾತ್ಯಾಯನ ಮತ್ತು ಸಾಮಗರಿಗೆ ಶ್ರವಣಾಕರ್ಮ ಮತ್ತು ಸರ್ವಬಲಿಗಳನ್ನು ಹೇಳಿದೆ. ಹೀಗೆ ಎರಡೂ ಹೇಳಿದೆ. ಶ್ರವಣಾಕರ್ಮ, ಸರ್ಪಬಲಿ ಅಶ್ವಯುಜೀ ಪ್ರತ್ಯವರೋಹಣಾದಿ ಪಾಕಸಂಸ್ಥೆಗಳನ್ನು ಸ್ವಸ್ವಕಾಲಗಳಲ್ಲಾಚರಿಸಲಾಗದಿದ್ದರೆ “ಪ್ರಾಜಾಪತ್ಯ ಕೃಚ್ಛ” ಪ್ರಾಯಶ್ಚಿತ್ತ ಹೇಳಿದೆ. ಹೊರತು ಕಾಲಾಂತರದಲ್ಲಿ ಮಾಡಲು ಬರುವದಿಲ್ಲ. ಶ್ರವಣಾಕರ್ಮಾದಿ ಸಂಸ್ಥೆಗಳನ್ನು ಪತ್ನಿಯು ಋತುಮತಿಯಾದರೂ ಮಾಡತಕ್ಕದ್ದು. ಪ್ರಥಮಾರಂಭದಲ್ಲಿ ಮಾತ್ರ ಆಗುವದಿಲ್ಲ. ಇದರಲ್ಲಿ ಹುಣ್ಣಿವೆಯು ಅಸಮಯದಿಂದಾರಂಭಿಸಿ ಪ್ರವೃತ್ತಕರ್ಮಕಾಲವನ್ನು ವ್ಯಾಪಿಸಿದ್ದು ಅದು ಪೂರ್ವದಿನದಲ್ಲಿಯೇ ಆದರೆ ಅದೇ ಗ್ರಾಹ್ಯವು ಎರಡೂ ದಿನಗಳಲ್ಲಿ ಹಾಗಿದ್ದರೆ ಅಥವಾ ಹಾಗಿಲ್ಲದಿದ್ದರೆ ಪರವೇ ಗ್ರಾಹ್ಯವು. ಇವುಗಳ ಪ್ರಯೋಗವನ್ನು ತಮ್ಮ ಸೂತ್ರಾನುಸಾರವಾಗಿ ತಿಳಿಯತಕ್ಕದ್ದು. ಸಂಕಷ್ಟ ಚತುರ್ಥಿ ವ್ರತವನ್ನಾರಂಭಿಸುವವರು ಶ್ರಾವಣ ಕೃಷ್ಣ ಚತುರ್ಥಿಯಲ್ಲಿ ಪ್ರಾರಂಭಿಸತಕ್ಕದ್ದು. ಇದನ್ನು ಪ್ರತಿ ಕೃಷ್ಣ ಚತುರ್ಥಿಯಲ್ಲಿ ಜೀವಮಾನವಿಡೀ ಮಾಡಬಹುದು. ಅಥವಾ ಇಪ್ಪತ್ತೊಂದು ವರ್ಷ ಮಾಡಬಹುದು. ಇಲ್ಲವೇ ಒಂದು ವರ್ಷ ಪರ್ಯಂತವೂ ಮಾಡತಕ್ಕದ್ದು. ಅಸಮರ್ಥನಾದವನು ಪ್ರತಿವರ್ಷ ಶ್ರಾವಣಕೃಷ್ಣ ಚತುರ್ಥಿಯಲ್ಲಿ ಮಾಡತಕ್ಕದ್ದು, ಸಂಕಷ್ಟ ಚತುರ್ಥಿಯು ಚಂದ್ರೋದಯ ವ್ಯಾಪಿನಿಯಿರತಕ್ಕದ್ದೆಂದು ಪ್ರಥಮ ಪರಿಚ್ಛೇದದಲ್ಲಿಯೇ ಹೇಳಿದೆ. ಉದ್ಯಾಪನಸಹಿತವಾದ ವ್ರತಪ್ರಯೋಗವನ್ನು ಕೌಸ್ತುಭಾದಿ ಗ್ರಂಥಗಳಿಂದ ತಿಳಿಯತಕ್ಕದ್ದು. ಜನ್ಮಾಷ್ಟಮೀವ್ರತ ಇದರಲ್ಲಿ “ಶುದ್ಧಾಷ್ಟಮೀ” “ವಿದ್ದಾಷ್ಟಮೀ” ಎಂದು ಎರಡು ಭೇದವಿದೆ. ಹಗಲು ಅಥವಾ ರಾತ್ರಿಯಲ್ಲಿ ಸಪ್ತಮೀ ಯೋಗರಹಿತವಾಗಿ ಯಾವ ದಿನ ಎಷ್ಟರಮಟ್ಟಿಗೆ ಇರಬೇಕೋ ಅಷ್ಟು ಕಾಲ ಇರುವ ಅಷ್ಟಮಿಯು “ಶುದ್ಧಾಷ್ಟಮಿಯು.” ಹಗಲು ಅಥವಾ ರಾತ್ರಿಯಲ್ಲಿ ಸಪ್ತಮೀ ಯೋಗವುಳ್ಳದ್ದಾಗಿ ಇಡೀದಿನ ಎಷ್ಟು ಕಾಲ ಅಷ್ಟಮಿಯು ಇದೆಯೋ ಅಷ್ಟು ಕಾಲವಿರುವದು ಪರಿಚ್ಛೇದ - ೨ 29 “ವಿದ್ದಾಷ್ಟಮಿ"ಯು. ಇದರಲ್ಲಿ ಪುನಃ “ರೋಹಿಣಿಯುಕ್ತ, ರೋಹಿಣೀ ರಹಿತ” ಎಂದು ಎರಡು ಭೇದಗಳಾಗುತ್ತವೆ. ರೋಹಿಣಿರಹಿತ ಕೇವಲಾಷ್ಟಮೀಭೇದಗಳು ಹೀಗೆ ಎಂದರೆ ಸಪ್ತಮೀ ೫೯|೫೯ ಅಷ್ಟಮೀ ೫೮೦೫, ಇದು ಶುದ್ಧವಾದ್ದರಿಂದ ನಿರ್ಣಯದಲ್ಲಿ ಸಂದೇಹವಿಲ್ಲ. ಸಪ್ತಮೀ ೨೦ ಅಷ್ಟಮೀ ೫೫೦, ಇದು ವಿದ್ದಾ ಆದರೂ ಎರಡರಲ್ಲೊಂದು ದಿನ ಅಭಾವವಾಗುವದರಿಂದ ಸಂದೇಹಕ್ಕೆಡೆಯಿಲ್ಲ. ಎರಡು ದಿನ ಬಂದಿರುವ ಕೇವಲಾಷ್ಟಮಿಯಲ್ಲಿ ನಾಲ್ಕು ಪಕ್ಷಗಳಾಗುವವು. ಹಿಂದಿನ ದಿನ ನಿಶೀಥ ವ್ಯಾಪಿನೀ, ಮಾರನೇದಿನ ನಿಶೀಥವ್ಯಾಪಿನೀ-ಎರಡೂದಿನಗಳಲ್ಲಿ ನಿಶೀಥವ್ಯಾಪಿನೀ, ಎರಡೂದಿನಗಳಲ್ಲಿಯೂ ನಿಶೀಥವ್ಯಾಪ್ತಿಯಿಲ್ಲದಿರುವದು, ಹೀಗೆ ನಾಲ್ಕು ಪ್ರಕಾರಗಳಾಗುವವು. “ನಿಶೀಥ"ವೆಂದರೆ ರಾತ್ರಿ ಪ್ರಮಾಣದ “ಅರ್ಧ”. ಸ್ಕೂಲಮಾನದಿಂದ ಎಂಟನೇ ಮುಹೂರ್ತವು “ನಿಶೀಥ"ವು. ಪೂರ್ವದಿನ ನಿಶೀಥವ್ಯಾಪ್ತಿಯು ಹೀಗೇ -ಸಪ್ತಮಿ ೪೦lo। ಅಷ್ಟಮೀ ೪೨lol ಶುದ್ಧಾಧಿಕವಾಗಿ ಎರಡು ಅಷ್ಟಮಿಯಾದರೂ ಪೂರ್ವದ ಅಷ್ಟಮಿಯೇ ಗ್ರಾಹ್ಯವಾಗುವದು. ಹೇಗೆಂದರೆ ಅಷ್ಟಮೀ ಶುಕ್ರವಾರ ೬೦lol, ಮಾರನೇ ದಿನ ಅಷ್ಟಮೀ ಶನಿವಾರ ೪lol, ಇಲ್ಲಿ ಶುಕ್ರವಾರದಲ್ಲಿಯ ಪೂರ್ಣಾಷ್ಟಮಿಯು ಗ್ರಾಹ್ಯವೆಂಬುದು ಸ್ಪಷ್ಟ ಮಾರನೇದಿನ ನಿಶೀಥವ್ಯಾಪ್ತಿ ಎಂದರೆ ಸಪ್ತಮೀ ೪೭lol, ಅಷ್ಟಮೀ ೪೬lol, ಇಲ್ಲಿ ಪರವೇ ಗ್ರಾಹ್ಯವಾಗುವದು. ಇನ್ನು ಎರಡೂಕಡೆ ನಿಶೀಥವ್ಯಾಪ್ತಿಯೆಂದರೆ ಸಪ್ತಮೀ ೪೨lol, ಅಷ್ಟಮೀ ೪೬೦, ಇಲ್ಲಿಯೂ ಪರವೇ ಗ್ರಾಹ್ಯವು. ಎರಡೂ ಕಡೆಗಳಲ್ಲಿ ಎರಡೂದಿನ ನಿಶೀಥವ್ಯಾಪ್ತಿಯಿಲ್ಲದಿರುವಿಕೆಯು ಹೇಗಂದರೆ ಸಪ್ತಮೀ ೪೭lol, ಅಷ್ಟಮಿ ೪೨lol, ಇಲ್ಲಾದರೂ ಪರವೇಗ್ರಾಹ್ಯವು ಇಲ್ಲಿ ಸರ್ವತ್ರ ಸಪ್ತಮೀಯುಕ್ತಾಷ್ಟಮಿಯು ಸಪ್ತಮೀ ರಾತ್ರಿಯ ಪೂರ್ವಾರ್ಧದ ಅವಸಾನದಲ್ಲಿ ಒಂದು ಕಲಾ ಮಾತ್ರ ಅಷ್ಟಮಿಯು ಸ್ಪರ್ಶವಾದರೂ ನಿಶೀಥ್ವ್ಯಾಪಿನೀ ಎಂದಾಗುವದು. ಹೀಗೆ ನವಮೀಯುಕ್ತಾಷ್ಟಮಿಯ ರಾತ್ರಿಯ ಉತ್ತರಾರ್ಧದ ಆದಿಭಾಗದಲ್ಲಿ ಒಂದು ಕಲಾ ಮಾತ್ರ ಅಷ್ಟಮಿಯಿದ್ದರೂ ಎರಡನೇ ದಿನವೇ ನಿಶೀಥವ್ಯಾಪಿನಿ ಎಂದಾಗುವದು. ಸಪ್ತಮೀದಿನದ ಉತ್ತರಭಾಗದಲ್ಲಿ ಅಷ್ಟಮೀ ಬಂದಲ್ಲಿ ಮತ್ತು ನವಮೀಯುಕ್ತ ಅಷ್ಟಮೀರಾತ್ರಿಯ ಮೊದಲನೇ ಭಾಗದಲ್ಲಿ ಅಷ್ಟಮೀ ಇದ್ದರೂ ನಿಶೀಥವ್ಯಾಪ್ತಿಯಿಲ್ಲವೆಂದು ತಿಳಿಯತಕ್ಕದ್ದು, ಇದರಂತೆಯೇ ವ್ಯಾಪ್ತಿ ನಿಯಮವನ್ನು ರೋಹಿಣೀಯುಕ್ತ ಭೇದಗಳಲ್ಲಿಯೂ ತಿಳಿಯತಕ್ಕದ್ದು. ರೋಹಿಣೀಯುಕ್ತಾಷ್ಟಮೀ ಭೇದಗಳು- ಈ ವಿಷಯದಲ್ಲಾದರೂ ಪೂರ್ವದಿನದಲ್ಲಿಯೇ ನಿಶೀಥದಲ್ಲಿ ಅಷ್ಟಮಿ ರೋಹಿಣಿಗಳ ಯೋಗ, ಪರದಿನ ನಿಶೀಥದಲ್ಲಿ ಈ ಯೋಗ, ಎರಡೂದಿನ ನಿಶೀಥದಲ್ಲಿ ಯೋಗ ಹೀಗೆ ಮೂರು ಪಕ್ಷಗಳಾಗುವವು. ಪೂರ್ವದಿನದಲ್ಲಿಯೇ ನಿಶೀಥದಲ್ಲಿ ಅಷ್ಟಮೀ ರೋಹಿಣಿ ಯೋಗವೆಂದರೆ ಸಪ್ತಮೀ ೪೦lol, ಅದೇದಿನ ಕೃತ್ತಿಕ ೩೫lol, ಅಷ್ಟಮೀ ೪೬lol, ಆ ದಿನ ರೋಹಿಣಿ ೩೬lol, ಇಲ್ಲಿ ಪೂರ್ವವಾದ ಅಷ್ಟಮಿಯಲ್ಲೇ ಉಪೋಷವು ಪರದಿನದಲ್ಲಿಯೇ ನಿಶೀಥಯೋಗ ಹೇಗೆಂದರೆ- ಸಪ್ತಮೀ ೪೨lo। ಆ ದಿನ ಕೃತ್ತಿಕಾ ೫೦lol ಅಷ್ಟಮೀ ೪೭lol ರೋಹಿಣೀ ೪೬lol ಇಲ್ಲಿ ಪರಅಷ್ಟಮಿಯೇ ಗ್ರಾಹ್ಯವು, ದಿನದ್ವಯದಲ್ಲಿಯೂ ನಿಶೀಥದಲ್ಲಿ ಅಷ್ಟಮೀ-ರೋಹಿಣಿಗಳ ಯೋಗ ಹೇಗೆಂದರೆ ಸಪ್ತಮೀ ೪೨lo। ಕೃತ್ತಿಕಾ ೪೩lol ಧರ್ಮಸಿಂಧು ಅಷ್ಟಮೀ ೪೭೦| ರೋಹಿಣಿ ೪೮lol. ಇಲ್ಲಿಯೂ ಪರಅಷ್ಟಮಿಯೇ ಗ್ರಾಹ್ಯವು ಇನ್ನು ರೋಹಿಣೀಯುತ ಅಷ್ಟಮಿಯಲ್ಲಿಯೇ ಎರಡೂದಿನ ನಿಶೀಥದಲ್ಲಿ ರೋಹಿಣೀಯೋಗವಿಲ್ಲದಿರುವಿಕೆಯು ಹೆಚ್ಚಾಗಿ ಸಂಭವಿಸಬಹುದು. ಪರದಿನದಲ್ಲಿಯೇ ನಿಶೀಥವ್ಯಾಪಿನೀ ಅಷ್ಟಮಿಯಿದ್ದು, ಪರದಿನದಲ್ಲಿಯೇ ನಿಶೀಥಹೊರತಾದ ಕಾಲಗಳಲ್ಲಿ ರೋಹಿಣೀಯುಕ್ತವಾಗುವಿಕೆ ಇದೊಂದು ಪಕ್ಷ, ಹೇಗಂದರೆ ಸಪ್ತಮೀ ೪೭lo। ಅಷ್ಟಮೀ ೫೦lol ಅಷ್ಟಮೀ ದಿನ ಕೃತ್ತಿಕಾ ೪೬lol ಈ ಪಕ್ಷದಲ್ಲಿ ಪರವೇ ಗ್ರಾಹ್ಯವು. ಇದಕ್ಕೆ ಸಮಾನವಾದ ಯುಕ್ತಿಯಂತೆಯೇ ಪೂರ್ವದಿನದಲ್ಲಿಯೇ ಅರ್ಧರಾತ್ರವ್ಯಾಪಿನಿಯಾಗಿದ್ದು ಪೂರ್ವದಿನದಲ್ಲಿಯೇ ಅರ್ಧರಾತ್ರ ಕಾಲಕ್ಕೆ ಹೊರತಾದ ಕಾಲದಲ್ಲಿ ರೋಹಿಣೀಯುಕ್ತವಾದ ಈ ಪಕ್ಷದಲ್ಲಿ ಪೂರ್ವ ದಿನವೇ ಗ್ರಾಹ್ಯವಾಗುವದು. ದಿನದಯದಲ್ಲಿಯೂ ಅರ್ಧರಾತ್ರಕ್ಕೆ ಹೊರತಾದ ಕಾಲದಲ್ಲಿ ರೋಹಿಣಿಯುಕ್ತವಾಗಿ ಪರದಿನದಲ್ಲಿಯೇ ಅರ್ಧರಾತ್ರವ್ಯಾಪಿನಿಯಾಗಿರುವದಿದು ಎರಡನೇ ಪಕ್ಷವು, ಹೇಗೆಂದರೆ ಸಪ್ತಮೀ ೪೮lo| ತದ್ದಿನ ಕೃತ್ತಿಕಾ ೩೦lo। ಅಷ್ಟಮೀ ೪೮।೦| ರೋಹೀಣೀ ೨೫lo। ಇಲ್ಲಿ ಪರದಿನವೇ ಗ್ರಾಹ್ಯವು. ಎರಡೂ ದಿನ ಅರ್ಧರಾತ್ರ ಕಾಲಕ್ಕಿಂತ ಭಿನ್ನ ಕಾಲದಲ್ಲಿ ರೋಹಿಣೀಯುಕ್ತವಾಗಿ ಪೂರ್ವ ದಿನದಲ್ಲಿಯೇ ಅರ್ಧರಾತ್ರ ವ್ಯಾಪಿನಿ- ಇದು ಮೂರನೇ ಪಕ್ಷವು. ಹೇಗೆಂದರೆ ಸಪ್ತಮೀ ೨೫೦! ಕೃತೀಕಾ ೪೮lol, ಅಷ್ಟಮೀ ೨೦lol ರೋಹಿಣಿ ೪೩೦ ಇಲ್ಲಿಯೂ ಪರವೇ ಗ್ರಾಹ್ಯವು. ಇಲ್ಲಿ ರೋಹಿಣೀಯೋಗವು ಎರಡೂಕಡೆಯಲ್ಲಿ ಸಮವ್ಯಾಪ್ತವಾಗಿದ್ದರೂ ಸಪ್ತಮೀ ವೇಧವಿರುವದರಿಂದ ಪೂರ್ವವು ತ್ಯಾಜ್ಯವು. ಇನ್ನು ಅಷ್ಟಮೀ ೬olol ಅಷ್ಟಮೀ ೪lol ಕೃತ್ತಿಕಾ ೫olol ಇಲ್ಲಿ ಪೂರ್ವವೇ ಗ್ರಾಹ್ಯವಾಗುವದು. ಎರಡು ಅಹೋರಾತ್ರೆಗಳಲ್ಲಿ ರೋಹಿಣೀಯೋಗ ಸಾಮ್ಯವಿರುವದಾದರೂ ಪೂರ್ವದಿನ (೬೦ ಘಟಿಯಿರುವ ದಿನ) ಶುದ್ಧವಿರುವದರಿಂದ ಪೂರ್ಣವ್ಯಾಪ್ತಿಯಿರುವದರಿಂದಲೂ ಪೂರ್ವವೇ ಗ್ರಾಹ್ಯವು ಎರಡೂದಿನ ಅರ್ಧರಾತ್ರವ್ಯಾಪಿನಿಯಾಗಿ ಪರದಿನದಲ್ಲಿ ಮಾತ್ರ ಅರ್ಧರಾತ್ರ ಹೊರತಾದಕಾಲದಲ್ಲಿ ರೋಹಿಣೀಯುಕ್ತವಾಗಿರುವದಿದು ನಾಲ್ಕನೇ ಪಕ್ಷವು. ಹೇಗೆಂದರೆ ಸಪ್ತಮೀ ೪೩lol ಅಷ್ಟಮೀ ೪೯lol ಕೃತ್ತಿಕಾ ೪೬lol ಇಲ್ಲಿಯೂ ಪರಅಷ್ಟಮಿಯು ಗ್ರಾಹ್ಯವು. ಹೀಗೆ ದಿನದ್ವಯದಲ್ಲಿಯೂ ಅರ್ಧರಾತ್ರವ್ಯಾಪಿನಿಯಾಗಿ ಪೂರ್ವದಿನ ಅರ್ಧರಾತ್ರಕ್ಕೆ ಹೊರತಾದ ಕಾಲದಲ್ಲಿ ರೋಹಿಣೀಯುಕ್ತವಾದದ್ದು, ಇದು ಐದನೇ ಪಕ್ಷವು. ಹೇಗೆಂದರೆ ಸಪ್ತಮೀ ೪೧೦। ಆ ದಿನ ರೋಹಿಣೀ ೪೩lol ಅಷ್ಟಮೀ ೪೭lol ಇಲ್ಲಿ ಪೂರ್ವ ಅಷ್ಟಮಿಯೇ ಗ್ರಾಹ್ಯವು. ದಿನದ್ವಯದಲ್ಲಿಯೂ ಅರ್ಧರಾತ್ರವ್ಯಾಪಿನಿಯಿದ್ದು ಎರಡೂದಿನ ಅರ್ಧರಾತ್ರ ಹೊರತಾದ ಕಾಲದಲ್ಲಿ ರೋಹಿಣೀಯುಕ್ತವಾದರೆ ಇದು ಆರನೇ ಪಕ್ಷವು, ಹೇಗೆಂದರೆ ಸಪ್ತಮೀ ೪೨೦। ಕೃತ್ತಿಕಾ ೪೮।। ಅಷ್ಟಮೀ ೪೮lol ರೋಹಿಣೀ ೪೨lol ಇಲ್ಲಿ ಪರವೇ ಗ್ರಾಹ್ಯವು. ಇನ್ನು ದಿನದೃಯದಲ್ಲಿಯೂ ಅರ್ಧರಾತ್ರ ವ್ಯಾಪ್ತಿಯಿಲ್ಲದೆ ಪೂರ್ವದಿನದಲ್ಲಿಯೇ ಅರ್ಧರಾತ್ರ ಹೊರತಾದ ಕಾಲದಲ್ಲಿ ರೋಹಿಣೀಯೋಗದಲ್ಲಿ ಏಳನೇ ಪಕ್ಷವು. ಹೇಗೆಂದರೆ ಸಪ್ತಮೀ ೪೮lo! ತದ್ದಿನೇ ರೋಹಿಣಿ ೫೮lo! ಅಷ್ಟಮೀ ೪೨lol ಇಲ್ಲಿ ಪರ ಅಷ್ಟಮಿಯೇ ಉಪೋಷವು. ಇದೇ ಪಕ್ಷದಲ್ಲಿ ವರದಿನದಲ್ಲಿಯೇ ಅಂದರೆ ಸಪ್ತಮೀ ೪೮।ol ಅಷ್ಟಮೀ ೪೨೦| ತದ್ದಿನ ಕೃತ್ತಿಕಾ ೧೨೦। ಹೀಗಿದ್ದು ಅಥವಾ ಎರಡೂದಿನ ಸಪ್ತಮೀ ೪೮lo। ಕೃತ್ತಿಕಾ ೪೮lol ಅಷ್ಟಮೀ ೪೨lol ರೋಹಿಣೀ ೪೨lol ಹೀಗಿದ್ದು ಅರ್ಧರಾತ್ರ ಹೊರತಾದ ಕಾಲದಲ್ಲಿ ರೋಹಿಣೀಯುಕ್ತವಾದಲ್ಲಿ ಪರದಿನವೇ ಪರಿಚ್ಛೇದ - ೨ 2.2 ಗ್ರಾಹ್ಯವೆಂಬುದು ಸ್ವತಃಸಿದ್ಧವು. ಪೂರ್ವದಿನದಲ್ಲಿಯೇ ಅರ್ಧರಾತ್ರವ್ಯಾಪಿನಿಯಾಗಿ ಮಾರನೇದಿನ ಅರ್ಧರಾತ್ರ ಹೊರತಾದ ಕಾಲದಲ್ಲಿ ರೋಹಿಣಿಯುಕ್ತವಾದದ್ದು ಇದು ಎಂಟನೇ ಕೊನೆಯ ಪಕ್ಷವು, ಹೇಗೆಂದರೆ ಸಪ್ತಮೀ ೩olol ಅಷ್ಟಮೀ ೨೫೦ಗ ತದ್ದಿನ ಕೃತಿಕಾ ೫೦ ಅಥವಾ ಅಷ್ಟಮೀ ೬೦lo ಮಿಕ್ಕಿದ್ದು ೪೦. ಈ ವಿಶೇಷ ಅಷ್ಟಮೀ ದಿನದಲ್ಲಿ ಕೃತ್ತಿಕಾ ೧೦ ಈ ಎರಡು ಉದಾಹರಣೆಗಳಲ್ಲೂ ಪರವಾದ ಅಷ್ಟಮಿಯೇ ಗ್ರಾಹ್ಯವು. ಸ್ವಲ್ಪವಾದರೂ ರೋಹಿಣೀ ಯೋಗಕ್ಕೆ ಪ್ರಾಶಸ್ತ್ರವಿದೆ. ಆದ್ದರಿಂದ ಮುಹೂರ್ತಮಾತ್ರ ಉಳ್ಳದ್ದಾದರೂ ಪರವೇ ಗ್ರಾಹ್ಯವಾಗುವದು. ಮುಂಚಿನ ದಿನ ಇರುವ ಅರ್ಧರಾತ್ರವ್ಯಾಪ್ತಿಯನ್ನು ಆದರಿಸಬೇಕಾಗಿಲ್ಲ. ಎಲ್ಲ ಪಕ್ಷಗಳಲ್ಲಿಯೂ ವರದಿನದಲ್ಲಿ ಮುಹೂರ್ತಕ್ಕಿಂತ ಕಡಿಮೆಯಿದ್ದದ್ದು ಗ್ರಾಹ್ಯವಲ್ಲ. ಆಗ ಪೂರ್ವದಿನವೇ ಗ್ರಾಹ್ಯವಾಗುವದು, ಎಂದು “ಪುರುಷಾರ್ಥಚಿಂತಾಮಣಿಯಲ್ಲಿ ಹೇಳಿದೆ. ಪರದಿನದಲ್ಲಿಯೇ ನಿಥವ್ಯಾಪಿನಿಯಿದ್ದು ಪೂರ್ವದಿನದಲ್ಲಿ ನಿಶೀಥ ಹೊರತಾದ ಕಾಲದಲ್ಲಿ ರೋಹಿಣೀಯುಕ್ತ ಅಂದರೆ ಸಪ್ತಮೀ ೪೮o ರೋಹಿಣೀ ೫೫/೦ ಅಷ್ಟಮೀ ೪೮೦ ಹೀಗೆ ಇಲ್ಲಿ ಪರವೇ ಗ್ರಾಹ್ಯವು. ವಿದ್ದಾ ತಿಥಿಯಲ್ಲಿ ಅರ್ಧರಾತ್ರದ ನಂತರ ರೋಹಿಣೀಯೋಗವು ನಿರುಪಯುಕ್ತವು. ಜನ್ಮಾಷ್ಟಮೀ ನಿರ್ಣಯ ಸಂಗ್ರಹ ಇಲ್ಲಿ ವಿಸ್ತಾರವಾಗಿ ಹೇಳಿದ ಬಹುಪಕ್ಷಗಳ ಸಂಕ್ಷಿಪ್ತ ನಿರ್ಣಯ ಸಂಗ್ರಹವನ್ನು ಪುರುಷಾರ್ಥಚಿಂತಾಮಣಿಯಲ್ಲಿ ಹೇಳಿದೆ. ತಿಥಿಯು ಶುದ್ಧಸಮಾ ಆಗಿದ್ದರೆ ಅಥವಾ ಶುದ್ದ ತಿಥಿಯು ನ್ಯೂನವಾಗಿದ್ದರೆ ಅಥವಾ ವಿದ್ಧಾ ಸಮಾ ವಿದ್ದಾನೂನವಾಗಿದ್ದರೆ ಕೇವಲಾಷ್ಟಮಿಯ ವಿಷಯದಲ್ಲಿ ಸಂದೇಹವೇ ಇರುವದಿಲ್ಲ. ಶುದ್ಧಾಧಿಕಾ (೬೦ ಕ್ಕೆ ಮಿಕ್ಕಿದ್ದು) ಆದರೂ ಅಷ್ಟಮಿಯು ಪೂರ್ವ ಗ್ರಾಹ್ಯವಾಗುವದು. ವಿದ್ಯಾಧಿಕವಾದಲ್ಲಿ ಪೂರ್ವದಿನದಲ್ಲಿ ಅರ್ಧರಾತ್ರವ್ಯಾಪ್ತಿಯಿದ್ದರೆ ಪೂರ್ವದಿನದ್ವಯದಲ್ಲಿ ಅರ್ಧರಾತ್ರವ್ಯಾಪ್ತಿಯಿದ್ದರೂ ಅಥವಾ ಎರಡೂಕಡೆ ವ್ಯಾಪ್ತಿಯಿಲ್ಲದಿದ್ದರೂ ಪರದಿನವೇ ಗ್ರಾಹ್ಯವು. ಇನ್ನು ರೋಹಿಣೀಯೋಗದಲ್ಲಿ ಶುದ್ಧ ಸಮಾ ಅಥವಾ ಶುದ್ಧ ನ್ಯೂನಾ ಇವುಗಳಲ್ಲಿ ಅಲ್ಪರೋಹಿಣೀಯೋಗವಿದ್ದರೂ ಸಂದೇಹವಿಲ್ಲ. ಶುದ್ಧಾಧಿಕವಾದಾಗ ಪೂರ್ವದಿನದಲ್ಲಿ ಅಥವಾ ಎರಡೂದಿನಗಳಲ್ಲಿಯೂ ರೋಹಿಣೀಯೋಗವಾದಲ್ಲಿ ಪೂರ್ವವೇ ಗ್ರಾಹ್ಯವು. ಶುದ್ಧಾಧಿಕವಾದಾಗ ಮುಂದಿನ ದಿನ ರೋಹಿಣೀಯೋಗವಾದಲ್ಲಿ ಮುಹೂರ್ತಮಾತ್ರ ಯೋಗವಾದರೂ ಪರವೇ ಗ್ರಾಹ್ಯವು, ವಿದ್ದಾಧಿಕಾ ತಿಥಿಯಲ್ಲಿ ಪೂರ್ವದಿನದಲ್ಲಿಯೇ ಅರ್ಧರಾತ್ರಿಯ ಪೂರ್ವ ಅಥವಾ ಅರ್ಧರಾತ್ರದಲ್ಲಿ ರೋಹಿಣೀಯೋಗವಾದಲ್ಲಿ ಪೂರ್ವವೇ ಗ್ರಾಹ್ಯವು. ಎರಡೂ ದಿನಗಳಲ್ಲಿ ಅಥವಾ ಪರದಲ್ಲಿ ಅರ್ಧರಾತ್ರ ಅಥವಾ ಅರ್ಧರಾತ್ರವನ್ನು ಬಿಟ್ಟು ರೋಹಿಣೀಯೋಗವಾದಲ್ಲಿ ಪರವೇ ಗ್ರಾಹ್ಯವು, ಎಂದು ಸಂಕ್ಷೇಪವಾದ ನಿರ್ಣಯಸಂಗ್ರಹಿವಿದು. ಈ ವಿಷಯದಲ್ಲಿ ಮತಭೇದಗಳು ಕೆಲವರು ಕೇವಲ ಅಷ್ಟಮಿಯೇ ಜನ್ಮಾಷ್ಟಮಿಯು, ಅದೇ ರೋಹಿಣೀಯುಕ್ತವಾದರೆ ಜಯಂತೀ ಸಂಜ್ಜಿತವಾಗುವದು ಜಯಂತೀ-ಅಷ್ಟಮೀ ಒಂದೇ ವ್ರತವೆಂದು ಹೇಳುವರು. ಇನ್ನು ಕೆಲವರು ಜನ್ಮಾಷ್ಟಮೀವ್ರತ-ಜಯಂತೀವ್ರತ ಹೀಗೆ ಬೇರೆಯೆಂದು ಹೇಳುವರು. ರೋಹಿಣೀಯೋಗವಾಗದಿದ್ದಾಗ ಜಯಂತೀ ವ್ರತವು ಲುಪ್ತವೇ ಆಗಿ ಜನ್ಮಾಷ್ಟಮೀ ವ್ರತವನ್ನೇ ) ಧರ್ಮಸಿಂಧು ಮಾಡತಕ್ಕದ್ದು. ಯಾವ ವರ್ಷದಲ್ಲಿ ಜಯಂತೀಯೋಗವುಂಟಾಗಿ ಜನ್ಮಾಷ್ಟಮೀ ಇರುವ ಆಗ ಜಯಂತಿಯಲ್ಲಿ ಅಷ್ಟಮಿಯು ಅಂತರ್ಗತವಾಗಿದೆ ಎಂದು ತಿಳಿಯತಕ್ಕದ್ದೆಂದು ಹೇಳುವರು, ಜಯಂತೀದಿನದಲ್ಲಿ ಅರ್ಧರಾತ್ರ ಈ ಕರ್ಮಕಾಲದಲ್ಲಿ ಅಷ್ಟಮಿಯ ಅಭಾವವಿದ್ದರೂ ಸಾಕಲ್ಯವಚನದಂತೆ (ಯಾಂ ತಿಥಿಂ ಸಮನುಪ್ರಾಪ್ಯ ಇ) ಆಪಾದಿತವಾದ ಕರ್ಮಕಾಲವನ್ನು ಗ್ರಹಿಸಿ ಎರಡೂ ವ್ರತಗಳನ್ನು ಜಯಂತೀ ದಿನದಲ್ಲಿಯೇ ಸಮಾನ ತಂತ್ರವಾಗಿ ಮಾಡತಕ್ಕದ್ದು. ಎರಡೂ ವ್ರತಗಳು ನಿತ್ಯ ಹಾಗೂ ಕಾಮ್ಯರೂಪಗಳಾಗಿವೆ. ಮಾಡದಿದ್ದಲ್ಲಿ ಮಹಾದೋಷ, ಮಾಡಿದಲ್ಲಿ ವಿಶೇಷ ಫಲವಿದೆ. ಅರ್ಧರಾತ್ರ ವ್ಯಾಪ್ತಿಯುಳ್ಳ ಹಿಂದಿನದಿನ ಅಷ್ಟಮಿಯಲ್ಲಿ ಜನ್ಮಾಷ್ಟಮೀ ವ್ರತವನ್ನು ಮಾಡಿ ಜಯಂತೀದಿನ ಪಾರಣಮಾಡುವದು ಯುಕ್ತವಲ್ಲ. ನಿತ್ಯವ್ರತವನ್ನು ಲೋಪಮಾಡಿದಲ್ಲಿ ದೋಷ ಸಂಭವಿಸುವದೆಂದು ಹೇಳುವರು. ನಿರ್ಣಯಸಿಂಧುವಿನಲ್ಲಾದರೋ ಉಕ್ತರೀತಿಯಿಂದ “ಕಾಲಮಾಧವ"ಮತವನ್ನು ಪ್ರತಿಪಾದಿಸಿ ಹೇಮಾದ್ರಿ ಮತದಲ್ಲಿಯ “ಜನ್ಮಾಷ್ಟಮೀ ವ್ರತವೇ ನಿತ್ಯವು.” ಜಯಂತೀ ವ್ರತವು ನಿತ್ಯವಾದರೂ ಕಲಿಯುಗದಲ್ಲಿ ಲುಪ್ತಪ್ರಾಯವಾಗಿದ್ದು ಕೆಲವರು ಆಚರಿಸುವದಿಲ್ಲ. ಹೀಗೆ ಹೇಳಿ ಸ್ವಮತಾನುಸಾರ ಯಾವ ವರ್ಷದಲ್ಲಿ ಪೂರ್ವದಿನದಲ್ಲಿಯೇ ಅರ್ಧರಾತ್ರದಲ್ಲಿ ಅಷ್ಟಮಿಯಿದ್ದು ಪರದಿನದಲ್ಲಿ ಅರ್ಧರಾತ್ರ ಹೊರತಾದ ಕಾಲದಲ್ಲಿ ಜಯಂತೀವ್ರತವು ಪ್ರಾಪ್ತವಾಗುವದೋ ಆಗ ಎರಡೂದಿನ ಉಪವಾಸ ಮಾಡತಕ್ಕದ್ದು. ಆಚರಿಸದಿದ್ದಲ್ಲಿ ದೋಷ ಹೇಳಿರುವದರಿಂದ ಎರಡೂ ವ್ರತಗಳೂ ನಿತ್ಯಗಳು. ಜಯಂತಿಯಲ್ಲಿ ಅಷ್ಟಮಿಯ ಅಂತರ್ಭಾವ ಮಾಡುವದೆಂಬ ಹೇಳಿಕೆಯು ಮೂರ್ಖರನ್ನು ವಂಚಿಸುವದು ಮಾತ್ರವೆಂದು ಹೇಳಲ್ಪಟ್ಟಿದೆ. ನನಗಾದರೋ “ಕೌಸ್ತುಭಾದಿ” ಹೊಸದಾಗಿ ಗೃಹಿತವಾದ ಮಾಧವ ಮತದಪ್ರಕಾರ ಜಯಂತಿಯ ಅಂತರ್ಭಾವವಾಗಿಯೇ ಅಷ್ಟಮೀ ವ್ರತವನ್ನಾಚರಿಸತಕ್ಕದ್ದು ಯುಕ್ತವೆಂದು ತೋರುತ್ತದೆ. ಈ ವ್ರತದಲ್ಲಿ ಬುಧ-ಸೋಮವಾರ ಯೋಗವಾದರೆ ವಿಶೇಷ ಪ್ರಾಶಸ್ತ್ರ ಪ್ರಾಪ್ತವಾಗುವದು. ಆದರೆ ರೋಹಿಣಿಯಂತೆ ನಿರ್ಣಯಕ್ಕರ್ಹಗಳಲ್ಲ. (ವ್ರತಾರ್ಕದಲ್ಲಿ ರೋಹಿಣೀಯೋಗವೂ ಕೇವಲ ಫಲಾತಿಶಯಾರ್ಥಕವಾದದ್ದು. ನವಮೀ -ಬುಧವಾರ ಯೋಗಗಳಂತೆಯೇ ಎಂದು ಹೇಳಿದೆ.) ಪಾರಣಾ ಕಾಲವು ಉಪವಾಸದ ಮಾರನೇದಿನ ವ್ರತಾಂತ ಭೋಜನ ಮಾಡುವದು “ಪಾರಣೆ"ಯನ್ನಲ್ಪಡುವದು. ಅದರ ಕಾಲನಿರ್ಣಯ ಹೀಗಿದೆ ಕೇವಲ ತಿಥಿಯ ನಿಮಿತ್ತವಾದ ಉಪವಾಸವಾದರೆ ತಿಥಿಯ ಅಂತ್ಯದಲ್ಲಿ ಪಾರಣೆ ಮಾಡತಕ್ಕದ್ದು. ನಕ್ಷತ್ರಯುಕ್ತ ತಿಥುಪವಾಸವಾದರೆ ಎರಡರ ಅಂತ್ಯದಲ್ಲೂ ಪಾರಣೆ ಮಾಡತಕ್ಕದ್ದು. ತಿಥಿ ಅಥವಾ ನಕ್ಷತ್ರದ ಅಂತವು ಹಗಲಿನಲ್ಲಾದರೆ ಅಥವಾ ಎರಡರ ಅಂತ್ಯವು ರಾತ್ರಿಯಲ್ಲಾದರೆ ಆಗ ಹಗಲಿನಲ್ಲಾಗುವ ತಿಥಿಯ ಅಥವಾ ನಕ್ಷತ್ರದ ಅಂತ್ಯದಲ್ಲಿ ಪಾರಣೆಯಾಗತಕ್ಕದ್ದು. ಎರಡರ ಅಂತವೂ ಹಗಲಿನಲ್ಲಾಗದಿದ್ದರೆ ಮಧ್ಯರಾತ್ರಿಯ ಒಳಗೆ ಎರಡರಲ್ಲೊಂದರ ಅಂತ್ಯವಾದರೆ ಅಥವಾ ಎರಡರ ಅಂತ್ಯವೂ ಆದರೆ ಆಗ ಪಾರಣಮಾಡತಕ್ಕದ್ದು. ಇನ್ನು ಮಧ್ಯರಾತ್ರಿಗೆ ತೀರ ಹತ್ತಿರವಾದ ಕಾಲದಲ್ಲಿ ಒಂದರ ಅಥವಾ ಎರಡರ ಅಂತ್ಯವಾದಲ್ಲಿ ಆಗ ಮಧ್ಯರಾತ್ರಿಯಲ್ಲಾದರೂ ಪಾರಣಮಾಡಬಹುದು. ಆಗ ಭೋಜನ ಅಸಂಭವವಾದಲ್ಲಿ8 ಪರಿಚ್ಛೇದ - ೨ 26 ಫಲಾಹಾರ ಮಾಡತಕ್ಕದ್ದು. ಅದರಿಂದ ಪಾರಣೆಯು ಪೂರ್ತಿಯಾಗುವದು. ಕೆಲವರು ಹೇಳಿದ ಈ ವಿಷಯದಲ್ಲಿ ಅರ್ಧರಾತ್ರಿಯಲ್ಲಿ ಪಾರಣೆಯು ಕೂಡದು. ಉಪವಾಸದ ಮಾರನೇ ದಿನದ ಹಗಲಿನಲ್ಲಿ ಮಾಡತಕ್ಕದ್ದೆಂದು ಹೇಳುವರು. ಆದರೆ ಇದು ಯುಕ್ತವಲ್ಲ. ಅಶಕ್ತನಾದರೆ ಎರಡರೊಳಗೊಂದರ ಅಂತ್ಯವು ಲಭಿಸದಿದ್ದರೂ ಉತ್ಸವಾಂತ್ಯದಲ್ಲಿ ಪ್ರಾತಃಕಾಲ ದೇವಪೂಜಾ ವಿಸರ್ಜನಾದಿಗಳನ್ನು ಪೂರೈಸಿ ಪಾರಣಮಾಡತಕ್ಕದ್ದು. (ವ್ರತಾಂತ ವಾರಣಂ - ಇದು ಸಾಮಾನ್ಯ ನಿಯಮ) ಸಂಕ್ಷೇಪವಾಗಿ ವ್ರತವಿಧಿಯು ಪ್ರಾತಃಕಾಲದಲ್ಲಿ ನಿತ್ಯವಿಧಿಯನ್ನು ಮಾಡಿ ಪೂರ್ವಾಭಿಮುಖನಾಗಿ ದೇಶಕಾಲಾದಿಗಳನ್ನುಚ್ಚರಿಸಿಸಂಕಲ್ಪ ಕಾಲದಲ್ಲಿ ಸಪ್ತಮಿ ಇದ್ದರೂ ಪ್ರಧಾನ ಭೂತವಾದ ಅಷ್ಟಮಿಯನ್ನೇ ಉಚ್ಚರಿಸಿ " ಶ್ರೀ ಕೃಷ್ಣ ಪ್ರೀತ್ಯರ್ಥಂ ಜನ್ಮಾಷ್ಟಮೀ ವ್ರತಂ ಕರಿಷ್ಯ ಜಯಂತೀಯೋಗವಾದಲ್ಲಿ “ಜನ್ಮಾಷ್ಟಮೀವ್ರತಂ - ಜಯಂತೀವ್ರತಂ ಚ ತಂತ್ರಣ ಕರಿ ಹೀಗೆ ಸಂಕಲ್ಪಿಸತಕ್ಕದ್ದು. ತಾಮ್ರಪಾತ್ರದಲ್ಲಿ ಜಲವನ್ನು ತಕ್ಕೊಂಡು “ವಾಸುದೇವಂಸಮುದ್ದಿಶ್ಯ ಸರ್ವಪಾಪ ಪ್ರಶಾಂತಯೇ|ಉಪವಾಸಂ ಕರಿಷ್ಯಾಮಿ ಕೃಷ್ಣಾಷ್ಟಮ್ಯಾಂ ನಭಸ್ಯಹಂ||” ಅಶಕ್ತನಾದರೆ “ಫಲಾನಿಭಕ್ಷ್ಯಯಿಷ್ಕಾಮಿ” ಇತ್ಯಾದಿ ಊಹಿಸತಕ್ಕದ್ದು, “ಆ ಜನ್ಮ ಮರಣಂಯಾ ಮನ್ ಯನ್ಮಯಾ ದುಷ್ಕೃತಂ ಕೃತಂ ತತೃಣಾಶಯ ಗೋವಿಂದ ಪ್ರಸೀದ ಪುರುಷೋತ್ತಮ ||” ಹೀಗೆ ಉಚ್ಚರಿಸಿ ಪಾತ್ರೆಯಲ್ಲಿರುವ ಜಲವನ್ನು ಬಿಡತಕ್ಕದ್ದು. ಆಮೇಲೆ ಕೃಷ್ಣನ ಪ್ರತಿಮೆಯನ್ನು ಕುಲಾಚಾರದಂತ ನಿರ್ಮಿಸತಕ್ಕದ್ದು. ಸುವರ್ಣ ರಜತಾದಿಗಳಿಂದ ಮಾಡಬಹುದು. ಅಥವಾ ಮೃತ್ತಿಕೆಯಿಂದ ಮಾಡಬಹುದು. ಗೋಡೆ ಮೊದಲಾದವುಗಳಲ್ಲಿ ಪ್ರತಿಮೆಗಳನ್ನು ಚಿತ್ರಿಸಬಹುದು. ಮೂರ್ತಿಯ ಆಕೃತಿಯು ಹೇಗಿರಬೇಕೆಂದರೆ ಪೀಠದಲ್ಲಿ ಮಲಗಿರುವ ಶ್ರೀ ಕೃಷ್ಣ ಮೂರ್ತಿಯು ದೇವಕಿಯ ಸ್ತನಪಾನಮಾಡುವ ಆಕೃತಿಯಿರತಕ್ಕದ್ದು. ಲಕ್ಷ್ಮೀ ಪ್ರತಿಮೆಯು ದೇವಕಿಯ ಚರಣ ಸೇವೆಯಲ್ಲಿ ನಿರತಳಾದಂತೆ ಇರತಕ್ಕದ್ದು. ಜಯಂತಿಯೋಗವಿದ್ದರೆ ಮಲಗಿರುವ ದೇವಕಿಯ ತೊಡೆಯಲ್ಲಿ ಎರಡನೇ ಕೃಷ್ಣ ಪ್ರತಿಮೆಯನ್ನಿಡತಕ್ಕದ್ದು, ಗೋಡೆ ಮೊದಲಾದವುಗಳಲ್ಲಿ ಖಡ್ಗವನ್ನು ಹಿಡಿದಿರುವ ವಸುದೇವ- ನಂದಗೋಪೀ-ಗೋಪರನ್ನೂ ಬರೆದು ಬೇರೆ ಎಡೆಯಲ್ಲಿರುವ ಮಂಚದಲ್ಲಿ, ಹಡೆದಿರುವ ಕನ್ನಿಕೆಯಿಂದ ಕೂಡಿದ, ಯಶೋದೆಯ ಪ್ರತಿಮೆಯನ್ನೂ, ಬೇರೆ ಪೀಠದಲ್ಲಿ ವಸುದೇವ, ದೇವಕೀ, ನಂದಾ, ಯಶೋದಾ, ಶ್ರೀಕೃಷ್ಣ, ರಾಮ, ಚಂಡಿಕಾ ಹೀಗೆ ಏಳು ಪ್ರತಿಮೆಗಳನ್ನು ಸ್ಥಾಪಿಸುವದು. ಇಷ್ಟು ಪ್ರತಿಮೆಗಳನ್ನು ಮಾಡಲಸಮರ್ಥನಾದರೆ ವಸುದೇವಾದಿ-ಚಂಡಿಕಾಂತ ಏಳು ಪ್ರತಿಮೆಗಳನ್ನು ಕುಲಾಚಾರದಂತೆ ಯಥಾಶಕ್ತಿ ನಿರ್ಮಿಸತಕ್ಕದ್ದು. ಉಳಿದವುಗಳನ್ನೆಲ್ಲ ಯಥಾಶಕ್ತಿ ಯಥಾಯೋಗ್ಯವಾಗಿ ಧ್ಯಾನಿಸತಕ್ಕದ್ದೆಂದು ತೋರುತ್ತದೆ. ಮಧ್ಯರಾತ್ರಿಯ ಸ್ವಲ್ಪಮೊದಲಾಗಿ ಸ್ನಾನಮಾಡಿ “ಶ್ರೀಕೃಷ್ಣ ಪ್ರೀತ್ಯರ್ಥಂ ಸಪರಿವಾರ ಶ್ರೀಕೃಷ್ಣ ಪೂಜಾಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ನ್ಯಾಸ ಶಂಖಪೂಜಾದಿಗಳನ್ನು ನಿತ್ಯದಂತೆ ಮಾಡಿ “ಪರ್ಯಂಕಾಂ ಕಿನ್ನರಾಯುವಾಂಧ್ಯಾಯನ್ನು ದೇವಕೀ೦ಗೆ ಶ್ರೀಕೃಷ್ಣಂಬಾಲಕಂಧ್ಯಾಯೇತ್ ಪರ್ಯಂಕೇನಪಾಯಿನಂ ||೧|| ಶ್ರೀವತ್ಸವಕ್ಷ ಸಂಶಾಂತಂ ನೀಲೋತ್ಪಲದಲಚ್ಛವಿಂಗ್ ಸಂವಾಹಯಂತೀಂದೇವಾ: ಪಾಧ್ಯಾಯೇಚ್ಚ ತಾಂತ್ರಿಯಂ||೨|| ಹೀಗೆ ಧ್ಯಾನಮಾಡಿ “ದೇವಕ್ಕೆ ನಮ:” ಹೀಗೆಂದು ದೇವಕಿಯನ್ನಾವಾಹಿಸಿ ಮೂಲಮಂತ್ರ ಅಥವಾ ಪುರುಷಸೂಕ್ತ On ಧರ್ಮಸಿಂಧು ಮಂತ್ರದಿಂದ ಶ್ರೀ ಕೃಷ್ಣಾಯ ನಮಃ ಶ್ರೀ ಕೃಷ್ಣಮಾವಾಹಯಾಮಿ” ಹೀಗೆ ಆವಾಹನ ಮಾಡುವದು. ಆಮೇಲೆ ಲಕ್ಷ್ಮಿಯನ್ನೂ ಆವಾಹಿಸಿ “ದೇವೈನಮಃ ವಾಸುದೇವಾಯನಮ: ಯಶೋದಾಯನಮಃ ಕೃಷ್ಣಾಯನಮ: ರಾಮಾಯನಮಃ ಚಂಡಿಕಾಯ್ಕೆನಮಃ” ಹೀಗೆ ನಾಮಗಳಿಂದ ಆವಾಹಿಸಿ ಉಳಿದೆಲ್ಲ ದೇವತೆಗಳನ್ನೂ ಸಕಲಪರಿವಾರ ದೇವತಾಸ್ಕೋನಮಃ” ಇತ್ಯಾದಿನಾಮಮಂತ್ರ ಅಥವಾ ಸೂಕ್ತ ಮಂತ್ರಗಳಿಂದ ಆವಾಹನಾದ್ಯುಪಚಾರಗಳನ್ನು ಮಾಡತಕ್ಕದ್ದು. “ಆವಾಹಿತದೇವಕ್ಕಾದಿ ಪರಿವಾರ ದೇವತಾಸಹಿತ ‘ಶ್ರೀಕೃಷ್ಣಾಯನಮ:” ಹೀಗೆ ಆಸನ, ಪಾದ್ಯ, ಅರ್ಘ ಆಚಮನೀಯ, ಅಭ್ಯಂಗಸ್ನಾನಾದಿಗಳನ್ನರ್ಪಿಸಿ, ಪಂಚಾಮೃತಸ್ನಾನದ ನಂತರ, ಗಂಧವನ್ನು ಲೇಪಿಸುವದು. ಶುದ್ಧೋದಕಸ್ನಾನವಾದ ನಂತರ ವಸ್ತ್ರ, ಯಜ್ಞಪವೀತ, ಗಂಧ, ಪುಷ್ಪ, ಧೂಪ, ದೀಪ ಮೊದಲಾದವುಗಳನ್ನು “ವಿಶ್ವೇಶ್ವರಾಯವಿಶ್ಚಾಯ ತಥಾ ವಿಕ್ಟೋದ್ಭವಾಯಚ ವಿಶ್ವಸ್ಯ ಪತಯೇ ತುಭಂ ಗೋವಿಂದಾಯ ನಮೋನಮಃ||೧|| ಯಜೇಶ್ವರಾಯ ದೇವಾಯತಥಾಯ ಜೋದ್ಭವಾಯಚ ಯಜ್ಞಾನಾಂಪತಯೇನಾಥ ಗೋವಿಂದಾಯ ನಮೋನಮಃ||೨||” ಮೂಲಮಂತ್ರ ಸಹಿತವಾದ ಈ ಮಂತ್ರಗಳಿಂದ ನೈವೇದ್ಯವನ್ನು ಅರ್ಪಿಸುವದು. ಮತ್ತು ತಾಂಬೂಲಾದಿ ನಮಸ್ಕಾರಪ್ರದಕ್ಷಿಣಾ ಪುಷ್ಪಾಂಜಲಿವರೆಗೆ ಅರ್ಪಿಸುವದು. ಅದು ಹೇಗೆಂದರೆ ಹಿಂದೆ ಹೇಳಿದ ರೀತಿಯಿಂದ ಧ್ಯಾನ ಆವಾಹನಗಳನ್ನು ಮಾಡಿ “ದೇವಾ ಬ್ರಹ್ಮಾದಯೋಯೇನಸ್ವರೂಪಂನವಿದುಸ್ತವ ಅತಸ್ವಾಂಪೂಜಯಿಷ್ಕಾಮಿ ಮಾತುರುತ್ಸಂಗವಾಸಿನಂ ೧ll ಪುರುಷ ಏವೇದಗುಂ =ತಿರೋಹತಿ ಎಂದು ಆಸನವನ್ನು ಕೊಡತಕ್ಕದ್ದು. “ಅವತಾರಸಹಸ್ರಾಣಿಕರೋಸಿ ಮಧೂಸೂದನ ನತೇ ಸಂಖ್ಯಾವತಾರಾಣಾಂ ಕಜ್ಞಾನಾತಿ ತತ್ವತಃ||೨|| ಏತಾವಾನಸ್ಯ=ದಿವಿ” ಹೀಗೆ ಪಾದ್ಯವನ್ನು ಕೊಡತಕ್ಕದ್ದು. ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯಚ| ದೇವಾನಾಂ ಚ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಕೌರವಾಣಾಂ ವಿನಾಶಾಯ ಪಾಂಡವಾನಾಂಹಿತಾಯ ಚ ಗೃಹಸ್ಯಾಥ್ಯುಂ ಮಯಾದತ್ತಂ ದೇವಕ್ಯಾಸಹಿತೋ ಹರೇತ್ರಿಪಾದೂರ್ಧ್ವ ಅಭಿ” ಹೀಗೆ ಅರ್ತ್ಯವು, “ಸುರಾಸುರ ನರೇಶಾಯ ಕ್ಷೀರಾಬ್ಬಿ ಶಯನಾಯ ಚ ಕೃಷ್ಣಾಯ ವಾಸುದೇವಾಯ ದದಾಮ್ಯಾಚಮನಂಶುಭಂ||೪|| ತಸ್ಮಾದ್ವಿರಾಡ್=ಪುರಃ| ಆಚಮನೀಯಂ ಸಮರ್ಪಯಾಮಿ| ನಾರಾಯಣ ನಮಸ್ತೇಸ್ತು ನರಕಾರ್ಣವತಾರಕ ಗಂಗೋದಕಂ ಸಮಾನೀತಂ ಸ್ನಾನಾರ್ಥಂ ಪ್ರತಿಗೃಹ್ಯತಾಂ||೫|| ಯತ್ಪುರುಷೇಣ-ಹವಿ: ಸ್ನಾನಂ ಸಮರ್ಪಯಾಮಿ ಪಯೋದಿದಿಘತದ್ರ ಶರ್ಕರಾಸ್ನಾನಮುತ್ತಮಂ| ತೃಪ್ತರ್ಥ೦ ದೇವದೇವೇಶ ಗೃಹ್ಯತಾಂ ದೇವಕೀಸುತ || ಇತಿ ಪಂಚಾಮೃತಾನಂ ಸಮರ್ಪಯಾಮಿ ಪುನಃಶುದ್ಧೋದಕ ಸ್ನಾನಂ ಸಮರ್ಪಯಾಮಿ ಮಂಚ ಪಟ್ಟಿ ಸೂತ್ರಾಡ್ಯಂ ಮಯಾನೀತಾಂ ಶುಕಂ ಶುಭಂಗ ಗೃಹ್ಯತಾಂ ದೇವ ದೇವೇಶ ಮಯಾದತ್ತಂ ಸುರೋತ್ತಮ ||೭|| ತಂಯಜ್ಞಂ=ಶ್ಚಯೇ ವಸ್ತ್ರಂ ಸಮರ್ಪಯಾಮಿ ನಮಃಕೃಷ್ಣಾಯ ದೇವಾಯ ಶಂಖಚಕ್ರಧರಾಯಚ| ಬ್ರಹ್ಮಸೂತ್ರಂ ಜಗನ್ನಾಥ ಗೃಹಾಣ ಪರಮೇಶ್ವರ||೮|| ತಸ್ಮಾದ್ಯಜ್ಞಾತ್-ಶ್ಚಯೇ | ಯಜೋಪವೀತಂ ಸಮರ್ಪಯಾಮಿ ನಾನಾಗಂಧ ಸಮಾಯುಕ್ತಂ ಚಂದನಂಚಾರುಚರ್ಚಿತಂ ಕುಂಕುಮಾಕ್ತಾಕ್ಷತೈರ್ಯುಕ್ತಂ ಗೃಹ್ಯತಾಂ ಪರಮೇಶ್ವರ ||೯|| ಪರಿಚ್ಛೇದ - ೨ So ತಸ್ಮಾದ್ಯಜ್ಞಾತ್=ಯತ ಗಂಧಂ ಸಮರ್ಪಯಾಮಿ| ಪುಷ್ಪಾಣಿಯಾನಿದಿವ್ಯಾನಿ ಪಾರಿಜಾತೋದ್ಭವಾನಿಚ ಮಾಲತೀ ಕೇಸರಾದೀನಿ ಪೂಜಾರ್ಥಂ ಪ್ರತಿಗೃಹ್ಯತಾಂ||೧೦|| ತಸ್ಮಾದಶ್ಯಾ=ವಯ:ಪುಷ್ಪಾಣಿ ಸಮರ್ಪಯಾಮಿ ಅಥ ಅಂಗ ಪೂಜಾಂಕರಿಷ್ಯ ಶ್ರೀ ಕೃಷ್ಣಾಯ ನಮಃ ಪಾದೌ ಪೂಜಯಾಮಿ ಸಂಕರ್ಷಣಾಯನಮ: ಗುಪೂಜಯಾಮಿ|ಕಾಲಾತ್ಮನೇನಮ: ಜಾನುನೀಪೂಜಯಾಮಿ ವಿಶ್ವಕರ್ಮನೇನಮ: ಜಂಘಪೂಜಯಾಮಿ ವಿಶ್ವನೇತ್ರಾಯನಮ: ಕಟಿಂಪೂಜಯಾಮಿ ವಿಶ್ವರ್ಕನಮ: ಮೇಘ್ರಂಪೂಜಯಾಮಿ ಪದ್ಮನಾಭಾಯನಮ: ನಾಭಿಪೂಜಯಾಮಿ! ಪರಮಾತ್ಮನೇನಮಃ ಹೃದಯಂಪೂಜಯಾಮಿ ಶ್ರೀ ಕಂಠಾಯನಮಃ ಕಂಠಂಪೂಜಯಾಮಿ ಸರ್ವಾಸ್ತ್ರ ಧಾರಿಣೇನಮ: ಬಾಡೂನ್ ಪೂಜಯಾಮಿ ವಾಚಸ್ವತಯೇನಮ: ಮುಖಂಪೂಜಯಾಮಿ ಕೇಶವಾಯನಮ: ಲಲಾಟಂಪೂಜಯಾಮಿ ಸರ್ವಾತ್ಮನೇನಮು: ಶಿರ:ಪೂಜಯಾಮಿ ವಿಶ್ವರೂಪಿಣೇ ನಾರಾಯಣಾಯನಮಃ ಸರ್ವಾಂಗಪೂಜಯಾಮಿ ವನಸ್ಪತಿ=ಗೃಹ್ಯತಾಂ||೧|| ಯತ್ಪುರುಷಂ=ಉಚ್ಚತೇ। ಧೂಪಂ ಸಮರ್ಪಯಾಮಿಂಜ್ಯೋತಿಪರ್ವದೇವಾನಾಂತೇಜಂ ತೇಜಸಾಂಪರು ಆತ್ಮಜ್ಯೋತಿರ್ನ ಮಸ್ತುಭ್ಯಂ ದೀಪೋsಯಂ ಪ್ರತಿಕೃಯ್ಯತಾಂ||೧೨|| ಬ್ರಾಹ್ಮಣೋಸ್ಕ=ಅಜಾಯತ ದೀಪಂ ಸಮರ್ಪಯಾಮಿ ನಾನಾ ಗಂಧಸಮಾಯುಕ್ತಂ ಭಕ್ಷ್ಯಭೋಜ್ಯಂ ಚತುರ್ವಿಧಂನೈವೇದ್ಯಾರ್ಥಂ ಮಯಾದತ್ತಂ ಗೃಹಾಣ ಪರಮೇಶ್ವರ||೧೩|| ಚಂದ್ರಮಾ=ಅಜಾಯತ ನೈವೇದ್ಯಂ ಸಮರ್ಪಯಾಮಿಆಚಮನಂ ಸಮರ್ಪಯಾಮಿ ಕರೋದ್ವರ್ತನಂ ಸಮರ್ಪಯಾಮಿ | ತಾಂಬೂಲಂಚ ಸಕರ್ಪೂರಂ ಪೂಗೀಫಲಸಮನ್ವಿತಂ | ಮುಖವಾಸಕರ೦ರಂ ಪ್ರೀತಿದಂ ಪರಿಗೃಹ್ಯತಾಂ||೧೪|| ಸೌವರ್ಣರಿರಾಜತಂ ತಾಮ್ರಂ ನಾನಾರತ್ನ ಸಮನ್ವಿತಂ ಕರ್ಮಸಾದ್ದು ಸಿದ್ಧರ್ಥಂ ದಕ್ಷಿಣಾ ಪ್ರತಿಗೃಹ್ಯತಾಂ||೧೫|| ರಂಭಾಫಲಂನಾಳಿಕೇರಂ ತಥ್ಯವಾಗಿ ಫಲಾನಿಚ ಪೂಜಿತೋಸಿ ಸುರಶ್ರೇಷ್ಠ ಗೃಹ್ಯತಾಂ ಕಂಸಸೂದನ||೧೬|| ನಾಭ್ಯಾಆಸೀ=ಅಕಲ್ಪಯನ್ ನೀರಾಜನಂ ಸಮರ್ಪಯಾಮಿ ಯಾನಿಕಾನಿಚ=ಪದೇ ಸಪ್ರಾಸ್ಯಾಸನ್=ಪಶುಂ ಪ್ರದಕ್ಷಿಣಾಂ ಸಮರ್ಪಯಾಮಿ||೧೭|| ಮತ್ತೇನಯಜ್ಞ=ದೇವಾ||೧೮|| ಇತ್ಯಾದಿ ವೇದಮಂತ್ರಗಳಿಂದ ಮಂತ್ರಪುಷ್ಪಾಂಜಲಿಯನ್ನರ್ಪಿಸುವದು; ಮತ್ತು ನಮಸ್ಕಾರ ಮಾಡತಕ್ಕದ್ದು. ಅಪರಾಧಸ-ಪುರುಷೋತ್ತಮ’ ಹೀಗೆ ಪೂಜೆಯನ್ನರ್ಪಿಸತಕ್ಕದ್ದು. ಹೀಗೆ ಸರ್ವೋಪಚಾರ ಪೂಜೆಯ ನಂತರ ಹನ್ನೆರಡಂಗುಲ ವಿಸ್ತಾರದ ಬೆಳ್ಳಿಯ ಚಂದ್ರ ಅಥವಾ ಸ್ಪಂಡಿಲಾದಿಗಳಲ್ಲಿ ಬರೆದಿರುವ ರೋಹಿಣೀಯುಕ್ತವಾದ ಚಂದ್ರನನ್ನು “ಸೋಮೇಶ್ವರಾಯಸೋಮಾಯ ತಥಾಸೋಮೋದ್ಭವಾಯಚ | ಸೋಮಸ್ಯ ಪತಯೇನಿತ್ಯಂ ತುಭಂಸೋಮಾಯವನಮ ಈ ಮಂತ್ರದಿಂದ ಪೂಜಿಸಿ ಪುಷ್ಪ, ದರ್ಭ, ಗಂಧ, ಜಲಗಳನ್ನು ಮಿಶ್ರಮಾಡಿ ಅದನ್ನು ಶಂಖದಿಂದ “ಕ್ಷೀರೋದಾರ್ಣವಸಂಭೂತ ಅತ್ರಿಗೋತ್ರ ಸಮುದ್ರವಗೃಹಣಾರ್ಘಂ ಶಶಾಂಕೇಶ ರೋಹಿಣೀಸಹಿತೋಮಮ ||೧||ಜ್ಯೋತ್ಸಾವತೇ ನಮಸ್ತುಭ್ಯಂ ಜ್ಯೋತಿಷಾಂ ಪತಯೇ ನಮಃ ನಮಸ್ತ ರೋಹಿಣೀಕಾಂತ ಅರ್ಘಂನ: ಪ್ರತಿಗೃಹ್ಯತಾಂ||೨||” ಈ ಮಂತ್ರಗಳಿಂದ ಚಂದ್ರನಿಗೆ ಅರ್ಭ್ಯವನ್ನು ಕೊಡತಕ್ಕದ್ದು. ನಂತರ ಶ್ರೀ ಕೃಷ್ಣನಿಗೆ ಅರ್ಥ್ಯವನ್ನು ಕೊಡತಕ್ಕದ್ದು. ಅದಕ್ಕೆ ಮಂತ್ರವು “ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯಚ ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯಚ Iinil ಧರ್ಮಸಿಂಧು ಕೌರವಾಣಾಂ ವಿನಾಶಾಯ ಚೈತ್ಯಾನಾಂನಿಧನಾಯಚ ಗೃಹಣರ್ಘಂ ಮಯಾದತ್ತಂ ದೇವಾಸಹಿಮೋಹ “ಇತಿ” ಆಮೇಲೆ “ತಾಹಿಮಾಂ ಸರ್ವಲೋಕೇಶ ಹರೇಸಂಸಾರ ಸಾಗರಾತ್ ತ್ರಾಹಿಮಾಂ ಸರ್ವಪಾಪನ್ನ ದುಃಖಶೋಕಾರ್ಣವಾತ್ ಪ್ರಭೋ|೧|| ಸರ್ವಲೋಕೇಶ್ವರಾಹಿ ಪತಿತಂ ಮಾಂ ಭವಾರ್ಣವೇತ್ರಾಹಿಮಾಂ ಸರ್ವದುಃಖಮ್ಮ ರೋಗಶೋಕಾರ್ಣವಾದ್ದರೇ||೨|| ದುರ್ಗತಾಂಡ್ರಾಯರೇ ಎಷ್ಟೋ ಯೇಸ್ಮರಂತಿ ಸಕೃತ್ ಸಕೃತ್! ತಾಹಿಮಾಂ ದೇವದೇವೇಶ ನಾಲ್ಕೂ ರಕ್ಷಿತಾ ||೩|| ಯದ್ವಾರಚನಮಾರೇ ಯೌವನೇಯಚ್ಚವಾರ್ಧಕ ತತ್ವುಣ್ಯಂ ವೃದ್ಧಿ ಮಾಯಾತು ಪಾಪಂದಹ ಹಲಾಯುಧ ||೪||” ಹೀಗೆ ಪ್ರಾರ್ಥಿಸುವದು. ಪೂಜಾನಂತರದ ಕೃತ್ಯವನ್ನು ಅಗ್ನಿಪುರಾಣದಲ್ಲಿ ಹೀಗೆ ಹೇಳಿದೆ-“ಪುರುಷಸೂಕ್ತ ಮೊದಲಾದ ವಿಷ್ಣು ಸಂಬಂಧವಾದ ಸ್ತುತಿಗಳಿಂದ ಸ್ತೋತ್ರಮಾಡಿ ನಾನಾವಿಧ ವಾದ್ಯಗಳಿಂದಲೂ ಗೀತವಾದ್ಯಾದಿ ಮಂಗಲಗಳಿಂದ ಚಿತ್ರವಿಚಿತ್ರಗಳಾದ ಕಥೆಗಳಿಂದಲೂ, ಪ್ರೇಕ್ಷಾಣಕ (ನಾಟ್ಯ) ಮೊದಲಾದವುಗಳಿಂದಲೂ, ಪೂರ್ವಕಥೆಗಳಿಂದಲೂ, ಪುರಾಣ ಚರಿತ್ರೆಗಳಿಂದಲೂ ಆ ರಾತ್ರಿಯನ್ನು ಕಳೆಯತಕ್ಕದ್ದು. ಎಲ್ಲ ವಿಧದ ಈ ರೀತಿಯ ಜಾಗರಣೆಯನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ವಿಧಿಸಲಾಗಿದೆ. ಶೂದ್ರಾದಿಗಳಿಗೆ ವೈದಿಕ ಸೂಕ್ತಾದಿಗಳಲ್ಲಧಿಕಾರವಿರುವದಿಲ್ಲವಾದ್ದರಿಂದ ಲೌಕಿಕ, ಪುರಾಣಕಥಾ, ನೃತ್ಯ, ಗೀತಾದಿಗಳಿಂದ ಜಾಗರಣೆಯು ವಿಹಿತವು, ಗೋಕುಲದಲ್ಲಿ ಆದ ಕೃಷ್ಣಲೀಲಾದಿಗಳ ಶ್ರವಣಾನಂತರದಲ್ಲಿ ವೈಷ್ಣವರು ಪರಸ್ಪರವಾಗಿ ಹಾಲು, ಮೊಸರು, ತುಪ್ಪ, ಜಲ ಮೊದಲಾದವುಗಳಿಂದ ತೋಯಿಸಿಕೊಳ್ಳುವದು (ದಧಿಶಿಕ್ಕೋತ್ಸವ) “ದಕ್ಷೀರತಾಂಬುಧಿ ಆಸಿಂಚತೋ ವಿಲಿಂಪತ:” ಇತ್ಯಾದಿ ಭಾಗವತ ವಚನದಿಂದ ಕಂಡುಬರುತ್ತದೆ. ಈ ಉತ್ಸವಕ್ಕೆ ಮಹಾರಾಷ್ಟ್ರದಲ್ಲಿ “ಗೋಪಾಲಕಾಲಾ"ಎನ್ನುತ್ತಾರೆಂದು ನನಗೆ ತೋರುತ್ತದೆ. ಈ ಎಲ್ಲವನ್ನೂ ಶ್ರೀಮದನಂತದೇವನು ತನ್ನ “ಕೌಸ್ತುಭಗ್ರಂಥ"ದಲ್ಲಿ ಹೇಳಿರುತ್ತಾನೆ ನಾನು ಸಂಕ್ಷೇಪಿಸಿ ಹೇಳಿದನೆಂದು ಯಾರೂ ಆಕ್ಷೇಪಿಸಬಾರದು. ಈ ರೀತಿಯ ಕಾಲಕ್ಷೇಪವನ್ನು ಮತ್ತು ಜಾಗರಣೆಯನ್ನು ರಾಮನವಮೀ ಏಕಾದಶಿ ಮೊದಲಾದ ಉತ್ಸವಗಳಲ್ಲೂ ಊಹಿಸತಕ್ಕದ್ದು. ಪೂಜಾ-ಜಾಗರ ರೂಪಗಳಾದ ವ್ರತೋತ್ಸವಗಳೆಲ್ಲ ಸಾಮಾನ್ಯ ಸಮಾನರೂಪಗಳೇ ಇರುವವು. ಮಹಾರಾಷ್ಟ್ರದಲ್ಲಿ ಹಾಗೆ ಆಚರಣೆಯೂ ಇರುವದು. ಭಗವಂತನಲ್ಲಿ ಪ್ರೇಮಾತಿಶಯವುಳ್ಳ ಭಾಗ್ಯಶಾಲಿಗಳು “ಪರ್ವಣಿಸ್ಕುರುತಾಹಂ ಇತ್ಯಾದಿ ವಚನದಂತೆ ಉತ್ಸವದಿವಸಗಳಂತೆ ಪ್ರತಿದಿನದಲ್ಲಿಯೂ ಕಥಾಕಾಲಕ್ಷೇಪಾದಿಗಳನ್ನು ಮಾಡುತ್ತಿರುವವರಾಗಿ ತಿಳಿಯುತ್ತದೆ. ಹೀಗೆ ವ್ರತಾಚರಣಮಾಡಿ ನವಮಿಯಲ್ಲಿ ಬ್ರಾಹ್ಮಣರನ್ನು ಭೋಜನ ದಕ್ಷಿಣಾದಿಗಳಿಂದ ತೃಪ್ತಿಪಡಿಸಿ ಉಕ್ತವಾದ ಪಾರಣೆಯ ಕಾಲದಲ್ಲಿ ಭೋಜನ ಮಾಡತಕ್ಕದ್ದು. ಇದೇ ಜಯಂತೀವ್ರತವನ್ನು ಸಂವತ್ಸರಸಾಧ್ಯವಾಗಿ ಪ್ರಯೋಗಿಸುವದೂ ಉಂಟು. ಶ್ರಾವಣ ಕೃಷ್ಣಾಷ್ಟಮಿಯಿಂದ ಪ್ರಾರಂಭಿಸಿ ಪ್ರತಿತಿಂಗಳಲ್ಲಿ ಕೃಷ್ಣಾಷ್ಟಮಿಯಲ್ಲಿ ಉಕ್ತವಿಧಿಯಿಂದ ಪೂಜಿಸುವದನ್ನು ಪುರಾಣಾಂತರದಲ್ಲಿ ಹೇಳಿದೆ. ಈ ವಿಷಯದ ಉದ್ಯಾಪನವಿಧಿಯನ್ನು ಅನ್ಯ ಗ್ರಂಥದಿಂದ ತಿಳಿಯತಕ್ಕದ್ದು ಇಲ್ಲಿಗೆ ಜನ್ಮಾಷ್ಟಮಿ ನಿರ್ಣಯವು ಮುಗಿಯಿತು. ಪರಿಚ್ಛೇದ - ೨ UA ದರ್ಭಾಹರಣವು (ದರ್ಭಸಂಗ್ರಹ) ದರ್ಭೆಗಳು ದಶವಿಧವಾಗಿವೆ. ದರ್ಭೆ ಹುಲ್ಲು, ಕಾಶ (ಜೊಂಡುಹುಲ್ಲು)ಜವ ಹುಲ್ಲು, ದೂರ್ವಾ, ವಾಳದಬೇರು, ಕೋಲು ಮಲ್ಲಿಗೆ, (ಕುಂದಕ) ಗೋಧಿಯ ಹುಲ್ಲು, ಭತ್ತದ ಹುಲ್ಲು, ಮುಂಜಿಯಹುಲ್ಲು, ಬಿಲ್ವ ಇವೇ ಹತ್ತು ವಿಧಗಳು, ಶ್ರಾವಣ ಅಮಾವಾಸೆಯಲ್ಲಿ ಶುಚಿರ್ಭೂತನಾಗಿ ದರ್ಭಗಳನ್ನು ತರಬೇಕು. ಆ ದರ್ಭೆಗಳು ಆಯಾತಯಾಮ” ಅಂದರೆ ಇವು ಕಡುವದಿಲ್ಲ. ಕೆಲವರು ಭಾದ್ರಪದ ಅಮಾವಾಸೆಯಲ್ಲಿ ದರ್ಭಗ್ರಹಣವನ್ನು ಹೇಳಿರುವರು. ‘ಪಿರಿಂಚಿನಾಸಹೋತ್ಪನ್ನ ಪರಮೇಷ್ಠಿ ನಿಸರ್ಗಜ ನುದಸರ್ವಾಣಿ ಪಾಪಾನಿ ದರ್ಭ ಸ್ವಸ್ತಿಕರೋಭವ” ಈ ಮಂತ್ರವನ್ನುಚ್ಚರಿಸಿ ಪೂರ್ವ ಅಥವಾ ಉತ್ತರಾಭಿಮುಖನಾಗಿ “ಹುಂಫಟ್” ಎಂದು ಒಂದೇ ಆವರ್ತಿ ಕತ್ತರಿಸಿ ಸಂಗ್ರಹಿಸತಕ್ಕದ್ದು. ಬ್ರಾಹ್ಮಣನಿಗೆ ನಾಲ್ಕು ದರ್ಭೆಗಳಿಂದ, ಕ್ಷತ್ರಿಯನಿಗೆ ಮೂರುದರ್ಭೆಗಳಿಂದ, ವೈಶ್ಯನಿಗೆ ಎರಡುದರ್ಭೆಗಳಿಂದ, ಶೂದ್ರನಿಗೆ ಒಂದು ದರ್ಭೆಯಿಂದ ಮಾಡಿದ ಪವಿತ್ರ, ಹೀಗೆ ಹೇಳಿದೆ. ಇನ್ನು ಸಾಮಾನ್ಯವಾಗಿ ಎಲ್ಲರಿಗೂ ಎರಡು ದರ್ಭಗಳ ಪವಿತ್ರವನ್ನು ಹೇಳಿದೆ. ಗ್ರಂಥಿ ಮಾಡಬಹುದು. ಅಥವಾ ಗ್ರಂಥಿ ರಹಿತವೂ ಆಗಬಹುದು. ಇತ್ಯಾದಿ. ಹೀಗೆ ಶ್ರಾವಣಮಾಸ ಕೃತ್ಯೋದ್ದೇಶವು ಮುಗಿಯಿತು. ಭಾದ್ರಪದಮಾಸ ಕೃತ್ಯಗಳು ಭಾದ್ರಪದದಲ್ಲಿ ಕನ್ಯಾಸಂಕ್ರಾಂತಿ. ಇದರಲ್ಲಿ ಮುಂದಿನ ಹದಿನಾರು ಘಟಗಳು ಪುಣ್ಯಕಾಲವು ಭಾದ್ರಪದಮಾಸದಲ್ಲಿ ಏಕಾನ್ನ ಆಹಾರ ವ್ರತಮಾಡುವದರಿಂದ ಧನ, ಆರೋಗ್ಯ ಇತ್ಯಾದಿ ಫಲ ಪ್ರಾಪ್ತಿಯಾಗುವದು. ಈ ಮಾಸದಲ್ಲಿ ಹೃಷಿಕೇಶನ ಪ್ರೀತ್ಯರ್ಥವಾಗಿ ಪಾಯಸ, ಬೆಲ್ಲ, ಅನ್ನ, ಉಪ್ಪು ಇತ್ಯಾದಿ ದಾನಗಳನ್ನು ಹೇಳಿದೆ. ಭಾದ್ರಪದ ಶುಕ್ಲ ತೃತೀಯಯಲ್ಲಿ “ಹರಿತಾಲಿಕಾವ್ರತವು ಹೇಳಲ್ಪಟ್ಟಿದೆ. ಅದಕ್ಕೆ ಮುಹೂರ್ತಮಾತ್ರ ಅಥವಾ ಅದಕ್ಕಿಂತ ಕಡಿಮೆಯಿದ್ದರೂ ಪರದಿನವೇ ಗ್ರಾಹ್ಯವು, ಕ್ಷಯವಶದಿಂದ ತೃತೀಯೆಯು ಪರದಿನದಲ್ಲಿರದಿದ್ದರೆ ಆಗ ದ್ವಿತೀಯಾಯುಕ್ತವಾದರೂ ಗ್ರಾಹ್ಯವು, ಶುದ್ಧಾಧಿಕವಾಗಿ (೬೦-೦ ಆಗಿ) ಎರಡು ತಿಥಿಗಳು ಉಂಟಾದಾಗ ಪೂರ್ವದಿನ ಅರವತ್ತು ಘಟಿಯಿದ್ದರೂ ಅದನ್ನು ಬಿಟ್ಟು ಚತುರ್ಥಿಯುಕ್ತವಾದ ಪರದಿನವೇ ಗ್ರಾಹ್ಯವು, ಗಣಯೋಗ ಪ್ರಾಶಸ್ಕೃವು ತೃತೀಯಗಿದೆ. ಈ ವ್ರತದಲ್ಲಿ ಭವಾನೀಯುತನಾದ ಶಿವನಪೂಜೆ, ಉಪವಾಸ ಇವುಗಳನ್ನು ಸ್ತ್ರೀಯರಿಗೆ ಹೇಳಿದೆ. ಅವರಿಗೆ ಇದು ನಿತ್ಯವು. “ಮಂದಾರಮಾಲಾಕುಲಿತಾಲಕಾಯ್ಕ ಕಪಾಲಮಾಲಾಂಕಿತಶೇ ಖರಾಯ| ದಿವ್ಯಾಂಬರಾಯ ಚ ದಿಗಂಬರಾಯ ನಮಃಶಿವಾಯ ಚ ನಮಃಶಿವಾಯ।” ಇತ್ಯಾದಿ ಪೂಜಾಮಂತ್ರಗಳನ್ನು ಪ್ರತಾದಿ ಗ್ರಂಥಗಳಿಂದ ತಿಳಿಯುವದು. ಗಣೇಶ ಚತುರ್ಥಿ ಭಾದ್ರಪದ ಶುಕ್ಲ ಚತುರ್ಥಿಯಲ್ಲಿ ವಿನಾಯವ್ರತ’ವು ಅದು ಮಧ್ಯಾಹ್ನವ್ಯಾಪಿನಿಯಾಗಿರತಕ್ಕದ್ದು. ಎರಡೂ ದಿನ ಪೂರ್ಣವಾಗಿ ಮಧ್ಯಾಹ್ನವ್ಯಾಪಿನಿಯಾದರೆ ಅಥವಾ ಎರಡೂದಿನ ಮಧ್ಯಾಹ್ನವ್ಯಾಪ್ತಿಯಿ ಲ್ಲದಿದ್ದರೆ ಪೂರ್ವವೇ ಗ್ರಾಹ್ಯವು. ಎರಡೂ ದಿನ ಸಮವಾಗಿ ಅಥವಾ ವಿಷಮವಾಗಿ ಏಕದೇಶವ್ಯಾಪ್ತಿಯಾದರೂ ಪೂರ್ವವೇ ಗ್ರಾಹ್ಮವು, ವಿಷಮವ್ಯಾಪ್ತಿ ವಿಷಯದಲ್ಲಿ ಮಾರನೇದಿನ ಹೆಚ್ಚು ಮಧ್ಯಾಹ್ನವ್ಯಾಪ್ತಿಯಿದ್ದರೆ ಅದೇ ಗ್ರಾಹ್ಯವೆಂದು ಕೆಲವರ ಮತವು. ಪೂರ್ವದಿನ ಮಧ್ಯಾಹ್ನದಲ್ಲಿ ಧರ್ಮಸಿಂಧ ಸ್ಪರ್ಶವೇ ಇಲ್ಲದೆ ವರದಿನದಲ್ಲಿ ಪೂರ್ಣ ಮಧ್ಯಾಹ್ನವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು. ಹೀಗೆ ಬೇರೆ ಮಾಸಗಳಲ್ಲೂ ಚತುರ್ಥಿನಿರ್ಣಯವನ್ನು ಹೀಗೆಯೇ ತಿಳಿಯತಕ್ಕದ್ದು. ಇದು ರವಿ- ಮಂಗಳವಾರ ಯುಕ್ತವಾದರೆ ಪ್ರಶಸ್ತವು. ಈ ಚತುರ್ಥಿಯಲ್ಲಿ ಚಂದ್ರದರ್ಶನವಾದರೆ ಸುಳ್ಳು ಅಪವಾದವುಂಟಾಗುವದೆಂದು ದೋಷವನ್ನು ಹೇಳಿದೆ. ಚತುರ್ಥಿವ್ರತ ದಿನ ಸಂಜೆಯಲ್ಲಿ ಪಂಚಮಿಯು ಬಂದು ಆಗ ನೋಡಿದಲ್ಲಿ ದೋಷವುಂಟಾಗುವದಿಲ್ಲವೆಂದು ಅರ್ಥಾತ್ ಸಿದ್ಧವಾಗುತ್ತದೆ. ಅಂದರೆ ಚತುರ್ಥಿಯಿರುವಾಗ ಚಂದ್ರದರ್ಶನವು ನಿಷಿದ್ಧವು. ಚತುರ್ಥಿವ್ರತ ದಿನದಲ್ಲಿ ಚಂದ್ರದರ್ಶನವನ್ನು ಬಿಡುವ ಸಂಪ್ರದಾಯವೇ ಹೆಚ್ಚಾಗಿ ಹಬ್ಬಿಕೊಂಡಿದ. ಚತುರ್ಥಿಯಲ್ಲುದಿಸಿದ ಚಂದ್ರನನ್ನು ದರ್ಶನ ಮಾಡಬಾರದೆಂಬದೊಂದು ಪಕ್ಷವಿದೆ. ಇದರಲ್ಲಿಯೂ ವಿಸಂಗತಿ ದೋಷವಿದೆ. ಹೇಗೆಂದರೆ ಪೂರ್ವದಿನ ವ್ರತಕ್ಕೆ ಅನುಕೂಲವಾದ ಅಂದರೆ ದ್ವಿಮುಹೂರ್ತದಿಂದ ಚತುರ್ಥಿ ಪ್ರಾರಂಭವಾಗಿ ಮಾರನೇದಿನ ಹನ್ನೆರಡು ಘಟೀಪರ್ಯಂತ ಇದೆಯೆಂದು ತಿಳಿದರೆ ಪೂರ್ವದಿನ ವಿನಾಯಕ ಚತುರ್ಥಿವ್ರತವಾಗುತ್ತಿದ್ದು, ಮಾರನೇದಿನ ಹನ್ನೆರಡುಘಟಿ ನಂತರ ಪಂಚಮಿಯಾಗುತ್ತದೆ. ಚತುರ್ಥಿಯಲ್ಲುದಿಸಿದ ಚಂದ್ರನನ್ನು ಮಾರನೇದಿನವೂ ನೋಡುತ್ತೇವೆ. ಆಗ ಅದನ್ನು ನಿಷೇಧಿಸುವ ಪ್ರಸಂಗವುಂಟಾಗುವದು. ಕಾರಣ ಚತುರ್ಥಿಯಲ್ಲುದಿಸಿದ ಮಾತ್ರದಿಂದ ನಿಷೇಧಿಸುವದು ಯುಕ್ತವಲ್ಲ. ಚತುರ್ಥಿಯಲ್ಲುದಿಸಿದೆಯೋ ಅಥವಾ ದರ್ಶನವು ಚತುರ್ಥಿಯಲ್ಲಿ ಘಟಿಸುವದೋ ಎಂಬ ಈ ಎರಡೂ ಪಕ್ಷಗಳನ್ನು ಬಿಟ್ಟು ವ್ರತದಿನದಲ್ಲಿ ಚಂದ್ರದರ್ಶನ ಮಾಡುವದಿಲ್ಲ. ಹೀಗೆಯೇ ರೂಢಿಯಿದೆ. ಚಂದ್ರದರ್ಶನದ ದೋಷಶಾಂತಿಗಾಗಿ “ಸಿಂಹಃಪ್ರಸೇನಮವದ್ಗೀತ್ ಸಿಂಹೋ ಜಾಂಬವತಾಹತಃ| ಸುಕುಮಾರಕಮಾರೋದೀಸ್ತವಷಸ್ಯಮಂತಕಃ||” ಹೀಗೆ ಈ ಮಂತ್ರವನ್ನು ಜಪಿಸಿದರೆ ದೋಷ ನಿವಾರಣೆಯಾಗುವದು. ಈ ಚತುರ್ಥಿಯಲ್ಲಿ ಮೃಣ್ಮಯಾದಿಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಿ, ಷೋಡಶೋಪಚಾರಗಳಿಂದ ವಿನಾಯಕನನ್ನು ಪೂಜಿಸಿ, ಏಕಮೋದಕ ನೈವೇದ್ಯ ಮಾಡಿ, ಗಂಧಸಹಿತವಾದ ಇಪ್ಪತ್ತೊಂದು ದೂರ್ವೆಗಳನ್ನು ಹಿಡಿದುಕೊಂಡು, ಎರಡೆರಡು ದೂರ್ವೆಗಳಿಂದ “ಗಣಾಧಿಪಾಯ ನಮಃ (೧) ಉಮಾಪುತ್ರಾಯ ನಮಃ (೨) ಅಘನಾಶನಾಯ ನಮ: (೩)ವಿನಾಯಕಾಯ ನಮಃ (೪) ಈಶಪುತ್ರಾಯ ನಮಃ (೫) ಸರ್ವಸಿದ್ಧಿ ಪ್ರದಾಯಕಾಯ ನಮ: (೬) ಏಕದಂತಾಯನಮ: (೭) ಇಭವಾಯ ನಮಃ(೮) ಮೂಷಕವಾಹನಾಯ ನಮಃ (೯) ಕುಮಾರಗುರುವೇ ನಮ: (೧೦)” ಹೀಗೆ ಹತ್ತು ನಾಮಗಳಿಂದ ಎರಡೆರಡು ದೂರ್ವೆಗಳನ್ನರ್ಪಿಸಿ ಉಳಿದ ಇನ್ನೊಂದು ದೂರ್ವೆಯನ್ನು ಹಿಂದೆ ಹೇಳಿದ ಹತ್ತೂ ನಾಮಗಳನ್ನುಚ್ಚರಿಸಿ ಅರ್ಪಿಸತಕ್ಕದ್ದು, ಹತ್ತು ಮೋದಕಗಳನ್ನು ಬ್ರಾಹ್ಮಣನಿಗೆ ಕೊಟ್ಟು ಹತ್ತು ಮೋದಕಗಳನ್ನು ತಾನು ಸೇವಿಸುವದು. ಹೀಗೆ ಈ ವ್ರತದ ಸಂಕ್ಷೇಪ ವಿಧಾನವು ಋಷಿಪಂಚಮೀ ವ್ರತ ಭಾದ್ರಪದ ಶುಕ್ಲ ಪಂಚಮಿಯು “ಋಷಿಪಂಚಮಿ “ಯು. ಇದು ಮಧ್ಯಾಹ್ನ ವ್ಯಾಪ್ತಿಯಿರತಕ್ಕದ್ದು. ದಿನದ್ವಯದಲ್ಲಿ ಮಧ್ಯಾಹ್ನವ್ಯಾಪ್ತಿಯಿದ್ದರೆ ಅಥವಾ ಇಲ್ಲದಿದ್ದರೆ ಪೂರ್ವವೇ ಗ್ರಾಹ್ಯವು. ಇದರಲ್ಲಿ ಋಷಿಗಳನ್ನು ಪೂಜಿಸಿ ಊಳದೇ ಇದ್ದ ಭೂಮಿಯಲ್ಲಿ ಉತ್ಪನ್ನವಾದ ಪರಿಚ್ಛೇದ - ೨ 159 ಶಾಕಗಳನ್ನು ಆಹಾರ ಮಾಡತಕ್ಕದ್ದು. ಭಾದ್ರಪದ ಶುಕ್ಲ ಷಷ್ಠಿಗೆ “ಸೂರ್ಯಷಷ್ಠಿ “ಯನ್ನುವರು. ಈ ಷಷ್ಟಿಯಲ್ಲಿ ಸ್ನಾನ, ಸೂರ್ಯಪೂಜೆ, ಪಂಚಗವ್ಯಪ್ರಾಶನ ಇತ್ಯಾದಿಗಳನ್ನಾಚರಿಸುವದರಿಂದ ಅಶ್ವಮೇಧಯಾಗಕ್ಕಿಂತ ಹೆಚ್ಚಿನ ಫಲವು ಸಿಗುವದು. ಈ ಷಷ್ಟಿಯು ಸಪ್ತಮೀಯುತವಾದದ್ದು ಗ್ರಾಹ್ಯವು. ಇದರಲ್ಲಿ ಕಾರ್ತಿಕಸ್ವಾಮಿ ದರ್ಶನ ಮಾಡುವದರಿಂದ ಬ್ರಹ್ಮಹತ್ಯಾದಿ ಪಾಪಗಳು ನಷ್ಟಹೊಂದುವವು. ದೂರ್ವಾಷ್ಟಮಿ ಭಾದ್ರಪದ ಶುಕ್ಲಾಷ್ಟಮಿಗೆ “ದೂರ್ವಾಷ್ಟಮೀ “ಎನ್ನುವರು. ಅದು ಪೂರ್ವವಿದ್ಧವಾದದ್ದು ಗ್ರಾಹ್ಯವು. ಇದು ಜೇಷ್ಠಾ ಮತ್ತು ಮೂಲಾನಕ್ಷತ್ರ ಇವುಗಳಿಂದ ಯುಕ್ತವಾದರೆ ತ್ಯಾಜ್ಯವು ಅಸಂಭವವಾದರೆ ಅವುಗಳಿಂದ ಯುಕ್ತವಾದರೂ ಗ್ರಾಹ್ಯವು. ಈ ದೂರ್ವಾಪೂಜನವ್ರತವು ಕನ್ನೆಯಲ್ಲಿ ರವಿಯಿರುವಾಗ (ಕನ್ಯಾ ತಿಂಗಳು ಪ್ರಾಪ್ತವಾದಲ್ಲಿ ) ಮತ್ತು ಅಗಸ್ತೋದಯವಾದಲ್ಲಿ ತ್ಯಾಜ್ಯವು (ಭಾದ್ರಪದ ಶುಕ್ಲಾಷ್ಟಮಿಯಲ್ಲಿ ಅಗಸ್ಕೋದಯವಾಗುವದೆಂದು ತಿಳಿದುಬಂದಾಗ ಹಿಂದಿನ ಕೃಷ್ಣಾಷ್ಟಮಿಯಲ್ಲೇ ಮಾಡತಕ್ಕದ್ದೆಂದು ಹೇಮಾದ್ರಿ-ದೀಪಿಕೆಗಳ ಮತವು ಇದು ಸ್ತ್ರೀಯರಿಗೆ ನಿತ್ಯವು. ಈ ಜೇಷ್ಠಾದೇವೀ ಪೂಜನವ್ರತವು ಕೇವಲ ಅಷ್ಟಮೀಪ್ರಧಾನ, ಕೇವಲ ಜೇಷ್ಠಾ ನಕ್ಷತ್ರ ಪ್ರಧಾನ ಹೀಗೆ ಎರಡು ವಿಧವು. ದಾಕ್ಷಿಣಾತ್ಯರು ಜೇಷ್ಠಾ ಪ್ರಧಾನವಾಗಿಯೇ ಆಚರಿಸುತ್ತಾರೆ. ಅನುರಾಧಾ ನಕ್ಷತ್ರದಲ್ಲಿ ಆವಾಹನ, ಜೇಷ್ಟೆಯಲ್ಲಿ ಪೂಜೆ, ಮೂಲದಲ್ಲಿ ವಿಸರ್ಜನ ಹೀಗೆ ದಿನಸಾಧ್ಯವಾದದ್ದು. ಪೂಜೆಯ ದಿನದ ಬಗ್ಗೆ ಮುಖ್ಯನಿರ್ಣಯವು. ಅದಕ್ಕನುಗುಣವಾಗಿ ಆವಾಹನ -ವಿಸರ್ಜನ ದಿನಗಳನ್ನು ನಿರ್ಣಯಿಸುವದು. ಪೂರ್ವದಿನದ ಮಧ್ಯಾಹ್ನಾನಂತರ ಪ್ರಾರಂಭವಾಗಿ ಪರದಿನ ಮಧ್ಯಾಹ್ನದಲ್ಲಿ ಸಮಾಪ್ತವಾದಲ್ಲಿ ಅಥವಾ ಮಧ್ಯಾಹ್ನದ ಒಳಗೆ ಸಮಾಪ್ತಿಯಾದಲ್ಲಿ ಆಗ ಪೂರ್ವದಿನದಲ್ಲಿಯೇ ಪೂಜೆಯು, ಪೂರ್ವದಿನದಲ್ಲಿ ಮಧ್ಯಾಹ್ನಾನಂತರ ಪ್ರವೃತ್ತವಾಗಿ ಮಾರನೇದಿನ ಮಧ್ಯಾಹ್ನದಲ್ಲಿ ಜೇಷ್ಟೆಯು ಸಮಾಪ್ತಿಯಾದಾಗ ಆಗ ಅಷ್ಟಮೀಯೋಗವಶದಿಂದ ಪೂರ್ವವೋ ಪರವೋ ಎಂಬುದನ್ನು ನಿರ್ಣಯಿಸತಕ್ಕದ್ದು. ಎರಡೂಕಡೆಯಲ್ಲಿ ಅಷ್ಟಮೀಯೋಗವಾದಲ್ಲಿ ಪೂರ್ವವೇ ಗ್ರಾಹ್ಯವು, ಪೂರ್ವದಿನ ಮಧ್ಯಾಹ್ನದಿಂದಾರಂಭಿಸಿ ಅಥವಾ ಮಧ್ಯಾಹ್ನತ್ತರ ಆರಂಭವಾಗಿ ಪರದಿನ ಮಧ್ಯಾಹ್ನಾನಂತರ ಅಪರಾಹ್ನ ಸ್ಪರ್ಶವಾದಲ್ಲಿ ಅಷ್ಟಮೀಯೋಗವಿಲ್ಲದಿದ್ದರೂ ಪರವೇ ಗ್ರಾಹ್ಯವು. ಭಾದ್ರಪದ ಶುಕ್ಲ ಏಕಾದಶೀ ಅಥವಾ ದ್ವಾದಶಿಯಲ್ಲಿ ಪಾರಣೆಯ ನಂತರ “ವಿಷ್ಣು ಪರಿವರ್ತನೋತ್ಸವ"ವು. “ಶ್ರುತೇಶ್ಚಮಧ್ಯೆ ಪರಿವರ್ತಮೇತಿ” ಎಂಬ ವಚನದಂತೆ ಶಯನಮಾಡಿರುವ ವಿಷ್ಣುವು ಶ್ರವಣದ ಮೂರುಪಾಲುಮಾಡಿದ ಮಧ್ಯಭಾಗದಲ್ಲಿ ಪರಿವರ್ತನ (ಮಲಗಿದ ಮಗ್ಗಲು ಹೊರಳಿಸುವಿಕೆ) ಮಾಡುತ್ತಾನೆ. ಈ ಶ್ರವಣದ ಮಧ್ಯಭಾಗದ ಯೋಗದಲ್ಲಿ ಏಕಾದಶಿಯಿದ್ದರೆ ಅದರಲ್ಲಿಯೇ ಪರಿವರ್ತನೋತ್ಸವ ಮಾಡತಕ್ಕದ್ದು. ಅಥವಾ ದ್ವಾದಶಿಯಿದ್ದಲ್ಲಿ ಅದರಲ್ಲಿಯೇ ಮಾಡತಕ್ಕದ್ದು, ಸಂಧ್ಯಾಕಾಲದಲ್ಲಿ ವಿಷ್ಣುವನ್ನು ಪೂಜಿಸಿ “ವಾಸುದೇವ ಜಗನ್ನಾಥ ಪ್ರಾಪ್ತಯಂ ದ್ವಾದಶೀತವ ಪಾರ್ಶ್ವನ ಪರಿವರ್ತಸ್ಟ ಸುಖಂ ಸ್ವಪಿಹಿ ಮಾಧವ” ಈ ಮಂತ್ರದಿಂದ ಪ್ರಾರ್ಥಿಸುವದು. ಈಗ “ಶ್ರವಣ ದ್ವಾದಶೀ ವ್ರತವು ಒಂದು ಮುಹೂರ್ತವಾದರೂ ಶ್ರವಣಯೋಗವು ಧರ್ಮಸಿಂಧು ದ್ವಾದಶಿಯಲ್ಲಾದಲ್ಲಿ ಅದರಲ್ಲೇ ಉಪವಾಸ ಮಾಡತಕ್ಕದ್ದು. ಉತ್ತರಾಷಾಢಾನಕ್ಷತ್ರ ವೇಧಯುಕ್ತವಾದ ಶ್ರವಣವು ನಿಷಿದ್ಧವೆಂಬುದು ನಿರ್ಮೂಲವು. ಪೂರ್ವದಿನದಲ್ಲಿ ಏಕಾದಶೀವಿದ್ದವಾದ ದ್ವಾದಶಿಯಿದ್ದು, ಪರದಿನದಲ್ಲಿ ಮುಂದುವರಿದಿದ್ದರೆ ಎರಡೂದಿನ ಶ್ರವಣಯೋಗವಿದ್ದಲ್ಲಿ ಆಗ ಪೂರ್ವದಿನ ಏಕಾದಶೀ ದ್ವಾದಶೀ-ಶ್ರವಣ ಹೀಗೆ ಮೂರರ ಯೋಗವಾಗುವದರಿಂದ ಇದು “ವಿಷ್ಣು ಶೃಂಖಲ ಯೋಗ ವೆನ್ನಲ್ಪಡುವದು. ಆದ್ದರಿಂದ ಆ ದಿನದಲ್ಲೇ ಉಪವಾಸ ಮಾಡತಕ್ಕದ್ದು. ಅದಕ್ಕೆ ಉದಾ: ಏಕಾದಶೀ ೧೮೦ ಉತ್ತರಾಷಾಢಾ ೨೫೦ ದ್ವಾದಶೀ ೨೦l೦ ಶ್ರವಣ ೧೨೦ ಅಥವಾ ಏಕಾದಶಿ ೧೮೦ ಉತ್ತರಾಷಾಢಾ ೨೫೦ ದ್ವಾದಶೀ ೨೦lo ಶ್ರವಣ ೧೮೦ ಇದರಲ್ಲಿ ಎರಡನೇ ಉದಾಹರಣೆಯಲ್ಲಿ ಏಕಾದಶಿಗೆ ಶ್ರವಣಯೋಗವಿಲ್ಲದಿದ್ದರೂ ಶ್ರವಣಯುಕ್ತ ದ್ವಾದಶಿಯ ಸ್ಪರ್ಶಮಾತ್ರದಿಂದ “ವಿಷ್ಣು ಶೃಂಖಲಾ"ಯೋಗವಾಗುವದು. ಈ ಎರಡೂ ವಿಧವಾದ ಯೋಗವು ಹಗಲಿನಲ್ಲೇ ಗ್ರಾಹ್ಯವು, ಹೊರತು ರಾತ್ರಿಯಲ್ಲಲ್ಲ. ಹೀಗೆ “ಪುರುಷಾರ್ಥ ಚಿಂತಾಮಣಿ"ಯಲ್ಲಿ ಹೇಳಿದೆ. ರಾತ್ರಿಯಲ್ಲಿ ನಿಶೀಥೋತ್ತರದಲ್ಲಿ ಈ ಯೋಗವಾದರೂ ಗ್ರಾಹ್ಯವೆಂದು ನಿರ್ಣಯಸಿಂಧುವಿನಲ್ಲಿದೆ. ರಾತ್ರಿಯ ಪ್ರಥಮಯಾಮಪರ್ಯಂತ ತಿಥಿಗಳ ಹಾಗೂ ಶ್ರವಣಯೋಗವಾದಲ್ಲಿ ಅದು ಗ್ರಾಹ್ಯ ಹೊರತು ಎರಡನೆಯಾಮಾದಿಗಳಲ್ಲಲ್ಲವೆಂದು ಕೆಲವರನ್ನುವರು. ಈ ಪಕ್ಷವೇ ಉತ್ತಮವೆಂದು ಕಾಣುತ್ತದೆ. ಈ ವಿಷ್ಣು ಶೃಂಖಲಾಯೋಗದಲ್ಲಿ ಏಕಾದಶೀ ಹಾಗೂ ಶ್ರವಣದ್ವಾದಶಿ ಹೀಗೆ ಎರಡು ಉಪವಾಸ ವ್ರತಗಳು ಪ್ರಾಪ್ತವಾಗುವವು. ಆಗ ತಂತ್ರದಿಂದ ಎರಡನ್ನೂ ಏಕಾದಶಿಯಲ್ಲಿಯೇ ಮಾಡಿ ದ್ವಾದಶಿಯಲ್ಲಿ ಮುಂದೆ ಹೇಳುವ ಪಾರಣೆಯ ನಿರ್ಣಯಾನುಸಾರ ಪಾರಣೆಯನ್ನು ಮಾಡತಕ್ಕದ್ದು. ವಿಷ್ಣು ಶೃಂಖಲಾಯೋಗವಿರದಿದ್ದಾಗ ಶುದ್ಧಾಧಿಕವಾದ ದ್ವಾದಶಿಯಿದ್ದು ಆ ಎರಡು ದ್ವಾದಶಿಗಳಲ್ಲೂ ಶ್ರವಣಯೋಗವಿದ್ದರೆ, ಪೂರ್ವದಿನ ಉದಯಕ್ಕೆ ಶ್ರವಣವಿರದಿದ್ದರೆ ಪರವಾದ ದ್ವಾದಶಿಯೇ ಗ್ರಾಹ್ಮವು. ಎರಡೂ ದಿನ ಸೂರ್ಯೋದಯದಲ್ಲಿ ಶ್ರವಣಯೋಗವಿದ್ದರೆ ಪೂರ್ವದಿನವೇ ಗ್ರಾಹ್ಯವು, ವಿದ್ದಾಧಿಕದಲ್ಲಾದರೂ ಪರದಿನ ಉದಯದಲ್ಲಿ ಅಥವಾ ಅದಕ್ಕಿಂತ ಮುಂದೆ ಶ್ರವಣಯೋಗವಾದಲ್ಲಿ ಪರವೇ ಗ್ರಾಹ್ಯವೆಂಬುದು ನಿರ್ವಿವಾದವಾದದ್ದು. ಎರಡೂಕಡೆಗಳಲ್ಲಿ ಶ್ರವಣಯೋಗವಾದಾಗ ಹಿಂದೆ ಹೇಳಿದಂತೆ ವಿಷ್ಣು ಶೃಂಖಲಯೋಗವಾದಲ್ಲಿ ಪೂರ್ವವು ಗ್ರಾಹ್ಯವು. ಇಲ್ಲವಾದರೆ ಪರವು ಗ್ರಾಹ್ಯವು. ಏಕಾದಶೀ ಮಾರನೇದಿನ ಶ್ರವಣದ್ವಾದಶೀ ಹೀಗೆ ಬಂದರೆ ಆಗ ಉಪವಾಸವನ್ನು ಎರಡೂ ದಿನ ಮಾಡತಕ್ಕದ್ದು. ಎರಡೂ ವ್ರತಗಳೂ ನಿತ್ಯಗಳೇ ಆಗಿವೆ. ಎರಡೂ ವ್ರತಗಳಿಗೆ ದೇವತೆಗಳು ಒಂದೇ ಇರುವದರಿಂದ ಮಧ್ಯದಲ್ಲಿ ಪಾರಣೆಯು ಲೋಪವಾಯಿತು ಎನ್ನುವಂತಿಲ್ಲ. ಎರಡು ಉಪವಾಸಗಳನ್ನು ಮಾಡಲಸಮರ್ಥನಾದರೆ ಏಕಾದಶಿ ವ್ರತಸಂಕಲ್ಪ ಮಾಡುವದಕ್ಕಿಂತ ಮೊದಲು ತನ್ನ ಅಸಮರ್ಥತೆಯನ್ನು ತಿಳಿದು ಏಕಾದಶಿಯಲ್ಲಿ ಫಲಾಹಾರಮಾಡಿ ದ್ವಾದಶಿಯಲ್ಲಿ ನಿರಶನವನ್ನು ಮಾಡತಕ್ಕದ್ದು. ಹೀಗೆ ಮಾಡಿದ್ದರಿಂದ ಏಕಾದಶೀ ವ್ರತವನ್ನು ಲೋಪಮಾಡಿದಂತಾಗುವದಿಲ್ಲ. ಶ್ರವಣಯುಕ್ತವಾದ ದ್ವಾದಶಿಯಲುಪವಾಸಮಾಡಿದರೆ ಏಕಾದಶಿ ವ್ರತಮಾಡಿದ ಪುಣ್ಯವು ಸಿಗುವದೆಂದು ನಾರದೋಕ್ತಿಯಿದ. “ಶ್ರಮಣದಿಂದ ಯುಕ್ತವಾದ ದ್ವಾದಶಿಯಲ್ಲಿ ವೈಷ್ಣವರು ಹಾಗೂ ಸ್ಮಾರ್ತರು ಉಪೋಷಣ ಮಾಡತಕ್ಕದ್ದು. ಇಂಥ ಸಂದರ್ಭದಲ್ಲಿ ಏಕಾದಶಿಯನ್ನು ಬಿಟ್ಟರೂ ಪರಿಚ್ಛೇದ - ೨ 02 ಅಡ್ಡಿಯಿಲ್ಲ” ಹೀಗೆಂದು ಮಾಧವವಚನವಿದೆ. ಇಲ್ಲಿ ಏಕಾದಶಿಯು “ತ್ಯಾಗ” ಎಂದರೆ “ಫಲಾಹಾರ ತ್ಯಾಗ” ಎಂದರ್ಥ. ಭೋಜನ “ತ್ಯಾಗ” ಎಂದು ಗ್ರಹಿಸತಕ್ಕದ್ದಲ್ಲ. ಏಕಾದಶಿಯನ್ನು ಬಿಟ್ಟರೂ ಅಡ್ಡಿಯಿಲ್ಲ ಎಂದು ಹೇಳಿದ್ದರಿಂದ ಆ ದಿನ ಭೋಜನಮಾಡುವದು ಯುಕ್ತವೆಂದು ಯಾರೂ ತಿಳಿಯತಕ್ಕದ್ದಲ್ಲ. ಇನ್ನು ತಾನು ಎರಡೂದಿನ ಉಪವಾಸ ಮಾಡಬಹುದೆಂದು ಭ್ರಮಿಸಿ ಅದರಂತೆ ಸಂಕಲ್ಪಿಸಿಯಾಗಿದ್ದರೂ, ಮುಂದೆ ಎರಡನೇ ಉಪವಾಸವನ್ನು ಮಾಡಲಾರೆನೆಂದನ್ನಿಸಿದಾಗ ಆತನು ಏಕಾದಶಿಯಲ್ಲುಪವಾಸ ಮಾಡಿ ದ್ವಾದಶಿಯಲ್ಲಿ ವಿಷ್ಣು ಪೂಜೆ ಮಾಡಿ ಪಾರಣೆಮಾಡತಕ್ಕದ್ದು. ವ್ರತಾಂಗ ಪೂಜೆಯನ್ನು ಮಾಡಿ ಉಪವಾಸದ ಅಸಮರ್ಥತೆಗಾಗಿ ಉಪವಾಸ ಪ್ರತಿನಿಧಿರೂಪಂ ವಿಷ್ಣು ಪೂಜನಂ ಕರಿ” ಹೀಗೆ ಸಂಕಲ್ಪಿಸಿ ಪುನಃ ಪೂಜೆಯನ್ನು ಮಾಡತಕ್ಕದ್ದು, ದ್ವಾದಶಿಯಲ್ಲಿ ಶ್ರವಣಯೋಗವಾದಾಗ ಏಕಾದಶಿಯಲ್ಲಿಯೂ ಶ್ರವಣಯೋಗವಿದ್ದರೆ ಅದರಲ್ಲಿಯೇ ಶ್ರವಣದ್ವಾದಶೀ ವ್ರತವನ್ನೂ ಮಾಡತಕ್ಕದ್ದು. ವಿದ್ಯೆಕಾದಶಿಯಲ್ಲಿ ಶ್ರವಣಯೋಗವಿದ್ದಾಗ ಯಾರಿಗೆ ಏಕಾದಶೀವ್ರತವು ಪ್ರಾಪ್ತವಾಗುವದೋ ಅವರು ತಂತ್ರದಿಂದ ಎರಡನ್ನೂ ಒಂದೇ ದಿನ ಮಾಡಿದಲ್ಲಿ ಎರಡು ಉಪವಾಸಗಳೂ ಸಿದ್ಧಿಸಿದಂತಾಗುವದು. ಶ್ರವಣದ್ವಾದಶೀವ್ರತವಿದ್ದ ಅನ್ನರಿಗೆ (ವಿಶ್ವಕಾದಶಿ ನಿಷಿದ್ಧವಾದವರಿಗೆ) ಎರಡು ಉಪವಾಸಗಳು ಪ್ರಾಪ್ತವಾಗುವವು, ಅಶಕ್ತರಾದವರು ಮೊದಲನೇ ಉಪವಾಸದಲ್ಲಿ ಫಲಾಹಾರ, ಎರಡನೇದರಲ್ಲಿ ನಿರಶನ ಉಪವಾಸಗಳನ್ನು ಮಾಡತಕ್ಕದ್ದು. ಹೀಗೆ ತೋರುತ್ತದೆ. ಪಾರಣೆಯ ವಿಷಯ ಈ ಎರಡೂ ವ್ರತಗಳ ಅಂತ್ಯದಲ್ಲಿ ಮಾಡುವ ಪಾರಣೆಯು ಮುಖ್ಯವು. ಒಂದರ ಅಂತ್ಯದಲ್ಲಿ ಮಾಡುವ ಪಾರಣೆಯು ಗೌಣವು, ವಿಷ್ಣು ಶೃಂಖಲಯೋಗವಿಲ್ಲದಲ್ಲಿ ಎರಡೂ ವ್ರತಗಳ ಅಂತ್ಯದಲ್ಲಿ ಅಂದರೆ ತ್ರಯೋದಶಿಯಲ್ಲಿ ಪಾರಣೆಮಾಡತಕ್ಕದ್ದು, ವಿಷ್ಣು ಶೃಂಖಲ ಯೋಗದಲ್ಲಾದರೋ ಪೂರ್ವದಿನ ತಂತ್ರದಿಂದ ಮಾಡಿದ ಎರಡು ಉಪವಾಸಗಳ ಪಾರಣೆಯನ್ನು ದ್ವಾದಶಿಯಲ್ಲಿ ಮಾಡತಕ್ಕದ್ದು. ಆದರೆ ಶ್ರವಣನಕ್ಷತ್ರಕ್ಕಿಂತ ದ್ವಾದಶಿಯು ಅಧಿಕವಾಗಿದ್ದರೆ ಶ್ರವಣವನ್ನತಿಕ್ರಮಿಸಿ ದ್ವಾದಶಿಯಲ್ಲಿ ಪಾರಣಮಾಡತಕ್ಕದ್ದು. ಪಾರಣದಿನದಲ್ಲಿ ಶ್ರವಣನಕ್ಷತ್ರವೇ ದ್ವಾದಶಿಗಿಂತ ಹೆಚ್ಚಾಗಿದ್ದರೆ ಆಗ ಏಕಾದಶೀ ವ್ರತದ ಪಾರಣೆಗೆ ದ್ವಾದಶಿಯ ಉಲ್ಲಂಘನ ದೋಷವುಂಟಾಗುವದು. ಆದ್ದರಿಂದ ದ್ವಾದಶಿಯಲ್ಲೇ ಪಾರಣೆಮಾಡತಕ್ಕದ್ದು, ಈ ಏಕಾದಶೀನಿಮಿತ್ತ ಪಾರಣೆಗೆ ಅನ್ಯಾಪೇಕ್ಷೆಯಿಲ್ಲ. ಇಂಥ ಸಂದರ್ಭದಲ್ಲಿ ಇಪ್ಪತ್ತು ಘಟೀರೂಪವಾದ ಶ್ರವಣದ ಮಧ್ಯಭಾಗವನ್ನು ಬಿಟ್ಟು ಪಾರಣೆಮಾಡತಕ್ಕದ್ದು. ಉದಾ:ಏಕಾದಶಿ ೩೦ಗ೦ ಉತ್ತರಾಷಾಢಾ ೨೯ಂ ದ್ವಾದಶೀ ೨೫೦ ಶ್ರವಣ ೨೯೦ ಇಲ್ಲಿ ಮೊದಲನೇ ದಿನ ಎರಡು ಉಪವಾಸಗಳನ್ನು ತಂತ್ರದಿಂದ ಮಾಡಿ ಮಾರನೇದಿನ ಶ್ರವಣ ಮಧ್ಯಭಾಗದ ಆವಶಿಷ್ಟ ಒಂಭತ್ತು ಘಟೀರೂಪವಾದ ಕಾಲವನ್ನು ಬಿಟ್ಟು ಇಪ್ಪತ್ತುಘಟಿ ರೂಪವಾದ ಶ್ರವಣದ ಕೊನೆಯ ಭಾಗದಲ್ಲಿ ಪಾರಣೆಮಾಡತಕ್ಕದ್ದು, ಮೇಲೆ ಹೇಳಿದ ಉದಾಹರಣೆಯಲ್ಲಿ ಏಕಾದಶಿಯು ಹತ್ತು ಘಟಿಯಿದ್ದು, ದ್ವಾದಶಿಯು ಎಂಟು ಘಟಿ ಇದ್ದರೆ ದ್ವಾದಶೀ ಶ್ರವಣಗಳು ಹದಿನೈದು ನಾಲ್ವತ್ತು ಹೀಗಾದಾಗ ಶ್ರವಣ ಮಧ್ಯಭಾಗದ ತ್ಯಾಗದಲ್ಲಿ ದ್ವಾದಶಿಯ ಉಲ್ಲಂಘನೆಯು ಸಂಭವಿಸುವದಾದ್ದರಿಂದ ಸಂಗವಕಾಲವನ್ನು ಬಿಟ್ಟು ಮೂರು ಧರ್ಮಸಿಂಧು ಮುಹೂರ್ತಪರ್ಯಂತ ಅಥವಾ ಏಳುಮುಹೂರ್ತಾದಿಗಳಲ್ಲಿ ನಕ್ಷತ್ರದ ಮಧ್ಯಭಾಗದಲ್ಲಿಯೇ ಪಾರಣೆಮಾಡತಕ್ಕದ್ದು. ಈ ಶ್ರವಣದ ಮಧ್ಯಭಾಗವನ್ನು ಬಿಡಬೇಕನ್ನುವದು ಭಾದ್ರಪದ ಮಾಸಗತವಾದ ಶ್ರವಣದ್ವಾದಶಿಯಲ್ಲಿ ಮಾತ್ರ ಹೊರತು ಮಾಘ, ಫಾಲ್ಗುಣ ಮಾಸಗತವಾದ ಶ್ರವಣದ್ವಾದಶಿ ವ್ರತದ ಪಾರಣೆಯಲ್ಲಲ್ಲ. ಬೇರೆ ಮಾಸಗಳಲ್ಲಾದ ಶ್ರವಣ ಭಾಗದಲ್ಲಿ “ವಿಷ್ಣು ಪರಿವರ್ತನ ಬರುವದಿಲ್ಲ. ಇನ್ನು ಭಾದ್ರಪದ ಮಾಸದಲ್ಲಿಯಾದರೂ ಶ್ರವಣ ಮಧ್ಯವರ್ಜನ ಮಾತ್ರದಿಂದ ನಿಷೇಧವನ್ನು ಪಾಲಿಸುವ ಭರದಲ್ಲಿ ವಿಷ್ಣು ಶೃಂಖಲಯೋಗವಿಲ್ಲದಿದ್ದರೂ ಶ್ರವಣಮಧ್ಯವನ್ನು ಮಾತ್ರ ಬಿಟ್ಟು ಭೋಜನಮಾಡುವವರಿಗೆ ಶ್ರವಣದ್ವಾದಶೀವ್ರತದ ಮಹಿಮೆಯೇ ಗೊತ್ತಿಲ್ಲದ ಭ್ರಾಂತರೆಂದೆನ್ನಬೇಕಾಗುವದು. ಈ ಶ್ರವಣದ್ವಾದಶೀನಿರ್ಣಯವು ಬೇರೆ ಬೇರೆ ಮಾಸಗತವಾದ ಶ್ರವಣದ್ವಾದಶಿಗಳಿಗೂ ಅನ್ವಯಿಸುವದೆಂದು ತಿಳಿಯತಕ್ಕದ್ದು. ಶ್ರವಣದ್ವಾದಶೀ ವ್ರತದಲ್ಲಿ ನದೀಸಂಗಮ ಸ್ನಾನಮಾಡಿ ಕಲಶದಲ್ಲಿ ಬಂಗಾರಮಯವಾದ ಜನಾರ್ದನ ಪ್ರತಿಮೆಯಲ್ಲಿ ವಿಷ್ಣುವನ್ನು ಪೂಜಿಸಿ ವಸ್ತ್ರ, ಯಜ್ಞಪವೀತ, ಪಾದುಕಾ, ಛತ್ರಾದಿಗಳನ್ನರ್ಪಿಸಿ ಉಪವಾಸ ಮಾಡತಕ್ಕದ್ದು. ಪಾರಣೆಯ ದಿನದಲ್ಲಿ ಮೊಸರು ಅನ್ನದಿಂದ ಯುಕ್ತವಾದ ವಸ್ತ್ರದಿಂದಾವೃತವಾದ ಜಲಪೂರ್ಣವಾದ ಘಟವನ್ನೂ, ಛತ್ರಾದಿಯುಕ್ತವಾದ, ಪೂಜಿಸಿದ, ಪರಿವಾರ ಸಹಿತವಾದ ಆ ಪ್ರತಿಮೆಯನ್ನೂ ದಾನಮಾಡತಕ್ಕದ್ದು. ಅದಕ್ಕೆ “ನಮೋನಮಸ್ತೇ ಗೋವಿಂದ ಬುಧ ಶ್ರವಣ ಸಂಜ್ಞಕ ಅಘಘಸಂಕ್ಷಯಂ ಕೃತ್ವಾ ಸರ್ವಸೌಖ್ಯಪ್ರದೋಭವ” ಇದೇ ಮಂತ್ರವು, ವಾಮನ ಜಯಂತಿಯು ಭಾದ್ರಪದ ಶುಕ್ಲ ಶ್ರವಣಯುಕ್ತವಾದ ದ್ವಾದಶಿಯಲ್ಲಿ “ವಾಮನೋತ್ಪತ್ತಿ"ಯು. ಇದು ಮಧ್ಯಾಹ್ನವ್ಯಾಪಿನಿಯು. ಮಧ್ಯಾಹ್ನ ಅಥವಾ ಹೊರತಾದ ಕಾಲದಲ್ಲಿ ಶ್ರವಣಯುಕ್ತವಾದ ದ್ವಾದಶಿಯು ಗ್ರಾಹ್ಯವು, ಎರಡೂ ದಿನ ಶ್ರವಣಯೋಗವಾದಲ್ಲಿ ಪೂರ್ವವೇ ಗ್ರಾಹ್ಯವು. ಸರ್ವಥಾ ದ್ವಾದಶಿಗೆ ಶ್ರವಣಯೋಗವಿರದೆ ಏಕಾದಶಿಯಲ್ಲೇ ಶ್ರವಣಯೋಗವಾದಲ್ಲಿ ಆಗ ದ್ವಾದಶಿಯು ಮಧ್ಯಾಹ್ನವ್ಯಾಪಿನಿಯಾದರೂ ಅದನ್ನು ಬಿಟ್ಟು ಏಕಾದಶಿಯಲ್ಲೇ ಅದನ್ನು ಮಾಡತಕ್ಕದ್ದು. ಶುದ್ಧಕಾದಶಿಯಲ್ಲಿ ಶ್ರವಣವಿರದಿದ್ದರೆ ದಶಮೀ ವಿಕಾದಶಿಯಾದರೂ ಶ್ರವಣಯುತವಾದರೆ ಅದರಲ್ಲೇ ವ್ರತವನ್ನು ಮಾಡತಕ್ಕದ್ದು. ಪೂರ್ವದಿನದಲ್ಲಿಯೇ ಮಧ್ಯಾಹ್ನವ್ಯಾಪಿನಿಯಾದ ದ್ವಾದಶಿಯಿದ್ದು, ಪರದಿನದಲ್ಲಿ ಮಧ್ಯಾಹ್ನ ಕಾಲದಲ್ಲಿ ಶ್ರವಣಯುಕ್ತವಾದರೆ ಆಗ ಪೂರ್ವದಿನವೇ ಗ್ರಾಹ್ಯವು, ಎರಡೂ ತಿಥಿಗಳಲ್ಲಿ ಶ್ರವಣಯೋಗವಿರದಿದ್ದರೆ ಮಧ್ಯಾಹ್ನವ್ಯಾಪಿನಿಯಾದ ದ್ವಾದಶಿಯಲ್ಲಿ ವ್ರತವನ್ನು ಮಾಡತಕ್ಕದ್ದು. ಎರಡೂ ದಿನ ಮಧ್ಯಾಹ್ನ ವ್ಯಾಪ್ತಿಯಿದ್ದರೆ ಅಥವಾ ಇಲ್ಲದಿದ್ದರೆ ಏಕಾದಶೀಯುಕ್ತವಾದ ದ್ವಾದಶಿಯನ್ನೇ ಗ್ರಾಹ್ಯಮಾಡತಕ್ಕದ್ದು. ಪಾರಣೆಯನ್ನಾದರೋ ಹಿಂದೆ ಹೇಳಿದ ರೀತಿಯಿಂದ ಎರಡರ ಅಂತ್ಯದಲ್ಲಿ ಅಥವಾ ಒಂದರ ಅಂತ್ಯದಲ್ಲಾಗಲೀ ಮಾಡತಕ್ಕದ್ದು. ಇದರಲ್ಲಿ ಮಧ್ಯಾಹ್ನ ನದೀಸಂಗಮದಲ್ಲಿ ಸ್ನಾನಮಾಡಿ ಸುವರ್ಣ ವಾಮನಪ್ರತಿಮೆಯನ್ನು ಪೂಜಿಸಿ ಅರ್ಥ್ಯವನ್ನು ಸುವರ್ಣಪಾತ್ರದಿಂದ ಕೊಡತಕ್ಕದ್ದು, “ದೇವೇಶ್ವರಾಯದೇವಾಯ ದೇವಸಂಭೂತಿಕಾರಿಣೇ ಪ್ರಭವೇ ಸರ್ವದೇವಾನಾಂ ವಾನುನಾಯ ನಮೋನಮ:||” ಇದು ಪೂಜಾಮಂತ್ರವು. “ನಮಸ್ತ ಪದ್ಮನಾಭಾಯ ನಮಸ್ತ ಜಲಶಾಯಿನೇ ತುಮರ್ಥ್ಯ೦ ಪ್ರಯಾಮಿ ಬಾಲವಾಮನರೂಪಿಣೇ ನಮಃಪರಿಚ್ಛೇದ - ೨ USE ಶಾರ್ಙ್ಗಧನುರ್ಬಾಣ ಪಾಣಯೇ ವಾಮನಾಯ ಚ | ಯುಕ್ ಫಲದಾತ್ರೇಚ ವಾಮನಾಯ ನಮೋನಮಃ||” ಇದು ಅರ್ಥ್ಯಮಂತ್ರವು. ಮರುದಿನ ಸಪರಿವಾರ ವಾಮನಮೂರ್ತಿಯನ್ನು “ವಾಮನಃ ಪ್ರತಿಕೃಜ್ಞಾತಿ ವಾಮನೋSಹಂಗರಾಮಿತೇ ವಾಮನಂ ಸರ್ವತೋಭದ್ರಂ ದ್ವಿಜಾಯ ಪ್ರತಿಪಾದಯ! ಈ ಮಂತ್ರದಿಂದ ಬ್ರಾಹ್ಮಣನಿಗೆ ದಾನಮಾಡತಕ್ಕದ್ದು. ಈ ದ್ವಾದಶಿಯ ದಿನ ರಾತ್ರಿಯಲ್ಲಿ ಅಥವಾ ಅಸಂಭವವಾದರೆ ಹಗಲ್ಲಿನಲ್ಲಾದರೂ ದಧಿವ್ರತವನ್ನು ನಿವೇದಿಸಿ, ದೇವನನ್ನು ಪೂಜಿಸಿ ಮೊಸರನ್ನು ದಾನಮಾಡತಕ್ಕದ್ದು. ಮತ್ತು “ಪಯೋವ್ರತ"ವನ್ನು ಸಂಕಲ್ಪಿಸತಕ್ಕದ್ದು. ಈ ಪಯೋವ್ರತದಲ್ಲಿ ಹಾಲಿನಿಂದ ಸಿದ್ಧವಾಗುವ ಪಾಯಸ, ಹಾಲಿನಿಂದ ಬೇಯಿಸಿದ ಅನ್ನಗಳು ವರ್ಜಗಳು, ಮೊಸರು ಹಾಲಿನ ವಿಕಾರವೇ ಆದರೂ ಗ್ರಾಹ್ಯವು. ಇದರಂತೆ “ದಧಿವ್ರತ” ದಲ್ಲಿ ಮಜ್ಜಿಗೆ (ಕಡೆದದ್ದು ನಿಷಿದ್ಧವಲ್ಲ. ಎಲ್ಲಿ ಸೂತಿಕಾ (ಹಡೆದು ಹತ್ತು ದಿನಗಳೊಳಗಿನ) ಗೋವಿನ ಹಾಲು ಹಾಗೂ “ಸಂಧಿನೀ ಕ್ಷೀರ” (ಗರ್ಭಧಾರಣೆಗಾಗಿ ಬಸವನಿಂದ ಆಕ್ರಮಿಸಿರುವ ಗೋವು ಗಳನ್ನು ನಿಷೇಧಿಸಲಾಗುವದೋ ಅಲ್ಲಿ ಆ ಹಾಲಿನ ವಿಕಾರಗಳಾದ ಮಜ್ಜಿಗೆ, ಮೊಸರುಗಳೂ ನಿಷಿದ್ದಗಳು, ಭಾದ್ರಪದ ಶುಕ್ಲ ಚತುರ್ದಶಿಯಲ್ಲಿ “ಅನಂತವ್ರತ"ವು ಹೇಳಲ್ಪಟ್ಟಿದೆ. ಉದಯದಿಂದ ಮೂರು ಮುಹೂರ್ತವ್ಯಾಪಿನಿಯಾದ ಚತುರ್ದಶಿಯು ಗ್ರಾಹ್ಮವು. ಇದು ಮುಖ್ಯಪಕ್ಷವು. ಇದರ ಅಭಾವದಲ್ಲಿ ದ್ವಿಮುಹೂರ್ತ ವ್ಯಾಪಿನಿಯಾದರೂ ಗೌಣಪಕ್ಷದಿಂದ ಗ್ರಾಹ್ಯವು, ದ್ವಿಮುಹೂರ್ತಕ್ಕಿಂತ ಕಡಿಮೆಯಿದ್ದರೆ ಪೂರ್ವದಿನವೇ ಗ್ರಾಹ್ಯವು. ಎರಡೂ ದಿನ ಸೂರ್ಯೋದಯ ವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು ಯಾಕೆಂದರೆ ಅದು ಸಂಪೂರ್ಣ ತಿಥಿಯಾಗುವದು. ಇದಕ್ಕೆ ಪೂರ್ವಾಹ್ನವು ಮುಖ್ಯ ಕರ್ಮಕಾಲವು. ಅದರ ಅಭಾವದಲ್ಲಿ ಮಧ್ಯಾಹ್ನವಾದರೂ ಅಡ್ಡಿಯಿಲ್ಲ. ಈ ವ್ರತದಲ್ಲಿ ಸುವರ್ಣ ಪ್ರತಿಮೆಯಲ್ಲಿಯೂ, ಹದಿನಾಲ್ಕು ಗಂಟುಗಳುಳ್ಳ ಅನಂತದಾರ"ದಲ್ಲಿಯೂ, ಅನಂತ ಪೂಜೆಯನ್ನು ಹೇಳಿದೆ. ಅದರ ವಿಧಾನ-ಮತ್ತು ಉದ್ಯಾಪನಾದಿಗಳನ್ನೆಲ್ಲ ಕೌಸ್ತುಭಾದಿ ಗ್ರಂಥಾಂತರಗಳಿಂದ ತಿಳಿಯತಕ್ಕದ್ದು. ಪೂಜಿತವಾದ “ದಾರ"ವು ನಷ್ಟವಾದರೆ ಗುರುವಿನ ವರಣೆಯನ್ನು ಮಾಡಿ ಅವನ ಅನುಜ್ಞೆಯಿಂದ ಯಥಾಶಕ್ತಿ ಕೃಚ್ಛಪ್ರಾಯಶ್ಚಿತ್ತಾದಿಗಳನ್ನು ಮಾಡಿ ದ್ವಾದಶಾಕ್ಷರ ವಾಸುದೇವ ಮಂತ್ರದಿಂದ ನೂರೆಂಟಾವರ್ತಿ ಧೃತಾಹುತಿಯಿಂದ ಹೋಮಿಸತಕ್ಕದ್ದು. ಮತ್ತು ಕೇಶವಾದಿ ಇಪ್ಪತ್ತುನಾಲ್ಕು ನಾಮಮಂತ್ರಗಳಿಂದ ಒಂದೊಂದಾಹುತಿಯನ್ನೂ ಹೋಮಿಸಿ ಹೋಮಶೇಷವನ್ನು ಮುಗಿಸಿ ನೂತನ ದಾರದಲ್ಲಿ ಹಿಂದೆ ಹೇಳಿದಂತೆ ಪೂಜಾದಿಗಳನ್ನು ಮಾಡುವದು. ಅಗತ್ಯ ಪೂಜೆ ವೃಷಭಸಂಕ್ರಾಂತಿಯಾದ ಏಳನೇ ದಿನದಲ್ಲಿ ಅಗಸ್ತನು ಅಸ್ತಮಿಸುವನು. ಸಿಂಹಸಂಕ್ರಾಂತಿಯಾದ ಇಪ್ಪತ್ತೊಂದನೇ ದಿನದಲ್ಲಿ ಉದಯಿಸುವನು. ಕನ್ಯಾಸಂಕ್ರಾಂತಿಯ ಪೂರ್ವಏಳು ದಿನಗಳೊಳಗೆ ಅಗಪೂಜಾ ಅರ್ಭ್ಯಾದಿಗಳನ್ನು ನೆರವೇರಿಸುವದು. ಪ್ರೊಷ್ಠ ಪದೀ ಶ್ರಾದ್ಧ ಭಾದ್ರಪದ ಹುಣ್ಣಿವೆಯಲ್ಲಿ ಪ್ರಪಿತಾಮಹ(ಮುತ್ತಜ್ಜನ ನಂತರದ ಸಪತ್ನಿಕ ಪಿತ್ರಾದಿಗಳ ಉದ್ದಿಶ್ಯ ಶ್ರಾದ್ಧ ಮಾಡತಕ್ಕದ್ದು. ಅಲ್ಲಿ ಈ ಮೂರು ಪಿತೃಗಳು ವಸು, ರುದ್ರ, ಆದಿತ್ಯ ರೂಪರೆಂದು ಧರ್ಮಸಿಂಧು ಭಾವಿಸತಕ್ಕದ್ದು. ಮತ್ತು ಸಪಕರಾದ ಮಾತಾಮಹಾದಿ (ತಾಯಿಯ ತಂದೆ=ಅಜ್ಜ, ಮುತ್ತಜ್ಜತ್ರಯವನ್ನೂ ಉದ್ದೇಶಿಸಿ ಶ್ರಾದ್ಧವನ್ನು ಮಾಡತಕ್ಕದ್ದು. ಇದು ಪಾರ್ವಣವಿರುವದರಿಂದ ಅಪರಾಹ್ನದಲ್ಲಿ ಮಾಡತಕ್ಕದ್ದು. ಇದಕ್ಕೆ ಪುರೂರವಾದ್ರ್ರವ ಸಂಜ್ಞಕ ವಿಶ್ವೇದೇವರು. ಈ ಶ್ರಾದ್ಧವನ್ನು ಪಿಂಡಸಹಿತವಾಗಿಯೇ ಮಾಡತಕ್ಕದ್ದು. ಈ ವಿಷಯದಲ್ಲಿ ಕೆಲವರು ಪ್ರಪಿತಾಮಹನ ನಂತರದ ಪಿತ್ರಾದಿತ್ರಯವನ್ನು ಮಾತ್ರ ಉದ್ದೇಶಿಸಿ, ನಾಂದೀಶ್ರಾದ್ಧ ಧರ್ಮದಿಂದ ಸತ್ಯವಸು ಸಂಜ್ಞಕ ವಿಶ್ವೇದೇವತಾಕವಾಗಿ ಶ್ರಾದ್ಧ ಮಾಡತಕ್ಕದ್ದು; ಹೊರತು ಮಾತಾಮಹಾದಿ ಉದ್ದೇಶವು ಅಗತ್ಯವಾದದ್ದಲ್ಲ ಎನ್ನುವರು. ಸಕ್ಕನ್ಮಹಾಲಯ ಶ್ರಾದ್ಧ ಮಾಡುವದಿದ್ದರೆ ಮತ್ತು ಬಹುಳ ಪ್ರತಿಪದೆಯಿಂದ ಇಡೀ ಪಕ್ಷದಲ್ಲಿ ಪ್ರತಿದಿನವೂ ಮಹಾಲಯ ಮಾಡುವದಿದ್ದರೆ, ಈ ಪೌಷ್ಕಪದೀ ಶ್ರಾದ್ಧವನ್ನು ಹುಣ್ಣಿಮೆಯಲ್ಲಿ ಅಗತ್ಯವಾಗಿ ಮಾಡತಕ್ಕದ್ದು, ಪಂಚಮ್ಮಾದಿ ಪಕ್ಷದಂತೆ ಮಹಾಲಯ ಮಾಡುವದಿದ್ದಲ್ಲಿ ಇದು ಕೃತಾಕೃತವು. (ಮಾಡಿದರೂ ಮಾಡಬಹುದು ಬಿಟ್ಟರೂ ಬಿಡಬಹುದು) ಮಹಾಲಯ ನಿರ್ಣಯ ಶಕ್ತನಾದವನು ಭಾದ್ರಪದ ಅಪರಪಕ್ಷದಲ್ಲಿ ಪ್ರತಿಪದೆಯಿಂದಾರಂಭಿಸಿ ಅಮಾವಾಸ್ಯೆಯ ಪರ್ಯಂತ ಪ್ರತಿದಿನ ಮಹಾಲಯ ಮಾಡತಕ್ಕದ್ದು. ಪಕ್ಷದಲ್ಲಿ ತಿಥಿವೃದ್ಧಿಯಾದರೆ ಹದಿನಾರು, ತಿಥಿ ಪ್ರಾಸವಾದರೆ ಹದಿನಾಲ್ಕು, ಇಲ್ಲವಾದರೆ ಹದಿನೈದು ಮಹಾಲಯಗಳಾಗುವವು. ಇನ್ನು ಶಕ್ರನುಸಾರ ಪಂಚಮಿಯಿಂದಾರಂಭಿಸಿ ಅಮಾವಾಸ್ಯೆಯ ಪರ್ಯಂತ ಮಾಡುವದು (ಇದು ಪಂಚಮ್ಮಾದಿಪಕ್ಷ) ಷಷ್ಯಾದಿ ದರ್ಶಪರ್ಯಂತ ಮಾಡುವದು (ಷಷ್ಟಾದಿಪಕ್ಷ), ಅಷ್ಟಮ್ಮಾದಿ ಅಮಾಪರ್ಯಂತ, (ಅಷ್ಟಮ್ಯಾದಿಪಕ್ಷ) ದಶಮ್ಯಾದಿ ದರ್ಶಾಂತ, (ದಶಮ್ಯಾದಿಪಕ್ಷ) ಏಕಾದಶ್ಯಾದಿ ಪರ್ಯಂತ (ಅಷ್ಟಮಾದಿಪಕ್ಷ) ದಶಮ್ಯಾದಿ ದರ್ಶಾಂತ (ದಶಮ್ಯಾದಿಪಕ್ಷ) ಏಕಾದಶ್ಯಾದಿ ದರ್ಶಾಂತ (ಏಕಾದಶಾದಿಪಕ್ಷ)ಶಕ್ತಿಯ ತಾರತಮ್ಯದಂತೆ ಯಾವದಾದರೊಂದು ಪಕ್ಷವನ್ನು ಹಿಡಿದು ಮಹಾಲಯ ಮಾಡತಕ್ಕದ್ದು. ಇವೆಲ್ಲವುಗಳಲ್ಲೂ ಅಸಮರ್ಥನಾದರೆ ನಿಷಿದ್ಧವಲ್ಲದ ಯಾವದಾದರೊಂದು ತಿಥಿಯಲ್ಲಿ “ಸಕೃನ್ಮಹಾಲಯ (ಇಡೀ ಪಕ್ಷದ ಸಲುವಾಗಿ ಒಂದೇ ಮಹಾಲಯ)ವನ್ನು ಮಾಡತಕ್ಕದ್ದು. ಪ್ರತಿಪದೆಯಿಂದ ಅಮಾವಾಸ್ಯೆಯವರೆಗೆ ನೇರವಾಗಿ ಮಾಡುವ ಪಕ್ಷದಲ್ಲಿ “ಚತುರ್ದಶಿ"ಯನ್ನು ಬಿಡಬೇಕಾಗಿಲ್ಲ. ಹಿಂದೆ ಹೇಳಿದ ಪಂಚಮ್ಯಾದಿ ಐದು ಪಕ್ಷಗಳಂತೆ ಮಹಾಲಯ ಚತುರ್ದಶಿಯನ್ನು ಬಿಟ್ಟು ಅನ್ಯತಿಥಿಗಳಲ್ಲಿ ಮಾಡತಕ್ಕದ್ದು. ಸಕ್ಕನ್ಮಹಾಲಯಕ್ಕಾದರೂ ಚತುರ್ದಶಿಯು ವರ್ಜವು. ಸಕ್ಕನ್ಮಹಾಲಯ ಮಾಡುವಾಗ ಪ್ರದಿಪದೆ, ಷಷ್ಟಿ, ಏಕಾದಶಿ, ಚತುರ್ದಶೀ, ಶುಕ್ರವಾರ, ಜನ್ಮ ನಕ್ಷತ್ರ, ರೋಹಿಣೀ, ಮಘಾ, ರೇವತೀ ಇವುಗಳನ್ನು ಬಿಡತಕ್ಕದ್ದು. ಕೆಲವು ಕಡೆಯಲ್ಲಿ ತ್ರಯೋದಶೀ, ಸಪ್ತಮೀ, ರವಿವಾರ, ಕುಜವಾರ ಇವು ವರ್ಜಗಳೆಂದು ಹೇಳಿದೆ. ತಂದೆಯು ಯಾವ ತಿಥಿಯಲ್ಲಿ ಮೃತನಾಗಿದ್ದಾನೋ ಅಪರಪಕ್ಷದಲ್ಲಿ ಅದೇ ಮಿತಿಗೆ ಮಹಾಲಯ ಮಾಡುವಾಗ ಹಿಂದೆ ಹೇಳಿದ ನಿಷೇಧಗಳನ್ನು ಲಕ್ಷಿಸತಕ್ಕದ್ದಿಲ್ಲ. (ಪ್ರತಿವಾದಿ ನಿಷಿದ್ದ ತಿಥಿಗಳಾದರೂ ನಿಷೇಧವಲ್ಲ. ಇನ್ನು “ಅಶಕ್ತನಾದವನು ಪಿತೃಪಕ್ಷದಲ್ಲಿ ಸಕ್ಕನ್ಮಹಾಲಯ ಮಾಡುವಾಗ ನಿಷಿದ್ರದಿನವಾದರೂ ಮಾಡಬಹುದು” ಎಂದು ವಚನವಿದೆ. ಅಶಕ್ತನಾದವನು ಅನುಕೂಲವಾದ ಯಾವದೇ ದಿನದಲ್ಲಾದರೂ ಸಕೃನ್ಮಹಾಲಯವನ್ನು ಮಾಡಬಹುದು. ತಂದೆಯ ಪರಿಚ್ಛೇದ - ೨ ೯೧ ಮೃತತಿಥಿಯಲ್ಲ ಸಂಭವವಾದಾಗ ನಿಷಿದ್ಧ ತಿಥ್ಯಾದಿಗಳನ್ನು ಬಿಟ್ಟು ಮಹಾಲಯ ಮಾಡಬಹುದು. ಮೃತತಿಥಿಯ ಅಭಾವದಲ್ಲಿ ದ್ವಾದಶೀ, ಅಮಾವಾಸೆ, ಅಷ್ಟಮೀ, ಭರಣೀ, ವ್ಯತೀಪಾತಗಳಲ್ಲಿ ಸಕೃನ್ಮಹಾಲಯ ಮಾಡಲು ಯಾವ ತಿಥ್ಯಾದಿ ದೋಷವೂ ಇಲ್ಲ. ಸಂನ್ಯಾಸಿಗಳ ಮಹಾಲಯವನ್ನು ಮಾತ್ರ ಅಪರಾಹ್ನ ವ್ಯಾಪಿನಿಯಾದ ದ್ವಾದಶಿಯಲ್ಲಿಯೇ ಪಿಂಡ ಸಹಿತವಾಗಿ ಮಾಡತಕ್ಕದ್ದು. ಅವರಿಗೆ ಬೇರೆ ತಿಥಿಗಳಲ್ಲಿ ಮಾಡಬಾರದು. ಪಿತೃಮೃತತಿಥಿಯು ಚತುರ್ದಶಿಯಾದರೂ ಮಹಾಲಯವನ್ನು ಚತುರ್ದಶಿಯಲ್ಲಿ ಮಾಡತಕ್ಕದ್ದಲ್ಲ. ಈ ಅಪರಪಕ್ಷ ಚತುರ್ದಶಿಯು ಶಸ್ತ್ರಾದಿ ಹತರಾದವರಿಗೇ ಮೀಸಲು. “ಶಸ್ತ್ರಹತವ ಚತುರ್ದಶ್ಯಾಂ” ಇತ್ಯಾದಿ ವಿಶೇಷ ವಚನವು ಬಲಿಷ್ಠವಾದದ್ದು. ಆದರೆ ಪ್ರತಿವಾರ್ಷಿಕ ಶ್ರಾದ್ಧವು ಇದೇ ಚತುರ್ದಶಿಯಾದರೆ ಚತುರ್ದಶಿಯಲ್ಲಿ ಮಾಡಲೇಬೇಕಾಗುವದು. ಕಾರಣ ಪ್ರತಿವಾರ್ಷಿಕದ ಹೊರತಾದ ಶ್ರಾದ್ಧಗಳಿಗೆ ಚತುರ್ದಶಿಯು ನಿಷಿದ್ದವು. ಹುಣ್ಣಿವೆಯಲ್ಲಿ ಮೃತರಾದವರ ಮಹಾಲಯ ಶ್ರಾದ್ಧವನ್ನು ಈ ಹುಣ್ಣಿವೆಯಲ್ಲಿ ಮಾಡತಕ್ಕದ್ದಲ್ಲ. ಹುಣ್ಣಿವೆಯು ಅಪರಪಕ್ಷದಲ್ಲಿ ಬರದಿರುವದರಿಂದ ಆ ದಿನ ಮಹಾಲಯ ಪ್ರಸಕ್ತಿ ಉಂಟಾಗುವದಿಲ್ಲ. ಆದುದರಿಂದ ಚತುರ್ದಶೀ ಅಥವಾ ಹುಣ್ಣಿವೆಯಲ್ಲಿ ಮೃತರಾದವರ ಶ್ರಾದ್ಧವನ್ನು ದ್ವಾದಶೀ ಅಥವಾ ಅಮಾವಾಸ್ಯೆ ಮೊದಲಾದ ತಿಥಿಗಳಲ್ಲಿ ಮಾಡತಕ್ಕದ್ದು. ಮಹಾಲಯಕ್ಕೆ ಕನ್ಯಾತಿಂಗಳಿರುವದು ಪ್ರಶಸ್ತವಾಚಕವು. ಹೊರತು ನಿಮಿತ್ತವಲ್ಲ. (ಕನ್ಯಾ ತಿಂಗಳಿಲ್ಲದಿದ್ದರೆ ಮಾಡಬಾರದೆಂದೇನೂ ಇಲ್ಲ) ಅಪರಪಕ್ಷದಲ್ಲಿ ಕನ್ಯಾಮಾಸವಿದ್ದರೆ ವಿಶೇಷ ಪೂಜ್ಯವಾಗುವದು. ಅಪರಪಕ್ಷದ ಪ್ರತಿಪದೆಯಿಂದ ಅಮಾವಾಸೆಯೊಳಗೆ ಮಹಾಲಯಕ್ಕೆ ಯಾವದಾದರೊಂದು ನಿಮಿತ್ತದಿಂದ ಮಾಡಲಡ್ಡಿಯಾದರೆ ಅಶ್ವಿನ ಶುಕ್ಲ ಪಂಚಮಿಯೊಳಗೆ ಯಾವದಾದರೊಂದು ದಿನ ಮಹಾಲಯ ಮಾಡಲಡ್ಡಿಯಿಲ್ಲ. ಅದರೊಳಗೂ ಅಸಂಭವವಾದರೆ “ಯಾವಶ್ಚಿಕದರ್ಶನಂ” ಎಂಬ ವಚನಾನುಸಾರ ವೃಶ್ಚಿಕಮಾಸ ಬರುವದರೊಳಗೆ ದ್ವಾದಶೀ ವ್ಯತೀಪಾತ ಮೊದಲಾದ ಪರ್ವಗಳಲ್ಲಿ ಮಾಡಬಹುದು(ಮಲಮಾಸ ಬಂದಾಗ ಅದರಲ್ಲಿ ಮಹಾಲಯವನ್ನು ಮಾಡಕೂಡದೆಂದು ನಿರ್ಣಯಸಿಂಧುವಿನಲ್ಲಿ ಭೂಗುವಚನವಿದೆ) ಮೃತಿತಿಥಿಶ್ರಾದ್ಧ ಮತ್ತು ಮಹಾಲಯಗಳಲ್ಲಿ ಪಕ್ವವಾದ ಅನ್ನದಿಂದಲೇ ಶ್ರಾದ್ಧ ಮಾಡತಕ್ಕದ್ದು. ಹೊರತು ಅಮಾನ್ನದಿಂದ ಮಾಡತಕ್ಕದ್ದಲ್ಲ. ಮಹಾಲಯದಲ್ಲಿ, ಗಯಾಶ್ರಾದ್ಧದಲ್ಲಿ, ತಾಯಿ ತಂದೆಗಳ ಮೃತಾಹದಲ್ಲಿ ಸದ್ಯ ವಿವಾಹ ಮಾಡಿಕೊಂಡವನಾದರೂ ಯಥಾವಿಧಿಯಾಗಿ ಪಿಂಡದಾನ ಮಾಡತಕ್ಕದ್ದು. ಇಡೀ ಅಪರಪಕ್ಷದಲ್ಲಿ ಮಹಾಲಯ ಮಾಡುವಾಗ ದೇವತೋದ್ದೇಶದಲ್ಲಿ ಮೂರುಪಕ್ಷಗಳಿವೆ. ಪಿತ್ರಾದಿಪಾರ್ವಣತ್ರಯ ಹಾಗೂ ಪತ್ಯಾದಿ ಏಕೋದ್ದಿಷ್ಟ ಪಿತೃಗಣಸಹಿತ ಸರ್ವಪಿತೃಗಳನ್ನುದ್ದೇಶಿಸಿ ಮಾಡುವದು ಒಂದುಪಕ್ಷ. (ಇದರ ವಿವರ: ಪಿತ್ರಾದಿ ಮೂರು ಪಾರ್ವಣ ಅಂದರೆ ಪಿತೃಪಿತಾಮಹ, ಪ್ರತಿತಾಮಹ, ಮಾತೃಪಿತಾಮಹೀ, ಪ್ರಪಿತಾಮಹೀ, ಸಪಕ ಮಾತಾಮಹ ಮಾತುಃ - ಪಿತಾಮಹ ಮಾತುಃ, ಪ್ರಪಿತಾಮಹರು. ಪತ್ಯಾದಿ ಏಕೋದ್ದಿಷ್ಟ ಪಿತೃಗಣ ಅಂದರೆ ಪತ್ನಿ, ಸಪಕರಾದ ಪುತ್ರಾದಿಗಳು, ತಂದೆಯ ಅಣ್ಣತಮ್ಮಂದಿರು, ಸೋದರಮಾವ, ತನ್ನ ಅಣ್ಣತಮ್ಮಂದಿರು, ಮತ್ತು ಪತಿಸಹಿತರಾದ ತಂದೆಯ ಅಕ್ಕತಂಗಿಯರು, ತಾಯಿಯ ಅಕ್ಕತಂಗಿಯರು, ೯೨ ಧರ್ಮಸಿಂಧು ತನ್ನ ಅಕ್ಕ ತಂಗಿಯರು, ಮತ್ತು ಇವರ ಪುತ್ರರು, ಮಾವ, ಗುರು ಈ ಎಲ್ಲ ಹೇಳಿದ ಪಿತೃಗಳನ್ನುದ್ದೇಶಿಸಿ ಮಾಡುವದು) ಇನ್ನು “ಸಪತ್ನಿಕ ಪಿತ್ರಾದಿತ್ರಯ, ಸಪಕ ಮಾತಾಮಹಾದಿತ್ರಯ ಹೀಗೆ ಷಡ್ ದೈವತ, ಇವರ ಉದ್ದೇಶದಿಂದ ಮಾಡುವದು. ಇದು ಮತ್ತೊಂದು ಪಕ್ಷ. (ಇದರ ವಿವರ- ಸಪಕ ಪಿತೃಪಿತಾಮಹ ಪ್ರಪಿತಾಮಹರು, ಸಪಕ ಮಾತಾಮಹ ಮಾತೃಪಿತಾಮಹ ಮಾತೃ ಪ್ರಪಿತಾಮಹ, ಹೀಗೆ ಷಡ್‌ದೇವತೋದ್ದೇಶದಿಂದ ಮಾಡುವದು) ಇನ್ನು ಷಡ್‌ದೈವತೈಕೋದ್ದಿಷ್ಟಗಣೋದ್ದೇಶದಿಂದ ಮಾಡುವದು. ಇದು ಮೂರನೇ ಪಕ್ಷ. (ಇದರ ವಿವರ:- ಹಿಂದೆ ಹೇಳಿದಂತೆ ಸಪತ್ನಿಕ ಪಿತೃತ್ರಯ, ಸವಕಮಾತಾಮಹತ್ರಯ ಈ ಆರು ದೇವತಾ ಹಾಗೂ ಸ್ತ್ರೀ, ಇತ್ಯಾದಿ ಏಕೋದ್ದಿಷ್ಟಗಣ ಇವುಗಳ ಉದ್ದೇಶದಿಂದ ಮಾಡುವದು.) ಈ ಮೂರರಲ್ಲೊಂದು ಪಕ್ಷವನ್ನು ಹಿಡಿದು ಪಂಚಮ್ಮಾದಿಪಕ್ಷದ ಮಹಾಲಯಗಳನ್ನೂ ಮಾಡತಕ್ಕದ್ದು, “ಸಕ್ಕನ್ಮಹಾಲಯ"ದಲ್ಲಾದರೋ ಆ ಎಲ್ಲ ಪಿತೃಗಳ ಉದ್ದೇಶದಿಂದ ದೇವತಾಸಂಕಲ್ಪವನ್ನು ಮಾಡುವದು. “ಪಿತೃಪಿತಾಮಹ ಪ್ರಪಿತಾಮಹಾನಾಂ ಮಾತೃತತೃಪತ್ನಿ ಪಿತಾಮಹೀ ತತ್ಸಪತ್ನಿ ಪ್ರಪಿತಾಮಹೀ ತತ್ಸಪನಾಂ (ಅಥವಾ) ಅಸ್ಮತ್ ಸಾಪತ್ನಮಾತು: (ಎಂದು ಪ್ರತ್ಯೇಕವಾಗಿ ಉದ್ದೇಶಿಸುವದು) ಮಾತಾಮಹ-ಮಾತೃಪಿತಾಮಹ ಮಾತೃ ಪ್ರಪಿತಾಮಹಾನಾಂ ಸಪಕಾನಾಂ ಯಥಾನಾಮ ಗೋತ್ರಾಣಾಂ ವಾದಿರೂಪಾಣಾಂ ಪಾರ್ವಣ ವಿಧಿನಾ ಪತ್ರಾ: ಪುತ್ರ-ಕನ್ಯಕಾಯಾ:-ಪಿತೃವ್ಯ-ಮಾತುಲ-ಭ್ರಾತು:-ಪಿತೃಷ್ಟಸು:-ಮಾತೃಷ್ಟಸು:- ಆತ್ಮಭಗಿನ್ಯಾ:-ಪಿತೃವ್ಯ ಪುತ್ರ-ಜಾಮಾತು:-ಭಾಗಿನೇಯಸ್ಕ ಶ್ವಶುರಸ್ಯ-ಶ್ವಾ-ಆಚಾರಸ್ಯ- ಉಪಾಧ್ಯಾಯಸ್ಯ-ಗುರೂ-ಸ:-ಶಿಷ್ಯ - ಏತೇಷಾಂ ಯಥಾನಾಮ ಗೋತ್ರಾಣಾಂ ರೂಪಾಣಾಂ ಪುರುಷರಿಗೆ “ಸಪತ್ನಿಕಾನಾಂ” ಸ್ತ್ರೀಯರಿಗೆ “ಸಭರ್ತೃಕ ಸಾಪಾನಾಂ ಏಕೋದ್ದಿಷ್ಟ ವಿಧಿನಾ ಮಹಾಲಯಾ ಪರಪಕ್ಷ ಶಾಂ (ಅಥವಾ) ಸನ್ಮಹಾಲಯಾಪರಪಕ ಶ್ರಾದ್ಧ ಸದೈವಂ ಸದ್ಯ: ಕರಿಷ್ಯ ಹೀಗೆ ಸಂಕಲ್ಪಿಸುವದು. ಹಿಂದೆ ಹೇಳಿದ ಈ ಪಿತೃಗಳಲ್ಲಿ ಜೀವಿಸಿರುವವರ ಉದ್ದೇಶವನ್ನು ಬಿಡತಕ್ಕದ್ದು. ಮೃತರಾದವರನ್ನಷ್ಟೇ ಉದ್ದೇಶಿಸುವದು. ಮಾತಾಮಹ ಮೊದಲಾದವರ ಪೈಕಿ ಪತ್ನಿಯು ಜೀವಿಸಿರುತ್ತಿದ್ದರೆ “ಸಪಕಸ್ಯ” ಎಂಬ ಪದವನ್ನು ತ್ಯಜಿಸತಕ್ಕದ್ದು. ಅದೇ ಸ್ತ್ರೀಯರಿಗಾದರೆ “ಸಭರ್ತೃಕಾಯಾ” ಎಂಬ ವಾಕ್ಯವನ್ನು ಬಿಡತಕ್ಕದ್ದು. ಸ್ಮೃತಿವಚನಾನುಸಾರವಾಗಿ ಮಹಾಲಯ, ಗಯಾಶ್ರಾದ, ನಾಂದೀಶಾದ, ಮತ್ತು ಅನ್ನಷ್ಟಕ ಶಾಸ್ತ್ರ ಇವುಗಳಲ್ಲಿ ನವದೇವತಾತ್ಮಕವಾಗಿ (ಪಿತೃತ್ರಯ, ಮಾತೃತ್ರಯ, ಸವಕ ಮಾತಾಮಹಾದಿತ್ರಯ) ಶ್ರಾದ್ಧ ಮಾಡತಕ್ಕದ್ದು. ಉಳಿದ ಶಾಸ್ತ್ರಗಳನ್ನು ಪಡ್‌ದೇವತಾತ್ಮಕ (ಸಪತ್ನಿಕ ಪಿತೃತ್ರಯ ಸಪಕ ಮಾತಾಮಹತ್ರಯ) ಹೀಗೆ ಆರು ದೇವತೆಗಳನ್ನುದ್ದೇಶಿಸಿ ಶ್ರಾದ್ಧ ಮಾಡತಕ್ಕದ್ದು. ಅನ್ನಷ್ಟಕ, ನಾಂದೀಶ್ರಾದ್ಧ, ಪ್ರತಿ ಸಾಂವತ್ಸರಿಕ, ಮಹಾಲಯ, ಮತ್ತು ಗಯಾಶ್ರಾದ್ಧಗಳಲ್ಲಿ ಹಾಗೂ ಸಪಿಂಡೀಕರಣದ ಪೂರ್ವದಲ್ಲಿ ತಾಯಿ ಶ್ರಾದ್ಧವನ್ನು ಪೃಥಕ್ಕಾಗಿ ಮಾಡುವದು. ಬೇರೆ ಶಾಸ್ತ್ರಗಳಲ್ಲಿ ಪತಿಸಹಿತವಾಗಿ ಮಾಡತಕ್ಕದ್ದು. ಮತ್ತು ಮೂರು ಪಾರ್ವಣಗಳನ್ನಷ್ಟೇ ಉದ್ದೇಶಿಸುವದು. ಕೆಲ ಗ್ರಂಥಕಾರರು ಮಾತಾವಓತ್ರಯವನ್ನು ಪ್ರತ್ಯೇಕವಾಗಿ ಉಚ್ಚರಿಸಿ ಅಂತೂ ನಾಲ್ಕು ಪಾರ್ವಣ (ದ್ವಾದಶದೇವತಾತ್ಮಕ) ವಾಗಿ ಮಾಡಬೇಕೆಂದು ಹೇಳುತ್ತಾರೆ. ಹಿಂದೆ ಹೇಳಿದ ಪಿತೃಗಣ (ಏಕೋ )ಗಳನ್ನು ಗಯಾಶ್ರಾದ, ತೀರ್ಥಶ್ರಾದ, ಮತ್ತು ನಿತೃತರ್ಪಣ ಇವುಗಳಲ್ಲಿ ಪರಿಚ್ಛೇದ - ೨ ೯೩ ತಕ್ಕೊಳ್ಳುವದು. ಮಹಾಲಯದಲ್ಲಿ “ಧೂರಿಲೋಚನ ವಿಶ್ವದೇವ"ರನ್ನೂ ಹೇಳತಕ್ಕದ್ದು. ಸಮರ್ಥನಾದಲ್ಲಿ ವಿಶ್ವೇದೇವಾರ್ಥವಾಗಿ ಇಬ್ಬರು ಬ್ರಾಹ್ಮಣರನ್ನು ಆಮಂತ್ರಿಸತಕ್ಕದ್ದು. ಹಾಗೂ ಮೂರು ಪಾರ್ವಣಗಳಿಗೆ ಪ್ರತಿಪಾರ್ವಣಕ್ಕೆ ಮೂವರಂತೆ ಒಂಬತ್ತು ಬ್ರಾಹ್ಮಣರನ್ನು ನಿಯಮಿಸತಕ್ಕದ್ದು, ಪತ್ನಿ ಆದಿ ಏಕೋದ್ದಿಷ್ಟಗಣಗಳಲ್ಲಿ ಪ್ರತಿಯೊಂದೊಂದರ ಸ್ಥಾನದಲ್ಲಿ ಒಬ್ಬೊಬ್ಬರಂತೆ ಬ್ರಾಹ್ಮಣರನ್ನಾಮಂತ್ರಿಸತಕ್ಕದ್ದು. ಅಶಕ್ತನಾದಲ್ಲಿ ದೇವಾರ್ಥವಾಗಿ ಒಬ್ಬ ಪ್ರತಿಪರ್ವಾಣಕ್ಕೊಬ್ಬೊಬ್ಬರಂತೆ ಮೂವರು, ಎಲ್ಲ ಏಕೋದ್ದಿಷ್ಟಗಣಗಳಿಂದ ಒಬ್ಬ ಹೀಗೆ ಬ್ರಾಹ್ಮಣರನ್ನು ನಿಮಂತ್ರಿಸತಕ್ಕದ್ದು. ವಿಶ್ವದೇವರ ಸಲುವಾಗಿ ಇಬ್ಬರನ್ನಾ ಮಂತ್ರಿಸಿದರೆ ಪ್ರತಿಪಾರ್ವಣಕ್ಕೂ ಮೂವರಂತೆಯೇ ಆಮಂತ್ರಿಸಬೇಕಾಗುವದು. ಹೀಗಲ್ಲದೇ ದೇವಾರ್ಥವಾಗಿ ಇಬ್ಬರನ್ನು ನಿಯಮಿಸಿ ಪ್ರತಿಪಾರ್ವಣಕ್ಕೊಬ್ಬರಂತೆ ಆಗಕೂಡದು. ಅಥವಾ ಪ್ರತಿಪಾರ್ವಣಕ್ಕೂ ಮೂವರಂತೆ ನಿಯಮಿಸಿ ವಿಶ್ವೇದೇವರ ಸ್ಥಾನದಲ್ಲಿ ಒಬ್ಬರು; ಹೀಗಾಗಕೂಡದು. ಹೀಗಾದರೆ ವೈಷಮ್ಯವಾದಂತಾಗುವದು. ಹೀಗೆ ಅಮಾವಾಸ್ಯಾದಿ ಶ್ರಾದ್ಧಗಳಲ್ಲಿಯೂ ತಿಳಿಯತಕ್ಕದ್ದು. ಅತ್ಯಶಕ್ತನಾದರೆ ಎರಡು ಪಾರ್ವಣತ್ರಯದ ಸಲುವಾಗಿ ಒಬ್ಬನನ್ನಾದರೂ ನಿಮಂತ್ರಿಸಬಹುದು. ಮಹಾಲಯ ಶ್ರಾದ್ಧದಲ್ಲಿ ಕೊನೆಯಲ್ಲಿ ಮಹಾವಿಷ್ಣು ಸ್ಥಾನಕ್ಕಾಗಿ ಬ್ರಾಹ್ಮಣನನ್ನು ಅವಶ್ಯವಾಗಿ ನಿಮಂತ್ರಿಸತಕ್ಕದ್ದು. ಹೀಗೆ “ಕೌಸ್ತುಭ"ದಲ್ಲಿ ಹೇಳಿದೆ. ತಾಯಿಯು ಜೀವಿಸಿರುತ್ತಿದ್ದರೆ ಮಲತಾಯಿಗೆ ಏಕೋದ್ದಿಷ್ಟವೇ ಹೊರತು ಪಾರ್ವಣವಲ್ಲ. ಅನೇಕ ಮಲತಾಯಿಗಳು ಮೃತರಾದಲ್ಲಿ ಅವರ ಶ್ರಾದ್ಧವನ್ನು ಸರ್ವಮಾತೃದ್ದೇಶವಾಗಿ ಒಬ್ಬ ಬ್ರಾಹ್ಮಣ, ಒಂದು ಪಿಂಡಗಳಿಂದ ಮಾಡತಕ್ಕದ್ದು. ಅರ್ಘಪಾತ್ರಗಳನ್ನು ಮಾತ್ರ ಬೇರೆ ಬೇರೆ ಮಾಡತಕ್ಕದ್ದು. ತನ್ನ ತಾಯಿ ಸಹಿತ ಸಾವತ್ನ ಮಾತೃಗಳ ಶ್ರಾದ್ಧ ಮಾಡುವಾಗ ಸ್ವಜನನೀ ಹಾಗೂ ಸಾಪತ್ನಮಾತೃ ಈ ಎಲ್ಲರ ಸಲುವಾಗಿ ಒಬ್ಬ ಬ್ರಾಹ್ಮಣನನ್ನೇ ನಿಯಮಿಸುವದು. ಅದರಂತೆ ಪಿಂಡ, ಅರ್ಘಪಾತ್ರ ಹೀಗೆ ಮಾತೃಪಾರ್ವಣದಲ್ಲೇ ಸಮಾವೇಶವಾಗಿ ಮಾಡುವಾಗ ಹೀಗೆ ಪಾರ್ವಣವೇ ಹೊರತು ಪೃಥಕ್ಕಾಗಿ ಮಾಡತಕ್ಕದ್ದಲ್ಲ. ಎಲ್ಲ ಸಾಪತ್ರ ಮಾತೃಗಳಿಗೂ ಪ್ರತ್ಯೇಕವಾಗಿ ಏಕೋದ್ದಿಷ್ಟದಿಂದ ಮಾಡತಕ್ಕದ್ದೆಂಬ ಪಕ್ಷವೂ ಇದೆ. ಮಹಾಲಯದಲ್ಲಿ ಪಾರ್ವಣಕ್ಕಾಗಿ ಅಕರಣವನ್ನು ಹೇಳಿದೆ. ಏಕೋದ್ದಿಷ್ಟಗಣಗಳ ಬಗ್ಗಾಗಿ ಅಗೌಕರಣದ ಕೃತಾಕೃತವು (ವಿಕಲ್ಪವು) ಅಕರಣ ಮಾಡುವದಿದ್ದಲ್ಲಿ ಏಕೋದ್ದಿಷ್ಟ ಗಣದ ಸಲುವಾಗಿ ಅಕರಣಾನ್ನವನ್ನು ಪೃಥಕ್ ಪಾತ್ರದಲ್ಲಿ ಇಟ್ಟುಕೊಳ್ಳುವದು. ಮಹಾಲಯದಲ್ಲಿ ಸರ್ವಪಾರ್ವಣ ಸಲುವಾಗಿ ಮತ್ತು ಏಕೋದ್ದಿಷ್ಟ ಸಲುವಾಗಿಯೂ ಒಂದಾವರ್ತಿ ಕತ್ತರಿಸಿದ ಒಂದೇ ದರ್ಭಗಳ ಪುಂಜವಿರತಕ್ಕದ್ದು. ದರ್ಶ ಶ್ರಾದ್ಧಾದಿಗಳಲ್ಲಿ ಪ್ರತಿ ಪಾರ್ವಣಕ್ಕೂ ಪ್ರತ್ಯೇಕ ದರ್ಭೆಗಳನ್ನು ಪಯೋಗಿಸತಕ್ಕದ್ದು. ಉಳಿದ ಶ್ರಾದ್ಧ ಪ್ರಯೋಗ ಹಾಗೂ ಅನೇಕ ಮಾತೃಗಳನ್ನುದ್ದೇಶಿಸಿದಾಗ ಮಾಡಬೇಕಾಗುವದು. ಅಂಜನ, ಅಭ್ಯಂಜನ, ಮೊದಲಾದವುಗಳ ಮಂತ್ರಗಳ ಊಹ ಇತ್ಯಾದಿಗಳನ್ನು “ಶ್ರಾದ್ಧಸಾಗರ ಗ್ರಂಥದಲ್ಲಿ ಅಥವಾ ಆಯಾಯ ಶಾಖೋಕ್ತ ಪ್ರಯೋಗ ಗ್ರಂಥಗಳಲ್ಲಿ ಹೇಳಿದಂತೆ ಆಚರಿಸತಕ್ಕದ್ದು. ಸಕೃನ್ಮಹಾಲಯದಲ್ಲಿ ಶ್ರಾದ್ಧಾಂಗ ಪಿತೃತರ್ಪಣವನ್ನು ವರದಿನದಲ್ಲಿಯೇ ಮಾಡತಕ್ಕದ್ದು. ಈ ಪಿತೃತರ್ಪಣವನ್ನು ಸರ್ವ ಪಿತೃಗಳನ್ನು ದ್ವೇಶಿಸಿ ಪ್ರಾತಃಸಂಧ್ಯೆಯ ಮೊದಲು, ಅಥವಾ ನಂತರದಲ್ಲಿ, ಬ್ರಹ್ಮಯಜ್ಞಾಂಗ ತರ್ಪಣದ ೯೪ ಧರ್ಮಸಿಂಧು ಹೊರತಾಗಿ ಪ್ರತ್ಯೇಕವಾಗಿ ಮಾಡತಕ್ಕದ್ದು. ಇದು ಸಕ್ಕನ್ಮಹಾಲಯ ಶ್ರಾದ್ಧ ವಿಷಯದ್ದು. ಪ್ರತಿಪದಾದಿ, ಪಂಚವಾದಿ ಪಕ್ಷಗಳಂತೆ ಮಹಾಲಯ ಮಾಡುವದಾದಲ್ಲಿ ಬ್ರಾಹ್ಮಣ ವಿಸರ್ಜನಮಾಡಿದ ಕೂಡಲೇ ಶ್ರಾದ್ಧ ಪಿತೃಗಳನ್ನುದ್ದೇಶಿಸಿ ತರ್ಪಣ ಮಾಡತಕ್ಕದ್ದು. ಪತ್ನಿಯು ರಜಸ್ವಲೆಯಾದಲ್ಲಿ ಸನ್ಮಹಾಲಯವನ್ನು ಮಾಡತಕ್ಕದ್ದಲ್ಲ. ಯಾಕೆಂದರೆ ಕಾಲವಕಾಶವಿದೆ. ಅಮಾವಾಸ್ಯೆಯಲ್ಲಿ ರಜಸ್ವಲೆಯಾದರೂ ಅಶ್ವಿನ ಶುಕ್ಲ ಪಂಚಮಿಯ ವರೆಗೆ ಗೌಣಕಾಲವಿದೆ. ಪ್ರತಿ ಪದ್ಮಾದಿ ಪಕ್ಷದಲ್ಲಿ ಪ್ರಾರಂಭದಿನ ಪಾಕಕ್ಕಿಂತ ಮೊದಲು ಸ್ತ್ರೀ ರಜಸ್ವಲೆಯಾದರೆ ಮುಂದೆ ಪಂಚವಾದಿ ಪಕ್ಷಗಳಲ್ಲಿ ಮಾಡತಕ್ಕದ್ದು. ಅಂದರೆ ಪ್ರತಿಪದಿಯ ಮಹಾಲಯದಲ್ಲಿ ರಜಸ್ವಲೆಯಾದರೆ ಮುಂದಿನ ಪಂಚವಾದಿ ಪಕ್ಷಗಳಲ್ಲಿ ಮಾಡುವದು. ಹೀಗೆಯೇ ಪಂಚಮ್ಮಾದಿಗಳಲ್ಲಿ ಪ್ರತಿಬಂಧಕವಾದರೂ ದಶಮ್ಮಾದಿಪಕ್ಷವಿದ್ದೇ ಇದೆ. ಸೂತಕ ಪ್ರಾಪ್ತಿಯ ವಿಷಯ ಹಾಗೂ ಭ್ರಾತ್ರಾದಿ ಮಹಾಲಯ ಇವುಗಳ ನಿರ್ಣಯವನ್ನು ತೃತೀಯ ಪರಿಚ್ಛೇದದ ಉತ್ತರಾರ್ಧದಲ್ಲಿ ನೋಡತಕ್ಕದ್ದು. ಪಾಕಾರಂಭವಾದನಂತರ ರಜೋದೋಷ ಪ್ರಾಪ್ತವಾದಲ್ಲಿ ರಜಸ್ವಲೆಯನ್ನು ಅವಳ ದರ್ಶನವಾಗದಂತೆ ಅನ್ಯಗೃಹದಲ್ಲಿರಿಸಿ ಮಹಾಲಯವನ್ನು ಮಾಡತಕ್ಕದ್ದು. ವಿಧವಾಕರ್ತೃಕ ಶ್ರಾದ್ದದಲ್ಲಿಯೂ ಅವಳು ರಜಸ್ವಲೆಯಾದರೆ ಹೀಗೆಯೇ ಮಾಡತಕ್ಕದ್ದು, ಪುತ್ರರಹಿತಳಾದ ವಿಧವೆಯು ತಾನೇ “ಮಮಭರ್ತೃತಕೃ-ಪಿತಾಮಹಾನಾಂ ಭರ್ತುರ್ಮಾತೃ ತಪ್ಪಿತಾಮಹೀ-ಪ್ರಪಿತಾಮಹೀನಾಂ ಮಮ ಪಿತೃಪಿತಾಮಹ ಪ್ರಪಿತಾಮಹಾನಾಂ ಮಮ ಮಾತೃಪಿತಾಮಹೀ ಪ್ರಪಿತಾಮಹೀನಾಂ ಮಮ ಮಾತಾಮಹ ಮಾತೃಪಿತಾಮಹ ಮಾತೃ ಪ್ರಪಿತಾಮಹಾನಾಂ ಮಮ ಮಾತಾಮಹೀ ಮಾತೃ ಪ್ರಪಿತಾಮಹೀನಾಂತೃಪ್ತರ್ಥಂ ಸಕೃನ್ಮಹಾಲಯಾ ಪರಪಕ್ಷಶ್ರಾದ್ಧಂ ಕರಿಷ್ಯ” ಹೀಗೆ ತಾನು ಸಂಕಲ್ಪಿಸಿ ಬ್ರಾಹ್ಮಣದ್ವಾರಾ ಅಕರಣಾದಿ ಸಹಿತ ವಿಶಿಷ್ಟ ಪ್ರಯೋಗವನ್ನು ಮಾಡಿಸುವದು. ಬ್ರಾಹ್ಮಣನಾದರೂ ‘ಆಮುಕನಾಮ್ಮಾ ಯಜಮಾನಾ ಭರ್ತೃತತೃ ಪಿತಾಮಹ” ಇತ್ಯಾದಿ ಉಚ್ಚರಿಸಿ ಪ್ರಯೋಗವನ್ನು ; ಅಶಕ್ತಿಯಲ್ಲಿ ಭತ್ರ್ರಾದಿತ್ರಯ, ತನ್ನ ಪಿತ್ರಾದಿತ್ರಯ, ಸ್ವಮಾತ್ರಾದಿತ್ರಯ, ಸಪಕ ಮಾತಾಮಹಾದಿತ್ರಯ ಹೀಗೆ ನಾಲ್ಕು ಪಾರ್ವಣೋದ್ದೇಶದಿಂದ ಮಹಾಲಯ ಮಾಡತಕ್ಕದ್ದು. ಅತ್ಯಶಕ್ತಿಯಲ್ಲಿ ಸ್ವಭತ್ರ್ರಾದಿತ್ರಯ, ಸ್ವಪಿತ್ರಾದಿತ್ರಯ ಹೀಗೆ ಎರಡೇ ಪಾರ್ವಣಮಾಡತಕ್ಕದ್ದು. ತಂದೆಯು ಜೀವಿಸಿರುವಾಗ ಪುತ್ರಾದಿಗಳು ಸಾಂಕಲ್ಪಿಕ ವಿಧಿಯಿಂದ ಮಹಾಲಯವನ್ನು ಮಾಡತಕ್ಕದ್ದು. ತಂದೆಯು ಸಂನ್ಯಾಸ ಸ್ವೀಕರಿಸಿದ್ದರೆ ಅಥವಾ ಪತಿತನಾದರೆ ಆಗ ಪುತ್ರನು ಪಿತು: ಪಿತ್ರಾದಿ(ತಂದೆಯ ತಂದೆ ಮೊದಲಾದ) ಸರ್ವಪಿತೃ ಉದ್ದೇಶದಿಂದ ಪಿಂಡಪ್ರದಾನರಹಿತವಾಗಿ ಸಾಂಕಿಕ ವಿಧಿಯಿಂದ ಮಹಾಲಯವನ್ನು ಮಾಡತಕ್ಕದ್ದು, ತಂದೆಯು ಸಂನ್ಯಾಸತಕ್ಕೊಂಡಲ್ಲಿ ಅಥವಾ ಪತಿತನಾದಾಗ ನಾಂದೀಶ್ರಾರ ಮತ್ತು ತೀರ್ಥಶ್ರಾದ್ಧದಲ್ಲಿ ತಂದೆಯು ಯಾರಿಗೆ ಕೊಡುತ್ತಿದ್ದನೋ ಅವರನ್ನುದ್ದೇಶಿಸಿ ಪುತ್ರನು ಕೊಡತಕ್ಕದ್ದು. ಎಂದೂ, ಮುಂಡನ (ಕೇಶವಪನ), ಪಿಂಡದಾನ ಎಲ್ಲಾ ಪ್ರೇತಕರ್ಮ ಇವುಗಳನ್ನು ಜೀವತೃಕ (ತಂದೆಯು ಜೀವಿಸಿರುವವನು)ನು, ಮತ್ತು ಗರ್ಭಿಣಿ ಪತಿಯು ಮಾಡಬಾರದು ಎಂದೂ ವಚನವಿದೆ. ಪಿಂಡದಾನಾದಿ ವಿಸ್ತರಶಾರ ಮಾಡಲಸಮರ್ಥನಾದವರನಾದರೂ ಸಾಂಕಿಕ ವಿಧಿಯಿಂದ ಮಾಡತಕ್ಕದ್ದು. ಈ ಪರಿಚ್ಛೇದ - ೨ ೯೫ ಸಾಂಕಿಕ ವಿಧಿಯಲ್ಲಿ ಅರ್ಘ, ಸಮಂತ್ರಕ ಆವಾಹನ, ಅಕರಣ, ಪಿಂಡಪ್ರದಾನ, ವಿಕಿರ, “ಸ್ವಧಾಂ ವಾಚಯಿಷ್ಟೇ” “ಓಂ ಸ್ವಧೋಚ್ಯತಾಂ” ಇತ್ಯಾದಿ, ಸ್ವಧಾವಾಚನಪ್ರಯೋಗ ಇವುಗಳನ್ನು ಬಿಡತಕ್ಕದ್ದು. ಬ್ರಾಹ್ಮಣರ ಕೊರತೆಯಾದಾಗ ವಿಶ್ವೇದೇವರ ಸ್ಥಾನದಲ್ಲಿ ಶಾಲಿಗ್ರಾಮ ದೇವರನ್ನಿಟ್ಟುಕೊಂಡು ಶ್ರಾದ್ಧವನ್ನು ಮಾಡತಕ್ಕದ್ದು. ಸರ್ವಥಾ ಬ್ರಾಹ್ಮಣರು ಸಿಗದಿದ್ದಾಗ ದರ್ಭಬಟು (ದರ್ಭಗಳನ್ನು ಪುರುಷಾಕೃತಿಮಾಡಿ) ಇದನ್ನಿಟ್ಟುಕೊಂಡು ಶ್ರಾದ್ಧವನ್ನು ಮಾಡತಕ್ಕದ್ದು. ಪ್ರತಿವಾರ್ಷಿಕಾದಿ ಪ್ರಾಪ್ತಿಯಲ್ಲಿ ಮೃತರಾದ ತಂದೆ ತಾಯಿಗಳ ಪ್ರಥಮವರ್ಷದಲ್ಲಿ ಮಹಾಲಯವು ವಿಕಲ್ಪವು (ಕೃತಾಕೃತ) ಮಲಮಾಸದಲ್ಲಿ ಮಹಾಲಯವನ್ನು ಮಾಡತಕ್ಕದ್ದಲ್ಲ. ಇದೇ ಅಪರಪಕ್ಷದಲ್ಲಿ ಪ್ರತಿ ವಾರ್ಷಿಕ ಶ್ರಾದ್ಧ ಬಂದಲ್ಲಿ ಮೃತತಿಥಿಯಲ್ಲಿ ವಾರ್ಷಿಕ ಶ್ರಾದ್ಧವನ್ನು ಮಾಡಿ ಬೇರೆ ತಿಥಿಯಲ್ಲಿ ಮಹಾಲಯ ಮಾಡತಕ್ಕದ್ದು. ಪ್ರತಿಪದಾದಿ ಅಮಾವಾಸ್ಯೆವರೆಗೆ ನೇರವಾಗಿ ಪ್ರತಿದಿನ ಮಹಾಲಯ ಮಾಡುವಾಗ ಮೃತತಿಥಿಯು ಪ್ರಾಪ್ತವಾದರೆ ವಾರ್ಷಿಕ ಶ್ರಾದ್ಧವನ್ನು ಮಾಡಿ ಬೇರೆ ಪಾಕದಿಂದ ಮಹಾಲಯವನ್ನು ಮಾಡತಕ್ಕದ್ದು. ಅಮಾವಾಸ್ಯೆಯ ದಿವಸ ಪ್ರತಿವಾರ್ಷಿಕ ಶ್ರಾದ್ಧ ಪ್ರಾಪ್ತವಾದರೆ ಮೊದಲು ವಾರ್ಷಿಕ ಶ್ರಾದ್ಧ, ಆಮೇಲೆ ಮಹಾಲಯ, ನಂತರ ದರ್ಶಶ್ರಾದ್ಧ ಹೀಗೆ ಮೂರನ್ನೂ ಪಾಕಭೇದದಿಂದ ಮಾಡತಕ್ಕದ್ದು. ಮಹಾಲಯ ಒಂದೇ ಪ್ರಾಪ್ತವಾದಲ್ಲಿ ಮೊದಲು ಮಹಾಲಯ, ನಂತರ ದರ್ಶಶ್ರಾದ್ಧ ಹೀಗೆ ಮಾಡತಕ್ಕದ್ದು. ಮೃತತಿಥಿಯನ್ನಾಗಲೀ ಸಕೃನ್ಮಹಾಲಯಗಳನ್ನಾಗಲೀ ಆಯಾಯ ತಿಥಿಗಳು ಅಪರಾಹ್ನವ್ಯಾಪ್ತಗಳಾಗಿದ್ದವುಗಳನ್ನೇ ಸ್ವೀಕರಿಸತಕ್ಕದ್ದು. ದರ್ಶಶ್ರಾದ್ಧದಂತೆಯೇ ಅವುಗಳ ನಿರ್ಣಯವೂ ಸಹ ಇರುತ್ತದೆ. ಈ ಅಪರಪಕ್ಷದಲ್ಲಿ ಭರಣೀಶ್ರಾದ್ಧವನ್ನು ಮಾಡಿದರೆ ಗಯಾಶ್ರಾದ್ಧ ಮಾಡಿದ ಫಲವು ಸಿಗುವದು. ಭರಣೀಶ್ರಾದ್ಧವನ್ನು ಪಿಂಡರಹಿತ ಹಾಗೂ ಷಕ್ಷೇವತಾಕವಾಗಿ ಸಾಂಕಿಕ ವಿಧಿಯಿಂದ ಮಾಡತಕ್ಕದ್ದು. ಇದಕ್ಕೆ ಧೂರಿಲೋಚನ ಅಥವಾ ಪುರೂರವಾರ್ದವ ಸಂಜ್ಞಕ ವಿಶ್ವೇದೇವತೆಗಳು. ಭರಣೀ ಶ್ರಾದ್ಧವು “ಕಾಮ"ವು. ಗಯಾಶ್ರಾದ್ಧದ ಫಲೇಚ್ಛೆಯಿಂದ ಪ್ರತಿವರ್ಷವೂ ಮಾಡತಕ್ಕದ್ದು. ಕೆಲವರು ಮಾತಾಪಿತ್ರಾದಿಗಳ ಮರಣಾನಂತರ ಪ್ರಥಮವರ್ಷದಲ್ಲೇ ಇದನ್ನು ಮಾಡುತ್ತಾರೆ. ದ್ವಿತೀಯಾದಿವರ್ಷಗಳಲ್ಲಿ ಮಾಡುವದಿಲ್ಲ. ಇದಕ್ಕೆ ಮೂಲವಚನವು ಕಂಡುಬರುವದಿಲ್ಲ. “ತಂದ ತಾಯಿಗಳು ಮೃತರಾಗಿ ಸಂವತ್ಸರದೊಳಗೆ ಯಾವ ದೈವ ಅಥವಾ ಪೈತೃಕಗಳೂ ನಡೆಯತಕ್ಕದ್ದಲ್ಲ” ಎಂಬ ವಚನದಂತೆ ಎಲ್ಲ ದರ್ಶಶಾಸ್ತ್ರಗಳಿಗೂ ಪ್ರಥಮಾಬ್ದದಲ್ಲಿ ನಿಷೇಧ ಹೇಳಿರುವದರಿಂದ ಇದನ್ನೂ ವರ್ಷದ ನಂತರವೇ ಮಾಡುವದು ಯುಕ್ತವೆಂದು ನನಗೆ ತೋರುತ್ತದೆ. ಯಾಕೆಂದರೆ ದ್ವಿತೀಯ ವರ್ಷದಲ್ಲಿ ಪಿತೃತ್ವ ಪ್ರಾಪ್ತಿಯಾಗುತ್ತದೆ. ತಂದೆ ತಾಯಿಗಳ ಹೊರತಾಗಿ ಅನ್ಯರು ಮೃತರಾದಾಗ ಅವರ ನಿಮಿತ್ತವಾಗಿ ಪ್ರಥಮಾಬ್ದದಲ್ಲಿ “ಭರಣೀಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕಾದರೂ ಮೂಲವು ಕಂಡುಬರುವದಿಲ್ಲ. ಆಚಾರಾನುಸಾರ ಗಯಾಶ್ರಾದ್ಧಫಲ ಪ್ರಾಪ್ತಿಗಾಗಿ ಮಾಡುವದಿದ್ದಲ್ಲಿ ಮೃತರಾದವರೊಬ್ಬರ ಒಂದೇ ಪಾರ್ವಣವನ್ನುದ್ದೇಶಿಸಿ ವಿಶ್ವೇದೇವರ ಸಹಿತವಾಗಿ ಮಾಡತಕ್ಕದ್ದು, ಇದರಲ್ಲಿ ಪಿಂಡಸಹಿತ ಶ್ರಾದ್ಧ ಮಾಡಲಿಕ್ಕೂ ಮೂಲವಚನ ಕಂಡುಬರುವದಿಲ್ಲ. ಧರ್ಮಸಿಂಧು “ಅನ್ನಷ್ಟಕ್ಕಾದಿ”ಶ್ರಾದ್ಧಗಳು ಈ ಅಪರಪಕ್ಷದ ಸಪ್ತಮಿಯಲ್ಲಿ “ಮಾಘಾವರ್ಷ ಶ್ರಾದ್ಧಂಕರ್ತುಂ ಪೂರ್ವದುಃ ಶ್ರಾದ್ಧ ಕರಿಷ್ಯ ಅಷ್ಟಮಿಯಲ್ಲಿ ‘ಮಾಘಾ ವರ್ಷಶ್ರಾದ್ಧಂ ಕರಿಷ್ಯ ನವಮಿಯಲ್ಲಿ “ಅನ್ನಷ್ಟಕ್ಕಶ್ರಾದ್ಧಂ ಕರಿಷ್ಟೇ” ಹೀಗೆ ಸಂಕಲ್ಪಮಾಡಿ ಅಶ್ವಲಾಯನರು ಎಲ್ಲ “ಅಷ್ಟಕಾವಿಧಿ"ಯನ್ನೂ ಮಾಡತಕ್ಕದ್ದು. ಅಶ್ವಲಾಯನರು ಏಕಾಷ್ಟಕಾಕರಣ ಪಕ್ಷದಲ್ಲಿಯಾದರೂ ಅಷ್ಟಕಾ ವಿಕೃತಿರೂಪವಾದ ಇದನ್ನೇ ಮಾಡತಕ್ಕದ್ದು. ಇತರ ಶಾಖೆಯವರಾದರೋ ಅಷ್ಟಕಾರೂಪದಿಂದಲೇ ಮಾಡತಕ್ಕದ್ದು. ಪಂಚಾಷ್ಟಕಾಕರಣ ಪಕ್ಷದಲ್ಲಿ “ಅಪ್ರಕಾಶ್ರಾದ್ಧಂ ಕರಿಷ್ಯ” ಹೀಗೆ ಸಂಕಲ್ಪಿಸಿ ಮಾಡತಕ್ಕದ್ದು. ಏಕಾಷ್ಟಕಾ ಪಕ್ಷದಲ್ಲಿ ಇದರ ಅಗತ್ಯವಿಲ್ಲ. ಅವರು “ಮಾಘಾ ವರ್ಷಶ್ರಾದ್ಧಂ ಕರ್ತುಂ” ಹೀಗೆ ಹೇಳತಕ್ಕದ್ದು. ಎಲ್ಲ ಶಾಖೆಯವರೂ ಅಷ್ಟಮಿಯಲ್ಲಿ ಅಷ್ಟಕಾಶ್ರಾದ್ಧ ಮಾಡದಿದ್ದರೂ ನವಮಿಯಲ್ಲಿ ನವವತಾರವಾದ “ಅನ್ನಷ್ಟಕ್ಕ ಶ್ರಾದ್ಧವನ್ನು ಗೃಹ್ಯಾಗ್ನಿಯಲ್ಲಿ ಯಥೋಕ್ತವಾಗಿ ಮಾಡತಕ್ಕದ್ದು. ಈ ನವಮಿಯಲ್ಲಿ ಅನ್ವಷ್ಟಕ್ಕಶ್ರಾದ್ಧವು ಅತ್ಯಗತ್ಯವಾದದ್ದು. ಗೃಹಾಗ್ನಿ ರಹಿತರಾದವರು ಮೊದಲು ತಾಯಿಯು ಮೃತಳಾಗಿ ನಂತರ ತಂದೆಯು ಮೃತನಾಗಿದ್ದಾಗ ಪಾಣಿಹೋಮಾದಿ ವಿಧಿಯಿಂದ “ನವದೈವತವಾಗಿ ಮಾಡತಕ್ಕದ್ದು. ತಂದೆಯು ಜೀವಿಸಿರುತ್ತಿದ್ದು ತಾಯಿಯು ಮೃತಳಾಗಿದ್ದಾಗ ಅನುಪನೀತನಾದರೂ ಮಾತ್ರಾದಿತ್ರಯದಿಂದ ಉದ್ದೇಶಮಾತ್ರದಿಂದ ಏಕಪಾರ್ವಣಕವಾಗಿ, ಪುರೂರವಾದ್ರ್ರವ ವಿಶ್ವದೇವ ಸಹಿತವಾಗಿ, ಪಿಂಡಸಹಿತವಾಗಿ, ಶ್ರಾದ್ಧವನ್ನು ಮಾಡತಕ್ಕದ್ದು. ತಾಯಿಯು ಜೀವಿಸಿರುವಾಗ ಮೃತರಾದ ಸಾಪತ್ರ ಮಾತ್ರಾದಿ ತ್ರಯೋದ್ದೇಶದಿಂದ ತನ್ನ ತಾಯಿ ಹಾಗೂ ಸಾಪನ್ನ ತಾಯಿಗಳಿಬ್ಬರೂ ಮೃತರಾಗಿದ್ದಾಗ ದ್ವಿವಚನ ಪ್ರಯೋಗದಿಂದ, ಅನೇಕ ಸಾಪಕ ಮಾತೃಗಳ ಮೃತಿಯಲ್ಲಿ ಮಾತೃಸಹಿತ ಬಹುವಚನದಿಂದ, ಒಬ್ಬನೇ ಬ್ರಾಹ್ಮಣನನ್ನು ವರಿಸಿ ಒಂದುಕ್ಷಣ ಅರ್ಥ್ಯ, ಏಕಪಿಂಡಗಳಿಂದ ಶ್ರಾದ್ಧ ಮಾಡತಕ್ಕದ್ದು. ಪಿತಾಮಹಿ ಪ್ರಪಿತಾಮಹಿಯರಿಗೆ ಇಬ್ಬರು ಬ್ರಾಹ್ಮಣರು, ಎರಡು ಪಿಂಡಗಳು, ಇತ್ಯಾದಿ ಪಾರ್ವಣವು ಅವಶ್ಯಕವು. ಕೆಲವರು ಅನೇಕ ತಾಯಿಗಳ ಮೃತಿಯಲ್ಲಿ ಬ್ರಾಹ್ಮಣರು ಮತ್ತು ಪಿಂಡಾದಿಗಳನ್ನು ಬೇರೆ ಬೇರೆ ಮಾಡಬೇಕೆನ್ನುವರು. ತನ್ನ ತಾಯಿ, ಸಾಪತ್ರ ತಾಯಿಗಳು ಜೀವಿಸಿರುವಲ್ಲಿ ಗೃಹ್ಯಾಗಿರಹಿತ ಹಾಗೂ ಮೃತ ತಂದೆಯುಳ್ಳವನಾದರೂ ಅನ್ನಷ್ಟಕ್ಕೆ ಮಾಡತಕ್ಕದ್ದಲ್ಲ. ಅನ್ನಷ್ಟಕ್ಕದಲ್ಲಿ “ಮಾತೃಯಜನ"ವೇ ಮುಖ್ಯವು. ಆದುದರಿಂದಲೇ ಈ ವಿಷಯದಲ್ಲಿ ಕೆಲವರು ಮಾತೃ ಪಾರ್ವಣಕ್ಕೆ ಪ್ರಾಶಸ್ತ್ರವನ್ನು (ಆದ್ಯತೆಯನ್ನು) ಹೇಳಿದಂತೆ ಕಾಣುತ್ತದೆ. ಮೊದಲು ತಂದೆಯು ಮೃತನಾಗಿದ್ದು ನಂತರದಲ್ಲಿ ತಾಯಿಯು ಮೃತಳಾದರೆ ಇಲ್ಲಾದರೂ ಗೃಹ್ಯಾಗಿಯುಳ್ಳವರು ಈ ನವಮಿಯಲ್ಲಿ “ಅನ್ನಷ್ಟಕ್ಕ"ವನ್ನು ಅವಶ್ಯವಾಗಿ ಮಾಡತಕ್ಕದ್ದು, ಯಾಕೆಂದರೆ ಇದು ನಿತ್ಯವಾದದ್ದು. ಗೃಹ್ಯಾಗಿ ರಹಿತರಾದವರಿಗೆ ತಂದೆಯ ನಂತರ ಮೃತರಾದ ತಾಯಿಗಳ ಸಲುವಾಗಿ ಇದು ಅವಶ್ಯಕವಲ್ಲ. ಕೆಲವರು ಈ ನವಮಿಯಲ್ಲಿ ಪೂರ್ವದಲ್ಲಿ ಮೃತಳಾದ ತಾಯಿಯ ಶ್ರಾದ್ಧವನ್ನು “ಮೃತೇಭರ್ತರಿಲುತೇ ಎಂಬ ವಚನ ಪ್ರಾಮಾಣ್ಯದಿಂದ ತಂದೆಯು ಮೃತಿಹೊಂದಿದ ನಂತರ ಮಾಡುವದಿಲ್ಲ. ಈ ನವಮಿಗೆ “ವಿಧವಾ ನವಮಿ” ಎನ್ನುವರು. ಪತಿಯು ಜೀವಿಸಿರುವಾಗ ಅಥವಾ ಸಹಗಮನದಿಂದ ಮೃತರಾದ ತಾಯಿಯ ತಾಯಿ, ತಂಗಿ, ಮಗಳು, ತಾಯಿಯ ಅಕ್ಕತಂಗಿಯರು, ತಂದೆಯ ಅಕ್ಕತಂಗಿಯರು. ಹಾಗೂ ಪುತ್ರರಹಿತರಾದ ತಂದೆ-ತಾಯಿ-ಕುಲೋತ್ಪನ್ನರಾದ ಪರಿಚ್ಛೇದ - ೨ €2 ಸರ್ವಸುವಾಸಿನಿಯರ ಸಲುವಾಗಿ ಈ ನವಮಿಯಲ್ಲಿ ಶ್ರಾದ್ಧವನ್ನು ಮಾಡತಕ್ಕದ್ದು. ಪತಿಯ ಮುಂಗಡೆಯಲ್ಲಿ ಮೃತರಾದವರಿಗೆ ಪತಿಯು ತೀರಿದ ನಂತರ ಇದನ್ನು ಮಾಡತಕ್ಕದ್ದಿಲ್ಲ. ಆದ್ದರಿಂದಲೇ ಈ ನವಮಿಗೆ “ಅವಿಧವಾ ನವಮಿ” ಎಂದು ಹೆಸರಿದೆ. ಆದ್ದರಿಂದ ಪತ್ನಿಯಸಲುವಾಗಿಯಾದರೂ ನವಮೀ ಶ್ರಾದ್ಧವನ್ನು ಮಾಡತಕ್ಕದ್ದು. ಮಹಾಲಯದಂತೆ ಈ ಅವಿಧವಾ ನವಮಿ ಮತ್ತು ದೌಹಿತ್ರ ಪ್ರತಿಪಚ್ಛಾದ್ಧಕ್ಕೂ ವೃಶ್ಚಿಕ ಮಾಸ ಪ್ರಾರಂಭದ ವರೆಗೆ ಗೌಣಕಾಲವಿದೆಯೆಂದು “ಕಾಲತತ್ವ ವಿವೇಚನ” ಗ್ರಂಥದಲ್ಲಿ ಹೇಳಿದೆ. ಸುವಾಸಿನಿಯರ ಈ ಅವಿಧವಾ ನವಮೀ ಶ್ರಾದ್ಧದಲ್ಲಿ ಮತ್ತು ಪ್ರತಿಸಾಂವತ್ಸರಿಕ ಶ್ರಾದ್ಧದಲ್ಲಿ ಸುವಾಸಿನಿಯರ ಭೋಜನವನ್ನು ಮಾಡಿಸತಕ್ಕದ್ದು, ಪತಿಯ ಮುಂಗಡೆಯಲ್ಲಿ ಮೃತಳಾದ, ಮತ್ತು ಸಹಗಮನದಿಂದ ಮೃತಳಾದ, ಸ್ತ್ರೀಯ ಶ್ರಾದ್ಧದಲ್ಲಿ ಅವಳ ಸ್ಥಾನದಲ್ಲಿ ಬ್ರಾಹ್ಮಣರಿಂದ ಕೂಡಿ ಸುವಾಸಿನಿಯರನ್ನು ನಿಮಂತ್ರಿಸತಕ್ಕದ್ದೆಂದು - ಮಾರ್ಕಂಡೇಯ ವಚನವಿದೆ. ಜೀವತೃಕ (ಜೀವಿಸಿರುವ ತಂದೆಯುಳ್ಳ) ಮತ್ತು ಗರ್ಭಿಣೀಪತಿಯಾದರೂ ಈ ನವಮಿಯಲ್ಲಿ ಪಿಂಡದಾನ ಮಾಡತಕ್ಕದ್ದು. ನವಮೀ ಶ್ರಾದ್ಧ ಮಾಡಲು ಅಡ್ಡಿಯಾದಲ್ಲಿ “ಮಮ ಅನ್ನಷ್ಟಕ್ಕಾಕರಣ ಜನಿತ ಪ್ರತ್ಯವಾಯ ಪರಿಹಾರಾರ್ಥಂ ಶತವಾರಂ ಏಭಿರ್ದುಭಿಃ ಸುಮನಾ ಇತಿ ಮಂತ್ರಜಪಂ ಕರಿಷ್ಟೇ” ಎಂದು ಸಂಕಲ್ಪಿಸಿ ಜಪವನ್ನು ಮಾಡತಕ್ಕದ್ದು. ಸಾಮವೇದಿಗಳು ಅನ್ನಷ್ಟಕ್ಕದಲ್ಲಿ ಬರಿ ಪಿತೃಪಾರ್ವಣವನ್ನು ಮಾಡತಕ್ಕದ್ದು. ಮಾತೃ ಮಾತಾಮಹ ಪಾರ್ವಣವನ್ನು ಮಾಡತಕ್ಕದ್ದಿಲ್ಲ: ಎಂದು ನಿರ್ಣಯಸಿಂಧುಕಾರರ ಮತವು. ಈ ದ್ವಾದಶಿಯಲ್ಲಿ “ಸಂನ್ಯಾಸಿಗಳ ಮಹಾಲಯ” ವನ್ನು ಹೇಳಿದೆ. ಅದು ಅಪರಾಹ್ನವ್ಯಾಪಿನಿಯಾಗಿರತಕ್ಕದ್ದು. ಇದರಲ್ಲಿ ವೈಷ್ಣವರು ಅಪರಾಹ್ನವ್ಯಾಪಿನಿಯಾದ ದ್ವಾದಶಿಯು ಏಕಾದಶಿ ವ್ರತದಿನದಲ್ಲಿ ಬಂದಾಗ, ಮಾರನೇದಿನ ಸ್ವಲ್ಪವೇ ಇರುವ ದ್ವಾದಶಿ ಅಥವಾ ತ್ರಯೋದಶಿಯಲ್ಲಿ ಪಾರಣೆಯಾಗುವದು, ಆ ದಿನ “ಸಂನ್ಯಾಸಿ ದೇವತಾಕವಾದ ಶ್ರಾದ್ಧವನ್ನು ಮಾಡುತ್ತಾರೆ. ನನ್ನ ಅಭಿಪ್ರಾಯದಂತೆಈ ಸಂನ್ಯಾಸಿ ಮಹಾಲಯ ಶ್ರಾದ್ಧವನ್ನು ವೈಷ್ಣವರು ಅಮಾವಾಸ್ಯೆಯಲ್ಲಿ ಮಾಡುವದು ಯುಕ್ತವೆಂದು ತೋರುತ್ತದೆ. ಮಘಾತ್ರಯೋದಶೀ ಶ್ರಾದ್ಧವು ಈ ಶ್ರಾದ್ಧವನ್ನು ಮಘಾನಕ್ಷತ್ರಯುಕ್ತವಾದ ಅಡ್ಡವಾ ಕೇವಲವಾದ ತ್ರಯೋದಶಿಯಲ್ಲಾದರೂ ಮಾಡತಕ್ಕದ್ದು. ಈ ಶ್ರಾದ್ಧವು ನಿತ್ಯವು. ಕೇವಲ ಮಘಾನಕ್ಷತ್ರದಲ್ಲಾದರೂ ಮಾಡಬಹುದು. ಅನೇಕ ಗ್ರಂಥಗಳಲ್ಲಿ ಈ ಶ್ರಾದ್ಧ ವಿಷಯದಲ್ಲಿ ಅನೇಕ ಪಕ್ಷಗಳಿರುವವು. ಪುತ್ರರಹಿತ ಅಥವಾ ಪುತ್ರಸಹಿತನಾದ ಗೃಹಸ್ಥನು ಸವಕ ಪಿತೃಪಾರ್ವಣ, ಮಾತಾಮಹ ಪಾರ್ವಣಗಳಿಂದ ಹಾಗೂ ಪಿತೃವ್ಯ, ಭ್ರಾತೃ, ಮಾತುಲ, ಪಿತೃಭಗಿನೀ, ಮಾತೃಭಗಿನೀ, ಸ್ವಭಗಿನೀ, ಶಶುರ ಇತ್ಯಾದಿಗಳ ಪಾರ್ವಣದಿಂದಲೂ ಸಹಿತವಾಗಿ ಪಿಂಡರಹಿತವಾದ ಶ್ರಾದ್ಧವನ್ನು ಸಾಂಕಲ್ಪಿಕ ವಿಧಿಯಿಂದ ಮಾಡತಕ್ಕದ್ದು. ಅಥವಾ ಮಹಾಲಯದಂತೆ ಪಿತ್ರಾದಿ ಎರಡು ಪಾರ್ವಣ, ಪಿತ್ರಾದಿ ಏಕೋದ್ದಿಷ್ಟಗಣಗಳ ಉದ್ದೇಶದಿಂದ, ಸಾಂಕಲ್ಪವಿಧಿಯಿಂದ ದರ್ಶಶ್ರಾದ್ಧದಂತೆ ಷಡ್‌ದೈವತ ಅಪಿಂಡಕ ಶ್ರಾದ್ಧವನ್ನು ಮಾಡತಕ್ಕದ್ದು, ನಿಷ್ಕಾಮನಾದ ಪುತ್ರವಹಸ್ಥನು ಶ್ರಾದ್ಧವನ್ನು ಪೂರ್ಣವಿಧಿಯಿಂದ ಮಾಡಬೇಕಾಗಿಲ್ಲ. ಆದರೆ ಪಿತ್ರಾದಿ ಎರಡು ಪಾರ್ವಣಗಳ (ಅಥವಾ ಏತೇಷಾಂ ತೃಪ್ತರ್ಥ ಬ್ರಾಹ್ಮಣ ಸಂತರ್ಪಣಂ ಕರಿಷ್ಯ ಪಿತೃವಾದಿಸಹಿತ) ಉದ್ದೇಶವಾಗಿ || ಧರ್ಮಸಿಂಧು ಹೀಗೆ ಸಂಕಲ್ಪಿಸಿ “ಪಿತೃರೂಪಿಣೇ ಬ್ರಾಹ್ಮಣಾಯ ಗಂಧಂ ಸಮರ್ಪಯಾಮಿ” ಇತ್ಯಾದಿ ಪಂಚೋಪಚಾರಗಳನ್ನು ಸಮರ್ಪಿಸಿ ಬ್ರಹ್ಮಾರ್ಪಣಂ ಇತ್ಯಾದಿ “ಅನೇನ ಬ್ರಾಹ್ಮಣ ಭೋಜನೇನ ಪಿತ್ರಾದಿರೂಪೀ ಈಶ್ವರಃ ಪ್ರೀಯತಾಂ” ಹೀಗೆ ಅನ್ನವನ್ನು ತ್ಯಜಿಸಿ ಪಾಯಸಾದಿ ಮಧುರಾನ್ನದಿಂದ ಬ್ರಾಹ್ಮಣರನ್ನು ಭೋಜನಮಾಡಿಸಿ ದಕ್ಷಿಣಾದಿಗಳಿಂದ ತೃಪ್ತಿ ಪಡಿಸಿ ತಾನು ಭೋಜನಮಾಡತಕ್ಕದ್ದು. (ಇಷ್ಟನ್ನೇ ಶ್ರಾದ್ಧದ ಸ್ಥಾನದಲ್ಲಿ ಮಾಡುವದು.) ಕಾಮನಾಸಹಿತನಾದ ಅಪುತ್ರವಂತನು ಪಿಂಡದಾನ ರಹಿತವಾಗಿ ಮಾಡಿದ ಶ್ರಾದ್ಧದಿಂದ ದೋಷ ಪ್ರಾಪ್ತಿಯಾಗುವದಿಲ್ಲ. ಕೆಲವು ಕಡೆಯಲ್ಲಿ ಪುತ್ರರಹಿತನಿಗಾದರೂ ಪಿಂಡದಾನವನ್ನು ಹೇಳಿದೆ. ಹೀಗೆ ಉಕ್ತಗಳಾದ ಎರಡು ಪಕ್ಷಗಳಲ್ಲಿ ಯಾವದಾದರೊಂದು ಪಕ್ಷವನ್ನು ಹಿಡಿದು “ಮಘಾತ್ರಯೋದಶೀಶ್ರಾದ್ಧ"ವನ್ನು ಅವಶ್ಯವಾಗಿ ಮಾಡತಕ್ಕದ್ದು. ಇದು ನಿತ್ಯವಾದ್ದರಿಂದ ಮಾಡದಿದ್ದಲ್ಲಿ ದೋಷವುಂಟಾಗುವದು. ಸೂರ್ಯನು ಹಸ್ತನಕ್ಷತ್ರದಲ್ಲಿರುವಾಗ ತ್ರಯೋದಶಿಯು ಮುಘಾಯುಕ್ತವಾದರೆ ಆ ಯೋಗಕ್ಕೆ “ಗಜಚ್ಛಾಯಾ“ಎನ್ನುವರು. ಈ ಯೋಗದಲ್ಲಿ ಶ್ರಾದ್ಧ ಮಾಡಿದರೆ ವಿಶೇಷ ಫಲವಿದೆ. ಇದರಲ್ಲಿ ಮಹಾಲಯ ಹಾಗೂ ಯುಗಾದಿ ಮೊದಲಾದವುಗಳು ಪ್ರಾಪ್ತವಾದಲ್ಲಿ “ಮಘಾ ತ್ರಯೋದಶೀ ಮಹಾಲಯ-ಯುಗಾದಿ ಶ್ರಾದ್ಧಾನಿ ತಂತ್ರೇಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ತಂತ್ರದಿಂದ ಮಾಡತಕ್ಕದ್ದು. ಹೊರತು ಒಂದರಿಂದೊಂದಕ್ಕೆ “ಪ್ರಸಂಗ ಸಿದ್ಧಿಯಾಗುವದಿಲ್ಲ. ದರ್ಶಶ್ರಾದ್ಧವನ್ನು ಮಾಡಿದಲ್ಲಿ ಅದರಲ್ಲಿ ನಿತ್ಯಶ್ರಾದ್ಧವೂ ಅಂತರ್ಗತವಾಗಿ ನಿತ್ಯಶ್ರಾದ್ಧಗಳಿಗೆ “ಪ್ರಸಂಗ ಸಿದ್ದಿ “ಯುಂಟಾಗುವದು. ಹಾಗೆ ಮಘಾ ತ್ರಯೋದಶೀ-ಮಹಾಲಯಾದಿಗಳಿಗೆ ಆಗುವಂತಿಲ್ಲ. ಇಂಥಲ್ಲಿ ತಂತ್ರದಿಂದ ಮಾಡಬೇಕಾಗುವದು. ಅಂಗಕರ್ಮಗಳು ಒಂದೇ ವಿಧಗಳಾಗಿದ್ದು ಪ್ರಧಾನ ಮಾತ್ರ ಭೇದವಾದರೆ ಅದಕ್ಕೆ ತಂತ್ರವನ್ನುವರು. ಈ ಶ್ರಾದ್ಧಗಳಲ್ಲಿ ಅಂಗಗಳಾದ ವಿಶ್ವೇದೇವ, ಪಾಕ ಇವು ಒಂದೇ ಬ್ರಾಹ್ಮಣ ಭೋಜನ ಪಿಂಡಾದಿ ಪ್ರಧಾನಗಳು ಬೇರೆಯೇ. ಆದ್ದರಿಂದ ಇದರಲ್ಲಿ ತಂತ್ರವಾಗತಕ್ಕದ್ದು. “ಪ್ರಸಂಗ ಸಿದ್ಧಿ"ಯಲ್ಲಿ ಪ್ರಧಾನವೂ ಭಿನ್ನವಾಗಿರುವದಿಲ್ಲ. ತ್ರಯೋದಶೀ ಶ್ರಾದ್ಧದಲ್ಲಿ ಇದು ಅಪರಪಕ್ಷವಾದ್ದರಿಂದ ರಿಲೋಚನ ವಿಶ್ವೇದೇವತೆಗಳೆಂದು ತಿಳಿಯತಕ್ಕದ್ದು. ಹೀಗೆ “ಶ್ರಾದ್ಧಸಾಗರ"ದಲ್ಲಿ ಹೇಳಿದೆ. ಅಣ್ಣ ತಮ್ಮಂದಿರು ಅವಿಭಕ್ತರಾಗಿದ್ದರೂ ಮಘಾತ್ರಯೋದಶೀ ಶ್ರಾದ್ಧವನ್ನು ಪೃಥಕ್ ಮಾಡಬೇಕೆಂದು “ನಿರ್ಣಯ ಸಿಂಧು"ವಿನಲ್ಲಿ ಹೇಳಿದೆ. ಕೌಸ್ತುಭಾದಿಗಳಲ್ಲಿಯೂ ಹೀಗೆ ಉಕ್ತವಾಗಿದೆ. ವಿಭಕ್ತರಾದರೂ ಕೂಡಿಯೇ ಮಾಡಬೇಕೆಂದು “ಶ್ರಾಪ್ತಸಾಗರದ ಮತವು. ಈ ಚತುರ್ದಶಿಯಲ್ಲಿ ಶಸ್ತ್ರಾದಿಹತಶ್ರಾದ್ಧವನ್ನು ಮಾಡತಕ್ಕದ್ದು, ಪಿತೃ, ಪಿತಾಮಹ, ಪ್ರಪಿತಾಮಹ ಇವರೊಳಗೆ ಯಾರಾದರೂ ಶಸ್ತ್ರಾದಿಗಳಿಂದ ಅಂದರೆ ಶಸ್ತ್ರ, ವಿಷ, ಅಗ್ನಿ, ಜಲ, ಕೋಡುಗಳುಳ್ಳ ಪ್ರಾಣಿ, ಹುಲಿ, ಸರ್ಪ, ವ್ಯಕ್ತಾರೋಹಣ, ವಿದ್ಯುತ್ತು, ಲೋಹಾದಿ ಆಯುಧ ಇತ್ಯಾದಿಗಳಿಂದ ದುರ್ಮರಣಕ್ಕೀಡಾದರೆ ಏಕೋದ್ದಿಷ್ಟ ವಿಧಿಯಿಂದ ಶ್ರಾದ್ಧ ಮಾಡತಕ್ಕದ್ದು, ಪಿತ್ರಾದಿಗಳಲ್ಲಿ ಇಬ್ಬರು ದುರ್ಮತರಾದರೆ ಎರಡು ಏಕೋದ್ದಿಷ್ಟಗಳನ್ನು ಮಾಡತಕ್ಕದ್ದು. ಪಿತ್ರಾದಿ ಮೂವರು ಶಸ್ತ್ರಾದಿ ಹತರಾದರೆ ಪಾರ್ವಣವನ್ನೇ ಮಾಡತಕ್ಕದ್ದು. ಮೂರು ಏಕೋದ್ದಿಷ್ಟಗಳನ್ನು ಮಾಡಬೇಕೆಂದು ಕೆಲವರ ಮತವು. ಸಹಗಮನ ವಿಧಿಯಿಂದ ಅಥವಾ ಪ್ರಯಾಗಾದಿಗಳಲ್ಲಿ ವಿಧಿಪೂರ್ವಕವಾಗಿ ಅಗ್ನಿ ಜಲಾದಿಗಳಿಂದ ಮೃತರಾದವರಿಗೆ ಚತುರ್ದಶೀಪರಿಚ್ಛೇದ - ೨ FE ಶ್ರಾದ್ಧವನ್ನು ಮಾಡತಕ್ಕದ್ದಲ್ಲ. ಇನ್ನು ಧರ್ಮಯುದ್ಧ ಮತ್ತು ಪ್ರಾಯೋಪವೇಶನ ಇವೂ ವಿಧ್ಯುಕ್ತಗಳೇ ಆದರೂ ಇವುಗಳಲ್ಲಿ ಮೃತರಾದವರಿಗೆ ಈ ಶ್ರಾದ್ಧವು ಹೇಳಲ್ಪಟ್ಟಿದೆ. ನಿಪುತ್ರಿಕರಾದ ಪಿತೃವ್ಯ ಭ್ರಾತ್ರಾದಿಗಳು ದುರ್ಮತಿ ಹೊಂದಿದಲ್ಲಿ ಏಕೋದ್ದಿಷ್ಟವನ್ನು ಮಾಡತಕ್ಕದ್ದು. ಇದರಲ್ಲಿ ಧೂರಿಲೋಚನ ವಿಶ್ವೇದೇವತೆಗಳು, ಇಲ್ಲಿ ಸಂಬಂಧ-ಗೋತ್ರ-ನಾಮಾದಿಗಳನ್ನುಚ್ಚಾರಮಾಡಿ “ಅಮುಕನಿಮಿತ್ತೇನ ಮೃತಸ್ಯ ಚತುರ್ದಶೀ ನಿಮಿತ್ತಮೇಕೋದ್ದಿಷ್ಟ ಶ್ರಾದ್ಧಂ, ಸದೈವಂ, ಸಪಿಂಡಂ ಕರಿಷ್ಯ” ಹೀಗೆ ಸಂಕಲ್ಪಿಸಿ ಪ್ರತಿಯೊಂದು ಏಕೋದ್ದಿಷ್ಟಕ್ಕೆ ಒಂದೊಂದು ಅರ್ಥ್ಯ, ಪವಿತ್ರ, ಪಿಂಡಯುತವಾದ ಶ್ರಾದ್ಧವನ್ನು ಮಾಡತಕ್ಕದ್ದು. ಪಿತ್ರಾದಿಗಳು ಅಥವಾ ಭ್ರಾತ್ರಾದಿಗಳು ಶಸ್ತ್ರಾದಿ ಹತರಾದರೆ ಪೃಥಕ್ ಪಾಕಾದಿಗಳಿಂದ ಮಹಾಲಯದಂತೆ ಅಥವಾ ತಂತ್ರದಿಂದ ಎರಡೂ ಏಕೋದ್ದಿಷ್ಟಗಳನ್ನು ಮಾಡತಕ್ಕದ್ದು. ಹೀಗೆ ಚತುರ್ದಶಿಯಲ್ಲಿ ಏಕೋದ್ದಿಷ್ಟವನ್ನು ಮಾಡಿ ಪಿತ್ರಾದಿ ಸರ್ವಪಿತೃಗಣೋದ್ದೇಶದಿಂದ ಸಕ್ಕನ್ಮಹಾಲಯವನ್ನು ಬೇರೆ ತಿಥಿಯಲ್ಲಿ ಅವಶ್ಯವಾಗಿ ಮಾಡತಕ್ಕದ್ದು. ಇದೇ ಚತುರ್ದಶಿಯಲ್ಲಿ ಶಸ್ತ್ರಾದಿ ಮೃತರಾದ ತಂದೆ ತಾಯಿಗಳ ಮೃತತಿಥಿಯು ಬಂದಲ್ಲಿ ಆಗ ಚತುರ್ದಶೀ ನಿಮಿತ್ತವಾದ ಏಕೋದ್ದಿಷ್ಟವನ್ನು ಮಾಡಿ ಪುನಃ ಅದೇದಿನ ಮೃತಾದಿಗಳ ತ್ರಯೋದ್ದೇಶದಿಂದ ಸಾಂವತ್ಸರಿಕ ಶ್ರಾದ್ಧವನ್ನು ಪಾರ್ವಣ ವಿಧಾನದಿಂದ ಮಾಡತಕ್ಕದ್ದು ಎಂದು ಶ್ರಾದ್ಧ ಸಾಗರದಲ್ಲಿ ಹೇಳಿದೆ. ಕೌಸ್ತುಭಾದಿಗಳಲ್ಲಾದರೋ ಸಾಂವತ್ಸರಿಕ ಪಾರ್ವಣ ಶ್ರಾದ್ಧ ಮಾಡುವದರಿಂದಲೇ ಚತುರ್ದಶೀ ಶ್ರಾದ್ಧವೂ ಸಿದ್ಧಿಸುವದೆಂದು ಹೇಳಿದೆ. ಸಕ್ಕನ್ಮಹಾಲಯವನ್ನು ಬೇರೆ ತಿಥಿಯಲ್ಲಿ ಮಾಡತಕ್ಕದ್ದು, ಈ ಚತುರ್ದಶೀ ಶ್ರಾದ್ಧಕ್ಕೆ ಯಾವದಾದರೊಂದು ಕಾರಣದಿಂದ ವಿಘ್ನವುಂಟಾದಲ್ಲಿ ಇದೇ ಪಕ್ಷದಲ್ಲಿ ಅಥವಾ ಮುಂದಿನ ಪಕ್ಷದಲ್ಲಿ ಬೇರೆ ದಿನದಲ್ಲಿ ಅದನ್ನು ಪಾರ್ವಣ ವಿಧಿಯಿಂದಲೇ ಮಾಡತಕ್ಕದ್ದು. ಹೊರತು ಏಕೋದ್ದಿಷ್ಟವಿಧಿಯಿಂದಲ್ಲ. ಈ ಏಕೋದ್ದಿಷ್ಟದಲ್ಲಿ ಅಪರಾಹ್ನವ್ಯಾಪಿನಿಯೇ ಗ್ರಾಹ್ಯವು. ಹೊರತು ಉಳಿದ ಏಕೋದ್ದಿಷ್ಟಗಳಂತೆ ಮಧ್ಯಾಹ್ನವ್ಯಾಪಿನಿಯಲ್ಲಲ್ಲ ಎಂದು ಕೌಸ್ತುಭದಲ್ಲಿ ಹೇಳಿದೆ. ಸೂರ್ಯನು ಹಸ್ತನಕ್ಷತ್ರದಲ್ಲಿದ್ದಾಗ ಚಂದ್ರನೂ ಹಸ್ತನಕ್ಷತ್ರಗತನಾಗಿ ಅಮಾವಾಸ್ಯೆಯಲ್ಲಿ ಹೀಗೆ ಕೂಡಿದರೆ ಆಗ ಆ ಅಮಾವಾಸ್ಯೆಗೆ ‘ಗಜಚ್ಛಾಯಾ” ಎಂಬ ಸಂಜ್ಞೆಯಿದೆ. ಈ ಗಜಚ್ಛಾಯ ಯೋಗದಲ್ಲಿ ಶ್ರಾದ್ಧ ದಾನಾದಿಗಳನ್ನು ಮಾಡತಕ್ಕದ್ದು. ಆಶ್ವಿನ ಶುಕ್ಲ ಪ್ರತಿಪದೆಯಲ್ಲಿ “ದೌಹಿತ್ಯ” ಶ್ರಾದ್ಧವನ್ನು ಮಾಡತಕ್ಕದ್ದಿದೆ. ದೌಹಿತ್ರ (ಮಗಳ ಮಗನು ಅನುಪನೀತನಾದಾಗ್ಯೂ ಸಪತ್ನಿಕ ಮಾತಾಮಹ(ತಾಯಿಯ ತಂದೆ) ನ ಪಾರ್ವಣವನ್ನು ತಾಯಿಯ ಅಣ್ಣನು ಇರುತ್ತಿದ್ದರೂ ತಾನು ತನ್ನ ಕರ್ತವ್ಯದಂತೆ ಮಾಡತಕ್ಕದ್ದು. ಮಾತಾಮಹಿಯು (ತಾಯಿಯ ತಾಯಿಯು) ಜೀವಿಸಿರುತ್ತಿದ್ದರೆ ಕೇವಲ ಮಾತಾಮಹ ಪಾರ್ವಣವನ್ನು ಮಾಡತಕ್ಕದ್ದು. ಇದನ್ನು “ಜೀವಶ್ಚಿತ್ಯಕ ನಾದವನೇ ಮಾಡತಕ್ಕದ್ದು. ಇದನ್ನು ಪಿಂಡಸಹಿತ ಅಥವಾ ಪಿಂಡರಹಿತವಾಗಿ ಮಾಡತಕ್ಕದ್ದು. ಈ ಶ್ರಾದ್ಧವು ಪುರೂರವಾದ್ರ್ರವ ವಿಶ್ವೇದೇವಯುತವಾದದ್ದು. ಕೆಲವರು ಧೂರಿಲೋಚನ ವಿಶ್ವೇದೇವರನ್ನುವರು. ಈ ಪ್ರತಿಪದಿಯು ಅಪರಾಹ್ನವ್ಯಾಪಿನಿಯಾಗಿರತಕ್ಕದ್ದು; ಎಂದು ಬಹುಗ್ರಂಥಕಾರರ ಅಭಿಪ್ರಾಯ. “ಸಂಗವವ್ಯಾಪಿನಿ” ಎಂದು ಕೆಲವರ ಮತವು. ಈ ಶ್ರಾದ್ಧಕ್ಕೆ ವೃಶ್ಚಿಕದರ್ಶನದ ವರೆಗೆ ಗೌಣಕಾಲವಿದೆಯೆಂದು 000 ಧರ್ಮಸಿಂಧು ಮೊದಲೇ ಹೇಳಿದೆ. ಇಲ್ಲಿಗೆ ಮಹಾಲಯ ನಿರ್ಣಯೋದ್ದೇಶವು ಮುಗಿಯಿತು. ಕಪಿಲಾಷ ನಿರ್ಣಯ ಭಾದ್ರಪದ ಕೃಷ್ಣಪಕ್ಷ, ಮಂಗಳವಾರ, ವ್ಯತೀಪಾತ, ರೋಹಿಣೀ ನಕ್ಷತ್ರ, ಷಷ್ಠಿ ಹೀಗೆ ಒಂದುಗೂಡಿದಾಗ “ಕಪಿಲಾ ಷಷ್ಟಿ"ಯೋಗವನ್ನುವರು. ಹಸ್ತನಕ್ಷತ್ರದಲ್ಲಿ ಸೂರ್ಯನಿದ್ದರೆ ಹೆಚ್ಚಿನ ಫಲವು. ಈ ಯೋಗವು ಹಗಲಿನಲ್ಲಿ ಆದರೆ ಮಾತ್ರ ಆಚರಣೆಗೆ ಯೋಗ್ಯ, ರಾತ್ರಿಯಲ್ಲಿ ಬಂದಾಗ ಈ ಯೋಗವೆನ್ನಲ್ಪಡುವದಿಲ್ಲ, ಯಾಕೆಂದರೆ ಇದು ಸೂರ್ಯನ ಪರ್ವವು. ಈ ಯೋಗದಲ್ಲಿ ಹೋಮಿಸಲೀ, ದಾನಮಾಡಲೀ ಯಾವ ಪುಣ್ಯಕಾರ್ಯವಾದರೂ ಕೋಟಿಗುಣವಾಗುವದು. ಇದರಲ್ಲಿ ಶ್ರಾದ್ಧವನ್ನು ಮಾಡತಕ್ಕದ್ದೆಂದು ವಿಶೇಷ ವಚನವಿಲ್ಲದಿದ್ದರೂ “ಅಲಭ್ಯ” ಯೋಗದಲ್ಲಿ ಶ್ರಾದ್ಧವನ್ನು ವಿಧಿಸಿರುವದರಿಂದ ದರ್ಶಶ್ರಾದ್ಧದಂತೆ ಷಡ್‌ವತವಾಗಿ ಮಾಡತಕ್ಕದ್ದು, ಸಂಕ್ಷಿಪ್ತ ವ್ರತವಿಧಿ ಸೂರ್ಯನನ್ನುದ್ದೇಶಿಸಿ ಉಪವಾಸವನ್ನು ಸಂಕಲ್ಪಿಸಿ ದೇವದಾರು, ವಾಳದ ಬೇರು, ಕುಂಕುಮ, ಯಾಲಕ್ಕಿ, ಶಿಲಾಜಿತು, ತಾವರೆಯ ದಂಟು, ಅಕ್ಕಿ ಇವುಗಳನ್ನು ಜೇನುತುಪ್ಪ-ತುಪ್ಪಗಳಲ್ಲಿ ಅರೆದು ಹಾಲಿನಿಂದ ಕಲಿಸಿದ ಈ ಕಲ್ಯದಿಂದ ಮೈಗೆ ಲೇಪಿಸಿಕೊಂಡು ಸ್ನಾನಮಾಡತಕ್ಕದ್ದು. ಇದಕ್ಕೆ ಮಂತ್ರ “ಆವಮಸಿದೇವೇಶ ಜ್ಯೋತಿಷಾಂ ಪತಿದೇವಚ ಪಾಪಂ ನಾಶಯಮೇದೇವ ವಾಹ್ಮನಃಕಾಯ ಕರ್ಮಜಂ||ಇತಿ||” ಆಮೇಲೆ ಪಂಚಗವ್ಯದಿಂದ ಸ್ನಾನಮಾಡಿ ಪಂಚ ಪಲ್ಲವಗಳಿಂದ ಮೈಯನ್ನೊರಸಿಕೊಂಡು ಮೃತ್ತಿಕಾಸ್ನಾನ ಮಾಡತಕ್ಕದ್ದು. ತರ್ಪಣಾದಿ ನಿತ್ಯವಿಧಿಯನ್ನು ಮಾಡಿ ವರುಣನನ್ನು ಪೂಜಿಸಿ, ಸರ್ವತೋಭದ್ರದ ಮಧ್ಯದಲ್ಲಿ ಕಲಶವನ್ನು ಸ್ಥಾಪಿಸಿ, ಅದರ ಮೇಲೆ ಅಕ್ಕಿ ಮೊದಲಾದವುಗಳಲ್ಲಿ ಪದ್ಮವನ್ನು ಬರೆದು ಅದರ ಎಂಟು ಎಸಳುಗಳಲ್ಲಿ ಪೂರ್ವಾದಿಕ್ರಮದಿಂದ ಸೂರ್ಯ, ತಪನ, ಸ್ವರ್ಣರೇತಸ್, ರವಿ, ಆದಿತ್ಯ, ದಿವಾಕರ, ಪ್ರಭಾಕರ, ಸೂರ ಈ ನಾಮಗಳಿಂದ ಆವಾಹನ ಮಾಡತಕ್ಕದ್ದು. ಮಧ್ಯದಲ್ಲಿ ಸುವರ್ಣ ರಥದಲ್ಲಿರುವ ಸೂರ್ಯನನ್ನು, ಮುಂಗಡೆಯಲ್ಲಿ ಅರುಣನನ್ನೂ ಆವಾಹಿಸಿ ಕರವೀರ, ಯಕ್ಕೆ ಮೊದಲಾದ ಪುಷ್ಪದಿಂದ ಹಾಗೂ ಧೂಪ- ದೀವಾದಿಗಳಿಂದ ಪೂಜಿಸತಕ್ಕದ್ದು, ದಿಕ್ಷಾಲಾದಿ ದೇವತೆಗಳನ್ನು ಸಹ ಪೂಜಿಸಿ ಹನ್ನೆರಡು ಅರ್ಥ್ಯಗಳನ್ನು ಸೂರ್ಯನಿಗೆ ಕೊಡತಕ್ಕದ್ದು, ಸವಿಸ್ತರ ಪೂಜಾವಿಧಿ ಹಾಗೂ ದ್ವಾದಶಾರ್ಘಮಂತ್ರ ಇವುಗಳನ್ನೆಲ್ಲ ಕೌಸ್ತುಭದಲ್ಲಿ ನೋಡತಕ್ಕದ್ದು. ಸೂರ್ಯನ ಮುಂಗಡೆಯಲ್ಲಿ ‘ಪ್ರಭಾಕರ ನಮಸ್ತುಭ ಸಂಸಾರಾನಾಂ ಸಮುದ್ಧರ ಭುಕ್ತಿ ಮುಕ್ತಿ ಪ್ರದೋಯಸ್ಮಾತ್ ತಸ್ಮಾಚಾಂತಿಂಪ್ರಯಜ್ಞಮೇ||೧|| ನಮೋನಮವರದ ಯಕ್ಸಾಮಂಜುಷಾಂಪತೇ ನಮೋಸ್ತು ವಿಶ್ವರೂಪಾಯ ವಿಶ್ವಧಾತ್ರೇ ನಮೋಸ್ತುತೇ||೨|| -ಹೀಗೆ ಪ್ರಾರ್ಥಿಸಿ “ಉದುರಿ” ಇತ್ಯಾದಿ ಸೌರಸೂಕ್ತಗಳನ್ನು ಜಪಿಸಿ ರಾತ್ರಿಯಲ್ಲಿ ಜಾಗರಣ ಮಾಡಿ ಬೆಳಿಗ್ಗೆ “ಆ ಕೃಷ್ಣನ” ಎಂಬ ಮಂತ್ರದಿಂದ ಆರ್ಕಸಮಿತ್, ಚರು, ಆಜ್ಯ, ತಿಲಗಳಿಂದ ಪ್ರತಿದ್ರವ್ಯವನ್ನೂ ನೂರೆಂಟಾವರ್ತಿ ಹೋಮಿಸಿ ಗಂಟೆ ಮೊದಲಾದ ಸರ್ವಾಲಂಕಾರ ಯುಕ್ತವಾದ ಕಪಿಲ (ಕೌಲು) ಗೋವನ್ನು ಮಂತ್ರಗಳಿಂದ ಪೂಜಿಸಿ “ನಮಸ್ತೇ ಕಪಿಲೇದೇವಿ ಸರ್ವಪಾಪ ಪ್ರಣಾಶಿನಿಗೆ ಸಂಸಾರಾರ್ಣವಮಗ್ನಂಮಾಂ ಗೋಮಾತಾತುಮರ್ಹಸಿ” “ವಸ್ಮಯುಗಚ್ಛನ್ನಾಂ ಸಘಂಟಾಂ ಇತ್ಯಾದಿ ವಿಶೇಷಣ ವಿಶಿಷ್ಟಾ ಮಾಂಗಾಂ ತುಭ್ರಮಹಂಸಂಪ್ರದದೇ” ಹೀಗೆ ಹೇಳಿ ಬ್ರಾಹ್ಮಣನಿಗೆ ಪರಿಚ್ಛೇದ - ೨ ೧೦೧ ಸುವರ್ಣ ದಕ್ಷಿಣಾಸಹಿತ ಕೊಡತಕ್ಕದ್ದು. ಪೂಜಾಮಂತ್ರಾದಿಗಳನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ಬ್ರಾಹ್ಮಣನಿಗೆ “ದಿವ್ಯಮೂರ್ತಿಜ್ರಗಕು: ದ್ವಾದಶಾತ್ಮಾ ದಿವಾಕರ ಕಪಿಲಾಸಹಿತೋದ್ದೇವೋ ಮಮ ಮುಕ್ತಿಂ ಪ್ರಯಚ್ಛತು|| ಯಥಾತ್ವಂಕಪಿಲೇಪುಣ್ಯಾ ಸರ್ವಲೋಕಸ್ಯ ಪಾವನೀ ಪ್ರರಾ ಸಹ ಸೂರ್ಯಣ ಮಮ ಮುಕ್ತಿ ಪ್ರದಾಭವ” ಹೀಗೆ ಹೇಳಿ ರಥವನ್ನೂ ಸೂರ್ಯಪ್ರತಿಮೆಯನ್ನೂ ದಾನಮಾಡತಕ್ಕದ್ದು. ಕಪಿಲಾ ಪ್ರಾರ್ಥನಾದಿ ವಿಸ್ತಾರವನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ಅಸಂಭವ, ಅಸಮರ್ಥತೆಯಲ್ಲಿ ಉಪೋಷಣ, ಜಾಗರಣ, ಹೋಮಾದಿ ವಿಧಿಗಳನ್ನು ಬಿಟ್ಟು ಷಷ್ಟಿ ದಿನದಲ್ಲಿಯೇ ಸ್ನಾನ, ರಥಾದಿ ಪೂಜಾ, ಕಪಿಲಾದಾನ ಮೊದಲಾದವುಗಳನ್ನು ಮಾಡತಕ್ಕದ್ದು. ಹೀಗೆ ಸಂಕ್ಷಿಪ್ತ ಕಪಿಲಾಷಷ್ಠಿ ವ್ರತವಿಧಿಯು, ಇಲ್ಲಿಗೆ ಭಾದ್ರಪದಮಾಸ ಕೃತ್ಯನಿರ್ಣಯ ಉದ್ದೇಶವು ಮುಗಿಯಿತು. ಅಶ್ವಿನಮಾಸ ಕೃತ್ಯ ನಿರ್ಣಯ ಅಶ್ವಿನದಲ್ಲಿ ತುಲಾಸಂಕ್ರಾಂತಿ, ತುಲಾ ಮತ್ತು ಮೇಷ ಸಂಕ್ರಾಂತಿಗಳಿಗೆ “ವಿಷುವ"ವೆಂಬ ಸಂಜೆಯಿದೆ. ಇವುಗಳ ಹಿಂದೆ ಮತ್ತು ಮುಂದೆ ಹದಿನಾರು -ಹದಿನಾರು ಘಟಿಗಳು ಪುಣ್ಯಕಾಲವು ಅಶ್ವಿನ ಶುಕ್ಲ ಪ್ರತಿಪದೆಯಲ್ಲಿ “ದೇವಿ ನವರಾತ್ರಾರಂಭ"ವು. “ನವರಾತ್ರ"ಈ ಶಬ್ದವು ಕರ್ಮವಾಚಕವು, ಅಶ್ವಿನ ಶುಕ್ಲ ಪ್ರತಿಪದಿಯನ್ನಾರಂಭಿಸಿ ಮಹಾನವಮಿ ಪರ್ಯಂತ ಮಾಡತಕ್ಕ ಕರ್ಮಾತ್ಮಕವಾದದ್ದು. ಇದರಲ್ಲಿ ಪೂಜೆಯೇ ಪ್ರಧಾನವು, ಉಪವಾಸ, ಸ್ತೋತ್ರ, ಜಪಾದಿಗಳು ಅಂಗವು. ಅಂತೂ ಕುಲಾಚಾರಕ್ಕನುಸರಸಿ ಉಪವಾಸ, ಏಕಭುಕ್ತ, ನಕ್ತ, ಅಯಾಜಿತ ಇವುಗಳಲ್ಲೊಂದು ಕ್ರಮವನ್ನು ಹಿಡಿದು ಅದರಂತೆ ಸಪ್ತಶತೀ, ಲಕ್ಷ್ಮೀ ಹೃದಯಾದಿ ಸ್ತೋತ್ರ, ಜಪ ಇತ್ಯಾದಿಗಳಿಂದ ಯುಕ್ತವಾಗಿ ಮಾಡಿದ, ಪ್ರತಿಪದಾದಿ ನವಮೀ ಪರ್ಯಂತದ ತಿಥಿಗಳಲ್ಲಿ ಮಾಡುವ “ಪೂಜೆ” ಈ ಕ್ರಮವು “ನವರಾತ್ರ” ಶಬ್ದವಾಚ್ಯವು. ಪೂಜೆಯೇ ಪ್ರಧಾನವೆಂದು ಹೇಳಿರುವದರಿಂದ ಕೆಲವು ಕುಲಗಳಲ್ಲಿ ಜಪ, ಉಪವಾಸ ಮೊದಲಾದ ನಿಯಮಗಳ ಅಭಾವ ಕಂಡುಬರುತ್ತದೆಯಾದರೂ ನವರಾತ್ರ ಕರ್ಮದಲ್ಲಿ ಪೂಜೆಯ ಅಭಾವಮಾತ್ರ ಕಂಡುಬರುವದಿಲ್ಲ. ಇನ್ನು ನವರಾತ್ರ ವ್ರತವನ್ನೇ ಆಚರಿಸದಿದ್ದವರ ಮಾತು ಬೇರೆ, ವ್ರತಾಚರಣೆಯೇ ಇಲ್ಲದಾಗ ಪೂಜೆಯಮಾತೆಲ್ಲಿ? ನವರಾತ್ರಾರಂಭವನ್ನು ಸೂರ್ಯೋದಯದಿಂದ ಮುಂದೆ ತ್ರಿಮುಹೂರ್ತವಿರುವ ಪ್ರತಿಪದಿಯಲ್ಲಿ ಮಾಡತಕ್ಕದ್ದು. ಅದರ ಅಭಾವದಲ್ಲಿ ದ್ವಿಮುಹೂರ್ತವಾದರೂ ಇರತಕ್ಕದ್ದು. ಕೆಲ ಗ್ರಂಥಕಾರರು ಮುಹೂರ್ತ ಮಾತ್ರವಿದ್ದರೂ ಸಾಕು ಎನ್ನುವರು. ಸರ್ವಥಾ ಅಮಾವಾಸ್ಕಾಯುಕ್ತವಾದ ಪ್ರತಿಪದಿಯಲ್ಲಿ ಮಾಡಕೂಡದೆಂದು ಬಹು ಗ್ರಂಥಗಳ ಅಭಿಪ್ರಾಯವು. ಇನ್ನು ಮುಹೂರ್ತಕ್ಕಿಂತ ಕಡಿಮೆ ಅಥವಾ ಸೂರ್ಯೋದಯ ಸ್ಪರ್ಶವೂ ಇಲ್ಲದಾಗ ಅಮಾವಾಸ್ಕಾ ಯುಕ್ತವಾದರೂ ಗ್ರಾಹ್ಯವು. ಪ್ರಥಮ ದಿನದಲ್ಲಿ ಪ್ರತಿಪದಿಯು ಅರವತ್ತು ಘಟೀ ಇದ್ದು ಮಾರನೇ ದಿನ ದ್ವಿಮುಹೂರ್ತಾದಿ ವ್ಯಾಪ್ತವಾದ ಪ್ರದಿಪದಿಯಿದ್ದರೂ ಪೂರ್ಣವಾಗಿರುವಿಕೆಯಿಂದ ಪೂರ್ವವೇ ಗ್ರಾಹ್ಯವು, ದ್ವಿತೀಯಾವೇಧ ನಿಷೇಧವಾದರೋ ಪ್ರತಿಪದಿಯು ಮುಹೂರ್ತನ್ಯೂನವಿದ್ದಾಗ, ಮತ್ತು ಅರವತ್ತಕ್ಕೆ ಮಿಕ್ಕಿ ಮಾರನೇದಿನವಿದ್ದಾಗ, ಈ ಎರಡೂ ಪಕ್ಷಗಳಲ್ಲಿ ದ್ವಿತೀಯಾವೇಧ ನಿಷೇಧವನ್ನು ಊಹಿಸತಕ್ಕದ್ದು. ಪುರುಷಾರ್ಥ ಚಿಂತಾಮಣಿಯಲ್ಲಾದರೋ ಪೂರ್ವದಿನ (ಅಮವಾಸೆ ದಿನ)ನಾಲ್ಕು ೧೦ ಧರ್ಮಸಿಂಧು ಮುಹೂರ್ತಾನಂತರ ಅಥವಾ ಐದು ಮುಹೂರ್ತಾನಂತರ ಪ್ರಾರಂಭವಾಗಿ ಎರಡನೇದಿನ ಮುಹೂರ್ತ ದ್ವಯಾದಿ ಪರಿಮಿತವಾದಲ್ಲಿ ಅದು ಕ್ಷಯಗಾಮಿನಿಯಾಗಿರುವದರಿಂದ ನಿಷಿದ್ಧವಾಗಿ ಅಮಾಯುಕ್ತವಾದರೂ ಪೂರ್ವವೇ ಗ್ರಾಹ್ಯವು, ಎಂದು ಹೇಳಿದೆ. ಇದನ್ನು ಸೂರ್ಯೋದಯದ ನಂತರ ಐದು ಮುಹೂರ್ತ ಮಧ್ಯದಲ್ಲಿ ಪ್ರಾರಂಭಿಸತಕ್ಕದ್ದು. ಅದು ಅಸಂಭವವಾದಲ್ಲಿ ಮಧ್ಯಾಹ್ನದಲ್ಲಾದರೂ ಅಭಿಜಿನ್ಮುಹೂರ್ತದಲ್ಲಿ ಪ್ರಾರಂಭ ಮಾಡತಕ್ಕದ್ದು. ಹೊರತು ಅಪರಾಹ್ನದಲ್ಲಲ್ಲ. “ಪ್ರತಿಪದಿ ಇದರಲ್ಲಿ ಆದಿಯಿಂದ ಹದಿನಾರು ಘಟಿಗಳು ಸಾಮಾನ್ಯವಾಗಿ ನಿಷಿದ್ಧವೆಂದು ಹೇಳಲ್ಪಡುತ್ತವೆ. ಮತ್ತು ಚಿತ್ರಾವೈಧೃತಿ ಯೋಗಗಳೂ ನಿಷಿದ್ದಗಳೆಂದು ಹೇಳಲಾಗುತ್ತದೆ. ಆದರ ಹಿಂದೆ ಹೇಳಿದ ಕಾಲನಿರ್ಣಯಕ್ಕೆ ಸಂಭವವಾದಲ್ಲಿ ನಿಷೇಧವನ್ನು ಪಾಲಿಸತಕ್ಕದ್ದು. ಹೊರತು ಬರೇ “ನಿಷಿದ್ದ” ಎಂದು ಹೇಳುವದರಿಂದ ಪ್ರಾರಂಭಕಾಲದ ವಿಷಯದಲ್ಲಿ ಪೂರ್ವಾಹವನ್ನೂ ಪ್ರತಿಪದಿಯನ್ನೂ ಕಡೆಗಣಿಸುವಂತಿಲ್ಲ. ಇನ್ನು ಪೂಜಾದ್ಯಧಿಕಾರ ಈ ಕರ್ಮದಲ್ಲಿ ಬ್ರಾಹ್ಮಣಾದಿ ನಾಲ್ಕು ವರ್ಣದವರಿಗೂ ಮೈಂಛಾದಿ ಜಾತಿಗಳಿಗೂ ಸಹ ಅಧಿಕಾರವಿದೆ. ಅದರಲ್ಲಿ ಬ್ರಾಹ್ಮಣರು ಜಪ, ಹೋಮ, ಅನ್ನ, ಬಲಿ, ನೈವೇದ್ಯ ಇವುಗಳಿಂದ ಸಾತ್ವಿಕ ಪೂಜೆಯನ್ನು ಮಾಡತಕ್ಕದ್ದು. “ನೈವೇದ್ಯಶ್ಚನಿರಾಮಿ ಮದ್ಯಂ ದಾಬ್ರಾಹ್ಮಣಸ್ತು ಬ್ರಾಹ್ಮಣಾದೇವಹೀಯತೇ” “ಮದ್ಯಮಪೇಯಮದೇಯಂ’ ಇತ್ಯಾದಿ ವಚನಗಳಿಂದ ಬ್ರಾಹ್ಮಣನಿಗೆ ಮದ್ಯ ಮಾಂಸಗಳನ್ನು ನಿಷೇಧಿಸಿರುವದರಿಂದ ಮದ್ಯಾದಿಯುಕ್ತ ರಾಜಸಪೂಜೆಯಲ್ಲಿ ಬ್ರಾಹ್ಮಣಾದಿಗಳಿಗೆ ಅಧಿಕಾರವಿರುವದಿಲ್ಲ. ಮದ್ಯಪಾನದಿಂದ ಮರಣಾಂತ ಪ್ರಾಯಶ್ಚಿತ್ತವನ್ನು ಹೇಳಿದೆ. ಸ್ಪರ್ಶಮಾಡಿದರೆ ಅಂಗಚ್ಛೇದ ಪ್ರಾಯಶ್ಚಿತ್ತವಿದೆ. ಅಲ್ಪಪ್ರಾಯಶ್ಚಿತ್ತದಿಂದ ದೋಷನಿವಾರಣೆಯಾಗುವದಿಲ್ಲವಾದ್ದ ರಿಂದ ಪತಿತತ್ವ ದೋಷವುಂಟಾಗುವದು. ಹೀಗೆಯೇ ಎಲ್ಲ ಪ್ರಾಚೀನ ಆರ್ವಾಚೀನ ನಿಬಂಧಕಾರರೂ ಒತ್ತಿ ಹೇಳುತ್ತಾರೆ. ತೀರ ಇತ್ತಲಾಗಿನ “ಭಾಸ್ಕರರಾಯ ಮೊದಲಾದವರಾದರೂ ಸಪ್ತಶತೀ ಟೀಕಾದಿಗಳಲ್ಲಿ ಪ್ರಾಚೀನ ಗ್ರಂಥಗಳನ್ನನುಸರಿಸಿಯೇ ಪರಿಷ್ಕರಿಸಿರುತ್ತಾರೆ. ಸಮಾಜದಲ್ಲಿಯೂ ಇದೇ ಮತವನ್ನೇ ಶ್ಲಾಘಿಸುತ್ತಾರೆ. ಆಚರಣೆಯನ್ನು ಮಾತ್ರ ಅನ್ಮಥಾ ಮಾಡುತ್ತಾರೆ. ಇವರಂಥವರು ಹೀಗೆ ತಾವು ಆಚರಣೆಮಾಡದೇ ಬೇರೆಯವರಿಗೆ ಉಪದೇಶ ಮಾಡುವುದರ ಅರ್ಥವೇ ಆಗುತ್ತಿಲ್ಲ. ತಾವು ದುರ್ದೈವದಿಂದ ಬ್ರಾಹ್ಮಣ್ಯ ಭ್ರಷ್ಟರಾದೆವು; ಬೇರೆಯವರೂ ಹೀಗಾಗಬಾರದೆಂಬ ಭೂತದಯೆಯಿಂದಿರಬಹುದೇ? ಅಥವಾ ತಮ್ಮ ಪಾತಿತ್ಯದೋಷವನ್ನು ಅಡಗಿಸುವ ತಂತ್ರವೋ? ಅಥವಾ ಉಳಿದಿರುವ ಕಲಿಯುಗದ ಬ್ರಾಹ್ಮಣರಿಗೆ ಅಧಿಕಾರವಿಲ್ಲವೆಂಬ ಆಲೋಚನೆಯೋ? ಹೀಗೆ ಈ ವಂಚಕರ ಆಚರಣೆಯ ಅರ್ಥವೇ ಆಗುವದಿಲ್ಲ. ಇರಲಿ, ಕ್ಷತ್ರಿಯ ಮತ್ತು ವೈಶ್ಯರಿಗೆ ಮಾಂಸಾವಿ ಯುಕ್ತವಾಗಿ ಜಪ, ಹೋಮಸಹಿತವಾದ ರಾಜನ ಪೂಜೆಯಲ್ಲಿ ಅಧಿಕಾರವಿದ್ದರೂ ಅದು ಕಾಮವೇ ಹೊರತು ನಿತ್ಯವಲ್ಲ. ಅಂದರೆ ವಿಶೇಷ ಕಾಮನೆಯಲ್ಲಿ ಮಾತ್ರ ಮಾಂಸವನ್ನುಪಯೋಗಿಸುವದು. ನಿಷ್ಕಾಮರಾದ ಕ್ಷತ್ರಿಯಾದಿಗಳು ಸಾತ್ವಿಕಪೂಜೆಯನ್ನೇ ಮಾಡತಕ್ಕದ್ದು. ಅದರಿಂದ ಮೋಕ್ಷಾದಿ ಅತಿಶಯ ಫಲವನ್ನು ಹೊಂದುವರು. ಶೂದ್ರಾದಿಗಳು ತಾಮಸಪೂಜೆಗೆ ಅಧಿಕಾರಿಗಳು, ಮಾಂಸಾದಿಗಳನ್ನುಪಯೋಗಿಸಬಹುದು. ಅವರಿಗೆ ಮಂತ್ರ ಜಪಾದಿಗಳು ವರ್ಷಗಳು, ಸಪ್ತಶತೀ ಜಪ ಹೋಮಾತ್ಮಕವಾದ ಸಾತ್ವಿಕ ಪೂಜೆಯನ್ನು ತಾನು ಪರಿಚ್ಛೇದ - ೨ ಮಾಡತಕ್ಕದ್ದಲ್ಲ. ಬ್ರಾಹ್ಮಣದ್ವಾರಾ ಮಾಡಬಹುದು. ಸ್ತ್ರೀ ಶೂದ್ರಾದಿಗಳಿಗೆ ಸ್ವತಃ ಪೌರಾಣಮಂತ್ರದಲ್ಲಿಯೂ ಅಧಿಕಾರವಿಲ್ಲೆಂದು “ಶೂದ್ರಃಸುಖಮವಾಪ್ನುಯಾತ್ ಈ ವಚನದ ಭಾಷ್ಯದಲ್ಲಿ “ಸ್ತ್ರೀ ಶೂದ್ರರು ಶ್ರವಣದಿಂದಲೇ ಶ್ರೇಯಸ್ಸನ್ನು ಹೊಂದುವರು;ಹೊರತು ಪಠನದಿಂದಲ್ಲ ಎಂದು ಹೇಳಿದೆ. ಇದರ ಮೇಲಿಂದ ಸ್ತ್ರೀ ಶೂದ್ರಾದಿಗಳು ಗೀತಾ- ವಿಷ್ಣು ಸಹಸ್ರನಾಮಾದಿಗಳ ಪಠನಮಾಡಿದಲ್ಲಿ ದೋಷವೆಂದೇ ಹೇಳಬೇಕಾಗುವದು. ಎಷ್ಟೋ ಗ್ರಂಥಗಳಲ್ಲಿ ಸ್ತ್ರೀ ಶೂದ್ರರಿಗೆ ಸ್ವತಃ ಆದರೂ ಪೌರಾಣ ಮಂತ್ರಯುಕ್ತವಾದ ಪೂಜೆಯಲ್ಲಿ ಅಧಿಕಾರವಿದೆಯೆಂದು ಹೇಳಿರುವರು. ಆದರೂ ಜಪ ಹೋಮಾದಿಗಳನ್ನು ಬ್ರಾಹ್ಮಣ ಮುಖದಿಂದಲೇ ಮಾಡಿಸತಕ್ಕದ್ದು. ಮೇಂಛಾದಿಗಳಿಗೆ ಬ್ರಾಹ್ಮಣದ್ವಾರದಿಂದಲೂ, ಜಪ, ಹೋಮ, ಸಮಂತ್ರಕ ಪೂಜಾ ಇವುಗಳಲ್ಲಿ ಅಧಿಕಾರವಿರುವದಿಲ್ಲ. ಆದರೆ ಮೈಂಛಾದಿಗಳು ಆಯಾಯ ಪೂಜೋಪಚಾರಗಳನ್ನು ಮಾನಸಿಕವಾಗಿಯೇ ಮಾಡತಕ್ಕದ್ದು. ನವರಾತ್ರಿಯ ಅನುಕಲ್ಪಗಳು (ಗೌಣಕಲ್ಪ ) ಪ್ರತಿಪದಿಯಾದಿ ನವಮ್ಮಂತವಾಗಿ ಮಾಡುವ ವ್ರತವು ಪೂರ್ಣಪಕ್ಷವು. ಇನ್ನು ತೃತೀಯಾದಿ ನವಮ್ಮಂತ ಏಳುದಿನಗಳ ವ್ರತ, ಅಥವಾ ಪಂಚಮ್ಯಾದಿ ಪಂಚರಾತ್ರವ್ರತ, ಸಪ್ತಮ್ಯಾದಿ ತ್ರಿರಾತ್ರವ್ರತ ಅಷ್ಟಮಾದಿ ದ್ವಿರಾತ್ರ ಹೀಗೆ ಪರಿಸ್ಥಿತಿಗನುಸರಿಸಿ ಯಾವದೊಂದು ಪಕ್ಷವನ್ನು ಹಿಡಿದು ಮಾಡಬಹುದು. ಇನ್ನು ಬರೇ ಏಕರಾತ್ರವಾಗಿ ಒಂದೇ ದಿನದ ವ್ರತವನ್ನು ಮಾಡುವವರು ಕೇವಲ ಅಷ್ಟಮಿಯಲ್ಲಾಗಲೀ ಕೇವಲ ನವಮಿಯಲ್ಲಾಗಲೀ ಮಾಡತಕ್ಕದ್ದು. ಈ ಎಲ್ಲ ಪಕ್ಷಗಳ ಆಚಾರಕ್ಕೆ ಕುಲಾಚಾರವೇ ಮುಖ್ಯವು. ಪ್ರತಿಬಂಧಾದಿಗಳಿಂದ ಹಿಡಿದ ಪಕ್ಷಗಳಲ್ಲಿ ತೊಂದರೆಯುಂಟಾದಲ್ಲಿ ಪ್ರತಿಬಂಧಕವಾಗಿರದ ಮುಂದಿನ ಪಕ್ಷಗಳನ್ನು ಆಚರಿಸುವದು. ಅಂದರೆ ತ್ರಿರಾತ್ರಾದಿ ನವಮ್ಮಂತ ಮಾಡುವವರಿಗೆ ಅಶೌಚಾದಿಗಳುಂಟಾಗಿ ಷಷ್ಠಿಯಲ್ಲಿ ನಿವೃತ್ತಿಯಾದರೆ ಸಪ್ತಮ್ಯಾದಿ ತ್ರಿರಾತ್ರವ್ರತವನ್ನು ಮಾಡಬಹುದು. ಇತ್ಯಾದಿ ತಿಳಿಯತಕ್ಕದ್ದು. ತೃತೀಯ ಪಂಚಮ್ಮಾದಿ ಪಕ್ಷಗಳ ತಿಥಿನಿರ್ಣಯವನ್ನು ಪ್ರತಿಪದಿ ಮೊದಲಾದವುಗಳಂತೆಯೇ ತಿಳಿಯತಕ್ಕದ್ದು. ಸಪ್ತಮ್ಯಾದಿ ಪಕ್ಷಗಳ ನಿರ್ಣಯವನ್ನು ಮುಂದೆ ಹೇಳುವವು. ನವರಾತ್ರಾದಿ ಈ ಪಕ್ಷಗಳಲ್ಲಿ ತಿಥಿಗಳು ವೃದ್ಧಿಯಾದಾಗ ವೃದ್ಧಿಯಾದ ತಿಥಿ ಪ್ರಯುಕ್ತ ಪೂಜೆಯನ್ನು ಎರಡು ದಿವಸ ಮಾಡತಕ್ಕದ್ದು. ತಿಥಿಕ್ಷೆಯವಾದಲ್ಲಿ ಅದರಲ್ಲಿ ಒಂದೇ ದಿನ ಎರಡು ಪೂಜೆಗಳನ್ನೂ ಮಾಡತಕ್ಕದ್ದು. ಕೆಲವರು ದಿನಕ್ಷಯವಾದರೆ ಎಂಟೇ ಪೂಜಾ ಪಾರಾಯಣಗಳನ್ನು ಮಾಡುವರು. ಈ ದೇವಿ ಪೂಜಾರೂಪವಾದ “ನವರಾತ್ರ ಕರ್ಮ’ವು ನಿತ್ಯವು. ಮಾಡದಿದ್ದಲ್ಲಿ ದೋಷವುಂಟಾಗುವದು. ಇದಕ್ಕೆ ಫಲವಿಶೇಷವನ್ನು ಹೇಳುವದರಿಂದ"ಕಾಮ"ವೂ ಹೌದು. ನವರಾತ್ರಿಯಲ್ಲಿಯ ಕೃತ್ಯವು ಘಟಸ್ಥಾಪನ, ತ್ರಿಕಾಲಪೂಜಾ ಅಥವಾ ಎರಡುಕಾಲ ಪೂಜಾ ಇಲ್ಲವೇ ಒಂದೇ ಕಾಲದಲ್ಲಿಯಾದರೂ ತಮ್ಮ ಕುಲದೇವತಾ ಪೂಜಾ, ಸಪ್ತಶತ್ಯಾದಿ ಪಾರಾಯಣ, ಅಖಂಡ ನಂದಾದೀಪ, ಆಚಾರಾನುಸಾರ ಮಾಲಾಬಂಧನಾದಿ, ಉಪವಾಸ, ನಕ್ತ, ಏಕಭುಕ್ತ ಇತ್ಯಾದಿ ನಿಯಮ, ೧೦೪ ಧರ್ಮಸಿಂಧು ಸುವಾಸಿನೀ ಭೋಜನ, ಕುಮಾರೀ ಪೂಜಾದಿ, ಕೊನೆಗೆ ಸಪ್ತ ಶತ್ಯಾದಿ ಸ್ತೋತ್ರ, ಮಂತ್ರ, ಹೋಮ ಇತ್ಯಾದಿಗಳೆಲ್ಲ ವಿಹಿತವಾಗಿವೆ. ಕೆಲವು ಕುಲಗಳಲ್ಲಿ ಈ ಘಟಸ್ಥಾಪನಾದಿ ಕರ್ಮಗಳಲ್ಲಿ ಎರಡು ಮೂರು ಕರ್ಮಗಳನ್ನು ಮಾತ್ರ ಅನುಷ್ಠಾನ ಮಾಡುವರು. ಎಲ್ಲವುಗಳನ್ನೂ ಆಚರಿಸುವದಿಲ್ಲ. ಇನ್ನು ಕೆಲಕಡೆಗಳಲ್ಲಿ ಘಟಸ್ಥಾಪನೆ ರಹಿತವಾಗಿ ಪೂರ್ಣ ಕ್ರಮಗಳನ್ನೂ ಆಚರಿಸುವದುಂಟು. ಈ ಪೂರ್ಣಕ್ರಮವನ್ನಾಚರಿಸುವದು ಅಥವಾ ಕೆಲವನ್ನು ಆಚರಿಸುವದು ಇದು ಆಯಾಯ ಕುಲಾಚಾರ ಪದ್ಧತಿಯನ್ನವಲಂಬಿಸಿದೆ. ಹೆಚ್ಚು ಸಮರ್ಥನಾದರೂ ಕುಲಾಚಾರದಂತೆಯೇ ಆಚರಿಸತಕ್ಕದ್ದು; ಹೊರತು ವಿಸ್ತಾರಮಾಡಲು ಹೋಗಬಾರದು. ಇದು ಶಿಷ್ಟಾಚಾರವು. ವಿಶೇಷ ಫಲಕಾಮನೆಯಿಂದ ಉಪವಾಸಾದಿಗಳನ್ನು ಸಂಕಲ್ಪಿಸಿದಲ್ಲಿ ಕುಲಾಚಾರವಿಲ್ಲದೆಯೂ ಮಾಡಬಹುದು. ಘಟಸ್ಥಾಪನೆಯನ್ನು ರಾತ್ರಿಯಲ್ಲಿ ಮಾಡತಕ್ಕದ್ದಲ್ಲ. ಘಟಸ್ಥಾಪನೆಯ ಸಲುವಾಗಿ ಶುದ್ಧಮೃತ್ತಿಕೆಯಿಂದ ವೇದಿಕೆಯನ್ನು ರಚಿಸಿ ಪಂಚಪಲ್ಲವ, ದೂರ್ವಾ, ಫಲ, ತಾಂಬೂಲ, ಕುಂಕುಮ, ಧೂಪ, ದೀಪ ಮೊದಲಾದ ಸಾಮಗ್ರಿಗಳನ್ನು ಸಿದ್ದಪಡಿಸತಕ್ಕದ್ದು. ನವರಾತ್ರಾರಂಭ ಪ್ರಯೋಗ ಪ್ರತಿಪದೆಯದಿನ ಪ್ರಾತಃಕಾಲದಲ್ಲಿ ಅಭ್ಯಂಗಸ್ನಾನಮಾಡಿ ಕುಂಕುಮ ಚಂದನಾದಿಗಳಿಂದ ಪುಂಡ್ರ (ತಿಲಕವನ್ನು) ಧರಿಸಿ, ಪವಿತ್ರಪಾಣಿಯಾಗಿ, ಸಕನಾಗಿ ದಘಟಿ ಪರಿಮಿತಕಾಲ ಅಥವಾ ಅಭಿಜಿನ್ಮುಹೂರ್ತದಲ್ಲಿ, ದೇಶ ಕಾಲಗಳನ್ನುಚ್ಚರಿಸಿ, “ಮಮ ಸಕುಟಂಬ ಅಮುಕದೇವತಾ ಪ್ರೀತಿದ್ದಾರಾ ಸರ್ವಾಪಚ್ಛಾಂತಿ ಪೂರ್ವಕ ದೀರ್ಘಾಯು, ಧನಪುತ್ರಾದಿವೃದ್ಧಿ, ಶತ್ರುಜಯ, ಕೀರ್ತಿಲಾಭಪ್ರಮುಖ ಚತುರ್ವಿಧ ಪುರುಷಾರ್ಥ ಸಿದ್ಯರ್ಥಂ ಅಪ್ರಕೃತಿ ಮಹಾನವಮೀ ಪರ್ಯಂತಂ ಪ್ರತ್ಯಹಂ ತ್ರಿಕಾಲಮೇಕಕಾಲಂ ವಾ ಅಮುಕದೇವತಾಪೂಜಾಂ ಉಪವಾಸ, ನಕ್ತ, ಏಕಭಕ್ತ, ಅನ್ಯತಮ ನಿಯಮಸಹಿತಾಂ ಅಖಂಡದೀಪ ಪ್ರಜ್ವಾಲನಂ, ಕುಮಾರೀ ಪೂಜನಂ, ಪುಣ್ಯಾಹವಾಚನಂ, ಚಂಡೀ ಸಪ್ತಶತೀ ಪಾಠಂ, ಸುವಾಸಿನ್ಯಾದಿ ಭೋಜನಂ” ಇತ್ಯಾದಿ ಕುಲಾಚಾರಕ್ಕನುಸರಿಸಿ ಯಾವಯಾವದನ್ನು ಆಚರಿಸುವನೋ ಅದರಂತೆ ಉಚ್ಚರಿಸಿ ಈ ರೂಪದ “ಶಾರದ ನವರಾತ್ರೋತ್ಸವಾಖ್ಯಂ ಕರ್ಮಕರಷ್ಟೇ ದೇವತಾಪೂಜಾಂಗನ ಘಟಸ್ಥಾಪನಂಚ ಕರಿಷ್ಯ ತದಾನಿರ್ವಿಘ್ನ ತಾ ಸಿಧ್ಯರ್ಥಂ ಗಣಪತಿ ಪೂಜನಂ ಪುಣ್ಯಾಹವಾಚನಂ ಚಂಡೀಸಪ್ತಶತೀ ಜಪಾದರ್ಥ ಬ್ರಾಹ್ಮಣವರಣಂಚ ಕರಿಷ್ಟೇ” ಘಟಸ್ಥಾಪನೆ ಮಾಡುವದಿದ್ದರೆ “ಮಹೀದೌ” ಈ ಮಂತ್ರದಿಂದ ಭೂಮಿಯನ್ನು ಸ್ಪರ್ಶಿಸುವದು. ಮತ್ತು ಆ ಭೂಮಿಯಲ್ಲಿ ಅಂಕುರಾರೋಪಣಕ್ಕಾಗಿ ಶುದ್ಧ ಮೃತ್ತಿಕೆಯನ್ನು ಹರವಿ “ಓಷಧಯಃಸಂ” ಎಂದು ಆ ಮೃತ್ತಿಕೆಯಲ್ಲಿ ಜವೆ ಮೊದಲಾದವುಗಳನ್ನು ಬೀರುವದು. “ಆ ಕಲಶೇಷ” ಎಂಬ ಮಂತ್ರದಿಂದ ಕುಂಭವನ್ನಿಟ್ಟು “ಇಮಂಮೇಗಂಗ ಮಂತ್ರದಿಂದ ಜಲವನ್ನು ತುಂಬುವದು. “ಗಂಧದ್ವಾರಾಂ"ಎಂದು ಗಂಧವನ್ನೂ, “ಯಾಓಷಧೀ’ ಎಂದು ಸರ್ವೆಷಧಿಗಳನ್ನೂ, “ಕಾಂಡಾತ್ಕಾಂಡಾತ್” ಮಂತ್ರದಿಂದ ದೂರ್ವೆಗಳನ್ನೂ, “ಅಶ್ವತ್ಥೇವ “ಎಂಬ ಮಂತ್ರದಿಂದ ಪಂಚಪಲ್ಲವಗಳನ್ನೂ, “ನಾಪೃಥಿವಿ” ಎಂದು ಮೃತ್ತಿಕೆಯನ್ನೂ, “ಯಾ ಫಲೀನಿ” ಎಂದು ಫಲವನ್ನೂ, “ಸಹಿರತ್ನಾನಿ” ಎಂದು ರತ್ನವನ್ನೂ, “ಹಿರಣ್ಯರೂಪ” ಎಂಬ ಮಂತ್ರದಿಂದ ಹಿರಣ್ಯವನ್ನೂ ಕಲಶದಲ್ಲಿ ಹಾಕುವದು. “ಯುವಾಸುವಾಸಾ” ಎಂಬುದರಿಂದ ಪರಿಚ್ಛೇದ - ೨ ೧೦೫ ಸೂತ್ರವನ್ನು ಸುತ್ತಿ “ಪೂರ್ಣಾದರ್ಪಿ” ಇದರಿಂದ ಪೂರ್ಣಪಾತ್ರವನ್ನಿಟ್ಟು “ತತ್ವಾಯಾಮಿ"ಎಂಬ ಮಂತ್ರದಿಂದ ವರುಣನನ್ನು ಪೂಜಿಸಿ ಕಲಶದಮೇಲೆ ಕುಲದೇವತಾ ಪ್ರತಿಮೆಯನ್ನಿಟ್ಟು ಪೂಜಿಸತಕ್ಕದ್ದು. ಪೂಜಾಕ್ರಮ ಅಂದರೆ “ಜಯಂತೀ ಮಂಗಲಾಕಾಳೀ ಭದ್ರಕಾಲೀ ಕಪಾಲಿ ದುರ್ಗಾಮಾ ಶಿವಾಧಾ ಸ್ವಧಾಸ್ವಾಹಾ ನಮೋಸ್ತುತೇ||೧|| ಆಗಚ್ಛವರದೇದೇವೀ ದೈತ್ಯದರ್ಪನಿಪೂರಿನಿಪೂಜಾಂಗೃಹಣಾಸುಮುಖಿ ನಮಸ್ತೇ ಶಂಕರಪ್ರಿಯೇ||೨||” ಇದನ್ನು ಹೇಳಿ ಪುರುಷಸೂಕ್ತದ ಮತ್ತು ಶ್ರೀ ಸೂಕ್ತದ ಪ್ರಥಮ ಮಂತ್ರಗಳಿಂದ ಆವಾಹನ ಮಾಡತಕ್ಕದ್ದು. “ಜಯಂತೀ ಮಂಗಲಾ ಕಾಲೀ ಎಂಬ ಮಂತ್ರ ಹಾಗೂ ಪುರುಷ, ಶ್ರೀಸೂಕ್ತ ಮಂತ್ರಗಳನ್ನು ಕ್ರಮದಂತೆ ಉಚ್ಚರಿಸಿ ಆಸನಾದಿ ಷೋಡಶೋವಚಾರ ಪೂಜೆಯನ್ನು ಮಾಡತಕ್ಕದ್ದು. “ಸರ್ವಮಂಗಲ ಮಾಂಗಲ್ಯ ಇತ್ಯಾದಿಗಳಿಂದ ಪ್ರಾರ್ಥಿಸುವದು. ಪ್ರತಿದಿನ ಬಲಿದಾನ ಮಾಡುವದಿದ್ದಲ್ಲಿ “ಮಾಷಭಕ್ತ” (ಉದ್ದು ಅನ್ನ) ಅಥವಾ ಕುಂಬಳಕಾಯಿಯಿಂದ ಬಲಿಯನ್ನು ಕೊಡತಕ್ಕದ್ದು. ಪೂಜಾನಂತರವೇ ಬಲಿದಾನ ಮಾಡತಕ್ಕದ್ದು. ಅಥವಾ ಬಲಿದಾನವಿಲ್ಲದಿದ್ದರೂ ನಡೆಯುವದು. “ಅಖಂಡದೀಪಕಂದೇವ್ಯಾ: ಪ್ರಿಯತೇನವರಾತ್ರಕಂ ಉಜ್ವಾಲಯೇ ಅಹೋರಾತ್ರಂ ಏಕಚಿದ್ಭತವ್ರತಃ” ಈ ಮಂತ್ರದಿಂದ ಅಖಂಡ ದೀಪವನ್ನು ಸ್ಥಾಪಿಸುವದು. ಚಂಡೀಪಾಠ ಪ್ರಕಾರವು, “ಯಜಮಾನೇನ ಪ್ರತೋಹಂ ಚಂಡೀಸಪ್ತಶತೀ ಪಾಠಂ ನಾರಾಯಣ ಹೃದಯ ಲಕ್ಷ್ಮೀ ಹೃದಯ ಪಾಠಂ ವಾ ಕರಿಷ್ಟೇ” ಹೀಗೆ ಸಂಕಲ್ಪಿಸಿ ಆಸನಾದಿಗಳನ್ನು ಸ್ಥಾಪಿಸಿ ಆಧಾರದಲ್ಲಿ (ವ್ಯಾಸಪೀಠಾದಿ) ಬೇರೆಯವರಿಂದ ಬರೆಯಿಸಿದ ಪುಸ್ತಕವನ್ನಿಟ್ಟು “ನಾರಾಯಣಂನಮಸ್ಕೃತ್ಯ ಇತ್ಯಾದಿ ವಚನವಿರುವದರಿಂದ “ಓಂ ನಾರಾಯಣಾಯ ನಮಃ, ನರಾಯನರೋತ್ತಮಾಯ ನಮಃ, ದೈವ್ಯಸರಸ್ವತೈ ನಮಃ, ವ್ಯಾಸಾಯ ನಮಃ ಹೀಗೆ ನಮಸ್ಕರಿಸಿ ಓಂಕಾರವನ್ನುಚ್ಚರಿಸಿ ಎಲ್ಲ ಪಾಠವು ಮುಗಿದ ನಂತರ ಪುನಃ ಓಂಕಾರವನ್ನು ಪಠಿಸತಕ್ಕದ್ದು. ಪುಸ್ತಕ ಓದುವದರಲ್ಲಿ ನಿಯಮವು:- ಕೈಯಲ್ಲಿ ಪುಸ್ತಕವನ್ನಿಟ್ಟುಕೊಂಡು ಓದಬಾರದು. ಪುಸ್ತಕವು ತನ್ನಿಂದ ಅಥವಾ ಬ್ರಾಹ್ಮಣೇತರರಿಂದ ಬರೆದದ್ದು ನಿಷ್ಪಲವು. ಅಧ್ಯಾಯ ಮುಗಿಸಿದ ನಂತರವೇ ವಿರಮಿಸತಕ್ಕದ್ದು. ಹೊರತು ಮಧ್ಯದಲ್ಲಿ ನಿಲ್ಲಿಸತಕ್ಕದ್ದಲ್ಲ. ಮಧ್ಯದಲ್ಲಿ ನಿಂತರೆ ಪುನಃ ಅಧ್ಯಾಯದ ಆದಿಯಿಂದಲೇ ಓದತಕ್ಕದ್ದು. ಗ್ರಂಥದ ಅರ್ಥವು ತಿಳಿದಿರಬೇಕು. ಅಕ್ಷರಗಳ ಉಚ್ಚಾರವು ಸ್ಪಷ್ಟವಾಗಿರಬೇಕು. ಅತಿ ಶೀಘ್ರ ಅಥವಾ ಅತಿಮಂದವಾಗಿ ಪಠಿಸಬಾರದು. ರಸ, ಭಾವಗಳಿಗನುಗುಣವಾದ ಸ್ವರದಲ್ಲಿ ಓದಬೇಕು. “ತಸ್ಮಾನ್ಮಮೃತನ್ಮಾಹಾತ್ಮಂ ಪಠಿತವ್ಯಂ ಸಮಾಹಿತಃ ಪ್ರೋತವಂಚ ಸದಾಭಾ” ಹೀಗೆ ವಚನವಿರುವದರಿಂದ ಧರ್ಮ, ಅರ್ಥ, ಕಾಮ ಅಪೇಕ್ಷೆಯುಳ್ಳವರು ಸದಾ ಚಂಡೀಪಾಠವನ್ನು ಮಾಡತಕ್ಕದ್ದು. ಇನ್ನು ನೈಮಿತ್ತಿಕವಾಗಿಯೂ ಚಂಡೀಪಾಠವನ್ನು ಹೇಳಿದೆ. “ಶಾಂತಿಕರ್ಮಣಿಸರ್ವತ್ರ ತಹಾದುಃಸ್ವಪ್ನದರ್ಶನೇ! ಗ್ರಹಪೀಡಾಸುಗ್ರಾಸು ಮಹಾತ್ಮಂಶೃಣುಯಾನ” ಅಂದರೆ ಎಲ್ಲ ಶಾಂತಿಕಾರ್ಯಗಳಲ್ಲಿಯೂ ಗ್ರಹಕೋಪಾದಿಗಳಲ್ಲಿಯೂ ಪರಿಸತಕ್ಕದ್ದು. ಮಹಾಸಂಕಟ, ಅರಣ್ಯ ಮಧ್ಯದಲ್ಲಿ ಕಾಡುಗಿಚ್ಚಿನಿಂದ ಆವೃತನಾದಾಗ, ದರೋಡೆಯೋರರಿಂದ, ಅಥವಾ ಶತ್ರುಗಳಿಂದ ಪೀಡಿತನಾದಾಗ (ಇತ್ಯಾದಿ ಸಂಕಟಗಳಲ್ಲಿ) ಸಪ್ತಶತೀ ಪಾಠವನ್ನು ಹೇಳಿದೆ. ಎಲ್ಲ ತರದ ಬಾಧೆಗಳಲ್ಲೂ ಇದನ್ನು ಪಠಿಸಿದರೆ ಸಮಸ್ತ ಪೀಡೆಗಳ ಪರಿಹಾರವಾಗುವದು. ೧೦೬ ಧರ್ಮಸಿಂಧು ಆಯಾಯ ಫಲಗಳಿಗನುಸಾರವಾಗಿ ಪಾರಾಯಣ ಸಂಖ್ಯೆಯೂ ಹೇಳಲ್ಪಟ್ಟಿದೆ. ಅಶುಭ ಉಪದ್ರವನಾಶಕ್ಕಾಗಿ ಮೂರು ಪಾರಾಯಣ ಮಾಡತಕ್ಕದ್ದು. ಇದರಂತೆ ಗ್ರಹಪೀಡಾ ಶಾಂತಿಗಾಗಿ ಐದು, ಮಹಾಭೀತಿಯುಂಟಾದಾಗ ಏಳು, ಶಾಂತಿಗಾಗಿ ಅಥವಾ ಜಪದ ಫಲಪ್ರಾಪ್ತಿಗಾಗಿ ಒಂಭತ್ತು, ರಾಜ್ಯವಶಕ್ಕಾಗಿ ಹನ್ನೊಂದು, ವೈರನಾಶಕ್ಕಾಗಿ ಹನ್ನೆರಡು, ಸ್ತ್ರೀ ಪುರುಷರ ವಶಕ್ಕಾಗಿ ಹದಿನಾಲ್ಕು, ಸೌಖ್ಯ ಐಶ್ವರ್ಯದ ಸಲುವಾಗಿ ಹದಿನೈದು, ಪುತ್ರ-ಪೌತ್ರ ಧನ-ಧಾನ್ಯ ಪ್ರಾಪ್ತಿಗಾಗಿ ಹದಿನಾರು, ರಾಜಭಯ ನಾಶಕ್ಕಾಗಿ ಹದಿನೇಳು, ಉಚ್ಚಾಟನಕ್ರಮಕ್ಕಾಗಿ ಹದಿನೆಂಟು, ಅರಣ್ಯದಲ್ಲಿಯ ಭೀತಿಶಮನಕ್ಕೆ ಇಪ್ಪತ್ತು, ಬಂಧವಿಮೋಚನೆಗಾಗಿ ಇಪ್ಪತ್ತೈದು ಹೀಗೆ ಆಯಾಯ ಫಲಗಳಿಗಾಗಿ ಪಾರಾಯಣ ಸಂಖ್ಯೆಗಳು, ನೂರಾವರ್ತಿ ಪಠನ ಮಾಡಿದರೆ ಚಿಕಿತ್ಸೆಗೆ ನಿಲುಕದ ರೋಗ, ಕುಲವಿಚ್ಛೇದ, ಆಯುಷ್ಯ ನಾಶ, ವೈರಿವೃದ್ಧಿ, ತ್ರಿವಿಧ ಉತ್ಪಾತ ಮೊದಲಾದ ಮಹಾಸಂಕಟಗಳ ನಾಶವಾಗುವದು; ಮತ್ತು ರಾಜ್ಯವು ಅಭಿವೃದ್ಧಿ ಹೊಂದುವದು. ಸಹಸ್ರಾವರ್ತಿ ಪಠಿಸಿದಲ್ಲಿ ನೂರು ಅಶ್ವಮೇಧ ಯಜ್ಞದ ಫಲವು ಸಿಗುವದು. ಸಕಲ ಮನೋರಥ ಪ್ರಾಪ್ತಿಯಾಗುವದು. ಮತ್ತು ಕೊನಗೆ ಮೋಕ್ಷವೂ ದೊರಕುವದು. ಹೀಗೆ “ವಾರಾಹೀ ತಂತ್ರ"ದಲ್ಲಿ ಹೇಳಿದೆ. ಕಾಮನೆಯಿಂದ ಪರಿಸುವಲ್ಲಿ ಆದಿಯಲ್ಲಿ ಸಂಕಲ್ಪಪೂರ್ವಕ ಪೂಜೆ ಮತ್ತು ಅಂತ್ಯದಲ್ಲಿ ಬಲಿದಾನ ಮಾಡತಕ್ಕದ್ದು. ಇನ್ನು ಈ ನವರಾತ್ರದಲ್ಲಿ ವೇದಪಾರಾಯಣ ಮಾಡುವದೂ ಆಚರಣೆಯಲ್ಲಿದೆ. ದರ ಬೋಧಾಯನೋಕ್ತ ವಿಧಾನವನ್ನು “ಕೌಸ್ತುಭ"ದಲ್ಲಿ ನೋಡುವದು. ಕುಮಾರೀ ಪೂಜೆ “ಏಕವರ್ಷಾತು ಯಾ ಕನ್ಯಾ ಪೂಜಾರ್ಥಂ ತಾಂ ವಿಸರ್ಜಯೇತ್” ಎಂಬ ಉಕ್ತಿಯಂತೆ ಒಂದುವರ್ಷದೊಳಗಿನ ಕುಮಾರಿಯನ್ನು ಪೂಜೆಯಲ್ಲಿ ತ್ಯಜಿಸತಕ್ಕದ್ದು. ಎರಡು ವರ್ಷದಿಂದ ಹಿಡಿದು ಹತ್ತು ವರ್ಷದ ಅವಧಿವರೆಗಿನ ಕುಮಾರಿಯರಿಗೆ -ಎರಡು ವರ್ಷದವಳಿಗೆ “ಕುಮಾರಿಕಾ”, ಮೂರು ವರ್ಷದವಳಿಗೆ “ತ್ರಿಮೂರ್ತಿ” ನಾಲ್ಕು ವರ್ಷದವಳಿಗೆ “ಕಲ್ಯಾಣಿ”, ಐದುವರ್ಷದವಳಿಗೆ “ರೋಹಿಣಿ”, ಆರುವರ್ಷದವಳಿಗೆ “ಕಾಲೀ”, ಏಳುವರ್ಷದವಳಿಗೆ “ಚಂಡಿಕಾ”, ಎಂಟುವರ್ಷದವಳಿಗೆ “ಶಾಂಭವೀ, ಒಂಭತ್ತು ವರ್ಷದವಳಿಗೆ “ದುರ್ಗಾ”, ಹತ್ತು ವರ್ಷದವಳಿಗೆ “ಭದ್ರಾ” ಹೀಗೆ ಹೆಸರುಗಳಿವೆ. ಈ ಕುಮಾರಿಕೆಯರ ಪ್ರತ್ಯೇಕ ಪೂಜಾಮಂತ್ರ ಹಾಗೂ ಫಲ, ಲಕ್ಷಣಾದಿಗಳನ್ನೆಲ್ಲ ಅನ್ಯ ಗ್ರಂಥಗಳಿಂದ ತಿಳಿಯತಕ್ಕದ್ದು, ಬ್ರಾಹ್ಮಣನು ಬ್ರಾಹ್ಮಣ ಕುಮಾರಿಯರನ್ನೇ ಪೂಜಿಸತಕ್ಕದ್ದು. ಸವರ್ಣಕುಮಾರಿಯರು ಪೂಜೆಗೆ ಶ್ರೇಷ್ಠರು. ಕೆಲ ಕಾಮನಾ ವಿಶೇಷದಲ್ಲಿ ಅಸವರ್ಣ ಕುಮಾರಿಕೆಯರನ್ನೂ ಹೇಳಿದೆ. ಏಕೋತ್ತರ ವೃದ್ಧಿಕ್ರಮದಿಂದ ಪ್ರತಿದಿನ ಪೂಜಿಸತಕ್ಕದ್ದು. ಅಭಾವದಲ್ಲಿ ಒಬ್ಬೊಬ್ಬರನ್ನಾದರೂ ಪೂಜಿಸುವದು. “ಮಂತ್ರಾರಮಂ ಲಕ್ಷ್ಮಿ ಮಾತ್ರಣಾ ರೂಪಧಾರಿಣೀಂನವರುರ್ಗಾತ್ಮಕಾಂ ಸಾಕಾತ್ ಕಾಮಾವಾಹಯಾಮ್ಯಹಂ||೧|| ಜಗದ ಜಗತ್ತೂ ಸರ್ವಶಕ್ತಿ ಸ್ವರೂಪಿಣಿ ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತ ||೨||” ಈ ಮಂತ್ರದಿಂದ ಪಾದಪ್ರಕಾಳನಮಾಡಿ ವಸ್ತ್ರ, ಕುಂಕುಮ, ಗಂಧ, ಧೂಪ, ದೀಪ, ಭೋಜನಾದಿಗಳಿಂದ ಪೂಜಿಸತಕ್ಕದ್ದು. ಹೀಗೆ ಇದರ ಸಂಕ್ಷೇಪ ವಿಧಾನವು. ಈ ಕುಮಾರೀ ಪೂಜೆಯಂತೆ ದೇವೀಪೂಜಾ, ಚಂಡೀಪಾಠ ಮೊದಲಾದವುಗಳನ್ನೂ ಏಕೋತ್ತರ ವೃದ್ಧಿಯಿಂದ ಪರಿಚ್ಛೇದ - ೨ 002 ಮಾಡುವದನ್ನು ಹೇಳಿದೆ. ಭವಾನೀಸಹಸ್ರನಾಮ ಪಾರಾಯಣವನ್ನೂ ಕಲಕಡೆಯಲ್ಲಿ ಹೇಳಿದೆ. ಈ ಶರತ್ಕಾಲದ ನವರಾತ್ರೋತ್ಸವವನ್ನು ಮಲಮಾಸದಲ್ಲಿ ಮಾಡತಕ್ಕದ್ದಲ್ಲ. ಶುಕ್ರಾಸ್ತಾದಿಗಳಲ್ಲಿ ದೋಷವಿಲ್ಲ. ಪ್ರಥಮ ವ್ರತಾರಂಭವನ್ನು ಶುಕ್ರಾಸ್ತಾದಿಗಳಲ್ಲಿ ಮಾಡಕೂಡದು. ಆಶೌಚಾದಿ ಪ್ರಾಪ್ತವಾದಾಗ ಮೃತಾಶೌಚ, ಜಾತಾಶೌಚಗಳು ಬಂದರೆ ಘಟಸ್ಥಾಪನಾದಿ ಎಲ್ಲ ವಿಧಿಯನ್ನೂ ಬ್ರಾಹ್ಮಣದ್ವಾರಾ ಮಾಡತಕ್ಕದ್ದು. ಕೆಲವರು ಪ್ರಾರಂಭವಾದಮೇಲೆ ಆಶೌಚ ಪ್ರಾಪ್ತವಾದರೆ ತಾನೇ ಆರಂಭಿಸಿದ್ದನ್ನು ತಾನೇ ಮುಗಿಸತಕ್ಕದ್ದೆಂದೆನ್ನುವರು. ಶಿಷ್ಯರಾದವರು ಆಶೌಚದಲ್ಲಿ ದೇವತಾ ಪೂಜಾ ಸ್ಪರ್ಶಗಳು ಶಿಷ್ಟಸಮ್ಮತವಾದದ್ದಲ್ಲವೆಂದು ಅನ್ಯರಿಂದಲೇ ಮಾಡಿಸುವರು. ಇನ್ನು ಕೆಲವರು ತೃತೀಯಾದಿ, ಪಂಚಮ್ಮಾದಿ, ಸಪ್ತ ಮ್ಯಾದಿ ಮೊದಲಾದ ಅನುಕಲ್ಪವಿರುವ ಕಾರಣ ಪ್ರತಿಪದಿಯಲ್ಲಾಶೌಚಬಂದಲ್ಲಿ ತೃತೀಯಾದಿ ಗೌಣಕಲ್ಪ ಹಿಡಿದು ಮಾಡತಕ್ಕದ್ದೆನ್ನುವರು. ಸರ್ವಥಾ ಲೋಪ ಪ್ರಸಂಗವುಂಟಾದಾಗ ಬ್ರಾಹ್ಮಣ ದ್ವಾರಾ ಮಾಡತಕ್ಕದ್ದು. ಉಪವಾಸಾದಿ ಶರೀರನಿಯಮವನ್ನು ಸ್ವತಃ ಮಾಡತಕ್ಕದ್ದು. ಹೀಗೆ ರಜಸ್ವಲೆಯಾದ ಸ್ತ್ರೀಯಾದರೂ ಉಪವಾಸಾದಿ ನಿಯಮವನ್ನು ತಾನುಮಾಡಿ ಪೂಜಾದಿಗಳನ್ನು ಬೇರೆಯವರಿಂದ ಮಾಡಿಸತಕ್ಕದ್ದು, ಪತಿಯುಳ್ಳ ಸ್ತ್ರೀಯರು ಉಪವಾಸ ಮಾಡುವಾಗ ಗಂಧ, ತಾಂಬೂಲಾದಿಗಳನ್ನು ಸ್ವೀಕರಿಸುವದರಲ್ಲಿ ದೋಷವುಂಟಾಗುವದಿಲ್ಲವೆನ್ನುವರು. ಇದೇ ಪಂಚಮಿಯಲ್ಲಿ “ಉಪಾಂಗಲಲಿತಾವ್ರತ“ವೆಂಬ ವ್ರತವನ್ನು ಹೇಳಿದೆ. ಇದರ ಪೂಜಾಕಾಲವು ಅಪರಾಹ್ನದಲ್ಲಿರುವದರಿಂದ ಅಪರಾಹ್ನವ್ಯಾಪಿನಿಯಾದ ಪಂಚಮಿಯಲ್ಲಿ ಇದನ್ನು ಆಚರಿಸತಕ್ಕದ್ದು. ಎರಡೂದಿನ ಪೂರ್ಣವಾಗಿ ಅಪರಾಹ್ನ ವ್ಯಾಪ್ತಿಯಿದ್ದಲ್ಲಿ ಅಥವಾ ಸಾಮ್ಯ-ವೈಷಮ್ಯಗಳಿಂದ ಅಪರಾಹ್ನದ ಏಕದೇಶ ಸ್ಪರ್ಶದಲ್ಲಿಯೂ ಪೂರ್ವವೇ ಗ್ರಾಹ್ಯವು. ಮುಂದಿನ ದಿನ ಅಪರಾಹ್ನವ್ಯಾಪ್ತಿಯಾದಲ್ಲಿ ಯುವಾಕ್ಯವನ್ನಾಧರಿಸಿ ಪರವೇ ಗ್ರಾಹ್ಯವು. ಕೆಲವರು ರಾತ್ರಿವ್ಯಾಪ್ತಿಯುಳ್ಳ ಪಂಚಮಿಯನ್ನು ಸ್ವೀಕರಿಸುವರು. ಪೂಜಾದಿಗಳನ್ನೂ ರಾತ್ರಿಯಲ್ಲೇ ಮಾಡುವರು. ಅದರ ಬಗ್ಗೆ ಸಬಲ ಆಧಾರವು ಕಾಣುವದಿಲ್ಲ. ಇದರ ಪೂಜಾದಿ ವಿಧಿಯನ್ನು ಪ್ರತಾದಿ ಗ್ರಂಥಗಳಿಂದ ತಿಳಿಯತಕ್ಕದ್ದು. n ಸರಸ್ವತ್ಯಾವಾಹನ ಆಶ್ವಿನ ಶುಕ್ಲಪಕ್ಷದ ಮೂಲನಕ್ಷತ್ರದಲ್ಲಿ ಪುಸ್ತಕದಲ್ಲಿ “ಸರಸ್ವತಿ"ಯನ್ನು ಆವಾಹಿಸಿ ಪೂಜಿಸತಕ್ಕದ್ದು. “ಮೂಲೇಷುಸ್ಥಾಪನಂ ದೇವ್ಯಾ: ಪೂರ್ವಾಷಾಢಾಸು ಪೂಜನಂತೆ ಉತ್ತರಾಸು ಬಲಿಂದದ್ಯಾತ್ ಶ್ರವಣೇನ ವಿಸರ್ಜಯೇತ್” ಹೀಗೆ ವಚನವಿರುವದರಿಂದ ಮೂಲನಕ್ಷತ್ರದಲ್ಲಿ ಸ್ಥಾಪನ, ಪೂರ್ವಾಷಾಢಾದಲ್ಲಿ ಪೂಜನ, ಉತ್ತರಾಷಾಢಾದಲ್ಲಿ ಬಲಿ, ಶ್ರವಣದಲ್ಲಿ ವಿಸರ್ಜನೆ ಹೀಗೆ ಮಾಡತಕ್ಕದ್ದು. “ಪೂಜಯೇತ್ ಪ್ರತ್ಯಹಂ” ಎಂಬ ರುದ್ರಯಾಮಲ ವಚನದಂತೆ ಮೂಲನಕ್ಷತ್ರದಲ್ಲಿ “ಆವಾಹನಂ ತದಂಗಭೂತಂ ಪೂಜನಂ ಚ ಕರಿಷ್ಠ ಹೀಗೆ ಸಂಕಲ್ಪಿಸಿ ಆವಾಹನ, ಪೂಜೆಗಳನ್ನು ಮಾಡುವದು. ಪೂರ್ವಾಷಾಢಾ ನಕ್ಷತ್ರದಲ್ಲಿ ಬರೇ “ಪೂಜನಂ ಚ ಕರಿಷ್ಟೇ” ಹೀಗೆ ಸಂಕಲ್ಪಿಸಿ ಆವಾಹನರಹಿತವಾಗಿ ಪೂಜೆಯನ್ನಷ್ಟೇ ಮಾಡುವದು. ಉತ್ತರಾಷಾಢದಲ್ಲಿ “ಬಲಿದಾನಂ ೧೦೮ ಧರ್ಮಸಿಂಧು ತದಂಗಭೂತಾಂ ಪೂಜಾಂ ಚ ಕರಿಷ್ಮ’ ಎಂದು ಬಲಿಪೂಜೆಗಳನ್ನು ಮಾಡತಕ್ಕದ್ದು. ಶ್ರವಣದಲ್ಲಿ “ವಿಸರ್ಜನಂಕರ್ತುಂ ತದಂಗಭೂತಾಂ ಪೂಜಾಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ವಿಸರ್ಜನ ಮಾಡಿ ವಿಸರ್ಜಿಸತಕ್ಕದ್ದು. ಹೀಗೆ ಇದರ ಕ್ರಮವು, ಮೂಲನಕ್ಷತ್ರದ ಪ್ರಥಮಪಾದವು ಸೂರ್ಯಾಸ್ತಕ್ಕಿಂತ ಮೊದಲು ತ್ರಿಮುಹೂರ್ತವ್ಯಾಪ್ತವಾದಲ್ಲಿ ಸರಸ್ವತಿಯ ಆವಾಹನ ಮಾಡತಕ್ಕದ್ದು. ಸೂರ್ಯಾಸ್ತಕ್ಕಿಂತ ಮೊದಲು ಮೂರು ಮುಹೂರ್ತಕ್ಕಿಂತ ಕಡಿಮೆಯಿರುವ ದಿನದಲ್ಲಿ ಮೂಲನಕ್ಷತ್ರದ ಪ್ರಥಮ ಚರಣವಾಗಿ ಅಥವಾ ರಾತ್ರಿಯಲ್ಲಿ ಆ ಪ್ರಥಮಚರಣ ಪ್ರಾಪ್ತವಾದಲ್ಲಿ ರಾತ್ರಿಯಲ್ಲಿ ಅದನ್ನು ಆಚರಿಸಬೇಕೆಂದೇನೂ ಇಲ್ಲ. ಆ ಬಗ್ಗೆ ವಿಶೇಷ ವಚನ ಕಂಡುಬರುವದಿಲ್ಲ. ಆದ್ದರಿಂದ ಎರಡನೇ ಅಥವಾ ಮೂರನೇ ಚರಣವಿರುವ ಪರದಿನದಲ್ಲೇ ಆವಾಹನ ಮಾಡತಕ್ಕದ್ದು. ಹೀಗೆ ಪೂರ್ವಾಷಾಢಾದಿ ನಕ್ಷತ್ರಗಳನ್ನೂ ಪೂಜಾದಿದಿನವ್ಯಾಪ್ತಿಯಾದವುಗಳನ್ನೇ ಸ್ವೀಕರಿಸತಕ್ಕದ್ದು. ವಿಸರ್ಜನೆಯು ರಾತ್ರಿಯ ಭಾಗದಲ್ಲಿ ಪ್ರಾಪ್ತವಾದರೂ ಅಡ್ಡಿ ಇಲ್ಲ. “ಶ್ರವಣದ ಪ್ರಥಮ ಭಾಗದಲ್ಲಿ ವಿಸರ್ಜನ ಮಾಡುವದು " ಎಂದು ವಿಶೇಷ ವಚನವಿದೆ. ಸಪ್ತಮ್ಯಾದಿ ತ್ರಿದಿನಗಳಲ್ಲಿ ಪತ್ರಿಕಾಪೂಜೆ ಯನ್ನು ಹೇಳಿದೆ. ಅದು ಸಪ್ತಮ್ಯಾದಿ ಮೂರುದಿನ ಸೂರ್ಯೋದಯದಲ್ಲಿ ಮುಹೂರ್ತಮಾತ್ರವಿದ್ದರೂ ಗ್ರಾಹ್ಯವು, ಆ ಸಲುವಾಗಿ ಮಾಡತಕ್ಕೆ ಅಧಿವಾಸವಾದಿ ವಿಸ್ತರಪ್ರಯೋಗವನ್ನು ಕೌಸ್ತುಭಾದಿ ಗ್ರಂಥಗಳಲ್ಲಿ ತಿಳಿಯತಕ್ಕದ್ದು. ಸಪ್ತಮ್ಯಾದಿ ತ್ರಿದಿನ ಪಕ್ಷವನ್ನು ಹಿಡಿದು ನವರಾತ್ರಿ ವ್ರತವನ್ನು ಮಾಡುವಾಗ ಸಪ್ತಮಿಯು ಸೂರ್ಯೋದಯಕ್ಕಿಂತ ಮುಂದೆ ಮುಹೂರ್ತಕ್ಕಿಂತ ಹೆಚ್ಚಾಗಿ ವ್ಯಾಪಿನಿಯಾದದ್ದು ಗ್ರಾಹ್ಮವು, ಮುಹೂರ್ತಕ್ಕಿಂತ ಕಡಿಮೆಯಿದ್ದರೆ ಪೂರ್ವದಿನವು ಗ್ರಾಹ್ಮವು, ಮಹಾಷ್ಟಮೀ ನಿರ್ಣಯ ಆಶ್ವಿನ ಶುಕ್ಲ ಅಷ್ಟಮಿಗೆ ಮಹಾಷ್ಟಮೀ ಎನ್ನುವರು, ಉದಯಕಾಲದಲ್ಲಿ ಒಂದು ಘಟೀಮಾತ್ರವಿದ್ದರೂ ಆ ನವಮೀಯುಕ್ತವಾದದ್ದೇ ಗ್ರಾಹ್ಯವು. ಸ್ವಲ್ಪವಾದರೂ ಸಪ್ತಮೀಯುತವಾದದ್ದು ಸರ್ವಥಾ ತ್ಯಾಜ್ಯವು ವರದಿನ ಸೂರ್ಯೋದಯಕ್ಕಿಲ್ಲದೆ ಅಥವಾ ಸೂರ್ಯೋದಯಾನಂತರ ಒಂದು ಘಟಿಯೂ ಇಲ್ಲದೆ ಇದ್ದಾಗ ಪೂರ್ವದಿನ ಸಪ್ತಮೀಯುಕ್ತವಾದರೂ ಗ್ರಾಹ್ಯವು. ಈ ಅಷ್ಟಮಿಗೆ ಮಂಗಳವಾರ ಕೂಡಿದರೆ ಅತಿಪ್ರಶಸ್ತವು. ಅಷ್ಟಮಿಯು ಅರವತ್ತು ಘಟಿಯಿದ್ದು ಪರದಿನ ಸೂರ್ಯೋದಯದ ನಂತರ ಒಂದು ಮುಹೂರ್ತಾದಿ ವ್ಯಾಪಿನಿಯಾಗಿ ನವಮೀಯುಕ್ತವಾದರೂ ಅದನ್ನು ಬಿಟ್ಟು ಪೂರ್ಣವಾದ ಅಷ್ಟಮಿಯನ್ನೇ ಸ್ವೀಕರಿಸತಕ್ಕದ್ದು, ನವಮಿಯು ಕ್ಷಯವಾಗಿ ದಶಮೀದಿನ ಸೂರ್ಯೋದಯಾನಂತರ ಇರದೇ ಇರುವಾಗ ಉದಯಗಾಮಿಯಾದ ನವಮೀಯುಕ್ತವಾದದ್ದಾದರೂ ಆ ಅಷ್ಟಮಿಯನ್ನು ಬಿಟ್ಟು ಸಪ್ತಮೀಯುಕ್ತವಾದ ಅಷ್ಕಮಿಯನ್ನೇ ಸ್ವೀಕರಿಸತಕ್ಕದ್ದು, ಪುತ್ರವಂತರಾದ ಗೃಹಸ್ಥರು ಈ ಅಷ್ಟಮಿಯಲ್ಲಿ ಉಪವಾಸಮಾಡತಕ್ಕದ್ದಲ್ಲ. ಕುಲಾಚಾರದಂತೆ ಉಪವಾಸ ಮಾಡುವದಿದ್ದಲ್ಲಿ ಅಲೋಪಹಾರದಿಂದ ಅದನ್ನು ಪೂರೈಸತಕ್ಕದ್ದು, " ಅಶ್ವಿನ ಶುಕ್ಲ ನವಮಿಯು ಮಹಾನವಮಿ"ಯು, ಬಲಿದಾನ ವಿಷಯವನ್ನು ಬಿಟ್ಟು ಪೂಜಾ. ಉಪೋಷಣಾದಿಗಳಿಂದ ಇದನ್ನು ಆಚರಿಸುವಲ್ಲಿ ಅಷ್ಟಮೀ ವಿದ್ದವಾದ ನವಮಿಯು- ಪರಿಚ್ಛೇದ - ೨ ೧೦೯ ಗ್ರಾಹ್ಯವು. ಇನ್ನು ಅಷ್ಟಮೀದಿನ ಸಾಯಂಕಾಲ ತ್ರಿಮುಹೂರ್ತ ವ್ಯಾಪಿನಿಯಾದಲ್ಲಿ ಅದೇ ನವಮಿಯು ಗ್ರಾಹ್ಯವು, ತ್ರಿಮುಹೂರ್ತಕ್ಕಿಂತ ಕಡಿಮೆ ವ್ಯಾಪ್ತಿಯಿದ್ದಲ್ಲಿ ಪರವೇ ಗ್ರಾಹ್ಯವು, ನವಮೀಯುಕ್ತ ಬಲಿದಾನವಿದ್ದರೆ ದಶಮೀವಿದ್ದವಾದ ನವಮಿಯು ಗ್ರಾಹ್ಯವು, ನವಮಿಯು ಶುದ್ಧಾಧಿಕ (ಅರವತ್ತು ಘಟಿಯಾಗಿ ಎರಡು ನವಮಿ) ವಾದ ನವಮೀ ಆದಾಗ ಪೂರ್ಣವಾದ ನವಮಿ ದಿನದಲ್ಲೇ ಬಲಿದಾನವನ್ನು ಮಾಡತಕ್ಕದ್ದು. ಅಷ್ಟಮೀ - ನವಮಿಗಳ ಸಂಧಿಯಲ್ಲಿ “ಸಂಧಿಪೂಜೆಯನ್ನು ಹೇಳಿದೆ. ಅಷ್ಟಮೀ-ನವಮಿಗಳು ಪ್ರತ್ಯೇಕವಾಗಿದ್ದರೆ ಅಷ್ಟಮಿಯ ಅಂತ್ಯಘಟಿ, ನವಮಿಯ ಆದಿಘಟಿಗಳು ಎಲ್ಲಿ ಹಗಲಿನಲ್ಲಾಗಲೀ, ರಾತ್ರಿಯಲ್ಲಾಗಲೀ ಸಂಧಿಸುವವೋ ಆ ಸಂಧಿಪೂಜೆಯನ್ನು ಮಾಡತಕ್ಕದ್ದು. ಅಷ್ಟಮೀ-ನವಮಿಗಳ ಯೋಗವು ಮಧ್ಯಾಹ್ನ ಅಥವಾ ಅಪರಾಹ್ನದಲ್ಲಾದಾಗ ಅಷ್ಟಮೀ ಪೂಜಾ ಹಾಗೂ ನವಮೀಪೂಜಾ ಇವೆರಡೂ ಒಂದೇದಿನ ಪ್ರಾಪ್ತವಾಗುವದು. ಆಗ “ಅಷ್ಟಮೀ ನವಮೀ ಪೂಜಾಂ ತತ್ಸಂಧಿಪೂಜಾಂ ಚ ತಂತ್ರೇಣ ಕರಿಷ್ಯ” ಹೀಗೆ ಸಂಕಲ್ಪಿಸಿ ತಂತ್ರದಿಂದ ಪೂಜೆಯನ್ನು ಮಾಡತಕ್ಕದ್ದು. ಅಷ್ಟಮಿಯು ಶುದ್ಧಾಧಿಕವಾಗಿ ಬಂದಲ್ಲಿ ಪೂರ್ವದಿನ ಅಷ್ಟಮೀಪೂಜಾ, ಪರದಿನ ಸಂಧಿಪೂಜಾ ಹಾಗೂ ನವಮೀ ಪೂಜೆಗಳನ್ನು ತಂತ್ರದಿಂದ ಮಾಡತಕ್ಕದ್ದು. ಈ ನವರಾತ್ರ ವ್ರತದಲ್ಲಿ ತಾನು ಪೂಜೆಯನ್ನು ಮಾಡಲಸಮರ್ಥನಾದಲ್ಲಿ ಪರರಿಂದ ಪೂಜೆಯನ್ನು ಮಾಡಿಸತಕ್ಕದ್ದು. ಷೋಡಶೋಪಚಾರ ಪೂಜೆಯನ್ನು ಮಾಡಲಾಗದಿದ್ದರೆ ಗಂಧಾದಿ ಪಂಚೋಪಚಾರ ಪೂಜೆಯನ್ನು ಮಾಡತಕ್ಕದ್ದು, ನವಮಿಯಲ್ಲಿ ಪೂಜಾನಂತರ ಹೋಮಮಾಡತಕ್ಕದ್ದು. ಕೆಲವರು ಅಷ್ಟಮಿಯಲ್ಲಿ ಹೋಮಮಾಡತಕ್ಕದ್ದೆನ್ನುವರು. ಇನ್ನು ಕೆಲವರು ಅಷ್ಟಮಿಯಲ್ಲಿ ಉಪಕ್ರಮಮಾಡಿ ನವಮಿಯಲ್ಲಿ ಹೋಮಸಮಾಪನ ಮಾಡತಕ್ಕದ್ದೆನ್ನುವರು. ಅದು ಅರುಣೋದಯದಿಂದಾರಂಭಿಸಿ ಸಾಯಂಕಾಲ ಪರ್ಯಂತದ ಅಷ್ಟಮೀ-ನವಮಿಗಳ ಸಂಧಿಯಲ್ಲಿ ಸಂಭವಿಸುತ್ತದೆ. ರಾತ್ರಿಯಲ್ಲಿ ಸಂಧಿಯಾದರೆ “ರಾತ್ರಿಯಲ್ಲಿ ಹೋಮವು ಅಯೋಗ್ಯ ವಾಗುವ ಕಾರಣ ನವಮಿಯಲ್ಲಿಯೇ ಹೋಮದ ಉಪಕ್ರಮ ಸಮಾಪ್ತಿಗಳನ್ನು ಮಾಡತಕ್ಕದ್ದನ್ನುವರು. ಈ ವಿಷಯದಲ್ಲಿ ಕುಲಾಚಾರವಿದ್ದಂತೆ ಮಾಡಬಹುದು. ಹೋಮವನ್ನು “ನವಾರ್ಣ” ಮಂತ್ರದಿಂದ ಮಾಡತಕ್ಕದ್ದು. ಅಥವಾ “ಜಯಂತೀಮಂಗಲಾಕಾಲೀ” ಈ ಮಂತ್ರದಿಂದ, ಇಲ್ಲವೆ “ನಮೋದೇವ ಮಹಾದೇವ” ಈ ಶ್ಲೋಕದಿಂದ, ಅಥವಾ ಸಪ್ತಶತೀ ಶ್ಲೋಕಗಳಿಂದ, ಇಲ್ಲವೇ ಕವಚಾರ್ಗಲಕೀಲಕ ರಹಸ್ಯತ್ರಯ ಸಹಿತವಾದ ಸಪ್ತಶತೀ ಏಳುನೂರು ಶ್ಲೋಕಗಳಿಂದ ಹೋಮಿಸತಕ್ಕದ್ದು. ಸಪ್ತಶತೀ ಮಂತ್ರವಿಭಾಗಾದಿಗಳನ್ನು ಬೇರೆ ಗ್ರಂಥಗಳಿಂದ ತಿಳಿಯತಕ್ಕದ್ದು. ಈ ಹೇಳಿದ ಎಲ್ಲ ವಿಕಲ್ಪಗಳನ್ನು ಕುಲಾಚಾರವಿದ್ದಂತೆ ಆಚರಿಸುವದು. ಹೋಮ ದ್ರವ್ಯಗಳು- ಮೃತಮಿಶ್ರ ಬಿಳೇಎಳ್ಳುಗಳಿಂದ ಕೂಡಿದ ಪಾಯಸ, ಅಥವಾ ಕೇವಲ ತಿಲಗಳಿಂದ ಹೋಮಿಸುವದು. ಕೆಲಗ್ರಂಥಗಳಲ್ಲಿ ಮುತ್ತುಗಲಹೂವು, ದೂರ್ವಾ, ಸಾಸಿವೆ, ಹೊದಲು (ತಾಜಾ) ಅಡಿಕೆ, ಜವೆಗೋದಿ, ಬಿಲ್ವಫಲ, ರಕ್ತಚಂದನ ಖಂಡ, ನಾನಾವಿಧ ಫಲ ಇವುಗಳನ್ನು ಪಾಯಸದಲ್ಲಿ ಮಿಶ್ರಮಾಡಿ ಹೋಮಿಸತಕ್ಕದ್ದೆಂದು ಹೇಳಿದೆ. ಜಪದ ದಶಾಂಶಹೋಮಮಾಡತಕ್ಕದ್ದು. ಕುಲಾಚಾರವಿದ್ದರೆ ನೃಸಿಂಹ, ಭೈರವ ಮೊದಲಾದ ದೇವತಾ ಮಂತ್ರಗಳಿಂದ ಹೋಮವನ್ನು ಮಾಡಬಹುದು. ಈ ವಿಷಯದ ಗ್ರಹಮಖಪೂರ್ವಕ ಸವಿಸ್ತರ ಹೋಮ ಪ್ರಯೋಗವನ್ನು ಕೌಸ್ತುಭಗ್ರಂಥದಲ್ಲಿ ನೋಡತಕ್ಕದ್ದು. 0 ಧರ್ಮಸಿಂಧು ಬಲಿದಾನ ವಿಷಯ ಬ್ರಾಹ್ಮಣನಾದವನು ಉದ್ದು ಮೊದಲಾದವುಗಳಿಂದ ಕೂಡಿದ ಅನ್ನದಿಂದ, ಅಥವಾ ಕುಂಬಳಕಾಯಿಯ ಖಂಡಗಳಿಂದ ಬಲಿಯನ್ನು ಕೊಡತಕ್ಕದ್ದು. ಅಥವಾ ಗೋದಿಮೊದಲಾದ ಹಿಟ್ಟನ್ನು ತುಪ್ಪದಲ್ಲಿ ಕಲಿಸಿ ಸಿಂಹ, ಹುಲಿ, ನರ, ಕುರಿ ಮೊದಲಾದ ಆಕೃತಿಯನ್ನು ಮಾಡಿ ಕತ್ತಿಯಿಂದ ತುಂಡರಿಸತಕ್ಕದ್ದು. ಬ್ರಾಹ್ಮಣನು ಪಶು, ಮಾಂಸ, ಮದ್ಯ ಮೊದಲಾದವುಗಳಿಂದ ಬಲಿದಾನ ಮಾಡಿದಲ್ಲಿ ಆತನ ಬ್ರಾಹ್ಮಣತ್ವವೇ ನಷ್ಟವಾಗುವದು. ಕಾಮನಾಸಹಿತರಾದ ಕ್ಷತ್ರಿಯಾದಿಗಳು ಸಿಂಹ, ವ್ಯಾಘ್ರ, ನರ, ಮಹಿಷ, ಕುರಿ, ಹಂದಿ, ಮೃಗ, ಪಕ್ಷಿ, ಮೀನ, ಮುಂಗುಲಿ, ಹಲ್ಲಿ ಮೊದಲಾದ ಪ್ರಾಣಿಗಳು ಮತ್ತು ತನ್ನ ದೇಹದರಕ್ತ ಇತ್ಯಾದಿಗಳಿಂದ ಬಲಿದಾನ ಮಾಡಬಹುದು. ಕ್ಷತ್ರಿಯಾದಿಗಳಾದರೂ ಕೃಷ್ಣಸಾರ (ಪವಿತ್ರವಾದ ಜಿಂಕೆ) ಮೃಗವನ್ನು ಬಲಿಕೊಡತಕ್ಕದ್ದಲ್ಲ. ಬಲಿದಾನದ ಮಂತ್ರಾದಿಗಳನ್ನು ಮತ್ತು ವಿಧಾನವನ್ನು “ನಿರ್ಣಯ ಸಿಂಧು"ವಿನಲ್ಲಿ ನೋಡತಕ್ಕದ್ದು. ಶತಚಂಡೀ-ಸಹಸ್ರಚಂಡೀ ಇತ್ಯಾದಿ ಪ್ರಯೋಗಗಳನ್ನು ಕೌಸ್ತುಭಾದಿ ಗ್ರಂಥಗಳಿಂದ ತಿಳಿಯತಕ್ಕದ್ದು. ಜತಾಶೌಚ-ಮೃತಾಶೌಚಗಳು ಪ್ರಾಪ್ತವಾದಾಗ ನವಮಿಯಲ್ಲಿ ಮಾಡತಕ್ಕ ಹೋಮ, ಹಾಗೂ ಘಟಾದಿ ದೇವತೋಸ್ಥಾಪನ ಇವುಗಳನ್ನು ಬ್ರಾಹ್ಮಣದ್ವಾರಾ ಮಾಡಿಸಿ, ತಾನು ಪಾರಣೆಯನ್ನು ಮಾಡಿ ಅಶೌಚಾಂತದಲ್ಲಿ ಬ್ರಾಹ್ಮಣ ಭೋಜನ, ದಕ್ಷಿಣಾದಾನಾದಿಗಳನ್ನು ಮಾಡತಕ್ಕದ್ದು. ರಜಸ್ವಲಾ ಸ್ತ್ರೀಯಾದರೂ ಪಾರಣೆಯ ಕಾಲದಲ್ಲಿ ಪಾರಣೆ ಮಾಡಿ ಶುದ್ದಿಯಾದಮೇಲೆ ದಾನಾದಿಗಳನ್ನು ಮಾಡತಕ್ಕದ್ದು. ವಿಧವಾ ಸ್ತ್ರೀಗೆ ರಜೋದೋಷದಲ್ಲಿ ಭೋಜನವು ನಿಷಿದ್ಧವಾದ್ದರಿಂದ ಶುದ್ದಿಯ ನಂತರವೇ ಮಾಡತಕ್ಕದ್ದು. ಹೀಗೆ ಸಾಮಾನ್ಯ ಎಲ್ಲಾ ವ್ರತಗಳಲ್ಲಿಯೂ ತಿಳಿಯತಕ್ಕದ್ದು. ಶಸ್ತ್ರ-ಅಶ್ವ ಮೊದಲಾದವುಗಳ ಪೂಜೆ ರಾಜರು ಪ್ರತಿಪದಿಯೇ ಆದಿಯಾಗಿ ಅಷ್ಟಮೀಪರ್ಯಂತ “ಲೋಹಾಭಿಸಾರಿಕಾ” ಎಂಬ ಕರ್ಮವನ್ನು ಮಾಡತಕ್ಕದ್ದು, ಛತ್ರ, ಚಾಮರ ಮೊದಲಾದ ರಾಜಚಿಹ್ನೆ ಹಾಗೂ ಕುದುರೆ, ಆನೆ, ಧನುಸ್ಸು ಮೊದಲಾದ ಶಸ್ತ್ರಗಳು, ದುಂದುಭಿ, ಢಕ್ಕೆ ಮೊದಲಾದ ವಾದನ ಸಾಮಗ್ರಿಗಳು ಇತ್ಯಾದಿಗಳನ್ನು ಪೂಜಿಸುವದು, ಮತ್ತು ಹೋಮಮಾಡತಕ್ಕದ್ದು. ಇದಲ್ಲದೆ ಕುದುರೆಯನ್ನು ಸಾಕುವವರೂ ಸ್ವಾತಿ ನಕ್ಷತ್ರಯುಕ್ತವಾದ ಪ್ರತಿಪದಿ, ಅಥವಾ ದ್ವಿತೀಯೆ ಇತ್ಯಾದಿ ನವಮೀಪರ್ಯಂತ “ವಾಜಿನೀರಾಜನ” ಎಂಬ ಕರ್ಮವನ್ನಾಚರಿಸತಕ್ಕದ್ದು. ಉಚ್ಚಶ್ರವ, ರೇವತಗಳನ್ನು ಪ್ರತಿಮೆಯಲ್ಲಿ ಪೂಜಿಸಿ, ಪ್ರತ್ಯಕ್ಷವಾಗಿಯೇ ಕುದುರೆಯನ್ನು ಪೂಜಿಸಿ ನಿರಾಜನವನ್ನು ಮಾಡತಕ್ಕದ್ದು. ಈ ಎರಡೂ ಕರ್ಮಗಳ ಪೂಜಾಮಂತ್ರ, ಹೋಮ ಇತ್ಯಾದಿಗಳನ್ನು ಕೌಸ್ತುಭಾದಿ ಗ್ರಂಥಗಳಿಂದ ತಿಳಿಯತಕ್ಕದ್ದು, ಅಶ್ವಪಾಲಕರು ವಿಜಯಾದಶಮಿಯದಿನ ಕುದುರೆಗಳನ್ನು ಜಲದಿಂದ ಸ್ನಾನಮಾಡಿಸತಕ್ಕದ್ದು, ಅಥವಾ “ಗಂಧರ್ವಕುಲಜಾತಂ ಮಾಭೂಯಾ: ಕುಲದೂಷಕಬ್ರಹ್ಮಣ: ಸತ್ಯವಾನ ಸೋಮಪ್ಪ ವರುಣಸ್ಥ ಚ|| ಪ್ರಭಾಪಾಹತಾಶಸ್ಯ ವರ್ಧಯತ್ವಂ ತುರಂಗಮಾನ್ ರಿಪೊನ್ ವಿಜಿತ್ ಸದ ಸಹರ್ಭಾ ಸುಖೀಭವ’ ಈ ಮಂತ್ರದಿಂದ ಕೇವಲ ಅಶ್ವಪೂಜೆಯನ್ನಾದರೂ ಮಾಡತಕ್ಕದ್ದು. ಪರಿಚ್ಛೇದ - ೨ ಪಾರಣೆ ಹಾಗೂ ಏಸರ್ಜನ ಕಾಲವು ವಿಸರ್ಜನೆಯನ್ನು ದಶಮಿಯಲ್ಲಿ ಮಾಡತಕ್ಕದ್ದು. ಎರಡು ದಶಮಿ ಬಂದಲ್ಲಿ ಪೂರ್ವದಿನ ಶ್ರವಣದ ಅಂತ್ಯವಾದದ ಯೋಗವಿದ್ದಾಗ ಅದರಲ್ಲಿ ವಿಸರ್ಜನಮಾಡತಕ್ಕದ್ದು. ಆ ಯೋಗವಿರದಿದ್ದರೆ ಮುಂದಿನ ದಶಮಿಯಲ್ಲೇ ವಿಸರ್ಜನಮಾಡತಕ್ಕದ್ದು. ಎರಡು ದಶಮಿಯಿಲ್ಲದಾಗ (ಅಂದರೆ ಮೂರನೇದಿನ ದಶಮಿಯಿಲ್ಲದಿದ್ದರೆ) ಪೂರ್ವದಶಮಿಯಲ್ಲಿ ಶ್ರವಣಯೋಗವಿರಲಿ, ಇಲ್ಲದಿರಲಿ ಆ ದಿನದಲ್ಲೇ ವಿಸರ್ಜನಮಾಡುವುದು. ನಕ್ಷತ್ರಯೋಗಾನುಸಾರ ಮಾಡುವದಿದ್ದಲ್ಲಿ ಅಪರಾಹ್ನದಲ್ಲಾದರೂ ಆಗಬಹುದು. ಇಲ್ಲವಾದರೆ ಪ್ರಾತಃಕಾಲದಲ್ಲೇ ವಿಸರ್ಜನೆಯು ಮೃತ್ತಿಕಾದಿ ಪ್ರತಿಮೆಯನ್ನು ವಿಸರ್ಜಿಸಿ ಜಲದಲ್ಲಿ ಹಾಕುವದು. ಇನ್ನು ಪರಂಪರಾಗತವಾಗಿ ಪೂಜಿಸಿದ ಲೋಹಾದಿಪ್ರತಿಮೆಗಳನ್ನು ಘಟಸ್ಥಾಪನೆಯ ಸ್ಥಾನದಿಂದ “ಉತ್ತಿಷ್ಠ ಇತ್ಯಾದಿ ಮಂತ್ರಗಳಿಂದ ಉತ್ಥಾಪನೆಯನ್ನು ಮಾತ್ರ ಮಾಡತಕ್ಕದ್ದು. ಹೊರತು ನದ್ಯಾದಿಗಳಲ್ಲಿ ಚೆಲ್ಲುವದಲ್ಲ. ವಿಸರ್ಜನೆಯ ದಿನ ವ್ರತವೂ ಸಮಾಪ್ತವಾಗುವದು. ವಿಸರ್ಜನೆಯ ನಂತರ ಅದೇದಿನ ಪಾರಣೆಮಾಡತಕ್ಕದ್ದು. ಕೆಲವರು ದಶಮಿಯಲ್ಲಿ ವಿಸರ್ಜನೆಯನ್ನು ಹೇಳಿದ್ದರೂ ಪಾರಣೆಯನ್ನು ನವಮಿಯಲ್ಲೇ ಮಾಡತಕ್ಕದ್ದೆನ್ನುವರು. “ನವಮ್ಯಾಂ ಪಾರಣಂ ಕುರ್ಯಾತ್ ದಶಮ್ಯಾಮಭಿಷೇಕಂಚ ಕೃತ್ಯಾಮೂರ್ತಿಂ ವಿಸರ್ಜಯೇತ್” ಹೀಗೆ ವಚನವನ್ನು ದಾಹರಿಸುವರು. ಈ ವಚನಕ್ಕೆ ಹೀಗೆ ವ್ಯವಸ್ಥೆಯನ್ನು ಹೇಳಬಹುದು. ಏನೆಂದರೆ ಪಾರಣೆಗೆ ಸಾಕಾಗುವಷ್ಟು ಇರುವ ನವಮಿಯಿಂದ ಯುಕ್ತವಾದ ದಶಮೀ, ಹೀಗಿದ್ದು ಮಾರನೇದಿನ ಶ್ರವಣಯುಕ್ತವಾದ ವಿಸರ್ಜನೆಗೆ ಯೋಗ್ಯವಾದ ದಶಮೀ, ಇಂಥ ಪ್ರಸಂಗದಲ್ಲಿ ಅಷ್ಟಮೀ-ನವಮಿಗಳ ಪ್ರಯುಕ್ತವಾದ ಉಪವಾಸವು ಪ್ರಥಮ ದಿನದಲ್ಲೇ ಉಂಟಾಗುತ್ತದೆ. ಅವಶಿಷ್ಯನವಮಿಯಲ್ಲಿ ಪಾರಣೆಯು ಉಂಟಾಗುತ್ತದೆ. ಅವಶಿಷ್ಟ ದಶಮಿಯಲ್ಲಿ ವಿಸರ್ಜನೆಯು, ಅವಶಿಷ್ಟ ನವಮೀದಿನದಲ್ಲಿಯೇ ದಶಮಿಯು ಶ್ರವಣಯುಕ್ತವಾಗಿ ವಿಸರ್ಜನೆಗೆ ಯೋಗ್ಯವಾಗುವಾಗ ವಿಸರ್ಜನಾನಂತರ ಪಾರಣೆಯು, ಇನ್ನು ಪೂರ್ವದಿನ ಅರವತ್ತು ಘಟಿ ಇರುವ ಅಷ್ಟಮಿಯಿದ್ದು ಪರದಿನ ಮಿಕ್ಕಿದ ಅಷ್ಟಮೀಯುಕ್ತವಾದ ನವಮೀ, ಅದರ ಮಾರನೇದಿನ ನವಮೀ ಶೇಷಯುಕ್ತವಾದ ದಶಮೀ ಹೀಗೆ ಬಂದಲ್ಲಿ ನವಮೀಯುಕ್ತವಾದ ದಶಮಿಯಲ್ಲೇ ವಿಸರ್ಜನಾನಂತರ ಪಾರಣಮಾಡತಕ್ಕದ್ದು. ನವಮಿಯು ಅರವತ್ತು ಘಟಿಯಾಗಿ ಪರದಿನದಲ್ಲಿ ನವಮೀ ಶೇಷಯುಕ್ತವಾದ ದಶಮಿ ಇದ್ದರೆ ಆಗಾದರೂ ನವಮೀಯುಕ್ತ ದಶಮಿಯಲ್ಲೇ ವಿಸರ್ಜನ ಮತ್ತು ಪಾರಣಗಳನ್ನು ಮಾಡತಕ್ಕದ್ದು. ಇನ್ನು ಅಷ್ಟಮೀ, ನವಮೀ, ದಶಮೀ ಈ ಮೂರೂ ತಿಥಿಗಳು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಅಖಂಡವಾಗಿ ಬಂದಲ್ಲಿ ಅಂದರೆ ಆಯಾಯ ದಿನಗಳ ಕಾರ್ಯವು ಪೂರೈಸುವಂತಿದ್ದರೆ ದಾಕ್ಷಿಣಾತ್ಮರಿಗೆ ನವಮಿಯಲ್ಲೇ ಪಾರಣೆಯ ಆಚಾರವಿರುವದರಿಂದ ಅವರು ನವಮಿಯಲ್ಲೇ ಪಾರಣ ವಿಸರ್ಜನಗಳನ್ನು ಮಾಡತಕ್ಕದ್ದು. ದಶಮಿಯಲ್ಲಾಚಾರವಿರುವವರು ಆ ಎರಡೂ ಕಾರ್ಯಗಳನ್ನು ದಶಮಿಯಲ್ಲೇ ಮಾಡತಕ್ಕದ್ದು. ಧರ್ಮಸಿಂಧು ವಿಜಯಾದಶಮಿಯ ನಿರ್ಣಯ ಅದು ಪರದಿನದಲ್ಲಿ ಅಪರಾಹಣವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು. ಎರಡೂ ದಿನ ಅಪರಾಹ್ನವ್ಯಾಪ್ತಿಯಿದ್ದರೆ ಆಗ ಶ್ರವಣಯೋಗವಿರಲಿ, ಇಲ್ಲದಿರಲಿ ಪೂರ್ವವೇ ಗ್ರಾಹ್ಯವು. ಹೀಗೆ ಎರಡೂದಿನ ಅಪರಾಹ್ನವ್ಯಾಪ್ತಿಯಿಲ್ಲದಿದ್ದರೂ ಪೂರ್ವವೇ ಗ್ರಾಹ್ಯವು. ಎರಡೂ ದಿನ ಅಪರಾಹ್ನವ್ಯಾಪ್ತಿಯಿದ್ದಾಗ ಎರಡರೊಳಗೆ ಯಾವ ದಿನ ಶ್ರವಣಯೋಗವಿರುವದೋ ಆ ದಿನವು ಗ್ರಾಹ್ಯವು, ಹೀಗೆ ಅಪರಾಹ್ನ ವ್ಯಾಪ್ತಿಯಿಲ್ಲದಿದ್ದರೂ ಶ್ರವಣಯೋಗವಿರುವ ದಿನವು ಗ್ರಾಹ್ಯವು. ಅಪರಾಹ್ನ ಏಕದೇಶವ್ಯಾಪ್ತಿಯಲ್ಲಿಯೂ ಇದೇ ನಿರ್ಣಯವು, ಪೂರ್ವದಿನದಲ್ಲಿಯೇ ಅಪರಾಹ್ನವ್ಯಾಪಿನಿಯಾಗಿ ಪರದಿನ ಶ್ರವಣಯೋಗವಿಲ್ಲದಿದ್ದರೆ ಪೂರ್ವವೇ ಗ್ರಾಹ್ಯವು. ಪೂರ್ವದಿನದಲ್ಲಿ ಅಪರಾಹ್ನ ವ್ಯಾಪ್ತಿಯಿದ್ದು ಪರದಿನದಲ್ಲಿ ಮುಹೂರ್ತತ್ರಯಾದಿವ್ಯಾಪಿನಿ ಅರ್ಥಾತ್ ಅಪರಾಹ್ನಕ್ಕಿಂತ ಮೊದಲೇ ದಶಮಿಯ ಸಮಾಪ್ತಿಯಾದಲ್ಲಿ ಆಗ ಆ ಪರದಿನದಲ್ಲಿ ಶ್ರವಣಯೋಗವಿದ್ದರೆ ಪರವೇ ಗ್ರಾಹ್ಯವು. ಆಗ ಅಪರಾಹ್ನದಲ್ಲಿ ದಶಮಿಯಿಲ್ಲದಿದ್ದರೂ “ಯಾಂತಿಥಿಂಸಮನುಪ್ರಾಪ್ಯ” “ಉದಯಂಯಾತಿ ಭಾಸ್ಕರಃ” ಇತ್ಯಾದಿ ಸಾಕಲ್ಯವಚನ ಪ್ರಭಾವದಿಂದ ಶ್ರವಣಯುಕ್ತವಾದ ಗ್ರಾಹ್ಯ ದಶಮಿಯು ಸೂರ್ಯೋದಯದಲ್ಲಿರುವದರಿಂದ “ಕರ್ಮಕಾಲದಲ್ಲಿದ್ದಂತೆಯೇ” ಆಗುವದು. “ನಿರ್ಣಯಸಿಂಧು’ವಿನಲ್ಲಿ ಈ ವಿಷಯದಲ್ಲಿ ಪರದಿನ ಅಪರಾಹ್ನದಲ್ಲಿ ಶ್ರವಣವಿದ್ದರೆ ಮಾತ್ರ ಆ ದಿನವು “ಗ್ರಾಹ್ಯ"ವು, ಅಪರಾದ್ಧಕ್ಕಿಂತ ಮೊದಲೇ ಸಮಾಪ್ತವಾದರೆ ಪೂರ್ವವೇ ಗ್ರಾಹ್ಯವು ಎಂದು ಹೇಳಿದೆ. ಇದು ಯುಕ್ತವೂ ಆಗಿದೆ. ಪರದಿನದಲ್ಲಿ ಅಪರಾಹ್ನ ವ್ಯಾಪ್ತಿಯಿದ್ದು ಪೂರ್ವದಿನ ಅಪರಾಹ್ನದಿಂದ ಮುಂದೆ ಸಾಯಾಹಾದಿಗಳಲ್ಲಿ ಶ್ರವಣಯೋಗವಾದರೂ “ಪರವೇ ಗ್ರಾಹ್ಯ” ಎಂದು ನನಗೆ ತೋರುತ್ತದೆ. ಈ ದಶಮಿಯಲ್ಲಿ ಅಪರಾಜಿತಾಪೂಜೆ, ಸೀಮೋಲ್ಲಂಘನ, ಶಮೀಪೂಜಾ, ದೇಶಾಂತರ ಗಮನವನ್ನಿಚ್ಛಿಸುವವರ ಪ್ರಯಾಣ ಇತ್ಯಾದಿಗಳನ್ನು ಹೇಳಿದ. ಅಪರಾಜಿತಾ ಪೂಜಾಕ್ರಮ:- ಅಪರಾಹ್ನದಲ್ಲಿ ಗ್ರಾಮದ ಈಶಾನ್ಯದಿಕ್ಕಿಗೆ ಹೋಗಿ ಶುದ್ಧಪ್ರದೇಶದಲ್ಲಿ ಭೂಮಿಯನ್ನು ಸಾರಿಸಿ, ಚಂದನಾದಿಗಳಿಂದ ಅಷ್ಟ ದಲವನ್ನು ಬರೆದು “ಮಮ ಸಕುಟುಂಬಸ್ಯ ಕ್ಷೇಮಸಿಧ್ಯರ್ಥಂ ಅಪರಾಜಿತಾ ಪೂಜನು ಕರಿ” ಹೀಗೆ ಸಂಕಲ್ಪಿಸಿ ಮಧ್ಯದಲ್ಲಿ “ಅಪರಾಜಿತಾಯ ನಮಃ” ಎಂದು ಅಪರಾಜಿತಾ ದೇವಿಯನ್ನಾ ವಾಹಿಸಿ ಅದರ ಬಲಗಡೆಯಲ್ಲಿ “ಕ್ರಿಯಾಶನಮಃ” ಎಂದು ವಿಜಯಾದೇವಿಯನ್ನೂ ಆವಾಹಿಸಿ “ಅಪರಾಜಿತಾಯ ನಮಃ, ಜಯಾಯ್ಕೆ ನಮಃ, ವಿಜಯಾಯ್ಕೆ ನಮ:” ಹೀಗೆ ನಾಮಮಂತ್ರಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ “ಇಮಾಂಪೂಜಾಂಮಯಾದೇವಿ ಯಥಾಶಕ್ತಿ ನಿವೇದಿತಾರಕಾರ್ಥಂತು ಸಮಾದಾಯ ಪ್ರಜತ್ವ ಸ್ಥಾನ ಮುತ್ತಮಂ||” ಈ ಮಂತ್ರದಿಂದ ಪ್ರಾರ್ಥಿಸತಕ್ಕದ್ದು. ಇನ್ನು ರಾಜನಿಗಾದರೆ “ಯಾತ್ರಾಯಾಂ ವಿಜಯಸಿದ್ಧರ್ಥ” ಎಂದು ಸಂಕಲ್ಪದಲ್ಲಿ ಮಾತ್ರ ವಿಶೇಷವು. ಪೂಜಾ-ನಮಸ್ಕಾರಗಳಾದಮೇಲೆ “ಹಾರಂತು ವಿಚಿತ್ರ ಭಾಸ್ವತನಕಮೇಖಲಾ|ಅಪರಾಜಿತಾ ಭದ್ರರತಾ ಕರೋತು ವಿಜಯಂಮಮ ಇತ್ಯಾದಿ ಮಂತ್ರಗಳಿಂದ ವಿಜಯವನ್ನು ಪ್ರಾರ್ಥಿಸಿ ಹಿಂದೆ ಹೇಳಿದಂತೆ ವಿಸರ್ಜಿಸತಕ್ಕದ್ದು, ನಂತರ ಪರಿಚ್ಛೇದ - ೨ ಜನರು ಸಾಮೂಹಿಕವಾಗಿ ಗ್ರಾಮದ ಹೊರಗೆ ಈಶಾನ್ಯ ದಿಕ್ಕಿನಲ್ಲಿರುವ ಶಮೀವೃಕ್ಷದ ಸಮೀಪಕ್ಕೆ ಹೋಗಿ ಅದನ್ನು ಪೂಜಿಸತಕ್ಕದ್ದು. “ಸೀಮೋಲ್ಲಂಘನ ವಿಧಿಯನ್ನು ಶಮೀಪೂಜೆಗಿಂತ ಮೊದಲು ಇಲ್ಲವೇ ನಂತರದಲ್ಲಾದರೂ ಮಾಡಬಹುದು. ರಾಜನಾದವನು ಮಂತ್ರಿ, ಪುರೋಹಿತಾದಿಗಳಿಂದ ಕೂಡಿ ಕುದುರೆಯನ್ನೇರಿಕೊಂಡು ಶಮೀವೃಕ್ಷದ ಬುಡದಲ್ಲಿ ವಾಹನಾದಿಗಳಿಂದಿಳಿದು ಪುಣ್ಯಾಹವಾಚನಪೂರ್ವಕವಾಗಿ ಶಮೀವೃಕ್ಷವನ್ನು ಪೂಜಿಸಿ ಮಂತ್ರಿ ಮೊದಲಾದವರೊಡನೆ ಕಾರ್ಯೋದ್ದೇಶಗಳನ್ನು ತಿಳಿಸುತ್ತ, ಆಲೋಚಿಸುತ್ತ, ಚರ್ಚಿಸುತ್ತ ಪ್ರದಕ್ಷಿಣೆ ಮಾಡತಕ್ಕದ್ದು. ‘ಮಮದುಷ್ಕೃತಾ ಮಂಗಲಾದಿ ನಿರಾಸಾರ್ಥಂ ಕ್ಷೇಮಾರ್ಥಂ ವಿಜಯಾರ್ಥಂ ಚ ಶಮೀಪೂಜಾಂ ಕರಿಷ್ಯ” ಶಮಿಯ ಅಭಾವದಲ್ಲಿ “ಅಸ್ಮಂತಕ ವೃಕ್ಷಪೂಜಾಂ ಕರಿಷ್ಟೇ” (ಅಂತಕ -ಕೋವಿದಾರ ಕನ್ನಡದಲ್ಲಿ ಕೆಂಗಾಂಚಾಳ ವೃಕ್ಷ) ಹೀಗೆ ಸಂಕಲ್ಪಿಸತಕ್ಕದ್ದು. ರಾಜನಾದವನು ಶಮೀಬುಡದಲ್ಲಿ ದಿಕ್ಷಾಲಪೂಜೆಯನ್ನೂ, ವಾಸ್ತುದೇವತಾಪೂಜೆಯನ್ನೂ ಮಾಡತಕ್ಕದ್ದು. “ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ ದುಃಖಪ್ರಣಾಶಿನೀಂಧಾಂ ಪ್ರಪಹಂ ಶಮೀಂಶುಭಾಂ ಇದೇ ಪೂಜಾ ಮಂತ್ರವು. “ಶಮೀಶಮಯ ಮೇ ಪಾಪಂ ಶಮೀಲೋಹಿತಕಂಟಕಾಧರಿತ್ರರ್ಜುನಬಾಣಾನಾಂ ರಾಮಪ್ರಿಯವಾದಿನೀ||೧|| ಕರಿಷ್ಯ ಮಾಣಯಾತ್ರಾಯಾಂ ಯಥಾಕಾಲಂಸುಖಂ ಮಯಾ ತತ್ರನಿರ್ವಿಘ್ನ ರ್ಕತ್ವಂ ಭವ ಶ್ರೀರಾಮ ಪೂಜಿತೇ||೨||” ಹೀಗೆ ಪ್ರಾರ್ಥಿಸುವದು. ಅಂತಕ ಪೂಜೆಯಾದಲ್ಲಿ “ಅಂತಕ ಮಹಾವೃಕ್ಷ ಮಹಾದೋಷನಿವಾರಣ ಇಷ್ಟಾನಾಂದರ್ಶನಂ ದೇಹಿ ಶತ್ರಣಾಂ ಚ ವಿನಾಶನಂ||” ಹೀಗೆ ಪ್ರಾರ್ಥಿಸತಕ್ಕದ್ದು. ರಾಜನು ಶತ್ರುವಿನ ಪ್ರತಿಮೆಯನ್ನು ತಯಾರಿಸಿಕೊಂಡು ಶಸ್ತ್ರದಿಂದ ಚುಚ್ಚತಕ್ಕದ್ದು. ಇಲ್ಲಿ ಕೆಲ ಪ್ರಾಕೃತ ಜನರು ಶಮೀಶಾಖೆಗಳನ್ನು ಕತ್ತರಿಸಿ ತರುತ್ತಾರೆ. ಇದಕ್ಕೇನೂ ಆಧಾರ ಕಾಣುವದಿಲ್ಲ. ಶಮೀಬುಡದ ಮೃತ್ತಿಕೆಯನ್ನು ನೀರಿನಿಂದ ಒದ್ದೆ ಮಾಡಿ ಅದರಲ್ಲಿ ಅಕ್ಷತೆಯನ್ನು ಬೆರಿಸಿ ಗಾಯನ, ವಾದ್ಯ ಮೊದಲಾದ ಘೋಷಣೆಯೊಂದಿಗೆ ಆ ಮೃತ್ತಿಕೆಯನ್ನು ತನ್ನ ಮನೆಗೆ ತರತಕ್ಕದ್ದು. ಆಮೇಲೆ ಸ್ವಜನರಿಂದ ಕೂಡಿ ಭೂಷಣ ವಸ್ತ್ರಾದಿಗಳನ್ನು ಧರಿಸುವದು. ಪುಣ್ಯವಂತೆಯರಾದ ಸುಮಂಗಲೆಯರಿಂದ ಮಂಗಲಾರತಿಯನ್ನು ಮಾಡಿಸಿಕೊಳ್ಳುವದು. ಈ ದಿನ ದೇಶಾಂತರಕ್ಕೆ ಹೋಗುವ ಇಚ್ಛೆಯುಳ್ಳವರು “ವಿಜಯ ಮುಹೂರ್ತದಲ್ಲಿ ಪ್ರಯಾಣಮಾಡತಕ್ಕದ್ದು. ಇದಕ್ಕೆ ಸಂಮುಖಚಂದ್ರ ಇತ್ಯಾದಿಗಳಿರಬೇಕೆಂದಿಲ್ಲ. “ವಿಜಯ” ಮುಹೂರ್ತವು ಎರಡು ವಿಧವಾಗಿದೆ. ಸ್ವಲ್ಪ ಸಂಜೆಯಲ್ಲಿ ತಾರಕೆಗಳು ಕಾಣುವ ಸಮಯ. ಇದಕ್ಕೆ “ವಿಜಯ ಮುಹೂರ್ತ"ವೆನ್ನುವರು. ಇದು ಸಕಲಕಾರ್ಯಸಿದ್ಧಿಯನ್ನು ಕೊಡುವದು. ದಿನದಲ್ಲಿಯ ಹನ್ನೊಂದನೇ ಮುಹೂರ್ತಕ್ಕೂ “ವಿಜಯ ಸಂಸ್ಥೆಯಿದೆ. ಪ್ರಯಾಣದಲ್ಲಿ ಜಯವನ್ನು ಬಯಸುವವರು ಈ ಎರಡರಲ್ಲೊಂದರಲ್ಲಿ ಪ್ರಯಾಣ ಮಾಡತಕ್ಕದ್ದು. ಆದರೆ ಈ “ವಿಜಯ” ಮುಹೂರ್ತ ಕಾಲಕ್ಕೆ ದಶಮಿಯಿರಬೇಕು. ಏಕಾದಶೀಯುಕ್ತವಾದದ್ದು ಉಪಯೋಗದ್ದಲ್ಲ. “ಆಶ್ವಯುಕ್‌ಶುಕ್ಲ ದಶಮೀ ವಿಜಯಾಖ್ಯಾಖಿಲೇಶುಭಾ ಪ್ರಯಾಣೇತು ವಿಶೇಷೇಣ ಕಿಂಪುರಶ್ರವಣಾನ್ವಿತಾ ಈ ವಚನದಂತೆ ಆಶ್ವಿನಶುಕ್ಲ ದಶಮಿಯು ವಿಜಯಾ ದಶಮಿಯು, ಇದೇ ಪೂರ್ಣಶುಭವಾದದ್ದು. ಹೆಚ್ಚಾಗಿ ಪ್ರಯಾಣಕ್ಕೆ ಶುಭಕರವು. ಇದು ಶ್ರವಣನಕ್ಷತ್ರಯುಕ್ತವಾದರೆ ಕೇಳಬೇಕೇನು? ಎಂದು ೧೪ ಧರ್ಮಸಿಂಧು ಜ್ಯೋತಿಷಗ್ರಂಥದಲ್ಲಿ ಹೇಳಿದೆ. ಪ್ರಯಾಣಕ್ಕಿಷ್ಟೇ ಅಲ್ಲ, ಉಳಿದ ಮಾಸ ನಿರಪೇಕ್ಷ ಅಂದರೆ ಇಂತಿಂಥ ಕಾರ್ಯವನ್ನು ಇಂತಿಂಥ ಮಾಸದಲ್ಲೇ ಮಾಡತಕ್ಕದ್ದೆಂಬ ನಿರ್ಬಂಧವಿಲ್ಲದ ಬೇರೆ- ಬೇರೆ ಕಾರ್ಯಗಳನ್ನೆಲ್ಲ “ಇದು ಶುಭದಿನ” ಎಂದು ತಿಳಿದು ಮಾಡತಕ್ಕದ್ದು. ಆದರೆ ಮಾಸವಿಶೇಷದಿಂದ ಹೇಳಿರುವ ಚೌಲ, ಉಪನಯನ ಮೊದಲಾದವುಗಳು ಹಾಗೂ ವಿಷ್ಣಾದಿ ದೇವತಾ ಪ್ರತಿಷ್ಠಾದಿ ಕಾರ್ಯಗಳನ್ನು ಮಾಡತಕ್ಕದ್ದಲ್ಲ. ರಾಜರ ಪಟ್ಟಾಭಿಷೇಕದಲ್ಲಿ ಶ್ರವಣಯುಕ್ತವಾದರೂ ನವಮೀ ವಿದ್ಧವಾದ ದಶಮಿಯು ಗ್ರಾಹ್ಯವಲ್ಲ. ಸೂರ್ಯೋದಯದಲ್ಲಿದ್ದ ದಶಮಿಯೇ ಗ್ರಾಹ್ಯವು. ಕಾರ್ತಿಕ ಸ್ನಾನ ಪ್ರಾರಂಭ ಅಶ್ವಿನ ಶುಕ್ಲ ದಶಮೀ, ಅಥವಾ ಏಕಾದಶೀ, ಇಲ್ಲವೇ ಹುಣ್ಣಿವೆಯಿಂದಾರಂಭಿಸಿ ಪ್ರತಿದಿನ ತೀರ್ಥಾದಿಗಳಲ್ಲಿ ಒಂದು ತಿಂಗಳ ವರೆಗೆ ಸ್ನಾನಮಾಡತಕ್ಕದ್ದು, ಸೂರ್ಯೋದಯಕ್ಕಿಂತ ಮುಂಚೆ ಎರಡು ಘಟಿ ಇರುವಾಗ ಸ್ನಾನಮಾಡತಕ್ಕದ್ದು. ಇದಕ್ಕೆ “ಕಾರ್ತಿಕ ಸ್ನಾನ"ವೆನ್ನುವರು. ಇದರ ಕ್ರಮ ಹೇಗೆಂದರೆ ವಿಷ್ಣು ಸ್ಮರಣೆ ಮಾಡಿ ದೇಶ ಕಾಲಗಳನ್ನುಚ್ಚರಿಸಿ “ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ ನಮಸ್ತೇಸ್ತು ಹೃಷಿಕೇಶ ಗೃಹಾಣಾರ್ಥ್ಯಂ ನಮೋಸ್ತುತೇ” ಹೀಗೆ ಉಚ್ಚರಿಸಿ ಅರ್ಘವನ್ನು ಕೊಟ್ಟು “ಕಾರ್ತಿಕೇsಹಂ ಕರಿಷ್ಯಾಮಿ ಪ್ರಾತಸ್ನಾನಂ ಜನಾರ್ದನ |ಪ್ರೀತ್ಯರ್ಥಂತವ ದೇವೇಶ ದಾಮೋದರ ಮಹಾಶಯ || ಧ್ಯಾತ್ಯಾಹಂತ್ವಾಂಚ ದೇವೇಶ ಜಲೇಸ್ಮಿನ್ ಸ್ನಾತುಮುತಃತವಪ್ರಸಾದಾತ್ರಾಪರಮೇ ದಾಮೋದರ ವಿನಶ್ಯತು!” ಈ ಮಂತ್ರಗಳಿಂದ ಸ್ನಾನಮಾಡಿ ಪುನಃ ಎರಡಾವರ್ತಿ ಅರ್ಥ್ಯವನ್ನು ಕೊಡತಕ್ಕದ್ದು. “ನಿನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ ಗೃಹಾಣಾರ್ಘ೦ ಮಯಾದತ್ತಂ ರಾಧಯಾ ಸಹಿತೋಹರೇ!! ಪ್ರತಿನಃ ಕಾರ್ತಿಕೇಮಾಸಿ ಸ್ನಾತಸ್ಯ ವಿಧಿವನ್ಮಮ ಗೃಹಣಾರ್ಥ್ಯ ಮಯಾದತ್ತಂ ರಾಧಯಾ ಸಹಿತೋಹರೇ ಇವೇ ಅರ್ಘ ಮಂತ್ರಗಳು, ಕುರುಕ್ಷೇತ್ರ, ಗಂಗಾ, ಪುಷ್ಕರ ಮೊದಲಾದ ತೀರ್ಥವಿಶೇಷಗಳಲ್ಲಿ ಪುಣ್ಯವೂ ವಿಶೇಷವೆಂದರಿಯುವದು. ಇಡೀ ಕಾರ್ತಿಕ ಮಾಸದಲ್ಲಿ ನಿತ್ಯದಲ್ಲೂ ಸ್ನಾನಮಾಡುವದು, ಜಿತೇಂದ್ರಿಯನಾಗಿರುವದು, ಜಪದಲ್ಲಾಸಕ್ತನಾಗಿರುವದು, ಹವಿಷ್ಯಾನ್ನವನ್ನು ಭುಂಜಿಸುವದು. ಹೀಗೆ ವ್ರತಸ್ಥನಾದರೆ ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ. ಹೀಗ ವಿಶೇಷವಿದೆ. ಭಾಗೀರಥಿ, ವಿಷ್ಣು, ಸೂರ್ಯ ಇವರನ್ನು ಸ್ಮರಿಸಿ ಜಲವನ್ನು ಪ್ರವೇಶಿಸತಕ್ಕದ್ದು. ವ್ರತಸ್ಥನಾದವನು ನಾಭಿಮಾತ್ರದ ಜಲದಲ್ಲಿ ಯಥಾವಿಧಿಯಾಗಿ ಸ್ನಾನಮಾಡತಕ್ಕದ್ದು. ನಿತ್ಯದ ಪ್ರಾತಃಸ್ನಾನ ಹಾಗೂ ಸಂಧ್ಯಾವಂದನಗಳ ನಂತರ ಕಾರ್ತಿಕಸ್ನಾನವನ್ನು ಮಾಡತಕ್ಕದ್ದು. ಯಾಕೆಂದರೆ ಅವುಗಳ ಹೊರತು ಕರ್ಮಾಧಿಕಾರ ಪ್ರಾಪ್ತವಾಗುವದಿಲ್ಲ. ಪ್ರಾತಃಸಂಖ್ಯೆಯು ಸೂರ್ಯೋದಯಕ್ಕೆ ಸಮಾಪ್ತವಾಗುವದಾದರೂ ಇಲ್ಲಿ ವಚನಬಲದಿಂದ ಉದಯಕ್ಕಿಂತ ಮೊದಲು ಸಂಜ್ಞೆಯನ್ನು ಮುಗಿಸಿ ಕಾರ್ತಿಕ ಸ್ನಾನವನ್ನು ಮಾಡತಕ್ಕದ್ದೆಂದು “ನಿರ್ಣಯ ಸಿಂಧು"ವಿನಲ್ಲಿ ಹೇಳಿದೆ. ಆದರೆ ಅನ್ನ ಗ್ರಂಥಗಳಲ್ಲಿ ಹೀಗೆ ಹೇಳಿದ್ದು ಕಂಡು ಬರುವದಿಲ್ಲ. ಇಡೀ ಮಾಸದಲ್ಲಿ ಸ್ನಾನಮಾಡಲಸಮರ್ಥನಾದವನು ಕನಿಷ್ಟ ಮೂರುದಿನವಾದರೂ ಸ್ನಾನಮಾಡತಕ್ಕದ್ದು. ಪರಿಚ್ಛೇದ - ೨ U ಕಾರ್ತಿಕ ವ್ರತವು ಯಾವನು ಕಾರ್ತಿಕದಲ್ಲಿ ಲಕ್ಷ ತುಲಸಿಯಿಂದ ಹರಿಯನ್ನರ್ಚಿಸುವನೋ ಆತನು ಪ್ರತಿದಲದಲ್ಲಿಯೂ ಮುಕ್ತಿಯ ಫಲವನ್ನು ಹೊಂದುವನು. “ತುಲಸೀಗೊಂಚಲುಗಳಿಂದ ಹರಿ ಹರಾರ್ಚನಮಾಡಿದರೆ ಮುಕ್ತಿಫಲವು ದೊರಕುವದು. ತುಲಸೀಗಿಡಗಳನ್ನು ನೆಟ್ಟು ನೀರುಹಾಕಿ ಪೋಷಣಮಾಡಿದರೆ ಸಮಸ್ತಪಾಪ ಕ್ಷಯವಾಗುವದು. ತುಲಸೀಗಿಡದ ನೆರಳಿನಲ್ಲಿ ಶ್ರಾದ್ಧ ಮಾಡಿದರೆ ಪಿತೃ ತೃಪ್ತಿಯಾಗುವದು. ತುಲಸಿಯಿಂದ ಯುಕ್ತವಾದ ಮನೆಯು ತೀರ್ಥಸ್ವರೂಪವಾಗುವದು. ಈ ಮನೆಗೆ ಯಮದೂತರು ಪ್ರವೇಶಮಾಡುವದಿಲ್ಲ. “ಇತ್ಯಾದಿಯಾಗಿ ತುಲಸೀ ಮಹಾತ್ಮಯಿದೆ. ಇದರಂತೆ ನೆಲ್ಲೀಗಿಡದ ಮಹಿಮೆಯೂ ಇದೆ. “ಕಾರ್ತಿಕದಲ್ಲಿ ನೆಲ್ಲಿ ಮರದ ಅಡಿಯಲ್ಲಿ ಚಿತ್ರಾನ್ನದಿಂದ ಹರಿಯನ್ನು ತೃಪ್ತಿಪಡಿಸತಕ್ಕದ್ದು. ಮತ್ತು ಬ್ರಾಹ್ಮಣ ಸಂತರ್ಪಣೆಮಾಡಿ ತಾನು ಬಂಧು- ಬಾಂಧವರಿಂದ ಕೂಡಿ ಭೋಜನ ಮಾಡತಕ್ಕದ್ದು. ನೆಲ್ಲಿಮರದ ನೆರಳಿನಲ್ಲಿ ಶ್ರಾದ್ಧ ಮಾಡಿದರೆ, ನೆಲ್ಲಿಯ ಪತ್ರ ಹಾಗೂ ಫಲಗಳಿಂದ ಹರಿಯನ್ನು ಪೂಜಿಸಿದರ ಮಹತ್ತಾದ ಫಲವಿದೆ. ನೆಲ್ಲಿ ಮರದಲ್ಲಿ ದೇವತೆಗಳು, ಋಷಿಗಳು, ಪಿತೃಗಳು, ಎಲ್ಲ ತೀರ್ಥಗಳು, ಯಜ್ಞಗಳು ಇವುಗಳೆಲ್ಲವೂ ನೆಲಸಿರುವವು. * ಹೀಗೆ ಪುರಾಣ ವಚನವಿದೆ. ಇದರಲ್ಲಿಯೇ “ಕೌಸ್ತುಭ"ದಲ್ಲಿ ಹರಿಜಾಗರ ವಿಧಿ ಯನ್ನು ಹೇಳಿದೆ. ಆ ಶ್ಲೋಕಗಳಲ್ಲಿ ಹೀಗೆ ಹೇಳಿದೆ “ಕಾರ್ತಿಕ ಮಾಸದಲ್ಲಿ ದಾಮೋದರದ ಸನ್ನಿಧಿಯಲ್ಲಿ ಅರುಣೋದಯದ ಕಾಲಕ್ಕೆ ಜಾಗರ ಮಾಡುವವನು ಸಹಸ್ರ ಗೋದಾನ ಮಾಡಿದ ಫಲವನ್ನು ಹೊಂದುವನು. ಶಿವನ ಅಥವಾ ವಿಷ್ಣುವಿನ ದೇವಾಲಯವಿಲ್ಲದಿದ್ದಲ್ಲಿ ಯಾವದೇ ವಾಲಯದಲ್ಲಾದರೂ ಆಗಬಹುದು. ಅಥವಾ ಅಶ್ವತ್ಥಮರದಡಿಯಲ್ಲಿ ಇಲ್ಲವೆ ತುಲಸೀವನದಲ್ಲಿ ಮಾಡಬಹುದು. ಯಾವನು ವಿಷ್ಣುವಿನ ನಾಮ, ಸ್ತೋತ್ರಾದಿಗಳನ್ನು ವಿಷ್ಣು ಸನ್ನಿಧಿಯಲ್ಲಿ ಹಾಡುವನೋ ಅವನು ಸಹಸ್ರ ಗೋದಾನಮಾಡಿದ ಫಲವನ್ನು ಹೊಂದುವನು. ವಾದ್ಯವನ್ನು ಬಾರಿಸುವವನು ವಾಜಪೇಯಿಯಜ್ಞದ ಫಲವನ್ನು ಹೊಂದುವನು, ನರ್ತನ ಮಾಡುವವನು ಸಕಲ ತೀರ್ಥ ಸ್ನಾನದ ಫಲವನ್ನು ಪಡೆಯುವನು. ಇಂಥ ಬ್ರಾಹ್ಮಣ ಅಥವಾ ಹರಿಭಕ್ತರ ಸೇವೆಯನ್ನು ಧನಾದಿಗಳಿಂದ ಸಹಕರಿಸಿ ಮಾಡುವವನು ಆ ಎಲ್ಲ ಫಲವನ್ನೂ ಹೊಂದುವನು. ಅರ್ಚನ, ದರ್ಶನಾದಿಗಳಿಂದ ಅವುಗಳ ಆರರಲ್ಲೊಂದುಭಾಗ ಪುಣ್ಯ ಲಭಿಸುವದು. ಬ್ರಾಹ್ಮಣ ಅಥವಾ ವಿಷ್ಣು ಭಕ್ತರು ಸಿಗದಿದ್ದರೆ ಅಶ್ವತ್ಥ, ಆಲ ಮೊದಲಾದ ಪುಣ್ಯ ವೃಕ್ಷಗಳನ್ನು ಸೇವಿಸುವದು.” ಹೀಗೆ ಹರಿಜಾಗರ ವಿಧಿಯಲ್ಲಿ ಹೇಳಿದೆ. ಕಾರ್ತಿಕ ಮಾಸದಲ್ಲಿ ಕಮಲಗಳು, ತುಲಸೀ, ಮಲ್ಲಿಗೆ, ಮುನಿಪುಷ್ಪ, ಮತ್ತು ದೀಪದಾನ ಇವುಗಳನ್ನು ವಿಶೇಷವಾಗಿ ಹೇಳಿದೆ. ಕಾರ್ತಿಕ ಮಾಸದಲ್ಲಿ ವಾನಪ್ರಸ್ಥರು, ಯತಿಗಳು ಮತ್ತು ವಿಧವೆಯರು ಮಾಸೋಪವಾಸವನ್ನು ಮಾಡತಕ್ಕದ್ದು. ಗೃಹಸ್ಥರು ಮಾಡತಕ್ಕದ್ದಲ್ಲ. ಕೃಚ್ಛ, ಅತಿಕೃಚ್ಛ ಅಥವಾ ಪ್ರಾಜಾಪತ್ಯಕೃಚ್ಛ ವ್ರತಗಳನ್ನು ಏಕರಾತ್ರ ಅಥವಾ ತ್ರಿರಾತ್ರ ಮಾಡತಕ್ಕದ್ದು, ಕಾರ್ತಿಕದಲ್ಲಿ ವ್ರತನಿಷ್ಠನಾದವನು ಶಾಕಾಹಾರ, ಕ್ಷೀರಾಹಾರ ಅಥವಾ ಫಲಾಹಾರ ಇಲ್ಲವೇ ಗೋದಿಯ ಅನ್ನದ ಆಹಾರಗಳನ್ನು ಮಾಡತಕ್ಕದ್ದು. ಕಾರ್ತಿಕದಲ್ಲಿ ವರ್ಜಗಳು ಉಳ್ಳಗಡ್ಡೆ, ಬೆಳ್ಳುಳ್ಳಿ, ಹಿಂಗು, ಆಳುಂಬೆ, ಆಲೂಗಡ್ಡೆ, ಸೋರೆ, ನುಗ್ಗಿ, ಬದನೆ, ಕುಂಬಳ, ಧರ್ಮಸಿಂಧು ಗುಳ್ಳಬದನೆ, ಕಮ್ಮುಡ, ಬೆಳವಲ, ಎಣ್ಣೆ, ಉಪ್ಪು, ಸಾಮಾನ್ಯ ತರಕಾರಿ, ಎರಡಾವರ್ತಿ ಕುದಿಸಿದ ಅನ್ನ (ಕುಚ್ಚಿಗೆ) ಹಳಸಿದ ಅನ್ನ, ಹೊತ್ತಿದ ಅನ್ನ, ಉದ್ದು, ಹೆಸರು, ಕಡಲೆ, ಹುರಳಿ, ವಟಾಣೆ,. ತೊಗರಿ ಬೇಳೆ, ಮತ್ತು ಎಲ್ಲ ದ್ವಿದಲ ಧಾನ್ಯಗಳು, ಇವುಗಳನ್ನು ವರ್ಜಿಸತಕ್ಕದ್ದು, ಸಪ್ತಮಿಯಲ್ಲಿ ನೆಲ್ಲಿಕಾಯಿ ಮತ್ತು ಎಳ್ಳನ್ನೂ, ಅಷ್ಟಮಿಯಲ್ಲಿ ತೆಂಗಿನಕಾಯಿ, ರವಿವಾರ ನೆಲ್ಲಿ ಕಾಯಿ ಇವುಗಳನ್ನು ಸರ್ವಮಾಸಗಳಲ್ಲೂ ಬಿಡತಕ್ಕದ್ದು, ಕಾಂಸ್ಯಪಾತ್ರ ಭೋಜನ ವರ್ಜನವ್ರತ (ಕಂಚಿನಪಾತ್ರೆಯಲ್ಲಿ ಉಣ್ಣದಿರುವ)ದಲ್ಲಿ ತುಪ್ಪವನ್ನು ತುಂಬಿದ ಕಂಚಿನಪಾತ್ರೆಯನ್ನು ದಾನಮಾಡತಕ್ಕದ್ದು. ಜೇನುತುಪ್ಪವನ್ನು ಬಿಡುವ ವ್ರತದಲ್ಲಿ ಕೊನೆಗೆ ತುಪ್ಪ, ಪಾಯಸ, ಸಕ್ಕರೆ ಇವುಗಳನ್ನು ದಾನಮಾಡತಕ್ಕದ್ದು. ತೈಲತ್ಯಾಗ ವ್ರತದಲ್ಲಿ ಎಳ್ಳನ್ನು ದಾನಮಾಡುವದು. ಕಾರ್ತಿಕದಲ್ಲಿ ಮೌನಭೋಜನ ವ್ರತದಲ್ಲಿ ತಿಲಸಹಿತವಾದ ಘಂಟೆಯನ್ನು ದಾನಮಾಡತಕ್ಕದ್ದು. ಸುವರ್ಣ, ಉದ್ದುಗಳಿಂದ ಸಹಿತವಾದ ಮೂವತ್ತು ಕುಂಬಳಕಾಯಿಗಳನ್ನು ಈ ಮಾಸದಲ್ಲಿ ದಾನಮಾಡತಕ್ಕದ್ದು. ಕಾರ್ತಿಕದಲ್ಲಿ ಕಂಚಿನಪಾತ್ರೆಯಲ್ಲುಣ್ಣುವವನು “ಕೃಮೀಭೋಜಿ” ಎಂದನ್ನಲ್ಪಡುವನು. ಫಲವರ್ಜನವ್ರತ ಮಾಡಿದವನು ಫಲದಾನ ಮಾಡತಕ್ಕದ್ದು. ರಸವರ್ಜನ ವ್ರತದಲ್ಲಿ ರಸಪದಾರ್ಥಗಳನ್ನೂ, ಧಾನ್ಯವರ್ಜನವ್ರತದಲ್ಲಿ ಧಾನ್ಯಗಳನ್ನೂ ದಾನಮಾಡತಕ್ಕದ್ದು. ಅಥವಾ ಸರ್ವತ್ರ ಗೋದಾನಮಾಡಬಹುದು. ಎಲ್ಲದಾನಗಳೂ ಒಂದುಕಡೆ ದೀಪದಾನವೇ ಒಂದುಕಡೆ. ಕಾರ್ತಿಕದಲ್ಲಿ ದೀಪದಾನ ಮಾಡಿದ ಫಲದ ಹದಿನಾರನೇ ಒಂದಂಶವನ್ನೂ ಇತರದಾನಗಳು ಸರಿಗಟ್ಟಲಾರವು. ಇಷ್ಟೆಲ್ಲ ವ್ರತಗಳನ್ನು ಮಾಡಲಸಮರ್ಥನಾದರೆ ಮತ್ತು ಚಾತುರ್ಮಾಸ ವ್ರತವನ್ನಾಚರಿಸಲಿಕ್ಕಾಗದಿದ್ದರೆ ಸ್ವಲ್ಪವಾದರೂ ಕಾರ್ತಿಕದಲ್ಲಿ ವ್ರತವನ್ನಾಚರಿಸತಕ್ಕದ್ದು. ಇಡೀ ಕಾರ್ತಿಕದಲ್ಲಿ ಏನೂ ವ್ರತಮಾಡದಿದ್ದವನಿಗೆ ಯಾವ ಪುಣ್ಯಲೇಶವೂ ಲಭಿಸಲಾರದು. ಹೀಗೆ ಸ್ಮತ್ಯಾದಿಗಳಲ್ಲಿ ಉಕ್ತಿಯಿದೆ. ಯಾವ ಸ್ತ್ರೀಯು ರಂಗವಲ್ಯಾದಿಗಳಿಂದ ಶಾಲಿಗ್ರಾಮ ಮೊದಲಾದ ದೇವತಾಸನ್ನಿಧಿಯಲ್ಲಿ ಸ್ವಸ್ತಿಕ ಮೊದಲಾದ ಮಂಡಲಗಳನ್ನು ರಚಿಸುವಳೋ, ಅವಳು ಸ್ವರ್ಗಾದಿ ಸುಖವನ್ನನುಭವಿಸುವದಲ್ಲದೆ ಸಪ್ತಜನ್ಮದಲ್ಲಿಯೂ ವೈಧವ್ಯವನ್ನು ಹೊಂದುವದಿಲ್ಲ. ಕಾರ್ತಿಕದಲ್ಲಿ “ಪುರಾಣೇತಿಹಾಸ ಶ್ರವಣ"ಗಳ ಆರಂಭ ಸಮಾಪ್ತಿಗಳನ್ನು ಹೇಳಿದೆ. ಗ್ರಂಥಾಂತರದಲ್ಲಿ ಅವುಗಳ ಅನೇಕ ಪ್ರಕಾರಗಳು ಹೇಳಲ್ಪಟ್ಟಿವೆ. ವಾಚಕನು ಬ್ರಾಹ್ಮಣನೇ ಇರತಕ್ಕದ್ದು. ಮತ್ತು ಮುಂಗಡೆಯಲ್ಲಿ ಬ್ರಾಹ್ಮಣನನ್ನೇ ಶ್ರಾವಕನನ್ನಾಗಿಟ್ಟುಕೊಂಡು ಉಳಿದ ವರ್ಣದವರಿಗೆ ಶ್ರವಣ ಮಾಡಿಸುವದು. ವಾಚನವು ಅತಿ ಸ್ಪಷ್ಟವಾಗಿರಬೇಕು. ಸಾವಕಾಶವಾಗಿ ಹೇಳಬೇಕು. ಶಾಂತವಾಗಿಯೂ, ಸ್ಪಷ್ಟಾಕ್ಷರ ಉಚ್ಚಾರಪೂರ್ವಕವಾಗಿಯೂ, ಪದೋಚ್ಚಾರವು ಸ್ವರ, ಭಾವಯುಕ್ತವಾಗಿಯೂ ಇರತಕ್ಕದ್ದು, ರಸಯುಕ್ತವಾಗಿಯೂ ವಾಚನವಿರತಕ್ಕದ್ದು. ಹೀಗೆ ಗ್ರಂಥಾರ್ಥವನ್ನು ವಿವರಿಸಿ ವಾಚನಮಾಡುವವನು ಸಾಕ್ಷಾತ್ ವ್ಯಾಸನೆಂದೇ ಭಾವಿಸತಕ್ಕದ್ದು. ಪುರಾಣ ಸಮಾಪ್ತಿಯಲ್ಲಿ ಸಂತರ್ಪಣೆ ಮಾಡತಕ್ಕದ್ದು, ವಾಚಕನನ್ನು ಪೂಜಿಸುವವನಿಗೆ ಎಲ್ಲ ದೇವತೆಗಳು ಪ್ರಸನ್ನರಾಗುವರು. ಶ್ರದ್ಧಾಭಕ್ತಿಯುಕ್ತನಾದ ಈ ವಾಚಕನನ್ನು ಶ್ರಾದ್ಧದಲ್ಲಿ ಭೋಜನಮಾಡಿಸಿದರೆ ಪಿತ್ರಗಳು ನೂರಾರು ವರ್ಷಪರ್ಯಂತ ತೃಪ್ತರಾಗಿರುವರು. ಪುತ್ರಕಾವನಾದವನ್ನು ಕಾರ್ತಿಕಸ್ನಾನ ಕಾಲದಲ್ಲಿ ಅಭಿಲಾಷಾಷ್ಟಕ (ಕಾಶೀಖಂಡೋಕ್ತ) ಪರಿಚ್ಛೇದ - ೨ ವನ್ನು ಪಠಿಸತಕ್ಕದ್ದು. ಇದರಲ್ಲಿಯೇ ದುಗ್ಧ ವ್ರತವನ್ನು ಸಮರ್ಪಣಮಾಡಿ “ದ್ವಿದಲವ್ರತ"ವನ್ನು ಸಂಕಲ್ಪಿಸತಕ್ಕದ್ದು. ಇದರಲ್ಲಿ ಕಲವರು “ದ್ವಿದಲ” ಎಂದರೆ, ಉತ್ಪತ್ತಿಯ ಸಮಯ ಎರಡು ಎಸಳುಗಳಿಂದ ಯುಕ್ತವಾದದ್ದು ಎಂದು ಹೇಳುವರು. ಇಂಥವುಗಳನ್ನು ವರ್ಜ ಮಾಡತಕ್ಕದ್ದೆಂದು ಹೇಳುವರು. ಇನ್ನು ಕೆಲವರು ಇಂಥ ಲಕ್ಷಣ ವಿಷಯದಲ್ಲಿ ಪ್ರಮಾಣವಚನವಿಲ್ಲದ್ದರಿಂದ ಹಾಗೆ ಭಾವಿಸಲು ಕಾರಣವಿಲ್ಲವೆನ್ನುವರು. ಅಂದರೆ ಧಾನ್ಯದ ಕಾಳಿನಲ್ಲಿ ಎರಡು ದಳಗಳಿದ್ದರಾಯಿತು. ಅದನ್ನು ವರ್ಜಮಾಡತಕ್ಕದ್ದು; ಹೀಗೆ ಹೇಳುವರು. ದ್ವಿದಳವಲ್ಲದ ಧಾನ್ಯ ಹಾಗೂ ಅವುಗಳ ಪತ್ರ-ಪುಷ್ಪಗಳು ವರ್ಜಗಳಲ್ಲವೆಂದೂ ಹೇಳುವರು. ಹೀಗೆ ಇನ್ನೂ ಕೆಲವು - ತಾಂಬೂಲ ವರ್ಜನ, ಕೇಶಕರ್ತನ ವರ್ಜನ ಮೊದಲಾದ ವ್ರತಗಳೂ ಹೇಳಲ್ಪಟ್ಟಿವೆ. ಕಾರ್ತಿಕದಲ್ಲಿ ಆಕಾಶದೀಪ ಸೂರ್ಯಾಸ್ತವಾದ ಮೇಲೆ ಮನೆಯ ಸಮೀಪದಲ್ಲಿ ಪುರುಷ ಪ್ರಮಾಣವಾದ ಯಜ್ಜಿಯ ಕಾಷ್ಠದಿಂದ ನಿರ್ಮಿತವಾದ ದಂಡವನ್ನು (ಶ್ರೇಷ್ಠ ಕಟ್ಟಿಗೆ) ಭೂಮಿಯಲ್ಲಿ ನೆಟ್ಟು ಅದರ ತುದಿಯಲ್ಲಿ ಅಷ್ಟದಳಾದಿ ಆಕೃತಿಯಿಂದ ನಿರ್ಮಿಸಿದ ದೀಪಯಂತ್ರವನ್ನಿಟ್ಟು ಮಧ್ಯದಲ್ಲಿ ಮುಖ್ಯದೀಪವನ್ನಿಟ್ಟು ಸುತ್ತಲೂ ಅಷ್ಟದಳಗಳಲ್ಲಿ ಎಂಟು ದೀಪಗಳನ್ನು ಹಚ್ಚುವದು. “ದಾಮೋದರಾಯನಭಸಿ ತುಲಾಯಾಂ ದೋಲಯಾಸಹ ಪ್ರದೀಪಂತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ ಈ ಮಂತ್ರವನ್ನು ಹೇಳಿ ಒಂದು ತಿಂಗಳ ಪರ್ಯಂತ ಆಕಾಶದೀಪವನ್ನು ಹಚ್ಚಿದರೆ ಮಹಾಸಂಪತ್ತು ಲಭಿಸುವದು. ಆಶ್ವಿನ ಪೂರ್ಣಿಮೆಯಲ್ಲಿ “ಕೋಜಾಗರವ್ರತ"ವನ್ನು ಹೇಳಿದೆ. ಮೊದಲನೇದಿನ ಅರ್ಧರಾತ್ರಿ ವ್ಯಾಪ್ತಿಯಿದ್ದರ ಪೂರ್ವದಿನವೇ ಗ್ರಾಹ್ಯವು, ಪರದಿನದಲ್ಲೇ ಅರ್ಧರಾತ್ರವ್ಯಾಪ್ತಿಯಾದರೆ ಅಥವಾ ಎರಡೂದಿನ ಅರ್ಧರಾತ್ರ ವ್ಯಾಪ್ತವಾದರೆ ಇಲ್ಲವೇ ಎರಡೂದಿನ ಅರ್ಧರಾತ್ರವ್ಯಾಪ್ತಿಯಿಲ್ಲದಿದ್ದರೆ ಪರದಿನವೇ ಗ್ರಾಹ್ಯವು. ಕೆಲವರು ಪೂರ್ವದಿನ ಅರ್ಧರಾತ್ರವ್ಯಾಪ್ತಿಯಿದ್ದು ಪರದಿನ ಪ್ರದೋಷವ್ಯಾಪ್ತಿಯಿದ್ದರೂ ಪರದಿನವೇ ಗ್ರಾಹ್ಯವೆನ್ನುವರು. ಇದರಲ್ಲಿ ಲಕ್ಷ್ಮಿ, ಚಂದ್ರರ ಪೂಜೆ, ಜಾಗರಣೆ ಮತ್ತು ಅಕ್ಷಕ್ರೀಡಾ (ಪಗಡೆ ಆಟ)ಗಳು ವಿಹಿತವಾಗಿವೆ. ಪದ್ಮಾಸನಸ್ಥಳಾದ ಲಕ್ಷ್ಮೀದೇವಿಯನ್ನು ಧ್ಯಾನಿಸಿ ಅಕ್ಷತೆಗಳಲ್ಲಿ “ಓಂ ಲಕ್ಷ್ಮಿನಮಃ” ಎಂದು ಆವಾಹನಾದಿ ಷೋಡಶೋಪಚಾರ ಪೂಜೆಯನ್ನು ಮಾಡತಕ್ಕದ್ದು. “ನಮಸ್ತೇ ಸರ್ವದೇವಾನಾಂ ವರದಾಸಿ ಹರಿಪ್ರಿಯೇ ಯಾಗತಿತೃಸನ್ಮಾನಾಂ ದರ್ಶನಾತ್” ಸಾಮೇಭಯಾತ್ತು ಹೀಗೆ ಹೇಳಿ ನಾನಾಭರಣ ಭೂಷಿತ:” ಪುಷ್ಪಾಂಜಲಿಯನ್ನರ್ಪಿಸತಕ್ಕದ್ದು. ಮತ್ತು ನಮಸ್ಕಾರಮಾಡತಕ್ಕದ್ದು. “ಚತುರ್ದಂತ ಸಮಾರೂಢ ವಜ್ರಪಾಣಿ: ಪುರಂದರಃ| ಶಚೀಪತಿಶ್ಚದ್ಯಾತ ಹೀಗೆ ಧ್ಯಾನಿಸಿ ಅಕ್ಷತರಾಶಿ ಮೊದಲಾದವುಗಳಲ್ಲಿ “ಇಂದ್ರಾಯ ನಮಃ’ ಎಂದು ಪೂಜಿಸಿ “ವಿಚಿತ್‌ರಾವತಸ್ಥಾಯ ಭಾಸ್ಕುತ್ಕುಲಿಶಪಾಂcelಪೌಲೋಮ್ಯಾಲಿಂಗಿತಾಂಗಾಯ ಸಹಸ್ರಾಕ್ಷಾಯ ತೇನಮ:” ಹೀಗೆ ಪುಷ್ಪಾಂಜಲಿಯನ್ನರ್ಪಿಸಿ ನಮಸ್ಕರಿಸತಕ್ಕದ್ದು. ತೆಂಗಿನ ಎಳೆನೀರನ್ನು ಕುಡಿದು ದೂತಕ್ರೀಡೆಯನ್ನು ಪ್ರಾರಂಭಿಸತಕ್ಕದ್ದು. ವರವನ್ನು ಕೊಡುವ ಲಕ್ಷ್ಮಿಯು ಆ ದಿನದಲ್ಲಿ “ಕೋ ಜಾಗರ್ತಿ?” (ಯಾವನು ಜಾಗರಣೆ ಮಾಡುತ್ತಾನೆ?) ಎಂದಾಲೋಚಿಸುತ್ತ, ಆ ಲಕ್ಷ್ಮಿಯು ಧರ್ಮಸಿಂಧು ಯಾವಾತನು ಜಾಗರಣೆಮಾಡಿ ಅಕ್ಷಕ್ರೀಡೆಯನ್ನಾಡುತ್ತಾನೋ ಅವನಿಗೆ ವರವನ್ನು (ಸಂಪತ್ತನ್ನು) ಕೊಡುವೆನು; ಹೀಗೆ ಹೇಳುವಳು. (ಅದಕ್ಕಾಗಿಯೇ ಇದಕ್ಕೆ ಕೋಜಾಗರ” ವೆಂಬ ಹೆಸರು ಬಂದಿದೆ) ತೆಂಗಿನಕಾಯಿ, ಅವಲಕ್ಕಿಗಳನ್ನು ದೇವರಿಗರ್ಪಿಸಿ ಹಾಗೂ ಪಿತೃಗಳಿಗೂ ಅರ್ಪಿಸಿ ಬಂಧುಸಮೇತನಾಗಿ ತಾನು ತಿನ್ನತಕ್ಕದ್ದು. ಈ ಹುಣ್ಣಿವೆಯಲ್ಲಿಯೇ ಅಶ್ವಲಾಯನರು “ಅಶ್ವಯುಜೀ ಕರ್ಮ"ವನ್ನು ಮಾಡತಕ್ಕದ್ದು. ಎರಡು ಪರ್ವಗಳು ಪ್ರಾಪ್ತವಾದಲ್ಲಿ ಅವಶಿಷ್ಟ ಪರ್ವದಲ್ಲಿ ಪ್ರಕೃತಿ ಇಷ್ಟಿಯನ್ನು ಮಾಡಿ ಇದನ್ನು ಪೂರ್ವಾಹ್ನ ಸಂಧಿಯಲ್ಲಿ ಮಾಡತಕ್ಕದ್ದು. ಅಪರಾಹ್ನ ಸಂಧಿಯಲ್ಲಿ ಈ ವಿಕೃತಿ ಇಷ್ಟಿಯನ್ನು ಮಾಡಿ ಪ್ರಕೃತಿಯ ಅನ್ನಾಧಾನ ಮಾಡತಕ್ಕದ್ದು. ಅದರ ಪ್ರಯೋಗಾದಿಗಳನ್ನು ಬೇರೆ ಗ್ರಂಥಗಳಿಂದ ತಿಳಿಯತಕ್ಕದ್ದು. ಆಗ್ರಯಣ ಕಾಲ ಅಶ್ವಿನ ಕಾರ್ತಿಕ ಪೂರ್ಣಿಮೆ ಅಥವಾ ಅಮಾವಾಸ್ಯೆಯಲ್ಲಿ, ಅಥವಾ ಶುಕ್ಲ ಪಕ್ಷದಲ್ಲಿಯ ಕೃತ್ತಿಕಾದಿ-ವಿಶಾಖಾನಕ್ಷತ್ರ ಪರ್ಯಂತದ ನಕ್ಷತ್ರಗಳಲ್ಲಿ, ಇಲ್ಲವೇ ಶುಕ್ಲ ಪಕ್ಷದಲ್ಲಿರುವ ರೇವತಿಯಲ್ಲಿ “ಹ್ಯಾಗ್ರಯಣ” ಮಾಡತಕ್ಕದ್ದು. ಹೀಗೆಯೇ ಶ್ರಾವಣ-ಭಾದ್ರಪದಗಳಲ್ಲಿಯ ಹಿಂದೆ ಹೇಳಿದ ಪರ್ವಗಳಲ್ಲಿ ಹಾಗೂ ನಕ್ಷತ್ರಗಳಲ್ಲಿ “ಶ್ಯಾಮಾಕಾಗ್ರಯಣ” (ಸಾಮಅಕ್ಕಿ) ಮಾಡತಕ್ಕದ್ದು. ಚೈತ್ರ-ವೈಶಾಖಗಳಲ್ಲಿ ಹೇಳಿದ ಪರ್ವನಕ್ಷತ್ರಗಳಲ್ಲಿ “ಯವಾಗ್ರಯಣ” (ಜವೆಗೋದಿ) ಮಾಡತಕ್ಕದ್ದು. ಪೂರ್ಣಿಮೆಯ ಪರ್ವದಲ್ಲಿ ಸಂಗವಕ್ಕಿಂತ ಮೊದಲು ಸಂಧಿಯಾದಲ್ಲಿ ಪೂರ್ವದಿನ ಆಗ್ರಯಣವನ್ನು ಮಾಡಿ ಪ್ರಕೃತಿಯ ಅನ್ನಾಧಾನ ಮಾಡತಕ್ಕದ್ದು. ಮಧ್ಯಾಹ್ನ ನಂತರ ಸಂಧಿಯಾದಲ್ಲಿ ಸಂಧಿದಿನ ಆಶ್ರಯಣವನ್ನು ಮಾಡಿ ಪ್ರಕೃತಿಯ ಅನ್ನಾಧಾನ ಮಾಡತಕ್ಕದ್ದು. ಮಧ್ಯಾಹ್ನ ಸಂಗವಕ್ಕಿಂತ ಮುಂದೆ ಮಧ್ಯಾಹ್ನದ ಪೂರ್ವದಲ್ಲಿ ಸಂಧಿಯಾದರೆ ಸಂಧಿದಿನದಲ್ಲಿ ಆಗ್ರಯಣೇಷ್ಟಿಯನ್ನು ಮಾಡಿ ಪ್ರಕೃತೀಷ್ಟಿಯನ್ನು ಸದ್ಯವೇ ಮಾಡತಕ್ಕದ್ದು. ಅಮಾವಾಸ್ಯೆಯಲ್ಲಾದರೆ ಪೂರ್ವಾಹ್ನ ಅಥವಾ ಅಪರಾಹ್ನ ಸಂಧಿಯಲ್ಲಿ ಯಥಾಕಾಲ ದರ್ಶಷ್ಟಿಯನ್ನು ಮಾಡಿ ಪ್ರತಿಪದೆಯ ಮಧ್ಯದಲ್ಲಿ ಆಶ್ರಯಣೇಷ್ಠಿಯನ್ನು ಮಾಡತಕ್ಕದ್ದು. ಹೀಗೆ ನಕ್ಷತ್ರಗಳಲ್ಲಾಗಯಣಮಾಡುವ ಪಕ್ಷದಲ್ಲಾದರೂ ಪೂರ್ಣಮಾಸೇಷ್ಟಿಯ ಪೂರ್ವದಲ್ಲಿ ದರ್ಶಷ್ಟಿಯ ನಂತರ ಹೇಗೆ ಆಗುವದೋ ಆ ಪ್ರಮಾಣಕ್ಕನುಸರಿಸಿ ಆಗ್ರಯಣ ಮಾಡತಕ್ಕದ್ದು, ಅದರಂತೆ ದೀಪಿಕೆಯಲ್ಲಿ “ದರ್ಶಷ್ಯಾ: ಪರಮುಕ್ತಮಾಗ್ರಯಣಕಂ ಪ್ರಾಕ್ ಪೌರ್ಣ ಮಾಸಾತತ್” ಹೀಗೆ ಉಕ್ತಿಯಿದೆ. ಅಲ್ಲಿ ಯದೃಪ್ಪಿ " ಅಥೋ ಪೂರ್ವಾಹ್ಯಪರ್ವಕ್ಷಯ” ಹೀಗೆ ಆರಂಭವಾಗಿದ್ದರೂ ಅಂದರೆ ಅದರ ಅರ್ಥವು ಪೂರ್ವಾಹ್ನ ಸಂಧಿಯದಿನ ಪರ್ವಕ್ಷಯವಾದಾಗ ಈ ಕ್ರಮದಂತೆ ತಿಳಿಯತಕ್ಕದ್ದು. ಹೀಗೆ ಹೇಮಾದ್ರಿ ಸಿದ್ಧಾಂತಕ್ಕನುಕೂಲವಾದ “ದೀಪಿಕಾಮತ"ವಿದ್ದರೂ ಎಂಥ ರೂಪದ ಸಂಧಿಯಾದರೂ ಇದೇ ಹೇಳಿದ ಕ್ರಮವನ್ನು ತಿಳಿಯತಕ್ಕದ್ದು. ಎಂಬ ಕೌಸ್ತುಭ ಸಿದ್ಧಾಂತಕ್ಕೆ ಅನುಸಾರಿಯಾದ ಮತವು ಇಲ್ಲಿ ಸಿದ್ಧಾಂತಿಕವಾಗಿದೆ. ಈ ಪಕ್ಷದಲ್ಲಿ ಅಥ” ಈ ಪದವನ್ನು “ಚ” ಕಾಲಾರ್ಥದಲ್ಲಿ ತಿಳಿಯತಕ್ಕದ್ದು. ಅಂದರೆ “ಪೂರ್ವಾಹ್ನ ಸಂಧಿ” ಮತ್ತು “ಪರ್ವಕ್ಷಯ” ಈ ಎರಡರಲ್ಲೂ ಎಂದು ಅರ್ಥವನ್ನು ಮಾಡತಕ್ಕದ್ದು. ಒಟ್ಟಿನಮೇಲೆ " ಈ ರೀತಿಯು ಕೃಷ್ಣ ಪಕ್ಷದಲ್ಲಾಗುವದಿಲ್ಲ” ಎಂಬುದು ಸಿದ್ದವು. ಅಮಾವಾಸ್ಯೆಯ 1ಪರಿಚ್ಛೇದ - ೨ ೧೧೯ ಪರ್ವದಲ್ಲಿ ಆಶ್ರಯಣವನ್ನು ಮಾಡತಕ್ಕದ್ದು. ಎಂಬುದು ಅಖಂಡ ಅಮಾವಾಸ್ಯೆಯ ವಿಷಯದಲ್ಲಿ ವ್ಯರ್ಥವಾಗುವದು. ಕಾರಣ ಇದು ಯುಕ್ತವಲ್ಲ ಎಂಬ ದೀಪಿಕಾಕಾರನ ಮತವು ಯುಕ್ತವಾದದ್ದಲ್ಲ. ಹೀಗೆ “ಗೃಹ್ಯಾಗ್ನಿಸಾಗರ"ದ ಮತವಿದೆ. ಆದರೆ ಅದು ಪ್ರಶಸ್ತವಲ್ಲವೆಂದು ನನಗೆ ತೋರುತ್ತದೆ. ಯಾಕೆಂದರೆ ಖಂಡಪರ್ವವಿರುವಾಗ ಪ್ರಕೃತಿಯ ನಂತರ ಅನ್ನ ವಿಕೃತಿಗಳನ್ನು ಪ್ರತಿಪದಿಯಲ್ಲ ನುಷ್ಠಾನಮಾಡಿದರೂ ಪರ್ವದಲ್ಲಿ ಮಾಡಿದಂತೆ (ಪರ್ವದ ಅನುಗ್ರಹ ಸಮ್ಮತ)ಯೇ ಆಗುವಂತೆ ಅಖಂಡ ದರ್ಶದಲ್ಲಾದರೂ ಪ್ರತಿಪದಿಯಲ್ಲಿ ಮಾಡುವ ಆಗ್ರಯಣಕ್ಕೂ ದರ್ಶಪರ್ವದ ಅನುಗ್ರಹ ಸಮ್ಮತಿಯಾಗುವ ಸಂಭವ ಉಂಟಾಗುವದು. ಅಂದರೆ ದರ್ಶದಲ್ಲಿ ಮಾಡಿದ ಫಲವೇ ಸಿಗುವದು. ಖಂಡ ಅಮಾವಾಸ್ಯೆಯಿರುವಾಗ ಅಮಾವಾಸ್ಯೆಯ ಪರ್ವದ ವಿಧಾನದಿಂದ ಸಾರ್ಥಕವುಂಟಾಗುವದು. ಇಂತು ಸಿದ್ಧಾಂತವು. ಶ್ರಾವಣಾದಿಗಳಲ್ಲಿ ಶ್ಯಾಮಾಕಾಗ್ರಯಣ ಮಾಡಲ್ಪಡದಿದ್ದರೆ ಶರತ್ಕಾಲದಲ್ಲಿ ಹ್ಯಾಗ್ರಯಣದೊಡನೆ ಸಮಾನ ತಂತ್ರದಿಂದ ಮಾಡತಕ್ಕದ್ದು. ಆ ಸ್ಮಾರ್ತಕಾರ್ಯದಲ್ಲಿ “ಹಾಗ್ರಹಣಂ ಶ್ಯಾಮಾಶಾಗ್ರಯಣಂ ಚ ಸಮಾನ ತಂತ್ರಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ಇಂದ್ರಾಗ್ನಿ ವಿಶ್ವೇದೇವಾರ್ಥವಾಗಿ ಎಂಟು ಭತ್ತದ ಮುಷ್ಟಿಗಳನ್ನು ತಕ್ಕೊಂಡು ಬೇರೆ ಶೂರ್ಪದಲ್ಲಿ ಶ್ಯಾಮಾಕಗಳನ್ನು ಸೋಮಾಯ ಈ ಹೆಸರಿನಿಂದ ತಕ್ಕೊಂಡು ಪುನಃ ಮೊದಲಿನ ಶೂರ್ಪದಲ್ಲಿ ದ್ಯಾವಾಪೃಥಿವ್ಯರ್ಥವಾಗಿ ಪ್ರೀಹಿನಿರ್ವಾದ ಮಾಡತಕ್ಕದ್ದು. ಇದರಂತೆ ಹೋಮದಲ್ಲಿಯೂ ವಿಶ್ವೇದೇವ ಹೋಮಾಂತ್ಯದಲ್ಲಿ ಸೋಮಸಂಬಂಧವಾದ ಶ್ಯಾಮಾಕಚರುವನ್ನು ಹೋಮಿಸಿ ದ್ಯಾವಾಪೃಥಿವೀ ಹೋಮ ಮಾಡತಕ್ಕದ್ದು. ಆಶ್ವಿನ ಪೂರ್ಣಿಮೆಯಲ್ಲಿ ಅಪರಾಹ್ಲಾದಿ ಸಂಧಿ ಬಂದಲ್ಲಿ ಆಗ ಆಶ್ರಯಣಮಾಡುವ ಸಂದರ್ಭ ಬಂದಾಗ “ಆಶ್ಚಯುಜೀ ಕರ್ಮದೊಡನೆಯೂ ಸಮಾನತಂತ್ರವನ್ನು ಮಾಡತಕ್ಕದ್ದು.” ಅದಕ್ಕಾಗಿ ಹಳೇ ಅಕ್ಕಿಯ ಚರು, ಹೊಸ ಅಕ್ಕಿಯ ಚರು, ಹೊಸ ಶ್ಯಾಮಾ ಕಚರು ಇವುಗಳನ್ನು ಮೂರು ಪಾತ್ರೆಯಲ್ಲಿಡತಕ್ಕದ್ದು. ಪೂರ್ವಾಹ್ಲಾದಿ ಸಂಧಿಯಲ್ಲಾದರೆ ಸಂಧಿದಿನದಲ್ಲಿ ಪ್ರಕೃತಿಯಾಗಮಾಡಿದ ನಂತರದಲ್ಲಿ ಅಶ್ವಯುಜಿಯ ಪೂರ್ವದಿನ ಅಥವಾ ಸಂಧಿದಿನದಲ್ಲಿ ಪ್ರಕೃತಿಯಾಗಕ್ಕಿಂತ ಪೂರ್ವದಲ್ಲಿ ಆಶ್ರಯಣ ಮಾಡತಕ್ಕದ್ದು. ಇಂಥ ಸಂದರ್ಭದಲ್ಲಿ ಏಕಕಾಲತ್ವವಿಲ್ಲದಿರುವದರಿಂದ ಏಕತಂತ್ರವಾಗುವದಿಲ್ಲ. ಶ್ಯಾಮಾಕಚರು ಅಭಾವದಲ್ಲಿ (ಅಸಂಭವವಾದಲ್ಲಿ ಶ್ಯಾಮಾಕದ ಹುಲ್ಲುಗಳನ್ನು ಸೃವೆಯ ಉತ್ತರಕ್ಕೆ ಹಾಸಿ ಅದರ ಮೇಲೆ ಸೃಜೆಯನ್ನಿಟ್ಟಮಾತ್ರದಿಂದಲೇ ಶ್ಯಾಮಾಕಾಗ್ರಯಣವು ಸಿದ್ಧಿಸುವದೆಂದು"ನಾರಾಯಣ ವೃತ್ತಿಕಾರರ ಮತವು. ಯವಾಗ್ರಯಣವು “ಕೃತಕೃತಾ’ವು. ಹಾಗ್ರಯಣಕ್ಕೆ ವಸಂತ ಕಾಲ ಪರ್ಯಂತಕಾಲ ಗೌಣವು. ಯವಾಗ್ರಯಣಕ್ಕೆ ವರ್ಷಋತು ಪರ್ಯಂತ ಗೌಣಕಾಲವು ಪ್ರಥಮ ವರ್ಷದಲ್ಲಿ ಮಾಡುವ ಆಗ್ರಯಣಕ್ಕೆ ಗೌಣಕಾಲವು ಯುಕ್ತವಲ್ಲ. ಪ್ರಥಮವಾಗಿರದ ಆಗ್ರಯಣ ಮಾಡಲು ಗೌಣಕಾಲವಾದರೂ ಆಗಬಹುದು. ಇಂಥ ಗೌಣಕಾಲದಲ್ಲಿ ಮಾಡುವವನು ಕಾಲಾತಿಪತ್ತಿ ಪ್ರಾಯಶ್ಚಿತ್ತ ಪೂರ್ವಕ ಆಶ್ರಯಣ ಮಾಡತಕ್ಕದ್ದು. ಆಪತ್ತಿನ ಕಾರಣದಿಂದ ಗೌಣಕಾಲದಲ್ಲಿ ಮಾಡುವವನಿಗೆ ಪ್ರಾಯಶ್ಚಿತ್ತದ ಅವಶ್ಯಕತೆಯಿಲ್ಲ. ಗೌಣಕಾಲವೂ ಅತಿಕ್ರಾಂತವಾದರೆ ಪ್ರಾಯಶ್ಚಿತ್ತ ಮಾಡಿ ವೈಶ್ವಾನರೇಯ ನಂತರ ಅತಿಕ್ರಾಂತ ಆಗ್ರಯಣ ಮಾಡತಕ್ಕದ್ದು. ಸ್ಮಾರ್ತ ವಿಷಯದಲ್ಲಾದರೆ ವೈಶ್ವಾನರ ದೇವತಾಕವಾದ ಸ್ಥಾಲೀಪಾಕ ಗ್ರಹಣ ܘܘ ಧರ್ಮಸಿಂಧು ಮಾಡತಕ್ಕದ್ದು. ಆಹಿತಾಗ್ನಿಯಾದವನಿಗೆ ಯಾವದು “ಪುರೋಡಾಶ"ವೆನ್ನಲ್ಪಡುವದೋ ಅದೇ ಔಪಾಸನಾಗ್ನಿಕನಿಗೆ “ಚರು"ವನ್ನಲ್ಪಡುವದು. ಹೀಗೆ ವಚನವಿದೆ. ಪ್ರಥಮಾಗ್ರಯಣದಲ್ಲಿ ಶರತ್ಕಾಲವು ಅತಿಕ್ರಾಂತವಾದರ ಹಿಂದೆ ಕಳೆದ ಇಪ್ತಿ ಅಥವಾ ಆದೇವತಾಕವಾದ ಸ್ಥಾಲೀಪಾಕವನ್ನು ಮಾಡಿ ಮುಂದೆ ಬರುವ ಮುಖ್ಯಕಾಲದಲ್ಲೇ ಪ್ರಥಮಾಗ್ರಯಣ ಮಾಡತಕ್ಕದ್ದು. ಪ್ರಥಮಾಗ್ರಯಣವು ಗೌಣಕಾಲದಲ್ಲಾಗುವದಿಲ್ಲ. ಪ್ರಾರಂಭಿಸದೇ ಇರುವ ದರ್ಶ-ಪೂರ್ಣಮಾಸಗಳ ಆಶ್ರಯಣಾದಿಗಳಿಗೆ ಪ್ರಾಯಶ್ಚಿತ್ತವು ವಿಕಲ್ಪವಾಗಿರುವದರಿಂದ ಬಿಟ್ಟು ಹೋದ ಇಷ್ಟಿಯಾದರೂ ವಿಕಲ್ಪವೇ ಎನ್ನಬಹುದು. ಆಶ್ರಯಣ ವಿಧಿಯನ್ನು ಮಾಡದೇ ಹೊಸದಾದ ಫಲಪೈರುಗಳನ್ನುಪಯೋಗಿಸತಕ್ಕದ್ದಲ್ಲ. ಆಗ್ರಯಣವನ್ನು ಮಾಡದೇ ನವಾನ್ನ ಭಕ್ಷಣ ಮಾಡಿದರೆ ಆತನು ವೈಶ್ವಾನರನಿಗೆ “ಚರು ವಿಧಿಯನ್ನು ಮಾಡುವದು. ಅಥವಾ ಪೂರ್ಣಾಹುತಿಯನ್ನು ಕೊಡತಕ್ಕದ್ದು. ಅಥವಾ “ಸಮಿಂದ್ರರಾಯ” ಎಂಬ ಮಂತ್ರವನ್ನು ನೂರಾವರ್ತಿ ಜಪಿಸತಕ್ಕದ್ದೆಂದು ಉಕ್ತಿಯಿದೆ. ಆಗ್ರಯಣದ ಗೌಣಕಲ್ಪ ಪ್ರತ್ಪತ್ಯೇಕ ಆಶ್ರಯಣ ಪ್ರಯೋಗದಲ್ಲಿ ಸಾಮರ್ಥ್ಯವಿಲ್ಲದವನು ಪ್ರಕೃತೀಷ್ಟಿ ಸಮಾನತಂತ್ರ ಆಶ್ರಯಣ ಮಾಡತಕ್ಕದ್ದು. ಪೂರ್ಣಮಾಸೇಷ್ಟಿಯೊಡನೆ ಸಮಾನತಂತ್ರ ಮಾಡುವದಾದರೆ ಮೊದಲು ಆಗ್ರಯಣ ಪ್ರಧಾನ, ಆಮೇಲೆ ಪ್ರಾಕೃತ ಪ್ರಧಾನವು. ಎಷ್ಟಿಯ ಏಕತಂತ್ರತೆಯಲ್ಲಿ ಮೊದಲು ದರ್ಶಷ್ಟಿ ಪ್ರಧಾನಯಾಗ, ಮುಂದೆ ಆಗ್ರಯಣ ಪ್ರಧಾನಯಾಗರು. ಆಶ್ರಯಣ ವಿಕೃತಿ ಸಂಬದ್ಧಗಳಾದ ಉಳಿದ ಪೂರ್ವೋತ್ತರಾಂಗ ಕಾರ್ಯಗಳನ್ನು ಮಾಡತಕ್ಕದ್ದು. “ವಿರೋಧೇವಕೃತಂ ತಂತ್ರ” ಹೀಗೆ ಸಿದ್ಧಾಂತವಿದೆ. ಅಂದರೆ ಕರ್ಮವಿರೋಧವಿದ್ದರೆ ವಿಕೃತಿತಂತ್ರವನ್ನು ಮಾಡತಕ್ಕದ್ದು. ಹಾಗೇನೂ ಇಲ್ಲದಿದ್ದರೆ ನೂತನ ಶ್ಯಾಮಾಕ, ತಂಡುಲ, ಯವಗಳಿಂದ ಪುರೋಡಾಶವನ್ನು ಮಾಡಿ ದರ್ಶಪೂರ್ಣ ಮಾಸಗಳನ್ನು ಮಾಡತಕ್ಕದ್ದು. ಅಥವಾ ನೂತನ ಸ್ನೇಹಿ ಮೊದಲಾದವುಗಳಿಂದ ಅಗ್ನಿಹೋತ್ರ ಹೋಮವನ್ನು ಮಾಡತಕ್ಕದ್ದು. ಅಥವಾ ನವಾನ್ನಗಳನ್ನು ಅಗ್ನಿಹೋತ್ರದ ಗೋವಿಗೆ ತಿನ್ನಿಸಿ ಅದರ ಹಾಲಿನಿಂದ ಅಗ್ನಿ ಹೋತ್ರವನ್ನು ಹೋಮಿಸತಕ್ಕದ್ದು. ಅಥವಾ ನವಾನ್ನದಿಂದ ಬ್ರಾಹ್ಮಣ ಭೋಜನ ಮಾಡಿಸತಕ್ಕದ್ದು. ಇತ್ಯಾದಿ. ಇದನ್ನು ಮಲಮಾಸದಲ್ಲಿ ಮಾಡತಕ್ಕದ್ದಲ್ಲ. ಗುರ್ವಾಸ್ತಾದಿಗಳಲ್ಲೂ ಮಾಡಬಾರದೆಂದು ಕೆಲವರನ್ನುವರು. ಹಳೆಯ ಧಾನ್ಯವಿಲ್ಲದಿರುವಾಗ ಮಲಮಾಸಾದಿಗಳಲ್ಲಾದರೂ ಮಾಡಬಹುದು. ಪರದಿನ ವಿದ್ಧವಾದ ಈ ಪೌರ್ಣಿಮೆಯಲ್ಲಿ ಜೇಷ್ಠಪುತ್ರ ಮೊದಲಾದವರ ನೀರಾಜನಾದಿ ಕಾರ್ಯಗಳನ್ನು ಮಾಡತಕ್ಕದ್ದು. ಅಶ್ವಿನ ಕೃಷ್ಣ ಚತುರ್ಥಿಯು ಕರಕ ಚತುರ್ಥಿ, ಇದು ಚಂದ್ರೋದಯ ಗ್ರಾಹ್ಯವು. ಎರಡೂದಿನ ಚಂದ್ರೋದಯದಲ್ಲಿ ವ್ಯಾಪ್ತಿಯಿದ್ದರೆ ಅಥವಾ ಇಲ್ಲದಿದ್ದರೆ ಇತ್ಯಾದಿಗಳಲ್ಲಿ ಸಂಕಷ್ಟ ಚತುರ್ಥಿಯಂತೆಯೇ ನಿರ್ಣಯವು, ಮಥುರಾ ಮಂಡಲದ ನಿವಾಸಿಗಳು ಕೃಷ್ಣ ಅಷ್ಟಮಿಯಲ್ಲಿ “ರಾಧಾಕುಂಡ"ವೆಂಬ ತೀರ್ಥದಲ್ಲಿ ಸ್ನಾನಮಾಡತಕ್ಕದ್ದು. ಅದು ಅರುಣೋದಯ ಅಥವಾ ಸೂರ್ಯೋದಯ ವ್ಯಾಪಿನಿಯಾದದ್ದು ಗ್ರಾಹ್ಯವು, ಆಶ್ವಿನ ಕೃಷ್ಣ ದ್ವಾದಶಿಯು “ಗೋವತ್ಸ ದ್ವಾದಶಿ.” ಅದು ಪ್ರದೋಷವ್ಯಾಪಿನಿಯಾದದ್ದು ಗ್ರಾಹ್ಯವು. ಎರಡು ದಿನ ಆ ವ್ಯಾಪ್ತಿಯಿಲ್ಲದಿದ್ದರೆ ಪರವೇ ಗ್ರಾಹ್ಯವು. ಯಾಕೆಂದರೆ ಸಾಯಂಕಾಲ ಪರಿಚ್ಛೇದ - ೨ ಈ “ಗೌಣಕಾಲವಿರುತ್ತದೆ. ಎರಡೂ ಕಡೆಗಳಲ್ಲಿ ವ್ಯಾಪ್ತಿಯಿದ್ದರೆ ಪೂರ್ವವು ಗ್ರಾಹ್ಯವೆಂದು ಹಲವರ ಮತವು. ಕೆಲವರು ಪರವೇ ಗ್ರಾಹ್ಯವನ್ನುವರು. ಈ ಗೋವತ್ಸ ದ್ವಾದಶಿಯಲ್ಲಿ ಗೋವನ್ನು ಪೂಜಿಸತಕ್ಕದ್ದು. ಆಕಳು ಮತ್ತು ಕರುವು ಒಂದೇ ಬಣ್ಣದ್ದಾಗಿರಬೇಕು. ಒಳ್ಳೇ ಹಾಲು ಕೊಡುವದಾಗಿರಬೇಕು. ಅದರ ಪಾದದಲ್ಲಿ ತಾಮ್ರ ಪಾತ್ರದಿಂದ ‘ಕ್ಷೀರೋದಾರ್ಣವ ಸಂಭೂತೇ ಸುರಾಸುರ ನಮಸ್ಕೃತೇ ಸರ್ವದೇವ ಮಯೇ ಮಾತ: ಗೃಹಾಣಾರ್ಘಂ ನಮೋಸ್ತುತೇ||” ಈ ಮಂತ್ರವನ್ನು ಹೇಳಿ ಅರ್ಭ್ಯವನ್ನು ಕೊಡತಕ್ಕದ್ದು. ಆಮೇಲೆ ಉದ್ದು ಮೊದಲಾದವುಗಳಿಂದ ಮಾಡಿದ ವಡೆಯನ್ನು ಗ್ರಾಸಕೊಡತಕ್ಕದ್ದು. “ಸರ್ವದೇವಮಯೇ ದೇವಿ ಸರ್ವದೇವೈರಲಂಕೃತೇ ಮಾತರ್ಮಮಾಭಿಲಷಿತಂ ಸಫಲು ಕುರು ನಂದಿನಿ” ಹೀಗೆ ಪ್ರಾರ್ಥಿಸುವದು. ಈ ದಿನ ತೈಲಪಕ್ವ, ತಪ್ಪಲಿಯಲ್ಲಿ ಬೇಯಿಸಿದ ಅನ್ನ, ಗೋಕ್ಷೀರ, ದಧಿ, ಧೃತ, ತಕ್ರ ಇವುಗಳನ್ನು ವರ್ಜಿಸುವದು. ನಕ್ಕ ಭೋಜನ, ಮಾಷಾನ್ನ ಭೋಜನ, ಭೂಶಯನ, ಬ್ರಹ್ಮಚರ್ಯ ಇವುಗಳನ್ನಾಚರಿಸುವದು. ಇದೇ ದ್ವಾದಶಿಯನ್ನಾರಂಭಿಸಿ ಐದು ದಿನಗಳಪರ್ಯಂತ ಪೂರ್ವರಾತ್ರಿಯಲ್ಲಿ “ನಿರಾಜನವಿಧಿ” ಯನ್ನಾಚರಿಸಬೇಕೆಂದು ನಾರದ ವಾಕ್ಯವಿದೆ. ದೇವತೆಗಳು, ಬ್ರಾಹ್ಮಣರು, ಗೋವು, ಕುದುರೆ, ಜೇಷ್ಠರು, ಶ್ರೇಷ್ಠರು, ಕನಿಷ್ಠರು, ತಾಯಿ ಮೊದಲಾದ ಸ್ತ್ರೀಯರು ಇವರಿಗೆ ಆರತಿಯನ್ನು ಮಾಡತಕ್ಕದ್ದು. ಯಮದೀಪದಾನವು ತ್ರಯೋದಶಿಯಲ್ಲಿ ಅಪಮೃತ್ಯು ನಿವಾರಣೆಗಾಗಿ ಮೂರುಸಂಜೆಯಲ್ಲಿ ಮನೆಯ ಹೊರಭಾಗದಲ್ಲಿ ಯಮನ ಸಲುವಾಗಿ ದೀಪವನ್ನಿಡತಕ್ಕದ್ದು. ಈ ತ್ರಯೋದಶಿಯಿಂದ ಆರಂಭಿಸಿ ಮೂರುದಿನ ಪರ್ಯಂತ” ಗೋತ್ರಿರಾತ್ರವ್ರತ “ವನ್ನಾಚರಿಸುವರು. ಅದರ ಪ್ರಯೋಗವನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ನರಕಚತುರ್ದಶಿ ಚತುರ್ದಶಿಯಲ್ಲಿ ನರಕಕ್ಕೆ ಹೆದರಿದವರು ಈ ಆಶ್ವಿನ ಕೃಷ್ಣ ಚಂದ್ರೋದಯವ್ಯಾಪಿನಿಯಿದ್ದಾಗ ತಿಲ ತೈಲದಿಂದ ಅಭ್ಯಂಗ ಸ್ನಾನ ಮಾಡತಕ್ಕದ್ದು, ಈ ವಿಷಯದಲ್ಲಿ ರಾತ್ರಿಯ ಅಂತ್ಯಯಾಮವನ್ನಾರಂಭಿಸಿ ಅರುಣೋದಯ ವರೆಗಿನ ಕಾಲವು “ಕನಿಷ್ಠ"ವು. ಮುಂದೆ ಚಂದ್ರೋದಯಾವಧಿವರೆಗಿನ ಕಾಲವು ಮಧ್ಯಮ"ವು, ನಂತರ ಸೂರ್ಯೋದಯದ ವರೆಗಿನ ಕಾಲವು “ಉತ್ತಮ"ವು, ಚಂದ್ರೋದಯದ ನಂತರ ಸೂರ್ಯೋದಯವಾಗುವವರೆಗಿನ ಕಾಲದಲ್ಲಿ ಅಭ್ಯಂಗವು ಪ್ರಶಸ್ತವು, ಅದು ಮುಖ್ಯವು. ಪ್ರಾತಃಕಾಲವು ಗೌಣವು. ಪೂರ್ವದಿನದಲ್ಲಿ ಚಂದ್ರೋದಯ ವ್ಯಾಪ್ತಿಯಿದ್ದರೆ ಅದೇ ಗ್ರಾಹ್ಯವು, ಪರದಿನದಲ್ಲಿ ವ್ಯಾಪ್ತಿಯಿದ್ದರೆ ಪರವು ಗ್ರಾಹ್ಯವು, ಆ ದಿನ ಚತುರ್ದಶಿಯಿಲ್ಲದಿದ್ದರೂ (ಚಂದ್ರೋದಯವ್ಯಾಪ್ತಿಯಿದ್ದರಾಯಿತು) ಅಮಯಾದಿ ಕಾಲದಲ್ಲಿ ಹೇಳಿದ ಉಲ್ಯಾದಾನ, ದೀಪದಾನಾದಿಗಳನ್ನು ಮಾಡತಕ್ಕದ್ದು. ಎರಡೂದಿನ ಚಂದ್ರೋದಯವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಮವು. ಎರಡೂದಿನ ಚಂದ್ರೋದಯ ವ್ಯಾಪ್ತಿಯಿಲ್ಲದಾಗ ಮೂರು ಪಕ್ಷಗಳಾಗುತ್ತವೆ. ಚತುರ್ದಶಿಯು ಪೂರ್ವದಿನ ಚಂದ್ರೋದಯಾನಂತರ ಉಷಃಕಾಲ ಅಥವಾ ಸೂರ್ಯೋದಯದಿಂದಾರಂಭಿಸಿ ಪರದಿನ ೧೨೨ ಧರ್ಮಸಿಂಧು ಚಂದ್ರೋದಯಕ್ಕಿಂತ ಪೂರ್ವದಲ್ಲಿ ಸಮಾಪ್ತವಾಗುವದು ಇನ್ನೊಂದು ಪಕ್ಷ, ಹೇಗೆಂದರೆ - ತ್ರಯೋದಶೀ ಘಟಿ ೫೮೫೦ ಚತುರ್ದಶೀ ೫೭೧೦. ಆಗ ಚತುರ್ದಶೀ ಯುಕ್ತವಾದ ಉಷಃ ಕಾಲದ ಅಲ್ಪಭಾಗದಲ್ಲಿ ಅಭ್ಯಂಗಸ್ನಾನ ಮಾಡತಕ್ಕದ್ದು. ಪೂರ್ವದಿನ ಸೂರ್ಯೋದಯ ಮಾತ್ರವನ್ನು ವ್ಯಾಪಿಸಿ ಸುರುವಾದ ಚತುರ್ದಶಿಯು ವರದಿನ ಚಂದ್ರದಯಕ್ಕಿಂತ ಮೊದಲು ಸಮಾಪ್ತವಾಗುವದು. ಇದೊಂದು ಪಕ್ಷ. ಇನ್ನು ಸೂರ್ಯೋದಯ ಸ್ಪರ್ಶವಿಲ್ಲದೆ ಕ್ಷಯವಾದರೆ; ಇದೂ ಒಂದು ಪಕ್ಷ. ಇವು ಹೇಗೆಂದರೆ ತ್ರಯೋದಶೀ ೫೯೦೫೯೦ ಚತುರ್ದಶೀ ೫೭೦ ಇದೊಂದು, ತ್ರಯೋದಶೀ ೨೫೦ ಅದೇ ದಿನ ಉಪರಿ ಚತುರ್ದಶೀ ೫೪೦ ಈ ಎರಡೂ ಪಕ್ಷಗಳಲ್ಲಿ ಮುಂದಿನ ಚಂದ್ರೋದಯದಲ್ಲಿ ಅಭ್ಯಂಗವು, ಯಾಕೆಂದರೆ ಆಗ ಚತುರ್ಥಯಾಮಾದಿ ಕನಿಷ್ಠ (ಗೌಣ) ಕಾಲದಲ್ಲಿ ಚತುರ್ದಶೀ ಇರುವದು. ಈ ಎರಡೂ ಪಕ್ಷಗಳಲ್ಲಿ ಕೆಲವರು ಅರುಣೋದಯಕ್ಕಿಂತ ಮೊದಲು ಆದರೂ ಚತುರ್ದಶೀ ಮಧ್ಯದಲ್ಲೇ ಸ್ನಾನಮಾಡತಕ್ಕದ್ದೆನ್ನುವರು. ಇನ್ನು ಕೆಲವರು * ಅರುಣೋದಯಕ್ಕಿಂತ ಮುಂದೆ ಚಂದ್ರೋದಯಾದಿ ಕಾಲದಲ್ಲಿ ಅಮಾಯುಕ್ತವಾದರೂ ಸ್ನಾನಮಾಡತಕ್ಕದ್ದೆನ್ನುವರು. ಇನ್ನು ಚತುರ್ದಶಿಯು ಕ್ಷಯವಾದಾಗ ಹಿಂದಿನ ದಿನವಾದ ತ್ರಯೋದಶಿಯಲ್ಲೇ ಸ್ನಾನಮಾಡತಕ್ಕದ್ದೆಂದು ಕೆಲವರು ಹೇಳುವರು. ಇದು ಯುಕ್ತವಲ್ಲ. ಈ ಅಭ್ಯಂಗಸ್ನಾನದಲ್ಲಿ ವಿಶೇಷವೇನಂದರೆ “ಸೀತಾರೋ ಸಮಾಯುಕ್ತ ಸಕಂಟಕದಲಾತ ಹರಪಾಪಮಪಾಮಾರ್ಗ ಭ್ರಾಮ್ಯಮಾಣಃ ಪುನಃ ಪುನಃ||” ಈ ಮಂತ್ರದಿಂದ ನೇಲಿನಿಂದ ಉದ್ಭತವಾದ ಮಣ್ಣಿನಿಂದ ಕೂಡಿದ ಉತ್ತರಣಿ, ಕರೇ ಕುಂಬಳ, ತಗಟೆಗಿಡ ಇವುಗಳ ಶಾಖೆಗಳನ್ನು ಸ್ನಾನಮಧ್ಯದಲ್ಲಿ ಮೂರಾವರ್ತಿ ದೇಹಕ್ಕೆ ಸುಳಿದುಕೊಂಡು ಅಭ್ಯಂಗಸ್ನಾನ ಮಾಡಿದ ನಂತರ ತಿಲಕಾದಿಗಳನ್ನಿಟ್ಟುಕೊಂಡು ನಂತರ ಕಾರ್ತಿಕಸ್ನಾನ ಮಾಡುವದು. ಹೇಳಿದ ಕಾಲದಲ್ಲಿ ಸ್ನಾನಮಾಡಲು ಸಾಧ್ಯವಾಗದಿದ್ದರೆ ಸೂರ್ಯೋದಯಾನಂತರವಾದ ಗೌಣಕಾಲದಲ್ಲಿಯಾದರೂ ಮಾಡತಕ್ಕದ್ದು. ಇದರಲ್ಲಿ ಯತಿಮೊದಲಾದವರೂ ಅಭ್ಯಂಗಸ್ನಾನ ಮಾಡತಕ್ಕದ್ದು. ಎಲ್ಲರಿಗೂ ಇದು ಅವಶ್ಯಕವು. ಕಾರ್ತಿಕ ಸ್ನಾನಾಂತರದಲ್ಲಿ ಯಮ ತರ್ಪಣ ವನ್ನು ಹೇಳಿದೆ. ಅದು ಹೇಗಂದರ “ಯಮಾಯನಮಃ ಯಮಂತರ್ಪಯಾಮಿ.” ಹೀಗೆ ಹೇಳಿ ತಿಲಮಿಶ್ರಗಳಾದ ಮೂರು ಜಲಾಂಜಲಿಗಳಿಂದ ಸವ್ಯ ಅಥವಾ ಅಪಸವ್ಯದಿಂದ ದೇವತೀರ್ಥ ಅಥವಾ ಪಿತೃತೀರ್ಥದಿಂದ ದಕ್ಷಿಣಾಭಿಮುಖವಾಗಿ ತರ್ಪಣವನ್ನು ಕೊಡತಕ್ಕದ್ದು. ಹೀಗೆಯೇ ಮುಂದೆ “ಧರ್ಮರಾಜಾಯನಮ: ಧರ್ಮರಾಜಂತರ್ಪಯಾಮಿ||೨|| ಮೃತ್ಯವೇನದು: ಮೃತ್ಯುಂತರ್ಪಯಾಮಿ ||೩|| ಅಂತಕಾಯನಮ: ಅಂತರಂ ತರ್ಪಯಾಮಿ||೪||ವೈವಸ್ವತಾಯನಮ: ವ್ಯವಸ್ವತಂ ತರ್ಪಯಾಮಿ||೫|| ಕಾಲಾಯನಮ: ಕಾಲಂ ತರ್ಪಯಾಮಿ ||೬|| ಸರ್ವಭೂತಕ್ಷಯಾಯನಮುಃ ಸರ್ವಭೂತಕ್ಷಯಂ ತರ್ಪಯಾಮಿ||೭|| ಔದುಂಬರಾಯನನು: ಔದುಂಬರಂತರ್ಪಯಾಮಿ||೮|| ದಧ್ಯಾಯನಮ: ದಂತರ್ಪಯಾಮಿ|||| ನೀಲಾಯನಮ: ನೀಲಂತರ್ಪಯಾಮಿ ||೧೦|| ಪರಮನೇನಮಃ ಪರಮ ಪ್ರಕೋದರಾಯನಮ: ವೃಕೋದರು ತರ್ಪಯಾಮಿ||೧೨|| ಚಿತ್ರಾಯನಮ:ಚಿತ್ರಂ ತರ್ಪಯಾಮಿ||೧೩|| ಚಿತ್ರಗುಪ್ತಾಯ ನಮಃ ಚಿತ್ರಗು: ತರ್ಪಯಾಮಿ||೧೪|| ತಂದೆಯಿರುವವನು ಯವೆಯಿಂದ ಹಾಗೂ ನಂತರ್ಪಯಾಮಿ|೧oll ಪರಿಚ್ಛೇದ - ೨ ದೇವತೀರ್ಥದಿಂದ ಸವ್ಯವಾಗಿ ತರ್ಪಣಮಾಡುವದು. ಇತ್ಯಾದಿ. ಈ ದಿನ ಪ್ರದೋಷಕಾಲದಲ್ಲಿ ದೇವಾಲಯ, ಮಠ, ಪ್ರಾಕಾರ, ಉದ್ಯಾನ ಮೊದಲಾದವುಗಳಲ್ಲಿ ಮನೋಹರವಾಗುವಂತೆ ದೀಪಗಳನ್ನು ಹಚ್ಚುವದು. ಅದರಂತೆ ಗೋಶಾಲೆ, ಅಶ್ವಶಾಲೆ, ಗಜಶಾಲೆ ಮೊದಲಾಗವುಗಳಲ್ಲೂ ದೀಪಾಲಂಕಾರವನ್ನು ಮಾಡತಕ್ಕದ್ದು. ಹೀಗೆ ಮೂರುದಿನ ಮಾಡತಕ್ಕದ್ದು. ಸೂರ್ಯನು ತುಲಾರಾಶಿಯಲ್ಲಿರುವಾಗ ಚತುರ್ದಶೀ ಅಮಾವಾಸ್ಯೆಗಳ ಪ್ರದೋಷಕಾಲದಲ್ಲಿ ಉತ್ಸಾಹಸ್ತರಾಗಿ (ಕೊಳ್ಳಿದೀಪವನ್ನು ಹಿಡಿದು) “ಅಗ್ನಿದಗ್ಲಾಶ್ಚಯೇಜೀವಾ ಯೇಪ್ಯದಾ: ಕುಲೇಮಮ ಉಜ್ವಲಜ್ಯೋತಿಷಾವರ್ತ ಪ್ರಪಶ್ಯಂತು ವ್ರಜಂತು ತೇ|| ಯಮಲೋಕಂ ಪರಿತ್ಯಜ್ಯ ಆಗತಾಯ ಮಹಾಲಯ ಉಜ್ವಲಜ್ಯೋತಿಷಾದಾ ಯಾಂತು ಪರಮಾಂಗತಿಂ” ಹೀಗೆ ಹೇಳಿ ಪಿತೃಗಳಿಗೆ ಮಾರ್ಗದರ್ಶನ ಮಾಡುವದು. ಇದರಲ್ಲಿ ನಕ್ತಭೋಜನವು ವಿಶೇಷ ಫಲದಾಯಕವಾದದ್ದು. ಆಶ್ವಿನ ಅಮಾವಾಸ್ಯೆಯಲ್ಲಿ ಬೆಳಿಗ್ಗೆ ಅಭ್ಯಂಗಸ್ನಾನ, ಪ್ರದೋಷಕಾಲದಲ್ಲಿ ದೀಪರಾಧನೆ, ಲಕ್ಷ್ಮೀಪೂಜೆ ಮೊದಲಾದ ಕೃತ್ಯಗಳನ್ನು ಮಾಡತಕ್ಕದ್ದು. ಇದರಲ್ಲಿ ಸೂರ್ಯೋದಯದಿಂದ ಪ್ರಾರಂಭಿಸಿದ ಅಮಾವಾಸ್ಯೆಯು ಸೂರ್ಯಾಸ್ತಾನಂತರ ಘಟೀಕಾಲಾದಿ ವ್ಯಾಪ್ತವಾದಲ್ಲಿ ನಿರ್ಣಯಕ್ಕೆ ಸಂದೇಹವೇ ಇಲ್ಲ. ಪ್ರಾತಃಕಾಲದಲ್ಲಿ ಅಭ್ಯಂಗ, ದೇವಪೂಜಾದಿಗಳನ್ನು ಮಾಡಿ ಅಪರಾಹ್ನದಲ್ಲಿ ಪಾರ್ವಣಶ್ರಾದ್ಧ, ಪ್ರದೋಷಕಾಲದಲ್ಲಿ-ದೀಪ ಆರಾಧನ, ಉಲ್ಕಾಪ್ರದರ್ಶನ, ಲಕ್ಷ್ಮೀಪೂಜಾ ಇತ್ಯಾದಿಗಳನ್ನು ಮಾಡಿ ಭೋಜನ ಮಾಡತಕ್ಕದ್ದು. ಈ ಅಮಾವಾಸ್ಯೆಯಲ್ಲಿ ಬಾಲವೃದ್ಧಾದಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ಭೋಜನ ಮಾಡಬಾರದು. ರಾತ್ರಿಯಲ್ಲಿಯೇ ಭೋಜನ ಮಾಡತಕ್ಕದ್ದೆಂಬ ವಿಶೇಷ ವಚನವಿದೆ. ಹಾಗೆಯೇ ಪರದಿನದಲ್ಲಿ ಅಥವಾ ಎರಡು ದಿನಗಳಲ್ಲಿ ಪ್ರದೋಷವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು. ಮೊದಲನೇದಿನದಲ್ಲಿಯೇ ಪ್ರದೋಷವ್ಯಾಪ್ತಿಯಿದ್ದರೆ ಲಕ್ಷ್ಮೀಪೂಜಾದಿಗಳಿಗೆ ಪೂರ್ವವು ಗ್ರಾಹ್ಮವು, ಅಭ್ಯಂಗಸ್ನಾನಾದಿಗಳಿಗೆ ಪರವು ಗ್ರಾಹ್ಯವು ಎರಡು ಕಡೆಗಳಲ್ಲಿ ಪ್ರದೋಷವ್ಯಾಪ್ತಿಯಿಲ್ಲದಿದ್ದರೂ ಹೀಗೆಯೇ ತಿಳಿಯತಕ್ಕದ್ದು. ಪುರುಷಾರ್ಥಚಿಂತಾಮಣಿಯಲ್ಲಿ ಪೂರ್ವದಿನದಲ್ಲಿಯೇ ಪ್ರದೋಷವ್ಯಾಪ್ತಿಯಿದ್ದು ಮುಂದಿನ ದಿನ ಮೂರು ಯಾಮಕ್ಕಿಂತ ಹೆಚ್ಚಾಗಿ ಅಮಾವಾಸ್ಯೆಯಿದ್ದು ಆ ಅಮಾವಾಸ್ಯೆಗಿಂತ ಮುಂದೆ ಪ್ರತಿಪದೆಯು ವೃದ್ಧಿಯಾಗಿದ್ದರೆ ಲಕ್ಷ್ಮೀಪೂಜಾದಿಗಳನ್ನೂ ಪರದಲ್ಲಿಯೇ ಮಾಡತಕ್ಕದ್ದೆಂದು ಹೇಳಿದೆ. ಈ ಮತದಂತೆ ಎರಡೂ ದಿನ ಪ್ರದೋಷ ವ್ಯಾಪ್ತಿಯಿದ್ದಲ್ಲಿಯೂ ಮುಂದಿನ ದಿನ ಯಾಮತ್ರಯಕ್ಕಿಂತ ಹೆಚ್ಚಾಗಿ ಅಮಾವಾಸ್ಯೆಯಿರುವದರಿಂದ “ಪರವೇ ಯುಕ್ತ"ವೆಂದು ತೋರುತ್ತದೆ. ಚತುರ್ದಶ್ಯಾದಿ ಮೂರು ದಿನಗಳಿಗೆ “ದೀಪಾವಳಿ” ಎಂಬ ಸಂಜ್ಞೆಯಿದೆ. ಈ ಮೂರು ದಿನಗಳೊಳಗೆ ಸ್ವಾತಿಯುಕ್ತವಾದ ದಿನಕ್ಕೆ ವಿಶೇಷ ಪ್ರಾಶಸ್ತ್ರವಿದೆ. ಈ ದಿನದಲ್ಲಿಯೇ ಮಧ್ಯರಾತ್ರಿಯ ನಂತರ ನಗರಸ್ತ್ರೀಯರು ತಮ್ಮ ಅಂಗಳದಿಂದ “ಅಲಕ್ಷ್ಮೀಯನ್ನು ಹೊರಹಾಕತಕ್ಕದ್ದು. (ಕಸಬರಿಗೆ, ಕಸದರಾಶಿ ಮೊದಲಾದ ಅಮಂಗಲಕರ ವಸ್ತುಗಳನ್ನು ಹೊರಹಾಕುವದು) ಇಲ್ಲಿಗೆ ಆಶ್ವಿನ ಮಾಸದ ಕೃತ್ಯೋದ್ದೇಶವು ಮುಗಿಯಿತು. ಕಾರ್ತಿಕಮಾಸ ಕೃತ್ಯಗಳು ವೃಶ್ಚಿಕ ಸಂಕ್ರಾಂತಿ- ಇದರಲ್ಲಿ ಹಿಂದೆ ಹದಿನಾರು ಘಟಿಗಳು ಪುಣ್ಯಕಾಲವು. ಉಳಿದ ೧೨೪ ಧರ್ಮಸಿಂಧು ವಿಷಯ ಹಿಂದೆ ಬರೆದಂತೆ. ಕಾರ್ತಿಕ ಶುಕ್ಲ ಪ್ರತಿಪದೆಯಲ್ಲಿ “ಅಭ್ಯಂಗವು ಆವಶ್ಯಕವು. ಅರಿತೂ ಆಶ್ವಿನ ಬಹುಳ ಚತುರ್ದಶಿಯಿಂದ ಮೂರು ದಿನಗಳಲ್ಲಿ ಅಭ್ಯಂಗಾದಿ ಕೃತ್ಯಗಳನ್ನು ಆಚರಿಸದಿದ್ದರೆ ನರಕಪ್ರಾಪ್ತಿ ಮೊದಲಾದ ದೋಷಗಳನ್ನು ಹೇಳಿದೆ. ಆಚರಿಸಿದಲ್ಲಿ ಐಶ್ವರ್ಯ ಪ್ರಾಪ್ತಿ, ದಾರಿದ್ರ ನಿವಾರಣೆ ಮೊದಲಾದ ಶುಭ ಫಲಗಳನ್ನು ಹೇಳಿದೆ. ಆದ್ದರಿಂದ ಈ ತ್ರಿದಿನಾತ್ಮಕವಾದ ದೀಪಾವಳಿ” ನಿತ್ಯವೂ ಹಾಗು ಕಾವ್ಯವೂ ಆಗಿದೆ. ಈ ಪ್ರತಿಪದೆಯಲ್ಲಿ ಬಲಿಪೂಜೆ, ದೀಪೋತ್ಸವ, ಗೋಕ್ರೀಡೆ, ಗೋವರ್ಧನ ಪೂಜೆ, ಮಾರ್ಗವಾಲೀ ಬಂಧನ, ವಷ್ಟಿ ಕಾಕರ್ಷಣ, (ಹಗ್ಗವನ್ನು ಜಗ್ಗುವದು) ನವವಾದಿಧಾರಣ, ನಾರೀಕರ್ತೃಕನಿರಾಜನ, ಮಂಗಲಮಾಲಿಕಾ ಮೊದಲಾದ ಕೃತ್ಯಗಳನ್ನು ಹೇಳಿದೆ. ಈ ಪ್ರತಿಪದೆಯು ಸೂರ್ಯೋದಯದಿಂದ ಮುಂದೆ ಹತ್ತುಮುಹೂರ್ತ (೨೦ ಘಟ) ಮುಂದರಿದಲ್ಲಿ ಆಗ ಚಂದ್ರದರ್ಶನವಾಗುವದಿಲ್ಲವಾದ್ದರಿಂದ ಚಂದ್ರದರ್ಶನಯುಕ್ತ ದ್ವಿತೀಯಾ ವೇಧನಿಷೇಧ ಪ್ರಸಕ್ತಿಯುಂಟಾಗುವದಿಲ್ಲ. ಆದಕಾರಣ ಎಲ್ಲ ಕಾರ್ಯಗಳನ್ನೂ ಪರವಾದ ಪ್ರತಿಪದೆಯಲ್ಲೇ ಮಾಡತಕ್ಕದ್ದು. ಹಿಂದೆ “ಇಷ್ಟಿ"ಯ ಪ್ರಕರಣದಲ್ಲಿ ಮೂರು ಮುಹೂರ್ತ ದ್ವಿತೀಯಾ ಪ್ರವೇಶಮಾತ್ರದಿಂದ “ಚಂದ್ರದರ್ಶನ"ವಾಗುವದೆಂದು ಹೇಳಿದೆ. ಅದು ಸೂಕ್ಷ್ಮದರ್ಶನದ ಅಭಿಪ್ರಾಯದಿಂದ ಹೇಳಿದ್ದು. ಇಲ್ಲಿ ಸ್ಕೂಲದರ್ಶನವೇ ನಿಷೇಧಕಾರಣವು. ಆದುದರಿಂದ ಚಂದ್ರದರ್ಶನವು ಆರುಮುಹೂರ್ತ ದ್ವಿತೀಯಾ ಪ್ರವೇಶವಾದರೆ ಆಗುತ್ತದೆ. ಆದ್ದರಿಂದ ವಿರೋಧವಿಲ್ಲವೆಂದು ತೋರುತ್ತದೆ. ಸೂರ್ಯೋದಯದಿಂದ ಮುಂದೆ ಒಂಭತ್ತು ಮುಹೂರ್ತವಿಲ್ಲದಿದ್ದರೆ (ಎಂಟೇ ಮುಹೂರ್ತವಿದ್ದರೆ) ಆಗ ಬಲಿಪೂಜಾ, ಗೋಕ್ರೀಡಾ, ಗೋವರ್ಧನ ಪೂಜಾ, ಮಾರ್ಗವಾಲೀಬಂಧನ, ವಷ್ಟಿಕಾಕರ್ಷಣ ಇವುಗಳನ್ನು ಪೂರ್ವವಿದ್ದವಾದ ಇಂಥ ಪ್ರತಿಪದೆಯಲ್ಲಿ ಮಾಡತಕ್ಕದ್ದು. ಅಭ್ಯಂಗ, ನವವಸ್ತ್ರಧಾರಣ, ದೂತ, ನಾರಿಕರ್ತೃಕನಿರಾಜನ, ಮಂಗಲಮಾಲಿಕಾದಿಗಳನ್ನು ಉದಯದಿಂದ ಮುಂದೆ ಮುಹೂರ್ತ ಮಾತ್ರವಿದ್ದರೂ ಅದೇ ಪ್ರತಿಪದೆಯಲ್ಲಿ ಮಾಡತಕ್ಕದ್ದು. ಬಲಿಪೂಜಾದಿಗಳಿಗೆ ಯಾವದಾದರೊಂದು ನಿಮಿತ್ತದಿಂದ ತೊಂದರೆಯಾದಲ್ಲಿ ಪರವಿದ್ದ ಪ್ರತಿಪದೆಯಲ್ಲಾದರೂ ಆಚರಿಸತಕ್ಕದ್ದು; ಹೊರತು ಕರ್ಮತ್ಯಾಗಮಾಡತಕ್ಕದ್ದಲ್ಲ. ಆಗ ಬೇರೆ ತಿಥಿಯಾದರೂ ಚಿಂತೆಯಿಲ್ಲ. ಅಗತ್ಯವಾದ ಕರ್ಮಗಳನ್ನು ತ್ಯಾಗಮಾಡತಕ್ಕದ್ದಲ್ಲ. ಹೇಗೆಂದರೆ ಬೌಧಾಯನಾದಿಯವರೆಗೆ ತಮ್ಮ ಸೂತ್ರೋಕ್ತವಾಗಿ ಆಚರಿಸಲು ಅಡ್ಡಿಯಾದಾಗ ಆಪಸ್ತಂಬಾದಿ ಸೂತ್ರಾಂತರೋಕ್ತವಾಗಿ ಅನುಷ್ಠಾನಮಾಡಲು ಹೇಳಿದೆ. ಅಂತೂ ಕರ್ಮಲೋಪವಾಗಕೂಡದು. ಶಾಖಾಂತರ ಸ್ವೀಕಾರವಾದರೂ ಅಡ್ಡಿ ಇಲ್ಲ. ಎಂದು “ಕಾಲಮಾಧವ"ದಲ್ಲಿ ಉಕ್ತಿಯಿದೆ. ಈ ಬಲಿಪಾಡ್ಯದಲ್ಲಿ ರಾಜನು ಪಂಚರಂಗಿ ಹಿಟ್ಟಿನಿಂದ ಎರಡು ಭುಜಗಳುಳ್ಳ ಬಲಿಚಕ್ರವರ್ತಿಯ ಪ್ರತಿಮೆಮಾಡಿ ಪೂಜಿಸತಕ್ಕದ್ದು, ಇತರ ಜನರು ಬಿಳೇ ಅಕ್ಕಿಗಳಿಂದ ಆಕೃತಿಮಾಡಿ ಪೂಜಿಸತಕ್ಕದ್ದು, ಇದಕ್ಕೆ “ಬಲಿರಾಜ ನಮಸ್ತುಂ ವಿರೋಚನಸುತಪ್ರಭೋಭವಿಷ್ಟೇಂದ್ರ ಸುರಾರಾತೇ ಪೂಜೇಯಂ ಪ್ರತಿಗೃಹ್ಯತಾಂ” ಹೀಗೆ ಪೂಜಾಮಂತ್ರವು. ಈ ಬಲಿಚಕ್ರವರ್ತಿಯ ಸಲುವಾಗಿ ಏನಾದರೂ ಸ್ವಲ್ಪ ದಾನಾದಿಗಳನ್ನು ಮಾಡಿದರೂ ಅದು ಅಕ್ಷಯವಾಗಿ ವಿಷ್ಣು ಪ್ರೀತಿಕರವಾಗುವದು. ಈ ದಿನದಲ್ಲಿ ಯಾವು ಯಾವಯಾವ ಭಾವನೆಯಿಂದಿರುವನೋ ಅಂದರೆ ಹರ್ಷಿತ ಅಥವಾ ಪರಿಚ್ಛೇದ - ೨ ೧೨೫ ದುಃಖಿತನಾಗಿರುವನೋ ಆತನು ಇಡೀವರ್ಷವೂ ಅದೇ ರೀತಿಯಿಂದಿರುವನು. ಆದುದರಿಂದ ಸಕಲರೂ ಈ ದಿನ ಪ್ರಭಾತಕಾಲದಲ್ಲಿ ಪಗಡೆ ಆಟವನ್ನಾಡತಕ್ಕದ್ದು. ಈ ದೂತದಲ್ಲಿ ಯಾವನಿಗೆ ಜಯವಾಗುವದೋ ಅವನಿಗೆ ಇಡೀ ಸಂವತ್ಸರದಲ್ಲೂ ಜಯವು ಲಭಿಸುವದು. ಶ್ರೇಷ್ಠ ಬ್ರಾಹ್ಮಣಸಹಿತರಾಗಿ ವಿಶೇಷ ಮೃಷ್ಟಾನ್ನದಿಂದ ಭೋಜನಮಾಡತಕ್ಕದ್ದು. ಈ ಬಲಿರಾಜ್ಯದ ಸಮಯದಲ್ಲಿ ದೀಪೋತ್ಸವ ಮಾಡುವದರಿಂದ ಯಾವಾಗಲೂ ಸಂಪತ್ತು ಸ್ಥಿರವಾಗುವದು. ಈ ದಿನಗಳಲ್ಲಿ ದೀಪಗಳಿಂದ ನಿರಾಜನ ಮಾಡುವಕಾರಣದಿಂದ ಇದಕ್ಕೆ “ದೀಪಾವಲಿ” (ದಿವಾಲಿ) ಎನ್ನುವರು. ಪುರಾಣದಲ್ಲಿ ಈ ದಿನ ದೀಪಗಳಿಂದ ಉತ್ಸವಮಾಡದಿದ್ದರೆ ಅವನ ಮನೆಯಲ್ಲಿ ದೀಪವು ಹೇಗೆ ಉಳಿದೀತು? (ಕುಟುಂಬದ ಉದ್ಧಾರವು ಹೇಗೆ ಆದೀತು?) ಎಂಬ ಉಕ್ತಿಯಿದೆ. ಇದರಲ್ಲಿ ಲಕ್ಷ್ಮೀಪೂಜೆ ಹಾಗೂ ಕುಬೇರಪೂಜೆಯನ್ನು ಹೇಳಿದೆ. ಮತ್ತು “ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾಗಿ ಘತಂದಹತಿಯಜ್ಞಾರ್ಥ ಮಮ ಪಾಪಂ ವ್ಯಪೋಹತು|| ಅಗ್ರತಃ ಸಂತುಮಗಾವೋ ಗಾವೋ ಸಂತುಷ್ಠತ: ಗಾವೋಮೇ ಹೃದಯೇ ಸಂತು ಗವಾಂಮಧ್ಯೆ ವಸಾಮ್ಯಹಂ||” ಈ ಮಂತ್ರಗಳನ್ನು ಹೇಳಿ ಸವತ್ಸ ಗೋವು ಹಾಗೂ ಎತ್ತುಗಳನ್ನು ಪೂಜಿಸತಕ್ಕದ್ದು, ಮತ್ತು ಅಲಂಕಾರ ಮಾಡತಕ್ಕದ್ದು. ಈ ದಿನ ಹಾಲನ್ನು ಕರೆಯಬಾರದು. ಭಾರವನ್ನು ಹೊರಿಸಲಾಗದು. ಗೋವರ್ಧನ ಪೂಜೆಯು “ಗೋವರ್ಧನ” ಪರ್ವತದ ಸಮೀಪದಲ್ಲಿರುವವರು ಅದನ್ನೇ ಪೂಜಿಸತಕ್ಕದ್ದು. ಬೇರೆಕಡೆಯಲ್ಲಿರುವವರು ಗೋಮಯ ಅಥವಾ ಅನ್ನದರಾಶಿಯಿಂದ ಗೋವರ್ಧನವನ್ನು ನಿರ್ಮಿಸಿ ಅದರೊಡನೆ ಗೋಪಾಲ ಪೂಜೆಯನ್ನೂ ಮಾಡತಕ್ಕದ್ದು. “ಶ್ರೀ ಕೃಷ್ಣ ಪ್ರೀತ್ಯರ್ಥಂ ಗೋವರ್ಧನ ಪೂಜನ ಗೋಪಾಲ ಪೂಜನಾತ್ಮಕಂ ಮಹೋತ್ಸವಂ ಕರಿಷ್ಯ ಹೀಗೆ ಸಂಕಲ್ಪಿಸಿ “ಬಲಿರಾಜೋ ದ್ವಾರವಾಲೋ ಭವಾನದ ಭವಪ್ರಭೋ! ನಿಜವಾಕ್ಯಾರ್ಥನಾರ್ಥಾಯ ಸಗೋವರ್ಧನ ಗೋಪತೇ||” ಈ ಮಂತ್ರದಿಂದ ಗೋವರ್ಧನವನ್ನೂ ಗೋಪಾಲನನ್ನೂ ಆವಾಹಿಸಿ ಸ್ಥಾಪಿಸುವದು. ನಂತರ “ಗೋಪಾಲಮೂರ್ತ ವಿಶ್ವೇಶ ಶಕ್ರೋತ್ಸವ ವಿಭೇದಕ ಗೋವರ್ಧನ ಕೃತಚ್ಛತ್ರ ಪೂಜಾಂಮೇ ಹರಗೋಪತೇ।। ಗೋವರ್ಧನ ಧರಾಧಾರ ಗೋಕುಲತ್ರಾಣ ಕಾರಕ ವಿಷ್ಣು ಬಾಹು ಕೃತಚ್ಛಾಯ ಗವಾಂಕೋಟಿ ಪ್ರದೋಭವ” ಈ ಮಂತ್ರಗಳಿಂದ ಗೋಪಾಲ-ಗೋವರ್ಧನರನ್ನು ಷೋಡಶೋಪಚಾರಗಳಿಂದ ಪೂಜಿಸತಕ್ಕದ್ದು. ಮತ್ತು ತನ್ನ ಐಶ್ವರ್ಯಕ್ಕೆ ಸರಿಯಾಗಿ ಮಹಾನೈವೇದ್ಯವನ್ನು ಮಾಡತಕ್ಕದ್ದು. ಅದರ ಅಂಗವಾಗಿ ಪ್ರತ್ಯಕ್ಷಧೇನು ಅಥವಾ ಮಣ್ಣಿನ ಧೇನುವಿನಲ್ಲಿ ಪೂರ್ವೋಕ್ತ ಮಂತ್ರಗಳಿಂದ ಗೋಪೂಜೆಯನ್ನು ಮಾಡಿ “ಆಗಾವೋ ಆತ್ಮನ್” “ತೇವದಂತು” ಈ ಋಕ್ಕುಗಳಿಂದ ಗೃಹಸಿದ್ಧವಾದ ಚರುಹೋಮವನ್ನು ಮಾಡತಕ್ಕದ್ದು. ಬ್ರಾಹ್ಮಣರಿಗೆ ಅನ್ನದಾನ, ಗೋದಾನಗಳನ್ನು ಕೊಡತಕ್ಕದ್ದು. -ಗೋವುಗಳಿಗೆ ತೃಣದಾನ ಮಾಡತಕ್ಕದ್ದು, ಪರ್ವತಕ್ಕೆ ಬಲಿದಾನ ಮಾಡತಕ್ಕದ್ದು. ಆಮೇಲೆ ಸಪರಿವಾರ ಗೋವುಗಳಿಂದ ಕೂಡಿ ಗೋವು ಬ್ರಾಹ್ಮಣರು, ಹೋಮಾಗ್ನಿ, ಪರ್ವತ ಇವುಗಳನ್ನು ಪ್ರದಕ್ಷಿಣ ಮಾಡತಕ್ಕದ್ದು. ಅಪರಾಹ್ನದಲ್ಲಿ “ಮಾರ್ಗಪಾಲೀ ಬಂಧನ"ವನ್ನು ಮಾಡತಕ್ಕದ್ದು. ಮಾರ್ಗಪಾಲೀ ಬ೦ಧನವೆಂದರೆ ಪೂರ್ವದಿಕ್ಕಿನಲ್ಲಿ ದರ್ಭ ಅಥವಾ ಜೊಂಡುಹುಲ್ಲುಗಳಿಂದ ದೃಢವಾದ ಹಗ್ಗವನ್ನು ೧೨೬ ಧರ್ಮಸಿಂಧು ನಿರ್ಮಿಸಿ ಕುಲಾಚಾರದಂತೆ ಎತ್ತರವಾದ ಕಂಭ ಮತ್ತು ವೃಕ್ಷಕ್ಕೆ ಕಟ್ಟುವದು. “ಮಾರ್ಗಪಾಲಿ ನಮಸ್ತೇಸ್ತು ಸರ್ವಲೋಕ ಸುಖಪ್ರದೇ।ವಿಧೇಯ್ಯ: ಪುತ್ರದಾರಾ: ಪುನರೇಹಿವ್ರತಸ್ಯಮೇ! ಹೀಗೆ ಹೇಳಿ ನಮಸ್ಕರಿಸಿ ಪ್ರಾರ್ಥಿಸತಕ್ಕದ್ದು, ಅದರ ಅಡಿಯಲ್ಲಿ ಗೋವು, ಆನೆ ಮೊದಲಾದವುಗಳಿಂದ ಸಹಿತ ಬ್ರಾಹ್ಮಣ ರಾಜಾದಿಗಳೆಲ್ಲರೂ ಹೋಗತಕ್ಕದ್ದು. ಮತ್ತು “ವಷ್ಟಿ ಕಾಕರ್ಷಣ” ಅಂದರೆ ದರ್ಭೆ ಮೊದಲಾದ ಹುಲ್ಲುಗಳಿಂದ ದೃಢವಾದ ಹಗ್ಗವನ್ನು ಮಾಡಿ ಒಂದುಕಡೆ ರಾಜಪುತ್ರರು, ಇನ್ನೊಂದು ಕಡ ಹೀನಜಾತಿಯವರು ಆ ಹಗ್ಗವನ್ನು ಹಿಡಿದು ಎಳೆದಾಡುವದು. ಆಗ ಹೀನಜಾತಿಯ ಜಯವು ರಾಜಜಯವೆಂದೇ ತಿಳಿಯತಕ್ಕದ್ದು. ಬೆಳಿಗ್ಗೆ ದೂತವನ್ನಾಡತಕ್ಕದ್ದೆಂದು ಮೊದಲೇ ಹೇಳಲಾಗಿದೆ. ಸ್ತ್ರೀಯರಿಂದ ಆರತಿ ಬೆಳಗಿಸಿಕೊಳ್ಳುವದೂ ಪ್ರಾತಃಕಾಲದಲ್ಲಿಯೇ ಆಗತಕ್ಕದ್ದು, ರಾತ್ರಿಯಲ್ಲಿ ಗೀತ- ವಾದ್ಯಾದಿ ಉತ್ಸವವನ್ನು ಮಾಡತಕ್ಕದ್ದು. ಬ್ರಾಹ್ಮಣರಿಗೂ, ಸಂಬಂಧಿಕರಿಗೂ ಬಾಂಧವರಿಗೂ ಇತ್ಯಾದಿಯವರಿಗೆ ಹೊಸ ವಸ್ತ್ರಗಳನ್ನು ಕೊಟ್ಟು ಸತ್ಕರಿಸುವದು. ಯಮದ್ವಿತೀಯೆಯು ಈ ಬಿದಿಗೆಯ ದಿನ ಪೂರ್ವದಲ್ಲಿ ಯಮುನೆಯು ತನ್ನ ಅಣ್ಣನಾದ ಯಮನನ್ನು ತನ್ನ ಮನೆಗೆ ಕರೆದು ಊಟಮಾಡಿಸಿದಳು. ಹೀಗೆ ಪುರಾಣದಲ್ಲಿ ಹೇಳಿದೆ. ಅದಕ್ಕಾಗಿ ಈ ದ್ವಿತೀಯಗೆ “ಯಮದ್ವಿತೀಯ” ಎಂಬ ಹೆಸರುಂಟಾಗಿದೆ. ಈ ದಿನ ಸ್ವಗೃಹದಲ್ಲಿ ಭೋಜನಮಾಡತಕ್ಕದ್ದಲ್ಲ. ಪ್ರಯತ್ನದಿಂದಾದರೂ ಭಗಿನಿ ಹಸ್ತದಿಂದ ಭೋಜನಮಾಡತಕ್ಕದ್ದು. ಅದರಿಂದ ಧನಧಾನ್ಯಾದಿ ಸುಖ ಪ್ರಾಪ್ತಿಯಾಗುವದು. ಎಲ್ಲ ಅಕ್ಕ-ತಂಗಿಯರನ್ನೂ ವಸ್ತ್ರಾಲಂಕಾರಗಳಿಂದ ಸತ್ಕರಿಸತಕ್ಕದ್ದು. ತನಗೆ ಭಗಿನಿಯರಿಲ್ಲದಿದ್ದರೆ ಮಿತ್ರಾದಿಗಳ ಕತಂಗಿಯರನ್ನಾದರೂ ಸತ್ಕರಿಸತಕ್ಕದ್ದು. ಭಗಿನಿಯರಾದರೂ ಅಣ್ಣ ತಮ್ಮಂದಿರನ್ನು ಸತ್ಕರಿಸಿದರೆ ಅವರಿಗೆ ವೈಧವ್ಯವುಂಟಾಗುವದಿಲ್ಲ. ಅಣ್ಣ ತಮ್ಮಂದಿರಿಗಾದರೂ ದೀರ್ಘಾಯುಷ್ಯ ಪ್ರಾಪ್ತವಾಗುವದು. ಹೀಗೆ ಮಾಡದಿದ್ದರೆ ಏಳು ಜನ್ಮಗಳಲ್ಲಿಯೂ ಅಣ್ಣ ತಮ್ಮಂದಿರ ನಾಶವನ್ನು ನೋಡಬೇಕಾಗುವದು. ಇದನ್ನು ಪೂರ್ವದಿನ ಅಪರಾಹ್ನವ್ಯಾಪ್ತಿಯಿದ್ದರೆ ಪೂರ್ವದಿನದಲ್ಲೇ ಆಚರಿಸತಕ್ಕದ್ದು. ಎರಡೂ ಕಡೆ ವ್ಯಾಪ್ತಿ, ಹಾಗೂ ಅವ್ಯಾಪ್ತಿ ಪಕ್ಷಗಳಲ್ಲಿ ಪರವೇ ಗ್ರಾಹ್ಯವು. ಈ ದಿನ ಯಮುನಾಸ್ನಾನ ಹಾಗೂ ಅಪರಾಹ್ನದಲ್ಲಿ ಚಿತ್ರಗುಪ್ತ ಯಮದೂತಸಹಿತನಾದ ಯಮನಿಗೋಸ್ಕರ ಅರ್ಘ ಇವುಗಳನ್ನು ಮಾಡಲು ಹೇಳಿದೆ. ಕಾರ್ತಿಕಶುಕ್ಲ ಪಪ್ಪಿದಿನ ಕುಜವಾರ ಬಂದಲ್ಲಿ ಅಗ್ನಿಯ ಅರ್ಚನೆ, ಅಗ್ನಿಯ ಪ್ರೀತಿಗಾಗಿ ಬ್ರಾಹ್ಮಣ ಭೋಜನ ಮಾಡಿಸತಕ್ಕದ್ದು. ಕಾರ್ತಿಕ ಶುಕ್ಲ ಅಷ್ಟಮಿ ಗೋಪಾಷ್ಟಮೀ. ಇದರಲ್ಲಿ ಗೋಪೂಜಾ, ಗೋಪ್ರದಕ್ಷಿಣ, ಗೋವುಗಳ ಅನುಗಮನ ಇತ್ಯಾದಿಗಳನ್ನಾಚರಿಸಿದರೆ ಇಷ್ಟಾರ್ಥ ಸಿದ್ಧಿಯಾಗುವದು. ಕಾರ್ತಿಕಶುಕ್ಲ ನವಮಿಯಲ್ಲಿ ಮಥುರಾ ಕ್ಷೇತ್ರದ ಪ್ರದಕ್ಷಿಣೆ ಮಾಡತಕ್ಕದ್ದು, ಈ ದಿನವು “ಯುಗಾದಿ"ಯೂ ಆಗಿದೆ. ಪೂರ್ವಾಪ್ತವ್ಯಾಪಿನಿಯಾದ ಇದರಲ್ಲಿ ಪಿಂಡರಹಿತವಾದ ಶ್ರಾದ್ಧವನ್ನು ಮಾಡತಕ್ಕದ್ದು. ಈ ಯುಗಾದಿಶ್ರಾದ್ಧಾದಿ ವಿಷಯದಲ್ಲಿ ವಿಶೇಷವನ್ನು ವೈಶಾಖಮಾಸ ಪ್ರಕರಣದಲ್ಲಿ ಹೇಳಿದೆ. ಕಾರ್ತಿಕ ಶುಕ್ಲ ಏಕಾದಶಿಯಿಂದ ಹಿಡಿದು ಐದು ದಿನಗಳ ಒಟ್ಟಿಗೆ ಪರಿಚ್ಛೇದ - ೨ ೧೨೭ “ಭೀಷ್ಮ ಪಂಚಕವ್ರತ"ವೆನ್ನುವರು. ಅದನ್ನು ಶುದ್ಧಕಾದಶಿಯಲ್ಲಾರಂಭಿಸಿ ಚತುರ್ದಶೀ ವಿದ್ಧವಾಗದ ಪೂರ್ಣಿಮೆಯಲ್ಲಿ ಮುಕ್ತಾಯ ಮಾಡತಕ್ಕದ್ದು. ಶುದ್ಧಕಾದಶಿಯಾರಂಭವಾಗಿ ತಿಥಿಕ್ಷೆಯವಾದಲ್ಲಿ ಹುಣ್ಣಿವೆಯಲ್ಲಿ “ಪಂಚದಿನವ್ರತವು ಸಮಾಪ್ತವಾಗುವಂತಿಲ್ಲ. ಇಂಥ ಸಂದರ್ಭದಲ್ಲಿ ವಿಕಾದಶಿಯಲ್ಲಾದರೂ ಆರಂಭಿಸಬಹುದು, ಶುದ್ಧಕಾದಶಿಯಲ್ಲಾರಂಭಿಸಿಯೂ ತಿಥಿವೃದ್ಧಿಯಾದಲ್ಲಿ ಪರವಿದ್ಧ ಪೌರ್ಣಿಮೆಯಲ್ಲಿ ಸಮಾಪನವಾದರೆ ಆರುದಿನಗಳಾಗಿ ವ್ರತಭಂಗವೇ ಆಗುವದು. ಆಗ ಚತುರ್ದಶೀ ವಿದ್ಧವಾದರೂ ಪೌರ್ಣಿಮೆಯಲ್ಲಿ ಸಮಾಪನಮಾಡಬಹುದು. ಇದರ ವ್ರತದ ಪ್ರಯೋಗಾದಿಗಳನ್ನು ಕೌಸ್ತುಭಾದಿ ಗ್ರಂಥಗಳಿಂದ ತಿಳಿಯುವದು. ಕಾರ್ತಿಕ ಶುಕಾದಶ್ಯಾದಿ ಪರ್ವಗಳಲ್ಲಿ ಚಂದ್ರ ತಾರಾದಿ ಬಲಗಳು ಕೂಡಿಬಂದಲ್ಲಿ ಶಿವ, ವಿಷ್ಣು ಮೊದಲಾದ ದೇವತಾ ಮಂತ್ರಸ್ವೀಕಾರರೂಪವಾದ “ದೀಕ್ಷೆ"ಯನ್ನು ಸ್ವೀಕರಿಸತಕ್ಕದ್ದು, “ಕಾರ್ತಿಕೇತು ಕೃತಾದೀಕಾ ನೃಣಾಂಜನ್ಮ ವಿಮೋಚನೀ” ಹೀಗೆ “ನಾರದ ವಚನವಿದೆ. ಇದರಂತೆ ಇದರಲ್ಲಿಯೇ “ತುಲಸೀಕಾಷ್ಟಮಾಲಾ ಧಾರಣೆ"ಯನ್ನು ಹೇಳಿದೆ. ಸ್ಕಂದಪುರಾಣಾಂತರ್ಗತವಾದ ದ್ವಾರಕಾಮಹಾತ್ಮದ ವಿಷ್ಣು ಧರ್ಮ ಪ್ರಕರಣದಲ್ಲಿ ಇದು ಉಕ್ತವಾಗಿದೆ. ವಿಷ್ಣುವಿಗೆ ತುಲಸೀಕಾಷ್ಟದಿಂದ ನಿರ್ಮಿಸಿದ ಮಾಲೆಯನ್ನರ್ಪಿಸಿ ಆ ಮಾಲೆಯನ್ನು ಯಾವನು ಭಕ್ತಿಯಿಂದ ಧರಿಸುವನೋ ಅವನ ಪಾಪವೆಲ್ಲ ಪರಿಹಾರವಾಗುವದು. “ತುಲಸೀಕಾಷ್ಟ ಸಂಭೂತೇ ಮಾಲೇ ಕೃಷ್ಣ ಜನಪ್ರಿಯೇ! ಬಭರ್ಮಿಸ್ವಾಮಹಂಕಂಠೇ ಕುರುಮಾಂ ಕೃಷ್ಣವಲ್ಲಭಾಂ!!” ಹೀಗೆ ಹೇಳಿ ವಿಧಿವತ್ತಾಗಿ ವಿಷ್ಣುವಿಗರ್ಪಿಸಿದ ಮಾಲೆಯನ್ನು ಧರಿಸಿದರೆ ವಿಷ್ಣುಪದ ಪ್ರಾಪ್ತಿಯಾಗುವದು. ಹೀಗೆ “ನಿರ್ಣಯ ಸಿಂಧು"ವಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ವಿಷಯವಾಗಿ ಕೆಲ ನಿರ್ಣಯ ಸಿಂಧು ಪುಸ್ತಕಗಳಲ್ಲಿ ಹಿಂದೆ ಹೇಳಿದಂತೆ ವಚನಗಳನ್ನು ಬರದು “ಅತ್ರಮೂಲಂಚಿಂತ್ಯಂ” ಎಂದು ಬರೆಯಲಾಗಿದೆ. ಅಂದರೆ ಈ ವಿಷಯದ ಸಲುವಾಗಿ ಮೂಲವು ಕಂಡುಬರುವದಿಲ್ಲವೆಂದು ಹೇಳಿದೆ. (ನಿರ್ಣಯಸಿಂಧುವಿನ ಕೃಷ್ಣಭಟ್ಟಿಯ ವ್ಯಾಖ್ಯಾನದಲ್ಲಿ ಸಂಪ್ರದಾಯಾನುಸಾರ ವೈಷ್ಣವರು ಮಾತ್ರ ತುಲಸೀಕಾಷ್ಟ, ಧಾತ್ರೀಕಾವ್ಯಮಾಲೆಯನ್ನು ಧರಿಸತಕ್ಕದ್ದು. ಎಂಬುದೇ ಅತ್ರಮೂಲ೦ಚಿಂತ್ಯಂ* ಎಂಬದರ ತಾತ್ಪರ್ಯವೆಂದು ಹೇಳಿದೆ.) “ಅತ್ರಮೂಲಂಚಿಂತ್ಯಂ ಇದಕ್ಕೆ ಮೂಲಾಧಾರವೇ ಇಲ್ಲವೆಂಬರ್ಥವಲ್ಲ. `ನಿರ್ಣಯಸಿಂಧುಕಾರರು ತಾವೇ ಪ್ರಮಾಣವಾಕ್ಯಗಳನ್ನು ಬರೆದು; ಇದು ಆಧಾರರಹಿತವಾದದ್ದೆಂದರೆ “ವದತೋವ್ಯಾಘಾತ” ಅಂದರೆ ತನಗೆತಾನೇ ಆಘಾತ ಮಾಡಿಕೊಂಡಂತಾಗುವದು. ಅದು ಇಷ್ಟವಲ್ಲ. " ಮೂಲವಿಲ್ಲದ್ದು ಎಂದು ಹೇಳಿದರೆ ಪದ್ಮ ಪುರಾಣದಲ್ಲಿಯ ಪಾತಾಳಖಂಡದ ೭೯ ನೇ ಅಧ್ಯಾಯದಲ್ಲಿ ಹೇಳಿದ “ರುದ್ರಾಕ್ಷಾಕಾರಗಳಾದ ತುಳಸೀಮಣಿಗಳಿಂದ ನಿರ್ಮಿತವಾದ ಮಾಲೆಯನ್ನು ಕುತ್ತಿಗೆಯಲ್ಲಿ ಧರಿಸಿ ಪೂಜಾರಂಭಮಾಡತಕ್ಕದ್ದು. ತುಲಸೀಮಣಿಗಳಿಂದಲಂಕೃತನಾಗಿ ಪಿತೃಪೂಜೆ, ದೇವಪೂಜೆಗಳನ್ನು ಮಾಡಿದರೆ ಅದು ಕೋಟಿಗುಣವಾಗುವದು.” ಇತ್ಯಾದಿ ಪ್ರತ್ಯಕ್ಷವಚನಗಳಿಗೆ ವಿರೋಧವಾಗುವದು. ಇದರಂತೆ ಆಷಾಢಮಾಸ ಪ್ರಕರಣದಲ್ಲಿ ಅನುರಾಧಾಯೋಗರಹಿತವಾದ ದ್ವಾದಶಿಯಲ್ಲಿ ಪಾರಣ ಮಾಡತಕ್ಕದ್ದು. ಹೀಗೆ ಹೇಳಿ ಅದಕ್ಕೆ ಪ್ರಮಾಣಭೂತಗಳಾದ “ಆಭಾಕಾಸಿತಪಕ್ಷೇಮ” “ಮೈತ್ರಾಹ್ಮಪಾದೇಸ್ವಪಿತೀಹವಿಷ್ಣು” ಇತ್ಯಾದಿ ಭವಿಷ್ಯಪುರಾಣದಲ್ಲಿಯ “ವಿಷ್ಣು ಧರ್ಮ"ದ ೧೨೮ ಧರ್ಮಸಿಂಧು ವಾಕ್ಯಗಳನ್ನು ದಾಹರಿಸಿ ಅಂತ್ಯದಲ್ಲಿ “ಇದು ನಿರ್ಮೂಲವು” ಎಂದಿದೆ. ಹೀಗೆ ಬೇರೆ ಬೇರೆ ಪ್ರಕರಣಗಳಲ್ಲಿಯೂ ಹೇಳಿದ “ನಿರ್ಮೂಲ” ಶಬ್ದಕ್ಕೆ “ಮಾಧವಾದಿ ಮೂಲಗ್ರಂಥಗಳಲ್ಲಿ ಕಾಣುವದಿಲ್ಲ” ಎಂದಷ್ಟೇ ಅರ್ಥ, ಹೊರತು “ಅಪ್ರಮಾಣ"ವೆಂದರ್ಥಲ್ಲ. ಅಪ್ರಮಾಣವೆಂದಾದಲ್ಲಿ ಭಾದ್ರಪದ-ಕಾರ್ತಿಕಗಳಲ್ಲಿ ಅದೇ ವಾಕ್ಯಾನುಸಾರ ಪಾರಣ ನಿರ್ಣಯವನ್ನುಲ್ಲೇಖಿಸಿದ್ದು “ಅಸಂಗತ"ವೇ ಆದೀತು. ಅದೇ ವಾಕ್ಯಾನುಸಾರ ಪಾರಣನಿರ್ಣಯವನ್ನು ಹೇಳಿದ ಕೌಸ್ತುಭಾದಿ ನವೀನಗ್ರಂಥಗಳ ಪ್ರತಿವಾದನೆಯೂ ಅಸಂಗತವಾಗುವದು. ಸಕಲ ಶಿಷ್ಟರ ಅನುಸರಣೆಯಿಂದ ಮಾಡಿದ ಪಾರಣೆಯ ಆಚರಣೆಗೂ ಅಪ್ರಮಾಣತ್ವವುಂಟಾಗಬಹುದು. ಎಷ್ಟೋ ಆಚಾರಗಳ ಆಚರಣೆಯ ವಿಷಯಗಳು ಮಾಧವಾದಿ ಗ್ರಂಥಗಳಲ್ಲಿರಬಹುದು. ಆದ್ದರಿಂದ ಅಪ್ರಾಮಾಣ್ಯವೆಂದಾಗಲಾರದು. ಈ ತುಲಸೀಕಾಷ್ಠಮಾಲೆಯ ಧಾರಣ ವಿಷಯದಲ್ಲಿಯೂ ಸಹ ಅದರಂತೆಯೇ ಎಂದು ತಿಳಿಯತಕ್ಕದ್ದು. ಆದುದರಿಂದ ಮಾಧವಾದಿಗ್ರಂಥಗಳಲ್ಲಿ ಕಂಡುಬಾರದಮಾತ್ರದಿಂದ “ಅಪ್ರಮಾಣ"ವೆಂಬದನ್ನು ತಿರಸ್ಕರಿಸಿದಂತಾಯಿತು. ಇನ್ನು “ಯತ್ತು” ಎಂದು ಪ್ರಾರಂಭಿಸಿ “ಯಾನಿ” ಎಂದು ಯಚ್ಛಬ್ದದಿಂದ ಎತ್ತುಗಡೆಮಾಡಿ ಅಂದರೆ “ಯಾವವಾಕ್ಯಗಳಿವೆಯೋ?” “ತಾನಿ” ಅಂದರೆ ಆ ವಾಕ್ಯಗಳು “ನಿರ್ಮೂಲಗಳು ಎಂದು ಹೇಳಿದಾಗ ಅಪ್ರಮಾಣಕಗಳನ್ನಾಗಿ ತಿಳಿಯಬಹುದು. ಅಂದರೆ ವಿಷಯವನ್ನು ಪೂರ್ವಪಕ್ಷ ಮಾಡಿ ಅದನ್ನು ನಿಷೇಧಿಸಿದಾಗ ಆ ಪೂರ್ವಪಕ್ಷಕ್ಕೊಳಗಾದ ವಿಷಯವು ನಿರ್ಮೂಲ ಅರ್ಥಾತ್ ಅಪ್ರಮಾಣಕ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. “ಶ್ರವಣ ದ್ವಾದಶೀ” ಪ್ರಕರಣದಲ್ಲಿ “ಶ್ರವಣಕ್ಕೆ ಉತ್ತರಾಷಾಢಾವೇಧವಾದರೆ ದೋಷವು” ಎಂಬ ನಿಷೇಧ ವಾಕ್ಯಗಳಿವೆ. ಅಲ್ಲಿಯ ನಿಷೇಧವಾಕ್ಯಗಳು ಪ್ರಮಾಣರಹಿತವಾದವುಗಳು ಎಂದೇ ತಾತ್ಪರ್ಯವೆಂದು ಸೂಕ್ಷ್ಮಬುದ್ಧಿಯುಳ್ಳವರಿಗೆ ತಿಳಿದೇ ಇದೆ. ಇನ್ನು ಮಾಧವಾದಿ ಗ್ರಂಥಗಳಲ್ಲಿ ಉಲ್ಲೇಖಿಸಲಿಲ್ಲವೆಂಬ ಕಾರಣದಿಂದ ನಿರ್ಮೂಲ ಎಂದು ನಾನು ಹೇಳುತ್ತಿಲ್ಲ. ಆದರೆ ಕಾಷ್ಠಮಾಲಾಧಾರಣ ಮಾಡಬಾರದೆಂಬ ನಿಷೇಧ ವಾಕ್ಯಗಳು ಅದಕ್ಕೆ ಬಾಧಕಗಳು ಎಂದು ಪೂರ್ವಪಕ್ಷಿಯು ಹೇಳಬಹುದು. ಹಾಗಾದರೆ ನಾವು ಕೇಳುವದೇನೆಂದರೆ ನಿನಗೆ ಆ ವಾಕ್ಯಗಳು ಸಾಮಾನ್ಯವಾಗಿ ಕಾಷ್ಠಮಾಲಾಧಾರಣ ನಿಷೇಧಕಗಳಾಗಿ ಕಾಣುತ್ತವೆಯೋ? ಇಲ್ಲವೇ ವಿಶೇಷರೂಪವಾಗಿ ತುಲಸೀ ಕಾಷ್ಠಮಾಲಾಧಾರಣ ನಿಷೇಧಕಗಳಾಗಿ ಕಾಣುತ್ತವೆಯೋ? ಹಾಂ! ಸಾಮಾನ್ಯ ವಚನಗಳನ್ನು ವಿಶೇಷ ವಾಕ್ಯಗಳು ಬಾಧಿಸುತ್ತವೆಯೆಂಬುದನ್ನು ಒಪ್ಪಿಕೊಳ್ಳಬೇಕು. ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಿದ ಮಣಿಮಾಲೆಗಳನ್ನು ಧರಿಸಬಾರದೆಂದಿದ್ದರೆ ಇರಲಿ. ಆದರೆ ತುಲಸಿ, ಧಾತ್ರಿ, ಕಾವ್ಯಮಾಲೆಯನ್ನು ಧರಿಸಲೇಬೇಕು’ ಎಂಬ ವಿಶೇಷ ವಚನವು ಬಾಧಿಸುವದು. ಅದರ ಅರ್ಥವೇನೆಂದರೆ ತುಲಸಿ, ಧಾತ್ರಿ ಮಾಲೆಗಳ ಹೊರತು ಬೇರೆ ಕಟ್ಟಿಗೆಯ ಮಾಲೆಯು ನಿಸಿದ್ದ ಎಂದು ಸ್ಪಷ್ಟವಾಗುವದು. ಅಥ ವಾ ವಿಹಿತ ನಿಷಿದ್ಧ ವಾಕ್ಯಗಳು ಪರಸ್ಪರ ವಿರುದ್ದಗಳೆಂದೇ ತಿಳಿದು ಷೋಡಶೀಗ್ರಹಣ-ಆಗ್ರಹಣ ನ್ಯಾಯದಂತೆ ‘ವಿಕಲ್ಪ’ಎಂದು ತಿಳಿದರೂ ಅದು ವ್ಯವಸ್ಥಿತ ‘ವಿಕಲ್ಪ’ವನ್ನಾಗಿ ಮಾಡಲು ಸುಲಭವೇ ಇದೆ. ವಿಹಿತವಾಕ್ಯಗಳನ್ನು ‘ವೈಷ್ಣವ’ ಪರವಾಗಿಯೂ ನಿಷಿದ್ಧ ವಾಕ್ಯಗಳನ್ನುಪರಿಚ್ಛೇದ - ೨ ‘ವೈಷ್ಣವೇತರ’ ಪರವಾಗಿಯೂ ತಿಳಿಯಬಹುದು. ಮೂಲವಾಕ್ಯಗಳಲ್ಲಿ ವಿಷ್ಣು ಧರ್ಮ ಮೊದಲಾದ ಪದಗಳನ್ನು ಹೇಳಿರುವದರಿಂದ ನಿರ್ಮೂಲತ್ವ’ ಸಂಭವಿಸುವದಿಲ್ಲ. ಇನ್ನು ಮಾಧವಾದಿ ಗ್ರಂಥಗಳಲ್ಲಿ ಇವುಗಳನ್ನು ಯಾಕೆ ಬರೆದಿಲ್ಲ? ಅವರ ಅಭಿಪ್ರಾಯವೇನಿರಬಹುದು? ಎಂಬುದನ್ನು ‘ಪುರುಷಾರ್ಥ ಚಿಂತಾಮಣಿ’ ಕಾರರು ಹರಿವಾಸರ ಲಕ್ಷಣವನ್ನು ಹೇಳುವಾಗ ವೈಷ್ಣವರಿಗಷ್ಟೇ ಇದು ಆವಶ್ಯಕ ಎಂಬ ಅಭಿಪ್ರಾಯದಿಂದ ಹೇಳದಿರಬಹುದಾದರೂ ಮಾಧವಾದಿಗಳಿಗೆ ಅದರಿಂದ ನ್ಯೂನತೆಯುಂಟಾಗಲಾರದು; ಎಂಬ ರೀತಿಯಿಂದ ಬರೆದಿರುವರೆಂದು ಊಹಿಸಲೂ ಶಕ್ಯವು. ಹೀಗೆಯೇ ಧಾತ್ರೀಕಾಷ್ಠಮಾಲಾಧಾರಣ ವಿಧಿಯನ್ನೂ ತಿಳಿಯುವದು. “ರಾಮಾರ್ಚನ ಚಂದ್ರಿಕಾ” ದಿಗಳಲ್ಲಿ ತುಲಸೀಕಾಷ್ಠ ಮಾಲಿಕೆಯಿಂದ ಜಪವನ್ನು ವಿಧಿಸುವ ವಚನಗಳೂ, ತುಲಸೀಕಾಷ್ಟಗಳಿಂದ ನಿರ್ಮಿಸಿದ ಮಣಿಗಳಿಂದ ಜಪಮಾಲಿಕೆಯನ್ನು ಮಾಡತಕ್ಕದ್ದೆಂಬ ವಚನಗಳೂ ಸ್ಪಷ್ಟವಾಗಿವೆ. ಹೀಗೆ ಬೇರೆ-ಬೇರೆ ಗ್ರಂಥಗಳಲ್ಲಿಯೂ ಹೇರಳವಾಗಿ ವಾಕ್ಯಗಳು ಕಂಡುಬರುತ್ತವೆ. ಪ್ರಯೋಗ ಪಾರಿಜಾತದ ಆಫ್ರಿಕ ಪ್ರಕರಣದ ಪೂಜಾಸಂದರ್ಭದಲ್ಲಿ “ ಆದಿಯಲ್ಲಿ ಪೂಜಾಸಾಧನಗಳಾದ ಗಂಧ, ಪುಷ್ಪ, ಅಕ್ಷತಾದಿಗಳನ್ನು ಸಂಗ್ರಹಿಸಿ ಕೈಕಾಲುಗಳನ್ನು ತೊಳೆದುಕೊಂಡು ಯಥಾಶಕ್ತಿ ಶುದ್ಧ, ಶುಭವಸ್ತ್ರಗಳನ್ನು ಧರಿಸಿ, ಅಲಂಕಾರ ಭೂಷಿತನಾಗಿ, ಹವಳ, ಕಮಲದ ಬೀಜ, ತುಲಸೀಮಣಿ ಇವುಗಳಿಂದ ನಿರ್ಮಿತವಾದ ಮಾಲೆಗಳನ್ನು ಕಂಠದಲ್ಲಿ ಧರಿಸಿ ಇತ್ಯಾದಿ ಉಲ್ಲೇಖವಿದೆ. ಹೀಗೆ ಸರ್ವದೇಶೀಯ ವೈಷ್ಣವರಲ್ಲಿ ತುಲಸೀಕಾಷ್ಠ ಮಾಲಾಧಾರಣ ಜಪಗಳ ಆಚಾರವೂ ಕಂಡುಬರುತ್ತದೆ. ಭಸ್ಮಾದಿಧಾರಣವನ್ನು ದ್ವೇಷಿಸುವ ವೈಷ್ಣವರ ಸೇಡನ್ನು ತೀರಿಸಿಕೊಳ್ಳುವ ಇಚ್ಛೆಯುಳ್ಳ ಶೈವಾಗಮವನ್ನೂ ಸರಿಯಾಗಿ ತಿಳಿಯದ ಶೈವರು ಈ ಕಾಷ್ಠಮಾಲಾಧಾರಣೆಯನ್ನು ದೂಷಿಸುವರು. ಅಷ್ಟೇ! ಎಸ್ತರ ಹೇಳಿದ್ದು ಸಾಕು. ಧಾತ್ರೀವೃಕ್ಷದ ಬುಡದಲ್ಲಿ ದೇವತಾಪೂಜಾ ವಿಧಿಯು “ಸರ್ವ ಪಾಪಕ್ಷಯದ್ವಾರಾ ಶ್ರೀ ದಾಮೋದರ ಪ್ರೀತ್ಯರ್ಥಂ ಧಾತ್ರೀಮೂಲೇ ಶ್ರೀ ದಾಮೋದರ ಪೂಜಾಂಕರಿಷ್ಟೇ” ಹೀಗೆ ಸಂಕಲ್ಪಿಸುವದು. ಪುರುಷಸೂಕ್ತದಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ ಗಂಧ, ಪುಷ್ಪ, ಫಲಗಳನ್ನು ಹಿಡಕೊಂಡು “ಅರ್ಘಂಗ್ರಹಾಣಭಗವನ್ ಸರ್ವಕಾಮ ಪ್ರದೋಭವ ಅಕ್ಷಯಾ ಸಂತತಿರ್ಮೇಸ್ತು ದಾಮೋದರ ನಮೋಸ್ತುತೇ” ಈ ಮಂತ್ರದಿಂದ ಅರ್ಥ್ಯವನ್ನು ಕೊಡತಕ್ಕದ್ದು. ನಂತರ “ ಅಪರಾಧ ಸಹಸ್ರಾಣಿ” ಇತ್ಯಾದಿ ಪ್ರಾರ್ಥನ ಮಾಡಿ ನೆಲ್ಲಿಯ ಮರವನ್ನು ಕುಂಕುಮ, ಗಂಧಾದಿಗಳಿಂದ ಅರ್ಚಿಸಿ ಪುಷ್ಪಗಳಿಂದ ಪೂಜಿಸತಕ್ಕದ್ದು. “ಧಾತ್ಮನಮಃ, ಶಾಂತೈನಮಃ, ಮೇಧಾಯ್ಕೆನಮಃ, ಪ್ರಕೃನಮಃ, ವಿಷ್ಣು ಪನಮಃ, ಮಹಾಲಕ್ಷ್ಮಿನಮ, ರಮಾಯ್ಕನನು:, ಕಮಲಾಯ್ಕೆನಮಃ, ಇಂದಿರಾಯ್ಕೆನಮಃ, ಲೋಕಮಾನಮ:, ಕಲ್ಯಾನಮ:, ಕಮನೀಯಾಯ್ಕನಮ, ಸಾವಿತ್ರ್ಯನಮ:, ಜಗದ್ಧಾತ್ಮನನ, ಗಾಯನಮ, ಸುಧ್ಯನಮ:, ಅವ್ಯಕ್ತಾಯನಮ:” ಹೀಗೆ ಹೇಳಿ ಪೂಜಿಸುವದು. ಮತ್ತು ಧಾತ್ರಿಯ ಮೂಲದಲ್ಲಿ ಸವ್ಯವಾಗಿ “ಪಿತಾ ಪಿತಾಮಹಾನ ಅಪುತ್ರಾಯೇಚಗೋತ್ರಿಣ ತೇ ಪಿಬಂತು ಮಯಾದತ್ತಂ ಧಾತ್ರೀಮೂಲೇsಕ್ಷಯಂಪಯ:|| ಆ ಬ್ರಹ್ಮಸ್ತಂಬ ಪರ್ಯಂತಂ” ಎಂದು ಹೇಳಿ ತರ್ಪಣಮಾಡತಕ್ಕದ್ದು. ೧೩೦ ಧರ್ಮಸಿಂಧು “ರಾಮೋದರ ನಿವಾಸಾಯ ಧಾತ್ಮ ದೇವೆ ನಮೋಸ್ತುತೇ ಸೂಣಾನೇನ ಬಾಮಿ ಸರ್ವದೇವ ನಿವಾಸಿನೀಂ” ಈ ಮಂತ್ರವನ್ನು ಹೇಳಿ ಸೂತ್ರವನ್ನು ಸುತ್ತಲೂ ಕಟ್ಟುವದು. ಧಾತ್ಮನಮಃ ಎಂದು ನಾಲ್ಕು ದಿಕ್ಕುಗಳಲ್ಲಿ ಬಲಿಯನ್ನು ಕೊಟ್ಟು ಎಂಟು ದೀಪಗಳನ್ನು ಹಚ್ಚತಕ್ಕದ್ದು. ಎಂಟಾವರ್ತಿ ಪ್ರದಕ್ಷಿಣಮಾಡಿ ನಮಸ್ಕರಿಸುವದು. ನಮಸ್ಕಾರವನ್ನು “ಧಾತ್ರಿದೇವಿ ನಮಸ್ತುಭ್ಯಂ ಸರ್ವ ಪಾಪಕ್ಷಯಂಕರಿ ಪುತ್ರಾನ್‌ಹಿ ಮಹಾಪ್ರಾಜ್ಞೆ ಯಶೋದೇಹಿ ಬಲಂಚ ಮೇ|| ಪ್ರಜಾಂದಧಾಂತ ಸೌಭಾಗ್ಯಂ ವಿಷ್ಣು ಭಕ್ತಿಂಚಶಾಶ್ವತೀ ! ನಿರೋಗಂಕುರು ಮಾಂನಿತ್ಯಂ ನಿಷ್ಪಾಪಂ ಕುರುಸರ್ವದಾ||” ಈ ಮಂತ್ರ ಹೇಳಿ ಮಾಡತಕ್ಕದ್ದು. ನಂತರ ಮೃತಪೂರ್ಣವಾದ ಕಂಚಿನ ಪಾತ್ರೆಯನ್ನು ಸುವರ್ಣ ಸಹಿತವಾಗಿ ದಾನಮಾಡತಕ್ಕದ್ದು. ಹೀಗೆ ಸಂಕ್ಷೇಪ ವಿಧಿಯು ಕಾರ್ತಿಕ ಶುಕ್ಲ ದ್ವಾದಶಿಯಲ್ಲಿ ರೇವತಿನಕ್ಷತ್ರಯೋಗವಿಲ್ಲದಾಗ ಪಾರಣಮಾಡತಕ್ಕದ್ದು. ರೇವತೀಯೋಗವು ಅಪರಿಹಾರ್ಯವಾದಲ್ಲಿ ಚತುರ್ಥಪಾದವನ್ನಾದರೂ ಬಿಟ್ಟು ಮಾಡತಕ್ಕದ್ದು. ಇತ್ಯಾದಿ ವಿಶೇಷವಿಚಾರವನ್ನು ಹಿಂದೆ ಶ್ರವಣದ್ವಾದಶೀ ಪ್ರಕರಣದಲ್ಲಿ ಹೇಳಲಾಗಿದೆ. ಅದನ್ನು ನೋಡಬಹುದು. ಪ್ರಬೋಧೋತ್ಸವ - ತುಲಸೀವಿವಾಹಗಳು ಕೆಲಗ್ರಂಥಕಾರರು ಪ್ರಬೋಧೋತ್ಸವವನ್ನು ಕಾರ್ತಿಕ ಶುಕ್ಲ ಏಕಾದಶಿಯಲ್ಲಿ ಮಾಡತಕ್ಕದ್ದೆಂದು ಹೇಳುವರು. “ರಾಮಾರ್ಚನ ಚಂದ್ರಿಕಾ"ದಿಗಳಲ್ಲಿ ದ್ವಾದಶಿಯನ್ನು ಹೇಳಿದೆ. ಉತ್ಥಾಪನ ಮಂತ್ರದಲ್ಲಿ ದ್ವಾದಶಿಯಲ್ಲಿ ಹೇಳಿರುವದರಿಂದ ದ್ವಾದಶಿಯಲ್ಲಿ ಮಾಡುವುದೇ ಪ್ರಶಸ್ತವು ಅದರಲ್ಲಿಯಾದರೂ ದ್ವಾದಶಿಯ ರಾತ್ರಿಯ ಪ್ರಥಮಭಾಗದಲ್ಲಿ ರೇವತಿಯ ಅಂತ್ಯಪಾದಯೋಗವು ಇನ್ನೂ ಪ್ರಶಸ್ತವಾದದ್ದು, ಅದು ಅಸಂಭವವಾದಲ್ಲಿ ಅದೇ ರಾತ್ರಿಯಲ್ಲಿ ರೇವತೀನಕ್ಷತ್ರ ಮಾತ್ರ ಯೋಗವಾದರೂ ಆಗಬಹುದು. ಅದೂ ಸಂಭವಿಸದಿದ್ದರೆ ರಾತ್ರಿಯ ಪ್ರಥಮಭಾಗದಲ್ಲಿ ಕೇವಲ ದ್ವಾದಶಿಯಿದ್ದರೂ ಅಡ್ಡಿಯಿಲ್ಲ. ಇದರಂತೆ ಕೇವಲ ರೇವತೀಯೋಗವಿದ್ದರೂ ಸರಿ. ರಾತ್ರಿಯಲ್ಲಿ ರೇವತಿ-ದ್ವಾದಶಿಗಳೆರಡೂ ಇರದಿದ್ದಲ್ಲಿ ಹಗಲು ದ್ವಾದಶಿಯ ಮಧ್ಯದಲ್ಲಿ ಮಾಡತಕ್ಕದ್ದೆಂದು “ಕೌಸ್ತುಭ"ದಲ್ಲಿ ಹೇಳಿದೆ. ಆದಾಗ್ಯೂ “ “ಪಾರಣಾಹೇ ಪೂರ್ವರಾತ್ರ” ಹೀಗೆ ವಚನವಿರುವದರಿಂದ ಪಾರಣೆಯದಿನ ಪೂರ್ವರಾತ್ರಿಯಲ್ಲಿ ದ್ವಾದಶಿಯಿಲ್ಲದಿದ್ದರೂ ಅದೇ ದಿನವು ಪ್ರಶಸ್ತವು. “ಪಾರಣೆಯದಿನ ಪ್ರಬೋಧೋತ್ಸವ"ಹೀಗೆ ದೇಶಾಚಾರಪ್ರಯುಕ್ತವೂ ಆಗಿದೆ. ತುಲಸೀ ವಿವಾಹಕ್ಕೆ ಕಾರ್ತಿಕದ ನವಮ್ಮಾದಿ ಮೂರುದಿನಗಳಲ್ಲಿ ಅಥವಾ ಏಕಾದಶ್ಯಾದಿ ಹುಣ್ಣಿವೆಯ ಪರ್ಯಂತ ವಿವಾಹನಕ್ಷತ್ರ ಯಾವ ದಿನವಿರುವದೋ ಆ ದಿನ ಮಾಡತಕ್ಕದ್ದೆಂದು ಕಾಲವನ್ನು ಹೇಳಿದೆ. ಆದರೂ ಪಾರಣೆಯ ದಿನದಲ್ಲಿ ಪ್ರಬೋಧೋತ್ಸವ ಕರ್ಮದಿಂದ ಕೂಡಿ ಏಕತಂತ್ರವಾಗಿ ಅನುಷ್ಠಾನ ಮಾಡುವದು. ಪ್ರಚಲಿತವಿರುವದರಿಂದ ತುಲಸೀ ವಿವಾಹವನ್ನಾದರೂ ಪಾರಣೆಯ ದಿನ ಪೂರ್ವರಾತ್ರಿಯಲ್ಲಿ ಮಾಡತಕ್ಕದ್ದು, ಪ್ರಬೋಧೋತ್ಸವಕ್ಕಿಂತ ಬೇರೆ ಕಾಲದಲ್ಲಿ ತುಲಸೀ ವಿವಾಹ ಮಾಡುವುದ್ದಕ್ಕೆ ಬೇರೆ ಉಕ್ತಕಾಲದಲ್ಲಿ (ವಿವಾಹೋಕ್ತ ನಕ್ಷತ್ರಾದಿ) ಮಾಡತಕ್ಕದ್ದು. ಪುಣ್ಯಾಹವಾಚನ, ನಾಂದೀಶ್ರಾದ್ಧ ವಿವಾಹ ಹೋಮಾದಿ, ಸಾಂಗ-ತುಲಸೀವಿವಾಹ ಪ್ರಯೋಗವನ್ನು ಕೌಸ್ತುಭಾದಿ ಗ್ರಂಥಗಳಲ್ಲಿ ನೋಡತಕ್ಕದ್ದು, ಇಲ್ಲಿ ಪ್ರಬೋಧೋತ್ಸವದೊಡನೆ ಪರಿಚ್ಛೇದ ೧೩೧ ತುಲಸೀವಿವಾಹಮಾಡುವ ಸಂಪ್ರದಾಯಾನುಸಾರ ಸಂಕ್ಷೇಪ ಪ್ರಯೋಗವನ್ನು ಬರೆಯಲಾಗಿದೆ:- ದೇಶಕಾಲಾದಿಗಳನ್ನುಚ್ಚರಿಸಿ “ಶ್ರೀ ದಾಮೋದರಪ್ರೀತ್ಯರ್ಥಂ ಪ್ರಬೋಧೋತ್ಸವಂ ಸಂಕ್ಷೇಪತಸ್ತುಲ ವಿವಾಹಂ ಚ ತಂತ್ರಣ ಕರಿಷ್ಯ ‘ತರಂಗತಯಾ ಪುರುಷನ ವಿಧಿನಾ ಷೋಡಶೋಪಚಾರ: ಶ್ರೀ ಮಹಾವಿಷ್ಣು ಪೂಜಾಂ ತುಲಸೀಪೂಜಾಂಚ ತಂತ್ರಣ ಕರಿ” ಎಂದು ಸಂಕಲ್ಪಮಾಡಿ ನ್ಯಾಸಾದಿಗಳನ್ನು ನಿರ್ವತಿ್ರಸಿ ಶ್ರೀ ವಿಷ್ಣುವನ್ನೂ, ತುಲಸಿಯನ್ನೂ ಧ್ಯಾನಿಸಿ ‘ಸಹಸ್ರ ಶೀರ್ಷಾ ಈ ಮಂತ್ರದಿಂದ ಶ್ರೀ ವಿಷ್ಣುವನ್ನೂ, ತುಲಸಿಯನ್ನೂ ಆವಾಹಿಸತಕ್ಕದ್ದು. “ಪುರುಷ ಏವೇದಂ” ಇತ್ಯಾದಿ ಮಂತ್ರಗಳಿಂದ “ಶ್ರೀ ಮಹಾವಿಷ್ಣುವೇ ದಾಮೋದರಾಯ ಶ್ರೀ ದೇ ತುಲ ಚ ನಮ: ಆಸನಂ ಸಮರ್ಪಯಾಮಿ ಇತ್ಯಾದಿ ಸ್ನಾನಾಂತದ ವರೆಗೆ ಪೂಜಿಸಿ, ಮಂಗಲವಾದ್ಯಗಳೊಡನೆ ಸುಗಂಧಿ ತೈಲ, ಅರಿಶಿನ, ಎಣ್ಣೆಗಳನ್ನು ನಾಗವಲ್ಲಿಯ ಎಲೆಯಲ್ಲಿಟ್ಟುಕೊಂಡು ಸುವಾಸಿನಿಯರ ಕಡೆಯಿಂದ ವಿಷ್ಣು, ತುಲಸಿಗಳಿಗೆ ಮಂಗಲಸ್ನಾನವನ್ನು ಮಾಡಿಸಿ ಅಥವಾ ತಾನೇ ಮಾಡಿ, ಪಂಚಾಮೃತಾಭಿಷೇಕ ಮಾಡಿಸಿ, ನಂತರ ಶುದ್ಧೋದಕದಿಂದ ಸ್ನಾನಮಾಡಿಸಿ, ವಸ್ತ್ರ, ಯಜ್ಞಪವೀತ, ಚಂದನಾದಿಗಳನ್ನರ್ಪಿಸಿ, ತುಲಸಿಗೆ ಅರಿಶಿನ, ಕುಂಕುಮ, ಕಂಠಸೂತ್ರ ಮೊದಲಾದ ಮಂಗಲ ದ್ರವ್ಯವನ್ನು ಕೊಟ್ಟು, ಮಂತ್ರಪುಷ್ಪಾಂತವಾಗಿ ಪೂಜೆಯನ್ನು ಮಾಡಿ ಘಂಟೆ ಮೊದಲಾದ ವಾದ್ಯಘೋಷದಿಂದ ದೇವನನ್ನು ಎಚ್ಚರಿಸತಕ್ಕದ್ದು. “ಇದಂ ವಿಷ್ಣು” “ಯೋಜಾಗರ” ಇತ್ಯಾದಿ ಆಚಾರ ಪ್ರಾಪ್ತವಾದ ಮಂತ್ರ, ಹಾಗೂ ಬ್ರಹ್ಮಂದ್ರರುದ್ರಾದಿ ಕುಬೇರ ಸೂರ್ಯ ಸೋಮಾದಿಭಿರ್ವಂದಿತ ವಂದನೀಯ ಬುಧ್ಯಸ್ವದೇವೇಶ ಜಗನ್ನಿವಾಸ ಮಂತ್ರಪ್ರಭಾವೇಣ ಸುಖೇನ ದೇವ ಇಯಂ ಚ ದ್ವಾದಶೀದೇವ ಪ್ರಬೋಧಾರ್ಥಂತು ನಿರ್ಮಿತಾ| ತ್ವಯವ ಸರ್ವಲೋಕಾನಾಂ ಹಿತಾರ್ಥ ಶೇಷಶಾಯಿನಾ ಉತ್ತಿಷೋತ್ತಿಷ ಗೋವಿಂದ ತ್ಯಜನಿದ್ರಾಂಜಗತ್ಪತೇ|| ತ್ವಯಿಸು ಜಗತ್ತುಪ್ತ ಮುಟ್ಟಿತೇ ಚೊತಂ ಜಗತ್ ಹೀಗೆ ಹರಿಯನ್ನೆಚ್ಚರಿಸಿ “ಚರಣಂ ಪವಿತ್ರಂ” “ಗತಾ ಮೇಘಾವಿಯವ ನಿರ್ಮಲು ನಿರ್ಮಲಾ ದಿಶಃ ಶಾರದಾನಿಚ ಪುಷ್ಪಾಣಿ ಗೃಹಾಣ ಮಮ ಕೇಶವ” ಇತ್ಯಾದಿ ಮಂತ್ರಗಳಿಂದ ಪುಷ್ಪಾಂಜಲಿಯನ್ನು ಕೊಡತಕ್ಕದ್ದು. ಆಮೇಲೆ ಆಚಾರ ಸಂಪ್ರದಾಯದಂತೆ ತುಲಸಿಯ ಸಮ್ಮುಖವಾಗಿ ಶ್ರೀ ಕೃಷ್ಣಪ್ರತಿಮೆಯನ್ನಿಟ್ಟು ಮಧ್ಯದಲ್ಲಿ ಅಂತಃಪಟ(ತೆರೆಯ ವಸ್ತ್ರವನ್ನು ಹಾಕಿ ಮಂಗಲಾಷ್ಟಕ ಪದ್ಯಗಳನ್ನು ಪಠಿಸತಕ್ಕದ್ದು. ಆಮೇಲೆ ಅಂತಃಪಟವನ್ನು ತೆಗೆದು ಅಕ್ಷತೆಗಳನ್ನು ತಳಿದು ದಾಮೋದರ ಹಸ್ತದಲ್ಲಿ ತುಲಸೀದೇವಿಯನ್ನು ದಾನ ಮಾಡತಕ್ಕದ್ದು. “ದೇವೀಂ ಕನಕಸಂಪನ್ನಾಂ ಕನಕಾಭರಣೆರ್ಯುತಾಂ ದಾಸ್ಯಾಮಿ ವಿಷ್ಣವೇ ತುಭಂ ಬ್ರಹ್ಮಲೋಕ ಜಿಗೀಷಯಾ||ಮಯಾ ಸಂವರ್ಧಿತಾಂ ಯಥಾಶಲಂಕೃತಾಂ ಇಮಾಂ ತುಲಸೀ ದೇವಿಂ ದಾಮೋದರಾಯ-ಶ್ರೀಧರಾಯ ವರಾಯ ತುಭ್ರಮಹಂ ಸಂಪ್ರದದೇ” ಹೀಗೆ ಹೇಳಿ ದೇವನಮುಂದೆ ಅಕ್ಷತೆಯ ನೀರನ್ನು ಬಿಡತಕ್ಕದ್ದು. “ಶ್ರೀ ಮಹಾವಿಷ್ಣು: ಪ್ರೀಯತಾಂ ಇಮಾಂ ದೇವೀಂ ಪ್ರತಿಗ್ರಹಾತು ಭವಾನ್ " ಹೀಗೆ ಹೇಳತಕ್ಕದ್ದು, ನಂತರ ದೇವನ ಹಸ್ತವನ್ನು ತುಲಸಿಗೆ ಸ್ಪರ್ಶಮಾಡಿಸಿ ‘‘ಕ ಇದಂತಸ್ಮಾ ಅದಾತ್ ಕಾಮಕಾಮಾಯ ಆದಾತ್ ಕಾಮೋದಾತಾ ಕಾಮ ಪ್ರತಿಗೃಹೀತಾ ಕಾಮಂ ಸಮುದ್ರಮಾವಿಶ ಕಾಮೇನತ್ವಾ ಪ್ರತಿಕೃಷ್ಣಾಮಿ ಕಾಮೃತ ವೃಷ್ಟಿರಸಿದ್ಧ ಸ್ವಾದದಾತು ಪೃಥಿವೀ ಪ್ರತಿಕೃಾತು ಈ ಮಂತ್ರವನ್ನು ಬೇರೆಯವರಿಂದ ಹೇಳಿಸತಕ್ಕದ್ದು. ನಂತರ ೧೩೨ ಧರ್ಮಸಿಂಧು ಯಜಮಾನನು “ತಂದೇವಿಮೇಗ್ರತೋಭೂಯಾಸ್ತುಲಸೀ ದೇವಿ ಪಾರ್ಶ್ವತ ದೇವಂ ಪೃಷ್ಠ ತೋಭೂಯಾ ದ್ದಾನಾನ್ನೂಕ್ಷಮಾಪ್ನುಯಾಮ್||” ಹೀಗೆ ಪ್ರಾರ್ಥಿಸಿ ದಾನದ ಪ್ರತಿಷ್ಠಾಸಿದ್ಧಿಗಾಗಿ “ಇಮಾಂ ದಕ್ಷಿಣಾಂ ಸಂಪ್ರದದೇ” ಎಂದು ದೇವನ ಮುಂಗಡೆಯಲ್ಲಿ ದಕ್ಷಿಣೆಯನ್ನರ್ಪಿಸುವದು. ಆಮೇಲೆ “ಸ್ವಸ್ತಿನೋಮಿಮೀತಾ” “ಶಂನ” ಇತ್ಯಾದಿ ತಮ್ಮ ಶಾಖೋಕ್ತಗಳಾದ ಶಾಂತಿಸೂಕ್ತ, ಹಾಗೂ ವಿಷಸೂಕ್ತಗಳನ್ನು ಪಠಿಸುವದು. ತುಲಸೀಸಹಿತನಾದ ವಿಷ್ಣುವಿಗೆ ಮಹಾನೀರಾಜನ (ಆರತಿ)ವನ್ನು ಮಾಡಿ ಮಂತ್ರಪುಷ್ಪವನ್ನರ್ಪಿಸಿ ಪತ್ನಿ, ಸಗೋತ್ರ, ಮಂತ್ರಿ ಮೊದಲಾದವರಿಂದ ಸಮೇತನಾಗಿ ಯಜಮಾನನು ನಾಲ್ಕಾವರ್ತಿ ಪ್ರದಕ್ಷಿಣ ಮಾಡತಕ್ಕದ್ದು. ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಟ್ಟು ಯಥಾಶಕ್ತಿ ಬ್ರಾಹ್ಮಣಭೋಜನವನ್ನು ಸಂಕಲ್ಪಿಸಿ ಕರ್ಮವನ್ನು ಈಶ್ವರಾರ್ಪಣ ಮಾಡತಕ್ಕದ್ದು. ಹೀಗೆ ದೇವನನ್ನು ಎಬ್ಬಿಸಿ (ಪ್ರಬೋಧೋತ್ಸವ ಮಾಡಿ) ಕಾರ್ತಿಕದಲ್ಲಿ ಯಾವ್ಯಾವ ವಸ್ತುಗಳನ್ನು ತ್ಯಾಜ್ಯ ಮಾಡಿರುವನೋ ಆಯಾಯ ವಸ್ತುಗಳನ್ನು ಉಕ್ತವಾದ ರೀತಿಯಿಂದ ಬೇರೆ ವಸ್ತುಗಳನ್ನು ಬ್ರಾಹ್ಮಣರಿಗೆ ದಾನಮಾಡಿ ವ್ರತಸಂಪೂರ್ತಿಗಾಗಿ “ಇದಂ ಪ್ರತಂ ಮಯಾದೇವ ಕೃತಂಪ್ರೀ ತವಪ್ರಭೋ ನ್ಯೂನಂ ಸಂಪೂರ್ಣತಾಂ ಯಾತು ಸಾದಾಜ್ಜನಾರ್ದನ! “ಹೀಗೆ ಪ್ರಾರ್ಥಿಸಿ ವ್ರತವನ್ನು ಭಗವದರ್ಪಣ ಮಾಡತಕ್ಕದ್ದು. ಇದರಲ್ಲಿಯೇ ಚಾತುರ್ಮಾಸ್ಯವ್ರತ ಸಮಾಪ್ತಿಯಾಗತಕ್ಕದ್ದೆಂದು ಕೆಲವರು ಹೇಳುವರು. ಕೆಲವರು ಕಾರ್ತಿಕಮಾಸ ವ್ರತೋದ್ಯಾಪನ ಹಾಗೂ ಚಾತುರ್ಮಾಸ್ಯ ವ್ರತೋದ್ಯಾಪನಗಳನ್ನು ಚತುರ್ದಶಿ ಅಥವಾ ಹುಣ್ಣಿಮೆಯಲ್ಲಿ ಮಾಡತಕ್ಕದ್ದನ್ನುವರು. ವೈಕುಂಠ ಚತುರ್ದಶೀ (ಕಾರ್ತಿಕ ಶುಕ್ಲ ಚತುರ್ದಶಿ) ಮುಂಚಿನ ದಿನ ಉಪವಾಸ ಮಾಡಿ ಅರುಣೋದಯ ವ್ಯಾಪ್ತಿಯುಳ್ಳ ಚತುರ್ದಶಿಯಲ್ಲಿ ಬೆಳಿಗ್ಗೆ ಶಿವನನ್ನು ಪೂಜಿಸಿ ಪಾರಣ ಮಾಡತಕ್ಕದ್ದು. ಚತುರ್ದಶೀಯುಕ್ತ ಅರುಣೋದಯವುಳ್ಳ ಅಹೋರಾತ್ರಿಯಲ್ಲಿ ಉಪವಾಸ ಘಟಿಸಿದಂತಾಗಿ ಅದು ಯುಕ್ತವಾಗುವದು. ಎರಡೂದಿನ ಅರುಣೋದಯ ವ್ಯಾಪ್ತಿಯಾದಾಗ ಮುಂದಿನ ಅರುಣೋದಯದಲ್ಲಿ ಪೂಜೆ, ಹಿಂದಿನ ದಿನ ಉಪವಾಸ ಹೀಗೆ ಮಾಡತಕ್ಕದ್ದು. ಎರಡೂ ಕಡೆಗಳಲ್ಲಿ ವ್ಯಾಪ್ತಿಯಿಲ್ಲದಿದ್ದರೆ ಚತುರ್ದಶೀಯುಕ್ತವಾದ ದಿನದಲ್ಲಿಯೇ ಅರುಣೋದಯದಲ್ಲಿ ಪೂಜೆಯು, ಅದರ ಪೂರ್ವದಿನ ಉಪವಾಸವು. ಕೆಲವರು “ವಿಷ್ಟುಪೂಜೆಯಲ್ಲಿ ಇದು ನಿಶೀಥವ್ಯಾಪಿನಿಯಾದದ್ದು ಗ್ರಾಹ್ಯ, ಎರಡೂದಿನ ವ್ಯಾಪ್ತಿಯಿದ್ದರೆ ನಿರೀಫ ಮತ್ತು ಪ್ರದೋಷ ವ್ಯಾಪ್ತಿಯಿದ್ದದ್ದು ಗ್ರಾಹ್ಯ” ಎಂದು ಹೇಳುವರು. ಇದೇ ಚತುರ್ದಶಿಯು ಪರವಿದ್ದವಾಗಿದ್ದಾಗ ಕಾರ್ತಿಕಮಾಸದ ವ್ರತೋದ್ಯಾಪನೆಯ ಅಂಗವಾಗಿ ಉಪವಾಸವನ್ನು ಮಾಡಿ, ಅಧಿವಾಸವನ್ನು ಮಾಡಿ, ರಾತ್ರಿಯಲ್ಲಿ ಗಾಯನ, ವಾದನಾದಿಗಳಿಂದ ಜಾಗರಣ ಮಾಡತಕ್ಕದ್ದು. “ಹರಿಜಾಗರ ಸಮಯದಲ್ಲಿ ಗೀತ-ನ್ನತ್ಯಾದಿಗಳನ್ನಾಚರಿಸಿದರೆ ಸಹಸ್ರ ಗೋದಾನಮಾಡಿದ ಪುಣ್ಯವು ಲಭಿಸುವರು” ಇತ್ಯಾದಿ ವಚನಗಳಿರುವದರಿಂದ ಗೀತ, ನೃತ್ಯ, ವಾದ್ಯ, ವಿಷ್ಣು ಕಥಾ ಪಠನ, ಶ್ರವಣ, ಸೈಚಾಲಾಪ, ಲೀಲಾ, ಅನುಕರಣ (ಹಾಸ್ಯ) ಮೊದಲಾದವುಗಳಿಂದ ಹರಿಜಾಗರಮಾಡಿ ಪರವಿದ್ರವಾದ ಹುಣ್ಣಿವೆಯಲ್ಲಿ ಸಪಕನಾಗಿ ಆಚಾರ್ಯನನ್ನು ವರಿಸಿ “ಅತೋ ದೇವಾ” ಎಂಬ ಎರಡು ಮಂತ್ರಗಳಿಂದ ತಿಲ-ಪಾಯಸಗಳನ್ನು ಹೋಮಿಸಿ ಗೋದಾನ ಮಾಡತಕ್ಕದ್ದು. ಹೀಗೆ ಪರಿಚ್ಛೇದ - ೨ ೧೭೩ ಮಾಸವ್ರತೋದ್ಯಾಪನೆಯು. ಕಾರ್ತಿಕ ಶುಕ್ಲ ದ್ವಾದಶಿ ಹಾಗೂ ಪೂರ್ಣಿಮೆಗಳು “ಮಾದಿ"ಗಳು. ಪೂರ್ವಾಹ್ನವ್ಯಾಪಿನಿಯಾದವುಗಳು ಇವು ಗ್ರಾಹ್ಮಗಳು, ಉಳಿದ ವಿಚಾರವನ್ನು ಹಿಂದೆಯೇ ಹೇಳಿದೆ. ಇಲ್ಲಿಗೆ ಚಾತುರ್ಮಾಸ್ಯವ್ರತ ಸಮಾಪ್ತಿಯು. ಚಾತುರ್ಮಾಸ್ಯ ವ್ರತಗಳ ಸಮಾಪ್ತಿಯಲ್ಲಿದಾನಗಳು ನಕ್ತವ್ರತ ಮಾಡಿದ್ದರೆ ಎರಡು ವಸ್ತ್ರಗಳನ್ನು ದಾನಮಾಡತಕ್ಕದ್ದು. ದಿನಬಿಟ್ಟು ದಿನ ಉಪವಾಸ ಮಾಡಿದಲ್ಲಿ ಗೋದಾನ ಮಾಡತಕ್ಕದ್ದು. ಭೂಶಯನ ವ್ರತಮಾಡಿದಲ್ಲಿ ಶಯ್ಯಾದಾನ. ದಿನದ ಆರನೇಭಾಗದ ಭೋಜನದಲ್ಲಿ ಗೋದಾನ, ಅಕ್ಕಿ, ಗೋಧಿ ಮೊದಲಾದ ಧಾನ್ಯದಾನ, ಕೃಚ್ಛವ್ರತದಲ್ಲಿ ಎರಡು ಗೋದಾನಗಳು, ಶಾಕಾಹಾರದಲ್ಲಿ ಗೋವು ಹಾಲಿನ ಆಹಾರ ಅಥವಾ ಹಾಲಿನ ತ್ಯಾಗವ್ರತದಲ್ಲಿ ಗೋವು; ಜೇನುತುಪ್ಪ, ಮೊಸರು. ತುಪ್ಪ ಇವುಗಳ ತ್ಯಾಗದಲ್ಲಿ ವಸ್ತ್ರ ಮತ್ತು ಗೋವು, ಬ್ರಹ್ಮಚರ್ಯ ವ್ರತದಲ್ಲಿ ಸುವರ್ಣವು ತಾಂಬೂಲ ವರ್ಜನದಲ್ಲಿ ವಸ್ತ್ರದ ಜೋಡಿಯು, ಮೌನದಲ್ಲಿ ಘಂಟೆ ಮತ್ತು ತುಪ್ಪದ ಕುಂಭ ಮತ್ತು ಜೋಡುವಸ್ತ್ರ, ರಂಗವಲ್ಲೀಕರಣದ ವ್ರತದಲ್ಲಿ ಗೋವು ಮತ್ತು ಸುವರ್ಣ ಕಮಲವು ದೀಪದಾನ ವ್ರತದಲ್ಲಿ ದೀಪದ ಗುಡ್ಡ ಮತ್ತು ಜೋಡುವಸ್ತ್ರ, ನೆಲದಲ್ಲಿ ಭೋಜನಮಾಡಿದಲ್ಲಿ ಕಂಚಿನ ಪಾತ್ರ ಮತ್ತು ಗೋವು, ಗೋಗ್ರಾಸವ್ರತದಲ್ಲಿ ಗೋವು ಮತ್ತು ವೃಷಭದಾನ, ನೂರು ಪ್ರದಕ್ಷಿಣಾವ್ರತದಲ್ಲಿ ವಸ್ತ್ರ, ಅಭ್ಯಂಗ ವರ್ಜನಮಾಡಿದಲ್ಲಿ ತೈಲಪೂರ್ಣವಾದ ಕುಂಭ, ಉಗುರು-ಕೇಶಗಳ ಧಾರಣದಲ್ಲಿ (ಉಗುರು ಮತ್ತು ಕೇಶಗಳನ್ನು ಕತ್ತರಿಸದೆ ಇರುವ ವ್ರತ) ಜೇನುತುಪ್ಪ, ತುಪ್ಪ, ಬಂಗಾರ ದಾನಗಳು, ದಾನವನ್ನು ಹೇಳಿದ ವಿಷಯದಲ್ಲಿ ಸುವರ್ಣ ಮತ್ತು ಗೋವು ಎಂದು ತಿಳಿಯತಕ್ಕದ್ದು. ಗುಡವರ್ಜನ ವ್ರತದಲ್ಲಿ ಬೆಲ್ಲದಿಂದ ತುಂಬಿದ ತಾಮ್ರ ಪಾತ್ರೆಯನ್ನು ಸುವರ್ಣಸಹಿತವಾಗಿ ದಾನಮಾಡತಕ್ಕದ್ದು. ಇದರಂತೆ ಲವಣ ವರ್ಜನದಲ್ಲಿ ಉಪ್ಪುತುಂಬಿದ ತಾಮ್ರಪಾತ್ರವನ್ನು ದಾನಮಾಡಬೇಕೆಂದು ಕೆಲವು ಕಡೆಯಲ್ಲಿ ಹೇಳಿದೆ. ಆಷಾಢ ಮಾಸದಲ್ಲಾರಂಭಿಸಿದ ಲಕ್ಷಪ್ರದಕ್ಷಿಣಾ, ಲಕ್ಷನಮಸ್ಕಾರ ಮೊದಲಾದವುಗಳ ಉದ್ಯಾಪನೆಯನ್ನು ಇದೇ ಹುಣ್ಣಿವೆಯಲ್ಲೇ ಮಾಡತಕ್ಕದ್ದು. ಲಕ್ಷಪೂಜಾಫಲಾದಿಗಳು ಹೀಗೆಯೇ ತುಲಸಿಗಳಿಂದ ಲಕ್ಷಪೂಜೆಯನ್ನು ಕಾರ್ತಿಕ ಅಥವಾ ಮಾಘದಲ್ಲಾರಂಭಿಸಿ ಪ್ರತಿದಿನ ಸಹಸ್ರ ತುಲಸಿಗಳಂತೆ “ಲಕ್ಷವನ್ನು ಮುಗಿಸಿ ಮಾಘ ಅಥವಾ ವೈಶಾಖದಲ್ಲಿ ಉದ್ಯಾಪನೆ ಮಾಡತಕ್ಕದ್ದು. ಇದರಂತ ಪುಷ್ಪಾದಿಗಳಿಂದಲೂ ಲಕ್ಷಪೂಜೆಯನ್ನು ಮಾಡಬಹುದು. ಲಕ್ಷ ಬಿಲ್ವಪತ್ರೆಗಳಿಂದ ಲಕ್ಷ್ಮೀ ಪ್ರಾಪ್ತಿಯು, ದೂರ್ವಾಲಕ್ಷದಿಂದ ಅರಿಷ್ಟ ನಿವಾರಣೆಯು, ಸಂಪಿಗೆಯ ಲಕ್ಷದಿಂದ ಆಯುರ್ವ್ಯದ್ದಿಯು. ಅಗಸೇ ಹೂವಿನ ಲಕ್ಷದಿಂದ ವಿದ್ಯಾಪ್ರಾಪ್ತಿ, ತುಲಸೀಲಕ್ಷದಿಂದ ವಿಷ್ಣುವಿನ ಅನುಗ್ರಹಪ್ರಾಪ್ತಿ, ಗೋಧಿ, ಅಕ್ಕಿ ಮೊದಲಾದ ಪ್ರಶಸ್ತಿ ಧಾನ್ಯಗಳ ಲಕ್ಷದಿಂದ ದುಃಖನಾಶವು. ಹೀಗೆಯೇ ಸರ್ವಪುಷ್ಪಗಳಿಂದ ಸಕಲ ಇಷ್ಟಾರ್ಥ ಸಿದ್ಧಿಯು, ಇದರಂತೆ ಲಕ್ಷವರ್ತಿ ವ್ರತವನ್ನಾದರೂ ಮೂರು ತಿಂಗಳುಮಾಡಿ ಮುಂದು ಮುಂದಿನ ಪ್ರಶಸ್ತಿಗಳಾದ ಕಾರ್ತಿಕ, ಮಾಘ ಅಥವಾ ವೈಶಾಖದಲ್ಲಿ ಉದ್ಯಾಪನ ಮಾಡತಕ್ಕದ್ದು. ಇದರಂತೆ ಧಾರಣ- ಪಾರಣ- ವ್ರತೋದ್ಯಾಪನೆಯನ್ನಾದರೂ ಇದೇ ಹುಣ್ಣಿವೆಯಲ್ಲೇ ಮಾಡತಕ್ಕದ್ದು, ಕಾರ್ತಿಕಮಾಸ ವ್ರತಗಳಾದ ೧೩೪ ಧರ್ಮಸಿಂಧು ಮಾಸೋಪವಾಸಾದಿಗಳನ್ನು ದ್ವಾದಶಿಯಲ್ಲೇ ಸಮಾಪನ ಮಾಡತಕ್ಕದ್ದು, ಅದರಲ್ಲಿ ಅಸಂಭವವಾದರೆ ಹುಣ್ಣಿಮೆಯಲ್ಲಿ ಮಾಡತಕ್ಕದ್ದು. ಇದರಂತೆ ಗೋವದ್ಮವ್ರತವನ್ನು ಆಷಾಢ ಶುಕ್ಷಕಾದಶ್ಯಾದಿಗಳಲ್ಲಾರಂಭಿಸಿ ಮೂವತ್ತು ಮೂರು ಗೋಪದ್ಮಮಂಡಲ ಬರೆದು ಗಂಧ, ಪುಷ್ಪಾದಿಗಳಿಂದ ಪೂಜಿಸಿ ಅಷ್ಟೇ ಸಂಖ್ಯೆಗಳಿಂದ ಅರ್ಥ್ಯ, ಪ್ರದಕ್ಷಿಣ, ನಮಸ್ಕಾರಗಳನ್ನು ಮಾಡಿ ಕಾರ್ತಿಕ ಶುಕ್ಲ ದ್ವಾದಶಿಯಲ್ಲಿ ಮೂವತ್ತು ಮೂರು ಮೋದಕಸಹಿತವಾದ ವಾಯನವನ್ನು ಕೊಡತಕ್ಕದ್ದು. ಹೀಗೆ ಐದು ವರ್ಷ ಮಾಡಿ ಉದ್ಯಾಪನ ಮಾಡತಕ್ಕದ್ದು. ಲಕ್ಷಪ್ರದಕ್ಷಿಣಾದಿ ಗೋಪದ್ಮಪರ್ಯಂತ ಮಾಡುವ ಉದ್ಯಾಪನ ವಿಧಾನಗಳನ್ನೆಲ್ಲ ಕೌಸ್ತುಭ’ದಲ್ಲಿ ನೋಡತಕ್ಕದ್ದು. ಕಾರ್ತಿಕ ಹುಣ್ಣಿವೆಯಲ್ಲಿ ಕೃತ್ತಿಕಾನಕ್ಷತ್ರಯೋಗವಾದರೆ ಅದು ಅತಿ ಪುಣ್ಯಪ್ರದವು. ರೋಹಿಣಿ ಯೋಗವಾದಾಗ ಅದಕ್ಕೆ “ಮಹಾಕಾರ್ತಿಕೀ” ಎನ್ನುವರು. ಕೃತಿಕಾನಕ್ಷತ್ರ ಯುಕ್ತವಾದ ಕಾರ್ತಿಕ ಹುಣ್ಣಿವೆಯಲ್ಲಿ “ಕಾರ್ತಿಕ ಸ್ವಾಮಿಯ ದರ್ಶನಮಾಡುವವನು ಏಳು ಜನ್ಮಗಳಲ್ಲಿ ಧನಾಡ್ಯನೂ, ವೇದಪಾರಂಗತನೂ ಆದ ಬ್ರಾಹ್ಮಣನಾಗಿ ಜನಿಸುವನು. ಸೂರ್ಯನು ವಿಶಾಖಾನಕ್ಷತ್ರದಲ್ಲಿರುವಾಗ ಚಂದ್ರನಕ್ಷತ್ರ ಕೃತ್ತಿಕೆಯಾದ ಆ ಯೋಗದ ದಿನಕ್ಕೆ “ಪದ್ಮಕ” ಯೋಗವನ್ನುವರು. ಪುಷ್ಕರತೀರ್ಥದಲ್ಲಿ ಈ ಯೋಗವು ಅತಿ ಪ್ರಶಸ್ತವು. ಈ ಪೂರ್ಣಿಮೆಯಲ್ಲಿಯೇ “ತ್ರಿಪುರಾಖ್ಯ ದೀಪದಾನವು ಹೇಳಲ್ಪಟ್ಟಿದೆ. (ತ್ರಿಪುರೋತ್ಸವ) ವೃಷೋತ್ಸರ್ಗ ಕಾಲನಿರ್ಣಯ “ಕಾವ್ಯ ವೃಷೋತ್ಸರ್ಗ"ಕ್ಕೆ ಕಾರ್ತಿಕ ಪೂರ್ಣಿಮೆಯು ಅತಿ ಪ್ರಶಸ್ತ ಕಾಲವು. ಇದರಂತ ಗಜ, ಅಶ್ವ, ರಥ, ಧೃತ, ಧೇನು ಮೊದಲಾದ ಮಹಾದಾನಗಳಿಗೂ ಪ್ರಶಸ್ತವು. ವೃಷೋತ್ಸರ್ಗಕ್ಕೆ ಆಶ್ವಿನ ಹುಣ್ಣಿವೆ, ಎರಡು ಗ್ರಹಣ( ಸೂರ್ಯ-ಚಂದ್ರ)ಗಳು, ಎರಡು ಅಯನಗಳು, ಎರಡು ವಿಷುವದಿನಗಳು ಇವೂ ಉತ್ತಮ ಕಾಲಗಳೇ. ಇನ್ನು ಬೇರೆ ಕಡೆಯ ಮಾಘ, ಪಾಲ್ಗುಣ, ಚೈತ್ರ, ವೈಶಾಖ, ಆಷಾಢ ಈ ಪೂರ್ಣಿಮಗಳು ಹಾಗೂ ರೇವತೀನಕ್ಷತ್ರ, ವೈಧೃತಿ, ವೃತಿಪಾತ, ಯೋಗ, ಯುಗಾದಿ, ಮನ್ವಾದಿ, ಸೂರ್ಯಸಂಕ್ರಾಂತಿ, ಪಿತೃಮೃತತಿಥಿ, ಅಷ್ಟಕಾಶಾಸ್ತ್ರ ಇತ್ಯಾದಿ ಕಾಲಗಳನ್ನು ಹೇಳಿದೆ. ನಾನಾ ಶಾಖಾಭೇದದಿಂದ ಭಿನ್ನ ಹಾಗೂ ವಿಸ್ತ್ರತವಾದ ವೃಷೋತ್ಸರ್ಗ ಪ್ರಯೋಗವನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ಕಾರ್ತಿಕ ಕೃಷ್ಣ ಅಷ್ಟಮಿಯು “ಕಾಲಾಷ್ಟಮಿ"ಯು. ಇದು ಪೂರ್ಣಿಮಾಂತ ಮಾಸಗಣನೆಯಲ್ಲಿ ಮಾರ್ಗಶೀರ್ಷ ಕೃಷ್ಣಾಷ್ಟಮಿಯಾಗುವದು. (ಪೂರ್ಣಿಮಾಂತಮಾಸದಲ್ಲಿ ಮೊದಲು ಕೃಷ್ಣಪಕ್ಷ ನಂತರ ಶುಕ್ಲ ಪಕ್ಷ ಅದು ಮಧ್ಯಾಹ್ನ ವ್ಯಾಪಿನಿಯು ಗ್ರಾಹ್ಯವು. ಎರಡೂ ದಿನ ಮಧ್ಯಾಹ್ನ ವ್ಯಾಪ್ತಿಯಿದ್ದರೆ ಪೂರ್ವವು ಗ್ರಾಹ್ಯವೆಂದು ನಿರ್ಣಯಸಿಂಧುವಿನ ಮತವು. ಪ್ರದೋಷವ್ಯಾಪಿನಿಯು ಗ್ರಾಹ್ಯವೆಂದು ಕೌಸ್ತುಭದಲ್ಲಿ ಹೇಳಿದೆ. ಎರಡು ದಿನಗಳಲ್ಲಿಯೂ ಪ್ರದೋಷವ್ಯಾಪ್ತಿಯದ್ದಾಗ ಅಥವಾ ಪ್ರದೋಷ ಏಕದೇಶವ್ಯಾಪ್ತಿಯಿದ್ದಾಗ ಪರವೇ ಗ್ರಾಹ್ಯವು. ಇನ್ನು ಪೂರ್ವದಿನ ಪ್ರದೋಷದಲ್ಲಿಯೇ ವ್ಯಾಪ್ತಿಯದು ಪರದಿನ ಮಧ್ಯಾಹ್ನದಲ್ಲಷ್ಟೇ ವ್ಯಾಪ್ತಿಯಿದ್ದಾಗ ಬಹು ಶಿಷ್ಟಸಂಪ್ರದಾಯಾನುಸಾರವಾಗಿ ಪ್ರದೋಷವ್ಯಾಪ್ತಿಗೇ ಪ್ರಾಶಸ್ತ್ರ ಹೊರತು ಮಧ್ಯಾಹ್ನ ವ್ಯಾಪ್ತಿಗಲ್ಲವೆಂದು ತೋರುತ್ತದೆ. ಇದರಲ್ಲಿ “ಕಾಲಭೈರವ ಪೂಜೆಯನ್ನು ಹೇಳಿದೆ. ಪರಿಚ್ಛೇದ - ೨ OLR ಪೂಜೆಯ ನಂತರ ಮೂರು ಆರ್ಘಗಗಳನ್ನು ಕೊಡತಕ್ಕದ್ದು. ಮತ್ತು ಉಪವಾಸ, ಜಾಗರಣಗಳನ್ನೂ ಮಾಡತಕ್ಕದ್ದು. ಇಲ್ಲಿಗೆ ಕಾರ್ತಿಕಮಾಸ ಕೃತ್ಯಗಳ ನಿರ್ಣಯೋದ್ದೇಶವು ಮುಗಿಯಿತು. ಮಾರ್ಗಶೀರ್ಷ ಮಾಸ ಕೃತ್ಯಗಳು ಇದರಲ್ಲಿ ಧನು ಸಂಕ್ರಾಂತಿ, ಮುಂದಿನ ಹದಿನಾರು ಘಟಗಳು ಪುಣ್ಯಕಾಲ. ವಿಶೇಷವನ್ನೆಲ್ಲ ಹಿಂದೆಯೇ ಹೇಳಿದೆ. ಮಾರ್ಗಶೀರ್ಷ ಶುಕ್ಲ ಪಂಚಮಿಯಲ್ಲಿ ನಾಗಪೂಜೆ. ಇದು ದಾಕ್ಷಿಣಾತ್ಯರಲ್ಲಿ ರೂಢವಿದೆ. ಷಷ್ಟಿಯುತವಾದ ಪಂಚಮಿಯು ಗ್ರಾಹ್ಯವಾದದ್ದು; ಎಂಬಿತ್ಯಾದಿ ವಿಶೇಷವನ್ನು ಪ್ರಥಮ ಪರಿಚ್ಛೇದದಲ್ಲಿ ಹೇಳಿದೆ. ಮಾರ್ಗಶೀರ್ಷ ಶುಕ್ಲ ಷಷ್ಠಿಯು ಚಂಪಾಷಷ್ಠಿ, ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಸಿದ್ಧವಿದೆ. ಎರಡು ತಿಥಿಗಳು ಬಂದಾಗ ರವಿವಾರ, ಕುಜವಾರ, ಶತಭಿಷ, ವೈಧೃತಿ ಇವುಗಳ ಪೈಕಿ ಯಾವ ದಿನದಲ್ಲಿ ಹೆಚ್ಚಿನ ಯೋಗವುಂಟಾಗುತ್ತದೋ ಆ ದಿನ ಅದು ಪೂರ್ವವಾಗಲೀ ವರದಿನವಾಗಲಿ ಮೂರುಮುಹೂರ್ತ ವ್ಯಾಪಿನಿಯಾದದ್ದು ಗ್ರಾಹ್ಯ. ಎರಡೂದಿನ ಹೇಳಿದ ಯೋಗಗಳ ಅಭಾವದಲ್ಲಿ ತ್ರಿಮುಹೂರ್ತ ವ್ಯಾಪಿನಿಯಾದ ಪರದಿನವೇ ಗ್ರಾಹ್ಯವು. ಇದಕ್ಕೆ “ಸ್ಕಂದಷಷ್ಟಿ” ಎಂದೂ ಅನ್ನುವರು. ಅದು ಪೂರ್ವವು ಗ್ರಾಹ್ಯವು. ಇದೇ ಸಪ್ತಮಿಯಲ್ಲಿ “ಸೂರ್ಯವ್ರತ"ವನ್ನು ಹೇಳಿದೆ. ಅದರ ವಿಧಾನವನ್ನು ಕೌಸ್ತುಭದಲ್ಲಿ ನೋಡುವದು. ಮೃಗಶಿರಾ ನಕ್ಷತ್ರಯುಕ್ತವಾದ ಈ ಹುಣ್ಣಿವೆಯಲ್ಲಿ ಲವಣದಾನಮಾಡಿದರೆ, ಸುಂದರ ರೂಪತ್ವ ಪ್ರಾಪ್ತವಾಗುವದು. ಮಾರ್ಗಶೀರ್ಷ ಪೂರ್ಣಿಮೆಯಲ್ಲಿ ದತ್ತಾತ್ರೇಯನ ಉತ್ಪತ್ತಿಯು ಇದು ಪ್ರದೋಷವ್ಯಾಪಿನಿಯು ಗ್ರಾಹ್ಮವು, ಮಾರ್ಗಶೀರ್ಷ ಶುಕ್ಲ ಚತುರ್ದಶೀ ಅಥವಾ ಹುಣ್ಣಿವೆಯಲ್ಲಿ ಪ್ರದೋಷಕಾಲದಲ್ಲಿ ಅಶ್ವಲಾಯನರು “ಪ್ರತ್ಯವರೋಹಣ’ವೆಂಬ ಕರ್ಮವನ್ನಾಚರಿಸತಕ್ಕದ್ದು. ಅದಕ್ಕೆ ಕರ್ಮಕಾಲವ್ಯಾಪಿನಿ ತಿಥಿಯಿರತಕ್ಕದ್ದು, ಅದರ ಪ್ರಯೋಗವನ್ನು “ಪ್ರಯೋಗರತ ಕೌಸ್ತುಭಾ"ದಿ ಗಳಿಂದ ತಿಳಿಯತಕ್ಕದ್ದು. ಮಾರ್ಗಶೀರ್ಷ -ಪುಷ್ಯ-ಮಾಘ-ಪಾಲ್ಕುನ ಇವುಗಳ ಕೃಷ್ಣ ಅಷ್ಟಮಿಗಳಲ್ಲಿ “ಅಷ್ಟಕಾಶ್ರಾದ್ಧ” ಗಳು ವಿಹಿತವಾಗಿವೆ. ಅವುಗಳ ಹಿಂದಿನ ಸಪ್ತಮಿಗಳಲ್ಲಿ “ಪೂರ್ವದು “ಶ್ರಾದ್ಧಗಳು. ಅವುಗಳ ಮುಂದಿನ ನವಮಿಗಳಲ್ಲಿ “ಅನ್ನಷ್ಟಕ್ಕ ಶ್ರಾದ್ಧಗಳು. ಹೀಗೆ ಮಾಡತಕ್ಕದ್ದು. ಇವುಗಳನ್ನು ನಾಲ್ಕು ತಿಂಗಳಲ್ಲಿ ಮಾಡತಕ್ಕದ್ದಿರುವದರಿಂದ “ಚತುರಷ್ಟಕಗಳಾಗುವವು. ಭಾದ್ರಪದ ಕೃಷ್ಣ ಪಕ್ಷದಲ್ಲಿಯೂ ಈ ಅಷ್ಟಕಾದಿ ಶಾಸ್ತ್ರಗಳು ಹೇಳಲ್ಪಟ್ಟಿವೆ. ಇವುಗಳನ್ನು ಹಿಡಿದು “ಪಂಚಾಷ್ಟಕ” ಎಂಬುದೊಂದು ಪಕ್ಷವಾಗುವದು. ಈ ಪಂಚಾಷ್ಟಕ ಪಕ್ಷವು ಆಶ್ವಲಾಯನರ ಹೊರತಾದ ಶಾಖೆಯವರಿಗೆ ಸಂಬಂಧಿಸಿದ್ದು. ಆಶ್ವಲಾಯನರಿಗೆ ಮಾರ್ಗಶೀರ್ಷಾದಿ ಚತುರಷ್ಟಕ ಪಕ್ಷವನ್ನೇ ಹೇಳಿದೆ. ಆಶ್ವಲಾಯನರು ಭಾದ್ರಪದ ಕೃಷ್ಣ ಅಷ್ಟಮಿಯಲ್ಲಿ “ಮಾಘಾವರ್ಷ ಶ್ರಾದ್ಧಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಎಲ್ಲವನ್ನೂ ಅಪ್ರಕಾಶ್ರಾದ್ಧದಂತೆಯೇ ಮಾಡತಕ್ಕದ್ದು. ಸಪ್ತಮಿಯಲ್ಲಿ ‘ಮಾಘಾವರ್ಷಶ್ರಾದ್ದಂ ಕರ್ತುಂ ಪೂರ್ವದು ಶ್ರಾದ್ದಂ ಕರಿಷ್ಟೇ” ಹೀಗೆ ಸಂಕಲ್ಪವು, ನವಮಿಯಲ್ಲಿ “ಅನ್ನಷ್ಟಕಾ ಶ್ರಾದ್ಧಂ ಕರಿಷ್ಯ” ಹೀಗೆ ಸಂಕಲ್ಪದಲ್ಲಿ ವಿಶೇಷವು. ಹೀಗೆ ಭಾದ್ರಪದ ಕೃಷ್ಣಾಷ್ಟಮೀ ಶ್ರದ್ದಕ್ಕೆ “ಮಾಘಾವರ್ಷ” ಸಂಜ್ಞೆಯಿರುವದರಿಂದ ಇದರ ಹೊರತಾದ ಚತುರಷ್ಟಕ ಪಕ್ಷವು ಗ್ರಾಹ್ಯವು. “ಅಷ್ಟಕಾ ಶ್ರಾದ್ಧ “ಗಳೆಂದು ಈ ಮಾರ್ಗಶೀರ್ಷಾದಿ ಪಾಲ್ಕುನ ವರೆಗಿನ ನಾಲ್ಕು ಅಷ್ಟಕಾ ಶ್ರದ್ಧೆಗಳು ಉಕ್ತಗಳಾಗಿವೆಯೆಂದು ತಿಳಿಯತಕ್ಕದ್ದು.(ಈ ವಿಷಯವು ಹಿಂದೆ ಭಾದ್ರಪದ ಮಾಸ ೧೩೬ ಧರ್ಮಸಿಂಧು ಪ್ರಕರಣದಲ್ಲಿಯೂ ಬಂದಿದೆ. ಬೇರೆ ಶಾಖೆಯವರಿಗೆ ಭಾದ್ರಪದ ಹಾಗೂ ಮಾರ್ಗಶೀರ್ಷಗಳ ಅಷ್ಟಕಗಳಲ್ಲದೆ ಪುಷ್ಠಾದಿಷ್ಟಕ. ಅಂತೂ ಪಂಚಾಷ್ಟಕ ಪಕ್ಷವು ಗ್ರಾಹ್ಯವು. ಹೀಗೆ ಎಲ್ಲ ಅಷ್ಟಕಗಳನ್ನು ಮಾಡಲಸಮರ್ಥನಾದವನು ಒಂದಾದರೂ ಅಷ್ಟಕವನ್ನು ಮಾಡತಕ್ಕದ್ದು. ಒಂದೇ ಅಷ್ಟಕ ಮಾಡುವದಿದ್ದಲ್ಲಿ ಮಾಘ ಕೃಷ್ಣಪಕ್ಷದ ಸಪ್ತಮೀ ಅಷ್ಟಮೀ-ನವಮೀ ಹೀಗೆ ಮೂರು ದಿನ ಮಾಡತಕ್ಕದ್ದು. ಮೂರು ದಿನ ಮಾಡಲು ಶಕ್ಯವಾಗದಿದ್ದರೆ ಅಷ್ಟಮೀ ಒಂದು ದಿನವಾದರೂ ಮಾಡತಕ್ಕದ್ದು. ಆ ಅಷ್ಟಕಾ ಶ್ರಾದ್ಧದಲ್ಲಿ ಅಪರಾಹ್ನ ವ್ಯಾಪಿನಿಯಾದ ಅಷ್ಟಮಿಯು ಗ್ರಾಹ್ಯವು. ದಿನದ್ವಯದಲ್ಲಿ ವ್ಯಾಪ್ತಿ-ಅವ್ಯಾಪ್ತಿಗಳಲ್ಲಿ ದರ್ಶದಂತೆಯೇ ನಿರ್ಣಯವು. ಅಷ್ಟಮಿಗನುಸರಿಸಿ ಸಪ್ತಮೀ ನವಮಿಗಳಲ್ಲಿ ಪೂರ್ವದುಃಶ್ರಾದ್ದ ಮತ್ತು ಅನ್ನಷ್ಟಕ್ಕೆ ಶ್ರಾದ್ಧೆಗಳನ್ನು ಮಾಡತಕ್ಕದ್ದು. ಹೊರತು ಸಪ್ತಮ್ಯಾದಿಗಳಿಗೆ ಅಪರಾಹ್ನ ವ್ಯಾಪ್ತಿಯನ್ನು ನೋಡತಕ್ಕದ್ದಿಲ್ಲ. ಒಂದು ದಿನವೂ ಮಾಡಲಶಕ್ಯವಾದರೆ ಎತ್ತುಗಳಿಗೆ ಗ್ರಾಸಕೊಡುವದು, ಒಣ ಹುಲ್ಲುಗಳನ್ನು ಅಗ್ನಿಯಲ್ಲಿ ಸುಡುವದು, ವೇದಪಾರಂಗತರಾದವರಿಗೆ ಉದಕುಂಭದಾನಮಾಡುವದು, ಅಥವಾ ಶ್ರಾದ್ಧ ಮಂತ್ರಗಳನ್ನು ಪಠಿಸುವದು. ಇವು ಅದಕ್ಕೆ “ಪ್ರತ್ಯಾಮ್ಯಾಯ"ಗಳು. ಕೆಲಕಡೆಯಲ್ಲಿ ಉಪವಾಸವನ್ನು ಹೇಳಿದೆ. ಹೀಗೆ ಶ್ರವಣಾಕರ್ಮಾದಿ ಪಾಕಸಂಸ್ಥಾಲೋಪವಾದರೂ ಪ್ರತಿಯೊಂದು ಪಾಕಯಜ್ಞದ ಸಲುವಾಗಿ ಪ್ರಾಜಾಪತ್ಯಕೃಚ್ಛಪ್ರಾಯಶ್ಚಿತ್ತವನ್ನಾಚರಿಸತಕ್ಕದ್ದು, ಮಲಮಾಸದಲ್ಲಿ ಅಷ್ಟ ಕಾಶ್ರಾದ್ಧವನ್ನು ಮಾಡಬಾರದೆಂದು “ನಾರಾಯಣ ವೃತ್ತಿಯಲ್ಲಿ ಹೇಳಿದೆ. ಅಷ್ಟಕಾದಿ ಶ್ರಾದ್ಧಪ್ರಯೋಗವನ್ನು ಕೌಸ್ತುಭ, ಪ್ರಯೋಗರತ್ನಾದಿ ಗ್ರಂಥಗಳಲ್ಲಿ ನೋಡತಕ್ಕದ್ದು. ಈ ಅಷ್ಟಮೀ ಶ್ರಾದ್ಧದಲ್ಲಿ ಕಾಮಕಾಲಸಂಸ್ಕೃತ ವಿಶ್ವೇದೇವತೆಗಳು, ಸಪ್ತಮೀ ನವಮಿಗಳಲ್ಲಿ ಪುರೂರವ-ಅದ್ರ್ರವಗಳು. ಆಹಿತಾಗ್ನಿಯಾದವನಿಗೆ ಪೂರ್ವದ್ರು: ಶ್ರಾದ್ಧಾಂಗ ಹೋಮ, ಅಷ್ಟಕಾಂಗ ಹೋಮ, ಅನ್ನಷ್ಟಕಾಂಗಹೋಮಗಳನ್ನು ಹಾಗೂ ಮೂರು ದಿನಗಳಲ್ಲಿ “ಹವಿಶ್ರವಣ (ಚರು ಬೇಯಿಸುವದು) ಇವುಗಳನ್ನು ದಕ್ಷಿಣಾಗ್ನಿಯಲ್ಲಿ ಮಾಡತಕ್ಕದ್ದು. ಇದೇ ವಿಶೇಷವು. ಉಳಿದದ್ದೆಲ್ಲಾ ಅನಾಹಿತಾಗ್ನಿಯವನಂತೆಯೇ, ಅಷ್ಟಕಾಲೋಪವಾದಲ್ಲಿ ಪ್ರಾಜಾಪ್ರತ್ಯಕೃಚ್ಛ ಅಥವಾ ಉಪವಾಸ ಇವು ಪ್ರಾಯಶ್ಚಿತ್ತವು. ಅನ್ನಷ್ಟಕ್ಕೆ ಲೋಪದಲ್ಲಿ “ಏಭಿರ್ದುಭಿಃ ಸುಮನಾಃ” ಈ ಮಂತ್ರವನ್ನು ನೂರಾವರ್ತಿ ಜಪಿಸತಕ್ಕದ್ದು. ಮಾರ್ಗಶೀರ್ಷಾದಿ ಮಾಸಗಳ ರವಿವಾರಗಳಲ್ಲಿ “ಸೌರವ್ರತ"ವನ್ನು ಹೇಳಿದ. ಆ ವ್ರತದ ಕ್ರಮ ಹೀಗಿದೆ-ಮಾರ್ಗಶೀರ್ಷ ಮಾಸದಲ್ಲಿ ಬರುವ ನಾಲ್ಕು ಅಥವಾ ಐದೂ ರವಿವಾರಗಳಲ್ಲಿ ಮೂರು ತುಲಸೀಪತ್ರ ಆಹಾರದಿಂದಿರತಕ್ಕದ್ದು. ಇದರಂತೆ ಪುಷ್ಯದಲ್ಲಿ ಮೂರು ಪಲತುಪ್ಪ, ಮಾಘದಲ್ಲಿ ಮೂರು ಮುಷ್ಟಿ ಎಳ್ಳು, ಫಾಲ್ಗುನದಲ್ಲಿ ಮೂರು ಪಲ ಮೊಸರು, ಚೈತ್ರದಲ್ಲಿ ಮೂರು ಪಲ ಹಾಲು, ವೈಶಾಖದಲ್ಲಿ ಗೋಮಯ, ಜೇಷ್ಠದಲ್ಲಿ ಮೂರು ಬೊಗಸೆ ನೀರು, ಆಷಾಢದಲ್ಲಿ ಮೂರು ಮಣಸಿನಕಾಳು, ಶ್ರಾವಣದಲ್ಲಿ ಮೂರು ಪಲ ಹಿಟ್ಟು, ಭಾದ್ರಪದದಲ್ಲಿ ಗೋಮೂತ್ರ, ಆನದಲ್ಲಿ ಸಕ್ಕರೆ, ಕಾರ್ತಿಕದಲ್ಲಿ ಸಾತ್ವಿಕ (ಶುದ್ಧ) ಅನ್ನ, ಹೀಗೆ ಆಹಾರ ಮಾಡತಕ್ಕದ್ದು. ಇಲ್ಲಿಗೆ ಮಾರ್ಗಶೀರ್ಷ ಮಾಸ ಕೃತ್ಯನಿರ್ಣಯೋದ್ದೇಶವು ಮುಗಿಯಿತು. ಪರಿಚ್ಛೇದ - ೨ 022 ಪುಷ್ಯಮಾಸ ಇದರಲ್ಲಿ ಮಕರಸಂಕ್ರಾಂತಿ. ಹಗಲಿನಲ್ಲಿ ಮಕರಸಂಕ್ರಾಂತಿಯಾದರೆ ಸಂಕ್ರಾಂತಿ ಕಾಲದಿಂದ ಮುಂದೆ ನಾಲ್ವತ್ತುಘಟಿಗಳು ಪುಣ್ಯಕಾಲವು. ಒಂದೆರಡು ಇತ್ಯಾದಿ ಘಟಿ ಹಗಲಿರುವಾಗ ಸಂಕ್ರಾಂತಿಯಾದರೆ, ಸಂಕ್ರಾಂತಿಗೆ ಅತಿಸಮೀಪವಾದ ಪೂರ್ವಕಾಲದ ಹಗಲಿನಲ್ಲೇ ಸ್ನಾನ, ದಾನ, ಶ್ರಾದ್ಧ, ಭೋಜನಗಳನ್ನು ಮಾಡತಕ್ಕದ್ದು. ದಿನಭಾಗವು ಸ್ವಲ್ಪವಿರುವಾಗ ಸಂಕ್ರಾಂತಿಯಾದರೆ (ಒಂದೆರಡು ಘಟಿಸ್ನಾನ, ಶ್ರಾದ್ಧ, ಸ್ವಭೋಜನಾದಿಗಳನ್ನು ಮಾಡುವದಶಕವಾಗುವದು. “ರಾತ್ರಿಯಲ್ಲಿ ಭೋಜನಮಾಡುವಾ” ಎಂದರೆ ರಾತ್ರಿಭೋಜನವು ನಿಷಿದ್ಧವಿದೆ. “ಉಪವಾಸ ಮಾಡಬಹುದು” ಎಂದರೆ ಪುತ್ರವ ಹಸ್ಥರಿಗೆ ಉಪವಾಸ ನಿಷಿದ್ಧವಿದೆ. ಇಂಥ ಸಂದರ್ಭದಲ್ಲಿ “ಪರವೇ ಪುಣ್ಯಕಾಲ"ವು ಎಂಬುದನ್ನು ಭಾವಿಸಿ ಮಕರಸಂಕ್ರಾಂತಿಯ “ಪೂರ್ವಭಾಗವೇ ಪುಣ್ಯಕಾಲ ಎಂದು ತಿಳಿಯತಕ್ಕದ್ದು. ರಾತ್ರಿಯ ಪೂರ್ವಭಾಗ, ಪರಭಾಗ, ಅಥವಾ ಅರ್ಧರಾತ್ರಿಯಲ್ಲಿ ಮಕರ ಸಂಕ್ರಮಣವಾದರೆ ಮುಂದಿನ ದಿನವು ಪುಣ್ಯಕಾಲವು, ಅದರಲ್ಲಿಯೂ ಮುಂದಿನದಿನದ ಪೂರ್ವಾರ್ಧವು ಅತಿಪುಣ್ಯಕರವು. ಅದರಲ್ಲಿಯೂ ಸೂರ್ಯೋದಯ ನಂತರದ ಐದು ಘಟಿಗಳು ಅತ್ಯಂತ ಪುಣ್ಯಕರಗಳು. ಹೀಗೆ ರಾತ್ರಿಸಂಕ್ರಾಂತಿ ವಿಷಯದಲ್ಲಿ ಎಲ್ಲ ಸಂಕ್ರಾಂತಿಗಳಿಗೂ ಪುಣ್ಯಘಟಿ ಪ್ರಾಶಸ್ತ್ರವನ್ನು ತಿಳಿಯುವದು. ಪೂರ್ವದಿನದ ಉತ್ತರಾರ್ಧವು ಪುಣ್ಯಕಾಲವಾದಾಗ ದಿನದ ಅಂತ್ಯದ ಐದು ಘಟಿಗಳು ಅಂತ್ಯದ ಪುಣ್ಯಪ್ರದಗಳು. ಇನ್ನು ಮುಂದಿನ ದಿನದ ಪೂರ್ವಾರ್ಧವು ಪುಣ್ಯಕಾಲವಾದಾಗ ಸೂರ್ಯೋದಯಾನಂತರ ಐದು ಘಟಿಗಳು ಅತಿಪುಣ್ಯಕರಗಳು. ಹೀಗೆ ಹಗಲಿನಲ್ಲಿಯೂ ಸಹ ಸಂಕ್ರಾಂತಿಗೆ ಅತಿಸಮೀಪವರ್ತಿಗಳಾದ ಘಟಿಗಳು (ಮಕರಾದಿಗಳಿಗೆ ಮುಂದಿನ, ಕರ್ಕಾದಿಗಳಿಗೆ ಹಿಂದಿನ) ಅತಿಶಯ ಪುಣ್ಯಕರಗಳಾಗುವವು. “ಯಾಯಾಃ ಸನ್ನಿಹಿತಾನಾಡಸ್ತಾಸ್ತಾ ಪುಣ್ಯತಮಾಃ ಸ್ಮೃತಾಃ” ಎಂದು ವಚನವಿದೆ. ಮುಹೂರ್ತ ಚಿಂತಾಮಣಿ ಮೊದಲಾದವುಗಳಲ್ಲಿ ಸೂರ್ಯಾಸ್ತಾನಂತರ ಮೂರು ಘಟಿಗಳು “ಸಂಧ್ಯಾಕಾಲವು. ಅದರಲ್ಲಿ ಮಕರ ಸಂಕ್ರಾಂತಿಯಾದರೆ ಪರದಿನದ ಪುಣ್ಯತ್ವವನ್ನು ಬಾಧಿಸಿ ಪೂರ್ವದಿನದಲ್ಲೇ ಪುಣ್ಯ ಕಾಲವು ಎಂದು ಹೇಳಿದೆ. ಇದನ್ನು ಎಲ್ಲ ಧರ್ಮಶಾಸ್ತ್ರಗಳಲ್ಲಿ ಹೇಳಿದಂತೆ ಕಾಣುವದಿಲ್ಲ. ಶುಕ್ಲ ಪಕ್ಷದ ಸಪ್ತಮಿಯಲ್ಲಿ ಸಂಕ್ರಾಂತಿಯಾದರೆ ಅದು ಗ್ರಹಣಕ್ಕಿಂತ ಹೆಚ್ಚಿನದೆಂದು ವಚನವಿದೆ (ಶುಕ್ಲ ಪಕ್ಷೇತು ಸಪ್ತಮ್ಯಾಂ ಸಂಕ್ರಾಂತಿಗ್ರ್ರಹಣಾಧಿಕಾ) ಮಕರಸಂಕ್ರಾಂತಿ ಕೃತ್ಯಗಳು ಇದರಲ್ಲಿ ಸ್ನಾನಮಾಡುವದು ಮನುಷ್ಯಮಾತ್ರಕ್ಕೆ ಆವಶ್ಯಕವು. ಸೂರ್ಯಸಂಕ್ರಮಣದಲ್ಲಿ ಸ್ನಾನಮಾಡದವನು ಏಳುಜನ್ಮಪರ್ಯಂತ ರೋಗಿಯೂ, ನಿರ್ಧನನೂ ಆಗುವನೆಂದು ವಚನವಿದೆ. ಆದುದರಿಂದ ಇದು ನಿತ್ಯವು ಅಧಿಕಾರಿಯಾದವನಿಗೆ ಇದರಲ್ಲಿ ಶ್ರಾದ್ಧವಾದರೂ ನಿತ್ಯವೇ, ಶ್ರಾದ್ಧವನ್ನು ಪಿಂಡರಹಿತವಾಗಿ ಮಾಡತಕ್ಕದ್ದು. ದಾತೃಗಳಾದವರು ಈ ಸಂಕ್ರಾಂತಿಯಲ್ಲಿ ಯಾವ್ಯಾವ ವಸ್ತುಗಳನ್ನು ದಾನಮಾಡುವರೋ ಅವರಿಗೆ ಸೂರ್ಯನು ಪುನರ್ಜನ್ಮದಲ್ಲಿ ಆ ವಸ್ತುಗಳನ್ನು ಕೊಡುವನು. ಹೀಗೆ ಫಲಶ್ರುತಿಯಿದೆ. ಅಯನ ಸಂಕ್ರಾಂತಿಯಲ್ಲಿ ಮೂರು ದಿನ ಉಪವಾಸ ಮಾಡಬೇಕೆಂದು ಹೇಳಿದೆ. ಅಥವಾ ಸಂಕ್ರಾಂತಿಯುಕ್ತವಾದ ಇಡೀದಿನ ಇಲ್ಲವೆ ಪುಣ್ಯಕಾಲಯುಕ್ತವಾದ ದಿನದಲ್ಲಿ ಉಪವಾಸಮಾಡಿ ಉಕ್ತವಾದ ಪುಣ್ಯಕಾಲದಲ್ಲಿ ಸ್ನಾನ-ದಾನಾದಿಗಳನ್ನು ಮಾಡತಕ್ಕದ್ದು. ಈ ೧೩೮ ಧರ್ಮಸಿಂಧು ಉಪವಾಸವನ್ನು ಪುತ್ರರುಳ್ಳ ಗೃಹಸ್ಥರು ಮಾಡತಕ್ಕದ್ದಲ್ಲ. ಉತ್ತರಾಯಣದಲ್ಲಿ ತಿಲಧೇನುದಾನ, ಈಶ್ವರಸ್ಥಾನದಲ್ಲಿ ತಿಲತೈಲದಿಂದ ದೀಪವನ್ನುರಿಸುವದು, ತಿಲಮಿಶ್ರಿತವಾದ ಅಕ್ಷತಗಳಿಂದ ವಿಧಿವತ್ತಾಗಿ ಶಿವನನ್ನು ಪೂಜಿಸುವದು, ಕರೇಎಳ್ಳುಹಿಂಡಿಯಿಂದ ತಾನು ಸ್ನಾನಮಾಡುವದು, ಎಳ್ಳುಗಳನ್ನು ದಾನಮಾಡುವದು, ಎಳ್ಳುಗಳಿಂದ ಹೋಮಿಸುವದು, ಎಳ್ಳುಗಳನ್ನು ಭಕ್ಷಿಸುವದು ಇತ್ಯಾದಿ ಪುರಾಣ ವಾಕ್ಯಗಳಿವೆ. ದೇವತರ್ಪಣವನ್ನು ಬಿಳೇಎಳ್ಳುಗಳಿಂದಲೂ, ಪಿತೃತರ್ಪಣವನ್ನು ಕರೇಎಳ್ಳುಗಳಿಂದಲೂ ಮಾಡತಕ್ಕದ್ದು. ಈ ಸಂಕ್ರಾಂತಿಯಲ್ಲಿ ಈಶ್ವರನಿಗೆ ಮೃತಾಭಿಷೇಕ ಮಾಡಿದರೆ ಮಹಾಫಲಪ್ರಾಪ್ತಿ ಹೇಳಿದೆ. ಇದರಲ್ಲಿ ಸುವರ್ಣಸಹಿತವಾದ ತಿಲಪೂರಿತ ತಾಮ್ರ ಪಾತ್ರ” ದಾನವನ್ನು ಹೇಳಿದೆ. ಇದರ ಪ್ರಯೋಗವನ್ನು ಮುಂದೆ ಹೇಳಲಾಗುವದು. ಇದರಲ್ಲಿಯೇ “ಶಿವಪೂಜಾವ್ರತವು ಹೇಳಲ್ಪಟ್ಟಿದೆ. ಪೂರ್ವದಿನ ಉಪವಾಸಮಾಡಿ ಸಂಕ್ರಾಂತಿದಿನ ತಿಲಕಲ್ಯದಿಂದ ಸ್ನಾನಮಾಡಿ ತಿಲತರ್ಪಣವನ್ನು ಮಾಡತಕ್ಕದ್ದು. ಈಶ್ವರ ಲಿಂಗವನ್ನು ಪಂಚಗವ್ಯ-ತುಪ್ಪ ಇವುಗಳಿಂದ ಉಜ್ಜಿ ಶುದ್ಧೋದಕದಿಂದ ತೊಳೆದು ವಸ್ತಾದಿ ಉಪಚಾರಗಳಿಂದ ಪೂಜಿಸತಕ್ಕದ್ದು. ಸುವರ್ಣ, ವಜ್ರ, ಇಂದ್ರನೀಲ, ಪದ್ಮರಾಗ, ಮುತ್ತು, ಹೀಗೆ ಪಂಚರತ್ನ ಮತ್ತು ಅರ್ಧ ಕರ್ಷಪ್ರಮಾಣದ ಸುವರ್ಣವನ್ನರ್ಪಿಸಿ, ಎಣ್ಣೆಯಿಂದ ದೀಪವನ್ನು ಹಚ್ಚಿ ಸುವರ್ಣ ತಿಲ ಸಹಿತವಾದ ಅಕ್ಷತಗಳಿಂದ ಪೂಜಿಸಿ, ಧೃತಕಂಬಲ (ಮೃತಕಂಬಲ ವಿಧಾನವನ್ನು ವ್ರತರಾಜಾದಿಗಳಲ್ಲಿ ಹೇಳಿದ) ಛತ್ರ, ಚಾಮರಾದಿಗಳನ್ನು ಸಮರ್ಪಿಸಿ, ಬ್ರಾಹ್ಮಣರಿಗೆ ತಿಲ, ಸುವರ್ಣಗಳನ್ನು ದಾನಮಾಡಿ, ತಿಲಹೋಮಮಾಡಿ, ಬ್ರಾಹ್ಮಣ ಹಾಗೂ ಯತಿಗಳಿಗೆ ಸಂತರ್ಪಣಮಾಡಿ, ದಕ್ಷಿಣೆಯನ್ನು ಕೊಟ್ಟು, ತಿಲಸಹಿತವಾಗಿ ಪಂಚಗವ್ಯ ಪ್ರಾಶನಮಾಡಿ ಪಾರಣಮಾಡತಕ್ಕದ್ದು. ಇತ್ಯಾದಿ ವಿಧಾನವಿದೆ. ಇದರಲ್ಲಿ ವಸ್ತ್ರದಾನ ಮಾಡಿದರೆ ವಿಶೇಷ ಫಲವಿದೆ. ತಿಲಸಹಿತ ವೃಷಭದಾನಮಾಡಿದರೆ ರೋಗಮುಕ್ತನಾಗುತ್ತಾನೆ. ಹಾಲಿನಿಂದ ಸೂರ್ಯನಿಗೆ ಅಭಿಷೇಕ ಮಾಡಿದರೆ ಸೂರ್ಯಲೋಕ ಪ್ರಾಪ್ತಿಯು, ವಿಷುವ ಮತ್ತು ಅಯನಸಂಕ್ರಾಂತಿಗಳು ಹಗಲಿನಲ್ಲಾದರೆ ಆ ದಿನ ಮತ್ತು ಪೂರ್ವದರಾತ್ರಿ ಹಾಗೂ ಮುಂದಿನರಾತ್ರಿ ಇವು “ಅನಧ್ಯಾಯಗಳಾಗುವವು. ರಾತ್ರಿಯಲ್ಲಿ ಆ ಸಂಕ್ರಾತಿಗಳಾದರೆ ಆ ರಾತ್ರಿ ಹಾಗೂ ಹಿಂದಿನ ಮತ್ತು ಮುಂದಿನ ಹಗಲು ಹೀಗೆ ಪಕ್ಷಿಣೀ ಅನಧ್ಯಾಯವು. ರಾತ್ರಿ ಸಂಕ್ರಮಣವಾದಲ್ಲಿ ಗ್ರಹಣದಂತೆ ರಾತ್ರಿಯಲ್ಲಿಯೇ ಸ್ನಾನಮಾಡತಕ್ಕದ್ದೆಂಬುದೊಂದು ಪಕ್ಷವಿದೆ. ಆದರೆ ಅದು ಸರ್ವಶಿಷ್ಟಸಮ್ಮತವಾದದ್ದಲ್ಲ. ಅಯನದಿನ ಮತ್ತು ಅದರ ಮಾರನೇದಿನಗಳಿಗೆ “ಕರಿದಿನ” ವೆಂಬ ಸಂಸ್ಥೆಯಿದ್ದು ಶುಭಕಾರ್ಯದಲ್ಲಿ ಅದು ವರ್ಜವು ಎಂದು ಹೇಳಿದೆ. ಅರ್ಧರಾತ್ರಿಯ ಮೊದಲು ಅಯನ ಸಂಕ್ರಾಂತಿಯಾದಲ್ಲಿ ಅ ದಿನ ಹಾಗೂ ಮುಂದಿನ ದಿನವು ಶುಭಕಾರ್ಯಕ್ಕೆ ತ್ಯಾಜ್ಯವು. ಮಧ್ಯರಾತ್ರಿಯ ನಂತರ ಸುಕ್ರಾಂತಿಯಾದಲ್ಲಿ ಮುಂದಿನ ಹಾಗೂ ಅದಕ್ಕೂ ಮುಂದಿನ ದಿನಗಳು ವರ್ಜಗಳೆಂದು ತೋರುತ್ತದೆ. ಇದರಂತೆ ಗ್ರಹಣದ ವಿಷಯದಲ್ಲಿಯೂ ಕರಿದಿನಾದಿಗಳನ್ನು ತಿಳಿಯತಕ್ಕದ್ದು. ಪುಷ್ಯ ಶುಕ್ಲ ಅಷ್ಟಮಿಯ ದಿನ ಬುಧವಾರ ಯೋಗವಾದಾಗ ಸ್ನಾನ, ಜಪ, ಹೋಮ, ತರ್ಪಣ, ಬ್ರಾಹ್ಮಣಭೋಜನ ಇವುಗಳನ್ನಾಚರಿಸತಕ್ಕದ್ದು. ಇದಕ್ಕೆ ಭರಣಿಯೋಗವಾದರೆಪರಿಚ್ಛೇದ - ೨ ೧೩೯ ಮಹಾಪುಣ್ಯಕರವೆಂದು ಕೆಲವರನ್ನುವರು. ರೋಹಿಣಿ ಆದ್ರ್ರಾಯೋಗವು ಪುಣ್ಯಪ್ರದವೆಂದು ಕೆಲವರೆನ್ನುವರು. ಪುಷ್ಯಶುಕಾದಶಿಯು “ಮಾದಿ"ಯು. ಈ ವಿಷಯವನ್ನು ಹಿಂದೆಯೇ ಹೇಳಿದ. ಮಾಘಸ್ನಾನ ಪುಷ್ಯ ಶುಕಾದಶೀ, ಹುಣ್ಣಿವೆ, ಅಥವಾ ಅಮಾವಾಸ್ಯೆಯಲ್ಲಿ ಸ್ನಾನವನ್ನಾರಂಭಿಸತಕ್ಕದ್ದು. ಮಾಘದಲ್ಲಿ ದ್ವಾದಶಿ ಪೂರ್ಣಿಮಾದಿಗಳಲ್ಲಿ ಸಮಾಪನ ಮಾಡತಕ್ಕದ್ದು. ಅಥವಾ ಮಕರ ಸಂಕ್ರಮಣದಿಂದಾರಂಭಿಸಿ ಕುಂಭ ಸಂಕ್ರಮಣ ಪರ್ಯಂತ ಸ್ನಾನಮಾಡತಕ್ಕದ್ದು. ಸ್ನಾನಕಾಲವೆಂದರೆ ಅರುಣೋದಯದಿಂದ ನಕ್ಷತ್ರದರ್ಶನವಿರುವ ಪ್ರಾತಃಕಾಲದ ವರೆಗೆ ಉತ್ತಮ, ನಕ್ಷತ್ರವಡಗಿದ ಮೇಲೆ ಮಧ್ಯಮ, ಸೂರ್ಯೋದಯಾನಂತರ ಕನಿಷ್ಠ, ಮಾಘಮಾಸದಲ್ಲಿ ಅಲ್ಪಸೂರ್ಯೋದಯವಾಗುವ ಸಮಯದಲ್ಲಿ ಜಲಗಳು ““ಬ್ರಹ್ಮಹತ್ಯಾ ಅಥವಾ ಸುರಾಪಾನಮಾಡಿದ ಯಾವ ಪಾಪಿಯನ್ನಾದರೂ ನಾವು ಪುನೀತನನ್ನಾಗಿ ಮಾಡುತ್ತೇವೆ” ಎಂದು ಹೇಳುತ್ತವೆಯಂತೆ. ಹೀಗೆ ಪುರಾಣದಲ್ಲಿ ಹೇಳಿದೆ. ಈ ಮಾಘಸ್ನಾನಕ್ಕೆ ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಯತಿ, ಬಾಲ, ವೃದ್ಧ, ಯೌವನಸ್ಥ, ಸ್ತ್ರೀ, ನಪುಂಸಕ ಇತ್ಯಾದಿ ಸಕಲ ಮಾನವರೂ ಅಧಿಕಾರಿಗಳೆಂದು ವಚನವಿದೆ. ಇನ್ನು ಜಲತಾರತಮ್ಯದಿಂದ ಫಲವಿಶೇಷವನ್ನೂ ಹೇಳಿದೆ. ಸೂರ್ಯನು ಮಕರದಲ್ಲಿರುವಾಗ ಮನೆಯಲ್ಲಿ ಬಿಸಿನೀರಿನಿಂದ ಸ್ನಾನಮಾಡಿದರೆ “ಷಡಬ್ಬ ಕೃಚ್ಛ ಫಲವಿದೆ. ಬಾವಿ ಮೊದಲಾದವುಗಳ ಸ್ನಾನದಿಂದ “ದ್ವಾದಶಾಬ್ದಕೃಚ್ಛ ಫಲವು, ತಡಾಗದಲ್ಲಿ ಅದರ ದ್ವಿಗುಣ ಫಲವು, ನದಿಯಲ್ಲಿ ನಾಲ್ಕು ಪಟ್ಟು, ಮಹಾನದಿಯಲ್ಲಿ ನೂರುಪಟ್ಟು, ಮಹಾನದೀ ಸಂಗಮದಲ್ಲಿ ಅದರ ನಾಲ್ಕುಪಟ್ಟು, ಗಂಗೆಯಲ್ಲಿ ಸಹಸ್ರಗುಣ, ಗಂಗಾ-ಯಮುನಾ ಸಂಗಮದಲ್ಲಿ ಇದರ ನೂರು ಪಟ್ಟು ಹೆಚ್ಚಿನ ಫಲವು. ಎಲ್ಲೇ ಸ್ನಾನಮಾಡಿದರೂ ಪ್ರಯಾಗವನ್ನು ಸ್ಮರಿಸತಕ್ಕದ್ದು. ಇದು ಸಮುದ್ರಸ್ನಾನಕ್ಕೂ ಅತಿ ಪ್ರಶಸ್ತಿಕಾಲವು. ಸ್ನಾನವಿಧಾನ ಹೀಗೆ :- “ದುಃಖದಾರಿದ್ರನಾಶಾಯ ಶ್ರೀ ವಿಷ್ಟೋಕ್ರೋಷಣಾಯ ಚ ಪ್ರಾತಃಸ್ನಾನಂ ಕರೋಮದ್ಯ ಮಾಘಪಾಪ ವಿನಾಶನಂ || ಮಕರರ ಮಾಘ ಗೋವಿಂದಾಚ್ಯುತ ಮಾಧವ ಸ್ನಾನೇನಾನೇನ ಮೇದೇವ ಯಥೋಕ್ತ ಫಲದೋಭವ” ಹೀಗೆ ಸಂಕಲ್ಪ ಮಂತ್ರವನ್ನು ಹೇಳಿ ಮೌನಿಯಾಗಿ ಸ್ನಾನಮಾಡತಕ್ಕದ್ದು. ಪ್ರತಿನಿತ್ಯ ಸೂರ್ಯನಿಗೆ “ಪವಿತ್ರಪ್ರಸವಿತ್ರ ಚ ಪರಂಧಾಮ ಜಲೇ ಮಮ ತ್ರತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ಈ ಮಂತ್ರದಿಂದ ಆರ್ಥ್ಯವನ್ನು ಕೊಡತಕ್ಕದ್ದು. ಆಮೇಲೆ ಪಿತೃತರ್ಪಣಾದಿಗಳನ್ನು ಮಾಡಿ ಮಾಧವನನ್ನು ಪೂಜಿಸತಕ್ಕದ್ದು. ಭೂಶಯನ, ತಿಲಮಿಶ್ರವಾದ ಆಜ್ಯದಿಂದ ಹೋಮ, ಹವಿಷ್ಯಾನ್ನ ಭೋಜನ, ಬ್ರಹ್ಮಚರ್ಯ ಇವೆಲ್ಲ ಮಾಘಮಾಸದಲ್ಲಿ ಮಹಾಫಲಗಳನ್ನು ಕೊಡುವವು. ಈ ಮಾಸದಲ್ಲಿ ಕಟ್ಟಿಗೆ, ಕಂಬಳಿ, ವಸ್ತ್ರ, ವಾದುಕೆ, ಎಣ್ಣೆ, ತುಪ್ಪ, ಹತ್ತಿಯ ಹಾಸಿಗೆ, ಸುವರ್ಣ, ಅನ್ನ ಇವುಗಳ ದಾನದಿಂದ ಮಹಾಪುಣ್ಯವು ಲಭಿಸುವದು. ಇದರಲ್ಲಿ ನಿಯಮಗಳು:- ಸ್ನಾನಮಾಡಿದ ಅಥವಾ ಮಾಡದೇ ಇದ್ದವನು ಅಗ್ನಿಯಲ್ಲಿ ಮೈಯ್ಯನ್ನು ಕಾಯಿಸಬಾರದು. ಅಗ್ನಿಯನ್ನು ಹೋಮಾರ್ಥವಾಗಿ ಬಳಸಬಹುದೇ ಹೊರತು ಶೀತನಿವಾರಣೆಗಾಗಿ ಉಪಯೋಗಿಸಬಾರದು. ಪ್ರತಿದಿನ ಸಕ್ಕರೆಯಿಂದ ಕೂಡಿದ ಎಳ್ಳುಗಳನ್ನು ದಾನಮಾಡತಕ್ಕದ್ದು. ಮೂರುಭಾಗ ಎಳ್ಳು, ಒಂದುಭಾಗ ಸಕ್ಕರೆ ಹೀಗೆ ಕೂಡಿಸಿ ಕೊಡತಕ್ಕದ್ದು, ೧೪ ಧರ್ಮಸಿಂಧು ಇತ್ಯಾದಿ ನಿಯಮಗಳನ್ನು ಪುರಾಣದಲ್ಲಿ ಹೇಳಿದೆ. ಇದರಲ್ಲಿ ಅಭ್ಯಂಗವು ವರ್ಜ್ಯವು. ಮಾಘಮಾಸದಲ್ಲಿ ಉಷಃಕಾಲದಲ್ಲಿ ಸ್ನಾನಮಾಡಿ ದಂಪತೀ ಪೂಜೆಯನ್ನು ಮಾಡತಕ್ಕದ್ದು, ಮಾಘದಲ್ಲಿ ಪ್ರಯತ್ನಪೂರ್ವಕವಾಗಿಯಾದರೂ ಮೂಲಂಗಿ ಮೊದಲಾದವುಗಳನ್ನು ಬಿಡತಕ್ಕದ್ದು. ಮತ್ತು ಪಿತೃಗಳಿಗೂ ದೇವತೆಗಳಿಗೂ ಅವುಗಳನ್ನರ್ಪಿಸಕೂಡದು. ಮಾಘಮಾಸವು ಮಲಮಾಸವಾದರೆ ಅದರಲ್ಲಿ ಕಾವ್ಯಕರ್ಮಸಮಾಪನೆಗೆ ನಿಷೇಧ ಹೇಳಿರುವದರಿಂದ ಎರಡು ತಿಂಗಳು ಸ್ನಾನ ಮತ್ತು ನಿಯಮಗಳನ್ನಾಚರಿಸಿ ನಂತರ ಉದ್ಯಾಪನ ಮಾಡತಕ್ಕದ್ದು. ಇನ್ನು ಮಾಸೋಪವಾಸ ಮತ್ತು ಚಂದ್ರಾಯಣಾದಿಗಳನ್ನು ಮಲಮಾಸದಲ್ಲಿಯೇ ಸಮಾಪ್ತಿ ಮಾಡತಕ್ಕದ್ದೆಂದು ಹೇಳಿದೆ. ಇದು ಕಾವ್ಯ ಹಾಗೂ ನಿತ್ಯ; ಈ ಉಭಯರೂಪವಾದದ್ದು. ಇಡೀ ಮಾಸದಲ್ಲಿ ಸ್ನಾನಮಾಡಲಸಮರ್ಥನಾದರೆ ಮೂರುದಿನ ಅಥವಾ ಒಂದು ದಿನವಾದರೂ ಮಾಡತಕ್ಕದ್ದು, ಹಾಗೆ ಮಾಡುವದಿದ್ದಲ್ಲಿ ಆರಂಭದ ಮೂರು ದಿನಗಳಲ್ಲಿ ಸ್ನಾನಮಾಡಬೇಕೆಂದು ಕೆಲವರು ಹೇಳುವರು. ಆದರೆ ತ್ರಯೋದಶ್ಯಾದಿ ಮೂರು ದಿನಗಳಲ್ಲಿ ಸ್ನಾನವಾಗತಕ್ಕದ್ದೆಂಬುದು ಬಹುಸಮ್ಮತವು. ಪುಷ್ಯ ಪೂರ್ಣಿಮೆಯ ನಂತರ ಸಪ್ತಮೀ-ಅಷ್ಟಮೀ-ನವಮಿಗಳಲ್ಲಿ ಅಷ್ಟಕಾದಿ ಶ್ರಾದ್ಧಗಳನ್ನು ಮಾಡತಕ್ಕದ್ದೆಂದು ಮೊದಲೇ ಹೇಳಿದ. ಪುಷ್ಯದ ಅಮಾವಾಸ್ಯೆಯಲ್ಲಿ “ಅರ್ಧೋದಯ"ವೆಂಬ ಯೋಗವಾಗುವದು. “ಅಮಾರ್ಕ ಪಾತಶ್ರವಣೆರ್ಯುಕ್ತಾ ಚೇತಷಮಾಘಯೋ! ಅರ್ಧೋದಯ: ಸುವಿಜೇಯ: ಕೋಟಿಸೂರ್ಯ ಗೃಹ:ಸಮಕಿಂಚಿನ ಮಹೋದಯ: ಪುಣ್ಯ ಅಥವಾ ಮಾಘದ ಅಮಾವಾಸ್ಯೆಯ ದಿನ ರವಿವಾರ ವ್ಯತೀಪಾತಯೋಗ ಶ್ರವಣ ನಕ್ಷತ್ರ ಇವು ಕೂಡಿಬಂದರೆ ಆಗ ಅದಕ್ಕೆ “ಅರ್ಧೋದಯ"ವನ್ನುವರು. ಇದು ಕೋಟಿಸೂರ್ಯ ಗ್ರಹಣಗಳಿಗೆ ಸಮಾನವಾದದ್ದು. ಈ ಹೇಳಿದ ಯಾವದಾದರೊಂದು ಯೋಗವು ಕಡಿಮೆಯಾದರೆ ಅದಕ್ಕೆ “ಮಹೋದಯ"ವೆನ್ನುವರು. ಈ ಮಹೋದಯವೂ ಅತಿ ಪುಣ್ಯಕರವು. ಇಲ್ಲಿ “ಅಮಾ” ಎನ್ನುವದು ಪುಣ್ಯ ಮಾಘಗಳ ಮಧ್ಯವರ್ತಿಯಾದದ್ದೆಂದು ಕೆಲವರು ಹೇಳುವರು ಅಮಾಂತಮಾಸದ ಪ್ರಕಾರ ಇದು ಪುಷ್ಯದ ಅಮಾವಾಸ್ಯೆ. ಪೂರ್ಣಿಮಾಂತ ಮಾಸದ ಪ್ರಕಾರ ಮಾಘಮಾಸದ ಅಮಾವಾಸ್ಯೆಯಾಗುವದೆಂದು ಕೆಲವರು ಹೇಳುವರು. ಅಂತೂ ಪುಣ್ಯ ಪೂರ್ಣಿಮೆಯ ನಂತರದ ಅಮಾವಾಸೆಯೆಂದು ತಿಳಿಯಲೇ ಬೇಕಾಗುವದು. ಈ ಯೋಗವು ಹಗಲಿನಲ್ಲಾದರೆ ಮಾತ್ರ ಪ್ರಶಸ್ತವು. ರಾತ್ರಿಯೋಗಕ್ಕೆ ಪ್ರಾಶಸ್ತ್ರವಿಲ್ಲ. ಅರ್ಧೋದಯ ಯೋಗವಾದಾಗ ಎಲ್ಲ ಜಲವೂ ಗಂಗಾಜಲಕ್ಕೆ ಸಮಾನವಾಗುವದು. ಎಲ್ಲ ಬ್ರಾಹ್ಮಣರೂ ಶುದ್ಧಾತ್ಮ ಬ್ರಹ್ಮನಿಗೆ ಸಮಾನರಾಗುವರು. ಏನಾದರೂ ಕಿಂಚಿದ್ದಾನಮಾಡಿದರೆ ಅದು ಮೇರುವಿಗೆ ಸಮಾನವಾಗುವದು. ಅಮತ್ರ (ಪಾತ್ರ)ದಾನವು ಮತ್ತು ಅದರ ಪ್ರಯೋಗ ದೇಶ ಕಾಲಗಳನ್ನುಚ್ಚರಿಸಿ “ಸಮುದ್ರ ಮೇಖಲಾಯಾ: ಪ್ರಶಾ:ಸಮೃಗಾನ ಫಲಕಾಮೋಹಮುರ್ಧತಯ ತಾಮ್ರತದಾನಂ ಕರಿಷ್ಯ” ಒಗೆ ಸಂಕಲ್ಪಿಸಿ ಸಾರಿಸಿದ ಪ್ರದೇಶದಲ್ಲಿ ಅಕ್ಕಿ ಕಾಳುಗಳಿಂದ ಅಷ್ಟದಳ ಪದ್ಮವನ್ನು ರಚಿಸಿ ಅದರಲ್ಲಿ ಅರವತ್ತು ನಾಲ್ಕು, ನಾಲ್ವತ್ತು, ಇಲ್ಲವೆ ಇಪ್ಪತ್ತೈದು ಪಲ ತೂಕದ ಕಂಚಿನ ಪಾತ್ರೆಯನ್ನು ಅನ್ನುತ್ತಾರಣಪೂರ್ವಕವಾಗಿ ಸ್ಥಾಪಿಸತಕ್ಕದ್ದು. ಪರಿಚ್ಛೇದ - ೨ ೧೪೧ ಗುಂಜಾದಿ ಪ್ರಮಾಣಗಳು ಹೀಗೆ-ಎಂಟುಗುಂಜಿ ತೂಕಕ್ಕೆ ೧ ಮಾಸಿ (ಮಾಷ) ನಾಲ್ವತ್ತು ಮಾಷಗಳಿಗೆ ೧ ಕರ್ಷ, ನಾಲ್ಕು ಕರ್ಷಗಳಿಗೆ ೧ ಪಲ. ಅಮರಸಿಂಹನ ಮತದಂತೆ ಎಂಭತ್ತು ಗುಂಜಿಗಳಿಗೆ ಕರ್ಷವೆಂದೂ ನಾಲ್ಕು ಕರ್ಷಗಳಿಗೆ ೧ ಪಲವೆಂದೂ ತಿಳಿಯುತ್ತದೆ. ಯಾವ ರೀತಿಯದಾದರೂ ಹೇಳಿದ ಪಲಪ್ರಮಾಣದಿಂದ ತಯಾರಿಸಿದ ಕಂಚಿನಪಾತ್ರೆಯಲ್ಲಿ ಪಾಯಸವನ್ನಿಟ್ಟು ಪಾಯಸದ ಸ್ಥಾನದಲ್ಲಿ ಅಷ್ಟದಳವನ್ನು ಬರೆದು ಅದರ ಎಸಳಿನಲ್ಲಿ ಕರ್ಷ ಅಥವಾ ಅರ್ಧಕರ್ಷ ಇಲ್ಲವೆ ಕಾಲುಕರ್ಷ ಪರಿಮಾಣದ ಬಂಗಾರದ ಲಿಂಗವನ್ನಿಟ್ಟು, ಕಂಚಿನಪಾತ್ರೆಯಲ್ಲಿ ಬ್ರಹ್ಮ, ಪಾಯಸದಲ್ಲಿ ವಿಷ್ಣು, ಲಿಂಗದಲ್ಲಿ ಶಿವ ಈ ದೇವತೆಗಳನ್ನು ಅಧಿಕಾರಾನುಸಾರ ವೈದಿಕ ಅಥವಾ ನಾಮಮಂತ್ರಗಳಿಂದ ಆವಾಹನಾದಿ ಷೋಡಶೋಪಚಾರಗಳಿಂದ ಪೂಜಿಸತಕ್ಕದ್ದು. ಆಮೇಲೆ ಬ್ರಾಹ್ಮಣನನ್ನು ವಸ್ತ್ರಾದಿಗಳಿಂದ ಪೂಜಿಸಿ “ಸುವರ್ಣ ಪಾಯಸಾಮತ್ರಂ ಯಸ್ಮಾದೇತಮಯಂ ಆವಯೋಸ್ತಾರಕಂ ಯಸ್ಮಾತ್ ತಮ್ಮಹಾಣ ದ್ವಿಜೋತ್ತಮ||” “ಅಮುಕಗೋತ್ರಾಯ ಅಮುಕಶರ್ಮನೇ ತುಭ್ರಮಿದಂ ಸುವರ್ಣಲಿಂಗ ಪಾಯಸಮುಕ್ತಮಮಂ ಸಮುದ್ರಮೇಖಲಾ ಪೃಥ್ವಿದಾನ ಫಲಕಾಮೋಹಂ ಸಂಪ್ರದ ನಮಮ” ಹೀಗೆ ಹೇಳಿ ಬ್ರಾಹ್ಮಣನ ಹಸ್ತದಲ್ಲಿ ನೀರು ಬಿಡತಕ್ಕದ್ದು. ಬ್ರಾಹ್ಮಣನು “ದೇವಸತ್ವಾ” ಎಂದು ಪ್ರತಿಗ್ರಹಮಾಡತಕ್ಕದ್ದು. ದಾತನು “ದಾನಸ್ಯ ಸಂಪೂರ್ಣತಾ ಸಿಧ್ಯರ್ಥಂ ಇಮಾಂ ದಕ್ಷಿಣಾಂ ಸಂಪ್ರದದೇ” ಎಂದು ಯಥಾಶಕ್ತಿ ಹಿರಣ್ಯವನ್ನು ಕೊಡತಕ್ಕದ್ದು, ಕೌಸ್ತುಭದಲ್ಲಿ ಹೇಮಾದ್ರಿಗಳನ್ನುಕ್ತವಾದ ಬೇರೆ ರೀತಿಯದಾದ ಅರ್ಧೋದಯ ಪ್ರಯೋಗವನ್ನು ಹೇಳಿದೆ. ಬ್ರಹ್ಮಾದಿಯುತಗಳಾದ ಮೂರು ತಿಲಪರ್ವತ, ಮೂರು ಶಯ್ಯಾ, ಮೂರು ಗೋವು ಇವುಗಳನ್ನು ದಾನಮಾಡಿ ಹೋಮಿಸತಕ್ಕದ್ದು ಎಂದು ಬೇರೆ ರೀತಿಯಿಂದ ಹೇಳಿದೆ. ಇದನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ಇಲ್ಲಿಗೆ ಪುಷ್ಯ ಮಾಸಕೃತ್ಯ ನಿರ್ಣಯೋದ್ದೇಶವು ಮುಗಿಯಿತು. ಮಾಘಮಾಸ ಇದರಲ್ಲಿ ಕುಂಭಸಂಕ್ರಾಂತಿ, ಹಿಂದೆ ಹದಿನಾರು ಘಟಿಗಳು ಪುಣ್ಯಕಾಲವು, ಮಾಘದಲ್ಲಿ “ವೇಣೀಸ್ನಾನ"ಕ್ಕೆ ವಿಶೇಷ ಮಹತ್ವವಿದೆ. ಪುರಾಣದಲ್ಲಿ ಹೇಳಿರುವದೇನೆಂದರೆ “ಮಾಘಮಾಸದಲ್ಲಿ ಗಂಗಾ, ಯಮುನೆಗಳಲ್ಲಿ ಸ್ನಾನಮಾಡುವದರಿಂದ ನೂರಾರು ಕೋಟಿವರ್ಷಪರ್ಯಂತ ಪುನರಾವರ್ತಿಯಿಲ್ಲ. ಎಲ್ಲೆಡೆಯಲ್ಲಾದರೂ ಗಂಗಾಸ್ನಾನಮಾಡಿದರೆ ಕುರುಕ್ಷೇತ್ರದ ಪುಣ್ಯವು ಲಭಿಸುವದು. ವಿಂಧ್ಯದಲ್ಲಿ ಅದರ ಹತ್ತುಪಟ್ಟು ಪುಣ್ಯವು ಕಾಶಿಯಲ್ಲಿ ನೂರುಪಟ್ಟು, ಗಂಗಾ- ಯಮುನಾ ಸಂಗಮದಲ್ಲಿ ಕಾಶಿಗಿಂತ ನೂರುಪಟ್ಟು ಹೆಚ್ಚು, ಪಶ್ಚಿಮವಾಹಿನಿಯಲ್ಲಿ ಸ್ನಾನಮಾಡಿದರೆ ಅದಕ್ಕಿಂತ ಸಾವಿರಪಟ್ಟು ಹೆಚ್ಚು ಪುಣ್ಯವು.” ಎಂದು ಪುರಾಣವಚನವಿದೆ. ಮಾಘದಲ್ಲಿ ತಿಲಪಾತ್ರದಾನವು ಪ್ರಶಸ್ತವು. ಅದರ ಪ್ರಯೋಗ ಹೀಗಿದೆ:- ಹದಿನಾರು ಪಲತೂಕದ ತಾಮ್ರದ ಪಾತ್ರೆಯಲ್ಲಿ ತಿಲಗಳನ್ನಿಟ್ಟು ತನ್ನ ಶಕ್ರನುಸಾರ ಹಿರಣ್ಯವನ್ನಿರಿಸಿ ಬ್ರಾಹ್ಮಣನಿಗೆ ದಾನಮಾಡತಕ್ಕದ್ದು. ‘ವಾಲ್ಮನಃಕಾಯಜ ತ್ರಿವಿಧ ಪಾಪನಾಶನಪೂರ್ವಕಂ ಬ್ರಹ್ಮಲೋಕ ಪ್ರಾಪ್ತಿಕಾಮಃ ತಿಲಪಾತ್ರದಾನಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಹೇಳಿದ ಪರಿಮಾಣದ ತಾಮ್ರಪಾತ್ರೆಯಲ್ಲಿ ಕರ್ಷಪರಿಮಾಣದ ಸುವರ್ಣ, ಪ್ರಸ್ಥಪರಿಮಾಣದ ಎಳ್ಳುಗಳನ್ನಿಟ್ಟು ಅಥವಾ ಯಥಾಶಕ್ತಿ ಸುವರ್ಣವನ್ನಿಟ್ಟು ಬ್ರಾಹ್ಮಣನನ್ನು ೧೪೨ ಧರ್ಮಸಿಂಧು ಪೂಜಿಸಿ “ದೇವದೇವ ಜಗನ್ನಾಥ ವಾಂಛಿತಾರ್ಥ ಫಲಪ್ರದ ತಿಲಪಾತ್ರಂ ಪ್ರದಾಸ್ವಾಮಿ ತವಾಗ್ರ ಸಂಸ್ಕೃತೋ ಹಂ’ ಈ ಮಂತ್ರದಿಂದ ದಾನಮಾಡತಕ್ಕದ್ದು. ಕುಡವಾದಿ ಧಾನ್ಯ ಪ್ರಮಾಣ ನಾಲ್ಕು ಮುಷ್ಟಿಗಳಿಗೆ ಒಂದು “ಕುಡವ"ವಾಗುವದು. ನಾಲ್ಕು ಕುಡವಗಳಿಗೆ ಒಂದು “ಪ್ರಸ್ಥವಾಗುವದು. ನಾಲ್ಕು ಪ್ರಸ್ಥಗಳಿಗೆ ಒಂದು “ಆಡಕ"ವಾಗುವದು. ಎಂಟು ಆತಕಗಳಿಗೆ ಒಂದು “ದ್ರೋಣ"ವಾಗುವದು. ಎರಡು ದ್ರೋಣಕ್ಕೆ ಒಂದು “ಶೂರ್ಪ"ವಾಗುವದು. ಒಂದೂವರ ಶೂರ್ಪಕ್ಕೆ “ಖಾರಿ"ಆಗುವದು. ಅಲ್ಲದೆ ನಾಲ್ಕು ಸುವರ್ಣಗಳಿಗೆ ಒಂದು “ಪಲ"ವಾಗುವುದು. ನಾಲ್ಕು ಪಲಗಳಿಗೆ ಒಂದು ‘ಕುಡವ, ನಾಲ್ಕು ಕುಡವಗಳಿಗೆ ಒಂದು “ಪ್ರಸ್ತ”, ನಾಲ್ಕು ಪ್ರಸ್ಥಗಳಿಗೆ ಒಂದು “ಆಢಕ”, ನಾಲ್ಕು ಆಢಕಗಳಿಗೆ ಒಂದು ‘ದ್ರೋಣ’, ನಾಲ್ಕು ದ್ರೋಣಗಳಿಗೆ ಒಂದು “ಖಾರಿ” ಹೀಗೆಯೂ ಒಂದು ರೀತಿಯಿದೆ. ಅಥವಾ ಹಿರಣ್ಯ ಸಹಿತಗಳಾದ ತಿಲಗಳನ್ನು ತಾಮ್ರಪಾತ್ರದಲ್ಲಿಟ್ಟು “ತಿಲಾಪುಣ್ಯಾ: ಪವಿತ್ರಾಶ್ಚ ಸರ್ವಪಾಪ ಹರಾಷ್ಟ್ರತಾ| ಶುಕ್ಲಾಶೈವ ತಥಾ ಕೃಷ್ಣಾ: ವಿಷ್ಣುಗಾತ್ರ ಸಮುದ್ಭವಾ! ಯಾನಿಕಾನಿಚಪಾಪಾನಿ ಬ್ರಹ್ಮಹತ್ಯಾಸವಾನಿಚ ತಿಲಪಾತ್ರ ಪ್ರದಾನೇನ ತಾನ್ನಿನಶ್ಯಂತು ಮೇಸರಾ” “ಇದಂತಿಲಪಾತ್ರಂ ಯಥಾಶಕ್ತಿ ದಕ್ಷಿಣಾ ಸಹಿತಂ ಯಮದೈವತಂ ಬ್ರಹ್ಮಲೋಕಪ್ರಾಪ್ತಿ ಕಾಮಸ್ತುಭ್ಯಮಹಂ ಸಂಪ್ರದ” ಹೀಗೆ ಹೇಳಿ ದಾನಮಾಡತಕ್ಕದ್ದು. ಹಿರಣ್ಯ ತುಲಸೀ ಪತ್ರದಾನ ಮಂತ್ರ: “ಸುವರ್ಣತುಲಸೀದಾನಾತ್ ಬ್ರಹ್ಮಣಕಾರ್ಯ ಸಂಭವಾತ್ ಪಾಪಂಪ್ರಶಮಮಾಯಾತು ಸರ್ವಸಂತು ಮನೋರಥಾ ಶಾಲಿಗ್ರಾಮ ದಾನಮಂತ್ರ:- “ಶಾಲಗ್ರಾಮ ಶಿಲಾಪುಣ್ಯಾ ಭುಕ್ತಿಮುಕ್ತಿ ಪ್ರದಾಯಿನೀ ಶಾಲಿಗ್ರಾಮ ಪ್ರದಾನೇನ ಮಮ ಸಂತು ಮನೋರಥಾ||ಚಕ್ರಾಂಕಿತ ಸಮಾಯುಕ್ತಾ ಶಾಲಿಗ್ರಾಮ ಶಿಲಾಶುಭಾ| ದಾನೇನೈವ ಭವೇತ್ತಾ ಉಭಯೋರ್ವಾಂಛಿತಂ ಫಲಂ ಪ್ರಯಾಗದಲ್ಲಿ ವೇಣಿದಾನ ಅಲ್ಲಿ ಸಕಲರಿಗೂ ಕ್ಷೌರವನ್ನು ವಿಧಿಸಿದೆ. ಹತ್ತು ತಿಂಗಳ ನಂತರ ಎರಡನೇ ಬಾರಿ ಹೋದಾಗ ಪ್ರಾಯಶ್ಚಿತ್ತವನ್ನು ಬಿಟ್ಟು ಕ್ಷೌರವನ್ನು ಮಾಡಿಕೊಳ್ಳತಕ್ಕದ್ದು. ಮೂರು ಯೋಜನಕ್ಕಿಂತ ದೂರದಿಂದ ಸಾಧಾರಣ ಮೂವತ್ತು ಮೈಲು ‘ಯೋಜನ’ ಅಂದರೆ ಸೂಕ್ಷ್ಮ ಮಾನದಂತೆ ೩೬೦೦೦ ಗಜ ಬಂದವರು ಹತ್ತು ತಿಂಗಳೊಳಗೆ ಬಂದವರಾದರೂ ಪುನಃ ಅವಶ್ಯಕವಾಗಿ ಕ್ಷೌರವನ್ನು ಮಾಡಿಸಿಕೊಳ್ಳತಕ್ಕದ್ದು. ಪ್ರಥಮಯಾತ್ರೆಯಲ್ಲಿ ಬದುಕಿರುವ ತಂದೆಯುಳ್ಳವ, ಗರ್ಭಿಣೀಪತಿ, ಚೌಲಸಂಸ್ಕಾರವಾದ ಬಾಲಕರು, ಪತಿಯುಳ್ಳ ಸ್ತ್ರೀಯರು ಇವರೂ ಸಹ ವಪನವನ್ನು ಮಾಡಿಕೊಳ್ಳಬೇಕೆಂದು ಹೇಳಿದೆ. ಇಲ್ಲಿ ಇದೇ ವಿಶೇಷವು ಕೆಲವರು ಪತಿಯುಳ್ಳ ಸ್ತ್ರೀಯರ ಎಲ್ಲ ಕೇಶಗಳನ್ನೆ ತುದಿಯಲ್ಲಿ ಎರಡಂಗುಲ ಕತ್ತರಿಸತಕ್ಕದ್ದೆಂದು ಹೇಳುವರು. ಅದರ ಕ್ರಮ ಹೇಗೆಂದರೆ :- ಜಡೆಯನ್ನು ಹೆಣೆದುಕೊಂಡಿರುವ ಮಂಗಲ ರೂಪಿಣಿಯಾದ ಸ್ತ್ರೀಯು ತನ್ನ ಗಂಡನಿಗೆ ನಮಸ್ಕಾರಮಾಡಿ ಅವನ ಅನುಜ್ಞೆ ಪಡೆದು ಸಕಲ ಕೇಶಗಳ ಅಥವಾ ಎರಡಂಗುಲ ಕೇಶಗಳ ವಪನಮಾಡಿಕೊಂಡು ಸ್ನಾನಮಾಡಿ ‘ತ್ರಿವೇಣಿ’ ಪೂಜೆಯನ್ನು ಮಾಡತಕ್ಕದ್ದು, ಅಥವಾ ಪತಿಯಿಂದ ಮಾಡಿಸುವದು. ಪೂಜೆಯ ನಂತರ ಸ್ತ್ರೀಯು ಬಿದಿರಿನ ಪಾತ್ರೆಯಲ್ಲಿ ಕತ್ತರಿಸಿದ ಜಡೆಯನ್ನಿಟ್ಟು ಮತ್ತು ಬಂಗಾರದ ಜಡೆ ಹಾಗೂ ಮುತ್ತು ಪರಿಚ್ಛೇದ - ೨ ೧೪೩ ಮೊದಲಾದವುಗಳನ್ನಿಟ್ಟು ಎರಡೂ ಕೈಗಳಲ್ಲಿ ಹಿಡಕೊಂಡು “ವೇಣ್ಯಾಂವೇಣೀ ಪ್ರದಾನೇನ ಮಮಪಾಪು ವ್ಯಪೋಹತು/ಜನ್ಮಾಂತರೇಪ್ಪಪಿಸದಾ ಸೌಭಾಗ್ಯಂ ಮಮ ವರ್ಧತಾರಿ” ಎಂದು ಪ್ರಾರ್ಥಿಸಿ ತ್ರಿವೇಣಿಯಲ್ಲಿ ಚೆಲ್ಲತಕ್ಕದ್ದು, ಬ್ರಾಹ್ಮಣರು ‘ಸುಮಂಗಲೀರಿಯಂ’ ಎಂಬ ಮಂತ್ರವನ್ನು ಪಠಿಸತಕ್ಕದ್ದು. ಆಮೇಲೆ ಬ್ರಾಹ್ಮಣರನ್ನೂ ಸುವಾಸಿನಿಯರನ್ನೂ ವಸ್ತ್ರಾದಿಗಳನ್ನು ಕೊಟ್ಟು ಸಂತೋಷಪಡಿಸತಕ್ಕದ್ದು. ತ್ರಿವೇಣಿಯಲ್ಲಿ ದೇಹತ್ಯಾಗ ವಿಧಿಯು “ದೇವೈತನ್ವಂ ವಿಸೃಜಂತಿ ಧೀರಾಜನಾಸೋ ಅಮೃತತ್ವಂಭಜಂತೇ” ಎಂದು ಶ್ರುತಿವಾಕ್ಯವಿದೆ. ಅಂದರೆ ಯಾರು ಸ್ಟೇಚ್ಛೆಯಿಂದ ವಿಧಿಪೂರ್ವಕವಾದ ದೇಹತ್ಯಾಗಮಾಡುವರೋ ಅವರು ಮೋಕ್ಷವನ್ನು ಹೊಂದುತ್ತಾರೆ; ಎಂಬ ಈ ವೇದ ವಾಕ್ಯವು ಮಾಘಮಾಸದ ದೇಹತ್ಯಾಗ ವಿಷಯಕವಾದದ್ದು. “ಮಾಘದಲ್ಲಿ ದೇಹವನ್ನು ವಿಸರ್ಜಿಸಿದರೆ ನಿಸಂಶಯವಾಗಿ ಮುಕ್ತಿಯಾಗುವದು” ಎಂದು ‘ಬ್ರಹ್ಮಪುರಾಣ’ದಲ್ಲಿ ಹೇಳಿದೆ. ಅನ್ಯಮಾಸಗಳಲ್ಲಿ ದೇಹತ್ಯಾಗ ಮಾಡಿದರೆ ಸ್ವರ್ಗಪ್ರಾಪ್ತಿಯಿದೆ. ಇದರ ಕ್ರಮ ಹೇಗೆಂದರೆ:- ಯಥಾಶಕ್ತಿ ಸರ್ವಪ್ರಾಯಶ್ಚಿತ್ತವನ್ನು ಮಾಡಿ ಮುಂದೆ ಶ್ರಾದ್ಧಾದಿಗಳು ನಡೆಯಲಾರದೆಂದು ತಿಳಿದುಬಂದಲ್ಲಿ ತಾನೇ ಸಪಿಂಡೀಕರಣಾಂತ ‘ಜೀವಚ್ಛಾದ್ಧ’ವನ್ನು ಮಾಡಿ ಗೋದಾನಾದಿಗಳನ್ನು ಕೊಟ್ಟು ಉಪವಾಸದಿಂದಿದ್ದು ಪಾರಣೆಯದಿನ ಫಲೋಲ್ಲೇಖ ಪೂರ್ವಕವಾಗಿ ಸಂಕಲ್ಪ ಮಾಡಿ ವಿಷ್ಣುವನ್ನು ಧ್ಯಾನಿಸುತ್ತ ತ್ರಿವೇಣಿಯಲ್ಲಿ ‘ಜಲಸಮಾಧಿ ಹೊಂದುವದು’, ಜೀವಚ್ಛಾದ್ದಾದಿ ವಿಧಿಗಳನ್ನು ಕೌಸ್ತುಭದಲ್ಲಿ ನೋಡತಕ್ಕದ್ದು. ತಿಲಸ್ನಾನಾದಿಗಳು ‘ತಿಲಸ್ನಾಯೀ ತಿಲೋರ್ತಿ ತಿಲಹೋಮೀ ತಿಲೋದಕೀ ತಿಲಭುಕ್ ತಿಲದಾತಾ ಚ ಷಟ್‌ ಲಾ: ಪಾಪನಾಶನಾ’ ಇತ್ಯಾದಿ ವಚನಗಳಂತೆ ‘ತಿಲಸ್ನಾಯೀ’ ಎಂದರೆ ತಿಲಯುಕ್ತವಾದ ಜಲದಿಂದ ಸ್ನಾನ, ‘ತಿಲೋರ್ತೀ’ ಎಂದರೆ ತಿಲಕದಿಂದ ಮೈಗೆ ಲೇಪಿಸಿಕೊಳ್ಳುವದು. ‘ತಿಲಹೋಮಿ’ ಅಂದರೆ ಹತ್ತುಲಕ್ಷ ಅಥವಾ ಲಕ್ಷತಿಲಹೋಮಾತ್ಮಕವಾದ ಗ್ರಹಯಜ್ಞ ಮಾಡುವದು. ‘ತಿಲೋದಕೀ’ ಎಂದರೆ ತಿಲಯುಕ್ತವಾದ ಜಲದಿಂದ ದೇವತಾಪೂಜಾ, ತರ್ಪಣ, ಸಂಧ್ಯಾವಂದನ, ಪಾನ ಇತ್ಯಾದಿ. “ತಿಲಭುಕ್” ಅಂದರೆ ತಿಲವನ್ನು ತಿನ್ನುವದು. “ತಿಲದಾತಾ” ಅಂದರೆ ತಿಲದಾನ ಮಾಡುವದು. ಹೀಗೆ ತಿಲಗಳ ಆರು ವಿನಿಯೋಗಗಳಿಂದ ಸಕಲ ಪಾಪಗಳೂ ನಾಶವಾಗುವವು. ತಿಲಹೋಮ ವಿಷಯದಲ್ಲಿ ಹತ್ತುಸಾವಿರ ಹೋಮ, ಲಕ್ಷಹೋಮ, ಕೋಟಿಹೋಮ ಹೀಗೆ ಹೋಮವು ಮೂರುವಿಧವಾದದ್ದು. ಇದು ಸರ್ವಕಾಮಫಲವನ್ನು ಕೊಡತಕ್ಕದ್ದು. ಇದರ ಕುಂಡಮಂಟಪ ನಿರ್ಮಾಣ ಹಾಗೂ ಲಕ್ಷಹೋಮಾದಿ ಪ್ರಯೋಗಗಳನ್ನು ಕೌಸ್ತುಭ-ಮಯೂಖಾದಿ ಗ್ರಂಥಗಳಲ್ಲಿ ನೋಡತಕ್ಕದ್ದು. ಮಾಘಶುಕ್ಲ ಚತುರ್ಥಿಯಲ್ಲಿ ಢುಂಡೀರಾಜ ಗಣಪತಿಯ ಉದ್ದಿಶ್ಯ ನಕ್ತವ್ರತ ಹಾಗೂ ಪೂಜಾ, ತಿಲಲಡ್ಡು ಕಾದಿ ನೈವೇದ್ಯ, ತಿಲಭಕ್ಷಣ ಇತ್ಯಾದಿಗಳನ್ನು ಹೇಳಿದೆ. ಇದು ಪ್ರದೋಷವ್ಯಾಪಿನಿಯಾದದ್ದು ಗ್ರಾಹ್ಯವು. ಇದರಲ್ಲಿ ಮಾಗಿಮಲ್ಲಿಗೆ ಪುಷ್ಪಗಳಿಂದ ಶಿವನನ್ನು ಪೂಜಿಸಿ ಉಪವಾಸ ಅಥವಾ ನಕ್ಕಭೋಜನ ಮಾಡತಕ್ಕದ್ದು. ಅದರಿಂದ ಐಶ್ವರ್ಯ ಪ್ರಾಪ್ತಿಯಾಗುವದು. ೧೪೪ ಧರ್ಮಸಿಂಧು ಈ ವಿನಾಯಕ ವ್ರತದ ನಿರ್ಣಯವನ್ನು ಭಾದ್ರಪದ ಶುಕ್ಲ ಚತುರ್ಥಿಯಂತೆಯೇ ತಿಳಿಯತಕ್ಕದ್ದು. ಮಾಘ ಶುಕ್ಲ ಪಂಚಮಿಯು ವಸಂತ ಪಂಚಮಿಯು, ಅದರಲ್ಲಿ ವಸಂತೋತ್ಸವ ಪ್ರಾರಂಭವು ಇದರಲ್ಲಿ ರತಿ ಕಾಮರ ಪೂಜೆಯನ್ನು ಹೇಳಿದೆ. ವರದಿನ ಪೂರ್ವಾಹ್ನ ವ್ಯಾಪ್ತಿಯಿದ್ದರೆ ಅದೇ ಗ್ರಾಹ್ಯವು ಇಲ್ಲವಾದರೆ ಪೂರ್ವದಿನವು ಗ್ರಾಹ್ಯವು, ಮಾಘಶುಕ್ಲ ಸಪ್ತಮಿಯು ರಥಸಪ್ತಮಿಯು, ಅದು ಅರುಣೋದಯವ್ಯಾಪ್ತಿಯಿದ್ದದ್ದು ಗ್ರಾಹ್ಯವು. ಎರಡು ದಿನ ಅರುಣೋದಯ ವ್ಯಾಪ್ತಿಯಿದ್ದರೆ ಪೂರ್ವವು ಗ್ರಾಹ್ಯವು. ಘಟಿಕಾದಿಮಾತ್ರವಿದ್ದ ಷಷ್ಠಿಯಲ್ಲಿ ಸಪ್ತಮಿಯು ಕ್ಷಯ (ಉಪರಿ)ವಾಗಿ ಪರದಲ್ಲಿ ಅರುಣೋದಯವನ್ನು ವ್ಯಾಪಿಸಿರದಿದ್ದರೆ ಆಗ ಷಷ್ಠಿಯುತವಾದದ್ದು ಗ್ರಾಹ್ಯವು. ಷಷ್ಠಿಯಲ್ಲಿ ಸಪ್ತಮೀ ಕ್ಷಯಘಟಿಗಳ ಸ್ಪರ್ಶವಿರುವ ಅರುಣೋದಯದಲ್ಲಿ “ಸ್ನಾನ"ವು. “ಯರಾಜನ್ಮ ಕೃತಂಪಾಪಂ ಮಯಾಜನ್ಮಸುಜನ್ಮಸು! ತನ್ಮರೋಗಂ ಚ ಶೋಕಂಚ ಮಾಕರೀ ಹಂತು ಸಪ್ತಮೀ ಏತನ್ಮಕೃತಂಪಾಪಂ ಯಚ್ಚಜನ್ಮಾಂತರಾರ್ಜಿತಂ ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇಚಯೇಪುನಃ|| ಇತಿ ಸಪ್ತವಿಧಂ ಪಾಪಂ ಸ್ನಾನಾತ್ಮ ಸಪ್ತ ಸಪ್ತಕೇ। ಸಪ್ತವ್ಯಾಧಿ ಸಮಾಯುಕ್ತಂ ಹರಮಾಕರಿ ಸಪ್ತಮಿ ಇದು ಸ್ನಾನದ ಮಂತ್ರವು. ಇನ್ನು ಅರ್ಥ್ಯಮಂತ್ರ:- “ಸಪ್ತ ಸಪ್ತಿವಹಪ್ರೀತ ಸಪ್ತಲೋಕ ಪ್ರದೀಪನ ಸಪ್ತಮೀ ಸಹಿತೋದೇವ ಗೃಹಾಣಾರ್ಥ್ಯಂ ದಿವಾಕರ|| ಹೀಗೆ ಹೇಳಿ ಅರ್ಭ್ಯವನ್ನು ಕೊಡುವದು. ಈ ಸಪ್ತಮಿಯು “ಮಾದಿ"ಯು. ಈ “ಮಾದಿ"ಯು ಶುಕ್ಲ ಪಕ್ಷದ್ದಾದುದರಿಂದ ಪೂರ್ವಾಷ್ಠವ್ಯಾಪಿನಿಯಾದದ್ದು ಗ್ರಾಹ್ಯವು. ಮಾಘಶುಕ್ಲ ಅಷ್ಟಮಿಯು “ಭೀಷ್ಮಾಷ್ಟಮೀ.” ಈ ಭೀಷ್ಮಾಷ್ಟಮಿಯಲ್ಲಿ ಭೀಷ್ಮನ ಉದ್ದೇಶದಿಂದ ಶ್ರಾದ್ಧ ಮಾಡಿದವರಿಗೆ ಸಂತತಿ ಪ್ರಾಪ್ತಿಯಾಗುವದು. ಈ ಶ್ರಾದ್ಧವು “ಕಾಮ"ವು ತರ್ಪಣಮಾತ್ರ “ನಿತ್ಯ"ವು. ತರ್ಪಣಮಾಡಿದಲ್ಲಿ ಇಡೀವರ್ಷದಲ್ಲಿ ಮಾಡಿದ ಪಾಪವು ಪರಿಹಾರವಾಗುವದು. ಮಾಡದಿದ್ದರೆ ಪುಣ್ಯನಾಶವು ಎಂದು ಹೇಳಿದೆ. “ವೈಯ್ಯಾಘ್ರ ಪದ್ಮ ಗೋತ್ರಾಯ ಸಾಂಕೃತ ಪ್ರವರಾಯಚ| ಗಂಗಾಪುತ್ರಾಯ ಭೀಷ್ಮಾಯ ಆಜನ್ಮ ಬ್ರಹ್ಮಚಾರಿಣೇ ಅಪುತ್ರಾಯಜಲು ದ ನಮೋಭೀಷ್ಮಾಯ ವರ್ಮಣೇ ಭೀಷ್ಮಶಾಂತನವೋವೀರ: ಸತ್ಯವಾದೀ ಜಿತೇಂದ್ರಿಯ: ಆಭಿರದ್ವಿವಾಷ್ಟೋತು ಪುತ್ರಪೌತ್ರೋಚಿತಾಂಕ್ರಿಯಾಂಗ್” ಈ ಮಂತ್ರದಿಂದ ಅಪಸವ್ಯವಾಗಿ ತರ್ಪಣಮಾಡಿ ಆಚಮನಮಾಡಿ ಸವ್ಯದಿಂದ ಅರ್ಥ್ಯವನ್ನು ಕೊಡತಕ್ಕದ್ದು. “ವಸೂನಾಮವತಾರಾಯ ಶಂತರಾತ್ಮಜಾಯಚ ಅರ್ಘಂದದಾಮಿ ಭೀಷ್ಮಾಯ ಆಬಾಲ್ಯ ಬ್ರಹ್ಮಚಾರಿಣೇ ಇದು ಅರ್ತ್ಯಮಂತ್ರವು. ಇದರಲ್ಲಿ ಜೀವತ್ತಿತೃಕನಿಗೆ ಅಧಿಕಾರವಿಲ್ಲೆಂದು ಕೌಸ್ತುಭ ಮತವು ಅಧಿಕಾರವುಂಟೆಂದು ಬಹುಸಮ್ಮತವು ಇದರಲ್ಲಿ ಶ್ರಾದ್ಧಾದಿಗಳು ಏಕೋದ್ದಿಷ್ಟವಾದುದರಿಂದ ಈ ಅಷ್ಟಮಿಯನ್ನು ಮಧ್ಯಾಹ್ನವ್ಯಾಪಿನಿಯಾದದ್ದನ್ನು ಸ್ವೀಕರಿಸತಕ್ಕದ್ದು. ಮಾಘ ಶುಕ್ಲ ದ್ವಾದಶಿಯಲ್ಲಿ “ತಿಲೋತ್ಪತ್ತಿಯು. ಇದರಲ್ಲಿ ಉಪವಾಸ, ತಿಲಸ್ನಾನ, ತಿಲಗಳಿಂದ ವಿಷ್ಣು ಪೂಜೆ, ತಿಲನೈವೇದ್ಯ, ತಿಲತೈಲದಿಂದ ದೀಪಹಚ್ಚುವದು, ತಿಲಹೋಮ, ತಿಲದಾನ ಇವುಗಳನ್ನು ಹೇಳಿದೆ. “ಮಾಘ ಪೂರ್ಣಿಮೆ” ಪರಿವಿದ್ದವಾದದ್ದು ಗ್ರಾಹ್ಯವು. ಇದರಲ್ಲಿ ಕೆಲ ಕೃತ್ಯಗಳನ್ನು ಹೇಳಿದೆ. ಪರಿಚ್ಛೇದ - ೨ ೧೪೫ “ಮಾಘಾವಸಾನ"ದಲ್ಲಿ ಯಥೇಷ್ಟ ಭೋಜನ ಮಾಡಿಸತಕ್ಕದ್ದು. ಬ್ರಾಹ್ಮಣ ದಂಪತಿಗಳನ್ನು ವಸ್ತ್ರಾದಿಗಳಿಂದಲೂ ಭೋಜನದಿಂದಲೂ ತೃಪ್ತಿ ಪಡಿಸತಕ್ಕದ್ದು. ಕಂಬಳಿ, ಅಜಿನ, ಕೆಂಪುವಸ್ತ್ರ, ಹತ್ತಿಯ ನೂಲಿನ ರವಿಕೆ, ಅಂಗಿ, ಪಾದರಕ್ಷೆ, ಹೊದೆಯುವ ಚಾದರ ಇತ್ಯಾದಿಗಳನ್ನೆಲ್ಲ “ಮಾಧವಃ ಪ್ರೀತಾಂ” ಹೀಗೆ ಹೇಳಿ ದಾನಮಾಡತಕ್ಕದ್ದು. “ಕೃತಸ್ಯ ಮಾಘಸ್ನಾನಸ್ಯ ಸಾಂಗತಾರ್ಥಂ ಉದ್ಯಾಪನಂ ಕರಿಷ್ಟೇ” ಹೀಗೆ ಸಂಕಲ್ಪಿಸಿ “ಸವಿ ಪ್ರಸವಿಚ ಪರಂಧಾಮ ಜಲೇಮಮ ತೈಜಸಾ ಪರಿಭ್ರಷ್ಟ ಪಾಪಂ ಯಾತು ಸಹಸ್ರಧಾನ ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ ಪರಿಪೂರ್ಣಂ ಕರಿಷ್ಯ ಹಂ ಮಾಘಸ್ನಾನಂ ತವಾಜ್ಞಯಾ ಈ ಮಂತ್ರಗಳನ್ನೂ ಸಂಕಲ್ಪದಲ್ಲಿಯೇ ಹೇಳತಕ್ಕದ್ದು. ಚತುರ್ದಶಿಯಲ್ಲಿ ಸಂಕಲ್ಪ, ಉಪವಾಸ, ಅಧಿವಾಸ, ಮಾಧವ ಪೂಜನ ಇವುಗಳನ್ನು ಮಾಡಿ, ಹುಣ್ಣಿವೆಯಲ್ಲಿ ತಿಲ, ಚರು, ಆಜ್ಯಗಳಿಂದ ಅಷ್ಟೋತ್ತರ ಶತಹೋಮವನ್ನು ಮಾಡಿ, ಎಳ್ಳು-ಸಕ್ಕರೆಗಳನ್ನು ಮಿಶ್ರಮಾಡಿದ ಮೂವತ್ತು ಮೋದಕಗಳನ್ನಿಟ್ಟು ವಾಯನದಾನ ಮಾಡತಕ್ಕದ್ದು. ಅದಕ್ಕೆ ಈ ಮುಂದೆ ಬರೆದಂತೆ ಮಂತ್ರಗಳು:- “ಸವಿತಃ ಪ್ರಸವಂಹಿ ಪರಂಧಾಮ ಜಮಮ| ತ್ವತ್ತೇಜನಾ ಪರಿಭ್ರಷ್ಟಂ ಪಾಪಂಯಾತು ಸಹಸ್ರಧಾ|| ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ ಪರಿಪೂರ್ಣಂ ಕುರುಹ ಮಾಘಸ್ನಾನಮುಷ: ಪತೇ!” ಇವೇ ಆ ಮಂತ್ರಗಳು. ಆಮೇಲೆ ದಂಪತಿಗಳಿಗೆ ಸೂಕ್ಷ್ಮವಸ್ತ್ರಗಳನ್ನೂ ಸಪ್ತಧಾನ್ಯಗಳನ್ನೂ ಕೊಟ್ಟು ಬ್ರಾಹ್ಮಣದಂಪತಿಗಳಿಗೆ ಷಡ್ರಸಾನ್ನ ಭೋಜನ ಮಾಡಿಸುವದು. (ಮಂತ್ರ) “ಸೂರ್ಯೋ ಪ್ರೀಯತಾಂದೇವೋ ವಿಷ್ಣು ಮೂರ್ತಿನಿ್ರರಂಜನ” ಈ ಮಂತ್ರದಿಂದ ಪ್ರಾರ್ಥಿಸುವದು. “ಮಾಘಸ್ನಾನ ಮಾಡಿದವನೂ, ಯೋಗಯುಕ್ತನಾದ ಸಂನ್ಯಾಸಿಯೂ, ರಣರಂಗದಲ್ಲಿ ಮಡಿದವನೂ ರವಿಮಂಡಲವನ್ನು ಭೇದಿಸಿ ಬ್ರಹ್ಮಲೋಕಾದಿಗಳಿಗೆ ಹೋಗುವನು “ಹೀಗೆ ವಚನವಿದೆ. “ಚತುರಷ್ಯಕಾ ಶ್ರಾದ್ಧೆಗಳನ್ನು ಮಾಡಲಾರದವನು ಈ ಕೃಷ್ಣ ಅಷ್ಟಮಿಯಲ್ಲಿ “ಪೂರ್ವರು ಶ್ರಾದ್ಧ ಅನ್ನಷ್ಟಕ್ಕ ಶ್ರಾದ್ಧ ಸಹಿತವಾದ “ಏಕಾಷ್ಟಕಾ ಶ್ರಾದ್ಧವನ್ನು ಮಾಡತಕ್ಕದ್ದು. ಇದನ್ನು ಮೂರುದಿನ ಮಾಡಲಾಗದಿದ್ದರೆ ಅಷ್ಟಮಿಯಲ್ಲಿ ಅಷ್ಟಕಾ ಶ್ರಾದ್ಧವನ್ನೊಂದನ್ನಾದರೂ ಮಾಡತಕ್ಕದ್ದು. ಶಿವರಾತ್ರಿ ನಿರ್ಣಯ LI ಮಾಘ ಕೃಷ್ಣ ಚತುರ್ದಶಿಯು “ಶಿವರಾತ್ರಿ"ಯು. ಇದನ್ನು ನಿಶೀಥವ್ಯಾಪಿನಿಯನ್ನಾಗಿ ತಿಳಿಯತಕ್ಕದ್ದು. “ನಿಶೀಥ” ಎಂದರೆ ರಾತ್ರಿಯ ಎಂಟನೇ ಮುಹೂರ್ತವೆಂದು ಹೇಳಿದೆ. ಪರದಿನದಲ್ಲಿ ನಿಶೀಥವ್ಯಾಪಿನಿಯಾದರೆ ( ಅಂದರೆ ಚತುರ್ದಶಿಯಲ್ಲಿ) ಅದೇ ಗ್ರಾಹ್ಯವು. ಪೂರ್ವದಿನ (ತ್ರಯೋದಶಿ ದಿನ), ನಿಶೀವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು. ಎರಡು ದಿನಗಳಲ್ಲಿ ಅರ್ಧರಾತ್ರವ್ಯಾಪ್ತಿಯಿಲ್ಲದಿದ್ದರೂ ಪರವೇ ಗ್ರಾಹ್ಯವು. ಎರಡೂದಿನ ಪೂರ್ಣವಾಗಿ ಅಥವಾ ಏಕದೇಶಿಯಾಗಿ ಅರ್ಧರಾತ್ರ ವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವೆಂದು ಹೇಮಾದ್ರಿ ಮತಾನುಸಾರಿಯಾದ ಕೌಸ್ತುಭದಲ್ಲಿ ಹೇಳಿದೆ. ಪರವೇ ಗ್ರಾಹ್ಯವೆಂದು ಕಾಲಮಾಧವ, ನಿರ್ಣಯಸಿಂಧು, ಪುರುಷಾರ್ಥ ಚಿಂತಾಮಣಿ ಮೊದಲಾದ ಬಹುಗ್ರಂಥಗಳ ಮತವು ಪರದಿನ ನಿಶೀಥದ ಏಕದೇಶದಲ್ಲಿ ವ್ಯಾಪ್ತಿಯಿದ್ದು ಪೂರ್ವದಿನ ಸಂಪೂರ್ಣವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು. ಪೂರ್ವದಿನ ನಿಶೀಥದಲ್ಲಿ ಏಕದೇಶ ವ್ಯಾಪ್ತಿಯಿದ್ದು, ಪರದಿನ ಪೂರ್ಣವ್ಯಾಪ್ತಿಯಿದ್ದರೆ ೧೪೬ ಧರ್ಮಸಿಂಧು ಪರವೇ ಗ್ರಾಹ್ಯವು. ಈ ವ್ರತವು ರವಿವಾರ ಅಥವಾ ಕುಜವಾರ ಯುಕ್ತವಾದರೆ ಮತ್ತು ಶಿವಯೋಗಯುತವಾದರೆ ಅತಿಪ್ರಶಸ್ತವು. ಪಾರಣ ನಿರ್ಣಯ ಯಾಮತ್ರಯ (ಯಾಮಕ್ಕೆ ೭ ಘಟಿ)ಕ್ಕಿಂತ ಮೊದಲು ಚತುರ್ದಶಿಯು ಸಮಾಪ್ತವಾದಲ್ಲಿ ಚತುರ್ದಶಿಯ ಅಂತ್ಯದಲ್ಲಿ ಪಾರಣೆಯು, ಯಾಮತ್ರಯಕ್ಕಿಂತ ಹೆಚ್ಚು ಚತುರ್ದಶಿಯಿದ್ದಲ್ಲಿ ಬೆಳಿಗ್ಗೆ ಚತುರ್ದಶೀ ಮಧ್ಯದಲ್ಲೇ ಪಾರಣೆಯಂದು ಮಾಧವಾದಿಗಳ ಮತವು. ಇನ್ನು “ನಿರ್ಣಯಸಿಂಧು’ವಿನಲ್ಲಿ ಯಾಮತ್ರಯಕ್ಕಿಂತ ಮೊದಲು ಚತುರ್ದಶೀ ಸಮಾಪ್ತಿಯಾದರೂ “ಚತುರ್ದಶೀ ಮಧ್ಯದಲ್ಲೇ ಪಾರಣೆಯು ಯಾವಾಗಲೂ ಚತುರ್ದಶಿಯ ಅಂತ್ಯದಲ್ಲಲ್ಲ “ ಎಂದು ಹೇಳಿದೆ. ಉಪವಾಸವೂ ಚತುರ್ದಶಿಯಲ್ಲಿ, ಪಾರಣೆಯೂ ಚತುರ್ದಶಿಯಲ್ಲಿ ಹೀಗಾಗುವದು. ಲಕ್ಷಾವಧಿ ಸುಕೃತಗಳಿಂದಲೂ ಲಭ್ಯವಾಗುವದು ಸಂಶಯ. ಆ ಪಾರಣೆಯ ಒಂದೊಂದು ಅಗಳಿನಲ್ಲಿಯ ಫಲವನ್ನು ಹೇಳಲಾರೆ (ಹೇ ಪಾರ್ವತಿ!)ಎಂಬದಾಗಿ ಚತುರ್ದಶೀ ಮಧ್ಯದ ಪಾರಣೆಗೆ ಪುಣ್ಯಾತಿಶಯವು ಪುರಾಣಾದಿಗಳಲ್ಲಿ ಹೇಳಿರುವದರಿಂದ ಅದರಲ್ಲೇ ಮಾಡತಕ್ಕದ್ದೆಂದು ಹೇಳಲಾಗಿದೆ. ಅದನ್ನು ಹೀಗೆ ವ್ಯವಸ್ಥೆಗೊಳಿಸಬಹುದು. ಏನಂದರೆ:- “ನಿತ್ಯಕಾರ್ಯ ಪೂರ್ವಕ ಪಾರಣೆಗೆ ಸಾಕಾಗುವಷ್ಟು ಚತುರ್ದಶಿಯಿರದಿದ್ದಾಗ ಆ ಕಾಲದಲ್ಲಾಗಲೀ ಅಥವಾ ಚತುರ್ದಶಿಯ ಶೇಷದಿನದಲ್ಲಿ ದರ್ಶಾದಿ ಶ್ರಾದ್ಧಪ್ರಾಪ್ತವಾದಾಗ ಇಂಥ ಪ್ರಸಂಗದಲ್ಲಿ ಚತುರ್ದಶಿಯ ತಿಥ್ಯಂತದಲ್ಲಿ ಪಾರಣೆಮಾಡತಕ್ಕದ್ದು” ಹೀಗೆ ತಿಳಿಯುವದು. ಯಾಕಂದರೆ ದ್ವಾದಶಿಯಂತೆ ಇಲ್ಲಿ ನಿತ್ಯ ಕೃತ್ಯದ ಅಪಕರ್ಷಕ ವಾಕ್ಯವಿರುವದಿಲ್ಲ. ಮತ್ತು ತಿಥ್ಯಂತ ಪಾರಣವನ್ನು ವಿಧಿಸುವ ವಚನವಿರುವದರಿಂದ ಸಂಕಟಕಾಲ ವಿಷಯಕವಾದ ಜಲಪಾರಣೆಯ ವಿಧಿವಾಕ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಕರ್ಮಕ್ಕೆ ಸಾಕಾಗುವಷ್ಟು ಚತುರ್ದಶಿಯಿರುವಾಗ ಮತ್ತು ಶ್ರಾದ್ಧಾದಿ ಪ್ರಸಕ್ತಿಯಿಲ್ಲದಿದ್ದಾಗ ತಿಥಿಮಧ್ಯದಲ್ಲೇ ಪಾರಣೆಯೆಂದು ತಿಳಿಯತಕ್ಕದ್ದು. ವ್ರತ ಪ್ರಯೋಗ ತ್ರಯೋದಶಿಯಲ್ಲಿ ಏಕಭಕ್ತವನ್ನು ಮಾಡಿ ಚತುರ್ದಶಿಯಲ್ಲಿ ನಿತ್ಯಕರ್ಮವನ್ನು ನೆರವೇರಿಸಿ ಪ್ರಾತಃಕಾಲದಲ್ಲಿ “ಶಿವರಾತ್ರಿ ವ್ರತಂತತ್ ಕರಿಷ್ಕಹಂ ಮಹಾಫಲಂ ನಿರ್ವಿಘ್ನ ಮತ್ತು ಮೇವಾತ್ರ ತತ್ಪಸಾದಾತ್ ಜಗತ್ಪತೇ|| ಚತುರ್ದಶ್ಯಾಂ ನಿರಾಹಾರೋ ಭೂತ್ವಾಶಂಭೋ ಪರೇಹನಿ ಭೋsಹಂ ಭುಕ್ತಿ, ಮುರ್ಥ೦ ಶರಣ ಮೇ ಭವೇಶ್ವರ” ಈ ಮಂತ್ರದಿಂದ ಸಂಕಲ್ಪ ಮಾಡತಕ್ಕದ್ದು. ಬ್ರಾಹ್ಮಣನಾದರೆ:- “ರಾಂ ಪ್ರಪದ್ಮ-ಜನನೀರು” ಈ ಋಕ್ಕುಗಳನ್ನು ಪಠಿಸಿ ಜಲವನ್ನು ಬಿಡತಕ್ಕದ್ದು, ನಂತರ ಸಂಜೆಯಲ್ಲಿ ಕರೇ ಎಳ್ಳು-ನೀರಿನಿಂದ ಸ್ನಾನಮಾಡಿ ಭಸ್ಮ, ತ್ರಿಪುಂಡ್ರ, ರುದ್ರಾಕ್ಷಾದಿಗಳನ್ನು ಧರಿಸಿ ಮೂರು ಸಂಜೆಯಲ್ಲಿ ಶಿವಸ್ಥಾನಕ್ಕೆ ಹೋಗಿ ವಾದಗಳನ್ನು ತೊಳೆದುಕೊಂಡು ಆಚಮನಮಾಡಿ ಉತ್ತರಾಭಿಮುಖನಾಗಿ ದೇಶಕಾಲಗಳನ್ನುಚ್ಚರಿಸಿ ಯಾಮಪೂಜೆಯನ್ನು ಮಾಡುವದಿದ್ದರೆ “ಶಿವರಾತ್ ಪ್ರಥಮಯಾಮಪೂಜಾಂ ಕರಿಷ್ಯ”, ಹಾಗೆಯೇ ನಂತರ “ದ್ವಿತೀಯಯಾದ ಪೂಜಾಂಕರಿಷ್ಟೇ” ಹೀಗೆ ಸಂಕಲ್ಪಿಸುವದು. ಒಂದೇ ಪೂಜೆಯನ್ನು ಮಾಡುವದಿದ್ದಲ್ಲಿ “ಶ್ರೀ ಶಿವಪ್ರೀತ್ಯರ್ಥ ಶಿವರಾತ್ರಿ ಶ್ರೀ ಪರಿಚ್ಛೇದ - ೨ ೧೪೭ ಶಿವಪೂಜಾಂ ಕರಿಷ್ಯ ಹೀಗೆ ಸಂಕಲ್ಪವು. ಯಾಮಭೇದದಿಂದ ವಿಶೇಷ ಪೂಜಾ ಕ್ರಮವನ್ನು ಮುಂದೆ ಹೇಳಲಾಗುವದು. ಈಗ ಸಾಮಾನ್ಯತಃ ಪೂಜಾವಿಧಿಯು ಹೇಳಲ್ಪಡುತ್ತದೆ:- “ಅಸ್ಯ ಶ್ರೀ ಶಿವಪಂಚಾಕ್ಷರ ಮಂತ್ರಸ್ಯ ವಾಮದೇವ ಋಷಿಃ ಅನುಷ್ಟುಪ್ ಛಂದಃ ಶ್ರೀ ಸದಾಶಿವೋ ದೇವತಾನ್ಯಾಸೇ ಪೂಜನೇಜವೇ ಚ ವಿನಿಯೋಗಃ ವಾಸುದೇವ ಋಷಯೇನಮಃ ಶಿರಸಿ ಅನುಷ್ಟುಪ್ ಛಂದಸೇನಮ: ಮುಖ ಶ್ರೀ ಸದಾಶಿವ ದೇವತಾಯ ನಮೋದಿ! ಓಂ ನಂ ತತ್ಪುರುಷಾಯನಮು: ಹೃದಯೇ। ಓಂ ಮಂ ಅಘೋರಾಯನಮಃ ಪಾದಯೋ:ಓಂ ಶಿಂ ಸರೋಜಾತಾಯನಮೋ ಗು ಓಂ ವಾಂ ವಾಮದೇವಾಯನ ಮೂಲ್ಕಿ ಓಂ ಯಂ ಈಶಾನಾಯನಮೋ ಮುಖೇ। ಓಂ ಓಂ ಹೃದಯಾಯನಮಃ ಓಂ ನಂ ಶಿರಸೇ ಸ್ವಾಹಾ ಓಂ ಮಂ ಶಿಖಾಯ ವಷಟ್‌ ಓಂಶಿಂ ಕವಚಾಯ ಹುಂ। ಓಂ ವಾಂ ನೇತ್ರತ್ರಯಾಯ ವೌಷಟ್| ಓಂ ಯಂ ಅಾಯ ಫಟ್ ಹೀಗೆ ನ್ಯಾಸಾದಿಗಳನ್ನೂ ಕಲಶ ಪೂಜೆಯನ್ನೂ ಮಾಡಿ ‘ಧ್ಯಾಯನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರು ಚಂದ್ರಾವತಂಸಂ ರತ್ನಾಕಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ ಪದ್ಮಾಸೀನಂ ಸಮಂತಾತ್ ಸ್ತುತಮಮರಗರ್ವಾಘ್ರಕೃತಿಂ ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲಭಯಹರಂ ಪಂಚವಕ್ರಂ ತ್ರಿಣೇತ್ರಂ” ಹೀಗೆ ಧ್ಯಾನಮಾಡಿ ಪ್ರಾಣಪ್ರತಿಷ್ಟೆ ಮಾಡತಕ್ಕದ್ದು. ಶಿವಲಿಂಗವನ್ನು ಸ್ಪರ್ಶಿಸಿ ಓಂ ಭುವ: ಪುರುಷಂ ಭೂ: ಪುರುಷಂ ಸಾಂಬವದಾಶಿವಮಾವಾಹಯಾಮಿ ಸಾಂಬಸದಾಶಿವಮಾವಾಹಯಾಮಿ। ಓಂ ಸ್ವಃ ಪುರುಷಂ ಸಾಂಬಸದಾಶಿವಮಾವಾಹಯಾಮಿ। ಓಂ ಭೂರ್ಭುವಸ್ವ: ಪುರುಷಂ ಸಾಂಬಸದಾಶಿವಮಾವಾಹಯಾಮಿ” ಹೀಗೆ ಆವಾಹನ ಮಾಡತಕ್ಕದ್ದು. “ಸ್ವಾಮಿನ್ ಸರ್ವಜಗನ್ನಾಥ ಯಾವತ್ತೂಜಾವಸಾನಕಂತಾವತ್ತ್ವಂ ಪ್ರೀತಿಭಾವೇನ ಲಿಂಗೇಸ್ಮಿನ್ ಸನ್ನಿಧೇಭವ” ಹೀಗೆ ಪುಷ್ಪಾಂಜಲಿಯನ್ನರ್ಪಿಸತಕ್ಕದ್ದು. ಸ್ಥಾವರ (ಸ್ಥಿರ) ಲಿಂಗದಲ್ಲಿ ಹಾಗೂ ಮೊದಲು ಸಂಸ್ಕರಿಸಲ್ಪಟ್ಟ ಚರಲಿಂಗದಲ್ಲಿಯಾದರೂ ಆವಾಹನ -ಪ್ರಾಣಪ್ರತಿಷ್ಠೆಗಳನ್ನು ಮಾಡತಕ್ಕದ್ದಿಲ್ಲ. “ಓಂ ಸದ್ಯೋಜಾತಂಪ್ರಪದ್ಯಾಮಿ ಸದ್ಯೋಜಾತಾಯಮ್ಮ ನಮೋನಮಃ! ಓ೦ ನಮಃಶಿವಾಯ ಶ್ರೀ ಸಾಂಬಸದಾಶಿವಾಯನಮಃ ಆಸನಂ ಸಮರ್ಪಯಾಮಿ ಸ್ತ್ರೀ ಶೂದ್ರರು ಓಂ ನಮಃಶಿವಾಯ ಎಂಬ ಪಂಚಾಕ್ಷರೀ ಸ್ಥಾನದಲ್ಲಿ ಶ್ರೀ ಶಿವಾಯನಮಃ ಹೀಗೆ ನಮಃ ಅಂತವಾದ ಮಂತ್ರದಿಂದ ಪೂಜಿಸುವದು. ‘‘ಓಂ ಭವೇ ಭವೇನಾತಿಭವೇ ಭವಸ್ಯಮಾಂ ಓಂ ನಮಃಶಿವಾಯ ಶ್ರೀ ಸಾಂಬಸದಾಶಿವಾಯನಮ: ಪಾದ್ಯಂ ಸಮರ್ಪಯಾಮಿ। ಓಂ ಭವೋದ್ಭವಾಯನಮಃ ಓಂ ನಮಃಶಿವಾಯ ಶ್ರೀ ಸಾಂಬಸದಾಶಿವಾಯನಮಃ ಅರ್ಘಂ ಸಮರ್ಪಯಾಮಿ। ಓಂ ವಾಸುದೇವಾಯನಮಃ ಓಂ ನಮಃ ಶಿವಾಯ ಸಾಂಬಸದಾಶಿವಾಯನಮ: ಆಚಮನಂ ಸಮರ್ಪಯಾಮಿ। ಓಂ ಜೇಷ್ಠಾಯನಮಃ ಓಂ ನಮಃಶಿವಾಯ ಸಾಂಬಸದಾಶಿವಾಯನಮಃ ಸ್ನಾನಂ ಸಮರ್ಪಯಾಮಿ ಆಮೇಲೆ ಮೂಲಮಂತ್ರದಿಂದ “ಆಪ್ಯಾಯಸ್ವ ಇತ್ಯಾದಿ ಮಂತ್ರಗಳಿಂದಲೂ ಪಂಚಾಮೃತಾಭಿಷೇಕಮಾಡಿಸಿ “ಆಪೋಹಿಷ್ಠಾ” ಇತ್ಯಾದಿ ಮೂರು ಮಂತ್ರಗಳನ್ನು ಹೇಳಿ ಶುದ್ಧೋದಕದಿಂದ ಸ್ನಾನಮಾಡಿಸಿ, ಏಕಾದಶಾವರ್ತಿ ಅಥವಾ ಒಂದಾವರ್ತಿ ರುದ್ರ ಹಾಗೂ ಪುರುಷಸೂಕ್ತದಿಂದ ಗಂಧ, ಕುಂಕುಮ, ಕರ್ಪೂರಗಳಿಂದ, ಪರಿಮಲವಾದ ಜಲದಿಂದ ಮಹಾಭಿಷೇಕ ೧೪೮ ಧರ್ಮಸಿಂಧು ಮಾಡಿ, “ಓಂ ನಮಃ ಶಿವಾಯ” ಈ ಮಂತ್ರದಿಂದ ಸ್ನಾನಾನಂತರದ ಆಚಮನವನ್ನು ಸಮರ್ಪಿಸಿ, ಅಕ್ಷತ ಸಹಿತವಾದ ಜಲದಿಂದ ತರ್ಪಣಮಾಡತಕ್ಕದ್ದು. “ಓಂ ಭವಂ ದೇವಂ ತರ್ಪಯಾಮಿ। ಓಂ ಶರ್ವ೦ ದೇವಂ ತರ್ಪಯಾಮಿ| ಓಂ ಈಶಾನಂದೇವಂ ತರ್ಪಯಾಮಿ ಓಂ ಪಶುಪತಿಂದೇವಂ ತರ್ಪಯಾಮಿ ಓಂ ಉಗ್ರಂದೇವಂ ತರ್ಪಯಾಮಿ। ಓಂ ರುದ್ರಂದೇವಂ ತರ್ಪಯಾಮಿ। ಓಂ ಭೀಮಂದೇವಂ ತರ್ಪಯಾಮಿ। ಓಂ ಮಹಾಂತಂದೇವಂ ತರ್ಪಯಾಮಿ ಭವದೇವಸ್ಯ ಪತ್ನಿಂ ತರ್ಪಯಾಮಿ ಶರ್ವಸ್ಯ ದೇವಸ್ಯ ಪಂ ತರ್ಪಯಾಮಿ| ರುದ್ರ ದೇವಸ್ಯ ಪತ್ನಿಂ ತರ್ಪಯಾಮಿ। ಭೀಮ ದೇವಸ್ಯ ಪತ್ನಿಂ ತರ್ಪಯಾಮಿ ಮಹತೋದೇವಸ್ಯ ಪತ್ನಿಂ ತರ್ಪಯಾಮಿ ಓಂ ಜೇಷ್ಠಾಯನಮಃ ಓಂ ನಮ: ಶಿವಾಯ ಶ್ರೀ ಸಾಂಬಸದಾಶಿವಾಯನಮ:! ವಸ್ತ್ರಂ ಸಮರ್ಪಯಾಮಿ (ಮೂಲದಿಂದ) ಆಚಮನಂ ಸಮರ್ಪಯಾಮಿ। ಓಂ ರುದ್ರಾಯನಮಃ ಓಂ ನಮ: ಶಿವಾಯ ಶ್ರೀ ಸಾಂಬಸದಾಶಿವಾಯ ನಮ: ಯಜೋಪವೀತಂ ಸಮರ್ಪಯಾಮಿ। (ಮೂಲಮಂತ್ರದಿಂದ) ಆಚಮನಂ ಸಮರ್ಪಯಾಮಿ ಓಂ ಕಾಲಾಯನಮಃ ಓಂ ನಮಃ ಶಿವಾಯ ಶ್ರೀ ಸಾಂಬಸದಾಶಿವಾಯನಮಃ ಚಂದನಂ ಸಮರ್ಪಯಾಮಿ। ಓಂ ಕಲವಿಕರಣಾಯನಮ: ಓಂ ನಮಃ ಶಿವಾಯ ಶ್ರೀ ಸಾಂಬಸದಾಶಿವಾಯನಮಃ ಅಕ್ಷತಾನ್ ಸಮರ್ಪಯಾಮಿ। ಓಂ ಬಲವಿಕರಣಾಯನಮಃ ಓಂ ನಮಃ ಶಿವಾಯ ಶ್ರೀ ಸಾಂಬಸಧಾಶಿವಾಯನಮ: ಪುಷ್ಪಾಣಿ ಸಮರ್ಪಯಾಮಿ!” ಇಲ್ಲಿ ಸಹಸ್ರನಾಮ ಅಥವಾ ಅಷ್ಟೋತ್ತರ ಶತನಾಮ ಇಲ್ಲವೇ ಮೂಲಮಂತ್ರದಿಂದ ಬಿಲ್ವಪತ್ರಗಳನ್ನರ್ಪಿಸುವದು. “ಓಂ ಬಲಾಯನಮಃ ಓಂ ನಮಃ ಶಿವಾಯ ಶ್ರೀ ಸಾಂಬಸದಾಶಿವಾಯನಮ: ಧೂಪಂ ಸಮರ್ಪಯಾಮಿ ಓಂ ಬಲಪ್ರಮಥನಾಯನಮಃ ಓಂ ನಮ: ಶಿವಾಯ ಶ್ರೀ ಸಾಂಬಸದಾಶಿವಾಯನಮ: ದೀಪಂ ಸಮರ್ಪಯಾಮಿ ಓಂ ಸರ್ವಭೂತದಮನಾಯನಮಃ ಓಂ ನಮ: ಶಿವಾಯ ಶ್ರೀ ಸಾಂಬಸದಾಶಿವಾಯನಮ: ನೈವೇದ್ಯಂ ಸಮರ್ಪಯಾಮಿ” (ಮೂಲಮಂತ್ರದಿಂದ) ಆಚಮನ ಮತ್ತು ಫಲವನ್ನು ಕೊಡುವದು “ಓಂ ಮನೋನ್ಮನಾಯನಮ: ಓಂ ನಮಃ ಶಿವಾಯ ಶ್ರೀ ಸಾಂಬಸದಾಶಿವಾಯನಮ: ತಾಂಬೂಲಂ ಸಮರ್ಪಯಾಮಿ ಮೂಲಮಂತ್ರ ಅಥವಾ ವೈದಿಕಮಂತ್ರಗಳಿಂದ ನಿರಾಜನ ಮಾಡತಕ್ಕದ್ದು. ಓಂ ಈಶಾನ=ಶಿವೋ। ಓಂ ನಮಃ ಶಿವಾಯ ಶ್ರೀ ಸಾಂಬಸರಾಶಿವಾಯನಮ: ಮಂತ್ರಪುಷ್ಪಂ ಸಮರ್ಪಯಾಮಿ ಭವಾಯದೇವಾಯನಮ:” ಇತ್ಯಾದಿ ಮಂತ್ರಗಳಿಂದ ಎಂಟು ನಮಸ್ಕಾರಗಳನ್ನು ಮಾಡುವದು. ಅದರಂತೆ ಭವಸ್ಯ ದೇವಸ್ಯ ಪನಮಃ ಇತ್ಯಾದಿ ಎಂಟು ನಮಸ್ಕಾರಗಳನ್ನು ಮಾಡುವದು. “ಶಿವಾಯನಮ:, ರುದ್ರಾಯನಮಃ, ಪಶುಪತಯೇನಮ:, ನೀಲಕಂಠಾಯನಮಃ, ಮಹೇಶ್ವರಾಯನಮಃ, ಪರಿಕೇಶಾಯನಮ:, ವಿರೂಪಾಕ್ತಾಯನಮಃ, ಪಿನಾಕಿನೇನಮಃ, ತ್ರಿಪುರಾಂತಕಾಯನಮ:, ಶಂಭವೇ ನಮಃ, ಶೂಲಿನೇನಮಃ, ಮಹಾದೇವಾಯನಮ:” ಹೀಗೆ ದ್ವಾದಶನಾಮಗಳಿಂದ ಹನ್ನೆರಡು ಪುಷ್ಪಾಂಜಲಿಗಳನ್ನರ್ಪಿಸುವದು. ಮೂಲಮಂತ್ರದಿಂದ ಪ್ರದಕ್ಷಿಣ, ನಮಸ್ಕಾರಗಳನ್ನು ಮಾಡಿ ನೂರೆಂಟಾವರ್ತಿ ಮೂಲಮಂತ್ರವನ್ನು ಜಪಿಸುವದು. ಆಮೇಲೆ ಕ್ಷಮಾಯಾಚನೆಯನ್ನು ಮಾಡಿ “ಅನೇನ ಪೂಜನೇನ ಶ್ರೀ ಸಾಂಬಸದಾಶಿವಪ್ರೀಯತಾಂ” ಹೀಗೆ ಪೂಜಾಸಮರ್ಪಣ ಮಾಡುವದು.ಪರಿಚ್ಛೇದ - ೨ ೧೪೯ ನಾಲ್ಕು ಯಾಮಪೂಜೆಯಲ್ಲಿ ವಿಶೇಷವೇನೆಂದರೆ: ಮೊದಲನೆಯ ಯಾಮದಲ್ಲಿ “ಮೂಲಮಂತ್ರವನ್ನು ಹೇಳಿದ ನಂತರ “ಶ್ರೀ ಶಿವಾಯನಮಃ ಆನಂ ಸಮರ್ಪಯಾಮಿ” ಹೀಗೆ ಶಿವನಾಮದಿಂದ ಎಲ್ಲ ಉಪಚಾರಗಳನ್ನೂ ಮಾಡತಕ್ಕದ್ದು. ದ್ವಿತೀಯಯಾಮದಲ್ಲಿ “ಶಿವರಾದ್ವಿತೀಯ ಯಾಮಪೂಜಾಂ ಕರಿಷ್ಯ ಹೀಗೆ ಸಂಕಲ್ಪಿಸಿ ಶ್ರೀ ಶಂಕರಾಯನಮಃ ಈ ನಾಮದಿಂದ ಷೋಡಶೋಪಚಾರವನ್ನು ಮಾಡತಕ್ಕದ್ದು, ತೃತೀಯಯಾಮದಲ್ಲಿ ತೃತೀಯಯಾಮ ಪೂಜಾಂ ಕರಿಷ್ಯ ಹೀಗೆ ಸಂಕಲ್ಪಿಸಿ ಶ್ರೀ ಮಹೇಶ್ವರಾಯನಮ: ಈ ನಾಮದಿಂದಲೂ ಚತುರ್ಥಯಾಮದಲ್ಲಿ ಇದರಂತೆ ಶ್ರೀ ರುದ್ರಾಯನಮಃ ಈ ನಾಮದಿಂದಲೂ ಪೂಜಿಸತಕ್ಕದ್ದು. ಪ್ರತಿಯಾಮದಲ್ಲೂ ತೈಲಾಭ್ಯಂಗ, ಪಂಚಾಮೃತ, ಉದ್ಯೋದಕ, ಕುಶೋದಕ, ಶುದ್ಧೋದಕ, ಗಂಧೋದಕಾದಿಗಳ ಅಭಿಷೇಕ ಮಾಡತಕ್ಕದ್ದು. ಯಜ್ಞಪವೀತ ಅರ್ಪಣದ ನಂತರ ಗೋರೋಚನ, ಕಸ್ತೂರಿ, ಕುಂಕುಮ, ಕರ್ಪೂರ ಆಗರುಚಂದನ ಇವುಗಳ ಮಿಶ್ರಣದಿಂದ ಲಿಂಗವನ್ನು ಲೇಪಿಸತಕ್ಕದ್ದು. ಈ ಲೇಪಪ್ರಮಾಣ ಇಪ್ಪತ್ತೈದು “ಪಲ” ಇರತಕ್ಕದ್ದು. ಅಥವಾ ಯಥಾಶಕ್ತಿಯಿಂದ ಲೇಪಿಸತಕ್ಕದ್ದು, ಧತ್ತೂರ, ಕರವೀರ ಪುಷ್ಪಗಳಿಂದ ಹಾಗೂ ಬಿಲ್ವಪತ್ರಗಳಿಂದ ಪೂಜಿಸುವದು. ಇದು ಅತಿ ಪ್ರಶಸ್ತವು. ಉಮ್ಮತ್ತದ ಅಭಾವದಲ್ಲಿ ಸಣ್ಣಕ್ಕಿ, ಗೋಧಿ, ಜವೆಗೋದಿಗಳಿಂದ ಪೂಜಿಸತಕ್ಕದ್ದು. ನೈವೇದ್ಯವಾದ ನಂತರ ಮುಖವಾಸಕ್ಕಾಗಿ ತಾಂಬೂಲವನ್ನರ್ಪಿಸುವದು. ನಾಗಬಳ್ಳಿ ಎಲೆ, ಅಡಿಕೆ, ಚಿಪ್ಪಿಯಸುಣ್ಣ, ಈ ತಾಂಬೂಲಕ್ಕೆ ತೆಂಗಿನಕಾಯಿಯ ಚೂರ್ಣ, ಕರ್ಪೂರ, ಯಾಲಕ್ಕಿ, ದಾಲಚಿನ್ನಿ ಇವುಗಳನ್ನು ಸೇರಿಸಿದರೆ “ಮುಖವಾಸ"ವಾಗುವದು. ಇವುಗಳಲ್ಲಿ ಕಡಿಮೆಯಾದ ವಸ್ತುವನ್ನು ಮನಸ್ಸಿನಲ್ಲಿ ಸ್ಮರಿಸುವದು. ಎಲ್ಲ ಪೂಜೆಯಾದ ಮೇಲೆ ‘ನಿತ್ಯಂ ನೈಮಿತ್ತಿಕಂ ಕಾಂ ಯತ್ನತಂತು ಮಯಾಶಿವ ತತ್ಸರ್ವಂ ಪರಮೇಶಾನ ಮಯಾತುಭಂ ಸಮರ್ಪಿತಂ’. ಹೀಗೆ ಪ್ರಾರ್ಥಿಸುವದು. ಇನ್ನು “ಶಿವರಾತ್ರಿಯ ಅರ್ಘ” “ಶಿವರಾತ್ರಿ ವ್ರತಂದೇವ ಪೂಜಾಜನ ಪರಾಯಣ ಕರೋಮಿ ವಿಧಿವರತ್ತಂ ಗೃಹಾಣಾರ್ಫಂ ನಮೋಸ್ತುತೇ” ಹೀಗೆ ಅರ್ಥ್ಯವನ್ನು ಕೊಡತಕ್ಕದ್ದು. ನಾಲ್ಕು ಯಾಮಗಳಲ್ಲಿ ಬೇರೆ-ಬೇರೆ ಅರ್ಘಮಂತ್ರಗಳನ್ನು “ಕೌಸ್ತುಭ"ದಲ್ಲಿ ಹೇಳಿದೆ. ರಾತ್ರಿಯಲ್ಲಿ ಜಾಗರಣಮಾಡಿ ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಪುನಃ ಶಿವನನ್ನು ಪೂಜಿಸಿ ಪೂರ್ವೋಕ್ತ ದ್ವಾದಶನಾಮಗಳಿಂದ ಹನ್ನೆರಡು ಬ್ರಾಹ್ಮಣರನ್ನು ಅರ್ಚಿಸಿ ಅಥವಾ ಒಬ್ಬನನ್ನಾದರೂ ಪೂಜಿಸಿ ತಿಲಪಕ್ಷಗಳಿಂದ ತುಂಬಿದ ಹನ್ನೆರಡು ಕುಂಭ, ಅಥವಾ ಒಂದು ಕುಂಭವನ್ನಾದರೂ ಬ್ರಾಹ್ಮಣರಿಗೆ ಕೊಟ್ಟು ವ್ರತವನ್ನು ಸಮರ್ಪಣಮಾಡತಕ್ಕದ್ದು, “ಯನ್ಮಯಾದಕೃತಂ ಪುಣ್ಯಂ ತದ್ರುದ್ರ ನಿವೇದಿತಂ|ಸಾದಾನ್ಮಹಾದೇವ ವ್ರತಮದ್ಯ ಸಮರ್ಪಿತಂ ಪ್ರಸನ್ನೋ ಭವ ಮೇ ಶ್ರೀಮನ್ ಸದ್ಗತಿ: ಪ್ರತಿಪಾದತಾಂದಾಲೋಕ ನಮಾತ್ರೇಣ ಪವಿತೋ ನ ಸಂಶಯಃ” ಹೀಗೆ ವ್ರತ ಸಮರ್ಪಣೆಯಲ್ಲಿ ಹೇಳತಕ್ಕದ್ದು. ಆಮೇಲೆ ಬ್ರಾಹ್ಮಣ ಸಂತರ್ಪಣೆ ಮಾಡಿ ಹಿಂದೆ ನಿರ್ಣಯಿಸಿದಂತ ಆ ಕಾಲದಲ್ಲಿ ಸ್ವಜನರಿಂದ ಕೂಡಿ ಪಾರಣೆಯನ್ನು ಮಾಡತಕ್ಕದ್ದು, ಪಾರಣೆಯ ಮಂತ್ರವು:- “ಸಂಸಾರ ದೇಶ ದಗ್ಧ ವ್ರತೇನಾನೇನ ಶಂಕರ ಪ್ರಸೀದ ಸುಮುಖನಾಥ ಜ್ಞಾನದೃಷ್ಟಿ ಪ್ರಭವ ಹೀಗೆ ಶಿವರಾತ್ರಿವ್ರತ ವಿಧಿಯು. ೧೫೦ ಧರ್ಮಸಿಂಧು ಪಾರ್ಥಿವ ಲಿಂಗಪೂಜೆ ಮೃಣ್ಮಯವಾದ ಲಿಂಗದಲ್ಲಿ ಶಿವಪೂಜೆ ಮಾಡುವದಿದ್ದಲ್ಲಿ ಅದರ ವಿಧಿ ಹೇಗೆಂದರೆ :- “ಓಂ ಹರಾಯನಮಃ” ಹೀಗೆಂದು ಮೃತ್ತಿಕೆಯನ್ನು ಸಂಗ್ರಹಿಸತಕ್ಕದ್ದು. ಆ ಮಣ್ಣನ್ನು ಗಾಳಿಸಿ ನೀರಿನಿಂದ ಚೆನ್ನಾಗಿ ನುರಿದು ಅದರ ಉಂಡೆಯನ್ನು ಮಾಡಿ “ಓಂ ಮಹೇಶ್ವರಾಯನಮಃ” ಎಂದು ಲಿಂಗಾಕಾರ ಮಾಡುವದು. ಎಂಬತ್ತು ಗುಂಜಿ ಪ್ರಮಾಣದ “ಕರ್ಷ"ಕ್ಕಿಂತ ಕಡಿಮೆಯಾಗದಷ್ಟು ಮತ್ತು ಅಂಗುಷ್ಠ ಪರಿಮಾಣಕ್ಕಿಂತ ಕಡಿಮೆಯಾಗದಂತೆ ಅದನ್ನು ರಚಿಸತಕ್ಕದ್ದು. ಈ ಪ್ರಮಾಣಕ್ಕಿಂತ ಹೆಚ್ಚಾದರೆ ಅಡ್ಡಿ ಇಲ್ಲ. ಕಡಿಮೆಯಾಗಕೂಡದು. ಮೃತ್ತಿಕಾಲಿಂಗ ವಿಷಯದಲ್ಲಿ “ಪಂಚಸೂತ್ರಿ"ಕ್ರಮಕ್ಕನುಸರಿಸಿ ಇರಬೇಕೆಂಬ ನಿಯಮವಿಲ್ಲ. ಇನ್ನು ‘ಬಾಣಲಿಂಗ, ನಿಜವಾದ ಲಕ್ಷಣಯುಕ್ತವಾದ “ಬಾಣಲಿಂಗ ಸಿಗುವದು ಅಪರೂಪ. ಏಳಾವರ್ತಿ ತೂಕಮಾಡಿದಾಗ ಪ್ರತಿ ಹಿಂದಿನ ತೂಕಕ್ಕಿಂತ ಅದರ ಭಾರವು ಹೆಚ್ಚಾಗುವದೇ ಹೊರತು” ಸಮ"ನಾಗಿರುವದಿಲ್ಲ. ಇದು ಉತ್ತಮ ಬಾಣಲಿಂಗದ ಲಕ್ಷಣವು. ಈ ಲಕ್ಷಣಕ್ಕೆ ಹೊಂದಿದ ಬಾಣಲಿಂಗಗಳಿಗೆಲ್ಲ “ನಾರ್ಮದ (ನರ್ಮದಾ ನದಿಯಲ್ಲಿ ಸಿಗುವ) ಬಾಣಲಿಂಗ” ವೆನ್ನುವರು. ಸುವರ್ಣಾದಿ ಲಿಂಗಗಳಿಗಾದರೂ ಕಠಿಣವಾದ “ಪಂಚಸೂತ್ರೀ” ಪರೀಕ್ಷಣದ ಆವಶ್ಯಕತೆಯಿದೆ. ಇದೆಲ್ಲ ಕಾರಣದಿಂದಾಗಿ “ಮೃಣ್ಮಯಲಿಂಗ"ವೇ ಶ್ರೇಷ್ಠವು. “ದ್ವಾಪರೇ ಪಾರದಂ ಶ್ರೇಷ್ಠಂ ಮೃಣ್ಮಯಂತು ಕಲೌಯುಗೇ ಹೀಗೆ ವಚನವಿರುವದರಿಂದ ಕಲಿಯುಗದಲ್ಲಿ ಪಾರ್ಥಿವಲಿಂಗವೇ ಪ್ರಶಸ್ತವು. ಲಿಂಗವನ್ನು ತಯಾರಿಸಿ ಬಿಲ್ವಪತ್ರೆಯ ಆಸನವನ್ನು ಹಾಕಿದ ಪೀಠದಲ್ಲಿ “ಓಂ ಶೂಲಪಾಣಯೇನಮ:’ ‘ಶಿವ ಇಹ ಪ್ರತಿಷ್ಠಿತೋಭವ’ ಎಂದು ಸ್ಥಾಪಿಸುವದು. “ಧ್ಯಾಯೇನ್ನಿತ್ಯಂಮಹೇಶಂ” ಎಂಬ ಮಂತ್ರದಿಂದ ಧ್ಯಾನಿಸಿ “ಓಂ ಪಿನಾಕಷೇನಮಃ” “ಶ್ರೀ ಸಾಂಬಸದಾಶಿವ ಇಹಾಗಪ್ಪ, ಇಹಪ್ರತಿಷ್ಠೆ, ಇಹಸನ್ನಿಹಿತೋಭವ” ಎಂದು ಆವಾಹನ ಮಾಡತಕ್ಕದ್ದು. ಬ್ರಾಹ್ಮಣರಿಗೆ ಸರ್ವತ್ರ ಮೂಲಮಂತ್ರದಿಂದ ಪೂಜೆಯು, ‘ಓಂ ನಮಃ ಶಿವಾಯ’ ಎಂಬ ಮಂತ್ರದಿಂದ ವಾದ್ಯ, ಅರ್ಘ, ಆಚಮನ ಮೊದಲಾದ ಉಪಚಾರ ಮಾಡಿ “ಪಶುಪತಯೇನಮ:” ಎಂದು, ಮತ್ತು ಮೂಲಮಂತ್ರದಿಂದ ಸ್ನಾನ, ವಸ್ತ್ರ, ಉಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಫಲ, ತಾಂಬೂಲ, ನಿರಾಜನ, ಮಂತ್ರಪುಷ್ಪ ಇತ್ಯಾದಿಗಳನ್ನರ್ಪಿಸಿ ‘ಶರ್ವಾಯ ಕೃತಿ ಮೂರ್ತಯೇ ನಮಃ’ ಎಂದು ಪೂರ್ವದಿಕ್ಕಿನಲ್ಲಿ ಪೂಜಿಸುವದು. ‘ಭವಾಯ ಜಲಮೂರ್ತಯೇನವು’ ಎಂದು ಈಶಾನ್ಯದಲ್ಲಿಯೂ ‘ರುದ್ರಾಯ ಅಗ್ನಿ ಮೂರ್ತಯೇನಮಃ’ ಎಂದು ಉತ್ತರದಿಕ್ಕಿನಲ್ಲಿಯೂ, ‘ಉಗ್ರಾಯ ವಾಯುಮೂರ್ತಯೇನಮ’ ಎಂದು ವಾಯುವ್ಯದಲ್ಲಿಯೂ, ‘ಭೀಮಾಯ ಆಕಾಶಮೂರ್ತಯೇ ನಮಃ’ ಎಂದು ಪಶ್ಚಿಮ ದಿಕ್ಕಿನಲ್ಲಿಯೂ, ‘ಪಶುಪತಯೇ ಯಜಮಾನಮೂರ್ತಯೇ ನಮಃ’ ಎಂದು ನೈಋತ್ಯದಲ್ಲಿಯೂ, ‘ಮಹಾದೇವಾಯ ಸೋಮ ಮೂರ್ತಯೇನಮಃ’ ಎಂದು ದಕ್ಷಿಣದಿಕ್ಕಿನಲ್ಲಿಯೂ, ‘ಈಶಾನಾಯ ಸೂರ್ಯಮೂರ್ತಯೇನಮ’ ಎಂದು ಆಗೇಯ ದಿಕ್ಕಿನಲ್ಲಿಯೂ ಪೂಜಿಸುವದು. ಆಮೇಲೆ ಸ್ತುತಿಸಿ ನಮಸ್ಕಾರ ಮಾಡಿ “ಮಹಾದೇವಾಯನಮ:” ಎಂದು ವಿಸರ್ಜಿಸುವದು. ಇದು ಸಂಕ್ಷಿಪ್ತ ವಿಧಿಯು, ಶಿವರಾತ್ರಿಯಲ್ಲಾದರೆ ಈ ಪಾರ್ಥಿವಲಿಂಗಕ್ಕೆ ಹಿಂದೆ ಹೇಳಿದ ಶಿವರಾತ್ರಿಯ ಪೂಜಾವಿಧಾನದಿಂದ ಅರ್ಚಿಸುವದು. ಈ ಪಾರ್ಥಿವ ಲಿಂಗಕ್ಕೂ ಉದ್ಯಾಪನ ವಿಧಿಯಿದೆ. ಅದನ್ನು “ಕೌಸ್ತುಭ ಮೊದಲಾದ ಗ್ರಂಥಗಳಲ್ಲಿ ನೋಡತಕ್ಕದ್ದು. ಪರಿಚ್ಛೇದ - ೨ ಲಿಂಗಗಳ ಭೇದದಿಂದ-ಫಲವಿಶೇಷಗಳು ୧ ವಜ್ರದ ಲಿಂಗದಿಂದ ಆಯುಷ್ಯ ಪ್ರಾಪ್ತಿಯಾಗುವದು. ಮುತ್ತಿನಲಿಂಗದಿಂದ ರೋಗ ನಾಶವಾಗುವದು. ವೈಡೂರ್ಯ ಲಿಂಗದಿಂದ ಶತ್ರುನಾಶವಾಗುವದು. ಪದ್ಮರಾಗ ಲಿಂಗಪೂಜೆಯಿಂದ ಐಶ್ವರ್ಯ ಪ್ರಾಪ್ತಿಯಾಗುವದು. ಪುಷ್ಕರಾಗದಿಂದ ಸುಖಪ್ರಾಪ್ತಿಯಾಗುವದು. ಇಂದ್ರನೀಲದಿಂದ ಯಶಸ್ಸು ಲಭಿಸುವದು. ಪಚ್ಚೆಯಿಂದ ಪುಷ್ಟಿಯುಂಟಾಗುವದು. ಸ್ಪಟಿಕಲಿಂಗದಿಂದ ಸಕಲ ಕಾಮನಾ ಪ್ರಾಪ್ತಿಯು, ಬೆಳ್ಳಿಯ ಲಿಂಗದಿಂದ ರಾಜ್ಯ ಪ್ರಾಪ್ತಿಯಾಗುವದು, ಮತ್ತು ಪಿತೃಮುಕ್ತಿಯಾಗುವದು. ಬಂಗಾರದ ಲಿಂಗದಿಂದ ಸತ್ಯಲೋಕ ಪ್ರಾಪ್ತಿಯಾಗುವದು. ತಾಮ್ರಮಯ ಲಿಂಗದಿಂದ ಪುಷ್ಟಿ ಮತ್ತು ಆಯುಷ್ಯ ಪ್ರಾಪ್ತಿಯಾಗುವದು. ಹಿತ್ತಾಳೆಯಿಂದ ತುಷ್ಟಿಪ್ರಾಪ್ತಿ, ಕಂಚಿನ ಲಿಂಗದಿಂದ ಕೀರ್ತಿ ಪ್ರಾಪ್ತಿಯು, ಲೋಹಮಯ ಲಿಂಗದಿಂದ ಶತ್ರುನಾಶವು, ಸೀಸದ ಲಿಂಗದಿಂದ ಆಯುಷ್ಯಪ್ರಾಪ್ತಿ. ಕೆಲವರು ಬಂಗಾರದ ಲಿಂಗದಿಂದ ಬ್ರಹ್ಮಸ್ವಾಪಹಾರ ಪರಿಹಾರ ಮತ್ತು ಸ್ಥಿರಲಕ್ಷ್ಮೀ ಪ್ರಾಪ್ತಿಯಾಗುವದನ್ನುವರು. ಗಂಧದ ಲಿಂಗದಿಂದ ಸೌಭಾಗ್ಯ ಪ್ರಾಪ್ತಿಯಾಗುವದು. ಆನೆಯ ದಂತದ ಲಿಂಗದಿಂದ ಸೇನಾಧಿಪತ್ಯ ಲಭಿಸುವದು. ತಂಡುಲಾದಿ ಪಿಷ್ಟಮಯ ಲಿಂಗದಿಂದ ಪುಷ್ಟಿ, ಸುಖಪ್ರಾಪ್ತಿ, ಮತ್ತು ರೋಗನಾಶವು. ಉದ್ದಿನ ಹಿಟ್ಟಿನ ಲಿಂಗದಿಂದ ಸ್ತ್ರೀ ಲಾಭವು, ಬೆಣ್ಣೆಯ ಲಿಂಗದಿಂದ ಸುಖಪ್ರಾಪ್ತಿಯು, ಗೋಮಯ ಲಿಂಗದಿಂದ ರೋಗನಾಶವು, ಬೆಲ್ಲದ ಲಿಂಗದಿಂದ ಅನ್ನಾದಿಗಳ ಪ್ರಾಪ್ತಿಯು. ಬಿದಿರಿನ ಮೊಳಕೆಯ ಲಿಂಗದಿಂದ ವಂಶವೃದ್ಧಿಯಾಗುವದು. ಹೀಗೆ ಬೇರೆ-ಬೇರೆ ಕಡೆಗಳಲ್ಲಿ ಫಲಗಳನ್ನು ಹೇಳಿದೆ. ಇನ್ನೂ ವಿಸ್ತಾರವಾಗಿ ಅನೇಕ ಕಡೆಗಳಲ್ಲಿ ಹೇಳಿದೆ. ಇದರಂತೆ ಲಿಂಗಗಳ ಸಂಖ್ಯಾವಿಶೇಷಗಳಿಂದಲೂ ಫಲವಿಶೇಷವನ್ನು ಹೇಳಿದೆ. ಅದನ್ನು ಕೌಸ್ತುಭಾದಿ ಗ್ರಂಥಗಳಲ್ಲಿ ನೋಡಬಹುದು. ಶಿವನಿರ್ಮಾಲ್ಯವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ವಿಚಾರವನ್ನು ತೃತೀಯ ಪರಿಚ್ಛೇದದಲ್ಲಿ ನೋಡುವದು. ಮಾಸಶಿವರಾತ್ರಿ ನಿರ್ಣಯವನ್ನು ಪ್ರಥಮ ಪರಿಚ್ಛೇದದಲ್ಲಿ ಹೇಳಲಾಗಿದೆ. ಶಿವರಾತ್ರಿ ವ್ರತೋದ್ಯಾಪನೆಯನ್ನು ಕೌಸ್ತುಭಾದಿ ಗ್ರಂಥಗಳಲ್ಲಿ ನೋಡತಕ್ಕದ್ದು. ಮಾಘಮಾಸದ ಅಮಾವಾಸ್ಯೆಯಲ್ಲಿ ಶ್ರಾದ್ದಕ್ಕೆ ಅಪರಾಹ್ನ ವ್ಯಾಪ್ತಿಯಿರಬೇಕು. ಇದು “ಯುಗಾದಿ"ಯಾದ ಕಾರಣ ಪಿಂಡರಹಿತವಾಗಿ ಶ್ರಾದ್ಧಮಾಡತಕ್ಕದ್ದು ಈ ಯುಗಾದಿ ಶ್ರಾದ್ಧವನ್ನು ದರ್ಶಶಾಸ್ತ್ರದೊಡನೆ ಸಮಾನ ತಂತ್ರದಿಂದ ಮಾಡತಕ್ಕದ್ದು. ಮಾಘ ಅಮಾವಾಸ್ಯೆಗೆ ಶತಭಿಷಾ ನಕ್ಷತ್ರಯೋಗವಾದರೆ ಪರಮಪುಣ್ಯಕಾಲವಾಗುವದು. ಆಗ ಶ್ರಾದ್ಧ ಮಾಡಿದಲ್ಲಿ ಪಿತೃಗಳು ಪರಮ ಸಂತುಷ್ಟರಾಗುವರು. ಇಲ್ಲಿಗೆ ಮಾಘಮಾಸಕೃತ್ಯ ನಿರ್ಣಯೋದ್ದೇಶವು ಮುಗಿಯಿತು. ಫಾಲ್ಕು ನಮಾಸ ನಿರ್ಣಯ ಫಾಲ್ಗುನದಲ್ಲಿ ಮೀನಸಂಕ್ರಾಂತಿ. ಇದರ ಮುಂದಿನ ಹದಿನಾರು ಘಟಗಳು ಪುಣ್ಯಕಾಲ. ಇದರ ರಾತ್ರಿ ಸಂಕ್ರಾಂತಿಯ ವಿಷಯವನ್ನು ಹಿಂದೆಯೇ ಹೇಳಿದ. ಫಾಲ್ಗುನದಲ್ಲಿ ಗೋದಾನ, ಭತ್ತದಾನ, ವಸ್ತ್ರದಾನಗಳನ್ನು ಮಾಡಿದರೆ ಗೋವಿಂದನು ಸುಪ್ರೀತನಾಗುವನು. ಭಾಗವತದಲ್ಲಿ ಈ ಫಾಲ್ಕುನ ಪ್ರತಿಪದೆಯಿಂದ ಹನ್ನೆರಡು ದಿನ ಪರ್ಯಂತ ಪಯೋವ್ರತವನ್ನು ಆಚರಿಸಲು ಹೇಳಿದೆ. ಫಾಲ್ಕುನ ಹುಣ್ಣಿವೆಯು “ಮಾದಿ"ಯಾಗಿರುವದರಿಂದ ಅದು ಶುಕ್ಲ ಪಕ್ಷವಾದ ಕಾರಣ ೧೫೨ ಧರ್ಮಸಿಂಧು ಪೂರ್ವಾಹ ವ್ಯಾಪಿನಿಯನ್ನು ಸ್ವೀಕರಿಸತಕ್ಕದ್ದು. ಈ ಹುಣ್ಣಿವೆಯು ಹೋಲಿಕಾ ಪೂರ್ಣಿಮೆ (ಹೋಳಿ ಹುಣ್ಣಿವ). ಅದು ಪ್ರದೋಷವ್ಯಾಪಿನಿ ಹಾಗೂ ಭದ್ರಾ (ಕರಣ) ರಹಿತವಾದದ್ದೂ, ಗ್ರಾಹ್ಯವು. ಎರಡೂದಿನ ಅಂದರೆ ಚತುರ್ದಶೀ, ಹುಣ್ಣಿವ ಈ ಎರಡೂದಿನ ಪ್ರದೋಷ ವ್ಯಾಪ್ತಿಯಿದ್ದರೆ ಅಥವಾ ಪರದಿನದಲ್ಲಿ ಪ್ರದೋಷದಲ್ಲಿ ಏಕದೇಶವ್ಯಾಪ್ತಿಯಿದ್ದರೆ ಪರವೇ ಗ್ರಾಹ್ಯವು. ಪೂರ್ವದಿನ ಭದ್ರಾದೋಷವಿದ್ದು ಪರದಿನ ಪ್ರದೋಷಕ್ಕೆ ಸ್ಪರ್ಶವಿಲ್ಲದಿದ್ದರೆ, ಪೂರ್ವದಿನ ಪ್ರದೋಷದಲ್ಲಿ ಭದ್ರಾ ಇರುವ, ಈ ಸಂದರ್ಭದಲ್ಲಿ ಹುಣ್ಣಿವೆಯು ಪರದಿನ ಮೂರುವರೆ ಯಾಮ ಅಥವಾ ಅದಕ್ಕೂ ಹೆಚ್ಚಿಗಿದ್ದು, ಮುಂದಿನ ಪ್ರತಿಪದೆಯು ವೃದ್ಧಿಯಾಗಿದ್ದರೆ ಆಗ ಪರದಿನ ಪ್ರದೋಷವ್ಯಾಪಿನಿ ಪ್ರತಿಪದೆಯಲ್ಲಿ ಹೋಳಿಯನ್ನೂ ಸುಡತಕ್ಕದ್ದು. ಪ್ರತಿಪದೆಯು ಪ್ರಾಸವಾಗಿದ್ದರೆ ಆಗ ಪೂರ್ವದಿನ ಭದ್ರಾಮುಖವನ್ನು ಬಿಟ್ಟು ಭದ್ರೆಯ ಪುಚ್ಛದಲ್ಲಾಗಲೀ ಉಳಿದ ಭದ್ರೆಯ ಭಾಗದಲ್ಲಾಗಲೀ ಹೋಳಿಯ ದಹನವು, ಪರದಿನದಲ್ಲಿ ಪ್ರದೋಷ ಸ್ಪರ್ಶವಿಲ್ಲದಾಗ ಪೂರ್ವದಿನ ನಿಶೀಥಕ್ಕಿಂತ ಮೊದಲು ಭದ್ರಾ ಸಮಾಪ್ತವಾಗಿದ್ದರೆ ಆಗ ಭದ್ರೆಯ ಅವಸಾನಾನಂತರವೇ ಹೋಲಿಕಾ ಕಾಮದಹನವು. ನಿಶೀಥಾನಂತರದಲ್ಲಿ ಭದ್ರೆಯು ಸಮಾಪ್ತವಾದಾಗ ಭದ್ರಾಮುಖವನ್ನು ಬಿಟ್ಟು ಹೋಲಿಕಾದಹನ ಮಾಡತಕ್ಕದ್ದು, ಪ್ರದೋಷದಲ್ಲಿ ಭದ್ರಾಮುಖ ವ್ಯಾಪ್ತಿಯಿದ್ದರೆ ಭದ್ರಾ ನಂತರವಾಗಲೀ ಪ್ರದೋಷಾನಂತರವಾಗಲೀ ಕಾಮದಹನ ಮಾಡತಕ್ಕದ್ದು. ದಿನದಯದಲ್ಲಿಯೂ ಹುಣ್ಣಿಮೆಗೆ ಪ್ರದೋಷ ಸ್ಪರ್ಶವಿಲ್ಲದಿರುವಾಗ ಪೂರ್ವದಿನದಲ್ಲಿಯೇ ಭದ್ರಾಪುಚ್ಛದಲ್ಲಿ ಮಾಡತಕ್ಕದ್ದು. ಅದರ ಅಭಾವವಾದರೆ ಪ್ರದೋಷಾನಂತರ ಭದ್ರೆಯಲ್ಲಿಯೇ ಹೋಳಿಯ ದಹನವು. ರಾತ್ರಿಯ ಪೂರ್ವಾರ್ಧದಲ್ಲಿ ಭದ್ರೆಯು “ಗ್ರಾಹ್ಯ"ವೆಂಬ ವಚನವಿದೆ. ಇದರ ಹೊರತಾಗಿ ಪೂರ್ವವ್ರದೋಷಾದಿಯಲ್ಲಾಗಲೀ ಚತುರ್ದಶಿಯಲ್ಲಾಗಲೀ ಮಾಡತಕ್ಕದ್ದಲ್ಲ. ವರದಿನ ಸಾಯಾಹ್ನಾದಿ ಹಗಲಿನಲ್ಲಿ ಹೋಳಿಯನ್ನು ಸುಡುವದು ಸರ್ವಗ್ರಂಥ ವಿರುದ್ಧವಾದದ್ದು. ಹೋಳಿಕಾ ಪೂಜೆಯು ಶ್ರವಣಾಕರ್ಮಾದಿಗಳಂತೆ ಭೋಜನ ಮಾಡಿದ್ದರೂ ನಡೆಯುವದು, ಕೆಲವರು ಹೋಲಿಕಾ ಪೂಜೆಯ ನಂತರ ಭೋಜನ ಮಾಡುವರು. ಇದರಲ್ಲಿ ಭೋಜನ, ಪೂಜನೆಗೆ ನಿಯಮವಿಲ್ಲ; ಎಂಬ ಶಾಸ್ತೋಕ್ತ ಕಾಲದ ಲಾಭವು ಅವರಿಗೆ ಸಿಗುವದಿಲ್ಲ. ಈ ದಿನ ಚಂದ್ರಗ್ರಹಣವಾಗಿದ್ದರೆ ವೇಧಮಧ್ಯದಲ್ಲಿ ಹೋಳಿ ದಹನ ಮಾಡತಕ್ಕದ್ದು. ಗ್ರಸ್ತೋದಯವಾದಾಗ ಪರದಿನ ಪ್ರದೋಷಕಾಲದಲ್ಲಿ ಪೂರ್ಣಿಮೆಯಿದ್ದರೆ ಗ್ರಹಣ ಮಧ್ಯಕಾಲದಲ್ಲೇ ಮಾಡತಕ್ಕದ್ದು. ಇಲ್ಲವಾದರೆ ಪೂರ್ವದಿನ ಮಾಡತಕ್ಕದ್ದು. ಭದ್ರಾಮುಖ ಪುಚ್ಛವೆಂದರೇನು? ಹುಣ್ಣಿಮೆಯಲ್ಲಿ ಭದ್ರೆಯ ಮೂರನೇ ಪಾದದ ಅಂತ್ಯದಲ್ಲಿ ಮೂರು ಘಟಿಗಳು “ಪುಚ್ಛವು ನಾಲ್ಕನೇ ಪಾದದ ಆದಿ ಐದು ಘಟಗಳು “ಮುಖ"ವು. ಮಧ್ಯಮಮಾನದಿಂದ ಅರವತ್ತು ಘಟಿ ಪೂರ್ಣಿಮೆಯಾದಾಗ ಪೂರ್ಣಿಮಯ ಪ್ರಾರಂಭದಿಂದ ಮುಂದೆ ಹತ್ತೊಂಬತ್ತುವರೆ ಘಟಿಯ ನಂತರ “ಮೂರು ಘಟಿಗಳಿಗೆ “ಪುಚ್ಛವನ್ನುವರು. ಇಪ್ಪತ್ತೆರಡುವರ ಘಟಿಯ ನಂತರ ಐದು ಘಟಿಗಳು ಮುಖ ವೆನ್ನಲ್ಪಡುವದು. ಅದೇ ಹುಣ್ಣಿವೆಯ ಪರಮವು ಅರವತ್ತು ನಾಲ್ಕು ಘಟಿಗಳಾದರೆ ಹುಣ್ಣಿವೆಯ ಇಪ್ಪತ್ತೊಂದು ಘಟಿಯನಂತರ “ಪುಚ್ಚ"ವೆಂದಾಗುವದು. ಇಪ್ಪತ್ತುನಾಲ್ಕು ಘಟಿಗಳ ಪರಿಚ್ಛೇದ ೧೫೩ ನಂತರ “ಮುಖ” ವಾಗುವದು. ಹೀಗೆ ತಿಥಿಯ ಮಾನದಿಂದ ಅನುಪಾತಮಾಡಿ ತಿಳಿಯತಕ್ಕದ್ದು. ಪೂಜಾವಿಧಿ ದೇಶ ಕಾಲಗಳನ್ನುಚ್ಚರಿಸಿ “ಸಕುಟುಂಬ, ಮಮ ಡುಂಡಾ ರಾಕ್ಷಸೀ ಪ್ರೀತ್ಯರ್ಥಂ ತಡಾ ಪರಿಹಾರಾರ್ಥಂ ಹೋಲಿಕಾ ಪೂಜಾರಾಧನಂ ಕರಿಷ್ಯ ಹೀಗೆ ಸಂಕಲ್ಪಿಸಿ ಒಣಗಿದ ಕಟ್ಟಿಗೆ ಹಾಗೂ ಸಗಣಿಯ ಕುಳ್ಳುಗಳನ್ನು ರಾಶಿಮಾಡಿ ಅದಕ್ಕೆ ಬೆಂಕಿಯನ್ನು ಕೂಟ್ಟು “ಆತ್ಮಾಭಿರ್ಭಯ ಸಂತ್ರಸ್ತ ಕೃತಾತ್ವಂ ಹೋಲಿಕೇಯತನ ಆತಾಂ ಪೂಜಯಿಷ್ಯಾಮಿ ಭೂತೇ ಭೂತಿಪ್ರರಾಭವಗೆ ಈ ಮಂತ್ರವನ್ನು ಹೇಳಿ “ಶ್ರೀ ಹೋಲಿಕಾಯ್ಕ ನಮ: ಹೋಲಿಕಾಮಾವಾಹಯಾಮಿ” ಹೀಗೆ ಆವಾಹನಮಾಡಿ, ಹೋಲಿಕಾಯ್ಕೆನಮಃ ಇದೇ ಮಂತ್ರದಿಂದ ಆಸನ ಪಾದ್ಯಾದಿ ಷೋಡಶೋಪಚಾರ ಪೂಜೆಯನ್ನು ಮಾಡತಕ್ಕದ್ದು. ಅಗ್ನಿಯನ್ನು ಮೂರಾವರ್ತಿ ಪ್ರದಕ್ಷಿಣೆ ಮಾಡಿ ಮನಸ್ಸಿಗೆ ಬಂದಂತೆ ಕಿರಚುವದು, ನಗೆಯಾಡುವದು ಇತ್ಯಾದಿ ಕೋಲಾಹಲವನ್ನುಂಟುಮಾಡುವದು. “ಜ್ಯೋತಿರ್ನಿಬಂಧ” ಗ್ರಂಥದಲ್ಲಿ ಶುಕ್ಲ ಪಂಚಮಿಯಿಂದ ಹದಿನೈದು ದಿನಗಳು ಅನಂತ ಪುಣ್ಯಪ್ರದಗಳು ಎಂದು ಹೇಳಿದೆ. ಅವುಗಳಲ್ಲಿ ಕಟ್ಟಿಗೆ ಕದಿಯುವದು ಅಪರಾಧವೆನಿಸುವದಿಲ್ಲ. ಚಾಂಡಾಲ ಅಥವಾ ಬಾಣಂತಿಯ ಮನೆಯಿಂದ ಬಾಲಕರು ಅಗ್ನಿಯನ್ನು ತಂದು ಚೋರತನದಿಂದ ಸಂಗ್ರಹಿಸಿದ ಕಟ್ಟಿಗೆಯನ್ನು ಪೂರ್ಣಿಮೆಯ ದಿನ ಸುಡತಕ್ಕದ್ದು, ಗ್ರಾಮದ ಹೊರಗೆ ಅಥವಾ ಮಧ್ಯದಲ್ಲಾದರೂ ತುತ್ತೂರಿ ಮೊದಲಾದ ವಾದ್ಯಗಳನ್ನು ಬಾರಿಸತಕ್ಕದ್ದು. ರಾಜನಾದವನು ಸ್ನಾನದಿಂದ ಶುಚಿರ್ಭೂತನಾಗಿ ಸ್ವಸ್ತಿವಾಚನಾದಿಗಳನ್ನು ಮಾಡಿ ಅನೇಕ ದಾನಗಳನ್ನು ಮಾಡಿ ಹೋಲಿಕಾ ಚಿತಿಗೆ ಅಗ್ನಿಯನ್ನು ಕೊಡತಕ್ಕದ್ದು. ಆಮೇಲೆ ಎಲ್ಲ ಚಿತಿಯನ್ನು ತುಪ್ಪದಿಂದ ಕೂಡಿದ ಹಾಲಿನಿಂದ ಪ್ರೋಕ್ಷಿಸಿ ತೆಂಗಿನಕಾಯಿ ದಾಳಿಂಬ ಮೊದಲಾದ ಫಲಗಳನ್ನರ್ಪಿಸುವದು. ಜನರೆಲ್ಲ ಗಾಯನ, ವಾದನಾದಿಗಳಿಂದ, ನೃತ್ಯಗಳಿಂದ, ರಾತ್ರಿಯಲ್ಲಿ ಜಾಗರಣೆಮಾಡಿ ಅಗ್ನಿಯನ್ನು ಮೂರಾವರ್ತಿ ಪ್ರದಕ್ಷಿಣೆಮಾಡಿ"ಲಿಂಗ, ಭಗ” ಇತ್ಯಾದಿ ಅಶ್ಲೀಲ ಶಬ್ದಗಳನ್ನು ಉಚ್ಚರಿಸುವದು. ಇದರಿಂದ ಪಾಪಿಷ್ಠೆಯಾದ ಢುಂಢಾ ರಾಕ್ಷಸಿಯು ತೃಪ್ತಳಾಗುವಳು. ಮಾರನೇ ದಿನ ಪ್ರತಿಪದೆಯಲ್ಲಿ ಚಾಂಡಾಲ ದರ್ಶನಮಾಡಿ ಸ್ನಾನಮಾಡತಕ್ಕದ್ದು. ಹೀಗೆ ಮಾಡಿದವನ ಪಾಪವು ಪರಿಹಾರವಾಗುವದು. ಆಧಿ ವ್ಯಾಧಿಗಳು ಬಾಧಿಸುವಂತಿಲ್ಲ. ಹೀಗೆ ಆವಶ್ಯಕ ಕಾರ್ಯಗಳನ್ನು ಮಾಡಿ ಪಿತೃದೇವತೆಗಳನ್ನೂ ತೃಪ್ತಿ ಪಡಿಸತಕ್ಕದ್ದು. ಸಮಸ್ತ ಪಾಪನಾಶಕ್ಕಾಗಿ “ವಂದಿತಾಸಿ ಸುರೇಂದ್ರಣ ಬ್ರಹ್ಮಣಾ ಶಂಕರೇಣ ಚ। ಆತಂ ಪಾಹಿನೋದೇವಿ ಭೂತೇಭೂತಿ ಪ್ರದಾಭವ” ಈ ಮಂತ್ರವನ್ನು ಹೇಳಿ ಭಸ್ಮವನ್ನು ನಮಸ್ಕರಿಸುವದು. ಹೋಳಿಯದಿನ ಮತ್ತು ಮರುದಿನ ಹೀಗೆ ಎರಡು ದಿನಗಳಿಗೆ “ಕರಿದಿನ"ವೆನ್ನುವರು. ಇವು ಶುಭಕಾರ್ಯಕ್ಕೆ “ವರ್ಜ"ವು. ಇದರಂತೆ ಗ್ರಹಣ, ವೈಶಾಖ ಅಮಾವಾಸ್ಯೆ, ಎರಡು ಆಯನ ಸಂಕ್ರಾಂತಿ, ಪ್ರೇತದಹನ ಇವುಗಳ ಆ ದಿನ ಮತ್ತು ಪರದಿನಗಳು “ಕರಿದಿನಗಳು, ಆದ್ದರಿಂದ ಸಕಲ ಶುಭಕಾರ್ಯಗಳಿಗೂ ವರ್ಜಗಳೆಂದು ವಚನವಿದೆ. ಗ್ರಹಣ, ಅಯನ, ಪ್ರೇತದಹನ ಇವುಗಳ ಕರಿದಿನವನ್ನು ನಿಶೀಥ ವಿಭಾಗದಿಂದ ಅಂದರೆ ಅರ್ಧರಾತ್ರಿಯ ಒಳಗಾದರೆ ಆ ದಿನ, ನಂತರವಾದರೆ ಪರದಿನವೆಂದು ತಿಳಿದು ಎರಡು ಕರಿದಿನಗಳನ್ನು ಬಿಡತಕ್ಕದ್ದು. ಫಾಲ್ಕುನ ಹುಣ್ಣಿವೆಯಲ್ಲಿ ಪುರುಷೋತ್ತಮನಾದ ಗೋವಿಂದನನ್ನು (ಮೂರ್ತಿ) ತೊಟ್ಟಿಲಲ್ಲಿ ಧರ್ಮಸಿಂಧು ಮಲಗಿಸಿ ಅವನನ್ನು ನೋಡುವದರಿಂದ ವಿಷ್ಣು ಲೋಕ ಪ್ರಾಪ್ತಿಯಾಗುವದೆಂದು ಹೇಳಿದೆ. ಫಾಲ್ಗುನ ಕೃಷ್ಣ ಪ್ರತಿಪದೆಯಲ್ಲಿ “ವಸಂತಾರಂಭೋತ್ಸವವು.” ಅದು ಉದಯಕಾಲ ವ್ಯಾಪಿನಿಯಾದದ್ದು ಗ್ರಾಹ್ಯವು. ಎರಡು ದಿನಗಳಲ್ಲಿ ವ್ಯಾಪ್ತಿಯಿದ್ದರೆ ಪೂರ್ವವು ಗ್ರಾಹ್ಯವು. ಇದರಲ್ಲಿ ತೈಲಾಭ್ಯಂಗವನ್ನು ಮಾಡಬೇಕೆಂದು ಹೇಳಿದೆ. ಈ ಪ್ರತಿಪದೆಯಲ್ಲಿ “ಚೂತಪುಷ್ಪಪ್ರಾಶನ” (ಮಾವಿನ ಹೂವಿನ ಪ್ರಾಶನ) ಹೇಳಿದೆ. ಅದರ ರೀತಿ ಹೇಗೆಂದರೆ:- ಗೋಮಯದಿಂದ ಸಾರಿಸಿದ ಮನೆಯ ಅಂಗಳದಲ್ಲಿ ಬಿಳೇವಸ್ತ್ರದ ಆಸನದಲ್ಲಿ ಕುಳಿತು ಪೂರ್ವಾಭಿಮುಖನಾಗಿ ಸುವಾಸಿನಿಯರಿಂದ ಗಂಧ, ತಿಲಕ ಮತ್ತು ಆರತಿಯನ್ನು ಮಾಡಿಸಿಕೊಂಡು ಗಂಧಸಹಿತವಾದ ಮಾವಿನ ಹೂವನ್ನು “ಚೂತಮಗ್ರಂ ವಸಂತಸ್ಯ ಮಾಕಂದ ಕುಸುಮಂ ತವ ಸಚಂದನಂ ಪಿಬಾಮ್ಮದ ಸರ್ವ ಕಾಮಾರ್ಥ ಸಿದ್ಧಯೇ” ಎಂಬ ಈ ಮಂತ್ರವನ್ನು ಹೇಳಿ ತಿನ್ನತಕ್ಕದ್ದು. ಈ ಕೃಷ್ಣ ಬಿದಿಗೆಯಲ್ಲಿ ದೇಶ ಅಥವಾ ಗ್ರಾಮಾಧಿಪತಿಯಾದವನು ವಿಸ್ತಾರವಾದ ಪ್ರದೇಶದಲ್ಲಿ ಮೇಲ್ಪಟ್ಟು ಮೊದಲಾದವುಗಳಿಂದ ಅಲಂಕರಿಸಿ ರಮ್ಯವಾದ ಆಸನದಲ್ಲಿ ಕುಳಿತು ಪಟ್ಟಣ ಹಾಗೂ ಗ್ರಾಮಗಳ ಜನರ ಮೈಮೇಲೆ ಓಕಳಿಯನ್ನೆರಚಿ ಸಿಂದೂರ, ಪುಷ್ಪ, ವಸ್ತ್ರ, ತಾಂಬೂಲಾದಿಗಳನ್ನು ಕೊಟ್ಟು ನರ್ತನ, ಗಾಯನ, ವಿನೋದಾದಿಗಳಿಂದ ಮಹೋತ್ಸವವನ್ನಾಚರಿಸತಕ್ಕದ್ದು. ಈ ಕಾಲದಲ್ಲಿ ಪ್ರಾಕೃತ ಜನರು ಕೃಷ್ಣಪಂಚಮಿಯ ವರೆಗೂ ಈ ಉತ್ಸವವನ್ನಾಚರಿಸುವರು. ಹೀಗೆ ಹೋಳಿಹಬ್ಬದ ವಿಧಿಯು, ಫಾಲ್ಗುನ ಅಮಾವಾಸ್ಯೆಯು “ಮಾದಿ"ಯು, ಅದು ಅಪರಾಹ್ನವ್ಯಾಪಿನಿಯಾದದ್ದು ಗ್ರಾಹ್ಯವು. ಇಲ್ಲಿಗೆ ಫಾಲ್ಕುನ ಕೃತ್ಯ ನಿರ್ಣಯೋದ್ದೇಶವು ಮುಗಿಯಿತು. ಪ್ರಥಮ - ದ್ವಿತೀಯ ಪರಿಚ್ಛೇದಗಳ ಪರಿಶಿಷ್ಟಗಳು ಪ್ರಕೀರ್ಣ - ಪ್ರಕರಣ ಚೈತ್ರಾದಿ ಹನ್ನೆರಡೂ ಮಾಸಗಳಲ್ಲಿ ವ್ಯತೀಪಾತಾದಿ ಯೋಗ, ಭರಣಾದಿ ನಕ್ಷತ್ರ, ಇವುಗಳಲ್ಲಿ “ಶ್ರಾದ್ಧ"ವನ್ನು ಹೇಳಿದೆಯಷ್ಟೇ? ಈ ಶ್ರಾದ್ಧಗಳ ನಿರ್ಣಯವನ್ನು ದರ್ಶಶ್ರಾದ್ಧ ನಿರ್ಣಯದಂತೆಯೇ ತಿಳಿಯತಕ್ಕದ್ದು. ಇವುಗಳಲ್ಲಿಯ ಪ್ರಚುರವಾಗಿಲ್ಲವಾದ್ದರಿಂದ ಆ ನಿರ್ಣಯವನ್ನು ಹೇಳಿಲ್ಲ. ಉಪವಾಸಾದಿಗಳು ಚಾಂದ್ರಸಂವತ್ಸರಗಳು (೬೦) - ಪ್ರಭವ, ವಿಭವ, ಶುಕ್ಲ, ಪ್ರಮೋದ, ಪ್ರಜಾಪತಿ, ಆಂಗಿರಸ, ಶ್ರೀಮುಖ, ಭಾವ, ಯುವ; ಧಾತೃ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ, ಚಿತ್ರಭಾನು, ಸುಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಚಿತ್, ಸರ್ವಧಾರಿ, ವಿರೋಧಿ, ವಿಕೃತಿ, ಬರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖ, ಹೇಮಲಂಬಿ, ವಿಲಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್, ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಮ, ಸಾಧಾರಣ ವಿರೋಧಿಕೃತ್, ಪರಿಧಾವಿ, ಪ್ರಮಾದೀಚ, ಆನಂದ, ರಾಕ್ಷಸ, ನಳ, ಪಿಂಗಲ, ಕಾಲಿತಾಕ್ಷಿ, ಸಿದ್ಧಾರ್ಥಿ, ರೌದ್ರಿ, ದುರ್ಮತಿ, ದುಂದುಭಿ, ರುಧಿರೋದ್ಧಾರಿ, ರಕ್ತಾಕ್ಷಿ ಕ್ರೋಧನ, ಕಮ-ಹೀಗೆ ಅರವತ್ತು ಸಂವತ್ಸರಗಳು, ಸೂರ್ಯನ ರಾಶಿ ಸಂಕ್ರಾಂತಿಯ ಹಾಗೆ ನಕ್ಷತ್ರಗಳ ಸೂರ್ಯ ಸಂಕ್ರಮಣದಲ್ಲಿಯೂ ಹಿಂದಿನ ಪರಿಚ್ಛೇದ - ೨ 09999 ಮತ್ತು ಮುಂದಿನ ಹದಿನಾರು ಘಟಿಗಳು ಪುಣ್ಯಕಾಲವು ಚಂದ್ರನು ರಾಶಿಪ್ರವೇಶಿಸುವ ಸಂಕ್ರಾಂತಿಯಲ್ಲಿ ಹಿಂದೆ ಮತ್ತು ಮುಂದೆ ಒಂದು ಘಟ ಹದಿಮೂರು ಪಳೆಗಳು ಪುಣ್ಯಕಾಲವು, ಕುಜಸಂಕ್ರಾಂತಿಯಲ್ಲಿ ಹಿಂದೆ ಮತ್ತು ಮುಂದೆ ನಾಲ್ಕುಘಟಿ ಒಂದು ಪಳೆ. ಇದರಂತೆ ಬುಧನಿಗೆ ಮೂರುಘಟಿ ಹದಿನಾಲ್ಕು ಪಳೆಗಳು, ಗುರುವಿಗೆ ನಾಲ್ಕು ಘಟಿ ಮೂವತ್ತೇಳು ಪಳೆಗಳು. ಶುಕ್ರನಿಗೆ ನಾಲ್ಕುಘಟ ಒಂದು ಪಳೆ. ಶನಿಗೆ ಹದಿನಾರು ಘಟಿ ಏಳು ಪಳೆಗಳು. ಹೀಗೆ ವುಣ್ಯಕಾಲವು. ಸೂರ್ಯ ಸಂಕ್ರಾಂತಿಯಂತೆ ರಾತ್ರಿಯಲ್ಲಿ ಸಂಕ್ರಾಂತಿಯಾದರೆ ಹಗಲಿನಲ್ಲಿ ಪುಣ್ಯಕಾಲವೆಂದು ಹೇಳಿಲ್ಲ. ಚಂದ್ರಸಂಕ್ರಾಂತ್ಯಾದಿಗಳಲ್ಲಿ ಸ್ನಾನವು ನಿತ್ಯವಲ್ಲ. ಅದು ಕಾಮ್ಯವು ಗ್ರಹಪೀಡಾ ಪರಿಹಾರಾರ್ಥವಾಗಿ ಸ್ನಾನವಿಧಿಯು ಮಂಜಿಷ್ಟೆ, ಗಜಮದ, ಕುಂಕುಮ, ರಕ್ತಚಂದನ ಇವುಗಳನ್ನು ತಾಮ್ರಪಾತ್ರೆಯಲ್ಲಿ ಹಾಕಿ ನೀರುತುಂಬಿ ಅದರಿಂದ ಸ್ನಾನಮಾಡಿದರೆ ಸೂರ್ಯನಿಂದುಂಟಾದ ಪೀಡೆಯು ತೊಲಗುವದು. ವಾಳದಬೇರು, ಬಾಗೆ ಹೂವು, ಕುಂಕುಮ, ರಕ್ತಚಂದನಯುಕ್ತವಾದ ಶಂಖದಕದಿಂದ ಸ್ನಾನಮಾಡಿದಲ್ಲಿ ಚಂದ್ರಪೀಡಾ ಪರಿಹಾರ, ಖೈರ, ದೇವದಾರು, ಎಳ್ಳು, ನಲ್ಲಿ, ಇವುಗಳಿಂದ ಮಿಶ್ರವಾದ ಜಲವನ್ನು ಬೆಳ್ಳಿಪಾತ್ರೆಯಿಂದ ಸ್ನಾನಮಾಡಿದರೆ ಕುಜಪೀಡಾ ಪರಿಹಾರವು ಬುಧಪೀಡೆಗೆ ಗಜಮದಯುಕ್ತವಾದ, ನದೀಸಂಗಮ ಜಲಯುಕ್ತವಾದ ಮಣ್ಣಿನಪಾತ್ರೆಯಿಂದ ಸ್ನಾನವು ಗುರುವಿಗೆ ಅತ್ತಿ, ಬಿಲ್ವ, ಆಲ, ನೆಲ್ಲಿಕಾಯಿಗಳಿಂದ ಯುಕ್ತವಾದ ಸುವರ್ಣಪಾತ್ರದಿಂದ ಸ್ನಾನ. ಶುಕ್ರನಿಗೆ ಗೋರೋಚನ, ಗಜಮದ, ಶತಾವರೀಪುಷ್ಪ ಶತಪುಷ್ಪಗಳಿಂದ ಯುಕ್ತವಾದ ಬೆಳ್ಳಿಯ ಪಾತ್ರದಿಂದ ಸ್ನಾನ. ಶನಿಗೆ ಎಳ್ಳು, ಉದ್ದು, ನವಣೆ, ಗಂಧ, ಪುಷ್ಪಗಳಿಂದ ಯುಕ್ತವಾದ ಲೋಹಪಾತ್ರದಿಂದ ಸ್ನಾನ. ರಾಹುವಿಗೆ ಗುಗ್ಗಳ, ಹಿಂಗು, ಅರಿಶಿನ, ಮನಃಶಿಲಾಯುತವಾದ ಮಹಿಷ ಶೃಂಗ (ಕೋಣನ ಕೋಡು) ದಿಂದ ಸ್ನಾನವು. ಕೇತುವಿಗೆ ಹಂದಿಯು ಪರ್ವತದ ತುದಿಯಲ್ಲಿ ಅಗೆದ ಮಣ್ಣು, ಆಡಿನ ಹಾಲು ಇವುಗಳಿಂದ ಕೂಡಿದ ಖಡ್ಗಮೃಗದ ಕೊಂಬಿನಿಂದ ಸ್ನಾನವು. ಹೀಗೆ ನವಗ್ರಹಪೀಡಾ ಪರಿಹಾರಕವಾದ ಸ್ನಾನವು. ಗ್ರಹಪ್ರೀತ್ಯರ್ಥ - ದಾನಗಳು ರವಿಯ ಪ್ರೀತಿಗಾಗಿ ಮಾಣಿಕ್ಯ, ಗೋಧಿ, ಧೇನು, ಕೆಂಪುವಸ್ತ್ರ, ಬೆಲ್ಲ, ಬಂಗಾರ, ತಾಮ್ರ, ರಕ್ತಚಂದನ, ಕಮಲ ಇವುಗಳನ್ನು ದಾನಮಾಡತಕ್ಕದ್ದು. ಚಂದ್ರನಿಗೆ ಬಿದಿರಿನ ಪಾತ್ರೆಯಲ್ಲಿಯ ಅಕ್ಕಿ, ಕರ್ಪೂರ ಮತ್ತು ಬಿಳೇವಸ್ತ್ರ, ತುಪ್ಪವನ್ನು ತುಂಬಿದ ಕುಂಭ, ವೃಷಭ ಇವುಗಳ ದಾನವು ಕುಜನಿಗೆ ಹವಳ, ಗೋಧಿ, ಸಾಸಿವೆ, ಕೆಂಪು ಎತ್ತು, ಬೆಲ್ಲ, ಸುವರ್ಣ, ಕೆಂಪುವಸ್ತ್ರ, ತಾಮ್ರ ಇವುಗಳ ದಾನವು, ಬುಧನಿಗೆ ನೀಲವಸ್ತ್ರ, ಸುವರ್ಣ, ಕಂಚು, ಪಚ್ಚೆಸರು, ಮರಕತಮಣಿ, ದಾಸಿ ಸ್ತ್ರೀ, ಆನೆಯ ದಂತ, ಪುಷ್ಪ ಇವುಗಳು. ಗುರುವಿಗೆ ಪುಷ್ಪರಾಗ ಮಣಿ, ಅರಿಷಿನ, ಸಕ್ಕರೆ, ಕುದುರೆ, ಹಳದಿಧಾನ, ಹಳದೀ ವಸ್ತ್ರ, ಉಪ್ಪು, ಸುವರ್ಣ-ಇವುಗಳು, ಶುಕ್ರನಿಗೆ ಚಿತ್ರವಸ್ತ್ರ, ಬಿಳೇ ಕುದುರೆ, ಗೋವು, ವಜ್ರಮಣಿ, ಸುವರ್ಣ, ಬೆಳ್ಳಿ, ಗಂಧ ಮತ್ತು ಅಕ್ಕಿ ಇವು, ಶನಿಗೆ ಇಂದ್ರನೀಲ, ಉದ್ದು, ತೈಲ, ಎಳ್ಳು, ಹುಸಳಿ, ಎಮ್ಮೆ, ಕಬ್ಬಿಣ, ಕರೇ ಆಕಳು, ರಾಹುವಿಗೆ ಗೋಮೇಧ, ಕುದುರೆ, ಕರೇವಸ್ತ್ರ, ಕಂಬಳಿ, ತೈಲ, ಎಳ್ಳು, ಲೋಹಗಳು, ಕೇತುವಿಗೆ ವೈಡೂರ್ಯ, ತೈಲ, ಯಳು, ಕಂಬಳಿ, ೧೫೬ ಧರ್ಮಸಿಂಧು ಕಸ್ತೂರಿ, ಕುರಿ, ವಸ್ತ್ರ ಇವುಗಳನ್ನು ದಾನಮಾಡತಕ್ಕದ್ದು. ಶನಿಪೀಡಾ ಪರಿಹಾರಾರ್ಥವಾಗಿ ಶನಿವಾರದಲ್ಲಿ ತೈಲಾಭ್ಯಂಗ ಹಾಗೂ ತೈಲದಾನವನ್ನು ಮಾಡತಕ್ಕದ್ದು. ಇನ್ನು ಶನಿವ್ರತ ಹೇಗಂದರೆ ಕಬ್ಬಿಣದ ಶನಿಪ್ರತಿಮೆಯನ್ನು ಮಾಡಿ ಲೋಹಪಾತ್ರೆಯಲ್ಲಿ ತೈಲವನ್ನು ಹಾಕಿ ಆ ಪ್ರತಿಮೆಯನ್ನು ಅದರಲ್ಲಿಟ್ಟು, ಎರಡು ಕಪ್ಪುವಸ್ತ್ರ ಅಥವಾ ಕಂಬಳಿಯನ್ನು ಸುತ್ತಿ, ಕಪ್ಪಾದ ಹಾಗೂ ಸುಗಂಧವಾದ ಪುಷ್ಪಗಳಿಂದ ಪೂಜಿಸಿ, ತಿಲಮಿಶ್ರಾನ್ನವನ್ನು ನೈವೇದ್ಯಮಾಡಿ ಕರಬ್ರಾಹ್ಮಣ ಅಥವಾ ಯಾವನಾದರೊಬ್ಬ ಬ್ರಾಹ್ಮಣನಿಗೆ ಆ ಶನಿಪ್ರತಿಮೆಯನ್ನು ದಾನಮಾಡತಕ್ಕದ್ದು. “ಶನ್ನೂದೇವಿ” ಇದೇ ಶನಿಯ ಮಂತ್ರವು. ಶೂದ್ರಾದಿಗಳಿಗಾದರೆ “ಯ: ಪುನರ್ನರಾಜ್ಯಾಯ ನಲಾಯ ಪರಿತೋಷಿತಃಸ್ವಪ್ನದದೌ ನಿಜಂ ರಾಜರಿ ಸಮ ಸೌರಿ: ಪ್ರಸೀದತು ನಮರ್ಕಪುತ್ರಾಯ ಶನೈಶ್ಚರಾಯ ನೀಹಾರ ವರ್ಣಾಂಜನ ಮೇಚಕಾಯಶ್ರುತಾರಹಸ್ಯಂ ಭವಕಾಮದಂ ಫಲಪ್ರದೋ ಭವಸೂರ್ಯಪುತ್ರ’ ಇತ್ಯಾದಿ ಮಂತ್ರಗಳು. ಹೀಗೆ ಸಂವತ್ಸರ ಪರ್ಯಂತ ಪ್ರತಿ ಶನಿವಾರದಲ್ಲೂ ಮಾಡತಕ್ಕದ್ದು. ಅಥವಾ “ಕೋಣಪ್ಪ: ಪಿಂಗಲೋ ಬಭ್ರು: ಕೃಷ್ಣ ರೌದ್ರೂಂತಕೋ ಯಮ ಸೌರಿ: ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ” ಈ ದಶನಾಮ ಶ್ಲೋಕವನ್ನು ಪ್ರತಿನಿತ್ಯ ಪಠನಮಾಡತಕ್ಕದ್ದು. ಶನಿಸ್ತೋತ್ರವೂ ಬೇರೆ ಇದೆ. ಅದನ್ನೂ ಪಠಿಸಬಹುದು. ಅದು ಯಾವದೆಂದರೆ - “ಪಿಪ್ಪಲಾದ ಉವಾಚನಮಸ್ಕ ಕೋಣಸಂಸ್ಥಾಯ ಪಿಂಗಲಾಯ ನಮೋಸ್ತುತೇ||ನಮಸ್ತೆ ಬಭ್ರುರೂಪಾಯ ಕೃಷ್ಣಾಯಚ ನಮೋಸ್ತುತೇ||ನಮಸ್ತೇ ರೌದ್ರದೇಹಾಯ ನಮಸ್ತೆ ಚಾಂತಕಾಯಚನಮಸ್ತೇ ಯಮಸಂಜ್ಞಾಯ ನಮಸ್ತ ಸೌರಯೇ ವಿಭೋ ನಮಸ್ತ ಮಂದಸಂಜ್ಞಾಯ ಶನೈಶ್ಚರ ನಮೋಸ್ತುತೇ॥ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ!’ ಹೀಗೆ ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಶನೈಶ್ಚರ ಸ್ತೋತ್ರವನ್ನು ಪಠಿಸಿದರೆ ಸಾಡೇಸಾತಿ ಶನಿಯ ಪೀಡೆಯು ಪರಿಹಾರವಾಗುವದು. ರವಿವಾರದಲ್ಲಿ ಸೂರ್ಯನ ಪೂಜೆ, ಉಪವಾಸ, ಸೂರ್ಯಮಂತ್ರಜಪ ಇವುಗಳನ್ನು ಮಾಡುವದರಿಂದ ಸರ್ವರೋಗ ನಾಶವಾಗುವದು. “ಹೀಂ ಶ್ರೀಂ ಸಃ ಸೂರ್ಯಾಯ” ಇದು ಷಡಕ್ಷರ ಸೂರ್ಯಮಂತ್ರವು. ಇಲ್ಲಿಗೆ ಶ್ರೀಮತ್ಕಾಶುಪಾಧ್ಯಾಯ ಸೂರಿಸೂನು ಯಜೇಶ್ವರೋಪಾಧ್ಯಾಯಾನುಜ, ಅನಂತೋಪಾಧ್ಯಾಯ ಸೂರಿಸುತ ಕಾಶೀನಾಥಪಾಧ್ಯಾಯ ವಿರಚಿತವಾದ “ಧರ್ಮಸಿಂಧುಸಾರ’ದಲ್ಲಿ ಪ್ರಕೀರ್ಣ ನಿರ್ಣಯವು ಮುಗಿಯಿತು. ಇಲ್ಲಿಗೆ ದ್ವಿತೀಯ ಪರಿಚ್ಛೇದವು ಮುಗಿಯಿತು. ಪರಿಚ್ಛೇದ - ೩ ಪೂರ್ವಾರ್ಧ 082 ತೃತೀಯ ಪರಿಚ್ಛೇದ (ಪೂರ್ವಾರ್ಧ) || ಅಥ ಗರ್ಭಾದಿಸಂಸ್ಕಾರಾನ್ ಧರ್ಮಾನ್ ಕೃತ್ಯಾರಿಸಂಮತಾನ್ || || ವನ್ನೇ ಸಂಕ್ಷೇಪತಸಂತೋನುಗೃಹಂತು ದಯಾಲಮ್ || ಇನ್ನು ಗರ್ಭಾಧಾನಾದಿಸಂಸ್ಕಾರಗಳನ್ನೂ, ಗೃಹ್ಯಸೂತ್ರೋಕ್ತ ಇತರ ಧರ್ಮಗಳನ್ನೂ ಸಂಕ್ಷೇಪವಾಗಿ ಹೇಳುವನು. ದಯಾಳುಗಳಾದ ವಿದ್ವಾಂಸರು ಅನುಗ್ರಹಮಾಡಲಿ. || ಕಾಶೀನಾಥಾಭಿಧೇನಾತ್ರಾನಂತೋಪಾಧ್ಯಾಯಸೂನುನಾ || || ನಿರ್ಣೀಯತೇ ಯದತನ್ನು ಶೋಧನೀಯಂಮನೀಷಿಭಿ: || || ಅನಂತೋಪಾಧ್ಯಾಯರ ಪುತ್ರನಾದ ಕಾಶೀನಾಥನೆಂಬ ನಾನು ಏನು ನಿರ್ಣಯವನ್ನು ಹೇಳಿರುವನೋ ಅದನ್ನು ವಿದ್ವಾಂಸರು ಪರಿಶೋಧಿಸಬೇಕು. ಪ್ರಥಮತಃ ಗರ್ಭಾಧಾನ ಸಂಸ್ಕಾರವು ಹೇಳಲ್ಪಡುತ್ತದೆ. ಅದಕ್ಕನುಸರಿಸಿ ಪ್ರಥಮ ರಜೋದರ್ಶನ (ಸ್ತ್ರೀಯರು ಪ್ರಥಮಬಾರಿ ಮುಟ್ಟಾಗುವದು)ದಲ್ಲಿ ದುಷ್ಟ ಮಾಸಾದಿಗಳ ಕಾಲನಿರ್ಣಯವನ್ನು ಹೇಳಲಾಗುತ್ತಿದೆ: ಚೈತ್ರ, ಜೇಷ್ಠ, ಆಷಾಢ, ಭಾದ್ರಪದ, ಕಾರ್ತಿಕ, ಪುಷ್ಕ ಈ ಮಾಸಗಳು ಅನಿಷ್ಟಗಳು. ಪ್ರತಿಪದೆ, ಚತುರ್ಥಿ, ನವಮೀ, ಚತುರ್ದಶಿ, ಅಷ್ಟಮೀ, ಷಷ್ಠಿ, ದ್ವಾದಶೀ, ಹುಣ್ಣಿವೆ, ಅಮಾವಾಸ್ಯೆ ಈ ತಿಥಿಗಳು ಅಶುಭಕರಗಳು, ವಾರಗಳಲ್ಲಿ ರವಿ, ಕುಜ, ಶನಿವಾರಗಳೂ, ನಕ್ಷತ್ರಗಳಲ್ಲಿ -ಭರಣಿ, ಕೃತ್ತಿಕಾ, ಆದ್ರ್ರಾ, ಆಶ್ಲೇಷಾ, ಮಘಾ, ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರಾ, ವಿಶಾಖಾ, ಜೇಷ್ಠಾ ಇವುಗಳೂ, ಯೋಗಗಳಲ್ಲಿ ವಿಷ್ಕಂಭ, ಗಂಡ, ಅತಿಗಂಡ, ಶೂಲ, ವ್ಯಾಘಾತ, ವಜ್ರ ಪರಿಘ, ಪೂರ್ವಾರ್ಧ, ವ್ಯತೀಪಾತ, ವೈಧೃತಿ, ಇವುಗಳೂ, ಕರಣಗಳಲ್ಲಿ - “ವಿಷ್ಟಿ ಇವು ಅನಿಷ್ಟಗಳು. ಇದರಂತೆ ಗ್ರಹಣ, ರಾತ್ರಿ, ಸಂಧ್ಯಾ, ಅಪರಾಹ್ನ ಕಾಲಗಳೂ ಅನಿಷ್ಟಗಳು. ನಿದ್ರೆಯ ಕಾಲದಲ್ಲಿ, ಜೀರ್ಣವಸ್ತ್ರ, ಕೆಂಪುವಸ್ತ್ರ ಧರಿಸಿರುವಾಗ, ಕಪ್ಪು ಬಟ್ಟೆ ಧರಿಸಿದಾಗ, ಚಿತ್ರವಸ್ತ್ರ ಧಾರಣೆಮಾಡಿದಾಗ, ಬೆತ್ತಲೆಯಾಗಿರುವಾಗ, ಪರಗ್ರಹ- ಪರಗ್ರಾಮಗಳಲ್ಲಿರುವಾಗ, ಪ್ರಥಮ ರಜಸ್ವಲೆಯಾದರೆ ಅಶುಭವು ರಜಸ್ಸು (ಸ್ತ್ರೀ ರಕ್ತ) ಸ್ವಲ್ಪ ಅಥವಾ ಹೆಚ್ಚು ಆಗಿದ್ದರೆ ಮತ್ತು ನೀಲವರ್ಣದ್ದಾದರೆ, ಅಶುಭವು, ಕಸಬರಿಗೆ, ಕಟ್ಟಿಗೆ, ಹುಲ್ಲು, OXU ಧರ್ಮಸಿಂಧು ಅಗ್ನಿ, ಗರ್ಸಿ (ಮೊರ) ಇವುಗಳನ್ನು ಕೈಯಲ್ಲಿ ಹಿಡಕೊಂಡಾಗ ರಜಸ್ವಲೆಯಾದವಳು “ವ್ಯಭಿಚಾರಿಣಿ"ಯಾಗುವಳು. ವಸ್ತ್ರದಲ್ಲಿ ಬಿದ್ದ ಬಿಂದುಗಳು ವಿಷಮಸಂಖ್ಯೆಯಾದರೆ ಪುತ್ರ ಪ್ರಾಪ್ತಿಯು, ಸರಿಸಂಖ್ಯೆಯಲ್ಲಿ ಬಿದ್ದರೆ ಕನ್ಯಾಪ್ರಾಪ್ತಿಯು ಪ್ರಥಮ ಋತುವಿನಲ್ಲಿ ಅಕ್ಷತೆಗಳಿಂದ ಆಸನವನ್ನು ಮಾಡಿ. ಅದರಲ್ಲಿ ಋತುಮತಿಯಾದವಳನ್ನು ಕೂಡ್ರಿಸಿ ಪತಿಪುತ್ರರುಳ್ಳ ಸ್ತ್ರೀಯರು ಅರಿಶಿನ, ಕುಂಕುಮ, ಗಂಧ, ಪುಷ್ಪ, ಮಾಲೆ, ತಾಂಬೂಲಾದಿಗಳನ್ನು ಕೊಟ್ಟು, ಆರತಿ ಬೆಳಗಿ ದೀಪವಿರುವ ಮನೆಯಲ್ಲಿ ಅವಳನ್ನು ಇರಿಸುವದು. ಸುವಾಸಿನಿಯರಿಗೆ ಗಂಧ, ಉಪ್ಪು, ಪಚ್ಚೆಸರು ಇವುಗಳನ್ನೂ ಕೊಡತಕ್ಕದ್ದು. ಇನ್ನು ದ್ವಿತೀಯಾದಿ ಎಲ್ಲ ಋತುಮತಿಯರಾದಾಗ ಸಾಮಾನ್ಯ ನಿಯಮಗಳು:- ಮೂರುರಾತ್ರಿ ಅಸ್ಪೃಶ್ಯಳಾಗಿದ್ದು ಅಭ್ಯಂಗ, ಅಂಜನ, ಸ್ನಾನ, ದಿವಾನಿದ್ರೆ, ಅಗ್ನಿಸ್ಪರ್ಶ, ದಂತಧಾವನೆ, ಮಾಂಸಾಶನ, ಸೂರ್ಯದರ್ಶನ ಇತ್ಯಾದಿಗಳನ್ನು ಬಿಡತಕ್ಕದ್ದು. ಭೂಮಿಯಲ್ಲಿ ರೇಖೆಯನ್ನು ಮಾಡಬಾರದು; ಮತ್ತು ಭೂಶಯನ ಮಾಡತಕ್ಕದ್ದು. ಅಂಜಲಿಯಿಂದ ಅಥವಾ ತಾಮ್ರ ಲೋಹ ಪಾತ್ರಗಳಿಂದ ನೀರನ್ನು ಕುಡಿಯಬಾರದು. ಅತಿಗಿಡ್ಡ ಪಾತ್ರೆಯಿಂದ ಜಲವನ್ನು ಕುಡಿದರೆ ಅವಳ ಸಂತತಿಯು ಕುಳ್ಳಗಾಗುವದು. ಆ ಸಮಯ ಉಗುರನ್ನು ಕತ್ತರಿಸಿದರೆ ಕಟ್ಟ ಉಗುರಿನ ಪುತ್ರರು ಜನಿಸುವರು. ಎಲೆಯ ಕೊಟ್ಟೆಯಿಂದ ಕುಡಿದರೆ ಸ೦ತತಿಯು “ಹುಚ್ಚು” ಆಗುವದು. ದ್ವಿತೀಯಾದಿ ರಚೋದರ್ಶನದಲ್ಲಿ ಪ್ರವಾಸ, ಗಂಧ, ಪುಷ್ಪ ಧಾರಣ, ತಾಂಬೂಲ, ಗೋಕ್ಷೀರ ಇವುಗಳ ಭಕ್ಷಣ, ಎತ್ತರವಾದ ಆಸನ ಇವುಗಳನ್ನು ಬಿಡತಕ್ಕದ್ದು. ಮಣ್ಣಿನ ಪಾತ್ರ ಅಥವಾ ಕಬ್ಬಿಣದ ಪಾತ್ರಗಳಲ್ಲಿ ಅಥವಾ ಬರೀ ನೆಲದಲ್ಲಿ ಉಣ್ಣತಕ್ಕದ್ದು, ಗ್ರಹಣಾದಿನಿಮಿತ್ತವಾಗಿ ಸ್ನಾನಮಾಡುವ ಪ್ರಸಂಗದಲ್ಲಿ ನೀರಿನಲ್ಲಿ ಮುಳುಗಿ ಸ್ನಾನಮಾಡಲಾಗದು, ಬೇರೆ ಪಾತ್ರೆಯಲ್ಲಿ ಜಲವನ್ನು ತುಂಬಿಕೊಂಡು ಸ್ನಾನಮಾಡತಕ್ಕದ್ದು. ವಸ್ತ್ರವನ್ನು ಒಗೆಯಬಾರದು. ಬೇರೆ ವಸ್ತ್ರವನ್ನೂ ಧಾರಣಮಾಡಬಾರದು. ಮೃತಾಶೌಚಾದಿ ನಿಮಿತ್ತವಾಗಿ ಸ್ನಾನಮಾಡುವಾಗಲೂ ಇದೇ ನಿಯಮವು. ಸಗೋತ್ರ ಅಥವಾ ಯೋನಿಸಂಬಾಧಿಕರಾದ ಇಬ್ಬರು ರಜಸ್ವಲೆಯರು ಪರಸ್ಪರ ಸ್ಪರ್ಶ ಮಾಡಿಕೊಂಡರೆ ಆಗಲೇ ಒಂದೆ ಹೇಳಿದಂತೆ ಸ್ನಾನಮಾಡಿದ ಮಾತ್ರದಿಂದ ಶುದ್ಧರಾಗುವರು. ಬುಧಾ ಸ್ಪರ್ಶಮಾಡಿಕೊಂಡರೆ, ಒಂದು ರಾತ್ರಿ ಉಪವಾಸ ಇರತಕ್ಕದ್ದು. ಗೋತ್ರಾದಿ ಸಂಬಂಧರಹಿತರಾದ ಇತರರನ್ನು ಬುದ್ಧಿಪೂರ್ವಕವಲ್ಲದ ಸ್ಪರ್ಶಮಾಡಿದಲ್ಲಿ ಆ ದಿನ ಸ್ನಾನಮಾಡಿ ಉಪವಾಸ ಮಾಡತಕ್ಕದ್ದು, ಬುದ್ದಿ ಪೂರ್ವಕವಾಗಿ ಸ್ಪರ್ಶಮಾಡಿದರೆ ಶುದ್ದಿವರ್ಯಂತ ಊಟಮಾಡಬಾರದು. ಭೋಜನ ಮಾಡಿದರೆ ಶುದ್ದಿಯ ನಂತರ ಅಂದರೆ ಮೂರುದಿನ ಉಪವಾಸ ಮಾಡತಕ್ಕದ್ದು. ಮುಟ್ಟಾಗಿ ಎರಡನೇದಿನವಾಗಿದ್ದರೆ ಶುದ್ಧಿಯ ನಂತರ ಎರಡು ದಿನ, ಮರನೇ ದಿನವಾಗಿದ್ದರೆ ಒಂದುದಿನ ಹೀಗೆ ತಿಳಿಯತಕ್ಕದ್ದು, ಉಪವಾಸದಲ್ಲಿ ಶಕ್ತಿಯಿಲ್ಲದಿದ್ದರೆ ಅದರ ಬದಲಾಗಿ, ಬ್ರಾಹ್ಮಣರನ್ನು ಜನ ಮಾಡಿಸುವದು. ಸರ್ವತ್ರ ರಜಃಶುದ್ಧಿಯ ನಂತರ ಪಂಚಗವ ಪ್ರಾಶನೆಯನ್ನು ಹೇಳಿದೆ. ಶೂದ್ರ ಸ್ತ್ರೀ ಬ್ರಾಹ್ಮಣ ಸ್ತ್ರೀಯರಲ್ಲಿ ಪರಸ್ಪರ ಸ್ಪರ್ಶವಾದಲ್ಲಿ ಬ್ರಾಹ್ಮಣಯು ಶುದ್ದಿಪರ್ಯಂತ ಉಪವಾಸ ಹಾಗೂ ಶುದ್ಧ ನಂತರ ಕಚ್ಛಪ್ರಾಯಶ್ಚಿತ್ತ ಮಾಡಿಕೊಳ್ಳತಕ್ಕದ್ದು, ಶೂದ್ರಸ್ತ್ರೀಯು “ಪಾದ ಕೃಚ್ಛ”- ಪರಿಚ್ಛೇದ ೩ ಪೂರ್ವಾರ್ಧ ಪ್ರಾಯಶ್ಚಿತ್ತ ಮಾಡಿಕೊಳ್ಳುವದು. ರಜಸ್ವಲೆ ಅಥವಾ ಹಡದ ಸ್ತ್ರೀ (ಸೂತಿಕಾ-ಬಾಣಂತಿ) ಯು ಚಾಂಡಾಲ ಸ್ಪರ್ಶವಾದಾಗ ಶುದ್ದಿಪರ್ಯಂತ ಉಪವಾಸ ಮತ್ತು ಅತಿಕೃಚ್ಛ ಪ್ರಾಯಶ್ಚಿತ್ತ ಮಾಡಿಕೊಳ್ಳುವದು. ದಂಡಾದಿ ಪರಂಪರೆಯಿಂದ (ದೊಣ್ಣೆ ಮೊದಲಾದ ವಸ್ತುಮೂಲಕ) ಸ್ಪರ್ಶವಾದರೆ ಸ್ನಾನಮಾತ್ರದಿಂದ ಶುದ್ಧಿಯು, ಊಟಮಾಡುತ್ತಿರುವಾಗ ಸ್ಪರ್ಶವಾದರ “ಪ್ರಾಜಾಪತ್ಯ ಕೃಚ್ಛ ಮತ್ತು ‘ಹನ್ನೆರಡು ಬ್ರಾಹ್ಮಣರ ಭೋಜನ’ ಈ ಪ್ರಾಯಶ್ಚಿತ್ತವು. “ಮಿತಾಕ್ಷರಿ"ಯಲ್ಲಿ ಈ ವಿಷಯವನ್ನು ವಿವರಿಸಿದೆ. ಇಚ್ಛಾಪೂರ್ವಕ ಪತಿತ, ಅಂತ್ಯಜ, ಚಾಂಡಾಲರ ಸ್ಪರ್ಶವಾದಲ್ಲಿ ಶುದ್ದಿಪರ್ಯಂತ ಭೋಜನಮಾಡದೆ, ಶುದ್ದಿಯಾದನಂತರ ಮೊದಲನೇದಿನ ಸ್ಪರ್ಶವಾದಲ್ಲಿ ಮೂರುದಿನ, ಎರಡನೇದಿನವಾದರೆ ಎರಡುದಿನ, ಮೂರನೇದಿನವಾದರೆ ಶುದ್ಧಿಯಾದ ನಂತರ ಮೊದಲನೇದಿನ ಸ್ಪರ್ಶವಾದಲ್ಲಿನ ಮೂರುದಿನ, ಎರಡನೇದಿನವಾದರೆ ಎರಡುದಿನ, ಮೂರನೇದಿನವಾದರೆ ಒಂದುದಿನ ಹೀಗೆ ಉಪವಾಸ ಮಾಡತಕ್ಕದ್ದು. ಬುದ್ಧಿಪೂರ್ವಕವಲ್ಲದಿದ್ದರೆ ಶುದ್ದಿಪರ್ಯಂತ ಅಭೋಜನ ಮಾತ್ರ. ಇದರಂತೆ ಊರಕೋಳಿ, ಹಂದಿ, ನಾಯಿ, ಕಾಗೆ, ಮಡಿವಾಳ ಇತ್ಯಾದಿಗಳ ಸ್ಪರ್ಶದಲ್ಲಿಯೂ ಸಹ ಹೀಗೆಯೇ ಮಾಡತಕ್ಕದ್ದು. ಅಶಕ್ತಿಯಲ್ಲಿ ಸ್ನಾನ ಮಾಡಿ ನಕ್ಷತ್ರೋದಯಪರ್ಯಂತ ಉಪವಾಸ ಮಾಡತಕ್ಕದ್ದು. ಊಟಮಾಡುತ್ತಿರುವಾಗ ನಾಯಿ, ಚಾಂಡಾಲಾದಿಗಳ ಸ್ಪರ್ಶವಾದರೆ ಶುದ್ದಿಪರ್ಯಂತ ಉಪವಾಸ ಮತ್ತು ಆರು ರಾತ್ರಿ ಗೋಮೂತ್ರದಿಂದ ಬೇಯಿಸಿದ ಗೋಧಿಯ ಅನ್ನವನ್ನೂಟಮಾಡುವದು. ಅಶಕ್ತಿಯಲ್ಲಿ ಸುವರ್ಣದಾನ ಅಥವಾ ಬ್ರಾಹ್ಮಣ ಭೋಜನ, ಉಚ್ಛಿಷ್ಟರಾದ ಇಬ್ಬರು ರಜಸ್ವಲೆಯರು ಪರಸ್ಪರ ಮುಟ್ಟಿಕೊಂಡರೆ ಅಥವಾ ಉಚ್ಛಿಷ್ಟರಾದ ಚಾಂಡಾಲಾದಿಗಳ ಸ್ಪರ್ಶದಲ್ಲಿ ಕೃಚ್ಛಪ್ರಾಯಶ್ಚಿತ್ತದಿಂದ ಶುದ್ಧಿಯು, ರಜಸ್ವಲೆಗೆ ಉಚ್ಛಿಷ್ಟಬ್ರಾಹ್ಮಣ ಸ್ಪರ್ಶವಾದರೆ ಮೂರುದಿನ ಉಪವಾಸವು. ಊಧೋತ್ಕೃಷ್ಟ ಬ್ರಾಹ್ಮಣ (ಭೋಜನಾದಿಗಳ ನಂತರ ಆಚಮನ ಮಾಡದವ) ಅಧರೋಚಿಷ್ಟ ಬ್ರಾಹ್ಮಣ(ಮೂತ್ರಾದಿ ವಿಸರ್ಜನಾನಂತರ ಆಚಮನ ಮಾಡಿದಿದ್ದವ) ಇವರ ಸ್ಪರ್ಶವಾದರೆ ಒಂದುದಿನ “ಮಿತಾಕ್ಷರಿ ಯಲ್ಲಿ ಹೇಳಿದೆ. ಉತ್ಕೃಷ್ಟಶೂದ್ರ ಸ್ಪರ್ಶದಲ್ಲಿ ಹಿಂದೆ ಹೇಳಿದ್ದಕ್ಕಿಂತ ಹೆಚ್ಚಿನ ಪ್ರಾಯಶ್ಚಿತ್ತವು ಅಗತ್ಯವು. ರಜಸ್ವಲೆಗೆ ಸೂತಿಕಾ (ಹಡದ ಬಾಣಂತಿ) ಸ್ಪರ್ಶವಾದರೆ ಶುದ್ದಿಪರ್ಯಂತ ಉಪವಾಸವು. ಈ ಸ್ಪರ್ಶದಲ್ಲಿಯೇ ಭೋಜನ ಮಾಡಿದರೆ ಕೃಚ್ಛ ಪ್ರಾಜಾಪತ್ಯ ಪ್ರಾಯಶ್ಚಿತ್ತವು, ಐದು ಉಗುರಿನ ಪ್ರಾಣಿ, ಎರಡು ಕೊಳಚುಗಳುಳ್ಳ ಪ್ರಾಣಿ, ಒಂದು ಕೊಳಚುಳ್ಳ ಪ್ರಾಣಿ (ಪಶು)ಗಳ ಸ್ಪರ್ಶವಾದಲ್ಲಿ ಪಕ್ಷಿ ಮೊದಲಾದವುಗಳ ಸ್ಪರ್ಶವಾದರೆ ಶುದ್ಧಿ ಪರ್ಯಂತ ಉಪವಾಸವು, ರಜಸ್ವಲೆಗೆ ನಾಯಿ, ನರಿ, ಕತ್ತೆಗಳು ಕಚ್ಚಿದರೆ ಶುದ್ದಿಪರ್ಯಂತ ಉಪವಾಸವು ಮತ್ತು ಶುದ್ಧಿಯಾದ ನಂತರ ಐದುರಾತ್ರಿ ಉಪವಾಸವು ನಾಭಿಯಿಂದ ಮೇಲೆ ಕಚ್ಚಿದರೆ ದಶರಾತ್ರ ಉಪವಾಸವು. ತಲೆಯಲ್ಲಿ ಕಚ್ಚಿದರೆ ಇಪ್ಪತ್ತುರಾತ್ರಿ ಉಪವಾಸವು ರಜಸ್ವಲೆಯು ಊಟಮಾಡುವಾಗ ಬೇರೆ ರಜಸ್ವಲೆಯ ದರ್ಶನವಾದರೆ ಶುದ್ದಿಪರ್ಯಂತ ಉಪವಾಸವು ಚಾಂಡಾಲನನ್ನು ನೋಡಿದರೆ ಮೂರು ಉಪವಾಸಗಳು, ಇಚ್ಚಾಪೂರ್ವಕ ಚಾಂಡಾಲನನ್ನು ನೋಡಿದರೆ ಪ್ರಾಜಾಪತ್ಯಕ್ಷದ ಪ್ರಾಯಶ್ಚಿತ್ತವು. ರಜಸ್ವಲೆಗೆ ಶವ ಅಥವಾ ಹಡೆದವಳ ಸ್ಪರ್ಶವಾದರೆ ಶುದ್ದಿಯ ನಂತರ ಮೂರುರಾತ್ರಿ ಉಪವಾಸವು, ಶುದ್ಧಿ ಪರ್ಯಂತವೂ ಉಪವಾಸವು. ಅದೇ ಅಶುಚಿಯಲ್ಲಿ ಭೋಜನ ಮಾಡಿದಲ್ಲಿ ೧೬೦ ಧರ್ಮಸಿಂಧು ಕೃಷ್ಣಪ್ರಾಯಶ್ಚಿತ್ತವು. ಈ ಎಲ್ಲ ಶುದ್ಧಿಗಳಲ್ಲಿ ಬ್ರಹ್ಮಕೂರ್ಚವಿಧಿಯಿಂದ ಪಂಚಗವ್ಯಪ್ರಾಶನೆಯು ಆವಶ್ಯಕವು. ಅಶೌಚಿಗಳ ಸ್ಪರ್ಶವಿಷಯವಾಗಿ:-ಅಶೌಚಿಗಳ ಸ್ಪರ್ಶವಾದಾಗ ಅದರ ಶುದ್ಧಿಗಾಗಿ ಮಾಡುವ ಸ್ನಾನಕ್ಕಿಂತ ಮೊದಲು ರಜೋದರ್ಶನವಾದರೆ ನಾಲ್ಕು ದಿನ ಪರ್ಯಂತ ಉಪವಾಸವು. ಅಶಕ್ತಿಯಲ್ಲಿ ಕೂಡಲೇ ಸ್ನಾನಮಾಡಿ ಊಟಮಾಡುವದು. ಹೀಗೆಯೇ ಬಂಧುಗಳ ಮರಣ ಶ್ರವಣವಾದಾಗಲೂ ಸ್ನಾನದ ಮೊದಲು ರಜೋದರ್ಶನವಾದರೆ ಇದರಂತೆಯೇ, ರಜೋದರ್ಶನವಾದನಂತರ ಬಂಧು ಮರಣ ಶ್ರವಣವಾದರೂ ಶಕ್ತಳಾದವಳಿಗೆ ಶುದ್ದಿಪರ್ಯಂತ ಉಪವಾಸವು, ಅಶಕ್ತಳಿಗೆ ಸದ್ಯಃ ಸ್ನಾನಾನಂತರ ಭೋಜನವು. ಈ ಎಲ್ಲದರಲ್ಲೂ ಅಸ್ಪಶ್ಯಸ್ಪರ್ಶವಾದಲ್ಲಿ ಅಶಕ್ತಳಾದವಳು ಸ್ನಾನಮಾಡಿ ನಂತರ ಭೋಜನ ಮಾಡತಕ್ಕದ್ದು. ಶುದ್ಧಿಯ ನಂತರ ಉಪವಾಸದ ಪ್ರತ್ಯಾಮ್ನಾಯ (ಹಾಲು-ಹಣ್ಣು ಇತ್ಯಾದಿ)ವನ್ನಾಚರಿಸತಕ್ಕದ್ದೆಂದು ಕೆಲವರ ಮತವು, ರಜಸ್ವಲೆಗೆ ಪ್ರಥಮ ದಿನವನ್ನು ಹೇಗೆ ಹಿಡಿಯುವದು?:- ರಾತ್ರಿಮಾನವನ್ನು ಮೂರು ಪಾಲುಮಾಡಿ ಎರಡು ಭಾಗಗಳೊಳಗೆ ರಜಸ್ವಲೆಯಾದರೆ ಪೂರ್ವದಿನವನ್ನೂ ಮೂರನೇ ಭಾಗದಲ್ಲಾದರೆ ಮಾರನೇ ದಿನವನ್ನೂ ಹಿಡಿಯತಕ್ಕದ್ದು. ಅಥವಾ ಅರ್ಧರಾತ್ರಿಯ ಒಳಗಾದರೆ ಪ್ರಥಮ, ನಂತರವಾದರೆ ಪರದಿನ, ಹೀಗೂ ಪಕ್ಷಾಂತರವುಂಟು. ಜನನ ಮರಣಾಶೌಚಗಳಲ್ಲೂ ಇದೇ ನಿಯಮದಿಂದ ದಿನಗಣನೆಯು. ಹೆಚ್ಚಾಗಿ ತಿಂಗಳಲ್ಲಿ ರಜೋದರ್ಶನವಾಗುವವಳು ಅಕಸ್ಮಾತ್ ಹದಿನೇಳು ದಿನದಲ್ಲಿ ರಜಸ್ವಲೆಯಾದರೆ ಸ್ನಾನದಿಂದ ಶುದ್ಧಿಯು, ಹದಿನೆಂಟನೆಯ ದಿನವಾದರೆ ಒಂದುರಾತ್ರಿ ಅಶುಚಿತ್ವವು. ಹತ್ತೊಂಬತ್ತು ದಿನದಲ್ಲಾದರೆ ಎರಡುರಾತ್ರಿ, ಇಪ್ಪತ್ತರ ನಂತರ ಮೂರುರಾತ್ರಿ ಹೊರಗಿರತಕ್ಕದ್ದು. ಹದಿನೈದು ದಿನದಲ್ಲಿ ಯಾವಾಗಲೂ ಮುಟ್ಟಾಗುವವಳು ಹತ್ತುದಿನಗಳೊಳಗೆ ಮುಟ್ಟಾದರೆ ಸ್ನಾನದಿಂದ ಶುದ್ಧಿಯು, ಹನ್ನೊಂದನೇ ದಿನವಾದರೆ ಒಂದುರಾತ್ರಿ, ಹನ್ನೆರಡನೇ ದಿನವಾದರೆ ಎರಡುರಾತ್ರಿ, ಆಮೇಲೆ ತ್ರಿರಾತ್ರಿ-ಹೀಗೆ ಅಶುದ್ಧಿಯು, ಸ್ತ್ರೀಯರಿಗೆ ರೋಗದಿಂದ ಪ್ರತಿನಿತ್ಯ ರಜ ಸ್ರಾವವಾಗುವದುಂಟು. ಆಗ ಅವಳಿಗೆ ಅಸ್ಪೃಶ್ಯತೆಯಿಲ್ಲ. ಆದರೆ ರಜಸ್ಸು ನಿಲ್ಲುವಪರ್ಯಂತ ಅಡಿಗೆ ಮಾಡುವ ಹಾಗೂ ದೈವ-ಪಿತ್ರ-ಕರ್ಮಗಳಲ್ಲಿ ಅಧಿಕಾರವಿಲ್ಲ. ರೋಗದಿಂದ ಸ್ರಾವವಾಗುತ್ತಿದ್ದರೂ ಮಾಸಿಕ ರಜಸ್ಸು ಇದ್ದೇ ಇದೆ. ಆ ವಿಷಯದಲ್ಲಿ ಜಾಗ್ರತೆಯಿರತಕ್ಕದ್ದು ಮತ್ತು ತ್ರಿರಾತ್ರಿ ಹೊರಗಿರತಕ್ಕದ್ದು. ಇನ್ನು ಗರ್ಭಿಣಿಗೆ ಹಡೆಯುವ ಮೊದಲು ರಜ ಸ್ರಾವವಾಗುವದುಂಟು. ಆಗ ತ್ರಿರಾತ್ರ ಅಶುಚಿತ್ವವು. ಹಡೆದನಂತರ ತಿಂಗಳಿಗಿಂತ ಮುಂಚೆ ರಜ ಸ್ರಾವವಾದರೆ ಸ್ನಾನಮಾತ್ರದಿಂದ ಶುದ್ಧಿಯು, ತಿಂಗಳು ಪೂರ್ಣವಾದ ನಂತರವಾದರ ತ್ರಿರಾತ್ರ ಅಶುಚಿತ್ವವು. ಉಚ್ಚಿಷ್ಟಳಾದ ಸ್ತ್ರೀಯು ರಜಸ್ವಲೆಯಾದರೆ ಶುದ್ದಿಯ ನಂತರ ಮೂರುದಿನ ಉಪವಾಸವು ಅಧರೋಚಿಷ್ಟಳಾದಾಗ ರಜಸ್ವಲೆಯಾದರೆ ಒಂದುದಿನ ಉಪವಾಸವು. ರಚೋದೋಷವು ತಿಳಿಯದಿದ್ದಾಗ ಗೃಹಕೃತ್ಯದಲ್ಲಿದ್ದ ಅವಳು ಹಾಲು ಮೊದಲಾದ ಗಡಿಗೆಗಳನ್ನು ಮುಟ್ಟಿದ್ದರೂ ಅವು ತ್ಯಾಜ್ಯಗಳಲ್ಲ. ರಜೋದೋಷವಾದರೂ ಸೂತಕದಂತೆ ಜ್ಞಾನನಿಮಿತ್ತವಾಗಿಯೇ ದೋಷ ಪ್ರಾಪ್ತಿಯಾಗುವದು. ಕೆಲವರು ಜ್ಞಾತವಾದ ದಿನದಿಂದ ಮೂರುದಿನ ಪರಿಚ್ಛೇದ - ೩ ಪೂರ್ವಾರ್ಧ ಅಶುಚಿಯಾಗಿರಬೇಕನ್ನುವರು. ಹಲವರು ಎರಡನೇ ಅಥವಾ ಮೂರನೇದಿನ ರಜಸ್ಸಿನ ಜ್ಞಾನವಾದರೆ ಸೂತಕದಂತೆ ಶೇಷದಿನಗಳಿಂದಲೇ ಶುದ್ಧಿಯನ್ನುವರು. ರಜಸ್ವಲಾ ಶುದ್ಧಿಕ್ರಮ:- ಮೂರುದಿನ ಹೊರಗುಳಿದು ನಾಲ್ಕನೇದಿನ ಅರವತ್ತು ಬಾರಿ ಮೃತ್ತಿಕಾಶೌಚದಿಂದ ಮಲವನ್ನು ತೊಳೆದು ದಂತಧಾವನ ಪೂರ್ವಕವಾಗಿ ಸಂಗವಕಾಲದಲ್ಲಿ ಸ್ನಾನಮಾಡತಕ್ಕದ್ದು, ಸೂರ್ಯೋದಯಕ್ಕಿಂತ ಮೊದಲು ಸ್ನಾನಮಾಡಿದರೆ ಅದು ಅನಾಚಾರವೇ ಆಗುವದು. ನಾಲ್ಕನೇದಿನ ರಜಸ್ಸು ನಿಂತರೆ ಪತಿಶುಶೂಷಣಾದಿಗಳಿಗೆ ಶುಚಿತ್ವವುಂಟಾಗುವದು. ಐದನೇದಿನ ದೇವ-ಪಿತೃಕಾರ್ಯಗಳಿಗೆ ಅರ್ಹಳಾಗುವಳು. ಕೆಲದಿನಗಳವರೆಗೆ ರಜಸ್ಸು ಸ್ರವಿಸುತ್ತಿದ್ದರೆ ಸ್ರಾವವು ನಿಲ್ಲುವ ಪರ್ಯಂತ ದೇವ-ಪಿತೃಕಾರ್ಯಗಳ ಬಗ್ಗೆ ಶುದ್ಧಿಯಿಲ್ಲ. ರೋಗದಿಂದ ಮುಂದರಿಯುವಾಗಿನ ವಿಷಯವನ್ನು ಹಿಂದೆಯೇ ಹೇಳಿದೆ. ಕೆಲವರು ನಾಲ್ಕನೇ ದಿನದಲ್ಲಿ ದರ್ಶಷ್ಟಾದಿ ಶೌತಕಾರ್ಯಗಳಲ್ಲಿ ಭಾಗವಹಿಸಬಹುದೆನ್ನುವರು. ಇನ್ನು ಕೆಲವರು ಹೆಚ್ಚು ಅನುಕೂಲವಾಗುವಂತಿದ್ದರೆ ಆ ದಿನದಲ್ಲೇ ಗರ್ಭಾಧಾನ ಹಾಗೂ ದುಷ್ಟ ರಜೋದರ್ಶನ ಶಾಂತಿಗಳನ್ನು ಮಾಡಬಹುದೆನ್ನುವರು. “ಮಹಾಸಂಕಟದಲ್ಲಿ ಶ್ರೀ ಸೂಕ್ತ ಹೋಮಪೂರ್ವಕ ಅಭಿಷೇಕ ಮಾಡಿ ಉಪನಯನಾದಿಗಳನ್ನೂ ಸಹ ಮಾಡಬಹುದೆನ್ನುವರು. ಇದೆಲ್ಲ ರಜಸ್ಸು ನಿವೃತ್ತಿಯಾದರೆ ಮಾತ್ರವೆಂದು ತಿಳಿಯುವದು. ಇನ್ನು ಜ್ವರಾದಿ ರೋಗಗ್ರಸ್ತಳಾದಾಗ ನಾಲ್ಕನೇದಿನ ಸ್ನಾನಮಾಡಲು ಅಸಮರ್ಥಳಾಗುವಳು. ಆಗ ಬೇರೆ ಸ್ತ್ರೀ ಅಥವಾ ಪುರುಷನು ಹತ್ತು ಬಾರಿ ಅವಳನ್ನು ಮುಟ್ಟಿ ಮುಟ್ಟಿ ಸ್ನಾನಮಾಡತಕ್ಕದ್ದು. ಮತ್ತು ಆಚಮನ ಮಾಡತಕ್ಕದ್ದು. ಪ್ರತಿಸ್ಥಾನದ ಕಾಲದಲ್ಲಿಯೂ ಆತುರಳಿಗೆ (ರೋಗಿ ಸ್ತ್ರೀ) ಬೇರೆ ಬೇರೆ ವಸ್ತ್ರಗಳನ್ನು ತೊಡಿಸಿ ಕೊನೆಗೆ ಆ ಎಲ್ಲ ವಸ್ತ್ರಗಳನ್ನು ಬಿಸಾಡುವದು. ಮೊದಲು ಒದ್ದ ವಸ್ತ್ರವನ್ನು ತೊಡಿಸಿ ನಂತರ ಶುದ್ಧ ವಸ್ತ್ರವನ್ನು ತೊಟ್ಟು ಆಮೇಲೆ ಬ್ರಾಹ್ಮಣ ಭೋಜನ ಹಾಗೂ ಪುಣ್ಯಾಹವಾಚನೆಯಿಂದ ಶುದ್ಧಳಾಗುವಳು. ಸಾಮಾನ್ಯ ರೋಗಪೀಡಿತರಾದವರಿಗೆ ಸ್ನಾನದ ಅಗತ್ಯವಿರುವಲ್ಲಿ ಇದೇ ನಿಯಮವು. ಹೀಗೆ ಶುದ್ದಿಯಾದ ನಂತರ ಶುಭದಿನದಲ್ಲಿ ದುಷ್ಕ ರಜೋದರ್ಶನ ನಿಮಿತ್ತವಾಗಿ ಹೇಳಿದ ಶೌನಕೋಕ್ತ ಭುವನೇಶ್ವರೀ ಶಾಂತಿಯನ್ನು ಮಾಡಿ ಗರ್ಭಾಧಾನ ಮಾಡತಕ್ಕದ್ದು. ಸೂರ್ಯಗ್ರಹಣ ಕಾಲದಲ್ಲಿ ರಜೋದರ್ಶನವಾದಲ್ಲಿ ಸೂರ್ಯ ಪ್ರತಿಮೆ ಮತ್ತು ನಕ್ಷತ್ರ ಪ್ರತಿಮೆಗಳನ್ನು ಬಂಗಾರದಿಂದ ಮಾಡಿ ಸೀಸಲೋಹದಿಂದ ರಾಹುಪ್ರತಿಮೆಯನ್ನೂ ಮಾಡಿ ಪೂಜಿಸಿ ಸೂರ್ಯನ ಸಲುವಾಗಿ “ಎಕ್ಕ “ಸಮಿಧ, ನಕ್ಷತ್ರಾಧಿಪತಿಗಾಗಿ “ಆಲ, ರಾಹುವಿಗಾಗಿ “ದೂರ್ವಾ” ಈ ಸಮಿಧಗಳಿಂದ ಮತ್ತು ಚರು, ಆಜ್ಯ, ತಿಲಗಳಿಂದ ಹೋಮಿಸತಕ್ಕದ್ದು. ಚಂದ್ರಗ್ರಹಣದಲ್ಲಿ - ಬೆಳ್ಳಿಯ ಚಂದ್ರಬಿಂಬ ಮತ್ತು ಮುತ್ತುಗಲ ಸಮಿಧ ಇಷ್ಟೇ ವಿಶೇಷವು, ಉಳಿದದ್ದೆಲ್ಲ ಸೂರ್ಯಗ್ರಹಣದಂತೆಯೇ. ಗ್ರಹಣ, ವ್ಯತೀಪಾತ ಮೊದಲಾದ ಬಹುದೋಷವಿದ್ದರೆ ದ್ವಿತೀಯಾದಿ ರಜೋದರ್ಶನ ಕಾಲದಲ್ಲಿ ಶಾಂತಿಪೂರ್ವಕ ಗರ್ಭಾಧಾನ ಮಾಡತಕ್ಕದ್ದು. ಇನ್ನು “ಗರ್ಭಾಧಾನ” ನಿರ್ಣಯ:- ಗರ್ಭಾಧಾನದಲ್ಲಿ ಗುರು ಶುಕ್ರಾಸ್ತಾದಿ ದೋಷವಿಲ್ಲ. ಅಧಿಕಮಾಸ ದೋಷವೂ ಇಲ್ಲ. ಪ್ರಥಮ ರಜೋದೋಷದಲ್ಲಿ ಶಾಂತಿಯಾಗಿರದೆ ದ್ವಿತೀಯಾದಿಗಳಲ್ಲಿ ಶುಕ್ರಾಸ್ತಾದಿದೋಷ ಪ್ರಾಪ್ತವಾದಾಗ ಅಸ್ತಾದಿ ದೋಷಾನಂತರವೇ ೧೬೨ ಧರ್ಮಸಿಂಧು ಗರ್ಭಾಧಾನ ಮಾಡತಕ್ಕದ್ದು, ಯಾಕೆಂದರೆ ಮುಖ್ಯಕಾಲವು ತಪ್ಪಿಹೋಗುವದು. ನಿಮಿತ್ತಾನಂತರ ಕೂಡಲೇ ಅದರ ಪ್ರಯುಕ್ತವಾದ ಕಾರ್ಯವನ್ನು ಮಾಡುವದು ಮುಖ್ಯ. ಅದಕ್ಕೆ ಅಸ್ತಾದಿ ದೋಷವಿರುವದಿಲ್ಲ. ಮುಖ್ಯಕಾಲಾತಿಕ್ರಮವಾದ ಮೇಲೆ ಅಸ್ತಾದಿ ದೋಷವಿದ್ದೇ ಇದೆ. ಹೀಗೆ ಇದು ಸಾಮಾನ್ಯ ನಿಯಮ. ಆದ್ದರಿಂದ ದ್ವಿತೀಯಾದಿ ರಜೋದರ್ಶನದಲ್ಲಿ ಅಸ್ತಾದಿ ದೋಷವಿರುವಾಗ ಗರ್ಭಾಧಾನ ಕಾರ್ಯವನ್ನು ಮಾಡತಕ್ಕದ್ದಲ್ಲ-ಹೀಗೆಂದು ತೋರುತ್ತದೆ. ಭುವನೇಶ್ವರೀ ಶಾಂತಿಯು ಇದನ್ನು ಗ್ರಹಶಾಂತಿ ಪೂರ್ವಕವಾಗಿಯೇ ಮಾಡತಕ್ಕದ್ದು. ಈ ಶಾಂತಿಯಲ್ಲಿ “ಭುವನೇಶ್ವರಿ"ಯು ಮುಖ್ಯ ದೇವತೆಯು, ಇಂದ್ರ, ಇಂದ್ರಾಣಿಯರು ಪಾರ್ಶ್ವದೇವತೆಗಳು, ಹೀಗೆ ಮೂರು ಕಲಶಗಳನ್ನು ಮಾಡಿ ಮೂರು ಪ್ರತಿಮೆಗಳನ್ನಿಡತಕ್ಕದ್ದು. ಗ್ರಹಗಳಿಗೆ ಎಕ್ಕ ಮೊದಲಾದ ಸಮಿತ್ತು ಹಾಗೂ ಚರು, ಆಜ್ಯ ಇವು ಹೋಮದ್ರವ್ಯಗಳು, ಪ್ರಧಾನ ದೇವತೆಗೆ ದೂರ್ವಾ, ತಿಲಮಿಶ್ರ ಗೋಧಿ, ಪಾಯಸ, ಅಜ್ಜ ಹೀಗೆ ನಾಲ್ಕು ದ್ರವ್ಯಗಳು, ಪಾರ್ಶ್ವದೇವತೆಗಳಿಗೂ ಸಹ ಪಾಯಸವನ್ನು ಸ್ಟಂಡಿಲದ ಅಗ್ನಿಯಲ್ಲಿಯೇ ಬೇಯಿಸತಕ್ಕದ್ದು. ಗೃಹ ಹೋಮದ ಚರುವನ್ನು ಮನೆಯಲ್ಲಿ ಬೇಯಿಸಲಿಕ್ಕಡ್ಡಿ ಇಲ್ಲ. ಪಾತ್ರಾಸಾದನ ಕಾಲದಲ್ಲಿ ಪಾಯಸ ಶ್ರವಣ (ಬೇಯಿಸುವದು)ಕ್ಕಾಗಿ ಒಂದು, ಗೃಹಸಿದ್ದಾನ್ನಕ್ಕಾಗಿ ಒಂದು ಹೀಗೆ ಎರಡು ಸ್ಥಾಲಿ (ತಪೇಲಿ) ಗಳನ್ನು ಸ್ಥಾಪಿಸುವದು. ಆಜ್ಯ, ಹೋಮಗಳನ್ನು ಅನೇಕ ಕರ್ತೃಗಳು ಮಾಡುವದಿದ್ದಲ್ಲಿ ಅನೇಕ “ವೆ"ಗಳ ಆಸಾದನ ಮಾಡುವದು. ಪರ್ಯಗ್ನಿ ಕರಣವನ್ನು ಆಜ್ಯದಿಂದ ಕೂಡಿದ ಮೂರು ಹವಿಸ್ಸು ಹಾಗೂ ಗೃಹಸಿದ್ಧಾನ್ನಕ್ಕೆ ಮಾಡುವದು. ಸೃವಾದಿ ಸಂಮಾರ್ಜನಾನಂತರದಲ್ಲಿ ಗೃಹಸಿದ್ಧಾನ್ನವನ್ನು ಆಸಾದನೆಮಾಡಿದ ಚರುಸ್ಥಾಲಿಯಲ್ಲಿ ತಕ್ಕೊಂಡು ಅಗ್ನಿಯಲ್ಲಿ ಕಾಯಿಸಿ ಅಭಿಘಾರಣಾದಿಗಳನ್ನು ಮಾಡಿ ಬರ್ಹಿಯಲ್ಲಿಡುವದು. ಆಮೇಲೆ ಪಾಯಸಾಭಿಘಾರ, ಆಸಾದನ ಇತ್ಯಾದಿ ಮಾಡತಕ್ಕದ್ದು. ಅನ್ನಾಧಾನದಲ್ಲಿ ಹಾಗೂ ಹವಿಸ್ಸಾಗದಲ್ಲಿ ಪ್ರಧಾನ ದೇವತೆಗೆ “ಭುವನೇಶ್ವರೀ” ಎಂಬ ಪದದಿಂದ ಅಥವಾ “ಸವಿತೃ” ಎಂಬ ಪದದಿಂದ ಉಚ್ಚರಿಸತಕ್ಕದ್ದು. ಯಾಕೆಂದರೆ ಗಾಯಿತ್ರಿಯಿಂದ ಹೋಮವನ್ನು ಹೇಳಿದ. ಯಜಮಾನನು ಆಜ್ಯಭಾಗಾಂತವಾಗಿ ಮಾಡಿ ಅನ್ನಾಧಾನಾನುಸಾರವಾಗಿ -“ಪ್ರತಿಂ ಅಷ್ಟಾವಿಂಶತ್ಯಾಹುತಿ ಪರ್ಯಾಂ ಅರ್ಕಾರಿ ಜಾತೀಯ ಸಮಿತ್ ಚರ್ವಾಜ್ಯಾತ್ಮಕಂ ಹವಿಸ್ಮಯಂ ಸೂರ್ಯಾಯ ಸೋಮಾಯ ಭೌಮಾಯ ಬುಧಾಯ ಬೃಹಸ್ಪತಯೇ ಶುಕ್ರಾಯ ಶನಯೇ ರಾಹವೇ ಕೇತವೇ ಚ ನಮಮ. ಅಷ್ಟಷ್ಟ ಸಂಖ್ಯಾಪರ್ಯಾಂ ಹವಿಯಂ ತದಧಿದೇವತಾ ಪ್ರತ್ಯಧಿದೇವತಾಭ್ಯ ನಮಮ. ಚತುಸಂಖ್ಯಾ ಪರ್ಯಾಪ್ತಂ ತದ್ಧಮ್ಮಿಯಂ ವಿನಾಯಕಾದಿಭ್ಯ: ಕ್ರತುಸಂರಕ್ಷಕ ಕ್ರತು ಸಾದ್ಗುಣ್ಯ ದೇವತಾಭ್ ನಮಮ. ಅಷ್ಟೋತ್ತರ ಶತಸಂಖ್ಯಾರಾಹುತಿಪರ್ಯಾಪ್ತಂ ದೂರ್ವಾ, ತಿಲ, ಗೋಧೂಮ, ಪಾಯಸಾಜೈಲ ಹವಿಶ್ಚತುಷ್ಟಯಂ ಭುವನೇಶ್ವರ್ಯ ನಮಮ, ಅಥವಾ ಸವೋ ನಮಮ, ಅಷ್ಟಾವಿಂಶತಿ ಸಂಖ್ಯಾ ಪರ್ಯಾಂ ತಟ್ಟಿತುಷ್ಟಯಂ ಇಂದ್ರೇಂದ್ರಾಣೀಭ್ಯಾಂ ನಮಮ” ಹೀಗೆ “ತ್ಯಾಗ” ಮಾಡತಕ್ಕದ್ದು. ಬಹುದೋಷವಿದ್ದರೆ ಭುವನೇಶ್ವರಿಗೆ ಅಷ್ಟೋತ್ತರ ಸಹಸ್ರ ಸಂಖ್ಯಾಕ ಹೋಮಮಾಡತಕ್ಕದ್ದು. ಇಂದ್ರ-ಇಂದ್ರಾಣಿಯರಿಗೆ ಅಷ್ಟೋತ್ತರ ಶತಹೋಮವು, ಇಂದ್ರ ಇಂದ್ರಾಣಿಯರಿಗೆ ಹೋಮವು ಕೃತಾಕೃತ್ಯವು ಪರಿಚ್ಛೇದ - ೩ ಪೂರ್ವಾರ್ಧ ೧೬೬ ಹೂಮಾಂತ್ಯದಲ್ಲಿ ಗ್ರಹಬಲಿಯನ್ನು ಮಾಡಿ ನಂತರ ಭುವನೇಶ್ವರ್ಯಾದಿಗಳಿಗೆ ಬಲಿದಾನ ಮಾಡತಕ್ಕದ್ದು. ಆಮೇಲೆ ಅಭಿಷೇಕ ಮಾಡತಕ್ಕದ್ದು. ಹೀಗೆ ಸಂಕ್ಷಿಪ್ತ ವಿಧಿಯು, ಸಮಂತ್ರಕ ಸವಿಸ್ತರ ಪ್ರಯೋಗವನ್ನು ತಮ್ಮ-ತಮ್ಮ ಶಾಖೆಗಳಿಂದ ತಿಳಿಯತಕ್ಕದ್ದು. ಸ್ಮಾರ್ತಕರ್ಮ ಹೋಮದ ಪೂರ್ವೋತ್ತರಾಂಗಗಳು ಸಂಕಲ್ಪ, ಪುಣ್ಯಾಹ, ಬ್ರಾಹ್ಮಣವರಣ, ಭೂತನಿಃಸರಣ, ಪಂಚಗವ್ಯದಿಂದ ಭೂಶುದ್ಧಿ, ಮುಖ್ಯದೇವತಾಪೂಜೆ, ಅಗ್ನಿ ಪ್ರತಿಷ್ಠೆ, ಸೂರ್ಯಾದಿ ಗ್ರಹಸ್ಥಾಪನ, ಪೂಜನ, ದೇವತಾ ಅನ್ನಾಧಾನ ಪಾತ್ರಾಸಾದನ, ಹವಿಸಂಸ್ಕಾರ ಕ್ರಮಾನುಸಾರ ತ್ಯಾಗ, ಹೋಮ ಇವು ಪೂರ್ವಾಂಗಗಳು, ಪೂಜಾ, ಸ್ಪಿಷ್ಟಕೃತ್, ನವ ಆಹುತಿಯಿಂದ ಬಲಿ, ಪೂರ್ಣಾಹುತಿ, ಪೂರ್ಣಪಾತ್ರ ವಿಮೋಕ, ಅರ್ಚನ, ಕೊನೆಯಲ್ಲಿ ಅಭಿಷೇಕ, “ಮಾನ” ಮಂತ್ರದಿಂದ ವಿಭೂತಿಗ್ರಹಣ, ದೇವಪೂಜೆ, ವಿಸರ್ಜನ, ಶ್ರೇಯೋಗ್ರಹಣ, ದಕ್ಷಿಣಾದಾನ, ಕರ್ಮೇಶ್ವರಾರ್ಪಣ ಇವು ಉತ್ತರಾಂಗಗಳು, ಹೀಗೆ ಸ್ಮಾರ್ತಕರ್ಮಗಳ ಹೋಮಾದಿಗಳಲ್ಲಿ ಸಾಮಾನ್ಯವಾಗಿ ಪೂರ್ವೋತ್ತರಾಂಗಗಳು, ಕೌಸ್ತುಭದಲ್ಲಿ ಈ ಶಾಂತಿಯಲ್ಲದೆ ಮದನರತ್ರೋಕ್ತ ಹಾಗೂ ಬೋಧಾಯನೋಕ್ತ ಶಾಂತಿಯನ್ನು ಹೇಳಲಾಗಿದೆ. ಆಯಾಯ ಗ್ರಂಥಗಳಲ್ಲಿ ನೋಡತಕ್ಕದ್ದು. ಪತ್ನಿಗಮನ ವಿಚಾರ ರಜೋದರ್ಶನಕ್ಕಿಂತ ಮೊದಲು ಪತ್ನಿಗಮನ ಮಾಡಿದಲ್ಲಿ ಬ್ರಹ್ಮಹತ್ಯಾದೋಷ ಹೇಳಿರುವದಾದರೂ ಅಲ್ಪಪ್ರಾಯಶ್ಚಿತ್ತ ಸಾಕೆಂದು ತೋರುತ್ತದೆ. ಋತುಕಾಲದಲ್ಲಿ ಪತ್ನಿಗಮನವು ಅವಶ್ಯಕವು. ಇಲ್ಲವಾದರೆ ಭ್ರೂಣಹತ್ಯಾದೋಷವನ್ನು ಹೇಳಿದೆ. ಈ ದೋಷವು ಮನಸ್ಸಿನಲ್ಲಿ ಇಚ್ಛೆಯಿದ್ದು ದ್ವೇಷಾದಿಗಳಿಂದ ಋತುಕಾಲದಲ್ಲಿ ಪತ್ನಿಗಮನ ಮಾಡದವನ ವಿಷಯವಾಗಿ ಹೇಳಿದ್ದೆಂದು ತಿಳಿಯತಕ್ಕದ್ದು. ವಿರಕ್ತನಾದವನಿಗೆ ಆ ದೋಷವಿಲ್ಲೆಂಬದನ್ನು ಶ್ರೀ ಭಾಗವತದಲ್ಲಿಯ “ಲೋಕೇವ್ಯವಾಯ” ಎಂಬ ಶ್ಲೋಕದ ಟೀಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ರಜೋದರ್ಶನದಿಂದ ಹದಿನಾರು ದಿನಗಳ ಕಾಲಕ್ಕೆ “ಋತುಕಾಲ” ಎನ್ನುವರು. ಅದರಲ್ಲಿ ಪ್ರಥಮದಲ್ಲಿ ನಾಲ್ಕು ದಿನ ಹಾಗೂ ಹನ್ನೊಂದನೇ ಹದಿಮೂರನೇ ದಿನಗಳ ವರ್ಜಗಳು, ಉಳಿದಿರುವ ಹತ್ತು ದಿನಗಳಲ್ಲಿ ಪುತ್ರಾರ್ಥಿಯಾದವನು ಸರಿದಿನಗಳಲ್ಲಿಯೂ ಕನ್ಯಾರ್ಥಿಯಾದವನು ವಿಷಮ ದಿನಗಳಲ್ಲಿಯೂ ಗಮನಮಾಡತಕ್ಕದ್ದು. ಅವುಗಳಲ್ಲಾದರೂ ಮುಂದು ಮುಂದಿನ ಪ್ರಶಸ್ತಿಗಳು. ಅಂದರೆ ಆರಕ್ಕಿಂತ ಎಂಟು, ಎಂಟಕ್ಕಿಂತ ಹತ್ತು ಇತ್ಯಾದಿ. ಒಂದು ರಾತ್ರಿಯಲ್ಲಿ ಒಂದೇ ಆವರ್ತಿ ಗಮನಮಾಡತಕ್ಕದ್ದು. ಈ ಸಕೃಷ್ಣ ಮನವು (ಒಂದಾವರ್ತಿ ಗಮನ) ಯುಗಳಾದ ಎಲ್ಲ ರಾತ್ರಿಗಳಲ್ಲಿಯೂ ಆವಶ್ಯಕವೆಂದು ಕೆಲವರ ಮತವು. ಬೇರೆ ಯುಕ್ತಕಾಲದಲ್ಲಿ ಪ್ರತಿಬಂಧ ಮೊದಲಾದವುಗಳಿಂದ ಗಮನವು ಅಸಂಭವವಾದಲ್ಲಿ ಶ್ರಾದ್ಧ, ಏಕಾದಶೀ ಮೊದಲಾದ ನಿಷಿದ್ಧ ದಿನಗಳಲ್ಲಾದರೂ ಋತುಗಮನ ಮಾಡಬಹುದೆಂದು ಕೆಲವರನ್ನುವರು. ಸ್ತ್ರೀಯ ಇಷ್ಟವನ್ನರಿತು (ಸ್ತ್ರೀಯು ತೀವ್ರ ಇಚ್ಛೆಯನ್ನು ವ್ಯಕ್ತಪಡಿಸಿದಾಗ) ಋತುರಾತ್ರಿಗೆ ಹೊರತಾದ ದಿನದಲ್ಲಾದರೂ ಗಮನಮಾಡಬಹುದು. ಅದರಿಂದ ದೋಷವುಂಟಾಗುವದಿಲ್ಲ. ಪ್ರಯೋಜನವೂ ಇಲ್ಲ. ಬ್ರಹ್ಮಚರ್ಯ ಹಾನಿ ಅಷ್ಟೇ. (ವೀರ್ಯನಾಶ)ಋತುರಾತ್ರಿಗಳಲ್ಲಿ ನಿಯಮಿತವಾಗಿ ಗಮನ ಮಾಡುವವನು “ಯಾವಜೀವ ಧರ್ಮಸಿಂಧು ಬ್ರಹ್ಮಚಾರಿ"ಎನ್ನಲ್ಪಡುವನು. ಹೀಗೆ ಮುನಿಗಳ ಮತವಿದೆ. ಅಷ್ಟಮೀ, ಚತುರ್ದಶೀ, ಹುಣ್ಣಿವೆ, ಅಮಾವಾಸೆ, ಸೂರ್ಯಸಂಕ್ರಾಂತಿ, ವೈಧೃತಿ, ವ್ಯತೀಪಾತ, ಪರಿಘ, ಪೂರ್ವಾರ್ಧ, ದಲ, ವಿಷ್ಟಿ ಸಂಧ್ಯಾಕಾಲ, ಮಾತಾಪಿತೃಗಳ ಮೃತತಿಥಿ, ಶ್ರಾದ್ಧ, ಶ್ರಾದ್ಧದ ಪೂರ್ವದಿನ, ಜನ್ಮನಕ್ಷತ್ರ, ಹಗಲು, ಈ ಕಾಲಗಳಲ್ಲಿ ಗಮನವು ವರ್ಜವು. ಗರ್ಭಾಧಾನ ಕಾಲ ಚತುರ್ಥಿ, ಷಷ್ಠಿ, ಚತುರ್ದಶೀ, ಅಷ್ಟಮೀ, ಪೂರ್ಣಿಮಾ, ಅಮಾವಾಸೆ ಇವುಗಳಿಂದ ಹೊರತಾದ ತಿಥಿಗಳು ಪ್ರಶಸ್ತಿಗಳು. ಚಂದ್ರ, ಬುಧ, ಗುರು, ಶುಕ್ರವಾರಗಳು ಶುಭಗಳು, ಮೂಲ, ಮಘಾ, ರೇವತಿ, ಜೇಷ್ಠಾ ಈ ನಕ್ಷತ್ರಗಳು ವರ್ಜಗಳು. ಭರಣೀ, ಕೃತ್ತಿಕಾ, ಆದ್ರ್ರಾ, ಆಶ್ಲೇಷಾ, ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರ, ವಿಶಾಖಾ, ಇವು ಮಧ್ಯಮಗಳು. ಉಳಿದ ನಕ್ಷತ್ರಗಳು ಶುಭಗಳು. ಎಲ್ಲ ಕಾರ್ಯಗಳಲ್ಲಿಯೂ ಗೋಚರದಲ್ಲಿ “ಚಂದ್ರ ಬಲ"ವು ಆವಶ್ಯಕವು. ಚಂದ್ರನು ತಾನಿದ್ದ ರಾಶಿಯಿಂದ ಹನ್ನೆರಡು ರಾಶಿಗಳಲ್ಲಿರುವಾಗ ಅನುಕ್ರಮದಿಂದ ಅನ್ನ, ದಾರಿದ್ರ, ಸೌಖ್ಯ, ರೋಗ, ಕಾರ್ಯಹಾನಿ, ಸಂಪತ್ತು, ಸ್ತ್ರೀ, ಮರಣ, ನೃಪಭೀತಿ, ಸುಖ, ಆಯ, ವ್ಯಯ ಹೀಗೆ ಫಲಗಳನ್ನು ಕೊಡುವನು. ಅನೇಕ ಪತ್ನಿಯರುಳ್ಳವನಿಗೆ ಒಂದೇ ಕಾಲದಲ್ಲಿ ಋತುಗಮನ ಪ್ರಾಪ್ತಿಯಲ್ಲಿ ವಿವಾಹ ಕ್ರಮದಂತೆ ಅಥವಾ ಋತು ಪ್ರಾಪ್ತಿಯ ಕ್ರಮದಿಂದ ಗರ್ಭಾಧಾನ ಮಾಡತಕ್ಕದ್ದು. ತಾನು ವ್ಯಾಧಿಗ್ರಸ್ತನಾದಾಗ, ಬಂಧನದಲ್ಲಿದ್ದಾಗ, ಪ್ರವಾಸದಲ್ಲಿದ್ದಾಗ ಗಮನಮಾಡದಿದ್ದರೆ ದೋಷವಿಲ್ಲ. ಪರ್ವಕಾಲದಲ್ಲಿಯೂ, ಸ್ತ್ರೀಯು ವೃದ್ಧಳಾದಲ್ಲಿ, ಬಂಜೆಯಾದಲ್ಲಿ ಅಥವಾ ದುರ್ವತ್ತಿಯಲ್ಲಿ ನಿರತಳಾದಲ್ಲಿ, ಇಲ್ಲವೆ ಸತ್ತುಹೋಗುವ ಸಂತತಿಯುಳ್ಳವಳಾದಲ್ಲಿ, ರಜಸ್ವಲೆಯಾದಲ್ಲಿ, ಬರೇ ಕನ್ನೆಯರನ್ನು ಹಡೆಯುವವಳಾದಲ್ಲಿಯೂ ಇಂಥ ಸ್ತ್ರೀಯರನ್ನು ಗಮನ ಮಾಡದಿದ್ದಲ್ಲಿ ದೋಷವಿಲ್ಲ. ಗರ್ಭಾಧಾನ ಹೋಮವನ್ನು ಔಪಾಸಾಗ್ನಿಯಲ್ಲಿ ಮಾಡಿ ಪ್ರಥಮ ಋತುಗಮನವನ್ನು ಮಾಡತಕ್ಕದ್ದು. ದ್ವಿತೀಯಾದಿ ಋತುಗಮನದಲ್ಲಿ ಹೋಮಾದಿಗಳ ಆವಶ್ಯಕತೆಯಿಲ್ಲ. ಪ್ರಥಮ ಋತುಗಮನದಲ್ಲಿಯಾದರೂ ಯಾರ ಸೂತ್ರದಲ್ಲಿ ಹೋಮವನ್ನು ಹೇಳಿಲ್ಲವೋ ಅವರು ಹೋಮವನ್ನು ಬಿಟ್ಟು ಮಂತ್ರ ಪಠನಾದಿರೂಪವಾದ ಗರ್ಭಾಧಾನಸಂಸ್ಕಾರವನ್ನು ಮಾಡತಕ್ಕದ್ದು. ಅಗ್ನಿಹೋತ್ರಿಗಳು, ಅನಾಹಿತಾಗ್ನಿ ಸ್ಮಾರ್ತೌವಾಸನಾಗ್ನಿಯುಕ್ತರಾದವರು)ಗಳ ಔಪಾಸನಾಗಿ ಸಿದ್ಧಿಯಾದಲ್ಲಿ ಅದರಲ್ಲೇ ಅರ್ಧಾಧಾನಿ ಹೋಮಮಾಡತಕ್ಕದ್ದು. ಹೋಮಾರ್ಥವಾಗಿ ಅಗುತ್ಪಾದನ ಕ್ರಮ (ಕೇವಲ ಔವಾಸನಾಗ್ನಿಯ ವಿಚ್ಛೇದವಾಗಿ ಹನ್ನೆರಡು ದಿನಗಳಾಗಿದ್ದರೆ “ಆಯಾಶ್ಚಾಗೇ ಈ ಮಂತ್ರದಿಂದ ಅಜ್ಞಾಹುತಿಮಾಡಿ ಅಗ್ನಿಯನ್ನುತ್ಪಾದಿಸತಕ್ಕದ್ದು. ಹನ್ನೆರಡು ದಿನಗಳಿಗಿಂತ ಹೆಚ್ಚಾದಲ್ಲಿ ಪ್ರಾಯಶ್ಚಿತ್ತಪೂರ್ವಕ ಪುನಃಸಂಧಾನಮಾಡಿ ಅಗ್ನಿಯನ್ನುತ್ಪಾದಿಸಿ ಅದರಲ್ಲಿ ಹೋಮವನ್ನು ಮಾಡತಕ್ಕದ್ದು. ವಿಚ್ಛಿನ್ನವಾಗಿ ಎಷ್ಟು ವರ್ಷಗಳಾಗಿವೆಯೆಂದು ಲೆಕ್ಕಮಾಡಿ ಅಷ್ಟು ಪರಿಚ್ಛೇದ - ೩ ಪೂರ್ವಾರ್ಧ OLЯ ಪ್ರಾಜಾಪತ್ಯಕೃಚ್ಛವನ್ನು ಮಾಡತಕ್ಕದ್ದು. ಆಗ:- “ಮಮ ಗೃಹ್ಯಾಗಿ ವಿಚ್ಛೇದನ ದಿನಾದಾರಭ್ಯ ವಿತಾವಂತಂ ಕಾಲಂ ಗೃಹ್ಯಾಗಿ ವಿಚ್ಛೇದ ಜನಿತದೋಷ ಪರಿಹಾರದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಗೃಹ್ಯಾಗಿ ವಿಚ್ಛೇದನಾದಾರಭ್ಯ ವಿತಾವದಬ್ಬ ಪರ್ಯಂತಂ ಪ್ರತ್ಯಬ್ದ ಮೇಕೆಕಟ್ರಾನ್ ಯಥಾಶಕ್ತಿ ತನ್ನತ್ಯಾಮ್ನಾಯ ಗೋನಿಯೀಭೂತ ರಜತ ನಿತ್ಯ, ನಿಷ್ಕಾರ್ಧ, ನಿಷ್ಕಪಾದಾರ್ಧಾರತಮ ದ್ರವ್ಯದಾನೇನ ಅಹಮಾಚರಷ್ಯ ಹೀಗೆ ಸಂಕಲ್ಪ ಮಾಡತಕ್ಕದ್ದು. ಹಾಗೆಯೇ “ಏತಾವರಿ ನೇಷು ಗೃಹ್ಯಾಗಿ ವಿಚ್ಛೇದನ ಲುಪ್ತಸಾಯಂ ಪ್ರಾತರೌಪಾಸನ ಹೋಮದ್ರವ್ಯಂ ಲುರರ್ಶ ಪೌರ್ಣಮಾನ ಸ್ಥಾಲೀಪಾಕಾರಿ ಕರ್ಮಪರ್ಯಾಪ್ತ ಹಾರಾಜ್ಯದ್ರವ್ಯಂಚ ತನ್ನಿಷ್ಟ್ರಯಂವಾರಾತುಮಹಮುಜೇ.” ಬೇರೆ ಕೃಚ್ಛಪ್ರತಿನಿಧಿಯಿಂದ ಮಾಡುವದಾದಲ್ಲಿ ಅದರಂತೆ ಊಹಿಸಿ ಸಂಕಲ್ಪ ಮಾಡುವದು, ನಿಷ್ಕಪಾದವೆಂದರೆ ಇಪ್ಪತ್ತು ಗುಂಜಿಯ ತೂಕ ಇದರ ನಾಲ್ಕು ಪಟ್ಟಾದರೆ ಅಂದರೆ ಎಂಭತ್ತು ಗುಂಜಿ ತೂಕವಾದರೆ ಒಂದು “ನಿಷ್ಠವಾಗುವದು. ಹೀಗೆ ಸಂಕಲ್ಪಿಸಿ “ವಿಚ್ಛಿನ್ನಸ್ಯ ಗೃಹ್ಯಾಗೋ ಪುನಸಂಧಾನಂ ಕರಿಷ್ಯ ಹೀಗೆ ಸಂಕಲ್ಪಪೂರ್ವಕವಾಗಿ ತಮ್ಮ ತಮ್ಮ ಸೂತ್ರಾನುಸಾರವಾಗಿ ಗೃಹ್ಯಾಗ್ನಿಯನ್ನು ಸಾಧಿಸತಕ್ಕದ್ದು. “ಸರ್ವಾಧಾನಿ” (ಶೌತಾಗ್ನಿಯನ್ನು ಮಾತ್ರ ಇಟ್ಟುಕೊಂಡು ಗೃಹ್ಯಾಗ್ನಿಯನ್ನಿಟ್ಟುಕೊಳ್ಳದವನು)ಯಾದರೂ ಹೀಗೆಯೇ ಪುನಃಸಂಧಾನದಿಂದ ಗೃಹ್ಯಾಗ್ನಿಯನ್ನು ತ್ಪಾದಿಸಿ ಗರ್ಭಾಧಾನ ಪುಂಸವನಾದಿ ಹೋಮ ಮೊದಲಾದ ಹೋಮಗಳನ್ನು ಮಾಡತಕ್ಕದ್ದು. ಆಗ ಕೃಚ್ಛದ ಸಂಕಲ್ಪ ಮತ್ತು ಹೋಮಾದಿ ದ್ರವ್ಯದಾನ ಸಂಕಲ್ಪವನ್ನು ಮಾಡತಕ್ಕದ್ದಿಲ್ಲ. “ಗರ್ಭಾಧಾನ ಹೋಮಂಕರ್ತುಂ ಗ್ರಹಪುನಃ ಸಂಧಾನಂ ಕರಿಷ್ಯ” ಹೀಗೆ ಸಂಕಲ್ಪಿಸುವದು. ಗರ್ಭಾಧಾನಾಂತ್ಯದಲ್ಲಿ ಅಗ್ನಿಯನ್ನು ತ್ಯಜಿಸುವದು. ಅರ್ಧಾಧಾನಿಯ ವಿಷಯಕ್ಕೆ ಎರಡು ಪಕ್ಷಗಳಿವೆ. ಗೃಹಾಗ್ನಿಯಲ್ಲಿ ಸಾಯಂಪ್ರಾತರ್ಹೊಮವನ್ನು ಮತ್ತು ಸ್ಥಾಲೀಪಾಕವನ್ನೂ ಮಾಡತಕ್ಕದ್ದೆಂಬುದೊಂದು ಪಕ್ಷ ಗೃಹ್ಯಾಗ್ನಿಯನ್ನು ಬೇರೆ ಸಂರಕ್ಷಿಸುವದು ಹೊರತು ಅದರಲ್ಲಿ ಹೋಮಾದಿಗಳನ್ನು ಮಾಡತಕ್ಕದ್ದಲ್ಲ ಎಂಬುದಾಗಿ ಎರಡನೇ ಪಕ್ಷವು. ಮೊದಲನೇ ಪಕ್ಷದಲ್ಲಿ ಪೂರ್ವೋಕ್ತವಾದ ಹೋಮಾದಿ ದ್ರವ್ಯದಾನವನ್ನು ಮಾಡತಕ್ಕದ್ದು. ಹೋಮಮಾಡದಿರುವ ಎರಡನೇ ಪಕ್ಷದಲ್ಲಿ ಪ್ರಾಯಶ್ಚಿತ್ತವನ್ನು ಮಾತ್ರ ಮಾಡತಕ್ಕದ್ದು. ಹೊರತು ದ್ರವ್ಯದಾನದ ಅಗತ್ಯವಿಲ್ಲ. ಎರಡು ಹೆಂಡಿರುಳ್ಳವನು ಅಗ್ನಿದ್ವಯ ಸಂಸರ್ಗಕ್ಕಿಂತ ಮೊದಲು ಎರಡು ಅಗ್ನಿಗಳ ಉಚ್ಛೇದನವಾದಲ್ಲಿ ಆ ಎರಡೂ ಅಗ್ನಿಗಳನ್ನು ಕೂಡಿಸಿ ಅದರಲ್ಲಿ ಗರ್ಭಾಧಾನ ಹೋಮ ಮಾಡತಕ್ಕದ್ದು. ಅಗ್ನಿದ್ದಯ ಸಂಸರ್ಗಕ್ಕಿಂತ ಮೊದಲು ಏಕಾಗ್ನಿ ವಿಚ್ಛತ್ತಿಯಾದಲ್ಲಿ ಅಷ್ಟು ಮಾತ್ರ ಪ್ರಾಯಶ್ಚಿತ್ತ ಮಾಡಿ ಆ ಹೋಮದ್ರವ್ಯದಾನವನ್ನು ಮಾತ್ರ ಮಾಡತಕ್ಕದ್ದು. ಸ್ಥಾಲೀಪಾಕ ದ್ರವ್ಯವನ್ನು ದಾನಮಾಡತಕ್ಕದ್ದಿಲ್ಲ. ಎರಡನೇ ಅಥವಾ ಅನ್ನ ಪತ್ನಿಯರು ಸನ್ನಿಧಿಯಲಿಲ್ಲದಾಗ ಯಾವಳಲ್ಲಿ ಗರ್ಭಾಧಾನಮಾಡುವದಿದೆಯೋ ಅವಳ ಸಂಬಂಧವಾದ ಅಗ್ನಿವಿಚ್ಛೇದ ಪ್ರಾಯಶ್ಚಿತ್ತಾದಿಗಳಿಂದ ಗೃಹಾಗ್ನಿಯನ್ನುತ್ಪಾದಿಸಿ ಅದರಲ್ಲಿ ಹೋಮಮಾಡತಕ್ಕದ್ದು. ಈ ಎಲ್ಲ ಕಡೆಗಳಲ್ಲಿಯೂ ಪುನಃ ಸಂಧಾನದಲ್ಲಿ ಸ್ಥಾಲೀಪಾಕದ ಆರಂಭವಾಗಿದ್ದರೆ ಸ್ಟಾಲೀಪಾಕಾದಿ ದ್ರವ್ಯದಾನವು ಕೃತಾಕೃತವು. ಹೀಗೆ ಯಥೋಕ್ತರೀತಿಯಿಂದ ಗೃಹ್ಯಾಗ್ನಿಯನ್ನು ಸಿದ್ಧಪಡಿಸಿಕೊಂಡು ಗರ್ಭಾಧಾನ ಸಂಕಲ್ಪಾದಿಗಳನ್ನು ಮಾಡತಕ್ಕದ್ದು. “ಮಮ ಅಸ್ಕಾಂಭಾರ್ಯಾಯಾಂ ಜನಿತ್ಯವಾಣ ಸರ್ವಗರ್ಭಾಣಾಂ っとと ಧರ್ಮಸಿಂಧು ಬೀಜಗರ್ಭಸಮುದ್ಧಮೈನೋ ನಿಬರ್ಹಣದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಗರ್ಭಾಧಾನಾಖ್ಯಂ ಕರ್ಮಕರಿಷ್ಯ ಹೀಗೆ ಸಂಕಲ್ಪಿಸಿ ಇದರ ಅಂಗವಾಗಿ ಸ್ವಸ್ತಿವಾಚನ, ಮಾತೃಕಾಪೂಜಾ, ನಾಂದಿ ಶ್ರಾದ್ಧಾದಿಗಳನ್ನು ಮಾಡಿ ತಮ್ಮ ತಮ್ಮ ಗೃಹ್ಯಸೂತ್ರಾನುಸಾರ ಗರ್ಭಾಧಾನ ಸಂಸ್ಕಾರ ಮಾಡತಕ್ಕದ್ದು. ಈ ಗರ್ಭಾಧಾನ ಕ್ರಮಕ್ಕೆ “ಬ್ರಹ್ಮಾ“ದೇವತೆಯಾದ್ದರಿಂದ ಪುಣ್ಯಾಹವಾಚನಾಂತ್ಯದಲ್ಲಿ “ಕರ್ಮಾಂಗ ದೇವತಾ ಬ್ರಹ್ಮಾಪ್ರೀಯಂತಾಂ” ಹೀಗೆ ಉಚ್ಚರಿಸುವದು. ಔಪಾಸನಾಂಗವಾದಲ್ಲಿ “ಅಗ್ನಿ ಸೂರ್ಯಪ್ರಜಾಪತಯಶ್ಚ ಪ್ರೀಯಂತಾಂ” ಸ್ಥಾಲೀಪಾಕದ ಅಂಗವಾದಲ್ಲಿ “ಅಗ್ನಿ: ಪ್ರೀಯತಾಂ, ಎಂದು ಹೇಳತಕ್ಕದ್ದು. ಹೀಗೆ ಬೇರೆ-ಬೇರೆ ಕಡೆಗಳಲ್ಲಿ ಆಯಾಯ ಅಗ್ನಿಗಳನ್ನು ಗ್ರಂಥಾಂತರಗಳಿಂದ ತಿಳಿಯತಕ್ಕದ್ದು. ನಾಂದೀಶ್ರಾದ್ಧ ವಿಚಾರ ಗೌರ್ಯಾದಿ ಮಾತೃಕಾಪೂಜೆಯು ನಾಂದೀಶ್ರಾದ್ಧಾಂಗವಾದದ್ದು, ನಾಂದೀಶ್ರಾದ್ಧವಿಲ್ಲದಾಗ ಮಾತೃಕಾಪೂಜೆಯೂ ಇಲ್ಲ. ಅದರಲ್ಲಿ ಮೊದಲು ಮಾತೃಪಾರ್ವಣ, ನಂತರ ಸಪಕರಾದ ಮಾತಾಮಹಾದಿ ಪಾರ್ವಣ; ಹೀಗೆ ನಾಂದೀಶ್ರಾದ್ಧವು ಮೂರು ಪಾರ್ವಣಾತ್ಮಕವಾದದ್ದು. ತಾಯಿಯು ಜೀವಂತಳಾಗಿದ್ದು ಮಲತಾಯಿಯು ತೀರಿದ್ದರೂ ಮಾತೃಪಾರ್ವಣ ಲೋಪವು. ಹೀಗೆಯೇ ಮಾತಾಮಹಿಯು ಜೀವಿಸಿರುತ್ತಿದ್ದು ಮಾತಾಮಹಿಯ ಸವತಿಯು ಮೃತಳಾಗಿದ್ದರೆ ಮಾತಾಮಹಾದಿಗಳ ಉಚ್ಚಾರದಲ್ಲಿ “ಸಪಕ” ಎಂದು ಹೇಳತಕ್ಕದ್ದಿಲ್ಲ. ಹೀಗೆಯೇ ದರ್ಶಾದಿ ಶ್ರಾದ್ಧಗಳಲ್ಲಿಯೂ ಮಾತೃವು ಜೀವಿಸಿರುತ್ತಿದ್ದು ಸವತಿ ತಾಯಿಯು ಮೃತಳಾದಲ್ಲಿ ಆಗ ಪಿತ್ರಾದಿಗಳಿಗೆ “ಸಪಕತ್ವವಿರುವದಿಲ್ಲ. ಬಗ್ಗೆ ಈ ನಾಂದೀಶ್ರಾದ್ಧದಲ್ಲಿ ಸ್ವಧಾಸ್ಥಾನದಲ್ಲಿ “ಸ್ವಾಹಾ” ಎಂದು ಉಚ್ಚಾರವು. ಎಲ್ಲ ಕಾರ್ಯಗಳೂ ಉಪವೀತಿಯಾಗಿಯೇ ಮಾಡಲ್ಪಡತಕ್ಕವು. ಪ್ರತಿ ಪಾರ್ವಣ್ರಕ್ಕೆ ವಿಶ್ವೇದೇವರ ಎರಡೆರಡರಂತೆ ಬ್ರಾಹ್ಮಣರಿರತಕ್ಕದ್ದು. ದರ್ಭೆಯ ಸ್ಥಾನದಲ್ಲಿ “ದೂರ್ವ"ಯನ್ನುಪಯೋಗಿಸತಕ್ಕದ್ದು. ಈ ಕ್ರಮವು ವಿವಾಹಾದಿ ಮಂಗಲಕಾರ್ಯಾಂಗವಾದ ನಾಂದೀಶ್ರಾದ್ಧದಲ್ಲಿ ಎಂದು ತಿಳಿಯುವದು. ಯಜ್ಞಾದಿ ಕರ್ಮಾಂಗದಲ್ಲಿ ಮೂಲಸಹಿತವಾದ ದರ್ಭಗಳು ಗ್ರಾಹ್ಯಗಳು, ದೂರ್ವೆಯಾಗಲೀ ದರ್ಭೆಯಾಗಲೀ ಯುಗಸಂಖ್ಯೆಯಿಂದ ಗ್ರಾಹ್ಯವು ಕರ್ತೃವು ಉತ್ತರಾಭಿಮುಖನಾಗಿಯೂ, ಬ್ರಾಹ್ಮಣರು ಪೂರ್ವಮುಖರಾಗಿಯೂ ಇರತಕ್ಕದ್ದು. ಅಥವಾ ಕರ್ತನು ಪೂರ್ವಾಭಿಮುಖನಾಗಿ, ಬ್ರಾಹ್ಮಣರು ಉತ್ತರಾಭಿಮುಖರಿರತಕ್ಕದ್ದು. ಕಾಲವು ಪೂರ್ವಾಹ ಇರತಕ್ಕದ್ದು. ಪ್ರದಕ್ಷಿಣವಾಗಿ ಕರ್ಮಾಚರಣೆಯು ಆಧಾನಾಂಗವಾದ ನಾಂದಿಗೆ ಅಪರಾಹ್ನ ಕಾಲವು. ಪುತ್ರಜನ್ಮನಿಮಿತ್ತವಾಗಿ ಮಾಡುವ ನಾಂದೀಶ್ರಾದ್ಧವನ್ನು ರಾತ್ರಿಯಲ್ಲಾದರೂ ಮಾಡಬಹುದು. ಒಟ್ಟು ವಿಶ್ವೇದೇವಾರ್ಥ ಬ್ರಾಹ್ಮಣಸಹಿತ ಎಂಟು ಬ್ರಾಹ್ಮಣರನ್ನು ವರಿಸುವದು. ಅತ್ಯಶಕ್ತಿಯಲ್ಲಿ ನಾಲ್ವರಾದರೂ ಬ್ರಾಹ್ಮಣರಿರತಕ್ಕದ್ದು, ನಾಂದೀಶ್ರಾದ್ಧದಲ್ಲಿ “ಸತ್ಯವಸ್ತು ಸಂಜ್ಞಕ” ವಿಶ್ವೇದೇವತೆಗಳು. ಸೋಮಯಾಗ, ಗರ್ಭಾಧಾನ, ಪುಂಸವನ, ಸೀಮಂತ, ಆಧಾನ ಇತ್ಯಾದಿ ಕರ್ಮಾಂಗ ನಾಂದೀಶ್ರಾದ್ಧದಲ್ಲಿ “ಕ್ರತು-ದಕ್ಷ"ಸಂಜ್ಞಕ ವಿಶ್ವೇದೇವತೆಗಳು, ಗರ್ಭಾಧಾನಾದಿ ಸಂಸ್ಕಾರಗಳಲ್ಲಿ ಹಾಗೂ ಬಾವಿ-ಕರ ದೇವಪ್ರತಿಷ್ಠಾದಿ “ಪೂರ್ತಕರ್ಮ"ಗಳಲ್ಲಿ, ಮೊದಲು ಪ್ರಾರಂಭಿಸಿದ ಆಧಾನ ಪರಿಚ್ಛೇದ - ೩ ಪೂರ್ವಾರ್ಧ ೧೬೭ ಮೊದಲಾದವುಗಳಲ್ಲಿ, ಸಂನ್ಯಾಸಸ್ವೀಕಾರ, ಕಾಮವೃಷೋತ್ಸರ್ಗ, ಗೃಹಪ್ರವೇಶ, ತೀರ್ಥಯಾತ್ರಾ, ಶ್ರವಣಾಕರ್ಮ, ಸರ್ವಬಲೀ, ಆಶ್ವಯುಜೀ, ಆಗ್ರಯಣಾದಿ “ಪಾಕಸಂಸ್ಥೆ “ಇತ್ಯಾದಿಗಳ ಪ್ರಾರಂಭದಲ್ಲಿ ನಾಂದೀಶ್ರಾದ್ಧವು ಆವಶ್ಯಕವು. ಪುನರಾಧಾನ ಹಾಗೂ ಸೋಮಯಾಗಾದಿಗಳ ಹೊರತಾದ ಪದೇ ಪದೇ ಮಾಡತಕ್ಕ ಕರ್ಮ, ಅಷ್ಟರಾದಿ ಶ್ರಾದ್ಧ ಇತ್ಯಾದಿಗಳಲ್ಲಿ ನಾಂದೀಶ್ರಾದ್ಧವು ಆವಶ್ಯಕವಲ್ಲ. ಗರ್ಭಾಧಾನ, ಪುಂಸವನ, ಸೀಮಂತ, ಚೌಲ, ಮೌಂಜೀ, ವಿವಾಹ ಇವುಗಳ ಹೊರತಾದ ಸಂಸ್ಕಾರಗಳು, ಶ್ರವಣಾಕರ್ಮ ಇತ್ಯಾದಿಗಳಲ್ಲಿ ನಾಂದೀಶ್ರಾದ್ಧವು ಕೃತಾಕೃತವು. ಜಾತಕರ್ಮಾಂಗ ಹಾಗೂ ಪುತ್ರಜನ್ಮನಿಮಿತ್ತಕ ನಾಂದೀ ಶ್ರಾದ್ಧಗಳನ್ನು ಪ್ರಸ್ಪತ್ಯೇಕವಾಗಿ ಮಾಡತಕ್ಕದ್ದು. ಜನ್ಮಕಾಲದಲ್ಲಿಯೇ ಜಾತಕರ್ಮ ಮಾಡುವ ಸಂದರ್ಭದಲ್ಲಿ ಪುತ್ರಜನ್ಮ ನಿಮಿತ್ತಕ ಹಾಗೂ ಜಾತಕರ್ಮನಿಮಿತ್ತಕ ನಾಂದೀಶ್ರಾದ್ಧವನ್ನು ತಂತ್ರಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ಸಮಾನ ತಂತ್ರದಿಂದ ಒಂದನ್ನೇ ಮಾಡತಕ್ಕದ್ದು. ನಾಮಕರಣದಿಂದ ಕೂಡಿ ಜಾತಕರ್ಮ ಮಾಡುವದಿದ್ದಲ್ಲಿ ಪುತ್ರಜನ್ಮ ನಿಮಿತ್ತಕವಾದ ನಾಂದಿಯನ್ನು ಜನ್ಮ ಕಾಲದಲ್ಲಿಯೇ ಹಿರಣ್ಯದಿಂದ ಮಾಡಿ ಕರ್ಮಾಂಗ ನಾಂದೀಶ್ರಾದ್ಧವನ್ನು ನಾಮಕರಣ ಕಾಲದಲ್ಲಿ ಮಾಡುವದು. ಜನ್ಮಕಾಲದಲ್ಲಿ ಮಾಡದಿದ್ದರೆ ನಾಮಕರ್ಮಕಾಲದಲ್ಲೇ ಮಾಡತಕ್ಕದ್ದು. ’ “ಪುತ್ರಕರ್ಮನಿಮಿತ್ತಕಂ ಜಾತಕರ್ಮನಾಮಕರ್ಮಾಂಗಂಚ ವೃದ್ಧಿ ಶ್ರಾದ್ಧಂ ತಂತ್ರಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ಒಂದನ್ನೇ ಮಾಡತಕ್ಕದ್ದು. ಹೀಗೆ ಚೌಲಾದಿಗಳಿಂದ ಕೂಡಿ ಜಾತಕರ್ಮಾದಿಗಳನ್ನು ಮಾಡುವಾಗ “ಪುತ್ರಜನ್ಮ ನಿಮಿತ್ತಕಂ ಚೌಲಾಂತ ಸಂಸ್ಕಾರಾಂಗಂಚ ನಾಂದೀಶ್ರಾದ್ಧಂ ತಂತ್ರಣ ಕರಿಷ್ಟೇ ಹೀಗೆ ಸಂಕಲ್ಪಿಸಿ ಅದರಂತೆ ಮಾಡುವದು. ಹೀಗೆಯೇ ಕೂಡಿಮಾಡತಕ್ಕ ಚೌಲಾದಿ ಬೇರೆ ಕರ್ಮಗಳಲ್ಲಿಯೂ ನಾಂದೀಶ್ರಾದ್ಧವನ್ನು ಒಂದೇ ಮಾಡತಕ್ಕದ್ದು; ಹೊರತು ಪ್ರತಿಕರ್ಮಕ್ಕೂ ಪ್ರತ್ಯೇಕವಾಗಿ ಮಾಡತಕ್ಕದ್ದಿಲ್ಲ. ಅವಳಿ ಜವಳಿ ಪುತ್ರರ ಸಂಸ್ಕಾರಗಳನ್ನು ಏಕಕಾಲದಲ್ಲಿ ಮಾಡುವಾಗ ಹೀಗೆಯೇ ಮಾಡತಕ್ಕದ್ದು. ಋಕ್ ಶಾಖೆಯವರೂ, ಕಾತ್ಯಾಯನ(ಕಾತೀಯ)ರೂ “ಪಿತೃಪಿತಾಮಹ ಪ್ರಪಿತಾಮಹಾಃ” ಎಂದು ಪಿತೃಪೂರ್ವಕವಾಗಿ ಉಚ್ಚರಿಸುವದು. ಅನ್ಯ ಶಾಖೀಯರು “ಪ್ರಪಿತಾಮಹ, ಪಿತಾಮಹ, ಪಿತರ” ಹೀಗೆ ಪ್ರಪಿತಾಮಹಾದಿಯಾಗಿ ಉಚ್ಚರಿಸುವದು. ಮಾತೃಪಾರ್ವಣದಲ್ಲಿ ನಾಂದೀಮುಖಾಃ ನಾಂದೀಮುಖ್ಯಃ ಹೀಗೆ ಉಚ್ಚಾರದಲ್ಲಿ ವಿಕಲ್ಪವಿದೆ. ನಾಂದೀ ಮುಖದ ಶಬ್ದದ ವಿಷಯದಲ್ಲಿ ಜೀಷ್ ಪ್ರತ್ಯಯ ವಿಕಲ್ಪವಿರುವದರಿಂದ ಹೀಗೆ ನಾಂದೀಮುಖಾ, ನಾಂದೀಮುಖ್ಯ: ಎಂಬ ಎರಡೂವಿಧ ಉಚ್ಚಾರವು ಪ್ರಚಾರದಲ್ಲಿದೆ. ಅನಾದಿಸಂಜ್ಞಾತ್ವದಿಂದ “ನಖಮುಖಾತ್ಕಂಜ್ಞಾಯಾಂ” ಎಂಬ ಸೂತ್ರದಂತೆ ನಿಷೇಧಕ್ಕವಕಾಶವಿಲ್ಲವೆಂದು ಪುರುಷಾರ್ಥ ಚಿಂತಾಮಣಿಕಾರರ ಹೇಳಿಕೆ (ಜೀಪ್ ಪ್ರತ್ಯಯಬಂದರೆ ಮುಖಶಬ್ದವು ಈಕಾರಾಂತವಾಗಿ “ನಾಂದೀಮುಖ್ಯ:” ಹೀಗೆ ಬಹುವಚನದಲ್ಲಾಗುವದು) ನಾಂದೀಶಾದಕರ್ತನು “ಜೀವಶ್ಚಿತೃಕ (ತಂದೆ ಜೀವಿಸಿರುವವ)ನಾದರೆ ಪಿತೃ ಮೊದಲಾದ ವರ್ಗಗಳಲ್ಲಿ ಯಾವನಾದರೂ ಜೀವಿಸುತ್ತಿರುವ ಆ ವರ್ಗವನ್ನು ಬಿಡತಕ್ಕದ್ದು. ಈ ನ್ಯಾಯಕ್ಕನುಸರಿಸಿ ತಂದೆಯು ಜೀವಂತನಾಗಿದ್ದಲ್ಲಿ ತನ್ನ ಪುತ್ರಾದಿಗಳ ಸಂಸ್ಕಾರದಲ್ಲಿ ಮಾತ್ರ, ಮಾತಾಮಹ ಈ ಎರಡು ಪಾರ್ವಣಯುಕ್ತವಾಗಿ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು, ತಾಯಿಯೂ ಬದುಕಿದ್ದರೆ ಬರೇ ಮಾತಾಮಹ ಪಾರ್ವಣ ಒಂದರಿಂದಲೇ ಮಾಡತಕ್ಕದ್ದು, ಮಾತಾಮಹನು ೧೮ " ಧರ್ಮಸಿಂಧು ಬದುಕಿದ್ದರೆ ಮಾತೃಪಾರ್ವಣ ಮಾತ್ರವೇ. ಕೇವಲ ಮಾತೃಪಾರ್ವಣ ಮಾಡುವಾಗ ವಿಶ್ವೇದೇವತೆಗಳ ಅಗತ್ಯವಿಲ್ಲ. ಮೂರುವರ್ಗದ ಆದಿಗಳಾದ ಮಾತೃ-ಪಿತೃ-ಮಾತಾಮಹ- ಇವರು ಬದುಕಿದ್ದರೆ ಪುತ್ರಾದಿಗಳ ಸಂಸ್ಕಾರಗಳಲ್ಲಿ ನಾಂದೀಶ್ರಾದ್ಧದ ಲೋಪವೇ ಉಚಿತವು, ಇನ್ನು ದ್ವಿತೀಯ ವಿವಾಹ, ಆಧಾನ ಪುತ್ರಷ್ಟಿ ಸೋಮಯಾಗಾದಿ ಸ್ವಸಂಸ್ಕಾರಗಳಲ್ಲಿ ತಂದೆಯು ಯಾರಿಗೆ ಪಿಂಡಾದಿಗಳನ್ನು ಕೊಡುತ್ತಾನೋ ತಾನೂ ಅವರಿಗೇ ಕೊಡುವದು. ಹಾಗೆಯೇ ತಾಯಿ-ಮಾತಮಹರು ಮೃತರಾಗಿದ್ದು ಪಿತೃವು ಜೀವಿಸಿರುತ್ತಿದ್ದರೆ ತನ್ನ ಸಂಸ್ಕಾರದಲ್ಲಿ ಪಿತುಃ ಮಾತೃಪಿತಾಮಹಿ ಪ್ರಪಿತಾಮಹ: “ಪಿತುಃ ಪಿತೃಪಿತಾಮಹ ಪ್ರಪಿತಾಮಹಾಃ” ಎಂದು ಪಾರ್ವಣ ತ್ರಯೋದ್ದೇಶದಿಂದ ಶ್ರಾದ್ಧವನ್ನು ಮಾಡತಕ್ಕದ್ದು. ತಂದೆ ಮತ್ತು ಪಿತಾಮಹ ಇವರಿಬ್ಬರೂ ಜೀವಿಸಿರುವಾಗ ಸ್ವಸಂಸ್ಕಾರದಲ್ಲಿ ಪಿತಾಮಹನ “ಮಾತೃಪಿತಾಮಹೀ ಪ್ರಪಿತಾಮಹ” ಹೀಗೆ ಉದ್ದೇಶಿಸತಕ್ಕದ್ದು. ಹೀಗೆಯೇ ಪ್ರಪಿತಾಮಹನ ವಿಷಯದಲ್ಲಿಯೂ ತಿಳಿಯತಕ್ಕದ್ದು, ತಂದೆಗೆ ಮಾತೃಮೊದಲಾದವರು ಜೀವಿಸಿರುತ್ತಿದ್ದರೆ ಆ ಪಾರ್ವಣವೇ ಲೋಪವು. ಈ ವಿಷಯದಲ್ಲಿ ಎರಡು ಪಕ್ಷಗಳು ಕಂಡುಬರುತ್ತವೆ. “ಯೇಭೇಏವಪಿತಾದದ್ಯಾತ್” ಇತ್ಯಾದಿ ವಚನದಂತೆ ತಂದೆಯು ಯಾರಿಗೆ ಅಂದರೆ ಯಾವ ವರ್ಗಕ್ಕೆ ಕೊಡುತ್ತಾನೋ ಆ ವರ್ಗಕ್ಕೆ ತಾನು ಕೊಡತಕ್ಕದ್ದು. ಇದೊಂದು ಪಕ್ಷ. ಇನ್ನು ಆ ವರ್ಗದ ಆದಿ ಪಿತೃವು ಜೀವಿಸಿರುತ್ತಿದ್ದರೆ ಆ ದ್ವಾರವೇ ಲೋಪವು ! ಅಂದರೆ ಆ ವರ್ಗಕ್ಕೆ ಕೊಡತಕ್ಕದ್ದಿಲ್ಲ) ಇದೊಂದು ಪಕ್ಷವು. ಈ ಎರಡು ಪಕ್ಷಗಳನ್ನು ಸ್ವಸಂಸ್ಕಾರ ಸ್ವಪುತ್ರಾದಿಗಳ ಸಂಸ್ಕಾರ ಇವುಗಳ ಭೇದದಿಂದ ವ್ಯವಸ್ಥೆಗೊಳಿಸುವದು ಕ್ರಮಪ್ರಾಪ್ತ. ಕೆಲವರು ಈ ಎರಡು ಪಕ್ಷಗಳು ಐಚ್ಛಿಕ (ಅಂದರೆ ಇಚ್ಛೆಯಿದ್ದಂತೆ ಯಾವಪಕ್ಷದಂತೆಯಾದರೂ ಮಾಡಬಹುದು) ವೇ ಹೊರತು ವ್ಯವಸ್ಥೆಗೊಳಪಡಿಸುವ ಪಕ್ಷಗಳಲ್ಲ ಎಂದೆನ್ನುವರು. ತಂದೆಯು ಮೃತನಾಗಿದ್ದು ಮಾತೃ-ಮಾತಾಮಹರು ಜೀವಿಸಿರುವಾಗ ಪಿತೃಪಾರ್ವಣ ಒಂದರಿಂದಲೇ ನಾಂದಿ ಶ್ರಾದ್ಧವು ಸಿದ್ಧಿಸುವದು. ಸಮಾವರ್ತನೆಯನ್ನು ಬ್ರಹ್ಮಚಾರಿಯು ಸ್ವತಃ ಮಾಡತಕ್ಕದ್ದಿದ್ದರೂ ಅದರ ಅಂಗಭೂತವಾದ ನಾಂದೀ ಶ್ರಾದ್ಧದಲ್ಲಿ ತಂದೆ ಅಥವಾ ಅವನ ಅಭಾವದಲ್ಲಿ ಶ್ರೇಷ್ಠ ಭ್ರಾತೃ ಇತ್ಯಾದಿಗಳಿಗೆ ಅಧಿಕಾರವಿದೆ, ಎಂದು ಕೆಲವರನ್ನುವರು. ಆಗ ತಂದೆಯು ತನ್ನ ಪುತ್ರನ ಸಮಾವರ್ತನೆಯಲ್ಲಿ ತನ್ನ ಪಿತೃಗಳನ್ನುದ್ದೇಶಿಸಿ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು, ಸಂಸ್ಕಾರ ಕರ್ತನಾದ ತಂದೆಗೆ ತಂದೆಯು ಜೀವಿಸಿರುತ್ತಿದ್ದರೆ ಅದು ಪುತ್ರಸಂಸ್ಕಾರವಾದುದರಿಂದ ಆಗ “ದ್ವಾರಲೋಪ” ಪಕ್ಷವೇ ಯುಕ್ತವೆಂದು ತೋರುತ್ತದೆ. ಸಂಸ್ಕಾರ್ಯನ ತಂದೆಯು ಪ್ರವಾಸದಲ್ಲಿರುವಾಗ ಅಥವಾ ಯಾವದಾದರೊಂದು ಕಾರಣದಿಂದ ಅಸನ್ನಿಹಿತನಾದಾಗ ಕರ್ತೃಗಳಾದ ಭ್ರಾತೃ ಮೊದಲಾದವರು “ಮಾಣವಕಸ್ಯ ಪಿತುಃ ಮಾತೃಪಿತಾಮಹೀ ಪ್ರಪಿತಾಮಹ:” ಹೀಗೆ ಉಚ್ಚರಿಸಿ ಶ್ರಾದ್ಧವನ್ನು ಮಾಡತಕ್ಕದ್ದು, ಮೃತಪಿತೃಕ (ಸತ್ತಿರುವ ತಂದೆಯುಳ್ಳ) ಮಾಣವಕನಿಗೆ ಸಮಾವರ್ತನೆಯಲ್ಲಿ ತಂದೆಯ ಅಣ್ಣ, ತಮ್ಮ ಮೊದಲಾದವರು ಕರ್ತೃಗಳಾದಾಗ “ಅಸ್ಕ ಮಾಣವಕಸ್ಯ ಮಾತೃಪಿತಾಮಹೀ” ಇತ್ಯಾದಿ ಉಚ್ಚರಿಸತಕ್ಕದ್ದು, ಪಿತೃವೃ-ಬ್ರಾತೃ ಇತ್ಯಾದಿಗಳ ಅಭಾವದಲ್ಲಿ ಸ್ವತಃ ತಾನೇ ತನ್ನ ಪಿತೃಗಳಿಗೆ ಕೊಡತಕ್ಕದ್ದು. (ನಾಂದೀಶ್ರಾದ್ಧವನ್ನು ಮಾಡಿಕೊಳ್ಳುವದು) ಯಾಕಂದರೆ ಉಪನಯನವಾಗಿರುವಿಕೆಯಿಂದ ಕರ್ಮಾಧಿಕಾರವಿದ್ದೇ ಇದೆ. ವಿವಾಹ ವಿಷಯದಲ್ಲಿಯೂ ಹೀಗೆಯೇ. ಮೃತಪಿತೃಕನಾದವನಿಗೆ ಚೌಲೋಪನಯನಾದಿಗಳನ್ನುಪರಿಚ್ಛೇದ • ೩ ಪೂರ್ವಾರ್ಧ OLE ತಂದೆಯ ಅಣ್ಣ-ತಮ್ಮ ಮೊದಲಾದವರು ಮಾಡುವಾಗ “ಅಸಂಸ್ಕಾರ್ಯಸ್ಯ ಪಿತೃ-ಪಿತಾಮಹ” ಇತ್ಯಾದಿ ಉಚ್ಚರಿಸಿ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು. ತಂದೆಯು ಜೀವಿಸುತ್ತಿದ್ದು ಸನ್ನಿಧಿಯಲ್ಲಿಲ್ಲದಾಗ ಮಾವ ಮೊದಲಾದವರು ಕರ್ತೃಗಳಾದರೂ “ಅಸ್ಯ ಸಂಸ್ಕಾರ್ಯಸ್ಯ ಪಿತು” (ಅಂದರೆ ತಂದೆಯ) ಜನಕಾದಿಗಳನ್ನುದ್ದೇಶಿಸಿ ಮಾಡತಕ್ಕದ್ದು. ಇಂಥ ಪ್ರಸಂಗದಲ್ಲಿ ಮಾತೃ ಮೊದಲಾದವರು ಮೃತರಾದರೂ ಸಂಸ್ಕಾರ್ಯನ ತಾಯಿ ಮೊದಲಾದವರು ಮೃತರಾಗಿದ್ದರೂ ‘ಅಸ್ಮ ಸಂಸ್ಕಾರ್ಯಕ್ಕೆ ಮಾತೃ ಇತ್ಯಾದಿ ಉಚ್ಚರಿಸಿ ಮಾಡತಕ್ಕದ್ದಲ್ಲ. ಹೀಗೆ ಸಂಕ್ಷೇಪವು. ವೃದ್ಧಿ ಶ್ರಾದ್ಧದಲ್ಲಿ ಕರ್ತವ್ಯ ನಾಂದೀಶ್ರಾದ್ಧದಲ್ಲಿ ಪಿಂಡಪ್ರದಾನವು ಕುಲಧರ್ಮಾನುಸಾರ ವೈಕಲ್ಪಿಕ (ಕೃತಾಕೃತ) ವು. ಪಿಂಡಕ್ಕೆ ಮೊಸರು, ಜೇನುತುಪ್ಪ, ಬೊಗರಿ, ದ್ರಾಕ್ಷ, ನಲ್ಲಿ ಇವುಗಳನ್ನು ಮಿಶ್ರಮಾಡುವದು. ದಕ್ಷಿಣೆಯಲ್ಲಿ ದ್ರಾಕ್ಷಿ, ನೆಲ್ಲಿಗಳ ಮಿಶ್ರಣವು. ಪ್ರಥಮಾ ವಿಭಕ್ತಿಯಿಂದ ಸಂಕಲ್ಪವು. ಎಲ್ಲ ಉಚ್ಚಾರದಲ್ಲಿ ಸಂಬಂಧ, ನಾಮ, ಗೋತ್ರಗಳನ್ನುಚ್ಚರಿಸುವದಿಲ್ಲ. ಮಾಲತಿ, ಮಲ್ಲಿಗೆ, ಕೇತಕೀ, ಕಮಲ ಇವುಗಳ ಮಾಲೆಯನ್ನು ಕೊಡುವದು. ಕೆಂಪುಹೂವುಗಳು ನಿಷಿದ್ಧಗಳು. ಅದರಲ್ಲಿ ಭಾಗವಹಿಸಿದವರೆಲ್ಲರೂ ಕುಂಕುಮ, ಚಂದನಾದಿಗಳಿಂದ ಸಿಂಗರಿಸಿಕೊಳ್ಳತಕ್ಕದ್ದು. ನಾಂದೀಶ್ರಾದ್ಧಾರಂಭವಾದ ನಂತರ ಸಾಗ್ನಿಕ ಮತ್ತು ನಿರಗ್ನಿಕರು ಭಿನ್ನಪಾಕದಿಂದ ವೈಶ್ವದೇವವನ್ನು ಮಾಡತಕ್ಕದ್ದು. ಇದು ಎಲ್ಲ ಶಾಖೆಯವರಿಗೂ ಸಮಾನವು. ಒಂದೇ ಕಾಲದಲ್ಲಿ ಇಬ್ಬರಿಬ್ಬರು ಬ್ರಾಹ್ಮಣರನ್ನು ನಿಮಂತ್ರಣ ಮಾಡತಕ್ಕದ್ದು. “ಭವಾ ಕ್ಷಣಪ್ರಿಯಾಂ ಓಂ ತಥಾ ಪ್ರಾಪ್ಪುತಾಂ ಭವಂತ ಪ್ರಾಪ್ಪುವಾಮ” ಹೀಗೆ ದ್ವಿವಚನದಿಂದ ಉಕ್ತಿಯು, ಅರ್ಥ್ಯಪಾತ್ರವನ್ನು “ಶಂನೋದೇವಿ” ಮಂತ್ರದಿಂದ ಅಭಿಮಂತ್ರಿಸಿ ಗೋಧಿಯನ್ನು ಚಲ್ಲುವದು. “ಯವೋಸಿ ಸೋಮ ದೇವ ಗೋಸವೇ ದೇವನಿರ್ಮಿತಃ ಪ್ರತ್ನವಳ್ಳಿ: ಪ್ರತ್ತ ಪುಷ್ಪಾ ನಾಂದೀಮುಖಾನ್ ಪಿತೃನಿಮಾನ್ ಲೋಕಾನ್ ಪ್ರೀಣಯಾಹಿನ ಸ್ವಾಹಾ ನಮಮ” ಇದು ಪಿತೃಸಂಬಂಧವಾದ ಮಂತ್ರವು. ಗಂಧಾದಿಗಳನ್ನು ಎರಡೆರಡಾವರ್ತಿ ಕೊಡತಕ್ಕದ್ದು. ಪಾಣಿಹೋಮದಲ್ಲಿ “ಅಗ್ನಯೇ ಕವ್ಯವಾಹನಾಯಸ್ವಾಹಾ| ಸೋಮಾಯ ‘ಮಾಹಾ” ಹೀಗೆ ಹೇಳತಕ್ಕದ್ದು. ನಾಂದೀಶ್ರಾದ್ಧದಲ್ಲಿ ಅಪಸವ್ಯ, ತಿಲ ಇವುಗಳನ್ನುಪಯೋಗಿಸತಕ್ಕದ್ದಿಲ್ಲ. ಪಿತೃತೀರ್ಥದಿಂದ ಕೊಡತಕ್ಕದ್ದಿಲ್ಲ. ಪಾವಮಾನೀ, ಶಂವತೀ, ಶಕುನಿಸೂಕ್ತ, ಸ್ವಸ್ತಿ ಸೂಕ್ತ ಇವುಗಳ ಶ್ರವಣ ಮಾಡಿಸುವದು. “ಮಧುವಾತಾಋತಾಯತೇ” ಈ ಮಂತ್ರದ ಸ್ಥಾನದಲ್ಲಿ ಉಪಾಸ್ಟ್ಗಾಯ” ಈ ಐದು ಮಂತ್ರಗಳನ್ನು ಹೇಳತಕ್ಕದ್ದು. “ಅಕ್ಷಂ ನಮೀಮದಂತ” ಈ ತೃಪ್ತಿಪ್ರಶ್ನದ ಸ್ಥಾನದಲ್ಲಿ “ಸಂಪನ್ನಂದ್ಯವೇರುಚಿತಂ” ಹೀಗೆ ತೃಪ್ತಿಪ್ರಶ್ನೆಯು. ಪೂರ್ವದಿಕ್ಕಿಗೆ ತುದಿಮಾಡಿ ಅವುಗಳಲ್ಲಿ ಅಥವಾ ದೂರ್ವೆಗಳಲ್ಲಿ ಒಬ್ಬೊಬ್ಬರಿಗೆ ಎರಡೆರಡು ಪಿಂಡಗಳನ್ನು ಕೊಡತಕ್ಕದ್ದು. “ಅಕ್ಷಯ"ಸ್ಥಾನದಲ್ಲಿ “ನಾಂದೀಮುಖಾಃ ಪಿತರಃ ಪ್ರೀಯಂತಾಂ” ಹೀಗೆ ಹೇಳತಕ್ಕದ್ದು. ಸ್ವಧಾವಾಚನ ಸ್ಥಾನದಲ್ಲಿ “ನಾಂದೀಮುಖಾನ್ ಪಿತೃನ್ ವಾಚಯಿಷ್ಟೇ” ಹೀಗೆ ಹೇಳತಕ್ಕದ್ದು, “ಸ್ವಧಾ"ಶಬ್ದವನ್ನು ಹೇಳಬಾರದು. “ಮೂಷವಾಜಿನಂ’ ಎಂದು ಬ್ರಾಹ್ಮಣ ವಿಸರ್ಜನ ಮಾಡತಕ್ಕದ್ದು, ಕೆಲವರು ಋಗ್ವದಿಗಳಿಗೆ ನಾಂದಿ ಶ್ರಾದ್ಧ ಮುಗಿದ ನಂತರ ವೈಶ್ವದೇವಕಾರ್ಯವಾಗತಕ್ಕದ್ದೆಂದು ಹೇಳುವರು. ನಾಂದೀಶ್ರಾದ್ಧದಲ್ಲಿ ಶ್ರಾದ್ಧಾಂಗ ತರ್ಪಣ 020 ಧರ್ಮಸಿಂಧು ಇಲ್ಲ. ಈ ಶ್ರಾದ್ಧದಲ್ಲಿ ಆಹಿತಾಗ್ನಿಯಾದವನು ಪಿಂಡಪ್ರದಾನ ಮಾಡತಕ್ಕದ್ದು. ತಂದೆಯ ಮಾತ್ರಾದಿವರ್ಗ ತ್ರಯೋದ್ದೇಶದಿಂದ ನಾಂದೀಶ್ರಾದ್ಧ ಮಾಡುವದಿದ್ದಲ್ಲಿ ತುರ್ಮಾತಾಮಹೀಶೈವ ತಥೈವಪ್ರಪಿತಾಮಹೀ” ಈ ಶ್ಲೋಕ ಪಠನ ಮಾಡತಕ್ಕದ್ದು, ದ್ವಾರಲೋಪ ಪಕ್ಷದಲ್ಲಿ ಯಾವ ಪಾರ್ವಣ ಲೋಪವಾಗುವದೋ ಆ ಪಾರ್ವಣ ವಿಷಯಕವಾದ ಶ್ಲೋಕದ ಆ ಭಾಗವು ಲೋಪವಾಗುವದೆಂದು ಊಹಿಸುವದು. ಕೇವಲ ಮಾತೃಪಾರ್ವಣದಿಂದ ಮಾಡುವಾಗ ವಿಶ್ವೇದೇವತೆಗಳ ಅಗತ್ಯವಿಲ್ಲ. ಇಲ್ಲಿ ಬರೇ ಸ್ತ್ರೀ ಅಂಗವಾಗಿ “ಏತಾಭವಂತು ಸುಪ್ರೀತಾ” ಹೀಗೆ ಊಹಿಸಿಕೊಳ್ಳುವದು. ಸಾಂಕಲ್ಪ ವಿಧಿಯಿಂದ ಸಂಕ್ಷಿಪ್ತ ನಾಂದೀಶ್ರಾದ್ಧ ಪ್ರಯೋಗವನ್ನು ಪ್ರಯೋಗರತ್ನಾಕರಾದಿಗಳಲ್ಲಿ ನೋಡತಕ್ಕದ್ದು. ಹೀಗೆ ನಾಂದೀಶ್ರಾದ್ಧ ವಿಚಾರವು. ಗರ್ಭಾಧಾನಾಂಗವಾಗಿ ಪುಣ್ಯಾಹವಾಚನ, ಕ್ರತುದಕ್ಷಸಂಜ್ಞಕ ವಿಶ್ವದೇವಯುತವಾದ ನಾಂದೀಶ್ರಾದ್ಧ ಇವುಗಳನ್ನು ಮಾಡಿ ಶಾಖಾನುಸಾರ ಗರ್ಭಾಧಾನ ಸಂಸ್ಕಾರವನ್ನು ಮಾಡತಕ್ಕದ್ದು. ಆಶ್ವಲಾಯನರು ಗೃಹಾಗ್ನಿಯಲ್ಲಿ ಪ್ರಾಜಾಪತ್ಯ ಚರುವನ್ನು ಹೋಮಿಸಿ, ವಿಷ್ಣು ಸಲುವಾಗಿ ಆರು, ಪ್ರಜಾಪತಿಗಾಗಿ ಒಂದು ಹೀಗೆ ಆಜ್ಯದಿಂದ ಹೋಮಿಸಿ ಜವ, ಆಗುಪಸ್ಥಾನ, ನಾಸಿಕದಲ್ಲಿ ರಸವನ್ನು ಹಾಕುವದು; ಮೊದಲಾದವುಗಳನ್ನು ಮಾಡತದ್ದು. ಮೂರುಬೆರಳಿನಿಂದ ಯೋನಿಯನ್ನು ಸ್ಪರ್ಶಿಸಿ “ವಿಷ್ಟುರ್ಯೊನಿಂಕಲ್ಪಯತು ಈ ಮಂತ್ರವನ್ನು ಜಪಿಸಿ ವ್ರತಸ್ಥನಾಗಿ ಗರ್ಭಾಧಾನಮಾಡತಕ್ಕದ್ದು. ಇದರಿಂದ ನಿಶ್ಚಿತವಾಗಿ ಸುಪುತ್ರನು ಜನಿಸುವನು. ಹೀಗೆ ಕಾರಿಕಾವಚನವಿದೆ. ಇದರಂತೆ “ನೇಜಮೇಷ"ಇತ್ಯಾದಿ ಜಪವನ್ನೂ ಮಾಡತಕ್ಕದ್ದು. ಸರ್ವಥಾ ಹೋಮ ಅಸಂಭವವಾದಲ್ಲಿ ‘ಅಶ್ವಗಂಧಾ’ ರಸವನ್ನು ‘ಉದೀರ್ಷ್ಟಾತ’ ಈ ಮಂತ್ರದಿಂದ ಬಲದ ಮೂಗಿನ ಸೊಳ್ಳೆಯಲ್ಲಿ ಹಾಕಿ ಸ್ತ್ರೀ ಗಮನವನ್ನು ಮಾಡತಕ್ಕದ್ದು. ಗರ್ಭಾಧಾನ ಸಂಸ್ಕಾರವಾಗದೆ ಸ್ತ್ರೀ ಗಮನ ಮಾಡಿ ಗರ್ಭೋತ್ಪತ್ತಿಯಾದರೆ ಅದರ ಸಲುವಾಗಿ ಪ್ರಾಯಶ್ಚಿತ್ತ ಮಾಡಿ, ಗೋದಾನಾದಿಗಳನ್ನು ಮಾಡಿ ಪುಂಸವನ ಸಂಸ್ಕಾರವನ್ನು ಮಾಡತಕ್ಕದ್ದು. ಇನ್ನು ಮೈಥುನಾಂತದಲ್ಲಿ ಋತುಗಮನದಿಂದ ಗರ್ಭವುಂಟಾಗಬಹುದೆಂಬ ಶಂಕೆಯಿಂದ ಸ್ನಾನಮಾಡತಕ್ಕದ್ದು. ಋತುರಾತ್ರಿ ಹೊರತಾದ ದಿನಗಳಲ್ಲಿ ಗಮನಮಾಡಿದಲ್ಲಿ ಮಲ-ಮೂತ್ರ ವಿಸರ್ಜನೆಯಂತೆ ಶೌಚಾಚಾರ ಮಾಡತಕ್ಕದ್ದು ಎಂದು ಸ್ಮೃತಿವಾಕ್ಯವಿದೆ. ಆದುದರಿಂದ ಶೌಚಾಚಾರಮಾಡಿ ಆಚಮನ ಮಾಡತಕ್ಕದ್ದು. ತೈಲಾಭ್ಯಂಗ ಮಾಡಿದವನು, ಶಶ್ರುಕ್ಷೌರ (ಮುಖಕ್ಷೌರ) ಮಾಡಿಕೊಂಡವನು, ಮೈಥುನ ಮಾಡಿದವನು, ಮಲ-ಮೂತ್ರಗಳನ್ನು ಮಾಡಿದವನು ಆಚಮನ ಮಾಡದಿದ್ದರೆ ಅಹೋರಾತ್ರಿ ಉಪವಾಸದಿಂದ ಶುದ್ಧನಾಗುವನೆಂದು ವಚನವಿದೆ. ಸ್ತ್ರೀಯರಿಗೆ ಈ ನಿಯಮವಿಲ್ಲ. “ಹಾಸಿಗೆಯಿಂದ ಎದ್ದ ಸ್ತ್ರೀಯ ಶುಚಿಯಾಗಿರುವಳು. ಪುರುಷನು ಮಾತ್ರ ಅಶುಚಿಯಾಗುವನು” ಹೀಗೆ ಉಕ್ತಿಯಿದೆ. ಇಲ್ಲಿಗೆ ಗರ್ಭಾಧಾನಾದುಪಯೋಗಿ ನಿರ್ಣಯವು ಮುಗಿಯಿತು. ನಾರಾಯಣ ಬಲಿ ಹೀಗೆ ಗರ್ಭಾಧಾನ ಸಂಸ್ಕಾರವಾದರೂ ಗರ್ಭೋತ್ಪತ್ತಿಯಾಗದಿದ್ದರೆ ಅಥವಾ ಮೃತಸಂತತಿಯಾಗುತ್ತಿದ್ದರೆ ಆಗ ಪ್ರತಿಬಂಧಕವಾದ ಪ್ರೀತೋಪದ್ರವ ನಿವಾರಣೆಗಾಗಿ ನಾರಾಯಣಬಲಿ L ಪರಿಚ್ಛೇದ - ೩ ಪೂರ್ವಾರ್ಧ 020 ಹಾಗೂ ನಾಗಬಲಿಯನ್ನು ಮಾಡತಕ್ಕದ್ದು. ನಾರಾಯಣ ಬಲಿಯನ್ನು ಶುಕಾದಶೀ; ಪಂಚಮೀ ಅಥವಾ ಶ್ರವಣನಕ್ಷತ್ರ ಇವುಗಳಲ್ಲಿ ಮಾಡತಕ್ಕದ್ದು. ಬೇರೆ ಕಾಲಗಳು ಕಂಡುಬರುವದಿಲ್ಲ. “ಕೌಸ್ತುಭ"ದಲ್ಲಿ ಪರಿಶಿಷ್ಟಸ್ಮೃತ್ಯರ್ಥಸಾರಾನುಸಾರಿಯಾದ ಪ್ರಯೋಗವನ್ನು ಹೇಳಿದೆ. ಶುಕಾದಶ್ಯಾದಿಗಳಲ್ಲಿ ನದೀತೀರ ಅಥವಾ ದೇವಾಲಯಕ್ಕೆ ಹೋಗಿ ತಿಥ್ಯಾದಿಗಳನ್ನುಚ್ಚರಿಸಿ “ಮರೀಯ ಕುಲಾಭಿವೃದ್ಧಿ ಪ್ರತಿಬಂಧಕ ಪ್ರೇತಸ್ಯ ಪ್ರೇತತ್ವ ನಿವೃತ್ಯರ್ಥಂ ನಾರಾಯಣ ಬಲಿಂ ಕರಿಷ್ಯ ಹೀಗೆ ಸಂಕಲ್ಪಿಸಿ ವಿಧ್ಯುಕ್ತವಾಗಿ ಸ್ಥಾಪಿಸಿದ ಎರಡು ಕಲಶಗಳಲ್ಲಿ ಸುವರ್ಣಾದಿ ನಿರ್ಮಿತಗಳಾದ ವಿಷ್ಣು ಪ್ರತಿಮೆ ಮತ್ತು ವೈವಸ್ವತಯಮನ ಪ್ರತಿಮೆಗಳನ್ನಿಟ್ಟು ಆವಾಹನ ಮಾಡಿ ಪುರುಷ ಸೂಕ್ತದಿಂದ ಮತ್ತು “ಯಮಾಯ ಸೋಮಂ ಈ ಮಂತ್ರಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡತಕ್ಕದ್ದು. ಇದರಲ್ಲಿ ಕೆಲವರು ಐದು ಕಲಶಗಳಲ್ಲಿ ಬ್ರಹ್ಮ, ವಿಷ್ಣು, ಶಿವ, ಯಮ, ಪ್ರೇತ ಇವರನ್ನು ಪೂಜಿಸುವರು. ಇದರ ಪೂರ್ವಭಾಗದಲ್ಲಿ ರೇಖಮಾಡಿ ದಕ್ಷಿಣಾಗ್ರಗಳಾದ ದರ್ಭೆಗಳನ್ನು ಹಾಸಿ ‘ಶುಂಧತಾಂ ವಿಷ್ಣುರೂಪಿ ಪ್ರೇತ” ಹೀಗೆ ಹೇಳಿ ಹತ್ತುಸ್ಥಾನಗಳಲ್ಲಿ ಬಲಭಾಗದಿಂದಿರುವ ಜಲದಿಂದ ಪ್ರೋಕ್ಷಿಸಿ ಮಧು, ಮೃತ, ತಿಲಯುಕ್ತಗಳಾದ ಹತ್ತು ಪಿಂಡಗಳನ್ನು “ಕಾಶ್ಯಪತ್ರ ದೇವದತ್ತ ಶರ್ಮನ್ ಪ್ರೇತ ವಿಷ್ಣುದೈವ ಅಯಂತೇ ಪಿಂಡ” ಹೀಗೆ ದಕ್ಷಿಣಾಭಿಮುಖನಾಗಿ ಮತ್ತು ಪ್ರಾಚೀನಾವೀತಿಯಾಗಿ ಎಡದ ಮೊಣಕಾಲನ್ನು ಭೂಮಿಯಲ್ಲಿ ಊರಿ ಪಿತೃತೀರ್ಥದಿಂದ ಕೊಡತಕ್ಕದ್ದು. ನಂತರ ಗಂಧಾದಿಗಳಿಂದ ಪೂಜಿಸಿ ಪಿಂಡಸಮಾಪ್ತಿಯವರೆಗೆ ಮಾಡಿ ವಿಸರ್ಜಿಸುವದು. ಅದೇರಾತ್ರಿಯಲ್ಲಿ “ಶ್ವಃಕರಿಷ್ಯಮಾಣಶ್ರಾದ್ದೇ ಕ್ಷಣಕ್ರಿಯತಾಂ” ಎಂದು ಐದು ಅಥವಾ ಮೂರು ಇಲ್ಲವೆ ಒಬ್ಬರು ಬ್ರಾಹ್ಮಣರನ್ನು ನಿಮಂತ್ರಿಸಿ ಉಪವಾಸವಿದ್ದು ಜಾಗರಣ ಮಾಡತಕ್ಕದ್ದು. ಮಾರನೇದಿನ ಮಧ್ಯಾಹ್ನದಲ್ಲಿ ವಿಷ್ಣುವನ್ನು ಪೂಜಿಸಿ ವಿಷ್ಣು ರೂಪಿ ಪ್ರೇತ ಎಂದಾಗಲೀ ಅಥವಾ ವಿಷ್ಣು, ಬ್ರಹ್ಮ, ಶಿವ, ಯಮ, ಪ್ರೇತ ಎಂದಾಗಲೀ ಇವರನ್ನುದ್ದೇಶಿಸಿ ಏಕೋದ್ದಿಷ್ಟ ವಿಧಿಯಿಂದ ಪಾದಪ್ರಕಾಳನ ಆದಿ ತೃಪ್ತಿಪ್ರಶ್ನಾಂತವರೆಗೆ ಮಾಡಿ ರೇಖಾಕರಣ, ಅವನೇಜನ, (ಜಲಸೇಚನ) ಮೊದಲಾದ ಕಾರ್ಯಗಳನ್ನು ಆಮಂತ್ರಕವಾಗಿ ಮಾಡಿ ವಿಷ್ಣು, ಬ್ರಹ್ಮ, ಶಿವ, ಸಪರಿವಾರಯಮ ಇವರಿಗೋಸ್ಕರ ನಾಲ್ಕು ಪಿಂಡಗಳನ್ನು ನಾಮಮಂತ್ರಗಳಿಂದ ಕೊಟ್ಟು ವಿಷ್ಣುರೂಪಿ ಪ್ರೇತನನ್ನು ಧ್ಯಾನಿಸಿ “ಕಾಶ್ಯಪಗೋತ್ರ ದೇವದತ್ತ ವಿಷ್ಣುರೂಪಿ ಪ್ರೇತ ಅಯಂ ಈ ಪಿಂಡ: ಹೀಗೆಂದು ಐದನೇ ಪಿಂಡವನ್ನು ಕೊಡತಕ್ಕದ್ದು, ಅರ್ಚನಾದಿ ಅಂತದವರೆಗೆ ಮಾಡಿ ಆಚಮನ ಮಾಡಿದ ಬ್ರಾಹ್ಮಣರನ್ನು ದಕ್ಷಿಣಾದಿಗಳಿಂದ ತೃಪ್ತಿ ಪಡಿಸುವದು. ಆ ಬ್ರಾಹ್ಮಣರ ಪೈಕಿ ಒಳ್ಳೇ ಗುಣಗಳುಳ್ಳವನು ಯಾರೆಂದು ತಿಳಕೊಂಡು ಅವನಲ್ಲಿ ಮನಸ್ಸನ್ನಿರಿಸಿ ವಸ್ತ್ರಾಭರಣಾದಿಗಳನ್ನು ಕೊಟ್ಟು ಬ್ರಾಹ್ಮಣರಲ್ಲಿ ಹೀಗೆ ಪ್ರಾರ್ಥಿಸುವದು. “ನೀವು ಪ್ರೇತನಿಗೆ ತಿಲೋದಕಾಂಜಲಿಯನ್ನು ಕೊಡಬೇಕು.” ಆಗ ಬ್ರಾಹ್ಮಣರು- ಪವಿತ್ರಪಾಣಿಗಳಾಗಿ ದರ್ಭೆ, ಎಳ್ಳು, ತುಳಸಿಗಳಿಂದ ಯುಕ್ತವಾದ ತಿಲಾಂಜಲಿಯನ್ನು “ಕಾಶ್ಯಪ ಗೋತ್ರಾಯ ವಿಷ್ಣು ರೂಪಿಣೇ ಪ್ರೇತಾಯ ಅಯಂ ತಿಲಾಂಜಲಿ’ ಹೀಗೆಂದು ಕೊಡತಕ್ಕದ್ದು. ಮತ್ತು ಈ ನಾರಾಯಣ ಬಲಿಕಾರ್ಯದಿಂದ ಪೂಜ್ಯನಾದ ವಿಷ್ಣುವು ಈ ದೇವದತ್ತ ಬ್ರಾಹ್ಮಣರು ಪ್ರೇತನನ್ನು ಶುದ್ಧ ಹಾಗೂ ಪಾಪರಹಿತನನ್ನಾಗಿ ಮಾಡಲಿ"ಎಂದು ಹೇಳುವದು. ನಂತರ ವಿಸರ್ಜನ ಮಾಡಿ ಭೋಜನ ಮಾಡತಕ್ಕದ್ದು. ನಿರ್ಣಯ ಸಿಂಧುವಿನಲ್ಲಿ ಇನ್ನೊಂದು ತೆರನಾಗಿ ಹೇಳಿದೆ. ೧೭೨ ಧರ್ಮಸಿಂಧು ಏನೆಂದರೆ:- ಐದು ಕಲಶಗಳಲ್ಲಿ ವಿಷ್ಣು, ಶಿವ, ಬ್ರಹ್ಮ, ಯಮ, ಪ್ರೇತ ಇವರನ್ನು ಪೂಜಿಸತಕ್ಕದ್ದು. ಅನುಕ್ರಮವಾಗಿ ಸುವರ್ಣ, ಬೆಳ್ಳಿ, ತಾಮ್ರ, ಲೋಹ ಹೀಗೆ ನಾಲ್ಕು ಪ್ರತಿಮೆಗಳು, ಪ್ರೇತನನ್ನು ದರ್ಭೆಯಿಂದ ನಿರ್ಮಿಸತಕ್ಕದ್ದು, ಅಗ್ನಿಸ್ಥಾಪನೆ ಮಾಡಿ ಬೇಯಿಸಿದ ಚರುವನ್ನು ನಾರಾಯಣನಿಗೋಸ್ಕರ ಪುರುಷಸೂಕ್ತದಿಂದ ಹದಿನಾರು ಆಹುತಿಗಳನ್ನು ಹೋಮಿಸಿ ಹತ್ತು ಪಿಂಡಪ್ರದಾನ ಮಾಡತಕ್ಕದ್ದು, ನಂತರದಲ್ಲಿ ಪುರುಷಸೂಕ್ತ ಮಂತ್ರದಿಂದ ಅಭಿಮಂತ್ರಿತವಾದ ಶಂಬೋದಕದಿಂದ ಪ್ರತಿಮಂತ್ರದಿಂದ ಪ್ರೇತನಿಗೆ ತರ್ಪಣ ಕೊಡತಕ್ಕದ್ದು. ವಿಷ್ಣು ಮೊದಲಾದ ನಾಲ್ಕು ದೇವತೆಗಳಿಗೆ ಬಲಿಯನ್ನು ಕೊಡತಕ್ಕದ್ದು. ಮಾರನೇದಿನ ಏಕೋದ್ದಿಷ್ಟ ವಿಧಿಯಿಂದ “ಶ್ರಾದ್ಧ ಪಂಚಕಂ ಕರಿಷ್ಟೇ " ಹೀಗೆ ಸಂಕಲ್ಪಿಸಿ ಐದು ಬ್ರಾಹ್ಮಣರಿಗೆ ಪಾದ್ಯಾದಿ ಪೂಜೆಮಾಡಿ, ಪಿಂಡಪ್ರದಾನಮಾಡಿ, ತರ್ಪಣಾದಿಗಳನ್ನು ಮಾಡತಕ್ಕದ್ದು. ಹೀಗೆ ವಿಶೇಷವನ್ನು ಹೇಳಿದೆ. ಉಳಿದದ್ದೆಲ್ಲ ಹಿಂದೆ ಹೇಳಿದಂತೆಯೇ, 1 ನಾಗಬಲಿ ವಿಧಾನ ಇದನ್ನು ಅಮಾವಾಸ್ಯೆ, ಹುಣ್ಣಿವೆ, ಪಂಚಮಿ ಅಥವಾ ಆಶ್ಲೇಷಾಯುಕ್ತವಾದ ನವಮೀ ಈ ದಿನಗಳಲ್ಲಿ ಮಾಡತಕ್ಕದ್ದು. ಮೊದಲು ಬ್ರಾಹ್ಮಣ ಪರ್ಷದ (ಪರಿಷತ್ತು) ವನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸಿ, ಅವರ ಮುಂಗಡೆಯಲ್ಲಿ ಗೋವೃಷದ ನಿಷ್ಮಯ (ವೃಷದ ಬದಲಾಗಿ ದಕ್ಷಿಣೆ) ವನ್ನಿಟ್ಟು “ಸಭಾರ್ಯಸ್ಯ ಮಮ ಇಹಜನ್ಮನಿ ಜನ್ಮಾಂತರೇವಾ ಜಾತಸರ್ವವಧ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಮುಪದಿಶಂತು ಭವಂತಃ” “ಸರ್ವಧರ್ಮವಿವಿಕ್ತಾರಃ” ಇತ್ಯಾದಿಯಾಗಿ ಪ್ರಾರ್ಥಿಸುವದು. ನಂತರ ಬ್ರಾಹ್ಮಣರು “ಚತುರ್ದಶ ಕೃಚ್ಛ ಯಶ್ಚಿತ್ತನ ಅಮುಕ ಪ್ರತ್ಯಾಮ್ಮಾಯಾರಾ ಪೂರ್ವೋತ್ತರಾಂಗ ಸಹಿತೇನ ತವಶುದ್ಧಿರ್ಭವಿಷ್ಯತಿ” ಹೀಗೆ ಆಜ್ಞೆಯನ್ನಿತ್ತನಂತರ ದೇಶ ಕಾಲಗಳನ್ನುಚ್ಚರಿಸಿ “ಪರ್ಷದುಪರಿಷ್ಟಂ ಚತುರ್ದಶ ಕೃಚ್ಛ ಪ್ರಾಯಶ್ಚಿತ್ತಂ ಅಮುಕ ಪ್ರತ್ಯಾಮ್ಯಾಯನ ಅಹಮಾಚರಿಷ್ಟೇ” ಹೀಗೆ ಸಂಕಲ್ಪಿಸಿ ಕ್ಷೌರಮೊದಲಾದ ವಿಧಿಯಿಂದ ಅದನ್ನಾಚರಿಸತಕ್ಕದ್ದು. ವಪನ ಅಸಂಭವವಾದಲ್ಲಿ ಎರಡುಪಟ್ಟು ಕೃಚ್ಛಪ್ರತ್ಯಾಮ್ನಾಯ (ದಕ್ಷಿಣ)ವನ್ನು ಇಡತಕ್ಕದ್ದು ಮತ್ತು “ಸರ್ಪವಧದೋಷ ಪರಿಹಾರಾರ್ಥಂ ಇಮಂ ಲೋಹದಂಡಂ ಸದಕ್ಷಿಣಂ ತುಭ್ರಮಹಂ ಸಂಪ್ರದದೇ ಹೀಗೆ ಹೇಳಿ ಕಬ್ಬಿಣ ದಂಡವನ್ನು ದಾನಮಾಡತಕ್ಕದ್ದು. ಗುರುವಿನ ಅನುಜ್ಞೆಯನ್ನು ಪಡೆದು ಗೋದಿ, ಅಕ್ಕಿ ಅಥವಾ ಎಳ್ಳು ಇವುಗಳ ಹಿಟ್ಟಿನಿಂದ ಸರ್ಪಾಕೃತಿಯನ್ನು ಮಾಡಿ ಮೊರದಲ್ಲಿಟ್ಟು ಸರ್ಪವನ್ನು “ಏಓಪೂರ್ವಮೃತಃ ಸರ್ಪ ಆಸ್ಮಿನ್ ಒಷ್ಟೇ ಸಮಾವಿಶ ಸಂಸ್ಕಾರಾರ್ಥಮಹಂ ಭಕ್ಷ್ಯಾಪ್ರಾರ್ಥಯಾಮಿ ಸಮಾಹಿತಃ” ಹೀಗೆ ಪ್ರಾರ್ಥಿಸುವದು. ಆಮೇಲೆ ಆವಾಹನಾದಿ ಷೋಡಶೋಪಚಾರಗಳಿಂದ ಪೂಜಿಸಿ ನಮಸ್ಕಾರಮಾಡಿ “ಭೋಸರ್ಪಮಂಬಲಿಂ ಗೃಹಾಣ ಮಮ ಅಭ್ಯುದಯೂ ಕುರು” ಎಂದು ಬಲಿಯನ್ನು ಕೊಟ್ಟು ಪಾದಗಳನ್ನು ತೊಳಕೊಂಡು ಆಚಮನ ಮಾಡತಕ್ಕದ್ದು. ಪುನಃ ದೇಶಕಾಲಗಳನ್ನುಚ್ಚರಿಸಿ “ಸಭಾರ್ಯಸ ಮತ್ತು ಇಹ ಜನ್ಮನಿ ಜನ್ಮಾಂತರವಾಜ್ಞಾನಾಜ್ಞಾನಾದ್ವಾಜಾತ ಸರ್ಪವಧಜನಿತ ದೋಷಪರಿಹಾರಾರ್ಥಂ ಸರ್ಪಸಂಸ್ಕಾರ ಕರ್ಮಕರಿಷ್ಯ ಹೀಗೆ ಸಂಕಲ್ಪಿಸಿ ಸಂಡಿಲದಲ್ಲಿ ಅಗ್ನಿಯನ್ನು ಸ್ಥಾಪಿಸಿ ಧ್ಯಾನಿಸಿ “ಅಸ್ಮಿನ್ ಸರ್ವಸಂಸ್ಕಾರ ಹೋಮಕರ್ಮಣಿ ದೇವತಾ ವರಿಗ್ರಹಾರ್ಥ ಅನ್ನಾಧಾನಂ ಕುಷ್ಟೇ” ಹೀಗೆ ಸಂಕಲ್ಪಿಸಿ “ಚಕ್ಷುಷೀ ಆಜೇನ” ಇತ್ಯಂತವಾಗಿಮಾಡಿ “ಆಗ ಅಗ್ನಿ ಪರಿಚ್ಛೇದ ೩ ಪೂರ್ವಾರ್ಧ ೧೭೩ ವಾಯುಂ ಸೂರ್ಯಂ ಆಕ್ಕೇನ” ಇದರ ಅಂತದಲ್ಲಿ “ಅ ಅಗ್ನಿಂ ವಾಯುಂ ಸೂರ್ಯಂ ಆಕ್ಕೇನ ಸರ್ಪಮುಖ ಪ್ರಜಾಪತಿಮಾನ ಆಶೇಷೇಣ ಸರ್ಪ೦ ಸಯ ಹೀಗೆಂದು ಎರಡು ಸಮಿಧಗಳನ್ನು ಹಾಕಿ ಅಗ್ನಿಯ ಆಕ್ಷೇಯ ದಿಕ್ಕಿನಲ್ಲಿ ಭೂಮಿಯನ್ನು ಪ್ರೋಕ್ಷಿಸಿ ಚಿತಿಯನ್ನು ಮಾಡಿ ಅಗ್ನಿಯನ್ನೂ ಚಿತಿಯನ್ನೂ ಪರಿಸಮೂಹನ (ನೀರಿನಿಂದ ಸುತ್ತು ಸಿಂಪಡಿಸಿ) ಆಗೇಯಾಗ್ರವಾಗಿ ದರ್ಭೆಗಳಿಂದ ಪರಿಸ್ತರಣಮಾಡಿ, ಪರಿಷೇಚನ ಮಾಡಿ, ಆರು ಪಾತ್ರೆಗಳನ್ನಾಸಾದನ ಮಾಡುವದು. ಇತ್ಯಾದಿ ಚಕ್ಷುಷೀ ಹೋಮಮಾಡಿ ಸರ್ವವನ್ನು ಚಿತಿಯಲ್ಲಿಟ್ಟು ಜಲವನ್ನು ಮುಟ್ಟಿ ಕಿವಿಯನ್ನು ಸ್ಪರ್ಶಿಸಿ ಅಗ್ನಿಯಲ್ಲಿ “ಭೂಃಸ್ವಾಹಾ ಅಗ್ನಿಯ ಇದಂ” ಇತ್ಯಾದಿ ಮೂರು ವ್ಯಾಹೃತಿಗಳಿಂದ ಆಜ್ಞಾಹುತಿಮಾಡಿ ನಾಲ್ಕನೆ ಸಮಸ್ತವ್ಯಾಹೃತಿಯಿಂದ (ಓಂ ಭೂರ್ಭುವಃ ಸ್ವ) ಸರ್ಪದ ಮುಖದಲ್ಲಿ ಹೋಮಿಸುವದು. ಆಜ್ಯಶೇಷವನ್ನು ಸೃವೆಯಿಂದಲೇ ಸರ್ಪದ ಶರೀರದಲ್ಲಿ ಸಿಂಪಡಿಸುವದು. ಇಲ್ಲಿ ಸ್ಪಷ್ಟಕೃದಾದಿ ಹೋಮಶೇಷವಿಲ್ಲ. ಚಮಸದಲ್ಲಿದ್ದ ಜಲದಿಂದ ಸಮಸ್ತ ವ್ಯಾಹೃತಿಯನ್ನು ಹೇಳಿ ಸರ್ವವನ್ನು ಹಸ್ತದಿಂದ ಪ್ರೋಕ್ಷಿಸಿ “ಅರಕಾ ವಸಿಸ್ಕೋಗ್ನಿರ್ಗಾಯ ಸರ್ಪಾಯ ಅಗ್ನಿದಾನೇ ವಿನಿಯೋಗಃ ಅಗೋರಕ್ಷಾಣೋ ಅಂಹಸ್” ಮಂತ್ರವನ್ನು ಹೇಳತಕ್ಕದ್ದು. ಆಮೇಲೆ “ನಮೋ ಅಸ್ತು ಸರ್ಪಜ್ಞೆಯಕೇಶ ಪೃಥಿವೀಮನು ಯ ಅಂತರಿಕ್ಷ ಯೇದಿವಿತೇಭ್ಯ: ಸರ್ಪಭೋನಮಃ ಯದೋರೋಚನೇ ದಿವೋಯವಾ ಸೂರ್ಯಸ್ಕರಷು ಯೇಷಾಮಪ್ಪುಸದಕೃತಂ ತೇಭ್ಯ: ಸರ್ಪಭೋನಮ: |ಯಾ ಇಷವೋ ಯಾತುಧಾನಾನಾಂ ಯೇವಾವನತೀಗುಂರನು ಯೇವಾವಶೇಷು ಶೇರತೇ ತೇಚ್ಛ: ಸರ್ಪಭೋ ನಮಃ | ಗ್ರಾಹಿ ತಾಹಿ ಮಹಾಭೋಗಿನ್ ಸರ್ಪೊಪದ್ರವ ದುಃಖತಃ | ಸಂತತಿಂ ದೇಹಿಮೇ ಪುಣ್ಯಾಂ ನಿರ್ದುಷ್ಟಾಂ ದೀರ್ಘಜೀವಿನೀ ಪ್ರಪಂನಂ ಪಾಹಿಮಾಂ ಭಕ್ತಾಕೃವಾ ದೀನವಲ ಜ್ಞಾನತೋSಜ್ಞಾನತೋವಾಪಿ ಕೃತಃ ಸರ್ಪವಧೆ ಮಯಾಗಿ ಜನ್ಮಾಂತರೇ ತಥ್ಯತನ್ ಮನ್ಸೂರ್ವರಥವಾ ವಿಭೋಗಿ ತತ್ರಾಪಂ ನಾಶಯ ಕ್ಷಿಪ್ರಂ ಅಪರಾಧಂ ಕ್ಷಮಸ್ವಮೇ” ಎಂದು ಪ್ರಾರ್ಥಿಸಿ ಸ್ನಾನಮಾಡಿ ಬಂದು ವ್ಯಾಹೃತಿಮಂತ್ರವನ್ನು ಹೇಳಿ ಹಾಲುನೀರಿನಿಂದ ಅಗ್ನಿಯನ್ನು ಪ್ರೋಕ್ಷಿಸಿ ಸರ್ಪವು ಹುತವಾದಮೇಲೆ ಜಲದಿಂದ ಅಗ್ನಿಯನ್ನು ನೊಂದಿಸುವದು. “ಸರ್ಪಸಂಸ್ಕಾರ ಕರ್ಮದಲ್ಲಿ ಎಲ್ಲವನ್ನೂ ಯಜ್ಞಪವೀತಿಯಾಗಿಯೇ ಮಾಡತಕ್ಕದ್ದು. ಅಸ್ಥಿಸಂಚಯನವಿಲ್ಲ. ಸ್ನಾನ ಮತ್ತು ಆಚಮನಮಾಡಿ ಮನೆಯನ್ನು ಸೇರುವದು " ಹೀಗೆ ವಚನವಿದೆ. ಪತ್ನಿಸಹಿತ ಕರ್ತೃವಿಗೆ ತ್ರಿರಾತ್ರ ಅಶೌಚವು; ಮತ್ತು ಬ್ರಹ್ಮಚರ್ಯ ನಿಯಮದಿಂದಿರತಕ್ಕದ್ದು. ನಾಲ್ಕನೇದಿನ ಸಚೈಲಸ್ನಾನಮಾಡಿ ಮೃತ, ಪಾಯಸ ಭಕ್ಷಾದಿಗಳಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸತಕ್ಕದ್ದು, “ಸರ್ಪಸ್ವರೂಪಿಣೇ ಬ್ರಾಹ್ಮಣಾಯ ಇದಂತೇಪಾಂ. ಅನಂತಸ್ವರೂಪಿಣೇ ಬ್ರಾಹ್ಮಣಾಯ” ಇತ್ಯಾದಿ “ಶೇಷಸ್ವರೂಪಿಣೇ, ಕಪಿಲಸ್ವರೂಪಿಣೇ, ನಾಗಸ್ವರೂಪಿಣೇ, ಕಾಲಿಕ ಸ್ವರೂಪಿಣೇ, ಶಂಖಪಾಲಸ್ವರೂಪಿಣೇ, ಭೂಧರಸ್ವರೂಪಿಣೇ ಬ್ರಾಹ್ಮಣಾಯ” ಹೀಗೆ ಎಂಟು ಬ್ರಾಹ್ಮಣರಿಗೆ ಪಾದ್ಯವನ್ನು ಕೊಟ್ಟು ತನ್ನ ಕಾಲುಗಳನ್ನು ತೊಳಕೊಂಡು ಆಚಮನಮಾಡಿ ‘ಸರ್ಪಸ್ವರೂಪಿಣೇ ಬ್ರಾಹ್ಮಣಾಯ’ ಇತ್ಯಾದಿ ಬ್ರಾಹ್ಮಣರಿಗೆ “ಇದಮಾಸನಂ ಆತಾಂ” ಹೀಗೆ ಅನಂತಾದಿ ಬ್ರಾಹ್ಮಣರಲ್ಲೂ ಉಪಚಾರ ಮಾಡತಕ್ಕದ್ದು. “ಸರ್ಪಸ್ಥಾನೇ ಕ್ಷಣಕೀಯತಾಂ ಓಂ ತಥಾಪ್ರಾÂತುಭವಾನ್ ಪ್ರಾಪ್ತವಾನಿ ન ೧೭೪ ಧರ್ಮಸಿಂಧು ಭೋಸರ್ಪರೂಪ ಆಯಂತೇ ಗಂಧ” ಇದರಂಯ ಎಂಟು ಬ್ರಾಹ್ಮಣರಲ್ಲೂ ಆಯಾಯ ನಾಗನಾಮಗಳಿಂದ ಪುಷ್ಪ, ಧೂಪ, ದೀಪ, ವಸ್ತ್ರ ಮೊದಲಾದ ಉಪಚಾರಮಾಡಿ ಅನ್ನವನ್ನು ಬಡಿಸಿ ಪ್ರೋಕ್ಷಿಸಿ “ಸರ್ಪಾಯ ಇದಮನ್ನಂ ಪರಿವಿಷ್ಟಂ ಪರಿವೇಕ್ಷ್ಯಮಾಣಂ ಚ ದತ್ತಂ ದಾಸ್ಯಮಾನು ಚ ಆತೃರಮೃತರೂಪೇಣ ಸ್ವಾಹಾ, ಸಂಪದ್ಯತಾಂ ನಮಮ” ಹೀಗೆ ಅನಂತಾದಿಗಳಿಗೂ ಮಾಡಿ ಆಚಮನವಾದ ಮೇಲೆ ಭೋಸರ್ಪಅಯಂತೇಬಲಿ: ಇತ್ಯಾದಿ ನಾಮಮಂತ್ರಗಳಿಂದ ಬಲಿದಾನ ಮಾಡತಕ್ಕದ್ದು. ಆ ಪಿಂಡಗಳಲ್ಲಿ ವಾದಿಗಳನ್ನರ್ಪಿಸಿ ಪೂಜೆಮಾಡುವದು. ಇದನ್ನೆಲ್ಲ ಸವ್ಯವಾಗಿಯೇ ಮಾಡತಕ್ಕದ್ದು ಬ್ರಾಹ್ಮಣರಿಗೆ ತಾಂಬೂಲ, ದಕ್ಷಿಣಾದಿಗಳನ್ನು ಕೊಟ್ಟು ಆಚಾರ್ಯನನ್ನು ಪೂಜಿಸಿ ಕಲಶದಮೇಲೆ ಸುವರ್ಣ ನಾಗಪ್ರತಿಮೆಯನ್ನಿಟ್ಟು ಆವಾಹನಾದಿ ಷೋಡಶೋಪಚಾರಮಾಡಿ “ಬ್ರಹ್ಮಲೋಕೇಚಯ ಸರ್ಪಾ: ಶೇಷನಾಗಪುರೋಗಮಾಃ ನಮೋಸ್ತುತೇಭ್ಯಃಸುಪ್ರೀತಾ: ಪ್ರಸನ್ನಾ: ಸಂತುಮೇಹದಾ| ವಿಷ್ಣು ಲೋಕೇಚಯ ಸರ್ಪಾ:ವಾಸುಕಿ ಮುಖಾಶ್ಚ ನಮೋಸ್ತುತೇದಾ ರುದ್ರಲೋಕೇಚಯೇ ಸರ್ಪಾಸ್ತಕ್ಷಕ ಪ್ರಮುಖಾಸ್ತಥಾ| ನಮೋಸ್ತು=ದಾ| ಖಾಂಡವರ ತಥಾದಾಹ ಸ್ವರ್ಗಂಯೇಚ ಸಮಾಶ್ರಿತಾ!! ನಮೋಸ್ತು=ದಾ| ಸರ್ವಪಚಯ ಸರ್ಪಾ ಆಕೇನಚ ರಕ್ಷಿತಾ ನಮೋಸ್ತು=ರಾಮಲಯೇಚ್ಯವಯೇ ಸರ್ಪಾಃ ಕರ್ಕೋಟ ಪ್ರಮುಖಾಶ್ಚ ನಮೋಸ್ತು=ದಾ | ಧರ್ಮಲೋಕೇಚಯೇ ಸರ್ಪಾ: ರೈತ ರಾಂ ಸಮಾಶ್ರಿತಾಃ| ನಮೋಸ್ತು=ದಾಯೇಸರ್ವಾ: ಪಾರ್ವತೀಸು ದರೀಸಂಧಿಷ್ಟು ಸಂಶ್ರಿತಾಃ| ನಮೋಸ್ತು=ದಾ| ಗ್ರಾಮವಾಯರಿವಾರಕ್ಕೇ ಸರ್ಕಾ ಪ್ರಚರಂತಿ ನಮೋಸ್ತು=ರಾಪೃಥಿವ್ಯಾಂಚೈವ ಯೇಸರ್ಪಾ: ದೇಸರ್ವಾ ಬಲಿಸಂಸ್ಥಿತಾನಮೋಸ್ತುದಾ |ರಸಾತಲೇಚ ಯೇಸರ್ಪಾ: ಅನಂತಾದ್ಯಾ ಮಹಾಬಲಾ: ನಮೋಸ್ತು=ದಾ"ಹೀಗೆ ಪ್ರಾರ್ಥಿಸಿ ದೇಶಕಾಲಗಳನ್ನುಚ್ಚರಿಸಿ ‘ಕೃತಪರ್ಪಸಂಸ್ಕಾರ ಕರ್ಮಣ: ಸಾಂಗತಾರ್ಥಂ ಇಮಂ ಹೈಮನಾಗಂ ಸಕಲಶಂ ಸವಸ್ತ್ರಂ ಪದಕ್ಷಿಣಂ ತುಭಮಹಂ ಸಂಪ್ರದದೇ ನಮಮ. ಅನೇನ ಸ್ವರ್ಣನಾಗದಾನೇನ ಅನಂತಾದಯೋ ನಾಗದೇವತಾಃ ಪ್ರೀಯತಾಂ” ಹೀಗೆ ಹೇಳಿ ಜಲವನ್ನು ಬಿಡತಕ್ಕದ್ದು. ಬ್ರಾಹ್ಮಣನಿಗೆ ಗೋದಾನವನ್ನೂ ಮಾಡತಕ್ಕದ್ದು. “ಯಸ್ಕಸ್ಮತ್ಯಾ=ತಂ ಮಯಾಕೃತಂ ಸರ್ಪಸಂಸ್ಕಾರಾಖ್ಯಂಕರ್ಮ ತದ್ಭವಾಂ ವಿಪ್ರಾಣಾಂ ವಚನಾತ್ ಪರಮೇಶ್ವರ ಪ್ರಸಾದಾತ್ ಸರ್ವಂ ಪರಿಪೂರ್ಣಮಸ್ತು” ಹೀಗೆ ಯಜಮಾನನು ಹೇಳಿದನಂತರ “ತಥಾಸ್ತು” ಎಂದು ಬ್ರಾಹ್ಮಣರು ಹೇಳತಕ್ಕದ್ದು. ಆಮೇಲೆ ಬ್ರಾಹ್ಮಣರನ್ನು ತೃಪ್ತಿಪಡಿಸತಕ್ಕದ್ದು. ಸಾಂಗತಾರ್ಥವಾಗಿ ಬ್ರಾಹ್ಮಣಭೋಜನ ಮಾಡಿಸುವದು. ಹೀಗೆ ಈ ವಿಧಿಯಿಂದ ನಾಗಬಲಿ ಕ್ರಮವನ್ನು ಮಾಡಿದವನು ನಿರೋಗಿಯೂ ಶೀಘ್ರವಾಗಿ ಪುತ್ರಸಂತತಿಯನ್ನು ಹೊಂದುವವನೂ ಆಗುವನು. ಹರಿವಂಶ ಶ್ರವಣ ವಿಧಿ ಈ ಹಿಂದೆ ಹೇಳಿದ ನಾರಾಯಣ ಬಲ್ಯಾದಿಕ್ರಮಗಳನ್ನೆಲ್ಲ ಮಾಡಿಯೂ ಪುತ್ರೋತ್ಪತ್ತಿಯಾಗದಿದ್ದಾಗ “ಕರ್ಮವಿಪಾಕೋಕ್ತ ಹರಿವಂಶಶ್ರವಣಾದಿ” ವಿಧಾನವನ್ನು ಮಾಡತಕ್ಕದ್ದು. ಅದನ್ನು ಷಡಬ್ಬ, ಚತುರ, ಅಬ್ಬ, ಸಾರ್ಧಾಬ್ಬ ಅಥವಾ ಆಬ್ರ ಕೃಚ್ಛವನ್ನಾಚರಿಸಿ ನಂತರ ಹರಿವಂಶ ಶ್ರವಣ ಮಾಡತಕ್ಕದ್ದು. “ಕೃಚ್ಛಗಳೆಂದರೆ ಮೂವತ್ತು ಕೃಚ್ಛ ರೂಪವಾದದ್ದಕ್ಕೆ 14 ಪರಿಚ್ಛೇದ - ೩ ಪೂರ್ವಾರ್ಧ 029 “ಆಬ್ರಕೃಚ್ಛ” ವೆನ್ನುವರು. ಹನ್ನೆರಡುದಿನಗಳಿಂದ ಸಾಧ್ಯವಾದದ್ದಕ್ಕೆ “ಕೃಚ್ಛ"ವೆನ್ನುವರು. ಅದು ಹೇಗೆಂದರೆ-ಮೊದಲನೇ ದಿನ ಮಧ್ಯಾಹ್ನ ಒಂದುಹೊತ್ತು ಹವಿಷ್ಯ ಅನ್ನದಿಂದ ಇಪ್ಪತ್ತಾರು ತುತ್ತುಗಳನ್ನೂ ಟಮಾಡುವದು. ರಾತ್ರಿ ಉಪವಾಸ, ಮಾರನೇದಿನ ನಕ್ತಭೋಜನಮಾಡಿ ಅದರಲ್ಲಿ ಇಪ್ಪತ್ತೆರಡು ಗ್ರಾಸಗಳನ್ನು ಉಣ್ಣುವದು. ಮೂರನೇದಿನ ಅಯಾಚಿತವ್ರತ, ಇಪ್ಪತ್ತುನಾಲ್ಕು ಗ್ರಾಸಗಳು, ನಾಲ್ಕನೇದಿನ ಉಪವಾಸ, ಇದು “ಪಾದಕೃಚ್ಛ” ಎಂದಾಗುವದು. ಇದೇ ಅನುಲೋಮ- ಪ್ರತಿಲೋಮಗಳಿಂದ ಅಂದರೆ ಈ ಹೇಳಿದ ನಾಲ್ಕು ದಿನದ ಆಚರಣೆಯು ಅನುಲೋಮ ಎಂದಾದರೆ ಮುಂದೆ ಐದನೇದಿನದಿಂದ ಇದನ್ನೇ ಪ್ರತಿಲೋಮ ಅಂದರೆ ಐದನೇದಿನ ಉಪವಾಸ, ಆರನೇದಿನ ಅಯಾಚಿತ, ಏಳನೇದಿನ ನಕ್ತಭೋಜನ, ಎಂಟನೇದಿನ ಏಕಭಕ್ತ ಹೀಗೆ ನಾಲ್ಕು ದಿನ ಮುಂದೆ ಪುನಃ ಅನುಲೋಮ ಅಂದರೆ ಒಂಭತ್ತನೇದಿನ ಏಕಭಕ್ತ, ಹತ್ತನೇದಿನ ನಕ್ತ, ಹನ್ನೊಂದನೇದಿನ ಅಯಾಚಿತ, ಹನ್ನೆರಡನೇದಿನ ಉಪವಾಸ ಹೀಗೆ “ಪಾದಕೃ’ವು ಮೂರಾವರ್ತಿಯಾದರೆ “ಪ್ರಾಜಾಪತ್ಯ ಕೃಚ್ಛ"ವಾಗುವದು. ಇನ್ನು ಒಂದುದಿನ ಏಕಭಕ್ತ, ಎರಡನೇದಿನ ನಕ್ತ, ಮುಂದೆರಡು “ಅಯಾಚಿತ”, ಐದನೇ ಆರನೇ ಈ ಎರಡುದಿನ ಉಪವಾಸ, ಅಂತೂ ಆರು ದಿನಗಳಿಂದ “ಅರ್ಧಕೃಚ್ಛ” ಪ್ರಾಯಶ್ಚಿತ್ತವಾಗುವದು. ಅಥವಾ ಮೂರುದಿನ “ಅಯಾಚಿತ”, ಮೂರುದಿನ ಉಪವಾಸ ಹೀಗೆ ಆರುದಿನ, ಇದಾದರೂ “ಅರ್ಧಕೃಚ್ಛವಾಗುವದು. ಒಂದುದಿನ ಏಕಭಕ್ತ, ಎರಡನೇದಿನ ಅಯಾಚಿತ, ಮೂರನೇ ದಿನ ಉಪವಾಸ ಹೀಗೆ ಮೂರಾವರ್ತಿ ಮಾಡಿದ ಒಂಭತ್ತು ದಿನಗಳಿಂದ “ಪಾದೋನಕೃಚ್ಛ” ವಾಗುವದು. ಈ ಮಧ್ಯದಿನಗಳಲ್ಲಿ ಕ್ರಮದ ಬದಲಾವಣೆಯಾದರೂ ಅಡ್ಡಿ ಇಲ್ಲ. ಈ ಒಂಭತ್ತು ದಿನಗಳಪೈಕಿ ಯಾವದಾದರೊಂದುದಿನ ಭೋಜನ ಪ್ರಾಪ್ತವಾದಾಗ ಹಿಂದೆ ಹೇಳಿದ ಗ್ರಾಸನಿಯಮವನ್ನು ಬಿಟ್ಟು ಬರೇ ಹಸ್ತತುಂಬುವಷ್ಟು ಅನ್ನವನ್ನು ಭೋಜನಮಾಡಿದಲ್ಲಿ “ಅತಿಕೃಚ್ಛವೆಂದಾಗುವದು. ಇಪ್ಪತ್ತೊಂದುದಿನ ಒಂದು ಗ್ರಾಸದ ಪರಿಮಾಣ, ಇಲ್ಲವೆ ಪ್ರಾಣಧಾರಣೆಗೆ ಪೂರ್ತವಾಗುವಷ್ಟು ಹಾಲನ್ನುಪಯೋಗಿಸುವದರಿಂದ “ಕೃಚ್ಛಾತಿಕೃಚ್ಛ ವಾಗುವದು, ಒಂದುದಿನ ಕುಶೋದಕದಿಂದ ಕೂಡಿದ ಪಂಚಗವ್ಯ ಪ್ರಾಶನ, ಮಾರನೇದಿನ ಉಪವಾಸ ಹೀಗೆ ಎರಡುದಿನ ಮಾಡಿದಲ್ಲಿ ಅದಕ್ಕೆ “ಸಾಂತಪನಕೃಚ್ಛವನ್ನುವರು. ಒಂದುದಿನ ಗೋಮೂತ್ರ, ಇನ್ನೊಂದುದಿನ ಗೋಮಯ, ಮುಂದಿನದಿನ ಹಾಲು, ಮತ್ತೊಂದು ದಿನ ಮೊಸರು, ಇನ್ನೊಂದು ದಿನ ತುಪ್ಪ, ಅದಕ್ಕೂ ಮುಂದಿನದಿನ ಕುಶೋಧಕ ಹೀಗೆ ಆರುದಿನ ಆಹಾರ ಮಾಡಿ ಏಳನೇದಿನ ಉಪವಾಸ ಮಾಡುವದು. ಇದಕ್ಕೆ “ಮಹಾಸಾಂತಪನ"ವನ್ನುವರು. ಮೂರುದಿನ ಪಂಚಗವ್ಯಗಳನ್ನು ಮಿಶ್ರಮಾಡಿ ಪ್ರಾಶನ ಮಾಡಿದರೆ ಅದಕ್ಕೆ “ಯತಿಸಾಂತವನ"ವೆನ್ನುವರು. ಮೊದಲು ಮೂರುದಿನ ಕಾಯಿಸಿದ ಹಾಲು, ಮುಂದೆ ಮೂರುದಿನ ತಪ್ತವಾದ ತುಪ್ಪ, ಅದಕ್ಕೂ ಮುಂದೆ ಮೂರುದಿನ ಕಾದ ನೀರು-ಹೀಗೆ ಆಹಾರ ಮಾಡಿ ಅದಕ್ಕೂ ಮುಂದೆ ಮೂರುದಿನ ಉಪವಾಸ ಮಾಡಿದಲ್ಲಿ ಅದಕ್ಕೆ “ತಪ್ತಕೃಚ್ಛ"ವೆನ್ನುವರು. ಇದೇ ಕ್ರಮದಿಂದ ಶೀತವಾದವುಗಳ ಸೇವನೆಯಿಂದ “ಶೀತಕೃಚ್ಛ ವಾಗುವದು ಅಥವಾ ತಪ್ತಗಳಾದ ಧೃತಾದಿಗಳನ್ನೊಂದೊಂದುದಿನ ಪ್ರಾಶನಮಾಡಿ ನಾಲ್ಕನೇದಿನ ಉಪವಾಸ ಮಾಡಿದರೂ ತಪ್ತಕೃಚ್ಛವೇ ಆಗುವದು. ಹನ್ನೆರಡುದಿನ ನೇರವಾಗಿ ಉಪವಾಸ ಮಾಡಿದರೆ “ಪರಾಕಕೃಚ್ಛ ವಾಗುವದು ಶುಕ್ಲಪಕ್ಷದ ಪ್ರತಿಪದೆಯಿಂದ ಪ್ರತಿದಿನ ಒಂದೊಂದೇ ೧೭೬ ಧರ್ಮಸಿಂಧು ಗ್ರಾಸವನ್ನು ಹೆಚ್ಚಿಸುತ್ತ ಹುಣ್ಣಿವೆಯಲ್ಲಿ ಹದಿನೈದು ಗ್ರಾಸ, ತಿಥಿಕ್ಷಯವಾದಲ್ಲಿ ಹದಿನಾಲ್ಕು ಗ್ರಾಸ, ತಿಥಿವೃದ್ಧಿಯಾದಲ್ಲಿ ಹದಿನಾರು ಗ್ರಾಸ, ಹೀಗೆ ಆಹಾರಮಾಡಿ ಕೃಷ್ಣ ಪ್ರತಿಪದೆಯಿಂದ ಒಂದೊಂದು ಗ್ರಾಸವನ್ನು ಕಡಿಮೆ ಮಾಡುತ್ತ ಅಮಾವಾಸೆಯಲ್ಲಿ ಉಪವಾಸ ಮಾಡುವದು. ಇದಕ್ಕೆ ಮಾಸಸಾಧ್ಯವಾದ ಯವಮಧ್ಯ ಸಂಜ್ಜಿತ “ಚಾಂದ್ರಾಯಣ"ವೆನ್ನುವರು. ಕೃಷ್ಣ ಪಕ್ಷದ ಪ್ರತಿಪದೆಯಿಂದಾರಂಭಿಸಿ ಹದಿನಾಲ್ಕು ಗ್ರಾಸದಿಂದ ಒಂದೊಂದನ್ನೇ ಕಡಿಮೆಮಾಡುತ್ತ ಅಮಾವಾಸ್ಯೆಯಲ್ಲಿ ಉಪವಾಸಮಾಡಿ, ಶುಕ್ಲ ಪ್ರತಿಪದೆಯಿಂದ ಒಂದೊಂದು ಗ್ರಾಸವನ್ನು ವೃದ್ಧಿಯಾಗಿ ಹುಣ್ಣಿವವರೆಗೆ ಮಾಡಿದಲ್ಲಿ ಇದಕ್ಕೆ “ಪಿಪೀಲಿಕಾಮಧ್ಯ ಚಾಂದ್ರಾಯಣ “ವೆನ್ನುವರು. ಕೃಚ್ಛಚಾಂದ್ರಾಯಣಾದಿಗಳಿಗೆ ಸಂಬಂಧಿಸಿ ಮಾಡುವ “ತ್ರಿಕಾಲಸ್ನಾನ, ಗ್ರಾಸಾಭಿಮಂತ್ರಣ ಮೊದಲಾದ ವಿಧಿಗಳಿವೆ. ಅಂಥ ಪ್ರಯೋಗಗಳನ್ನೆಲ್ಲ “ಪ್ರಾಯಶ್ಚಿತ್ತ ಪ್ರಕರಣ"ದಿಂದ ತಿಳಿಯತಕ್ಕದ್ದು. ಈ “ಅತಿಕೃಚ್ಛಾದಿ” ಲಕ್ಷಣವನ್ನು ಪ್ರಸಂಗೋಚಿತವಾಗಿ ಹೇಳಲಾಯಿತು. ಇನ್ನು ಇವುಗಳ ಪ್ರತ್ಯಾಮ್ನಾಯ (ಬದಲಿಗೆ ಮಾಡುವದು. ಅಂದರೆ ಮುಖ್ಯವಾದವುಗಳನ್ನು ಕಾರಣಾಂತರದಿಂದ ಮಾಡಲಸಮರ್ಥನಾದವನು ಗೌಣವಿಧಿಯಿಂದ ಮಾಡುವದು)ಗಳು:- ಹತ್ತು ಸಾವಿರ ಗಾಯತ್ರೀಜಪ, ಸಹಸ್ರಗಾಯತ್ರಿಯಿಂದ ತಿಲಹೋಮ, ಕೆಲವರ ಮತದಂತೆ ವ್ಯಾಹೃತಿಗಳಿಂದ ತಿಲಹೋಮ, ಇನ್ನೂರು ಪ್ರಾಣಾಯಾಮಗಳು, ಹನ್ನೆರಡು ಬ್ರಾಹ್ಮಣ ಭೋಜನ, ತಲೆಗೂದಲನ್ನು ಒಣಗಲು ಬಿಡದೆ ತೀರ್ಥದಲ್ಲಿ ಹನ್ನೆರಡು ಸ್ನಾನಗಳು, ವೇದಸಂಹಿತಾ ಪಾರಾಯಣ, ಹತ್ತುಮೈಲು ಅಂತರದ ತೀರ್ಥಯಾತ್ರೆ, ಹನ್ನೆರಡುಸಾವಿರ ನಮಸ್ಕಾರ, ನೂರಾಮೂವತ್ತೆರಡು ಪ್ರಾಣಾಯಾಮ. ಈ ಪ್ರತ್ಯಾಮ್ಯಾಯಗಳಲ್ಲಿ ಯಾವದಾದರೊಂದನ್ನಾಚರಿಸಿ ಒಂದಿಡೀದಿನ ಉಪವಾಸವಿದ್ದು ಪೂರ್ವಾಭಿಮುಖನಾಗಿಯೇ ಇರತಕ್ಕದ್ದು. ಈ ಹೇಳಿದ ಕ್ರಮಗಳೆಲ್ಲ “ಪ್ರಾಜಾಪತ್ಯ ಕೃಚ್ಛ’ದ ಪ್ರತ್ಯಾಮ್ಯಾಯಗಳು. ಗೋಮೂತ್ರದಿಂದ ಬೇಯಿಸಿದ ಗೋಧಿಯ ಅನ್ನವಣ್ಣುವದರಿಂದ “ಐಕಾಹಿಕ ಕೃಚ್ಛವಾಗುವದು. ಏಕಾದಶರುದ್ರ ಜಪಮಾಡಿದಲ್ಲಿ “ಐಕಾಹಿಕ ಕೃಚ್ಛವಾಗುವದೆಂದು ಒಬ್ಬ ಗ್ರಂಥಕಾರನ ಮತ. ಪಾವಕೇಪ್ತಿ, ಪವಮಾನೇಷ್ಟಿ ಇವುಗಳನ್ನು ಮಾಡಿದರೆ ಪ್ರಾಜಾಪತ್ಯಕೃಚ್ಛಕ್ಕೆ ಪ್ರತ್ಯಾಮಾಯವಾಗುವದು. ಉಪವಾಸ ಪ್ರತಿನಿಧಿಯಾಗಿ ಒಬ್ಬ ಬ್ರಾಹ್ಮಣನ ಭೋಜನ ಹೇಳಿದೆ. ಸ್ಮೃತ್ಯರ್ಥಸಾರದಲ್ಲಿ, ಅಶಕ್ತಿಯಲ್ಲಿ, ಅತ್ಯಶಕ್ತಿಯಲ್ಲಿ ಸಹಸ್ರ ಗಾಯತ್ರೀಜಪ ಅಥವಾ ಹನ್ನೆರಡು ಪ್ರಾಣಾಯಾಮಗಳನ್ನು ಮಾಡಿದರೆ “ಪ್ರಾಜಾಪತ್ಯಕೃಚ್ಛ"ಪ್ರತ್ಯಾಮ್ಯಾಯವಾಗುವದೆಂದು ಹೇಳಿದೆ. ಪ್ರಾಜಾಪತ್ಯಕೃಚ್ಛದಲ್ಲ ಸಮರ್ಥನಾದರೆ ಉತ್ತಮ ಹಾಲುಕೊಡುವ ಗೋವನ್ನು ದಾನಮಾಡತಕ್ಕದ್ದು. ಧೇನುವಿನ ಅಭಾವದಲ್ಲಿ ನಿಷ್ಠದಾನ. ಅದು ಶಕ್ಯವಿಲ್ಲದಾಗ ಅದರ ಅರ್ಧ. ಅದೂ ಸಾಧ್ಯವಿಲ್ಲದಿದ್ದರೆ “ಪಾದನಿಷ್ಕ” ದಾನಮಾಡತಕ್ಕದ್ದು, ಎಂಬ ವಚನವಿದೆ. ಎಂಭತ್ತು ಗುಂಜಿಯ ತೂಕಕ್ಕೆ ಒಂದು ಕರ್ಷವಾಗುವದು. ನಾಲ್ಕು ಕರ್ಷಗಳಿಗೆ ‘ನಿಷ್ಕ’ವಾಗುವದು. ನಿಮ್ಮ ಅಥವಾ ನಿಷ್ಕಾರ್ಧ ಇಲ್ಲವೆ ನಿಷ್ಕವಾದ க ಪ್ರಮಾಣದ ಬಂಗಾರ, ಬೆಳ್ಳಿ ಅಥವಾ ದೇನು ಇವುಗಳ ದಾನವನ್ನು ಶಕ್ಯನುಸಾರ ಮಾಡತಕ್ಕದ್ದು, ಅತಿಕೃಕ್ಷದ ಬಗ್ಗಾಗಿ ಎರಡು ಗೋವುಗಳು, ಸಾಂತಪನದ ಸಲುವಾಗಿ ಎರಡು ಪರಿಚ್ಛೇದ - ೩ ಪೂರ್ವಾರ್ಧ 022 ಗೋವುಗಳು, ಪರಾಕ ಅಥವಾ ತಪ್ರಕೃಚ್ಛದ ಬಗ್ಗೆ ಮೂರು ಗೋವುಗಳು, ಕೃಚ್ಛಾತಿಕೃಚ್ಛದ ಬಗ್ಗೆ ನಾಲ್ಕು ಗೋವುಗಳು ಅಥವಾ ಮೂರು ಗೋವುಗಳು, ಮಾಸಪಯೋವ್ರತ, ಯಾವಕವ್ರತ ಮತ್ತು ಮಾಸೋಪವಾಸದ ಸಲುವಾಗಿ ಐದು ಗೋವುಗಳು, ಇಡೀಮಾಸ ಗೋಮೂತ್ರಯಾವಕದ ಸಲುವಾಗಿ ಆರು ಗೋವುಗಳು, ಹೀಗೆ ಕೃಚ್ಛಗಳ ಪ್ರತ್ಯಾಮ್ನಾಯವನ್ನು ತಿಳಿಯುವದು. ಪ್ರಾಯಶ್ಚಿತ್ತ ಪ್ರಯೋಗ ಸಚೈಲಸ್ನಾನಮಾಡಿ ಶಕ್ತನಾದಲ್ಲಿ ಒದ್ದೆವಸ್ತ್ರವನ್ನುಟ್ಟು ಪರ್ಷದದ ಮುಂಗಡೆಯಲ್ಲಿ ಗೋವೃಷಭದ ಪ್ರತ್ಯಾಮ್ನಾಯವಾದ ನಿಷ್ಕಮೊದಲಾದ ಪ್ರಮಾಣದ ಬ್ರಹ್ಮದಂಡವನ್ನಿಟ್ಟು ಸಾಷ್ಟಾಂಗ ನಮಸ್ಕಾರ ಮಾಡುವದು. ಮತ್ತು ಬ್ರಾಹ್ಮಣ ಪರ್ಷತ್ತನ್ನು ಪ್ರದಕ್ಷಿಣಮಾಡುವದು. ‘ಸರ್ವಧರ್ಮ ವಿವೇಕಾರೋ ಗೋಪ್ತಾರ: ಸಕಲಾ ದ್ವಿಜಾಃ ಮಮ ದೇಹಸ್ಯ ಸಂಶುದ್ಧಿಂ ಕುರ್ವಂತು ದ್ವಿ,ಜಸತ್ತ ಮಾ| ಮಯಾಕೃತಂ ಮಹಾಘೋರಂ ಜ್ಞಾತಮಜ್ಞಾತಕಿಷಂಪ್ರಸಾದಃ ಕ್ರಿಯತಾಂ ಮಹ್ಯಂ ಶುಭಾನುಜ್ಞಾಂ ಪ್ರಯಚ್ಛಥ ಪೂಕೃತನವಿತ್ರೋsಹಂ ಭವೇಯಂ ದ್ವಿಜಮಾ|ಮಾಮನುಗೃಹಯ ಭವಂತು” ಹೀಗೆ ಪ್ರಾರ್ಥಿಸುವದು. ಆಗ ಬ್ರಾಹ್ಮಣರು “ನಿನ್ನದೇನು ಕೆಲಸ? ಸುಳ್ಳುಹೇಳಬೇಡ, ಸತ್ಯವನ್ನೇ ಹೇಳು” ಹೀಗೆ ಪ್ರಶ್ನಿಸಿದಾಗ ತನ್ನ ಪಾಪವನ್ನು ಪ್ರಕಟವಾಗಿ ಹೇಳತಕ್ಕದ್ದು. “ಮಯಾಮತತಾವಾ ಇಹಜನ್ಮನಿ ಜನ್ಮಾಂತರವಾ ಅನಪತ್ಯತ್ವ ಮೃತಾಪತ್ಯತ್ವಾರಿ ನಿದಾನಭೂತ, ಬಾಲಘಾತ, ವಿಪ್ರರಾ ಸಹಾರಾದಿ ದುರಿತಂ ಕೃತಂ| ತಸ್ಯನಾಶಾಯ ಕರಿಷ್ಯ ಮಾನ ಹರಿವಂಶ ಶ್ರವಣಾದೌ ಕರ್ಮವಿಪಾಕೋ ವಿಧಾನೇ ಅಧಿಕಾರಾರ್ಥ೦ ದೀರ್ಘಾಯುಷ್ಮತುತ್ತಾದಿ ಸಂತತಿಪ್ರಾಪ್ತಿಯೇ ಪ್ರಾಯಶ್ಚಿತ್ತಮುಪದಿಶಂತು ಭವಂತ ಹೀಗೆ ಪ್ರಾರ್ಥಿಸಿಕೊಂಡ ನಂತರ ಪಾಪಮಾಡಿದವನ ಕಡೆಯಿಂದ ಒಬ್ಬ “ಅನುವಾದಕ ನಿರತಕ್ಕದ್ದು. ಪಾಪಿಯು ಅವನನ್ನು ಸತ್ಕರಿಸಿ ಮುಂದೆ ಕೂಡ್ರಿಸಿಕೊಳ್ಳುವದು. ಬ್ರಾಹ್ಮಣರು ಆ ಅನುವಾದಕನ ಮುಂಗಡೆಯಲ್ಲಿ ಷಡಬ್ಬ, ತಬ್ಬ, ಸಾರ್ಧಾಬ್ದ ಕೃಚ್ಛಗಳಪೈಕಿ ಯಾವದಾದರೊಂದು ಪ್ರಾಯಶ್ಚಿತ್ತವನ್ನು ಪೂರ್ವೋತ್ತರಾಂಗ ಸಹಿತವಾಗಿ ಆಚರಿಸಿದಲ್ಲಿ ನೀನು ಪುನೀತನಾಗುವಿ, ಅದರಿಂದ ನೀನು ಕೃತಾರ್ಥನಾಗುವಿ. ಹೀಗೆ ಹೇಳತಕ್ಕದ್ದು. ಅನುವಾದಕನು ಪಾಪಿಯನ್ನು ಕುರಿತು ಹೇಳತಕ್ಕದ್ದು. ಆಮೇಲೆ ಕರ್ತನು “ಓಂ” ಎಂದು ಅಂಗೀಕರಿಸಿ ಪರಿಷತ್ತನ್ನು ವಿಸರ್ಜಿಸಿ ದೇಶಕಾಲಗಳನ್ನುಚ್ಚರಿಸಿ ‘ಸಭಾರ್ಯಸ್ಯ ಮಮ ಏತಜ್ಞನ್ಮ ಜನ್ಮಾಂತರಾರ್ಜಿತ ಅನಪತ್ಯತ್ವ, ಮೃತಪುತ್ರತ್ವ, ಆದಿನಿದಾನ ಭೂತ ಬಾಲಘಾತ, ವಿಪ್ರರತ್ನಾಪಹಾರಾಗಿ, ಜನ ದುರಿತ ಸಮೂಲನಾಶ, ಕರ್ಮವಿಪಾಕ್ತ ವಿಧಾನಾಧಿಕಾರಿಸಿದ್ದಿದ್ವಾರಾ ದೀರ್ಘಾಯುಷ್ಮದೃಹುಪುತ್ರಾದಿ ಸಂತತಿಪ್ರಾಪ್ತಯೇ ಷಡಬಂ, ತ್ಯಂ, ಸಾಾರ್ಧದ ಪ್ರಾಯಶ್ಚಿತ್ತಂ ಪೂರ್ವೋತ್ತರಾಂಗಸಹಿತಂ ಅಮುಕಪ್ರತ್ಯಾಮ್ಮಾಯೇನ ಅಹಮಾಚರಿಷ್ಟೇ ಹೀಗೆ ಸಂಕಲ್ಪಿಸಿ ದಿನದ ಅಂತ್ಯಭಾಗದಲ್ಲಿ ಕೇಶರೋಮನಖಾದಿಗಳ ವಪನ ಮತ್ತು ಸ್ನಾನಮಾಡಿ “ಆಯುರ್ಬಲಂ ಯಶೋವರ್ಚ: ಪ್ರಜಾಪಶು ವಸೂನಿಚ| ಬ್ರಹ್ಮಪ್ರಜ್ಞಾಂಚಮೇಧಾಂಚತ್ವನ್ನೋದೇಹಿ ವನಪ್ಪತೇ!” ಹೀಗೆ ಪ್ರಾರ್ಥಿಸಿಕೊಂಡು ಯೋಗ್ಯವಾದ ಕಾಷ್ಠದಿಂದ ದಂತಧಾವನ ಮಾಡತಕ್ಕದ್ದು. ಆಮೇಲೆ ದಶಸ್ನಾನಗಳು, ಭಸ್ಮಸ್ನಾನ-‘ಈಶಾಯನಾಯನಮ:’ ಎಂದು ಶಿರಸಿನಲ್ಲೂ, ‘ತತ್ಪುರುಷಾಯನಮಃ’ ಎಂದು ಮುಖದಲ್ಲೂ, ‘ಅಘೋರಾಯನಮಃ’ ಎಂದು ಹೃದಯದಲ್ಲೂ, ೧೭೮ ಧರ್ಮಸಿಂಧು ‘ವಾಮದೇವಾಯನಮಃ’ ಎಂದು ಗುಹ್ಯದಲ್ಲೂ, ‘ಸದ್ಯೋಜಾತಾಯನಮಃ’ ಎಂದು ಪಾದಗಳಲ್ಲೂ ಓಂಕಾರದಿಂದ ಸರ್ವಾಂಗಗಳಲ್ಲಿಯೂ ಭಸ್ಮವನ್ನು ಲೇಪಿಸಿಕೊಳ್ಳುವದು. ಗೋಮಯಸ್ನಾನ- ಗೋಮಯವನ್ನು ತೆಗೆದುಕೊಂಡು ಓಂಕಾರದಿಂದ ಅದರ ದಕ್ಷಿಣಭಾಗವನ್ನು ಚೆಲ್ಲಿ ಉತ್ತರ ಭಾಗವನ್ನು ತೀರ್ಥದಲ್ಲಿ ಚೆಲ್ಲುವದು. ಉಳಿದದ್ದನ್ನು ಮಾನಸ್ತೋಕೇ” ಮಂತ್ರದಿಂದ ಅಭಿಮಂತ್ರಿಸಿ ಗಂಧದ್ವಾರಾಂ’ ಈ ಮಂತ್ರದಿಂದ ಎಲ್ಲ ಅಂಗಗಳಲ್ಲೂ ಲೇಪಿಸುವದು. “ಹಿರಣ್ಯಶೃಂಗ” ಈ ಎರಡು ಮಂತ್ರಗಳಿಂದ ಪ್ರಾರ್ಥಿಸಿ “ಯಾಃಪ್ರವತ” ಎಂಬ ಮಂತ್ರದಿಂದ ತೀರ್ಥವನ್ನು ಸ್ಪರ್ಶಿಸಿ ಸ್ನಾನಮಾಡಿ ಎರಡು ಆಚಮನಗಳನ್ನು ಮಾಡುವದು. ಇನ್ನು ಮೃತ್ತಿಕಾ ಸ್ನಾನ:- “ಅಶ್ವಕ್ರಾಂತೇ ರಥಕ್ರಾಂತ ವಿಷ್ಣುಕ್ರಾಂತೇ ವಸುಂಧರೆ ಶಿರಸಾಧಾರಯಿಷ್ಯಾಮಿ ಲಕ್ಷಮಾಂ ಪದೇ ಪರೇ” ಹೀಗೆ ಮೃತ್ತಿಕೆಯನ್ನಭಿಮಂತ್ರಿಸಿ “ಉದ್ಧತಾಸಿವರಾಹೇಣ ಕೃಷ್ಣನ ಶತಬಾಹುನಾ ಮೃತ್ತಿಕ ಹರ ಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ” ಹೀಗೆ ತಕ್ಕೊಂಡು “ನಮೋಮಿತ್ರಸ್ಯ ಈ ಮಂತ್ರದಿಂದ ಸೂರ್ಯನಿಗೆ ತೋರಿಸಿ “ಗಂಧದ್ವಾರಾಂ’ ಈ ಮಂತ್ರದಿಂದ ಅಥವಾ “ನಾಪೃಥವೀ” ಈ ಮಂತ್ರದಿಂದ ಇಲ್ಲವೆ “ಇದಂವಿಷ್ಣು :” ಈ ಮಂತ್ರದಿಂದ ಶಿರಸ್ಸಿನಿಂದ ಪ್ರಾರಂಭಿಸಿ ಎಲ್ಲ ಅವಯವಗಳನ್ನು ಲೇಪಿಸುವದು, ಮತ್ತು ಎರಡು ಆಚಮನ ಮಾಡತಕ್ಕದ್ದು. ಇನ್ನು ವಾರಿಸ್ನಾನ- " ಆಪೋಅಸ್ಮಾನ್” ಹೀಗೆ ಹೇಳಿ ಸೂರ್ಯಾಭಿಮುಖನಾಗಿ ನಿಂತು “ಇದುವಿಷ್ಣು” ಈ ಮಂತ್ರವನ್ನು ಜಪಿಸುತ್ತ ಪ್ರವಾಹ ಸಂಮುಖನಾಗಿ ಮುಳುಗಿ ಸ್ನಾನಮಾಡತಕ್ಕದ್ದು. ಆಮೇಲೆ ಪಂಚಗವ್ಯಸ್ನಾನ, ಕುಶೋದಕಸ್ನಾನ ಹೀಗೆ ಪ್ರತ್ಯೇಕವಾಗಿ, ಮಂತ್ರಸಹಿತ ಸ್ನಾನಮಾಡಿ ಸ್ನಾನಾಂಗ ತರ್ಪಣಾದಿಗಳನ್ನು ಮಾಡತಕ್ಕದ್ದು. ವಿಷ್ಣು ಶ್ರಾದ್ಧ ಹಾಗೂ ಪೂರ್ವಾಂಗ ಗೋದಾನವನ್ನೂ ಮಾಡಿ, ಅಗ್ನಿಯನ್ನು ಪ್ರತಿಷ್ಠಾಪಿಸಿ, ಪಂಚಗವ ಹೋಮವನ್ನು ವ್ಯಾಹೃತಿಗಳಿಂದ ಅಷ್ಟೋತ್ತರಶತ ಅಥವಾ ಅಷ್ಟಾವಿಂಶತಿ ಸಂಖ್ಯೆಯಿಂದ ಹೋಮಿಸಿ, ಆ ಹೋಮವನ್ನೂ ಮಾಡಿ, “ವ್ರತಂಗ್ರಹೀ” ಹೀಗೆ ಬ್ರಾಹ್ಮಣರಲ್ಲಿ ಪ್ರಾರ್ಥಿಸಿ, ಹೋಮಶೇಷವಾದ ಪಂಚಗವ್ಯವನ್ನು ಓಂಕಾರದಿಂದ ಪ್ರಾಶನ ಮಾಡುವದು. ಸಂಕಾನುಸಾರವಾಗಿ ಮುಖ್ಯಪ್ರಾಯಶ್ಚಿತ್ತ ಕೃಚ್ಛಗಳನ್ನಾಚರಿಸಿ ವ್ಯಾಹೃತಿಯಿಂದ ಆಹೋಮ ಮತ್ತು ವಿಷ್ಣು ಶ್ರಾದ್ಧ ಗೋದಾನಾದಿಗಳನ್ನು ಹಿಂದೆ ಹೇಳಿದ ರೀತಿಯಿಂದ ಮಾಡುವದು. ಆ ಹೋಮ ಮತ್ತು ಪಂಚಗವ್ಯ ಹೋಮಗಳಿಗೆ ಇನ್ಮಾಧಾನಾದಿ ಸ್ವಾಲೀಪಾಕಾದಿಗಳ ಆವಶ್ಯಕತೆಯಿಲ್ಲವೆಂದು ಕೆಲವರ ಮತವು. ವ್ಯಾಹೃತಿಯಿಂದ ಆಜ್ಯಹೋಮ ಮಾಡುವಲ್ಲಿ ದೇವತೆಯು " ಪಾಪಾಪಹ ಮಹಾವಿಷ್ಣು"ವು ಎಂದು ಕೆಲವರ ಮತವು (ಈ ಪಂಚಗವ್ಯ ಹೋಮಕ್ಕೆ ‘ಬ್ರಹ್ಮಕೂರ್ಚ’ ಹೋಮವೆಂದೂ ಹೇಳುವರು) ಪಂಚಗವ್ಯ ವಿಧಿಯು ತಾಮ್ರ ಅಥವಾ ಮುತ್ತುಗಳದ ಪಾತ್ರೆಯಲ್ಲಿ ಎಂಟುಮಾಷ ಪ್ರಮಾಣದ ಕೆಂಪು ಆಕಳಿನ ಗೋಮೂತ್ರವನ್ನು ಗಾಯತ್ರಿಯಿಂದ ತಕ್ಕೊಳ್ಳುವದು. ಹದಿನಾರು ಮಾಷಪ್ರಮಾಣದ ಬಿಳಗೋವಿನ ಗೋಮಯವನ್ನು “ಗಂಧದ್ರಾರಾಂ” ಮಂತ್ರದಿಂದ ತಕ್ಕೊಳ್ಳುವದು. “ಆಷ್ಮಾಯ ಮಂತ್ರದಿಂದ ಹನ್ನೆರಡು ಮಾಷಪರಿಮಿತವಾದ ಹಳದಿ (ಕೌಲು) ಆಕಳಿನ ಹಾಲನ್ನು ತಕ್ಕೊಳ್ಳುವದು. “ದಧಿಕ್ರಾವ್ಯ”ಪರಿಚ್ಛೇದ - ೩ ಪೂರ್ವಾರ್ಧ 026 ಈ ಮಂತ್ರದಿಂದ ಹತ್ತುಮಾಷಪ್ರಮಾಣದ ನೀಲ ಆಕಳಿನ ಮೊಸರನ್ನೂ, ತೇಜೋಸಿ ಶುಕ್ರಮಸಿ ಈ ಮಂತ್ರದಿಂದ ಎಂಟುಮಾಷ ಪರಿಮಿತವಾದ ಕಪ್ಪು ಆಕಳಿನ ಮೃತವನ್ನೂ ತಕ್ಕೊಂಡು ಅವುಗಳಲ್ಲಿ “ದೇವಸ್ಯತ್ವಾ” ಈ ಮಂತ್ರದಿಂದ ನಾಲ್ಕು ಮಾಷ ಪರಿಮಿತವಾದ ‘ಕುಶೋದಕ’ವನ್ನು ಹಾಕಿ ಓಂಕಾರದಿಂದ ಮಿಶ್ರಣಮಾಡತಕ್ಕದ್ದು. ಇಲ್ಲಿ ‘ಮಾಷ’ ಎಂದರೆ ಐದು ಗುಂಜಿಯ ತೂಕದ್ದೆಂದು ತಿಳಿಯತಕ್ಕದ್ದು. ಹೀಗೆ ಮಿಶ್ರಮಾಡಿದ ಪಂಚಗವ್ಯವನ್ನು ಏಳು ದರ್ಭೆಗಳಿಂದ ಮಾಡಿದ ಕೂರ್ಚಾಗ್ರದಿಂದ ಹೋಮಿಸತಕ್ಕದ್ದು. ಇರಾವತಿ ಈ ಮಂತ್ರದಿಂದ ಪೃಥ್ವಿ ಇತ್ಯಾದಿ ಅನ್ನಾಧಾನ. “ಇರಾವತೀತಿ ಪೃಥ್ವಿ, ಇದಂ ವಿಷ್ಣುರಿತಿ ವಿಷ್ಣುಂ, ಮಾಸಕ್ಕೂ ಇತಿರುದ್ರಂ, “ಶನ್ನೋದೇವೀರಿತ್ಯಪ, ಬ್ರಹ್ಮ ಜಜ್ಞಾನ ಮಿತಿ ಬ್ರಹ್ಮಾಣಂ, ವಾಅಗ್ನಿ, ಸೋಮಂಚನಾನಾ ಗಾಯತ್ರಾಸೂರ್ಯ, ಪ್ರಜಾಪತೇನತ್ವದಿತಿ ಸಮಸ್ತ ವ್ಯಾಹೃತಿಭಿರ್ವಾ ಪ್ರಣವೇನ ಪ್ರಜಾಪತಿಂ, ಅಗ್ನಿ, ಸ್ಪಷ್ಟಕೃತಂ ನಾಮ್ನ ತಾ: ಪಂಚಗವ್ವನಾಗ್ನಿ, ವಾಯುಂ, ಸೂರ್ಯಂ, ಪ್ರಜಾಪತಿಂಜೇತಿವಾ, ಮಹಾವಿಷ್ಣುಂವಾ ಆನ ಅಷ್ಟಾವಿಂಶತಿ ಸಂಖ್ಯಾಹುತಿಲ್ಲ: ಹೀಗೆ ಅನ್ನಾಧಾನವು. ಸ್ತ್ರೀ, ಶೂದ್ರರಿಗಾದರೆ ಹೋಮಮಾಡತಕ್ಕದ್ದಲ್ಲ. ಕೆಲವರು ಬ್ರಾಹ್ಮಣದ್ವಾರಾ ಹೋಮಮಾಡಿಸಬಹುದೆಂದು ಹೇಳುವರು. ಸ್ತ್ರೀ ಶೂದ್ರರಿಗೆ ಪಂಚಗವ್ಯ ಪ್ರಾಶನೆಯು ವಿಕಲ್ಪವೆಂದು “ಮಹಾರ್ಣವ” ಗ್ರಂಥದಲ್ಲಿ ಹೇಳಿದೆ. ಸ್ತ್ರೀ-ಶೂದ್ರರು ಬ್ರಾಹ್ಮಣರಿಂದ ಪಂಚಗವ್ಯವನ್ನು ಮಾಡಿಸಿ ಅಮಂತ್ರಕವಾಗಿ ಪ್ರಾಶನಮಾಡತಕ್ಕದ್ದೆಂದು ಸ್ಮತ್ಯರ್ಥಸಾರದಲ್ಲಿ ಹೇಳಿದೆ. ಈ ಪ್ರಾಯಶ್ಚಿತ್ತ ವಿಧಿಯನ್ನು ಕೃಚ್ಛಕ್ಕಿಂತ ಕಡಿಮೆಯದಾದ ಪ್ರಾಯಶ್ಚಿತ್ತಗಳಲ್ಲಿ ಮಾಡತಕ್ಕದ್ದಲ್ಲ. ಕೃಚ್ಛಾದಿ ಎಲ್ಲ ಪ್ರಾಯಶ್ಚಿತ್ತಗಳಲ್ಲಿಯೂ ಇದು ಆವಶ್ಯಕವು. ಹೀಗೆ ಕೃಚ್ಛಾದಿಗಳನ್ನಾಚರಿಸಿ ಸೂರ್ಯಾರುಣಸಂವಾದ ಮಹಾರ್ಣವ ಮೊದಲಾದ ಕರ್ಮವಿಪಾಕಗ್ರಂಡಿಕ್ತ ಹರಿವಂಶಶ್ರವಣಾದಿ ಕರ್ಮಗಳನ್ನು ಮಾಡತಕ್ಕದ್ದು, ಶುಭದಿನದಲ್ಲಿ ದೇಶಕಾಲಾದಿಗಳನ್ನುಚ್ಚರಿಸಿ “ಅನೇಕ ಜನ್ಮಾರ್ಜಿತ ಅನಪತ್ಯತ್ವ ಮೃತಾಪತ್ಯಾದಿ ನಿದಾನಭೂತ, ಬಾಲಘಾತ, ನಿಕ್ಷೇಪಾಹರಣ, ವಿಪ್ರರತ್ನಾಪಹರಣಾದಿಜನ್ಯ ದುರಿತ ಸಮೂಲನಾಶದ್ವಾರಾ ದೀರ್ಘಾಯುಷ್ಮQಹುಪುತ್ರಾದಿ ಸಂತತಿ ಪ್ರಾಪ್ತಿಕಾಮೋ ಹರಿವಂಶಂ ಪ್ರೋಸ್ವಾಮಿ ಹೀಗೆ ಸಂಕಲ್ಪಿಸುವದು. ದಂಪತಿಗಳಿಬ್ಬರೂ ಕರ್ತೃಗಳಾದರೆ “ಶೂಷ್ಮಾವಃ” ಹೀಗೆ ಸಂಕಲ್ಪಿಸಿ ಗಣೇಶಪೂಜನ, ಸ್ವಸ್ತಿವಾಚನ, ನಾಂದೀಶ್ರಾದ್ಧಾದಿಗಳನ್ನೂ, ವಿನಾಯಕ ಶಾಂತಿಯನ್ನೂ ಮಾಡಿ ಹರಿವಂಶ ಶ್ರವಣಕ್ಕೋಸ್ಕರ “ಶ್ರಾವಕನೊಬ್ಬನ್ನು ವರಿಸತಕ್ಕದ್ದು; ಮತ್ತು ಅವನಿಗೆ ವಸ್ತ್ರಾಲಂಕಾರಾದಿಗಳನ್ನು ಕೊಟ್ಟು ಸತ್ಕರಿಸುವದು. ವಾಚಕನಿಗೆ ಪ್ರತಿನಿತ್ಯ ಪಾಯಸಾದಿಗಳಿಂದ ಭೋಜನ ಮಾಡಿಸುವದು. ದಂಪತಿಗಳು ಪ್ರತಿನಿತ್ಯ “ಪ್ರಾಯಂತಾಂ” ಇತ್ಯಾದಿ ವೈದಿಕ ಮಂತ್ರಗಳಿಂದಲೂ “ಸುರಾಸ್ಕಾಂ” ಇತ್ಯಾದಿ ಪುರಾಣೋಕ್ತ ಮಂತ್ರಗಳಿಂದಲೂ ಸ್ನಾನಮಾಡಿ ಅಲಂಕೃತರಾಗಿ ತದೇಕಚಿತ್ತದಿಂದ ಕೇಳತಕ್ಕದ್ದು. ಶ್ರವಣಸಮಾಪ್ತಿಯವರೆಗೂ ತೈಲ, ತಾಂಬೂಲ, ಕ್ಷೌರ, ಮೈಥುನ, ಮಂಚಶಯನ ಮೊದಲಾದವುಗಳನ್ನು ತ್ಯಜಿಸುವದು, ಮತ್ತು ಹವಿಷ್ಯಾನ್ನವನ್ನುಣ್ಣುವದು. ಮುಗಿದ ನಂತರ ವಾಚಕನಿಗೆ ಗೋವು ಮತ್ತು ಮೂರು ಸುವರ್ಣ ಅಥವಾ ಒಂದು ಸುವರ್ಣವನ್ನು ದಕ್ಷಿಣೆಯಾಗಿ ಕೊಡುವದು. (೮೦ ಗುಂಜಿಯ ತೂಕದ ಬಂಗಾರಕ್ಕೆ ‘ಸುವರ್ಣ’ವನ್ನುವರು) “ಪ್ರತ್ಯವರೋಹ” ಈ ಮಂತ್ರದಿಂದ ಸಹಸ್ರಸಂಖ್ಯಾಕ ತಿಲ ಆಜ್ಯಗಳಿಂದ ೧೮೦ ಧರ್ಮಸಿಂಧು ಹೋಮಿಸಿ ನೂರು ಬ್ರಾಹ್ಮಣರು, ಇಪ್ಪತ್ತುನಾಲ್ಕು ದಂಪತಿಗಳು ಇವರನ್ನು ಪಾಯಸಾದಿಗಳಿಂದ ಭೋಜನ ಮಾಡಿಸತಕ್ಕದ್ದು. ಹೀಗೆ ಹರಿವಂಶ ಶ್ರವಣ ವಿಧಿಯು. ಬೇರೆ ವಿಧಾನಗಳು ಸುವರ್ಣದಿಂದ ಬಾಲಕನ ಪ್ರತಿಮೆಯನ್ನು ಮಾಡಿ ತೊಟ್ಟಿಲು ಸಹಿತ ಬ್ರಾಹ್ಮಣನಿಗೆ ದಾನಮಾಡುವದು; ಅಥವಾ ವೃಷಭ ಇಲ್ಲವೆ ಗೋವನ್ನು ದಾನಮಾಡುವದು. (ಸವತ್ಸ) ಮಹಾರುದ್ರ ಜಪವನ್ನು ಮಾಡುವದು, ಲಕ್ಷಕಮಲಗಳಿಂದ ಶಿವಪೂಜೆಯನ್ನು ಮಾಡುವದು, ಬ್ರಾಹ್ಮಣರಿಗೆ ವಿವಾಹ ಮಾಡಿಸುವದು, ಸ್ವರ್ಣಧೇನು ದಾನಮಾಡುವದು, ಮೃತದಿಂದ ತುಂಬಿದ ಕುಂಭವನ್ನು ದಾನಮಾಡುವದು ಇತ್ಯಾದಿ ಇವನ್ನೆಲ್ಲ ಸಂಕ್ಷೇಪವಾಗಿ ಹೇಳಲಾಗಿದೆ ಅಥವಾ ಪ್ರತಿದಿನ ಪಾರ್ಥಿವ ಲಿಂಗಪೂಜೆಮಾಡಿ “ಅಭಿಲಾಷಾಷ್ಟಕ ಸ್ತೋತ್ರ"ವನ್ನು ಇಡೀ ಸಂವತ್ಸರದಲ್ಲಿ ಪರಿಸುವದು. ಅಭಿಲಾಷಾಷ್ಟಕವನ್ನು ಕೌಸ್ತುಭಾದಿ’ಗಳಲ್ಲಿ ನೋಡತಕ್ಕದ್ದು. ಇಷ್ಟಾದರೂ ಫಲಪ್ರಾಪ್ತಿಯಾಗದಿದ್ದರೆ “ದತ್ತಪುತ್ರನನ್ನು ಸ್ವೀಕರಿಸತಕ್ಕದ್ದು. ದತ್ತಪುತ್ರಸ್ವೀಕಾರದಲ್ಲಿ ಗ್ರಾಹ್ಯಾಗ್ರಾಹ್ಯ ವಿಚಾರವು ಬ್ರಾಹ್ಮಣ ಜಾತಿಯವರಿಗೆ ದತ್ತಕ ಸ್ವೀಕಾರದಲ್ಲಿ ಅಣ್ಣ ತಮ್ಮಂದಿರ ಪುತ್ರನು ಮುಖ್ಯನು. ಆದುದರಿಂದ ಪ್ರಥಮದಲ್ಲಿ ಅವನಬಗ್ಗೆ ವಿಚಾರಿಸತಕ್ಕದ್ದು. ಅಂಥವನ ಅಭಾವದಲ್ಲಿ ಸಗೋತ್ರ, ಸಪಿಂಡರೊಳಗೆ ವಿಚಾರಿಸುವದು; ಅಥವಾ ಅಣ್ಣ ತಮ್ಮಂದಿರ ಸವತಿಯ ಮಗನ ಪುತ್ರನನ್ನು ಸ್ವೀಕರಿಸುವದು. ಅದು ಅಸಂಭವವಾದರೆ ಸಗೋತ್ರರಲ್ಲದ, ಪರಂತು ಸಪಿಂಡರೊಳಗೆ ಬರುವ ಮಾತುಲ, ತಾಯಿಯ ಅಣ್ಣ-ತಮ್ಮಂದಿರರ ಅಥವಾ ತಂದೆಯ ಅಕ್ಕತಂಗಿಯರ ಪುತ್ರನನ್ನು ನೋಡುವದು. ಅಂಥವರ ಅಭಾವದಲ್ಲಿ ಸಪಿಂಡನಾಗಿರದ ಸಮಾನ ಗೋತ್ರದವ, ಅವನ ಅಭಾವದಲ್ಲಿ ಸಪಿಂಡನಲ್ಲದ ಪರಗೋತ್ರದವನಾದರೂ ಆಗಬಹುದು. ಸಗೋತ್ರರಲ್ಲದ ಸಪಿಂಡರಲ್ಲಿ ಸ್ವಂತ ಅಕ್ಕ-ತಂಗಿಯರ ಪುತ್ರ ಮತ್ತು ತನ್ನ ಮಗಳ ಮಗ ಇವರು ವರ್ಜ್ಯರು. ಮಾತುಲನೂ ವರ್ಜನು. ಯಾಕೆಂದರೆ ವಿರುದ್ಧ ಸಂಬಂಧಿತ್ವವುಂಟಾಗುವದು. ಮಾತುಲನಲ್ಲಿ “ಮಗ” ನೆಂಬ ಭಾವನೆಯು ನೆಲೆಯೂರುವದಿಲ್ಲ. ಇದರಂತೆ ಸಗೋತ್ರ-ಸಪಿಂಡರಲ್ಲಿ ಅಣ್ಣ ಅಥವಾ ತಂದೆಯ ಅಣ್ಣ ತಮ್ಮಂದಿರು ಗ್ರಾಹ್ಮರಾಗುವದಿಲ್ಲ. ಬ್ರಾಹ್ಮಣಾದಿ ವರ್ಣದವರಿಗೆ ಸಮಾನ ವರ್ಣದವನೇ ಆಗತಕ್ಕದ್ದು. ಇನ್ನು ದೇಶವರತ್ವದಿಂದ “ಗುರ್ಜರರು” “ಆಂಧ್ರ"ರು ಇತ್ಯಾದಿ ಹೆಸರನ್ನು ಹೊಂದಿದವರಾದರೂ ಚಿಂತೆಯಿಲ್ಲ. ಸಮಾನ ಜಾತೀಯರಾದರೆ ಸರಿ, ದತ್ತಕನಿಗೆ ಅಣ್ಣ ತಮ್ಮಂದಿರು ಇರಬೇಕು. ಪ್ಪಪುತ್ರನನ್ನು ದತ್ತಕಕ್ಕಾಗಿ ಕೊಡತಕ್ಕದ್ದಲ್ಲ, ತಕ್ಕೊಳ್ಳತಕ್ಕದ್ದೂ ಅಲ್ಲ. ಶೂದ್ರನಿಗೆ ಮಗಳ ಮಗ, ಅಕ್ಕತಂಗಿಯರ ಮಗನಾದರೂ ಅಡ್ಡಿಯಿಲ್ಲ. ದತ್ತಕನ ವಿಷಯದಲ್ಲಿ “ಅಪುತ್ರನಾದವನಿಗೆ ಸ್ವರ್ಗವಿಲ್ಲ” “ಹುಟ್ಟಿದ ಬ್ರಾಹ್ಮಣನು ಮೂರು ಋಣಗಳಿಂದ ಯುಕ್ತನಾಗುತ್ತಾನೆ” ಇತ್ಯಾದಿ ಶಾಸ್ತ್ರಗಳಿಂದ ಪುತ್ರತ್ವ ಪ್ರಾಪ್ತಿಯಿಲ್ಲದಿದ್ದರೆ ಉಂಟಾಗುವ ದೋಷಕ್ಕೆ ಅಪವಾದವನ್ನು “ಮನುಸ್ಮೃತಿ"ಯಲ್ಲಿ ಅಣ್ಣ ತಮ್ಮಂದಿರೊಳಗೆ ಯಾವನೊಬ್ಬನಾದರೂ ಪುತ್ರವಂತನಾದರೆ ಉಳಿದವರೆಲ್ಲರೂ ಪುತ್ರವಂತರೇ ಆಗುವರು” ಎಂದು ಪರಿಚ್ಛೇದ - ೩ ಪೂರ್ವಾರ್ಧ ೧೮೧ ಹೇಳಿದೆ. ಆದುದರಿಂದ ಅಣ್ಣ ತಮ್ಮಂದಿರುಳ್ಳವನು ಅಪುತ್ರನಾದಾಗ ದತ್ತಕಪುತ್ರನನ್ನು ಮಾಡಿಕೊಳ್ಳುವ ಅಗತ್ಯವೇನಿದೆ? ವಿಧಿಪೂರ್ವಕ ದತ್ತಕನನ್ನೇ ಮಾಡಿಕೊಳ್ಳದಿದ್ದರೂ ಭ್ರಾತೃಪುತ್ರನು ಪುತ್ರನೇ ಆದಂತಾಯಿತಲ್ಲವೇ? ಎಂದರೆ ಹಾಗಲ್ಲ. ದತ್ತಕ ತಕ್ಕೊಳ್ಳದಿದ್ದರೂ ಪುತ್ರನಂತೆಯೇ ಆಗುತ್ತಾನೆ ಎಂದರೆ ಪುತ್ರಸದೃಶನಾಗುತ್ತಾನೆ-ಎಂದರ್ಥ. ಇಂಥ ಪುತ್ರಸದೃಶನೇ ಆಗಿದ್ದಾಗ ದತ್ತಕಗೃಹಣಕ್ಕೆ ವಿಶೇಷ ಪ್ರಾಶಸ್ತ್ರವುಂಟಾಗುವದು. “ಮುಖ್ಯದ ಅಭಾವದಲ್ಲಿ ಸದೃಶವಾದದ್ದು ಗ್ರಾಹ್ಯ” ಎಂದು ನ್ಯಾಯವಿದೆ. ವಿಧಿವತ್ತಾಗಿ ಪ್ರತಿಗೃಹಮಾಡದಿದ್ದರೆ ಬರೇ ಪುತ್ರಸದೃಶನಾದ ಭ್ರಾತೃಪುತ್ರನು ನೇರವಾಗಿ ಇವನ ಉತ್ತರಾಧಿಕಾರಿಯಾಗುವದಿಲ್ಲ. ಈ ಯಜಮಾನನ ಸ್ವತ್ತಿನಲ್ಲೂ ಪಿಂಡಪ್ರದಾನಾದಿಗಳಲ್ಲೂ ಭ್ರಾತೃಪುತ್ರನ ಸ್ಥಾನವು ಪ್ರಥಮವಾಗಿಬರುವಂತಿಲ್ಲ. “ಔರಸ ದತ್ತಕ ಮೊದಲಾದ ದ್ವಾದಶ ಪುತ್ರರು, ಹೇಗೆ ಮೊದಲು ಧನಹಾರಿತ್ವ ಪಿಂಡನಾದಿಗಳಲ್ಲಿ ಅಧಿಕಾರಿಗಳೂ ಅದರಂತೆ ಭ್ರಾತೃಪುತ್ರನು ಬರುವದಿಲ್ಲ. ಪತ್ನಿಯ ನಂತರ ಪುತ್ರಿ, ತಂದೆ ತಾಯಿಗಳು, ಅವರ ಅಭಾವದಲ್ಲಿ ಅಣ್ಣ ತಮ್ಮಂದಿರು, ಇವರ ಅಭಾವದಲ್ಲಿ ಅಣ್ಣ ತಮ್ಮಂದಿರ ಪುತ್ರರು, ಅವರ ಅಭಾವದಲ್ಲಿ ಗೋತ್ರಜರು, ಇಲ್ಲವೆ ಬಂಧುಗಳು, ಇತ್ಯಾದಿ ಕ್ರಮದಿಂದ ಅಧಿಕಾರವನ್ನು ಹೇಳುವಾಗ ಭ್ರಾತೃವಿನನಂತರವೇ ಭ್ರಾತೃಪುತ್ರರನ್ನು ಗಣಿಸಿರುವದರಿಂದ “ದತ್ತಕ ತಕ್ಕೊಳ್ಳದಿದ್ದರೂ ಔರಸ ಪುತ್ರರಂತೆ ಸ್ವತ್ತಿನಲ್ಲಿ (ಧನಹಾರಿತ್ವ) ಅಧಿಕಾರಿಗಳು” ಎಂದಾಗುವದಿಲ್ಲ. ಆದಕಾರಣ ಪತ್ನಿಗಿಂತ ಮೊದಲು “ತನ್ನ ಪಿಂಡದಾನ, ಧನಗ್ರಹಣಗಳಲ್ಲಿ ಅಧಿಕಾರಿಯಾದವನೊಬ್ಬ ಪುತ್ರನೇ ಬೇಕೆಂದಿಚ್ಛಿಸಿ ವಿಧಿಪೂರ್ವಕ ಸ್ವೀಕರಿಸಲ್ಪಟ್ಟವನೇ ಅಧಿಕಾರಿಯಾಗುತ್ತಾನೆ. ಇಲ್ಲವಾದರೆ ಆಗುವದಿಲ್ಲ. ಅಂಥ ಇಚ್ಛೆಯಿಂದ ಸ್ವೀಕರಿಸದಿದ್ದರೆ ಪಿತೃಋಣ ವಿಮೋಚನರೂಪವಾದ ಪರಲೋಕದ ಸಂಬಂಧಮಾತ್ರಕ್ಕಾಗಿ (ಅಂದರೆ ‘ಅಪುತ್ರಿಕನಿಗೆ ಸ್ವರ್ಗವಿಲ್ಲ’ ಎಂಬ ವಿಷಯಕ್ಕಾಗಿ) ದತ್ತಕನೇ ಬೇಕೆಂದಿಲ್ಲ, ಅಣ್ಣ-ತಮ್ಮಂದಿರ ಪುತ್ರರಿದ್ದರೂ ಅದು ಹಿಂದೆ ಹೇಳಿದ ಮನುವಚನದಂತೆ ಸಿದ್ಧಿಸುವದು. ಅಂತೂ “ಭ್ರಾಣಾಮೇಕಜಾತಾನಾಂ” ಎಂಬ ವಚನವು ದತ್ತಕನ ಸ್ವತ್ತುಸ್ವೀಕಾರದ ಉದ್ದೇಶಕ್ಕೆ ಭಂಗತರುವಂಥದ್ದಲ್ಲ. ಹೀಗೆ ಅದರ ತಾತ್ಪರ್ಯವು. || 0 ಕೆಲ ಪ್ರದೇಶಗಳಲ್ಲಿ ವೈದಿಕವಿಧಿ ಹೊರತಾಗಿ ಕೊಡುವ ಮತ್ತು ತಕ್ಕೊಳ್ಳುವವರ ಸಮ್ಮತಿಯಿಂದ, ಅಥವಾ ಸರಕಾರದ ಪರವಾನಗಿಯಿಂದ, ಅಥವಾ ಬರೇ ಉಪನಯನ ಮಾತ್ರ ಮಾಡುವದರಿಂದ, ಸಗೋತ್ರ-ಸಪಿಂಡರೊಳಗೆ ಪುತ್ರನನ್ನಾಗಿ ಸ್ವೀಕರಿಸುವ ವ್ಯವಹಾರ ಕಂಡುಬರುತ್ತದೆ. ಆದರೆ ಆ ವಿಷಯಕ್ಕೆ ಮೂಲವು(ಆಧಾರ) ಇರುವದಿಲ್ಲ; ಮತ್ತು ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ:- ಒಬ್ಬನಿಗೆ ಅನೇಕ ಹೆಂಡರಿದ್ದು ಅವರಪೈಕಿ ಯಾವಳಾದರೂಬ್ಬಳಿಗೆ ಪುತ್ರನಿದ್ದರೂ ಎಲ್ಲ ಸವತಿಯರೂ ಪುತ್ರವತಿಯರೆಂದೇ ತಿಳಿಯತಕ್ಕದ್ದು. ಇದರಿಂದ ಸಪಪುತ್ರನನ್ನು ಮತ್ತೊಬ್ಬ ಸವತಿಯು ದತ್ತಕ ತೆಗೆದುಕೊಳ್ಳದಿದ್ದರೂ ಆ ಪುತ್ರನಿಗೆ ಪುತ್ರತ್ವ ಹಾಗೂ ಪಿಂಡದಾನಾದ್ಯಧಿಕಾರವು ಪ್ರಾಪ್ತವಾಗುವದು. ಆದಕಾರಣ ಒಬ್ಬ ಸವತಿಯು ತನಗಿರುವ ಪುತ್ರನನ್ನು ಇನ್ನೊಬ್ಬ ಸವತಿಗೆ ದತ್ತಕಕೊಡಲು ಬರುವದಿಲ್ಲ. ಪ್ರತಿಗ್ರಹ ಮಾಡಲೂ ಬರುವದಿಲ್ಲ. ಶೂದ್ರರಾದವರು ಮಗಳ ಮಗ ಹಾಗೂ ಅಕ್ಕತಂಗಿಯರ ಪುತ್ರನನ್ನು ದತ್ತಕ ತೆಗೆದುಕೊಳ್ಳಬಹುದು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರಲ್ಲಿ ಅಕ್ಕ-ತಂಗಿಯರ ಪುತ್ರ ಹಾಗೂ ಮಗಳ ಮಗ-ಇವರ ಬಗ್ಗೆ ನಿಷೇಧವಿದೆ. ಒಬ್ಬನೇ ೧೮೨ ಧರ್ಮಸಿಂಧು ಆದ ಪುತ್ರ ಅಥವಾ ಹಿರೇಮಗ, ಇವರನ್ನು ದತ್ತಕ ಕೊಡತಕ್ಕದ್ದಲ್ಲ, ಹಾಗೂ ಸ್ವೀಕರಿಸತಕ್ಕದ್ದಲ್ಲ. ಹೀಗೆ ವಚನವಿದೆ. ಅನೇಕ ಔರಸ ಪುತ್ರರಿದ್ದರೆ ಒಬ್ಬನನ್ನು ಕೊಡಬಹುದು. ದತ್ತಕ ಪುತ್ರನನ್ನು ಸ್ವೀಕರಿಸಿದ ನಂತರ ಔರಸ ಪುತ್ರನು ಜನಿಸಿದರೆ, ಆಗ ಎರಡು ಪುತ್ರರಾದಂತಾಗಿ, ಒಬ್ಬನನ್ನು ದತ್ತಕಕೊಡಬಹುದೆಂದು ಭಾವಿಸಿ, ಆ ದತ್ತಪುತ್ರನನ್ನಾಗಲೀ, ಆ ಒಬ್ಬ ಔರಸ ಪುತ್ರನನನ್ನಾಗಲೀ ಬೇರೆಯವರಿಗೆ ದತ್ತಕಕ್ಕಾಗಿ ಕೊಡತಕ್ಕದ್ದಲ್ಲ. ಪತಿಸಹಿತಳಾದ ಸ್ತ್ರೀಯು ಪತಿಯ ಅನುಜ್ಞೆಯಿಂದ ಪುತ್ರನನ್ನು ಕೊಡಬಹುದು; ಅಥವಾ ತಕ್ಕೊಳ್ಳಲೂ ಬಹುದು. ಪತಿಯ ಅನುಜ್ಞೆಯ ಹೊರತಾಗಿ ಸ್ತ್ರೀಗೆ ದತ್ತಕನನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲ. ಇನ್ನು ವಿಧವೆಯಾದವಳು ಪತಿಯು ಮರಣಕಾಲದಲ್ಲಿ “ನೀನು ದತ್ತಕ ಪುತ್ರನನ್ನು ಮಾಡಿಕೋ” ಎಂದು ಹೇಳಿ ಮೃತನಾದರೆ, ಅಂಥ ವಿಧವೆಯು ಮುಂದೆ ದತ್ತಕನನ್ನು ಸ್ವೀಕರಿಸಬಹುದು. ಪತಿಯು ಆಕಸ್ಮಿಕವಾಗಿ ಹೇಳದೆ ಮೃತನಾಗಿದ್ದರೆ, ಮರಣಾನಂತರ ಆಸ್ತೇಷ್ಟರು “ನಿನ್ನ ಪತಿಗೆ ನೀನು ದತ್ತಕನನ್ನು ತೆಗೆದುಕೊಳ್ಳುವದು ಒಳ್ಳೆಯದೆಂದು ಹೇಳುತ್ತಿದ್ದ” ಎಂದು ಪತಿಯ ಹೃದ್ಗತವನ್ನು ಹೇಳಿದಲ್ಲಿ, ಸ್ಪಷ್ಟವಾಗಿ ಸಮ್ಮುಖದಲ್ಲಿ ಹೇಳದಿದ್ದರೂ, ಪುತ್ರಸ್ವೀಕಾರ ಮಾಡಬಹುದೆಂಬುದು ಸರ್ವಸಮ್ಮತವು. ಹೀಗೆ ಎರಡೂವಿಧದ ಅನುಜ್ಞೆಯೂ ಇಲ್ಲದಾಗಲೂ, ಪತಿಯ ಮೂಕಸಮ್ಮತಿಯಿತ್ತೆಂದು ಭಾವಿಸಿ, ಆಯಾಯ ಶಾಸ್ತ್ರ ವಚನದಂತೆ ನಿತ್ಯ, ಕಾಮ್ಯ ವ್ರತಾಚರಣೆಗಳನ್ನು ಮಾಡುವಂತೆ ಪುತ್ರಪ್ರತಿಗ್ರಹವನ್ನೂ ಮಾಡಬಹುದು. “ನಾಪುತ್ರ ಲೋಕೋಸ್ತಿ” ಎಂಬ ಸಾಮಾನ್ಯ ವಚನದಿಂದಲೇ ವಿಧವೆಗೆ ಅಧಿಕಾರವುಂಟಾಗುವದು. “ನಪುತ್ರಂದದ್ಯಾತ್ ಪ್ರತಿ ಸೃಷ್ಠಿಯಾದ್ವಾ ಅನ್ಯತ್ರಭತ್ರ್ರನುಜ್ಞಾನಾತ್ ಅಂದರೆ ಸ್ತ್ರೀಯು ಪತಿಯ ಅನುಜ್ಞೆಯ ಹೊರತಾಗಿ ಪುತ್ರನನ್ನು ಕೊಡಬಾರದು ಮತ್ತು ತೆಗೆದುಕೊಳ್ಳಬಾರದೆಂದು “ವಸಿಷ್ಟ ವಚನ"ಕ್ಕೆ, ಪತಿಯು ಖಂಡಿತವಾಗಿ ಪುತ್ರನನ್ನು ನೀನು ಸ್ವೀಕರಿಸ ಕೂಡದೆಂದು ಹೇಳಿದ ವಿಷಯದಲ್ಲಿ ತಾತ್ಪರ್ಯವೇ ಹೊರತು ಯಾವ ಹೇಳಿಕೆಯೂ ಇಲ್ಲದಾಗ, ವಿಧವೆಯು ದತ್ತಕ ಸ್ವೀಕಾರ ಮಾಡಕೂಡದೆಂಬ ವಿಷಯದಲ್ಲಿ ತಾತ್ಪರ್ಯವಿಲ್ಲ. ಯಾಕೆಂದರೆ ಶಾಸ್ತ್ರಪ್ರಾಪ್ತವಾದ ನಿಷೇಧವೇನೂ ಇರುವದಿಲ್ಲ. ಅಂಥ ವಿಧವಾಗ ಪುತ್ರಪ್ರತಿಗ್ರಹಕ್ಕೆ ನಿಬಂಧನೆಯುಂಟಾದಲ್ಲಿ ವೃತ್ತಿಪ, ಪಿಂಡಚ್ಛೇದಾದಿ ದೋಷಪ್ರಾಪ್ತವಾಗುವದರಿಂದ ನರಕ ಪ್ರಾಪ್ತಿಯಾಗುವದು. “ಬ್ರಾಹ್ಮಣವೃತ್ತಿಗೆ ಪ್ರತಿಕೂಲತೆಯನ್ನುಂಟುಮಾಡಿದವನು ಮಲಭಕ್ಷಕಕೃಮಿ” ಯಾಗುವನೆಂದು ವಚನವಿದೆ. ಇದನ್ನು ಕೌಸ್ತುಭದಲ್ಲಿ ವಿಸ್ತರವಾಗಿ ಹೇಳಿದೆ. ಸ್ತ್ರೀಯರು ದತ್ತಸ್ವೀಕಾರ ಮಾಡುವದಾದರೆ ವ್ರತಾದಿಗಳಂತೆ ಹೋಮಾದಿಗಳನ್ನು ಬ್ರಾಹ್ಮಣದ್ವಾರಾ ಮಾಡತಕ್ಕದ್ದು. ಶೂದ್ರನಿಗಾದರೂ ಇದೇ ನಿಯಮವು. ಬ್ರಾಹ್ಮಣನು ಶೂದ್ರನಿಂದ ದಕ್ಷಿಣೆಯನ್ನು ಪಡೆದು, ವೈದಿಕ ಮಂತ್ರಗಳಿಂದ ಶೂದ್ರನ ಸಂಬಂಧವಾದ ಹೋಮಾದಿಗಳನ್ನು ಮಾಡಿದರೆ ಶೂದ್ರನ ಪುಣ್ಯಕ್ಕೇನೂ ಚ್ಯುತಿಯಿಲ್ಲ. ಆದರೆ ಬ್ರಾಹ್ಮಣನಿಗೇ ರೋಷವುಂಟಾಗುವದು. ಪುತ್ರನನ್ನು ಸ್ವೀಕರಿಸಿ ಜಾತಕರ್ಮಾದಿ ಚೌಲಾಂತವಾಗಿ ಸಂಸ್ಕಾರ ಮಾಡುವುದು ಮುಖ್ಯ ಪಕ್ಷವು, ಆದು ಅಸಂಭವವಾದಲ್ಲಿ ಸಗೋತ್ರ-ಸಪಿಂಡರೊಳಗಿನ ಒಬ್ಬನನ್ನು ದತ್ತಕ ಮಾಡಿಕೊಳ್ಳುವದು. ಆತನಿಗೆ ಉಪನಯನ ಅಥವಾ ವಿವಾಹವಾಗಿದ್ದರೂ ಚಿಂತೆಯಿಲ್ಲ. ಆದರೆ ಆ ದತ್ತಕನಿಗೆ ಪುತ್ರನಾಗಿರಕೂಡದೆಂದು ನನಗೆ ತೋರುತ್ತದೆ. ಅಸಪಿಂಡ ಹಾಗೂ ಪರಿಚ್ಛೇದ - ೩ ಪೂರ್ವಾರ್ಧ ೧೮೩ ಸಗೋತ್ರದವನಾದರೆ ಉಪನಯನ ಮಾತ್ರ ಆಗಿರತಕ್ಕದ್ದು. ವಿವಾಹವಾಗಿರಬಾರದು. ಹೀಗೆಯೂ ನನಗೆ ತೋರುತ್ತದೆ. ಭಿನ್ನಗೋತ್ರದವನಾಗಿದ್ದರೆ ಉಪನಯನವಾಗಿರಕೂಡದು ಕೆಲವರು ಉಪನಯನವಾಗಿದ್ದರೂ ಭಿನ್ನಗೋತ್ರದವನನ್ನು ಸ್ವೀಕರಿಸಬಹುದೆನ್ನುವರು. ಇಲ್ಲಿಗೆ ಗ್ರಾಹ್ಯಾಗ್ರಾಹ್ಯವಿಚಾರವು ಮುಗಿಯಿತು. ಋಗ್ವದಿಗಳಿಗೆ ಪುತ್ರಪ್ರತಿಗ್ರಹ ಪ್ರಯೋಗವು ಪೂರ್ವದಿನದಲ್ಲಿ ಉಪವಾಸವಿದ್ದು ಪವಿತ್ರವಾಣಿಯಾಗಿ ಪ್ರಾಣಾಯಾಮ ಮಾಡಿ ದೇಶಕಾಲಗಳನ್ನುಚ್ಚರಿಸಿ, “ಮಮ ಅಪ್ರಜಪ್ರಯುಕ್ತ ವೈತೃಕಋಣಾಪಾಕರಣ, ಪುನ್ನಾಮ ನರಕತ್ರಾಣದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಶೌನಕೋಕ್ತ ವಿಧಿನಾ ಪುತ್ರಪ್ರತಿಗ್ರಹಂ ಕರಿಷ್ಯ “ತರಂಗನ ಸ್ವಸ್ತಿವಾಚನಂ ಆಚಾರ್ಯವರಣು ವಿಷ್ಣು ಪೂಜನಂ ಅನ್ನದಾನಂಚ ಕರಿಷ್ಯ ಹೀಗೆ ಸಂಕಲ್ಪಿಸಿ ಆಚಾರ್ಯನನ್ನು ಮಧುಪರ್ಕದಿಂದ ಪೂಜಿಸಿ ವಿಷ್ಣುವನ್ನು ಆರಾಧಿಸಿ ಬ್ರಾಹ್ಮಣಭೋಜನಾದಿಗಳನ್ನು ಸಂಕಲ್ಪಿಸತಕ್ಕದ್ದು. ಆಚಾರ್ಯನು “ಯಜಮಾನಾನುಜ್ಞಯಾ ಪುತ್ರಪ್ರತಿಗ್ರಹಾಂಗನ ವಿಹಿತಂ ಹೋಮಂ ಕರಿಷ್ಯ ಹೀಗೆ ಸಂಕಲ್ಪಮಾಡಿ ಅಗ್ನಿಪ್ರತಿಷ್ಠೆ ಮಾಡಿ " ಚಕ್ಷುಷ್ಠಿ ಆಜೈನ” ಹೇಳಿದ ನಂತರ “ಸಹೃದಗ್ನಿ೦ ಸೂರ್ಯಾ ಸಾವಿತ್ರೀಂ ಷಡ್ವಾರಂ ಚರುಣಾ ಅಗ್ನಿಂ ವಾಯುಂ ಸೂರ್ಯಂ ಪ್ರಜಾಪತಿಂ ಚ ಆನ ಶೇಷಣ ಬ್ರಷ್ಟಕೃತ್ ಇತ್ಯಾದಿ ಅನ್ನಾಧಾನ ಮಾಡಿ ಇಪ್ಪತ್ತೆಂಟು ಮುಷ್ಟಿ ತಂಡುಲಗಳನ್ನು ನಿರ್ವಾಪ ಮಾಡಿ ಹಾಗೆಯೇ ಪ್ರೋಕ್ಷಿಸಿ ಆಜ್ಯಸಂಸ್ಕಾರಾಂತವಾಗಿ ಮಾಡಿ ದತ್ತಕ ಕೊಡುವವನ ಬಳಿಗೆ ಹೋಗಿ (ಏತಪುತ್ರಂದೇಹಿ) ಈತನಿಗೋಸ್ಕರ ಪುತ್ರನನ್ನು ಕೊಡು. ಹೀಗೆ ಬ್ರಾಹ್ಮಣನ ಮುಖದಿಂದ ಯಾಚಿಸುವದು. ಆಗ ‘ದಾತನು ದೇಶ ಕಾಲಗಳನ್ನು ಚ್ಚರಿಸಿ “ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪುತ್ರದಾನಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಗಣಪತಿಯನ್ನು ಪೂಜಿಸಿ ಪ್ರತಿಗ್ರಹ ಮಾಡುವವನನ್ನು ಯಥಾಶಕ್ತಿ ಸತ್ಕರಿಸಿ “ಯೇಯಜ್ಞನೇತಿ ಪಂಚಾನಾಂ ನಾಭಾನೇದಿಷ್ಟೂ ಮಾನವೋ ವಿಶ್ವೇದೇವಾಸ್ಕ್ರಿಷ್ಟುಪ್ ಪಂಚಮ್ಯನುಷ್ಟುಪ್ ಪುತ್ರದಾನೇ ವಿನಿಯೋಗ:” “ಯೇಯಜ್ಞನ ಈ ಐದು ಋಕ್ಕುಗಳ ಅಂತ್ಯದಲ್ಲಿ ಇಮಂಪುತ್ರಂ ತವಕ ಋಣಾಪಾಕರಣ ಪುನ್ನಾಮ ನರಕತ್ರಾಣಸಿದ್ಧರ್ಥಂ ಆತ್ಮನಃ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ತುಭ್ರಮಹಂ ಸಂಪ್ರದದೇ ನಮಮ ಪ್ರತಿಕೃಣ್ಣಾ ತು ಪುತ್ರಂ ಭವಾನ್” ಹೀಗೆ ಹೇಳಿ ಪ್ರತಿಗ್ರಹಮಾಡುವವನ ಹಸ್ತದಲ್ಲಿ ಜಲವನ್ನು ಚೆಲ್ಲುವದು. ಆಗ ಪ್ರತಿಗ್ರಹಮಾಡತಕ್ಕವನು “ದೇವಸ್ಯತ್ವಾ ಎಂಬ ಮಂತ್ರವನ್ನು ಹೇಳಿ ಎರಡೂ ಹಸ್ತಗಳಿಂದ ಸ್ವೀಕರಿಸಿ ತನ್ನ ತೊಡೆಯಲ್ಲಿಟ್ಟುಕೊಂಡು “ಅಂಗಾದಂಗಾತ್ ಸಂಭವಸಿ” ಈ ಮಂತ್ರದಿಂದ ಶಿರಸ್ಸಿನಲ್ಲಿ ಮೂಸಿ ಆತನಿಗೆ ವಸ್ತ್ರ ಕುಂಡಲಾದಿಗಳನ್ನು ತೊಡಿಸಿ ಗಾಯನ ವಾದ್ಯಾದಿಗಳಿಂದಲೂ ಸ್ವಸ್ತಿಮಂತ್ರಗಳಿಂದಲೂ ತನ್ನ ಮನೆಗೆ ಕರೆದೊಯ್ದು ಕಾಲುಗಳನ್ನು ತೊಳಕೊಂಡು ಆಚಮನಮಾಡಿ ಆಚಾರ್ಯನ ಬಲಬದಿಯಲ್ಲಿ ತಾನು ತನ್ನ ಬಲಭಾಗದಲ್ಲಿ ಪತ್ನಿ, ಹೀಗೆ ಕುಳಿತು ಪತ್ನಿಯ ತೊಡೆಯ ಮೇಲೆ ಆತನನ್ನು “ಪುತ್ರಃ” (ಪುತ್ರನು) ಎಂದು ಕೂಡ್ರಿಸುವದು. ಆಚಾರ್ಯನು ಬರ್ಹಿರಾಸಾದನಾದಿ ಆಜ ಭಾಗಾಂತ ಮಾಡಿ ಚರುವನ್ನು ತಕ್ಕೊಂಡು “ಯಾ ಹೃದೇತಿ ದ್ವಯೋರಾತ್ರೇಯೋವತೋಗಿ ಸ್ಕ್ರಿಷ್ಟುಪ್ ಪುತ್ರಪ್ರತಿಗ್ರಹಾಂಗ ಹೋಮೇ ವಿನಿಯೋಗಃ ಯಸ್ವಾಹೃದಾ” ಎಂಬ ಎರಡು ೧೮೪ ಧರ್ಮಸಿಂಧು ಮಂತ್ರಗಳಿಂದ ಒಂದೇ “ಅವದಾನ ಮಾಡಿ ಹೋಮಿಸುವದು. ಯಜಮಾನನು “ಆಶ್ಚಯ ಇದಂನಮಮ” ಹೀಗೆ ಹೇಳುವದು. “ತುಭ್ರಮಗ್ನಪರ್ಯವಹನ್ ಸೂರ್ಯ ಸಾವಿತ್ರಿ ಸೂರ್ಯಾಸಾವಿತ್ರನುಷ್ಟುಪ್ ಸೂರ್ಯಾಸಾವಿತ್ರಾ ಇದಂ ಸೋಮೋದದತ್ ಇತಿಪಂಚಾನಾಂ ಸೂರ್ಯಾಸಾವಿತ್ರಾ ಇದಂ” ಹೀಗೆ ಏಳು ಚರ್ವಾಹುತಿಗಳಿಂದ ಹೋಮಿಸಿ ಆಜ್ಯದಿಂದ ವ್ಯಸ್ತ, ಸಮಸ್ತವ್ಯಾಹೃತಿಯಿಂದ ಹೋಮಿಸಿ ಷ್ಟಕೃದಾದಿ ಹೋಮಶೇಷವನ್ನು ಮುಗಿಸಿ ಆಚಾರ್ಯನಿಗೆ ಗೋದಾನಮಾಡಿ, ಬ್ರಾಹ್ಮಣಸಂತರ್ಪಣೆ ಮಾಡತಕ್ಕದ್ದು. ಯಜುರ್ವೇದಿಯರಿಗೆ ಬೋಧಾಯನೋಕ್ತ ರೀತಿಯಿಂದ ಪ್ರಯೋಗ ರಾಜರ ಹಾಗೂ ಶಿಷ್ಟಜನರ ಮತ್ತು ಬಂಧು ಬಳಗದವರ ಅನುಮತಿಯನ್ನು ಪಡೆದು, ಸಂಕಲ್ಪ, ಆಚಾರ್ಯವರಣಾಂತಮಾಡಿ ಬ್ರಾಹ್ಮಣಭೋಜನವನ್ನೂ ಸಂಕಲ್ಪಿಸಿದ ನಂತರ, ಆಚಾರ್ಯನು ಸ್ಲಂಡಿಲೋಲ್ಲೇಖನಾದಿ ಪ್ರಣೀತಾಸಾದನಾಂತವಾಗಿ ಮಾಡಿದ ನಂತರ, ಪ್ರತಿಗ್ರಹಮಾಡುವ ಯಜಮಾನನು, ಕೊಡುವ ಯಜಮಾನನ ಸಮಕ್ಷಮವಾಗಿ “ಪುತ್ರಂ ಮೇದೇಹಿ” (ಪುತ್ರನನ್ನು ನನಗೆಕೊಡು) ಹೀಗೆ ಯಾಚನೆ ಮಾಡುವದು. ಆಗ ದಾತನು “ಕೊಡುತ್ತೇನೆ” ಎಂದು ಪ್ರತಿವಚನವನ್ನು ಹೇಳತಕ್ಕದ್ದು. ಆಮೇಲೆ ದಾತನು ಸಂಕಲ್ಪಾದಿ ಪುತ್ರದಾನಾಂತವಾಗಿ ಹಿಂದೆ ಹೇಳಿದಂತೆಯೇ ಮಾಡುವದು. ಸ್ವೀಕರಿಸುವವನು “ಧರ್ಮಾಯಸ್ವಾಗಸ್ವಾಮಿ, ಸಂತತ್ಯಾಗಸ್ವಾಮಿ” ಹೀಗೆ ಪರಿಗ್ರಹಿಸಿ ಆತನನ್ನು ವಸ್ತ್ರ, ಕರ್ಣಾಭರಣ, ಉಂಗುರ ಮೊದಲಾದವುಗಳಿಂದ ಅಲಂಕರಿಸತಕ್ಕದ್ದು. ಆಚಾರ್ಯನು ದರ್ಭಮಯವಾದ “ಬರ್ಹಿಯನ್ನೂ ಪಲಾಶಮಯವಾದ “ಇಲ್ಲ"ವನ್ನೂ ಸಂಗ್ರಹಿಸಿ, ಪರಿಧಾನ, ಪ್ರಕೃತಿ ಅಗ್ನಿಮುಖಾಂತಮಾಡಿ, ಚರುಶ್ರಪಣಾಂತದಲ್ಲಿ ಪೂರ್ವಾಂಗಹೋಮವನ್ನು ಮಾಡಿ “ಯಾಹೃದಾ” ಈ ಪುರೋನುವಾಕ್ಯವನ್ನು ಹೇಳಿ, “ಯಸ್ಮತ್ವಂ ಸುಕೃತೇ” ಹೀಗೆ ಯಾಜ್ಯಾಮಂತ್ರದಿಂದ ಹೋಮಿಸಿ, ವ್ಯಸ್ತ, ಸಮಸ್ತವ್ಯಾಹೃತಿ ಹೋಮಮಾಡಿ, ಸ್ಪಷ್ಟಕೃದಾದಿಗಳನ್ನು ಮಾಡುವದು. ಆಚಾರ್ಯನಿಗೆ ದಕ್ಷಿಣೆ, ವಸ್ತ್ರ, ಕುಂಡಲ, ಉಂಗುರ ಮೊದಲಾದವುಗಳನ್ನು ಕೊಡುವದು. ಹೀಗೆ ಯಜುರ್ವೇದಿಗಳ ಪ್ರಯೋಗವು. ದತ್ತಕನ ಗೋತ್ರ ಸಾಪಿಂಡ್ಯಾದಿ ನಿರ್ಣಯ ಪರಗೋತ್ರೋತ್ಪನ್ನ ದತ್ತಕನು ಅಭಿವಾದನ ಮತ್ತು ಶ್ರಾದ್ಧಾದಿ ಕಾರ್ಯಗಳಲ್ಲಿ ಎರಡು ಗೋತ್ರಗಳನ್ನು ಚ್ಚರಿಸತಕ್ಕದ್ದು. ಪಾಲಕತಂದೆಯು ಉಪನಯನ ಮಾಡಲಿ ಅಥವಾ ಮೊದಲೇ ಉಪನಯನವಾಗಿರಲಿ, ಈ ಹೇಳಿದಂತೆ ಗೋತ್ರೋಚ್ಚಾರಣೆಯು ಅಗತ್ಯವು. ಪಾಲಕ ತಂದೆಯು (ದತ್ತಕ ತೆಗೆದುಕೊಂಡ) ಚೌಲಾದಿ ಸಂಸ್ಕಾರಮಾಡಿದಲ್ಲಿ ಪಾಲಕನ ಒಂದೇ ಗೋತ್ರವನ್ನುಚ್ಚರಿಸುವದು. ವಿವಾಹ ವಿಷಯದಲ್ಲಿ ಯಾವ ದತ್ತಕನಾದರೂ ಜನಕ ಹಾಗೂ ಪಾಲಕತಂದೆಗಳ ಗೋತ್ರಪ್ರವರ ಸಂಬಂಧ ಉಳ್ಳ ಕನ್ನೆಯನ್ನು ಬಿಡತಕ್ಕದ್ದು, ಇದಕ್ಕೆ ಏಳುತಲೆಗಳ ಅಥವಾ ಐದುತಲೆಗಳ ಪರ್ಯಂತದ ನಿಯಮ ಕಂಡುಬರುವದಿಲ್ಲ. ಜನಕತಂದೆಯು ಉಪನಯನ ಮಾಡಿದಲ್ಲಿ, ಆ ಜನಕ ಮಾತಾಪಿತೃಗಳ ಕುಲದಲ್ಲಿ ಏಳು ಅಥವಾ ಐದು ಪುರುಷ ಪರ್ಯಂತದ ಸಾಪಿಂಡವನ್ನು ಹಿಡಿಯತಕ್ಕದ್ದು. ಸ್ವೀಕಾರಮಾಡಿದ ಪಾಲಕ ತಂದೆಯು ಉಪನಯನ ಮಾಡಿದರೆ ಎರಡೂ ಕಡೆಗಳಲ್ಲಿ ಅಂದರೆ ಪರಿಚ್ಛೇದ - ೩ ಪೂರ್ವಾರ್ಧ ೧೮೫ ಜನಕ-ಪಾಲಕರ ಪಿತೃಕುಲದಲ್ಲಿ ಐದು ತಲೆಗಳ (ಪಾಂಚ ಪೌರುಷ) ಹಾಗೂ ಮಾತೃಕುಲದಲ್ಲಿ ಮೂರು ತಲೆಗಳ (ತ್ರಿಪೂರುಷ) ಹೀಗೆ ಸಾಪಿಂಡವನ್ನು ಸ್ವೀಕರಿಸುವದು. ಪಾಲಕಪಿತನು ಜಾತಕರ್ಮಾದಿ ಉಪನಯನಾಂತ ಸಂಸ್ಕಾರಮಾಡಿದಲ್ಲಿ ಪಾಲಕತಂದೆಯ ಕುಲದಲ್ಲಿ ಸಾಪ್ತಪೂರುಷ, ಮಾತೃವಿನಿಂದ ಪಾಂಚಪೂರುಷ ಸಾಪಿಂಡವು ಗ್ರಾಹ್ಮವು. ಆಗ ಜನಕತಂದೆಯ ಕುಲದಲ್ಲಿ ಇದಕ್ಕಿಂತ ಕಡಿಮೆ ಸಾಪಿಂಡ್ಯವುಂಟಾಗುವದು. ಕೆಲವರು ದತ್ತಕಗ್ರಹಣವಾದ ಮೇಲೆ ಎರಡು ಕುಲದಲ್ಲಿಯೂ ಸಾಪಿಂಡ್ಯವು ಸರ್ವಥಾ ಕಡಿಮೆಯಾಗುವದೆಂದು ಹೇಳುವರು. ಹೀಗೆ ದತ್ತಕನ ಸಂತತಿಯವರಿಗೂ ಸಾಪಿಂಡ್ಯವನ್ನು ತಿಳಿಯತಕ್ಕದ್ದು. ದತ್ತಕನು ಮೃತನಾದಲ್ಲಿ ಎರಡೂ ಕಡೆಯ ತಂದೆ-ತಾಯಿಗಳಿಗೆ ತ್ರಿರಾತ್ರ ಆಶೌಚವು. ಸಪಿಂಡರಿಗೆ ಒಂದುದಿನ ಆಶೌಚವು. ಉಪನೀತವಾದ ದತ್ತಕನ ಮರಣದಲ್ಲಿ ಪಾಲಕನ ಸಪಿಂಡರಿಗೆ ದಶಾಹ ಆಶೌಚವೆಂದು “ನೀಲಕಂಠೀಯ ದತ್ತಕ ನಿರ್ಣಯ"ದಲ್ಲಿ ಹೇಳಿದೆ. ದತ್ತಕನಿಗಾದರೂ ಹೀಗೆಯೇ ಪೂರ್ವಾಪರ ತಂದೆತಾಯಿಗಳ ಮರಣದಲ್ಲಿ “ತ್ರಿರಾತ್ರ” ಆಶೌಚವು ಪೂರ್ವಾಪರ ತಂದೆಗಳ ಸಪಿಂಡರಿಗೆ ಒಂದು ದಿನ ಆಶೌಚವು. ಆ ತಂದೆತಾಯಿಗಳ ಉತ್ತರ ಕ್ರಿಯಾಚರಣೆ ಮಾಡಿದರೆ ಕರ್ಮಾಂಗವಾಗಿ “ದಶಾಹ” ಆಶೌಚವನ್ನು ತೆಗೆದುಕೊಳ್ಳಬೇಕಾಗುವದು. ದತ್ತಕನ ಪುತ್ರ-ಪೌತ್ರಾದಿಗಳ ಜನ್ಮ ಮರಣಗಳಲ್ಲಿ ಸಪಿಂಡರಿಗೆ ಏಕಾಹ ಸಪಿಂಡರೊಳಗೆ ದತ್ತಕನಾದರೆ ಎಲ್ಲರಿಗೂ ದಶರಾತ್ರಾಶೌಚವು ಪಾಲಕ ತಂದೆಗೆ ಪತ್ನಿ, ಪುತ್ರಿ ಮೊದಲಾದವರಿದ್ದರೂ ಪಿತೃಸ್ವತ್ತಿಗೆ ದತ್ತಕನೇ ಅಧಿಕಾರಿಯು, ದತ್ತಕ ಗ್ರಹಣಾನಂತರದಲ್ಲಿ ಔರಸಪುತ್ರನು ಜನಿಸಿದರೆ ತಂದೆಯ ಸ್ವತ್ತಿನಲ್ಲಿ ದತ್ತಕನಿಗೆ ನಾಲ್ಕರಲ್ಲೊಂದುಪಾಲು ಮಾತ್ರ ಅಧಿಕಾರವು ಹೊರತು ಸಮಭಾಗವಿಲ್ಲ. ಕೆಲವರು “ದತ್ತಕ ತೆಗೆದುಕೊಂಡ ತಂದೆಯು ವಿಧಿಪೂರ್ವಕ ಸ್ವೀಕಾರಮಾಡಿ ಜಾತಕರ್ಮಾದಿ ಉಪನಯನಾಂತ ಸಂಸ್ಕಾರಮಾಡಿದಲ್ಲಿ ದತ್ತಕನು ಸಮಭಾಗಕ್ಕೆ ಅಧಿಕಾರಿ"ಯು ಎಂದು ಹೇಳುವರು. ವಿಧಿಪೂರ್ವಕ ಸ್ವೀಕರಿಸದೆ ಬರೇ ಸಂಸ್ಕಾರಮಾತ್ರ ಮಾಡಿದಲ್ಲಿ ದತ್ತಕನಿಗೆ ವಿವಾಹಮಾತ್ರ ಲಾಭವೇ ಹೊರತು ಬೇರೆ ಯಾವ ಸ್ವತ್ತೂ ಸಿಗಲಾರದು. ಕಲವರು ಸಂಸ್ಕಾರಮಾಡಿದಲ್ಲಿ “ಚತುರ್ಥಾಂಶಕ್ಕೆ ಅರ್ಹನು” ಎಂದು ಹೇಳುವರು. ದತ್ತಕನಿದ್ದರೂ ಮಾತಾಪಿತೃಗಳ ಪಿಂಡದಾನಾದಿಗಳಲ್ಲಿ ಔರಸಪುತ್ರನಿಗೇ ಅಧಿಕಾರವು. ಜನಕ ತಂದೆಗೆ ಪಿಂಡದಾನದಲ್ಲಧಿಕಾರವುಳ್ಳ ಔರಸಪುತ್ರನಿಲ್ಲದಿದ್ದರೆ ಆಗ ದತ್ತಕನೇ ಅಧಿಕಾರಿಯು, ಜನಕ ತಂದೆ ಹಾಗೂ ಪಾಲಕ ತಂದೆ, ಇವರಿಬ್ಬರಿಗೂ ಶ್ರಾದ್ಧ ಮಾಡತಕ್ಕದ್ದು. ಇಬ್ಬರ ಸ್ವತ್ತನ್ನೂ ಸ್ವೀಕರಿಸತಕ್ಕದ್ದೆಂದು “ನೀಲಕಂಠೀಯ"ದಲ್ಲಿ ಹೇಳಿದೆ. ಇದರಂತೆ ಕನೈಯನ್ನು ದತ್ತಕ ತೆಗೆದುಕೊಂಡಾಗಲೂ ತಿಳಿಯತಕ್ಕದ್ದು. ಬೇರೆ ಗೋತ್ರದ ಕಟ್ಟೆಯನ್ನು ಸ್ವೀಕರಿಸಿದ್ದರೆ ವಿವಾಹಾದಿಗಳಿಗೆ ಎರಡು ಗೋತ್ರಗಳೂ ಈ ಹಿಂದೆಯೇ ಹೇಳಿದಂತೆ ವರ್ಜಗಳು, ಪುತ್ರ-ಪತ್ನಿಯರ ಅಭಾವದಲ್ಲಿ “ದತ್ತಕ"ಯೇ ಪಿತೃಧನಕ್ಕೆ ಅಧಿಕಾರಿಣಿಯಾಗುವಳು. ಹೀಗೆ ದತ್ತೋಪಯೋಗಿ ಸರ್ವನಿರ್ಣಯವು. ಇನ್ನು ಬರೇ ಕನ್ಯಾಸಂತತಿಯಾದವನು ಪುತ್ರನಸಲುವಾಗಿ “ಪುತ್ರಕಾಮೇಷ್ಟಿಯನ್ನು ಮಾಡತಕ್ಕದ್ದು. ಋತುವಾಗಿ ೬ ನೇ ದಿನದಲ್ಲಿ ಪತ್ನಿಸಹಿತನಾಗಿ ಅಭ್ಯಂಗಸ್ನಾನ ಮಾಡಿ ಪ್ರಾಣಾಯಾಮ ಸಂಕಲ್ಪಾದಿಗಳನ್ನು ಮಾಡಿ “ಪುತ್ರ ಕಾಮ: ಪುತ್ರಕಾಮೇಷ್ಟಿಂ ಕರಿಷ್ಯ” ಹೀಗೆ ೧೮೬ ಧರ್ಮಸಿಂಧು ಸಂಕಲ್ಪಿಸಿ ಪುಣ್ಯಾಹ ನಾಂದೀಶ್ರಾದ್ಧಗಳನ್ನು ಮಾಡಿ ಅಗ್ನಿಪ್ರತಿಷ್ಠೆಯನ್ನು ಮಾಡುವದು. “ಚಕ್ಷುಷಿ ಆನ ಅತ್ರಪ್ರಧಾನು, ಅಗ್ನಿಂ ಪಂಚವಾರಂ, ವರುಣಂ ಪಂಚವಾರಂ, ವಿಷ್ಣುಂ ಪೃಥ್ವಿ, ವಿಷ್ಣುಂ ಸೋಮಂ ಸೂರ್ಯಖಾವಿತ್ರೀಂ ಪಾಯಸೇನ ಶೇಷೇಣ ಸ್ಪಷ್ಟಕೃತ್‌” ಇತ್ಯಾದಿ ಅನಾಧಾನಮಾಡಿ, ನಿರ್ವಾ ಕಾಲದಲ್ಲಿ ಅಮಂತ್ರಕವಾಗಿ ಅರವತ್ತು ಮುಷ್ಟಿಗಳನ್ನು ನಿರ್ಮಾಪಮಾಡಿ ಹಾಗೆಯೇ ಪ್ರೋಕ್ಷಿಸಿ, ಬಿಳೇ ಕರವುಳ್ಳ ಬಿಳೇ ಆಕಳಿನ ಹಾಲಿನಿಂದ ಚರುವನ್ನು ಬೇಯಿಸಿ, ಆಜ್ಯಭಾಗಾಂತಮಾಡಿ ‘ಆತೇಗರ್ಭ ಇತಿ, ಅಗ್ನಿದೈತು ಇತಿ ಸೂಕ್ತದ್ವಯಸ್ಕ ಹಿರಣ್ಯಗರ್ಭಋಷಿ:, ಕ್ರಮೇಣ ಅಗ್ನಿ ವರುರೇವತೇ । ಅನುಷ್ಟುಪ್‌ಜಗತ್ಯಾ ಛಂದಸೀ ಪಾಯಸ ಚರುಹೋಮೇವಿ=ಆತೇಗರ್ಭೋ ಯೋನಿಮುತು ಪುಮಾನ್ ಬಾಣ ಇವೇಷುಧಿಂ | ಆವೀರೋ ಜಾಯತಾಂ ಪುತ್ರಸ್ತ ದಶಮಾಸ್ಯ: ಸ್ವಾಹಾ| ಅಗ್ನಯ ಇದಂ ||೧|| ಕರೋಮಿತ ಪ್ರಾಜಾಪತ್ಯ ಮಾಗರ್ಭೋ ಯೋನಿತುತೇ ಅನೂನಃ ಪೂರ್ಣೋಜಾಯತಾ ಮತ್ತೂಣೋs ಪಿಶಾಚಗೀತ: ಸ್ವಾಹಾ| ಅಗ್ನಯ ಇದಂ ||೨|| ಪುಮಾಂ ಪುತ್ರೋನಾರಿತಂ ಪುಮಾನನುಜಾಯತಾಂತಾನಿಭದ್ರಾಣಿ ಬೀಜಾನಿಋಭಾಜನಯಂತುನಸ್ವಾಹಾ | ಅಗ್ನಯ ಇದಂ||೩||ಯಾನಿಭದ್ರಾಣಿ ಬೀಜಾನಿಋಷಭಾ ಜನಯಂತಿನ: (ತೃತ್ವಂ ಪುತ್ರಾನ್ ವಿಂದಪ್ಪ ಸಾಪ್ರಸೂರ್ಧನುಕಾ ಭವಾಹಾ|ಅಗ್ನಯ ಇದಂ||೪|| ಕಾಮ:ಸಮೃಧೃತಾಂ ಮಕ್ಕಮಪರಾಜಿತ ಮೇವಮೇಯಂ ಕಾಮಂ ಕಾಮಯೇ ದೇವತಂಮೇ ವಾಯೋ ಸಮರ್ಧಯ ಸ್ವಾಹಾ|ಅಗ್ನಯ ಇದಂ||೫|| ಅಗ್ನಿತು ಪ್ರಥಮೋ ದೇವತಾನಾಂ ಸೋsಸ್ಕ ಪ್ರಜಾಂ ಮುಂಚತು ಮೃತ್ತು ಪಾಶಾತ್ ತದಯಂರಾಜಾ ವರುನುಮನ್ಯತಾಂ ಯಥೇಯಂಸ್ತ್ರೀ ಪೌತ್ರಮಘಂ ನರೋದಾತ್ಸಾಹಾ| ವರುಣಾಯೇದಂ ||oll ಇಮಾಮ ಸಾಯತಾಂ ಗಾರ್ಹಪತ್ಯ: ಪ್ರಜಾಮನಯತು ದೀರ್ಘಮಾಯುಃ! ಅಶೂನ್ನೊಪಸ್ಸಾ ಜೀವಾಮತ್ತು ಮಾತಾಪೌತ್ರಮಾನಂದಮಭಿ ಪ್ರಬುದ್ಧತಾ ಮಿಯಂಸ್ವಾಹಾ| ವರುಣಾಯೇದಂ||೨|| ಮಾತೇಗೃಹ ನಿಘೋಷ ಉತ್ಪಾದನ್ಯತ್ರ ತ್ವದ್ರುದ: ಸಂವಿಶಂತು ಮಾತ್ವಂ ಏಕೇಶರ ಆವಧಿಷ್ಠಾ ದೇವಪತ್ನಿ ಪತಿಲೋಕೇ ವಿರಾಜಪಶ್ಯಂತಿ ಪ್ರಜಾಂ ಸುಮನಸ್ಯಮಾನಾಂ ಸ್ವಾಹಾ| ವರುಣಾಯೇದು ||೩|| ಅಪ್ರಜಸ್ತಾಂ ಪೌತ್ರ ಮೃತ್ಯುಂ ಪಾಸ್ನಾನ ಮುತವಾಘಂ ರ್ಶೀ:ಜಮಿನ್ಮುಚ್ಯ ದ್ವಿಷದೃ ಪ್ರತಿಮುಂಚಾಮಿ ಪಾಶಂ ಸ್ವಾಹಾ| ವರುಣಾಯೇದಂ||೪|| ದೇವಕೃತಂ ಬ್ರಾಹ್ಮಣಂ ಕಮಾನಂ ತೇನ ಹಮ್ಮಿ ಯೋನಿಷದ: ಪಿಶಾಚಾನ್ಕ್ರವಾತ್ನಧರಾನ್ ಪಾತಯಾಮಿ ದೀರ್ಘಮಾಯುಸ್ತವ ಜೀವಂತು ಪುತ್ರಾ: ಸ್ವಾಹಾ| ವರುಣಾಯೇದಂ||೧|| ನಜಮೇಷತಿ ತಿಪ್ಪಣಾಂ ವಿಷ್ಣು ಸ್ವಷ್ಟಾ ಗರ್ಭಕರ್ತಾ ವಿಷ್ಣು ಪೃಥ್ವಿ ವಿಷ್ಣವೋನುಷ್ಟುಪ್ ಜಮೇಷ-ವಿಷ್ಣವ ಇದಂ||೧|| ಯಥೇಯಂ ಪೃಥಿವೀ= ಪೃಥಿವ್ಯಾ ಇದಂ||೨|| ಎಷ್ಟೋ ಶ್ರೇ.ನ=ವಿಷ್ಟವ ಇದಂ||೩|| ಸೂಧೇನುಂ ರಾಷ್ಟ್ರಗಳೂ ಗೌತಮ: ಸೋಮಷ್ಟುಪ್ ಧೇನು-ಮಾ ಇದು ||೧|| ತಾಃ ಪೂಷನ್ ಸೂರ್ಯಾ ಸಾವಿತ್ರಿ ತ್ರಿಷ್ಟುಪ್ ಪಾಯಸರುಹೋಮೆ ವಿನಿಯೋಗತಾಂಪೂಷಂವ=ಸೂರ್ಯಾಸಾವಿತ್ರಾ ಇರಂlini” ಹೀಗೆ ಹದಿನೈದು ಆಹುತಿಗಳನ್ನು ಹೋಮಿಸಿ ಸ್ಪಷ್ಟಕತ್ ಹೋಮವನ್ನು ಮಾಡಿ “ಅಪಶ್ಯಂತಿದ್ದ ಯೋಹ: ಪ್ರಜಾವಾನ್ ಪ್ರಾಜಾಪತ್ರ: ಪ್ರಜಾಪತಿಷ್ಟುಪ್ ಪುತಶೇಷಚರು ಪ್ರಾಯಶ್ಚಿತ್ತೆ ವಿನಿಯೋಗಃ ಆಪಶ್ಯಂತಾ’ ಈ ಎರಡು ಪರಿಚ್ಛೇದ

೩ ಪೂರ್ವಾರ್ಧ ೧೮೭ ಮಂತ್ರಗಳಿಂದ ದಂಪತಿಗಳು ಪ್ರಾಶನಮಾಡಿ “ಪಿಶಂಗಭೂಮಮಿತೃಸ್ಯ ದೈವೋದಾಸಿ: ಪ್ರಾರುಚೀಪ ಇಂದ್ಯೋಗಾಯ ನಾಭ್ಯಾಲಂಭನೇ ವಿನಿಯೋಗಃ ಪಿಶಂಗಭಷ್ಟಿ:” ಹೀಗೆ ಹೇಳಿ ದಂಪತಿಗಳು ನಾಭಿಯನ್ನು ಸ್ಪರ್ಶಿಸುವದು. ಯಜಮಾನನು ಪ್ರಾಯಶ್ಚಿತ್ತಾದಿ ಹೋಮಶೇಷವನ್ನು ಮುಗಿಸಿ, ಬ್ರಾಹ್ಮಣರಿಗೆ ಗೋವು, ಸುವರ್ಣ ಮೊದಲಾದವುಗಳನ್ನು ದಕ್ಷಿಣಾರ್ಥವಾಗಿ ಕೊಟ್ಟು, ದಂಪತಿಗಳು ರಾತ್ರಿಯಲ್ಲಿ ದರ್ಭೆಯ ಹಾಸಿಗೆಯಲ್ಲಿ ಮಲಗುವದು. ಹೀಗೆ ಪುತ್ರಿಕಾಮೇಷ್ಟಿ ಪ್ರಯೋಗವು. ಪುಂಸವನಾದಿ ಸಂಸ್ಕಾರಗಳು ಪುಂಸವನವನ್ನು ಗರ್ಭಚಿಹ್ನೆಯು ತೋರಿದಾಗ ಎರಡನೇ, ನಾಲ್ಕನೇ ಅಥವಾ ಆರನೇ, ಎಂಟನೇ ಮಾಸಗಳಲ್ಲಿ, ಅಥವಾ ಸೀಮಂತದೊಡನೆ ಮಾಡತಕ್ಕದ್ದು. ಶುಕ್ಲ ಪಂಚಮಿಯಿಂದ ಕೃಷ್ಣ ಪಂಚಮಿಯೊಳಗೆ ಚತುರ್ಥಿ, ನವಮೀ, ಚತುರ್ದಶೀ, ಹುಣ್ಣಿವೆ, ಅಮವಾಸೆ ಇವುಗಳನ್ನು ಬಿಟ್ಟು ಮಾಡತಕ್ಕದ್ದು. ರವಿವಾರ, ಕುಜವಾರ, ಗುರುವಾರಗಳು ಪ್ರಶಸ್ತವು. ಕೆಲವು ಕಡೆಯಲ್ಲಿ ಚಂದ್ರ, ಬುಧ, ಗುರುವಾರಗಳನ್ನೂ ಹೇಳಿದೆ. ನಕ್ಷತ್ರಗಳಲ್ಲಿ ಪುರುಷಸಂಜ್ಞಕ ನಕ್ಷತ್ರಗಳು ಶ್ರೇಷ್ಠಗಳು. ಅಂದರೆ ಪುಷ್ಯ, ಶ್ರವಣ, ಹಸ್ತ, ಪುನರ್ವಸು, ಮೃಗಶಿರ, ಅಭಿಜಿತ್, ಮೂಲಾ, ಅನುರಾಧಾ, ಅಶ್ವಿನಿ, ಇವು ಪುರುಷ ನಕ್ಷತ್ರಗಳು. ಇವುಗಳಲ್ಲಿ ಪುಷ್ಯವು ಮುಖ್ಯವು ಅಭಾವದಲ್ಲಿ ಶ್ರವಣ ಇಲ್ಲವೆ ಹೇಳಿದ ನಕ್ಷತ್ರಗಳು, ‘ಅನವಲೋಭನ’ ಎಂಬ (ಗರ್ಭಿಣಿಗೆ ಮಾಡುವ) ಸಂಸ್ಕಾರಕ್ಕೂ ಇದೇ ಹೇಳಿದ ಕಾಲಗಳೆಂದು ತಿಳಿಯತಕ್ಕದ್ದು, ಈ ‘ಅನವಲೋಚನ’ ವೆಂಬ ಸಂಸ್ಕಾರವನ್ನು ಪುಂಸವನದ ಸಂಗಡವೇ ಮಾಡತಕ್ಕದ್ದು. ಈ ಪುಂಸವನ ಅನವಲೋಭನ ಸಂಸ್ಕಾರಗಳನ್ನು ಪ್ರತಿ ಗರ್ಭದಲ್ಲಿಯೂ ಮಾಡತಕ್ಕದ್ದು. ಯಾಕೆಂದರೆ ಇವು ಗರ್ಭಸಂಸ್ಕಾರಗಳು, ಗರ್ಭಾಧಾನ, ಸೀಮಂತೋನ್ನಯನಗಳು ಸ್ತ್ರೀಸಂಸ್ಕಾರವಾಗಿರುವದರಿಂದ ಪ್ರತಿಗರ್ಭದಲ್ಲಿ ಅಗತ್ಯವಿಲ್ಲ. ಪ್ರಥಮ ಗರ್ಭದಲ್ಲಿ ಮಾತ್ರವೇ ಮಾಡತಕ್ಕದ್ದು. ಪ್ರಥಮ ಗರ್ಭದಲ್ಲಿ ಸಂಸ್ಕಾರ ಲೋಪವಾದಲ್ಲಿ ಪ್ರತಿಗರ್ಭದಲ್ಲಿಯೂ ಲೋಪಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುವದು. ಪ್ರಥಮ ಗರ್ಭದಲ್ಲಿ ಪುಂಸವನ, ಅನವಲೋಭನ ಲೋಪಪ್ರಾಯಶ್ಚಿತ್ತ ಮಾಡಿಕೊಂಡಲ್ಲಿ ದ್ವಿತೀಯಾದಿ ಗರ್ಭಗಳ ಸಂಸ್ಕಾರ ಸಿಪ್ಪಿಸುವದಿಲ್ಲ. “ಪ್ರಾಯಶ್ಚಿತ್ತ “ವೆಂದರೆ ಬರೇ ಪ್ರತ್ಯವಾಯ ಪರಿಹಾರಕವು. (ಪ್ರತ್ಯವಾಯ ಅಂದರೆ ವಿಧಿಯನ್ನುಲ್ಲಂಘಿಸುವದರಿಂದುಂಟಾದ ದೋಷ) ಹೊರತು “ಅಪೂರ್ವ” ವೆಂಬ ಅತಿಶಯದ ಉತ್ಪಾದಕವಲ್ಲ. (ಅಪೂರ್ವವೆಂದರೆ ಅದೃಷ್ಟರೂಪವಾದ ಫಲವನ್ನು ಕೊಡುವಂಥದ್ದು ಅದು ಸಂಸ್ಕಾರವಿಧಿಯಿಂದಲೇ ಉಂಟಾಗಬೇಕಾದದ್ದು. ಆದುದರಿಂದ ಪ್ರತಿಗರ್ಭದಲ್ಲಿಯೂ ಲುಪ್ತಪ್ರಾಯಶ್ಚಿತ್ತವು ಅವಶ್ಯವು, ಪುಂಸವನ, ಅನವಲೋಭನಗಳನ್ನು ಪ್ರಥಮ ಗರ್ಭದಲ್ಲಿ ಮಾಡಿದ್ದರೂ, ಪ್ರತಿಗರ್ಭದಲ್ಲಿ ಅವುಗಳ ಲೋಪಪ್ರಾಯಶ್ಚಿತ್ತವು ಅವಶ್ಯವು. ಪ್ರತಿಸಂಸ್ಕಾರಕ್ಕೆ ಪಾದಕೃಚ್ಛ ಪ್ರಾಯಶ್ಚಿತ್ತವು. ಬುದ್ಧಿಪೂರ್ವಕವಾಗಿ ಲೋಪವಾದಲ್ಲಿ ದ್ವಿಗುಣ ಪ್ರಾಯಶ್ಚಿತ್ತವನ್ನು ಮಾಡಬೇಕು. ಪುಂಸವನ, ಅನವಲೋಭನಗಳಲ್ಲಿ ಪತಿಯೇ ಕರ್ತನು. ಅವನ ಅಭಾವದಲ್ಲಿ ಮೈದುನ ಮೊದಲಾದವರು ಕರ್ತೃಗಳಾಗುವರು. ೧೮೮ ಧರ್ಮಸಿಂಧು ಸೀಮಂತ ಕಾಲ ಸೀಮಂತಸಂಸ್ಕಾರವನ್ನು ನಾಲ್ಕನೇ, ಆರನೇ, ಎಂಟನೇ ಅಥವಾ ಐದನೇ ಮಾಸದಲ್ಲಿ ಇಲ್ಲವೆ ಒಂಭತ್ತನೇ ಮಾಸದಲ್ಲಿಯಾದರೂ ಜನನ ಪೂರ್ವದಲ್ಲಿ ಮಾಡತಕ್ಕದ್ದು, ಸೀಮಂತೋನ್ನಯನ ಸಂಸ್ಕಾರವಾಗದೆ ಸ್ತ್ರೀಯು ಹಡೆದರೆ, ಆ ಪುತ್ರ ಸಹಿತಳಾಗಿಯೇ ಅಂಗಸಹಿತವಾದ ಸಂಸ್ಕಾರಕ್ಕೆ ಅರ್ಹಳಾಗುವಳು. ಆಗಲೂ ಪುಂಸವನಕ್ಕೆ ಹೇಳಿದ ಪಕ್ಷ, ತಿಥಿ, ವಾರ, ನಕ್ಷತ್ರಗಳೇ ಪ್ರಶಸ್ತಿಗಳೆಂದು ತಿಳಿಯುವದು. ಕೃಷ್ಣಪಕ್ಷದಲ್ಲಿ ದಶಮಿಯವರೆಗೂ ಅಡ್ಡಿ ಇಲ್ಲವೆಂಬುದಾಗಿ ಕೆಲ ಗ್ರಂಥಗಳಲ್ಲಿ ಉಕ್ತವಾಗಿದೆ. ಷಷ್ಠಿ, ಅಷ್ಟಮೀ, ದ್ವಾದಶೀ, ರಿಕ್ತಾತಿಥಿಗಳು, ಮತ್ತು ಹುಣ್ಣಿವೆ, ಅಮಾವಾಸೆ ಇವು ತ್ಯಾಜ್ಯಗಳು, ಆಪತ್ತಿನಲ್ಲಿ ಚತುರ್ಥಿ, ಚತುರ್ದಶೀ, ಹುಣ್ಣಿವೆಗಳು ಗ್ರಾಹ್ಯಗಳು. ಆದಿಭಾಗದಲ್ಲಿ ಷಷ್ಠಿಯ ಎಂಟು ಘಟಿ, ಅಷ್ಟಮಿಯ ಹದಿನಾಲ್ಕುಘಟಿ, ದ್ವಾದಶಿಯ ಹತ್ತುಘಟಿ ಇವುಗಳನ್ನು ಬಿಟ್ಟು ಉಳಿದಘಟಿಗಳಲ್ಲಿ ಮಾಡಬಹುದು. ಪುರುಷ ನಕ್ಷತ್ರಗಳು ಲಭ್ಯವಾಗದಿದ್ದಲ್ಲಿ ರೋಹಿಣೀ, ರೇವತೀ, ಉತ್ತರಾ, ಉತ್ತರಾಷಾಢಾ, ಉತ್ತರಾಭದ್ರೆಗಳು ಗ್ರಾಹ್ಯಗಳು. ಈ ಹೇಳಿದ ನಕ್ಷತ್ರಗಳ ಮೊದಲನೇ ಮತ್ತು ಅಂತ್ಯಪಾದಗಳನ್ನು ಬಿಟ್ಟು ಮಧ್ಯಭಾಗಗಳಲ್ಲಿ ಮಾಡತಕ್ಕದ್ದೆಂದು ಹೇಳಿದೆ. ಪುಂಸವನಾದಿ ಪ್ರಯೋಗನಿರ್ಣಯ ಈ ಕಾರ್ಯವನ್ನು ಒಂದೇ ಆವರ್ತಿ ಮಾಡತಕ್ಕದ್ದೆಂದು ಹೇಳಿದೆ. ಕಾತ್ಕಾಯನರಿಗೆ ಮಾತ್ರ ಗರ್ಭಸಂಸ್ಕಾರತ್ವವುಂಟಾಗುವದರಿಂದ ಪ್ರತಿಗರ್ಭದಲ್ಲಿಯೂ ಮಾಡತಕ್ಕದ್ದು. “ಸೀಮಂತೋನ್ನಯನ"ಕ್ಕೆ ಪತಿಯೇ ಕರ್ತನು. ಗರ್ಭಾಧಾನ ಸಂಸ್ಕಾರಲೋಪವಾದಲ್ಲಿ ಅದರ ಪ್ರಾಯಶ್ಚಿತ್ತಕ್ಕಾಗಿ ಬ್ರಾಹ್ಮಣನಿಗೆ ಗೋವನ್ನು ಕೊಟ್ಟು ಪುಂಸವನಾದಿಗಳನ್ನು ಮಾಡತಕ್ಕದ್ದು. ಅಶ್ವಲಾಯನರು ದೇಶಕಾಲಗಳನ್ನುಚ್ಚರಿಸಿ “ಮಮ ಅಸ್ಕಾಂಭಾರ್ಯಾಯಾಂ ಉತ್ಪತ್ಸಮಾನ ಗರ್ಭಗೃಗಾರ್ಭಿಕ ಬೈಜಿಕ ದೋಷಪರಿಹಾರ ಪುಂರೂಪತಾಸಿದ್ಧಿ ಜ್ಞಾನೋದಯ ಪ್ರತಿರೋಧ ಪರಿಹಾರದ್ವಾರಾ ಶ್ರೀ ಪರಮೇಶ್ವರಪ್ರೀತ್ಯರ್ಥಂ ಪುಂಸವನ ಮನವಲೋಭನಂ ಮಮ ಅಸ್ಕಾಂಭಾರ್ಯಾಯಾಂ ಗರ್ಭಾಭಿವೃದ್ಧಿ ಪರಿಪಂಥಿಪಿಶಿತರುಧಿರಪ್ರಿಯಾ ಲಕ್ಷ್ಮೀಭೂತರಾಕ್ಷಸೀಗಣ ದೂರನಿರಸನಕ್ಷಮ, ಸಕಲಸೌಭಾಗ್ಯ ನಿದಾನ ಮಹಾಲಕ್ಷ್ಮಿ ಸಮಾವೇಶನಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಸ್ತ್ರೀ ಸಂಸ್ಕಾರರೂಪಂ ಸೀಮಂತೋನ್ನಯನಾ ಕರ್ಮಕರಿಷ್ಯ ಸೀಮಂತ ಸಂಸ್ಕಾರದಿಂದ ಹಿಡಿದು ಮೂರು ಸಂಸ್ಕಾರ ಮಾಡುವದಿದ್ದರೆ ಹೀಗೆ ಸಂಕಲ್ಪ ಮಾಡಬೇಕು. ನಾಂದೀಶ್ರಾದ್ಧದಲ್ಲಿ ಕ್ರತುದಕ್ಷಸಂಜ್ಞಕ ವಿಶ್ವೇದೇವತೆಗಳು, ಸೀಮಂತದ ಹೊರತಾಗಿ ಪುಂಸವನ ಅನವಲೋಭನಗಳನ್ನು ಮಾಡಿದಲ್ಲಿ, ಪವಮಾನಸಂಜಕ ಔಪಾಸನಾಗ್ನಿಯನ್ನು ಪ್ರತಿಷ್ಟಾಪಿಸುವದು. ಮೂರನ್ನೂ ಒಟ್ಟಾಗಿ ಮಾಡಿದಲ್ಲಿ “ಮಂಗಲನಾಮಕ ಅಗ್ನಿಯನ್ನು ಸ್ಥಾಪಿಸುವದು. ಸರ್ವಾಧಾನಿಯಾದವನಿಗೆ ಅಗ್ನಿವಿಚ್ಛೇದವಾದರೆ ಅಗುತ್ತತ್ತಿಯನ್ನು ಹಿಂದೆ ಹೇಳಿದಂತೆಯೇ ತಿಳಿಯತಕ್ಕದ್ದು, ಪುಂಸವನದಲ್ಲಿ ಚರುವಿನಿಂದ ಪ್ರಜಾಪತಿಯನ್ನು ಹೋಮಿಸಬೇಕು. ಸೀಮಂತದಲ್ಲಿ ಧಾತ್ರವನ್ನು ಎರಡಾವರ್ತಿ, “ರಾಕಾ"ವನ್ನು ಎರಡಾವರ್ತಿ, ಎಷ್ಟುದನ್ನು ಮರಾವರ್ತಿ, ಪ್ರಜಾಪತಿಯನ್ನು ಒಂದಾವರ್ತಿಯ ಆಜ್ಯದಿಂದಪರಿಚ್ಛೇದ - ೩ ಪೂರ್ವಾರ್ಧ ೧೮೯ ಹೋಮಿಸತಕ್ಕದ್ದು, ಉಳಿದ ಪ್ರಯೋಗವಿಧಿಯನ್ನು ಬೇರೆ ಗ್ರಂಥಗಳಿಂದ ತಿಳಿಯುವದು. ಅನ್ಯಶಾಖೆಯವರಾದರೂ ತಮ್ಮ ತಮ್ಮ ಶಾಖಾನುಸಾರ ಮಾಡತಕ್ಕದ್ದು. ಪ್ರತಿಸಂಸ್ಕಾರಕ್ಕೆ ಹತ್ತರಂತೆ ಬ್ರಾಹ್ಮಣಭೋಜನ ಮಾಡಿಸಬೇಕು. ಅಥವಾ ಮೂರರಷ್ಟಾದರೂ ಮಾಡಿಸುವದು. ಸಮರ್ಥನಾದರೆ ನೂರು ಬ್ರಾಹ್ಮಣ ಭೋಜನ ಮಾಡಿಸತಕ್ಕದ್ದು. ಸೀಮಂತದ ಅಂಗವಾಗಿ ಮಾಡಿದ ಸಂತರ್ಪಣೆಯಲ್ಲಿ ಭೋಜನ ಮಾಡಿದ್ದಕ್ಕೆ “ಪಾರಿಜಾತ” ದಲ್ಲಿ ಪ್ರಾಯಶ್ಚಿತ್ತವನ್ನು ಹೇಳಿದೆ. ಬ್ರಹ್ಮದನ, ಸೋಮಯಾಗ, ಸೀಮಂತೋನ್ನಯನ, ಜಾತಕರ್ಮ ಇವುಗಳ ಅಂಗವಾದ ನಾಂದೀಶ್ರಾದ್ಧದಲ್ಲಿ ಭೋಜನ ಮಾಡಿದರೆ, ಭೋಜನ ಮಾಡಿದವನು ಚಾಂದ್ರಾಯಣ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕೆಂದು ವಚನವಿದೆ. ಆದರೆ ಸೀಮಂತಭೋಜನದಲ್ಲಿ ಆಧಾನಾಂಗ, ಬ್ರಹ್ಮದನಾಂಗ ಭೋಜನದಲ್ಲಿಯಂತೆ ಕರ್ಮಾಂಗಕ್ಕೆ ಸಂಕಲ್ಪಿಸಿ ಮಾಡಿದ ಭೋಜನಕ್ಕೆ ಸಂಬಂಧಿಸಿದ್ದು, ಹೊರತು ಬರೇ ಸಂತರ್ಪಣೆಗಾಗಿ ಮನೆಗೆ ಬಂದು ಮಾಡಿದ ಭೋಜನಕ್ಕೆ ಪ್ರಾಯಶ್ಚಿತ್ತವಿಲ್ಲವೆಂದು “ಪಾರಿಜಾತ"ದಲ್ಲಿ ಹೇಳಿದೆ. ಇದು ಯುಕ್ತವೇ ಇದೆ. ಗರ್ಭಿಣೀ ಧರ್ಮಗಳು ಗರ್ಭಿಣಿಯಾದವಳು ಆನೆ, ಕುದುರೆ, ಬೆಟ್ಟ ಮೊದಲಾದವುಗಳನ್ನು, ಮತ್ತು ಉಪ್ಪರಿಗೆ ಮೊದಲಾದ ಎತ್ತರದ ಸ್ಥಾನಗಳನ್ನು ಹತ್ತಬಾರದು, ಮತ್ತು ವ್ಯಾಯಾಮ, ಓಡುವದು, ಗಾಡಿಯನ್ನು ಹತ್ತುವದು ಇವುಗಳನ್ನು ವರ್ಜ್ಯಮಾಡಬೇಕು. ಬೂದಿ, ಒನಕೆ, ಬೀಸುವಕಲ್ಲು ಮೊದಲಾದವುಗಳ ಮೇಲೆ ಕೂಡಬಾರದು. ನೀರಲ್ಲಿ ಮುಳುಗುವದನ್ನೂ, ಶೂನ್ಯವಾದ ಮನೆಯನ್ನೂ, ವೃಕ್ಷದ ಬುಡವನ್ನು ತ್ಯಜಿಸತಕ್ಕದ್ದು, ಜಗಳ, ಮತ್ತು ಅವಯವಗಳನ್ನು ಪೀಡಿಸುವದು, ತೀಕ್ಷ್ಯ (ಅತಿ ಕಟು, ಹುಳಿ) ಹಾಗೂ ಬಹಳ ಬಿಸಿಯಾದ ಆಹಾರ, ಸಂಧ್ಯಾಕಾಲದಲ್ಲಿ ಅತಿ ಶೀತವಾದ ಹಾಗೂ ಹುಳಿಯಾದ ಆಹಾರ, ಜಡವಾದ ಆಹಾರ ಇವುಗಳನ್ನು ಬಿಡಬೇಕು. ಮೈಥುನ, ಶೋಕ, ರಕ್ತತೆಗೆಯುವದು, ಹಗಲು ನಿದ್ರೆ, ರಾತ್ರಿ ಜಾಗರಣೆ, ಭಸ್ಮ, ಇಂಗಳ, ಉಗುರು ಇವುಗಳಿಂದ ಭೂಮಿಯಲ್ಲಿ ಬರೆಯುವದು, ಯಾವಾಗಲೂ ಮಲಗಿರುವದು ಇತ್ಯಾದಿಗಳನ್ನು ಬಿಡಬೇಕು. ಅಮಂಗಲಕರ ವಾಕ್ಯಗಳನ್ನು ಹೇಳಬಾರದು. ಬಹಳ ನೆಗೆಯಾಡಬಾರದು. ತಲೆಕೂದಲನ್ನು ಬಿಚ್ಚಿಡಬಾರದು. ಖಿನ್ನಮನಸ್ಕಳಾಗಿರಬಾರದು. ಕೋಳಿಯಂತೆ ಕಾಲುಗಳನ್ನು ಮಡಚಿಕೊಳ್ಳಬಾರದು. ನಿತ್ಯದಲ್ಲೂ ಶುದ್ಧವಾದ ಆಚರಣೆಯನ್ನು ಮಾಡಿ ಜಾಗರೂಕತೆಯಿಂದ ಗರ್ಭವನ್ನು ರಕ್ಷಿಸಿಕೊಳ್ಳಬೇಕು. ಪ್ರಶಸ್ತವಾದ ಮಂತ್ರಗಳನ್ನು ಬರೆಯುತ್ತಿರಬೇಕು. ಉತ್ತಮವಾದ ಹೂವುಗಳನ್ನು ಮುಡಿಯಬೇಕು. ಉತ್ತಮವಾದ ತೈಲವನ್ನು ಸವರಿಕೊಳ್ಳಬೇಕು. ಶುದ್ಧವಾದ ಮನೆಯಲ್ಲಿ ವಾಸಮಾಡತಕ್ಕದ್ದು. ದಾನ ಹಾಗೂ ಅತ್ತೆ-ಮಾವಂದಿರ ಶಶೂಷೆ ಮಾಡಬೇಕು. ಅರಿಶಿನ, ಕುಂಕುಮ, ಸಿಂದೂರ, ಕಾಡಿಗೆ, ಕೇಶಾಲಂಕಾರ, ತಾಂಬೂಲ, ಮಂಗಲಕರವಾದ ಆಭರಣ ಇವುಗಳನ್ನು ಬಳಸಿದರೆ ಶುಭವು, ನಾಲ್ಕನೇ-ಆರನೇ-ಎಂಟನೇ ತಿಂಗಳಲ್ಲಿ ಗರ್ಭಿಣಿಯು ತೀರ್ಥಯಾತ್ರೆ, ಪ್ರಯಾಣ ಮೊದಲಾದವುಗಳನ್ನು ಬಿಡಬೇಕು. ವಿಶೇಷವಾಗಿ ಆರುತಿಂಗಳ ನಂತರ ಮಾಡಬಾರದು. ಹೀಗೆ ಬೇರೆ ಬೇರೆ ಗ್ರಂಥಗಳಲ್ಲಿ ಹೇಳಿದೆ. ೧೯೨ ಧರ್ಮಸಿಂಧ ಗರ್ಭಿಣೀಪತಿಯ ಕರ್ತವ್ಯ ಗರ್ಭಿಣಿಯು ಇಚ್ಛಿಸುವ ವಸ್ತುಗಳನ್ನು ಪತಿಯಾದವನು ಯಥಾಯೋಗ್ಯವಾಗಿ ಪೂರೈಸಬೇಕು. ಅದರಿಂದ ಚಿರಾಯುವಾದ ಪುತ್ರನು ಜನಿಸುವನು. ಇಲ್ಲವಾದರ ದೋಷವುಂಟಾಗುವದು. ಗರ್ಭಿಣೀಪತಿಯು ಸಮುದ್ರಸ್ನಾನ ಮಾಡಬಾರದು ಮರವನ್ನು ಕಡಿಯಬಾರದು. ಕ್ಷೌರಮಾಡಿಕೊಳ್ಳಬಾರದು. ಶವವನ್ನು ಹೊರಬಾರದು. ಪರದೇಶ ಗಮನಮಾಡಬಾರದು. ಗರ್ಭಿಣಿಗೆ ಏಳುತಿಂಗಳು ತುಂಬಿದನಂತರ ಪತಿಯು ಮೈಥುನ, ಹಡಗಿನಲ್ಲಿ ಪ್ರಯಾಣ ಇವುಗಳನ್ನು ಮಾಡಬಾರದು. ಯುದ್ಧ ಮೊದಲಾದ ಕ್ರೂರಕರ್ಮ, ಗೃಹನಿರ್ಮಾಣ, ಉಗುರು-ಕೇಶಗಳನ್ನು ಕತ್ತರಿಸುವದು ಇವುಗಳನ್ನು ಬಿಡಬೇಕು. ಪುತ್ರರ ಚೌಲಾದಿ ಮಂಗಲಕಾರ್ಯಗಳನ್ನು ಮಾಡಬಾರದು. ಶವದ ಸಂಗಡ ಸ್ಮಶಾನಗಮನವನ್ನು ಬಿಡಬೇಕು. ಮುಂಡನ ಕ್ಷೌರ, ಪಿಂಡದಾನ, ಎಲ್ಲ ಪ್ರೇತಕಾರ್ಯ ಇವುಗಳನ್ನು ಗರ್ಭಿಣೀ ಪತಿಯೂ, ಜೀವತೃಕನೂ ಮಾಡತಕ್ಕದ್ದಲ್ಲ. ಕೂದಲು ಕತ್ತರಿಸುವದೂ ನಿಷಿದ್ದವು. ಇಲ್ಲಿ ವಪನನಿಷೇಧಕ್ಕೆ ಇಷ್ಟೇ ಅರ್ಥ. ಏನೆಂದರೆ ಇಲ್ಲಿ ಜೀವಶ್ಚಿತೃಕನಿಗೆ ಮುಖಕ್ಷೌರಾದಿ ಕರ್ತನ (ಕೂದಲು ಕತ್ತರಿಸುವಿಕೆ) ವು ನಿಷಿದ್ಧವಲ್ಲ. (ಮುಂಡನಕ್ಷರವು ಮಾತ್ರ ನಿಷಿದ್ದ) ಇದಕ್ಕೂ ಕೆಲ ಅಪವಾದವಿದೆ. ನಿಷೇಧವಿದ್ದರೂ ನೈಮಿತ್ತಿಕವಾದದ್ದರಲ್ಲಿ ನಿಷೇಧವಿಲ್ಲ. ಹೇಗಂದರೆ “ಗರ್ಭಿಣೀಪತಿಯಾದರೂ ತಂದೆ ತಾಯಿಗಳ ಪ್ರೇತ ಕಾರ್ಯವನ್ನು ಮಾಡಲಡ್ಡಿಯಿಲ್ಲ” ಹೀಗೆ ವಚನವಿದೆ. ಅನ್ನಷ್ಟಕ್ಕೆ, ಅಷ್ಟಕಾ ಶ್ರಾದ್ಧಗಳಲ್ಲಿ ಗರ್ಭಿಣೀಪತಿಯು ಪಿಂಡದಾನ ಮಾಡಬಹುದು. ಕೆಲವರು ತಂದೆ-ತಾಯಿಗಳ ಪ್ರತಿಸಾಂವತ್ಸರಿಕ ಶ್ರಾದ್ಧದಲ್ಲಿ ಪಿಂಡದಾನ ಮಾಡಬಹುದು. ದರ್ಶ-ಮಹಾಲಯಾದಿಗಳಲ್ಲಿ ಪಿಂಡದಾನ ಮಾಡತಕ್ಕದ್ದಲ್ಲವೆನ್ನುವರು. ಗರ್ಭಸ್ರಾವ ಪ್ರತಿಬಂಧಕ ವಿಧಾನ “ಮಹಾರ್ಣವ"ದಲ್ಲಿ ಗರ್ಭಸ್ರಾವಹರ ಸುವರ್ಣಯಜೋಪವೀತ ದಾನವನ್ನು ಹೇಳಿದ. ಇದನ್ನು ಸ್ತ್ರೀಯೇ ಮಾಡತಕ್ಕದ್ದು. ಸ್ತ್ರೀಯು ಶುಭದಿನದಲ್ಲಿ ಆಚಮನ ಮಾಡಿ ದೇಶಕಾಲಗಳನ್ನುಚ್ಚರಿಸಿ"ಮಮ ಗರ್ಭಸ್ರಾವ ನಿದಾನ ಸಕಲದೋಷ ಪರಿಹಾರದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ವಾಯುಪುರಾಣೋಕ್ತಂ ಸುವರ್ಣಯಜೋಪವೀತದಾನಂ ಕರಿಷ್ಯ ಹೀಗೆ ಸಂಕಲ್ಪಿಸಿ ಒಂದು ಪಲ ಅಥವಾ ಅರ್ಧಪಲ ಅಥವಾ ಕಾಲುಪಲ ತೂಕದ ಚಿನ್ನದಿಂದ ಜಪ ವೀತವನ್ನು ತಯಾರಿಸಿ, ಅದರ ಗ್ರಂಥಿ ಯಸ್ಥಾನದಲ್ಲಿ ಮುತ್ತನಿಟ್ಟು ವಜ್ರಮಣಿಯುಕ್ತವಾದ ಬೆಳ್ಳಿಯ ಉತ್ತರೀಯವನ್ನು ಮಾಡಿ, ಈ ಎರಡನ್ನೂ ಪಂಚಗವ್ಯದಿಂದ ಗಾಯತ್ರಿಯನ್ನುಚ್ಚರಿಸಿ ತೊಳೆದು ತಾಮ್ರಪಾತ್ರೆಯಲ್ಲಿ “ದ್ರೋಣ” ಪರಿಮಾಣದ ಮೊಸರನ್ನಿಟ್ಟು, ಅವರ ಮಧ್ಯದಲ್ಲಿ ದ್ರೋಣಪ್ರಮಾಣದ ತುಪ್ಪವನ್ನು ಹಾಕಿ, ಆ ತುಪ್ಪದ ಮೇಲೆ ಅವರೆಡನ್ನೂ ಇಟ್ಟು, ಪತಿಯಾಗಲಿ ಅಥವಾ ಬ್ರಾಹ್ಮಣನಾಗಲೀ ಗಾಯತ್ರಿ ಮಂತ್ರದಿಂದ, ಗಂಧಾದಿ ಉಪಚಾರಗಳಿಂದ ಪೂಜಿಸತಕ್ಕದ್ದು, ಗುಂಜ ಮಾಷಾವಿ ಮಾನಗಳು:- ಎಂಟು ಗುಂಜಿಗಳಿಗೆ ಒಂದು “ಮಾಷ"ದು, ಹತ್ತು ಮಾಷಗಳಿಗೆ ಒಂದು “ಸುವರ್ಣ’ವು, ನಾಲ್ಕು ಸುವರ್ಣಗಳಿಗೆ ಒಂದು “ಪಲವು.

ಪರಿಚ್ಛೇದ ೩ ಪೂರ್ವಾರ್ಧ ನಾಲ್ಕು ಪಲಗಳಿಗೆ ಒಂದು “ಕುಡವ” ನಾಲ್ಕು ಕುಡವಗಳಿಗೆ ಒಂದು “ಪ್ರಸ್ಥ” ನಾಲ್ಕು ಪ್ರಶ್ನೆಗಳಿಗೆ ಒಂದು “ಆಢಕ”,ನಾಲ್ಕು ಆಢಕಗಳಿಗೆ ಒಂದು “ದ್ರೋಣ"ವು. ಮೊಸರು-ತುಪ್ಪಗಳನ್ನು ದ್ರೋಣಪ್ರಮಾಣದಿಂದ ಕೊಡಲಾಗದಿದ್ದರೆ ಶಕ್ರನುಸಾರವಾದ ಪ್ರಮಾಣದಂತೆ ಮಾಡತಕ್ಕದ್ದು. ತುಪ್ಪ, ಜೇನುತುಪ್ಪಗಳಿಂದ ಎಳ್ಳನ್ನು ಮಿಶ್ರಮಾಡಿ, ಗಾಯತ್ರಿ ಅಥವಾ ವ್ಯಾಹೃತಿಮಂತ್ರಗಳಿಂದ ಅಷ್ಟೋತ್ತರ ಶತಾಹುತಿಹೋಮವನ್ನು ಬ್ರಾಹ್ಮಣದ್ವಾರಾ ಮಾಡಿಸತಕ್ಕದ್ದು. ಪತಿಯಾಗಲೀ, ಸ್ತ್ರೀಯಾಗಲೀ ತ್ಯಾಗವನ್ನು ಮಾಡತಕ್ಕದ್ದು. ಹೋಮಮಾಡಿದ ಬ್ರಾಹ್ಮಣನನ್ನು ವಸ್ತ್ರಾದಿಗಳಿಂದ ಸತ್ಕರಿಸಿ ಪೂರ್ವಾಭಿಮುಖನಾದ ಆ ಬ್ರಾಹ್ಮಣನಿಗೆ ಉತ್ತರಾಭಿಮುಖಳಾದ ಸ್ತ್ರೀಯು “ಉಪವೀತಂ ಪರಿಮಿತಂ ಬ್ರಹ್ಮಣಾವಿಧ್ಯತಂ ಪುರಾಭವನಕಾಸ್ಯದಾನೇನ ಗರ್ಭಂಪಂಧಾರಯೇಹಂ ಈ ಮಂತ್ರದಿಂದ ಬ್ರಾಹ್ಮಣನ ನಾಮಗೋತ್ರಗಳನ್ನುಚ್ಚರಿಸಿ ತಾಮ್ರ ಪಾತ್ರದಲ್ಲಿರುವ ಮೊಸರು-ತುಪ್ಪಗಳ ಮಧ್ಯದಲ್ಲಿರುವದನ್ನು “ಕೋತ್ತರೀಯು ಸುಪೂಜಿತಂ ಇದಂ ಯಪವೀತಂ ಗರ್ಭಸ್ರಾವನಿದಾನರೋಷ ಪರಿಹಾರ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ತುಭಮಹಂ ಸಂಪದದೇ ನಮಮ ಪ್ರತಿಗೃಹ್ಯತಾಂ” ಹೀಗೆ ಹೇಳಿ ದಾನ ಮಾಡತಕ್ಕದ್ದು, ನಂತರ ಬ್ರಾಹ್ಮಣನು “ಪ್ರತಿಗಾಮಿ " ಇತ್ಯಾದಿ ಹೇಳತಕ್ಕದ್ದು, ಆ ಬ್ರಾಹ್ಮಣನಿಗೂ, ಇತರ ಬ್ರಾಹ್ಮಣರಿಗೂ ಯಥಾಶಕ್ತಿ ದಕ್ಷಿಣೆಕೊಟ್ಟು ಪ್ರತಿಗ್ರಹಮಾಡಿದವನನ್ನು ಅನುಗಮನಮಾಡಿ (ಅನುಸರಿಸಿ ಸ್ವಲ್ಪ ದೂರದವರೆಗೆ ಹೋಗುವದು ನಮಸ್ಕಾರ ಕ್ಷಮಾಪಣೆಗಳನ್ನು ಹೇಳಿ, ಬ್ರಾಹ್ಮಣಭೋಜನವನ್ನು ಸಂಕಲ್ಪಿಸಿ, ಕರ್ಮವನ್ನು ಈಶ್ವರಾರ್ಪಣಮಾಡಿ ಮುಗಿಸತಕ್ಕದ್ದು, ಪೂರ್ವಜನ್ಮದಲ್ಲಿ ವಿಷವನ್ನಿಕ್ಕಿ ಬಾಲಕನನ್ನು ಕೊಂದುಹಾಕಿದೆ ದೋಷದಿಂದ ಗರ್ಭಸ್ರಾವವಾಗುವದೆಂದು “ಕರ್ಮವಿಪಾಕ"ದಲ್ಲಿ ಹೇಳಿದೆ. ಅದುದರಿಂದ ಬಾಲಹತ್ಯಾದೋಷಪ್ರಾಯಶ್ಚಿತ್ತವನ್ನು ಮಾಡಿ ನಂತರ ಇದನ್ನು ಮಾಡತಕ್ಕದ್ದು. ಇನ್ನೂ ಬೇರೆ ಬೇರೆ ಗ್ರಂಥಗಳಲ್ಲಿ “ಸ್ವರ್ಣಧೇನುದಾನ, ಹರಿವಂಶಶ್ರವಣಾದಿಗಳನ್ನು ಮಾಡಿ, ಮೃತಪೂರ್ಣ ತಾಮ್ರಕಲಶದಾನ"ಇತ್ಯಾದಿ ವಿಧಾನಗಳನ್ನು ಹೇಳಿದೆ. ಸೂತಿಕಾ ಗೃಹ (ಬಾಣಂತಿಗೃಹ)ಪ್ರವೇಶ ಮನೆಯ ನೈರುತ್ಯದಿಕ್ಕಿನಲ್ಲಿ ಸೂತಿಕಾಗೃಹವಿರತಕ್ಕದ್ದು, ಅಶ್ವನಿ, ರೋಹಿಣಿ, ಮೃಗಶಿರ, ಪುನರ್ವಸು, ಪುಷ್ಯ, ಉತ್ರಾ, ಉತ್ರಾಷಾಢಾ, ಉತ್ರಾಭದ್ರಾ, ಹಸ್ತ, ಚಿತ್ರಾ, ಸ್ವಾತಿ, ಅನುರಾಧಾ, ಧನಿಷ್ಠಾ, ಶತಭಿಷ ಈ ನಕ್ಷತ್ರಗಳು ಸೂತಿಕಾ ಗೃಹ ಪ್ರವೇಶಕ್ಕೆ ಶುಭವು, ರಿಕ್ತಾದಿ ಹೊರತಾದ ಬೇರೆ ಶುಭತಿಥಿಗಳೂ, ಅನುಕೂಲ, ಚಂದ್ರನೂ, ಶುಭಲಗ್ನವೂ, ಕ್ಷೇಮಕರವು. ಗೋಬ್ರಾಹ್ಮಣರನ್ನು ಪೂಜಿಸಿ ಮಂತ್ರ ವಾದ್ಯಾದಿ ಘೋಷದಿಂದ ಸ್ತ್ರೀ, ಬಾಲಕರ ಸಹಿತಳಾಗಿ ಪ್ರವೇಶಿಸತಕ್ಕದ್ದು, ಉಕ್ತವಾದ ಕಾಲಕ್ಕೆ ಅವಕಾಶವಾಗದಿದ್ದರೆ “ಸದ” (ಹಡೆಯುವವೇಳೆ ಬಂದ ಕೂಡಲೆ)ದಲ್ಲಾದರೂ ಪ್ರವೇಶಮಾಡತಕ್ಕದ್ದು. ಸುಖಪ್ರಸವ ವಿಧಾನ ಹಡೆಯಲು ತೊಂದರೆಯುಂಟಾದಾಗ “ಪ್ರಮಂದಿನೇ “ಎಂಬ ಮಂತ್ರವನ್ನಾಗಲೀ, “ವಿಜಹೀರ್ಷ” ಎಂಬ ಸೂಕ್ಷ್ಮವನ್ನಾಗಲೀ ಜಪಿಸುವದು. ಅಥವಾ ಈ ಮಂತ್ರಗಳಿಂದ ೧೯೨ ಧರ್ಮಸಿಂಧು ಅಭಿಮಂತ್ರಿತವಾದ ಜಲವನ್ನು ಪಾನಮಾಡುವದು. ಇದರಿಂದ ಸುಖಪ್ರಸವವಾಗುವದೆಂದು “ಋಗ್ನಿಧಾನ"ದಲ್ಲಿ ಹೇಳಿದೆ. “ಹಿಮವತ್ಯುತ್ತರೇಪಾರ್ಶ್ವ ಸುರಥಾನಾಮಯಣೇ ತಾ: ಸ್ಮರಣಮಾತ್ರೇಣ ವಿಶಲ್ಯಾ ಗರ್ಭಿಣೀ ಭವೇತ್ ||” ಈ ಮಂತ್ರೋಚ್ಚಾರಣೆಯಿಂದ ಶೀಘ್ರ ಪ್ರಸವವಾಗುವದು. “ಓಂ ಕ್ಷೀಂ ಸ್ವಾಹಾ’ ಈ ಮಂತ್ರದಿಂದ ಸ್ವಲ್ಪ ಎಳ್ಳೆಣ್ಣೆಯನ್ನು ದೂರ್ವಾಂಕುರವನ್ನು ಹಿಡಕೊಂಡು ನೂರು ಅಥವಾ ಸಹಸ್ರ ಆವರ್ತಿ ಅಭಿಮಂತ್ರಿಸಿ ಕುಡಿಸಬೇಕು. ಉಳಿದ ಅಲ್ಪವನ್ನು ಗರ್ಭಸ್ಥಾನಕ್ಕೆ ಲೇಪನಮಾಡಬೇಕು. ಚೆನ್ನಾಗಿ ಲೇಪಿಸಿದರೆ ಶೀಘ್ರ ಹಾಗೂ ಸುಖಪ್ರಸವವಾಗುವದು. ಅಮಾತ್ರವಿರುವ ಗೋವಿನ ತಲೆಬುರುಡೆಯನ್ನು ಸೂತಿಕಾಗೃಹದ ಮೇಲ್ಬಾಗದಲ್ಲಿ ಕಟ್ಟಿದರೆ ಸುಖಪ್ರಸವವಾಗುವದು, ಬಿದಿರು, ಕಹಿಬೇವು ಇವುಗಳ ತೊಗಟೆ, ತುಳಸೀಮೂಲ, ಬೆಳವಲ ಎಲೆ, ಮತ್ತು ಕರವೀರ ಬೀಜ ಇವುಗಳನ್ನು ಸಮಭಾಗದಿಂದ ಚೂರ್ಣಮಾಡಿ ಎಮ್ಮೆಯ ಹಾಲಿನಲ್ಲಿ ಅರೆದು ಅದಕ್ಕೆ ಎಣ್ಣೆ ಕೂಡಿಸಿ ಯೋನಿಗೆ ಲೇಪಿಸಿದರೆ ಕೂಡಲೇ ಹಡೆಯುವಳು. ಜಾತಕರ್ಮ ಮೂಲಾ, ಜೇಷ್ಯಾ, ವ್ಯತೀಪಾತಾದಿಗಳಲ್ಲಿ ಶಿಶುವು ಜನಿಸಿದ ಕೂಡಲೇ ತಂದೆಯು ಕುಲದೇವತೆ, ವೃದ್ಧರು ಮೊದಲಾದವರಿಗೆ ನಮಸ್ಕಾರಮಾಡಿ, ಶಿಶುವಿನ ಮುಖವನ್ನು ನೋಡಿ, ನದ್ಯಾದಿಗಳಲ್ಲಿ ಉತ್ತರಾಭಿಮುಖನಾಗಿ ಸ್ನಾನಮಾಡತಕ್ಕದ್ದು. ಅದು ಸಾಧ್ಯವಾಗದಿದ್ದರೆ ಮನೆಯಲ್ಲಿ ಸಂಗ್ರಹಿಸಿದ ತಣ್ಣೀರಿನಲ್ಲಿ ಮೈಮೇಲೆ ಬಂಗಾರವನ್ನಿಟ್ಟುಕೊಂಡು ಸ್ನಾನಮಾಡಬೇಕು. ಈ ಸ್ನಾನವನ್ನು ರಾತ್ರಿಯಲ್ಲಾದರೂ ನದ್ಯಾದಿಗಳಲ್ಲಿ ಸ್ನಾನಮಾಡತಕ್ಕದ್ದು. ಅಶಕ್ತನಾದವನು ರಾತ್ರಿಯಲ್ಲಾದರ ಅಗ್ನಿಸಮೀಪದಲ್ಲಿ ಸುವರ್ಣಯುತವಾದ ತಣ್ಣೀರಿನಿಂದ ಸ್ನಾನಮಾಡತಕ್ಕದ್ದು. ಮೂಲಾನಕ್ಷತ್ರ ಮೊದಲಾದವುಗಳಲ್ಲಿ ಜನನವಾದರೆ ಅದರಲ್ಲಿ ವಿಶೇಷವಿದೆ. ಶಿಶುವಿನ ಮುಖವನ್ನು ನೋಡದೆಯೇ ಸ್ನಾನಮಾಡತಕ್ಕದ್ದು, ತಂದೆಯು ದೇಶಾಂತರದಲ್ಲಿದ್ದಾಗ ಪುತ್ರಜನನ ವಾರ್ತೆಯನ್ನು ಕೇಳಿದಕೂಡಲೇ ಸ್ನಾನಮಾಡಬೇಕು. ಸ್ನಾನಕ್ಕಿಂತ ಮೊದಲು ಸ್ನಾನಮಾಡುವ ತನಕ) ತಂದೆಯು ಅಸ್ಪೃಶ್ಯನಾಗುವನು. ಹೀಗೆ ಕನ್ಯಾಜನನದಲ್ಲಾದರೂ ಇದೇ ನಿಯಮವು. ಅನ್ಯ ಸಪಿಂಡರ ಆಶೌಚವಿರುವಾಗ ಜನನವಾದರೆ ತಂದೆಗೆ ಸ್ನಾನ, ದಾನ ಮೊದಲಾದವುಗಳಲ್ಲೂ, ಜಾತಕರ್ಮಸಂಸ್ಕಾರದ ವಿಷಯದಲ್ಲಿಯೂ ತಾತ್ಕಾಲಿಕ ಶುಚಿತ್ವವಿರುವದು. ಕೆಲವರು “ಮೃತಾಶೌಚವಿದ್ದಾಗ ಪುತ್ರಜನನವಾದರೆ ‘ಜಾತಕರ್ಮ’ ವನ್ನು ಆಶೌಚಾಂತದಲ್ಲಿ ಮಾಡಬೇಕು” ಎಂದು ಹೇಳುವರು, ನಾಲಚ್ಛೇದಕ್ಕಿಂತ ಮೊದಲು ಸಂಧ್ಯಾವಂದನಾದಿ ಕರ್ಮಗಳಿಗೆ ಆಶೌಚವಿರುವದಿಲ್ಲ. ಪ್ರಥಮದಿನ ಹಾಗೂ ಪಂಚಮ, ಷಷ್ಠ, ದಶಮ ದಿನಗಳಲ್ಲಿ ದಾನ, ಪ್ರತಿಗ್ರಹಗಳಿಗೆ ದೋಷವಿಲ್ಲ. ಬೇಯಿಸಿದ ಅನ್ನವು ಪ್ರತಿಗ್ರಹಕ್ಕೆ ಯೋಗ್ಯವಾಗುವದಿಲ್ಲ. “ಜ್ಯೋತಿಷ್ಟೋಮಾದಿ ದೀಕ್ಷೆಯನ್ನು ಹೊಂದಿದವನು ತಾನಾಗಲೀ ಅಥವಾ ಬೇರೆಯವರ ಕಡೆಯಿಂದಾಗಲೀ"ಜಾತಕರ್ಮ"ವನ್ನು ಮಾಡಿಸತಕ್ಕದ್ದಲ್ಲ. ಅವಭ್ರಥಸ್ನಾನಾನಂತರ ದೀಕ್ಷೆಯನ್ನು ವಿಸರ್ಜಿಸಿ ತಾನೇ ಮಾಡತಕ್ಕದ್ದು. ಜೇಷ್ಠನು ಕನಿಷ್ಠದಿಂದ “ಪುಂಸವನಾದಿಗಳನ್ನು ಮಾಡಿಸಬಾರದು. ಅಂಥ ಪ್ರಸಂಗದಲ್ಲಿ ಜಾತಕರ್ಮವನ್ನು ಮಾಡಿಸಬಹುದು. ಕಾಲವು ಮಿಕ್ಕಿದ ಪ್ರಸಂಗದಲ್ಲಿ ತಾನೇ ಮಾಡತಕ್ಕದ್ದು. ಮಹಾರೋಗದಿಂದ ಪೀಡಿತನಾದವನು ಜಾತಕರ್ಮವನ್ನು D ಪರಿಚ್ಛೇದ ೩ ಪೂರ್ವಾರ್ಧ OEB ತಾನು ಮಾಡಬಾರದು. ನಾಲಚ್ಛೇದಪರ್ಯಂತ ಪುತ್ರಜನ್ಮದಲ್ಲಿ ಶ್ರಾದ್ಧವನ್ನು ಮಾಡತಕ್ಕದ್ದು. ಇಲ್ಲಿ “ಪುತ್ರ” ಈ ಪದದಿಂದ “ಪುತ್ರಿಯನ್ನೂ ಊಹಿಸತಕ್ಕದ್ದು. ಹಾಗೆಯೇ ಸಂಸ್ಕಾರಾಂಗವಲ್ಲದ ಕನ್ಯಾಪುತ್ರರ ಜನನ ನಿಮಿತ್ತಕವಾದ ನಾಂದೀಶ್ರಾದ್ಧ ಮಾಡುವ ವಿಧಿಯಿದೆ. ಇದನ್ನು ರಾತ್ರಿಯಲ್ಲಾದರೂ ಮಾಡಲಡ್ಡಿಯಿಲ್ಲ. ಆದರೆ ಅದನ್ನು ಹಿರಣ್ಯದಿಂದ ಮಾಡಬೇಕು. ಅನ್ನದಿಂದ ಮಾಡತಕ್ಕದ್ದಲ್ಲ. ತಂದೆಯಾದವನು ಸ್ನಾನಾಲಂಕಾರಾದಿಯುಕ್ತನಾಗಿ ನಾಲಚ್ಛೇದವಾಗದಿದ್ದ, ಇನ್ನೂ ಮೊಲೆಯ ಹಾಲನ್ನುಣ್ಣದಿರುವ, ಮತ್ತು ಇನ್ನೊಬ್ಬರು ಮುಟ್ಟದಿರುವ ಶಿಶುವನ್ನು ತಾಯಿಯ ತೊಡೆಯಲ್ಲಿಡುವಂತೆ ಮಾಡಿ, ಆಚಮನ, ದೇಶಕಾಲಾದಿ ಉಚ್ಚರಣದ ನಂತರ “ಅಸ್ಯ ಕುಮಾರಕಸ್ಯ ಗರ್ಭಾಂಬುಪಾನಜನಿತ ದೋಷನಿಬರ್ಹಣ ಆಯುರ್ವಧಾಭಿವೃದ್ಧಿ ಬೀಜ ಗರ್ಭಸಮುದ್ಭವೈನೋನಿಬರ್ಹಣದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಜಾತಕರ್ಮಕರಿಷ್ಯ, ತದಾದೌ ಸ್ವಸ್ತಿ ಪುಣ್ಯಾಹವಾಚನಂ ಮಾತೃಕಾಪೂಜನಂಚ ಕರಿ, ಹಿರಣ್ಯನ ಪುತ್ರಜನ್ಮ ನಿಮಿತ್ತಕಂ ಜಾತಕರ್ಮಾಂಗಂ ಚ ನಾಂದೀಶ್ರಾದ್ಧಂ ಕರಿಷ್ಯ ಹೀಗೆ ಸಂಕಲ್ಪಿಸಿ ತಮ್ಮ ತಮ್ಮ ಶಾಖಾನುಸಾರ ಮಾಡತಕ್ಕದ್ದು. ಆಮೇಲೆ, ಸುವರ್ಣ, ಗೋವು, ಭೂಮಿ, ಕುದುರೆ, ರಥ, ಛತ್ರ, ಕುರಿ, ಮಾಲೆ, ಹಾಸಿಗೆ, ಆಸನ, ಮನೆ, ತಿಲಪೂರ್ಣಪಾತ್ರ ಇವುಗಳನ್ನು ದಾನಮಾಡತಕ್ಕದ್ದು. ಎಲ್ಲ ದಾನಗಳನ್ನು ದಕ್ಷಿಣಾಸಹಿತವಾಗಿ ಕೊಡತಕ್ಕದ್ದು, ಇದರಲ್ಲಿ ಬೇಯಿಸಿದ ಅನ್ನ ಮೊದಲಾದವುಗಳನ್ನು ಊಟಮಾಡಿದ ಬ್ರಾಹ್ಮಣನು “ಚಾಂದ್ರಾಯಣ"ವನ್ನಾಚರಿಸತಕ್ಕದ್ದು. ‘ದಾಯಾದಿಗಳಿಗೆ ಆ ದೋಷವಿಲ್ಲ’ ಎಂದು ಮನುವಚನವಿದೆ. ಆಮೇಲೆ ಹಸ್ತದಲ್ಲೇನಾದರೂ ಕಾಣಿಕೆಯನ್ನಿಟ್ಟುಕೊಂಡು ಜೋಯಿಸರಕಡೆಗೆ ಹೋಗಿ ಅವರನ್ನು ಸತ್ಕರಿಸಿ ಅವರಿಂದ, ಹುಟ್ಟಿದ ಶಿಶುವಿನ ಜನ್ಮಲಗ್ನ ಕುಂಡಲಿಯನ್ನು ಮಾಡಿಸಿ, ಲಗ್ನಗ್ರಹಾದಿಗಳ ಶುಭಾಶುಭ ಫಲಗಳನ್ನು ಕೇಳಬೇಕು. ಗ್ರಹಾದಿಗಳು ಪ್ರತಿಕೂಲವಾದಲ್ಲಿ ಅವುಗಳಿಗೆ ತಕ್ಕ ದಾನಾದಿಗಳನ್ನು ಮಾಡಿ ಪರಿಹಾರಮಾಡಿಕೊಳ್ಳಬೇಕು. ಗ್ರಹಮಂತ್ರ ಜಪ, ಶಾಂತಿಸೂಕ್ತಜಪ ಇತ್ಯಾದಿಗಳನ್ನು ಬ್ರಾಹ್ಮಣರ ಕಡೆಯಿಂದ ಮಾಡಿಸಬಹುದು. ಆಮೇಲೆ ನಾಲಚ್ಛೇದವನ್ನು ಮಾಡಿಸಿ ಹಿರದಕದಿಂದ ತಾಯಿಯ ಬಲದ ಸ್ತನವನ್ನು ತೊಳೆಸಿ, ತಾಯಿಯಿಂದ ಬಾಲಕನಿಗೆ ಸ್ತನಪಾನಮಾಡಿಸುವದು. ಬ್ರಾಹ್ಮಣರು ಇಮಾಂ ಕುಮಾರ” ಇತ್ಯಾದಿ ಮಂತ್ರಗಳನ್ನು ಪಠಿಸತಕ್ಕದ್ದು. ಜಾತಕರ್ಮಾದಿ ಅನ್ನಪ್ರಾಶನಾಂತ ಸಂಸ್ಕಾರಗಳಲ್ಲಿ ಅಶ್ವಲಾಯನರಿಗೆ ಹೋಮವು ಕೃತಾಕೃತ್ಯವು. (ಮಾಡಿದರೂ ಅಡ್ಡಿ ಇಲ್ಲ, ಬಿಟ್ಟರೂ ಸರಿಯೇ) ಹೋಮ ಮಾಡುವದಿದ್ದಲ್ಲಿ ನಾಂದೀಶ್ರಾದ್ಧವಾದ ನಂತರ “ಜಾತಕರ್ಮಾಂಗ ಹೋಮಂಕರಿಷ್ಟೇ’’ ಹೀಗೆ ಸಂಕಲ್ಪಿಸಿ, ಲೌಕಿಕಾಗ್ನಿಯನ್ನು ಪ್ರತಿಷ್ಠಾಪಿಸಿ ಅನಾಧಾನಾದಿ ಆಜ್ಯಭಾಗಾಂತಮಾಡಿ “ಅಗ್ನಿಮಿಂದ್ರಂ ಪ್ರಜಾಪತಿಂ ವಿಶ್ವಾನ್ ದೇವಾನ್ ಬ್ರಹ್ಮಾಣು” ಈ ದೇವತೆಗಳನ್ನು ಆಜ್ಯದಿಂದ ಹೋಮಿಸುವದು. ಆಮೇಲೆ ಜೇನುತುಪ್ಪ ತುಪ್ಪಗಳನ್ನು ಪ್ರಾಶನಮಾಡಿಸಿ, ಶಿಶುವಿನ ತಲೆಯನ್ನು ಮೂಸಿ ಸ್ಪಷ್ಟಕೃದಾದಿ ಹೋಮಶೇಷವನ್ನು ಮುಗಿಸುವದು. ಅನ್ನ ಶಾಖೀಯರು ತಮ್ಮ ತಮ್ಮ ಶಾಖಾನುಸಾರ ಮಾಡತಕ್ಕದ್ದು. ಕುಮಾರಿಗಾದರೂ ಜಾತಕರ್ಮಾದಿ ಚೌಲಾಂತ ಸಂಸ್ಕಾರಗಳನ್ನು ಅಮಂತ್ರಕವಾಗಿ ಮಾಡತಕ್ಕದ್ದು. ವಿವಾಹವನ್ನು ಮಂತ್ರಪೂರ್ವಕವಾಗಿಯೇ ಮಾಡತಕ್ಕದ್ದು. ಕನ್ನೆಯ ೧೯೪ ಧರ್ಮಸಿಂಧು ಜಾತಕರ್ಮಾದಿ ಸಂಸ್ಕಾರ ಲೋಪವಾದಲ್ಲಿ ಆಯಾಯ ಕಾಲದಲ್ಲಿ ಅಥವಾ ವಿವಾಹಕಾಲದಲ್ಲಿ ಪ್ರಾಯಶ್ಚಿತ್ನವನ್ನು ಮಾಡಿ ವಿವಾಹ ಮಾಡತಕ್ಕದ್ದು. ಜಾತಕರ್ಮ ನಾಮಕರ್ಮಾದಿಗಳ ಮುಖ್ಯ ಕಾಲಾತಿಕ್ರಮವಾದಲ್ಲಿ ಗುರ್ವಾಸ್ವಾದಿಗಳನ್ನು ಬಿಟ್ಟು ಶುಭನಕ್ಷತ್ರಾದಿಗಳಲ್ಲಿ ಜಾತಕರ್ಮಾದಿ ಕಾರ್ಯವನ್ನು ಮಾಡತಕ್ಕದ್ದು, ಜಾತಕರ್ಮಕ್ಕ-ರೋಹಿಣಿ, ಉತ್ರಾ, ಉತ್ರಾಷಾಢಾ, ಉತ್ರಾಭದ್ರ, ಅಶ್ವಿನೀ, ಹಸ್ತ, ಪುಷ್ಯ, ಅನುರಾಧಾ, ರೇವತೀ, ಮೃಗಶಿರ, ಚಿತ್ರಾ, ಶ್ರವಣ, ಧನಿಷ್ಠಾ, ಶತಭಿಷ, ಸ್ವಾತಿ, ಪುನರ್ವಸು ಇವು ಶ್ರೇಷ್ಠಗಳು, ರಿಕ್ತಾತಿಥಿ, ಪರ್ವತಿಧಿ ಇವು ವರ್ಜಗಳು, ಕುಜ, ಶನಿವಾರಗಳು ತ್ಯಾಜ್ಯಗಳು, ಭದ್ರ, ವೈಧೃತ್ಯಾದಿ ಅನಿಷ್ಟ ಕರಣಗಳನ್ನು ಬಿಡಬೇಕು. ಲಗ್ನ ಕೇಂದ್ರಗಳಲ್ಲಿ ಶುಭಗ್ರಹರಿದ್ದರೆ ಉತ್ತಮ. ಷ ಪೂಜೆ ಪಂಚಮ ಅಥವಾ ಷಷ್ಠ ದಿನಗಳಲ್ಲಿ ‘ಜನ್ಮದಾ” ಎಂಬ ದೇವತೆಯನ್ನು ಪೂಜಿಸತಕ್ಕದ್ದು. ರಾತ್ರಿಯ ಪ್ರಥಮ ಯಾಮದಲ್ಲಿ ತಂದ ಮೊದಲಾದ ಕರ್ತೃಗಳು ಸ್ನಾನಮಾಡಿ, ಆಚಮನ ದೇಶಕಾಲಾದಿ ಉಚ್ಚಾರಣ ಮೊದಲಾದ ಸಂಕಲ್ಪವನ್ನು ಪ್ರಾರಂಭಿಸಿ “ಅಶಿಶೋಃ ಸಮಾತೃಕಸ್ಯ ಆಯುರಾರೋಗ್ಯ ಪ್ರಾಪ್ತಿ, ಸಕಲಾನಿಷ್ಟಶಾಂತಿದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ವಿಘೋಶ ಜನ್ಮದಾನಾಂ ಜೀವಂತ್ಯಪರನಾಮ್ಮಾ: ಷಷ್ಠಿ ದೇವಾಃ ಶಸ್ತ್ರಗರ್ಭಾ ಭಗವತ್ಯಾಶ್ಚ ಪೂಜನಂ ಕರಿಷ್ಯ ಹೀಗೆ ಸಂಕಲ್ಪಿಸಿ, ಅಕ್ಷತ ಪುಂಜಗಳಲ್ಲಿ ವಿಶ್ಲೇಶನನ್ನೂ, ಜನ್ಮದಾದೇವತೆಯನ್ನೂ ನಾಮಮಂತ್ರದಿಂದ ಆವಾಹನಮಾಡಿ “ಆಯಾಹಿ ವರದೇ ದೇವಿ ಮಹಾಪತಿ ವಿಶ್ರುತೇ ಶಕ್ತಿಭಿಃ ಸಹ ಬಾಲಂ ಮೇ ರಕ್ಷಾ ಜಾಗರ ವಾಸರೇ ಹೀಗೆ ಷಷ್ಠಿದೇವಿಯನ್ನಾವಾಹಿಸಿ, ಮತ್ತು ನಾಮಮಂತ್ರದಿಂದ ಭಗವತಿಯನ್ನಾವಾಹಿಸಿ, ನಾಮಗಳಿಂದಲೂ “ಶಕ್ತಿ ಸರ್ವದೇವಾನಾಂ ಲೋಕಾನಾಂ ಹಿತಕಾರಿಣಿ ಮಾತರ್ಬಾಲಮಿಮಂ ರಕ್ಷ ಮಹಾಪ ನಮೋಸ್ತುತೇ ಈ ಮಂತ್ರದಿಂದಲೂ ಷೋಡಶೋಪಚಾರಗಳಿಂದ ಪೂಜಿಸಿ ಪ್ರಾರ್ಥಿಸುವದು. “ಲಂಬೋದರ ಮಹಾಭಾಗ ಸರ್ವೋಪದ್ರವನಾಶನ ಕೃತಸಾದಾದವಿಘ್ನಶ ಚಿರಂ ಜೀವತು ಬಾಲಕ ಜನನೀ ಸರ್ವಭೂತಾನಾಂ ಬಾಲಾನಾಂ ಚ ವಿಶೇಷತಃ ನಾರಾಯಣೀ ಸ್ವರೂಪೇಣ ಬಾಲಂ ರಕ್ಷ ಸರ್ವದಾ|ಭೂತಪ್ರೇತ ಪಿಶಾಚೇಭ ಶಾಂಡಾನೀತು ಚ ಮಾತದ ರಕ್ಷ ಬಾಲಂಮೇ ಶ್ವಾಪದೇ ಪನ್ನಗೇನು ಚಗೌರೀಪುತ್ರೋ ಯಥಾಸ್ಕಂದ ಶಿಶು ರಕ್ಷಿತಃಪುರಾತಥಾ ಮಮಾಯಂ ಬಾಲ: ಪಕೇ ರಕ್ಷಾಂ ನಮ:” ಹೀಗೆ ಪ್ರಾರ್ಥಿಸಿ ಬ್ರಾಹ್ಮಣರಿಗೆ ತಾಂಬೂಲದಕ್ಷಿಣಾದಿಗಳನ್ನು ಕೊಡತಕ್ಕದ್ದು. ರಾತ್ರಿಯಲ್ಲಿ ಜಾಗರಣೆಮಾಡಬೇಕು. ಪಂಚಮ, ಷಷ್ಟದಿನಗಳಲ್ಲಿ ದಾನ, ಪ್ರತಿಗ್ರಹಣದಿಂದ ದೋಷವಿಲ್ಲ, ಹತ್ತನೇದಿನ ಬಲಿದಾನ ಮತ್ತು ಸೈಕಿಯರಿಗೆ ಅನ್ನದಾನಗಳನ್ನು ಮಾಡತಕ್ಕದ್ದು. ಅಶೌಚದಲ್ಲಿ ಕರ್ತವ್ಯಗಳು ಸೂತಕ ಅಥವಾ ಮೃತಾಶೌಚದಲ್ಲಿ ಪ್ರಾಣಾಯಾಮವನ್ನು ಅಮಂತ್ರಕವಾಗಿ ಮಾಡತಕ್ಕದ್ದು. ಮಾರ್ಜನವನ್ನಾದರೂ ಮನಸ್ಸಿನಲ್ಲಿ ಮಂತ್ರಗಳನ್ನು ಸ್ಮರಿಸಿ ಮಾಡತಕ್ಕದ್ದು, ಗಾಯತ್ರಿಯನ್ನು ಪರಿಚ್ಛೇದ - ೩ ಪೂರ್ವಾರ್ಧ ೧೯೫ ಚೆನ್ನಾಗಿ ಉಚ್ಚರಿಸಿ ಸೂರ್ಯನಿಗೆ ಅರ್ಥ್ಯವನ್ನು ಕೊಡತಕ್ಕದ್ದು “ಉಪಸ್ಥಾನ"ವನ್ನು ಮಾಡಬಾರದು. ಮಾರ್ಜನವಾದರೂ “ಕೃತಾಕೃತವು” ಎಂದು ಉಕ್ತಿಯಿದೆ. ಸೂರ್ಯನನ್ನು ಧ್ಯಾನಿಸಿ ನಮಸ್ಕಾರ ಮಾಡಬೇಕು. ಗಾಯತ್ರಿ ಜಪವನ್ನು ಮಾಡಬಾರದು. “ಅರ್ಘಾಂತಾ ಮಾನಸೀ ಸಂಧ್ಯಾ ಹೀಗೆ ವಚನವಿದೆ. ಕೆಲವರು ಮನಸ್ಸಿನಿಂದಲೇ ದಶಗಾಯತ್ರೀಜಪವನ್ನು ಮಾಡಬೇಕೆಂದು ಹೇಳುವರು. ವೈಶ್ವದೇವ, ಬ್ರಹ್ಮಯಜ್ಞ ಪಂಚಮಹಾ ಯಜ್ಞಾದಿಗಳನ್ನು ಮಾಡಬಾರದು. ವೇದಾಭ್ಯಾಸವನ್ನೂ ಮಾಡಕೂಡದು. ಔಪಾಸನಹೋಮ, ಪಿಂಡಪಿತೃಯಜ್ಞಗಳನ್ನು ಅನ್ಯಗೋತ್ರದವರಿಂದ ಮಾಡಿಸಬೇಕು. ಕೆಲವರು ಶೌತಕಾರ್ಯದಲ್ಲಿ “ಸಧ್ಯ: ಶುದ್ದಿ” ಹೀಗೆ ವಚನವಿರುವದರಿಂದ ಅಗ್ನಿಹೋತ್ರಹೋಮವನ್ನು ಸ್ನಾನಾಚಮನಗಳನ್ನು ಮಾಡಿ ತಾನೇ ಮಾಡಬೇಕೆನ್ನುವರು. ಇನ್ನು ಕೆಲವರು “ಆಶೌಚಾಪವಾದಗಳೆಲ್ಲ ಅನನ್ಯಗತಿಕ ಪ್ರಸಂಗದಲ್ಲಿ ಮಾತ್ರ ಹೇಳಿರುವದರಿಂದ ಬ್ರಾಹ್ಮಣನು ಲಭ್ಯನಿದ್ದರೆ ಬ್ರಾಹ್ಮಣದ್ವಾರದಿಂದಲೇ ಮಾಡತಕ್ಕದ್ದು. ಬ್ರಾಹ್ಮಣಾಭಾವದಲ್ಲಿ ತಾನು ಮಾಡತಕ್ಕದ್ದು.” ಎಂದು ಹೇಳುವರು. ಸ್ಥಾಲೀಪಾಕವನ್ನು ಮಾಡಬಾರದು. ಅದನ್ನು ಆಶೌಚಾಂತದಲ್ಲೇ ಮಾಡತಕ್ಕದ್ದು, ಸರ್ವಥಾಲೋಪಪ್ರಸಂಗವುಂಟಾದಲ್ಲಿ ಸ್ಥಾಲೀಪಾಕವನ್ನಾದರೂ ಬ್ರಾಹ್ಮಣದ್ವಾರಾ ಮಾಡಬಹುದು. ಅನ್ವಾಧಾನಾ ನಂತರದಲ್ಲಿ ಆಶೌಚಪ್ರಾಪ್ತವಾದಲ್ಲಿ ಶೌತೇಷ್ಟಿ, ಸ್ಥಾಲೀಪಾಕಗಳನ್ನು ಬ್ರಾಹ್ಮಣದ್ವಾರಾ ಮಾಡತಕ್ಕದ್ದು. ಹೋಮಾದಿಗಳಲ್ಲಿ ಸ್ನಾನ ಮಾಡಿ ತ್ಯಾಗವನ್ನು ತಾನು ಮಾಡುವದು. ದರ್ಶಾದಿ ಶ್ರಾದ್ಧಗಳು ಲೋಪವೇ ಆಗುವವು. (ಮಾಡತಕ್ಕದ್ದಿಲ್ಲ) ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ಆಶೌಚಾಂತದಲ್ಲಿ ಹನ್ನೊಂದನೇದಿನ ಮಾಡಬೇಕು. ಆ ದಿನದಲ್ಲಿ ಅಸಂಭವವಾದರೆ ಅಮಾವಾಸ ಅಥವಾ ವ್ಯತೀಪಾತಾದಿ ಪರ್ವಗಳಲ್ಲಿ ಮಾಡುವದು. ಇದರಂತೆ ಪತ್ನಿಯು ಋತುಮತಿಯಾದಾಗಲೂ ಪಿಂಡಯಜ್ಞ ದರ್ಶಶ್ರಾದ್ಧಗಳನ್ನು ಶುಧ್ಯನಂತರ ಮಾಡತಕ್ಕದ್ದು. ಅಷ್ಟಾಧಾನಾನಂತರ ಪತ್ನಿಯು ಋತುಮತಿಯಾದಲ್ಲಿ ಇಷ್ಟಿ, ಸ್ಥಾಲೀಪಾಕಗಳನ್ನು ಮಾಡತಕ್ಕದ್ದು. ಅದಕ್ಕೆ ಮೊದಲೇ ಋತುಮತಿಯಾದಲ್ಲಿ ಬೇರೆ ಕಾಲದಲ್ಲಿ ಮಾಡತಕ್ಕದ್ದು. ಆಶೌಚದಲ್ಲಿ ದಾನ, ಪ್ರತಿಗ್ರಹ, ಅಧ್ಯಯನ ಇವುಗಳನ್ನು ಮಾಡಬಾರದು. ಅನ್ಯರ ಅನ್ನವನ್ನು ಉಣ್ಣಬಾರದು, ಆಶೌಚದಲ್ಲಿ ಪಿತೃಯಜ್ಞ ಸ್ಥಾಲೀಪಾಕ, ಶ್ರವಣಾಕರ್ಮ ಮೊದಲಾದ ಸಂಸ್ಥೆಗಳ ಪ್ರಥಮಾರಂಭವನ್ನು ಬ್ರಾಹ್ಮಣದ್ವಾರಾದಿಂದಲಾದರೂ ಮಾಡಬಾರದು. ಪ್ರಥಮಾರಂಭಾನಂತರ ದ್ವಿತೀಯಾದಿ ಶ್ರವಣಾಕರ್ಮಾದಿಗಳನ್ನು ಆಶೌಚ ಅಥವಾ ಪತ್ನಿಯು ರಜಸ್ವಲೆಯಾದಾಗ ಬ್ರಾಹ್ಮಣದ್ವಾರಾ ಮಾಡಿಸಬಹುದು. “ಆಗ್ರಯಣಮಾತ್ರ” ಆಗುವದಿಲ್ಲ. ಆಶೌಚದಲ್ಲಿ ಅಗ್ನಿ ಸಮಾರೋಪ, ಪ್ರವರೋಹಣಗಳನ್ನು ಮಾಡಬಾರದು. “ಸಮಾರೋಪದ ನಂತರದಲ್ಲಿ ಆಶೌಚ ಪ್ರಾಪ್ತವಾದರೆ ತೈತ್ತಿರೀಯರಿಗೆ ತ್ರಿದಿನ ಲೋಪವಾದಲ್ಲಿ, ಋಗ್ವದಿ ಮೊದಲಾದವರಿಗೆ ಹನ್ನೆರಡುದಿನ ಲೋಪವಾದಲ್ಲಿ ಅಗ್ನಿಯು ನಷ್ಟವಾಗುವದರಿಂದ ಆಶೌಚಾಂತದಲ್ಲಿ ಶೌತ-ಸ್ಮಾರ್ತ ಅಗ್ನಿಗಳ ಪುನರಾಧಾನವನ್ನೇ ಮಾಡತಕ್ಕದ್ದು. ಸಮಾರೋಪ - ಪ್ರತ್ಯವರೋಹಗಳಿಗೆ ಬೇರೆಯವರು ಕರ್ತೃಗಳಾಗುವದಿಲ್ಲ. ಅಗ್ನಿಯು ನಷ್ಟವಾದಲ್ಲಿ ಪ್ರಾಯಶ್ಚಿತ್ತಪೂರ್ವಕ ಪುನರುತ್ಪತ್ತಿಯನ್ನು ಅನ್ಯರಿಂದ ಮಾಡಿಸಬಹುದು. ಭೋಜನಕಾಲದಲ್ಲಿ ಆಶೌಚ ಪ್ರಾಪ್ತವಾದರೆ ಬಾಯಿಯಲ್ಲಿರುವ ಗ್ರಾಸವನ್ನು ಬಿಸಾಡಿ ಸ್ನಾನಮಾಡಬೇಕು. ಗ್ರಾಸವನ್ನು ೧೯೬ ಧರ್ಮಸಿಂಧು ನುಂಗಿದಲ್ಲಿ ಒಂದು ಉಪವಾಸದಿಂದ ಪ್ರಾಯಶ್ಚಿತ್ತವಾಗುವದು. ಎಲ್ಲ ಅನ್ನವನ್ನು ತಿಂದರೆ ಮೂರುದಿನ ಉಪವಾಸವು ಆಶೌಚವಿದ್ದರೂ “ಸೂತಕೇ ಮೃತಕೇಚೈವ ನದೋಷೋ ರಾಹುದರ್ಶನೇ” ಹೀಗೆ ಉಕ್ತಿಯಿರುವದರಿಂದ ಗ್ರಹಣಕಾಲದಲ್ಲಿ ಸ್ನಾನಮಾಡಿ ಶ್ರಾದ್ಧ, ದಾನ, ಜಪಾದಿಗಳನ್ನು ಮಾಡತಕ್ಕದ್ದು. ಸಂಕ್ರಾಂತಿಯ ಸ್ನಾನ ದಾನಾದಿಗಳಿಗೂ ಇದೇ ನಿಯಮವು. ಆಪತ್ತಿನಲ್ಲಿ ನಾಂದೀಶ್ರಾದ್ಧಾನಂತರ ಉಪನಯನ, ವಿವಾಹಗಳಿಗೆ ಆಶೌಚದಿಂದ ಬಾಧಕವಿಲ್ಲ. ಆಪತ್ತಿನಲ್ಲಿ ಋತ್ವಿಜರಿಗೆ ಮಧುಪರ್ಕಾನಂತರ ಆಶೌಚವಿಲ್ಲ. ಯಜಮಾನನಿಗೆ ದೀಕ್ಷಾಬಂಧವಾದನಂತರ ಅವಭಯದವರೆಗೆ ಆಶೌಚವಿಲ್ಲ. ಅವಧೃಥವನ್ನು ಆಶೌಚಾನಂತರ ಮಾಡತಕ್ಕದ್ದು. “ವ್ರತೇಷುನಾಶೌಚಂ” ಎಂಬ ವಚನವಿರುವದರಿಂದ ಅನಂತ ವ್ರತಾದಿಗಳನ್ನು ಬ್ರಾಹ್ಮಣದ್ವಾರಾ ಮಾಡಿಸುವದು. ಅಥವಾ ಆಶೌಚವಿಲ್ಲದವರಿಂದ ಮಾಡಿಸತಕ್ಕದ್ದು. ಅನ್ನಸತ್ರವನ್ನಾರಂಭಿಸಿದ್ದು ಆಮೇಲೆ ಆಶೌಚ ಬಂದರೆ ಅನ್ನದಾನಾದಿಗಳನ್ನು ನಿಲ್ಲಿಸುವ ಕಾರಣವಿಲ್ಲ. ಪೂರ್ವದಲ್ಲಿ (ಆಶೌಚಕ್ಕಿಂತ ಮೊದಲು) ತಯಾರಿಸಿದ ಅನ್ನಕ್ಕೆ ದೋಷವಿಲ್ಲ. ಸೂತಕಿಗಳ ಮನೆಯಲ್ಲಿಯ ಉದಕ, ಹಾಲು, ಮೊಸರು, ತುಪ್ಪ, ಉಪ್ಪು, ಫಲ, ಮೂಲ, ಹುರಿದ ಅನ್ನ ಇವುಗಳನ್ನು ತಾನಾಗಿ ತೆಗೆದುಕೊಂಡಲ್ಲಿ ದೋಷವಿಲ್ಲ. ಆಶೌಚಿಯಾದವನ ಹಸ್ತದಿಂದ ಸ್ವೀಕರಿಸಬಾರದು. ಕೆಲವರು ಆಶೌಚಿಯ ಹಸ್ತದಿಂದಾದರೂ ತಂಡುಲಾದಿ ಅಪಕ್ವವಾದ ಅನ್ನವನ್ನು ತೆಗೆದುಕೊಳ್ಳಬಹುದೆಂದು ಹೇಳುವರು. ಇದು ಸಂಕ್ಷೇಪನಿರ್ಣಯ. ವಿಶೇಷವನ್ನು ಮುಂದೆ ಹೇಳಲಾಗುವದು. ಸೂತಿಕಾ ಶುದ್ದಿ ಹಡೆದ ಬಾಣಂತಿಯು ದಶಾಹನಂತರ ಸ್ಪಶ್ಯಳಾಗುವಳು; ಮತ್ತು ನಾಮಕರ್ಮ, ಜಾತಕರ್ಮಾದಿಗಳ ಕರ್ಮಾಧಿಕಾರ ಪ್ರಾಪ್ತವಾಗುವದು. ಜಾತೇಷ್ಟಿ, ವಿವಾಹ, ಉಪನಯನ ಮೊದಲಾದ ಕಾರ್ಯಗಳಿಗೆ ಗಂಡುಹಡೆದವಳಿಗೆ ೨೦ ರಾತ್ರಿ, ಹೆಣ್ಣು ಹಡೆದವಳಿಗೆ ೧ ತಿಂಗಳು ಕಳೆದ ಮೇಲೆ ಶುದ್ದಿಯಾಗಿ ಕರ್ಮಾರ್ಹಳಾಗುವಳು. ಇನ್ನು ದುಷ್ಟಕಾಲದಲ್ಲಿ ಜನನವಾದರೆ ಅವುಗಳಿಗೆ ಶಾಂತಿಯನ್ನು ಹೇಳುವವು. ಗೋಪ್ರಸವ ಶಾಂತಿ ದುಷ್ಟಕಾಲದಲ್ಲಿ ಜನನವಾದಾಗ ತಂದೆ, ತಾಯಿ ಮತ್ತು ಬಾಲಕ ಈ ಎಲ್ಲರಿಗೆ ಅರಿಷ್ಟವಂಟಾದಲ್ಲಿ “ಗೋಪ್ರಸವ ಶಾಂತಿ ಹಾಗೂ ಆಯಾಯ ನಕ್ಷತ್ರ ಶಾಂತಿ"ಯನ್ನೂ ಮಾಡಬೇಕು. ಧನಹಾನಿ ಮೊದಲಾದ ಸಾಮಾನ್ಯ ಅರಿಷ್ಟವಾದರೆ ಮಾಡಬೇಕಾಗಿಲ್ಲ. ಮೂಲಾ, ಆಶ್ಲೇಶಾ, ಜೇಷ್ಠಾ, ಮಘಾ ಇವುಗಳ ಚತುರ್ಥಪಾದಾದಿಗಳಲ್ಲಿ ತಂದ ಮೊದಲಾದವರಿಗೆ ಅರಿಷ್ಟವನ್ನು ಹೇಳಿರದಿದ್ದರೂ “ಗ ಪ್ರಸವ"ವು ಅಗತ್ಯ, ಅನಿ, ರೇವತೀ, ಪುಷ್ಯ, ಚಿತ್ರಾ ನಕ್ಷತ್ರಗಳಲ್ಲಿ ನಕ್ಷತ್ರ ಶಾಂತಿಯಿಲ್ಲದಿದ್ದರ. ಗೋಪ್ರಸವ ಶಾಂತಿಯನ್ನು ಮಾಡಬೇಕು. “ಅಶಿಶ ಆನುಕರುಷ್ಕ ಕಾಲೋ ಸೂಚಿತ ಅರಿಷ್ಠ ನಿವೃತ್ಯರ್ಥಂ ಗೋಮುಖಪ್ರಸವಶಾಂತಿಂ ಕರಿಷ್ಯ ಹೀಗೆ ಸಂಕಲ್ಪಿಸಿ, ಗಣಪತಿ ಪೂಜಾದಿಗಳನ್ನು ಮಾಡಿ, “ಅಂಗಾದಂಗಾತ್” ಈ ಮಂತ್ರದಿಂದ ಶಿಶುವಿನ ಶಿರಸ್ಸನ್ನು ಆಘ್ರಾಣಿಸುವರು. ಪ್ರಯೋಗಮಧ್ಯದಲ್ಲಿಯೇ ಪುಣ್ಯಾಹಮಾಡಕ್ಕದ್ದೆಂದು ಕೌಸ್ತುಭ " ಪರಿಚ್ಛೇದ - ೩ ಪೂರ್ವಾರ್ಧ ೧೯೭ ಮತ್ತು ಮಯೂಖದಲ್ಲಿ ಹೇಳಿದೆ. ಶಾಖೋಕ್ತವಾಗಿ ಪುಣ್ಯಾಹಮಾಡಿ ಶಿರಸ್ಸಿನ ಆಘ್ರಾಣದ ನಂತರ “ಅಗೋಮುಖ ಪ್ರಸವಸ್ಯ ಪುಣ್ಯಾಹಂ ಭವಂತೂ ಬೃವಂತು"ಹೀಗೆ ಒಂದೇ ವಾಕ್ಯವನ್ನು ಮೂರಾವರ್ತಿ ಹೇಳತಕ್ಕದ್ದು. “ಋತ್ವಿಜರು ಅದರಂತೆ ತಿರುಗಿ ಹೇಳತಕ್ಕದ್ದು ಹೊರತು ಶಾಖೋಕ್ತ ಬೇರೆ ಪ್ರತಿವಚನವನ್ನು ಹೇಳತಕ್ಕದ್ದಲ್ಲ” ಎಂದು “ಕಮಲಾಕರ” ಮತವು. ಇದರಲ್ಲಿ ನಾಂದೀಶ್ರಾದ್ಧ ಮಾಡತಕ್ಕದ್ದಿಲ್ಲ. ಅಗ್ನಿಪ್ರತಿಷ್ಠೆಯ ನಂತರ ಯಾವದಾದರೊಂದು ಪೀಠದಲ್ಲಿ ಅಧಿ-ಪ್ರತ್ಯಧಿ ದೇವತೆಗಳಿಂದ ಸಹಿತಗಳಾದ ನವಗ್ರಹರನ್ನು ಸ್ಥಾಪಿಸಿ, ಅನ್ವಾಧಾನ ಮಾಡತಕ್ಕದ್ದು. ಆಜ್ಯಭಾಗಾಂತ ಅಪ: ಆಪೋಹಿಷ್ಟೇತಿ ಚೀನ ಅಪ್ಪುಮೇಸೋಮ ಇತಿ ಗಾಯತ್ಯಾಋಚಾಚ ಮಿಲಿತ ದಧಿಮಧ್ವಾಜೈನ ಪ್ರತ್ಯುಚಂ ಅಷ್ಟಾಷ್ಟಸಂಖ್ಯಾಕಾಹುತಿಭಿಃ ಯಕ್ಷಹಣಂ ಅಕ್ಷಿಭ್ಯಾಮಿತಿ ಸೂಕ್ತನ ಪ್ರತ್ಯು ಚಂ ಅಷ್ಟಾಷ್ಟಮಿಲಿತ ದಧಿಮಧ್ವಾಜಾಹುತಿಭೆ: ನವಗ್ರಹಾನ್ ದಧಿಮಧ್ಯಾನ ಅಷ್ಟಾಷ್ಟ ಸಂಖ್ಯಾಹುತಿಧಿ: ಶೇಷೇಣ” ಇತ್ಯಾದಿ ಕ್ರಮವನ್ನು ಮಯೂಖದಲ್ಲಿ ಹೇಳಿದೆ. ಕಮಲಾಕರನು: “ದರಿಮಧ್ಯಾನ ಅಪಶ್ಚತುರ್ವಾರಂ ವಿಷ್ಣುಂ ಸಕೃತ್ ಯಕ್ಷ್ಯಹಣಂ ಅಕ್ಷಿಭ್ಯಾಮಿತಿ ಸೂಕ್ತನ ಪ್ರತ್ಯುಚಂ ಅಷ್ಟಾಷ್ಟ ಸಂಖ್ಯಾಹುತಿಭಿ: ನವಗ್ರಹಾನ್ ಏಕೈಕಯಾಜ್ಯಾಹುತ್ಯಾ ಶೇಷೇಣ ಸ್ಪಷ್ಟಕೃತಂ” ಎಂದು ಹೇಳಿದ್ದಾನೆ. ಆಜ್ಯಭಾಗ ಹೋಮಾಂತದಲ್ಲಿ ಕುಂಭದಲ್ಲಿ ವಿಷ್ಣು, ವರುಣ ಪ್ರತಿಮೆಗಳನ್ನಿಟ್ಟು ಪೂಜಿಸುವದು. ಪ್ರತಿಮೆಗಳಲ್ಲಿ ವಿಷ್ಣು, ವರುಣ ಯಕ್ಷ್ಯಹರನ್ನು ಪೂಜಿಸತಕ್ಕದ್ದೆಂದು ಮಯೂಖದಲ್ಲಿ ಹೇಳಿದೆ. ನಂತರ ಅನ್ನಾಧಾನದಂತ ಹೋಮಿಸತಕ್ಕದ್ದು. ಇದು ಸಂಕ್ಷಿಪ್ತ ವಿಧಾನವು ವಿಶೇಷವನ್ನು ಶಾಂತಿಗ್ರಂಥಗಳಿಂದ ತಿಳಿಯತಕ್ಕದ್ದು. ಹೀಗೆಯೇ ಮುಂದೆ ದೇವತಾ, ದ್ರವ್ಯ, ಆಹುತಿಸಂಖ್ಯಾ, ನಿಮಿತ್ತ, ಫಲ ಇಷ್ಟನ್ನೇ ಹೇಳುವವು. ವಿಸ್ತರವನ್ನು ಬೇರೆ ಗ್ರಂಥಗಳಿಂದ ತಿಳಿಯತಕ್ಕದ್ದು. ಕೃಷ್ಣ ಚತುರ್ದಶೀ ಜನನ ಶಾಂತಿ ಕೃಷ್ಣ ಪಕ್ಷ ಚತುರ್ದಶೀ ಪರಮಘಟಿಗಳನ್ನು ಆರುಭಾಗಮಾಡುವದು. ಮೊದಲನೇ ಭಾಗದಲ್ಲಿ ಜನಿಸಿದರೆ ಶುಭವು. ಎರಡನೇ ಭಾಗವು ತಂದೆಗೆ ಅರಿಷ್ಟವು. ಮೂರನೇ ಭಾಗವು ತಾಯಿಗೆ ಅರಿಷ್ಟವು. ನಾಲ್ಕನೇ ಭಾಗವು ಸೋದರಮಾವನಿಗೆ ಅರಿಷ್ಟವು. ಐದನೇ ಭಾಗದಲ್ಲಿ ವಂಶಾರಿಷ್ಟವು. ಆರನೇ ಭಾಗದಲ್ಲಿ ಧನಹಾನಿಯು, ಮತ್ತು ಸ್ವವಂಶ ನಾಶವು. ಈ ಚತುರ್ದಶಿಯ ಆರು ಅಂಶಗಳ ಪೈಕಿ ದ್ವಿತೀಯ, ತೃತೀಯ, ಷಷ್ಠ ಈ ಅಂಶಗಳಲ್ಲಿ ಜನಿಸಿದವನಿಗೆ ಗೋಮುಖಪ್ರಸವಶಾಂತಿಪೂರ್ವಕವಾಗಿ ಚತುರ್ದಶೀ ಶಾಂತಿಯನ್ನು ಮಾಡತಕ್ಕದ್ದು. ಉಳಿದ ಭಾಗಗಳಲ್ಲಾದರೆ ಕೇವಲ ಚತುರ್ದಶಿ ಶಾಂತಿಯನ್ನು ಮಾಡತಕ್ಕದ್ದು. “ಅಸ್ಕ ಶಿಶೋ: ಕೃಷ್ಣ ಚತುರ್ದಶ್ಯಾ ಅಮುಕಾಂಶ ಜನನ ಸೂಚಿತ ಸರ್ವಾರಿಷ್ಟನಿರಾಸಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ” ಇತ್ಯಾದಿ ಸಂಕಲ್ಪಿಸುವದು. ಆತ್ಮೀಯಾದಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಲಶಗಳನ್ನು ಸ್ಥಾಪಿಸಬೇಕು. ಮಧ್ಯದಲ್ಲಿ ಶತಚ್ಛಿದ್ರ (ನೂರು ರಂಧ್ರಗಳುಳ್ಳದ್ದು) ಕಲಶವನ್ನಿಡತಕ್ಕದ್ದು. ಮಧ್ಯಕುಂಭದಲ್ಲಿ ರುದ್ರಪ್ರತಿಮೆಯನ್ನಿಟ್ಟು ರುದ್ರನನ್ನು ಆವಾಹನ ಮಾಡತಕ್ಕದ್ದು. ಮಯೂಖಗ್ರಂಥದಲ್ಲಿ ಪೀಠಾದಿಗಳಲ್ಲಿ ರುದ್ರ ಪ್ರತಿಮೆಯನ್ನು ಪೂಜಿಸಿ ಅದರ ಪೂರ್ವ ಅಥವಾ ಉತ್ತರದಿಕ್ಕಿನಲ್ಲಿ ಶತಚ್ಚಿದ್ರಾದಿ ಇದುಕಲಶಗಳನ್ನು ಸ್ಥಾಪಿಸಿ ಪೂಜಿಸತಕ್ಕದ್ದು. ಅನ್ನಾಧಾನದಲ್ಲಿ “ಗ್ರಹಾನಷ್ಟಾಷ್ಟಸಂಖ್ಯ ೧೯೮ ಧರ್ಮಸಿಂಧು ಸಮಿಚ್ಚರ್ವಾಚ್ಯಾಹುತಿಭಿಃ ಅಧಿದೇವತಾದೀನ್ ವಿಕೈಕಸಂಖ್ಯ ಸಮಿರ್ವಾಚ್ಯಾಹುತಿಭಿ: ರುದ್ರ, ಅಶ್ವತ್ಥ, ಪಕ್ಷ, ಪಲಾಶ, ಖದಿರ, ಸಮಿದ್ರಿ, ಚರ್ವಾಹುತಿಭಿಃ, ಆಜ್ಞಾಹುತಿಭಿಃ, ಮಾಷ್ಯ, ತಿಲೈ:, ಸರ್ಷ ಪೈಶ್ಚ ಪ್ರತಿದ್ರವ್ಯಂ ಆಕ್ಟೋತ್ತರಶತ, ಅಷ್ಟಾವಿಂಶತ್ವನ ತರಸಂಖ್ಯಯಾ ಪ್ರಂಬಕಮಿಮಂತ್ರಣ ಅಗ್ನಿಂ, ವಾಯು, ಸೂರ್ಯ, ಪ್ರಜಾಪತಿಂದ, ತಿಲಾಹುತಿಭಿ:, ಅಮುಕಸಂಖ್ಯಾಭಿ: ಪಕ್ಕಾ ವ್ಯಸ್ತಸಮಸ್ತವ್ಯಾಹೃತಿಭಿ: ಯಾ ಪ್ರಜಾಪತಿಮೇವ ಸಮಸ್ತವ್ಯಾಹೃತಿಭಿ: ತಿ: ಶೇಷಣ” ಈ ರೀತಿ ಹೇಳಿದೆ. ಸಿನಿವಾಲೀ - ಕುಹೂ ಜನನ ಶಾಂತಿ ಅಮಾವಾಸೆಯ ಪ್ರಥಮಯಾಮಕ್ಕೆ “ಸಿನೀವಾಲೀ"ಎನ್ನುವರು. ತುದಿಯ ಎರಡು ಯಾಮಗಳಿಗೆ “ಕುಹೂ” ಎನ್ನುವರು. ಕೆಲವರು ಮಧ್ಯದಲ್ಲಿರುವ ಐದುಯಾಮಗಳಿಗೆ “ದರ್ಶ” ಎನ್ನುವರು. ಇನ್ನು ಕೆಲವರು ಸ್ವಲ್ಪವೇ ಚತುರ್ದಶೀ ಯುಕ್ತವಾದ, ಅಹೋರಾತ್ರಿ ಇರುವ ಅಮಾವಾಸೆಗೆ “ಸಿನೀವಾಲೀ “ಎಂದೂ, ಸ್ವಲ್ಪ ಪ್ರತಿಪದಿಯಿಂದ ಕೂಡಿದ ಅಮಾವಾಸೆಗೆ “ಕುಹೂ” ಎಂದೂ ಹೇಳುವರು. ಇದರ ಮೇಲಿಂದ ಮೂರುದಿನಗಳಲ್ಲಿ ಅಮಾವಾಸೆಯ ಸ್ಪರ್ಶವಾಗುವಂಥ, ದಿನವೃದ್ಧಿಯಾಗದಿದ್ದಲ್ಲಿ ಮತ್ತು ಸೂರ್ಯೋದಯವನ್ನು ಸ್ಪರ್ಶಮಾಡದೆ ಇದ್ದ ದಿನ ಕ್ಷಯ (ಉಪರಿ) ವಿಲ್ಲದಿದ್ದರೆ ಆಗ ಸರ್ವಥಾ “ದರ್ಶವೇ ಇರುವದಿಲ್ಲ’ ಎಂದಾಗುತ್ತದೆ ಯಾಕಂದರೆ ಸೂರ್ಯೋದಯಕ್ಕಿಂತ ಮೊದಲಿನ ಅಹೋರಾತ್ರಿಯ ಮಧ್ಯದಲ್ಲಿರುವ ಅಮಾವಾಸೆಗೆ “ಸಿನೀವಾಲೀ” ಸಂಜ್ಞೆ ಬರುತ್ತದೆ. ಉದಯಾನಂತರ ಇರುವ ಅಮಾವಾಸೆಗೆ “ಕುಹೂ” ಸಂಜ್ಞೆ ಬರುತ್ತದೆ. ದಿನಕ್ಷಯವಾದಲ್ಲಿ ಸರ್ವ ಅಮಾವಾಸೆಯು ದರ್ಶವಾಗುವದು. ಆಗ “ಸಿನೀವಾಲೀ” ಅಥವಾ “ಕುಹೂ” ಸಂಜ್ಞೆಗಳಿರುವದಿಲ್ಲ. ಕೇವಲ ಚತುರ್ದಶೀ ಅಥವಾ ಪ್ರತಿಪದೆಯಿಂದ ಅದು ಯುಕ್ತವಾಗಿರುವದಿಲ್ಲ. ದಿನವೃದ್ಧಿಯಲ್ಲಿ ತ್ರಿದಿನಸ್ಪರ್ಶವಾದಲ್ಲಿ ಮಧ್ಯದಿನಸ್ಥವಾದ, ಅರವತ್ತು ಘಟೀ ಮಿತವಾದ ಅಮಾವಾಸೆಯ ದರ್ಶಸಂಜ್ಞೆಯುಳ್ಳದ್ದಾಗುವದು. ಯಾಕೆಂದರೆ ಚತುರ್ದಶೀ-ಪ್ರತಿಪದಿಗಳ ಯೋಗವಾಗುವದಿಲ್ಲ. ಹಿಂದಿನ ಮತ್ತು ಮುಂದಿನ ದಿನಗಳಲ್ಲಿರುವ ಭಾಗಗಳು ಸಿನೀವಾಲೀ, ಕುಹೂ ಸಂಸ್ಕೃತಗಳಾಗುವವೆಂದು ಹೇಳುವರು. ಇದನ್ನು ಮಯೂಖದಲ್ಲಿ ಸ್ಪಷ್ಟಪಡಿಸಿದೆ. ಸಿನಿವಲಿಯಲ್ಲಿ ಯಾವನ ಪತ್ನಿ, ಪಶು, ಆನೆ, ಕುದುರೆ, ಎಮ್ಮೆ ಇವು ಹಡೆಯುವವೋ ಆತನು ಇಂದ್ರಸಮಾನ ಐಶ್ವರ್ಯವುಳ್ಳವನಾದರೂ, ಆತನ ಸಂಪತ್ತು ನಷ್ಟವಾಗುವದು. ಗೋವು, ಪಕ್ಷಿ, ಮೃಗ, ದಾಸಿಯರು ಇವರು ಹಡೆದರೂ ಧನನಷ್ಟವಾಗುವದು. ಕುಹೂ ಜನನದಲ್ಲಿಯಾದರೂ ಹೆಚ್ಚಾಗಿ ಎಲ್ಲ ದೋಷಗಳೂ ಉಂಟಾಗುವವು. ಇದಕ್ಕೆ ಶಾಂತಿಮಾಡಿಕೊಳ್ಳದಿದ್ದರೆ ಹಡೆದ ಶಿಶು ಅಥವಾ ಪ್ರಾಣಿಯನ್ನು ತ್ಯಾಗಮಾಡತಕ್ಕದ್ದು. ಯಾಕೆಂದರೆ ಮನೆಯಲ್ಲಿಟ್ಟುಕೊಂಡರೆ ಧನ, ಆಯುಸ್ಸು ಮೊದಲಾದವುಗಳು ನಷ್ಟವಾಗುವವು ಮತ್ತು ಜನಿಸಿದ ಅವುಗಳಾದರೂ ನಾಶಹೊಂದುವವು. ಶಾಂತಿಯಲ್ಲಿ ಸಿನಿವಲಿ ಜನನಸೂಚಿತ, ಕುಹೂ ಜನನಸೂಚಿತ, ಅರಿಷ್ಟ ನಾಶ ಹೀಗೆ ಸಂಚಲ್ಲಿಸುವದು. ಕುಹೂ ಜನನದಲ್ಲಿ ಗೋಪ್ರಸವವನ್ನೂ ಮಾಡಬೇಕೆಂದು ಕೆಲವರ ಮತವು. ಈ ಎರಡೂ ಶಾಂತಿಗಳಲ್ಲಿ ಚತುರ್ದಶಿ ಶಾಂತಿಯಂತ ಶತಟ್ಟಿದ ಕಲಶ ಸಹಿತ ಐದು ಕಲಶ ಮಾಡಿ, ಮಧ್ಯದಲ್ಲಿ ಪ್ರಧಾನದೇವತೆಯಾದ ರುದ್ರನನ್ನು ಆವಾಹನ ಮಾಡಬೇಕು. “ಇಂದ್ರ ಪಿತೃ’ ಇವು ವಾರ್ಶ್ವದೇವತೆಗಳು, ಹೀಗೆ ಮೂರು ಪ್ರತಿಮೆಗಳನ್ನು ಮಾಡಬೇಕು. ಪ್ರಧಾನದೇವತೆಗೆ ಹೇಳಿದ್ದಕ್ಕಿಂತಪರಿಚ್ಛೇದ - ೩ ಪೂರ್ವಾರ್ಧ OFE ಪಾರ್ಶ್ವ ದೇವತೆಗಳಿಗೆ ಕಡಿಮೆ ಸಂಖ್ಯೆಯಿಂದ ಹೋಮವು. ಆದರೆ ದ್ರವ್ಯಗಳೆಲ್ಲ ಪ್ರಧಾನದಂತೆಯೇ. ಅವಶಿಷ್ಟ ಅನ್ನಾಧಾನ ದೇವತೆಗಳ ವಿಷಯವನ್ನು ಚತುರ್ದಶೀ ಶಾಂತಿಯಂತೆಯೇ ತಿಳಿಯತಕ್ಕದ್ದು. ಪ್ರಧಾನದೇವತಾ ಪೂಜೆಯ ನಂತರ ಗೋವು, ವಸ್ತ್ರ, ಸುವರ್ಣ ಇವುಗಳನ್ನು ದಾನಮಾಡತಕ್ಕದ್ದು. ಮತ್ತು “ದಶದಾನ” ಅಂದರೆ ಗೋವು, ಭೂಮಿ, ತಿಲ, ಹಿರಣ್ಯ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಬೆಳ್ಳಿ, ಉಪ್ಪು ಹೀಗೆ ಹತ್ತು; ಇವುಗಳನ್ನೂ ದಾನಮಾಡಬೇಕು. ಮತ್ತು ಹಾಲು, ತುಪ್ಪ, ಬೆಲ್ಲ, ಇವುಗಳನ್ನು ಪ್ರತ್ಯೇಕವಾಗಿ ದಾನಮಾಡಬೇಕು. ನಂತರ ಹೋಮವನ್ನು ಪ್ರಾರಂಭಿಸಬೇಕು ಈ ಹೇಳಿದ ದಾನಗಳನ್ನು ಋತ್ವಿಜರಿಗೆ ಕೊಡತಕ್ಕದ್ದು. ಆದುದರಿಂದ ತುದಿಯಲ್ಲಿ ಪ್ರತ್ಯೇಕ ದಕ್ಷಿಣೆಯನ್ನು ಕೊಡತಕ್ಕದ್ದಿಲ್ಲ. ಹೇಳಿದ ಗೋವು ಮೊದಲಾದವುಗಳಲ್ಲ ದಕ್ಷಿಣಾರೂಪಗಳೇ ಆಗಿರುವದರಿಂದ ಪುನಃ ದಕ್ಷಿಣಾಸಹಿತವಾಗಿ ದಾನಕೊಡತಕ್ಕದ್ದಿಲ್ಲ. ದಶದಾನಾದಿಗಳನ್ನು ದಕ್ಷಿಣಾಸಹಿತವಾಗಿಯೇ ಕೊಡಬೇಕು. ದಾನಕ್ಕೆ ಪರಿಮಾಣ ಹೀಗಿದೆ. -ಏಳುಮೊಳಗಳಿಗೆ “ದಂಡ” ಎನ್ನುವರು. ಮೂವತ್ತು ದಂಡಗಳಿಗೆ “ವರ್ತನ"ವೆನ್ನುವರು. ಹತ್ತು ವರ್ತನಗಳಿಗೆ “ಗೋಚರ್ಮ’ವಾಗುವದು. ಅಂತೂ ೨೧೦೦ ಮೊಳ ಚೌರಸಿನ ಜಾಗವು “ಗೋಚರ್ಮ’ವಾಗುವದು. ಭೂಮಿ ದಾನವನ್ನು “ಗೋಚರ್ಮ ಪರಿಮಾಣ” ವನ್ನಾಗಿ ಕೊಡಬೇಕು. ಎಳ್ಳುಗಳನ್ನು “ದ್ರೋಣ” ಪರಿಮಾಣದಿಂದ ಕೊಡಬೇಕು. ಸುವರ್ಣದಾನದಲ್ಲಿ ಅಥವಾ ಬೆಳ್ಳಿಯ ದಾನದಲ್ಲಿ ಹತ್ತು ಅಥವಾ ಐದು ಇಲ್ಲವೆ ಕನಿಷ್ಠ ಎರಡೂವರೆ ಮಾಷದಷ್ಟು ಕೊಡತಕ್ಕದ್ದು. ತುಪ್ಪಕ್ಕೆ ನಾಲ್ವತ್ತು ಪಲಗಳು, ವಸ್ತ್ರದ ಪರಿಮಾಣವು ಮೂರುಮೊಳ ಇರಬೇಕು. ಧಾನ್ಯ, ಬೆಲ್ಲ, ಉಪ್ಪು ಇವುಗಳನ್ನು ಹತ್ತು “ದ್ರೋಣ” ಕೊಡತಕ್ಕದ್ದು, ನಿತ್ಯನೈಮಿತ್ತಿಕ ಕಾರ್ಯಗಳಲ್ಲಿ ಹೇಳಿದ ಪ್ರಮಾಣವನ್ನು ಕೊಡಲು ಶಕ್ಯವಿಲ್ಲದಲ್ಲಿ ಯಥಾಶಕ್ತಿ ಕೊಡುವದು. ಅಥವಾ ಅವುಗಳ ಪ್ರತಿನಿಧಿಯಾಗಿ ಯಥಾಶಕ್ತಿ ಹಿರಣ್ಯವನ್ನು “ಹಿರಣ್ಯಗರ್ಭ” ಈ ಮಂತ್ರದಿಂದ ಕೊಡಬೇಕು. ನೈಮಿತ್ತಿಕಾದಿಗಳಲ್ಲಿ ಇವುಗಳ ದಾನ ಮಾಡದಿದ್ದರೆ ದೋಷಬರುವದು. ಕಾಮ ಫಲಕಾಮಿಯಾಗಿ ಮಾಡುವಾಗ ಶಕ್ತಿಯಿದ್ದರೆ ದಶದಾನಾದಿಗಳನ್ನು ಮಾಡಬಹುದು. ಇಲ್ಲವಾದರೆ ಬಿಡಬಹುದೆಂದು ತೋರುತ್ತದೆ. ಹೋಮ ಮುಗಿದ ಮೇಲೆ ಬಲಿದಾನ, ಅಭಿಷೇಕಾದಿಗಳನ್ನು ಮಾಡತಕ್ಕದ್ದು. ಹೀಗೆ ಸಿನೀವಾಲೀ ಕುಹೂ ಜನನ ಶಾಂತಿಯು, ದರ್ಶಶಾಂತಿ ದರ್ಶದಲ್ಲಿ ಶಿಶುಜನನವಾದರೆ ತಂದೆ-ತಾಯಿಗಳಿಗೆ ದಾರಿದ್ರವುಂಟಾಗುವದು. ಅದರ ದೋಷನಿವಾರಣೆಗಾಗಿ ಶಾಂತಿಯನ್ನು ಹೇಳಲಾಗುವದು. “ಆತ್ಮ ದರ್ಶ ಜನನ ಸೂಚಿತ ಅರಿಷ್ಟನಿರಾಸಾರ್ಥಂ ಶಾಂತಿಂ ಕರಿಷ್ಟೇ” ಹೀಗೆ ಸಂಕಲ್ಪಿಸುವದು. ಸ್ಥಂಡಿಲದ ಪೂರ್ವದಿಕ್ಕಿನಲ್ಲಿ ಕಲಶವನ್ನು ಸ್ಥಾಪಿಸಿ ಕಲಶ ಮತ್ತು ಅಗ್ನಿಯ ಮಧ್ಯದಲ್ಲಿ ಸರ್ವತೋಭದ್ರಮಂಡಲವನ್ನು ಬರೆದು, ಬ್ರಹ್ಮಾದಿ ಮಂಡಲದೇವತೆಗಳ ಆವಾಹನಮಾಡುವದು. ಅದರ ಮಧ್ಯದಲ್ಲಿ ಬಂಗಾರದ ಪ್ರತಿಮೆಯನ್ನಿಟ್ಟು “ಯೇಚೇಹ ಪಿತರಃ’ ಈ ಮಂತ್ರದಿಂದ ಪಿತೃಗಳನ್ನಾವಾಹಿಸತಕ್ಕದ್ದು. ಅದರ ಬಲಗಡೆಯಲ್ಲಿ ಬೆಳ್ಳಿಯ ಪ್ರತಿಮೆಯಲ್ಲಿ “ಆಪ್ಯಾಯಸ್ವ” ಈ ಮಂತ್ರದಿಂದ ಚಂದ್ರನನ್ನೂ, ಉತ್ತರದಿಕ್ಕಿನಲ್ಲಿ ತಾಮ್ರದ ಪಾತ್ರೆಯಲ್ಲಿ “ಸವಿತಾ ಪಶ್ಚಾತ್ತಾ” ಈ ಮಂತ್ರದಿಂದ ಸೂರ್ಯನನ್ನೂ ಆವಾಹಿಸಿ, ಪೂಜಿಸಿ ಅಗ್ನಿ ಪ್ರತಿಷ್ಠೆ ಮಾಡಿ ಸರ್ವತೋಭದ್ರದ ಈಶಾನ್ಯ ದಿಕ್ಕಿನಲ್ಲಿ 900 ಧರ್ಮಸಿಂಧು ಗ್ರಹಸ್ಥಾಪನಾದಿಗಳನ್ನು ಮಾಡತಕ್ಕದ್ದು. ಅನಾಧಾನದಲ್ಲಿ “ಆದಿತ್ಯಾದಿ ಗ್ರಹಾನ್‌ ಅಮುಕಸಂಖ್ಯಾಭಿ: ಸಮಿರ್ವಾಹುತಿಭಿ:, ಪಿಮ್ರನ್, ಅಷ್ಟಾವಿಂಶತಿ ಸಂಖ್ಯಾಕಾಭಿ: ಸಮಿಚ್ಚರುಭ್ಯಾಂ ಸೋಮಂ ಸೂರ್ಯಂಚ ಪ್ರತ್ಯೇಕಮಷ್ಟೋತ್ತರ ಶತಸಂಖ್ಯ ಸಮಿಚ್ಚರ್ವಾಹುತಿಭಿ: ಶೇಷಣ ಸ್ವಿಷ್ಟಕೃತ್” ಇತ್ಯಾದಿ. ಇಲ್ಲಿ ಸ್ಪಷ್ಟಕೃತಕ್ಕಿಂತ ಪೂರ್ವದಲ್ಲಿ ಮಾತಾಪಿತೃಶಿಶುಗಳಿಗೆ ಕಲಶೋದಕದಿಂದ ಅಭಿಷೇಕ ಮಾಡಿ, ಆಮೇಲೆ ಸ್ವಿಷ್ಟಕೃತ್‌ ಬಲಿದಾನಾದಿಗಳನ್ನು ಮಾಡತಕ್ಕದ್ದು, ಇದೇ ವಿಶೇಷವು. ಹೀಗೆ ದರ್ಶ ಶಾಂತಿಯು, ನಕ್ಷತ್ರ ಶಾಂತಿ ಮೂಲಾನಕ್ಷತ್ರದ ಆದಿವಾದದಲ್ಲಿ ಜನಿಸಿದರೆ ತಂದೆಗೂ, ಎರಡನೇ ಪಾದದಲ್ಲಿ ತಾಯಿಗೂ ಮರಣಾರಿಷ್ಟವು. ಮೂರನೇ ಪಾದದಲ್ಲಿ ಧನನಷ್ಟ ನಾಲ್ಕನೇ ಪಾದದಲ್ಲಿ ಕುಲನಾಶ ಇವು ಫಲಗಳು, ಆದಕಾರಣ ಪ್ರಯತ್ನದಿಂದಾದರೂ ಶಾಂತಿಯನ್ನು ಮಾಡಬೇಕು. ಕೆಲ ಬಲ್ಲವರು ನಾಲ್ಕನೇ ಪಾದವು ಶುಭವನ್ನುವರು. ಈ ಜನನಾರಿಷ್ಟವು ಪುತ್ರ ಪುತ್ರಿಯರೆಲ್ಲರಿಗೂ ಸಮವು. ಕೆಲವರು ಮೂಲದಲ್ಲಿ ಜನಿಸಿದ ಕನೈಯು, ತಂದೆ-ತಾಯಿಗಳ ಮರಣಾರಿಷ್ಟಕ್ಕೆ ಕಾರಣಳಾಗುವದಿಲ್ಲವೆನ್ನುವರು. ಮೂಲಾದಲ್ಲಿ ಹುಟ್ಟಿದವಳು ಮಾವನನ್ನೂ, ಆಶ್ಲೇಷೆಯಲ್ಲಿ ಜನಿಸಿದವಳು ಅತ್ತೆಯನ್ನೂ, ಜೇಷ್ಟೆಯಲ್ಲಿ ಜನಿಸಿದವಳು ಪತಿಯ ಅಣ್ಣನನ್ನೂ, ವಿಶಾಖೆಯಲ್ಲಿ ಹುಟ್ಟಿದವಳು ಪತಿಯ ತಮ್ಮನನ್ನೂ ನಾಶಮಾಡುವಳೆಂದು ಹೇಳುವರು. ಮತ್ತು ಯೋಗ್ಯವಾಗಿ ಶಾಂತಿಮಾಡಿಕೊಂಡಲ್ಲಿ ದೋಷವಿಲ್ಲವೆನ್ನುವರು. ಅಭುಕ್ತಮೂಲದಲ್ಲಿ ಜನಿಸಿದ ಶಿಶುವನ್ನು ಎಂಟು ವರ್ಷಗಳ ವರೆಗೆ ತ್ಯಜಿಸಬೇಕು; ಮತ್ತು ಮುಖಾವಲೋಕನವನ್ನು ಮಾಡಬಾರದು, ಇತ್ಯಾದಿ ವಚನಗಳಿವೆ. ಜೇಷ್ಠಾ ನಕ್ಷತ್ರದ ಅಂತ್ಯದ ಒಂದು ಘಟಿ, ಮೂಲಾನಕ್ಷತ್ರದ ಆದಿಯ ಎರಡುಘಟಿ, ಈ ಸಂಧಿಗೆ “ಅಭುಕ್ತಮೂಲ"ವೆನ್ನುವರು. ಅಥವಾ ಜೇಷ್ಟೆಯ ಅಂತ್ಯದ ಎರಡು, ಮೂಲದ ಆದಿಯ ಎರಡುಘಟಿಗಳ ಸಂಧಿಗೆ ಅಭುಕ್ತಮೂಲ’ವೆನ್ನುವರು. ವೃಷಭ, ವೃಶ್ಚಿಕ, ಸಿಂಹ, ಕುಂಭ ಇವು ಜನ್ಮಲಗ್ನಗಳಾದರೆ ಆಗ ಅದಕ್ಕೆ “ಸ್ವರ್ಗಮೂಲ"ವೆನ್ನುವರು, ಮಿಥುನ, ತುಲಾ, ಕನ್ಯಾ, ಮೀನ ಈ ಲಗ್ನಗಳಾದಲ್ಲಿ “ಪಾತಾಳಮೂಲ"ಎಂದಾಗುವದು. ಮೇಷ, ಧನು, ಕರ್ಕ, ಮಕರ ಈ ಲಗ್ನಗಳಾದರೆ “ಭೂಮಿಮೂಲವಾಗುವದು. ಸ್ವರ್ಗಮೂಲಕ್ಕೆ “ರಾಜ್ಯಪ್ರಾಪ್ತಿ”, ಪಾತಾಳಮೂಲಕ್ಕೆ “ಧನಪ್ರಾಪ್ತಿ” ಭೂಮಿಮೂಲವಾದಲ್ಲಿ “ಸರ್ವನಾಶ” ಹೀಗೆ ಫಲವನ್ನು ಹೇಳಿದೆ. ಆಶ್ಲೇಶಾದೋಷಕ್ಕೆ ಒಂಭತ್ತು ತಿಂಗಳು, ಮೂಲಾದೋಷಕ್ಕೆ ಎಂಟುವರ್ಷ, ಜೇಷ್ಟೆಗೆ ಹದಿನೈದು ತಿಂಗಳು-ಇಷ್ಟುಕಾಲ ಅರಿಷ್ಟದ ಅವಧಿಯು. ಈ ಅವಧಿವರೆಗೆ ಶಿಶುದರ್ಶನವನ್ನು ಬಿಡಬೇಕು. ವ್ಯತೀಪಾತದಲ್ಲಿ ಜನಿಸಿದರೆ “ಅಂಗಹಾನಿ”,ಪರಿಘದೋಷದಲ್ಲಿ “ಮರಣ”,ವೈಧೃತಿಯಲ್ಲಿ “ಪಿತೃಹಾನಿ” ಅಮಾವಾಸೆಯಲ್ಲಿ “ಅಂಧತ್ವ ಮೂಲಾದಲ್ಲಿ “ಸರ್ವನಾಶ”, ವೈಧೃತಿಯಲ್ಲಿ “ಕುಲನಾಶ”, ಪ್ರಾತಃಸಂಧಿ-ಸಾಯಂಸಂಧಿ ಅಥವಾ ಎರಡುನಕ್ಷತ್ರಗಳ ಸಂಧಿಯಲ್ಲಿ ಜನಿಸಿದರೆ “ಅಂಗವಿಕಾರ” ಅಥವಾ “ಹೀನಾಂಗತ್ಯ” ಇವು ಫಲಗಳು. ಇದರಂತ ದಂತಸಹಿತ (ಸದಂತ ಜನನ) ಉತ್ಪನ್ನನಾದರೆ ಅಥವಾ ಪಾದವನ್ನು ಮುರ ಮಾಡಿಕೊಂಡು ಜನನವಾದರೆ ಆಗ ಶಾಂತಿಯನ್ನು ಮಾಡತಕ್ಕದ್ದು. ಗ್ರಹಪ್ರತಿಕೂಲದಲ್ಲಿಯಾದರೂ ಶಾಂತಿಮಾಡಬೇಕು. ವ್ಯತೀಪಾತಾದಿಗಳಲ್ಲಿ ಗ್ರಹಶಾಂತಿಪೂರ್ವಕ · ಪರಿಚ್ಛೇದ - ೩ ಪೂರ್ವಾರ್ಧ ೨೦೧ ಆಯಾಯ ಶಾಂತಿಗಳನ್ನು ಅವಶ್ಯವಾಗಿ ಮಾಡಬೇಕು. ಇತರ ಶಾಂತಿಗಳಲ್ಲಿ ಗ್ರಹಮಖವು ಆವಶ್ಯಕವಲ್ಲ ಎಂದಭಿಪ್ರಾಯ. ಹುಟ್ಟಿದ ಹನ್ನೆರಡನೆ ದಿನ ಶಾಂತಿಗೆ ಮುಖ್ಯಕಾಲವು. ಅಥವಾ ಮುಂದೆ ಜನ್ಮನಕ್ಷತ್ರದಲ್ಲಿ ಇಲ್ಲವೆ ಶುಭಮುಹೂರ್ತದಲ್ಲಿ ಮಾಡಬೇಕು. ಜನನದಿಂದ ಹನ್ನೆರಡನೇ ದಿನದಲ್ಲಾದರೆ ಶಾಂತ್ಯುಕ್ತನಕ್ಷತ್ರ, ಆಹುತಿ, ಅಗ್ನಿಶುದ್ಧಿ ಮೊದಲಾದವುಗಳನ್ನು ನೋಡುವ ಕಾರಣವಿಲ್ಲ. ಕಾಲಾಂತರದಲ್ಲಾದರೆ ಇವೆಲ್ಲ ಆವಶ್ಯಕವು. ಹೀಗೆ ಬೇರೆ ಬೇರೆ ಶಾಂತಿಗಳಿಗೂ ತಿಳಿಯತಕ್ಕದ್ದು. ಅಗ್ನಿಶುದ್ಧಿ ನೋಡುವ ಕ್ರಮ ಶುಕ್ಲ ಪ್ರತಿಪದೆಯಿಂದ ಆ ದಿನದವರೆಗೆ ಎಣಿಸಿ ಅದಕ್ಕೆ ಒಂದನ್ನು ಹೆಚ್ಚು ಕೂಡಿಸಿ, ಬಂದ ಮೊತ್ತವನ್ನು ನಾಲ್ಕರಿಂದ ಭಾಗಿಸಿ ಉಳಿದ ಶೇಷವು ಶೂನ್ಯ ಅಥವಾ ಮೂರು ಉಳಿದರೆ ಭೂಮಿಯಲ್ಲಿ ಅಗ್ನಿವಾಸವಿದೆಯೆಂದು ತಿಳಿಯುವದು. ಒಂದು ಅಥವಾ ಎರಡು ಅಂಕೆಗಳು ಉಳಿದರೆ ಪಾತಾಳ, ಆಕಾಶಗಳಲ್ಲಿ ಅಗ್ನಿವಾಸವೆಂದು ತಿಳಿಯುವದು. ಭೂಮಿಯಲ್ಲಿ ಅಗ್ನಿವಾಸವು ಶುಭವು, (ಉದಾ:- ಶುಕ್ಲ ಪಂಚಮಿ ರವಿವಾರ. ಈ ದಿನ ಅಗ್ನಿಸಿದ್ದಿಯನ್ನು ನೋಡುವದಿದೆ. ಶುಕ್ಲ ಪ್ರತಿಪದೆಯಿಂದ ಪಂಚಮಿಗೆ ೫ ದಿನ. ಅದಕ್ಕೆ ಒಂದನ್ನು ಕೂಡಿಸಿದರೆ ಆರು ವಾರವು ರವಿವಾರವಾದ್ದರಿಂದ ಸಂಖ್ಯೆ ೧. ಒಟ್ಟು ೭ ಅಂಕೆಯು ಬಂದಿದ್ದು ೪ ರಿಂದ ಭಾಗಿಸಲಾಗಿ ಶೇಷ ೩ ಉಳಿಯಿತು. ಆ ದಿನ ಅಗ್ನಿಸಿದ್ದಿಯಿದ್ದಂತಾಯಿತು) ಹೋಮಾಹುತಿ ನೋಡುವ ಕ್ರಮ ಸೂರ್ಯನಕ್ಷತ್ರದಿಂದ ಚಂದ್ರನಕ್ಷತ್ರದವರೆಗೆ ಮೂರು ಮೂರು ನಕ್ಷತ್ರಗಳ ಗುಂಪನ್ನು ಗುರುತಿಸಿಕೊಂಡು ಎಣಿಸುವಾಗ ಮೊದಲು ಮೂರುನಕ್ಷತ್ರಗಳೊಳಗಾದರೆ “ಸೂರ್ಯನ ಮುಖದಲ್ಲಿ ಆಹುತಿ’ಯೆಂದು ತಿಳಿಯುವದು. ಎರಡನೇ ಮೂರು ನಕ್ಷತ್ರಗಳಾದಲ್ಲಿ ಬುಧ”,ಮೂರನೇದಕ್ಕೆ “ಶುಕ್ರ, ನಾಲ್ಕನೇ ಗುಂಪಾದರೆ “ಶನಿ”,ಐದನೇದಾದರೆ “ಚಂದ್ರ”. ಆರನೆಯದಕ್ಕೆ “ಕುಜ”,ಏಳನೇದಕ್ಕೆ “ಗುರು”, ಎಂಟನೇದಕ್ಕೆ “ರಾಹು”, ಒಂಬತ್ತನೇದಕ್ಕೆ “ಕೇತು” ಹೀಗೆ ಗ್ರಹರನ್ನು ತಿಳಿದುಕೊಳ್ಳುವದು. (ಉದಾ:ರವಿನಕ್ಷತ್ರ (ಮಹಾನಕ್ಷತ್ರ) ಅಶ್ವಿನಿಯೆಂದೂ, ಚಂದ್ರನಕ್ಷತ್ರ (ನಿತ್ಯ ನಕ್ಷತ್ರ ಮೃಗಶಿರೆಯೆಂದೂ ತಿಳಿಯಿರಿ. ಆಗ ರವಿನಕ್ಷತ್ರವನ್ನು ಹಿಡಿದು ಕೃತ್ತಿಕೆ ವರೆಗಿನ ಮೂರು ನಕ್ಷತ್ರಗಳು ಮೊದಲನೆ ತ್ರಿಕದಲ್ಲಿ ಬಂದಂತಾಯಿತು. ಎರಡನೇತ್ರಿಕ ಅಂದರೆ ರೋಹಿಣಿ, ಮೃಗಶಿರಾ, ಆದ್ರ್ರಾ ಇವು ರವಿ ನಕ್ಷತ್ರದಿಂದ ಎರಡನೆಯ ತ್ರಿಕದಲ್ಲಿ ಬರುವವು. ಈ ನಿತ್ಯನಕ್ಷತ್ರವಾದ ಮೃಗಶಿರೆಯು ಎರಡನೆಯ ಗುಂಪಿನಲ್ಲಿರುವದರಿಂದ ಆಹುತಿಯು ಬುಧನ ಮುಖದಲ್ಲಾದಂತಾಯಿತು. ಬುಧನು ಶುಭಗ್ರಹರಲ್ಲಿ ಬರುವದರಿಂದ ಆ ದಿನ ಆಹುತಿಸಿದ್ದಿಯಿದೆ ಎಂದು ತಿಳಿಯುವದು.) ಚಂದ್ರ, ಬುಧ, ಗುರು, ಶುಕ್ರ ಇವು ಶುಭಗ್ರಹಗಳು. ಉಳಿದವು ಅಶುಭಗಳು. ಇನ್ನು ಸಂಸ್ಕಾರ, ಕರ್ಮ ಹಾಗೂ ನಿತ್ಯಕರ್ಮ, ಆ ಕೂಡಲೇ ಮಾಡಬೇಕಾದ ನೈಮಿತ್ತಿಕ ಕರ್ಮ, ಮತ್ತು ರೋಗಾದಿಗಳಲ್ಲಿ ತೀವ್ರವಾಗಿ ಮಾಡಬೇಕಾದ ಕರ್ಮ ಇವುಗಳಲ್ಲಿ ಅಗ್ನಿಚಕ್ರ ಮೊದಲಾದವುಗಳನ್ನು ನೋಡಬೇಕೆಂದಿಲ್ಲ. ಅಗ್ನಿಸಿದ್ಧಿ, ಆಹುತಿಶುದ್ಧಿ ಇವುಗಳು ಶಾಂತಿಕಾಲದ ಅಗ್ನಿಸ್ಥಾಪನೆ ಅಥವಾ ಪೂರ್ಣಾಹುತಿಸಮಯ ಇರಬೇಕಾದದ್ದು. ೨೦೨ ಧರ್ಮಸಿಂ ಸಾಮಾನ್ಯವಾಗಿ ಶಾಂತಿಕಾರ್ಯಕ್ಕೆ ಉತ್ರಾ, ಉತ್ರಾಷಾಢಾ, ಉತ್ರಾಭದ್ರಾ, ರೋಹಿಣಿ, ಶ್ರಮ ಧನಿಷ್ಠಾ ಶತಭಿಷ, ಪುನರ್ವಸು, ಸ್ವಾತಿ, ಮಘಾ, ಅಶ್ವಿನಿ, ಹಸ್ತ, ಪುಷ್ಯ, ಅನುರಾಧಾ, ರೇವತಿ ನಕ್ಷತ್ರಗಳು ಶುಭಗಳು, ಗುರು, ಶುಕ್ರಾಸ್ತ್ರ, ಮಲಮಾಸಗಳು ಅಶುಭವು, ಶುಭತಿಥಿ ಶುಭವಾರಗ ಪ್ರಶಸ್ತಿ, ನಿಮಿತ್ತ (ಕಾರಣ)ವುಂಟಾದ ಕೂಡಲೇ ಮಾಡಬೇಕಾದ ನೈಮಿತ್ತಿಕದಲ್ಲಿ ಮತ್ತು ತೀ ರೋಗಪೀಡಿತನಾದಾಗ, ಆಸ್ತಾದಿವಿಚಾರವನ್ನು ಮಾಡಬೇಕಾಗಿಲ್ಲ. ಹೀಗೆ ಪ್ರಸಂಗಾನುಸಾರ ಎ ಶಾಂತಿಗಳಿಗೂ ಉಪಯುಕ್ತಗಳಾದ ಶುಭದಿನನಿರ್ಣಯಗಳನ್ನು ಹೇಳಲಾಯಿತು. ಅಭುಕ್ತ ಮೂಲಾದ ಜನನದಲ್ಲಿ ಎಂಟುವರ್ಷ ಪರ್ಯಂತ ಶಿಶುವನ್ನು ತ್ಯಜಿಸಬೇಕೆಂ ಹೇಳಿದೆಯಷ್ಟೇ? ಆಮೇಲೆ ಶಾಂತಿಯನ್ನು ಮಾಡಬೇಕೆಂದಂತಾಯಿತು. ಅಭುಕ್ತವಲ್ಲದ ಮೂಲಾದ ಜನಿಸಿದವರಿಗೆ ಹನ್ನೆರಡನೇದಿನ ಅಥವಾ ಮುಂದಿನ ಮೂಲಾನಕ್ಷತ್ರದ ದಿನ, ಅರ್ಥ ಯಾವದಾದರೊಂದು ಶುಭದಿನ ಗೋಪ್ರಸವಶಾಂತಿಯನ್ನು ಮಾಡಿ “ಅಶಿಶೋ: ಮೂಲ ಪ್ರಥ’ ಚರಣೋತ್ಪತ್ತಿ ಸೂಚಿತ ಅರಿಷ್ಟ ನಿರಾಸಾರ್ಥಂ ಸಗ್ರಹಮಖಾಂ ಶಾಂತಿಂ ಕರಿಷ್ಯ ಹೀಗೆ ಸಂಕ ಮಾಡತಕ್ಕದ್ದು. ದ್ವಿತೀಯಾದಿ ವಾದಗಳಲ್ಲಾದರೆ ಅದರಂತೆ ಸಂಕಲ್ಪಿಸುವದು. ಸದಸ್ಯ, ಬ್ರಹ ವರಣೆಯು ಕೃತಾಕೃತವು. ಋತ್ವಿಜರು ಎಂಟು ಅಥವಾ ಲ್ವರು ಇರತಕ್ಕದ್ದು. ಮಧ್ಯ ಕಲಶದ ರುದ್ರಾವಾಹನಾದಿಗಳನ್ನು ಮಾಡುವದು. ಅದರ ನಾಲ್ಕು ದಿಕ್ಕುಗಳಲ್ಲಿ ಅಕ್ಷತೆಯ ರಾಶಿಗಳ ಮೇ ಇಟ್ಟ ಕಲಶಗಳಲ್ಲಿ ವರುಣಪೂಜೆಯನ್ನು ಮಾಡತಕ್ಕದ್ದು. ಅಥವಾ ಮಧ್ಯಕುಂಭದಲ್ಲಿರು ಪ್ರತಿಮೆಯಲ್ಲಿ ರುದ್ರ, ಅದರ ಉತ್ತರ ಕುಂಭದಲ್ಲಿ ವರುಣ ಹೀಗೆ ಎರಡು ಕಲಶಗಳಲ್ಲಿ ಆವಾಹ ಮಾಡುವದು, ರುದ್ರಕುಂಭದ ಉತ್ತರದಲ್ಲಿರುವ ಕುಂಭಗಳಲ್ಲಿರುವ ಪ್ರತಿಮೆಗಳಲ್ಲಿ ನಿಮ್ಮ ಇಂದ್ರ, ಅಪ: ಇವುಗಳನ್ನು ಆವಾಹನಮಾಡಿ, ಪದ್ಮದ ಇಪ್ಪತ್ತುನಾಲ್ಕು ದಲಗಳಲ್ಲಿ ಉತ್ರಾಷಾಢಾ ಅನುರಾಧಾಂತವಾದ ಇಪ್ಪತ್ತುನಾಲ್ಕು ನಕ್ಷತ್ರದೇವತಾ ಇವುಗಳನ್ನು ಆವಾಹನಮಾಡುವದ ವಿಶ್ವದೇವಾದಿಗಳನ್ನು ತಂಡುಲ ರಾಶಿಗಳಲ್ಲಾವಾಹನ ಮಾಡುವದು. ಆಯಾಯ ದಿಕ್ಕುಗಳ ಲೋಕಪಾಲಾದಿಗಳನ್ನಾವಾಹಿಸಿ ಪೂಜಿಸುವದು. ಅಗ್ನಿ -ಗ್ರಹ ಸ್ಥಾಪನಾದಿಗಳ ನಂತ ಅನ್ನಾಧಾನದಲ್ಲಿ “ಅರ್ಕಾದಿಗ್ರಹಾನ್ ಸಮಿರ್ವಾಜ್ಞಾಹುತಿ: ನಿಗ್ರತಿಂ ಪ್ರತಿವ ಅಷ್ಟೋತ್ತರಶತಸಂಖ್ಯಾನ: ಮೃತಮಿಶ್ರ ಪಾಯಸ ಸಮಿಚರ್ವಾಜ್ಞಾಹುತಿಭಿ: ಯಾ ಪಾಯಸ ಆಪತ್ತರಶತಸಂಖ್ಯೆಯಾ ಸಮಿರಾಜ್ಯಚರುಭಿ ಅಷ್ಟಾವಿಂಶತಿಸಂಖ್ಯೆಯಾ ಸಮಿರಾಜ್ಯರ್ವಾಹ;: ವಿಶ್ವದೇವಾದಿಚತುರ್ವಿಂಶತಿ ದೇವತಾ: ಅಪ್ಪಾಪಾಯಶಾಹುತಿ ರಹಣದಗ್ನಿ ಕ್ಷಣುಪಾತಿ ಚದರ ಋಗ್ರಿ: ಪ್ರತ್ಯು ಚ ಮಾಸಂ ಕೃಸರಾಹುತಿ ಸವಿತಾರ ದುರ್ಗಾ, ಕು, ಕನ್, ದುರ್ಗಾ, ವಾತಿ, ಅಗ್ನಿ, ಕ್ಷೇತ್ರಪಾಲು, ಶ್ರಾವರುಣ್‌, ಅಗ್ನಿ ಅಕ್ಷ ಪರಾಮು: ಶ್ರೀಯಂ ಓರ ವರ್ಗಾ’ ತಿ ಪಂಚರಶಯ: ಪ್ರತುಮಾ ಸರಾ-ಚರ್ವಾುತಿ: ಸಮಂ ತ್ರಯೋದಶಪಾಯಸಾಹುತಿ: ರುರಂ, ಸ್ವರಾಜ ಚತುರ್ಗಹೀತಾನ ಆಗ್ನಿ, ವಾಯು, ಸೂರ್ಯ, ಪ್ರಜಾಪತಿಂ ಚ ಆಜೈನ ಶೇಷೇಣ ಸ್ಪಷ್ಟಕೃತ ಪರಿಚ್ಛೇದ - ೩ ಪೂರ್ವಾರ್ಧ DOR ಇತ್ಯಾದಿ “ಕವೀನ್” ಎಂಬಲ್ಲಿ “ಯತ್ನಿಸ್ತುಂ” ಹೀಗೆ ಮಯೂಖದಲ್ಲಿ ಉದ್ದೇಶಿಸಿದೆ. ಮೂರುಶೂರ್ಪ (ಮೊರಗೆರಸಿ)ಗಳಲ್ಲಿ ಮಾಡತಕ್ಕದ್ದು. ಪ್ರಥಮ ಶೂರ್ಪದಲ್ಲಿ ಪಾಯಸದ ಸಲುವಾಗಿ ಅಮಂತ್ರಕವಾಗಿ ಹನ್ನೆರಡು ಮುಷ್ಟಿಗಳನ್ನು ನಿರ್ವಾಪ (ತೆಗೆದಿರಿಸುವದು) ಮಾಡತಕ್ಕದ್ದು. ಅವುಗಳನ್ನು ನಿಗ್ರತಿ, ಇಂದ್ರ, ಅಪ: ಇವುಗಳ ಉದ್ದೇಶದಿಂದ ಮಾಡತಕ್ಕದ್ದು. ಎರಡನೇ ಶೂರ್ಪದಲ್ಲಿ ಚರುವಿಗಾಗಿ ಆ ಮೂರು ದೇವತಗಳನ್ನುದ್ದೇಶಿಸಿಯ ಹನ್ನೆರಡು ಮುಷ್ಟಿಗಳನ್ನೂ, ಪುನಃ ಪ್ರಥಮ ಶೂರ್ವದಲ್ಲಿ ಪಾಯಸದ ಸಲುವಾಗಿ ತೊಂಬತ್ತಾರು ಮುಷ್ಟಿಗಳನ್ನು ನಿರ್ವಾಪಮಾಡತಕ್ಕದ್ದು. ಮೂರನೇ ಶೂರ್ಪದಲ್ಲಿ “ಕೃಸರಕ್ಕಾಗಿ ನಾಲ್ವತ್ತುನಾಲ್ಕು ಮುಷ್ಟಿಗಳನ್ನೂ, ಪುನಃ ಎರಡನೇ ಶೂರ್ಪದಲ್ಲಿ ನಾಲ್ಕು ಮುಷ್ಟಿಗಳನ್ನೂ, ಪುನಃ ಪ್ರಥಮ ಶೂರ್ಪದಲ್ಲಿ ಹೋಮಾರ್ಥವಾಗಿ ನಾಲ್ಕು ಮುಷ್ಟಿಗಳನ್ನೂ ನಿರೂಪಣ ಮಾಡಿ, ಆಮೇಲೆ ಮೂರು ಶೂರ್ಪಗಳಲ್ಲಿ ಆಹುತಿಗೆ ಸಾಕಾಗುವಷ್ಟು ತಂಡುಲಗಳನ್ನು ಸ್ವೀಕರಿಸಿ ನಿರ್ವಾಹ ಸಂಖ್ಯೆಯಿಂದ ಪ್ರೋಕ್ಷಿಸಿ ಮೂರು ಪಾತ್ರಗಳಲ್ಲಿ ಮೂರು ಹವಿಸ್ಸನ್ನು ಬೇಯಿಸುವದು. ತಿಲಮಿಶ್ರಿತವಾದ ಅಕ್ಕಿಯನ್ನು ಬೇಯಿಸಿದರೆ ಅದಕ್ಕೆ “ಕೃಸರಾನ್ನ” ವೆನ್ನುವರು. ಗೃಹಶಾಂತಿಗೆ ಮನೆಯಲ್ಲಿ ಸಿದ್ಧವಾದ ಅನ್ನವನ್ನುಪಯೋಗಸಲಡ್ಡಿಯಿಲ್ಲ. ಎಲ್ಲ ಗ್ರಂಥಗಳಲ್ಲಿಯೂ ನಿಯತ್ಯಾದಿಗಳಿಗೆ “ನಿರ್ವಾಪ” ಮೊದಲಾದ ಕ್ರಮದಿಂದ ಶ್ರವಣ(ಬೇಯಿಸುವದು)ವನ್ನೇ ಹೇಳಿದೆ. ಆದ್ದರಿಂದ ಮನೆಯಲ್ಲಿ ಬೇಯಿಸಿದ ಅನ್ನಕ್ಕೆ ಎಳ್ಳು ಮತ್ತು ಹಾಲನ್ನು ಮಿಶ್ರಮಾಡಿ ಅದನ್ನೇ “ಕೃಸರ"ವೆಂದು ಹೇಳಲಾಗದು. ಅದು ಪ್ರಮಾದ, ಆಲಸ್ಯ ಮೊದಲಾದವುಗಳಿಂದಾದ “ಕರ್ಮಭ್ರಂಶ"ವಂದೇ ಆಗುವದು. ಹೋಮಕಾಲದಲ್ಲಿ ಯಜಮಾನನು ತ್ಯಾಗವನ್ನು ಮಾಡತಕ್ಕದ್ದು, “ಏತತ್ಸಂಖ್ಯಾಹಪರ್ಯಾಂ ಪಾಯಸಸಮಿರ್ವಾಂ ಇಂದ್ರಾಯ ನಮಮ” ಹೀಗೆ ಆಪ ಕೂಸು ಅಷ್ಟ ಅಷ್ಟೆ ಆಹುತಿ ಪರ್ಯಾಂ ಪಾಯಸಂ ವಿಶ್ವಭೋ ದೇವೇಭೋ ನಮಮ, " ಇದರಂತೆ “ವಿಷ್ಣವೇ ವಸುಯ್ಯೋ-ವರುಣಾಯ-ಅನಾಯ್ಕಳದೇ ಆಯೇ ಬುಧ್ಯಾಯ ಪೂಷ್ಟೇ ಅಬ್ಬಾಂ-ಮಾಯ-ಅಗ್ನಿಯೇ ಪ್ರಜಾಪತಯೇ ಸೋಮಾಯ-ರುದ್ರಾಯ ಆದಿತ್ಯ ಬೃಹಸ್ಪತಯೇ ಸರ್ಪೇಭ್ಯ: ಪಿತೃಭ: ಭಗಾಯ ಆರ್ಯ-ಸವಿತೃ-ವಾಯವೇ ಇಂದ್ರಾಗ್ನಿಭ್ಯಾಂ-ಮಿಶ್ರಾಯ-ನಮಮ. ವಿಂಶತ್ಯಧಿಕ ಶತಾಹುತಿಪರ್ಯಾಾಂ ಕೃಸರು ಸವಿತ್ರ ದುರ್ಗಾಂಬಕಾಯ್-ಕವಿಳ್ಳೋದುರ್ಗಾಕ್ಕೆ ವಾಸ್ಕೋಪ್ಪತಯೇ-ಅಗ್ನಯೇ ಕ್ಷೇತ್ರಪಾಲಾಯ-ಮಿತ್ರಾವರುಣಾಭ್ಯಾಂ ಅಗ್ನಯೇ ಚ ನಮಮ. ಪ್ರತಿದ್ರಂ ವಿಂಶತ್ಯಧಿಕ ಶತಾಹುತಿ ಪರ್ಯಾಪ್ತಾನಿ ಸಮಿಚ್ಚರ್ವಾಜ್ಞಾನಿ ಪ್ರಿಯೆ ನಮಮ ತ್ರಯೋದಶಾಹು ಪರ್ಯಾ ಪಾಯಸಂ ಸೋಮಾಯ-ಚತುರ್ಗಹೀತಾಜ್ಯಂ ರುದ್ರಾಯ ಸ್ವರಾಜೇ ಏರಾಹು ಪರ್ಯಾಪ್ತಂ ಆದ್ಯಂ ಅಗ್ನಿಯೇ ವಾಯವೇ ಸೂರ್ಯಾಯ ಪ್ರಜಾಪತಯೇಚ, ನಮಮ” ಹೀಗೆ ಸವಿಸ್ತರವಾದ ಆಯಾಯ ದ್ರವ್ಯಗಳ ಸಂಖ್ಯಾ ಹಾಗೂ ದೇವತೋಚ್ಚಾರಣೆಯಿಂದ ಎಲ್ಲ ಕಡೆಯಲ್ಲಿ ತ್ಯಾಗವನ್ನು ಹೇಳತಕ್ಕದ್ದು. ಕೆಲವರು “ಇದಂ ಉಪಕಲ್ಪಿತಂ ಅನ್ನಾರಾಣೋಕ್ತಂದ್ರಜಾತಂ ಅನ್ನಾಧಾನೋಕ್ಕಾದ ಸಂಖ್ಯಾ ಪರ್ಯಾಂ ಅನ್ನಾಧಾನೋಕ್ತಾಭೋ ಯಕ್ಷಮಾನಾಯ್ಯೋ ದೇವಾ ನಮಮ” ಹೀಗೆ ಸಂಕ್ಷೇಪವಾಗಿ ತ್ಯಾಗವನ್ನು ಮಾಡುವರು. ಆಮೇಲೆ ಗ್ರಹಮಂತ್ರಗಳಿಂದಲೂ, ನಿಮ್ರತ್ಯಾದಿ ಮಂತ್ರಗಳಿಂದಲೂ 01 ೨೦೪ ಧರ್ಮಸಿಂಧು ಯಥಾಯೋಗ್ಯವಾಗಿ ಹೋಮಿಸಿದ ನಂತರ ಗ್ರಹಪೂಜಾ, ಸ್ಟಿಷ್ಟಕೃತ್, ನವಾಹುತಿ, ಬಲಿದಾನ, ಪೂರ್ಣಾಹುತಿ, ಪೂರ್ಣಪಾತ್ರವಿಮೋಕ ಇತ್ಯಾದಿ ಅಗ್ನಿಪೂಜಾಂತ ಮಾಡಿ ಯಜಮಾನನಿಗೆ ಅಭಿಷೇಕಮಾಡುವದು. ಆಮೇಲೆ ಬಿಳೇಗಂಧ, ಬಿಳವಸ್ತ್ರಗಳನ್ನು ಧರಿಸಿದ ಯಜಮಾನನು “ಮಾನ” ಮಂತ್ರದಿಂದ ವಿಭೂತಿಯನ್ನು ಧರಿಸಿ ಮುಖ್ಯ ದೇವತಾ ಪೂಜನ, ವಿಸರ್ಜನ, ಶ್ರೇಯೋಗ್ರಹಣ, ದಕ್ಷಿಣಾದಾನ ಮೊದಲಾದವುಗಳನ್ನು ಮಾಡುವದು. ನೂರು ಅಥವಾ ಐವತ್ತು ಇಲ್ಲವೆ ಹತ್ತು ಬ್ರಾಹ್ಮಣಭೋಜನವನ್ನು ಮಾಡಿಸುವದು. ಹೀಗೆ ಸಂಕ್ಷಿಪ್ತ ಪ್ರಯೋಗವು. 1 ಆಶ್ಲೇಷಾ ಜನನ ಶಾಂತಿ ಪೂರ್ಣ ಆಶ್ಲೀಶಾ ನಕ್ಷತ್ರವನ್ನು ಹತ್ತು ವಿಭಾಗಮಾಡಬೇಕು. ಆ ಭಾಗಗಳೆಂದರೆ:- ಮೊದಲಿನ ೫ ಘಟಿ (೧) ಮುಂದೆ ೭ ಘಟಿ (೨), ಮುಂದೆ ೨ ಘಟಿ (೩), ಮುಂದೆ ೩ ಘಟಿ (೪), ಮುಂದೆ ೪ ಘಟ (೫), ಮುಂದಿನ ೮ ಘಟಿ (೬),ನಂತರ ೧೧ ಘಟಿ (೭), ಮುಂದೆ ೬ ಘಟ (೮),ಮುಂದಿನ ೯ ಘಟಿ (೯), ಅದಕ್ಕೂ ಮುಂದಿನ ೫ ಘಟಿ (೧೦) ಹೀಗೆ ಇದರಲ್ಲಿ ಮೊದಲನೇ ಭಾಗದಲ್ಲಿ ಜನನವಾದರೆ “ರಾಜ್ಯಪ್ರಾಪ್ತಿ”,೨ ನೇ ಭಾಗದಲ್ಲಿ “ಪಿತೃನಾಶ”, ೩ ನೇ ಭಾಗದಲ್ಲಿ “ಮಾತೃನಾಶ”,೪ ನೇ ಭಾಗದಲ್ಲಿ “ಕಾಮಭೋಗ”, ೫ ನೇ ಭಾಗದಲ್ಲಿ “ಪಿತೃಭಕ್ತಿ, ೬ ನೇ ಭಾಗದಲ್ಲಿ “ಬಲಪ್ರಾಪ್ತಿ”, ೭ ನೇ ಭಾಗದಲ್ಲಿ “ಹಿಂಸಕತ್ವ”, ೮ ನೇ ಭಾಗದಲ್ಲಿ “ತ್ಯಾಗ”, ೯ ನೇ ಭಾಗದಲ್ಲಿ “ಭೂಗ”, ೧೦ ನೇ ಭಾಗದಲ್ಲಿ ಜನಿಸಿದರೆ “ಧನಪ್ರಾಪ್ತಿ” ಹೀಗೆ ನಕ್ಷತ್ರದ ಆಯಾಯಭಾಗ ಜನನದಲ್ಲಿ ಫಲವನ್ನು ಹೇಳಿದೆ. ಇನ್ನು ಪಾದವಿಭಾಗದಿಂದ ಇನ್ನೊಂದು ರೀತಿಯ ಫಲವಿದೆ. ಮೊದಲನೇ ಪಾದದಲ್ಲಿ ಜನನವಾದರೆ “ಶುಭ”, ಎರಡನೇ ಪಾದದಲ್ಲಿ ‘ಧನನಷ್ಟ, ಮೂರನೇ ಪಾದದಲ್ಲಿ ‘ಮಾತ್ರರಿಷ್ಟ’ ನಾಲ್ಕನೇದರಲ್ಲಿ ‘ಪಿತ್ರರಿಷ್ಟ, ಅದೇ ಶಿಶುವು ಹೆಣ್ಣಾದರೆ ಮೊದಲನೇ ಪಾದವನ್ನು ಬಿಟ್ಟು ಉಳಿದ ಪಾದಗಳಲ್ಲಿ ಜನಿಸಿದ ಕನ್ನೆಯು ಅತ್ತೆಗೆ ‘ಮಾರಕ’. ಇದೇ ಕ್ರಮದಲ್ಲಿ ವರನು ತನ್ನ ಅತ್ತೆಗೆ ‘ಮಾರಕ’ ನಾಗುವನು. ಏವಂಚ ಯಾವದೇ ಪಾದವಿರಲಿ, ಆಶ್ಲೇಷ ಜನನ ಶಾಂತಿಯನ್ನು ಮಾಡಬೇಕು. ಹುಟ್ಟಿದ ಹನ್ನೆರಡನೇದಿನ ಶಾಂತಿಗೆ ಉಕ್ತವಾದ ಕಾಲಿವು, ಅಸಂಭವವಾದರೆ ಮುಂದೆ ಜನ್ಮ ನಕ್ಷತ್ರ ಅಥವಾ ಶುಭದಿನದಲ್ಲಿ ಮಾಡತಕ್ಕದ್ದು. ಉಕ್ತಕಾಲದಲ್ಲಿ “ಗೋಮುಖಪ್ರಸವವನ್ನು ಮಾಡಿ “ಆ ಶಿಶೋಃ ಆಶ್ಲೇಷಾ ಜನನಸೂಚಿತ ಸರ್ವಾರಿಷ್ಟ ಪರಿಹಾರಾರ್ಥಂ” ಇತ್ಯಾದಿ ಸಂಕಲ್ಪವನ್ನು ಮಾಡಿ, ಮೂಲ ಶಾಂತಿಯಂತೆ ಎರಡು ಕಲಶಗಳಲ್ಲಿ ರುದ್ರ, ವರುಣರನ್ನು ಪೂಜಿಸಿ, ಇಪ್ಪತ್ತುನಾಲ್ಕು ದಳಗಳುಳ್ಳ ಪದದಲ್ಲಿರುವ ಕುಂಭದಲ್ಲಿಟ್ಟ ಪ್ರತಿಮೆಯಲ್ಲಿ ಆಶ್ಲೇಷ ನಕ್ಷತ್ರದೇವತೆಯಾದ ಸರ್ಪಗಳನ್ನಾವಾಹಿಸಿ, ಅದರ ಬಲಭಾಗದಲ್ಲಿ ಪುಷ್ಯನಕ್ಷತ್ರದೇವತೆಯಾದ ‘ಬೃಹಸ್ಪತಿ’ ಯನ್ನೂ, ಉತ್ತರದಲ್ಲಿರುವ ಮಘಾದೇವತೆಯಾದ ಪಿತೃಗಳನ್ನೂ ಆವಾಹನ ಮಾಡಿ, ದಲಗಳಲ್ಲಿ ಪೂರ್ವದಲದಿಂದ ಪ್ರಾರಂಭಿಸಿ ಪ್ರದಕ್ಷಿಣಾಕಾರವಾಗಿ ಹುಬ್ಬನಕ್ಷತ್ರ ದೇವತಾ ಭಗ ಮೊದಲಾದ ಪುನರ್ವಸು ದೇವತಾ ಆದಿತಿವರೆಗಿನ ಇಪ್ಪತ್ತುನಾಲ್ಕು ದೇವತೆಗಳ ಆವಾಹನಾದಿಗಳನ್ನು ಮಾಡುವದು. “ಕೌಸ್ತುಭ’ದಲ್ಲಿ ತೈತ್ತಿರೀಯಕ ಮಂತ್ರಗಳಿಂದ ಪುಷ್ಪ, ಮಘಾ, ಹು ಮೊದಲಾದ ನಕ್ಷತ್ರಗಳನ್ನು ಆವಾಹಿಸತಕ್ಕದ್ದೆಂದು ಹೇಳಿದೆ. ಹೊರತು ಪರಿಚ್ಛೇದ - ೩ ಪೂರ್ವಾರ್ಧ ೨೦೫ ನಕ್ಷತ್ರಾಧಿದೇವತೆಗಳನ್ನು ಹೇಳಿಲ್ಲ. ಆಮೇಲೆ ಲೋಕಪಾಲಕರನ್ನಾವಾಹಿಸಿ ಆವಾಹಿತ ಸರ್ವದೇವತೆಗಳನ್ನೂ ಪೂಜಿಸಿ ಅಗ್ನಿ, ಗ್ರಹಸ್ಥಾಪನ ಮಾಡಿ ಅನ್ನಾಧಾನ ಮಾಡತಕ್ಕದ್ದು. ಆದಿತ್ಯಾದಿ ಗ್ರಹಗಳನ್ನುದ್ದೇಶಿಸಿದ ನಂತರ “ಪ್ರಧಾನದೇವತಾಃ ಸರ್ವಾನ್ ಪ್ರತಿದ್ರವ್ಯಂ ಆಷ್ಟೋತ್ತರಶತಸಂಖ್ಯಂ ಅಷ್ಟಾವಿಂಶತಿಸಂಖ್ಯಂ ವಾ ಮೃತಮಿಶ್ರಪಾಯಸ ಸಮಿದಾಜ್ಯಚರ್ವಾಹುತಿಭಿ: ಬೃಹಸ್ಪತಿಂ ಪಿಂಶ್ಚ ಅಷ್ಟಾವಿಂಶತಿಸಂಖ್ಯಂ ಅಷ್ಟ ಸಂಖ್ಯರನಾ ಭೈರವ ದ್ರವ್ಯ: ಭಗಾರಿ ಚತುರ್ವಿಂಶತಿದೇವತಾ: ಅಷ್ಟಾಷ್ಟವಾಯಸಾಹುತಿಭಿಃ ರಹಣಮಿತ್ಯಾದಿ ಶೇಷಣ” ಇತ್ಯಾದಿ ನಿರ್ದೇಶಿಸತಕ್ಕದ್ದು. (ಮೂಲಶಾಂತಿಯಂತೆ) ಅದರಂತೆ ಪಾಯಸ, ಕೃಸರ, ಚರುಶ್ರಪಣ, ತ್ಯಾಗಗಳನ್ನು ಮಾಡತಕ್ಕದ್ದು. ಕೌಸ್ತುಭೋಕ್ತ ಪ್ರಧಾನದೇವತಾಮಂತ್ರಗಳಿಂದ ಆಯಾಯ ಹೋಮಗಳನ್ನು ಮಾಡತಕ್ಕದ್ದು, ಉಳಿದ ವಿಷಯವೆಲ್ಲ ‘ಮೂಲಾ’ದಂತೆಯೇ. ಜೇಷ್ಠಾ ಜನನ ಶಾಂತಿ ಜೇಷ್ಠಾ ನಕ್ಷತ್ರವನ್ನು ಹತ್ತು ಸಮಭಾಗ ಮಾಡುವದು. ಸರಾಸರಿ ಆರು ಘಟಿಗಳಿಗೆ ಒಂದು ಭಾಗ, ನಕ್ಷತ್ರದ ಏರು ಪೇರುಗಳಿಂದ ಸ್ವಲ್ಪ ಹೆಚ್ಚು-ಕಡಿಮೆಯಾಗುವದು. ಆದಿಯ ಭಾಗದಲ್ಲಿ ತಾಯಿಯ ತಾಯಿಗೆ ಅರಿಷ್ಟವು. ಎರಡನೇ ಭಾಗದಲ್ಲಿ ತಾಯಿಯ ತಂದೆಗೆ ಹಾನಿ, ಮೂರನೇ ಭಾಗದಲ್ಲಿ ತಾಯಿಯ ಅಣ್ಣ-ತಮ್ಮಂದಿರಿಗೆ ಅರಿಷ್ಟ, ನಾಲ್ಕನೇ ಭಾಗದಲ್ಲಿ ತನ್ನ ತಾಯಿಗೂ, ಐದನೇ ಭಾಗದಲ್ಲಿ ತನಗೂ ಹಾನಿ, ಆರನೇ ಭಾಗದಲ್ಲಿ ಗೋತ್ರಜರಿಗೆ ಅರಿಷ್ಟ, ಏಳನೇ ಭಾಗದಲ್ಲಿ ಎರಡು ಕುಲಗಳಿಗೂ ಹಾನಿ, ಎಂಟನೇ ಭಾಗದಲ್ಲಿ ತನ್ನ ಅಣ್ಣನಿಗೂ, ಒಂಭತ್ತನೇ ಭಾಗದಲ್ಲಿ ಮಾವನಿಗೂ, ಹತ್ತನೇ ಭಾಗದಲ್ಲಿ ಸಾಮಾನ್ಯ ಸರ್ವರಿಗೂ ಅರಿಷ್ಟವು. ಜೇಷ್ಠಾನಕ್ಷತ್ರದಲ್ಲಿ ಜನಿಸಿದರೆ ಸಾಮಾನ್ಯವಾಗಿ ಹಿರೇ ಅಣ್ಣನಿಗೂ, ಅದೇ ಹೆಣ್ಣಾದರೆ ಪತಿಯ ಅಣ್ಣನಿಗೂ ಅರಿಷ್ಟವು. ಜೇಷ್ಠಾನಕ್ಷತ್ರದ ಮೂರು ಪಾದಗಳೊಳಗೆ ಜನಿಸಿದವನು ತಾನೇ ಶ್ರೇಷ್ಠನಾಗುವನು. ನಾಲ್ಕನೇ ಪಾದದಲ್ಲಿ ಜನಿಸಿದರೆ ತಂದೆಗೂ ತನಗೂ ಹಾನಿಯು. ಜನನ ದಿನದಿಂದ ಹನ್ನೆರಡನೇ ಅಥವಾ ಶಾಂತ್ಯುಕ್ತ ದಿನದಲ್ಲಿ ಗೋಪ್ರಸವಶಾಂತಿ ಮಾಡಿ “ಆಶಿಶ: ಜೈಪರ್ಕ ಜನನ ಸೂಚಿತ ಸರ್ವಾರಿಷ್ಟಪರಿಹಾರದ್ವಾರಾ” ಇತ್ಯಾದಿ ಸಂಕಲ್ಪಿಸಿ, ಮಧ್ಯ ಕಲಶದಲ್ಲಿ ಸುವರ್ಣಪ್ರತಿಮೆಯನ್ನಿಟ್ಟು ಶಚೀಸಮೇತನಾದ ಮತ್ತೂ ಐರಾವತಾರೂಢನಾದ ಇಂದ್ರನನ್ನೂ, ಲೋಕಪಾಲಕರನ್ನೂ ಅವಾಹನಮಾಡಿ, ವಸ್ಕೋಪಚಾರದ ಸಲುವಾಗಿ ಕೆಂಪುವಸ್ತ್ರಗಳನ್ನರ್ಪಿಸಿ ನೈವೇದ್ಯದ ಸಲುವಾಗಿ ಚಕ್ಕುಲಿಯನ್ನರ್ಪಿಸತಕ್ಕದ್ದು. ಹೀಗೆ ಷೋಡಶೋಪಚಾರಗಳಿಂದ ಪೂಜಿಸಿ ಅದರ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಲಶಗಳನ್ನಿಟ್ಟು ಅದರ ಪೂರ್ವದಿಕ್ಕಿನ ಮಧ್ಯದಲ್ಲಿ ಶತಪ್ಪಿದ್ರದ ಕಲಶವನ್ನಿಟ್ಟು, ಪೂರ್ಣಪಾತ್ರಸಹಿತಗಳಾದ ನಾಲ್ಕು ಕಲಶಗಳಲ್ಲಿ ಫಲಾದಿಗಳನ್ನಿಟ್ಟು ವರುಣಾವಾಹನ, ಪೂಜಾದಿಗಳನ್ನು ಮಾಡಿ, ಅನ್ನಾಧಾನ ಮಾಡುವದು. ಗ್ರಹರ ಅನ್ನಾಧಾನದ ನಂತರ “ಇಂದ್ರಂ ಪಲಾಶಸಮಿರಾಜ್ಯಚರುದ್ರವೈ: ಪ್ರತಿದ್ರವ್ಯಂ ಅಷ್ಟೋತ್ತರ ಶತಸಂಖ್ಯೆಯಾ, ಇಂದ್ರಾಯ, ಇಂದ್ರಮರು’ ಮಂತ್ರಣ ಪ್ರಜಾಪತಿಮತ್ತರ ಶತತಿರಾಹುತಿಧಿ: ಸಮಸ್ತವ್ಯಾಹೃತಿ ಮಂತ್ರಣ ಶೀಷಣ ಕೃತ್ ಇತ್ಯಾದಿ ನೂರಾಎಂಟು ಬ್ರಾಹ್ಮಣಸಂತರ್ಪಣೆ ಮಾಡತಕ್ಕದ್ದು. ಹೀಗೆ ಸಂಕ್ಷಿಪ್ತ ಜೇಷ್ಠಾಜನನ ಶಂತಿಯು, ೨೦೬ ಧರ್ಮಸಿಂಧು ಚಿತ್ರಾದಿ ನಕ್ಷತ್ರ ಜನನದಲ್ಲಿ ಪೂಜಾ ದಾನಾದಿಗಳು ಚಿತ್ರಾ ನಕ್ಷತ್ರದ ಪೂರ್ವಾರ್ಧ, ಪುಷ್ಯ ನಕ್ಷತ್ರದ ಮಧ್ಯಮ ಎರಡು ಪಾದಗಳು, ಪೂರ್ವಾಷಾಢಾದ ಮೂರನೇಪಾದ, ಉತ್ತರೆಯ ಪ್ರಥಮಪಾದ ಇವುಗಳಲ್ಲಿ ಜನಿಸಿದವನು ತಂದ್ರ ತಾಯಿ, ಅಣ್ಣ, ತಮ್ಮಂದಿರು ಇವರನ್ನು ನಾಶಮಾಡುವದಲ್ಲದೆ, ತಾನೂ ನಾಶಹೊಂದುವನು. ಈ ವಿಷಯದಲ್ಲಿ ಹೀಗೆ ತೋರುತ್ತದೆ ಚಿತ್ರಾ ಪೂರ್ವಾರ್ಧದಲ್ಲಿ ಜನಿಸಿದರೆ ಗೋಪ್ರಸವಮಾಡಿ, ನಕ್ಷತ್ರಾಧಿಪತಿಯ ಪ್ರತಿಮೆಯನ್ನು ಪೂಜಿಸಿ ಕುರಿಯನ್ನು ದಾನಮಾಡುವದು, ಉತ್ತರೆಯ ಪ್ರಥಮ ಪಾದ ಜನನದಲ್ಲಿ ನಕ್ಷತ್ರಾಧಿಪತಿಯ ಪೂಜಾ, ತಿಲದಾನಗಳನ್ನು ಮಾಡತಕ್ಕದ್ದು. ಇದರಂತೆ ಪೂರ್ವಾಷಾಢಾ ತೃತೀಯ ಪಾದ ಜನನದಲ್ಲಿ ನಕ್ಷತ್ರೇಶ ಪೂಜಾ, ಸುವರ್ಣದಾನವನ್ನು ಮಾಡತಕ್ಕದ್ದು. ಮಘಾ ಪ್ರಥಮಪಾದ ಜನನದಲ್ಲಿ “ಮೂಲಾ” ದಂತಯೇ ಫಲಹೇಳಿರುವದರಿಂದ ಗೋಪ್ರಸವ, ನಕ್ಷತ್ರೇಶಪೂಜಾ ಮತ್ತು ಗ್ರಹಶಾಂತಿ ಇವುಗಳನ್ನು ಮಾಡತಕ್ಕದ್ದು. ಮಘಾನಕ್ಷತ್ರದ ಆದಿಯ ಎರಡು ಘಟಿಗಳೊಳಗೆ ಜನನವಾದಲ್ಲಿ ನಕ್ಷತ್ರ ಗಂಡಾಂತ” ಶಾಂತಿಯನ್ನು ಮಾಡಬೇಕು. ರೇವತಿಯ ಅಂತ್ಯದ ಎರಡು ಘಟ, ಅಶ್ವಿನಿಯ ಆದಿಯ ಎರಡುಘಟಿಗಳಲ್ಲಿ ಜನಿಸಿದರೆ ನಕ್ಷತ್ರಗಂಡಾಂತಶಾಂತಿ, ಗೋಪ್ರಸವ ಶಾಂತಿ ಹಾಗೂ ಗ್ರಹಶಾಂತಿಗಳನ್ನು ಮಾಡಬೇಕು. ರೇವತಿ ಅಶ್ವಿನಿಗಳ ಉಳಿದಪಾದಗಳಲ್ಲಿ ಹಾಗೂ ಮಫೆಯ ಕೊನೆಯ ಮೂರು ಪಾದಗಳಲ್ಲಿ ಜನನವಾದರೆ ವಿಶೇಷ ದೋಷವನ್ನು ಹೇಳದೆ ಇರುವದರಿಂದ ಶಾಂತ್ಯಾದಿಗಳು ಬೇಕಿಲ್ಲ. ಹೀಗೆ ವಿಶಾಖಾಚತುರ್ಥಪಾದ ಜನನದಲ್ಲಿ ಗಂಡನ ತಮ್ಮ (ಗಂಡಿಗಾದರೆ ಹೆಂಡತಿಯ ತಮ್ಮನಿಗೆ ಅರಿಷ್ಟ ಹೇಳಿರುವದರಿಂದ ಗ್ರಹಶಾಂತಿಯು ಅವಶ್ಯವು, ದುಷ್ಟಫಲವನ್ನು ಮಾತ್ರ ಹೇಳಿದ್ದು. ಶಾಂತಿಯನ್ನು ಹೇಳಿರದಿದ್ದರೆ ಅಲ್ಲಿ “ಗ್ರಹಶಾಂತಿಯನ್ನು ಮಾಡಬೇಕು” ಎಂದು “ಕಮಲಾಕರರೋಕ್ತಿಯಿದೆ. ಹೀಗೆ ಉಳಿದ ವಿಷಯಗಳಲ್ಲಿಯೂ ತಿಳಿಯತಕ್ಕದ್ದು. ವ್ಯತೀಪಾತ-ವೈಧೃತಿ-ಸಂಕ್ರಾಂತಿ ಶಾಂತಿಗಳು ವ್ಯತೀಪಾತ, ವೈಧೃತಿ, ಸಂಕ್ರಾಂತಿ ಇವುಗಳಲ್ಲಿ ಜನಿಸಿದ ಶಿಶುವು ದಾರಿದ್ರವನ್ನುಂಟುಮಾಡುವರು. ತಾನೂ ಮೃತಿ ಹೊಂದುವುದು ಸ್ತ್ರೀಯರಿಗೆ ಶೋಕ, ದುಃಖವನ್ನುಂಟುಮಾಡುವದು. ಒಟ್ಟಿನಲ್ಲಿ ಸರ್ವನಾಶಕ್ಕೆ ಕಾರಣವಾಗುವದು. ಅದಕ್ಕಾಗಿ ಗೋಮುಖಪ್ರಸವ ಶಾಂತಿ, ಗ್ರಹಶಾಂತಿಗಳನ್ನು ಮಾಡತಕ್ಕದ್ದು. ಉಕ್ತಕಾಲದಲ್ಲಿ ಸಂಕಲ್ಪಾದಿಗಳನ್ನು ಮಾಡಿ ಐದುದ್ರೋಣಪರಿಮಾಣದ ಭತ್ತದ ರಾಶಿಯನ್ನು ಮಾಡಿ, ಅದರ ಮೇಲೆ ಎರಡೂವರ ದ್ರೋಣ ಅಕ್ಕಿಯನ್ನಿಟ್ಟು, ಅದರ ಮೇಲೆ ಒಂದೂಕಾಲು ದ್ರೋಣ ತಿಲರಾಶಿಯನ್ನಿಡುವರು. ಆ ತಿಲರಾಶಿಯ ಮೇಲೆ ವಿಧಿಪೂರ್ವಕವಾಗಿ ಸ್ಥಾಪಿಸಿದ ಕುಂಭದಲ್ಲಿ ಸುವರ್ಣ ಪ್ರತಿಮೆಯನ್ನಿಟ್ಟು ಸೂರ್ಯನ ಆವಾಹನಮಾಡತಕ್ಕದ್ದು. ಅದರ ಬಲ-ಎಡ ಭಾಗಗಳಲ್ಲಿ ಅಗ್ನಿ, ರುದ್ರರಾವಾಹಿಸುವದು. ಆ ಮೂರು ದೇವತೆಗಳನ್ನು ವ್ಯತೀಪಾತಶಾಂತಿ ಮತ್ತು ಸಂಕ್ರಾಂತಿ ಶಾಂತಿಯಲ್ಲಿ ಪೂಜಿಸತಕ್ಕದ್ದು. ವ್ಯತೀಪಾತ, ಸಂಕ್ರಾಂತಿ ಇವೆರಡೂ ಕೂಡಿದಾಗ ಜನನವಾದರೆ “ತೀಪಾತ ಸುಕ್ರಾಂತಿಶಾಂತಿ ತಂತ್ರಣ ಕಷ್ಟೇ” ಹೀಗೆ ಸಂಕಲ್ಪಿಸಿ ಒಂದೇ ಶಾಂತಿಯನ್ನು ಕೂಡಿಯೇ ಮಾಡುವರು. ಯಾಕಂದರೆ ಪೂಜಾ ಹೋಮಾದಿಗಳಿಗೆ ಅನುಕೂಲ ಸಿದ್ಧಿಯಿರುವದು. ಬೇಕಾದರೆ ಪರಿಚ್ಛೇದ - ೩ ಪೂರ್ವಾರ್ಧ ೨೦೭ ಪ್ರಧಾನ ಹೋಮದಲ್ಲಿ ಹೋಮಸಂಖ್ಯೆಯನ್ನು ದ್ವಿಗುಣಮಾಡಬಹುದು ಎಂದು ತೋರುತ್ತದೆ. ಗ್ರಹಸ್ಥಾಪನ, ದೇವತಾಸ್ಥಾಪನಾನಂತರ ಅಾಧಾನದಲ್ಲಿ “ಸೂರ್ಯಂ ಉತ್ಪರ್ಯೋಬೃಹತ್ ಇತಿ ಮಂತ್ರಣ ಸಮಿರಾಜ್ಯಚರ್ವಾಹುತಿಭಿ: ಪ್ರತಿದ್ರವಮಷ್ಟೋತ್ತರ ಶತಸಂಖ್ಯಾಭಿ: ಅಗ್ನಿಂ ರುದ್ರಂ ಚ ರೇವದ್ರವ್ಯ: ಪ್ರತ್ಯೇಕವಾವಿಂಶತಿಸಂಖ್ಯಾಭಿ: ಅಗ್ನಿಂದೂತಂ - ಇಂಬಕು - ಇತಿ ಮಂತ್ರಾಭ್ಯಾಂ ಮೃತ್ಯುಂಜಯಮಷ್ಟೋತ್ತರಶತಲಾಹು ಭಿಃ ಶೇಷೇಣ ಸ್ಪಷ್ಟಕೃತ್ ಇತ್ಯಾದಿ ಅಭಿಷೇಕಾ ನಂತರ ಗೋವು ವಸ್ತ್ರ, ಹಿರಣ್ಯ ಮೊದಲಾದವುಗಳನ್ನು ದಾನಮಾಡುವದಲ್ಲದೆ, ಬ್ರಾಹ್ಮಣ ಸಂತರ್ಪಣೆಯನ್ನೂ ಮಾಡತಕ್ಕದ್ದು. ಹೀಗೆ ವ್ಯತೀಪಾತ-ಸಂಕ್ರಾಂತಿ ಶಾಂತಿಯು, ವೈಧೃತಿ ಶಾಂತಿಯಲ್ಲಿ ವಿಶೇಷ ಈ ಹಿಂದೆ ಹೇಳಿದಂತೆ ಬತ್ತ, ತಂಡುಲ, ತಿಲರಾಶಿಗಳಲ್ಲಿ ಸ್ಥಾಪಿಸಿದ ಕುಂಭಮಧ್ಯದಲ್ಲಿ “ತಂಬಕ” ಮಂತ್ರದಿಂದ ರುದ್ರನನ್ನೂ, ದಕ್ಷಿಣಾದಿ ದಿಕ್ಕಿನಲ್ಲಿ “ಉತ್ತೂರ್ಯ” ಈ ಮಂತ್ರದಿಂದ ಸೂರ್ಯನನ್ನೂ, ಉತ್ತರದಿಕ್ಕಿನಲ್ಲಿ “ಆಪ್ಯಾಯಸ್ವ” ಈ ಮಂತ್ರದಿಂದ ಚಂದ್ರನನ್ನೂ ಆವಾಹಿಸಿ ಪೂಜಿಸುವದು. ಅನಾಧಾನದಲ್ಲಿ “ರುದ್ರಂ ಸಮಿಚ್ಚರ್ವಾಕ್ಕೆ: ಪ್ರತಿದ್ರವ್ಯ ಮಷ್ಟೋತ್ತರಶತಸಂಖ್ಯಾಭಿ ಸೂರ್ಯಸೋಮೌ ಪ್ರತ್ಯೇಕಮಷ್ಟಾವಿಂಶತಿಸಂಖ್ಯೆ: ತೆರೇವದ್ರ: ಮೃತ್ಯುಂಜಯಮತ್ಸರಸಹಸ್ರ ಶತಾನತರ ಸಂಖ್ಯತಿಲಾಹುತಿಭ: ಶೇಷೇಣ” ಇತ್ಯಾದಿ. ಉಳಿದೆಲ್ಲವನ್ನೂ ಪೂರ್ವದಂತೆಯೇ ಮಾಡತಕ್ಕದ್ದು, ಸಂಕ್ರಾಂತಿ-ವೈಧೃತಿ ಕೂಡಿದಾಗ ಜನನವಾದರೆ ದೇವತಾಭೇದವಿರುವದರಿಂದ ಎರಡು ಶಾಂತಿಗಳನ್ನು ಪೃಥಕ್ ಮಾಡತಕ್ಕದ್ದು. ಹೀಗೆ ವೈಧೃತಿ ಶಾಂತಿಯು. ಏಕನಕ್ಷತ್ರ ಜನನ ಶಾಂತಿ ತಂದೆ, ತಾಯಿ, ಅಣ್ಣ, ತಮ್ಮಂದಿರು ಇವರ ನಕ್ಷತ್ರದಲ್ಲಿ ಶಿಶುವು ಜನಿಸಿದರೆ ಯಾರ ನಕ್ಷತ್ರದಲ್ಲಿ ಜನನವಾಗಿದೆಯೋ ಅವರು ನಾಶಹೊಂದುವರು. ತಂದೆ ಅಥವಾ ತಾಯಿ ಇವರ ನಕ್ಷತ್ರದಲ್ಲಿ ಜನಿಸಿದರೆ (ಪುತ್ರನಾಗಲೀ-ಪುತ್ರಿಯಾಗಲಿ) ಆಗ ಗೋಮುಖಪ್ರಸವವನ್ನು ಮಾಡಿ ಶಾಂತಿಮಾಡತಕ್ಕದ್ದು, ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರ ನಕ್ಷತ್ರದಲ್ಲಿ ಜನಿಸಿದರ ಗೋಪ್ರಸವ ಶಾಂತಿಯನ್ನು ಮಾಡದೆ ನಕ್ಷತ್ರ ಶಾಂತಿಯನ್ನು ಮಾತ್ರ ಮಾಡತಕ್ಕದ್ದು. ಸಂಕಲ್ಪದಲ್ಲಿ “ಪಿತ್ರಕನಕ್ಷತ್ರ ಜನನ ಸೂಚಿತ ಸರ್ವಾರಿಷ್ಟ” ಇತ್ಯಾದಿ ಸಂಕಲ್ಪಿಸುವದು. ಕಲಶದಲ್ಲಿ ಕೆಂಪುವಸ್ತ್ರವನ್ನಿಟ್ಟು, ಯಾವ ನಕ್ಷತ್ರದಲ್ಲಿ ಜನನವಾಗಿದೆಯೋ ಆ ನಕ್ಷತ್ರದ ಪ್ರತಿಮೆಯನ್ನು ಅಥವಾ ನಕ್ಷತ್ರದೇವತಾಪ್ರತಿಮೆಯನ್ನು “ಅಗ್ನಿರ್ನ:ಪಾತುಕೃತ್ತಿಕಾ” ಇತ್ಯಾದಿ ತೈತ್ತಿರೀಯ ಮಂತ್ರಗಳಿಂದ ಪೂಜಿಸುವದು. ಅನ್ನಾಧಾನದಲ್ಲಿ “ಇದು ನಕ್ಷತ್ರಂ ಅಮುಕಾಂ ನಕ್ಷತ್ರದೇವನಾಂ ವಾ ಸಮಿಚ್ಚರ್ವಾ ಪ್ರತಿದ್ರವಂ ಅಷ್ಟೋತ್ತರಶತಸಂಖ್ಯಂ ಶೇಷಣ ಸ್ವಿಷ್ಟಕೃತ್ ಇತ್ಯಾದಿ. ಏಕನಕ್ಷತ್ರವಾದವರಿಗೆ ಅಭಿಷೇಕ ಮಾಡುವದು. ಕೆಲಕಡೆಯಲ್ಲಿ ಪೂಜಿಸಿದ ಹರಿ-ಹರ ಪ್ರತಿಮಾ ದಾನವನ್ನೂ ಹೇಳಿದೆ. ಗ್ರಹಣ ಶಾಂತಿ ಸೂರ್ಯ, ಚಂದ್ರರ ಗ್ರಹಣಕಾಲದಲ್ಲಿ ಹುಟ್ಟಿದ ಶಿಶುವು ಮರಣಹೊಂದುವದು ಮತ್ತು ೨೦೮ ಧರ್ಮಸಿಂಧು ವ್ಯಾಧಿಪೀಡೆ, ದಾರಿದ್ರ, ಶೋಕ, ಕಲಹ ಇತ್ಯಾದಿ ಫಲವನ್ನು ಹೊಂದುವದು. ಇಂಥಲ್ಲಿ ಗೋಮುಖಪ್ರಸವವನ್ನು ಮಾಡಬೇಕೆಂಬದಾಗಿ ತೋರುತ್ತದೆ.ಗ್ರಹಶಾಂತಿಯು ಕೃತಾಕೃತ. ಸಂಕಲ್ಪದಲ್ಲಿ “ಸೂರ್ಯ ಚಂದ್ರ ಗ್ರಹಣಕಾಲಿಕ ಪ್ರಸೂತಿ ಸೂಚಟ” ಇತ್ಯಾದಿ ಊಹಿಸುವದು. ಗ್ರಹಣಕಾಲದ ನಕ್ಷತ್ರ ಅಥವಾ ನಕ್ಷತ್ರದೇವತೆಯ ಬಂಗಾರ ಪ್ರತಿಮೆ, ಸೂರ್ಯಗ್ರಹಣದಲ್ಲಿ ಸೂರ್ಯನ ಬಂಗಾರ ಪ್ರತಿಮೆ, ಚಂದ್ರಗ್ರಹಣದಲ್ಲಿ ಚಂದ್ರನ ಬೆಳ್ಳಿಯ ಬಿಂಬಗಳನ್ನು ಮಾಡಿ, ಆ ಎರಡರಲ್ಲೂ ಸೀಸಧಾತುವಿನ ನಾಗಾಕೃತಿಯನ್ನು ರಾಹುವಿಗಾಗಿ ತಯಾರಿಸಿ, ಗೋಮಯದಿಂದ ಸಾರಿಸಿದ ಶುದ್ಧದೇಶದಲ್ಲಿ ಬಿಳೇವಸ್ತ್ರದ ಮೇಲೆ ಮೂರೂ ದೇವತೆಗಳನ್ನು ಪೂಜಿಸುವದು. ಇಲ್ಲಿ ಕಲಶಸ್ಥಾಪನಾದಿಗಳಿಲ್ಲ. ಮಧ್ಯದಲ್ಲಿ ಆಕೃಷ್ಣನ” ಮಂತ್ರದಿಂದ ಸೂರ್ಯನನ್ನೂ, ಬಲಗಡೆಯಲ್ಲಿ “ಸ್ವರ್ಭಾನೋರಧ” ಮಂತ್ರದಿಂದ ರಾಹುವನ್ನೂ, ಎಡಗಡೆಯಲ್ಲಿ ನಕ್ಷತ್ರದೇವತೆಯನ್ನೂ ಪೂಜಿಸುವದು. ಚಂದ್ರಗ್ರಹಣದಲ್ಲಿ “ಆಪ್ಯಾಯಸ್ವ” ಮಂತ್ರದಿಂದ ಮಧ್ಯದಲ್ಲಿ ಚಂದ್ರನನ್ನು ಪೂಜಿಸುವದು. ಪಾರ್ಶ್ವಗಳಲ್ಲಿ ಹಿಂದೆ ಹೇಳಿದಂತೆ ರಾಹು ಮತ್ತು ನಕ್ಷತ್ರದೇವತೆಯನ್ನು ಪೂಜಿಸುವದು, ಅನಾಧಾನದಲ್ಲಿ “ಸೂರ್ಯಗ್ರಹ ಸೂರ್ಯಂ ಅರ್ಕಸಮಿರಾಜ್ಯಚರುತಿ: ಪ್ರತ್ಯೇಕಷ್ಟೋತ್ತರಶತಸಂಖ್ಯೆಯ ರಾಹುಂ ದೂರ್ವಾ ಚರುತಿ: ತಾವತ್ಸಂಖ್ಯೆ: ನಕ್ಷತ್ರ ದೇವತಾಂ ಜಲವೃಕ್ಷಸಮಿದಾಜಚರುತಿ: ತಾವತ್ಸಂಯಾ ಶೇಷಣ” ಇತ್ಯಾದಿ. “ಚಂದ್ರಗ್ರಹಚ ಚಂದ್ರಂ ಪಾಲಾಶಸಮಿದಾಜ್ಯಚರುತಿರ:” ಇತ್ಯಾದಿ. ಪೂರ್ವದಂತೆಯೇ ಕೊನೆಗೆ ಗ್ರಹಕಲಶೋದಕದಿಂದ, ಪಂಚಗವ್ಯ, ಪಂಚವಲ್ಲವಾದಿಗಳಿಂದ ಯುಕ್ತವಾದ ಲೌಕಿಕೋಧಕದಿಂದ, ಅಥವಾ ಬರೇ ಲೌಕಿಕೋದಕದಿಂದ ಪ್ರೋಕ್ಷಣಮಾಡುವದು. ಗ್ರಹಣವೇಧಕಾಲದಲ್ಲಿ ಜನನವಾದರೆ ಶಾಂತಿಯಿಲ್ಲ. ಆದರೆ ಅದೂ ದುಷ್ಟಕಾಲವೇ ಆದುದರಿಂದ ರುದ್ರಾಭಿಷೇಕಾದಿಗಳನ್ನು ಮಾಡಬೇಕೆಂದು ತೋರುತ್ತದೆ. ನಕ್ಷತ್ರಗಂಡಾಂತ ಶಾಂತಿ ರೇವತಿಯ ಅಂತ್ಯದ ಎರಡುಘಟಿ ಅಶ್ವಿನಿಯ ಆದಿಯ ಎರಡು ಘಟಿ ಇವುಗಳ ಮಧ್ಯಕಾಲಕ್ಕೆ “ಗಂಡಾಂತ"ವನ್ನುವರು. ಇದರಂತೆ ಆಶ್ಲೇಷಾ-ಮಘಾ, ಜೇಷ್ಠಾ ಮೂಲಾ ಸಂಧಿಗಳೂ ಗಂಡಾಂತಗಳೇ ಆಗಿವೆ. ಅಶ್ವಿನಿ -ಮಘಾ-ಮೂಲಾಗಳ ಪೂರ್ವಾರ್ಧದಲ್ಲಿ ತಂದೆಗೆ ಅರಿಷ್ಟ, ರೇವತಿ-ಆಶ್ಲೇಷಾ-ಪೈಗಳ ಉತ್ತರಾರ್ಧಗಳು ತಾಯಿಗೆ ಅರಿಷ್ಟ, ಎಲ್ಲ ಗಂಡಾಂತಗಳಲ್ಲಿಯೂ ಶಿಶುತ್ಯಾಗವನ್ನು ಹೇಳಿದೆ. ಆರು ತಿಂಗಳ ಪರ್ಯಂತ ದರ್ಶನಮಾಡಬಾರದೆಂದು ವಚನವಿದೆ. ಅಥವಾ ಅದರ ದೋಷಪರಿಹಾರಕ್ಕಾಗಿ, ದೊಡ್ಡ ಪ್ರಮಾಣದಿಂದ ಸೋಮಮಂತ್ರದಿಂದ ಶಾಂತಿಮಾಡತಕ್ಕದ್ದು. “ಆತ್ಮವಿಶ: ರೇವಶ್ರೀ ಸಂಧ್ಯಾತ್ಮಕ ಗಂಡಾಂತಜನನಸೂಚಿತ ಅರಿಷ್ಟನಿರಾಸರ್ಥಂ ನಕ್ಷತ್ರ ಗುದಾಂತ ಶಾಂತಿ ಕುಷ” ಹೀಗೆ ಸಂಕಲ್ಪಿಸತಕ್ಕದ್ದು, ಗೋಮುಖಪ್ರಸವವನ್ನು ಮಾಡಿ ಹದಿನಾರು ಪಲ ಅಥ ಎಂಟುಡಲ ಇಲ್ಲವೆ ನಾಲ್ಕುಪಲ ಪರಿಮಾಣದ ಕಂಚಿನಪಾತ್ರೆಯಲ್ಲಿ ಪಾಯಸ ಅಥವಾ ಹಾಲನ್ನು ಹಾಕಿ, ಅದರಲ್ಲಿ ಬೆಣ್ಣೆ ತುಂಬಿದ ಶಂಖವನ್ನಿಟ್ಟು, ಅದರಲ್ಲಿ ಚಂದ್ರಬವನ್ನಿಡಬೇಕು. ಅದಕ್ಕೆ “ಸೋಮೋsಹಂ” ಎಂದು ಭಾವನೆಮಾಡಿ “ಆಶ್ಚಾಯಸ್ವ’ ಮಂತ್ರದಿಂದ ಚಂದ್ರನನ್ನು ಪೂಜಿಸುವದು. ಪೂಜಾಂತ್ಯದಲ್ಲಿ ಆಶ್ಚಾಯ ಮಂತ್ರವನ್ನು ಸಾವಿರಪರಿಚ್ಛೇದ - ೩ ಪೂರ್ವಾರ್ಧ ೨೦೯ ಸಂಖ್ಯೆಯಿಂದ ಜಪಿಸುವದು. ಇದರಲ್ಲಿ ಗ್ರಹಶಾಂತಿಹೋಮ ಮಾಡತಕ್ಕದ್ದು, ಇಲ್ಲಿ ಪ್ರಧಾನದೇವತೆಗೆ ಹೋಮವಿಲ್ಲ. ಬೇರೆ ಗ್ರಂಥಗಳಲ್ಲಿ ತಾಮ್ರ ಕಲಶದಲ್ಲಿ ಬೆಳ್ಳಿಯ ಪ್ರತಿಮೆಯನ್ನಿಟ್ಟು “ಬೃಹಸ್ಪತಿ” ಮಂತ್ರದಿಂದ “ವಾಗೀಶ"ನನ್ನು ಪೂಜಿಸಿ ಅದರ ಉತ್ತರದಿಕ್ಕಿನಲ್ಲಿ ನಾಲ್ಕು ಕಲಶಗಳನ್ನು ಸ್ಥಾಪಿಸಿ ಪಂಚಪಲ್ಲವಾದಿಗಳನ್ನೂ, ಕುಂಕುಮ, ಚಂದನ, ಕಂಕೋಷ್ಠ, ಗೋರೋಚನಗಳನ್ನೂ ಹಾಕಿ, ವರುಣನನ್ನು ಪೂಜಿಸಬೇಕು ಎಂದಿದೆ, ಮತ್ತು ಆಚಾರ್ಯನಿಗೆ ಶಂಖ ಮತ್ತು ಮುತ್ತುಗಳಿಂದ ಯುಕ್ತವಾದ ಚಂದ್ರಬಿಂಬದ ದಾನವನ್ನು ಹೇಳಿದೆ. ಬೇರೆ -ಬೇರೆ ಗ್ರಂಥಗಳಲ್ಲಿ ತಾಮ್ರಪಾತ್ರ ಸಹಿತವಾದ ವಾಗೀಶಪ್ರತಿಮಾದಾನ, ಆಯುರ್ವೃಧರ್ಥವಾಗಿ “ಸಹಸ್ರಾಕ್ಷೀಣ” ಎಂಬ ಮಂತ್ರಜಪ, ಹತ್ತಕ್ಕೆ ಕಡಿಮೆಯಾಗದಷ್ಟು ಬ್ರಾಹ್ಮಣಭೋಜನ ಇತ್ಯಾದಿ ಹೇಳಲಾಗಿದೆ. ತಿಥಿಗಂಡಾಂತ • ಲಗ್ನಗಂಡಾಂತ ಶಾಂತಿ ಪಂಚಮೀ-ಷಷ್ಠಿ, ದಶಮಿ-ಏಕಾದಶೀ, ಹುಣ್ಣಿಮೆ-ಪ್ರತಿಪದ ಇವುಗಳ ಸಂಧಿಯ ಎರಡು ಘಟಿಗಳಿಗೆ “ತಿಥಿಗಂಡಾಂತ"ವನ್ನುವರು. ಕರ್ಕ-ಸಿಂಹ, ವೃಶ್ಚಿಕ-ಧನು, ಮೀನ-ಮೇಷ, ಇವುಗಳ ಸಂಧಿಯ ಒಂದು ಘಟಿಗೆ “ಲಗ್ನಗಂಡಾಂತ” ಎನ್ನುವರು. ತಿಥಿಗಂಡಾಂತದ ಪೂರ್ವಾರ್ಧದಲ್ಲಿ ಜನನವಾದರೆ ತತ್ಕಾಲ ಸ್ನಾನಮಾಡಿ ವೃಷಭ ಅಥವಾ ಅದರ ಮೌಲ್ಯವನ್ನು ದಾನಮಾಡತಕ್ಕದ್ದು. ಸೂತಕದ ನಂತರ ಶಾಂತಿ ಮಾಡತಕ್ಕದ್ದು. ಉತ್ತರಾರ್ಧದಲ್ಲಾದರೆ ಶಾಂತಿ ಮಾತ್ರ ಮಾಡುವದು. ಲಗ್ನಗಂಡಾಂತದ ಪೂರ್ವಾರ್ಧದಲ್ಲಿ ಸುವರ್ಣದಾನ, ಉತ್ತರಾರ್ಧದಲ್ಲಿ ಶಾಂತಿ ಮಾತ್ರ ಮಾಡುವದು. ಕಲಶದಲ್ಲಿ ಬಂಗಾರ ಪ್ರತಿಮೆಯನ್ನಿಟ್ಟು ವರುಣನನ್ನು ಪೂಜಿಸಿ, ವರುಣನನ್ನು ಉದ್ದೇಶಿಸಿ ಸಮಿಚ್ಚರ್ವಾಜ, ತಿಲ, ಯವಗಳನ್ನು ಪ್ರತಿದ್ರವ್ಯವನ್ನು ಅಷ್ಟೋತ್ತರಶತಸಂಖ್ಯೆಯಿಂದ ಹೋಮಿಸತಕ್ಕದ್ದು, ಜವೆಗೋಧಿ, ಬತ್ತ, ಉದ್ದು, ಯಳ್ಳು, ಪಚ್ಚೆಸರು ಇವುಗಳನ್ನು ದಕ್ಷಿಣಾರೂಪವಾಗಿ ಕೊಡತಕ್ಕದ್ದು. ಇತ್ಯಾದಿ. ದಿನಕ್ಷಯಾದಿ ಶಾಂತಿ ದಿನಕ್ಷಯ, ಭದ್ರಾ, ಯಮಘಂಟಾ, ದಗ್ಧ ಯೋಗ, ಮೃತ್ಯುಯೋಗ, ದುಷ್ಟಯೋಗಕರಗಳಾದ ತಿಥಿಗಳು, ಅವುಗಳ ನಿಷಿದ್ಧಾಂಶಗಳು ಹಾಗು ಅವುಗಳಲ್ಲಿ ಜನ್ಮಸುವಾಗ ಪಾಪಗ್ರಹಗಳ ಯೋಗವಾದರೆ ಅತ್ಯಂತ ಅರಿಷ್ಟಕಾರಕಗಳಾಗುವವು. “ಯಮಘಂಟಾ"ದಿ ದೋಷಗಳನ್ನು ಜ್ಯೋತಿಃಶಾಸ್ತ್ರದಲ್ಲಿ ವಿವರವಾಗಿ ಹೇಳಿದ. ದುಷ್ಟವಾದಯೋಗ ಹಾಗೂ ತಿಥಿಗಳ ನಿಷಿದ್ಧಾಂಶಗಳು, ವಿಷ್ಕಂಭ, ವಜ್ರ ಈ ಯೋಗಗಳ ಮೊದಲಿನ ಮೂರು ಘಟಿಗಳು, ಗಂಡ- ಅತಿಗಂಡಗಳ ಆರು ಘಟಿಗಳು, ಪರಿಘದ ಅರ್ಧಭಾಗ, ಶೂಲಯೋಗದ ಐದು ಘಟಿಗಳು, ವ್ಯಾಘಾತದ ಎಂಟು ಘಟಿಗಳು ಇವು ನಿಷಿದ್ಧಾಂಶಗಳು. ಇನ್ನು ಚತುರ್ಥಿಯ ಆದಿಯ ಎಂಟು, ಷಷ್ಠಿಯ ಒಂಭತ್ತು. ಅಷ್ಟಮಿಯ ಹದಿನಾಲ್ಕು, ನವಮಿಯ ಇಪ್ಪತೈದು, ದ್ವಾದಶಿಯ ಹತ್ತು, ಚತುರ್ದಶಿಯ ಐದು ಘಟಿಗಳು ನಿಷಿದ್ದಗಳು. ದಿನಕ್ಷಯಾದಿ ದೋಷಗಳಲ್ಲಿ ಒಂದೊಂದರ ಮೂಲಕ ದೂಷಿತವಾದ ಕಾಲದಲ್ಲಿ ಜನನವಾದರೆ ಈಶ್ವರನಲ್ಲಿ ಏಕಾದಶರುದ್ರಾಭಿಷೇಕವನ್ನು ಮಾಡುವದು. ಎರಡು, ಮೂರು ದೋಷಗಳು ಕೂಡಿದಲ್ಲಿ “ಗ್ರಹಶಾಂತಿ, 900 ಧರ್ಮಸಿಂಧು ಅಶ್ವತ್ಥಪ್ರದಕ್ಷಿಣಾ"ದಿಗಳನ್ನು ಮಾಡತಕ್ಕದ್ದು. ಶಿವಾಲಯದಲ್ಲಿ ಭಕ್ತಿಯಿಂದ ತುಪ್ಪದ ದೀಪವನ್ನು ಹಚ್ಚುವದು. ಗಣಪತಿಸೂಕ್ತ, ಪುರುಷಸೂಕ್ತ, ಸೌರಸೂಕ್ತ, ಮೃತ್ಯುಸೂಕ್ತ, ಶಾಂತಿಸೂಕ್ತ, ರುದ್ರಪಾರಾಯಣ ಇತ್ಯಾದಿಗಳೆಲ್ಲ ‘ಮೃತ್ಯುಹರ"ಗಳೆಂಬ ವಚನಪ್ರಮಾಣವಿರುವದರಿಂದ ಬಹುದೋಷದಲ್ಲಿ ಇವುಗಳಲ್ಲಿ ಹೆಚ್ಚಿನ ಕ್ರಮಗಳನ್ನು ಸೇರಿಸಿಕೊಳ್ಳುವದು. ವಿಷಘಟೀ ಶಾಂತಿ ತಿಥಿ, ವಾರ, ನಕ್ಷತ್ರ ಇವೆಲ್ಲವುಗಳ ವಿಷಘಟಿಗಳನ್ನು ಬೇರೆ-ಬೇರೆಯಾಗಿ “ಕೌಸ್ತುಭ"ದಲ್ಲಿ ಹೇಳಿದೆ. ಆದರೆ ಜ್ಯೋತಿಷ್ಯ ಗ್ರಂಥಗಳಲ್ಲಿ ನಕ್ಷತ್ರ ವಿಷಘಟಿಗಳೇ ಪ್ರಾಮುಖ್ಯವಾಗಿ “ದೋಷಕರ"ಗಳೆಂದು ಹೇಳಿದೆ. ಆದ್ದರಿಂದ ನಕ್ಷತ್ರ ವಿಷಘಟಿಗಳಲ್ಲಿ ಜನನವಾದರೆ ಹೇಳಿದ ಶಾಂತಿಯನ್ನು ಮಾಡತಕ್ಕದ್ದು. ತಿಥ್ಯಾದಿ ವಿಷಘಟಿಗಳು ಅಲ್ಪದೋಷಕರಗಳಾದ್ದರಿಂದ ರುದ್ರಾಭಿಷೇಕಾದಿಗಳನ್ನು ಮಾಡತಕ್ಕದ್ದು. ವಿಷಘಟಿಗಳಲ್ಲಿ ಹುಟ್ಟಿದ ಶಿಶುವು ಪಿತೃ-ಮಾತೃ-ಧನ ಇವುಗಳನ್ನು ನಾಶಮಾಡುವದಲ್ಲದೆ ತಾನೂ ನಪ್ಪನಾಗುವನು. ಕ್ರೂರಲಗ್ನ, ಕ್ರೂರನವಾಂಶಕಗಳಲ್ಲಿ ಜನಿಸಿದವನಿಗೆ ವಿಷ, ಶಸ್ತ್ರ, ಅಸ್ತ್ರಾದಿಗಳ ಭೀತಿಯಿದೆ. ಸಂಕಲ್ಪವನ್ನು “ಏತದ್ವಿಷನಾಡಿತು ಶಿಶುಜನನಸೂಚಿತ ಅರಿಷ್ಟ” ಹೀಗೆ ಮಾಡತಕ್ಕದ್ದು. ಒಂದೇ ಕಲಶದಲ್ಲಿ ನಾಲ್ಕು ಪ್ರತಿಮೆಗಳಲ್ಲಿ “ಕದ್ರುದ್ರಾಯ” ಮಂತ್ರದಿಂದ ರುದ್ರನನ್ನೂ, “ಯಮಾಯಸೋಮಂ” ಮಂತ್ರದಿಂದ ಯಮನನ್ನೂ, “ಅಗ್ನಿರ್ಮಧರ್ಾ” ಮಂತ್ರದಿಂದ ಅಗ್ನಿಯನ್ನೂ, “ವರಂ” ಮಂತ್ರದಿಂದ ಮೃತ್ಯುದೇವತೆಯನ್ನೂ ಆವಾಹಿಸಿ ಪೂಜಿಸುವದು. ಗ್ರಹಾಧಾನಾಂತದಲ್ಲಿ “ರುದ್ರ-ಯಮ-ಅಗ್ನಿ- ಮತ್ತೂನ್ ಸಮಿಸ್ಟರು ಪ್ರತಲಾಹುತಿ: ಶೇಷಣ” ಇತ್ಯಾದಿ. ಇದರಲ್ಲಿ ಮನೆಯಲ್ಲಿ ಬೇಯಿಸಿದ ಅನ್ನವನ್ನು ಹೋಸುವದು. ಯಮಲ ಜನನ ಶಾಂತಿ (ಅವಳಿ-ಜವಳಿ) ಅಗ್ನಯೇ ಮರುತೇ ತ್ರಯೋದಶಕಪಾಲಂ ಪುರೋಡಾಶಂ ನಿರ್ವಪೇತ್” ಹೀಗೆ ಋಗೈದ ಬ್ರಾಹ್ಮಣದಲ್ಲಿ ಉಕ್ಕಿಬರುವದರಿಂದ ಅಗ್ನಿಹೋತ್ರಿಯಾದ ಋಗ್ನದಿಯು ‘ಮರುತ್’ ದೇವತಾತ್ಮಕವಾದ ಅಗ್ನಿಗಾಗಿ ಹದಿಮೂರು ಕಪಾಲಗಳಲ್ಲಿ ಪುರೋಡಾಶವನ್ನು ಬೇಯಿಸಿ ಅದರಿಂದ ಇಷ್ಟಿಯನ್ನು ಮಾಡತಕ್ಕದ್ದು. ಅಥವಾ ಅಶ್ವಲಾಯನ ಸೂತ್ರೋಕ್ತವಾದ ಕೇವಲ ಮಾರುತಯಾಗ ಮಾಡತಕ್ಕದು, ಗೃಹಾಗ್ನಿಯು ಆಶ್ವಲಾಯನನು ಗೃಹ್ಯಾಗ್ರಿಯಲ್ಲಿ ಮರುತ್ಸಂಬಂಧವಾದ ಚರುಮಾಡತಕ್ಕದು, “ಆಥಯ ಮರ್ಗವರ್ಾ ಜನರ ಮತತಃ ಸಮರುಶ್ಚರು ಕುರ್ಯಾತ್ ಪೂರ್ಣಾಹುತಿ-ವಾವಾ||” ಅಂದರೆ ಯಾವನ ಪತ್ನಿ ಅಥವಾ ಗೋವು ಅವಳಿಯನ್ನು ಹಡೆಯುದರೂ ಆತನು ಮರುವತೆಯ ಸಲುವಾಗಿ ಆರು ಅಥವಾ ಪೂರ್ಣಾಹುತಿ ಮಾಡತಕ್ಕದ್ದು. ಹೀಗೆ ಕಾರಿಕಾ ವಚನವಿದೆ. ಗಾಗಿಲ್ಲದ ಆಶ್ವಲಾಯನನ್ನು ಕಾತ್ಯಾಯನೋಕ್ತ ಶಾಂತಿಯನ್ನು ಕಾಗ್ನಿಯಲ್ಲಿ ಮಾಡತಕ್ಕದ್ದು. “ಮಮ ಕಾರ್ಯಾಯ ಮಲಜನನಚಿತ ಸರ್ವಾರಿಷ್ಠ ಪರಿಹಾರದ್ವಾರಾ : ಸರಮೇಶ್ವರ ರ್ಥ ಮಾರುತಾಯ” ಶೌತಾಗ್ನಿಯುಳ್ಳವನಿಗೆ ಹೀಗೆ ಸಂಕಲ್ಪವು. ಸಾರ್ತಾ ಯುಳ್ಳವನು “ಮಾರುತಾಲೀಪಾಕನಯಕ್ಕೆ ಹೀಗೆ ಸಂಕಲ್ಪಿಸುವದು. ಯಾದವರು “ಸಗ್ರ ಹಮುಖಾಕಾತ್ಮಾಯಕ್ಕಾ ಶಾಂತಿಕುಷ್ಯ” ಹೀಗೆ ಸಂಕಲ್ಪಿಸುವದು. ಪರಿಚ್ಛೇದ - ೩ ಪೂರ್ವಾರ್ಧ ೨೦೧ ಸ್ವಸ್ತಿವಾಚನಾದಿ ಆಚಾರ್ಯವರಣಾಂತವಾಗಿ ಮಾಡಿ ಎಂಟುದಿಕ್ಕುಗಳಲ್ಲಿ ಎಂಟು ಕಲಶಗಳನ್ನು ವಿಧಿವತ್ತಾಗಿ ಸ್ಥಾಪಿಸಿ, ಜಲವನ್ನು ತುಂಬಿ ಸರ್ವೌಷಧಿಗಳನ್ನು ಹಾಕಿ ವರುಣನನ್ನು ಪೂಜಿಸುವದು. ಆ ಎಂಟು ಕಲಶಗಳ ಜಲದಿಂದ ದಂಪತಿಗಳಿಗೆ ಅಭಿಷೇಕ ಮಾಡುವದು. “ಆಪೋಹಿಷ್ಠಾ” ಈ ಮೂರು ಅಬ್ಬಿಂಗಮಂತ್ರ “ಕಯಾನ” ಎಂಬ ಎರಡು, “ಆನಃಸುತ” ಎಂಬ ಐದು ಹೀಗೆ ಏಳು ಐಂದ್ರಮಂತ್ರ, “ಮೋಷುವರುಣ” ಎಂಬ ಐದು ಐಂದ್ರಮಂತ್ರ, “ಇದಮಾಪು” ಎಂಬ ಒಂದು ಮಂತ್ರ.“ಆಪನ” ಎಂಬ ಎಂಟು ಆತ್ಮೀಯಮಂತ್ರ ಇವುಗಳಿಂದ ಅಭಿಷೇಕ ಮಾಡುವದು. ಹೀಗೆ ಅಭಿಷಿಕ್ತರಾದ ದಂಪತಿಗಳು ಬಿಳೇವಸ್ತ್ರ, ಚಂದನಾದಿಗಳನ್ನು ಧರಿಸಿ ಉತ್ತರಾಭಿಮುಖರಾಗಿ ನಿಲ್ಲುವದು. ಪೂರ್ವಾಭಿಮುಖನಾದ ಆಚಾರ್ಯನು ಅಗ್ನಿ ಹಾಗೂ ಗ್ರಹಸ್ಥಾಪನೆಯ ನಂತರ ‘ಅವಸ್ತಿ ಸಭಿರಾಜ್ಯಾಹುತಿಭಿಃ ಇಂದ್ರ, ಸಪ್ತಭಿವರುಣಂ, ಪಂಚಭಿಃ ಆಪ ಏಕಯಾ ಅಗ್ನಿಮಷ್ಟಾಭಿರಾಜ್ಯಾಹುತಿಭಿಃ ಪೂರ್ವತ್ರ ಅಭಿಷೇಕಾರ್ಥಂ ಉರೈಶ್ಚತುರ್ವಿಂಶತಿಮಂತ್ರ: ಅಗ್ನಿಂ ಸೋಮಂ ಪವಮಾನ ಪಾವಕಂ ಮಾರುತಂ ಮರುತಃಯಮಂ ಅಂತಕಂ ಮೃತ್ಯುಂಡ ಏಕೈಕಯಾ ಚರ್ವಾಹುತ್ಯಾ ನಾಮಮಂತ್ರ: ಶೇಷೇಣ” ಇತ್ಯಾದಿ, ಅನ್ನಾಧಾನ ಮಾಡತಕ್ಕದ್ದು. ಮೂವತ್ತಾರು ಆವರ್ತಿ ಅಮಂತ್ರಕವಾಗಿ “ನಿರ್ವಾಪ"ಗಳು ಮತ್ತು “ಪ್ರೋಕ್ಷಣಗಳು.” ಕೊನೆಯಲ್ಲಿ ಗ್ರಹಕಲಶೋದಕದಿಂದ ಅಭಿಷೇಕ ಮಾಡುವದು. ದಾಸಿ, ಎಮ್ಮೆ, ಕುದುರೆ, ಗೋವು, ಆನೆ ಇವುಗಳಲ್ಲಿ ಯಾವದಾದರೊಂದು ಅವಳಿಯನ್ನು ಹಡೆದರೂ ಈ ಶಾಂತಿಯನ್ನು ಮಾಡುವದು. ಮತ್ತು “ಉತ್ಪಾತ” ಅಂದರೆ ಗೂಬೆ, ಪಾರಿವಾಳ, ಹದ್ದು, ರಣಹದ್ದು ಇವು ಮನೆಯನ್ನು ಪ್ರವೇಶಿಸಿದರೆ, ಒಣಗಿದ ಕಂಬವು ಚಿಗುರಿದರೆ, ಒರಲೆ (ಗೆದ್ದಲು) ಮೂಡಿದರೆ, ಜೇನು ಕಟ್ಟಿದರೆ, ಆಸನ, ಶಯನ, ವಾಹನಗಳು ಆಕಸ್ಮಿಕವಾಗಿ ಮುರಿದರೆ, ಹಲ್ಲಿಯು ಬಿದ್ದರೆ, ಓತಿಕಾಟವು ಏರಿದರೆ, ಛತ್ರ-ಧ್ವಜಾದಿಗಳು ನಾಶವಾದರೆ ಇತ್ಯಾದಿ ಉತ್ಪಾತಗಳಲ್ಲಿ ಹಾಗೂ ಮಹೋತ್ಪಾತಾದಿಗಳಲ್ಲಿ ಈ ಶಾಂತಿಯನ್ನು ಮಾಡತಕ್ಕದ್ದೆಂದು “ಕಾತ್ಸಾಯನನ ಮತವು ಸಾಗ್ನಿಕರಾದ ಕಾತ್ಯಾಯನರು ಇದನ್ನು ಸ್ವಗೃಹ್ಯಾಗ್ನಿಯಲ್ಲಿ ಮಾಡುವದು. ನಿರಗ್ನಿಕರಾದ ಇತರರು ಲೌಕಿಕಾಗ್ನಿಯಲ್ಲಿ ಮಾಡತಕ್ಕದ್ದು. ಹೀಗೆ ಯಮಲಜನನ ಶಾಂತಿಯು. ತ್ರಿಕಪ್ರಸವ ಶಾಂತಿ ಮೂರು ಗಂಡಿನ ಮೇಲೆ ಹೆಣ್ಣು ಜನನ ಅಥವಾ ಮೂರು ಹೆಣ್ಣಿನ ಮೇಲೆ ಗಂಡಿನ ಜನನವಾದರೆ ಅದಕ್ಕೆ “ತ್ರಿಕಪ್ರಸವ"ವೆನ್ನುವರು. ಹೀಗಾದರೆ ಮಾತೃಕುಲ, ಪಿತೃಕುಲ ಈ ಎರಡಕ್ಕೂ ಮಹಾ ಅನಿಷ್ಟವಾಗುವದು. ಹಿರಿಯರ ನಾಶ, ದ್ರವ್ಯನಾಶ ಅಥವಾ ಮಹಾದುಃಖ ಪ್ರಾಪ್ತಿಯಾಗುವದು. ಮೊದಲು ಗೋಪ್ರಸವವನ್ನು ಮಾಡಿ “ಮಮ ಸುತತ್ರಯ ಜನ್ಮಾನಂತರಂ ಪುತ್ರೀಜನನ ಸೂಚಿತ ಇತ್ಯಾದಿ ಆಯಾಯ ಜನನಕ್ಕೆ ಸರಿಯಾಗಿ ಸಂಕಲ್ಪ ಮಾಡತಕ್ಕದ್ದು. ಸ್ಟಂಡಿಲದ ಪೂರ್ವಭಾಗದಲ್ಲಿ ಗ್ರಹಸ್ಥಾಪನಮಾಡಿ ಉತ್ತರ ದಿಕ್ಕಿನಲ್ಲಿ ಐದು ಕಲಶಗಳನ್ನು ಸ್ಥಾಪಿಸುವದು. ಅವುಗಳ ಮೇಲೆ ಬಂಗಾರದ ಪ್ರತಿಮೆಗಳನ್ನಿಟ್ಟು ಬ್ರಹ್ಮ, ವಿಷ್ಣು, ಮಹೇಶ, ಇಂದ್ರ, ರುದ್ರರಾವಾಹಿಸಿ ಪೂಜಿಸುವದು. “ಬ್ರಹ್ಮಜ್ಞಾನ, ಇರುವಿಷ್ಣು, ತಂಬಕ, ಯುಇಂದ್ರ, ಕದ್ರುದ್ರಾಯ” ಹೀಗೆ ಆವಾಹನ ಪೂಜಾಮಂತ್ರಗಳು, ಗ್ರಹಪೀಠದೇವತಾ ಅನ್ವಾಧಾನಾಂತರದಲ್ಲಿ “ಬ್ರಹ್ಮಾಣಂ, ವಿಷ್ಣು, ಮಹೇಶಂ, ೨೧೨ ಧರ್ಮಸಿಂಧು ಇಂದ್ರ, ರುದ್ರಂ ಚ ಪ್ರತ್ಯೇಕಂ ಸಮಿದಾಜಚರುತಿ: ಪ್ರತಿದ್ರವ್ಯಂ ಅಷ್ಟೋತ್ತರ ಸಹಸ್ರ “ಅಷ್ಟೋತ್ತರಶತ ಅನ್ಯಮತಸಂಖ್ಯಾಹುಭಿಃ ಶೇಷಣ” ಇತ್ಯಾದಿ. ಸದಂತ ಜನನ ಶಾಂತಿ ಶಿಶುಗಳಿಗೆ ಹಲ್ಲು ಮೂಡಿದಾಗ ಪ್ರಥಮದಲ್ಲಿ ಮೇಲ್ಪಂಕ್ತಿಯಲ್ಲಿ ಮೂಡಿದರೆ ಮತ್ತು ಹುಟ್ಟುವಾಗಲೇ ದಂತ ಮೂಡಿದ್ದರೆ ಮತ್ತು ದ್ವಿತೀಯ, ತೃತೀಯ, ಚತುರ್ಥ, ಪಂಚಮ ಮಾಸಗಳಲ್ಲಿ ಹಲ್ಲು ಬಂದರೆ ಆ ಶಿಶುವಿನ ಸಂಬಂಧದಿಂದಾಗಿ ಮಹಾಭೀತಿ ತಲೆದೋರುವದು. ತಂದೆ, ತಾಯಿ, ಶಿಶು ಈ ಎಲ್ಲರಿಗೂ ಮರಣವುಂಟಾಗುವದು. ಎಂಟನೇ, ಆರನೇ ತಿಂಗಳಲ್ಲಿ ಮೂಡಿದರೂ ಹೀಗೆಯೇ ಕೆಲವರು ಎಂಟನೇ ತಿಂಗಳಲ್ಲಿ ಹಲ್ಲು ಬಂದರೆ ಶುಭವನ್ನುವರು. “ಆಸ್ಕಶಿಶೋ ಪ್ರಥಮಮೂರ್ಧ್ವದಂತಜನನಸೂಚಿತ ಸರ್ವಾರಿಷ್ಟ” ಹೀಗೆ ಮೇಲ್ಪಂಕ್ತಿಯಲ್ಲಿ ಪ್ರಥಮ ಮೂಡಿದರೆ ಸಂಕಲ್ಪ ಮಾಡುವದು, “ಸದಂತಜನನ ಸೂಚಿತ” ಹೀಗೆ ಹಲ್ಲು ಸಹಿತ ಹುಟ್ಟಿದವರಿಗೆ ಸಂಕಲ್ಪವು. ಇನ್ನು ಹೇಳಿದ ಅನಿಷ್ಟ ಮಾಸಾದಿಗಳ ದಂತೋತ್ಪತ್ತಿಯಲ್ಲಿ “ದ್ವಿತೀಯಮಾಸಿದಂತ ಜನನ ಇತ್ಯಾದಿ ಮಾಸಾನುಸಾರ ಸಂಕಲ್ಪ ಮಾಡುವದು. ಸ್ಟಂಡಿಲದ ಉತ್ತರಭಾಗದಲ್ಲಿ ನೌಕ (ಡೋಣಿ)ಯ ಪ್ರತಿಮೆ ಮಾಡಿ, ಅದರಲ್ಲಿ ಅಥವಾ ಬಂಗಾರದ ಆಸನದಲ್ಲಿ ಸ್ವಸ್ತಿಕ ಮಂಡಲವನ್ನು ಬರೆದು ಅದರಲ್ಲಿ ಬಾಲಕನನ್ನು ಕೂಡ್ರಿಸಿ, ಸರ್ವೌಷಧಿ ಮೊದಲಾದವುಗಳಿಂದ ಯುಕ್ತವಾದ ಜಲದಿಂದ ಸ್ನಾನಮಾಡಿಸಿ ಸ್ಪಂಡಿಲಪೂರ್ವಭಾಗದಲ್ಲಿ ಕಲಶದಮೇಲೆ ಪ್ರತಿಮೆಯನ್ನಿಟ್ಟು, ಧಾತೃ, ವಹಿ, ಸೋಮ, ವಾಯು, ಪರ್ವತ, ಕೇಶವ ಈ ದೇವತೆಗಳನ್ನು ಪೂಜಿಸಿ, ಗ್ರಹಅನ್ನಾಧಾನಾಂತದಲ್ಲಿ ‘ಧಾತಾರಂ ಸಕೃಚ್ಚರುಣಾ, ವಾರಿ ಪಂಚದೇತವಾ ಏಕೈಕಯಾಚ್ಯಾಹುತ್ಯಾ ಶೇಷೇಣ” ಇತ್ಯಾದಿ ಅನ್ನಾಧಾನ ಮಾಡತಕ್ಕದ್ದು. “ಧಾತ್ವಾಜುಷ್ಟಂನಿರ್ವಪಾಮಿ ಹೀಗೆ ನಿರ್ವಾವ ಪ್ರೋಕ್ಷಣಗಳು. ಚರುಹೋಮವನ್ನು ನಾಮಮಂತ್ರದಿಂದ ಮಾಡತಕ್ಕದ್ದು. ವಹ್ವಾದಿ ಐದು ದೇವತೆಗಳಿಗೂ ನಾಮಮಂತ್ರದಿಂದ ಪಂಚಸವಾಚ್ಯಾಹುತಿಗಳನ್ನು ಕೊಡುವದು. ಹೋಮಾಂತದಲ್ಲಿ ಯಥಾಶಕ್ತಿ ದಕ್ಷಿಣೆಯನ್ನು ಕೊಟ್ಟು, ಏಳುದಿನಪರ್ಯಂತ ಯಥಾಶಕ್ತಿ ಬ್ರಾಹ್ಮಣಭೋಜನವನ್ನು ಮಾಡಿಸುವದು. ಎಂಟನೇದಿನ ಸುವರ್ಣಮೊದಲಾದ ದಾನಗಳನ್ನು ಮಾಡಿ ಕರ್ಮವನ್ನು ಈಶ್ವರಾರ್ಪಣ ಮಾಡತಕ್ಕದ್ದು. ಆರು ಅಥವಾ ಎಂಟನೇ ತಿಂಗಳಲ್ಲಿ ದಂತಜನನವಾದರೆ “ಬೃಹಸ್ಪತಿ ದೇವತೆಯನ್ನೊಂದನ್ನೇ ಪೂಜಿಸುವದು. ಮೊಸರು, ಜೇನುತುಪ್ಪ, ತುಪ್ಪ ಇವುಗಳಿಂದ ಮಿಶ್ರಿತಗಳಾದ ಅಶ್ವತ್ಥ ಸಮಿತ್ತುಗಳಿಂದ, ಬೃಹಸ್ಪತಿಮಂತ್ರದಿಂದ ಅಷ್ಟೋತ್ತರಶತಹೋಮ ಮಾಡುವದು. “ಸ್ಪಿಷ್ಟಕೃತ್’ನ್ನು ಆಜ್ಯದಿಂದ ಹೋಮಿಸುವರು. ಇತ್ಯಾದಿ ದಂತ ಜನನ ಶಾಂತಿಯು, ಪ್ರಸವ ವೈಕೃತ ಶಾಂತಿ ಮನುಷ್ಯ ಅಥವಾ ಪಶುಗಳು ಗರ್ಭದಿಂದ ವ್ಯತ್ಯಾಸವಾಗಿ, ಅದ್ಭುತವಾಗಿ ಜನಿಸಿದರೆ ಅದಕ್ಕೆ * ಪ್ರಸವಂತ ವೆನ್ನುವರು. ಇದು ಆ ದೇಶಕ್ಕೆ ಅರಿಷ್ಟವು. ಮನುಷ್ಯ ಇಲ್ಲವೆ ಗೋವು, ಕುರಿ, ಕುದುರೆ, ಮೃಗ, ಪಕ್ಷಿ ಮೊದಲಾದವುಗಳು ಆಯಾಯ ಜಾತಿಯ ಲಕ್ಷಣಕ್ಕೆ ಹೊರತಾಗಿ, ದಂತಸಹಿತವಾಗಿ, ಏಕಾರವಾಗಿ, ಅನೇಕ ತಲೆಗಳು ಅಥವಾ ತಲೆಯೇ ಇಲ್ಲದ, ಅನೇಕ ಕಿವಿಗಳು ಅಥವಾ ಕಿವಿಯಲ್ಲದ ಒಂದು ಕೋಡು, ಎರಡು ಮೂರು ಕೋಡುಗಳು, ಮೂರು-ನಾಲ್ಕು ಕೈಗಳು ಪರಿಚ್ಛೇದ - ೩ ಪೂರ್ವಾರ್ಧ ೨೧೩ ಹೀಗೆಲ್ಲ ವಿರೂಪದಿಂದ ಜನಿಸಿದರೆ, ಮನುಷ್ಯರಾದರೂ ದೀರ್ಘ ಹಾಗೂ ಬಹುದೊಡ್ಡವರಾಗಿ ಅಥವಾ ಆನೆಯ ಕಿವಿಯಂತಿರುವ ಕಿವಿಯುಳ್ಳವರಾಗಿ ಜನಿಸಿದರೆ ರಾಜರ ಹಾಗೂ ಶ್ರೇಷ್ಠ ಕುಲದವರ ಕುಲ, ಹಾಗೂ ತನ್ನ ಕುಲಗಳು ನಾಶಹೊಂದುವವು ಮತ್ತು ಧನಹಾನಿಯಾಗುವದು. ಈ ಶಾಂತಿಗೆ ಮುತ್ತುಗಲ, ಸಮಿಧ, ಚರು, ಆಜ್ಯಗಳು ದ್ರವ್ಯಗಳು, ಹೋಮಸಂಖ್ಯಾ ೧೦೦೮. ಹಿಂದೆ ಹೇಳಿದಂತೆ ಬ್ರಾಹ್ಮಣ ಸಂತರ್ಪಣೆ ಮಾಡುವದು. ಶಿರಸ್ಸೇ ಇಲ್ಲದೆ ಅಥವಾ ಎರಡು-ಮೂರು ತಲೆಗಳುಳ್ಳವುಗಳಾಗಿ ಜನಿಸಿದರೆ ಈ ಅದ್ಭುತಕ್ಕೆ “ಸೂರ್ಯಾದ್ಭುತ” ಎನ್ನುವರು. ಆಗ ಸೂರ್ಯನನ್ನುದ್ದೇಶಿಸಿ ಪೂಜೆ ಮತ್ತು ಹೋಮವು, ಮೊಸರು, ತುಪ್ಪ, ಮಧುಯುಕ್ತಗಳಾದ “ಎಕ್ಕ” ಸಮಿಧಗಳು-ಇವು ಹೋಮದ್ರವ್ಯಗಳು, ಮೃಗ, ಸರ್ಪ, ಕಪ್ಪೆ, ಮನುಷ್ಯ ಮೊದಲಾದ ಆಕೃತಿಯ ಶಿಶುವನ್ನು ಹಡೆದರೆ"ಬೃಹಸ್ಪತಿ ಅದ್ಭುತ” ಎನ್ನುವರು. ಇಲ್ಲಿ ಬೃಹಸ್ಪತಿಯ ಪೂಜೆ ಮತ್ತು ಹೋಮಗಳು, ಮೊಸರು, ತುಪ್ಪಗಳಿಂದ ಯುಕ್ತವಾದ ಅತ್ತಿಯ ಸಮಿಧ, ಸ್ತ್ರೀಗೆ ಗರ್ಭಪಾತವಾದಲ್ಲಿ ಅಥವಾ ಅವಳಿಯು ಜನಿಸಿದಲ್ಲಿ, ಇಲ್ಲವೆ ಸದಂತಜನನವಾದಲ್ಲಿ, ಹುಟ್ಟಿದೊಡನೆಯೇ ನಗೆಮಾಡಿದಲ್ಲಿ ಅದಕ್ಕೆ ಬುಧಾದ್ಭುತ” ಎನ್ನುವರು. ಅದರಲ್ಲಿ ಬುಧನ ಪೂಜಾ, ಹೋಮಾದಿಗಳನ್ನು ಮಾಡತಕ್ಕದ್ದು. ಯಥಾಮತಿ, ಸಂಕ್ಷೇಪವಾಗಿ ಈ ಜನನಶಾಂತಿಯನ್ನು ಹೇಳಲಾಯಿತು. ಜಪ ಅಭಿಷೇಕಸೂಕ್ತ ಮೊದಲಾದವುಗಳನ್ನು ಕೌಸ್ತುಭಾದಿ ಪ್ರಸಿದ್ಧ ಗ್ರಂಥಗಳಿಂದ ತಿಳಿಯುವದು. ಈ ಕೃತಿಯಿಂದ ಭಗವಾನ್ ವಿಟ್ಠಲನು ತೃಪ್ತನಾಗಲಿ. ನಾಮಕರಣ ಜನ್ಮದಿನ ಜಾತಕರ್ಮದ ನಂತರ ನಾಮಕರಣಕ್ಕೆ ಮುಖ್ಯ ಕಾಲವು ಕಲಕಡೆಗಳಲ್ಲಿ ಹನ್ನೊಂದು ಹನ್ನೆರಡನೇ ದಿನಗಳಲ್ಲಿ ಬ್ರಾಹ್ಮಣನಿಗೆ ನಾಮಕರಣವನ್ನು ಹೇಳಿದೆ. ಇನ್ನು ಕೆಲವರು ಅಶೌಚವಿದ್ದರೂ ವಚನಪ್ರಾಮಾಣ್ಯದಿಂದ ಹತ್ತನೇ ದಿನದಲ್ಲಾದರೂ ನಾಮಕರಣ ಮಾಡಬಹುದೆನ್ನುವರು. ಕ್ಷತ್ರಿಯರಿಗೆ ಹದಿಮೂರು ಅಥವಾ ಹದಿನಾರನೇ ದಿನ, ವೈಶ್ಯರಿಗೆ ಹದಿನಾರು ಅಥವಾ ಇಪ್ಪತ್ತನೇ ದಿನ, ಶೂದ್ರರಿಗೆ ಇಪ್ಪತ್ತೆರಡು ಅಥವಾ ಮಾಸದ ಕೊನೆಯ ದಿನ ಇವುಗಳಲ್ಲಿ ನಾಮಕರಣ ಮಾಡತಕ್ಕದ್ದು. ಬ್ರಾಹ್ಮಣರಿಗೆ ಮಾಸಾಂತ್ಯ, ಕ್ಷತ್ರಿಯರಿಗೆ ನೂರುದಿನ, ವೈಶ್ಯರಿಗೆ ಸಂವತ್ಸರಾಂತ್ಯ ದಿನಗಳು “ಗೌಣಕಾಲಗಳು, ಬ್ರಾಹ್ಮಣಾದಿಗಳು ಮುಖ್ಯಕಾಲದಲ್ಲಿ ಮಾಡುವಾಗ ಪುಣ್ಯತಿಥಿ, ನಕ್ಷತ್ರ, ಚಂದ್ರಾನುಕೂಲ್ಯ ಮೊದಲಾದವುಗಳನ್ನು ನೋಡುವದವಶ್ಯವಿಲ್ಲ. ಹೇಳಿದ ಮುಖ್ಯ ಕಾಲಾತಿಕ್ರಮವಾದರೆ ಶುಭನಕ್ಷತ್ರಾದಿಗಳು ಆವಶ್ಯಕಗಳು, ಆದರೆ ಪ್ರಾಪ್ತಕಾಲವಾದರೂ ವೈಧೃತಿ, ವ್ಯತಿಪಾತ, ಸಂಕ್ರಾಂತಿ, ಗ್ರಹಣದಿನ, ಅಮಾವಾಸ್ಕಾ, ಭದ್ರಾ ಈ ದಿನಗಳಲ್ಲಿ ಮಾಡತಕ್ಕದ್ದಲ್ಲ. ಇದಕ್ಕೆ ಗುರು-ಶುಕ್ರಾಸ್ತ್ರ, ಮಲಮಾಸಗಳ ದೋಷವಿರುವದಿಲ್ಲ. ಅಪರಾಹ್ನ, ರಾತ್ರಿಕಾಲಗಳು ವರ್ಜಗಳು. “ಹೇಳಿದ ಕಾಲವು ಮಿಕ್ಕಿದಾಗ ನೋಡಬೇಕಾದ ಶುಭತಿಥ್ಯಾದಿಗಳು ಚತುರ್ಥಿ, ಷಷ್ಠಿ, ನವಮೀ, ದ್ವಾದಶೀ, ಚತುರ್ದಶೀ, ಪಂಚದಶೀ” ಇವುಗಳ ಹೊರತಾದ ತಿಥಿಗಳು ಶ್ರೇಷ್ಠಗಳು, ಚಂದ್ರ, ಬುಧ, ಗುರು, ಶುಕ್ರವಾರಗಳು ಪ್ರಶಸ್ತವು. ಅಶ್ವಿನೀ, ಉತ್ರಾ ಉತ್ರಾಷಾಢಾ, ಉತ್ರಾಭದ್ರಾ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಧನಿಷ್ಠಾ, ಶತಭಿಷ, ರೇವತೀ ನಕ್ಷತ್ರಗಳೂ, ವೃಷಭ, ಸಿಂಹ, ವೃಶ್ಚಿಕ ಲಗ್ನಗಳೂ ಪ್ರಶಸ್ತಿಗಳು. ೨೧೪ ಧರ್ಮಸಿಂಧು ನಾಮಚತುಷ್ಟಯ ನಿರ್ಣಯ ದೇವತಾನಾಮ, ಮಾಸನಾಮ, ನಾಕ್ಷತ್ರನಾಮ, ವ್ಯಾವಹಾರಿಕ ನಾಮ ಹೀಗೆ ನಾಮಗಳು ನಾಲ್ಕು ವಿಧವಾಗಿರುವವು. ಇಂಥ ದೇವರಭಕ್ತ ( ರಾಮಭಕ್ತ, ವಿಷ್ಣು ಭಕ್ತ ಇತ್ಯಾದಿ) ಈ ರೂಪದ ನಾಮವು ದೇವತಾನಾಮವು, ಮಾಸನಾಮಗಳೆಂದರೆ ಆಯಾಯ ಮಾಸ ಜನನಾನುಸಾರ ಹೆಸರಿಡುವದು. ಚೈತ್ರದಲ್ಲಿ ಜನಿಸಿದವನಿಗೆ ವೈಕುಂಠ, ವೈಶಾಖ-ಜನಾರ್ದನ, ಜೇಷ್ಠ -ಉಪೇಂದ್ರ, ಆಷಾಢ-ಯಜ್ಞಪುರುಷ, ಶ್ರಾವಣ-ವಾಸುದೇವ, ಭಾದ್ರಪದ-ಹರಿ, ಆಶ್ವಿನ-ಯೋಗೀಶ, ಕಾರ್ತಿಕ ಪುಂಡರೀಕಾಕ್ಷ, ಮಾರ್ಗಶೀರ್ಷ-ಕೃಷ್ಣ, ಪುಷ್ಕ-ಅನಂತ, ಮಾಘ-ಅಚ್ಯುತ, ಫಾಲ್ಕುನ ಚಕ್ರೀ ಹೀಗೆ ಮಾಸಸಂಕೇತದಿಂದ ಇಡುವ ಹೆಸರುಗಳು ( ಕೆಲ ಶಾಖಾಭೇದದಿಂದ ಸ್ವಲ್ಪ ರೂಪಾಂತರಗಳೂ ಇವೆ) ಇಲ್ಲಿ ಮಾಸಗಳೆಂದರೆ ಶುಕ್ಲ ಪ್ರತಿಪದೆಯಿಂದ ಕೃಷ್ಣ ಅಮಾವಾಸ್ಯೆವರೆಗಿನ “ಚಾಂದ್ರಮಾಸ” ಎಂದು ತಿಳಿಯಬೇಕು. ನಾಕ್ಷತನಾಮ ಅಂದರೆ ಯಾವ ನಕ್ಷತ್ರದಲ್ಲಿ ಜನಿಸಿರುವನೋ ಆ ನಕ್ಷತ್ರವಾಚಕಶಬ್ದದಿಂದ “ತತ್ರಜಾತಃ” ಎಂಬ ವ್ಯಾಕರಣ ಸೂತ್ರಾನುಸಾರ ವಿಹಿತ “ತದ್ಧಿತ ಪ್ರತ್ಯಯ ಸಾಧಿತ ನಾಕ್ಷತನಾಮ ಹೇಗೆಂದರೆ - “ಅಶ್ವಯುಕ್ ಆಪಭರಣಃ, ಕಾರ್ತಿಕ, ರೌಹಿಣ, ಮಾರ್ಗಶೀರ್ಷ, ಆದ್ರ್ರಕಃ, ಪುನರ್ವಸುಃ, ಪುಷ್ಯಃ, ಆಶ್ಲೇಷಃ, ಮಾಘಃ, ಪೂರ್ವಾಫಲ್ಗುಣ, ಉತ್ರಾಫಲ್ಲುಣ, ಹಸ್ತ: ಚೈತ್ರ, ಸ್ವಾತಿ, ವಿಶಾಖಃ, ಅನುರಾಧ, ಜೇಷ್ಠ, ಮೂಲಕಃ, ಪೂರ್ವಾಷಾಢ, ಉತ್ರಾಷಾಢ, ಆಭಿಜಿತು ಶ್ರಾವಣ, ಶ್ರವಿಷ್ಠ, ಶತಭಿಷಕ್ ಪೂರ್ವಾಷ್ಠಪದು, ಉತ್ರಾಷ್ಠಪದ, ರವತ: ಹೀಗೆ ನಕ್ಷತ್ರನಾಮಗಳು, ಕೆಲವರು “ಚುಚೇಲಾನಿ ಪ್ರೋಕ್ತಾ” ಇತ್ಯಾದಿ ಜ್ಯೋತಿಷಗ್ರಂಥೋಕ್ತ " ಅವಕ-ಹಡ”, ಚಕ್ರಾನುಸಾರ “ಚೂಡಾಮಣಿ, ಚೇದೀಶ, ಚೋಲೇಶ, ಲಕ್ಷ್ಮಣ” ಇತ್ಯಾದಿಗಳು ನಕ್ಷತ್ರನಾಮಗಳೆಂದು ಹೇಳುವರು. ಇದು ಶೌತಗ್ರಂಥಾದಿ ಬಹುಗ್ರಂಥಗಳಿಗೆ ಸಮ್ಮತವಾದದ್ದಲ್ಲ. ಸಾಂಖ್ಯಾಯನರು ಹಾಗೂ ಕಾತ್ಯಾಯನರು ಕೃತಿಕಾನಕ್ಷತ್ರದಲ್ಲಿ ಜನಿಸಿದವರಿಗೆ “ಅಗ್ನಿಶರ್ಮಾ” ಇತ್ಯಾದಿ ನಕ್ಷತ್ರ ದೇವತಾಸಂಬಂಧವಾದ ನಾಮಗಳನ್ನಿಡುತ್ತಾರೆ. ನಾಕ್ಷತನಾಮವು ಅಭಿವಾದನದಲ್ಲಿ ಯುಕ್ತವಾದದ್ದು ಮತ್ತು ಗುಪ್ತವಾದದ್ದು. ಮೌಂಜೀಬಂಧನದ ವರೆಗೆ ಮಾತಾಪಿತೃಗಳ ಹೊರತು ಅನ್ಯರಿಗೆ ಅದು ತಿಳಿಯಬಾರದು. ಇನ್ನು ನಾಲ್ಕನೇ “ವ್ಯಾವಹಾರಿಕನಾಮ.” ಅದು " ಕ ವರ್ಗಾದಿ"ಗಳಲ್ಲಿ ಮೂರನೇ, ನಾಲ್ಕನೇ, ಐದನೇ, ವರ್ಣ, ಮತ್ತು ಹಕಾರ ಇವುಗಳಲ್ಲಿ ಯಾವದಾದರೊಂದು ಪ್ರಥಮಾಕ್ಷರವಾಗಿರಬೇಕು. ಯ,ರ,ಲ,ವ ಇವುಗಳಲ್ಲಿ ಯಾವದಾದರೊಂದು ಮಧ್ಯದಲ್ಲಿರಬೇಕು. ಋ, ಶ್ರೀ ವರ್ಣರಹಿತವಾಗಿರಬೇಕು. ಅಂತ್ಯದಲ್ಲಿ ವಿಸರ್ಗವಿರುವ, ಪಿತೃ, ಪಿತಾಮಹ, ಪ್ರಪಿತಾಮಹಾದಿಗಳಲ್ಲಿ ಯಾವನನ್ನಾದರೂ ಸತ್ನಿಸುವಂತಿರುವ, ಶತ್ರುವಾಚಕಕ್ಕೆ ಹೊರತಾದ, ತದ್ದಿತ ಪ್ರತ್ಯಯರಲ್ಲದ, ಕೃತ್‌ ಪ್ರತ್ಯಯಾಂತವಾದದ್ದಿರಬೇಕು. ಪುರುಷರಿಗೆ ಯುಗ್ಯಾಕ್ಷರ, ಸ್ತ್ರೀಯರಿಗೆ ಅಯುಾಕ್ಷರ, ಈ ಲಕ್ಷಣದಿಂದ ಕೂಡಿದ ಹೆಸರಿಡಬೇಕು. ಹೇಗಂದರ “ದೇವ, ಹರಿ:” ಇತ್ಯಾದಿ. ಹೇಳಿದ ಎಲ್ಲ ಲಕ್ಷಣಗಳ ಅಭಾವದ ಪುರುಷರಿಗೆ ಸರಿ ಅಕ್ಷರದ, ಸ್ತ್ರೀಯರಿಗೆ ಮಿಗಿಲು ಅಕ್ಷರದ ಹೆಸರನ್ನಿಡತಕ್ಕದ್ದು, ಹೇಗೆಂದರೆ, ಪುರುಷರಿಗೆ " ರುದ್ರ, ರಾಜ ಇತ್ಯಾದಿ. ಇಲ್ಲಿ ಅಕ್ಷರವೆಂದರೆ ಪರಿಚ್ಛೇದ - ೩ ಪೂರ್ವಾರ್ಧ ೨೧೫ “ಸ್ವರ” ಎಂದು ತಿಳಿಯಬೇಕು. ಹೇಳಿದ ಸಂಖ್ಯೆಗಳಲ್ಲಿ “ವ್ಯಂಜನವನ್ನು ಹಿಡಿಯತಕ್ಕದ್ದಲ್ಲ. ಇದರಲ್ಲಿ ವಿಶೇಷವೇನೆಂದರೆ ಪ್ರತಿಷ್ಠಾಕಾಮನಾದವನು ಎರಡಕ್ಷರ ಯುಕ್ತನೂ, ಬ್ರಹ್ಮವರ್ಚಸ ಕಾಮನಾದವನು ನಾಲ್ಕಕ್ಷರಯುಕ್ತನೂ ಆಗತಕ್ಕದ್ದು. ತುದಿಯಲ್ಲಿ ‘ರ’ಕಾರ, ‘ಲ’ಕಾರಗಳಿರಬಾರದು. ಇನ್ನು ಆಪಸ್ತಂಬ, ಹಿರಣ್ಯಕೇಶೀಯ ಸೂತ್ರದಲ್ಲಿ ಆದಿಯಲ್ಲಿ ಪ್ರಾತಿಪದಿಕ (ಶಬ್ದ), ತುದಿಯಲ್ಲಿ ಧಾತುಪ್ರತ್ಯಯ ಹೀಗಿರಬೇಕು. ಹೇಗಂದರೆ `ಸ್ತ್ರೀಗೆ “ಹಿರಣ್ಯದಾ” ಇತ್ಯಾದಿ, ಅಥವಾ ವಿಸರ್ಗಾಂತವಾಗಿರಬೇಕು. ಹೇಗಂದರೆ “ಸುಶ್ರೀಃ” ಹೀಗೆ ವಿಶೇಷ ಹೇಳಿದೆ. ವ್ಯಾವಹಾರಿಕ ನಾಮದ ಅಂತ್ಯದಲ್ಲಿ ‘ಶರ್ಮ’ ಎಂದಾಗಲೀ, ‘ದೇವ’ ಎಂದಾಗಲೀ ಇರತಕ್ಕದ್ದು. ಕ್ಷತ್ರಿಯರಿಗೆ ‘ವರ್ಮ’ ಅಥವಾ ‘ರಾಜ’ ಎಂದಿರತಕ್ಕದ್ದು. ವೈಶ್ಯರಿಗೆ ‘ಗುಪ್ತ’ ಅಥವಾ ‘ದಾಸ’, ಶೂದ್ರರಿಗೆ ‘ದಾಸ’ ಹೀಗೆ ಅಂತ್ಯಪದವಿರತಕ್ಕದ್ದು. (ಸಂಕೇತ ನಾಮ) ವ್ಯಾವಹಾರಿಕ ನಾಮವನ್ನು ಪ್ರಾಸಾದ ಮೊದಲಾದವುಗಳು ದೇವಾಲಯಾದಿಗಳು, ಗಜ, ಅಶ್ವ, ವೃಕ್ಷ, ಬಾವಿ, ಕೆರೆ, ಎಲ್ಲ ಪಟ್ಟಣಗಳು ಇತ್ಯಾದಿಗಳ ಪರ್ಯಾಯ ಹೆಸರುಗಳಿಂದ ಪುರುಷರಿಗಾಗಲೀ, ಸ್ತ್ರೀಯರಿಗಾಗಲೀ ಹೆಸರಿಸಿ ಕರೆಯಬಹುದು. ಕಾವ್ಯಾದಿಗಳ, ಕವಿಗಳ, ಪಶು ಮೊದಲಾದವುಗಳ, ರಾಜಪ್ರಾಸಾದ, ಯಜ್ಞ ಮೊದಲಾದ ಅಂಕಿತದಿಂದಲೂ ಕರೆಯಬಹುದು. ಹೀಗೆ ವಚನವಿದೆ. ಪ್ರಯೋಗ ವಿಷಯದಲ್ಲಿ ವಿಶೇಷ ಗರ್ಭಾಧಾನಾದಿ ಸಂಸ್ಕಾರ ಲೋಪವಾಗಿದ್ದರೆ ಪ್ರತ್ಮಕವಾಗಿ ‘ಪಾದಕೃಚ್ಛ ಬುದ್ಧಿಪೂರ್ವಕ ಮಾಡಿರದಿದ್ದಲ್ಲಿ “ಅರ್ಧಕೃಜ್ಞ” ಪ್ರಾಯಶ್ಚಿತ್ತ ಮಾಡಬೇಕು. “ಜಾತಕರ್ಮ"ವನ್ನು ಕಾಲಾತಿಪತ್ತಿ ನಿಮಿತ್ತಕ’ವಾದ ಆಜ್ಯಹೋಮ ಪೂರ್ವಕವಾಗಿ ಮಾಡತಕ್ಕದ್ದು. ಹೇಗಂದರೆ - “ಕಾಲಾತಿಪತ್ತಿನಿಮಿತ್ತಕ ದೋಷಪರಿಹಾರದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾಯಶ್ಚಿತ್ತ ಹೋಮಂ ಕರಿಷ್ಯ” ಹೀಗೆ ಸಂಕಲ್ಪಿಸುವದು. ಅಗ್ನಿಸ್ಥಾಪನ, ಇಧ್ಯಾಧಾನ ಮೊದಲಾದ ಪಾಕಯಜ್ಞ ತಂತ್ರಸಹಿತವಾಗಿಯಾಗಲೀ, ವಟ್ಟಸ್ಥಾಪನ, ಆಜ್ಯಸಂಸ್ಕಾರ, ಪಾತ್ರ ಸಂಸ್ಕಾರ ಮಾತ್ರಸಹಿತವಾಗಿಯಾಗಲೀ “ಓಂ ಭೂರ್ಭುವಃಸ್ವಃಸ್ವಾಹಾ” ಹೀಗೆ ಸಮಸ್ತವ್ಯಾಹೃತಿಯಿಂದ ಆಜ್ಯಹೋಮವನ್ನು ಮಾಡತಕ್ಕದ್ದು, ಈ ಪ್ರಾಯಶ್ಚಿತ್ತ ಹೋಮವನ್ನು ಮುಗಿಸಿ, “ಗರ್ಭಾಧಾನ, ಪುಂಸವನ, ಅನವಲೋಭನ, ಸೀಮಂತೋನ್ನಯನ, ಲೋಪಜನಿತದೋಷ ಪರಿಹಾರದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ವಿತಾವತಃ ಪಾದಕೃಚ್ಛಾನ್ (ಬುದ್ಧಿಪೂರ್ವಕ ಲೋಪದಲ್ಲಿ) ಅರ್ಧಕೃಚ್ಛಾನ್ ತತ್ಯಾಮ್ನಾಯ ಗೋನಿಯೀಭೂತ ಯಥಾಶಕ್ತಿರಜತ ದ್ರವ್ಯದಾನೇನ ಅಹಮಾಚರಿ ಹೀಗೆ ಸಂಕಲ್ಪ ಮಾಡಿ, ದಾನಮಾಡತಕ್ಕದ್ದು. ಜಾತಕರ್ಮ-ನಾಮಕರಣಗಳನ್ನು ಕೂಡಿಮಾಡಿದಲ್ಲಿ ಪೂರ್ವೋಕ್ತ ಜಾತಕರ್ಮ ಸಂಕಲ್ಪವಾಕ್ಯವನ್ನುಚ್ಚರಿಸಿ ಅಕುಮಾರಸ್ಯ ಆಯುರಭಿವೃದ್ಧಿ, ವ್ಯವಹಾರಸಿದ್ಧಿ, ಬೀಜಗರ್ಭಸಮುದ್ರವೈನೋ ನಿಬರ್ಹಣದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ನಾಮಕರ್ಮ ತಂತ್ರಣ ಕರಿ ಹೀಗೆ ಸಂಕಲ್ಪಿಸಿ ಸ್ವಸ್ತಿವಾಚನಾದಿಗಳನ್ನು ಮಾಡತಕ್ಕದ್ದು. ಅದರಲ್ಲಿ “ಜಾತಕರ್ಮ- ಕಾಮಕರ್ಮಗೋ: ಪುಣ್ಯಾಹಂ ಸಂತೋ ಬ್ರುವಂತು” ಹೀಗೆ ಹೇಳಿ “ಆ ಕುಮಾರಸ್ಯ ಜಾತಕರ್ಮಣೇ ಆ ಚ ಸ್ವಸ್ತಿ ಭವಂತೋ ಬುವಂತು” ವಿಪ್ರರ ಪ್ರತಿವಚನವೂ ಇದರಂತೆಯೇ ಇರತಕ್ಕದ್ದು, ಕೇವಲ ನಾಮಕರಣ ಮಾಡುವದಿದ್ದಲ್ಲಿ ೨೧೬ ಧರ್ಮಸಿಂಧು “ನಾಮಕರ್ಮಣಃ ಪುಣ್ಯಾಹಂ” ಹೀಗೆ ಹೇಳಿ ಸ್ವಸ್ತಿ ಪರ್ಯಾಯದಲ್ಲಿ ಅಮುಕ ನಾಮ್ನ ಅಚ ಸ್ವಸ್ತಿ ಭವಂತೋ ಬ್ರವತು” ಹೀಗೆ ಹೇಳತಕ್ಕದ್ದು, ಬ್ರಾಹ್ಮಣರಾದರೂ “ಅಮುಕನಾಯ್ಕ ಅಸ್ವಸ್ ಹೀಗೆ ಹೇಳುವದು. ಹೆಸರು ಬರೆಯುವಾಗ ಮೂರು ನಾಮಗಳಲ್ಲಿ “ಶರ್ಮಾ"ದಿ ಪದಗಳನ್ನು ಬರೆಯದೆ ವ್ಯಾವಹಾರಿಕ ನಾಮವನ್ನು ಶರ್ಮಾದಿಸಹಿತ ಬರೆಯತಕ್ಕದ್ದು. ಅಭಿವಾದನದಲ್ಲಿ ನಾಕ್ಷತನಾಮವನ್ನಾದರೂ “ಶರ್ಮಾ"ಇತ್ಯಾದಿ ಪದಸಹಿತವಾಗಿ ಎಲ್ಲ ಕಡೆಯಲ್ಲುಚ್ಚರಿಸುವದು. ಉಳಿದ ಪ್ರಯೋಗಗಳನ್ನು ಪ್ರಯೋಗ ಗ್ರಂಥಗಳಿಂದ ತಿಳಿಯತಕ್ಕದ್ದು. ಸ್ತ್ರೀಯರ ನಾಮಕರಣ ಸಂಕಲ್ಪದಲ್ಲಿ ‘ಅಸ್ಕಾ: ಕುಮಾರ್ಯಾಃ’ ಹೀಗೆ ವಿಶೇಷವು. ಪುಣ್ಯಾಹದಲ್ಲಿ ‘ಏತನ್ಮಾಮ್ಮೆ, ಅಸ್ವಸ್ತಿ’ ಇತ್ಯಾದಿ. ‘ಭಕ್ತ’ ಈ ಸ್ಥಾನದಲ್ಲಿ ‘ಭಕ್ತಾ’ ಹೀಗೆ ಆಕಾರಾಂತವು. ಮಾಸನಾಮಗಳಲ್ಲಿ ‘ಸುಚಣಿ, ವೈಕುಂಠಿ, ವಾಸುದೇವೀ ಹೀಗೆ ಮೂರು ಈ ಕಾರಾಂತಗಳು, ಉಳಿದವೆಲ್ಲ ಆ ಕಾರಾಂತಗಳು, ‘ಹರಿ’ ಎಂಬುದು ಇದ್ದಂತೆಯೇ, ನಾಕ್ಷತ್ರನಾಮಗಳಲ್ಲಿ ರೋಹಿಣೀ, ಕೃತ್ತಿಕಾ ಇತ್ಯಾದಿಗಳೆಲ್ಲ ಇದ್ದಂತೆಯೇ ಹೇಳತಕ್ಕದ್ದೆಂದು’ಮಾತೃದತ್ತ’ನ ಮತವು ‘ಆಶ್ವಲಾಯನ’ನರು ಸ್ತ್ರೀಯರಿಗೆ ನಾಕ್ಷತ್ರನಾಮವನ್ನಿಡಬಾರದು, ಎಂದಿದೆ. ವ್ಯಾವಹಾರಿಕದಲ್ಲಿ ‘ಯಜ್ಞದಾಶರ್ಮಾ’ ಇತ್ಯಾದಿ ಪುರುಷರಂತಯೇ ಹೆಸರನ್ನಿಡಬೇಕೆಂದಿದೆ. ಪೂಜಾದಿಗಳನ್ನು ಸ್ತ್ರೀಯರಿಗೆ ವೈದಿಕಮಂತ್ರರಹಿತವಾಗಿ ಉಳಿದೆಲ್ಲವುಗಳನ್ನು ಪುರುಷರಂತೆಯೇ ಮಾಡತಕ್ಕದ್ದು, ತಂದೆಯು ಸನ್ನಿಧಿಯಲ್ಲಿಲ್ಲದಾಗ ಸ್ತ್ರೀ- ಪುರುಷರ ನಾಮಕರಣಗಳನ್ನು ಪಿತಾಮಹಾದಿಗಳು ಮಾಡತಕ್ಕದ್ದು. ಹೀಗೆ ನಾಮಕರಣವು ಆಂದೋಲನ ಈ ಆರೋಹಣ ದುಗ್ಗಪಾನ-ಜಲಪೂಜೆ ಆಂದೋಲಾ(ತೊಟ್ಟಿಲು) ಶಯನಕ್ಕೆ ಪುರುಷರಿಗೆ ಹನ್ನೆರಡನೇದಿನ ಪ್ರಶಸ್ತವು, ಕಣ್ಣಿಗೆ ಹದಿಮೂರನೇದಿನ ಶುಭವು, ನಕ್ಷತ್ರಾದಿಗಳನ್ನು ವಿಚಾರಿಸುವ ಕಾರಣವಿಲ್ಲ. ಹೇಳಿದ ದಿನಗಳಲ್ಲದೆ ಮುಂದೆ ಮಾಡುವದಾದರೆ ಶುಭದಿನಗಳನ್ನು ನೋಡಬೇಕು. ಉತ್ರಾಷಾಢಾ, ಉತ್ರಾಭದ್ರಾ, ರೋಹಿಣೀ, ಹಸ್ತ, ಅಶ್ವಿನೀ, ಪುಷ್ಯ, ರೇವತೀ, ಅನುರಾಧಾ, ಮೃಗಶಿರ, ಚಿತ್ರಾ, ಪುನರ್ವಸು, ಶ್ರವಣ, ಸ್ವಾತಿ ಈ ನಕ್ಷತ್ರಗಳೂ, ಶುಭವಾರಗಳೂ, ರಿಕ್ತಾ ಹೊರತಾದ ತಿಥಿಗಳೂ, ಚಂದ್ರತಾರಾಬಲಗಳೂ ಶುಭವು, ಕುಲಸ್ತ್ರೀಯರು ಆಂದೋಲಾಶಯನವನ್ನು ಮಾಡತಕ್ಕದ್ದು. ಮೂವತ್ತೊಂದನೇದಿನ ಅಥವಾ ದ್ವಿತೀಯ ಜನ್ಮನಕ್ಷತ್ರದಲ್ಲಿ, ದೋಲಾರೋಹಣ ನಕ್ಷತ್ರಗಳಲ್ಲಿ, ಪೂರ್ವಾಹ್ನ ಅಥವಾ ಮಧ್ಯಾಹ್ನದಲ್ಲಿ ಕುಲದೇವತಾ ಬ್ರಾಹ್ಮಣಾದಿಗಳನ್ನು ಪೂಜಿಸಿ, ಶಂಖದಿಂದ ಗೋವಿನಹಾಲನ್ನು ಕುಡಿಸುವದು. ಹೀಗೆ ‘ದುಗ್ರಪಾನ’ದ ವಿಧಿಯಿದೆ. ಹಡದ ಸ್ತ್ರೀಯು ತಿಂಗಳು ಕಳೆದಮೇಲೆ ಬುಧ, ಚಂದ್ರ, ಗುರುವಾರಗಳಲ್ಲಿ, ರಿಕ್ಷಾ ಹೊರತಾದ ತಿಥಿಗಳಲ್ಲಿ, ಶ್ರವಣ, ಪುಷ್ಯ, ಪುನರ್ವಸು, ಮೃಗಶಿರ, ಹಸ್ತ, ಮೂಲಾ, ಅನುರಾಧಾ ನಕ್ಷತ್ರಗಳಲ್ಲಿ ಜಲಸ್ಥಾನಕ್ಕೆ ಹೋಗಿ ‘ಜಲಪೂಜೆ’ಯನ್ನು ಮಾಡಬೇಕು. ಇದಕ್ಕೆ ಗುರು-ಶುಕ್ರಾಸ್ತ್ರ, ಚೈತ್ರ-ಪುಷ್ಯ ಅಧಿಕಮಾಸಗಳು ವರ್ಜಗಳು, ಹೀಗೆ ಜಲಪೂಜಾವಿಧಿ. ಸೂರ್ಯಾವಲೋಕನ, ನಿಮ್ಮಮಣ, ಭೂಮ್ಯುಪವೇಶನ, ಅನ್ನಪ್ರಾಶನಗಳು ಮೂರನೇ ತಿಂಗಳಲ್ಲಿ ಸೂರ್ಯನ ಅವಲೋಕನ ಮಾಡುವದು. ನಾಲ್ಕನೇ ತಿಂಗಳಲ್ಲಿ ಪರಿಚ್ಛೇದ • ೩ ಪೂರ್ವಾರ್ಧ ೨೧೭ ಅಥವಾ ಅನ್ನಪ್ರಾಶನಕಾಲದಲ್ಲಿ “ನಿಮ್ಮಮಣ"ವಿಧಿಯನ್ನು ಮಾಡತಕ್ಕದ್ದು, ಇದಕ್ಕೆ ಶುಕ್ಲಪಕ್ಷ, ಬಹುಳದಲ್ಲಿ ದಶಮಿಯ ವರೆಗೆ ಶುಭವು, ರಿಕ್ತಾ, ಷಷ್ಠಿ, ಅಷ್ಟಮೀ, ಅಮಾವಾಸ, ದ್ವಾದಶೀ ತಿಥಿಗಳು ವರ್ಜಗಳು, ಗುರು, ಶುಕ್ರ, ಬುಧವಾರಗಳು ಶ್ರೇಷ್ಠಗಳು, ಅಶ್ವಿನೀ, ರೋಹಿಣೀ, ಮೃಗಶಿರ, ಪುಷ್ಯ, ಉತ್ತರಾತ್ರಯ, ಹಸ್ತ, ಧನಿಷ್ಠಾ, ಶ್ರವಣ, ರೇವತೀ, ಪುನರ್ವಸು, ಅನುರಾಧಾ ನಕ್ಷತ್ರಗಳು ಪ್ರಶಸ್ತಿಗಳು. ಈ ‘ನಿಷ್ಕ ಮಣ ‘ಸಂಸ್ಕಾರವು ನಿತ್ಯ ಹಾಗೂ ಕಾಮ್ಯವಾಗಿದೆ. ಸೂರ್ಯಾವಲೋಕನ, ನಿಷ್ಟ್ರಮಣಗಳಿಗೆ ನಾಂದೀಶ್ರಾದ್ಧವು ಕೃತಾಕೃತವು. ‘ಭೂಮ್ಯುಪವೇಶನ’ವನ್ನು ಐದನೇ ತಿಂಗಳಲ್ಲಿ ನಿಷ್ಕಮಣೋಕ್ತ ತಿಥ್ಯಾದಿಗಳಲ್ಲಿ, ಅಂಗಾರಕಬಲವಿರುವಾಗ ಮಾಡತಕ್ಕದ್ದು. ‘ಭೂಮ್ಯುವವೇಶನ’ ಅಂದರೆ ಪ್ರಥಮವಾಗಿ ಶಿಶುವನ್ನು ಭೂಮಿಯಮೇಲಿಡುವದು. ಇನ್ನು ಅನ್ನಪ್ರಾಶನ-ಷಷ್ಟ, ಅಷ್ಟಮ, ದಶಮ, ದ್ವಾದಶಮಾಸ ಅಥವಾ ಸಂವತ್ಸರವು ಪೂರ್ಣವಾದಮೇಲೆ ಪುರುಷ ಶಿಶುವಿಗೆ” ಅನ್ನಪ್ರಾಶನ ಮಾಡಿಸುವದು. ಸ್ತ್ರೀಶಿಶುವಿಗೆ ಪಂಚಮ, ಸಪ್ತಮ, ನವಮ ಮಾಸಗಳು ಶ್ರೇಷ್ಠಗಳು. ದ್ವಿತೀಯಾ, ತೃತೀಯಾ, ಪಂಚಮೀ, ಸಪ್ತಮೀ, ದಶಮೀ, ತ್ರಯೋದಶೀ ಇವು ಅನ್ನಪ್ರಾಶನೆಗೆ ಪ್ರಶಸ್ತವು, ಬುಧ, ಗುರು, ಶುಕ್ರವಾರಗಳು ಶುಭವು, ರವಿ, ಚಂದ್ರವಾರಗಳೂ ಅಡ್ಡಿ ಇಲ್ಲವೆಂದು ಕೆಲವರ ಮತವು. ಅಶ್ವಿನಿ, ರೋಹಿಣಿ, ಮೃಗಶಿರ, ಪುನರ್ವಸು, ಪುಷ್ಯ, ಉತ್ತರಾತ್ರಯ, ಹಸ್ತ, ಚಿತ್ರಾ, ಸ್ವಾತಿ, ಅನುರಾಧಾ, ಶ್ರವಣ, ಧನಿಷ್ಠಾ, ಶತಭಿಷ, ರೇವತಿ ಇವು ಶುಭಕರಗಳು, ಜನ್ಮನಕ್ಷತ್ರವು ಅಶುಭವೆಂದು ಕೆಲವರನ್ನುವರು. ಭದ್ರ, ವೈಧೃತಿ, ವ್ಯತಿಪಾತ, ಗಂಡ, ಅತಿಗಂಡ, ವಜ್ರ, ಶೂಲ, ಪರಿಘ ಈ ಯೋಗಗಳು ಅಶುಭವು, ವಿಷ್ಣು, ಶಿವ, ಚಂದ್ರ, ಸೂರ್ಯ, ದಿಕ್ಷಾಲಕರು, ಭೂಮಿ, ದಿಕ್ಕುಗಳು, ಬ್ರಾಹ್ಮಣ ಇವರನ್ನು ಪೂಜಿಸಿ ತಾಯಿಯ ತೊಡೆಯಲ್ಲಿ ಶಿಶುವನ್ನು ಕೂಡ್ರಿಸಿ, ಬಂಗಾರ ಅಥವಾ ಕಂಚಿನ ಪಾತ್ರೆಯಲ್ಲಿ ಮೊಸರು, ಜೇನುತುಪ್ಪ, ತುಪ್ಪಗಳಿಂದ ಯುಕ್ತವಾದ ಪಾಯಸವನ್ನು, ಹಸ್ತದಲ್ಲಿ ಬಂಗಾರವನ್ನಿಟ್ಟುಕೊಂಡು ಪ್ರಾಶನ ಮಾಡಿಸತಕ್ಕದ್ದು. ಶಿಷ್ಟರಾದವರು ಸೂರ್ಯಾವಲೋಕನಾದಿ ಅನ್ನಪ್ರಾಶನಾಂತ ಕಾರ್ಯವನ್ನು ಅನ್ನಪ್ರಾಶನ ಕಾಲದಲ್ಲಿ ಕೂಡಿಮಾಡುವದು ಕಂಡುಬರುತ್ತದೆ. ಈ ಸಹ ಪ್ರಯೋಗ, ಸಂಕಲ್ಪ ಇತ್ಯಾದಿಗಳನ್ನು ಕೌಸ್ತುಭಾದಿಗಳಲ್ಲಿ ನೋಡತಕ್ಕದ್ದು. ಅನ್ನಪ್ರಾಶನಾನಂತರ ಕೆಲ ಕರ್ತವ್ಯವಿದೆ. ಶಿಶುವಿನ ಮುಂಗಡೆಯಲ್ಲಿ ಅನೇಕ ಶಿಲ್ಪವನ್ನು ಹಾಗೂ ಶಸ್ತ್ರ, ವಸ್ತ್ರಾದಿ ವಸ್ತು ಇವುಗಳನ್ನಿಟ್ಟು ಲಕ್ಷಣವನ್ನು ನೋಡತಕ್ಕದ್ದು. ಅವುಗಳಲ್ಲಿ ಶಿಶುವು ಯಾವ ವಸ್ತುವನ್ನು ಮೊದಲು ಮುಟ್ಟುವದೋ ಆ ವಸ್ತುಮೂಲಕ ಮುಂದೆ ಜೀವಿಸುವದು. “ಪುಸ್ತಕ” ಇದನ್ನು ಮೊದಲು ಸ್ವರ್ಶಮಾಡಿದರೆ ಗ್ರಂಥಮೂಲಕವಾಗಿ ಜೀವಿಸುವದು; ಎಂದರ್ಥ. ಅನ್ನಪ್ರಾಶನಾಂತ ಸಂಸ್ಕಾರಗಳಲ್ಲಿ ಮಲಮಾಸ, ಗುರು-ಶುಕ್ರಾಸ್ತ್ರ ಮೊದಲಾದ ದೋಷಗಳಿಲ್ಲ ಎಂಬ ಉಕ್ತಿಯಿದೆ. ಆದರೆ ಶುದ್ದ ಕಾಲದಲ್ಲಿ ಅದು “ಅಸಂಭವವಾದಲ್ಲಿ ಮಾತ್ರ” ಎಂದು ತಿಳಿಯುವದು. ಯಾಕೆಂದರೆ ಕಾಲಾವಕಾಶವಿದೆ. ಹೇಗೆಂದರೆ ಆರನೇ ತಿಂಗಳಲ್ಲಿ ಆ ದೋಷವಿದ್ದರೆ ಅಪ್ಪಮಾದಿ ಶುದ್ಧಮಾಸವಿದ್ದೇ ಇದೆ. ಹೀಗೆ ಸೂರ್ಯಾವಲೋಕನ, ನಿಮ್ಮ ಮಣ, ಭೂಮ್ಯುಪವೇಶನ, ಅನ್ನಪ್ರಾಶನಗಳು, ೨೧೮ ಧರ್ಮಸಿಂಧು ಕರ್ಣವೇಧ (ಕಿವಿಚುಚ್ಚುವದು) ಕಿವಿಚುಚ್ಚುವದು: ಹತ್ತನೇ, ಹನ್ನೆರಡನೇ ಅಥವಾ ಹದಿನಾರನೇ ದಿನ, ಆರನೇ, ಏಳನೇ ಎಂಟನೇ ಅಥವಾ ಹತ್ತನೇ ತಿಂಗಳಲ್ಲಿ ಇಲ್ಲವೆ ಹನ್ನೆರಡನೇ ತಿಂಗಳಲ್ಲಿ, ಪ್ರಥಮ ಅಥವಾ ಮೂರನೇ ವರ್ಷದಲ್ಲಿ “ಕರ್ಣವೇಧನ” ಮಾಡುವದು, ಸ್ತ್ರೀ ಮತ್ತು ಪುರುಷ ಇಬ್ಬರಿಗೂ ಸಮವರ್ಷಗಳಲ್ಲಿ ಮಾಡಬಾರದು. ಮೂರು ಮೊದಲಾದ ವಿಷಮ ವರ್ಷಗಳಲ್ಲಾದರೂ, ಕಾರ್ತಿಕ, ಪುಷ್ಯ, ಚೈತ್ರ, ಫಾಲ್ಗುಣ ಮಾಸಗಳು ಶುಭವು, ಶುಕ್ಲಪಕ್ಷ ಉತ್ತಮ. ಜನ್ಮಮಾಸವು ನಿಷಿದ್ಧ. ಭದ್ರಾಯೋಗ, ವಿಷ್ಣು ಶಯನಮಾಸ (ಆಷಾಢಕಾದಶಿಯಿಂದ ಕಾರ್ತಿಕ ಶುಕ್ಲಕಾದಶಿವರೆಗೆ) ನಿಷಿದ್ದ. ಹಿಂದೆ ಕಾರ್ತಿಕವು ಶುಭವೆಂದು ಹೇಳಿದ್ದು ಏಕಾದಶೀ ನಂತರವೇ ಎಂದು ತಿಳಿಯುವದು. ಇನ್ನು ಕೆಲವರು “ಮೀನ-ಚೈತ್ರ " “ಧನು-ಪುಷ್ಯ"ಗಳು ನಿಷಿದ್ದಗಳೆಂದು ಹೇಳುವರು. ಕರ್ಣವೇಧಕ್ಕೆ ದ್ವಿತೀಯಾ, ತೃತೀಯಾ, ಪಂಚಮಿ, ಷಷ್ಟಿ, ಸಪ್ತಮೀ, ದ್ವಾದಶೀ, ತ್ರಯೋದಶೀ ಈ ತಿಥಿಗಳು ಪ್ರಶಸ್ತ್ರಗಳು, ಚಂದ್ರ, ಬುಧ, ಗುರು, ಶುಕ್ರವಾರಗಳು ಶುಭ, ಪುಷ್ಯ, ಪುನರ್ವಸು, ಮೃಗಶಿರಾ, ಉತ್ತರಾತ್ರಯ, ಹಸ್ತ, ಚಿತ್ರಾ, ಅಶ್ವಿನಿ, ಶ್ರವಣ, ರೇವತಿ, ಧನಿಷ್ಠಾ ನಕ್ಷತ್ರಗಳು ಶುಭಗಳು. ವಿಷ್ಣು, ರುದ್ರ, ಬ್ರಹ್ಮ, ಸೂರ್ಯ, ಚಂದ್ರ, ದಿಕ್ಕಾಲ, ಅಶ್ವಿನೀದೇವತಾ, ಸರಸ್ವತೀ, ಗೋವು ಬ್ರಾಹ್ಮಣ, ಗುರು ಇವರನ್ನೆಲ್ಲ ಪೂಜಿಸಿ, ಕಿವಿಗೆ ಅರಗಿನ ರಸವನ್ನು ಹಚ್ಚಿ ಪುರುಷನಿಗೆ ಮೊದಲು ಬಲದ ಕಿವಿಯನ್ನೂ, ಸ್ತ್ರೀಗೆ ಮೊದಲು ಎಡದ ಕಿವಿಯನ್ನೂ ಚುಚ್ಚುವದು. ಚುಚ್ಚುವ ಸೂಜಿಯು ರಾಜಪುತ್ರರಿಗೆ ಬಂಗಾರದ್ದಿರಬೇಕು, ಬ್ರಾಹ್ಮಣ, ವೈಶ್ಯ ಇವರಿಗೆ ಬೆಳ್ಳಿಯದು, ಶೂದ್ರನಿಗೆ ಕಬ್ಬಿಣದ್ದಿರಬೇಕು. ಆ ಸೂಜಿಯು ಬಾಲಕನ ಅಂಗುಲದಿಂದ ಎಂಟು ಅಂಗುಲ ಪ್ರಮಾಣದ್ದಿರಬೇಕು. ಕಿವಿಯ ಆ ರಂಧ್ರದಲ್ಲಿ ಸೂರ್ಯರಶ್ಮಿಯು ಪ್ರವೇಶಿಸುವಂತಿರಬೇಕು. “ಕರ್ಣವೇಧ” ಸಂಸ್ಕಾರವಿಲ್ಲದವನನ್ನು ನೋಡಿದಲ್ಲಿ ಪೂರ್ವಪುಣ್ಯವು ನಷ್ಟವಾಗುವದು. ಹೀಗೆ ಕರ್ಣವೇಧನವು ದೃಷ್ಟಿ ದೋಷ ರಕ್ಷಾವಿಧಾನ “ವಾನುದೇವೋ ಜಗನ್ನಾಥ: ಪೂತನಾತರ್ಜನೋ ಹರಿಗೆ ರಕ್ಷತು ತ್ವರಿತೋಬಾಲಂ ಮುಂಚೆ ಮುಂಚ ಕುಮಾರಕಗೆ ಕೃಷ್ಣ ರಕ್ಷ ಶಿಶುಂ ಶಂಖ ಮಧುಕೈಟಭ ಮರ್ದನ ಪ್ರಾತಃ ಸಂಗವ ಮಧ್ಯಾಹ್ನ ಸಾಯಾಷುಚ ಸಂಧ್ಯಯೋ:! ಮಹಾನಿ ಸದಾರಕ್ಷ ಕಂಗಾರಿನಿಸೂದನ ಯರಜ: ಪಿಶಾಚಾಂಶ್ಚ ಗ್ರಹಾನ್ ಮಾತೃಗ್ರಹಾಸಪಿ! ಬಾಲಗ್ರಹಾನ್ ವಿಶೇಷಣ ಛಂಧಿ ಇಂದಿ ಮಹಾಭಯಾತ್ ತಾಹಿ ತಾಹಿ ಹರೇ ನಿತ್ಯಂ ತದ್ರಕ್ಷಾ ಭೂಷಿತಃ ಶಿಶುಂ” ಈ ಮಂತ್ರಗಳಿಂದ ವಿಭೂತಿಯನ್ನು ಮಂತ್ರಿಸಿ ಶಿಶುವಿನ ಮೈಗೆ ಲೇಪಿಸಿ ಅಲಂಕರಿಸುವದು. ಅದೇ ಭಸ್ಮದಿಂದ ಶಿರಸ್ಸು, ಹಣೆ ಮೊದಲಾದವುಗಳಲ್ಲಿ ಹಚ್ಚಿ ರಕ್ಷೆ ಮಾಡತಕ್ಕದ್ದು. ಹೀಗೆ “ಪ್ರಯೋಗಸಾರದಲ್ಲಿ ಹೇಳಿದೆ. “ರಕ್ಷ ರಕ್ಷ ಮಹಾದೇವ ನೀಲವ ಜಟಾಧರ ಗೃಹಸು ಸಹಿತೋ ರಕ್ಷ ಮುಂಚ ಮುಂಚ ಕುಮಾರಕಂ” ಈ ಮಂತ್ರವನ್ನು ಭಜಪತ್ರೆಯಲ್ಲಿ ಬರೆದು ಅದನ್ನು ಕೈಗೆ ಕಟ್ಟುವದು ಶಿಶುವು ಬಹುವಾಗಿ ರೋಧನಮಾಡಿದರೆ ಅದರ ಪರಿಹಾರಕ್ಕಾಗಿ “ಮಯೂಖ ದಲ್ಲಿ ಯಂತ್ರವನ್ನು ಹೇಳಿದೆ. ಪಟ್ಟೋಣಮಂಡಲ, ಮಧ್ಯದಲ್ಲಿ ವರ್ತುಲ ಹೀಗೆ ಪದ್ಮವನ್ನು ಬರೆದು, ಮಧ್ಯದಲ್ಲಿ “ಪ್ರೀಂ"ಕಾರ ಬರೆಯಬೇಕು, ಮತ್ತು ಶಿಶುವಿನ ಹೆಸರನ್ನು ಬರೆಯುವದು. ಆರು ದಲಗಳಲ್ಲಿ ಈ “ಓಲುಲುವ ಸ್ವಾಹಾ” ಹೀಗೆ ಆರು ಅಕ್ಷರಗಳನ್ನುಪರಿಚ್ಛೇದ

೩ ಪೂರ್ವಾರ್ಧ ೨೧೯ ಬರೆದು ಹೊರಗೆ ಎರಡು ರೇಖೆಗಳ ವರ್ತುಲವನ್ನು ಬರೆದು, ಅದರ ಹೊರಗೆ ಕೆಳಮುಖಮಾಡಿ ಅರ್ಧಚಂದ್ರಾಕೃತಿಯನ್ನು ಬರೆಯುವದು. ನಂತರ ಪಂಚೋಪಚಾರಗಳಿಂದ ಪೂಜಿಸಿ ಬಾಲಕನ ಕೈಗೆ ಕಟ್ಟಬೇಕು, ಇತ್ಯಾದಿ. ಇನ್ನು ಬಾಲಗ್ರಹಶಾಂತಿ ಹಾಗೂ ಸ್ತೋತ್ರ ಮೊದಲಾದವುಗಳನ್ನು “ಶಾಂತಿ ಕಮಲಾಕರ, ಶಾಂತಿ ಮಯೂಖಇತ್ಯಾದಿ ಗ್ರಂಥಗಳಲ್ಲಿ ನೋಡತಕ್ಕದ್ದು. ವಧಾಪನ ವಿಧಿ ಆಯುರ್ವೃದ್ಧಿಕರವಾದ ಈ “ವರ್ಧಾಪನ ವಿಧಿಯನ್ನು ಸಂವತ್ಸರಪರ್ಯಂತ ಪ್ರತಿತಿಂಗಳ ಜನ್ಮತಿಥಿಯಲ್ಲಿ ಮಾಡತಕ್ಕದ್ದು. ವರ್ಷಾನಂತರ ಪ್ರತಿವರ್ಷದಲ್ಲಿ ಜನ್ಮತಿಥಿಯಲ್ಲಿ ಮಾಡತಕ್ಕದ್ದು. ಎರಡು ತಿಥಿಗಳು ಬಂದರೆ ಯಾವ ದಿನ ಜನ್ಮನಕ್ಷತ್ರಯೋಗವಿದೆಯೋ ಆ ದಿನ ಮಾಡಬೇಕು. ಎರಡೂದಿನ ಜನ್ಮನಕ್ಷತ್ರಯೋಗವಿರಲಿ, ಇಲ್ಲದಿರಲಿ, ಉದಯದಿಂದ ಎರಡು ಮುಹೂರ್ತ ಅಧಿಕವಾದದ್ದರಲ್ಲಿ ಮಾಡುವದು. ದ್ವಿಮುಹೂರ್ತಕ್ಕೆ ಕಡಿಮೆಯಿದ್ದರೆ ಪೂರ್ವದಿನವೇ ಮಾಡತಕ್ಕದ್ದು. ಜನ್ಮಮಾಸವು ಅಧಿಕವಾಗಿ ಬಂದಲ್ಲಿ ಪ್ರತ್ಯಾಬ್ಲಿಕ ಹಾಗೂ ವರ್ಧಾಪನಗಳನ್ನು ಶುದ್ಧಮಾಸದಲ್ಲಿಯೇ ಮಾಡಬೇಕು. ಹೊರತು ಅಧಿಕಮಾಸದಲ್ಲಿ ಮಾಡತಕ್ಕದ್ದಲ್ಲ. ಇದರ ಸಂಕ್ಷೇಪಪ್ರಯೋಗ ಹೇಗಂದರೆ:- “ಆಯುರಭಿವೃಧ್ಯರ್ಥಂ ವರ್ಷವೃದ್ಧಿ ಕರ್ಮಕರಿಷ್ಟೇ” ಹೀಗೆ ಸಂಕಲ್ಪಿಸಿ ತೀಲೋದ್ವರ್ತನಪೂರ್ವಕ ತಿಲೋದಕದಿಂದ ಸ್ನಾನಮಾಡಿ ತಿಲಕಾದಿಗಳನ್ನು ಧರಿಸಿ, ಗುರುವನ್ನು ಪೂಜಿಸಿ, ಅಕ್ಷತರಾಶಿಗಳಲ್ಲಿ ದೇವತೆಗಳನ್ನರ್ಚಿಸತಕ್ಕದ್ದು. ಮೊದಲು “ಕುಲದೇವತಾಯನಮ: ಎಂದು ಕುಲದೇವತೆಯನ್ನಾವಾಹಿಸಿ, ಜನ್ಮನಕ್ಷತ್ರ, ಪಿತೃ, ಪ್ರಜಾಪತಿ, ಭಾನು, ವಿಘೋಶ, ಮಾರ್ಕಂಡೇಯ, ವ್ಯಾಸ, ಜಾಮದಗ್ನ, ರಾಮ, ಅಶ್ವತ್ಥಾಮ, ಕೃಪ, ಬಲಿ, ಪ್ರಹ್ಲಾದ, ಹನುಮಂತ, ವಿಭೀಷಣ, ಷಷ್ಠಿದೇವಿ ಇವುಗಳನ್ನು ನಾಮಮಂತ್ರಗಳಿಂದಾವಾಹಿಸಿ ಪೂಜಿಸತಕ್ಕದ್ದು. ಷಷ್ಠಿದೇವಿಗೆ ಮೊಸರನ್ನ ನೈವೇದ್ಯವು. ಪೂಜೆಯ ಅಂತದಲ್ಲಿ ಚಿರಂಜೀವಿ ಯಥಾತ್ವಂಭೋ ಭವಿಷ್ಯಾಮಿ ತಥಾಮುನೇ ರೂಪವಾನ್ ದಿತ್ತವಾಂಶೈವ ಕ್ರಿಯಾಯುಕ್ತಶ್ಚ ಸರ್ವದಾ| ಮಾರ್ಕಂಡೇಯ ನಮಸ್ತಸು ಸಪ್ತಕಾಂತಜೀವನ! ಆಯುರಾರೋಗ್ಯಸಿಧ್ಯರ್ಥಂ ಪ್ರಸೀದ ಭಗವನ್ನುನೇಚಿರಂಜೀವೀಯಥಾತ್ವಯ ಮುನೀನಾಂ ಪ್ರವರೋದ್ವಿಜ ಕುರುಷ್ಯ ಮುನಿಶಾರ್ದೂಲ ತಥಾ ಮಾಂ ಚಿರಜೀವಿನಂತೆ ಮಾರ್ಕಂಡೇಯ ಮಹಾಭಾಗ ಸಪ್ತಕಾಂತಜೀವನ, ಆಯುರಾರೋಗ್ಯಸಿಧ್ಯರ್ಥಂ ಅಸ್ಮಾಕಂ ವರದೋಭವ” ಹೀಗೆ ಪ್ರಾರ್ಥಿಸುವದು. ಷಷೀದೇವಿಯ ಪ್ರಾರ್ಥನೆ:- “ಜಯದೇವಿ ಜಗನ್ಮಾತಃ ಜಗದಾನಂದಕಾರಿಣೀ ಪ್ರಸೀದ ಮಮಕಲ್ಯಾಣಿ ನಮಸ್ತೇ ಷಷ್ಠಿ ದೇವತೇ ಲೋಕ್ಕೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿಚ ಬ್ರಹ್ಮ ವಿಷ್ಣು ಶಿವೈಸಾರ್ಧಂ ರಕ್ತಾಕುರ್ವಂತು ತಾನಿಮೇ!’’ ಇತ್ಯಾದಿ. ಆಮೇಲೆ ಬೆಲ್ಲ, ಎಳ್ಳುಗಳ ಮಿಶ್ರಣಮಾಡಿದ ಹಾಲನ್ನು ಕುಡಿಯುವದು. ಅದಕ್ಕೆ ಮಂತ್ರ:- “ಸತಿಲಂಗುಡಸಂಮಿಶ್ರಂ ಅಂಜಲ್ಯ ರ್ಧಮಿತಂ ಪಯಃ ಮಾಕಂಡೇಯಾದರಂ ಲಜ್ಞಾಪಿಬಾಮ್ಮಾಯುರ್ವಿವೃದ್ಧಯೇ” ಕೆಲಕಡೆಯಲ್ಲಿ ಪೂಜಿಸಿದ ಹದಿನಾರು ದೇವತೆಗಳಿಗಾಗಿ ಪ್ರತ್ಯೇಕ ನಾಮಮಂತ್ರದಿಂದ ಇಪ್ಪತ್ತೆಂಟು ಸಂಖ್ಯೆಯಿಂದ ತಿಲಹೋಮವನ್ನು ಹೇಳಿದೆ. ನಂತರ ಬ್ರಾಹ್ಮಣಭೋಜನವು, ಆ ದಿನದಲ್ಲಿ ಉಗುರು, ಕೇಶಗಳನ್ನು ಕತ್ತರಿಸಬಾರದು. ಮೈಥುನ ಮತ್ತು ದೂರಪ್ರವಾಸಗಳನ್ನು ಬಿಡಬೇಕು. ಮಾಂಸ, ಕಲಹ, ಹಿಂಸೆ ಇತ್ಯಾದಿಗಳನ್ನು ೨೨೦ ಧರ್ಮಸಿಂಧು ಮಾಡಬಾರದು. ಮರಣ, ಜನ್ಮ, ದಿನಗಳಲ್ಲಿ ಮತ್ತು ಸಂಕ್ರಾಂತಿದಿನದಲ್ಲಿ, ಶ್ರಾದ್ಧದಲ್ಲಿ, ಹುಟ್ಟಿದ ದಿನದಲ್ಲಿ, ಅಸ್ಪಶ್ಯರ ಸ್ಪರ್ಶದಲ್ಲಿ ಬಿಸಿನೀರಿನಿಂದ ಸ್ನಾನಮಾಡಬಾರದು. ಚೌಲಸಂಸ್ಕಾರ ಗರ್ಭದಿಂದ ಅಥವಾ ಜನ್ಮದಿಂದ ಪ್ರಥಮ ಅಥವಾ ದ್ವಿತೀಯ, ತೃತೀಯ, ಪಂಚಮ ವರ್ಷಗಳು ಚೌಲಕ್ಕೆ ಮುಖ್ಯಕಾಲವು, ಅಥವಾ ಉಪನಯನಸಂಗಡ ಮಾಡುವದು ಕುಲಾಚಾರದಂತೆ ಆಚರಿಸತಕ್ಕದ್ದು. ಮಾಘ, ಫಾಲ್ಗುನ, ವೈಶಾಖ, ಜೇಷ್ಠ ಮಾಸಗಳು ಶುಭವು, ಜನ್ಮಮಾಸ, ಅಧಿಕಮಾಸಗಳಲ್ಲಿ ವರ್ಜವು, ಶುಕ್ಲಪಕ್ಷ, ಬಹುಳ ದಶಮಿವರೆಗೆ ಶುಭವು. ದ್ವಿತೀಯಾ, ತೃತೀಯಾ, ಪಂಚಮೀ, ಸಪ್ತಮೀ, ದಶಮೀ, ಏಕಾದಶೀ, ತ್ರಯೋದಶೀ ಇವು ಪ್ರಶಸ್ತಿಗಳು, ಬ್ರಾಹ್ಮಣರಿಗೆ ರವಿವಾರ, ಕ್ಷತ್ರಿಯರಿಗೆ ಕುಜವಾರ, ವೈಶ್ಯ, ಶೂದ್ರರಿಗೆ ಶನಿವಾರಗಳು ಪ್ರಶಸ್ತವು, ಗುರು, ಬುಧ ಶುಕ್ರವಾರಗಳು ಸಕಲರಿಗೂ ಶುಭಗಳು, ಶುಕ್ಲಪಕ್ಷದಲ್ಲಿ ಸೋಮವಾರವಾದರೂ ಶುಭವೇ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಚಿತ್ರಾ, ಸ್ವಾತಿ, ಜೇಷ್ಠಾ, ಶ್ರವಣ, ಧನಿಷ್ಠಾ, ಶತಭಿಷ, ರೇವತಿ ಈ ನಕ್ಷತ್ರಗಳು ಶ್ರೇಷ್ಠಗಳು, ಕ್ಷೌರ, ಪ್ರಯಾಣ, ಔಷಧ ಸೇವನ ಇವುಗಳಿಗೆ ಜನ್ಮನಕ್ಷತ್ರವು ವರ್ಜವು, ಅನುರಾಧಾ, ಕೃತ್ತಿಕಾ, ಉತ್ತರಾತ್ರಯ, ರೋಹಿಣಿ, ಮಘಾ ಈ ನಕ್ಷತ್ರಗಳಲ್ಲಿ ಕ್ಷೌರಮಾಡಿದರೆ ಆಯುಸ್ಸು ಕ್ಷೀಣವಾಗುವದು. ಗುರುವು ಸಿಂಹರಾಶಿಯಲ್ಲಿರುವಾಗ ಚೌಲಾದಿ ಶುಭಕರ್ಮಗಳನ್ನು ಮಾಡಬಾರದು. ತಾಯಿಯು ಗರ್ಭಿಣಿಯಿರುವಾಗ ಕುಮಾರಕನಿಗೆ ಚೌಲವು ನಿಷಿದ್ದವು. ಇದು ಐದು ವರ್ಷಗಳೊಳಗಿನವನಾದರೆ ಮಾತ್ರ. ನಂತರ ಮಾಡುವಲ್ಲಿ ದೋಷವಿಲ್ಲ ಉಪನಯನದ ಸಂಗಡ ಮಾಡಿದಲ್ಲಿಯೂ ದೋಷವಿಲ್ಲ. “ತಾಯಿಯು ಗರ್ಭಿಣಿಯಿರುವಾಗ ಪ್ರತ್ಯೇಕವಾಗಿ ಚೌಲವನ್ನೂ, ಉಪನಯನವನ್ನೂ ಮಾಡಬಾರದು. ಎರಡನ್ನೂ ಕೂಡಿಮಾಡಿದಲ್ಲಿ ಈ ದೋಷವಿಲ್ಲ. ಗರ್ಭಿಣಿಗೆ ಐದು ತಿಂಗಳು ತುಂಬುವವರೆಗೂ ಅಡ್ಡಿ ಇಲ್ಲ. “ಪಂಚಮಾಸಾದಧ ಕುರ್ಯಾತ್ ಅತ ಊರ್ಧ್ವ೦ ನಕಾರಯೇತ್” ಇತ್ಯಾದಿ ಉಕ್ತಿಯಿದೆ. ತಾಯಿಯು ರಜಸ್ವಲೆಯಾದಾಗ ಮತ್ತು ಕುಮಾರಕನು ಜ್ವರಾಗಿ ಪೀಡಿತನಾದಾಗ ಚೌಲವನ್ನು ಮಾಡತಕ್ಕದ್ದಲ್ಲ. ವಿವಾಹ, ಉಪನಯನಗಳಿಗೂ ಈ ನಿಯಮವಿದೆ. ರಜಸ್ವಲೆಯಾದ ತಾಯಿಯು ಶುದ್ಧಳಾದಮೇಲೆ ಮಾಡತಕ್ಕದ್ದೆಂದು ಮನುವಚನವಿದೆ. ನಾಂದೀಶ್ರಾಪ್ತವಾದನಂತರ ರಜಸ್ವಲೆಯಾದರೆ ಶಾಂತಿಯನ್ನು ಮಾಡಿ ಮಾಡತಕ್ಕದ್ದು. ಕೆಲವರು ಬೇರೆ ಮುಹೂರ್ತ ಸಿಗದಿದ್ದಾಗ ನಾಂದಿಯ ಪೂರ್ವದಲ್ಲಿ ರಜಸ್ವಲೆಯಾದರೂ ಶ್ರೀ ಪೂಜನಾದಿ ಶಾಂತಿವಿಧಾನಮಾಡಿ ಮಾಡತಕ್ಕದ್ದನ್ನುವರು. ಸೋದರ ಮಾವ, ಚಿಗಪ್ಪ, ದೊಡ್ಡಪ್ಪ ಮೊದಲಾದವರು ಕರ್ತೃಗಳಾಗಿದ್ದಾಗ ಅವರ ಪತ್ನಿಯರು ರಜಸ್ವಲೆಯಾದರೂ ಮಂಗಲ ಕಾರ್ಯವನ್ನು ಮಾಡಬಾರದೆಂದು “ನಿರ್ಣಯಸಿಂಧು ಮತವು ಮೂರು ತಲೆಮಾರಿನ ಒಳಗಿನ ಕಾಲದಲ್ಲಿ ಮುಂಜಿ, ವಿವಾಹ ರೂಪವಾದ ಮಂಗಲಕಾರ್ಯಗಳು ಜರುಗಿದಾಗ, ಮುಂದೆ ಆರು ತಿಂಗಳುಗಳ ಒಳಗೆ “ಮುಂಡನ” ಸಂಜಿತಗಳಾದ ಚೌಲ, ಉವನಯನಗಳನ್ನು ಮಾಡಬಾರದು, ಸಂಕಟದಕ್ಕೆ ವರ್ಷಭರದಿಂದ ಆರುತಿಂಗಳೊಳಗಾದರೂ ಮಾಡಬಹುದು. ನಾಲ್ಕು ತಲಾಂತರದ ಕುಲದಲ್ಲಿ ಸಪಿಂಡೀಕರಣ, ಮಾಸಿಕಶಾರ, ಪ್ರೇತಕರ್ಮ ಇವು ಮುಗಿದ ಹೊರತು ಬಲ ಮೊದಲಾದ ಮಂಗಲಕಾರ್ಯಗಳನ್ನು ಮಾಡಬಾರದು. ಒಂದೇ ಪರಿಚ್ಛೇದ - ೩ ಪೂರ್ವಾರ್ಧ ೨೨೧ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರಿಗೆ ಸಮಾನ ಸಂಸ್ಕಾರಗಳನ್ನು ಒಂದೇ ವರ್ಷದಲ್ಲಿ ಮಾಡಬಾರದು. (ಇಬ್ಬರಿಗೂ ಚೌಲ, ಇಬ್ಬರಿಗೂ ಉಪನಯನ ಇತ್ಯಾದಿ) ತಾಯಿ ಭಿನ್ನವಾದಲ್ಲಿ ಅಡ್ಡಿ ಇಲ್ಲ. ಪ್ರಾರಂಭವಾದ ನಂತರ ಸೂತಕಪ್ರಾಪ್ತವಾದರೆ ಕೂಣ್ಮಾಂಡಮಂತ್ರಗಳಿಂದ ಹೋಮಿಸಿ ಗೋದಾನಮಾಡಿ, ಚೌಲ, ಉಪನಯನ, ವಿವಾಹಾದಿಗಳನ್ನು ಮಾಡತಕ್ಕದ್ದು. ಈ ವಿಷಯದಲ್ಲಿ ವಿಶೇಷವನ್ನು ಮುಂದೆ ವಿವಾಹಪ್ರಕರಣದಲ್ಲಿ ಹೇಳಲಾಗುವದು. ಚೌಲದ ಕ್ಷೌರದಲ್ಲಿ ಮುಖ್ಯವಾದ ಒಂದು ಶಿಖೆ (ಜುಟ್ಟು)ಯನ್ನು ಬಿಟ್ಟು ಉಳಿದವುಗಳನ್ನು ಪಾರ್ಶ್ವಭಾಗಗಳಲ್ಲಿಡುವದು. ಕುಲಾಚಾರದಂತೆ ಪ್ರವರಸಂಖ್ಯೆಗನುಗುಣವಾಗಿ ಶಿಖೆಗಳನ್ನಿಡತಕ್ಕದ್ದು, ಉಪನಯನ ಕಾಲದಲ್ಲಿ ಮುಖ್ಯ ಶಿಖೆಗೆ ಹೊರತಾದ ಉಳಿದ ಶಿಖೆಗಳನ್ನೆಲ್ಲ ತೆಗೆದು (ವಪನ ಮಾಡಿ ) ಮಧ್ಯಭಾಗದ ಶಿಖೆಯೊಂದನ್ನೇ ಇಟ್ಟುಕೊಳ್ಳುವದು. ಚೌಲಕರ್ಮ, ಜಾತಕರ್ಮಗಳಲ್ಲಿ ಭೋಜನಮಾಡಿದಲ್ಲಿ “ಸಾಂತಪನಕೃಚ್ಛ” ಪ್ರಾಯಶ್ಚಿತ್ತವನ್ನು ಹೇಳಿದೆ. ಉಳಿದ ಸಂಸ್ಕಾರಗಳಲ್ಲಿ ಉಪವಾಸದಿಂದ ಶುದ್ಧಿಯು, ಚೂಡಾಂತ ಎಲ್ಲ ಸಂಸ್ಕಾರಗಳನ್ನು ಸ್ತ್ರೀಯರಿಗೆ ಅಮಂತ್ರಕವಾಗಿ ಮಾಡತಕ್ಕದ್ದು. ಹೋಮವನ್ನು ಮಾತ್ರ ಸಮಂತ್ರಕವಾಗಿಯೇ ಮಾಡಬೇಕು, ಕಲ “ವೃತ್ತಿಕಾರ"ರು ಹೋಮವನ್ನಾದರೂ “ಸಮಂತ್ರಕ ಅಥವಾ ಅಮಂತ್ರಕವಾಗಿ ಮಾಡಬಹುದೆಂದು ವಿಕಲ್ಪದಿಂದ ಹೇಳಿರುವರು. ಹೀಗೆ ಶೂದ್ರನಿಗಾದರೂ ಅಮಂತ್ರಕವಾಗಿ ಚೌಲವನ್ನು ಮಾಡತಕ್ಕದ್ದು. ಈ ಕಾಲದಲ್ಲಿ ಶಿಷ್ಟರು ಸ್ತ್ರೀಯರಿಗೆ ಚೂಡಾದಿಸಂಸ್ಕಾರ ಮಾಡುವದು ಕಂಡುಬರುವದಿಲ್ಲ. ವಿವಾಹ ಕಾಲದಲ್ಲಿ ಚೂಡಾದಿ ಲೋಪಪ್ರಾಯಶ್ಚಿತ್ತವನ್ನು ಮಾತ್ರ ಮಾಡುತ್ತಾರೆ. ಚೌಲವಾದ ನಂತರದಲ್ಲಿ ಮೂರು ತಿಂಗಳ ವರ್ಯಂತ ಸಪಿಂಡರಾದವರು ಪಿಂಡದಾನ, ತಿಲತರ್ಪಣಗಳನ್ನು ಮಾಡಬಾರದೆಂದಿದೆ. ಆದರೆ ಮಹಾಲಯ, ಗಯಾಶ್ರಾದ್ಧ, ತಂದೆ-ತಾಯಿಗಳ ಪ್ರತಿಸಾಂವತ್ಸರಿಕ ಶ್ರಾದ್ಧ ಇವುಗಳಲ್ಲಿ ಪಿಂಡದಾನಾದಿಗಳನ್ನು ಮಾಡತಕ್ಕದ್ದು. ವಿದ್ಯಾರಂಭ ಐದನೇವರ್ಷ ಉತ್ತರಾಯಣವಿರುವಾಗ ಅಕ್ಷರ ಲೇಖನಾರಂಭವನ್ನು ಮಾಡತಕ್ಕದ್ದು. ಕುಂಭಮಾಸದಲ್ಲಿ ಇದು ವರ್ಜವು ಶುಕ್ಲಪಕ್ಷ ಹಾಗೂ ಬಹುಳ ದಶಮಿಯ ವರೆಗೆ ಶುಭವು. ದ್ವಿತೀಯಾ, ತೃತೀಯಾ, ಪಂಚಮೀ, ದಶಮೀ, ಏಕಾದಶೀ, ದ್ವಾದಶೀ, ತ್ರಯೋದಶಿಗಳು ಶುಭವು. ಅಶ್ವಿನಿ, ಮೃಗಶಿರಾ, ಆದ್ರ್ರಾ, ಪುನರ್ವಸು, ಪುಷ್ಯ, ಹಸ್ತ, ಚಿತ್ರಾ, ಸ್ವಾತಿ, ಅನುರಾಧಾ, ಶ್ರವಣ, ಧನಿಷ್ಠಾ, ಶತಭಿಷ, ರೇವತೀ ಈ ನಕ್ಷತ್ರಗಳೂ, ಕುಜ, ಶನಿಗಳ ಹೊರತಾದ ವಾರಗಳೂ ಪ್ರಶಸ್ತವು. ವಿಶ್ಲೇಶ, ಲಕ್ಷ್ಮೀ-ನಾರಾಯಣ, ಸರಸ್ವತೀ, ತನ್ನ ಶಾಖೆಯ ವೇದ, ಸೂತ್ರಕಾರ ಇವರನ್ನು ಪೂಜಿಸಿ, ಗುರು, ಬ್ರಾಹ್ಮಣ, ಧಾತ್ರೀ ಇವುಗಳನ್ನು ಪೂಜಿಸಿ, ನಮಸ್ಕರಿಸಿ, ಈ ಎಲ್ಲರನ್ನೂ ಮೂರಾವರ್ತಿ ಪ್ರದಕ್ಷಿಣ ಮಾಡಿ, ಓಂಕಾರಪೂರ್ವಕವಾಗಿ ಅಕ್ಷರವನ್ನಾರಂಭಿಸುವದು. ನಂತರ ಗುರುವಿಗೆ ನಮಸ್ಕಾರ ಮಾಡಿ ದೇವತೆಗಳನ್ನು ವಿಸರ್ಜಿಸುವದು. ಇಲ್ಲಿ “ಭುವನಮಾತಃ ಸರ್ವವಾಹ್ಮಯ ರೂಪೇಣ ಗಪ್ಪ ಆಗಚ್ಛ” ಹೀಗೆ ಇದು ಸರಸ್ವತಿಯ ಆವಾಹನಮಂತ್ರವು, ಷೋಡಶೋಪಚಾರಗಳನ್ನು ಓಂಕಾರದಿಂದ ಮಾಡುವದು. ೨೨೨ ಧರ್ಮಸಿಂಧು ಅನುಪನೀತನ ಧರ್ಮಗಳು ಉಪನಯನಕ್ಕಿಂತ ಮೊದಲು ಕಾಮಚಾರ, (ಮನಬಂದಂತೆ ಆಚಾರ) ಕಾಮವಾದ, (ಮನಬಂದಂತೆ ಮಾತಾಡುವದು) ಕಾಮಭಕ್ಷಣ (ನಿಷಿದ್ಧವಸ್ತು ಭಕ್ಷಣ) ಇವುಗಳನ್ನು ಉಪನಯನವಾಗದಿದ್ದವನು ಮಾಡಿದರೂ ದೋಷಬರುವದಿಲ್ಲ. ಹೀಗೆ ಹೇಳಿದ್ದರಿಂದ ಮಲ ಮೂತ್ರ ವಿಸರ್ಜನೆ ಮೊದಲಾದವುಗಳಲ್ಲಿ ಆಚಮನಾದಿ ಆಚಾರಗಳನ್ನು ಮಾಡತಕ್ಕದ್ದೂ ಇಲ್ಲ. ಇನ್ನು ಲಘುಪಾತಕಗಳೊಳಗೆ ಬರುವ ಬೆಳ್ಳುಳ್ಳಿ, ಹಳಸಿದ ಅನ್ನ, (ತಂಗುಳನ್ನ) ಉಚ್ಛಿಷ್ಟವನ್ನು ಇವುಗಳನ್ನು ಭಕ್ಷಿಸಿದರೂ ದೋಷವುಂಟಾಗುವುದಿಲ್ಲ. ಇದರಂತೆ ಅಪೇಯ ಪಾನ, ಮಿಥ್ಯಾ ಹಾಗೂ ಅವಾಚ್ಯ ಭಾಷಣಗಳಿಂದಲೂ ದೋಷಬರುವದಿಲ್ಲ. ಮಹಾದೋಷಗಳಲ್ಲಿ ಬರುವ ಮಾಂಸ, ಅಂತ್ಯಜ, ರಜಸ್ವಲಾ ಮೊದಲಾದವರಿಂದ ಸ್ಪರ್ಶಿತವಾದ ಅನ್ನ, ಇವುಗಳನ್ನು ತಿಂದರೆ ಮತ್ತು ಮದ್ಯಪಾನ ಮಾಡಿದರೆ ದೋಷವಿದ್ದೇ ಇದೆ. ರಜಸ್ವಲಾದಿಗಳನ್ನು ಮುಟ್ಟಿದರೆ, ಸ್ನಾನಮಾತ್ರ ಮಾಡತಕ್ಕದ್ದು. ಸಣ್ಣ ಶಿಶುವಿಗಾದರೆ ಪ್ರೋಕ್ಷಣ ಮಾತ್ರ, ಬಾಲಕನಿಗೆ ಆಚಮನ, ಹೀಗೆ ಸ್ಮತ್ಯುಕ್ತಿಯಿದೆ. ಅನ್ನಪ್ರಾಶನಕ್ಕಿಂತ ಪೂರ್ವದಲ್ಲಿ “ಶಿಶು” ಎನ್ನಲಾಗುತ್ತಿದ. ಚೌಲದೊಳಗೆ ಅಥವಾ ಮೂರುವರ್ಷಗಳೊಳಗೆ ಬಾಲಕ” ನೆನ್ನುವರು, ಮುಂದೆ ಉಪನಯನದೊಳಗೆ “ಕುಮಾರ‍ ಎಂಬ ಸಂಜ್ಞೆ ಬರುವದು. ಇಲ್ಲಿ “ಆಚಮನ"ವೆಂದರೆ ಬರೇ ಮೂರಾವರ್ತಿ ಜಲಪ್ರಾಶನ ಮಾಡುವದು. ಹೊರತು ಓಷ್ಕಮಾರ್ಜನಾದಿ ವಿಧಿಯಿಲ್ಲ. ಉಪನಯನವಾಗದಿದ್ದವನು ವೇದಮಂತ್ರಗಳನ್ನುಚ್ಚರಿಸಬಾರದು. ಆದರೆ ತಂದೆ-ತಾಯಿಗಳ ಅಂತ್ಯಕ್ರಿಯೆಯಲ್ಲಿ ಮಂತ್ರೋಚ್ಚಾರ ಮಾಡಬಹುದು. ಇದು ಔರಸಪುತ್ರರ ವಿಷಯವಾಗಿ ಹೇಳಿದ್ದು. “ಪಿತ್ರೋರನುಪನೀತೋಪಿ ವಿದಾರಸಃ ಸುತಃ ಅರ್ಥ್ಯಹಿಮತು ಸಂಸ್ಕೃತಾಃ ಶ್ರಾದ್ಧ ಕಾರಕಾ:” ಹೀಗೆ ಸ್ಕಾಂದವಚನವಿದೆ. ಬಾಲಕರಿಗೆ ಅಪಥ್ಯವಾದ (ಅನಿಷ್ಟಕರವಾದ) ವಿಚಾರದಲ್ಲಿ ತಂದೆ ತಾಯಿಗಳು ತಿಳಿಸಿ ಹೇಳಬೇಕು. ಸರ್ವಪ್ರಯತ್ನದಿಂದಲೂ ಬಾಲಕರಿಗೆ ಮೊದಲು ಭೋಜನಾದಿಗಳನ್ನು ಮಾಡಿಸತಕ್ಕದ್ದು, ಬಾಲಕರಿಗೆ ಆಟಿಗೆಯ ವಸ್ತುವನ್ನು ಕೊಡುವದರಿಂದ ಸ್ವರ್ಗಸುಖವುಂಟಾಗುವದು. ಅವರಿಗೆ ತಿಂಡಿಯ ವಸ್ತುಗಳನ್ನು ಕೊಟ್ಟರ ಗೋದಾನದ ಫಲಬರುವದು. ಉಪನಯನ “ಉಪನಯನ” ಅಂದರೆ ಆಚಾರ್ಯನ ಸಮೀಪದಲ್ಲಿ ಒಯ್ಯುವದು, ಇದು “ಅಂಗಕರ್ಮ”, ಗಾಯತ್ರ್ಯುಪದೇಶವು “ಪ್ರಧಾನಕರ್ಮ.” ಹೀಗೆ ಅಂಗ-ಪ್ರಧಾನ ಕರ್ಮಾತ್ಮಕವಾದ ಕರ್ಮವಿಶೇಷಕ್ಕೆ “ಉಪನಯನವನ್ನುವರು. ಈ ಪದವು “ಗರೂಢವಾದರು. ಇದಕ್ಕೆ ಅಧಿಕಾರಿಗಳು ಉಪನಯನಕ್ಕೆ ತಂದೆಯು ಮುಖ್ಯಾಧಿಕಾರಿಯು, ಇಲ್ಲವಾದರೆ ತಂದೆಯ ತಂದೆಯು, ಅವನ ಭಾವದಲ್ಲಿ ತಂದೆಯ ಅಣ್ಣ-ತಮ್ಮಂದಿರು, ಅವರ ಅಭಾವದಲ್ಲಿ ತನ್ನ-ಅಣ್ಣ, ಆತನಿಲ್ಲದಿದ್ದರೆ ಸಗೋತ್ರ-ಸಪಿಂಡರು. ಅವರ ಅಭಾವದ ಆಸಗೋತ್ರರಾದ ಸೋದರಮಾವ ಮೊದಲಾದವರು, ಅವರ ಅಭಾವದ ಅಸಪಿಂಡ ಸಗೋತ್ರರು. ಇವರಲ್ಲಿ ಯಾರೇ ಉಪನಯನ ಕರ್ತೃಗಳಾದರೂ ಪರಿಚ್ಛೇದ • ೩ ಪೂರ್ವಾರ್ಧ ೨೨೩ ಕುಮಾರನಿಗಿಂತ ಹಿರಿಯರಾಗಿರಬೇಕು. ಉಪನಯನ ಸಂಸ್ಕಾರಕ್ಕೆ ಕಿರಿಯರು ನಿಷಿದ್ದರು. ಹೀಗೆ ಹಿಂದೆ ಹೇಳಿದ ಯಾರೂ ಇರದಿದ್ದರೆ “ಪ್ರೋತ್ರಿಯನು ಮಾಡಬಹುದು. ಬರೇ ಜನ್ಮಮಾತ್ರದಿಂದ “ಬ್ರಾಹ್ಮಣ ವರ್ಣ” ಮಾತ್ರ. ಸಂಸ್ಕಾರದಿಂದ “ದ್ವಿಜತ್ವವು ಬರುವದು. ವಿದ್ಯಾನೈಪುಣ್ಯ ಪಡೆದಾಗ"ವಿಪ್ರನೆಂದಾಗುವನು. ಈ ಮೂರೂ ಗುಣಗಳಿಂದ ಕೂಡಿದವನಿಗೆ “ಪ್ರೋತ್ರಿಯ"ನೆನ್ನುವರು. ಉಪನಯನ ಕರ್ತೃವು ಮೂರು ಕೃಚ್ಛಗಳನ್ನು ಮಾಡಬೇಕು. ವಟುವೂ ಸಹ ಮೂರು ಕೃಚ್ಛಗಳನ್ನು ಮಾಡತಕ್ಕದ್ದು. ಉಪನಯನಕರ್ತೃವು ಅಧಿಕಾರಸಿದ್ಧಿಗಾಗಿ ಒಂದುಸಾವಿರ ಹನ್ನರಡು ಗಾಯತ್ರೀಜಪವನ್ನು ಮಾಡತಕ್ಕದ್ದು, ಕೆಲವರು ಹನ್ನೆರಡುಸಾವಿರ ಜಪವಾಗಬೇಕನ್ನುವರು. ಉಪನಯನ ಕಾಲ ಗರ್ಭದಿಂದ ಅಥವಾ ಜನ್ಮದಿಂದ ಐದನೇ ಅಥವಾ ಎಂಟನೇ ವರ್ಷದಲ್ಲಿ ಬ್ರಾಹ್ಮಣನಿಗೆ ಉಪನಯನ ಮಾಡತಕ್ಕದ್ದು, ಕ್ಷತ್ರಿಯನಿಗೆ ಇದರಂತ ಹನ್ನೊಂದು ಅಥವಾ ಹನ್ನೆರಡನೇ ವರ್ಷ, ವೈಶ್ಯನಿಗೆ ಹನ್ನೆರಡು ಅಥವಾ ಹದಿನಾರನೇ ವರ್ಷ ಉಪನಯನವಾಗತಕ್ಕದ್ದು. ಧನಕಾಮನಾದವನು ಆರನೇವರ್ಷ, ವಿದ್ಯಾಕಾಮನು ಏಳನೇವರ್ಷ, ಸರ್ವಕಾಮನಾದವನು ಎಂಟನೇ ವರ್ಷ, ಕಾಂತಿಕಾಮನು ಒಂಭತ್ತನೇ ವರ್ಷ ಮಾಡತಕ್ಕದ್ದೆಂದು ಆಯಾಯ ಕಾಮನೆಗನುಗುಣವಾಗಿಯೂ ಹೇಳಿದೆ. ಕೆಲವರು, ಬ್ರಾಹ್ಮಣನಿಗೆ ಆರನೇವರ್ಷವು ನಿಷಿದ್ಧವೆನ್ನುತ್ತಾರೆ. ಬ್ರಾಹ್ಮಣನಿಗೆ ಹದಿನಾರು, ಕ್ಷತ್ರಿಯನಿಗೆ ಇಪ್ಪತ್ತೆರಡು, ವೈಶ್ಯನಿಗೆ ಇಪ್ಪತ್ನಾಲ್ಕು ವರ್ಷಪರ್ಯಂತ “ಗೌಣಕಾಲ"ವನ್ನು ಹೇಳಿದೆ. ಈ ಸಂಖ್ಯೆಗಳನ್ನೆಲ್ಲ ಗರ್ಭಾದಿಯಾಗಿಯೂ ಅಥವಾ ಜನ್ಮಾದಿಯಾಗಿಯೂ ತಿಳಿಯಬಹುದು. ಹದಿನೈದು ವರ್ಷ ಪರ್ಯಂತ ವಿಶೇಷವಾಗಿ ಪ್ರಾಯಶ್ಚಿತ್ತವಿಲ್ಲ, ಹದಿನಾರನೇ ವರ್ಷವಾದರೆ ಶಿಖಾಸಹಿತವಾದ ಮುಂಡನ, ಇಪ್ಪತ್ತೊಂದು ರಾತ್ರಿ ಗೋಧಿಯ ಅನ್ನ ಭಕ್ಷಣ, ಕೊನೆಗೆ ಏಳು ಬ್ರಾಹ್ಮಣ ಭೋಜನ ಇವು ಪ್ರಾಯಶ್ಚಿತ್ತಗಳು. ಹದಿನೇಳು ಮೊದಲಾದ ವರ್ಷಗಳಲ್ಲಿ “ಕೃಚ್ಛತ್ರಯಾ"ದಿ ಪ್ರಾಯಶ್ಚಿತ್ತ ಪೂರ್ವಕವಾಗಿ ಉಪನಯನ ಮಾಡತಕ್ಕದ್ದು. ಬ್ರಾಹ್ಮಣ, ಕ್ಷತ್ರಿಯರಿಗೆ ಉತ್ತರಾಯಣದಲ್ಲಿ ಉಪನಯನವಾಗತಕ್ಕದ್ದು. ವೈಶ್ಯನಿಗೆ ದಕ್ಷಿಣಾಯನವಾದರೂ ಆಗಬಹುದು. “ವಸಂತೇ ಬ್ರಾಹ್ಮಣಮುಪನಯಿತ ಗ್ರೀಷ್ಮ ರಾಜನ್ಯಂ ಶರದಿ ಶಂ। ಮಾಘಾದಿ ಶುಕ್ರಾಂತಕ ಪಂಚಮಾಸಾಃಸಾಧಾರಣಾವಾ ಸಕಲದ್ವಿಜಾನಾಂ” ಹೀಗೆ ಗರ್ಗೋಕ್ತಿ ಮೊದಲಾದ ವಚನ ಪ್ರಾಮಾಣ್ಯದಿಂದ ವಸಂತ, ಅದರ ಅಭಾವದಲ್ಲಿ ಶಿಶಿರ, ಗ್ರೀಷ್ಮ ಋತುಗಳಾದರೂ ಗ್ರಾಹ್ಯಗಳು. “ವಸರಿತೇ” ಇತ್ಯಾದಿ ಮುಖ್ಯವಾಗಿ ಹೇಳಿದ್ದರೂ ಉತ್ತರಾಯಣಾದಿ ವಿಧಿಗೇನೂ ಅದು ಸಂಕೋಚಕರವಾಗುವದಿಲ್ಲ. ಏವಂಚ, ಮಾಘಾದಿ ಐದು ಮಾಸಗಳನ್ನು ವಿಧಿಸಿರುವದರಿಂದ ಅವು ಪ್ರಶಸ್ತಿಗಳು, ಪುಷ್ಪ, ಆಷಾಢಗಳಲ್ಲಿ ಉತ್ತರಾಯಣ ಸಿಗುವದಾದರೂ ಅವು ನಿಷಿದ್ಧಗಳು. ಅವುಗಳಲ್ಲಾದರೂ ಮೀನಾರ್ಕಮಾಸವನ್ನಾರಂಭಿಸಿ ಮಿಥುನಮಾಸ ಪ್ರವೇಶದ ವರೆಗೆ ಪ್ರಶಸ್ತಿ ಕಾಲವು, ಮೀನ, ಮೇಷಗಳು ಅತಿ ಪ್ರಶಸ್ತಿಗಳು, ಮಕರ, ಕುಂಭಮಾಸಗಳು ಮಧ್ಯಮ, ವೃಷಭ, ಮಿಥುನ ಮಾಸಗಳು ಕನಿಷ್ಟವು. ಹೀಗೆ ವಚನಾಂತರವಿದೆ. ಮೀನಾರ್ಕಯುಕ್ತವಾದ ಚೈತ್ರದಲ್ಲಿ ಪ್ರತಿಕೂಲ ಗುರು ಮೊದಲಾದ ಅನಿಷ್ಟಗಳಲ್ಲಿಯೂ ಮಾಡಬಹುದು. ಅಷ್ಟು ಅದಕ್ಕೆ ಪ್ರಾಶಸ್ತ್ರವಿದೆ. ರವಿಯು ಮೀನದಲ್ಲಿರುವಾಗ ಗುರು-ಶುಕ್ರಾಸವಾದರೂ, ಸಿಂಹಸ್ಥ ಗುರುವಾದರೂ, ಚಂದ್ರ ೨೨೪ ಧರ್ಮಸಿಂಧು ಸೂರ್ಯರು ದುರ್ಬಲರಾದರೂ, ಗುರುವು ಗೋಚರದಲ್ಲಿ ಅನಿಷ್ಟವಾಗಿದ್ದರೂ ಚೈತ್ರದಲ್ಲಿ ಉಪನಯನ ಮಾಡಬಹುದು. ಹೀಗೆ “ಸ್ಮೃತಿಯಲ್ಲಿ ಹೇಳಿದೆ. ಆದರೆ ಹೇಳಿದ ಈ “ಅಪವಾದವು ಮಹಾಸಂಕಟದಲ್ಲಿ ಹೇಳಿದ ವಿಷಯವೆಂದು ಅದನ್ನು ಉಪೇಕ್ಷಿಸತಕ್ಕದ್ದು. ಮೀನಾರ್ಕ ಚೈತ್ರದಲ್ಲಿ ಜನ್ಮಮಾಸ-ಜನ್ಮನಕ್ಷತ್ರ ದೋಷವಿಲ್ಲ. ಜನ್ಮಮಾಸ, ಜನ್ಮನಕ್ಷತ್ರ, ಜನ್ಮತಿಥಿ, ಜನ್ಮಲಗ್ನ, ಜನ್ಮರಾಶಿಗಳಲ್ಲಿ ಬ್ರಾಹ್ಮಣರ ಉಪನಯನವು ದೋಷಕಾರಕವಾಗುವದಿಲ್ಲ. ಕ್ಷತ್ರಿಯ, ವೈಶ್ಯರಿಗೆ ಪ್ರಥಮ ಗರ್ಭದ ಹೊರತಾದವರಿಗೆ ದೋಷವಿಲ್ಲ. ಜೇಷ್ಠ ಕುಮಾರಕನ ಉಪನಯನವನ್ನು ಜೇಷ್ಠಮಾಸದಲ್ಲಿ ಮಾಡತಕ್ಕದ್ದಲ್ಲ (ವಿವಾಹವನ್ನೂ), ಶುಕ್ಲ ಪಕ್ಷವು ಶುಭವು, ಸಂಕಟದಲ್ಲಿ ಕೃಷ್ಣ ಪಕ್ಷದ ದಶಮಿಯ ವರೆಗೂ ಮಾಡ: ಹುದು. ಶಿಷ್ಟರಾದವರು ಕೃಷ್ಣಪಕ್ಷದ ಪಂಚಮಿಯ ನಂತರ ಮಾಡುವದಿಲ್ಲ. ತಿಥಿ ವಿಚಾರ ದ್ವಿತೀಯಾ, ತೃತೀಯಾ, ಪಂಚಮಿ, ಷಷ್ಠಿ, ದಶಮಿ, ಏಕಾದಶೀ, ದ್ವಾದಶಿಗಳು ಪ್ರಶಸ್ತಿಗಳು. ಕೆಲಕಡೆಯಲ್ಲಿ ಸಪ್ತಮೀ, ತ್ರಯೋದಶಿಗಳೂ ಉಕ್ತವಾಗಿವೆ. ಕೃಷ್ಣಪ್ರತಿಪದೆಯೂ ಉಕ್ತವಾಗಿದೆ. ಆದರೆ ಅದು ಪುನರುಪನಯನ, ಮೂಕಾದಿ ಉಪನಯನ ವಿಷಯವಾಗಿ ಹೇಳಿದ್ದಂದು ತಿಳಿಯುವದು. “ಸೋಪಪದಾ” ಎಂಬ ತಿಥಿ, ಅನಧ್ಯಾಯ, ಗಲಗ್ರಹ, ಅಪರಾಹ್ನ ಇವುಗಳಲ್ಲಿ ಉಪನಯನ ಮಾಡಿದವನಿಗೆ ಪುನಃಸಂಸ್ಕಾರವಾಗತಕ್ಕದ್ದು. ಜೇಷ್ಠ ಶುಕ್ಲ ಬಿದಿಗೆ, ಅಶ್ವಿನಶುಕ್ಲ ದಶಮಿ, ಮಾಘಮಾಸದ ಚತುರ್ಥಿ ಮತ್ತು ದ್ವಾದಶಿ ಇವುಗಳಿಗೆ “ಸೋಪಪದಾ” ಎಂಬ ಸಂಜ್ಞೆಯಿದೆ. ಹುಣ್ಣಿವೆ, ಚತುರ್ದಶಿ, ಅಷ್ಟಮಿ, ಅಮಾವಾಸ್ಯೆ, ಪ್ರತಿಪದೆ, ಸೂರ್ಯಸಂಕ್ರಾಂತಿ, ‘ಮಾದಿ’ಗಳು, ‘ಯುಗಾದಿ’ಗಳು ಇವು “ಅನಧ್ಯಾಯದಿನಗಳು. ಮತ್ತು ಕಾರ್ತಿಕ, ಆಷಾಢ, ಫಾಲ್ಗುನ ಈ ಮಾಸಗಳ ಕೃಷ್ಣ ಪಕ್ಷದ ಬಿದಿಗೆಗಳೂ ಅನಧ್ಯಾಯಗಳು, ವಿಷುವ, ಆಯನ, ಸಂಕ್ರಾಂತಿಗಳಲ್ಲಿ ‘ಪಕ್ಷಿಣೀ’ ಅನಧ್ಯಾಯವೆಂದು ಪ್ರಥಮ ಪರಿಚ್ಛೇದದಲ್ಲಿ ಹೇಳಲಾಗಿದೆ. ಸೋಪಪದಾ ಮತ್ತು ಅನಧ್ಯಾಯ ತಿಥಿಗಳು ಎರಡುದಿನ ಸೂರ್ಯೋದಯಾನಂತರ ಮೂರು ಮುಹೂರ್ತ ಹಾಗೂ ಸೂರ್ಯಾಸ್ತದ ಮೊದಲು ತ್ರಿಮುಹೂರ್ತ ವ್ಯಾಪ್ತಿಯಿದ್ದಲ್ಲಿ ಎರಡೂ ದಿನಗಳು ಅನಧ್ಯಾಯಗಳು. ಶಿಷ್ಟರಾದವರು ಪ್ರತಿಪದೆಯ ಶೇಷವು ಒಂದು ಘಟಿಯಿದ್ದರೂ ಉಪನಯನ ವಿಷಯದಲ್ಲಿ ಅನಾಯ’ ಎಂದು ಹೇಳುವರು. ವಿಷುವ, ಅಯನ ಹೊರತಾದ ಸಂಕ್ರಾಂತಿ, ಮನ್ವಾದಿ, ಯುಗಾದಿಗಳ ವಿಷಯದಲ್ಲಿ ಪ್ರಥಮ, ದ್ವಿತೀಯ ಪರಿಚ್ಛೇದದಲ್ಲಿ ಹೇಳಿದಂತೆ ಯಾವ ದಿನ ಸಂಕ್ರಾಂತಿ ಪುಣ್ಯಕಾಲವಿರುವದೋ ಯುಗಾದಿ, ಮನ್ನಾದಿಗಳ ಶ್ರಾದ್ಧಕಾಲವಾಗುವದೋ, ಆ ದಿನಗಳಲ್ಲಿ ಅನಧ್ಯಾಯವು. ಹೊರತು ಆ ದಿನದ ಅಸ್ತಾರ್ವತ್ರಿಮುಹೂರ್ತ ಇರುವಿಕೆಯು ಅನಧ್ಯಾಯಕ್ಕೆ ಕಾರಣವಲ್ಲ. ತ್ರಯೋದಶ್ಯಾದಿ ನಾಲ್ಕು ತಿಥಿಗಳು, ಸಪ್ತಮ್ಯಾದಿ ಮೂರು ತಿಥಿಗಳು ಮತ್ತು ಚತುರ್ಥಿ ಇವುಗಳಿಗೆ ಗಲಗ್ರಹ’ವೆಂಬ ಸಂಜ್ಞೆಯಿದೆ. ಚತುರ್ಥಿ ಮತ್ತು ನವಮೀ ಇವು ಉಪನಯನಕ್ಕೆ ‘ತ್ಯಾಜ್ಯ’ಗಳೆಂದು ನನಗೆ ತೋರುತ್ತದೆ. ಕೆಲವರು ಚತುರ್ಥಿ ಶೇಷಯುಕ್ತವಾದ ಪಂಚಮಿಯ ಪ್ರತಬಂಧವನ್ನು ಮಾಡುವದಿಲ್ಲ. ಆದರೆ ಅದಕ್ಕೆ ಮೂಲವು ಕಂಡುಬರುವದಿಲ್ಲ. ನವ ಶೇಷಯುಕ್ತವಾದ ದಶಮಿಯಲ್ಲಿ ಪ್ರಬಂಧವನ್ನು ಮಾಡಬಾರದೆಂದು “ಮಯೂಖದಲ್ಲಿ ಪರಿಚ್ಛೇದ - ೩ ಪೂರ್ವಾರ್ಧ ಹೇಳಿದೆ. ಮೂರು ಭಾಗ ಮಾಡಿದ ದಿನದ ಮೂರನೇ ಭಾಗವಾದ ಅಪರಾಹ್ನವು ವ್ರತಬಂಧಕ್ಕೆ ವರ್ಜ್ಯವು, ಮಧ್ಯಭಾಗವು ಮಧ್ಯಮವು. ಪ್ರಥಮ ಭಾಗವು ಉತ್ತಮವು, ಮನ್ನಾದಿ, ಯುಗಾದಿಗಳು ಯಾವದೆಂಬದನ್ನು ದ್ವಿತೀಯ ಪರಿಚ್ಛೇದದಲ್ಲಿ ಹೇಳಲಾಗಿದೆ. ಚೈತ್ರ ಶುಕ್ಲ ತೃತೀಯಾ ಇದು’ಮನಾದಿಯಲ್ಲಿ ಬರುತ್ತದೆ. ವೈಶಾಖ ಶುಕ್ಲ ತೃತೀಯಯು ‘ಯುಗಾದಿ’ ಗಳಲ್ಲೊಂದಾಗಿದೆ. ಈ ಎರಡು ತಿಥಿಗಳು ಯುಗಾದಿ ಮನ್ನಾದಿಗಳಾದರೂ ಉಪನಯನಕ್ಕೆ ಯೋಗ್ಯಗಳೇ ಆಗಿವೆ. ಉಳಿದ ಮಾದಿ-ಯುಗಾದಿಗಳಿಗೆ ಈ ಪ್ರಸಂಗ ಸಂಭವಿಸುವದಿಲ್ಲ. ಮಾದಿ, ಯುಗಾದಿಗಳಿಗೆ ಸಿಂಧು, ಕೌಸ್ತುಭಾದಿಗಳಲ್ಲಿ ಅಪವಾದ ಹೇಳಿದೆ. “ಚೈತ್ರ, ವೈಶಾಖ ಶುಕ್ಲ ತೃತೀಯಾ, ಮಾಘಶುಕ್ಲ ಸಪ್ತಮೀ, ಫಾಲ್ಕುನ ಕೃಷ್ಣ ದ್ವಿತೀಯಾ ಇವು ಉಪನಯನಕ್ಕೆ ಪ್ರಶಸ್ತಿಗಳು” ಎಂದು ಭರದ್ವಾಜ ಮುನಿಯು ಹೇಳಿದ್ದಾನೆ. ಇನ್ನೂ ಅನೇಕ ಋಷಿಗಳು ಹೇಳಿರುತ್ತಾರೆ. ಮಾಘ ಶುಕ್ಲ ಸಪ್ತಮಿಯು ‘ಮಾದಿ’ಯಾದರೂ ಅಡ್ಡಿಯಿಲ್ಲ. ಈ ಅಪವಾದವು ಪುನರುಪನಯನ ವಿಷಯವಾಗಿ ಹೇಳಿದ್ದು. ಫಾಲ್ಕುನ ಕೃಷ್ಣದ್ವಿತೀಯಾ ಇದು ಚಾತುರ್ಮಾಸ್ಯ ದ್ವಿತೀಯೆಯಾದ್ದರಿಂದ ‘ಅನಧ್ಯಾಯತ್ವ’ವುಂಟಾಗುತ್ತದೆ. ಅದಕ್ಕೆ ಈ ಅಪವಾದವನ್ನು ಹೇಳಿದ್ದು. ಇನ್ನು “ಅನಧ್ಯಾಯದ ಪೂರ್ವದಿನ ಮತ್ತು ಪರದಿನ ಇವುಗಳಲ್ಲಿ ಮೌಂಜೀವ್ರತಾರಂಭ, ವಿಸರ್ಗ ಮತ್ತು ವಿದ್ಯಾರಂಭ ಇವುಗಳನ್ನು ಬಿಡಬೇಕು” ಎಂದು ಸ್ಮೃತಿವಚನವಿದ. ಅದು ‘ದ್ವಿತೀಯೆಯಲ್ಲಿ ಉಪನಯನಮಾಡತಕ್ಕದ್ದೆಂದು ಸ್ಪಷ್ಟ ವಿಧಿಸಿರುವಾಗ ಅನಧ್ಯಾಯದ ಪೂರ್ವ-ಅಪರತ್ನ ಅಪವಾದವು ಸಿದ್ಧಿಸುವದಿಲ್ಲ. ಅದು ಗಲಗ್ರಹದೋಷಮೂಲಕ ದೋಷವನ್ನು ಹೊಂದಿದ ಸಪ್ತಮಿ, ನವಮಿ, ದಶಮೀ, ತ್ರಯೋದಶೀ ನಿಷೇಧದ ಅನುವಾದಕ (ಪುನರುಕ್ತಿ)’ ಎಂದು ತೋರುತ್ತದೆ. ಹಾಗಲ್ಲದೆ ಕದಾಚಿತ್ ಈ ಅಪ್ರಾಪ್ತ ನಿಷೇಧವನ್ನು ಮನ್ನಿಸುವದಾದರೆ ಮಾದಿ, ಯುಗಾದಿ. ಸಂಕ್ರಾಂತ್ಯಾದಿ ಪ್ರಯುಕ್ತ ಅನಧ್ಯಾಯಗಳ ಪೂರ್ವಾಪರ ದಿನಗಳಲ್ಲಿಯೂ ನಿಷೇಧವನ್ನು ಮನ್ನಿಸಬೇಕಾಗುವದು. ಅದರಂತ ಚೈತ್ರ ಶುಕ್ಲ ದ್ವಿತೀಯಾದಿಗಳೂ ನಿಷೇಧಾಪತಿಗೊಳಗಾಗುವವು. ಅದು ಇಷ್ಟವಲ್ಲ. ಶಿಷ್ಟರಿಂದ ಆವೃತಗಳಾದ ಗ್ರಂಥಗಳಲ್ಲಿ ಹೀಗೆ ಕಂಡುಬರುವದಿಲ್ಲ. ‘ಮುಹೂರ್ತ ಮಾರ್ತಂಡೋಕ್ತಿಯಿಂದ ಮಾಘ ಶುಕ್ಲ ಕೃಷ್ಣಗಳ ದ್ವಿತೀಯಾ, ವೈಶಾಖ ಕೃಷ್ಣ ದ್ವಿತೀಯಾ ಈ ಮೂರು ಅನಧ್ಯಾಯ” ಎಂದು ಕಂಡುಬರುತ್ತದೆ. ಇದನ್ನು ಬೇರೆಯವರು ಆದರಿಸುವದಿಲ್ಲ. ಸಲುವಾಗಿ ಬಹು ಗ್ರಂಥಗಳಲ್ಲಿ ಮೂಲ ವಚನಗಳು ಸಿಗುವದಿಲ್ಲ. ಮೌಂಜೀ ಪ್ರಕರಣದಲ್ಲಿ ಮುಹೂರ್ತ ಚಿಂತಾಮಣ್ಣಾದಿ ಗ್ರಂಥಗಳಲ್ಲಿಯೂ ಕಾಣಸಿಗುವದಿಲ್ಲ. ಆದುದರಿಂದ “ಮಾರ್ತಂಡೋಕ್ತ”, ಈ ಹೆಚ್ಚಿನ ಅನಧ್ಯಾಯಗಳು “ಉಪನಿಷತ್ ಪಾಠಾ” ದಿ ವಿಷಯವಾಗಿ ಹೇಳಿದ್ದು, ಹೀಗೆಂಬುದೇ ಯುಕ್ತವಾದದ್ದು. ತೃತೀಯಾ, ಷಷ್ಠಿ, ದ್ವಾದಶೀ ಇವುಗಳಲ್ಲಿ ಪ್ರದೋಷವಿದ್ದರೆ ಮುಂಜಿಯನ್ನು ಮಾಡಬಾರದು. ರಾತ್ರಿಯಲ್ಲಿ ಮೊದಲನೇ ಯಾಮದಲ್ಲಿ “ಚತುರ್ಥಿ”, ಒಂದೂವರೆ ಯಾಮದಲ್ಲಿ “ಸಪ್ತಮೀ”, ಎರಡು ಯಾಮಗಳಲ್ಲಿ “ತ್ರಯೋದಶೀ” ಹೀಗಿದ್ದರೆ “ಪ್ರದೋಷ"ವಂದಾಗುವದು. ಎರಡು ದಿನಗಳಲ್ಲಿ ಪ್ರಥಮ ಯಾಮಾದಿಗಳಲ್ಲಿ ಚತುರ್ಥ್ಯಾದಿಗಳ ವ್ಯಾಪ್ತಿಯಿದ್ದರೆ ಪೂರ್ವದಿನವೇ ‘ಪ್ರದೋಷ’ವು, ಹೊರತು ಮರುದಿನವಲ್ಲ. ಹೀಗೆ “ಮಯೂಖ"ದಲ್ಲಿ ಹೇಳಿದೆ. ಇವು ನಿತ್ಯಾನಧ್ಯಾಯಗಳು. ೨೨೬ ಧರ್ಮಸಿಂಧು ನೈಮಿತ್ತಿಕಾನಧ್ಯಾಯಗಳು ವಿವಾಹ, ದೇವಪ್ರತಿಷ್ಠಾ, ಉದ್ಯಾಪನ’ ಮೊದಲಾದವುಗಳಲ್ಲಿ ಸಮಾಪ್ತಿ ಪರ್ಯಂತ “ಅನಧ್ಯಾಯ”ವು ಎಂದು ಸ್ಮತ್ಯರ್ಥಸಾರದಲ್ಲಿ ಹೇಳಿದೆ. ಆದುದರಿಂದ ತ್ರಿಪುರುಷ ಸಪಿಂಡರಲ್ಲಿ ಬ್ರಹ್ಮಯಜ್ಞಾದಿಗಳನ್ನು ಬಿಡತಕ್ಕದ್ದಿರುವದರಿಂದ ಮೌಂಜೀವಿವಾಹಾದಿ ನಿಮಿತ್ತವಾಗಿ ಮಾಡುವ ಮಂಟಪ ಪ್ರತಿಷ್ಠಾದಿ ಉತ್ಸವ ಸಮಾಪ್ತಿ ಪರ್ಯಂತ ಉಪನಯನವನ್ನು ಮಾತ್ರ ಮಾಡಬಾರದು ಎಂದು ತೋರುತ್ತದೆ. ವಿವಾಹಾದಿ ಮಂಗಲಕಾರ್ಯಗಳನ್ನು ಮಾಡಲಡ್ಡಿಯಿಲ್ಲ. ಮಂಗಲ ಕಾರ್ಯದ ದಿನದಲ್ಲಿ “ಅನಧ್ಯಾಯ” ಎಂದು ಹೇಳಿರುವದರಿಂದ, ಗರ್ಭಾಧಾನಾದಿ ಶುಭಕಾರ್ಯದಿನದಲ್ಲಿ ಒಂದೇಕುಲ, ಒಂದೇಗೃಹದಲ್ಲಿ ಮುಂಜಿಯನ್ನು ಮಾಡಬಾರದು ಎಂದು ತೋರುತ್ತದೆ. ಭೂಕಂಪ, ಭೂಕುಸಿತ, ಸಿಡಿಲೆರಗು, ಉಲ್ಕಾಪಾತ, ಧೂಮಕೇತು ಉತ್ಪತ್ತಿ, ಗ್ರಹಣ ಇವುಗಳಲ್ಲಿ ಹತ್ತು ದಿನ ಅಥವಾ ಏಳುದಿನ ಉಪನಯನವನ್ನು ಮಾಡಬಾರದು. ಕೆಲವರು “ಆಪತ್ತಿನಲ್ಲಿ ಮೂರುದಿನ ಬಿಟ್ಟರೆ ಸಾಕು” ಎನ್ನುವರು. ಅಕಾಲವೃಷ್ಟಿಯಾದರೆ ತ್ರಿರಾತ್ರ ಅಥವಾ ಪಕ್ಷಿಣೀ “ಅನಧ್ಯಾಯವು. ಪುಷ್ಕಮಾಸದ ಆದಿಯಿಂದ ಚೈತ್ರಮಾಸದ ಅಂತ್ಯದೊಳಗೆ ಮಳೆ ಬಿದ್ದರೆ “ಅಕಾಲವೃಷ್ಟಿ” ಎಂದಾಗುವದು. ಕೆಲವರು ಮಹಾನಕ್ಷತ್ರ ಆದ್ರ್ರಾದಿ ಜೇಷ್ಠಾ ವರೆಗಿನ ಕಾಲವನ್ನು ಬಿಟ್ಟು, ಉಳಿದ ನಕ್ಷತ್ರಗಳಲ್ಲಿ ಮಳೆಯಾದರೆ “ಅಕಾಲವೃಷ್ಟಿ” ಎನ್ನುವರು. ಒಟ್ಟಿನಮೇಲೆ ಯಾವ ದೇಶದಲ್ಲಿ ಯಾವ ಕಾಲಕ್ಕೆ ‘ಮಳೆಗಾಲ’ವನ್ನುವರೋ ಅದಕ್ಕೆ ಹೊರತಾದ ಕಾಲಗಳಲ್ಲಿ ಮಳೆಯಾದರೆ “ಅಕಾಲವೃಷ್ಟಿ” ಇದು ಸಿದ್ಧಾಂತ, ಅತಿವೃಷ್ಟಿ, ಆಣೆಕಲ್ಲಿ ನವೃಷ್ಟಿ, ರಕ್ತವೃಷ್ಟಿಗಳಾದಲ್ಲಿ ಮೂರುದಿನ ಅನಧ್ಯಾಯವು. ಪ್ರಾತಃಕಾಲಸಂಧಿಯಲ್ಲಿ ಮಿಂಚುಸಹಿತವಾಗಿ ಗುಡುಗಿದರೆ “ಅಹೋರಾತ್ರ ಅನಧ್ಯಾಯವು ಗುರು, ಶಿಷ್ಯ, ಋತ್ವಿಜರ, ಮರಣದಲ್ಲಿ ಮೂರುದಿನಗಳು. ಪಶು, ಕಪ್ಪೆ, ಮುಂಗಿಲಿ, ಕುದುರೆ, ಸರ್ಪ, ಬೆಕ್ಕು, ಇಲಿ ಇವು ಅಡ್ಡಗಳಿದರೆ ಒಂದು ದಿನ, ಕಾಡುಬೆಕ್ಕು ಮೊದಲಾದವು ಅಡ್ಡಗಳಿದರೆ ತ್ರಿರಾತ್ರವು, ನರಿ, ಮಂಗಗಳಾದರೆ ಹನ್ನೆರಡು ರಾತ್ರಿಗಳು, ಶ್ರವಣದ್ವಾದಶೀ, ಯಮದ್ವಿತೀಯಾ, ಮಹಾಭರಣಿ ಮೊದಲಾದ ಇನ್ನೂ ಎಷ್ಟೋ ನಿತ್ಯ ಹಾಗೂ ನೈಮಿತ್ತಿಕ ಅನಧ್ಯಾಯಗಳು ಬಹಳವಿದೆ. ಆದರೆ ಅವಲ್ಲ ಉಪನಯನಕ್ಕೆ ಸಂಬಂಧಿಸಿರದ ಕಾರಣ ಇಲ್ಲಿ ಹೇಳಿಲ್ಲ. ಮುಂಜಿಯಲ್ಲಿ ನಾಂದೀಶ್ರಾದ್ಧಾನಂತರ “ಪ್ರಾತರ್ಗಜಿ್ರತ ಮೊದಲಾದ ನೈಮಿತ್ತಿಕ ಅನಧ್ಯಾಯದ ವಿಷಯದಲ್ಲಿ ಅಕಾಲಿಕ ಅನಧ್ಯಾಯಗಳು ಆಕಸ್ಮಿಕವಾಗಿ ಬಂದರೆ ಉಪನಯನ ಮಾಡಲಡ್ಡಿಯಿಲ್ಲ” ಎಂದು “ಜ್ಯೋತಿರ್ನಿಬಂಧ"ದ ಅಭಿಪ್ರಾಯವು. “ವೇದಾರಂಭಂನಕಾರಯೇತ್” ಇತ್ಯಾದಿ ವಚನದಂತ “ವೇದಾರಂಭ"ವನ್ನು ಮಾತ್ರ ಮಾಡಬಾರದು. ಆದರೆ ಈ ಸಂದರ್ಭವನ್ನು ಯಜುರ್ವೇದಿಗಳಿಗೆ ಹೇಳಿದ್ದು, ಋಗೈದಿಗಳಿಗೆ ವೇದಾರಂಭವನ್ನು ಉಪಾಕರ್ಮದಲ್ಲಿಯೇ ಹೇಳಿರುವದರಿಂದ ಮುಂಜಿಯ ದಿನ ವೇದಾರಂಭದ ಪ್ರಸಕ್ತಿಯೇ ಇಲ್ಲ. ಯಜುರ್ವದಿ ಮೊದಲಾದವರು ಮುಂಜಿಯ ನಂತರವಾದರೂ ಅನಧ್ಯಾಯ ಬಂದಾಗ ವೇದಾಧ್ಯಯನ ಮಾಡಬಾರದು. ನಾಂದೀಶಾದಕ್ಕಿಂತ ಮೊದಲು ನೈಮಿತ್ತಿಕ ಅನಧ್ಯಾಯಗಳು ಪ್ರಾಪ್ತಾದರೆ ಆ ದಿನವನ್ನು ಬಿಟ್ಟು ಬೇರೆ ಮುಹೂರ್ತದಲ್ಲಿಯೇ ಮಾಡಬೇಕು. ಮೌಂಜಿಯ ನಂತರ ಅನುಪ್ರವಚಯದ ಒಳಗೆ “ಗರ್ಜಿತ” ಮೊದಲಾದವುಗಳುಂಟಾದರೆ ಹೇಗೆ ಪರಿಚ್ಛೇದ - ೩ ಪೂರ್ವಾರ್ಧ ೨೨೭ ಮಾಡಬೇಕೆಂಬುದನ್ನು ಮುಂದೆ ಹೇಳಲಾಗುವದು. ಹೀಗೆ ಅನನ್ಯಾಯಾದಿಗಳ ನಿರ್ಣಯವು ವಾರಾದಿ ವಿಚಾರ ಗುರು, ಶುಕ್ರ, ಬುಧವಾರಗಳು ಶ್ರೇಷ್ಠಗಳು, ಸೂರ್ಯವಾರವು ಮಧ್ಯಮವು ಚಂದ್ರವಾರವು ಕನಿಷ್ಠವು. ಕುಜ, ಶನಿವಾರಗಳು ನಿಷಿದ್ಧಗಳು ಸಾಮವೇದಿಗಳಿಗೂ, ಕ್ಷತ್ರಿಯರಿಗೂ ಕುಜವಾರವು ಪ್ರಶಸ್ತವು. ಇನ್ನು " ವೇದಾಧಿಪ ಗುರು, ಚಂದ್ರ ಬಲವಿಚಾರವು ಶಾಖಾಧಿಪತಿಯ ವಾರ, ಶಾಖಾಧಿವತಿಯ ಬಲ, ಶಾಖಾಧಿಪತಿ ಲಗ್ನದಲ್ಲಿರುವಿಕೆ ಈ ಮೂರರ ಯೋಗವು ಉಪನಯನದಲ್ಲಿ “ದುರ್ಲಭ"ವು. ಋಗ್ವದಕ್ಕೆ ಗುರುವೂ, ಯಜುರ್ವೇದಕ್ಕೆ ಶುಕ್ರನೂ, ಸಾಮವೇದಕ್ಕೆ ಕುಜನೂ, ಅಥರ್ವವೇದಕ್ಕೆ ಬುಧನೂ ಹೀಗೆ ಶಾಖಾಧಿಪತಿಗಳು, ಬ್ರಾಹ್ಮಣರಿಗೆ ಗುರು, ಶುಕ್ರರೂ, ಕ್ಷತ್ರಿಯರಿಗೆ ಕುಜ, ಸೂರ್ಯರೂ, ವೈಶ್ಯರಿಗೆ ಚಂದ್ರ, ಬುಧರೂ, “ವರ್ಣಾಧಿಪತಿಗಳು. ತಂದೆಗೆ ಸೂರ್ಯಬಲವು ಶ್ರೇಷ್ಠವು. ಬಟುವಿಗೆ ಶಾಖಾ ವರ್ಣ-ಅಧಿಪತಿಗಳ ಬಲವು ಶ್ರೇಷ್ಠವು, ಗುರು-ಚಂದ್ರ ಬಲವು ಎಲ್ಲರಿಗೂ ಶ್ರೇಷ್ಟವು. ವಟು ಮತ್ತು ತಂದೆ ಇವರಿಬ್ಬರಿಗೂ ಗುರು, ಚಂದ್ರ ಬಲವು ಲಭಿಸದಿದ್ದರೆ ವಟುವಿಗೆ ಮಾತ್ರ ಎರಡೂ ಬಲಗಳು ಆವಶ್ಯಕಗಳು, ಚಂದ್ರಬಲ ವಿಚಾರವನ್ನು ಗರ್ಭಾಧಾನ ಪ್ರಕರಣದಲ್ಲಿಯೇ ಹೇಳಲಾಗಿದೆ. ಜನ್ಮರಾಶಿಯಿಂದ ದ್ವಿತೀಯ, ಪಂಚಮ, ಸಪ್ತಮ, ನವಮ, ಏಕಾದಶಗಳಲ್ಲಿ ಗುರುವು ಶುಭಪ್ರದನು. ಜನ್ಮ ತೃತೀಯ, ಷಷ್ಠ, ದಶಮಸ್ಥಾನಗಳಲ್ಲಿ ಶುಭನಲ್ಲದಿದ್ದರೂ ಪೂಜಾ, ಹೋಮ ಇತ್ಯಾದಿ ಅರ್ಚನೆಯಿಂದ ಶುಭನಾಗುವನು. ಚತುರ್ಥ, ಅಷ್ಟಮ, ದ್ವಾದಶಸ್ಥಾನಗಳಲ್ಲಿ ತೀರಾ ಅನಿಷ್ಟನು. ಜನ್ಮರಾಶಿಯಿಂದ ಚತುರ್ಥಸ್ಥಾನವು ಕರ್ಕ, ಧನು, ಮೀನಗಳಲ್ಲೊಂದಾಗಿದ್ದರೆ ದೋಷವಿಲ್ಲ. ಅತ್ಯಾವತ್ತಿನಲ್ಲಿ ಚತುರ್ಥ, ದ್ವಾದಶಗಳಲ್ಲಿ ಗುರುವಿದ್ದರೆ ಪೂಜಾ, ಹೋಮಾದಿಗಳನ್ನು ಎರಡುಪಟ್ಟು ಮಾಡಿದರೆ ಶುಭನಾಗುವನು. ಅಷ್ಟಮದಲ್ಲಿದ್ದರೆ ಅವುಗಳನ್ನೇ ಮೂರಾವರ್ತಿ ಮಾಡಬೇಕು. ಕೆಲವರು “ವಾಮವೇಧೆ’ಯಲ್ಲಿ “ಶುಭ"ವನ್ನುವರು. “ರಾಜಮಾರ್ತಂಡ"ದಲ್ಲಿ ಅಶುಭವೆಂದು ಹೇಳಿದೆ. (ವಾಮವೇಧಾದಿಗಳನ್ನು ಮುಹೂರ್ತ ಜ್ಯೋತಿಷಗ್ರಂಥಗಳಿಂದ ತಿಳಿಯುವದು) ಎಂಟನೇವರ್ಷ ಮೊದಲಾದ ಮುಖ್ಯಕಾಲದಲ್ಲಿ ಗುರುಬಲವಿಲ್ಲದಿದ್ದರೂ ನಡೆಯುವದು. ಮೀನಚೈತ್ರವಾದರೆ ಗುರುಬಲ ಬೇಕೆಂದಿಲ್ಲ ಅಥವಾ ಶಾಂತಿಮಾಡಿ ಮಾಡತಕ್ಕದ್ದು. ಮುಖ್ಯಕಾಲವನ್ನು ಅತಿಕ್ರಮಿಸಬಾರದು. ಎಲ್ಲ ಬಲಕ್ಕಿಂತ ಹೇಳಿದ “ಕಾಲ’ವು ಮುಖ್ಯವು. ನಕ್ಷತ್ರಗಳು ಋಗೈದಿಗಳಿಗೆ:- ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರಾ, ಹಸ್ತ, ಚಿತ್ರಾ, ಸ್ವಾತಿ, ಮೂಲಾ, ಆಶ್ಲೇಷಾ, ಆದ್ರ್ರಾ, ಶ್ರವಣ ಇವು ಪ್ರಶಸ್ತಿಗಳು. ಯಜುರ್ವೇದಿಗಳಿಗೆ :- ರೋಹಿಣೀ ಮೃಗಶಿರಾ, ಪುಷ್ಯ, ಪುನರ್ವಸು, ಉತ್ತರಾತ್ರಯ, ಹಸ್ತ, ಅನುರಾಧಾ, ಚಿತ್ರಾ, ರೇವತಿ ಇವು ಶ್ರೇಷ್ಠ, ಸಾಮವೇದಿಗಳಿಗೆ :- ಅಶ್ವಿನೀ, ಪುಷ್ಯ, ಉತ್ತರಾತ್ರಯ, ಆದ್ರ್ರಾ, ಹಸ್ತ, ಧನಿಷ್ಠಾ, ಶ್ರವಣಗಳು ಉತ್ತಮ. ಅಥರ್ವವೇದಿಗಳಿಗೆ :- ಅಶ್ವಿನೀ, ಮೃಗಶಿರ, ಅನುರಾಧಾ, ಹಸ್ತ, ಧನಿಷ್ಠಾ, ಪುನರ್ವಸು, ರೇವತಿಗಳು ಪ್ರಶಸ್ತಿಗಳು. ಈ ಎಲ್ಲ ಶಾಖೆಯವರಿಗೂ ಹೇಳಿದ ನಕ್ಷತ್ರಗಳು ೨೨೮ ಧರ್ಮಸಿಂಧು ಅಸಂಭವವಾದರೆ ಭರಣಿ, ಕೃತ್ತಿಕಾ, ಮಘಾ, ವಿಶಾಖಾ, ಜೇಷ್ಠಾ, ಶತಭಿಷ ಇವುಗಳ ಹೊರತಾದ ನಕ್ಷತ್ರಗಳಲ್ಲಿ ಮಾಡಬಹುದು. “ರಾಜಮಾರ್ತಾಂಡದಲ್ಲಿ “ಪುನರ್ವಸು ನಿಷಿದ್ಧವೆಂದು ಹೇಳಿದೆ. ಆದರೆ ಇದು “ನಿರ್ಮೂಲ"ಎಂದು ಬಹುಗ್ರಂಥಕಾರರ ಅಭಿಪ್ರಾಯವು. ಕೆಲವರು ಈ ಪುನರ್ವಸು ನಿಷೇಧವು, ಋಕ್, ಸಾಮ-ಶಾಖೆಗಳ ವಿಷಯದ್ದನ್ನುವರು. ವ್ಯತೀಪಾತ, ವೈಧೃತಿ, ಪರಿಘಾರ್ಧ, ವಿ: ಭಗಳ ನಿಷಿದ್ದಘಟಿಗಳು, ಭದ್ರಾ, ಗ್ರಹಣ ಇವುಗಳಲ್ಲಿ ಮುಂಜಿಯು ವರ್ಜವು. ಲಗ್ನದಲ್ಲಿ ಗ್ರಹಬಲ ವಿಚಾರ ಉವನಯನಕ್ಕೆ ಲಗ್ನದಿಂದ ದ್ವಾದಶ, ಅಷ್ಟಮ, ಷಷ್ಟಸ್ಥಾನಗಳ ಹೊರತಾದ ಸ್ಥಾನಗಳಲ್ಲಿ ಶುಭಗ್ರಹರಿರಬೇಕು. ಮೂರು, ಆರು, ಹನ್ನೊಂದನೇ ಸ್ಥಾನಗಳಲ್ಲಿ ಪಾಪಗ್ರಹರಿರತಕ್ಕದ್ದು. ಶುಕ್ಲ ಪಕ್ಷದ ಚಂದ್ರ ವೃಷಭ ಅಥವಾ ಕರ್ಕದಲ್ಲಿದ್ದರೆ ಶುಭವು. ಅಂದರೆ ಆ ಕಾಲದ ಲಗ್ನವು ವೃಷಭ ಅಥವಾ ಕರ್ಕವಾಗಿದ್ದು, ಅವುಗಳಲ್ಲಿ ಆ ಚಂದ್ರನಿದ್ದರೆ ಎಂದರ್ಥ. ಕೆಲ ಗ್ರಂಥಗಳಲ್ಲಿ ಲಗ್ನದಲ್ಲಿ ರವಿಯಿದ್ದರೆ “ಶುಭವೆಂದು ಹೇಳಿದೆ. ಅಷ್ಟಮದಲ್ಲಿ ಎಲ್ಲ ಗ್ರಹಗಳೂ ನಿಂದ್ಯಗಳು, ಲಗ್ನಾಧಿಪತಿ ಮತ್ತು ಶುಕ್ರ, ಚಂದ್ರರು ಷಷ್ಠದಲ್ಲಿರಕೂಡದು. ವ್ಯಯದಲ್ಲಿ ಶುಕ್ರನೂ, ಲಗ್ನದಲ್ಲಿ ಚಂದ್ರ ಹಾಗೂ ಪಾವಗ್ರಹರಿರಬಾರದು. ಯಾವ ಲಗ್ನಕ್ಕೆ ಐದು ಇಷ್ಟಗ್ರಹರಿಲ್ಲವೋ ಆ ಲಗ್ನವು ತ್ಯಾಜ್ಯವು. ತುಲಾ, ಮೀನ, ಮಿಥುನ, ಕನ್ಯಾ, ಧನು, ವೃಷಭ ಈ ನವಾಂಶಗಳು ಶುಭವು. ಕರ್ಕನವಾಂಶವು ಉಪನಯನಕ್ಕೆ ವರ್ಜವು. ಇನ್ನು ಷಡ್ವರ್ಗ ಶುದ್ಧಿ, ಇಷ್ಟಕಾಲಸಾಧನಾದಿಗಳನ್ನು ಜ್ಯೋತಿಷ ಗ್ರಂಥಗಳಿಂದ ತಿಳಿಯತಕ್ಕದ್ದು. ಕರ್ತೃವಿನ ಪತ್ನಿಯು ರಜಸ್ವಲೆಯಾದರೆ ತಾಯಿಯು ರಜಸ್ವಲೆಯಾಗಿದ್ದು ಅಥವಾ ತಂದೆಯು ಸನ್ನಿಧಿಯಲ್ಲಿಲ್ಲದಾಗ ಮಾವ, ಅಣ್ಣ ಮೊದಲಾದವರು ಸಂಸ್ಕಾರಮಾಡುವಾಗಲಾದರೂ ಅವರ ಪತ್ನಿಯರು ರಜಸ್ವಲೆಯಾದರೆ ಮುಂಜಿ, ವಿವಾಹಾದಿಗಳನ್ನು ಮಾಡಬಾರದು. ನಾಂದೀಶ್ರಾದ್ಧಾನಂತರದಲ್ಲಿ ತಾಯಿಯು ರಜಸ್ವಲೆಯಾದಲ್ಲಿ ಆಗ ಅಣ್ಣ ಮೊದಲಾದವರು ಕರ್ತೃಗಳಾದಾಗ ಮತ್ತು ಸಮೀಪದಲ್ಲಿ ಬೇರೆ ಮುಹೂರ್ತ ಸಿಗುವಂತೆ ಇರದಿದ್ದಾಗ ಶಾಂತಿಮಾಡಿ ಉಪನಯನ ಮಾಡಬಹುದು. ನಾಂದೀ ಪ್ರಾರಂಭವಾಗದಿದ್ದರೆ ಹೀಗೆ ಮಾಡಕೂಡದು. ಬೇರೆ ಮುಹೂರ್ತದಲ್ಲಿಯೇ ಮಾಡಬೇಕು. ಮಾವ ಮೊದಲಾದವರು ಕರ್ತೃಗಳಾಗಿದ್ದಾಗ ನಾಂದೀಶ್ರಾದ್ಧಾನಂತರ ಕರ್ತೃವಿನ ಪತ್ನಿಯು ರಜಸ್ವಲೆಯಾದರೆ, “ಪ್ರಾರಂಭವಾಗಿರುವದರಿಂದ ಶಾಂತಿಯ ರಹಿತವಾಗಿಯೇ ಉಪನಯನ ಮಾಡತಕ್ಕದ್ದು. ಮುಂಜಿ, ವಿವಾಹಗಳಾಗಿವೆ; “ಮಂಡವೋಶ್ವಾಸನೆ”ಯಾಗಿಲ್ಲ. ಆಗ ತಾಯಿಯು ರಜಸ್ವಲೆಯಾದರೂ ಶಾಂತಿಯನ್ನು ಮಾಡತಕ್ಕದ್ದು, ಯಾಕೆಂದರೆ ‘ಮಂಗಲಕಾರ್ಯವು ಮುಗಿದಂತಾಗುವದಿಲ್ಲ ಎಂಬುದಾಗಿ “ಮುಹೂರ್ತ ಚಿಂತಾಮಣಿಯ ಟೀಕೆಯಲ್ಲಿದೆ. ಪ್ರಾರಂಭಕ್ಕಿಂತ ಮುಂಚೆ ರಜೋರೂಪವಾದರೂ, ಮುಂದೆ ಮುಹೂರ್ತ ಸಿಗದಿದ್ದಾಗ ಅತಿಸಂಕಟದಲ್ಲಿ ಶಾಂತಿಮಾಡಿ ಉವನಯನಾದಿಗಳನ್ನು ಮಾಡಬಹುದೆಂದು “ಕೌಸ್ತುಭ ಮತವುಪರಿಚ್ಛೇದ - ೩ ಪೂರ್ವಾರ್ಧ ೨೨೯ ಶಾಂತಿಯ ಪ್ರಕಾರ “ಮಮ ಅಮುಕ ಮಂಗಲೇ ಸಂಸ್ಕಾರ್ಯ ಜನನೀ ರದೋಷಜನಿತ, ಅಶುಭಫಲ ನಿರಾಸಾರ್ಥಂ ಶುಭಫಲಾವ್ಯಾಪ್ತರ್ಥಂ ಶ್ರೀ ಪೂಜನಾದಿಶಾಂತಿಂ ಕರಿಷ್ಯ ಹೀಗೆ ಸಂಕಲ್ಪಿಸಿ ಮಾಷಪ್ರಮಾಣದ ಬಂಗಾರದ ಲಕ್ಷ್ಮೀಪ್ರತಿಮ ಮಾಡಿ ಅದರಲ್ಲಿ ಶ್ರೀಸೂಕ್ತ ಷೋಡಶೋಪಚಾರಗಳಿಂದ ಪೂಜಿಸಿ, ತಮ್ಮ-ತಮ್ಮ ಪ್ರಯೋಗಾನುಸಾರ ಶ್ರೀಸೂಕ್ತದಿಂದ ಪ್ರತಿಮಂತ್ರದಿಂದ ಪಾಯಸವನ್ನು ಹೋಮಿಸಿ, ಕಲಶೋದಕದಿಂದ ಅಭಿಷೇಕಮಾಡಿ ವಿಷ್ಣುವನ್ನು ಸ್ಮರಿಸಿ, ಕರ್ಮವನ್ನು ಈಶ್ವರಾರ್ಪಣ ಮಾಡತಕ್ಕದ್ದು. ಪ್ರಾರಂಭನಂತರ ಸೂತಕಪ್ರಾಪ್ತಿ ವಿಷಯವನ್ನು ಚೌಲಪ್ರಕರಣದಲ್ಲಿ ಹೇಳಲಾಗಿದೆ. ವಿಶೇಷವನ್ನು ಮುಂದೆ ಹೇಳುವವು ಉಪನಯನ ಸಾಮಗ್ರಿ ಸಂಗ್ರಹ ಕೌಪೀನ, ಉಡುವ ವಸ್ತ್ರ, ಹೊದೆಯುವ ವಸ್ತ್ರ ಇವು “ಅಹತವಾಗಿರಬೇಕು. “ಅಹತ” ಅಂದರೆ ಬೇರೆ ಉಪಯೋಗಿಸದಿದ್ದ ಹೊಸದಾದ ಬಿಳೇವಸ್ತ್ರ, ಅದನ್ನು ಸ್ವಲ್ಪ ತೊಳೆದು ಒಣಗಿಸಿದ್ದಿರಬೇಕು; ಮತ್ತು ಅದಕ್ಕೆ ಸರಗಿರಬೇಕು. ಉಡುವ ವಸ್ತ್ರದ ಸಲುವಾಗಿ ಕೃಷ್ಣಾ ಜಿನವನ್ನುಪಯೋಗಿಸಬಹುದು. ಅದು ಮೂರಂಗುಲ ಅಥವಾ ನಾಲ್ಕಂಗುಲ, ಹೊರಗಿನ ರೋಮವುಳ್ಳದ್ದಾಗಿರಬೇಕು. ಧರಿಸುವ ವಸ್ತ್ರವು ಅಖಂಡ ಅಥವಾ ಮೂರು ತುಂಡುಗಳುಳ್ಳದ್ದಾಗಬೇಕು. ಅದು ಒಟ್ಟಿಗೆ ನಾಲ್ವತ್ತೆಂಟು ಅಂಗುಲ ಪರಿಮಾಣವುಳ್ಳದ್ದಾಗಿರಬೇಕು. ಆ ಮೂರು ಖಂಡಗಳಲ್ಲಿ ಒಂದು ಇಪ್ಪತ್ತುನಾಲ್ಕು ಅಂಗುಲದ್ದು, ಮತ್ತೊಂದು ಎಂಟು ಅಂಗುಲದ್ದು, ಇನ್ನೊಂದು ಹದಿನಾರು ಅಂಗುಲದ್ದು ಹೀಗಿರಬೇಕು. ಯಜೋಪವೀತ ನಿರ್ಣಯ ಯಜ್ಞಪವೀತದ ನೂಲು ಹತ್ತಿಯದಾಗಿರಬೇಕು. ಅದರ ನಿರ್ಮಾಣರೀತಿ ಹೀಗೆ:- ಬ್ರಾಹ್ಮಣ, ಬ್ರಾಹ್ಮಣ ಅಥವಾ ವಿಧವೆ ಇವರು ತಯಾರಿಸಿದ ನೂಲು ಗ್ರಾಹ್ಯ. ಕನಿಷ್ಠಾದಿ ತರ್ಜನೀವರೆಗಿನ ಬೊಟ್ಟುಗಳನ್ನು ಸರಿಯಾಗಿ ಕೂಡಿಸಿಕೊಂಡು ತೊಂಭತ್ತಾರು ಸುತ್ತಳತೆಮಾಡಿ, ಅದನ್ನು ಮೂರಳೆಗಳುಳ್ಳದ್ದನ್ನಾಗಿ ಮಾಡಿ, ಮೊದಲು ಮೇಲ್ಮುಖ ಮಾಡಿ ತಿರುಗಿಸಿ ಪುನಃ ಅಧೋವೃತ್ತವಾಗಿ ತಿರುಗಿಸುವದು. ಪುನಃ ತ್ರಿಗುಣಮಾಡುವದು. ಹೀಗೆ ಒಂಭತ್ತು ಎಳೆಗಳುಳ್ಳ ಒಂದು ಸೂತ್ರಮಾಡಿ ಅದನ್ನು ಮೂರು ಸುತ್ತಳತೆ ಮಾಡಿ ಗಟ್ಟಿಯಾದ ಗಂಟನ್ನು ಮಾಡುವದು. ಸ್ತನಗಳಿಗಿಂತ ಮೇಲೆ ನಾಭಿಯ ಕೆಳಗೆ ಅದು ಬರುವಂತಿರಬಾರದು. ಹರಿದರೆ ಅಥವಾ ಕೆಳಗೆ ಜಾರಿದರೆ ಆಗ ಊಟಮಾಡಿದಲ್ಲಿ ಪುನಃ ಬೇರೆ ಜನಿವಾರವನ್ನು ತೊಟ್ಟುಕೊಳ್ಳಬೇಕು. ಹಳೆಯದನ್ನು ವಿಸರ್ಜಿಸಬೇಕು. “ಸಿದ್ಧಮಂತ್ರಾಃ ಪ್ರಯೋಕ್ತವ್ಯಾಃ” ಈ ನ್ಯಾಯದಂತೆ ಸಿದ್ಧವಾದ ದಜೋಪವೀತವನ್ನು ತ್ರಿಗುಣೀಕರಣಾದಿ ಮಂತ್ರಗಳಿಂದ ಅಭಿಮಂತ್ರಿಸಿ “ಯಜ್ಞಪವೀತಂ ಪರಮ"ಈ ಮಂತ್ರದಿಂದ ಧರಿಸತಕ್ಕದ್ದು. ಆ ವಿಧಾನ ಹೇಗಂದರೆ -ಗಾಯತ್ರಿಯಿಂದ ತ್ರಿಗುಣೀಕರಣಮಾಡಿ “ಆಪೋಹಿಷ್ಮಾ” ಈ ಮಂತ್ರದಿಂದ ತೊಳೆದು, ಪುನಃ ಗಾಯತ್ರಿಯಿಂದ ತ್ರಿಗುಣೀಕರಿಸಿ, ಗಂಟಿನಲ್ಲಿ “ಬ್ರಹ್ಮ-ವಿಷ್ಣು -ರುದ್ರ “ರನ್ನಾವಾಹನ ಮಾಡತಕ್ಕದ್ದು. ಕೆಲವರು ಒಂಭತ್ತು ಎಳೆಗಳಲ್ಲಿ ನವದೇವತೆಗಳ ಆವಾಹನಮಾಡಬೇಕನ್ನುವರು. ಆಮೇಲೆ ದಶಗಾಯತ್ರಿಯಿಂದ ಧರ್ಮಸಿಂಧು ಅಭಿಮಂತ್ರಿಸಿದ ಜಲದಿಂದ ತೊಳೆದು “ಉದುತ್ಯಂ’ ಎಂಬ ಮಂತ್ರದಿಂದ ಸೂರ್ಯನಿಗೆ ತೋರಿಸಿ “ಯಜ್ಞಪವೀತಂ” ಈ ಮಂತ್ರದಿಂದ ಮೊದಲು ಬಲಗೈಯನ್ನು ಮೇಲಕ್ಕೆತ್ತಿ ಎಡದ ಹೆಗಲಮೇಲೆ ಬರುವಂತೆ ಧರಿಸುವದು. ಇದು “ಉಪವೀತವಾಗುವದು. ಇದನ್ನೇ ಬಲದ ಹೆಗಲಿನಲ್ಲಿ ಮಾಡಿ ಎಡಗೈಯನ್ನು ಹೊರಗೆ ಮಾಡಿಕೊಂಡರೆ ಅದಕ್ಕೆ “ಪ್ರಾಚೀನಾವೀತ"ವನ್ನುವರು. ಎರಡೂ ಹಸ್ತಗಳನ್ನು ಹೊರಗೆ ಮಾಡಿ ಮಾಲಿಕೆಯಂತೆ ಕುತ್ತಿಗೆಯಲ್ಲಿ ಇಳಿಬಿಟ್ಟರೆ ಅದಕ್ಕೆ “ನಿವೀತ"ವೆನ್ನುವರು. ಚಿತಿಯ ಕಾಷ್ಟ, ಚಿತೆಯ ಧೂಮ, ಚಂಡಾಲ, ರಜಸ್ವಲೆ, ಶವ, ಸೂತಿಕಾ ಇವರ ಸ್ಪರ್ಶವಾದರೆ ಸ್ನಾನಮಾಡಿ ಯಜ್ಞಪವೀತವನ್ನು ತ್ಯಜಿಸಬೇಕು. ಮಲಮೂತ್ರಗಳ ವಿಸರ್ಜನೆಯಲ್ಲಿ “ನಿವೀತ” ಮಾಡಿಕೊಳ್ಳಬೇಕು. ಇತ್ಯಾದಿ ನಿಯಮವನ್ನು ಪಾಲಿಸದ ಮಲ-ಮೂತ್ರ ವಿಸರ್ಜನೆ ಮಾಡಿದರೆ ಯಜೋಪವೀತವು ತ್ಯಾಜ್ಯವಾಗುವದು ಮತ್ತು ನಾಲ್ಕು ತಿಂಗಳು ಕಳೆದಮೇಲೆ ಯಜೋಪವೀತವನ್ನು ಬದಲಿಸಬೇಕು. ಕೆಲವರು ಜನನ-ಮರಣ-ಅಶೌಚಗಳಲ್ಲೂ ಜನಿವಾರವನ್ನು ತ್ಯಜಿಸಬೇಕೆನ್ನುವರು. “ಸಮುದ್ರಂ ಗಚ್ಛಾಹಾ” ಈ ಮಂತ್ರದಿಂದ ಅಥವಾ ಓಂಕಾರಸಹಿತವಾದ ವ್ಯಾಹೃತಿಮಂತ್ರದಿಂದ ಉಪವೀತವನ್ನು ವಿಸರ್ಜಿಸತಕ್ಕದ್ದು. ಯಜೋಪವೀತದ ಅಭಾವದಲ್ಲಿ ಕೆಲವು ಪ್ರಾಯಶ್ಚಿತ್ತಗಳಿವೆ. ಯಜ್ಞಪವೀತವನ್ನು ಪ್ರಮಾದದಿಂದ ಕಳಕೊಂಡರೆ, ಲೌಕಿಕ ಯಜ್ಞಪವೀತವನ್ನು ಅಮಂತ್ರಕವಾಗಿ ಧರಿಸಿ “ಮನೋಜ್ಯೋತಿ” ಎಂಬ ಮಂತ್ರವನ್ನು ಹೇಳಿ “ಅಗ್ನವ್ರತಪತೇ ವ್ರತಂಚರಿಸ್ವಾಮಿ ತಚ್ಛಕೀಯಂ ತನ್ನ ರಾಧೃತಾಂ ಸ್ವಾಹಾ||೧|| ವಾಯೋವ್ರತಪತೇ=ಹಾ||೨|| ಆದಿತ್ಯವ್ರತಪತೇ= ಹಾ ||೩|| ವ್ರತಾನಾಂವ್ರತಪತ-ಹಾ||೪||” ಹೀಗೆ ನಾಲ್ಕು ಆಜ್ಞಾಹುತಿಗಳನ್ನು ಹಾಕಿ ವಿಧಿವತ್ತಾದ, ನೂತನ ಯಜ್ಞಪವೀತವನ್ನು ಧರಿಸತಕ್ಕದ್ದು. ಅಥವಾ “ಯಜ್ಞಪವೀತನಾಶ ಜನ್ಮ ದೋಷನಿರಾರಾರ್ಥಂ ಪ್ರಾಯಶ್ಚಿತ್ತಂ ಕರಿಷ್ಯ ಹೀಗೆ ಸಂಕಲ್ಪಿಸಿ ಆಚಾರ್ಯವರಣ, ಅಗ್ನಿ ಪ್ರತಿಷ್ಟಾದಿಗಳನ್ನು ಮಾಡಿ, ಸವಿತ್ರದೇವತೆಯನ್ನು ಗಾಯತ್ರಿಯಿಂದ, ತಿಲ, ಆಜ್ಯಗಳಿಂದ ಅಷ್ಟೋತ್ತರ ಶತ ಅಥವಾ ಸಹಸ್ರ ಸಂಖ್ಯಾಕವಾಗಿ ಹೋಮ ಮಾಡತಕ್ಕದ್ದು. ಅನಂತರ ಹೊಸ ಜನಿವಾರವನ್ನು ತೊಟ್ಟು ಅತಿಕ್ರಾಂತವಾದ ಸಂಧ್ಯಾವಂದನಾದಿಗಳನ್ನು ಮಾಡಬೇಕು. ಒಂದುಕ್ಷಣ ಪರ್ಯಂತವಾದರೂ ಯಜ್ಞಪವೀತ ರಹಿತನಾಗಿರಕೂಡದು. ಹಾಗಾದರೆ, ಪ್ರಾಯಶ್ಚಿತ್ತಕ್ಕಾಗಿ ನೂರು ಗಾಯತ್ರಿಯನ್ನು ಜಪಿಸಬೇಕು. ಉಪನೀತ ರಹಿತನಾಗಿ ಭೋಜನ ಮಾಡಿದಲ್ಲಿ ಎಂಟುಸಾವಿರ ಗಾಯತ್ರಿಯನ್ನು ಜಪಿಸಬೇಕು. ಎಡಹೆಗಲಿನಿಂದ ಕಳಚಿ ಮೊಳಕ್ಕೆ ಅಥವಾ ಮುಂಗೈಯಲ್ಲಿ ಬಿದ್ದರೆ ಯಥಾಸ್ಥಾನದಲ್ಲಿರಿಸಿ ಮೂರು ಅಥವಾ ಆರು ಪ್ರಾಣಾಯಾಮಗಳನ್ನು ಮಾಡಬೇಕು. ಅಂದರೆ ಮೊಳಕೈಯಲ್ಲಿ ಬಿದ್ದರೆ ಮೂರು, ಮುಂಗೈಯಲ್ಲಿ ಬಿದ್ದರೆ ಆರು ಪ್ರಾಣಾಯಾಮ ಮಾಡಿ ಹೊಸದನ್ನು ಧಾರಣ ಮಾಡಬೇಕು. ಕೋಪಾದಿಗಳಿಂದ ತಾನೇ ಯಜ್ಞಪವೀತವನ್ನು ತ್ಯಜಿಸಿದರೆ, ಪೂರ್ವದಂತೆ ಲೌಕಿಕ ಜನಿವಾರವನ್ನು ಧರಿಸಿ, ಪ್ರಾಯಶ್ಚಿತ್ತದ ನಂತರ ಹೊಸದನ್ನು ಧರಿಸಬೇಕು. ಬ್ರಾಹ್ಮಣನಿಗೆ ಒಂದೇ ಯಜೋಪವೀತವು. ಸ್ನಾತಕನಿಗೆ ಎರಡು ಇರತಕ್ಕದ್ದು, ಉತ್ತರೀಯದ ಅಭಾವದಲ್ಲಿ ಮೂರು, ಜೀವಿಸಿರುವ ತಂದೆ ಅಥವಾ ಅಣ್ಣ ಉಳ್ಳವನು, ಉತ್ತರೀಯವನ್ನಾಗಲೀ ಅಥವಾ ಅದರ ಾನದಲ್ಲಿ ಜನಿವಾರವನ್ನಾಗಲೀ ಧರಿಸಬಾರದು. ಆಯುಷ್ಕಾಮನಾದವನು ಮೂರಕ್ಕಿಂತ ಹೆಚ್ಚು ಜನಿವಾರಗಳನ್ನು ಧರಿಸುವದು. ಅಭ್ಯಂಗ, ಸಮುದ್ರಸ್ನಾನ, ಮಾತಾಪಿತೃಗಳ ಮೃತಾಹ ಪರಿಚ್ಛೇದ - ೩ ಪೂರ್ವಾರ್ಧ ಇವುಗಳಲ್ಲಿ ತೈತ್ತಿರೀಯ, ಕಠ, ಕಾಣ್ಯ, ಚರಕ, ವಾಜಸನೇಯಿ ಈ ಶಾಖೆಯವರು ಜನಿವಾರವನ್ನು ಕುತ್ತಿಗೆಯಿಂದ ತೆಗೆದು ತೊಳೆದು ಚೊಕ್ಕಮಾಡುವರು. ಅನ್ಯ ಯಜುರ್ವೇದಿಗಳು, ಋಗ್ವದಿಗಳು ಮತ್ತು ಸಾಮವೇದಿಗಳು ಕುತ್ತಿಗೆಯಿಂದ ಕಳಚಿದರೆ ಅದನ್ನು ಬಿಟ್ಟು ಬೇರೆ ಧಾರಣಮಾಡಬೇಕು. “ಮೇಖಲೆ” ಮುಂಜ-ಹುಲ್ಲುಗಳಿಂದ ಮೂ‌ಳೆಯಿಂದ ಮಾಡಿದ, ಸಮನಾಗಿರುವ, ನುಣುಪಾದ ಮೇಖಲೆಯನ್ನು ಧರಿಸಬೇಕು. ಅದು ಮೂರು ಸುತ್ತಿನ, ಒಂದು ಅಥವಾ ಮೂರು, ಇಲ್ಲವೆ ಐದು ಗಂಟುಗಳುಳ್ಳದ್ದಿರಬೇಕು. ಮುಂಜೆಯ ಹುಲ್ಲು ಸಿಗದಿದ್ದಾಗ ದರ್ಭ, ಕೋವಿದಾರ ಅಥವಾ ಬಿಲ್ವ ಇವುಗಳಿಂದ ತಯಾರಿಸಿದ್ದಿರಬೇಕು. “ದಂಡಾದಿ ಸಾಮಗ್ರಿಗಳು ಬ್ರಾಹ್ಮಣನಿಗೆ ಕೇಶಸ್ಪರ್ಶವಾಗುವಷ್ಟು ಉದ್ದವಾದ ಮುತ್ತುಗಲ ದಂಡವಿರಬೇಕು. ಇಲ್ಲವೆ ಎಲ್ಲರಿಗೂ ಯಾಜ್ಞೆಯ (ಔದುಂಬರ, ಶಮಿ ಇತ್ಯಾದಿ ) ಕಟ್ಟಿಗೆಯದಾದ, ಮೂಗಿನ ತುದಿಗೆ ನಿಲುಕುವಷ್ಟು ಉದ್ದವಾದ ದಂಡವಿರತಕ್ಕದ್ದು. ಇನ್ನು “ವೇದಿಯು- ವಟುವಿನ ನಾಲ್ಕು ಹಸ್ತ ಅಗಲವಾದ, ಹಸ್ತಪ್ರಮಾಣ ಎತ್ತರವಾದ ಮತ್ತು ಚೌಕೋನಿಯಾದ, ಮೆಟ್ಟಿಲುಗಳಿಂದ ಯುಕ್ತವಾದ, ಪೂರ್ವ, ಉತ್ತರಗಳಲ್ಲಿ ಸ್ವಲ್ಪ ತಗ್ಗಾಗಿರುವ, ಬಾಳೆ ಮೊದಲಾದವುಗಳಿಂದ ಅಲಂಕೃತವಾದ “ವೇದಿಕೆ"ಯಿರತಕ್ಕದ್ದು. ಇನ್ನು ಉಪನಯನಕ್ಕೆ ಬೇಕಾಗುವ ವಸ್ತುಗಳಲ್ಲಿ ವಿಶೇಷ ಹೇಳಲ್ಪಡುತ್ತದೆ. ವಟುವಿಗೆ ವಸ್ತ್ರವನ್ನು ಉಟ್ಟನಂತರ ಲೌಕಿಕ ಆಚಮನ, ಯಜ್ಞಪವೀತ ಧಾರಣೆಯ ನಂತರ ಯಥಾವಿಧಿ ಆಚಮನ ಮಾಡಿಸತಕ್ಕದ್ದು. ಆಜ್ಯಪಾತ್ರದ ಉತ್ತರಭಾಗದಲ್ಲಿ ವಟುವಿಗೆ ಆಚಮನ ಮಾಡಿಸಿ ತೀರ್ಥರೂಪವಾದ ಪ್ರಣೀತಾಪಾತ್ರದ ಪಶ್ಚಿಮ ಪ್ರದೇಶದಿಂದ ಪ್ರವೇಶಮಾಡಿಸಿ, ಆಚಾರ್ಯ ಮತ್ತು ಅಗ್ನಿ ಇವುಗಳ ಮಧ್ಯದಿಂದ ಒಯ್ದು ಆಚಾರ್ಯನ ಬಲಗಡೆಯಲ್ಲಿ ಕೂಡ್ರಿಸುವದು. ಆಮೇಲೆ ಬರ್ಹಿರಾಸ್ಕರಣ, ಸವಸಂಮಾರ್ಜನಾದಿಗಳನ್ನು ಮಾಡಿ ನಂತರ ಯಜ್ಞಪವೀತಧಾರಣ, ಆಚಮನಾದಿಗಳನ್ನು ಮಾಡಿಸಿ ಶಿಷ್ಯನ ಅಂಜಲಿಯಲ್ಲಿ ಜಲವನ್ನು ಕೊಟ್ಟು, ಸಮಿದಾಧಾನಾಂತ ಮಾಡಿಸಿ, ಗಾಯತ್ರುಪದೇಶಾಂಗವಾಗಿ, ವಟುವಿನ ಶುಚಿತ್ವ ಸಿದ್ಧಿಗಾಗಿ, “ಅಗ್ನಯೇ ಸಮಿಧಂ’ ಈ ಮಂತ್ರವನ್ನು ಏಕಶ್ರುತಿಯಿಂದ ಹೇಳಿಸುವದು. (ಸ್ವರಾದಿ ಜ್ಞಾನವು ವಟುವಿಗಾಗಿರದ್ದರಿಂದ ದಂಡಾಯಮಾನವಾಗಿ ಹೇಳಿಸುವದು) ಆಮೇಲೆ ಪರಿದಾನ (ಸೂರ್ಯ ಪ್ರಜಾಪತಿಗಳನ್ನು ಮನಸ್ಸಿನಿಂದ ವಟುವಿಗೆ ಕೊಡಿಸುವದು) ಮತ್ತು ಅಭಿವಾದನ ವರೆಗೆ ಮಾಡಿ ಆಚಾರದಂತೆ ಗಾಯತ್ರಿ ಪೂಜೆಯನ್ನು ಮಾಡಿ, ಅಗ್ನಿಯ ಉತ್ತರಭಾಗದಲ್ಲಿ ಗಾಯತ್ರಿಯನ್ನುಪದೇಶಿಸಬೇಕು. ಅವಕಾರಣ (ಅಂಜಲಿಯಲ್ಲಿ ಜಲಸೇಚನ ಮಾಡುವದು) ಇದನ್ನೂ ಉತ್ತರದಿಕ್ಕಿನಲ್ಲೇ ಮಾಡುವದು. ಪೂರ್ವಾಭಿಮುಖನಾದ ಆಚಾರ್ಯನು ಪಶ್ಚಿಮಾಭಿಮುಖನಾದ ವಟುವಿಗೆ ಗಾಯತ್ರ್ಯುಪದೇಶ ಮಾಡಬೇಕು. ಉಪಸಂಗ್ರಹಣ ಪ್ರಕಾರವು “ಅಮುಕಪ್ರವರಾನ್ವಿತ ಅಮುಕಗೋsಮುಕಶರ್ಮಾsಹಂ ಭೋ ಅಭಿವಾದಯೇ ಹೀಗೆ ಹೇಳಿ ಬಲ ಮತ್ತು ಎಡ ಕಿವಿಗಳನ್ನು, ಎಡ ಮತ್ತು ಬಲಕ್ಕೆಗಳಿಂದ ಸ್ಪರ್ಶಿಸಿಕೊಂಡು, ಬಲಹಸ್ತದಿಂದ ೨೩೨ ಧರ್ಮಸಿಂಧು ಗುರುವಿನ ಬಲಪಾದ, ಎಡಹಸ್ತದಿಂದ ಗುರುವಿನ ಎಡಪಾದವನ್ನು ಸ್ಪರ್ಶಿಸುವದು. ಇದಕ್ಕೆ “ಉಪಸಂಗ್ರಹಣ’ವನ್ನುವರು. ಇದರಂತೆ ಗುರು, ಮಾತಾಪಿತೃ ಮೊದಲಾದವರಿಗೆ ಅಭಿವಾದನವನ್ನು ಮಾಡಬೇಕು. ಅತಿವೃದ್ಧರಾದವರಿಗೆ “ಉಪಸಂಗ್ರಹಣ” ಅಗತ್ಯವಿಲ್ಲ. ಬರೇ ಅಭಿವಾದನ ಮಾತ್ರ ಮಾಡತಕ್ಕದ್ದು. ವೃದ್ಧರಾದವರೆಲ್ಲ ನಮಸ್ಕಾರ ಯೋಗ್ಯರು. ಅಶುಚಿಯಲ್ಲಿರುವ, ವಾಂತಿಮಾಡುತ್ತಿರುವ, ಅಭ್ಯಂಗಸ್ನಾನಮಾಡುತ್ತಿರುವ, ಜಪಾದಿಗಳಲ್ಲಾಸಕ್ತನಾಗಿರುವ, ಪುಷ್ಪ ಫಲ, ಭಿಕ್ಷಾ ಇತ್ಯಾದಿ ಭಾರವನ್ನು ಹೊತ್ತು ತರುತ್ತಿರುವ ಇಂಥ ಸಮಯದಲ್ಲಿ ಅವರಿಗೆ ನಮಸ್ಕಾರ ಮಾಡಬಾರದು. ಅಂಥವರಿಗೆ ನಮಸ್ಕರಿಸಿದರೆ, “ಉಪವಾಸವು ಪ್ರಾಯಶ್ಚಿತ್ತವು. ಪ್ರತ್ಯಭಿವಾದನ 01 (ಅಭಿವಾದನ ಮಾಡುವವನಿಗೆ ಆಶಿರ್ವಾದ ಮಾಡುವದಕ್ಕೆ ” ಪ್ರತ್ಯಭಿವಾದನ"ವೆನ್ನುವರು.) ಪ್ರತ್ಯಭಿವಾದನ ಮಾಡುವಾಗ ತುದಿಯ ಸ್ವರವನ್ನು “ಪುತ” (ಮೂರು ಮಾತ್ರೆಗಳುಳ್ಳ)ವಾಗಿ ಉಚ್ಚರಿಸಬೇಕು. “ಆಯುಷ್ಮಾನ್‌ಭವ ಸೌಮ್ಯ ದೇವದತ್ತಾ” (೩) ಹೀಗೆ ಉಚ್ಚರಿಸಬೇಕು. ಇಕಾರಾಂತ, ಉಕಾರಾಂತ ನಾಮಗಳಾದರ ಹರಿ ಈ ನಾಮಕ್ಕೆ “ಹರಾ (೩)” ಎಂದು ಆಕಾರಾಂತವಾಗಿಯೂ, “ಶಂಭು” ಈ ಉಕಾರಾಂತದಲ್ಲಿ ಶಂಭಾ (೩) ಉ. ಹೀಗೆ ಸಂಧಿ ಅಕ್ಷರಗಳನ್ನು ವಿಶ್ಲೇಷಣ ಮಾಡಿ ಉಚ್ಚರಿಸಬೇಕು. ಅಂದರೆ ಪೂರ್ವಭಾಗದ ಅಕಾರವು “ಪ್ಪುತ"ವಾಗತಕ್ಕದ್ದು. “ಅನುಪ್ರವಚನೀಯ"ಅಂಗವಾದ “ಭಿಕ್ಷೆ"ಯಲ್ಲಿ ‘ಭಿಕ್ಷಾಂ ಭವಾನ್ ದದಾತು, ಭಿಕ್ಷಾಂ ಭವತೀ ದದಾತು” ಹೀಗಾಗಲೀ ಅಥವಾ ಭವತ್ ಶಬ್ದವೇ ಮಧ್ಯದಲ್ಲುಳ್ಳ “ಭಿಕ್ಷಾ” ವಾಕ್ಯವನ್ನು ಪ್ರಯೋಗಿಸತಕ್ಕದ್ದು. ಸಾಯಂ, ಪ್ರಾತಃಕಾಲಗಳ ಭಿಕ್ಷೆಯಲ್ಲಿ ಆದಿಯಲ್ಲಾಗಲೀ, ಅಂತ್ಯದಲ್ಲಾಗಲೀ ‘ಭವತ್‌’ ಶಬ್ದವನ್ನುಚ್ಚರಿಸಬೇಕು. ವಿನಾಯಕ ಶಾಂತಿ ಉಪನಯನ, ವಿವಾಹಾದಿಗಳಲ್ಲಿ ನಿರ್ವಿಘ್ನ ಫಲಪ್ರಾಪ್ತಿಗಾಗಿ ಅಥವಾ ಉತ್ಪಾತಾದಿ ಪೀಡಾಪರಿಹಾರಕ್ಕಾಗಿ, ಇಲ್ಲವೆ ಸಪಿಂಡರ ಮರಣಾದಿಗಳ ಮೂಲಕ ಉಂಟಾದ ಪ್ರತಿಕೂಲ ನಿವೃತ್ತಿಗಾಗಲೀ ವಿನಾಯಕ ಶಾಂತಿ ಮಾಡಬೇಕೆಂದು ಹೇಳಿದೆ. ಅದಕ್ಕೆ ಶುಕ್ಲಪಕ್ಷದ ಚತುರ್ಥಿ, ಗುರುವಾರಗಳೂ, ಪುಷ್ಯ, ಶ್ರವಣ, ಉತ್ತರಾ, ರೋಹಿಣೀ, ಹಸ್ತ, ಅಶ್ವಿನೀ, ಮೃಗಶಿರಾ ಈ ನಕ್ಷತ್ರಗಳ ಪ್ರಶಸ್ತ್ರಗಳು, ಉಪನಯನಾದಿಗಳಲ್ಲಿ ಮುಹೂರ್ತವನ್ನು ಮುಖ್ಯವಾಗಿ ಪ್ರಧಾನಕರ್ಮಕಾಲದಲ್ಲಿರುವಂತೆ ನೋಡಬೇಕು. ಸಾಧ್ಯವಿಲ್ಲದಾಗ ಯಥಾಸಂಭವ ನೋಡತಕ್ಕದ್ದು. “ಅಮುಕ ಕರ್ಮ ನಿರ್ಮಿತ ಫಲ ಸಿದ್ಧರ್ಶ” ಎಂಜಾಗಲೀ, “ಉಪಸರ್ಗ ನಿವೃತ್ಯರ್ಥಂ” ಎಂದಾಗಲೀ ಸಂಕಲ್ಪಿಸುವದು, ಬಳಿದ ಪ್ರಯೋಗಗಳನ್ನು ಅನ್ಯ ಗ್ರಂಥಗಳಲ್ಲಿ ನೋಡತಕ್ಕದ್ದು. ಗ್ರಹಯಜ್ಞವಿಚಾರ ವಿವಾಹ, ಉಪನಯನಾದಿಗಳಲ್ಲಿ ಮತ್ತು ಅಭ್ಯುದಯಿಕ (ಪೌಷ್ಟಿಕ) ಕರ್ಮಗಳಲ್ಲಿಯೂ ಆದಿಯಲ್ಲಿ ಗ್ರಹಯಜ್ಞವನ್ನು ಮಾಡಬೇಕು. ಶ್ರಾಪ್ತರಹಿತಗಳಾದ ಶಾಂತ್ಯಾದಿ ನೈಮಿತ್ತಿಕಗಳಲ್ಲಿಯೂ ಪರಿಚ್ಛೇದ - ೩ ಪೂರ್ವಾರ್ಧ DAA ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು ಮಾಡಬೇಕು. ಅರಿಷ್ಟನಿವಾರಕ ಶಾಂತಿ ಅಥವಾ ಉತ್ಪಾತಾದಿ ಶಾಂತಿಗಳಲ್ಲಿ ಇದು ಪ್ರಧಾನವಲ್ಲದಿದ್ದರೂ ಗ್ರಹಯಜ್ಞ ಮಾಡಲು ಹೇಳಿದೆ. ಪ್ರಧಾನ ಕರ್ಮಾಂಗವಾಗಿ ಇದನ್ನು ಮಾಡುವಾಗ ಕರ್ಮದ ಮೊದಲು ಸಮಾನತಂತ್ರವಾಗಿ ಅಥವಾ ಪ್ರತ್ಯೇಕವಾಗಿ ಮಾಡಬಹುದು. ಪ್ರತ್ಯೇಕಮಾಡುವದಿದ್ದಲ್ಲಿ ಪ್ರಧಾನ ಕರ್ಮಕ್ಕಿಂತ ಮೊದಲು ಏಳು ದಿನಗಳಿಗಿಂತ ಹೆಚ್ಚು ದಿನಗಳಾಗಿರಕೂಡದು. ಅಂದರೆ ಗ್ರಹಶಾಂತಿ ಮಾಡಿದ ಏಳು ದಿನಗಳೊಳಗೆ ಪ್ರಧಾನಕರ್ಮ ಮಾಡಿದರೆ ಆ ಗ್ರಹಶಾಂತಿಯು ಅದರ ಅಂಗವೇ ಆಗುವದಂದಭಿಪ್ರಾಯ. “ಋತ್ವಿಜರ ಸಂಖ್ಯಾ” ವಿಚಾರ:- ಪ್ರತಿಗ್ರಹಕ್ಕೆ ಹತ್ತಕ್ಕಿಂತ ಕಡಿಮೆ ಪ್ರಧಾನಾಹುತಿ ಮಾಡುವದಿದ್ದಲ್ಲಿ ಒಬ್ಬನೇ ಋತ್ವಿಜನು, ಹತ್ತಕ್ಕಿಂತ ಹೆಚ್ಚು, ಐವತ್ತು ಆಹುತಿಪರ್ಯಂತ ನಾಲ್ಕು ಋತ್ವಿಜರು. ಆಮೇಲೆ ನೂರರ ಒಳಗೆ ಎಂಟು ಋತ್ವಿಜರು, ಆಗ ಆಚಾರ್ಯನು ಒಂಭತ್ತನೇಯವನಾಗುವನು. ಆಚಾರ್ಯನು ಆಚಾರ್ಯಕರ್ಮವನ್ನು ಮಾಡಿ ಆದಿತ್ಯ ಹೋಮವನ್ನು ತಾನೇ ಮಾಡಬೇಕು. ಉಳಿದ ಸೋಮಾದಿ ಎಂಟು ಗ್ರಹರ ಹೋಮವನ್ನು ಉಳಿದ ಋತ್ವಿಜರು ಮಾಡತಕ್ಕದ್ದು. ನಾಲ್ಕು ಋತ್ವಿಜರಾದಾಗ ಒಬ್ಬೊಬ್ಬರು ಎರಡೆರಡು ಗ್ರಹರ ಹೋಮವನ್ನು ಮಾಡುವದು. ಸೂರ್ಯಹೋಮವನ್ನು ಆಚಾರ್ಯನೇ ಮಾಡಬೇಕು. ಪ್ರತಿಮೆಗಳನ್ನು ತಾಮ್ರಾದಿ ಅಥವಾ ಎಲ್ಲವನ್ನೂ ಸುವರ್ಣದಿಂದಲೇ ಮಾಡಬಹುದು. ಫಲಗಳಲ್ಲಿ ಅಥವಾ ಅಕ್ಕಿಯ ರಾಶಿಯಲ್ಲಿ ಆದಿತ್ಯಾದಿಗಳನ್ನು ಪೂಜಿಸುವದು. ಕುಂಡ-ಸ್ಪಂಡಿಲ ನಿರ್ಣಯ ಹೋಮಸಂಖ್ಯಾನುಸಾರ ಕುಂಡ ಅಥವಾ ಸ್ಪಂಡಿಲವಿರತಕ್ಕದ್ದು, ಮತ್ತು ಗ್ರಹ ವೇದಿಯನ್ನೂ ಮಾಡಬೇಕು. ಇವುಗಳಿಗೆ ಹಸ್ತಾದಿ ಪ್ರಮಾಣವನ್ನು ಹೇಳಲಾಗಿದೆ. ಪ್ರಧಾನಾಹುತಿಗಳು ಐವತ್ತರೊಳಗಾದರೆ “ರತ್ನ ಪ್ರಮಾಣದ ಕುಂಡವಿರತಕ್ಕದ್ದು, ನೂರರೊಳಗಾದರೆ “ಆರ” ಪ್ರಮಾಣ. ಮುಂದೆ ಸಾವಿರದ ಒಳಗೆ ಹಸ್ತ ಪ್ರಮಾಣವು ಹತ್ತು ಸಾವಿರಕ್ಕೆ ಎರಡು ಹಸ್ತಗಳು. ಲಕ್ಷ ಹೋಮದಲ್ಲಿ ನಾಲ್ಕು ಹಸ್ತಗಳು, ಮುಷ್ಟಿ ಮಾಡಿದ ಮೊಳಪ್ರಮಾಣಕ್ಕೆ “ರತ್ನ” ಎನ್ನುವರು. ಕಿರಿಬೆರಳನ್ನು ಮಾತ್ರ ನೆಟ್ಟಗೆ ಮಾಡಿದ ಮೊಳಕ್ಕೆ “ಆರ"ಎನ್ನುವರು. ಇಪ್ಪತ್ತುನಾಲ್ಕು ಅಂಗುಲ (ಹದಿನೆಂಟು ಇಂಚು) ಗಳಿಗೆ “ಹಸ್ತಪ್ರಮಾಣ"ವೆನ್ನುವರು. ಒಂದು ಯವ ಕಡಿಮೆಯಾದ ಮೂವತ್ತುನಾಲ್ಕು ಅಂಗುಲಗಳಿಗೆ “ದ್ವಿಹಸ್ತ"ವೆಂದಾಗುವದು. ನಾಲ್ವತ್ತೆಂಟು ಅಂಗುಲಗಳಿಗೆ “ಹಸ್ತಚತುಷ್ಟಯ"ವೆನ್ನುವರು. ಇನ್ನು ಕುಂಡಕ್ಕೆ ಮಾಡಬೇಕಾದ ಮೇಖಲಾ, ಯೋನಿ, ನಾಭಿ, ಖಾತ ಮೊದಲಾದ ಪ್ರಮಾಣಗಳನ್ನು ಬೇರೆ-ಬೇರೆ (ಕುಂಡರ್ಕಾದಿ) ಗ್ರಂಥಗಳಿಂದ ತಿಳಿಯುವದು. ಈ ಕುಂಡಾದಿ ಪ್ರಮಾಣವನ್ನು ಸಾಮಾನ್ಯ ಎಲ್ಲ ಹೋಮ, ಹವನಗಳಿಗೂ ತಿಳಿಯತಕ್ಕದ್ದು. ಗ್ರಹಶಾಂತಿಯಲ್ಲಿ ಸಮಿತ್-ಚರು-ಆಜ್ಯಗಳು ದ್ರವ್ಯಗಳು, (ಹೋಮವಸ್ತು) ಎಕ್ಕೆ, ಮುತ್ತುಗ, ಖೈರ, ಉತ್ತರಣೀ, ಅಶ್ವತ್ಥ, ಅತ್ರಿ, ಶಮೀ, ದೂರ್ವಾ, ದರ್ಭ ಇವು ಕ್ರಮದಿಂದ ಸೂರ್ಯಾದಿಗಳಿಗೆ ಸಮಿಧಗಳು, ಕೆಲವರು ಬರೇ ತಿಲಗಳನ್ನು ‘ದ್ರವ್ಯ’ವೆಂದು ಹೇಳುವರು. ಸೂರ್ಯಾದಿ ಮುಖ್ಯದೇವತೆಗಳ ಸಲುವಾಗಿ ಹೋಮ ಸಂಖ್ಯೆಯ ದಶಾಂಶ ಸಂಖ್ಯೆಯಿಂದ ಅಧಿದೇವತಾ, ಪ್ರತ್ಯಧಿದೇವತೆಗಳಿಗೆ ಹೋಮಿಸಬೇಕು. ಈ ಅಧಿಪ್ರಧಿದೇವತೆಗಳಿಗೆ ಮಾಡಿದ ಸಂಖ್ಯೆಯ ೨೩೪ ಧರ್ಮಸಿಂಧು ಅರ್ಧಸಂಖ್ಯೆಯಿಂದ ಕ್ರತುಸಂರಕ್ಷಕ ಹಾಗೂ ಕ್ರತುಸಾದ್ಗುಣ್ಯದೇವತೆಗಳಿಗೆ ಹೋಮಿಸತಕ್ಕದ್ದು. ಶಾಂತ್ಯಂಗವಾಗಿ ಮಾಡಿದ ಗ್ರಹಯಜ್ಞದಲ್ಲಿ ಬಲಿದಾನವನ್ನು ಮಾಡುತ್ತಾರೆ. ಉಳಿದ ಗ್ರಹಯಜ್ಞದಲ್ಲಿ ಬಲಿದಾನ ಮಾಡುವದಿಲ್ಲ. ಪ್ರಧಾನಭೂತವಾದ ಆಹುತಿಗೊಬ್ಬರಂತೆ ಬ್ರಾಹ್ಮಣಸಂತರ್ಪಣೆಯನ್ನು ಮಾಡತಕ್ಕದ್ದು. ಇದು ಉತ್ತಮ ಕ್ರಮ. ನೂರಾಹುತಿಗೊಬ್ಬನಂತೆ ಮಾಡುವದು ಮಧ್ಯಮ. ಸಹಸ್ರಾಹುತಿಗೊಬ್ಬರಂತ ಮಾಡುವದು ಕನಿಷ್ಠವು. ಸವಿಸ್ತರ ಪ್ರಯೋಗಾದಿಗಳನ್ನು ಬೇರೆಕಡೆಗೆ ನೋಡತಕ್ಕದ್ದು. ಹೀಗೆ ಗ್ರಹಯಜ್ಞವು. ಬೃಹಸ್ಪತಿ ಶಾಂತಿ ಕುಮಾರಕನ ಉಪನಯನ ಕಾಲದಲ್ಲಿ ಅಥವಾ ಕನೈಯ ವಿವಾಹ ಕಾಲದಲ್ಲಿ ಗುರುವು ಪ್ರತಿಕೂಲನಾದರೆ ಶೌನಕಾದಿಗಳಿಂದ ಹೇಳಲ್ಪಟ್ಟ ಶಾಂತಿಯನ್ನು ಮಾಡಬೇಕು. “ಅಸ್ಯ ಕುಮಾರಸ್ಯ ಉಪನಯನೇ ಅಸ್ಕಾ: ಕುಮಾರ್ಯಾ: ವಿವಾಹವಾ ಬೃಹಸ್ಪತ್ಯಾನುಕೂಲ್ಯ ಸಿದ್ಧಿದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಬೃಹಸ್ಪತಿಶಾಂತಿಂ ಕರಿಷ್ಯ ಹೀಗೆ ಸಂಕಲ್ಪಿಸಿ ಆಚಾರ್ಯವರಣಮಾಡಬೇಕು. ಸ್ಥಂಡಿಲದ ಈಶಾನ್ಯದಿಕ್ಕಿನಲ್ಲಿ ಬಿಳೇ ಕಲಶವನ್ನು ಸ್ಥಾಪಿಸುವದು. ಅದರಲ್ಲಿ ಪಂಚಗವ್ಯ, ಕುಶೋದಕ, ವಿಷ್ಣುಕ್ರಾಂತ, ಶತಾವರೀ ಮೊದಲಾದ ಮುಖ್ಯ ಔಷಧವಸ್ತುಗಳನ್ನು ಹಾಕಬೇಕು. ಆಮೇಲೆ ಪೂರ್ಣ. ತ್ರಾಂತಮಾಡಿ ಹಳದಿ ಅಕ್ಷತಗಳಿಂದ ನಿರ್ಮಿಸಿದ ದೀರ್ಘಚತುರಸ್ರ ಮಂಡಲದಲ್ಲಿ ಬಂಗಾರದ ಗುರುಗ್ರತಿಮೆಯನ್ನು ಸ್ಥಾಪಿಸಿ ಸ್ಥಂಡಿಲದಲ್ಲಿ ಅಗ್ನಿಪ್ರತಿಷ್ಠಾದಿಗಳನ್ನು ಮಾಡಿ, ಅನ್ಯಾಧಾನದಲ್ಲಿ ‘ಬಸ್ಸತಿಂ ಅಶ್ವತ್ಥ ಸಮಿದಾಜ್ಯ ಸಪ್ರಿರ್ಮಿಶ್ರ ಪಾಯಸೈ: ಸಾಜೈನ ಮಿಶ್ರಿತ ಯವ ಸ್ನೇಹಿ ತಿಲೇನ ಚ ಪ್ರತಿದ್ರವ್ಯಂ ಅಷ್ಟೋತ್ತರ ಶತಾಹುತಿಭಿ: ಶೇಷೇಣ” ಇತ್ಯಾದಿ. ಆಜ್ಯಭಾಗಾಂತದಲ್ಲಿ ಪ್ರತಿಮೆಯಲ್ಲಿ ಗುರುವನ್ನು ಷೋಡಶೋಪಚಾರಗಳಿಂದ ಪೂಜಿಸತಕ್ಕದ್ದು. ಈ ಉಪಚಾರಗಳಲ್ಲಿ ಹಳದೀವಸ್ತ್ರಯುಗ್ಯ, ಹಳದೀ ಯಜ್ಞಪವೀತ, ಹಳದೀ ಚಂದನ, ಹಳದೀ ಅಕ್ಷತ, ಹಳದೀಪುಷ್ಪ, ತುಪ್ಪದ ದೀಪ, ಮೊಸರನ್ನ ನೈವೇದ್ಯ ಇತ್ಯಾದಿಗಳಿಂದ ಅರ್ಚಿಸುವದು. ಮಾಣಿಕ್ಕೆ ಅಥವಾ ಬಂಗಾರವನ್ನು ದಕ್ಷಿಣೆ ಕೊಡತಕ್ಕದ್ದು. ಗ್ರಹಶಾಂತು ರೀತಿಯಿಂದ ಕಲಶ ವಿಸರ್ಜನಾನಂತರ ಬೃಹಸ್ಪತಿ ಮಂತ್ರದಿಂದ ಮೊಸರು, ಜೇನುತುಪ್ಪಗಳಿಂದ ಯುಕ್ತವಾದ ಸಮಿಧ, ಆಜ್ಯ, ಗೃಹಸಿದ್ಧವಾದ ಪಾಯಸ ಇವುಗಳಿಂದ ಮಿಶ್ರಿತವಾದ ಯವಾದಿಗಳಿಂದ ಅನ್ನಾಧಾನಕ್ಕನುಸಾರವಾಗಿ ಹೋಮಮಾಡತಕ್ಕದ್ದು. ಹೋಮಶೇಷವನ್ನು ಮುಗಿಸಿ ಗಂಧಾದಿಗಳಿಂದ ಬೃಹಸ್ಪತಿಯನ್ನು ಪೂಜಿಸಿ, ಹಳದೀ-ಗಂಧ, ಅಕ್ಷತ, ಪುಷ್ಪಗಳಿಂದ ಯುಕ್ತವಾದ ತಾಮ್ರಪಾತ್ರ ಜಲದಿಂದ ಅರ್ಭ್ಯವನ್ನು ಕೊಡಬೇಕು. ಅದಕ್ಕೆ “ಗಂಭೀರಢರೂಪಾಂಗ ದೇವೇ ಸುಮತೀಪ್ರಭೋ ನಮಸ್ತೆವಾಕ್ ಪಶಾಂತ ಗೃಹಾಣಾರ್ಘ ನಮೋಸ್ತುತೇ” ಇದೆ ಮಂತ್ರವು, ಆಮೇಲೆ ಪ್ರಾರ್ಥನ:- “ಭಕ್ತಾಯ ಸುರಾಚಾರ್ಯ ಕೂಮಪೂಜಾರಿ ಸಂಸ್ಕೃತು ತತ್ತ್ವಂ ಗೃಹಾಣ ಶಾಂತ್ಯರ್ಥಂ ಬೃಹಸ್ಪತೇ ನಮೋನಮ ಜೀವೋ ಬೃಹಸ್ಪತಿ: ಸೂರಿರಾಚಾರ್ಯ ಗುರುರುಗಿದಾತ ವಾಚಸ್ವತಿರ್ದವಮಂತ್ರಿ ಶುಭಂ ಕುರ್ಯಾತ್ಸರಾ ಮಮ ಆಮೇಲೆ ವಿಸರ್ಜನ, ಪ್ರತಿಮಾದಾನಮಾಡಿ ಕುಮಾರ ಸಹಿತನಾದ ಯಜಮಾನನಿಗೆ ಅಭಿಷೇಕ ಮಾಡತಕ್ಕದ್ದು. ಅಭಿಷೇಕ ಮಂತ್ರಗಳು. “ಆಪೋಟಾ, ತತ್ವಾಯಾಮಿ, ಸ್ವಾದಿಷ್ಠಯಾ, ಸಮುದ್ರಾ, ಇದಮಾಪ: ಪರಿಚ್ಛೇದ - ೩ ಪೂರ್ವಾರ್ಧ ೨೩೫ ಪ್ರವಹ, ತಾಮಗ್ನಿವರ್ಣಾಂ, ಯಾ ಓಷಧೀ, ಅಶ್ವಾವತೀರ್ಗೊಮತೀರ್ಥ, ಯದ್ದೇವಾ, ದೇವಹೇಡನಂ” ಇತ್ಯಾದಿ ‘ಪುನರ್ಮನಃ ಪುನರಾಯು’ ಇಲ್ಲಿವರೆಗಿನ ಕೂಾಂಡ ಮಂತ್ರಗಳು. (ಇವು ತೈತ್ತಿರೀಯ ಶಾಖೆಯಲ್ಲಿ ಪ್ರಸಿದ್ಧಗಳು) ಇವೆಲ್ಲ ಅಭಿಷೇಕ ಮಂತ್ರಗಳೆಂದು ಕೌಸ್ತುಭಾದಿಗಳಲ್ಲಿ ಹೇಳಿದೆ. ಯಥಾಶಕ್ತಿ ಬ್ರಾಹ್ಮಣ ಭೋಜನ ಮಾಡಿಸುವದು. ಹೀಗೆ ಬೃಹಸ್ಪತಿ ಶಾಂತಿಯು. ಉಪನಯನಾದಿಗಳಲ್ಲಿ ಸಂಕಲ್ಪ ವಿಶೇಷ ಉಪನಯನದ ಮುಂಚಿನ ದಿನ ಆಚಾರ್ಯನು “ಮಮ ಉಪನೇತೃತ್ವ ಯೋಗ್ಯತಾಸಿಧ್ಯರ್ಥಂ ಕೃಚ್ಛತ್ರಯಂ ತತ್ಪ ತಾಮ್ನಾಯ ಗೋನಿಯೀಭೂತ ಯಥಾಶಕ್ತಿ ರಜತದ್ರವ್ಯದಾನೇನ ಅಹಮಾಚರಿಷ್ಯ ದ್ವಾದಶಾಧಿಕಸಹಸ್ರ ಗಾಯತ್ರೀಜಪಂ ಉಪನೇತೃತ್ವ ಯೋಗ್ಯತಾಸಿದ್ಧರ್ಥಂ ಕರಿ” ಹೀಗೆ ಸಂಕಲ್ಪಿಸುವದು. ಪೂರ್ವಸಂಸ್ಕಾರಗಳು ಅತೀತಗಳಾದಲ್ಲಿ “ಅಸ್ಯ ಕುಮಾರಕಸ್ಯ ಪುಂಸವನಾದೀನಾಂ ಅಥವಾ ಜಾತಕರ್ಮಾದೀನಾಂ ಚೌಲಾಂತಾನಾಂ ಸಂಸ್ಕಾರಾಣಾಂ ಕಾಲಾತಿಪತ್ತಿಜನಿತ ಪ್ರತ್ಯವಾಯ ಪರಿಹಾರದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರತಿಸಂಸ್ಕಾರಂ ಏಕಾಂ ಓಂ ಭೂರ್ಭುವಃ ಸ್ವಾಹಾ ಇತಿ ಸಮಸ್ತ ವ್ಯಾಹತ್ಯಾ ಆಜ್ಯಾಹುಂ ಹೋಷ್ಕಾಮಿ” ಹೀಗೆ ಸಂಕಲ್ಪಿಸಿ ಅಗ್ನಿಸ್ಥಾಪನ, ಇಧ್ಯಾಧಾನ ಮೊದಲಾದ ಪಾಕಯಜ್ಞ ತಂತ್ರಸಹಿತವಾದ ವಸ್ಥಾಪನ, ಆಜ್ಯ ಸಂಸ್ಕಾರ, ಪಾತ್ರಸಂಮಾರ್ಜನ ಇಷ್ಟು ಮಾತ್ರ ಮಾಡಿಯಾದರೂ ಅಡ್ಡಿ ಇಲ್ಲ. ಅತೀತ ಸಂಸ್ಕಾರಕ್ಕೆ ಸರಿಯಾದ ಸಂಖ್ಯೆಯಿಂದ ಸಮಸ್ತ ವ್ಯಾಹೃತಿಗಳಿಂದ ಆಜ್ಞಾಹುತಿಯನ್ನು ಹೋಮಿಸತಕ್ಕದ್ದು. ನಂತರ “ಅಸ್ಯ ಕುಮಾರಸ್ಯ ಪುಂಸವನ, ಅನವಲೋಭನ, ಸೀಮಂತೋನ್ನಯನ, ಜಾತಕರ್ಮ, ನಾಮಕರ್ಮ, ಸೂರ್ಯಾವಲೋಕನ, ನಿಷ್ಕಮಣ, ಉಪವೇಶನ, ಅನ್ನಪ್ರಾಶನ, ಚೌಲ ಸಂಸ್ಕಾರಾಣಾಂ ಲೋಪನಿಮಿತ್ತ ಪ್ರತ್ಯವಾಯಪರಿಹಾರಾರ್ಥಂ ಪ್ರತಿಸಂಸ್ಕಾರಂ ಪಾರಕೃಚ್ಛಪ್ರಾಯಶ್ಚಿತ್ತಂ ಚೌಲಸ್ಕ ಅರ್ಧಕೃಂ (ಬುದ್ಧಿ ಪೂರ್ವಕ ಲೋಪವಾದಲ್ಲಿ ಪ್ರತಿಸಂಸ್ಕಾರಕ್ಕೂ ಅರ್ಧಕೃಚ್ಛವು ತತ್ಪತ್ಯಾಮ್ನಾಯ ಗೋನಿಯೀಭೂತ ಯಥಾಶಕ್ತಿ ರಜತದಾನೇನ ಅಹಮಾಚರಿ” ಇತ್ಯಾದಿ. ಇನ್ನು ಕುಲಾಚಾರದಂತೆ ಉಪನಯನ ಸಂಗಡ ಚೌಲಮಾಡುವದಿದ್ದಲ್ಲಿ ಅದರ ಕಾಲಾತಿಪತ್ತಿಹೋಮ ಮತ್ತು ಚೌಲಲೋಪ ಪ್ರಾಯಶ್ಚಿತ್ತಗಳನ್ನು ಮಾಡತಕ್ಕದ್ದಿಲ್ಲ. ಕೆಲವರು ಸಂಸ್ಕಾರಲೋಪ ಪ್ರಾಯಶ್ಚಿತ್ತವನ್ನು ವಟುವಿನಿಂದ ಮಾಡಿಸುತ್ತಾರೆ. ವಟುವು “ಮಮ ಕಾಮಚಾರ, ಕಾಮವಾದ, ಕಾಮಭಕ್ಷಣಾದಿ ದೋಷಪರಿಹಾರದ್ವಾರಾ ಉಪನೇಯತ್ನ ಯೋಗ್ಯತಾಸಿಧ್ಯರ್ಥಂ ಕೃಚ್ಛತ್ರಯ ಪ್ರಾಯಶ್ಚಿತ್ತಂ ತತ್ಸತ್ಯಾಮ್ಯಾಯ ಗೋನಿಯೀಭೂತ ಯಥಾಶಕ್ತಿ ರಜತದಾನದ್ವಾರಾ ಆಚರಿ” ಹೀಗೆ ಸಂಕಲ್ಪಿಸುವದು. ನಿಮ್ಮ ನಿಷ್ಕರ್ಧ, ನಿಷ್ಕಪಾದ ಅಥವಾ ನಿಷ್ಕವಾದಾರ್ಧ ಪ್ರಮಾಣದ ಬೆಳ್ಳಿಯನ್ನು ಗೋವಿನ ಮೂಲವಾಗಿ ಕೂಡಬೇಕು. ಇದಕ್ಕೂ ಕಡಿಮೆ ಕೊಡಕೂಡದು. ಎಂಟು ಗುಂಜಿಗಳಿಗೆ ಒಂದು “ಮಾಷ”, ಈ ಪ್ರಮಾಣದ ನಾಲ್ವತ್ತು ಮಾಷಗಳಿಗೆ ಒಂದು “ನಿಷ್ಕ” ಎಂದು ಹೇಳಿದೆ. ಪ್ರಾಯಶ್ಚಿತ್ತವನ್ನು ಮಾಡಿದ ನಂತರ ಅತಿಕ್ರಾಂತ ಕರ್ಮವನ್ನು ಮಾಡಬೇಕೆಂದು ಕೆಲವರನ್ನುವರು. ಹಾಗೆ ಮಾಡಬೇಕೆಂದೇನೂ ಇಲ್ಲವೆಂದು ಕೆಲವರನ್ನುವರು. ಅಂತೂ ವಿಕಲ್ಪವಿರುವದರಿಂದ ಮಾಡಬಹುದು; ಅಥವಾ ಬಿಡಬಹುದು.“ಪ್ರಾಯಶ್ಚಿತ್ತದಿಂದ ಪ್ರತ್ಯವಾಯ ಪರಿಹಾರವಾದರೂ, ಸಂಸ್ಕಾರಗಳಿಂದುಂಟಾಗುವ ೨೩೬ ಧರ್ಮಸಿಂಧು ಅಪೂರ್ವ (ಫಲ) ಉತ್ಪತ್ತಿಗಾಗಿ ಸಂಸ್ಕಾರಗಳನ್ನು ಮಾಡಬೇಕು” ಎಂಬ ಪಕ್ಷದಂತೆ ಮಾಡುವದಿದ್ದಲ್ಲಿ -ಪತ್ನಿ ಕುಮಾರ ಸಹಿತನಾಗಿ ದೇಶಕಾಲಗಳನ್ನುಚ್ಚರಿಸಿ “ಅಕ್ಕ ಕುಮಾರಕಸ್ಯ ಗರ್ಭಾಂಬುಪಾನಜನಿತ ದೋಷನಿಬರ್ಹಣ ಆಯುರ್ಮೇಧಾಭಿವೃದ್ಧಿ, ಬೀಜಗರ್ಭಸಮುದ್ಭನೋ ನಿಬರ್ಹಣದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅತಿಕ್ರಾಂತಂ ಜಾತಕರ್ಮ ತಥಾ ಬೀಜ ಗರ್ಭಿ ನಿಬರ್ಹಣಾಯುರಭಿವೃದ್ಧಿ ವ್ಯವಹಾರಸಿದ್ಧಿದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ನಾಮಕರ್ಮ, ಆಯುರಭಿವೃದ್ಧಿದ್ಯಾರಾ ಸೂರ್ಯಾವಲೋಚನಂ ಆಯುಶ್ರೀ=ನಿಮಣಂ, ಆಯುರಭಿವೃದ್ಧಿ=ಉಪವೇಶನ, ಮಾತೃಗರ್ಭಮಲಪ್ರಾಶನ ಶುಧನ್ನಾದ ಬ್ರಹ್ಮವರ್ಚಸ್, ತೇಜ ಇಂದ್ರಿಯಾಯುರಭಿವೃದ್ಧಿ ಬೀಜ=ಅನ್ನಪ್ರಾಶನಂ ಚ ಕರಿಷ್ಯ, ಬೀಜಗರ್ಭಸಮುದ್ಭವ್ಯ ನಿಬರ್ಹಣ ಬಲಾಯುರ್ವಭಿವೃದ್ಧಿದ್ವಾರಾ ಶ್ರೀ =ಚೂಡಾಕರ್ಮ, ದ್ವಿಜತ್ವಸಿದ್ಧಾ ವೇದಾಧ್ಯನಾಧಿಕಾರ ಸಿಧ್ಯರ್ಥಂ ಉಪನಯನಂಚಶ: ಕರಿಷ್ಯ, ಜಾತಾದಿ ಸರ್ವಸಂಸಾರಾಂಗನ ಪುಣ್ಯಾಹವಾಚನ, ಮಾತೃಕಾಪೂಜನಂ ನಾಂದೀಶ್ರಾದ್ಧಂ ಕರಿ, ಉಪನಯನಾಂಗನ ಮಂಡಪದೇಮಾ ಸ್ಥಾಪನಂ ಕುಲದೇವಾಸ್ಥಾಪನಂಚ ಕರಿಷ್ಯ ಹೀಗೆ ತಮ್ಮ-ತಮ್ಮ ಶಾಖೆಯ ಪ್ರಯೋಗಾನುಸಾರ ಸಂಕಲ್ಪಿಸಿ ನಾಂದೀಶ್ರಾದ್ಧವರೆಗೆ ಸಮಾನ ತಂತ್ರದಿಂದ ಮಾಡಿ ಮಂಟಪದೇವತಾಸ್ಥಾಪನಾದಿಗಳನ್ನು ಮಾಡುವದು. ನಂತರ ವಟುವಿನ ತಂದೆ-ತಾಯಿಗಳಿಗೆ ಮಿತ್ರಾದಿಗಳು ವಸ್ತ್ರ ಮೊದಲಾದ ಉಡುಗೊರೆಯನ್ನು ಮಾಡುವದು. ಅನ್ನಪ್ರಾಶನಾಂತ ಸಂಸ್ಕಾರಗಳನ್ನೂ ಶಾಖಾನುಸಾರ ಪೂರ್ವದಿನದಲ್ಲಿ ಮಾಡತಕ್ಕದ್ದು. ಚೌಲೋಪನಯನಗಳನ್ನು ಆ ದಿನದಲ್ಲಿ ಮಾಡತಕ್ಕದ್ದು. ಎಲ್ಲ ಸಂಸ್ಕಾರಗಳನ್ನೂ ಸದ್ಯವೇ ಮಾಡುವದಿದ್ದಲ್ಲಿ ಪೂರ್ವೋಕ್ತ ಸಂಕಲ್ಪಾನಂತರದಲ್ಲಿ “ಉಪನಯನಂಬ ಆದ್ರೆ ಕರಿಷ್ಯ ಹೀಗೆ ಸಂಕಲ್ಪವು. ಉಳಿದ ಸಂಸ್ಕಾರಗಳನ್ನು ಮಾಡದಿರುವಲ್ಲಿ ಚೂಡಾಕರ್ಮ ಉಪನಯನಗಳನ್ನು ಸಂಕಲ್ಪಿಸಿ ತದಂಗನ ಪುಣ್ಯಾಹವಾಚನು ನಾಂದೀಶ್ರಾದ್ಧಂ ಉಪನಯನಾಂಗದ ಮಂಡಪದೇವಾಸ್ಥಾಪನಂ ಕುಲದೇವತಾಸ್ತಾಪನಂಚ ಕರಿ ಹೀಗೆ ಸಂಕಲ್ಪಿಸತಕ್ಕದ್ದು. ನಾಂದೀಶ್ರಾದ್ಧಾನಂತರದಲ್ಲಿ ಪೂಜಿಸಲ್ಪಟ್ಟ ಮಾತೃಕಾಸಹಿತವಾದ ಮಂಡಪದೇವತಾಸ್ಥಾಪನ ಮಾಡತಕ್ಕದ್ದು. ಆಮೇಲೆ ಹಿಂದೆ ಹೇಳಿದಂತೆ “ವೇದಿ"ಯನ್ನು ನಿರ್ಮಿಸುವದು. ಇದು ಪೂರ್ವದಿನದ ಕರ್ತವ್ಯವು. ಉಪನಯನ ದಿನದ ಕೃತ್ಯ ಪೂರ್ವದಿನ ಬೌಲಸಂಸ್ಕಾರ ಹೊಂದಿದ ವಟುವನ್ನು ಆ ದಿನ ಅತಿಕ್ರಾಂತ ಚೌಲವನ್ನು ಮಾಡಿ ಅಭ್ಯಂಗಸ್ನಾನಮಾಡಿಸಿ, ತಾಯಿಯಿಂದ ಕೂಡಿ ಊಟಮಾಡಿಸುವದು. (ಮಾತೃಭೋಜನ) ಆಗ ಬ್ರಹ್ಮಚಾರಿಗಳನ್ನೂ ಟಮಾಡಿಸುವ ಪದ್ಧತಿಯಿದೆ. ಆಮೇಲೆ ದೇಶಕಾಲಗಳನ್ನುಚ್ಚರಿಸಿ “ಅಕ್ಕ ಕುಮಾರಕ ದ್ವಿಜ ಸಿದ್ದಾರಾ ಶ್ರೀ ಪರಮೇಶ್ವರಪ್ರೀತ್ಯರ್ಥಂ ಗಾಯತ್ುಪದೇಶಂನತುರಿ ತಾಚ್ಯಾಂಗಭೂತು ವಹನಾದಿ ಕತ” ಹೀಗೆ ಸಂಕಲ್ಪಿಸಿ ವವನಾದಿಗಳನ್ನು ಮಾಡಿಸುವದು. ಮುಖ್ಯ ಶಿಖೆಯನ್ನು ಬಿಟ್ಟು ಹೊಲದಲ್ಲಿ ಇಟ್ಟಿರುವ ಅನ್ನ ಶಿಲೆಗಳನ್ನೆಲ್ಲ ವಪನಮಾಡುವದು. ಆಮೇಲೆ ಸ್ನಾನಮಾಡಿಸಿ ಅಹತವಸ್ತ್ರವನ್ನು ತೊಡಿಸಿ ಶಿಖೆಯನ್ನು ಗಂಟುಮಾಡಿಸಿ ಮಂಗಲ ತಿಲಕಾದಿಗಳಿಂದ ಪರಿಚ್ಛೇದ - ೩ ಪೂರ್ವಾರ್ಧ ಅಲಂಕರಿಸಬೇಕು. ಅರ್ಚಿತನಾದ ಮೌಮೂರ್ತಿಕನು ಹೇಳಿದ ಸುಮಹೂರ್ತದಲ್ಲಿ ಆಚಾರ್ಯನು ವೇದಿಕೆಯಲ್ಲಿ ಪೂರ್ವಾಭಿಮುಖನಾಗಿ ತೆರೆಯ ವಸ್ತ್ರವನ್ನು ಸರಿಸಿ ವಟುವಿನ ಮುಖವನ್ನು ನೋಡಬೇಕು. ವಟುವು ಆಚಾರ್ಯನಿಗೆ ವೇದಿಕೆಯಲ್ಲಿ ಪೂರ್ವಾಭಿಮುಖನಾಗಿ ತೆರೆಯ ವಸ್ತ್ರವನ್ನು ಸರಿಸಿ ವಟುವಿನ ಮುಖವನ್ನು ನೋಡಬೇಕು. ವಟುವು ಆಚಾರ್ಯನಿಗೆ ನಮಸ್ಕಾರ ಮಾಡಿದ ನಂತರ ವಟುವನ್ನು ತನ್ನ ತೊಡೆಯ ಮೇಲೆ ಕೂಡ್ರಿಸಿಕೊಳ್ಳುವುದು. ಬ್ರಾಹ್ಮಣರು ಆಚಾರಪದ್ಧತಿಯಂತ ಆ ಇಬ್ಬರ ತಲೆಯಮೇಲೆ ಅಕ್ಷತೆಗಳನ್ನು ತಳಿಯುವದು. ಹೀಗೆ ತಮ್ಮ ತಮ್ಮ ಶಾಖಾನುಸಾರ ಉಪನಯನ ಪ್ರಯೋಗವನ್ನು ತಿಳಿದು ಮಾಡುವದು. ವಟುವಿನ ಮುಖದಿಂದ ಗಾಯತ್ಯಾದಿ ಮಂತ್ರಗಳನ್ನು ಸಂಧಿಗಳಲ್ಲಿ ಅಕ್ಷರ ವ್ಯತ್ಯಾಸವಾಗದಂತೆ ಉಚ್ಚಾರ ಮಾಡಿಸಬೇಕು. ಅವಶಿಷ್ಟ ಪ್ರಯೋಗವನ್ನು ಮುಗಿಸಿ ಇನ್ನೂರು ಅಥವಾ ನೂರು ಬ್ರಾಹ್ಮಣಸಂತರ್ಪಣ ಮಾಡುವದು; ಮತ್ತು ಅವರಿಗೆ ಭೂರಿ ದಕ್ಷಿಣೆಯನ್ನು ಕೊಡುವದು. ಆಮೇಲೆ ಬ್ರಹ್ಮಚಾರಿಯು “ಅನುಪ್ರವಚನೀಯ"ಕ್ಕಾಗಿ ಹೊಸ ಭಿಕ್ಷಾಪಾತ್ರೆಯನ್ನು ಹಿಡಿದು, ತಾಯಿ ಅಥವಾ ತಾಯಿಯ ತಂಗಿ ಮೊದಲಾದವರನ್ನು ಭಿಕಾಂಭವತೀದದಾತು” ಹೀಗೆ ಹೇಳಿ ತಂಡುಲಾದಿಗಳನ್ನು ಬೇಡುವದು. ತಂದೆಯ ಕಡೆಗಾದರೂ “ಭಿಕ್ಷಾಂಭವದದಾತು” ಹೀಗೆ ಯಾಚಿಸುವದು. ಬೇಡಿದ ಭಿಕ್ಷೆಯನ್ನು ಆಚಾರ್ಯನಿಗರ್ಪಿಸಿ, ಮಧ್ಯಾಹ್ನ ಸಂಧ್ಯಾವಂದನೆಯನ್ನು ಮಾಡಿ ಗುರುಸನ್ನಿಧಾನದಲ್ಲಿ ಆ ಹಗಲನ್ನು ಕಳೆಯುವದು. ಆ ದಿನ ಮಧ್ಯಾಹ್ನಸಂಧ್ಯಯು ವಿಕಲ್ಪವೆಂದು ಕೆಲವರೆನ್ನುವರು. (ಮಾಡಬೇಕೆಂದು ಕೆಲವರು, ಮಾಡಬಾರದೆಂದು ಕೆಲವರು) ಬ್ರಹ್ಮಯಜ್ಞವನ್ನಾದರೋ ಮಾರನೇದಿನದಿಂದ ಗಾಯತ್ರಿಯಿಂದ ಮಾಡತಕ್ಕದ್ದು. ಗರ್ಜವಾದಿ ಶಾಂತಿ ಅನುಪ್ರವಚನೀಯ ಹೋಮಕ್ಕಿಂತ ಮೊದಲು ಗುಡುಗು, ಮಳೆ ಮೊದಲಾದವುಗಳು ಸಂಭವಿಸಿದಲ್ಲಿ ಹಗಲಿನಲ್ಲಿಯೇ ಚರುಶ್ರಪಣಾಂತವಾಗಿ ಮಾಡಿ ಸೂರ್ಯಾಸ್ತಾನಂತರ ಹೋಮಿಸಬೇಕು. ಪಾಕವಾಗದಿದ್ದಾಗ ಗರ್ಜಿತಾದಿಗಳುಂಟಾದಲ್ಲಿ ಶಾಂತಿಮಾಡಿ ಪಾಕವನ್ನು ಮಾಡುವದು. ಶಾಂತಿಪ್ರಯೋಗ ಬ್ರಹ್ಮದನಕ್ಕಿಂತ ಮೊದಲು “ಗರ್ಜಿತೇನ ಸೂಚಿತಸ್ಯ ಬ್ರಹ್ಮಚಾರಿ ಕರ್ತೃಕಾಧ್ಯಯನ ವಿಘ್ನಸ್ಥ ನಿರಾಸದ್ವಾರಾ ಶ್ರೀ ಪರ=ರ್ಥ೦ ಶಾಂತಿಂಕರಿಷ್ಟೇ” ಹೀಗೆ ಸಂಕಲ್ಪಿಸಿ ಸ್ವಸ್ತಿವಾಚನ, ಆಚಾರ್ಯ ವರಣಗಳನ್ನು ಮಾಡುವದು. ಆಚಾರ್ಯನು ಅಗ್ನಿ ಪ್ರತಿಷ್ಠೆ ಮಾಡಿ, “ಚಕ್ಷುಷೀ ಆಜೇನ” ಇತ್ಯಾದ್ಯನಂತರ ‘ಸವಿತಾರಂ ಅಷ್ಟೋತ್ತರ ಶತಸಂಖ್ಯೆ ಸಾಜ್ಯಪಾಯಸಾಹುತಿಭೆ: ಗಾಯತ್ರೀ ಮಂತ್ರೇಣ ಶೇಷ ಸ್ವಿಷ್ಟಕೃತ್”, ಇತ್ಯಾದಿ ಪ್ರಾಯಶ್ಚಿತ್ತಹೋಮಾನಂತರ “ಗಾಯತ್ರಾಸವಿತಾರಮಾನ” ಇತ್ಯಾದಿ ಅನ್ನಾಧಾನಮಾಡಿ ಗೃಹಸಿದ್ದವಾದ ಪಾಯಸವನ್ನು ಹೋಮಿಸಿ, “ಬೃಹಸ್ಪತಿಸೂಕ್ತ” ಜಪವನ್ನು ಮಾಡತಕ್ಕದ್ದು. ಕೊನೆಯಲ್ಲಿ ಆಚಾರ್ಯನಿಗೆ ದಾನಮಾಡಿ “ಶತಂ, ಯಥಾಶಕ್ತಿದಾ ಏಪ್ರಾನ್ ಭೋಜಯಿಷ್ಟೇ” ಹೀಗೆ ಸಂಕಲ್ಪಿಸುವದು. ೨೩೮ ಧರ್ಮಸಿಂಧು ಅಗ್ನಿನಾಶವಾದರೆ ಮೇಧಾಜನನಕ್ಕಿಂತ ಮೊದಲು ಅಗ್ನಿ ಕಾರ್ಯವಾಗುವದಿದ್ದು ಅಷ್ಟರೊಳಗೆ ಉಪನಯನಾಗ್ನಿಯು ನಷ್ಟವಾದರೆ- ಕಟಸೂತ್ರಧಾರಣಾದಿ ವಟುವಿನ ಸಂಸ್ಕಾರ, ಅವರಾರಣ, ಅಗ್ನಿಕಾರ್ಯ, ಗಾಯತ್ರ್ಯುಪದೇಶ ಇವುಗಳನ್ನು ಬಿಟ್ಟು ಉಪನಯನಾಹುತಿಗಳಿಂದ ಪೂರ್ವೋತ್ತರ ತಂತ್ರಸಹಿತವಾಗಿ ಅಗ್ನಿಯನ್ನುತ್ಪಾದಿಸಿ ಅದರಲ್ಲಿ ಅನುಪ್ರವಚನೀಯ ಪೂರ್ವಭಾವಿಯಾದ ಅಗ್ನಿಕಾರ್ಯವನ್ನು ಮಾಡಿ, ಅನುಪ್ರವಚನೀಯ ಹೋಮವನ್ನು ಮಾಡಿ, ಮೇಧಾಜನನಪೂರ್ವದ ಅಗ್ನಿ ಕಾರ್ಯವನ್ನು ಮಾಡಿ ಮೇಧಾಜನನವನ್ನು ಮಾಡತಕ್ಕದ್ದೆಂದು ಕೌಸ್ತುಭದಲ್ಲಿ ಹೇಳಿದೆ. ಮತ್ತು “ನನ್ನ ಉಪನಯನಾಕ್ಷೀ ಪುನರುತ್ಪತ್ತಿಹೋಮೇ ವಿನಿಯೋಗ: ಹೀಗೆ ವಿಶೇಷವನ್ನು ಹೇಳಿದೆ. ನನಗಾದರೋ, ಉಪನಯನಾಹುತಿಗಳಿಂದ ಅಗ್ನಿಯನ್ನುತ್ಪಾದಿಸಿ ಅದರಲ್ಲಿ ಮೇಧಾಜನನಕ್ಕಿಂತ ಮೊದಲು ಮಾಡಬೇಕಾದ ಅಗ್ನಿ ಕಾರ್ಯವನ್ನು ಮಾಡಿ ಮೇಧಾಜನನ ಮಾಡತಕ್ಕದ್ದು; ಹೊರತು ಅನುಪ್ರವಚನೀಯ ಪೂರ್ವಭಾವಿಯಾದ ಅಗ್ನಿಕಾರ್ಯ ಮತ್ತು ಅನುವ್ರವಚನೀಯಹೋಮ ಇವುಗಳನ್ನು ಮಾಡತಕ್ಕದ್ದಲ್ಲವೆಂದು ತೋರುತ್ತದೆ. ಗಾಯತ್ರ್ಯುಪದೇಶ, ಅನುಪ್ರವಚನೀಯ, ಮೇಧಾಜನನ ಈ ಮೂರು ಪ್ರಧಾನಗಳಾದುದರಿಂದ ಅಧ್ಯಯನಾಂಗವಾದ ಅಗ್ನಿಯು ಈ ಮೂರರ ಅಂಗವಾಗುವದು. ಆದಕಾರಣ ಕೌಸ್ತುಭೋಕ್ತವಾದ ರೀತಿಯಿಂದ ಗಾಯತ್ರ್ಯುಪದೇಶ, ಅದರ ಪೂರ್ವಭಾವಿಯಾದ ಅಗ್ನಿಕಾರ್ಯಗಳ ಅಭಾವವು ಇಲ್ಲಿ ಉಂಟಾಗುವದರಿಂದ ಅನುಪ್ರವಚನೀಯ, ಅದರ ಪೂರ್ವದಲ್ಲಿ ಮಾಡಬೇಕಾದ ಅಗ್ನಿಕಾರ್ಯ ಇದರ ಅಭಾವವೂ ಇಲ್ಲಿ ಉಚಿತವೇ ಆಗುವದು. ಅಗ್ನಿಷ್ಟೋಮಾಂಗ, ಮೂರು ಪಶುಗಳಿಗೆ ಅಂಗವಾದ “ಯೂಪ” (ಸ್ತಂಭ)ವು ಎರಡು ಪಶುಗಳ ನಂತರ ನಷ್ಟವಾದರೆ, ಮೂರನೇ ಪಶುವಿನ ಸಲುವಾಗಿ ಯೂಪೋತ್ಪಾದನೆ ಮಾಡುವಾಗ ಎರಡನೇ ಪಶು ಅನುಷ್ಠಾನವನ್ನು ಮತ್ತೆ ಮಾಡುವದಿರುವದಿಲ್ಲ. ಹೇಗೋ ಅದರಂತೆಯೇ ಇದು. ಈ ವಿಷಯದಲ್ಲಿ ಸದಸದ್ವಿವೇಕಿಗಳು ವಿಚಾರಿಸಿಕೊಳ್ಳುವದು. ಸಾಯಂಸಂಧ್ಯಾ ಮತ್ತು ಅಗ್ನಿಕಾರ್ಯಗಳಾದ ನಂತರ, ಬ್ರಹ್ಮಚಾರಿಯು ಅನುಪ್ರವಚನೀಯ ಹೋಮವನ್ನು ಮಾಡತಕ್ಕದ್ದು. ವಟುವು ಅಸಮರ್ಥನಾದರೆ ಬೇರೆಯವರು ಚರುವನ್ನು ಬೇಯಿಸಿಕೊಡಬಹುದು. ಹೋಮವನ್ನು ಮಾತ್ರ ವಟುವೇ ಮಾಡಬೇಕು. ಹೋಮಶೇಷದಿಂದ ಮೂರಕ್ಕೆ ಕಡಿಮೆಯಾಗದಂತೆ ಬ್ರಾಹ್ಮಣ ಭೋಜನವನ್ನು ಮಾಡಿಸುವದು. ವಟುವ್ರತ ಬ್ರಹ್ಮಚಾರಿಯು ಮೂರು ದಿನ ಪರ್ಯಂತ ಒಗರು, ಉಪ್ಪುಗಳನ್ನು ತಿನ್ನಬಾರದು, ನೆಲದ ಮೇಲೆ ಮಲಗಬೇಕು. ನಾಲ್ಕನೇ ದಿನ ಮೇಧಾಜನನವನ್ನು ಮಾಡತಕ್ಕದ್ದು. ಶಕ್ತನಾದವನು ಹನ್ನೆರಡು ರಾತ್ರಿ ಅಥವಾ ವರ್ಷ ಪರ್ಯಂತವೂ ಈ ವ್ರತವನ್ನು ಮಾಡಬಹುದು. ಮೇಧಾಜನನವಿಧಿಯನ್ನು ಪ್ರಯೋಗಗ್ರಂಥದಿಂದ ತಿಳಿಯತಕ್ಕದ್ದು. ಮಂಡಪದೇವತೋತಾಪನೆ ಈ ಉತ್ತಾಪನೆಯನ್ನು ಸ್ಥಾಪನೆಯ ದಿನದಿಂದ ಸಮದಿನಗಳಲ್ಲಿ ಅಥವಾ ಸಪ್ತಮ, ಪಂಚಮ ದಿನಗಳಲ್ಲಿ ಮಾಡತಕ್ಕದ್ದು, ಸಮದಿನಗಳಲ್ಲಿ ಆರನೇದಿನ ಹಾಗೂ ಪಂಚಮ, ಸಪ್ತಮಗಳನ್ನು ಬಿಟ್ಟು ಉಳಿದ ವಿಷಮದಿನಗಳು ಅಶುಭವು. ನಾಂದೀಶ್ರಾದ್ಧವಾದಮೇಲೆಪರಿಚ್ಛೇದ - ೩ ಪೂರ್ವಾರ್ಧ ೨೩೯ ಮಂಡಪೋದ್ಘಾಸನಪರ್ಯಂತ ಸಪಿಂಡರಾದವರು ದರ್ಶಶ್ರಾದ್ಧ, ಕ್ಷಯಶ್ರಾದ್ಧ, ಶೀತೋದಕಸ್ನಾನ, ಪ್ರಾಚೀನಾ ವೀತಿಯಾಗಿ ಮಾಡುವಕಾರ್ಯ, ಸ್ವಧಾಕಾರ, ನಿತ್ಯಶ್ರಾದ್ಧ, ಬ್ರಹ್ಮಯಜ್ಞ ಅಧ್ಯಯನ, ನದೀ ಮತ್ತು ಗಡಿಯ ಉಲ್ಲಂಘನ, ಉಪವಾಸವ್ರತ, ಶ್ರಾದ್ದ ಭೋಜನ ಇವುಗಳನ್ನು ಮಾಡಬಾರದು. ಇಲ್ಲಿ ಹೇಳಿದ “ಸ್ಪಧಾಧಿಕಾರವು ಸ್ವಧಾಕಾರಯುಕ್ತವಾದ “ವೈಶ್ವದೇವ"ದ ನಿಷೇಧಕ್ಕಾಗಿ ಹೇಳಿದ್ದು, ಇಲ್ಲಿ ಸಪಿಂಡರೆಂದರೆ ಮೂರು ತಲೆಮಾರಿನವರು ಎಂದು ಪುರುಷಾರ್ಥ ಚಿಂತಾಮಣಿಯಲ್ಲಿ ಹೇಳಿದೆ. ಅಭ್ಯಂಗ, ಸೂತಕ, ವಿವಾಹ, ಪುತ್ರಜನನ ಮತ್ತು ಎಲ್ಲ ಮಂಗಲಕಾರ್ಯಗಲ್ಲಿ ಗೋಪಿಚಂದನ ಅಥವಾ ಭಸ್ಮವನ್ನು ಹಚ್ಚಿಕೊಳ್ಳಬಾರದು. ಜನನಾಶೌಚದಲ್ಲಿ ಗೋಪಿಚಂದನ ಮತ್ತು ಭಸ್ಮಗಳು ನಿಷಿದ್ಧಗಳು. ಮೃತಸೂತಕದಲ್ಲಿ ಭಸ್ಮವನ್ನು ಧರಿಸತಕ್ಕದ್ದು. ಊನಾಂಗರಾದವರ ಉಪನಯನಾದಿವಿಚಾರ ನಪುಂಸಕ, ಕುರುಡ, ಕಿವುಡ, ಮೂಕ, ಕುಂಟ, ಕುಬ್ಬ, ಅತಿಕುಳ್ಳ ಇವರಿಗೆ ಸಂಸ್ಕಾರಮಾಡಬೇಕು. ಕೆಲವರು ಬುದ್ದಿಮಾಂದ್ಯ, ಹುಚ್ಚ ಇವರಿಗೆ ಸಂಸ್ಕಾರವಿಲ್ಲವೆನ್ನುವರು. ಸಂಸ್ಕಾರವಾಗದಿದ್ದರೂ ಇವರು “ಪತಿತರಾಗುವದಿಲ್ಲ. ಯಾಕೆಂದರೆ ಕರ್ಮಾಧಿಕಾರವೇ ಇಲ್ಲ. ಇವರ ಪುತ್ರರಿಗೆ ಸಂಸ್ಕಾರವು ಆವಶ್ಯಕವು. “ಬ್ರಾಹ್ಮಣನಿಂದ ಬ್ರಾಹ್ಮಣಯಲ್ಲಿ ಜನಿಸಿದವನು ಬ್ರಾಹ್ಮಣನೇ ಇರುತ್ತಾನೆ”, ಹೀಗೆ ಶ್ರುತಿವಚನವಿದೆ. ಇನ್ನು ಕೆಲವರು ಮತ್ತ, ಉನ್ಮತ್ತರಿಗೂ ಸಂಸ್ಕಾರವುಂಟೆಂದು ಹೇಳುವರು. ಈ ಸಂಸ್ಕಾರಗಳಲ್ಲಿ ಆಚಾರ್ಯನು ಹೋಮಮಾಡಬೇಕಾಗುವದು. ಅಂಗ ಊನರಿಗೆ ಉಪನಯನವೆಂದರೆ ಆಚಾರ್ಯಸಮೀಪನಯನ, ಅಗ್ನಿಸಮೀಪನಯನ, ಗಾಯತ್ರೀವಾಚನ ಇಷ್ಟೇ ಪ್ರಧಾನವು. ಈ ಮೂರರಲ್ಲಿ ಸಾಧ್ಯವಾದಂತೆ ಯಾವದಾದರೊಂದು ಪ್ರಧಾನವನ್ನು ಇವರಿಂದ ಮಾಡಿಸುವದು. ಉಳಿದ ಅಂಗಕಾರ್ಯಗಳನ್ನು “ಯಥಾಸಂಭವ” ಮಾಡಿಸಬೇಕು. ಮೂಕ, ಕಿವುಡ ಇವರಿಗೆ ಗಾಯತ್ರೀವಾಚನವು ಅಸಂಭವವಾಗುವದರಿಂದ ಅವರನ್ನು ಸ್ಪರ್ಶಮಾಡಿ ಗಾಯತ್ರಿ ಜಪವನ್ನು ಮಾಡಬೇಕು. ಸಂಸ್ಕಾರದ ಮಂತ್ರ, ವಸ್ತ್ರಪರಿಧಾನದ ಮಂತ್ರ ಇತ್ಯಾದಿಗಳನ್ನು ಆಚಾರ್ಯನೇ ಹೇಳತಕ್ಕದ್ದು. ಕೆಲವರು ವಸ್ತ್ರಪರಿಧಾನ ಮೊದಲಾದವುಗಳನ್ನು ಅಮಂತ್ರಕವಾಗಿ ಮಾಡಿಸಬೇಕೆನ್ನುವರು. ಇದರಂತೆ ವಿವಾಹದಲ್ಲಿಯೂ “ಕನ್ಯಾಸ್ವೀಕಾರ” ಹೊರತಾಗಿ ಉಳಿದೆಲ್ಲವುಗಳನ್ನು ಬ್ರಾಹ್ಮಣದ್ವಾರಾ ಮಾಡಿಸಬೇಕೆಂದು ವಚನವಿದೆ. ಹೀಗೆ ವಿಕಲಾಂಗರ ಉಪನಯನ ವಿಚಾರವು. ಕುಂಡ, ಗೋಲಕ ಕನಿಷ್ಠ ಸಂಸ್ಕಾರ ನಿಷೇಧ ತಂದೆಯು ಜೀವಂತನಿದ್ದು, ಜಾರನಿಂದ ಉತ್ಪನ್ನನಾದವನಿಗೆ “ಕುಂಡ"ನೆನ್ನುವರು. ತಂದೆಯ ಮರಣದ ನಂತರ ಜನಿಸಿದವನಿಗೆ “ಗೋಲಕ"ನೆನ್ನುವರು. ಈ ಕುಂಡ, ಗೋಲಕರ ಸಂಸ್ಕಾರವನ್ನು ಕಲಿಯುಗದಲ್ಲಿ ನಿಷೇಧಿಸಲಾಗಿದೆ. “ದತ್ತ, ಔರಸ"ಹೊರತಾದ ಎಲ್ಲ ಪುತ್ರರಿಗೂ ಸಂಸ್ಕಾರನಿಷೇಧವಿದೆ. ಹಿರಿಯನಿಗೆ ಗರ್ಭಾಧಾನಾದಿ ಸಂಸ್ಕಾರ ನಡೆಯದಿದ್ದರೆ ಕಿರಿಯವನು ಸಂಸ್ಕಾರಕ್ಕೆ ಅನರ್ಹನಾಗುತ್ತಾನೆ. ಹೀಗೆ “ಶಾತಾತಪ” ವಚನವಿದೆ. ಇದು ಚೌಲೋಪನಯನಾಂತ ಸಂಸ್ಕಾರದ ಸಲುವಾಗಿ ಹೇಳಿದ್ದು. ವಿವಾಹ ವಿಷಯದಲ್ಲಿ, ಹಿರಿಯವನು ಊನಾಂಗನಾಗಿ ವಿವಾಹಸಂಸ್ಕಾರವಾಗದಿದ್ದರೂ ಕಿರಿಯವನ ವಿವಾಹಕ್ಕೆ ಅಡ್ಡಿ ಇಲ್ಲ. ಕನ್ನಿಕೆಯಲ್ಲಾದರೂ, ೨೪೦ ಧರ್ಮಸಿಂಧು ಹಿರಿಯವಳಿಗೆ ಲಗ್ನವಾಗದ ಹೊರತು ಕಿರಿಯಳಿಗೆ ವಿವಾಹ ಮಾಡಕೂಡದು. ಜೇಷ್ಠ ಪುತ್ರನಿಗೆ ವಿವಾಹವಾಗದಿದ್ದರೂ ಕಿರಿಯ ಕನ್ನೆಯ ಸಂಸ್ಕಾರಕ್ಕಡ್ಡಿಯಿಲ್ಲ. ಜೇಷ್ಠನಿಗೆ ಉಪನಯನವಾಗದಿದ್ದರೆ ಕಿರಿಯಳಿಗೆ ವಿವಾಹ ಮಾಡಕೂಡದು. ಪುನರುಪನಯನ ವಿಚಾರ ಪುನರುಪನಯನವು ಮೂರು ಕಾರಣಗಳಿಂದ ಪ್ರಾಪ್ತವಾಗುವದು. ಪ್ರತ್ಯವಾಯ (ಕರ್ತವ್ಯಚ್ಯುತಿ) ನಿಮಿತ್ತದಿಂದ ಪ್ರಾಯಶ್ಚಿತ್ತರೂಪವಾಗಿ ಪುನರುಪನಯನ ಮಾಡುವದು. ಇದು ಒಂದನೆಯದು. ಅದು ಜಾತಕರ್ಮಾದಿಸಹಿತ ರಹಿತ, ಬೇರೆ ಪ್ರಾಯಶ್ಚಿತ್ತದಿಂದ ಕೂಡಿದ, ಹಾಗೂ ಕೇವಲ, ಹೀಗೆ ಅನೇಕವಿಧವಿದೆ. ಇನ್ನು ಉಪನಯನವಾದಮೇಲೆ ಉಕ್ತಕಾಲಾದಿ ಅಂಗಗಳ ಅಭಾವದಿಂದ, ಅದರಿಂದ ಪುನರುಪನಯನ ಮಾಡಬೇಕಾಗಿ ಬರುವದು. ಇದು ಎರಡನೆಯದು. ಬೇರೆ ಬೇರೆ ವೇದಾಧ್ಯಯನಾದಿಗಳ ಸಂಬಂಧವಾಗಿ ಮಾಡುವ ಪುನರುಪನಯನವು ಮೂರನೆಯದು. ಹೀಗೆ ಮೂರು ಕಾರಣಗಳಿಂದ “ಪುನರುಪನಯನ” ಪ್ರಸಂಗವುಂಟಾಗುವದು. ರೋಗಶಮನಕ್ಕಾಗಿ ಒಟ್ಟಿನ ಹೆಂಡವನ್ನು ಗೊತ್ತಿಲ್ಲದೆ ಪಾನ ಮಾಡಿದರೆ ಮೂರು ತಿಂಗಳು ಕೃಚ್ಛಾಚರಣೆ ಹಾಗೂ ಪುನರುಪನಯನವನ್ನು ಮಾಡಬೇಕು. ಅದೇ ಔಷಧರ್ಥವಾಗಿ ಹಿಟ್ಟಿನಹೆಂಡ ಹೊರತಾದ ಮದ್ಯವನ್ನು ಬುದ್ಧಿಪೂರ್ವಕವಾಗಿ ಸೇವಿಸಿದರೆ ಕೃಚ್ಛಾತಿಕೃಚ್ಛ ಪ್ರಾಯಶ್ಚಿತ್ತ ಮತ್ತು ಪುನರುಪನಯನ, ಅದೇ ಹಿಟ್ಟಿನ ಮದ್ಯವನ್ನು ಸೇವಿಸಿದರೆ “ದ್ವಾದಶಾಬ್ರಕೃಚ್ಛ“ವು, ಅಜ್ಞಾನದಿಂದ ವಾರುಣೀ, ಮದ್ಯವಿಶೇಷ, ಗೌಡೀ (ಬೆಲ್ಲದ್ದು) ಮತ್ತು ಹಿಪ್ಪೆಯ ಹೆಂಡಗಳನ್ನು ಸೇವಿಸಿದರೆ ಪುನರುಪನಯನವು ಅಗತ್ಯವು ಮತ್ತು ತಪ್ತ ಕೃಘ್ನವು, ಅಜ್ಞಾನದಿಂದ ರೇತಸ್ಸು, ಮಲ, ಮೂತ್ರ ಪ್ರಾಶನಮಾಡಿದಲ್ಲಿ ಮತ್ತು ಮದ್ಯದ ಸಂಪರ್ಕಹೊಂದಿದ ಜಲ, ಅನ್ನ ಮೊದಲಾದವುಗಳ ಭಕ್ಷಣದಲ್ಲಿ ಪುನರುಪನಯನ ಮತ್ತು ತಪ್ತ ಕೃಚ್ಛವು ಬುದ್ಧಿಪೂರ್ವಕವಾಗಿ ಮಲ-ಮೂತ್ರಾದಿಗಳ ಪ್ರಾಶನಮಾಡಿದಲ್ಲಿ ಪುನಃಸಂಸ್ಕಾರ ಮತ್ತು ಚಾಂದ್ರಾಯಣ, ಬಳ್ಳುಳ್ಳಿ, ನೀರು, ಅಫೀಮು, ಊರಹಂದಿ, ಊರಕೋಳಿ, ಮನುಷ್ಯ ಮಾಂಸ, ಗೋಮಾಂಸ ಭಕ್ಷಣಮಾಡಿದಲ್ಲಿ ಬ್ರಾಹ್ಮಣರಾದವರಿಗೆ ಆಯಾಯ ಪ್ರಾಯಶ್ಚಿತ್ತವಾದ ನಂತರ ಪುನಃ ಸಂಸ್ಕಾರವಾಗತಕ್ಕದ್ದು. ಆಡು, ಕತ್ತೆ, ಒಂಟೆ, ಮನುಷ್ಯ ಇವರ ಮೊಲೆಹಾಲನ್ನು ಕುಡಿದರೆ ಮತ್ತು ಆನೆ, ಕುದುರೆ ಇವುಗಳ ಹಾಲನ್ನು ಕುಡಿದರೂ ತಪ್ತಕೃಚ್ಛ ಮತ್ತು ಪ್ರನರುಪನಯನವು, ಕತ್ತೆ, ಒಂಟೆ ಇವುಗಳ ಮೇಲೆ ಹತ್ತಿ ಕುಳಿತರೆ ಕೃಚ್ಛ ಮತ್ತು ಪುನಃ ಸಂಸ್ಕಾರ. ಇದು ಹೇಮಾದ್ರಿಯ ಮತವೆಂದು ಕೆಲ ನಿರ್ಣಯಸಿಂಧು ಪ್ರತಿಗಳಲ್ಲಿ ಕಂಡುಬರುತ್ತದೆ. ತಾರಾ, ಸ್ಮೃತರ್ಥಸಾರ ಮೊದಲಾದವುಗಳ ಮತದಂತೆ ಮೂರು ಉಪವಾಸ ಇತ್ಯಾದಿ ಮಾತ್ರ. ವ್ಯ ಸಂಸ್ಕಾರವಿಲ್ಲವೆಂದೆ. ಕೌಸ್ತುಭತಾತ್ಪರ್ಯವಾದರೂ ಇದರಂತೆಯೇ ಇದೆ. ಅಜ್ಞಾನದಿಂದ ಎತ್ತನ್ನು ಇದರ ಕತ್ರ. ಜ್ಞಾನದಿಂದ ಆರೋಹಣಮಾಡಿದ್ದರೆ ಕೃತ್ರಯಾದಿಗಳು. ಕೆಲವರು ಎತ್ತನ್ನು ಹತ್ತಿದರ ವನ ಸಂಸ್ಕಾರವಾಗಬೇಕೆಂದು ಹೇಳುತ್ತಾರೆ. ಆದರೆ ಅದು “ನಿರ್ಮೂಲವು ಕುರಿ, ಆಡು, ಕೋಣಗಳ ಆರೋಹಣಕ್ಕೂ ಇದೇ ನಿಯಮವು, ಮಾಂಸಭಕ್ಷಕಪಶುವಿನ ಮಲವನ್ನು ತಿಂದರೆ ಇರುವಯನ ಮಾತ್ರ. ಕೆಲವರು ಮನುಷ್ಯ ಮಲಭಕ್ಷಣದಲ್ಲಿಯೂ ಉಪನಯನ

  • ಹೇಳುವರು. ಪ್ರತಶನ (ಶಾದಾನ) ಪ್ರತಿಗ್ರಹದಲ್ಲಿಯ ಪರಿಚ್ಛೇದ - ೩ ಪೂರ್ವಾರ್ಧ ೨೪೧ ಪುನರುಪನಯನವಾಗತಕ್ಕದ್ದು. ವಸ್ತುತಃ ಜೀವಂತನಾಗಿದ್ದು, “ಮೃತನಾದ’ನೆಂಬ ವಾರ್ತೆಯಿಂದ ಆತನ ಅಂತ್ಯಕರ್ಮ ನಡೆದು ಹೋದಾಗ ಆತನನ್ನು ತುಪ್ಪದ ಭಾಂಡೆಯಲ್ಲಿ ಮುಳುಗಿಸಿ ಪುನಃ ಸ್ನಾನಮಾಡಿಸಿ ಜಾತಕರ್ಮಾದಿ ಉಪನಯನಾಂತವಾಗಿ ಸಂಸ್ಕಾರಮಾಡಿಸಿ, ತ್ರಿರಾತ್ರವ್ರತ ಮುಗಿದನಂತರ ಮೊದಲು ಇದ್ದ ಹೆಂಡತಿಯೊಡನೆ ಅಥವಾ ಅವಳು ಬೇರೆ ಸ್ತ್ರೀಯೊಡನೆ ವಿವಾಹಸಂಸ್ಕಾರ ಮಾಡಿಕೊಳ್ಳುದದು. ಅಗ್ನಿಹೋತ್ರಿಯಾದರೆ ಪುನರಾಧಾನ, ಆಯುಷ್ಯದಿಷ್ಟಾದಿಗಳನ್ನು ಮಾಡಬೇಕು. ತೀರ್ಥಯಾತ್ರೆಯ ಉದ್ದೇಶದಿಂದಲ್ಲದೆ ಕಲಿಂಗ, ಅಂಗ, ವಂಗ, ಆಂಧ್ರ, ಸಿಂಧು, ಸೌವೀರ, ಮೇಂಛದೇಶಗಳಿಗೆ ಹೋದರೆ ಪುನಃ ಸಂಸ್ಕಾರವಾಗಬೇಕು. ಚಾಂಡಾಲರ ಅನ್ನಭಕ್ಷಣಮಾಡಿದಲ್ಲಿ “ಚಾಂದ್ರಾಯಣ"ವು. ಅದೇ ಬುದ್ಧಿಪೂರ್ವಕವಾದರ “ಕೃಚ್ಛಾಬ್ದವು ಈ ಎರಡರಲ್ಲಿಯೂ ಪುನಃ ಸಂಸ್ಕಾರಬೇಕು. ಬ್ರಾಹ್ಮಣರ ಪುನಃ ಸಂಸ್ಕಾರದಲ್ಲಿ ಅಜಿನ, ಮೇಖಲಾ, ದಂಡ, ಭೈಕ್ಷಚರ್ಯಾ ಮತ್ತು ವ್ರತ ಇವುಗಳನ್ನು ಬಿಡತಕ್ಕದ್ದು. ವಪನ, ಮೇಖಲಾ ಎಂಬ ಪಾಠವು ಸ್ಮೃತ್ಯಂತರದಲ್ಲಿದೆ. ಬ್ರಹ್ಮಚಾರಿಯು ಮದ್ಯಮಾಂಸಾದಿಗಳನ್ನು ಭಕ್ಷಿಸಿದರ ಪುನರುಪನಯನ ಮತ್ತು ಪ್ರಾಜಾಪತ್ಯಕೃಚ್ಛ ಅಥವಾ ತ್ರಿರಾತ್ರೋಪವಾಸವು ಬುದ್ಧಿಪೂರ್ವಕವಾದರೆ “ಪರಾಕಕೃ’‘ವು. ಪುನಃ-ಪುನಃ ಮಾಡಿದರೆ ದ್ವಿಗುಣಪ್ರಾಯಶ್ಚಿತ್ತ ಮತ್ತು ಪುನರುಪನಯನವು, ಬ್ರಹ್ಮಚಾರಿಯು ತನ್ನ ಮಾತಾಪಿತೃಗಳ ಹೊರತಾಗಿ ಅನ್ಯರ ಪ್ರೇತಕಾರ್ಯಗಳನ್ನು ಮಾಡಿದರೆ ಪುನರುವನಯನವು ಕೈಯಿಂದ ಕಡೆದಮೊಸರು, ವೇದಿಯ ಹೊರಗಿರುವ ಪುರೋಡಾಶ ಇವುಗಳನ್ನು ಪುನಃ-ಪುನಃ ತಿಂದರೆ ಕೃಚ್ಛ ಮತ್ತು ಪುನರುಪನಯನವು. ಸಂನ್ಯಾಸಪಡೆದವನು ಅದರಿಂದ ನಿವೃತ್ತನಾಗಿ ಗೃಹಸ್ಥನಾಗಬಯಸಿದರೆ ಅವನು ಆರುತಿಂಗಳು ಕೃಚ್ಛಾಚರಣಮಾಡಿ, ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿಕೊಂಡು ಶುದ್ಧನಾಗಿ ಗೃಹಸ್ಥಾಶ್ರಮಿಯಾಗಬಹುದು. ಇದರಂತೆ ಮರಣಕ್ಕೆ ಸಿದ್ಧನಾಗಿ ಅನಶನವ್ರತವನ್ನು ಸಂಕಲ್ಪಿಸಿ ನಿವೃತ್ತನಾದರೂ ಮಾಡತಕ್ಕದ್ದು. “ಕರ್ಮನಾಶಾ” ಎಂಬ ನದಿಯ ಸ್ಪರ್ಶ,“ಕರತೋಯಾ” ಎಂಬ ನದಿಯ ದಾಟುವಿಕೆ, “ಗಂಡಕೀ’ ಎಂಬ ನದಿಯಲ್ಲಿ ಕೈಗಳಿಂದ ಈಸುವಿಕೆಗಳನ್ನು ಮಾಡಿದರೆ ಪುನಃ ಸಂಸ್ಕಾರಕ್ಕೆ ಅರ್ಹನಾಗುತ್ತಾನೆ. ಮುಹೂರ್ತಾದಿ ದೋಷದಿಂದ “ಪುನರುಪನಯನ ಮಾಡುವದಿರು, ಎರಡನೇ ಪ್ರಕಾರದ್ದು. ಪ್ರದೋಷ, ರಾತ್ರಿ ಅನಧ್ಯಾಯ, ಕೃಷ್ಣ ಪಕ್ಷದ ಅಂತ್ಯಭಾಗ, ಗಲಗ್ರಹ, ಅಪರಾಹ್ನ ಇತ್ಯಾದಿಗಳಲ್ಲಿ ಉವನೀತನಾದವನು ಪುನಃ ಸಂಸ್ಕಾರಕ್ಕೆ ಯೋಗ್ಯನಾಗುತ್ತಾನೆ. ಇಲ್ಲಿ “ಪ್ರದೋಷ” ಎಂದರೆ ಪ್ರದೋಷದ ದಿನ, “ಕೃಷ್ಣ” ಅಂದರೆ ಕೃಷ್ಣ ಪಕ್ಷದ ಏಕಾದಶ್ಚಾದಿ ಅಮಾಪರ್ಯಂತ ಎಂದರ್ಥ. “ಅಪರಾಹ್ನ"ವೆಂದರೆ ದಿನದ ಮೂರು ಭಾಗಗಳ ಅಂತ್ಯಭಾಗವು ಅನಧ್ಯಾಯ” ಎಂದರೂ ನಿತ್ಯಗಳಾದ ಪೌರ್ಣಿಮಾ, ಪ್ರತಿಪದಿ ಮೊದಲಾದವುಗಳೆಂದು ತಿಳಿಯಬೇಕು. ಇವುಗಳಲ್ಲಿ ಘಟಿಸಿದ ಉಪನಯನವು ಪುನರುಪನಯನಯೋಗ್ಯವಾಗುವದು. ಇನ್ನು ನೈಮಿತ್ತಿಕಾದಿ ಅಕಾಲವೃಷ್ಟಾದಿಗಳಲ್ಲಿ ತ್ರಿದಿನ “ಅನಧ್ಯಾಯ” ಎಂದಿದ್ದರೂ ಅವುಗಳಲ್ಲಿ ಪ್ರಾತರ್ಗಜಿ್ರತ"ದಲ್ಲಿ ಆದ ಉಪನಯನದಲ್ಲಿ ಮಾತ್ರ ಪುನಃ ಸಂಸ್ಕಾರವು ಉಳಿದ ನೈಮಿತ್ತಿಕಗಳಲ್ಲಗತ್ಯವಿಲ್ಲ, ಈ ವಿಷಯದ ವಿಸ್ತರವನ್ನು ಕೌಸ್ತುಭದಲ್ಲಿ ನೋಡುವದು. ಉಪನಯನದಲ್ಲಿ ಹೆಗಲನ್ನು ಸ್ಪರ್ಶಿಸಿ ೨೪೨ ಧರ್ಮಸಿಂಧು ವಟುವನ್ನು ಸಮೀಪದಲ್ಲಿ ತರುವದೂ, ಗಾಯತ್ರ್ಯುಪದೇಶವೂ ಪ್ರಧಾನವಾಗಿರುವದರಿಂದ ಇವುಗಳನ್ನು ಮರೆತುಬಿಟ್ಟರ ಪುನರುಪನಯನವಾಗಬೇಕು. ಮೂರನ ನಮೂನೆಯ ಪುನರುಪನಯನ ಒಂದು ವೇದವನ್ನಧ್ಯನಮುಗಿಸಿ ಇನ್ನೊಂದು ವೇದವನ್ನಭ್ಯಸಿಸುವ ಇಚ್ಛೆಯಾದಲ್ಲಿ ಆ ಬಗ್ಗೆ ಪ್ರತಿವೇದಕ್ಕೊಂದರಂತೆ ಪುನರುಪನಯನವಾಗಬೇಕೆಂದು ಕೆಲವರು ಹೇಳುವರು. ಇನ್ನು ಕೆಲವರು ಅನ್ಯವೇದಾಧ್ಯಾಯಿಗಳು ಋಗ್ವದವನ್ನಭ್ಯಸಿಸುವಾಗ ಉಪನಯನವಾಗಬೇಕನ್ನುವರು. ಇನ್ನೂ ಹಲವರು ಒಂದೇ ಉಪನಯನದಿಂದಲೇ ಮೂರು ವೇದಾಭ್ಯಾಸಕ್ಕೂ ಅಧಿಕಾರಪ್ರಾಪ್ತವಾಗುವದೆಂದು ಹೇಳುವರು. ಅಡ್ಡ’ರ್ವವೇದಕ್ಕೆ ಮಾತ್ರ ಪುನರುಪನಯನವಾಗತಕ್ಕದ್ದನ್ನುವರು. ಆದರೆ ಋಗೈದಾದಿ ಮೂರು ವೇದಗಳನ್ನು ಅಧ್ಯಯನ ಮಾಡುವವರು ಮುಂಡ, ಮಾಂಡೂಕ್ಯ ಮೊದಲಾದ ಅಥರ್ವ ವೇದೋಪನಿಷತ್ತುಗಳನ್ನು ಸಂಸ್ಕಾರವಿಲ್ಲದೇನೇ ಪಠಿಸುತ್ತಾರೆ. ಆ ವಿಷಯವು ಚಿಂತ್ಯವಾದದ್ದು. ಒಂದೇ ಕಾಲದಲ್ಲಿ ಅನೇಕ ವೇದಗಳನ್ನಾರಂಭಿಸುವುದಕ್ಕೆ ಪುನರುಪನಯನ ಅಗತ್ಯವಿಲ್ಲೆಂಬುದು ಬಹುಸಮ್ಮತವು. ಒಂದು ವೇದಾಧ್ಯಯನ ಮುಗಿದಮೇಲೆ, ಮತ್ತೊಂದು ವೇದಾಧ್ಯಯನದ ಇಚ್ಛೆಯಾದಲ್ಲಿ ಆ ವೇದದ ಇತಿಕರ್ತವ್ಯತಾಸಲುವಾಗಿ ಪುನರುಪನಯನವಾಗತಕ್ಕದ್ದು. ಇಂಥ ಪುನರುಪನಯನದಲ್ಲಿ “ಪರಿಧಾನಾಂತ” ಕಾರ್ಯವಾಗಬೇಕಾಗುವದು. ವಚನ, ಬ್ರಹ್ಮದನ, ಮೇಧಾಜನನ, ದೀಕ್ಷಾ(ವ್ರತ) ಇವು ಕೃತಾಕೃತಗಳು. ಎಲ್ಲ ವೇದಾಭ್ಯಾಸಿಗಳಿಗೂ ಅನಧ್ಯಾಯನಿಮಿತ್ತಕ ಉಪನಯನವು ಸಮಾನವಾದದ್ದು. ಯಥೋಕ್ತಕಾಲದಲ್ಲಿ ಉಪನಯನವಾಗತಕ್ಕದ್ದು. ಪ್ರಾಯಶ್ಚಿತಾರ್ಥ ಉಪನಯನದಲ್ಲಿ ವಿಶೇಷ ನಿಮಿತ್ತ ಘಟಿಸಿದ ಕೂಡಲೇ ಮಾಡುವದಿದ್ದಲ್ಲಿ ಉತ್ತರಾಯಣ, ಪುಣ್ಯನಕ್ಷತ್ರ ಮೊದಲಾದ ಯಥೋಕ್ತಕಾಲವನ್ನು ನೋಡಬೇಕಿಲ್ಲ. ಇಲ್ಲವಾದರೆ ಉಕ್ತಕಾಲವೇ ಇರಬೇಕು. ಮುಖ್ಯಕರ್ತನು ತಂದೆ. ಅವನ ಅಭಾವದಲ್ಲಿ ಚಿಕ್ಕ ತಂದೆ-ದೊಡ್ಡ ತಂದೆ ಮೊದಲಾದವರು. ಅವರ ಅಭಾವವಾದರೆ ಬೇರೆ ಯಾವನಾದರೂ ಆಗಬಹುದು. ಪ್ರಾಯಶ್ಚಿತ್ತಾರ್ಥನಾಗಿ ಮಾಡುವ ಉಪನಯನದಲ್ಲಿ “ಪರ್ಷತ್” ಆಜ್ಞೆಯಿಂದಲೇ ಮಾಡತಕ್ಕದ್ದು. ಪ್ರಾಯಶ್ಚಿತ್ತಸಹಿತವಾಗಿ ಮಾಡುವ ಉಪನಯನದಲ್ಲಿ ಸಂಸ್ಕಾರಹೊಂದುವವನನ್ನು ಉಕ್ತವಿಧಿಯಿಂದ ಪ್ರಾಯಶ್ಚಿತ್ತಮಾಡಿಸಿ ಆಚಾರ್ಯನು ಉಪನಯನ ಮಾಡತಕ್ಕದ್ದು, ಜಾತಕ ಕರ್ಮಾದಿ ಸಹಿತವಾದ ಉಪನಯನ ಮಾಡತಕ್ಕದಿದ್ದರೆ, ಚೌಲಾಂತ ಸಂಸ್ಕಾರ ಮಾಡಿ, ನಂತರ ಉಪನಯನ ಮಾಡತಕ್ಕದ್ದು, ಪುನರುಪನಯನದಲ್ಲಿ ಗಾಯತ್ರಿಯ ಸ್ಥಾನದಲ್ಲಿ “ತತ್ಸವಿತುರ್ವಣೀಮಹೇ” ಈ ಮಂತ್ರೋಪದೇಶವನ್ನು ಹೇಳಿರುವದರಿಂದ ಆಚಾರ್ಯನು ಇದೇ ಮಂತ್ರವನ್ನು ದ್ವಾದಶಾಧಿಕ ಸಹಸ್ರ ಸಂಖ್ಯೆಯಿಂದ ಜಪಿಸುವದು, ಮತ್ತು ಕತ್ರಯವನ ಅಧಿಕಾರಾರ್ಥವಾಗಿ ಮಾಡತಕ್ಕದ್ದು. ಅಜ್ಞಾನದಿಂದ ಮೃತನಾದನೆಂದು ಉತ್ತರಕ್ರಿಯೆಯಾದವನಿಗೆ “ಕರದೇಕಪ್ಪ ಪುನಃ ಸಂಸ್ಕಾರದ್ವಾರಾ ಶ್ರೀ =ರ್ಥಂ ಜಾತಕರ್ಮಾದಿ ಉಪನಯನಾಂತ ಸಂಸ್ಕಾರಾನ್ ಕರಿಷ್ಠ: ಇದರಂತ ಆಯಾಯ ಉದ್ದೇಶದಂತೆ ಸಂಕಲ್ಪಿಸುವದು. *ಸಾರಗಳ ದೆಶದಿಂದ ನಾಂದಿಶ್ರಾದ್ಧಾದಿಗಳನ್ನು ತಂತ್ರದಿಂದ ಮಾಡತಕ್ಕದ್ದು. ಪರಿಚ್ಛೇದ - ೩ ಪೂರ್ವಾರ್ಧ ೨೪೩ ಮುಖಕ್ಷೌರವಾದ ನಂತರ ಚೌಲಾಂಗರವನ್ನು ಮಾಡುವದು. ಮನುಷ್ಯಾದಿ ಕ್ಷೀರಪಾನಾದಿ ಬೇರೆ ನಿಮಿತ್ತಗಳಲ್ಲಿ “ಸಂಸ್ಕಾರ್ಯಕ್ಕನು. “ಅಮುಕದೋಷ ಪರಿಹಾರಾರ್ಥಂ ಪರ್ಷರುಪದಿಷ್ಟಂ ಅಮುಕ ಪ್ರಾಯಶ್ಚಿತ್ತಂ ಕರಿಷ್ಯ ಹೀಗೆ ಸಂಕಲ್ಪಿಸುವದು. ನಂತರ ಉಪನಯನವು, ಆಚಾರ್ಯನು “ಆಸ್ಯ ಅಮುಕದೋಷ ಪರಿಹಾರಾರ್ಥಂ ಪುನಃ ಸಂಸ್ಕಾರಸಿದ್ದಿದ್ವಾರಾ ಶ್ರೀ=ರ್ಥಂ ಪುನರುಪನಯನಂ ಕರಿಷ್ಟೇ"ಹೀಗೆ ಸಂಕಲ್ಪಿಸಿ ಉಪನಯನವನ್ನು ಮಾತ್ರ ತಾನು ಮಾಡತಕ್ಕದ್ದು. “ಉಪನಯನ ಮಾತ್ರ” ಹೇಳಿದ ವಿಷಯದಲ್ಲಿ ಸಂಸ್ಕಾರ್ಯನಿಗೆ ಸಂಕಲ್ಪವಿಲ್ಲ. ಆಚಾರ್ಯನೇ ಸಂಕಲ್ಪ ಮಾಡುವದು. ಪುನರುಪನಯನವನ್ನು ಗ್ರಾಮದ ಹೊರಗೆ ಪೂರ್ವ ಅಥವಾ ಉತ್ತರದಿಕ್ಕಿಗೆ ಹೋಗಿ ಅಲ್ಲಿ ಮಾಡುವದು. ನಾಂದೀಶ್ರಾದ್ಧಾನಂತರ ಮಂಡವದೇವತಾ ಸ್ಥಾಪನಮಾಡಬೇಕು. ಮಂಗಲಸ್ನಾನ ಮಾಡಿಸಿದ ನಂತರದಲ್ಲಿ ಸಂಸ್ಕಾರ್ಯನಿಗೆ ಭೋಜನಮಾಡಿಸಿ “ವಪನ ಮಾಡಬೇಕಾದ ಅದನ್ನು ಮಾಡಿಸಿ, ಸ್ನಾನಾನಂತರ “ಅಸ್ಯಪ್ರಾಯಶ್ಚಿತ್ತಾರ್ಡ್ ಪುನರುಪನಯನ ಹೋಮ ದೇವತಾವರಿಗ್ರಹಾರ್ಥ೦ ಅನ್ನಾಧಾನಂ ಕರಿಷ್ಯ” ಅಸ್ಮಿನ್ನಾಹಿತೇಾವಿತ್ಯಾದಿ ನಿತ್ಯದಂತೆ ಬ್ರಹ್ಮಚಾರಿಗೆ ಪುನರುಪನಯನದಲ್ಲಿ ಸಮಂತ್ರಕವಾದ ವಸ್ತ್ರಧಾರಣೆಯು ನಿತ್ಯವು. ಬ್ರಹ್ಮಚಾರಿಯಲ್ಲದವರಿಗೆ ವಿಕಲ್ಪವು. ಬ್ರಹ್ಮಸೂತ್ರಧಾರಣಾದಿ ಸೂರ್ಯೇಕ್ಷಣಾಂತವೆಲ್ಲವೂ ಉಪನಯನದಂತೆಯೇ, ನಂತರ “ಯುವಾಸುವಾಸಾಃ” ಇತ್ಯಾದಿ ಮಂತ್ರಪೂರ್ವಕ ಪ್ರದಕ್ಷಿಣ ಮತ್ತು ಆವರ್ತನಾದಿ, ವಾಸ, ಬದ್ಧಾಂಜಲಿಗ್ರಹಣ ಇವುಗಳಾದನಂತರ ಪ್ರಣವ ವ್ಯಾಹೃತಿಗಳಿಗೆ ಋಷ್ಯಾದಿಗಳನ್ನು ಸ್ಮರಿಸುವದು. “ತತ್ಸವಿತುರ್ವಣೀಮಹ, ಇತ್ಯಸ್ಯ ಶಾವಾಶ್ವ: ಸವಿತಾನುಷ್ಟುಪ್ ಪುನರುಪನಯನೇ ಉಪದೇಶ ವಿನಿಯೋಗಃ ಪಾದವಾಗಿ, ಅರ್ಧಚ್ರವಾಗಿ, ಪೂರ್ಣವಾಗಿ ಹೀಗೆ ಮೂರಾವರ್ತಿ ಆ ಮಂತ್ರವನ್ನು ಹೇಳಿಸುವದು. ಬ್ರಹ್ಮಚಾರಿಗೆ ಮೇಖಲೆ ಕೊಡುವದು. ಹಾಗೂ ಬ್ರಹ್ಮಚರ್ಯೋಪದೇಶ ಇವು ಉಪನಯನದಂತೆಯೇ, ಅನ್ಯರಿಗೆ ಮೇಖಲಾ, ಅಜಿನ, ದಂಡಧಾರಣೆ ಇವು ವಿಕಲ್ಪವು. ಬ್ರಹ್ಮಚರ್ಯೋಪದೇಶದಲ್ಲಿ “ದಿವಾಮಾಸ್ವಾ"ಇಲ್ಲಿವರೆಗೆ ಮಾತ್ರ. “ವೇದಮಧೀಷ್ಟ” ಈ ಉಪದೇಶ ಮಾಡತಕ್ಕದ್ದಿಲ್ಲ. ಆಮೇಲೆ ಸ್ವಿಷ್ಟಕೃದಾದಿಗಳು, ಮೇಧಾಜನನ ಮಾಡುವದಿದ್ದಲ್ಲಿ ಅಲ್ಲಿಪರ್ಯಂತ ಅಗ್ನಿಧಾರಣವಿರಬೇಕು. ಭಿಕ್ಷಾಪೂರ್ವಕ ಅನುಪ್ರವಚನೀಯವಾಗಬೇಕು. ಗಾಯತ್ರಿಯ ಸ್ಥಾನದಲ್ಲಿ “ತತ್ಸವಿರ್ತಣೀಮಹ” ಎಂದು ಹೋಮವು. ಮೂರುರಾತ್ರಿ ವ್ರತಮುಗಿದ ಮೇಲೆ ಯಾವ ಆಶ್ರಮದಲ್ಲಿ ಪುನರುಪನಯನವು ಘಟಿಸಿದೆಯೋ ಆ ಆಶ್ರಮಧರ್ಮವನ್ನಾಚರಿಸತಕ್ಕದ್ದು. ಅಜ್ಞಾನದಿಂದ ಔರ್ಧ್ವದೇಹಿಕ ಕ್ರಿಯೆಯಾದವನಿಗೆ ಪುನರುಪನಯನದ ನಂತರ ಪುನರ್ವಿವಾಹವೂ ಆಗಬೇಕು. ಮೇಖಲಾದಿ ಧಾರಣ ಪೂರ್ವಕ ಕೆಲದಿನ ಬ್ರಹ್ಮಚರ್ಯದಲ್ಲಿದ್ದು ಅದನ್ನು ಯೋಗ್ಯಕಾಲದಲ್ಲಿ ಮುಗಿಸಿ ಮೊದಲಿನ ಹೆಂಡತಿ ಅಥವಾ ಬೇರೆ ಸ್ತ್ರೀಯೊಡನೆ ವಿವಾಹಸಂಸ್ಕಾರ ಮಾಡಿಕೊಳ್ಳಬೇಕು. ಹೀಗೆ ಋಗೈದಿಗಳಿಗೆ ಪುನಃಸಂಸ್ಕಾರವು. ಯಜುರ್ವೇದಿಗಳಿಗೆ ಬೋಧಾಯನನು-ತಂದೆ-ತಾಯಿಗಳ ಹೊರತಾಗಿ ಅನ್ಯರ ಉಚ್ಚಿಷ್ಟಭಕ್ಷಣ, ಪತ್ನಿಯಿಂದಕೂಡಿ ಭೋಜನ, ಮಧು, ಮಾಂಸ, ಶ್ರಾದ್ಧ, ಸೂತಕಾನ್ನ, ಗಣಾನ್ನ, ವೇಶಾನ್ನ રા ಧರ್ಮಸಿಂಧು ಇವುಗಳ ಭಕ್ಷಣದಲ್ಲಿ ಪುನರುಪನಯನವಾಗತಕ್ಕದ್ದೆಂದು ಹೇಳಿರುತ್ತಾರೆ. ಆಗ ಅಗ್ನಿಮುಖವನ್ನು ಮಾಡಿ ತುಪ್ಪದಲ್ಲಿ ಅದ್ದಿದ ಮುತ್ತುಗಲ ಸಮಿಧವನ್ನು ತೆಗೆದುಕೊಂಡು “ಓಂ ಪುನಸ್ಸಾದಿತ್ಯಾ=ಕಾಮಾಃಸ್ವಾಹಾ” ಎಂದು ಹೇಳಿಸಿ ಅಗ್ನಿಯಲ್ಲಿ ಹಾಕಿಸಬೇಕು. ನಂತರ “ಓಂ ಯನ್ನ ಆತ್ಮನೋಮಿಂದಾಭೂದಗ್ನಿ:=ಓಂ ಪುನರಗ್ನಿಶ್ಚಕ್ಷುರದಾತ್ ಈ ಮಂತ್ರಗಳಿಂದ ಹೋಮಿಸಿ ಚರುಪಕ್ಷ ಹೋಮವನ್ನು ಮಾಡತಕ್ಕದ್ದು. ನಂತರ “ಓಂ ಸಪ್ತತೇಗ್ನ=ಮೃತೇನಸ್ವಾಹಾ’ ಎಂದು ಹೋಮಿಸಿ “ಯೇನದೇವಾಃಪವಿತ್ರೇಣ ಈ ಮೂರು ಮಂತ್ರಗಳಿಂದ ಉಪಹೋಮ ಮಾಡುವದು. ಆಮೇಲೆ ಸ್ವಿಷ್ಟಕೃದಾದಿ ಧೇನುವರಪ್ರದಾನದವರೆಗೆ ಮಾಡುವದು. ಇನ್ನೊಂದು ಪ್ರಕಾರದಂತ ಪರಿಧಿನಿಧಾನದವರೆಗೆ ಮಾಡಿ ಮುತ್ತುಗಳ ಸಮಿಧವನ್ನು ಹಿಡಕೊಂಡು ಪ್ರಾತ್ಯಪ್ರಾಯಶ್ಚಿತ್ತವನ್ನು ವ್ಯಾಹೃತಿಯಿಂದ ಹೋಮಿಸುವದು. ಇನ್ನೊಂದು ರೀತಿಯಂತೆ-ಬ್ರಾಹ್ಮಣನ ಅನುಜ್ಞೆಪಡೆದು ಗಾಯತ್ರಿಯಿಂದ ನೂರಾವರ್ತಿ ಅಭಿಮಂತ್ರಿಸಿದ ಧೃತವನ್ನು ಪ್ರಾಶನಮಾಡುವದು. ಇದರಿಂದ ಪ್ರಾಯಶ್ಚಿತ್ತ ಮಾಡಿದಂತಾಗುವದು. ಶಕ್ಯ, ಅಶಕ್ಯತೆಗಳನ್ನು ನೋಡಿಕೊಂಡು ಹೇಳಿದ ಪಕ್ಷದಲ್ಲಿ ಯಾವದಾದರೊಂದು ಪಕ್ಷದಂತೆ ಮಾಡುವದು. ಹೆಚ್ಚಿನ ವಿವರವನ್ನು ಕೌಸ್ತುಭದಲ್ಲಿ ನೋಡುವದು. ಹೀಗೆ ಬೇರೆ ಶಾಖೆಗಳಲ್ಲಿಯೂ ವಪನ, ಮೇಖಲಾ, ಅಜಿನ, ದಂಡ, ಭಕ್ಷಚರ್ಯಾವ್ರತಾದಿ ವೈಕಲ್ಪಿಕ ವಿಷಯವನ್ನು ವ್ಯವಸ್ಥೆಯಿಂದ ಅನುಷ್ಠಾನಮಾಡಿ ತಮ್ಮ ತಮ್ಮ ಶಾಖೋಕ್ತವಾದ ಉಪನಯನ ಮಾಡತಕ್ಕದ್ದು. ಬ್ರಹ್ಮಚಾರಿ ಧರ್ಮಗಳು ಮೂರುಸಂಧ್ಯಾಕಾಲಗಳಲ್ಲಿಯೂ ಅಗ್ನಿಪರಿಚರ್ಯ ಹಾಗೂ ಭಿಕ್ಷೆ ಇವು ಆವಶ್ಯಕಗಳು. ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಅಥವಾ ಸಾಯಂಕಾಲ ಒಂದರಲ್ಲೇ “ಅಗ್ನಿ ಕಾರ್ಯ"ವಾಗಬೇಕು. ಮುತ್ತುಗ, ಖೈರ, ಅಶ್ವತ್ಥ, ಶಮೀ ಈ ಸಮಿಧಗಳು ಶ್ರೇಷ್ಠಗಳು. ಅಲಭ್ಯವಾದಲ್ಲಿ ಎಕ್ಕೆ, ವೇತಸ್ ಇವುಗಳಾದರೂ ಆಗಬಹುದು. (ವೇತಸ್=ಬೆತ್ತ, ನಡಗಿನಗಿಡ) ಬ್ರಾಹ್ಮಣರು “ಭವತ್ “ಶಬ್ದವನ್ನು ಮೊದಲು ಉಚ್ಚರಿಸಿ ಭಿಕ್ಷ ಮಾಡತಕ್ಕದ್ದು. ಬ್ರಾಹ್ಮಣರು ಬ್ರಾಹ್ಮಣರಲ್ಲಿಯೇ ಭಿಕ್ಷೆ ಮಾಡಬೇಕು. ಆಪತ್ತಿನಲ್ಲಿ ಶೂದ್ರಾದಿಗಳಲ್ಲಿ “ಆಮಾನ್ನ " ಭಿಕ್ಷೆ ಮಾಡಬಹುದು. ಹವ್ಯದಲ್ಲಿ ಮತ್ತು ಶ್ರಾದ್ದ ಹೊರತಾದ ಕವ್ಯ(ಪಿತೃ ಕಾರ್ಯ) ದಲ್ಲಿ ಆಮಂತ್ರಿತನಾಗಿ ಭೋಜನಮಾಡಬಹುದು. ಬ್ರಹ್ಮಚಾರಿಗೆ ಬ್ರಹ್ಮಯಜ್ಞವಾದರೂ ಅಗತ್ಯವೇ. ಆದರೆ ಅದನ್ನು ಉಪಾಕರ್ಮಕ್ಕಿಂತ ಮೊದಲು ಗಾಯತ್ರಿಯಿಂದ ಮಾಡಬೇಕು. ಮಧು ಮೊದಲಾದವುಗಳು ನಿಷಿದ್ರಗಳಾದರೂ ಅನ್ಯರಿಂದ ರೋಗಪರಿಹಾರವಾಗದಿದ್ದರೆ ಗುರುವಿನ ಉದ್ದಿಷ್ಟವಾದ ಅವುಗಳನ್ನು ತಕ್ಕೊಳ್ಳಬಹುದು. ನಿಷಿದ್ಧವಸ್ತುಗಳಾಗಿರದಿದ್ದರೆ ಅವುಗಳನ್ನು ಗುರೂಚ್ಛಿಷ್ಟವಾದರೂ ತಿನ್ನಬಹುದು. ಆದರೆ ಆ ವಸ್ತುವು ಔಷದಾರ್ಥವಾಗಿರಬೇಕು. ಅದರಿಂದ ದೋಷವಾಗುವದಿಲ್ಲ. ಇದೇ ರೀತಿಯಂತೆ ಹಿರೇಅಣ್ಣ, ತಂದೆ, ತಾಯಿ ಇವರ ಉಚ್ಚಿಷ್ಟವೂ ಆಗಬಹುದು. ಕಣ್ಣುಗಳಿಗೆ ಕಾಡಿಗೆ, ಕಾಲ್ಮಟ್ಟು, ಛತ್ರ, ಮಂಚಾದಿಗಳಲ್ಲಿ ಶಯನ ಇವು ತ್ಯಾಜ್ಯಗಳು, ಮತಿ, ಬ್ರಹ್ಮ ಚರಿ ಮತ್ತು ವಿಧವೆಯರು, ತಾಂಬೂಲ, ಅಭ್ಯಂಗ, ಕಂಚಿನಪಾತ್ರೆಯಲ್ಲಿ ಭೋಜನ ಇವುಗಳನ್ನು ಮಾಡಬಾರದು. ಮಧು, ಮಾಂಸ, ಸೂತಕಾನ್ನ, ಶ್ರಾದ್ಧಾನ್ನ ಇತ್ಯಾದಿ ‘ಪುನಃ ಪರಿಚ್ಛೇದ - ೩ ಪೂರ್ವಾರ್ಧ ೨೪ ಸಂಸ್ಕಾರ"ದಲ್ಲಿ ಹೇಳಿದ ನಿಷೇಧಗಳನ್ನು ಇಲ್ಲಿ ಸ್ಮರಿಸಬಹುದು. ಬ್ರಹ್ಮಚಾರಿಯು ಪ್ರತಿದಿನ ಮೇಖಲಾ, ಅಜಿನ, ದಂಡ, ಉಪವೀತ, ಕೌಪೀನ, ಕಟಿಸೂತ್ರ ಇವುಗಳನ್ನು ಧರಿಸಬೇಕು. ಮೇಖಲಾ, ಉಪವೀತಾದಿಗಳು ಹರಿದುಹೋದರೆ ಜಲದಲ್ಲಿ ಹಾಕಿ ಬೇರೆ ಧರಿಸಬೇಕು. ಯಜ್ಞಪವೀತವು ನಷ್ಟವಾದಲ್ಲಿ ಮನೋಜ್ಯೋತಿಃ” ಈ ಮಂತ್ರದಿಂದ ಮತ್ತು “ಆವ್ರತಪತೇ” ಇತ್ಯಾದಿ ನಾಲ್ಕು ಮಂತ್ರಗಳಿಂದ ಆಜ್ಞಾಹುತಿಗಳನ್ನು ಕೊಡತಕ್ಕದ್ದು ಎಂದು ಹೇಳಿದ. ಬ್ರಹ್ಮಚಾರಿಯ “ಗುರುಚರ್ಯಾ” ರೀತಿಯನ್ನು ಅನ್ಯ ಗ್ರಂಥಗಳಿಂದ ತಿಳಿಯತಕ್ಕದ್ದು. ಬ್ರಹ್ಮಚಾರಿವ್ರತ ಲೋಪವಾದಲ್ಲಿ:- ಸಂಧ್ಯಾವಂದನ ಮತ್ತು ಅಗ್ನಿ ಕಾರ್ಯ ಲೋಪವಾದರೆ ಎಂಟುಸಾವಿರ ಗಾಯತ್ರೀ ಜಪಮಾಡಬೇಕು. ಕೆಲಗ್ರಂಥಗಳಲ್ಲಿ ಒಂದಾವರ್ತಿ ಲೋಪವಾದರೆ “ಮಾನಸ್ತೋಕ” ಈ ಮಂತ್ರವನ್ನು ನೂರಾವರ್ತಿ ಜಪಿಸತಕ್ಕದ್ದೆಂದು ಹೇಳಿದೆ. ಭಿಕ್ಷೆಯು ಲೋಪವಾದಲ್ಲಿ ಎಂಟುನೂರು, ಪುನಃ ಪುನಃ ಲೋಪವಾದಲ್ಲಿ ಅದರ ಎರಡುಪಟ್ಟು ಮಾಡಬೇಕು ಮತ್ತು ಪುನಃ ಸಂಸ್ಕಾರವಾಗತಕ್ಕದ್ದು. ಮಧು, ಮಾಂಸಾದಿ ಭಕ್ಷಣದ ವಿಷಯವನ್ನು ಹಿಂದೆಯೇ ಹೇಳಲಾಗಿದೆ. ಸ್ತ್ರೀಸಂಗಮಾಡಿದಲ್ಲಿ “ಗರ್ದಭಶುಯಾಗ"ವನ್ನು ಮಾಡಬೇಕು. ಒಂದು ಅಥವಾ ಅನೇಕ ನಿಯಮಗಳ ಲೋಪವಾದಲ್ಲಿ “ತಂವೋಧಿಯಾ” ಈ ಮಂತ್ರವನ್ನು ಶಿವಾಲಯದಲ್ಲಿ ಕುಳಿತು ಲಕ್ಷಜಪಮಾಡಬೇಕೆಂದು “ಋಧಾನ"ದಲ್ಲಿ ಹೇಳಿದೆ. ಇದರಿಂದ ಬ್ರಹ್ಮಚಾರಿಯ ನಿಯಮೋಲ್ಲಂಘನೆಯ ದೋಷಪರಿಹಾರವಾಗುವದು, ಮುಂದೆ ಉಪಾಕರ್ಮಮಾಡಿ ಹಿಂದೆ ಹೇಳಿದ ವಿದ್ಯಾರಂಭಕಾಲದಲ್ಲಿ “ಅಕ್ಷರಾರಂಭ"ದಲ್ಲಿ ಹೇಳಿದ ವಿಷ್ಣಾದಿ ಪೂಜೆಗಳನ್ನು ಮಾಡಿ “ವೇದಾರಂಭವನ್ನು ಮಾಡತಕ್ಕದ್ದು. ಬೇರೆ ಬೇರೆ ಯುಗಗಳಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಮೌಂಜೀಬಂಧ ಮತ್ತು ವೇದಾಧ್ಯನಗಳು ಪ್ರಚಾರದಲ್ಲಿದ್ದವು. ಕಲಿಯುಗದಲ್ಲಿ ನಿಷೇಧಿಸಿರುವದರಿಂದ ವೇದೋಚ್ಚಾರಣೆಯಿಂದ ದೋಷವಿದೆ. ಅನಧ್ಯಾಯಗಳು ಅವು ನಿತ್ಯ ಹಾಗೂ ನೈಮಿತ್ತಿಕ ಎಂದು ಎರಡು ವಿಧವಾಗಿವೆ. ಈ ಸಂಗತಿಯನ್ನು ಮೌಂಜೀ ಪ್ರಕರಣದಲ್ಲಿಯೇ ಹೇಳಲಾಗಿದೆ. ಈ ಎರಡೂ ವಿಧದ ಅನಧ್ಯಾಯಗಳು ಅಲ್ಲಿ ಹೇಳಿದ್ದಕ್ಕಿಂತ ಹೆಚ್ಚಿಗೇ ಇವೆ. ಅವುಗಳನ್ನೆಲ್ಲ ಇಲ್ಲಿ ಹೇಳುತ್ತ ಹೋಗುವದಿಲ್ಲ. ಕಲಿಕಾಲದಲ್ಲಿ ಮಂದಮತಿಗಳೇ ಹೆಚ್ಚಾಗಿದ್ದು ಎಲ್ಲ ಅನಧ್ಯಾಯಗಳನ್ನು ಪಾಲಿಸುವಷ್ಟು ಸಮರ್ಥರಾಗಿಲ್ಲವಾದ್ದರಿಂದ “ಹೇಮಾದ್ರಿ"ಯಲ್ಲಿ ಚತುರ್ದಶೀ, ಅಷ್ಟಮಿ, ಹುಣ್ಣಿಮೆ, ಅಮಾವಾಸೆ, ಪ್ರತಿಪದ “ಇವಿಷ್ಟು ಅನಧ್ಯಾಯಗಳನ್ನು ಪಾಲಿಸಿದರೆ ಸಾಕು” ಎಂದು ಹೇಳಿರುವದರಿಂದ, ಇವು ಮತ್ತು ಅಯನ ಸಂಕ್ರಾಂತಿಗಳು ಇವುಗಳನ್ನುಳಿದು, ಬೇರೆ ಅನಧ್ಯಾಯಗಳಲ್ಲಿ ವೇದ, ಶಾಸ್ತ್ರಾದಿಗಳನ್ನಭ್ಯಸಿಸಬಹುದು. ಶಿಷ್ಟಾಚಾರವಾದರೂ ಹಾಗೆಯೇ ಇದೆ. ಪೂರ್ವದಿನ ಸಾಯಂಕಾಲದ ನಂತರ ಹಾಗೂ ಪ್ರಾತಃಕಾಲದ ನಂತರ ತ್ರಿಮೂಹೂರ್ತವಾಗಿ ಅನಧ್ಯಾಯ ತಿಥಿಯಿದ್ದರೆ, “ಉದಯೇಶ್ರಮಯೇವಾಪಿ” ಎಂಬ ವಚನದಂತೆ, ಎರಡೂದಿನ ಅನಧ್ಯಾಯ ಪ್ರಾಪ್ತವಾದಲ್ಲಿ ವಚನಾಂತರದಲ್ಲಿ ಕೆಲವು ಕಡೆಯಲ್ಲಿ ಕೆಲವರು ಯಾವ ದಿನದಲ್ಲಿ ಎಷ್ಟು ಘಟಿ ಇರುವದೋ ಅಷ್ಟುಕಾಲ “ಅನಧ್ಯಾಯವೆಂದು ತಿಳಿಯಬೇಕೆಂದು ಹೇಳಿದೆ. ಅನಧ್ಯಾಯ ದಿನದ ಮಿಶ್ರವಾದದ್ದೆಲ್ಲ ಅನಧ್ಯಾಯವೊಂದು ತಿಳಿಯಬೇಕಾಗಿಲ್ಲ. ಹೀಗಲ್ಲ ವಚನಗಳಿರುವದರಿಂದ ಇದೂ ೨೪೬ ಧರ್ಮಸಿಂಧು ಸಹ ಮಂದಮತಿಗಳಿಗಾಗಿಯೇ ಹೇಳಿದ್ದೆಂದು ತಿಳಿಯಬಹುದು. ಚತುರ್ಥಿ, ಸಪ್ತಮಾದಿ ವಿಷಯವನ್ನು ಹಿಂದೆಯೇ ಹೇಳಿದೆ. “ಪ್ರದೋಷಗಳಲ್ಲಿ ಸ್ಮರಿಸಬಾರದು ಮತ್ತು ಹೇಳಬಾರದು” ಹೀಗೆ ಉಕ್ತಿಯಿರುವದರಿಂದ ಇತರ ಅನಧ್ಯಾಯಗಳಿಗಿಂತ ಇವು ಹೆಚ್ಚಿನವು. ವೇದಾಂಗ, ಭಾರತ, (ಇತಿಹಾಸ) ಪುರಾಣ, ಧರ್ಮಶಾಸ್ತ್ರಾದಿಗಳಿಗೆ ಅನಧ್ಯಾಯ ದೋಷವಿಲ್ಲ. ಪರ್ವತಿಥಿಗಳನ್ನು ಮಾತ್ರ ಬಿಡತಕ್ಕದ್ದು. ನಿತ್ಯಜಪ, ಕಾವ್ಯಕರ್ಮ ಮೊದಲಾದವುಗಳು, ಪಾರಾಯಣ ಇತ್ಯಾದಿಗಳಲ್ಲಿ ಹೇಳುವ ವೇದಮಂತ್ರಗಳಿಗೆ ಅನಧ್ಯಾಯ ದೋಷವಿಲ್ಲ. ವೇದಪಠನ (ಅಭ್ಯಾಸ), ಪಾಠನ (ಅಭ್ಯಾಸ ಮಾಡಿಸುವದು) ಇವುಗಳಲ್ಲಿ ಅನಧ್ಯಾಯ ಪಾಲಿಸಬೇಕು. ಅಧ್ಯಯನದಲ್ಲಿಯ ನಿಮಯ ವೇದಾರಂಭದಲ್ಲಿ ಮತ್ತು ತುದಿಯಲ್ಲಿ ಗುರುವಿನ ಪಾದಸ್ಪರ್ಶಮಾಡಿ ನಮಸ್ಕರಿಸಬೇಕು. ಮೊದಲು ಓಂಕಾರವನ್ನುಚ್ಚರಿಸಿ ವೇದದ ಅಧ್ಯಯನ ಮಾಡಬೇಕು. ಕೊನೆಯಲ್ಲೂ ಓಂಕಾರವನ್ನುಚ್ಚರಿಸಿ, ಭೂಮಿಸ್ಪರ್ಶಮಾಡಿ ವಿರಮಿಸತಕ್ಕದ್ದು. ರಾತ್ರಿಯ ಪ್ರಥಮಯಾಮ ಮತ್ತು ಅಂತಯಾಮಗಳಲ್ಲಿ ವೇದಾಧ್ಯಯನ ಮಾಡಬಹುದು. ಮಧ್ಯ ಎರಡು ಯಾಮಗಳಲ್ಲಿ ನಿದ್ರೆ ಮಾಡುವದು. ಈ ನಿಯಮದಿಂದ ಬ್ರಾಹ್ಮಪದವಿ ಪ್ರಾಪ್ತವಾಗುವದು. ಗುರುವನ್ನೂ ತಂದೆತಾಯಿಗಳನ್ನೂ ಮನ್ನಿಸಬೇಕು. ಅವರಲ್ಲಿ ದ್ರೋಹಬಗೆಯಲಾಗದು. ಪಾಠಮಾಡಿಸಿದ ಗುರುವನ್ನು ತ್ರಿಕರಣ (ಕಾಯ-ವಾಕ್-ಮನಸ್ಸು) ಪೂರ್ವಕ ಆದರಿಸದಿದ್ದರೆ ಅವರು ಗುರು ಪಾಲಕರಾಗದಿರುವದರಿಂದ ಮಾಡಿದ ವೇದಾಧ್ಯಯನವಾದರೂ ಅವರಿಗೆ ಫಲಪ್ರದವಾಗಲಾರದು. (ಅವರನ್ನು ಅದೂ ಪಾಲಿಸುವದಿಲ್ಲ) ಹೀಗೆ ಅಧ್ಯಯನ ಧರ್ಮಗಳು. ವ್ರತಗಳು ಮಹಾನಾಮ್ಮಿವ್ರತ, ಮಹಾವ್ರತ, ಉಪನಿಷತ, ಗೋದಾನವ್ರತ ಹೀಗೆ ವ್ರತಗಳು ನಾಲ್ಕು ವಿಧಗಳಾಗಿವೆ. ಹದಿಮೂರನೇ ವರ್ಷದಲ್ಲಿ ‘ಮಹಾನಾಮ್ಮಿ, ಹದಿನಾಲ್ಕನೇ ವರ್ಷ ‘ಮಹಾವ್ರತ’, ಹದಿನೈದನೇ ವರ್ಷ ‘ಉಪನಿಷದ್ರತ’, ಹದಿನಾರನೇವರ್ಷ ‘ಗೋದಾನವ್ರತ’ ಹೀಗೆ ವ್ರತಗಳನ್ನಾಚರಿಸಬೇಕು. ವ್ರತಾರಂಭವನ್ನು ಉತ್ತರಾಯಣ ಮತ್ತು ಚೌಲೋಕ್ತ ಥಿನುಕ್ರವಾರಾದಿಗಳಲ್ಲಿ ಮಾಡತಕ್ಕದ್ದು. ಈ ವಿಷಯದ ವಿಸ್ತ್ರತವಿವೇಚನೆಯನ್ನು ಕೌಸ್ತುಭಾದಿ ಗ್ರಂಥಗಳಲ್ಲಿಯೂ, ತಮ್ಮ-ತಮ್ಮ ಶಾಖೋಕ್ತ ಪ್ರಯೋಗಗ್ರಂಥಗಳಲ್ಲಿಯೂ ನೋಡತಕ್ಕದ್ದು. ಇವುಗಳ ಲೋಪವಾದಲ್ಲಿ ಪ್ರತ್ಯೇಕವಾಗಿ ಒಂದೊಂದು ಕೃಚ್ಛವನ್ನಾಚರಿಸಿ ಗಾಯತ್ರಿಯಿಂದ ನೂರಾವರ್ತಿ ಹೋಮಮಾಡಬೇಕು. ಮೂರು, ಆರು ಅಥವಾ ಹನ್ನೆರಡು ಕೃಚ್ಛಗಳನ್ನು ಮಾಡತಕ್ಕದ್ದು. ಇತ್ಯಾದಿ. ಸಮಾವರ್ತನ ಗುರುವಿಗೋಸ್ಕರ ಕ್ಷೇತ್ರ (ಗದ್ದೆ) ಮೊದಲಾದವುಗಳನ್ನು ದಕ್ಷಿಣೆಯಾಗಿ ಕೊಟ್ಟು ಅವನ ಅನುಜ್ಞೆಯಿಂದ ಸ್ನಾನಮಾಡಬೇಕು. ಈ ವ್ರತಾಂತಾನಕ್ಕೆ “ಸಮಾವರ್ತನ"ವನ್ನುವರು. ಕ್ಷೇತ್ರ, ಸುವರ್ಣ, ಗೋವು, ಕುದುರೆ, ಛತ್ರ, ಕಾಲು ಮೆಟ್ಟು, ಧಾನ್ಯ, ವಸ್ತ್ರ, ಶಯ್ಯಾ, ಶಾಕ ಇತ್ಯಾದಿಗಳಲ್ಲಿ ಪರಿಚ್ಛೇದ - ೩ ಪೂರ್ವಾರ್ಧ ೨೪೭ ಗುರುವು ಇಚ್ಛಿಸಿದ ವಸ್ತುಗಳನ್ನು ಆತನಿಗೆ ಕೊಡಬೇಕು. ಸ್ಟೇಚ್ಛೆಯಿಂದ ತನಗೆ ಏನೂ ಬೇಡವೆಂದು ಹೇಳಿದರೆ ಆತನ ಅನುಜ್ಞೆಯಿಂದ ಸ್ನಾನಮಾಡಬಹುದು. ಹೇಳಿದ ಕ್ಷೇತ್ರಾದಿ ವಸ್ತುಗಳಿಂದಾದರೂ ಗುರುಋಣವನ್ನು ತೀರಿಸುವದಶಕ್ಕ. “ಗುರುವು ಹೇಳಿಕೊಟ್ಟ ಒಂದೊಂದಕ್ಷರಗಳಿಗೆ ಪ್ರತಿಫಲವಾಗಿ ಕೂಡುವ ವಸ್ತುವು ಭೂಮಿಯಲ್ಲಿಲ್ಲ” ಹೀಗೆಂದು ವಚನವಿದೆ. ಸ್ನಾತಕನಲ್ಲಿ “ವಿದ್ಯಾಸ್ನಾತಕ, ವ್ರತಸ್ನಾತಕ, ಉಭಯಸ್ನಾತಕ” ಹೀಗೆ ಮೂರು ವಿಧವಿದೆ. ಒಂದು, ಎರಡು, ಮೂರು ಮತ್ತು ನಾಲ್ಕು ವೇದಗಳನ್ನಾಗಲೀ ಅಥವಾ ವೇದಗಳ ಕೆಲವು ಭಾಗಗಳನ್ನಾಗಲೀ ಅಧ್ಯಯನಮಾಡಿ ಅದರ ಅರ್ಥವನ್ನು ತಿಳಿದು, ದ್ವಾದಶವರ್ಷಾದಿ ಬ್ರಹ್ಮಚರ್ಯ ಕಾಲಾವಧಿಯಮೊದಲು ಸ್ನಾನಮಾಡಿದವನಿಗೆ “ವಿದ್ಯಾಸ್ನಾತಕ"ನೆನ್ನುವರು. ಉಪನಯನವ್ರತ, ಸಾವಿತ್ರೀವ್ರತ, ವೇದವ್ರತಗಳನ್ನನುಷ್ಠಾನಮಾಡಿ ವೇದಸಮಾಪ್ತಿಯಾಗುವ ಮೊದಲೇ ಸ್ನಾನಮಾಡಿದವನು “ವ್ರತಸ್ನಾತಕನು. ಇನ್ನು ದ್ವಾದಶವರ್ಷಾದಿ ಬ್ರಹ್ಮಚರ್ಯ ಸಮಾಪ್ತಿ ಮಾಡಿ, ವೇದವನ್ನೂ ಮುಗಿಸಿ ಸ್ನಾನಮಾಡಿದವನು “ವಿದ್ಯಾವ್ರತೋಭಯ ಸ್ನಾತಕ"ನೆಂದಾಗುವನು. “ಉಪನಯನ ವ್ರತ"ವೆಂದರೆ ಉಪನಯನವಾದ ನಂತರ ಮೇಧಾಜನನಪರ್ಯಂತ ಮಾಡುವ ತ್ರಿರಾತ್ರ, ದ್ವಾದಶರಾತ್ರಾದಿ ವ್ರತವನ್ನನುಷ್ಠಾನಮಾಡುವದು. ಮೇಧಾಜನನನಾಂತರ ಉಪಾಕರ್ಮದ ವರೆಗೆ ಮಾಡುವ ಬ್ರಹ್ಮಚರ್ಯಾನುಷ್ಠಾನಕ್ಕೆ “ಸಾವಿತ್ರೀವ್ರತ"ವೆನ್ನುವರು. ಅದರ ನಂತರ ವೇದಾಧ್ಯನಕ್ಕಾಗಿ ದ್ವಾದಶ ವರ್ಷಾದಿ ಕಾಲಾವಧಿಯ ವ್ರತಕ್ಕೆ “ವೇದವ್ರತ"ವೆನ್ನುವರು. “ಸ್ವಾಧ್ಯಾಯೋಧ್ಯೆತವ್ಯ” ಹೀಗೆ ವಿಧಿಯಿರುವದರಿಂದ ಅದು ಅರ್ಥಜ್ಞಾನಪರ್ಯಂತವಾಗಿರಬೇಕು. ವೇದಾರ್ಥಜ್ಞಾನಹೊರತಾಗಿ ಬರೇ ವೇದಾಧ್ಯಯನ ಮಾತ್ರದಿಂದ ಸಮಾವರ್ತನೆಗೆ ಅಧಿಕಾರ ಪ್ರಾಪ್ತವಾಗಲಾರದು. ಹೀಗೆ ಪೂರ್ವಮೀಮಾಂಸಾಕಾರರ ಮತವು, ಸಾದ್ಯಂತವೇದಗ್ರಹಣವು ವಿಧಿಗೆ ಫಲವು. ಪೂರ್ವಕಾಂಡಗಳ ಅರ್ಥಜ್ಞಾನವು ಕರ್ಮಾನುಷ್ಠಾನಕ್ಕೆ ಪ್ರಯೋಜಕವಾಗುವದು. ಉತ್ತರಕಾಂಡಾರ್ಥಜ್ಞಾನವು ಕಾಮ್ಯಕರ್ಮದ ಪ್ರೋತವ್ಯವಿಧಿಯಿಂದ ಪ್ರಾಪ್ತವಾದದ್ದೆಂದು ಉತ್ತರಮೀಮಾಂಸಕರ ಮತವು ಸಂಹಿತಾ-ಬ್ರಾಹ್ಮಣ ಕೂಡಿ ಒಂದು ವೇದವಾಗುವದು. ಅರಣ್ಯಕಾಂಡವು ಬ್ರಾಹ್ಮಣಾಂತರ್ಗತವಾದದ್ದು. ಸಂಪೂರ್ಣ ವೇದಾಧ್ಯನದಲ್ಲಿ ಅಸಮರ್ಥನಾದವನು ವೇದದ ಏಕದೇಶ (ಕೆಲಭಾಗ) ವನ್ನಾದರೂ ಪಠಿಸಬೇಕು. ಆತ್ಮಶಕ್ತನಾದವನು ಸಂಹಿತೆಯ ಪ್ರಥಮ ಸೂಕ್ತ, ಕೊನೆಯ ಸೂಕ್ತ, ಕೆಲ ಸೂಕ್ತಗಳ ಮೊದಲಿನ ಮಂತ್ರ ಅಥವಾ ಎಲ್ಲ ಸೂಕ್ತಗಳ ಮೊದಲ ಮಂತ್ರ ಇವುಗಳನ್ನಧ್ಯಯನ ಮಾಡುವದು. ಹೀಗೆ ವೇದೈಕದೇಶವನ್ನಭ್ಯಸಿಸಿ ಸಮಾವರ್ತನ ಹೊಂದಿದವ ಅಥವಾ ವಿವಾಹಿತನಾದವನಾದರೂ ಮುಂದೆ ಬ್ರಹ್ಮಚರ್ಯೋಕ್ತವಾದ ನಿಯಮದಿಂದ ವೇದವನ್ನಭ್ಯಸಿಸಬಹುದು. ಆಗ ಋತುಕಾಲದಲ್ಲಿ ಮಾತ್ರ ಪತ್ರೀಗಮನ ಮಾಡಬೇಕು. ಬ್ರಹ್ಮ ಚಾರಿವ್ರತಲೋಪಪ್ರಾಯಶ್ಚಿತ್ತ ಮಾಡಿ ಕೃಚ್ಛತ್ರಯವನ್ನೂ ಮುಗಿಸಿ ಮತ್ತು ಮಹಾವ್ಯಾಹೃತಿಹೋಮಮಾಡಿ ಸಮಾವರ್ತನ ಮಾಡತಕ್ಕದ್ದು, “ವ್ರತಲೋಪವೆಂದರೆ ಸಂಧ್ಯಾ, ಅಗ್ನಿಕಾರ್ಯ, ಭಿಕ್ಷಾ ಇವುಗಳ ಲೋಪ, ಶೂದ್ರಾದಿಸ್ಪರ್ಶ, ಕಟಿಸೂತ್ರ-ಮೇಖಲಾ-ಅಜಿನತ್ಯಾಗ, ದಿವಾಸ್ಸಾಪ, ಅಂಜನ, ಪರ್ಯುಷಿತ ಭೋಜನ ಇತ್ಯಾದಿಗಳು ವ್ರತಭಂಗಕರಗಳು, ಆಗ ವ್ರತಲೋಪಪ್ರಾಯಶ್ಚಿತ್ತವಾಗಬೇಕು. ಇದಾದರೂ ಅಲ್ಪಕಾಲದ ಅಲ್ಪವ್ರತಭಂಗದಲ್ಲಿ ಮಾತ್ರ ೨೪೮ ಧರ್ಮಸಿಂಧು ಹೇಳಿದ್ದು. ಹೆಚ್ಚಾಗಿ ಧರ್ಮಲೋಪವಾದಲ್ಲಿ “ತಂವೋಧಿಯಾ ನವ್ಯಾಶವಿಷ್ಯಂ” ಎಂಬ ಮಂತ್ರವನ್ನು ಶಿವಾಲಯದಲ್ಲಿ ಲಕ್ಷ ಜಪಮಾಡಬೇಕೆಂದು ಹಿಂದೆಯೇ ಹೇಳಿದೆ. ಒಟ್ಟಿನಲ್ಲಿ ಮಹಾನಾಯ್ಕ ಮೊದಲಾದ ವ್ರತ ಹಾಗೂ ಬ್ರಹ್ಮಚರ್ಯವ್ರತ ಲೋಪಪ್ರಾಯಶ್ಚಿತ್ತ ಇವುಗಳನ್ನು ಮಾಡಿದ ನಂತರ ಸಮಾವರ್ತನೆಗೆ ಅಧಿಕಾರ ಪ್ರಾಪ್ತವಾಗುವದು. ಸಮಾವರ್ತನ ಕಾಲ “ಉಪನಯನೋಕ್ತಕಾಲವೇ ಸಮಾವರ್ತನೆಗೆ ಕಾಲವು” ಎಂದು ಬಹುಜ್ಯೋತಿಷಗ್ರಂಥಗಳ ಅಭಿಪ್ರಾಯ. ಆದಕಾರಣ ಅನಧ್ಯಾಯ, ಪ್ರದೋಷ, ಕುಜ, ಶನಿವಾರ, ಪುಷ್ಯನಕ್ಷತ್ರ, ಆಷಾಢಮಾಸ, ದಕ್ಷಿಣಾಯನ ಇತ್ಯಾದಿಗಳು ನಿಷಿದ್ಧಗಳಾಗುವವು. ಮಾರ್ಗಶೀರ್ಷದಲ್ಲಿ ವಿವಾಹವಾಗುವ ಸಂದರ್ಭಬಂದರೆ ದಕ್ಷಿಣಾಯನದಲ್ಲಾದರೂ ಆಗಬಹುದು. “ಅನಾಶ್ರಮೀನ ತಿಷ್ಠತಕ್ಷಣ ಮಾತ್ರಮಪಿದ್ವಿಜ” ಎಂಬ ಉಕ್ತಿಯಂತೆ ಒಂದು ಕ್ಷಣವಾದರೂ ಆಶ್ರಮರಹಿತನಾಗಿರಬಾರದು, ಎಂಬ ನಿಷೇಧವನ್ನತಿಕ್ರಮಿಸತಕ್ಕದ್ದಲ್ಲ. ಕೆಲವರು ಮುಂಜಿಗೆ ಉಕ್ತವಾದ ಕಾಲವನ್ನು ಸಮಾವರ್ತನೆಗೆ ಸ್ವೀಕರಿಸಲಿಕ್ಕೆ ಮೂಲ” ವಚನವಿಲ್ಲದ್ದರಿಂದ ಮೂರು ರಿಕ್ತಾತಿಥಿಗಳು ಪೂರ್ಣಿಮಾ, ಅಮಾವಾಸ್ಕಾ, ಅಷ್ಟಮೀ, ಪ್ರತಿಪದೆಗಳು ನಿಷಿದ್ಧಗಳು, ಶುಕ್ಲ ಪಕ್ಷ, ಕೃಷ್ಣ ದಶಮೀ ವರೆಗೆ ಅಡ್ಡಿ ಇಲ್ಲ, ಗುರು- ಶುಕ್ರಾಸ್ತ್ರ, ದಿನಕ್ಷಯ, ಭದ್ರ, ವ್ಯತೀಪಾತಾದಿ ದೋಷಗಳು ತ್ಯಾಜ್ಯಗಳು, ಶುಭವಾರಗಳು ಶ್ರೇಷ್ಠಗಳು, ಹೀಗೆನ್ನುವರು. ಇದರಲ್ಲಿ ಪ್ರದೋಷ, ಸೋವಪದಾ ತಿಥಿಗಳನ್ನು ಬಿಡುವ ಕಾರಣವಿಲ್ಲವೆನ್ನುವರು. ಪುಷ್ಕ, ಪುನರ್ವಸು, ಮೃಗ, ರೇವತೀ, ಹಸ್ತ, ಅನುರಾಧಾ, ಉತ್ತರಾತ್ರಯ, ರೋಹಿಣೀ, ಶ್ರವಣ, ವಿಶಾಖಾ, ಚಿತ್ರಾ ಇವು ಶ್ರೇಷ್ಠಗಳು. ಇವುಗಳ ಅಭಾವದಲ್ಲಿ ಮುಂಜಿಗೆ ಹೇಳಿದ ನಕ್ಷತ್ರಗಳಾದರೂ ಆಗಬಹುದು. ಕೆಲ ನಿರ್ಣಯಸಿಂಧು ಪುಸ್ತಕಗಳಲ್ಲಿ ಶನಿ, ಕುಜವಾರಗಳನ್ನೂ ಹೇಳಿದೆ. ಮಣಿಕುಂಡಲ, ಎರಡು ವಸ್ತ್ರ, ಛತ್ರ, ಪಾದುಕಾ, ದಂಡ, ಮಾಲೆ, ಮೈಗೆ ಹಚ್ಚುವ ಲೇಪ, ಅಂಜನ, ರುಮಾಲ ಇತ್ಯಾದಿಗಳನ್ನು ತನ್ನ ಬಗ್ಗಾಗಿ ಮತ್ತು ಆಚಾರ್ಯನ ಸಲುವಾಗಿಯೂ ಸಂಗ್ರಹಿಸುವದು. ಇದಕ್ಕೆ ಸಾಮರ್ಥ್ಯವಿಲ್ಲದವನು ಆಚಾರ್ಯನೊಬ್ಬನ ಸಲುವಾಗಿಯಾದರೂ ಸಿದ್ಧಪಡಿಸಬೇಕು. ದೇಶಕಾಲಗಳನ್ನು ಸ್ಮರಿಸಿ, “ಮಮ ಬ್ರಹ್ಮಚರ್ಯನಿಯಮ ಲೋಪಜನಿತ ಸಂಭಾವಿತದೋಷಪರಿಹಾರೇಣ ಸಮಾವರ್ತಣಾಧಿಕಾರಸಂಪಾದನಾರಾ ಶ್ರೀ ಪರಮೇಶ್ವರ ಪ್ರೀತೃರ್ಥ೦ ಆಹೋಮಪೂರ್ವಕಂ ಕೃಚ್ಛತ್ರಯಂ ಮಹಾನಾಮ್ಮಾದಿ ವ್ರತಚತುಷ್ಟಯ ಲೋಪಜನಿತ ಪ್ರತ್ಯವಾಯ ಪರಿಹಾರಾರ್ಥಂ ಪ್ರತಿಸಂಸ್ಕಾರಂ ಏಕ ಕೃಂಚ ಗಾಯತ್ರಾ ಆ ಹೋಮಪೂರ್ವಕಂ ತಂತ್ರಣ ಅಹಮಾಚರಿ” ಹೀಗೆ ಸಂಕಲ್ಪಿಸಿ ಅಗ್ನಿ ಪ್ರತಿಷ್ಠಾದಿ ಚಕ್ಷುಷಿ ಆತ್ಮನ ಅಂತವಾಗಿ ಮಾಡಿ “ಅತ್ರಪ್ರಧಾನಂ ಅಗ್ನಿ, ವಾಯುಂ, ಸೂರ್ಯ, ಪ್ರಜಾಪತಿಂ ಚ ಚತಭಿರಾಜ್ಯಾಹುತಿಭಿ: ಅಗ್ನಿ, ಪೃಥಿವೀಂ ಮಹಾಂತಂ ಏಕಯಾಚಾಹುತ್ತಾ ವಾಯುಮಂತರಿಕ್ಷಂ ಮಹಾಂತಮೇಕಯಾಚ್ಯಾಹುತ್ತಾ ಆದಿತ್ಯಂ ದಿವಂ ಮಹಾಂತಮೇಕಯಾ=ಚಂದ್ರಮಸು ನಕ್ಷತ್ರಾಣಿ ಶೋ ಮಹಾಂತಮೇಕಯಾ-ಅಗ್ನಿಂ ವಿಭಾವಸು ಶುಕ್ರ ತುಂ ಅಗ್ನಿ, ಅಗ್ನಿ, ಅಗ್ನಿ, ವಾಯು, ಸೂರ್ಯ, ಪ್ರಜಾಪತಿಂ ಚ ಅವೇಕ್ಕೆಕಯಾಮುತ್ಯಾ ಶೇಷೇಣ” ಇತ್ಯಾದಿ. ಆದ್ಯಭಾಗವಾದ ಮೇಲೆ ವ್ಯಸ್ತ, ಸಮಸ್ತ ವ್ಯಾಹೃತಿಗಳಿಂದ ಹೋಮಿಸಿ “ಓಂಭೂರಗ್ನಯೇಚಪರಿಚ್ಛೇದ - ೩ ಪೂರ್ವಾರ್ಧ ೨೪೯ ಪ್ರತಿವೈಚ ಮಹತೇ ಸ್ವಾಹಾ|ಅಗ್ನಯೇ ಪೃಥಿವ್ಯಮಹತ ಇದು” ಹೀಗೆ ಅಸ್ವಾಧಾನದಂತೆ “ತ್ಯಾಗವು ‘ಓಂಭುವೋ ವಾಯವೇ ಚಾಂತರಿಕ್ಷಾಯ ಚ ಮಹತೇಚಾಹಾ। ಓಂ ಸುವರಾದಿತ್ಯಾಯಚದಿವೇಶ ಮಹತೇಚ ಗ್ರಾಹಾ ಓಂ ಭೂರ್ಭುವಸುವಶ್ಚಂದ್ರಮರೇಚ ನಕ್ಷತ್ರೇಭ್ಯಶ್ಚ ದಿಗ್ಧಶ್ಚ ಮಹತೇಚ ಸ್ವಾಹಾ| ಚಂದ್ರಮಸೇ ನಕ್ಷಯ್ಯೋದಿದ್ರೂ ಮಹತ ಇದಂ ಓಂ ಪಾಹಿನೋ ಅಗ್ನಯೇನಸೇ ಸ್ವಾಹಾ| ಓಂ ಪಾಹಿನೋ ವಿಶ್ವವೇದಸೇ ಸ್ವಾಹಾಓಂಯಜ್ಞಪಾಹಿ ವಿಭಾವನೋ ಸ್ವಾಹಾ ಓಂ ಸರ್ವಂಪಾಹಿ ಶತಕ್ರತೋ ಸ್ವಾಹಾ ಓಂ ಪುನರೂರ್ಜಾ ನಿವರ್ತಸ್ವ ಪುನರಗ್ನ ಇಷಾಯುವಾಗಿ ಪುನರ್ನ: ಪಾಹ್ಯಂ ಹಸಃ ಸ್ವಾಹಾಓಂ ಸಹರಯ್ಯಾ ನಿವರ್ತಾಗ್ನೆ ಪಿಸ್ವಧಾರಯಾ ವಿಶ್ವಪ್ರಿಯಾ ವಿಶ್ವತಸ್ಸರಿ ಸ್ವಾಹಾ’ ಪುನಃ ನಾಲ್ಕು ವ್ಯಸ್ತ ಸಮಸ್ತಾಹುತಿಗಳಿಂದ ಹೋಮಿಸುವದು. “ಮಹಾನಾಮ್ಮಾ “ದಿಗಳ ಲೋಪವಾದಲ್ಲಿ ಪ್ರತ್ಯೇಕವಾಗಿ ನೂರೆಂಟು, ಇಪ್ಪತ್ತೆಂಟು ಅಥವಾ ಎಂಟು ಗಾಯತ್ರಿಯಿಂದ ಆಜ್ಞಾಹುತಿಹೋಮಮಾಡಿ ಒಂದೊಂದು “ಕೃಚ್ಛ ವನ್ನಾಚರಿಸುವದು. ಹೀಗೆ ಪ್ರಾಯಶ್ಚಿತ್ತ ಹೋಮವು ಸಮಾವರ್ತನ ಸಂಕಲ್ಪಾದಿಗಳು “ಮಮ ಗೃಹಸ್ಥಾಶ್ರಮ ಅರ್ಹತಾ ಸಿದ್ಧಿದ್ವಾರಾ ಶ್ರೀ ಪರ=ಸಮಾವರ್ತನಂ ಕರಿಷ್ಯ ಹೀಗೆ ಸಂಕಲ್ಪಿಸುವದು. ನಾಂದೀಶ್ರಾದ್ಧಾಂತ ದವರೆಗೆ ವಟುವಿನ ಕಡೆಯಿಂದಲೇ ಮಾಡಿಸುವದು. ಬ್ರಹ್ಮಚಾರಿಯು ಜೀವತೃಕನಾದರೆ ತಂದೆ ಮೊದಲಾದವರು ಅವನ ಪ್ರತಿನಿಧಿಯಾಗಿ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು, ಉಪನಯನಾದಿಗಳಂತೆ ಸಮಾವರ್ತನೆಗೂ ತಂದೆ ಮೊದಲಾದವರೇ ನಾಂದೀಕರ್ತೃಗಳೆಂಬ ಮತವನ್ನು ಹಿಂದೆಯೇ ಹೇಳಲಾಗಿದೆ. ಉಳಿದ ಪ್ರಯೋಗಗಳನ್ನು ತಮ್ಮ ತಮ್ಮ ಗ್ರಹಗ್ರಂಥಾನುಸಾರ ಮಾಡತಕ್ಕದ್ದು. ತನಗೆ ಮಧುಪರ್ಕ ಕೊಡುವವರಲ್ಲಿ ಒಂದು ರಾತ್ರಿ ಮಾತ್ರ ಇರತಕ್ಕದ್ದು. ಆಮೇಲೆ ವ್ರತಗಳನ್ನು ಸಂಕಲ್ಪಿಸುವದು. ವ್ರತಗಳಲ್ಲಿ ಸೂತ್ರೋಕ್ತ ಹಾಗೂ ಸ್ಮೃತ್ಯುಕ್ತ ಎಂದು ಎರಡುಪ್ರಕಾರಗಳು. ಆ ನಿಯಮಗಳೆಲ್ಲ ಪುರುಷಾರ್ಥ ಸಾಧಕಗಳು, ಹೊರತು ಸಮಾವರ್ತನಾಂಗವಲ್ಲ. ನಿಯಮಗಳನ್ನೆಲ್ಲ ಪಾಲಿಸಲು ಶಕ್ಕವಿಲ್ಲದಿದ್ದರೆ “ಸೂತ್ರೋಕ್ತ ನಿಯಮಗಳನ್ನಷ್ಟಾದರೂ ಪಾಲಿಸಬೇಕು. ಶಕ್ತನಾದರ ಸ್ಮೃತ್ಯುಕ್ತನಿಯಮಗಳನ್ನೂ ಆಚರಿಸಬೇಕು. ಸ್ನಾತಕವ್ರತಗಳು :- ಕಾರಣವಿಲ್ಲದೆ ರಾತ್ರಿಯಲ್ಲಿ ಸ್ನಾನಮಾಡಬಾರದು. ಬೆತ್ತಲೆಯಾಗಿ ಸ್ನಾನಮಾಡಬಾರದು. ಬೆತ್ತಲೆಯಾಗಿ ಮಲಗಬಾರದು. ಮೈಥುನದ ಹೊರತಾಗಿ ಬೆತ್ತಲೆಯಾದ ಹೆಂಗಸನ್ನು ನೋಡಬಾರದು ಮಳೆಯಲ್ಲಿ ಓಡಬಾರದು. ಮರವನ್ನೇರಬಾರದು. ಬಾವಿಯೊಳಗಿಳಿಯಬಾರದು. ಕೈಗಳಿಂದ ಈಜಿ ನದಿಯನ್ನು ದಾಟಬಾರದು. ಪ್ರಾಣಾಪಾಯಕರವಾದ ವ್ಯವಸಾಯವನ್ನು ಮಾಡಬಾರದು. ಇವು ಸೂಕ್ತಗಳು. ಸ್ಮೃತ್ಯುಕ್ತವ್ರತಗಳೆಂದರೆ :- ನಿತ್ಯದಲ್ಲೂ ಎರಡು ಉಪವೀತಗಳನ್ನು ಧರಿಸಬೇಕು. ಜಲಯುಕ್ತವಾದ ಕಮಂಡಲು, ಛತ್ರ, ರುಮಾಲು, ಪಾದುಕ, ಕಾಲುಜೋಡು, ಸುವರ್ಣಕುಂಡಲ, ದರ್ಭಮುಷ್ಟಿ ಇವುಗಳನ್ನು ಧರಿಸಬೇಕು. ಕತ್ತರಿಸಿದ ಸಣ್ಣದಾದ ಮೀಸೆ, ಉಗುರುಗಳನ್ನು ಧರಿಸಬೇಕು. ಕಾರಣರಹಿತವಾಗಿ ಮುಂಡನಕ್ಷೌರ ಮಾಡಬಾರದು. ಯಾಕೆಂದರೆ “ನಸಮಾವೃತ್ತಾಮುಂಡೇರನ್” ಹೀಗೆ ವಚನವಿದೆ. ನಿತ್ಯದಲ್ಲೂ ಅಧ್ಯಯನಮಾಡುತ್ತಿರಬೇಕು. ಒಮ್ಮೆ ಧರಿಸಿ ನಿರ್ಮಾಲ್ಯವಾದ ೨೫೦ ಧರ್ಮಸಿಂಧು ಪುಷ್ಪ, ಗಂಧ ಮೊದಲಾದವುಗಳನ್ನು ಪುನಃ ಧರಿಸಬಾರದು ಬಿಳವಸ್ತ್ರಗಳನ್ನು ಧರಿಸಬೇಕು. ಸುವಾಸನೆಯಿಂದ ಯುಕ್ತನಾಗಿ ನೋಡುವವನಿಗೆ ಪ್ರೀತಿಯುಂಟಾಗುವಂತಿರಬೇಕು. ಐಶ್ವರ್ಯವಿರುವಾಗ ಜೀರ್ಣ ಹಾಗೂ ಮಲಿನ ವಸ್ತ್ರಗಳನ್ನು ಧರಿಸಬಾರದು. ಕೆಂಪುವಸ್ತ್ರ ಹಾಗೂ ದೇಹಪೀಡಾಕರವಾದ ವಸ್ತ್ರವನ್ನು ಧರಿಸಬಾರದು. ಗುರುವಿನ ಹೊರತಾಗಿ ಅನ್ಯರು ಧರಿಸಿರುವ ವಸ್ತ್ರ, ಅಲಂಕಾರ, ಮಾಲಿಕ ಮೊದಲಾದವುಗಳನ್ನು ಧರಿಸಬಾರದು. ಅಶಕ್ತನಾದಲ್ಲಿ ಅನ್ಯರು ಧರಿಸಿದ್ದನ್ನು ತೊಳೆದುಕೊಂಡು ಧರಿಸಬಹುದು. ಬೇರೆಯವರ ಉಪವೀತ, ಕಾಲೊಟ್ಟು ಇವುಗಳನ್ನು ಧರಿಸಕೂಡದು. ಬಂದಿಬಟ್ಟೆಯನ್ನು ಧರಿಸಕೂಡದು. ಜಲದಲ್ಲಿ ತನ್ನ ಪ್ರತಿಬಿಂಬವನ್ನು ನೋಡಬಾರದು. ಒಂದೇ ಪಾತ್ರೆಯಲ್ಲಿ ಒಂದೇ ವೇಳೆಯಲ್ಲಿ ಪತ್ನಿಯೊಡನೆ ಉಣ್ಣಬಾರದು. (ವಿವಾಹ ಹೊರತಾಗಿ) ಶೂದ್ರನಿಗೆ ಧರ್ಮಜ್ಞಾನ, ನೀತಿಜ್ಞಾನ, ವ್ರತಕಲ್ಪ ಇವುಗಳನ್ನುಪದೇಶಿಸಬಾರದು. ಇದು ಪ್ರತ್ಯಕ್ಷುಪದೇಶದ ವಿಷಯವಾಗಿ ಹೇಳಿದ್ದು. ಯಾಕೆಂದರೆ “ಕೃತ್ವಾಬ್ರಾಹ್ಮಣಮಗ್ರತಃ” ಎಂಬ ವಚನದಿಂದ ಶೂದ್ರನಿಗೆ ಬ್ರಾಹ್ಮಣದ್ವಾರಾ ಉಪದೇಶದಲ್ಲಿ ದೋಷವಿರುವದಿಲ್ಲ. ಅಶುಚಿಯಾದವನಿಂದ ತಂದ ಅಥವಾ ಒಂದೇ ಹಸ್ತದಿಂದ ಎತ್ತಿದ ಜಲದಿಂದ ಆಚಮನಮಾಡಬಾರದು. ಗೃಹಸ್ಥಾಶ್ರಮಿಯಾದ ಶೂದ್ರನಿಗೆ ಉಚ್ಚಿಷ್ಟವನ್ನು ಕೊಡಬಾರದು. ಶೂದ್ರನಿಗೆ ಹೋಮಶೇಷವನ್ನು ಕೊಡಬಾರದು. ಬಾವಿಯಿಂದ ತೆಗೆದ ನೀರಿನಿಂದ ನಿಂತು ಆಚಮನಮಾಡಬಾರದು. ಮೊಣಕಾಲುಮಟ್ಟದ ಅಥವಾ ಅದಕ್ಕಿಂತ ಹೆಚ್ಚಿನ ನೀರಿನಲ್ಲಿ ನಿಂತು ಆಚಮನಮಾಡಿದಲ್ಲಿ ದೋಷವಿಲ್ಲ. ಪಾದದಿಂದ ಪಾದವನ್ನು ತಿಕ್ಕಬಾರದು. ಅಸಮರ್ಥಳಾದ ಗಮನ ಮಾಡಬಾರದು. ತಲೆಗೆ ವಸ್ತ್ರವನ್ನು ಸುತ್ತಿಕೊಂಡು ಹಗಲಿನಲ್ಲಿ ತಿರುಬಾರದು. ರಾತ್ರಿಯಲ್ಲಿ ಮತ್ತು ಮಲ-ಮೂತ್ರ ವಿಸರ್ಜನದಲ್ಲಿ ತಲೆಗೆ ವಸ್ತ್ರವನ್ನು ಸುತ್ತಿಕೊಳ್ಳುವದು. ಕಾಲುಮೆಟ್ಟುಗಳನ್ನು ಧರಿಸಿಕೊಂಡು ಭೋಜನ, ಅಭಿವಾದನ, ನಮಸ್ಕಾರಗಳನ್ನು ಮಾಡಬಾರದು. (ಈ ನಿಯಮವನ್ನು ಸಂಕಲ್ಪರೂಪವಾಗಿಯೇ ಮೂಲದಲ್ಲಿ ಹೇಳಿದೆ. ಅದಕ್ಕಿಂತ ಇದು ಕರ್ತವ್ಯಜ್ಞಾನಕ್ಕೆ ಅನುಕೂಲವೆಂದು ತಿಳಿದು “ಕರ್ತವ್ಯ” ರೂಪದಿಂದ ಬರೆಯಲಾಗಿದೆ. ಇವುಗಳ ಸಂಕಲ್ಪದಲ್ಲಿ ‘ನಿಮಿತ್ತವಿಲ್ಲದೆ ರಾತ್ರಿಯಲ್ಲಿ ಸ್ನಾನಮಾಡುವದಿಲ್ಲ. ನಿತ್ಯದಲ್ಲೂ ಎರಡು ಯಜೋಪವಿತಗಳನ್ನು ಧರಿಸುವನು. ಇತ್ಯಾದಿ ತಿಳಿಯತಕ್ಕದ್ದು.) ಹೀಗೆ ಇನ್ನೂ ಎಷ್ಟೋ ಸ್ಮೃತಿನಿಯಮಗಳಿವೆ. ಇವುಗಳಲ್ಲಿ ಸಾಧ್ಯವಾಗುವ ನಿಯಮಗಳನ್ನಷ್ಟೇ ಸಂಕಲ್ಪಿಸಬೇಕು. ಸಂಕಲ್ಪಮಾಡಿ ಬುದ್ಧಾ ಉಲ್ಲಂಘನಮಾಡಿದರೆ ಮೂರುದಿನ ಉಪವಾಸಮಾಡಬೇಕು. ತಿಳಿಯದೆ ಉಲ್ಲಂಘನವಾದರೆ ಒಂದುದಿನ ಉಪವಾಸಮಾಡಬೇಕು. ಅಶಕ್ತನಾದವನು ಮೂರು ಅಥವಾ ಒಂದು ಬ್ರಾಹ್ಮಣಭೋಜನ ಮಾಡಿಸುವದು. ಹೀಗೆ ಸ್ನಾತಕವ್ರತಗಳು. ಸಮಾವರ್ತನೆಯ ಗೌಣಕಲ್ಪ ಅತ್ಯಾ ಪತ್ತಿನಲ್ಲಿ ಸಮಾವರ್ತನ ಕಾರ್ಯವು ನಡೆಯದಂತಾದಾಗ ಸಂಕ್ಷೇಪವಾಗಿಯಾದರೂ ಆಚರಿಸಬೇಕು. ಅದರ ಪ್ರಯೋಗ:- ಸಂಕಲ್ಪಮಾಡಿ ಬ್ರಹ್ಮಚಾರಿ ಚಿಹ್ನೆಗಳಾದ ಮೇಖಲಾದಿಗಳನ್ನು ತ್ಯಜಿಸಿ ಕ್ಷೌರ ಮಾಡಿಸಿಕೊಂಡು, ತೀರ್ಥದಲ್ಲಿ ಸ್ನಾನಮಾಡಿ, ವಸ್ತ್ರವನ್ನುಟ್ಟು ಆಚಮನ, ತಿಲಕಧಾರಣಾದಿಗಳನ್ನು ಮಾಡಿ, ಅಗ್ನಿಯನ್ನು ಸ್ಥಾಪಿಸಿ ಪ್ರಜಾಪತಿಯನ್ನು ಮನಸ್ಸಿನಿಂದ ಧ್ಯಾನಿಸಿ ಪರಿಚ್ಛೇದ - ೩ ಪೂರ್ವಾರ್ಧ ಮೌನದಿಂದ ಸಮಿಧವನ್ನು ಹಾಕಬೇಕು. ಕರ್ಮವಿರೋಧವಲ್ಲದ ಅನ್ಯ ಆಹುತಿಗಳನ್ನೂ ಮೌನದಿಂದಲೇ ಹಾಕಬೇಕು. ಇದು ಸಮಾವರ್ತನೆಯ ಗೌಣಕಲ್ಪವು. ಬ್ರಹ್ಮಚಾರಿಯ ಆಶೌಚನಿರ್ಣಯ ಬ್ರಹ್ಮಚರ್ಯದ ಸಮಯದಲ್ಲಿ ಹತ್ತುದಿನ ಆಶೌಚಕ್ಕೆ ಕಾರಣರಾದ ಸಪಿಂಡರ ಮರಣವಾಗಿದ್ದರೆ, ಸಮಾವರ್ತನೆಯಾದ ನಂತರ ಆ ಮೃತಸಪಿಂಡರ ಸಲುವಾಗಿ ತಿಲಾಂಜಲಿದಾನ ಪೂರ್ವಕವಾಗಿ ಮೂರುರಾತ್ರಿ ಆಶೌಚ ತಕ್ಕೊಳ್ಳಬೇಕು. ಸಪಿಂಡರೊಳಗೆ ಉಪನಯನವಾಗದಿದ್ದವರು ಮೃತರಾಗಿದ್ದರೆ ಮತ್ತು ಸೋದರಮಾವ ಮೊದಲಾದವರ ಮೃತಿಯಾದಲ್ಲಿ ಅವರ ಸಂಬಂಧದ ಅತಿಕ್ರಾಂತಾಶೌಚವನ್ನು ಸಮಾವರ್ತನವಾದ ನಂತರ ತಕ್ಕೊಳ್ಳತಕ್ಕದ್ದಿಲ್ಲ. ಇದರಂತೆ ಜನನಾಶೌಚಕ್ಕೂ ಈ ಅತಿಕ್ರಾಂತಾಶೌಚವಿಲ್ಲ. ದಶಾಹಸೂತಕದ ಸಪಿಂಡರ ಮರಣವಾಗಿದ್ದಾಗ ಸಮಾವರ್ತನೆಯ ನಂತರ ಮೂರು ರಾತ್ರಿಗಳ ಮಧ್ಯದಲ್ಲಿ ವಿವಾಹಮಾಡಕೂಡದು. ಬ್ರಹ್ಮಚರ್ಯ ಸಮಯದಲ್ಲಿ ಯಾರ ಮರಣವೂ ಆಗದಿದ್ದಲ್ಲಿ ಸಮಾವರ್ತನೆಯ ನಂತರ ಕೂಡಲೇ ವಿವಾಹವಾಗಲಡ್ಡಿಯಿಲ್ಲ. ಹೀಗೆ ಸಮಾವರ್ತನಾಂತವಾಗಿ ನಿರ್ಣಯವನ್ನು ಹೇಳಲಾಯಿತು. ವಿವಾಹ ಪ್ರಕರಣ ಬ್ರಾಹ್ಮಣನಾದವನು ತನ್ನದೇ ವರ್ಣದವಳಾದ ಲಕ್ಷಣಯುಕ್ತಳಾದ ಅಂಗ ಊನಳಲ್ಲದ, ಸೌಮ್ಮ ಹೆಸರಿನ, ಮೃದುದೇಹದ, ಮನೋಹರಳಾದ ಸ್ತ್ರೀಯೊಡನೆ ವಿವಾಹವಾಗಬೇಕು. ಮುಂದಿನ ಶುಭಾಶುಭಜ್ಞಾನಕ್ಕಾಗಿ ಅನೇಕ ಲಕ್ಷಣಗಳನ್ನು ಹೇಳಲಾಗಿದೆ. “ಆಶ್ವಲಾಯನಸೂತ್ರ"ದಲ್ಲಿ ಅಪಿಂಡಾನ್‌ಕೃತ್ವಾ” ಇತ್ಯಾದಿ ಕೃತಿಗಳನ್ನು ಹೇಳಿದೆ. ಜ್ಯೋತಿಃಶಾಸ್ರೋಕ್ತ ರಾಶಿ, ನಕ್ಷತ್ರಾದಿಗಳ ಘಟನೆ (ಮೇಲನ, ಮೇಳಾಮೇಳಿ) ಯೂ ಸಹ ಶುಭಾಶುಭಜ್ಞಾನಕ್ಕೆ ಕಾರಣವಾಗಿದೆ ಅದನ್ನೇ ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗುತ್ತಿದೆ. ರಾಶಿಗಳಿಗೆ ಅಧಿಪತಿಗಳು:- ಮೇಷ, ವೃಶ್ಚಿಕಗಳಿಗೆ ಕುಜ, ವೃಷಭ, ತುಲೆಗಳಿಗೆ ಶುಕ್ರ, ಮಿಥುನ, ಕನ್ಯಗಳಿಗೆ ಬುಧ, ಕರ್ಕಕ್ಕೆ ಚಂದ್ರ, ಸಿಂಹಕ್ಕೆ ರವಿ, ಧನು, ಮೀನಗಳಿಗೆ ಗುರು, ಮಕರ, ಕುಂಭಗಳಿಗೆ ಶನಿ ಹೀಗೆ ಅಧಿಪತಿಗಳು, ಗ್ರಹರ-ಶತ್ರು-ಮಿತ್ರತ್ವ:- ಸೂರ್ಯನಿಗೆ-ಗುರು, ಕುಜ, ಚಂದ್ರರು ಮಿತ್ರರು, ಶನಿ, ಶುಕ್ರರು ಶತ್ರುಗಳು. ಬುಧನು ಸಮಮಿತ್ರನು. ಚಂದ್ರನಿಗೆ-ಸೂರ್ಯ, ಬುಧರು ಮಿತ್ರರು, ಕುಜ, ಗುರು, ಶುಕ್ರ, ಶನಿಗಳು ಸಮರು. ಶತ್ರುಗಳಿಲ್ಲ. ಕುಜನಿಗೆ-ಬುಧನು ಶತ್ರುವು, ಸೂರ್ಯ, ಗುರು, ಚಂದ್ರರು ಮಿತ್ರರು. ಶನಿ, ಶುಕ್ರರು ಸಮರು. ಬುಧನಿಗೆ-ರವಿ, ಶುಕ್ರರು ಮಿತ್ರರು. ಚಂದ್ರನು ಶತ್ರುವು ಶನಿ, ಕುಜ, ಗುರುಗಳು ಸಮರು, ಗುರುವಿಗೆ- ಸೂರ್ಯ, ಕುಜ, ಚಂದ್ರರು ಮಿತ್ರರು, ಶುಕ್ರ, ಬುಧರು ಶತ್ರುಗಳು. ಶನಿಯು ಸಮನು. ಶುಕ್ರನಿಗೆ ಶನಿ, ಬುಧರು ಮಿತ್ರರು, ಸೂರ್ಯ, ಚಂದ್ರರು ಶತ್ರುಗಳು. ಗುರುವು ಸಮನು. ಇನ್ನು ಗುಣವಿಚಾರವು:- ದಂಪತಿಗಳಿಬ್ಬರ ರಾಶ್ಯಧಿಪತಿಯು ಒಬ್ಬನೇ ಆದರೆ, ಎರಡು ರಾಶಿಗಳ ಅಧಿಪತಿಗಳು ಪರಸ್ಪರ ಮಿತ್ರರಾದರೆ ೫ ಗುಣಗಳು. ಆ ಎರಡು ರಾಶ್ಯಧಿಪತಿಗಳು ಸಮ ಶತ್ರುಗಳಾದರೆ ಅರ್ಧ ಗುಣವು, ಸಮ ಮಿತ್ರತ್ವವಿದ್ದರೆ ೪ ಗುಣಗಳು. ಒಬ್ಬನು ಶತ್ರುವಾಗಿ ಇನ್ನೊಬ್ಬನು ಮಿತ್ರನಾದರೆ ೧ ಗುಣವು. ಇಬ್ಬರೂ ಸಮರಾದರೆ ೩ ಗುಣಗಳು. ಇಬ್ಬರೂ ಶತ್ರುಗಳಾದರೆ ಗುಣ- ೧. ಇನ್ನು ಗಣಗಳು:- ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರಾ, ಉತ್ತರಾ, ಉತ್ರಾಷಾಢಾ, ೨೫೨ ಧರ್ಮಸಿಂಧು ಉತ್ರಾಭದ್ರ, ಭರಣಿ, ಆದ್ರ್ರಾ, ರೋಹಿಣೀ ಇವು “ಮನುಷ್ಯಗಣಗಳು, ಹಸ್ತ ರೇವತೀ, ಪುನರ್ವಸು, ಪುಷ್ಯ, ಸ್ವಾತೀ, ಮೃಗಶಿರಾ, ಶ್ರವಣ, ಅಶ್ವಿನಿ, ಅನುರಾಧಾ ಇವು “ದೇವಗಣಗಳು. ಕೃತಿಕಾ, ಆಶ್ಲೇಷಾ, ಮಘಾ, ಚಿತ್ರಾ, ವಿಶಾಖಾ, ಜೇಷ್ಠಾ, ಮೂಲಾ, ಧನಿಷ್ಠಾ, ಶತಭಿಷ ಇವು “ರಾಕ್ಷಸಗಣ"ಗಳು, ಇಬ್ಬರದೂ ಒಂದೇ ಗಣವಾದರೆ ೬ ಗುಣ, ಶುಭವು, ವರನು ದೇವಗಣ, ಸ್ತ್ರೀ ಮನುಷ್ಯಗಣವಾದರೂ ೬ ಗುಣಗಳು. ಇದು ವ್ಯತ್ಯಾಸವಾದರೆ, ಅಂದರೆ, ಸ್ತ್ರೀ ದೇವ, ಪುರುಷ ಮನುಷ್ಯ ಹೀಗಾದರೆ ೫ ಗುಣಗಳು. ಇದು ಮಧ್ಯಮ. ವರನು ರಾಕ್ಷಸ, ವಧೂ ದೇವಗಣವಾದರೆ ೧ ಗುಣ. ಇದು ವ್ಯತ್ಯಾಸವಾದರೆ ೦ (ಶೂನ್ಯ)ಗುಣ. ಇದು ಕನಿಷ್ಠವು, ದೇವ-ರಾಕ್ಷಸಗಳಾದರೆ ವೈರ, ರಾಕ್ಷಸ-ಮನುಷ್ಯರಾದರೆ ಮರಣ ಹೀಗೆ ಗಣಕೂಟವು ಇನ್ನು ರಾಶಿಕೂಟ:- ವಧರಾಶಿಯಿಂದ ವರನದು ಎರಡನೇ ರಾಶಿಯಾದರೆ (ದ್ವಿರ್ದ್ವಾದಶ) “ನಿರ್ಧನತ್ವ"ವು. ನವಪಂಚಮಗಳಾದರೆ (ಅನ್ನೋನ್ಮ) “ನಿಷ್ಪತ್ರತ್ವವು ಷಟ್ಕಾಷ್ಟಕವಾದರೆ “ಮರಣ” ಅಥವಾ ಆಪತ್ತು, ಪರಸ್ಪರ ರಾಶಿಗಳು ಸಪ್ತಮಗಳಾಗದರೆ ಮತ್ತು ತೃತೀಯ ಏಕಾದಶಗಳಾದರೆ, ಚತುರ್ಥ ದಶಮಗಳಾದರೆ ಶುಭವು ನಕ್ಷತ್ರ ಒಂದೇ ಆದರೂ ಪಾದಭೇದವಾದರೆ ಶುಭವು ರಾಶಿಯೂ ಒಂದೇ ಆದರೆ ಅತಿಶುಭವು. ನಕ್ಷತ್ರ ಒಂದೇ ಆಗಿದ್ದು ರಾಶಿಭೇದವಾದರೂ ಕೂಟದೋಷವಿಲ್ಲ. ನಕ್ಷತ್ರವು ಒಂದೇ ಆಗಿದ್ದು ರಾಶಿಭಿನ್ನವಾದರೆ ಶುಭವು. ಹೀಗಿದ್ದರೆ ನಾಡೀಗಣ ದೋಷವಿಲ್ಲ. ನಕ್ಷತ್ರ-ಒಂದೇಚರಣವಾಗಿದ್ದರೂ, ಷಟ್ಯಾಷ್ಟಕವಾದರೂ ವರ್ಷವು. ದ್ವಿರ್ದ್ವಾದಶ, ನವ-ಪಂಚಮಗಳು ಮಧ್ಯಮವು, ಉಳಿದದ್ದು ಶುಭವು, ಈ ರಾಶಿಕೂಟವು ಶುಭವಿದ್ದಲ್ಲಿ ಅದಕ್ಕೆ ೭ ಗುಣಗಳು. ದುಷ್ಕಟವಾಗಿ ಗ್ರಹಮಿತ್ರತ್ವವಿದ್ದರೆ ೪ ಗುಣಗಳು. ಇಲ್ಲವಾದರೆ ಒಂದು ಗುಣವು. ಒಂದೇ ಚರಣವಾದರೆ ಗುಣಶೂನ್ಯ. ನಾಡಿಗಳು ಅಶ್ವಿನಿ, ಆದ್ರ್ರಾ, ಪುನರ್ವಸು, ಉತ್ತರಾಫಲ್ಗುನೀ, ಹಸ್ತ, ಜೇಷ್ಠಾ, ಮೂಲಾ, ಶತಭಿಷ, ಪೂರ್ವಾಭದ್ರಾ ಇವು ಆದಿನಾಡಿಗಳು, ಭರಣಿ, ಮೃಗಶಿರಾ, ಪುಷ್ಯ, ಹುಬ್ಬಾ, ಚಿತ್ರಾ, ಅನುರಾಧಾ, ಪೂ/ಷಾಢಾ, ಧನಿಷ್ಠಾ, ಉತ್ರಾಭದ್ರಾ ಇವು ಮಧ್ಯನಾಡಿಗಳು. ಕೃತಿಕಾ, ರೋಹಿಣಿ, ಆಶ್ಲೇಷಾ, ಮಘಾ ಸ್ವಾತೀ, ವಿಶಾಖಾ, ಉತ್ರಾಷಾಢಾ, ಶ್ರವಣ, ರೇವತೀ ಇವು ಅಂತ್ಯನಾಡಿಗಳು, ನಾಡಿಯು ಇಬ್ಬರದ್ದೂ ಒಂದೇ ಆದರೆ ಮೃತ್ಯುವು, ಭಿನ್ನನಾಡಿಯಾದರೆ ೮ ಗುಣಗಳು, ಏಕನಾಡಿಯು ಸರ್ವಥಾ ತ್ಯಾಜ್ಯವು, ಶೂದ್ರಾದಿಗಳಿಗೆ ಆವತ್ತಿನಲ್ಲಿ ಆದಿನಾಡಿ ಅಥವಾ ಅಂತ್ಯನಾಡಿಯಾದರೆ ಶುಭವು ಇನ್ನು ವರ್ಣ, ವಶ್ಯ, ಭಕೂಟ, ಯೋನಿಕೂಟ ಇವುಗಳಿಗೆ ಗುಣವು ಅಲ್ಪವೇ ಇರುವದರಿಂದ ಅದರಿಂದ ವಿವಾಹ ಘಟನೆಯಲ್ಲಿ ಮಹತ್ವವಿಲ್ಲದಿರುವದರಿಂದ ಅವುಗಳಲ್ಲಿ ಹೇಳಿಲ್ಲ. ಈ ಮೇಲಿನದಲ್ಲಿ ಎಲ್ಲ ಗುಣಗಳಿಂದ ಕೂಡಿ ಇಪ್ಪತ್ತು ಗುಣಗಳಾದಲ್ಲಿ ಮಧ್ಯಮವು. ಇಪ್ಪತ್ತಕ್ಕಿಂತ ಹೆಚ್ಚಾದರೆ ಅತಿಶುಭವು. ಇಪ್ಪತ್ತಕ್ಕೆ ಕಡಿಮೆಯಾದರೆ ಅಶುಭವು. ಹೀಗೆ ನಕ್ಷತ್ರಾದಿಘಟಿತ ವಿಚಾರವು. ಕನೈಯ ವಿಚಾರ “ಅನನ್ಯಪೂರ್ವಿಕಾಂ ಕಾಂತಾಂ ಆಸಪಿಂಡಾ ಯವೀಯಸೀಂ ಆರೋಗಿಂ ಭ್ರಾತೃಮತೀಂ ಅಪಮಾನಾರ್ತಗೋತ್ರಜಾ” (ಯಾಜ್ಞವಲ್ಕ ಸ್ಮತಿ) ಅನನ್ಯಪೂರ್ವಿಕಾ ಅಂದರೆ ಬೇರೆಯವರನ್ನು ಮೊರಲು ಹೊಂಬದವಳಾಗಿರಬಾರದು, ಕಾಂತಾಂ ಅಂದರೆ ಮನೋಹರಳಾಗಿರಬೇಕು. ಅಸಪಿಂಡಾಂ ಪರಿಚ್ಛೇದ - ೩ ಪೂರ್ವಾರ್ಧ ಅಂದರೆ ಸಪಿಂಡದಾಯಾದರೊಳಗಿನವಳಾಗಿರಬಾರದು. ಯವೀಯಸೀಂ ಅಂದರೆ ತನಗಿಂತ ಕಿರಿಯಳಾಗಿರಬೇಕು. ಅರೋಗಿಣೀಂ ಅಂದರೆ ರೋಗರಹಿತಳಾಗಿರಬೇಕು. ಭ್ರಾತೃಮತೀಂ ಅಂದರೆ ಅಣ್ಣ-ತಮ್ಮಂದಿರುಳ್ಳವಳಾಗಿರಬೇಕು. ಅಸಮಾನಾರ್ಷಗೋತ್ರಜಾಂ ಅಂದರೆ ಸಮಾನವಾದ ಪ್ರವರಗೋತ್ರದವಳಾಗಿರಬಾರದು. ಇಂಥ ಲಕ್ಷಣಯುಕ್ತಳಾದ ಕನ್ನಿಕೆಯನ್ನು ವಿವಾಹಮಾಡಿಕೊಳ್ಳಬೇಕು. ಇವುಗಳಲ್ಲಿ ರೋಗಿ, ಅಣ್ಣತಮ್ಮಂದಿರಿಲ್ಲದಿರುವ ಕನ್ನಿಕೆಯನ್ನು ವಿವಾಹವಾದರೆ ಇಲ್ಲಿ ಅಥವಾ ಪರದಲ್ಲಿ ಪತಿತತ್ವ ದೋಷವುಂಟಾಗುವದಿಲ್ಲ. ಆದರೆ ಹಿರಿಯವಳು ಅಥವಾ ಬೇರೆಯವಳನ್ನು ಹೊಂದಿದವಳು, ಗೋತ್ರ ಪ್ರವರದವಳು ಇಂಥವಳನ್ನು ಲಗ್ನವಾದರೆ ಪಾತಿತ್ಯವುಂಟಾಗುವದು. ಅನನ್ಯಪೂರ್ವಿಕಾ ಈ ವಿಶೇಷಣದ ವಿವರ:- ಇದರಲ್ಲಿ ಏಳುಪ್ರಕಾರ, “ಪೂನರ್ಭ’ತ್ವದೋಷವುಂಟಾಗುವದು. “ಬೇರೆ ಪುರುಷರಿಂದ ವಿವಾಹಿತ” ಳಾದವಳು. “ಮನೋದತ್ತಳಾದವಳು. “ವಾಗತ್ತಳಾದವಳು. “ಅಗ್ನಿಸಾಕ್ಷಿಕಳಾದವಳು. “ಸಪ್ತಪದ್ಯಂತ ವಿವಾಹವಾದವಳು, “ಅನ್ಯರಿಂದ ಭೋಗಿಸಲ್ಪಟ್ಟ"ವಳು, “ಗರ್ಭಿಣಿ"ಯಾದವಳು, ಹಡೆದವಳು ಇವರೆಲ್ಲ “ಅನ್ಯಪೂರ್ವಿಕಾ’ ಎಂದಾಗುವರು. ಇನ್ನು ಇದಕ್ಕೂ ಅಪವಾದವಿದೆ. ಮನೋದತ್ತಾ ವಾಗತ್ತಾ, ಅಗ್ನಿದತ್ತಾ ಇವರು ಸಪ್ತಪದಿಯೊಳಗೆ ಆಪತ್ತಿನಲ್ಲಿ ಅನ್ಯರಿಂದ ವಿವಾಹಿತರಾಗಬಹುದು. “ಸಪ್ತಪದಿ” ಯಾದನಂತರ ಬಲತ್ಕಾರದಿಂದ ವಿವಾಹಿತಳಾದರೂ ಅವಳನ್ನು ಇನ್ನೊಬ್ಬರಿಗೆ ದಾನಮಾಡಕೂಡದು. ವಿವಾಹೋಪಯೋಗಿ ಸಾಪಿಂಡ್ಯನಿರ್ಣಯ ಇಲ್ಲಿ ಅಸಪಿಂಡಳಾದವಳಾಗಿರಬೇಕು. ಅಂದರೆ ಸಪಿಂಡರೊಳಗಿನವಳಾಗಿರಬಾರದು ಎಂದು ಹೇಳಿದೆಯಷ್ಟೇ? “ಸಪಿಂಡ” ರೆಂದರೆ ಸಮಾನವಾದಪಿಂಡ ಅಂದರೆ ‘ದೇಹ’ ಸಂಬಂಧವುಳ್ಳವಳು ‘ಸಪಿಂಡಳು. ಹೀಗಲ್ಲದವಳು “ಅಸಪಿಂಡಗಳು. ಈ ಸಾಪಿಂಡವು ಏಕಶರೀರಾನ್ವಯದಿಂದ ಸಂಭವಿಸುವದು. ತಂದೆ, ಅಜ್ಜ, ಮುತ್ತಜ್ಜ ಇವರು “ಪಿಂಡಭಾಗಿ"ಗಳೆನ್ನಲ್ಪಡುವರು. ವೃದ್ರಪ್ರಪಿತಾಮಹ, (ಮುತ್ತಜ್ಜನ ತಂದೆ ಅಂದರೆ ನಾಲ್ಕು ತಲೆಮಾರಿನವ) ವೃದ್ಧಪ್ರಪಿತಾಮಹನ ತಂದೆ ಮತ್ತು ಅವನ ತಂದೆ, ಸಪಕರು ಇವರು “ಲೇಪಭಾಗಿಗಳನ್ನಲ್ಪಡುವರು. ಪಿಂಡಕೊಡುವ ತಾನು ಏಳನೆಯವನಾಗುವನು. ಹೀಗೆ ಮೂಲಪುರುಷನಿಂದ ಹಿಡಿದು ತನ್ನ ವರೆಗೆ ಆಗುವ ಏಳು ಪುರುಷರಿಂದ ಕೂಡಿದ್ದು “ಸಾಪ್ತಪೌರುಷ” ಸಾಪಿಂಡವಾಗುವದು. “ಸಾಪಿಂಡ್ಕಂ ಸಾಪ್ತ ಪೌರುಷಂ” ಹೀಗೆ” ಮಾತೃ"ದಲ್ಲಿ ಹೇಳಿದೆ. ಒಂದು ಪಿಂಡದಾನ ಕಾರ್ಯದಲ್ಲಿ ದಾತೃತ್ವ, ಪಿಂಡಭಾಕ್ಸ್, ರೇಪಭಾಕ್ಷ್ಯ ಇವರೊಳಗೆ ಯಾವನೊಬ್ಬನ ಸಂಬಂಧವಾಗುದರಿಂದ ಇದಕ್ಕೆ “ನಿರ್ವಾಪ್ರಸಾಪಿಂಡ” ವೆಂದು ಕೆಲವರೆನ್ನುವರು. (ಕೆಲವರ ಮತ) ಇಲ್ಲಿ ಸ್ತ್ರೀಯರಿಗಾದರೂ ಪತಿಯಿಂದ ಕೂಡಿ ಕರ್ತೃತ್ವ ಬರುವದರಿಂದ ಸಾಪಿಂಡ ಸಿದ್ಧಿಯುಂಟಾಗುವದು. ಒಬ್ಬ ಮೂಲಪುರುಷನ ಶರೀರಾವಯವ ಪರಂಪರೆಯಿಂದ ಬರುವದರಿಂದ ಇದಕ್ಕೆ ಅವಯವ ಸಾಪಿಂಡ” ಎಂದು ಕೆಲವರನ್ನುವರು. ಯದ್ಯಪಿ ಭ್ರಾತೃಪತ್ನಿಯರಿಗೆ ಪರಸ್ಪರ ಇದು ಸಂಭವಿಸುವದಿಲ್ಲವಾದರೂ ಆಧಾರತ್ವ (ಪತಿಯ ಮೂಲಕ) ದಿಂದ ಏಕಶರೀರಾನ್ವಯವಾಗುವದು. ಯಾಕೆಂದರೆ ಒಬ್ಬ ಮೂಲಪುರುಷಾವಯವಗಳು ಪುತ್ರಾರಾ ಅವರಲ್ಲಿ ಆದಾನಗಳಾಗುವದರಿಂದ ಆ ಸಾಪಿಂಡ್ಕವು ಸಿದ್ಧಿಸುವದು ಎಂದು ತಿಳಿಯತಕ್ಕದ್ದು, ಈ ೨೫೪ ಧರ್ಮಸಿಂಧು ಎರಡೂ ವಿಧದ ಸಾಪಿಂಡ್ಯದಲ್ಲಿ ಗಯಾಶ್ರಾದ್ಧ ಮೊದಲಾದವುಗಳಲ್ಲಿ ಮಿತ್ರಾದಿಗಳಿಗೂ “ಪಿಂಡಭಾಕ್‌ತ್ವ” ಸಂಬಂಧ ಬರುವದರಿಂದ ಅವರೂ ಸಾಪಿಂಡದಲ್ಲಿ ಬರುವರೆಂದು ತಿಳಿಯತಕ್ಕದ್ದಲ್ಲ. ಅಂದರೆ ಈ ಸಾಪ್ತಪೌರುಷ ಸಾಪಿಂಡಕ್ಕಿಂತ ನೂರಾರು ಹೆಚ್ಚು ಬರಬಹುದು. ಆಗ ಅತಿಪ್ರಸಂಗ ಪ್ರಸಕ್ತಿಯುಂಟಾಗಬಹುದು. ಆದುದರಿಂದ ಅದನ್ನು ನಿಯಂತ್ರಿಸಿ (ಮಿತಿಯಿಂದ) ಅದನ್ನು ಹೇಳಲಾಗಿದೆ. ವಧುವಿನ ಅಥವಾ ವರನ ತಂದೆಯು ಮೂಲಪುರುಷನಿಂದ ಸಪ್ತಮನಾದರೆ ಅವರ ತಾಯಿಯು ಮೂಲಪುರುಷನಿಂದ ಐದನೆಯವಳಾದರೆ ಅಲ್ಲಿಗೆ ಈ ವಿವಾಹನಿಷಿದ್ಧವಾದ ಸಾಪಿಂಡ್ಕ ನಿವೃತ್ತಿಯಾಗುವದು. ಇತ್ಯಾದಿ ವಚನಗಳಿಂದ ಆ ಅತಿಪ್ರಸಕ್ತಿಯು ನಿರಸ್ತವಾಗುವದು. ಅಂತೂ ಮಾತೃಸಂಬಂಧದಿಂದ ಐದು, ಪಿತೃಸಂಬಂಧದಿಂದ ಏಳು ತಲೆಮಾರಿನಪರ್ಯಂತ ಸಾಪಿಂಡವಾಗುವದೆಂದು ಹೇಳಿದಂತಾಯಿತು. ಪಿತೃದ್ವಾರಕ ಸಾಪಿಂಡ್ಯವಿಚಾರದಲ್ಲಿ ಏಳರ ನಂತರ ಸಾಪಿಂಡ್ಕನಿವೃತ್ತಿ. ಮಾತೃದ್ವಾರಕ ಸಾಪಿಂಡವಿಚಾರದಲ್ಲಿ ಪಂಚಮದ ನಂತರ ಸಾಪಿಂಡ್ಕ ನಿವೃತ್ತಿಯು ಹೀಗೆ ನಿರ್ಣಯವು. ಉದಾಹರಣೆ

ವಿಷ್ಣು ಮೂಲ ಪುರುಷ ಕಾಂತಿ ೨ ಗೌರೀ ೨ ಸುಧೀ ೩ ಹರ ೩ ಬುಧ ೪ ಮೈತ್ರ ೪ ಚೈತ್ರ ೫ ಶಿವ ೫ ಗಣ ೬ ಭೂಪ ೬ ಮೃಡ ೭ ಅಚ್ಯುತ ೭ ರತಿ ೮ ಕಾಮ ೮ 9. ವಿಷ್ಣು ಮೂಲಪುರುಷ ದತ್ತ ೨ ಚೈತ್ರ ೨ ಸೋಮ ೩ ಮೈತ್ರ ೩ ಸುಧೀ ೪ ಬುಧ ೪ ಶ್ಯಾಮಾ ೫ ರತಿ ೫ ಶಿವ ೬ ಗೌರೀ ೬ 0. ಈ ಉದಾಹರಣೆಯಲ್ಲಿ ರತಿ ಮತ್ತು ಕಾಮ ಇವರಿಗೆ ವಿವಾಹವಾಗುತ್ತದೆ. ಯಾಕೆಂದರೆ ಪಿತೃಸಾಪಿಂಡವು ಮೃಡ ಮತ್ತು ಅಚ್ಯುತ ಇಲ್ಲಿಗೇ ಮುಗಿಯುತ್ತದೆ. ರತಿ-ಕಾಮರು ಎಂಟನೆಯವರಾಗುತ್ತಾರ. 2. ಈ ಉದಾಹರಣೆಯಲ್ಲಿ ಗೌರೀ ಶಿವ ಇವರಿಗೆ ವಿವಾಹವಾಗುತ್ತದೆ. ಯಾಕೆಂದರೆ ಶ್ಯಾಮಾ ಎಂಬ ತಾಯಿಯಿಂದ ರತಿ, ಎಂಬ ತಾಯಿಯಿಂದ ಮಾತೃ ಸಾಪಿಂಡ್ಕ ನಿವೃತ್ತಿಯಾಗುತ್ತದೆ. ಶಿವ, ಗೌರೀ ಇವರು ಆರನೆಯವರಾಗುವರು. 2. ಎಷ್ಟು ಮೂಲಪುರುಷ ದತ್ತ ಮ ಚೈತ್ರ ೨ ಮೈತ್ರಿ ೩ ಬುಧ ೪ ಶ್ಯಾಮಾ 1 ನರ್ಮದ ಇ ಕಾಮ ೬ ಪರಿಚ್ಛೇದ - ೩ ಪೂರ್ವಾರ್ಧ 2. ರಮಾ 2 ಕವಿ ೭ ಈ ಉದಾಹರಣೆಯಲ್ಲಿ ರಮಾ ಮತ್ತು ಕವಿ ಇವರಿಗೆ ವಿವಾಹವಾಗುವಂತಿಲ್ಲ. ಯಾಕೆಂದರೆ “ಮಂಡೂಕಪ್ಪುತಿನಾಯ” ದಿಂದ ಇಲ್ಲಿ ಸಾಪಿಂಡವುಂಟಾಗುತ್ತದೆ. ‘ಮಂಡೂಕಪ್ಪುತಿ” ಅಂದರೆ ಒಂದು ಪೀಳಿಗೆಯಿಂದ ಸಾಪಿಂಡ ನಿವೃತ್ತಿಯಾದರೂ ಮತ್ತೊಂದು ಪೀಳಿಗೆಯ ಬದಿಯಿಂದ ಸಾಪಿಂಡ ಉಳಿಯುತ್ತದೆ. ಈ ಉದಾಹರಣೆಯಲ್ಲಿ ಶಿವ ಮತ್ತು ಕಾಮ ಇವರಿಗೆ ಸಾಪಿಂಡ ನಿವೃತ್ತಿಯಿದೆ. ಯಾಕೆಂದರೆ ಇವರ ತಾಯಂದಿರು ಮೂಲಪುರುಷನಿಂದ ಐದನೆಯವರಾಗುತ್ತಾರೆ. ಶಿವ, ಕಾಮರು ಆರನೆಯವರಾಗುತ್ತಾರೆ. ಆದರೆ ಇವರ ಮುಂದಿನ ರಮಾ ಮತ್ತು ಕವಿ ಇವರಿಗೆ ಪಿತೃಮೂಲಕ ಸಾಪಿಂಡ ನಿವೃತ್ತಿಯಾಗುವದಿಲ್ಲ. ಇವರೇ ಏಳನೆಯವರಾಗುವದರಿಂದ ಸಾಪಿಂಡ ನಿವೃತ್ತಿಯಾಗುವದಿಲ್ಲ. ಎಷ್ಟು ಮೂಲಪುರುಷ ದತ್ತ ಚೈತ್ರ ೨ ಸೋಮ ೩ ಮೈತ್ರ ೩ ಸುಧೀ ಬುಧ ೪ ಶ್ಯಾಮಾ ೫ ಹರ ಯಾಕೆಂದರೆ ಕಾಂತಿ ೧ ನೆಯ ಉದಾಹರಣೆಯಲ್ಲಿ ಕಾಂತಿ ಮತ್ತು ಹರ ಇವರಿಗೆ ವಿವಾಹವಾಗುವಂತಿಲ್ಲ. ಕಾಂತಿ ಇವಳಿಗೆ ತಾಯಿಯಾದ ಶ್ಯಾಮಾ ಇವಳ ಮೂಲಕ ಸಾಪಿಂಡ್ಯನಿವೃತ್ತಿಯಾಗುವದಾದರೂ, ಹರ ಇವನಿಗೆ ಪಿತೃವಾದ ಶಿವನ ಮೂಲಕ ಪಿತೃಸಾಪಿಂಡ ನಿವೃತ್ತಿಯಾಗುವದಿಲ್ಲ. ಇವುಗಳ ವಿವರ - (೧) ಮೂಲಪುರುಷ ವಿಷ್ಣ” ಈತನಿಗೆ ಇಬ್ಬರು ಪುತ್ರಿಯರು. ಒಬ್ಬಳು ಕಾಂತಿ, ಇನ್ನೊಬ್ಬಳು ಗೌರೀ, ಕಾಂತಿಯ ಪುತ್ರಿ ಸುಧೀ, ಸುಧಿಯ ಪುತ್ರ ಬುಧ, ಬುಧನ ಪುತ್ರ ಚೈತ್ರ, ಚೈತ್ರನ ಪುತ್ರ ಗಣ, ಗಣನ ಪುತ್ರ ಮೃಡ, ಮೃಡನ ಕನ್ಮ ರತಿ. ಈ “ರತಿ"ಯು ಮೂಲಪುರುಷನಿಂದ ಎಂಟನೆಯವಳಾಗುತ್ತಾಳೆ. ಎರಡನೇಬದಿ- ಎರಡನೇ ಕನ್ಯ ಗೌರಿ, ಅವಳ ಪುತ್ರ ಹರ, ಹರನ ಪುತ್ರ ಮೈತ್ರ, ಮೈತ್ರನ ಪುತ್ರ ಶಿವ, ಶಿವನ ಪುತ್ರ ಭೂಪ, ಭೂಪನ ಪುತ್ರ ಅಚ್ಯುತ, ಅಚ್ಚುತನ ಪುತ್ರ ಕಾಮ. ಇವನೂ ಮೂಲಪುರುಷನಿಂದ ಎಂಟನೆಯವನಾಗುತ್ತಾನೆ. ಆದ್ದರಿಂದ ಈ ರತಿ ಕಾಮರು ವಿವಾಹ ಯೋಗ್ಯರಾಗುತ್ತಾರೆ. ೨) ಮೂಲಪುರುಷ ವಿಷ್ಣು. ಅವನಿಗೆ ದತ್ತ ಮತ್ತು ಚಿತ್ರರೆಂಬ ಇಬ್ಬರು ಪುತ್ರರು, ದತ್ತನ ಪುತ್ರ ಸೋಮ, ಸೋಮನ ಪುತ್ರಿ ಸುಧೀ, ಸುಧಿಯ ಪುತ್ರಿ ಶ್ಯಾಮಾ, ಶ್ಯಾಮೆಯ ಪುತ್ರ ಶಿವ. ಶಿವ ಇವನು ಮೂಲಪುರುಷ ವಿಷ್ಣವಿನಿಂದ ಆರನೆಯವನಾಗುತ್ತಾನೆ. ಎರಡನೇ ಪುತ್ರ ಚಿತ್ರ ಇವನಿಗೆ “ಮೈತ್ರಿ"ನೆಂಬ ಪುತ್ರ, ಮೈತ್ರನಿಗೆ ಬುಧ, ಬುಧನಿಗೆ ಕನ್ನೆ ರಶ್ಮಿ, ರತಿಯ ಪುತ್ರಿ ಗೌರಿ. ಈ ಗೌರಿಯು ಮೂಲಪುರುಷನಿಂದ ಆರನೆಯವಳಾಗುತ್ತಾಳ, ಮಾತೃಸಾಪಿಂಡದಂತೆ ಇಬ್ಬರಿಗೂ ಸಾಂಡ್ಯನಿವೃತ್ತಿಯಾಗುವದರಿಂದ ಶಿವ ಮತ್ತು ಗೌರಿಯರಿಗೆ ವಿವಾಹವಾಗುತ್ತದೆ. (೨) (೩) ಮೂಲಪುರುಷವಿಷ್ಣು. ಇವನಿಗೆ ದತ್ತ ಚಿತ್ರರೆಂಬ ಇಬ್ಬರು ಪುತ್ರರು, ದತ್ತನಪುತ್ರ ಧರ್ಮಸಿಂಧು ಸೋಮ, ಸೋಮನ ಪುತ್ರ ಸುಧೀ, ಸುಧೀ ಇವಳ ಕನ್ನ ಶ್ಯಾಮಾ, ಶ್ಯಾಮೆಯ ಪುತ್ರ ಶಿವ, ಶಿವನ ಕನ್ನೆ ರಮಾ. ಇವಳು ಮೂಲಪುರುಷನಿಂದ ಏಳನೆಯವಳಾಗುತ್ತಾಳೆ. ಎರಡನೆಯವ ಚೈತ್ರ, ಚೈತ್ರನ ಪುತ್ರ ಮೈತ್ರ, ಮೈತ್ರನ ಪುತ್ರ ಬುಧ, ಬುಧನ ಕನ್ನ ನರ್ಮದಾ, ನರ್ಮದೆಯ ಪುತ್ರ ಕಾಮ ಕಾಮನ ಪುತ್ರ ಕವಿ. ಇವನು ಮೂಲಪುರುಷನಿಂದ ಏಳನೆಯವನಾಗುತ್ತಾನೆ. ಇಲ್ಲಿ ಮಂಡೂಕ ಪ್ರುತಿ ಸಾಪಿಂಡ್ಕವುಂಟಾಗುವದರಿಂದ ರಮಾ ಮತ್ತು ಕವಿ ಇವರಿಗೆ ವಿವಾಹವಾಗುವದಿಲ್ಲ. (೪) ಮೂಲಪುರುಷ ವಿಷ್ಣು. ಇವನಿಗೆ ದತ್ತ ಮತ್ತು ಚಿತ್ರರೆಂಬ ಇಬ್ಬರು ಪುತ್ರರು. ದತ್ತನ ಪುತ್ರ ಸೋಮ, ಸೋಮನ ಪುತ್ರ ಸುಧೀ, ಸುಧಿಯ ಕನ್ಯ ಶ್ಯಾಮಾ, ಶ್ಯಾಮೆಯ ಕನ್ಯ ಕಾಂತಿ, ಇವಳು ಮೂಲಪುರುಷನಿಂದ ಆರನೆಯವಳಾಗುತ್ತಾಳೆ, ಎರಡನೇ ಪುತ್ರ ಚೈತ್ರ, ಚೈತ್ರನ ಪುತ್ರ ಮೈತ್ರ, ಮೈತ್ರನ ಪುತ್ರ ಬುಧ, ಬುಧನ ಪುತ್ರ ಶಿವ, ಶಿವನ ಪುತ್ರ ಹರ ಇವನಾದರೂ ಮೂಲಪುರುಷನಿಂದ ಆರನೆಯವನಾಗುತ್ತಾನೆ. ಆದರೆ ಇಲ್ಲಿ ಕಾಂತಿ ಮತ್ತು ಹರ ಇವರಿಗೆ ವಿವಾಹವಾಗುವಂತಿಲ್ಲ. ಇಲ್ಲಿ ಕಾಂತಿಯ ಬಾಜುವಿನಲ್ಲಿ ಮಾತೃಮೂಲಕವಾದ ಸಾಪಿಂಡ ನಿವೃತ್ತಿಯಾಗುತ್ತದೆ. ಆದರೆ ಹರನ ಬಾಜುವಿನಲ್ಲಿ ಪಿತೃಮೂಲಕ ಸಾಪಿಂಡ ನಿವೃತ್ತಿಯಾಗದ ಮೂಲಕ ವಿವಾಹವಾಗುವಂತಿಲ್ಲ. ಹೀಗೆ ಇಲ್ಲಿ ಸಾಪಿಂಡ ರೀತಿಯನ್ನು ದಿಮ್ಮಾತ್ರ ತೋರಿಸಿ ಹೇಳಲಾಗಿದೆ. ಮೂಲಪುರುಷನಿಂದ ಐದನೇ ಕನ್ನೆಯ ಪುತ್ರ ಅಂದರೆ ಆರನೇ ಪುರುಷ, ಇವನು ಪಂಚಮಾದಿ ಸಪಿಂಡನಾಗುವದಿಲ್ಲ. ಆದರೂ ದ್ವಿತೀಯ ಪಂಕ್ತಿಯಲ್ಲಿ ಪಂಚಮ ಷಷ್ಟಾದಿಗಳಿಗೆ ಪಿತ್ತದ್ವಾರಕವಾಗಿ ಸಾಪಿಂಡವುಂಟಾಗುವದರಿಂದ ಒಂದು ಕಡೆಗೆ ನಿವೃತ್ತಿ ಇನ್ನೊಂದು ಕಡೆಗೆ ಅನುವೃತ್ತಿಯಾಗುವದರಿಂದ, ಪಂಚಮ, ಷಷ್ಟಾದಿಯಿಂದ ಪಂಚಮ ಕನೈಯ ಸಂತತಿಯು ವಿವಾಹಕ್ಕೆ ಯೋಗ್ಯವಾಗುವದಿಲ್ಲ. ಹೀಗೆಯೇ ಕೂಟಸ್ಥ (ಮೂಲಪುರುಷ)ನಿಂದಾರಂಭಿಸಿ ಅಷ್ಟಮಾದಿಗಳಿಗೂ, ಕೂಟಸ್ಥನಿಂದಾರಂಭಿಸಿ ದ್ವಿತೀಯಾದಿಗಳಿಗೂ ಒಂದುಕಡೆ ನಿವೃತ್ತಿ, ಇನ್ನೊಂದು ಕಡೆಗೆ ಅನಿವೃತ್ತಿಗಳುಂಟಾಗುತ್ತಿವೆಯೆಂದು ಊಹಿಸುವರು. ಹೀಗೆ ಆಶೌಚವಿಷಯಕವಾದ ಸಾಪಿಂಡದಲ್ಲೂ ಒಂದು ಕಡೆ ನಿವೃತ್ತಿ, ಪ್ರವೃತ್ತಿಗಳನ್ನೂಹಿಸಬಹುದು. ಹೀಗೆ ಪಿತೃದ್ವಾರಕ ಸಾಪಿಂಡವು ಏಳು ತಲೆಮಾರಿನನಂತರ ನಿವೃತ್ತವಾಗುವದು. ಮಾತೃದ್ವಾರಕವಾದ ಸಾಪಿಂಡವಾದರೂ ಐದು ತಲೆಮಾರಿನ ನಂತರ ನಿವೃತ್ತವಾಗುವದು. ಈ ಎಲ್ಲ ವಿಧದಿಂದ ಬಿಡಬೇಕಾದ ಕನ್ನಿಕೆಯರ ಸಂಖ್ಯೆಯು ಪಿತೃಕುಲದಲ್ಲಿ ೨೦೧೬, ಮಾತೃಕುಲದಲ್ಲಿ ೧೦೫ ಅಂತೂ ೨೧೨೫ ಇಷ್ಟಾಗುವದು. ಇದನ್ನು ಗಣಿಸುವದು; ಮತ್ತು ಆ ಸಲುವಾಗಿರುವ ಶ್ಲೋಕ ಹಾಗೂ ವ್ಯಾಖ್ಯೆಗಳನ್ನೆಲ್ಲ ಕೌಸ್ತುಭದಲ್ಲಿ ನೋಡತಕ್ಕದ್ದು. ಸಾಮಾನ್ಯ ಜನರಿಗೆ ಅವು ದುರ್ಬೆಧವಿರುವದರಿಂದ ಇಲ್ಲಿ ಹೇಳಿಲ್ಲ. ಮುಖ್ಯಕಾನುಸಾರ ಈ ಹೇಳಿದ ಸಂಖ್ಯೆಯ ಕನ್ನಿಕೆಯರ ವಿವಾಹವು ವರ್ಜ ನಿಜ. ಆದರೆ ಗೌಣರಾನುಸಾರವಾದರೂ ಸಪ್ತಮ, ಪಂಚಮ ಸಾಪಿಂಡದ ಒಳಗೆ ವಿವಾಹಮಾಡತಕ್ಕದ್ದಲ್ಲ. ಹೀಗೆ ಪಂಚಮ, ಸಪ್ತಮ ಸಪಿಂಡರೊಳಗೆ ವಿವಾಹವಾದವರು ವ್ಯವಹಾರ ಪ್ರವೃತ್ತರಾಗಬಹುದೇ ಹೊರತು ಪತಿತತ್ವ, ಶೂದ್ರವನ್ನು ತಪ್ಪಿಸಿಕೊಳ್ಳಲಾರರು. ಸಪ್ತಮ, ಪಂಚಮ ಸಾಪಿಂಡವನ್ನುಲ್ಲಂಘಿಸಿದವರೂ, ಸಗೋತ್ರದ ಹೆಣ್ಣನ್ನು ಲಗ್ನವಾಗುವವರೂ ಗುರುತಲ್ಪಗಮನ ಮಾಡಿದಂತೆಯೇ ಎಂದು ಸ್ಮೃತಿಯಲ್ಲಿ ಪರಿಚ್ಛೇದ - ೩ ಪೂರ್ವಾರ್ಧ ೨೫೭ ಹೇಳಿದೆ. ಇನ್ನು ಕೆಲವರು ಐದನೇ ಅಥವಾ ನಾಲ್ಕನೇ ವರನು ನಾಲ್ಕನೇ ಅಥವಾ ಮೂರನೇ ಕನ್ನಿಕೆಯನ್ನು ಎರಡೂ ಪಕ್ಷಗಳಲ್ಲಿ ವಿವಾಹವಾಗಬಹುದೆಂದು ಹೇಳುವರು. ಆ ಸಲುವಾಗಿ ವಚನಗಳನ್ನೂ ಹೇಳುವರು. ಆದರೂ ಇವುಗಳಲ್ಲಿ ಕೆಲವು ನಿರ್ಮೂಲಗಳು, ಕೆಲವು ದ ಕಸಾಪಿಂಡ್ಯಾದಿಗಳಿಗೆ ಸಂಬಂಧಿಸಿದುವು ಅಥವಾ ಕ್ಷತ್ರಿಯಾದಿಗಳ ಸಾಪಿಂಡವಿಷಯವಾಗಿ ಹೇಳಿದವು ಎಂದು ನಿರ್ಣಯಸಿಂಧುವಿನ ಮತವು. ಸಾಪಿಂಡ ಸಂಕೋಚವಿಚಾರ ಕೌಸ್ತುಭದಲ್ಲಿ - ಪಿತೃಪಕ್ಷದಲ್ಲಿ ಸಪ್ತಮಕ್ಕಿಂತ ಮೇಲೆ ವಿವಾಹವಾಗಬೇಕು. ಅಭಾವದಲ್ಲಿ ಏಳನೇ ಅಥವಾ ಅವಳ ಅಭಾವದಲ್ಲಿ ಐದನೇ ಕನ್ನಿಕೆಯನ್ನು ವರಿಸತಕ್ಕದ್ದು, ಏಳನೇ ಆರನೇ, ಐದನೇ ಕನ್ನಿಕೆಯನ್ನು ವರಿಸಿದಲ್ಲಿ ದೋಷವಿಲ್ಲವೆಂದು “ಶಾಕಟಾಯನ"ನು ಹೇಳಿರುವನು. ಮೂರನೇ ಅಥವಾ ನಾಲ್ಕನೇ ಕನ್ನಿಕೆಯನ್ನು ಎರಡೂ ಪಕ್ಷಗಳಲ್ಲಿ ವಿವಾಹ ಮಾಡಿಕೊಳ್ಳಬಹುದೆಂದು ಮನು, ಪರಾಶರ, ಯಮ, ಅಂಗಿರಸ್‌ ಇವರು ಹೇಳಿರುವರು, ದೇಶಾಚಾರಾನುಗುಣವಾಗಿ ಮತ್ತು ಕುಲಾಚಾರದಂತೆ ವಿವಾಹವಾದವನು ವ್ಯವಹಾರಕ್ಕೆ ಅರ್ಹನು. ವೇದವಚನದಿಂದಲೂ ಇದನ್ನು ತಿಳಿಯಬಹುದು. ಈ ವಚನಗಳು ಚತುರ್ವಿಂಶತಿಮತ, ಪಂಶನ್ಮತ ಮೊದಲಾದ ಗ್ರಂಥಗಳಲ್ಲಿ ಕಂಡುಬರುವದರಿಂದ ಸಾಪಿಂಡ ಸಂಕೋಚ (ಕಡಿಮೆ) ಮಾಡಿ ವಿವಾಹವಾಗುವದು ಬಹುದೇಶಗಳಲ್ಲಿ ಕಂಡುಬರುತ್ತದೆ. ಯಾರ ಕುಲದಲ್ಲಿ, ಯಾವ ದೇಶದಲ್ಲಿ ಗೌಣಪಕ್ಷದಂತೆ ಸಂಕೋಚಮಾಡುವ ಪದ್ಧತಿಯಿದೆಯೋ ಅವರು ಸಾಪಿಂಡ ಸಂಕೋಚದಿಂದ ವಿವಾಹವಾಗುವದು ದೋಷಕರವಲ್ಲ, ತನ್ನ ದೇಶ, ಕುಲಗಳ ವಿರುದ್ಧ ಸಾಪಿಂಡ ಸಂಕೋಚಮಾಡಿದಲ್ಲಿ ದೋಷವಿದ್ದೇ ಇದೆ. ವಿವಾಹದ ವಿಷಯದಲ್ಲಿ ದೇಶಧರ್ಮ, ಗ್ರಾಮಧರ್ಮಗಳನ್ನೂ ನೋಡಬೇಕು. “ತನ್ನ ಪಿತೃ-ಪಿತಾಮಹಾದಿಗಳು ಯಾವ ಮಾರ್ಗದಲ್ಲಿ ಹೋಗಿದ್ದರೋ ಅಂಥ ಸತ್ಪುರುಷರ ಮಾರ್ಗವನ್ನು ಹಿಡಿದು ಹೋದಲ್ಲಿ ದೋಷವುಂಟಾಗುವದಿಲ್ಲ.” ಇತ್ಯಾದಿ ವಚನಾಧಾರಗಳಿವೆ. ಆದುದರಿಂದ ಸ್ವಕುಲ, ದೇಶಾಚಾರಕ್ಕೆ ವಿರುದ್ಧವಾಗದ ಶಾಸ್ತ್ರವನ್ನು ವಿವಾಹದಲ್ಲಿ ಅನುಸರಿಸಬೇಕು. ಇದರಂತೆ ಸೋದರಮಾವನ ಕನ್ನೆಯ ವಿವಾಹದಲ್ಲಿಯೂ ತಿಳಿಯತಕ್ಕದ್ದು, “ತೃಸ್ತಾಂ ಜುಹುಮಾಡುಲ ದಯೋಷಾಭಾಗ ವೈದ್ಯಸೇ ವಷಾಮಿವ” ಎಂಬ ಮಂತ್ರಲಿಂಗವು ಕಾಣುತ್ತದೆ. ಅಂದರೆ ಈ ಸೋದರಮಾವನ ಈ ಕನ್ಯಾರೂಪವಾದ ಅಪತ್ಯವು ಹೇಗೆ ತಂದೆಯ ತಂಗಿಯ ಮಗನಿಗೆ ಸಲ್ಲತಕ್ಕದ್ದೂ ಹಾಗೆಯೇ ಹೇ ಇಂದ್ರಾನಿನ್ನ ಭಾಗವಾದ ಈ ವಪೆಯನ್ನು ಹೊಂದು-ಎಂದು ಈ ಮಂತ್ರದ ಅರ್ಥ. ಇದರಂತೆ ನಿಷೇಧವಚನಗಳೂ ಇವೆ “ಸೋದರಮಾವನ ಮಗಳನ್ನೂ, ಮಾತೃಗೋತ್ರದವಳನ್ನೂ, ಸಮಾನಪ್ರವರದವಳನ್ನೂ ವಿವಾಹದಲ್ಲಿ ಅವಳನ್ನು ತ್ಯಜಿಸಿ “ಚಾಂದ್ರಾಯಣ"ವನ್ನಾಚರಿಸತಕ್ಕದ್ದು. ಇತ್ಯಾದಿ ಸ್ಮೃತಿವಚನಗಳಿವೆ. ಯಾರ ಕುಲದಲ್ಲಿ ಸೋದರಮಾವನ ಮಗಳನ್ನು (ಮಾತುಲಕನಾ) ವಿವಾಹವಾಗುವ ರೂಢಿಯಿದೆಯೋ ಅವರು ಹಾಗೆ ಮಾಡತಕ್ಕದ್ದು, ಗೋತ್ರದವಳನ್ನೂ, ಮಾತೃಸಾಪಿಂಡದವಳನ್ನೂ ವಿವಾಹವಾಗಬಾರದು. ಮಧುಪರ್ಕಾದಿಗಳಲ್ಲಿ ಗೋವನ್ನು ವಧಿಸಬಾರದು ಇತ್ಯಾದಿ. ಕಲಿವರ್ಷ ಪ್ರಕರಣದಲ್ಲಿ ಈ ಮಾತುಲಕಾವಿವಾಹವೂ ಸೇರ್ಪಡೆಯಾಗುತ್ತದೆ. ಆದರೆ ಯಾರಲ್ಲಿ ಇದು ರೂಢಿಯಲ್ಲಿಲ್ಲವೋ ಅವರಿಗೆ ಇದು ಅನ್ವಯಿಸುತ್ತದೆ. “ಮಾತುಲಕನಾ” ವಿವಾಹಕ್ಕೆ ಅನೇಕ ೨೫೮ ಧರ್ಮಸಿಂಧು ಶ್ರುತಿಸ್ಮೃತಿಗಳ ಆಧಾರವಿದೆ. ಇನ್ನು ಮಾತುಲಕನ್ಯಾ ವಿವಾಹಿತನಾದವನನ್ನು ಶ್ರಾದ್ಧದಲ್ಲಿ ಆಮಂತ್ರಿಸಬಾರದೆಂಬ ವಾಕ್ಯಕ್ಕೆ “ತನ್ನ ಕುಲಪರಂಪರೆಗೆ ವಿರುದ್ಧವಾಗಿ ವಿವಾಹ ಮಾಡಿಕೊಂಡವನನ್ನು” ಎಂದು ಅರ್ಥ ಮಾಡಿಕೊಳ್ಳಬೇಕು. ಹಿಂದೆ ಹೇಳಿದ ಸಾಪಿಂಡ ಸಂಕೋಚದಿಂದ ವಿವಾಹಮಾಡಿಕೊಂಡವರನ್ನು ಶಿಷ್ಟರು ಶ್ರಾದ್ಧಾದಿಗಳಲ್ಲಾಮಂತ್ರಿಸುತ್ತಾರೆಂಬುದು ಕಂಡುಬರುತ್ತದೆ. ಇತ್ಯಾದಿ ಬಹುವಿಚಾರವನ್ನು ಕೌಸ್ತುಭದಲ್ಲಿ ಹೇಳಿದೆ. ಆದರೆ ಹೀಗೆ ಸಾಪಿಂಡ ಸಂಕೋಚಮಾಡಿ ವಿವಾಹಮಾಡಿಕೊಳ್ಳುವಲ್ಲಿ ಎಷ್ಟನೇ ಕನೈಯನ್ನು ಎಷ್ಟನೇ ಪುರುಷರು ವಿವಾಹಮಾಡಿಕೊಳ್ಳಬಹುದು? ಈ ವ್ಯವಸ್ಥೆಯನ್ನು ಹೇಳಿಲ್ಲ. ಕಾರಣ ಸಾಪಿಂಡ ಸಂಕೋಚದಲ್ಲಿ ವ್ಯವಸ್ಥೆಯನ್ನು ಹೇಳಬೇಕಾಗಿದೆ. “ಸಾಪಿಂಡ್ಕ ದೀಪಿಕಾದಿ” ಗ್ರಂಥಗಳಲ್ಲಿ ನಾಲ್ಕನೇ ಅಥವಾ ಆರನೇ ವರನು, ನಾಲ್ಕನೇ ಕನ್ನೆಯನ್ನು, ಪರಾಶರ ಮತದಂತ ಆರನೇ ಕನ್ನೆಯನ್ನು ವಿವಾಹವಾಗತಕ್ಕದ್ದು. ಐದನೆಯವನು ಐದನ ಕನ್ನೆಯನ್ನು ವಿವಾಹವಾಗತಕ್ಕದ್ದಲ್ಲ. ಈ ವಚನಗಳು “ಮೂಲವಚನ"ಗಳೆಂದು ಗ್ರಾಹ್ಯಮಾಡಿ, ಅಶಕ್ತರಾದವರು ಆಪತ್ತಿನಲ್ಲಿ ಸಾಪಿಂಡ ಸಂಕೋಚವನ್ನಾಶ್ರಯಿಸತಕ್ಕದ್ದೆಂದು ವ್ಯವಸ್ಥೆ ಹೇಳಿರುವರು. ಪಿತೃಪಕ್ಷದಂತ ಮತ್ತು ಮಾತೃಪಕ್ಷದಂತೆ ನಾಲ್ಕನೆ ಕನೈಯನ್ನು ನಾಲ್ಕನೆ ಅಥವಾ ಪಂಚಮನಾದ ಪುರುಷನು ವಿವಾಹಮಾಡಿಕೊಳ್ಳಬಹುದು. ಎರಡನೇ, ಮೂರನೇ, ಆರನೇ ಮೊದಲಾದವರು ನಾಲ್ಕನೇ ಕನ್ನೆಯನ್ನು ವರಿಸತಕ್ಕದ್ದಲ್ಲ. ಪರಾಶರ ಮತದಂತೆ ಐದನೆಯವನು ಆರನೆಯವಳನ್ನು ವರಿಸಬಹುದು. ದ್ವಿತೀಯ, ತೃತೀಯ, ಚತುರ್ಥಾದಿ ವರನು ಆರನೆಯವಳನ್ನು ವರಿಸಬಾರದು. ಐದನೆಯವನು ಐದನಗಳನ್ನು ವಿವಾಹವಾಗಬಾರದು. “ತಾಯಿಯಿಂದ ಅಥವಾ ತಂದೆಯಿಂದ ಆರನೆಯವನು ಆರನೆಯ ಕನೈಯನ್ನು ವರಿಸಬಹುದು"ಹೀಗೆ ವಚನವಿರುವದರಿಂದ ಆರನೆಯವನಾದರೂ ಆರನೇ ಕನೈಯನ್ನು ವಿವಾಹವಾಗಬಹುದು. ಹೀಗೆ ಹೇಳಿರುವದರಿಂದ ಪಂಚಮ, ಷಷ್ಕರ ಹೊರತು ಉಳಿದವರು ಆರನೇ ಕನೈಯನ್ನು ವಿವಾಹವಾಗತಕ್ಕದ್ದಲ್ಲವೆಂದು ನಿಷ್ಕರ್ಷವಾಗುವದು. ಪಿತೃಪಕ್ಷದಲ್ಲಿ ಸಪ್ತಮೀ, ಮಾತೃಪಕ್ಷದಲ್ಲಿ ಪಂಚಮೀ ಕನೈಯನ್ನು ತೃತೀಯಾ ದಿವರನು ವಿವಾಹಮಾಡಿಕೊಳ್ಳಬಹುದು. “ಪಿತೃಪಕ್ಷಾಸಪ್ತಮೀರಿ ಮಾತೃಪಕಾ ಪಂಚಮೀಂ” ಹೀಗೆ ವ್ಯಾಸವಚನವಿದೆ. “ಚತುರ್ವಿಂಶತಿ” ಮತದಂತಯಾದರೂ ತೃತೀಯಾದಿ ವರನು ಪಿತೃಪಕ್ಷದ ಐದನೇ ಕನ್ನೆಯನ್ನು ವರಿಸಬಹುದು. ಆದರೆ ಅದರಲ್ಲಿ ಪಿತೃ ಮಾತೃಪಕ್ಷದ ಐದನೇ ವರನು ಐದನೇ ಕನ್ನೆಯನ್ನು ವರಿಸತಕ್ಕದ್ದಲ್ಲ. “ಪಂಚಮೋ ನ ತುಪಂಚಮೀಂ” ಹೀಗೆ ಸರ್ವತ್ರ ನಿಷೇಧವಿದೆ. ತೃತೀಯಾಂ ವಾ ಚತುರ್ಥಿಂ ವಾ ಪಕ್ಷ ಯೋರುಭಯೋರಪಿ” ಈ ವಚನದಂತೆ ಎರಡೂ ಪಕ್ಷಗಳಲ್ಲಿ ತೃತೀಯಳು ವಿವಾಹಳಾಗುವಳು. ಆ ವಿಷಯದ ವ್ಯವಸ್ಥೆ ಹೀಗಿದೆ: ಮಾತೃಪಕ್ಷದಲ್ಲಿ ತೃತೀಯಳೆಂದರೆ ಸೋದರಮಾವನ ಮಗಳಾಗುವಳು, ಮತ್ತು ತಾಯಿಯ ತಂಗಿಯ ಕನ್ನೆಯು, ಇವರಾಗುತ್ತಾರೆ. ಪಿತೃ ಪಕ್ಷದಲ್ಲಿ ತೃತೀಯಳೆಂದರೆ ಸೋದರಮಾವನ ಮಗಳಾಗುವಳು. ಮತ್ತು ತಾಯಿಯ ತಂಗಿಯ ಕನ್ನೆಯು, ಇವರಾಗುತ್ತಾರೆ. ಪಿತೃಭ್ರಾತ್ಮಕನೈಯು ಸಗೋತ್ರಳಾಗುವದರಿಂದ ಆಗುವಂತೆಯೇ ಇಲ್ಲ. ‘‘ತತ್ವಸೇಯಂ ಭಗಿರಿ ಸೃಷ್ಟಿಯಾಂ ಮಾತುರೇವ ಚ| ಮಾಕ್ರನ್ನು ಕಾರ್ಯಾರ್ಥನೋಪಯ೩ಡ ನ್” ಹೀಗೆ ಮನುವಚನವಿರುವದರಿಂದ ತಂದೆಯ ತಂಗಿಯ ಕನ್ಯಾ, ತಾಯಿಯ ತಂಗಿಯಪರಿಚ್ಛೇದ - ೩ ಪೂರ್ವಾರ್ಧ ಕನ್ಯಾ ಇವರಿಬ್ಬರೂ ತ್ಯಾಜ್ಯರು. ತಂದೆಯ ತಂಗಿಯ ಕನ್ಯಾ, ತಾಯಿಯ ತಂಗಿ, ತಾಯಿಯ ತಂಗಿಯ ಕನ್ಯಾ ಈ ಮೂವರೂ ತ್ಯಾಜ್ಯರೆಂದು ಮನುವಚನದ ತಾತ್ಪರ್ಯ. ಸಾಪಿಂಡ ಸಂಕೋಚಸಂಗ್ರಹ ಮೂರನೇಯವಳನ್ನು ವಿವಾಹವಾಗಬಹುದು ಅಂದರೆ ಸೋದರಮಾವನಕನೈಯ ವಿವಾಹಯೋಗ್ಯಳು. ಇವಳನ್ನು ಕುಲಪಾರಂಪರ್ಯವಿದ್ದಲ್ಲಿ ವಿವಾಹಮಾಡಿಕೊಳ್ಳಬಹುದು. ಆದರೆ ಮೂರನೇಯವನೇ ವಿವಾಹ ಮಾಡಿಕೊಳ್ಳಬೇಕಲ್ಲದೆ ಚತುರ್ಥಾದಿಯವನು ಅವಳನ್ನು ವಿವಾಹವಾಗತಕ್ಕದ್ದಲ್ಲ. ಕೆಲವರು ಆಪತ್ತಿನಲ್ಲಿ ತಂದೆಯ ತಂಗಿಯ ಮಗಳನ್ನು ವಿವಾಹ ಮಾಡಿಕೊಳ್ಳಬಹುದೆಂದು ಹೇಳುವರು. ಆ ವಿಷಯದಲ್ಲಿ ದೇಶ-ಕುಲಾಚಾರಗಳೇ ಪ್ರಮಾಣವು. ಸಾಪಿಂಡ್ಯದೀಪಿಕಾದಿ ಗ್ರಂಥಗಳಿಂದ ಸಿದ್ಧವಾದ “ಅರ್ಥಸಂಗ್ರಹವನ್ನು ಈಗ ಹೇಳಲಾಗುತ್ತಿದೆ:- ಮೂರನೆಯವಳನ್ನು ವಿವಾಹವಾಗತಕ್ಕದ್ದಿದ್ದರೆ ಮಾತುಲಕನೈಯು ಗ್ರಾಹ್ಯಳು, ಚತುರ್ಥ ಕನೈಯನ್ನು ಚತುರ್ಥ, ಪಂಚಮ ಪುರುಷರು ವಿವಾಹವಾಗತಕ್ಕದ್ದು, ಪಂಚಮಕಾಯು ಪಂಚಮನ ಹೊರತು ತೃತೀಯಾದಿ ಸಪ್ತಮಪುರುಷರ ವರೆಗಿನವರಿಗೂ ಗ್ರಾಹ್ಯಳು. ಆರನೆಯವಳನ್ನು ಪಂಚಮ, ಷಷ್ಠ ಪುರುಷರು ವರಿಸಬಹುದು. ಏಳನೆಯ ಕನೈಯನ್ನು ತೃತೀಯಾದಿ ಸಪ್ತಮಾಂತ ಪುರುಷರೂ ವರಿಸಬಹುದು. ಸಾಪಿಂಡ ಸಂಕೋಚವು ಆಪತ್ತಿನಲ್ಲಿ, ಅಸಮರ್ಥ ಸ್ಥಿತಿಯಲ್ಲಿ, ವಿವಾಹಮಾಡತಕ್ಕದ್ದೆಂಬದರಲ್ಲಿ ತಾತ್ಪರ್ಯ ಹೊಂದಿದೆ. ಬೇರೆ ಕನೈಯರು ಲಭ್ಯವಾದಲ್ಲಿ ಮತ್ತು ಶಕ್ತರಾದವರು ಮಾಡತಕ್ಕದ್ದಲ್ಲ. ಯಾಕಂದರೆ “ಗುರುತಲ್ಪಗಮನಾ“ದಿ ದೋಷವನ್ನು ಹೇಳಿದೆ. ಸಾಪಿಂಡ ಸಂಕೋಚವಾಕ್ಯಗಳು ಅಶಕ್ತರ ವಿಷಯದಲ್ಲಿ ಹೇಳಿದ್ದೆಂಬುದು ಸ್ಪಷ್ಟ ಸಮರ್ಥನಾದವನು ಮುಖ್ಯಕಲ್ಪವನ್ನು ಬಿಟ್ಟು ಗೌಣಕಲ್ಪವನ್ನನುಸರಿಸಿದರೆ ಆ ಫಲ ಪ್ರಾಪ್ತಿಯಾಗುವದಿಲ್ಲ. ಹೀಗೆ ಸಮರ್ಥರಾದವರಿಗೆ ಅನುಕಲ್ಪ ಸ್ವೀಕಾರದಲ್ಲಿ ದೋಷವನ್ನು ಹೇಳಿದೆ. ದತ್ತಕವನ್ನು ಸಾಪಿಂಡ್ಕ ವಿಷಯವನ್ನು ಈ ಮೊದಲೇ ದತ್ತಕ ನಿರ್ಣಯದಲ್ಲಿ ಹೇಳಲಾಗಿದೆ. ಸಾಪತ್ನ ಮಾತೃ (ಸವತಿತಾಯಿ) ಸಾಪಿಂಡ್ಯ ವಿಚಾರ ಸಾಪನ್ನ ಮಾತೃಕುಲದ ವಿಷಯದಲ್ಲಿ ಸಾಪಿಂಡ ವಿಚಾರದ ಬಗ್ಗೆ “ಸುಮಂತು"ವು ಹೀಗೆ ಅಭಿಪ್ರಾಯಪಡುತ್ತಾನೆ: “ತಂದೆಯ ಹೆಂಡಿರೆಲ್ಲರೂ ತಾಯಿಯರೇ, ಅವರ ಅಣ್ಣ ತಮ್ಮಂದಿರು “ಮಾತುಲರು.” ಅವರ ಅಕ್ಕ-ತಂಗಿಯರು “ಚಿಕ್ಕತಾಯಿಗಳು. ಅವರ ಹೆಣ್ಣು ಮಕ್ಕಳೆಲ್ಲ “ಭಗಿನಿಯರು. ಆ ತಂಗಿಯ ಪುತ್ರರಲ್ಲ “ಭಾಗಿನೇಯರು. (ಭಗಿನೀಪುತ್ರರು) ಹೀಗಲ್ಲದಿದ್ದರೆ ಸಂಕರಕಾರಿಗಳಾಗಬಹುದು”. ಈ ವಿಷಯದಲ್ಲಿ ಅತಿದೇಶದಿಂದ (ಹಿಂದೆ ಹೇಳಿದ ಮಾತೃವಿಷಯವನ್ನೇ ಮುಂದರಿಸಿ) ಹೇಳಲಾಗುವದು. ಸಾಪನ್ನ ಮಾತೃಕುಲದಲ್ಲಿ ನಾಲ್ಕು ತಲೆಮಾರಿನ ಸಾಪಿಂಡವನ್ನು ವಿವಾಹದ ವಿಷಯದಲ್ಲಿ ನಿಷೇಧಿಸಿದೆ ಎಂದು ಕೆಲವರು ಹೇಳುವರು. ಇನ್ನು ಕೆಲವರು ಬರಿ ವಿವಾಹದಲ್ಲಿ ಮಾತ್ರ ನಿಷೇಧವನ್ನುವದಕ್ಕೆ ಪ್ರಮಾಣವಿಲ್ಲ. ಅಶೌಚಾದಿಗಳಲ್ಲೂ ಅದು ಸಂಭವಿಸಬೇಕನ್ನುವರು. “ಯಾವದ್ವಾಚನಿಕಂ ಪ್ರಮಾಣಂ” ಎಂಬ ನ್ಯಾಯದಂತೆ, ಅಂದರೆ ಧರ್ಮಸಿಂಧು “ವಚನದಲ್ಲಿ ಎಷ್ಟನ್ನು ಹೇಳಿದೆಯೋ ಅಷ್ಟನ್ನೇ ತಿಳಿಯಬೇಕು” ಎಂಬ ನ್ಯಾಯದಂತೆ ಹೇಳಿರುವಷ್ಟಕ್ಕೆ ಮಾತ್ರ ಸಾಪಿಂಡ್ಕವೂ ಸಹ ಇರುವದೆಂದು ಹೇಳುವರು. ಸುಮಂತುವಾಕ್ಯದಲ್ಲಿ, ವಾಕ್ಯವನ್ನು ವಿವೇಚನ ಮಾಡಿದರೆ ವಾಕ್ಯಾರ್ಥಗಳು ಹೀಗೆ ಪರ್ಯವಸಾನ ಹೊಂದುವವು. ಏನೆಂದರೆ “ಪಿತೃಪತ್ನಿಯರೆಲ್ಲರೂ ತಾಯಿಯರು.” ಈ ವಾಕ್ಯವನ್ನೇ ವಿಮರ್ಶಿಸುವಾ. ಈ ಮೊದಲಿನ ವಾಕ್ಯದಲ್ಲಿ ಸಾಪತ್ಯತಾಯಿಯನ್ನೂ ತಾಯಿಯಂತೆಯೇ ಮನ್ನಿಸತಕ್ಕದ್ದು. ಅವಳನ್ನು ವಧಿಸಿದರೆ “ಮಾತೃವಧ"ದೋಷ ಪ್ರಾಯಶ್ಚಿತ್ತವಾಗಬೇಕು. ಅವಳನ್ನು ಗಮಿಸಿದಲ್ಲಿ ಮಾತೃಗಮನಪ್ರಾಯಶ್ಚಿತ್ತ ಹೇಳಿದೆ. ಆದರೆ ಇದರಲ್ಲಿ ತಾಯಿಯಂತೆ “ಅತಿಕ್ರಾಂತ"ದಶಾಹ ಆಶೌಚವಿರುವದಿಲ್ಲ. ಯಾಕೆಂದರೆ ಸಾಪತ್ವಮಾತೃವಿನ ಅತಿಕ್ರಾಂತಾಶೌಚವು “ತ್ರಿರಾತ್ರವಿದೆ. ಇತ್ಯಾದಿ ಕಾರಣದಿಂದ ಸರ್ವವೂ ತಾಯಿಯಂತೆಯೇ ಎಂಬುದಕ್ಕೆ ಬಾಧಕವಿದೆ. ಅವರ ಅಣ್ಣ ತಮ್ಮಂದಿರನ್ನು “ಮಾತುಲ"ರೆಂದು ತಿಳಿಯಬೇಕೆಂದು ಹೇಳಿದೆಯಷ್ಟೇ? ತನ್ನ ಮಾತುಲನಿಗೆ ಹೇಳಿದ ಅಶೌಚವು ಆ ಮಾತುಲನಿಗೂ ಇರುತ್ತದೆ. ಆದರೆ ಮಾತುಲನಿಗೆ ತನ್ನ ಪತ್ನಿಯ ಸವತಿಯ ಕನ್ನೆಯ ವಿವಾಹನಿಷೇಧವುಂಟಾಗುತ್ತದೆ. ಇಲ್ಲಿ ಮಾತುಲತ್ವವನ್ನು ಅತಿದೇಶಮಾಡಿದರೂ ಅವನ ಪುತ್ರರ ವಿಷಯದಲ್ಲಿ ತನ್ನ “ಮಾತುಲಪುತ್ರ"ರಂತ ಎಂಬ ಅತಿದೇಶವುಂಟಾಗುವದಿಲ್ಲ. ಆದುದರಿಂದ ಬಂಧುತ್ರಯದಲ್ಲಿ ಬರುವ ಅಶೌಚವಿರುವದಿಲ್ಲ. ಸಾಪನ್ನ ಮಾತುಲಕನ್ಯಾದಿಗಳಲ್ಲಿ ವಿವಾಹವಾಗುವ ವಿಧಿಯಿಲ್ಲ. (ಅಂದರೆ ತನ್ನ ತಾಯಿಯ ಅಣ್ಣ-ತಮ್ಮಂದಿರ ಪುತ್ರಿಯರು) “ಮಾತುಲಕನಾ” ಎನ್ನಿಸಿಕೊಂಡು ವಿವಾಹಯೋಗ್ಯರಾಗುವರೇ ಹೊರತು ಸವತಿತಾಯಿಯ ಅಣ್ಣ-ತಮ್ಮಂದಿರಾದ ಮಾತುಲಸ್ಥಾನೀಯರ ಪುತ್ರಿಯರು ವಿವಾಹಯೋಗ್ಯರಾಗುವದಿಲ್ಲ. ಅದಕ್ಕೆ ವಿವಾಹವಿಧಿಯಿಲ್ಲ). ನಿಷೇಧವೂ ಇಲ್ಲ. ಹೀಗೆಯೇ ಆ ಮಾತುಲಕನ್ಯಾದಿಗಳಲ್ಲಿ ಪಿತೃವಿನ ಭಗಿನೀಎಂಬ ಅತಿದೇಶವುಂಟಾಗದಿರುವದರಿಂದ ಅವಳ ಪುತ್ರನನ್ನು ಕುರಿತಾದರೂ “ತಂದೆಯ ತಂಗಿ” ಎಂಬ ಅತಿದೇಶವುಂಟಾಗುವದಿಲ್ಲ. “ಅವರ ಭಗಿನಿಗಳು ಮಾತೃಭಗಿನಿಗಳು” ಎಂಬಲ್ಲಿ ಅಶೌಚ ಮತ್ತು ವಿವಾಹನಿಷೇಧ ಇವು ಉಂಟಾಗುತ್ತವೆ. ಆ ತಾಯಿಯ ತಂಗಿಯರ ಪುತ್ರರ ವಿಷಯದಲ್ಲಿ “ಬಂಧುತ್ರಯ"ತ್ವವುಂಟಾಗುವದಿಲ್ಲ. ಸವತಿತಾಯಿಯ ತಂಗಿಯ ಕಾವಿವಾಹ ನಿಷೇಧವಾದರೋ ಅದು “ವಿರುದ್ದ ಸಂಬಂಧ"ದಿಂದುಂಟಾಗುವದು. ವಿರುದ್ಧ ಸಂಬಂಧವು ಮುಂದೆ ಹೇಳಲ್ಪಡುವದು. “ಅವರ ಹುಡುಗಿಯರು ಭಗಿನಿಯರು”, ಇಲ್ಲಿ ಆಶೌಚ ಮತ್ತು ಸಮ್ಮಾನನ (ಗೌರವಿಸುವಿಕೆ) ಇರುತ್ತದೆ. ಇಲ್ಲಿ ವಿವಾಹಪ್ರಸಂಗವೇ ಇರುವದಿಲ್ಲ. ಯಾಕೆಂದರೆ “ಸಗೋತ್ರ"ರಾಗುತ್ತಾರೆ. ಸಾವತ್ನಮಾತುಲ, ಸಾವಭಾತೃ, ಸಾಪತ್ರ ಮಾತೃಶ್ಯಕ್ಕೆ, ಸಾಪತ್ರಭಗಿನಿ ಇವರಿಗೆ ತನ್ನ ಮಾತುಲ, ಸೋದರಭಾತೃ ಇತ್ಯಾದಿಗಳ ನಂತರವೇ ತರ್ಪಣವನ್ನು ಹೇಳಿದೆ. ಈ ಕಾರಣದಿಂದಲೇ ಮಹಾಲಯಾದಿಗಳಲ್ಲಿ ಉದ್ದೇಶಗಳು ಆವಶ್ಯಕಗಳೆಂದು ತೋರುತ್ತದೆ. ಅವರ ಪುತ್ರರು ಭಾಗಿನೇಯರು ಈ ವಿಷಯದಲ್ಲಿ ಅಶೌಚ ಮತ್ತು ವಿವಾಹ ನಿಷೇಧ ಪ್ರಾಪ್ತವಾಗುತ್ತದೆ. ಭಗಿನೀಪುತ್ರಿ (ಭಾಗಿನೇಯ) ಎಂಬ ಈ ಅತಿದೇಶದಲ್ಲಿಯಾದರೂ ಅವರ ಕನೈಯಲ್ಲಿ ಭಾಗಿನೇ ಕನ್ಯಾತ್ಮದ ಅತಿದೇಶವಿರುವದಿಲ್ಲ. “ಯಾವದುಕ್ತಂ ಪ್ರಮಾಣಂ’ ಅಂದರೆ ‘ಎಷ್ಟು ಉಕ್ತವಾಗಿದೆಯೋ ಅಷ್ಟೇ ಪ್ರಮಾಣವು’ ಎಂಬ ನ್ಯಾಯವಿದೆ. ಹೀಗೆ ದಿಗ್ದರ್ಶನಮಾಡಲಾಗಿದೆ. ಕೆಲವು ಕಡೆಗಳಲ್ಲಿ ಸಾಪಿಂಡವಿಲ್ಲದಿದ್ದರೂ ವಿವಾಹ ನಿಷೇಧವಿದೆ. ಪರಿಚ್ಛೇದ - ೩ ಪೂರ್ವಾರ್ಧ ವಿರುದ್ಧ ಸಂಬಂಧ ನಿಷೇಧ ೨೬೧ ವಿರುದ್ಧ ಸಂಬಂಧವಿಲ್ಲದವಳನ್ನು ವಿವಾಹವಾಗತಕ್ಕದ್ದು. ವಧೂ-ವರರಿಬ್ಬರಿಗೂ ಪಿತೃ- ಮಾತೃಗಳ ಸಮಾನತ್ವವುಂಟಾದರೆ ಅದು “ವಿರುದ್ಧ ಸಂಬಂಧ” ಎಂದಾಗುವದು. ಹೇಗಂದರೆ:- ಪತ್ನಿಯ ತಂಗಿಯ ಮಗಳು, ಚಿಗಪ್ಪನ ಹೆಂಡತಿಯ ತಂಗಿ-ಇವುಗಳನ್ನು ಪರಿಶಿಷ್ಟದಲ್ಲಿ ಹೇಳಿದೆ. ಪತ್ನಿಯ ತಂಗಿಯರಿಗೆ ತಾನು ಪಿತೃಸಮಾನನಾಗುತ್ತಾನೆ. ಚಿಗಪ್ಪನ ಹೆಂಡತಿಯ ತಂಗಿಯು ತನಗೆ ಮಾತೃಸಮಾನಳಾಗುತ್ತಾಳೆ. ಬೋಧಾಯನನು ತಾಯಿಯ ಸವತಿಯ ತಂಗಿಯನ್ನೂ, ಅವಳ ಮಗಳನ್ನೂ ವಿವಾಹದಲ್ಲಿ ಬಿಡತಕ್ಕದ್ದು ಎಂದು ಹೇಳಿದ್ದಾನೆ. ಕೆಲವರು “ಜೇಷ್ಠಭಾತಾ ಪಿತುಃ ಸಮ:” ಹೀಗೆ ವಚನವಿರುವದರಿಂದ ಶ್ರೇಷ್ಠ ಭ್ರಾತೃವಿನ ಪತ್ನಿಯ ಭಗಿನಿಯು ಮಾತೃಭಗಿನಿಯಂತೇ ಆಗುವಳು. ಆದ್ದರಿಂದ ವಿವಾಹವಾಗತಕ್ಕದ್ದಲ್ಲ ಎಂದು ಹೇಳುವರು. ಇನ್ನು ಯಾಜ್ಞವಲ್ಕೂಕ್ತ “ಯವೀಯಸೀಂ” ಅಂದರೆ ವಯಸ್ಸಿನಿಂದ, ದೇಹದಿಂದ ಕಡಿಮೆಯಾಗಿರುವವಳನ್ನು ವಿವಾಹವಾಗತಕ್ಕದ್ದು. “ಅಸಮಾನಾರ್ಷ ಗೋತ್ರಚಾಂ” ಅಂದರೆ “ಆರ್ಷ” ಅಂದರೆ ಪ್ರವರ ಮತ್ತು “ಗೋತ್ರ” ಅಂದರೆ ಸಮಾನ ಗೋತ್ರಜಳಾದವಳನ್ನು ವರಿಸತಕ್ಕದ್ದಲ್ಲ ಎಂದರ್ಥ. ಸಂಕ್ಷೇಪವಾಗಿ ಗೋತ್ರ ಪ್ರವರ ನಿರ್ಣಯ ಗೋತ್ರ ಲಕ್ಷಣ ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಸಿಷ್ಟ, ಕಶ್ಯಪ ಹೀಗೆ ಸಪ್ತ ಋಷಿಗಳು. “ಅಗಸ್ತ್ರ"ನಿಂದ ಕೂಡಿ ಎಂಟುಋಷಿಗಳ ಸಂತತಿಗೆ “ಗೋತ್ರ"ವೆನ್ನುವರು. ಯದ್ಧಪಿ, ಕೇವಲ ಭಾರ್ಗವರಲ್ಲಿ, ಆರ್ಷ್ಟಿಷೇಣಾದಿಗಳಲ್ಲಿ, ಕೇವಲಾಂಗೀರಸಗಳಲ್ಲಿ ಮತ್ತು ಹಾರೀತಾದಿಗಳಲ್ಲೂ ಈ ಲಕ್ಷಣವಿರುವದಿಲ್ಲ. ಯಾಕೆಂದರೆ ಭಗು, ಆಂಗೀರಸ ಇವರು ಎಂಟು ಋಷಿಗಳೊಳಗೆ ಬರುವದಿಲ್ಲ. ಆದಾಗ್ಯೂ ಇಲ್ಲಿ ಪ್ರವಕ್ಯವಿರುವದರಿಂದಲೇ ವಿವಾಹವಾಗುವದಿಲ್ಲ. ಯದ್ಯಪಿಗೋತ್ರಗಳು ಅಸಂಖ್ಯಾತಗಳಾಗಿವೆ. “ಗೋತ್ರಾಣಾಂ ತು ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ’ ಹೀಗೆ ಉಕ್ತಿಯಿದೆ. ಆದಾಗ್ಯೂ ಅವುಗಳಲ್ಲಿ ನಾಲ್ವತ್ತೊಂಭತ್ತೇ ಗೋತ್ರಭೇದಗಳೆಂದಣಿಸಲಾಗಿದೆ. ಭೇದಗಳನ್ನು ತೋರಿಸುವ ಪ್ರವರಗಳು ಅಷ್ಟೇ ಕಂಡುಬರುತ್ತದೆ. ಗೋತ್ರ ವಂಶಗಳನ್ನು ವಿಂಗಡಿಸಿಕೊಂಡಿರುವ ಋಷಿವಿಶೇಷರಿಗೆ “ಪ್ರವರ” ಎಂದು ಸಂಕ್ಷೇಪವಾಗಿ ಹೇಳಬಹುದು. ಬೇರೆ- ಬೇರೆಯಾಗಿ ಸಮಾನಗೋತ್ರತ್ವ, ಸಮಾನಪ್ರವರತ್ವ ಇವು ವಿವಾಹ ಪ್ರತಿಬಂಧಕಗಳಾಗುವವು. ಅದರಲ್ಲಿ ಪ್ರವರಸಾಮ್ಯವು ಏಕಪ್ರವರಸಾಮ್ಮ, ದ್ವಿಪ್ರವರಸಾಮ್ಮ ಎಂದು ಎರಡು ವಿಧವು. ಭಗು, ಅಂಗಿರ ಗಣಗಳಿಗೆ ಹೊರತಾದವುಗಳಿಗೆ ಏಕಪ್ರವರಸಾಮ್ಯವಾದರೂ ವಿವಾಹವು ನಿಷಿದ್ಧವಾಗುವದು. ಕೇವಲ ಭೈಗುಗಣದಲ್ಲಿ, ಕೇವಲಾಂಗಿರೋಗಣಗಳಲ್ಲಿಯೂ ಏಕಪ್ರವರ ಸಾಮ್ಯವು ವಿವಾಹಪ್ರತಿಬಂಧಕವಲ್ಲ, ಪ್ರವರಗಳಲ್ಲಿ ಎರಡು ಪ್ರವರಸಾಮ್ಯವಾದಲ್ಲಿ, ಪಂಚಪ್ರವರಗಳಲ್ಲಿ ತ್ರಿಪ್ರವರಸಾಮ್ಯವಾದಲ್ಲಿ ವಿವಾಹಪ್ರತಿಬಂಧಕವಾಗುವದು. “ಪಂಚಾನಾಂ ಪುಸಾಮಾನ್ಯಾದವಿವಾಹ *ಸುದ್ವಯೋಗ ಭಗ್ನಂಗಿರೋಗಣೇವಂ ಶೇಷಷ್ಟೇಕೋಪಿವಾರಯೇತ್” ಹೀಗೆ ವಚನವಿದೆ. ಜಾಮದಗ್ನಚ್ಛಗುಗಣಗಳಲ್ಲಿ, ಗೌತಮಾಂಗಿರಸಗಳಲ್ಲಿ, ಭಾರದ್ವಾಜಾಂಗಿರಸಗಳಲ್ಲಿಯೂ ಧರ್ಮಸಿಂಧು ಏಕಪ್ರವರಸಾಮ್ಯದಿಂದ ಕ್ವಚಿತ್ತಾಗಿ ಪ್ರವರಸಾಮ್ಯವಿಲ್ಲದಿದ್ದರೂ ಸಗೋತ್ರತ್ವವಿರುವದರಿಂದಲೇ ವಿವಾಹವಾಗುವದಿಲ್ಲ. ಈಗ ಗೋತ್ರ ಪ್ರವರ ಗಣನೆಗಳನ್ನು ಹೇಳುವನು:- ಏಳು ಭೈಗುಗಳು, ಹದಿನೇಳು ಆಂಗಿರಸಗಳು, ನಾಲ್ಕು ಅತ್ರಿಗಳು, ಹತ್ತು ವಿಶ್ವಾಮಿತ್ರರು, ಮೂರು ಕಶ್ಯಪರು, ನಾಲ್ಕು ವಸಿಷ್ಠರು, ನಾಲ್ಕು ಅಗಸ್ತರು ಹೀಗೆ ನಾಲ್ವತ್ತೊಂಬತ್ತು ಗಣಗಳು. ಆದಾಗ್ಯೂ ಸರ್ವಗ್ರಂಥಸಮ್ಮತವಾಗಿ ಹೆಚ್ಚಾದವುಗಳನ್ನೂ ಅಲ್ಲಲ್ಲಿ ತೋರಿಸುವವು. ಮೊದಲು ಏಳು ಭಗುಗಣಗಳು-ವತ್ಸ, ಬಿದ ಇವರು ಜಾಮದಗ್ನರು. ಆರ್ಷ್ಟಿಷಣ, ಯಸ್ಕ, ಮಿಶ್ರಯನ, ವೈನ್ಯ, ಶುನಕ, ಈ ಐವರು ಕೇವಲ ಭೈಗುಗಳು, ಅಂತೂ ಏಳು. ಅದರಲ್ಲಿ ವತ್ಸ, ಮಾರ್ಕಂಡೇಯರು, ಮಾಂಡೂಕೇಯ ಇತ್ಯಾದಿ ಇನ್ನೂರಕ್ಕಿಂತಲೂ ಹೆಚ್ಚಾದ ಗೋತ್ರಭೇದಗಳು. ಇವುಗಳಿಗೆ ಐದು ಪ್ರವರಗಳು, ಭಾರ್ಗವ, ಚ್ಯಾವನ, ಆಪ್ಪವಾನ, ಔರ್ವ, ಜಾಮದಗ್ನ ಹೀಗೆ ಅಥವಾ ಭಾರ್ಗವ, ಔರ್ವ, ಚಾಮದಗ್ನ ಹೀಗೆ ಮೂರು, ಅಥವಾ ಭಾರ್ಗವ ಚ್ಯವನ, ಆಪ್ಪವಾನ ಹೀಗೆ ಮೂರು. ಬಿದ, ಶೈಲ, ಅವಟ ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚಾಗಿ “ಬಿದರು. ಅವುಗಳಿಗೆ ಐದು ಪ್ರವರಗಳು. ಭಾರ್ಗವ, ಬ್ಯಾವನ, ಆಪ್ಪವಾನ, ಔರ್ವ, ಬೈದ ಹೀಗೆ, ಅಥವಾ ಭಾರ್ಗವ, ಔರ್ವ, ಜಾಮದಗ ಹೀಗೆ, ಆರ್ಷ್ಟಿಷಣ, ನೈಋತಯರು, ಯಾಮಾಯಣ ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚು ಆರ್ಷಿಷೇಣರು. ಇವರಿಗೆ ಭಾರ್ಗವ, ಚ್ಯಾವನ, ಆತ್ಮವಾನ, ಆರ್ಷ್ಟಿಷ್ಣ, ಅನೂಪ ಹೀಗೆ ಐದು, ಅಥವಾ ಭಾರ್ಗವ, ಆರ್ಷ್ಟಿಷೇಣ, ಅನೂಪ ಹೀಗೆ ಮೂರು. ಈ ಮೂರೂ ಗಣಗಳಿಗೆ ಅಂದರೆ ವತ್ಸ, ಬಿದ, ಆರ್ಷ್ಟಿಷಣ ಇವರಲ್ಲಿ ಪರಸ್ಪರ ವಿವಾಹನಿಷೇಧವು, ಎರಡು, ಮೂರು ಪ್ರವರ ಸಾಮ್ಯವಿರುವದರಿಂದ ವಿವಾಹವಿಲ್ಲ. ಮೊದಲಿನ ಎರಡರಲ್ಲಿಯೂ ಜಾಮದಗ್ನವಾಗುವದರಿಂದ, ಸಗೋತ್ರವಾಗುವದರಿಂದ “ನಿಷೇಧ’ವು. ಯಪಿ ತ್ರಿಪ್ರವರ ಆರ್ಷಿಷಣರಿಗೆ ವತ್ಸ, ಬಿದರಿಂದ ಕೂಡಿ ದ್ವಿಪ್ರವರಸಾಮ್ಯ ಸಗೋತ್ರತ್ವವಿರುವದಿಲ್ಲ, ಜಾಮರತ್ವವೂ ಇಲ್ಲ. ಆದರೂ ಪಂಚಪ್ರವರ ಪಕ್ಷಗತವಾದ ತ್ರಿಪ್ರವರಸಾಮ್ಯವು ವಿವಾಹಬಾಧಕವು. ಮುಂದೆಯೂ ಹೀಗೆ ತಿಳಿಯತಕ್ಕದ್ದು. ವಾತ್ಸರಿಗೆ ಭಾರ್ಗವ, ಚ್ಯಾವನ, ಅಷ್ಟವಾನ ಎಂದು ಮೂರು, ವತ್ಸ, ಪುರೋಧಸ್ ಇವರಿಗೆ ಭಾರ್ಗವ, ಚ್ಯಾವನ, ಆಪ್ಪವಾನ, ವತ್ರ, ಪೌರೋದಸ್ ಹೀಗೆ ಐದು. ಬೈಜಮಥಿತರಿಗೆ ಭಾರ್ಗವ, ಚ್ಯಾವನ, ಆಪ್ಪವಾನ, ಬೈಜ, ಮಥಿತ ಹೀಗೆ ಐದು, ಕೆಲವು ಕಡೆಯಲ್ಲಿ ಇವರು ಮೂರು. ಇವರಿಗೆ ಪರಸ್ಪರವಾಗಿ ಪೂರ್ವೋಕ್ತ ಮೂವರಿಂದಲೂ ವಿವಾಹವಿಲ್ಲ. ಯಾಕೆಂದರೆ ಪ್ರವರಸಾಮ್ಯವಿದೆ. “ಯಸ್ಕರು, ಮೌನರು, ಮೂಕರು ಇತ್ಯಾದಿ ಐವತ್ತು ಮೂರಕ್ಕಿಂತ ಹೆಚ್ಚಿದ್ದವರು. ಇವರಿಗೆ ಭಾರ್ಗವ, ವೈತಹವ್ಯ, ಸಾವೇತಸ ಎಂದು ಮೂರು, ತ್ರಯವರು, ರಷ್ಮಾಯನರು, ಸಾಪಿಂಡಿನರು ಹೀಗೆ ಮೂವತ್ತಕ್ಕಿಂತ ಹೆಚ್ಚಾಗಿರುವವರು. ಇವರಿಗೆ ಭಾರ್ಗವ, ವಾರ್ಧ್ಯಶ್ವ, ದೈವೋದಾಸ ಹೀಗೆ ಮೂರು ಅಥವಾ ಭಾರ್ಗವ, ಬ್ಯಾವನ, ದೃವೋದಾಸ ಅಥವಾ ವಾರ್ಟ್ಸ್ಶ್ರ ಎಂದು ಒಂದು. ದೈನ್ಯ, ಪಾರ್ಥ, ಬಾಷಲ. ಶ್ವೇತ ಇವರು “ವೈನ್ಯರು. ಇವರಿಗೆ ಭಾರ್ಗವ, ವೈನ್ಯ, ಪಾರ್ಥ ಎಂದು ಮೂರು. ಶುನಕ, ಗಾರ್ಕ್ಷ್ಯದ, ಯಜ್ಞಪತಿ ಇತ್ಯಾದಿ ಸಪ್ತದಶಾಧಿಕಗಳು. ಇವರಿಗೆ ಶೌನಕ ಎಂದು ಒಂದು, ಅಥವಾ ಗಾತ್ರ್ರಮದ ಎಂದು ಒಂದು ಇಲ್ಲವೆ ಭಾರ್ಗವ, ಗಾರ್ತೃಮದ ಎಂಬ ಎರಡು, ಪರಿಚ್ಛೇದ - ೩ ಪೂರ್ವಾರ್ಧ ೨೬೩ ಅಥವಾ ಭಾರ್ಗವ, ಶೌನಹೋತ್ರ, ಗಾರ್ತೃಮದ ಎಂಬ ಮೂರು, ಯಸ್ಕಾದಿ ನಾಲ್ಕು ಗಣಗಳಿಗೆ ತಮ್ಮ ತಮ್ಮ ಗಣವನ್ನು ಬಿಟ್ಟು ಪರಸ್ಪರವಾಗಿ ಹಿಂದಿನ ಜಾಮದಗ್ನ, ವತ್ಸಾದಿಗಳಿಂದಲೂ ಕೂಡಿ ವಿವಾಹವಾಗುತ್ತದೆ. ಏಕಪ್ರವರ ಸಾಮ್ಯವಿದ್ದರೂ ದ್ವಿತಿಪ್ರವರಸಾಮ್ಯವಿಲ್ಲದಿರುವದರಿಂದ ವಿವಾಹಕ್ಕಡ್ಡಿಯಿಲ್ಲ. ಭೈಗುಗಣಗಳಲ್ಲಿ ಏಕಪ್ರವರಸಾಮಕ್ಕೆ ದೂಷಣೆಯಿಲ್ಲ. ಜಾಮದಗ್ನವಲ್ಲದ್ದರಿಂದ ಸಗೋತ್ರವೂ ಆಗುವದಿಲ್ಲ. “ಮಿತ್ರಯು ಗಳಿಗೆ ಪಾಕ್ಷಿಕವಾದ ದ್ವಿಪ್ರವರ ಸಾಮ್ಯವಿರುವದರಿಂದ ತ್ರಿಪ್ರವರಗಳಾದ ವತ್ಯಾದಿಗಳಿಂದ ಕೂಡಿ ವಿವಾಹವಾಗುವದಿಲ್ಲವೆಂದು ಕೆಲವರು ಹೇಳುವರು. ಈ ಪಕ್ಷಗ್ರಾಹಿಗಳಾದವರಿಗೆ ವಿವಾಹವಿಲ್ಲ. ಬೇರೆ ಪಕ್ಷಗ್ರಾಹಿಗಳಾದ “ಮಿತ್ರಯು"ಗಳಿಗೆ ವಿವಾಹಕ್ಕಡ್ಡಿಯಿಲ್ಲವೆಂದು ಕೆಲವರನ್ನುವರು. ಕೆಲವು ಕಡೆಗಳಲ್ಲಿ ಎರಡನ್ನು ಹೆಚ್ಚಿಗೆ ಹೇಳಿದೆ. ವೇದವಿಶ್ವ, ಜ್ಯೋತಿಗಳಿಗೆ ಭಾರ್ಗವ, ವೇದ, ವೈಶ್ವಜ್ಯೋತಿಷ ಹೀಗೆ ಮೂರು, ಶಾಠರ-ಮಾಠರರಿಗೆ ಭಾರ್ಗವ, ಶಾಠರ, ಮಾಠರ ಎಂದು ಮೂರು. ಇವುಗಳಲ್ಲಿ ಪರಸ್ಪರವಾಗಿ ಹಿಂದಿನ ಎಲ್ಲವುಗಳಿಂದ ವಿವಾಹವಾಗುವದು. ಹೀಗೆ ಭಗುಗಣಗಳು. ಗೌತಮಾಂಗಿರಸ ಆಂಗಿರಸರಣ ’ ಈ ಗಣಗಳಲ್ಲಿ ಗೌತಮರು, ಭಾರದ್ವಾಜರು, ಕೇವಲರು ಹೀಗೆ ಮೂರು ವಿಧವಿದೆ. ಗೌತಮಾಂಗಿರಸಗಳು ಹತ್ತು, ಆಯಾಸ್ಕರು, ಶಾರದ್ವತರು, ಕೌಮಂಡರು, ದೀರ್ಘತಮಸ್ಸುಗಳು, ಕರೇಣುಪಾಲಿಗಳು, ವಾಮದೇವರು, ಔಶನಸರು, ರಹೂಗಣರು, ಸೋಮರಾಜಕರು, ಬೃಹದುಕ್ಷರು ಹೀಗೆ ಹತ್ತು. ಅದರಲ್ಲಿ ಆಯಾಸ್ಕರು, ಶೋಣವೇಧರು, ಮೂಢರಥರು ಇತ್ಯಾದಿ ಹದಿನೆಂಟಕ್ಕೆ ಮಿಕ್ಕಿ ಇರುವವರು. ಅವರಿಗೆ ಆಂಗಿರಸ, ಆಯಾಸ್ಯ, ಗೌತಮ ಎಂದು ಮೂವರು. ಶಾರದ್ವತರು, ಅಭಿಜಿತರು, ರೌಹಿಣಾದಿಗಳು ಹೀಗೆ ಎಪ್ಪತ್ತಕ್ಕಿಂತ ಹೆಚ್ಚಾದವರು. (ಶಾರಸ್ವತರು) ಅವರಿಗೆ ಆಂಗಿರಸ, ಗೌತಮ,, ಶಾರದ್ವತ ಎಂದು ಮೂವರು. ಕೌಮಾಂಡರು, ಮಾಮಂಢರೇಷಣರು, ಮಾಸುರಾಕ್ಷರು ಇತ್ಯಾದಿ ‘ಕೌಮಾಂಡರು” ದಶಾಧಿಕರು. ಅವರಿಗೆ ಆಂಗಿರಸ, ಔತಥ್ಯ, ಕಾಕ್ಷೀವತ, ಗೌತಮ, ಕೌಮಂಡ ಹೀಗೆ ಐದು ಪ್ರವರ, ಅಥವಾ ಆಂಗಿರಸ, ಔತಮ್ಮ, ಗೌತಮ, ಔಶಿಜ, ಕಾಕ್ಷೀವತ, ಅಥವಾ ಆಂಗಿರಸ, ಔಶಿಜ, ಕಾಕ್ಷೀವತ ಹೀಗೆ ಮೂರು, ಇಲ್ಲವೆ ಆಂಗಿರಸ, ಔತಥ್ಯ, ದೈರ್ಘತಮಸ ಹೀಗೆ ಮೂರು. ಕರೇಣುಪಾಲಿಗಳು- ವಾಸ್ತವ್ಯರು, ಶ್ವೇತೀಯಾ ಇತ್ಯಾದಿ ಕರೇಣುಪಾಲಿಗಳು ಏಳಕ್ಕೆ ಮಿಕ್ಕಿರುವವರು. ಅವರಿಗೆ ಆಂಗಿರಸ, ಗೌತಮ, ಕರೇಣುಪಾಲ ಎಂದು ಮೂರು. ವಾಮದೇವರಿಗೆ ಆಂಗಿರಸ, ವಾಮದೇವ, ಗೌತಮ್ ಎಂದು ಮೂವರು, ಇಲ್ಲವೆ, ಆಂಗಿರಸ, ವಾಮದೇವ, ಬಾರ್ಹದುಕ್ಷ ಇವರು. ಔಶನಸರು, ದಿಶ್ಯರು, ಪ್ರಶಸ್ತರು ಇತ್ಯಾದಿ ಔಶನಸರು ನವಾಧಿಕರು. ಅವರಿಗೆ ಆಂಗಿರಸ, ಗೌತಮ, ಔಶನಸ ಹೀಗೆ ಮೂವರು ಪ್ರವರಗಳು. ರಹೂಗಣರಿಗೆ ಆಂಗಿರಸ, ರಾಹೂಗಣ, ಗೌತಮ ಎಂದು ಮೂವರು. ಸೋಮರಾಜಕರಿಗೆ, ಆಂಗಿರಸ, ಸೌಮ್ಯರಾಜ್ಯ, ಗೌತಮ ಹೀಗೆ ಮೂರು. ಬೃಹದುಕರಿಗೆ-ಆಂಗಿರಸ, ಬಾರ್ಹದಕೃ ಗೌತಮ ಎಂದು ಮೂರು. ಕೆಲಕಡೆಯಲ್ಲಿ ಎರಡು ಗಣಗಳನ್ನು ಹೆಚ್ಚು ಹೇಳಿದೆ. ಉತಥ್ಯರಿಗೆ-ಆಂಗಿರಸ, ಔತಥ್ಯ, ಗೌತಮ ಎಂದು, ರಾಘವರಿಗೆ ಆಂಗಿರಸ, ರಾಘವ, ಗೌತಮ ಎಂದು. ಗೌತಮರೆಲ್ಲರಿಗೂ ವಿವಾಹವಾಗುವದಿಲ್ಲ. ಸಗೋತ್ರ ಹಾಗೂ ಹೆಚ್ಚಾಗಿ ದ್ವಿಪ್ರವರ ಸಾಮ್ಯವಾಗುವದು. ಧರ್ಮಸಿಂಧು ಭಾರದ್ವಾಜಾಂಗಿರಸರು ಅವರು ಭರದ್ವಾಜರು, ಗರ್ಗರು, ಋಕ್ಷರು, ಕಪಿಗಳು ಎಂದು ನಾಲ್ವರು. ಭರದ್ವಾಜರು- ಕಾಮಾಯಣರು, ದೇವಾಶ್ವ ಇತ್ಯಾದಿ ನೂರಾಅರವತ್ತಕ್ಕಿಂತ ಹೆಚ್ಚಾಗಿದ್ದವರು. ಅವರಿಗೆ ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ ಎಂಬುದಾಗಿ ಮೂರು ಪ್ರವರಗಳು, ಗರ್ಗರು-ಸಾಂಭರಾಯಣರು, ಸಖೀನಯ ಇತ್ಯಾದಿ ಐವತ್ತಕ್ಕೆಮಿಕ್ಕಿ ಇರುವವರು. ಗರ್ಗರಿಗೆ ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ, ಶೈನ್ಯ, ಗಾರ್ಗ್ ಹೀಗೆ ಐದು ಪ್ರವರಗಳು, ಅಥವಾ ಆಂಗಿರಸ, ಶೈನ್ಯ, ಗಾರ್ಗ್ ಹೀಗೆ ಮೂವರು. ಅಥವಾ ಇವರಲ್ಲಿ ಕೊನೆಯ ಇಬ್ಬರನ್ನು ತ್ಯಜಿಸುವದು. ಅಥವಾ ಭಾರದ್ವಾಜ, ಗಾರ್ಗ್, ಶನ್ಮ ಹೀಗೆ, ಗರ್ಗಭೇದಗಳಲ್ಲಿ ಆಂಗಿರಸ, ತೈತ್ತಿರಿಕ, ಅಪಿಭುವ ಎಂದು ಋಕ್ಷರು-ರೌಕ್ಷಾಯಣ, ಕಪಿಲ ಇತ್ಯಾದಿ ಋಕ್ಷರು ಒಂಭತ್ತಕ್ಕಿಂತ ಹೆಚ್ಚಿದವರು. ಅವರಿಗೆ ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ, ವಾಂದನ, ಮಾತವಚಸ ಹೀಗೆ ಐವರು. ಅಥವಾ ಆಂಗಿರಸ, ವಾಂದನ, ಮಾತವಚಸ ಹೀಗೆ ಮೂವರು. ಕಪಯರು-ಸ್ವಸ್ತಿತಯರು, ದಂಡಿಗಳು ಇತ್ಯಾದಿ ಇಪ್ಪತ್ತೈದಕ್ಕೆ ಮಿಕ್ಕಿರುವವರು ಕಪಯ"ರು. ಅವರಿಗೆ ಆಂಗಿರಸ, ಅಮಹಯ್ಯ, ಔರುಕ್ಷಯ್ಯ ಹೀಗೆ ಮೂವರು. ಆಂಗಿರಸ, ಆಮಹೀಯವ, ಔಯಕ್ಷಯಸ ಹೀಗೆಂದು ಆಶ್ವಲಾಯನ ಪಾಠವಿದೆ. ಆತ್ಮಭುವರಲ್ಲಿ ಆಂಗಿರಸ, ಭಾರದ್ವಾಜ ಬಾರ್ಹಸ್ಪತ್ಯ, ವರ, ಆತ್ಮಭುವ ಎಂದು ಐವರು. ಕರ್ಲ, ತೆಯಲ್ಲಿ ಈ ಗಣದ ಎಲ್ಲ ಭರದ್ವಾಜರಿಗೆ ಪರಸ್ಪರ ವಿವಾಹವಿಲ್ಲವೆನ್ನುವರು. ಯಾಕೆಂದರೆ ಸಗೋಂತ್ರರಾಗುತ್ತಾರೆ. ಹೆಚ್ಚಾಗಿ ದ್ವಿಪ್ರವರಸಾಮ್ಯವೂ ಇರುತ್ತದೆ. ಋಕ್ಷಾಂತರ್ಗತರಾದ ಕಪಿಲರಿಗೆ ವಿಶ್ವಾಮಿತ್ರರಿಂದಲೂ ವಿವಾಹವಾಗುವದಿಲ್ಲ. ಹೀಗೆ ಭಾರದ್ವಾಜಾಂಗಿರಸರು. ಕೇವಲಾಂಗಿರಸರು ಹರಿತರು, ಕುತ್ಸರು, ಕಣ್ವರು, ರಥೀತರರು, ವಿಷ್ಣು ವೃದ್ಧರು, ಮುದ್ದಲರು ಹೀಗೆ ಆರು ಹರಿತರು. ಸೌಭಗರು-ನೈಯಗವರು ಇತ್ಯಾದಿ ಮೂವತ್ತೆರಡಕ್ಕಿಂತ ಹೆಚ್ಚಾದವರು ಹರಿತರು. ಅವರಿಗೆ ಆಂಗಿರಸ, ಅಂಬರೀಷ, ಯೌವನಾಶ್ವ ಹೀಗೆ ಆದಿಯವನು-ಮಾಂಧಾತ ಎಂದಾಗಲೀ, ಕುತ್ತರಿಗೆ ಆಂಗಿರಸ, ಮಾಂಧಾತ್ರ, ಕೌತ್ಸ ಹೀಗೆ ಮೂವರು. ಕಣ್ವರು, ಔಪಮರ್ಕಟರು, ಬಾಷ್ಕಲಾಯನರು ಇತ್ಯಾದಿ ಇಪ್ಪತ್ತೊಂದಕ್ಕಿಂತ ಹೆಚ್ಚಾಗಿದ್ದವರು “ಕರು” ಅವರಿಗೆ ಆಂಗಿರಸ, ಅಜಮೀಢ, ಕಣ್ಣ ಹೀಗೆ ಮೂವರು, ಅಥವಾ ಆಂಗಿರಸ, ಪೌರ, ಕಾಣ್ಯ ಹೀಗೆ, ರಥೀತರರು- ಹಸ್ತಿದರು, ನೈತಿರಕ್ಷಯರು ಇತ್ಯಾದಿ ಹದಿನಾಲ್ಕಕ್ಕೆ ಮಿಕ್ಕಿದವರು “ರಥೀತರರು. ಅವರಿಗೆ ಆಂಗಿರಸ, ವೈರೂಪ, ರಥಿತರ ಎಂದು ಮೂವರು, ಅಥವಾ ಆಂಗಿರಸ, ವೈರೂಪ, ಪಾರ್ಷದ ಎಂದು; ಅಥವಾ ಅಷ್ಟಾದರಷ್ಟ್ರ, ವೈರೂಪ, ಪಾರ್ಷದ ಎಂದು ಅಥವಾ ಅಂತ್ಯದ ಇಬ್ಬರನ್ನು ಬಿಡುವದು. ವಿಷ್ಣು ವೃದ್ಧರು ಶಠರು, ಮರಣರು ಇತ್ಯಾರಿ ಇಪ್ಪತ್ತೈದಕ್ಕೆ ಮಿಕ್ಕಿದವರು “ವಿಷ್ಣುವೃದ್ಧರು. ಅವರಿಗೆ ಆಂಗಿರಸ, ಪೌರುಕುತ್ತ, ತ್ರಾಸದಸ್ಯವ ಹೀಗೆ ಮೂವರು. ಮುದ್ದಲರು-ಸಾತ್ಯಮುಗ್ರಿಯರು, ಹಿರಣ್ಯಸ್ಥಂಬಿಗಳು ಇತ್ಯಾದಿಯಾಗಿ ಹದಿನೆಂಟಕ್ಕೂ ಮಿಕ್ಕಿದವರು. ಅವರಿಗೆ ಆಂಗಿರಸ, ಭಾರ್ವಾಶ್ನೆ, ಮೌಲ್ಯ ಹೀಗೆ ಮೂವರು; ಅಥವಾ ಇವರಲ್ಲಿ ಮೊದಲಿನವನು ರ್ತಾನು; ಅಥವಾ ಆಂಗಿರಸ, ತಾರ್ಕ್ಷ, ವರಿಚ್ಛೇದ - ೩ ಪೂರ್ವಾರ್ಧ ೨೬೫ ಮೌಲ್ಯ ಹೀಗೆ, ಈ ಆರು ಕೇವಲಾಂಗಿರಸಗಣಗಳಲ್ಲಿ ತಮ್ಮ-ತಮ್ಮ ಗಣಗಳನ್ನು ಬಿಟ್ಟು ಪರಸ್ಪರವಾಗಿ ಹಿಂದೆ ಹೇಳಿದ ಎಲ್ಲರಿಂದಲೂ ವಿವಾಹವಾಗುತ್ತದೆ. ಆಂಗಿರಸನು ಅಗಾಷ್ಟಮನಾಗಿ ಸಪ್ತರ್ಷಿಗಳಿಗೆ ಭಿನ್ನನಾಗುವದರಿಂದ ಅವನ ಸಂತತಿಗೆ ಸಗೋತ್ರತ್ವವುಂಟಾಗುವದಿಲ್ಲ. ದ್ವಿಪ್ರವರಸಾಮ್ಯವೂ ಇಲ್ಲ. ಹರಿತ, ಕುತ್ಸರಲ್ಲಿ ವಿವಾಹವಾಗುವದಿಲ್ಲ. ಪಕ್ಷಾಂತರವಾಗಿ ದ್ವಿಪ್ರವರಸಾಮ್ಯವುಂಟಾಗುತ್ತದೆ. ಅತ್ರಿಗಳು ಅತ್ರಿಗಳು, ಗವಿಷ್ಠಿರರು, ವಾದ್ಭುತಕರು, ಮುದ್ದಲರು ಎಂದು ನಾಲ್ಕು ಗಣಭೇದಗಳು. ಅತ್ರಿಗಳಲ್ಲಿ-ಭೂರಿಗಳು, ಛಾಂದಿಗಳು ಇತ್ಯಾದಿ ತೊಂಬತ್ತುನಾಲ್ಕಕ್ಕಿಂತ ಹೆಚ್ಚಾದವರಿರುವರು. ಅವರಿಗೆ ಆತ್ರೇಯ, ಅರ್ಚನಾಸನ, ಶ್ಯಾವ’ಹೀಗೆ ಮೂವರು. ಗವಿಷ್ಠರರಲ್ಲಿ-ದಕ್ಷಿಗಳು, ಭಲಂದನು ಇತ್ಯಾದಿ ಇಪ್ಪತ್ತುನಾಲ್ಕಕ್ಕಿಂತ ಹೆಚ್ಚಾಗಿರುವರು. ಇವರಿಗೆ ಆತ್ರೇಯ, ಆರ್ಚನಾಸನ, ಗಾವಿಷ್ಠರ ಎಂದು ಮೂವರು; ಅಥವಾ ಆತ್ರೇಯ, ಗಾವಿಷ್ಠಿರ, ಪೌರ್ವಾಥ ಎಂದು. ವಾದ್ಭುತಕರಿಗೆ ಆತ್ರೇಯ, ಅರ್ಚನಾಸನ, ವಾದ್ಭುತಕ ಹೀಗೆ ಮೂವರು. ಮುದ್ದಲರಲ್ಲಿ ಶಾಲಿಸಂಧಿಗಳು, ಅರ್ಣವರು ಇತ್ಯಾದಿ ಹತ್ತಕ್ಕಿಂತ ಕಡಿಮೆಯಾದವರು. ಮುದ್ದಲರಲ್ಲಿ ಆತ್ರೇಯ, ಅರ್ಚನಾಸನ, ಪೌರ್ವಾತಿಥ ಎಂದು ಮೂವರು. ಕೆಲಕಡೆಯಲ್ಲಿ ಅತಿಥಿಗಳು, ವಾಮರಥರು, ಸುಮಂಗಲರು, ಬೀಜವಾಪರು, ಧನಂಜಯರು ಹೀಗೆ ಐದು ಹೆಚ್ಚು ಗಣಗಳನ್ನು ಹೇಳಿದೆ. ಅವುಗಳಲ್ಲಿ ಮೊದಲಿನ ನಾಲ್ಕು ಗಣಗಳಿಗೆ ಆತ್ರೇಯ, ಆರ್ಚನಾಸನ, ಆತಿಥ ಹೀಗೆ ಮೂವರು; ಅಥವಾ ಆತ್ರೇಯ, ಆರ್ಚನಾಸನ, ಗಾವಿಷದ ಹೀಗೆ; ಅಥವಾ ಸುಮಂಗಲರಿಗೆ ಅತ್ರಿ, ಸುಮಂಗಲ, ಶ್ಯಾವಾಶ್ವ ಹೀಗೆ. ಧನಂಜಯರಿಗೆ ಆತ್ರೇಯ, ಆರ್ಚನಾಸನ, ಧಾನಂಜಯ ಹೀಗೆ ವಾಲೇಯರಲ್ಲಿ ಕೌಂದ್ರೀಯರು, ಶೌಭ್ರಯರು, ವಾಮರಥರು ಇತ್ಯಾದಿ ಅತ್ರಿಯ ಪುತ್ರಿಯರು. ಅವರಿಗೆ ಆತ್ರೇಯ, ವಾಮರಥ್ಯ, ಪೌತ್ರಿಕಾ ಹೀಗೆ ಮೂವರು. ಅತ್ರಿಗಳಲ್ಲಿ ಎಲ್ಲರಿಗೆ ವಿವಾಹವಾಗುವದಿಲ್ಲ. ಸಗೋತ್ರತ್ವ ಸಪ್ರವರತ್ವವುಂಟಾಗುತ್ತದೆ. ಅತ್ರಿಯ ಪುತ್ರಿಯರ ಪುತ್ರರಿಗೂ ಮತ್ತು ವಾಮರಥ್ಯಾದಿಗಳಿಗೂ ವಸಿಷ್ಠ, ವಿಶ್ವಾಮಿತ್ರರೊಡನೆ ವಿವಾಹವಾಗುವದಿಲ್ಲ. ಹೀಗೆ ಅತ್ರಿಗಳು. ವಿಶ್ವಾಮಿತ್ರರು ಅವರು ಹತ್ತು- ಕುಶಿಕರು, ರೋಹಿತರು, ರೌಕ್ಷಕರು, ಕಾಮಕಾಯನರು, ಆಜರು, ಕತರು, ಧನಂಜಯರು, ಅಘಮರ್ಷಣರು, ಪೂರಣರು, ಇಂದ್ರಕೌಶಿಕರು ಹೀಗೆ ದಶವಿಧರು. ಕುಶಿಕರು- ಪರ್ಣಜಂಘರು, ವಾರಕ್ಕರು ಇತ್ಯಾದಿ ಎಪ್ಪತ್ತಕ್ಕೆ ಹೆಚ್ಚಾದವರು. ಕುಶಿಕರಿಗೆ-ವಿಶ್ವಾಮಿತ್ರ, ದೇವರಾತ, ಔದಲ ಹೀಗೆ ಮೂರು ಪ್ರವರಗಳು, ರೋಹಿತರು, ಕುಡಕ್ಕರು, ಚಾಕ್ರವರ್ಣಾಯನರು ಇತ್ಯಾದಿ ಐದಕ್ಕಿಂತ ಹೆಚ್ಚಾದವರು. “ಲೋಹಿತರು ಅಥವಾ ರೋಹಿತರೆಂದು ಕೆಲವರನ್ನುವರು. ಅವರಿಗೆ ವೈಶ್ವಾಮಿತ್ರ, ಆಪ್ತ ಲೌಹಿತ ಎಂದು ಮೂರು ಅಥವಾ ವೈಶ್ಯಾಮಿತ್ರ, ಲೌಹಿತ, ಆಷ್ಟ ಹೀಗೆ ಅಥವಾ ವೈಶ್ವಾಮಿತ್ರ, ಮಾಧುಶ್ವಂದಸ, ಅಪ್ಪ ಹೀಗೆ ಅಥವಾ ವಿಶ್ವಾಮಿತ್ರ, ಆಷ್ಟಕ ಹೀಗೆ ರಕ್ಷಸರಿಗೆ-ವಿಶ್ವಾಮಿತ್ರ, ಗಾಥಿನ, ರವಣ ಹೀಗೆ ಮೂವರು. ಇಲ್ಲವೆ ವೈಶ್ವಾಮಿತ್ರ, ರೌಕ್ಷಕ, ಧರ್ಮಸಿಂಧು ರವಣ ಹೀಗೆ ಅಥವಾ ಈ ರೇವಣರು ಕಾಮಕಾಯನರು. ದೇವಶ್ರವಸ್ಸುಗಳು, ದೇವತರರು ಇತ್ಯಾದಿ ಐವತ್ತಕ್ಕಿಂತ ಕಡಿಮೆಯಾದ ಇವರು ಕಾಮಕಾಯವರು. ಇಲ್ಲವೆ ಶ್ರಮತರು. ಇವರಿಗೆ ವೈಶ್ವಾಮಿತ್ರ, ದೇವಶ್ರವಸ, ದೈವತರಸ ಹೀಗೆ ಮೂವರು. ಅಜರಿಗೆ ವೈಶ್ವಾಮಿತ್ರ, ಮಾಧುಚ್ಛಂದಸ, ಆಜ ಹೀಗೆ ಮೂವರು. ಕತರು-ಇವರಲ್ಲಿ ಔದುಂಬರಿಗಳು, ಶೈಶಿರಿಗಳು ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚಾಗಿರುವವರು. ಕತರು ಅವರಿಗೆ ವೈಶ್ವಾಮಿತ್ರ, ಕಾವ್ಯ, ಆಲ ಹೀಗೆ ಮೂವರು. ಧನಂಜಯರಲ್ಲಿ ಪಾರ್ಥಿವರು, ಬಂಧುಲರು ಇತ್ಯಾದಿ ಏಳಕ್ಕಿಂತ ಕಡಿಮೆಯಾಗಿದ್ದವರು. ಅವರಿಗೆ ವೈಶ್ವಾಮಿತ್ರ, ಮಾಧುಚ್ಛಂದಸ, ಧಾನಂಜಯ, ಹೀಗೆ ಮೂವರು. ಇಲ್ಲವೆ ವೈಶ್ವಾಮಿತ್ರ, ಅಘಮರ್ಷಣ, ಕೌಶಿಕ ಹೀಗೆ ಮೂವರು. ಪೂರಣರಲ್ಲಿ-ವೈಶ್ವಾಮಿತ್ರ, ಪೂರಣ ಎಂದು ಇಬ್ಬರು. ಇಲ್ಲವೆ ವೈಶ್ವಾಮಿತ್ರ, ದೇವರಾತ, ಪೂರಣ ಎಂದು. ಇಂದ್ರ ಕೌಶಿಕರಿಗೆ-ವೈಶ್ವಾಮಿತ್ರ, ಇಂದ್ರಕೌಶಿಕ ಹೀಗೆ ಇಬ್ಬರು. ಕೆಲಕಡೆಗಳಲ್ಲಿ ಕೆಲವರು “ಹನ್ನೊಂದು” ಎಂದು ಹೇಳುವರು. ಆತ್ಮರಥರು, ಸಾಹುಲರು, ಗಾಥಿನರು, ವೈಷ್ಣವರು, ಹಿರಣ್ಯರೇತಸರು, ಸುವರ್ಣರೇತಸರು, ಕಪೋತರೇತಸರು, ಶಾಲಂಘಾಯನರು, ಮೃತಕೌಶಿಕರು, ಕಧಕರು, ರೌಹಿಣರು ಹೀಗೆ ೧೧. ಆತ್ಮರಥ್ಯರಿಗೆ-ವೈಶ್ವಾಮಿತ್ರ, ಆಸ್ಮರಥ್ಯ, ವಾಧುಲ ಎಂಬ ಮೂವರು. ಸಾಹುಲರಿಗೆ -ವೈಶ್ವಾಮಿತ್ರ, ಸಾಹುಲ ಮಾಹುಲ ಹೀಗೆ ಮೂವರು. ಗಾಥಿನರಿಗೆ ವೈಶ್ವಾಮಿತ್ರ, ಗಾಥಿನ, ರವಣ ಎಂದು ಮೂವರು. ಇವ ಎಂದು ಕೃತಿತ್ ಪಾಠವು ಇವರನ್ನೇ ರೇವಣ ಎಂದೂ, ಉರವಣ ಎಂದೂ ಹೇಳುವರು. ವೈಣವರಿಗೆ ದೈಶಾಮಿತ್ರ, ಗಾಥಿನ, ವೈಣವ ಹೀಗೆ ಮೂವರು. ಹಿರಣ್ಯರೇತಸರಿಗೆ-ವೈಶ್ವಾಮಿತ್ರ ಸೌವರ್ಣರೇತಸ್ ಎಂದು ಎರಡು. ಕಪೋತರೇತಸರಿಗೆ-ವೈಶ್ವಾಮಿತ್ರ ಕಪೋತರೇತಸ ಎಂದು ಇಬ್ಬರು. ಶಾಲಂಕಾಯನರಿಗೆ-ವೈಶ್ವಾಮಿತ್ರ, ಶಾಲಂಕಾಯನ, ಕೌಶಿಕ ಎಂಬುವ ಮೂವರು. ಇವರನ್ನೇ ಕೌಶಿಕರೆಂದೂ, ಜಗ್ಗುವರೆಂದೂ ಹೇಳುತ್ತಾರೆ. ಮೃತಕೌಶಿಕರಿಗೆ ವಿಶ್ವಾಮಿತ್ರ, ಧೃತಕೌಶಿಕ ಎಂದು ಇಬ್ಬರು. ಕಥಕರಿಗೆ-ವೈಶ್ವಾಮಿತ್ರ, ಕಾಥಕ ಎಂದು ಇಬ್ಬರು. ರೌಹಿಣರಿಗೆ-ವೈಶ್ವಾಮಿತ್ರ, ಮಾಧುಚ್ಛಂದಸ, ರೌಹಿಣ ಹೀಗೆ ಮೂವರು. ವಿಶ್ವಾಮಿತ್ರ ಎಲ್ಲ ಗಣಗಳಿಗೆ ಪರಸ್ಪರ ವಿವಾಹವಾಗುವದಿಲ್ಲ, ಸಗೋತ್ರತ್ವ, ಪ್ರವರತ್ನವುಂಟಾಗುತ್ತದೆ. ಕುಶಿಕರಿಗೆ ದೇವರಾತರ ಪ್ರವರಸಾಮ್ಯವಿರುವದರಿಂದ, ಭೇದನಿರ್ಣಯವಿಲ್ಲದೆ ಮುಂದೆ ಹೇಳುವ ದೇವರಾತನಂತೆಯೇ ಜಾಮದಗ್ನರಿಂದಲೂ ವಿವಾಹವಾಗುವದಿಲ್ಲವೆಂದು ತೋರುತ್ತದೆ. ಧನಂಜಯರಿಗೆ ವಿಶ್ವಾಮಿತ್ರರಿಂದಲೂ, ಅತ್ರಿಗಳಿಂದಲೂ ಕೂಡಿ ವಿವಾಹವಿಲ್ಲ. ಕತರಿಗೆ ಭರದ್ವಾಜರಿಂದಲೂ, ವಿಶ್ವಾಮಿತ್ರರಿಂದಲೂ ವಿವಾಹವಿಲ್ಲ. ದ್ವಿಗೋತ್ರತ್ವವುಂಟಾಗುತ್ತದೆ. ಹೀಗೆ ವಿಶ್ವಾಮಿತ್ರರು. ಕಶ್ಯಪರು ಕಶ್ಯಪರಲ್ಲಿ ನಿಡುವರು, ದೇವರು, ಶಾಂಡಿಲರು ಹೀಗೆ ಮೂರು ವಿಧಗಳು. ಅದರಲ್ಲಿ ನಿಲ್ಲುವರು- ಕಶ್ಯವರು, ಅಷ್ಟಾಂಗಿರಸರು ಇತ್ಯಾದಿ ನಾಲ್ವತ್ತಕ್ಕಿಂತ ಹೆಚ್ಚಾಗಿರುವ ಮತ್ತು ನೂರಕ್ಕಿಂತ ಕಡಿಮೆಯಾಗಿದ್ದವರು ಈ “ನಿರುವರು”. ಅವರಲ್ಲಿ ಕಾಶ್ಯಪ, ಅವತ್ಸಾರ, ನೈಧೃವ ಎಂದು ಮೂರು ಪ್ರವರಗಳು, ನಿರ್ಣಯಸಿಂಧುವಿನಲ್ಲಿ ನಿಧ್ರುವಗಣಾನಂತರದಲ್ಲಿ ಕಶ್ಯಪಗಣವನ್ನು ಹೇಳಿದೆ ಮತ್ತು ಕಶ ವರಿಗೆ ಕಾಶ್ಯಪ, ಅವತಾರ, ಆಸಿತ ಹೀಗೆ ಮೂರು ಪ್ರವರಗಳನ್ನು ಹೇಳಿದೆ. ಈ ವಿಷಯದಲ್ಲಿ ಪರಿಚ್ಛೇದ - ೩ ಪೂರ್ವಾರ್ಧ ೨೬೭ ಶಿಷ್ಟಾಚಾರವೂ ಕಂಡುಬರುತ್ತದೆ.” ದೇಭರರಿಗೆ ಕಾಶ್ಯಪ, ಅವಾರ, ರಜ್ಞ ಎಂದು ಮೂರು. ಶಂಡಿಲರು-ಕೋಹಲರು, ಉದಮೇಧರು ಇತ್ಯಾದಿ ಅರವತ್ತಕ್ಕಿಂತ ಕಡಿಮೆಯಿರುವವರು. ಶಂಡಿಲರಲ್ಲಿ ಕಾಶ್ಯಪ, ಅವತ್ಸಾರ, ಶಾಂಡಿಲ್ಯ ಎಂದು ಮೂವರು, ಇಲ್ಲವೆ ಕಾಶ್ಯಪ, ಅವತ್ಸಾರ, ಅಸಿತ ಇಲ್ಲವೆ ದೇವಲ ಹೀಗೂ ಇದೆ. ಇಲ್ಲವೆ ಕಾಶ್ಯಪ, ಅಸಿತ, ದೇವಲ ಹೀಗೆ, ಇಲ್ಲವೆ ಇವುಗಳ ಅಂತ್ಯದ ಎರಡರಲ್ಲಿ ವ್ಯತ್ಯಾಸದಿಂದ ಹೀಗೆ, ಇಲ್ಲವೆ ದೇವಲ, ಅಸಿತ ಹೀಗೆ ಎರಡು. ಈ ಕಶ್ಯಪರಿಗೆ ಪರಸ್ಪರ ವಿವಾಹವಾಗುವದಿಲ್ಲ. ಸಗೋತ್ರಪ್ರವರತ್ನವುಂಟಾಗುತ್ತದೆ. ವಸಿಷ್ಠರು ಅವರಲ್ಲಿ ವಸಿಷ್ಠರು, ಕುಂಡಿನರು, ಉಪಮನ್ಯುಗಳು, ಪರಾಶರರು ಹೀಗೆ ನಾಲ್ಕು ವಿಧಗಳು. ವಸಿಷ್ಠರಲ್ಲಿ-ವೈತಾಲಕವಿಗಳು, ರಗಳು ಇತ್ಯಾದಿ ಅರವತ್ತಕ್ಕಿಂತ ಹೆಚ್ಚು ಇರುವರು. ಅವರಿಗೆ ವಾಸಿಷ್ಠ, ಇಂದ್ರಪ್ರಮದ, ಅಭರದ್ವನ್ ಹೀಗೆ ಮೂವರು, ಅಥವಾ ವಾಸಿ ಎಂದು ಒಂದು ಕುಂಡಿನರಲ್ಲಿ ಲೋಹಿತಾಯನರು, ಗಗ್ಗುಲಿಗಳು ಇತ್ಯಾದಿ ಇಪ್ಪತ್ತೈದಕ್ಕಿಂತ ಕಡಿಮೆಯಾಗಿದ್ದವರು. ಇವರಿಗೆ ವಾಸಿಷ್ಠ, ಮೈತ್ರಾವರುಣ, ಕೌಂಡಿನ್ಯ ಹೀಗೆ ಮೂರು ಪ್ರವರಗಳು, ಉಪಮನ್ಯುಗಳಿಗೆ ಔದಲಿಗಳು, ಮಾಂಡಲೇಖಿಗಳು ಇತ್ಯಾದಿ ಎಪ್ಪತ್ತಕ್ಕಿಂತ ಕಡಿಮೆಯಾದವರು. ಅವರಿಗೆ ವಾಸಿಷ್ಠ, ಇಂದ್ರಪ್ರಮದ, ಆಭರದ್ವಸ್ ಹೀಗೆ ಮೂರು. “ಆಭರಸವ"ಎಂದೂ ಪಾಠಾಂತರವಿದೆ; ಅಥವಾ ವಾಸಿಷ್ಟ, ಆರಭಧ್ರಸ್, ಇಂದ್ರಶ್ರಮದ, ಹೀಗೆಯೂ ಇದ. ಇಲ್ಲವೆ ಆರಭದ್ರಸ್, ವಾಸಿಷ್ಯ, ಇಂದ್ರಶ್ರಮದ ಹೀಗೆ, ಪರಾಶರರಲ್ಲಿ ಕಾಂಡೂಶಯರು, ವಾಜಿಗಳು ಇತ್ಯಾದಿಯಾಗಿ ನಾಲ್ವತ್ತೇಳಕ್ಕಿಂತ ಕಡಿಮೆಯಿರುವವರು. ಪರಾಶರರಲ್ಲಿ-ವಾಸಿಷ್ಠ, ಶಾಸ್ತ್ರ, ಪಾರಾಶರ್ಯ ಎಂದು ಮೂವರು. ಈ ವಸಿಷ್ಠರಿಗೆ ಪರಸ್ಪರ ವಿವಾಹವಾಗುವದಿಲ್ಲ. ಅಗಣ್ಯರು ಅಗಸ್ಯರು ಇಧ್ಯವಾಹರು, ಸಾಂಬವಾಹರು, ಸೋಮವಾಹರು, ಯಜ್ಞವಾಹರು, ದರ್ಭವಾಹರು, ಸಾರವಾಹರು, ಅಗಸ್ತಿಗಳು, ಪೂರ್ಣಮಾಸರು, ಹಿರೋದಕರು, ಪಾಣಿಕರು ಎಂದು ಹತ್ತು ವಿಧರು. ಇಧ್ಯವಾಹರಲ್ಲಿ ವಿಶಾಲಾದರು, ಸ್ಟಾಲಾಯನರು ಇತ್ಯಾದಿ ಐವತ್ತಕ್ಕೆ ಮಿಕ್ಕಿದವರು. ಇಧ್ಯವಾಹರಿಗೆ ಅಗತ್ಯ, ದಾರ್ಡ್ಯಚ್ಯುತ, ಇಧ್ಯವಾಹ ಹೀಗೆ ಮೂರು ಪ್ರವರಗಳು. ಇಲ್ಲವೆ ಅಗಸ್ತ್ರ ಎಂದು ಒಬ್ಬ, ಸಾಂಭವಾಹರಿಗೆ-ಅಗಸ್ತ್ರ, ದಾರ್ಡ್ಯಚ್ಯುತ, ಇಧ್ಯವಾಹ ಎಂಬ ಮೂವರು. ಸೋಮವಾಹರಿಗೆ -ಸೋಮವಾಹನೇ ಅಂತ್ಯನು. ಆದ್ಯರು ಹಿಂದೆ ಹೇಳಿದವರೇ, ಯಜ್ಞವಾಹರಿಗೆ ಯಜ್ಞವಾಹನೇ ಅಂತ್ಯನು. ದರ್ಭವಾಹರಿಗೆ-ದರ್ಭವಾಹನೇ ಅತನು. ಸಾರವಾಹರಿಗೆ-ಸಾರವಾಹನೇ ಅಂತನು. ಅಗಸ್ತಿಗಳಿಗೆ -ಅಗಸ, ಮಾಹೇಂದ್ರ, ಮಾಯೋಭುವ, ಪೂರ್ಣಮಾಸರಿಗೆ-ಅಗಸ್ತ್ರ, ಪೌರ್ಣಮಾಸ್ಕ, ಪಾರಣ ಹೀಗೆ ಮೂವರು. ಹಿಮೋದಕರಿಗೆ-ಅಗಸ್ತ್ರ, ಹೈಮವರ್ಚಿ, ಹಮೋದಕ ಹೀಗೆ ಮೂವರು. ಪಾಣಿಕರಿಗೆ ಅಗತ್ಯ, ಪ್ರನಾಯಕ, ಪಾಣಿಕ ಎಂದು ಮೂವರು. ಅಗಸ್ತಿಗಳಿಗೆ ಪರಸ್ಪರ ವಿವಾಹವಿಲ್ಲ. ಸಗೋತ್ರ ಪ್ರವರತ್ವವುಂಟಾಗುತ್ತದೆ. ಹೀಗೆ ಅಗಸ್ತಿಗಳು. ಧರ್ಮಸಿಂಧು ದ್ವಿಗೋತ್ರಗಳು ಭರದ್ವಾಜಪುತ್ರನಾದ ಶುಂಗನಿಂದ ವಿಶ್ವಾಮಿತ್ರವಾದ ಶೃಶಿರನ ಪತ್ನಿಯಲ್ಲಿ ಜನಿಸಿದವನು “ಶೃಂಗಂ” ಎಂಬ ಋಷಿಯು, ಅವನಿಗೆ ಗೋತ್ರತ್ವಲಕ್ಷಣವುಂಟಾಗುವದರಿಂದ ಗೋತ್ರತ್ವ ಪ್ರಾಪ್ತವಾಗುವದು. ಆ ಗೋತ್ರದವರಿಗೆ ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ, ಶೌಂಗ, ಶೈಶಿರ ಹೀಗೆ ಐದು ಪ್ರವರಗಳು. ಇಲ್ಲವೆ ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ, ಕಾವ್ಯ, ಅಶ್ಲೀಲ, ಹೀಗೆಂದಾಗಲಿ, ಆಂಗಿರಸ, ಕಾವ್ಯ, ಅಲ ಹೀಗೆ ಪ್ರವರರೂ ಆಗಬಹುದು. ಇಲ್ಲವೆ ಭಾರದ್ವಾಜ, ಕಾವ್ಯ, ಆಲ ಹೀಗೂ ಆಗಬಹುದು. ಇವರೆಲ್ಲರಿಗೆ ಭರದ್ವಾಜರಿಂದಲೂ, ಸರ್ವವಿಶ್ವಾಮಿತ್ರರಿಂದಲೂ ವಿವಾಹವಾಗುವದಿಲ್ಲ. ಸಂಕೃತಿಗಳು, ಪೂತಿಮಾಷರು, ತಂಡಿಗಳು ಇತ್ಯಾದಿ ಇಪ್ಪತ್ತೆಂಟಕ್ಕೆ ಕಡಿಮೆಯಾದವರು ಈ “ಸಂಕೃತಿಗಳು. ಅವರಲ್ಲಿ ಆಂಗಿರಸ, ಗೌರಿವೀತಿ, ಸಾಂಕೃತ್ಯ ಹೀಗೆ ಮೂರು ಪ್ರವರಗಳು. ಇಲ್ಲವೆ ಶಾಸ್ತ್ರ, ಗೌರಿವೀತಿ, ಸಾಂಕೃತ್ಯ ಹೀಗೆ ಅಂತ್ಯಗಳೆರಡರಲ್ಲಿ ವ್ಯತ್ಯಾಸದಿಂದಲೂ ಆಗಬಹುದು. ಇವರಿಗೆ ತಮ್ಮ ಗಣದಲ್ಲಿರುವ ಪೂತಿಮಾಷಾದಿಗಳಿಂದ ಮತ್ತು ಎಲ್ಲ ವಸಿಷ್ಕರಣಗಳಿಂದಲೂ ಮುಂದೆ ಹೇಳಲ್ಪಡುವ “ಅಹರ್ವಸಿ"ಸಂಜ್ಞಕ ಗಾಕ್ಷಿಗಳಿಂದಲೂ ವಿವಾಹವಾಗುವದಿಲ್ಲ. ಕೇವಲಾಂಗಿರಸಗಳಿಂದ ವಿವಾಹವಾಗುತ್ತದೆ. ಆಂಗಿರಸತ್ವವಿದ್ದರೂ ಸಗೋತ್ರತ್ವವಿಲ್ಲದಿರುವದರಿಂದ ಮತ್ತು ಎರಡು ಮೂರು ಪ್ರವರಸಾಧ್ಯವಿಲ್ಲದ್ದರಿಂದ ವಿವಾಹಕ್ಕಡ್ಡಿಯಿಲ್ಲ. ಕೆಲವರು ಭಾರದ್ವಾಜಾಂಗಿರಸತ್ವವನ್ನಾಶ್ರಯಿಸಿ ಭಾರದ್ವಾಜ, ಶೌಂಗ, ಶಶಿರ ಇವರಿಂದ ಕೂಡಿ ವಿವಾಹವಾಗುವದಿಲ್ಲವನ್ನುವರು. ಇದು ಸರಿಯಲ್ಲ. ಯಾಕೆಂದರೆ ಭಾರದ್ವಾಜತ್ವವಿಷಯದಲ್ಲಿ ಪ್ರಮಾಣ ಕಂಡುಬರುವದಿಲ್ಲ. ಪ್ರಯೋಗಪಾರಿಜಾತದಲ್ಲಿ ಕಾಶ್ಯಪರಿಂದ ಕೂಡಿ ಇವರಿಗೆ ವಿವಾಹವಿಲ್ಲವೆಂದು ಹೇಳಿದೆ. ಆ ವಿಷಯದಲ್ಲಿ “ಹೇತುವು-ಚಿಂತ್ಯವು” ಎಂದು ಕಸ್ತುಭದಲ್ಲಿ ಹೇಳಿದೆ. ಲೌಗಾಕ್ಷಿಗಳಲ್ಲಿ-ದಾರ್ಭಾಯಣರು ಇತ್ಯಾದಿ ಮೂವತ್ತೆಂಟಕ್ಕಿಂತ ಹೆಚ್ಚಾಗಿರುವರು. ಅವರಿಗೆ ಕಾಶ್ಯಪ, ಅವಾರ, ವಾಸಿಷ್ಠ ಹೀಗೆ ಮೂರು ಪ್ರವರಗಳು. ಇಲ್ಲವೆ ಕಾಶ್ಯಪ, ಅವಾರ, ಅಸಿತ ಹೀಗೆ ಮೂವರು. ಇವರಲ್ಲಿ “ಅಹರ್ವವಸಿಷ್ಠರು, “ನಾಂ ಕಶ್ಯಪರು. ಇವರು ಹಗಲಿನಲ್ಲಾಗುವ ಕಾರ್ಯದಲ್ಲಿ ವಾಸಿಷ್ಠ ರೂಪಕಾರ್ಯ ಹೊಂದಿದವರು. ರಾತ್ರಿ ಕಾರ್ಯದಲ್ಲಿ ಕಾಶ್ಯಪ ಕಾರ್ಯಹೊಂದಿದವರು ಎಂದರ್ಥ್ಯ. ಇವರೆಲ್ಲರಿಗೆ ಸರ್ವಕಾಶ್ಯಪರೊಡನೆ ಹಾಗೂ ಸರ್ವವಸಿಷ್ಠರೊಡನೆಯೂ ಮತ್ತು ಸಂಕೃತಿಗಳೊಡನೆಯೂ ವಿವಾಹವಿಲ್ಲ. ಇನ್ನು ಸ್ಮೃತ್ಯರ್ಥಸಾರಾದಿಗಳಲ್ಲಿ ಹೇಳಿದ ದ್ವಿಗೋತ್ರಗಳು:- ದೇವರಾತರಲ್ಲಿ ವೈಶ್ಯಾಮಿತ್ರ, ದೇವರಾತ, ಔರಲಗಳೆಂದು ಮೂವರು. ಇವರಿಗೆ ಎಲ್ಲ ಜಾಮದಗ್ನ ಹಾಗೂ ವಿಶ್ವಾಮಿತ್ರರೊಡನೆ ವಿವಾಹವಿಲ್ಲ. ಧನಂಜಯರಿಗೆ-ವೈಶ್ವಾಮಿತ್ರ, ಮಾಧುಚ್ಛಂದಸ, ಧಾನಂಜಯ ಹೀಗೆ ಮೂವರು. ಇವರಿಗೆ ಸರ್ವವಿಶ್ವಾಮಿತ್ರರೊಡನೆ ಮತ್ತು ಅತ್ರಿಗಳೊಡನೆ ವಿವಾಹವಾಗುವದಿಲ್ಲ. ಇದನ್ನು ಈ ಮೊದಲೇ ವಿಶ್ವಾಮಿತ್ರಗಣದಲ್ಲಿ ಹೇಳಿದೆ. ಜಾತೂಕರ್ಣರಿಗೆ ವಾಸಿಷ್ಠ, ಆತ್ರೇಯ, ಜಾತೂಕರ್ಣ ಹೀಗೆ ಮೂವರು. ಇವರಿಗೆ ವಸಿಷ್ಠರೊಡನೆ ಹಾಗೂ ಅತ್ರಿಯರೊಡನೆ ವಿವಾಹವಿಲ್ಲ. ನಿರ್ಣಯಸಿಂಧುವಿನಲ್ಲಿ ಇದನ್ನು ವಸಿಷ್ಠಗಣದಲ್ಲಿ ಹೇಳಿದೆ. ಮೊದಲು ಅತ್ರಿಗಣದಲ್ಲಿ ಹೇಳಿರುವ ವಾಮರಥ್ಯಾದಿ ತ್ರಿಪತ್ರಿಕಾ ಪುತ್ರರಿಗೂ, ವಸಿಷ್ಠ, ಅತ್ರಿಗಳೊಡನೆಯೂ ವಿವಾಹವಿಲ್ಲ. ಕೆಲವರು ಅತಿ-ವಿಶ್ವಾಮಿತ್ರರೊಡನೆ ವಿವಾಹವಿಲ್ಲವನ್ನುವರು. ಮೊದಲು ಭರದ್ವಾಜಗಣದಲ್ಲಿರುವಪರಿಚ್ಛೇದ - ೩ ಪೂರ್ವಾರ್ಧ DLE ಯಕಾಂತರ್ಗಣತ್ವದಿಂದ ಹೇಳಲ್ಪಟ್ಟ ಕಪಿಲರ-ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ, ವಾಂದನ, ಮಾತವಚಸ ಈ ಪಂಚಪ್ರವರಗಳಿಗೆ ವಿಶ್ವಾಮಿತ್ರ, ಭಾರದ್ವಾಜರಿಂದೊಡಗೂಡಿ ವಿವಾಹವಾಗುವದಿಲ್ಲ. ಪೂರ್ವದಲ್ಲಿ ವಿಶ್ವಾಮಿತ್ರಗಳಲ್ಲಿ ಹೇಳಿದ ಕತರ, ವೈಶ್ವಾಮಿತ್ರ, ಕಾತ್ಕಾಲ ಎಂಬ ಮೂರು ಪ್ರವರಗಳಿಗೆ ವಿಶ್ವಾಮಿತ್ರ, ಭರದ್ವಾಜರೂಡನೆ ವಿವಾಹವಿಲ್ಲ. ಇದೇ ನ್ಯಾಯದಿಂದ ಪರಗೋತ್ರೋತ್ಪನ್ನರಾದ ದತ್ತಕಾದಿಗಳು ಸದ್ಯದವರಾದರೂ ದ್ವಿಗೋತ್ರರಾದಮೂಲಕ ಜನಕ, ಪಾಲಕ ಈ ಇಬ್ಬರ ಗೋತ್ರವೂ ಸಗೋತ್ರ ಎಂದಾಗುವದರಿಂದ ಪರಸ್ಪರ ವಿವಾಹವಾಗುವಂತಿಲ್ಲ. ಇಲ್ಲಿ ತಲೆಮಾರಿನ ಲೆಕ್ಕವಿಲ್ಲ. ನೂರುತಲೆಮಾರುಗಳು ಸಂದರೂ ದ್ವಿಗೋತ್ರತ್ವ ನಷ್ಟವಾಗುವದಿಲ್ಲ. ಕ್ಷತ್ರಿಯ ವೈಶ್ಯರಿಗಾದರೆ ಪುರೋಹಿತನ ಗೋತ್ರವೇ ಅವರ ಗೋತ್ರವಂದಣಿಸುವದು. ಹೀಗೆ ಸರ್ವಸಮ್ಮತ ಸಿದ್ಧಾಂತವು ಆಚಾರ್ಯಗೋತ್ರ ವಿಚಾರ ಸ್ವಗೋತ್ರಜ್ಞಾನವಿಲ್ಲದಾಗ ಉಪನಯನದಲ್ಲಿ ಆಚಾರ್ಯನಾದವನ ಗೋತ್ರದಿಂದಲೇ, ಅವನ ಪ್ರವರಗಳಿಂದಲೇ ಉಚ್ಚರಿಸಿ ಕಾರ್ಯಮಾಡುವದು. ವಿವಾಹಾದಿಗಳಲ್ಲಿಯೂ ಹೀಗೆಯೇ ತಿಳಿಯಬೇಕು. ಆಚಾರ್ಯಗೋತ್ರಜ್ಞಾನವೂ ಇಲ್ಲದಿದ್ದರೆ ತನ್ನನ್ನು ಯಾರಿಗಾದರೂ ಅರ್ಪಿಸಿಕೊಂಡು ಆತನ ಗೋತ್ರವನ್ನೇ ಹೇಳುವದು. (ಈ ಗೋತ್ರ-ಪ್ರವರಾದಿಗಳ ಜ್ಞಾನವು ಕುಲಪರಂಪರೆಯಿಂದಲೇ ತಿಳಿಯಬೇಕಲ್ಲದೆ ಅನ್ಯಮಾರ್ಗವಿಲ್ಲ. ಆದರೂ ಒಂದು ಪದ್ಧತಿಗನುಸಾರವಾಗಿ ಧರ್ಮನಿಬಂಧಕಾರರು ಬರೆದಿರುತ್ತಾರೆ. ಇದನ್ನು ತಮ್ಮ ತಮ್ಮ ಮಟ್ಟಿಗೆ ಆಯಾಯ ಗೋತ್ರಪ್ರವರಗಳನ್ನು ತಿಳಿಯಲು ಇದು ಸಹಾಯವಾಗುವದು. ಪ್ರವರಭೇದ, ಆ ಮೂಲಕ ಮೂಲಗೋತ್ರ (ಸಪ್ತರ್ಷಿ)ಗಳನ್ನೂ ತಿಳಿಯಲು ಅನುವಾಗದು. ಕೆಲ ಪುಸ್ತಕಗಳಲ್ಲಿ ಈ ಗೋತ್ರಪ್ರವರಗಳನ್ನು (ನಿರ್ಣಯ ಸಾಗರ) ಮೂಲಕ್ಕೆ ಹೊರತಾಗಿ ಕೋಷ್ಟಕ ರೂಪದಲ್ಲಿಯೂ ಕೊಡಲಾಗಿದೆ. ಅದರಿಂದೇನೂ ವಿಶೇಷ ಜ್ಞಾನವಾಗುವಂತಿಲ್ಲವಾದಕಾರಣ ಇಲ್ಲಿ ಮೂಲವನ್ನಷ್ಟೇ ಭಾಷಾಂತರಿಸಲಾಗಿದೆ. ಈ) ಮಾತೃಗೋತ್ರ ವರ್ಜವಿಚಾರ ಇಲ್ಲಿ “ಮಾತೃಗೋತ್ರ"ವೆಂದರೆ ಮಾತಾಮಹನ (ತಾಯಿಯ ತಂದೆ) ಗೋತ್ರವೆಂದರ್ಥ. ಸ್ತ್ರೀಯು ವಿವಾಹಾನಂತರ ಪತಿಗೋತ್ರದಲ್ಲಿ ಸೇರುವಳು. ಅಲ್ಲಿಯ ವರೆಗೆ ತಂದೆಯ ಗೋತ್ರದಲ್ಲಿಯೇ ಇರುತ್ತಾಳೆ. ಆದಕಾರಣ ವಿವಾಹವಾಗಬೇಕಾದ ಕನ್ನೆಯ ವಿಷಯದಲ್ಲಿ ಮಾತಾಮಹನ ಗೋತ್ರವೇ"ವರ್ಜ” ಎಂದಾಗುವದು. ಬ್ರಾಹ್ಮವಿವಾಹಪದ್ಧತಿಯಂತೆ ವಿವಾಹಿತಳಾದವಳ ಎಲ್ಲ ಪುತ್ರರಿಗೂ ಮಾತಾಮಹಗೋತ್ರವು ವರ್ಜವಲ್ಲ, ಗಾಂಧರ್ವಾದಿ ವಿವಾಹ ವಿಧಿಯಿಂದ ವಿವಾಹಿತಳಾದವಳ ಎಲ್ಲ ಪುತ್ರರಿಗೂ ಮಾತಾಮಹಗೋತ್ರವು ವರ್ಜವು ಬ್ರಾಹ್ಮ ವಿವಾಹಿತರಾದವರಲ್ಲಿ “ಮಾಧ್ಯಂದಿನ"ರಿಗೆ ಮಾತ್ರ ವರ್ಜವು, “ಮಾತೃಗೋತ್ರಂ ಮಾಧ್ಯಂದಿನಾನಾಂ” ಹೀಗೆ ಸಾಷಾಢ ವಚನವಿದೆ. ಅದರಂತೆ ಎಲ್ಲ ಕಡೆಗೂ ಶಿಷ್ಟಾಚಾರ ಕಂಡುಬರುತ್ತದೆ. ಸಗೋತ್ರ ವಿವಾಹಾದಿಗಳಲ್ಲಿ ಪ್ರಾಯಶ್ಚಿತ್ತ ಅಜ್ಞಾನದಿಂದ ಸಗೋತ್ರ-ಸಪ್ರವರ ವಿವಾಹದಲ್ಲಿ ಆ ಕನ್ನೆಯನ್ನು ತ್ಯಜಿಸಿ ಚಾಂದ್ರಾಯಣ 920 ಧರ್ಮಸಿಂಧು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಜ್ಞಾನದಿಂದಾದರೆ ದ್ವಿಗುಣ ಪ್ರಾಯಶ್ಚಿತ್ತವು, ಹೀಗಾದಲ್ಲಿ ಕಣ್ಣಿಗೆ ಅರ್ಧಪ್ರಾಯಶ್ಚಿತ್ತವು. ಹೀಗೆ ಸಪಿಂಡರಲ್ಲಿ ವಿವಾಹವಾದರೂ ತಿಳಿಯುವದು ಬ್ರಾಹ್ಮಣಸ್ತ್ರೀಯ “ತ್ಯಾಗ"ವೆಂದರೆ ಸಂಭೋಗ ಮತ್ತು ಧರ್ಮಕಾರ್ಯಗಳಲ್ಲಿ ಪ್ರವೇಶ ಇವುಗಳಲ್ಲಿ ತ್ಯಾಜ್ಯಳೆಂದರ್ಥ. “ಮಾತೃವತ್ ಪರಿಪಾಲಯೇತ್” ಹೀಗೆ ವಚನವಿರುವದರಿಂದ ಅನ್ನಪಾನಾದಿಗಳಿಂದ ಪಾಲಿಸಬೇಕೆಂದು ವಚನವಿದೆ. ಅಜ್ಞಾನದಿಂದ ಸಗೋತ್ರದವಳನ್ನು ವಿವಾಹವಾಗಿ ಅವಳನ್ನು ಭೋಗಿಸಿದರೆ ವಿವಾಹ ಪ್ರಯುಕ್ತ ಚಾಂದ್ರಾಯಣವನ್ನಾಚರಿಸಬೇಕು; ಮತ್ತು ಸಗೋತ್ರಾಗಮನಪ್ರಯುಕ್ತ ಎರಡು ಚಾಂದ್ರಾಯಣಗಳನ್ನು ಮಾಡಬೇಕು. ಜ್ಞಾನದಿಂದಾದರೆ ಇನ್ನೂ ಹೆಚ್ಚು ಮಾಡತಕ್ಕದ್ದೆಂದು ಕೆಲವರನ್ನುವರು. ಇನ್ನು ಕೆಲವರು ಗುರುತಲ್ಪಗಮನ ಸಾಮ್ಯವಿರುವದರಿಂದ ಅಸಂಬಂಧದ ಪ್ರಾಯಶ್ಚಿತ್ತದಿಂದ ಶುದ್ಧನಾಗತಕ್ಕದ್ದೆಂದು ಹೇಳುವರು. ಅದಕ್ಕೆ “ಷಡಬ್ಬ “ವು ಪ್ರಾಯಶ್ಚಿತ್ತವು. ಅಜ್ಞಾನದಿಂದಾದರೆ “ಬ” ಅಥವಾ ಚಾಂದ್ರಾಯಣ ಮಾಡತಕ್ಕದ್ದೆಂದೂ ಹೇಳುವರು. ಅಜ್ಞಾನದಿಂದ ಸಗೋತ್ರಾದಿಗಳಲ್ಲುತ್ಪನ್ನರಾದವರು ಜನಕನ ಪ್ರಾಯಶ್ಚಿತ್ತಾನಂತರದಲ್ಲಿ “ಕಾಶ್ಯಪಗೋತ್ರ"ದಿಂದ ವ್ಯವಹರಿಸತಕ್ಕದ್ದು. ಹೊರತು ಅವರನ್ನು ತ್ಯಾಗಮಾಡಬೇಕಾಗಿಲ್ಲ. ಜ್ಞಾನದಿಂದ ಸಗೋತ್ರಾದಿಗಳಲ್ಲುತ್ಪನ್ನರಾದವರು “ಚಾಂಡಾಲ"ರೇ ಆಗುವರು. “ಸಗೋತ್ರೋಢಾಸುತತ್ತ್ವವ ಚಾಂಡಾಲಾ” ಹೀಗೆ ಮನುಸ್ಮೃತಿಯು ಹೇಳುತ್ತದೆ. ಉಳಿದ ವಿವಾಹನಿಷೇಧಗಳು D “ಪ್ರತ್ಯುದ್ವಾಹವಾಗಬಾರದು. ತನ್ನ ಕನ್ನೆಯನ್ನು ಒಬ್ಬನ ಮಗನಿಗೆ ಕೊಟ್ಟು, ಅವನ ಮಗಳನ್ನು ತನ್ನ ಮಗನಿಗೆ ವಿವಾಹಮಾಡಿಸಿಕೊಂಗೆ ಅದಕ್ಕೆ ಪ್ರತ್ಯುದ್ವಾಹ"ವನ್ನುವರು. ಒಬ್ಬನಿಗೆ ತನ್ನ ಎರಡು ಕನ್ನೆಯರನ್ನು ಕೊಡತಕ್ಕದ್ದಲ್ಲ. ಒಬ್ಬನ ಇಬ್ಬರು ಪುತ್ರರಿಗೆ ತನ್ನ ಎರಡು ಕನ್ನಿಕೆಯರನ್ನು ಕೊಡಬಾರದು. ಇದಕ್ಕೆ ಅಪವಾದವು-ಸಹೋದರರಿಬ್ಬರಿಗೆ ಸಹೋದರಿಯರಿಬ್ಬರನ್ನು ಒಂದು ಸಂವತ್ಸರ ಮೀರಿದ ನಂತರ ಅಥವಾ ಮಹಾನದೀ ಮುಂತಾದ ಅಂತರವಾದರೆ ಕೊಡಬಹುದು. ಕೊಟ್ಟ ಮೊದಲಿನ ಕನ್ನೆಯು ಮೃತಳಾದಲ್ಲಿ ಎರಡನೆಯ ಕನ್ನೆಯನ್ನು ಕೊಡಬಹುದು. ಪ್ರತ್ಯುದ್ವಾಹವನ್ನು ದಾರಿದ್ರಾದಿ ಆಪತ್ತಿನಲ್ಲಿ ಮಾಡಬಹುದು. ಸೋದರರೊಳಗೆ ಸಮಾನಸಂಸ್ಕಾರವು ವರ್ಷಮಧ್ಯದಲ್ಲಿ ನಿಷಿದ್ದವು. ಗೃಹನಿರ್ಮಾಣ ಮತ್ತು ವಿವಾಹಗಳನ್ನು ಒಂದುವರ್ಷ ಮಧ್ಯದಲ್ಲಿ ಮಾಡಬಾರದು. ಗೃಹವು ಸಿದ್ಧವಾಗದಿದ್ದರೆ “ಗೃಹಪ್ರವೇಶಕ್ಕೇನೂ ಈ ನಿಷೇಧವಿಲ್ಲದ್ದರಿಂದ ಗೃಹಪ್ರವೇಶಮಾಡಿ ವಿವಾಹಮಾಡಬೇಕು. ಇಬ್ಬರು ಸೋದರಪುತ್ರರ ಅಥವಾ ಕನ್ಯಾಪುತ್ರರ ಅಥವಾ ಇಬ್ಬರು ಕನ್ನೆಯರ ವಿವಾಹಗಳು ಹೆಚ್ಚಾಗಿ ಆರು ತಿಂಗಳು ಬಿಟ್ಟು ಆಗಬೇಕು. ಮೂರು ತಲೆಮಾರಿನ ದಾಯಾದರೊಳಗೆ ವಿವಾಹವಾಗಿದ್ದಾಗ ಮುಂದೆ ಆರು ತಿಂಗಳೊಳಗೆ ಉಪನಯನ ಮಾಡಬಾರದು. ಆರು ತಿಂಗಳೊಳಗೆ ಮೂರು ಶುಭಕಾರ್ಯಗಳನ್ನು ಮಾಡಬಾರದು. ಇಲ್ಲಿ “ಶುಭಕಾರ್ಯ"ವೆಂದರೆ “ಮುಂಜಿ, ವಿವಾಹಗಳೆಂದೇ ತಿಳಿಯುವದು. ಈ “ಮೂರು ಶುಭಕಾರ್ಯಗಳನ್ನು ಮಾಡಬಾರದೆಂಬ ನಿಷೇಧವು ಗರ್ಭಾಧಾನ, ನಾಮಕರಣಾದಿಗಳಿಗೆ ಸಂಬಂಧಿಸುವದಿಲ್ಲ; ಮತ್ತು ಮೂರು ಶುಭ ಕಾರ್ಯನಿಷೇಧ ಹೇಳಿದ್ದರಿಂದ ಮರರ ನಂತರ (ಮರಾಗಬಾರದೆಂದು) ಗರ್ಭಾಧಾನಾಡಿ ನಾಲ್ಕನೇ ಶುಭಕಾರ್ಯಮಾಡಿ ಅದನ್ನು ಪೂರೈಸತಕ್ಕದ್ದೂ ಅಗತ್ಯವಿಲ್ಲ. ಪರಿಚ್ಛೇದ - ೩ ಪೂರ್ವಾರ್ಧ · 920 “ಅಗ್ನಿಕಾರ್ಯತ್ರಯ"ವನ್ನು ಮಾಡಬಾರದೆಂಬ ವಚನವಿದೆ. ಈ ವಚನದಿಂದ ಅದರ ಏಕವಾಕ್ಯತೆಗೆ ಲಾಘವತ್ವವುಂಟಾಗುತ್ತದೆ. ಅಂದರೆ ಮುಂಜಿ-ವಿವಾಹಗಳು ಅಗ್ನಿಕಾರ್ಯವಿರುವ ಮಂಗಲಗಳು. “ಅಗ್ನಿ ಕಾರ್ಯ”ಎಂದಿರುವದರಿಂದ ಅವು ಮೌಂಜೀ ವಿವಾಹಗಳೇ ಹೊರತು ಅನ್ಯ ಸಂಸ್ಕಾರಾದಿಗಳಲ್ಲವೆಂದು ತೋರುತ್ತದೆ. ಕೆಲವರು ಭಿನ್ನೋದರರ ಮೂರು ಅಗ್ನಿಕಾರ್ಯಗಳು ದೋಷಕರವಲ್ಲವೆನ್ನುವರು. ಕೆಲವರು ‘ನಕುರ್ಯಾತ್ಮಂಗಲತ್ರಯಂ” ಎಂಬುದಕ್ಕೆ ಭಿನ್ನಾರ್ಥತ್ವವನ್ನಂಗೀಕರಿಸಿ ಯಾವ ಶುಭಕಾರ್ಯವೂ ಮೂರು “ಆಗಕೂಡದು ಎನ್ನುವರು. ಪುರುಷನ ವಿವಾಹದ ನಂತರ ಆರುತಿಂಗಳೊಳಗೆ ಕನ್ಯಾವಿವಾಹ ಮಾಡಬಾರದು. ಜೇಷ್ಠ ಮಂಗಲದ ನಂತರ ಲಘುಮಂಗಲವನ್ನಾಚರಿಸಬಾರದು. ಮನೆಯ ಹೊರಾಂಗಣದಲ್ಲಿ ಮಾಡುವ ಕಾರ್ಯಕ್ಕೆ “ದ್ವೇಷಮಂಗಲ"ವೆನ್ನುವರು. ಮನೆಯೊಳಗೆ ಮಾಡುವದು ಲಘುಮಂಗಲ “ಎಂದಾಗುವದು. ಆಯಾಯ ಕಾಲದಲ್ಲಾಗಬೇಕಾದ ಗರ್ಭಾಧಾನಾದಿ ಕಾರ್ಯಗಳಿಗೆ ನಿಷೇಧವಿಲ್ಲ: ಹೀಗೆ ಆಯಾಯ ನಿಮಿತ್ತದಿಂದ ಪ್ರಾಪ್ತವಾಗುವ ನೈಮಿತ್ತಿಕ ಶಾಂತ್ಯಾದಿಗಳಿಗೆ ನಿಷೇಧವಿದೆ. ತತ್ಕಾಲವಲ್ಲದೆ ಮುಂದೆ ಹಾಕಿರುವ ಕಾರ್ಯಕ್ಕೆ ನಿಷೇಧವಿದೆ. ವ್ರತೋದ್ಯಾಪನಾದಿಗಳೂ ವಾಸ್ತು ಪ್ರವೇಶಾದಿಗಳೂ “ಲಘುಮಂಗಲವಾಗಿರುವ ಕಾರಣ ವಿವಾಹಾದಿಗಳ ನಂತರ ಆಗುವದಿಲ್ಲ. ಈ ನಾಲ್ಕು ವಿಧ ನಿಷೇಧಗಳೆಲ್ಲ ತ್ರಿಪುರುಷಾತ್ಮಕ ಕುಲದ ವಿಷಯದಲ್ಲಿ ಮತ್ತು ಆರು ತಿಂಗಳ ಒಳಗೇ ‘ಎಂದು ತಿಳಿಯತಕ್ಕದ್ದು. ಹೀಗೆ ಎರಡು ಮುಂಡನಗಳೂ, ಉಪನಯನದ ನಂತರ ಭೌಲವೊ.ಆಗಬಾರದೆಂದು ಕೆಲವರು ಹೇಳುವರು. ಇವುಗಳಿಗೆ ಅಪವಾದ ಸಹೋದರರ ಸಮಾನಸಂಸ್ಕಾರಗಳನ್ನೂ, ವಿವಾಹಗಳನ್ನೂ ಆಪತ್ತಿನಲ್ಲಿ ಹಾಗೂ ಸಂವತ್ಸರ ಭೇದವಾದಲ್ಲಿ ಮಾಡಬಹುದು; ಅಥವಾ ನಾಲ್ಕುದಿನಗಳ ಅಂತರದಿಂದ ಇಲ್ಲವೆ ಒಂದು ದಿನದ ಅಂತರದಿಂದ ಮಾಡಬಹುದು. ಅತಿಸಂಕಟದಲ್ಲಿ ಒಂದೇದಿನ ಕರ್ತೃಭೇದದಿಂದ ಅಥವಾ ಮಂಟಪ ಭೇದದಿಂದಲೂ ಮಾಡಬಹುದು. ಭಿನ್ನೋದರರ ವಿವಾಹಗಳನ್ನು ಕರ್ತೃಭೇದದಿಂದ ಒಂದೇ ಲಗ್ನದಲ್ಲಿ, ಒಂದೇ ಮನೆಯಲ್ಲಿ ಮಾಡಬಹುದು. ಹೀಗೆ ‘ಪೂರ್ವೋಕ್ತ ನಾಲ್ಕು, ನಿಷೇಧಗಳಲ್ಲಿಯಾದರೂ ವರ್ಷಭೇದವಾದರೆ ದೋಷವಿಲ್ಲ. ಅವಳಿಮಕ್ಕಳಿಗೆ ಒಂದು ಕಾಲದಲ್ಲಿ ಅಥವಾ ಒಂದು ಮಂಟಪದಲ್ಲಿ ಸಮಾನ ಸಂಸ್ಕಾರಮಾಡಿದಲ್ಲಿ ದೋಷವಿಲ್ಲ. ಹೀಗೆ ಮಾತೃಭೇದವಾದರೂ ಆರು ತಿಂಗಳೊಳಗೆ ಸಮಾನಸಂಸ್ಕಾರ ಮಾಡಬಹುದು. ಮಾತೃಭೇದವಾದಲ್ಲಿ ಒಬ್ಬನಿಗೇ ಜನಿಸಿದ ಎರಡು ಕನ್ನಿಕೆಯರ ವಿವಾಹವನ್ನು ಒಂದೇ ದಿನ ಅಥವಾ ವೇದಿಕೆಯನ್ನು ಬೇರೆ ಮಾಡಿ ವಿವಾಹ ಮಾಡಿದಲ್ಲಿ ದೋಷವಿಲ್ಲವೆಂದು ಕೆಲವರು ಹೇಳುವರು. ಮಂಡನ-ಮುಂಡನ ನಿರ್ಣಯ ಮೂರುತಲೆಮಾರಿನ ಕುಲದಲ್ಲಿ ಮಂಗಲಕಾರ್ಯವಾದ ನಂತರ ಆರು ತಿಂಗಳೊಳಗೆ “ಮುಂಡನ” ಕಾರ್ಯವನ್ನು ಮಾಡಬಾರದು. ಈ ಎಲ್ಲ ಕಡೆಗಳಲ್ಲಿ ಪುರುಷತ್ರಯ ಗಣನೆಯ ರೀತಿಯನ್ನು “ಪ್ರತಿಕೂಲ” ವಿಚಾರದಲ್ಲಿ ಸ್ಪಷ್ಟಗೊಳಿಸಲಾಗುವದು. “ಮುಂಡನ ಕರ್ಮ” ಅಂದರೆ ಚೌಲ, ಸರ್ವಸಂಸ್ಕಾರ ಮೊದಲಾದವುಗಳು, ಆಧಾನ ಮೊದಲಾದವುಗಳು, ಮತ್ತು ಅಭ್ಯುದಯಕ್ಕಾಗಿ ೨೭೨ ಧರ್ಮಸಿಂಧು ಮಾಡುವ ಸರ್ವಪ್ರಾಯಶ್ಚಿತ್ತಾದಿಗಳು ಮತ್ತು ಕ್ಷೌರವನ್ನು ವಿಧಿಸಿರುವ ತೀರ್ಥಯಾತ್ರೆಗಳು ಇವುಗಳೆಲ್ಲ “ಮುಂಡನ “ದಲ್ಲಿಯೇ ಬರುವವು. ಉಪನಯನವು ಕಾತ್ಯಾಯನ ಮತದಂತೆ ಮಂಗಲರೂಪವಾಗಿರುವದರಿಂದ ವಿವಾಹಾದಿಗಳಾದ ನಂತರ ಮಾಡಲಡ್ಡಿಯಿಲ್ಲ. ಉಳಿದವರ ಮತದಂತೆ ಉಪನಯನವೂ ಮುಂಡನರೂಪವಾಗುವದರಿಂದ ಮಾಡತಕ್ಕದ್ದಲ್ಲ. ವಿವಾಹಾನಂತರ ಕೆಲ ಮುಂಡನಗಳನ್ನು ಮಾಡಲೇಬೇಕಾಗಿ ಬರುವದುಂಟು. ಹೇಗೆಂದರೆ ತಂದೆ-ತಾಯಿಗಳ ಅಂತ್ಯಕ್ರಿಯಾದಿಗಳಿಂದ ಪ್ರಾಪ್ತವಾಗುವ, ಆಕಸ್ಮಿಕ ಪ್ರಾಪ್ತವಾದ ಪ್ರಾಯಶ್ಚಿತ್ತದಲ್ಲಿ ಮಾಡುವ, ಮರಣ ಸಮೀಪವಾದಾಗ ಮಾಡತಕ್ಕ ಸರ್ವ ಪ್ರಾಯಶ್ಚಿತ್ತಕ್ಕೆ ಸಂಬದ್ಧವಾಗಿ ಮಾಡುವ “ಮುಂಡನವು ಹಿಂದೆ ಹೇಳಿದ ನಿಷೇಧದಲ್ಲಿ ಬರುವದಿಲ್ಲ. ಅವಶ್ಯ ಕರ್ತವ್ಯಗಳೇ ಆಗಿವೆ. ದರ್ಶ, ಪೂರ್ಣಮಾಸ, ಚಾತುರ್ಮಾಸ್ಯಾದಿ ಮುಂಡನದಲ್ಲಿಯೂ ದೋಷವಿಲ್ಲ. “ಮುಂಡನಂ ಚೌಲಮಿತ್ಯುಂ ವ್ರತೋಾಹೌತು ಮಂಗಲಂ” ಎಂಬ ವಚನದಿಂದ ಮಂಡನ-ಮುಂಡನಗಳ ಪರಿಗಣನೆಯಿಂದ ಆಧಾನಾದಿಗಳ ಮುಂಡನಕ್ಕಡ್ಡಿಯಿಲ್ಲ ಎಂದು ಹೇಳಲಿಕ್ಕಾಗದು. ಈ ವಾಕ್ಯವು ಒಂದು ಉದಾಹರಣಾರ್ಥವಾಗಿ ಹೇಳಿದ್ದು. ಇಲ್ಲವಾದರೆ ಆ ನಿಷೇಧದಲ್ಲಿ “ವ್ರತೋದ್ವಾಹಾನ್ನಚೌಲಕಂ” ಎಂದು ಚೌಲವನ್ನು ಮಾತ್ರ ನಿರ್ದೇಶಿಸಿ ಹೇಳಬೇಕಿತ್ತು. ಹಾಗೆ ಹೇಳದೆ ‘ಮಂಡನಾನ್ನತು ಮುಂಡನಂ’ ಎಂದು ಹೇಳಿದೆ. ಆದ್ದರಿಂದ ಈ ಸಾಮಾನ್ಯ ವಚನವು ನಿರರ್ಥಕವೇ ಆದೀತು. ಆದ್ದರಿಂದ ಗರ್ಭಾಧಾನಾದಿ ಲಘುಮಂಗಲದ ನಂತರ ವಿವಾಹಾದಿ ಜೇಷ್ಠಮಂಗಲವು ಬಾಧಕವಾಗುವಂತೆ ಆಧಾನಾದಿಗಳ ‘ಮಂಡನ’ವೂ ವರ್ಜವಾಗುವದು ಎಂದು ತೋರುತ್ತದೆ. ಹೀಗೆಲ್ಲ ಆದರೆ ಕುಲದಲ್ಲಿ ಬಹು ಕರ್ಮಗಳಿಗೆ ಅಡ್ಡಿಯುಂಟಾಗಬಹುದಲ್ಲ! ಎಂದರೆ ಉಪನಯನ, ವಿವಾಹ, ಚೌಲ ಇವುಗಳ ನಂತರ ಮಾಡುವ ಮಂಗಲಕಾರ್ಯ ಇವುಗಳನ್ನು ಮಾಡಲು ಮಂಗಲಕಾರ್ಯದ ನಂತರ ಮಾಡುವ ಪಿಂಡದಾನಾದಿಗಳಿಗೆ ಮಾಸ ಇತ್ಯಾದಿ ಅಲ್ಪಕಾಲ ಪ್ರತಿಬಂಧಕವನ್ನು ಹೇಳಿರುವಂತೆ ಮತ್ತು ತಂದೆ ತಾಯಿಗಳಿಂದ ಹೊರತಾದವರ ಮರಣದಲ್ಲಿ ಸ್ವಲ್ಪಕಾಲ ಪ್ರತಿಕೂಲವನ್ನು ನಿರ್ಣಯಿಸುವಂತೆಯೂ ಈ ಲಘುಮಂಗಲದ ನಂತರ ಮಾಸಾದಿ (ಇಂತಿಷ್ಟು ತಿಂಗಳು ಇತ್ಯಾದಿ) ಸ್ವಲ್ಪ ಕಾಲ ಮುಂಡನ ನಿಷೇಧವನ್ನು ಯುಕ್ತಿಬಲದಿಂದ ಆಶ್ರಯಿಸತಕ್ಕದ್ದು ಯುಕ್ತವೆಂದು ತೋರುತ್ತದೆ. ಈ ವಿಷಯದಲ್ಲಿ ಪ್ರಾಚೀನನಿಬಂಧಗಳಲ್ಲಿ ವಿಶೇಷ ಹೇಳಿದ್ದು ಕಂಡುಬರುವದಿಲ್ಲ. ಆದಾಗ್ಯೂ ಉದ್ದಟತನದಿಂದ ನಾನು ಹೇಳಿದ ವಿಶೇಷವು ಯೋಗ್ಯವಾಗಿ ತೋರಿದರೆ ಹಾಗೆ ಮಾಡಬಹುದು. ಹೀಗೆ ಮಂಡನ ಮುಂಡನ ನಿರ್ಣಯವು ಪ್ರತಿಕೂಲ ವಿಚಾರ ವಿವಾಹ-ನಿಶ್ಚಯವಾದ ಮೇಲೆ ವರನ ಅಥವಾ ಕನ್ನೆಯ ಸಗೋತ್ರದ್ದಾದ ತ್ರಿಪುರುಷಾತ್ಮಕ (ಮರು ತಲೆಮಾರಿನ ಒಳಗಿನ) ಕುಲದಲ್ಲಿ ಯಾವನೊಬ್ಬನು ಮರಣಹೊಂದಿದರೆ ಅದಕ್ಕೆ ‘ಪ್ರತಿಕೂಲ” (ವ್ಯಾವಹಾರಿಕವಾಗಿ ಅಮಂಗಲ ಸೂಚಕ ಅಪಶಕುನ) ಎನ್ನುವರು. ವಿವಾಹ ನಿಶ್ಚಯವು ವೈಲಕ ಮತ್ತು ಲೌಕಿಕ ಎಂಬುದಾಗಿ ಎರಡು ದಿನವು. “ವಾಗ್ದಾನ ಎಂಬ ವಿಧಿಪೂರ್ವಕವಾದ ನಿಶ್ಚಯದ ‘ವೈದಿಕ’ವಾಗುವದು. ಇದು ಮುಖ್ಯವಾದದ್ದು. ಇನ್ನು ಲಗ್ನ, ತಿಥ್ಯಾದಿಗಳನ್ನು ಶ್ಚಯಿಸುವರು. ವಧೂ-ವರರಲ್ಲಿ ನಿಶ್ಚಯ ಸಂಕೇತವಾಗಿ ವಸ್ತುವನ್ನು ಕೊಡುವದು, ವಾಣಿಶ್ಚಯ, 20 ಪರಿಚ್ಛೇದ ೩ ಪೂರ್ವಾರ್ಧ 92& ಅಡಿಕ ಮೊದಲಾದ ವಸ್ತುಗಳನ್ನು ಕೊಡುವದು. ಇವೆಲ್ಲ “ಲೌಕಿಕ"ನಿಶ್ಚಯದಲ್ಲಿ ಬರುವದು. “ಸಗೋತ್ರ ತ್ರಿಪುರುಷ"ಎಂದು ಹೇಳಿದ್ದರಿಂದ ಮಾತಾಮಹಾದಿ ಕುಲಗಳು ಇದಕ್ಕೆ ಸಂಬಂಧಿಸುವದಿಲ್ಲ. ಈ “ತ್ರಿಪುರುಷಿಯಲ್ಲಿ ಪೂರ್ವತ್ರಿಪುರುಷಿ, ಪರಪುರುಷಿ ಎಂಬುದಾಗಿ ಎರಡು ವಿಧ. ಹೇಗೆಂದರೆ ವರ ಹಾಗೂ ವರನ ಪೂರ್ವ ಪತ್ನಿಯಿದ್ದರೆ ಅವಳು, ವರನ ಮಾತಾ- ಪಿತೃಗಳು, ವರನ ಪಿತಾಮಹ, ಪಿತಾಮಹಿ, ಲಗ್ನವಾಗದಿರುವ ತಂದೆಯ-ಭಗಿನಿ ಇವರು ತ್ರಿಪುರುಷಿಯಲ್ಲಿ ಬರುವರು. ವರ, ವರನ ಅಣ್ಣ, ಅಣ್ಣನ ಪತ್ನಿ ಮತ್ತು ಪುತ್ರರು ಮತ್ತು ವಿವಾಹಿತಳಲ್ಲದ ಕನ್ಯಾ, ವಿವಾಹಿತಳಲ್ಲದ ವರನ ತಂಗಿ, ವರನ ಸೊಸೆ ಹಾಗೂ ಪುತ್ರ, ಮತ್ತು ವಿವಾಹಿತರಲ್ಲದ ಕನ್ಯಾ ಇವರು ಪರತ್ರಿಪುರುಷಿಯಲ್ಲಿ ಬರುವರು. ಇನ್ನು ಸಂತಾನಭೇದದಲ್ಲಿ ತಂದೆಯ ಅಣ್ಣ, ತಮ್ಮಂದಿರ ಪತ್ನಿ-ಪುತ್ರರು, ಅವಿವಾಹಿತ ಕನ್ಯಾ ಇವರು ತ್ರಿಪುರುಷಿಯಲ್ಲಿ ಎಣಿಸಲ್ಪಡುವರು. ಈ ಸಗೋತ್ರ ತ್ರಿವುರುಷಿಯ ಗಣನೆಯಲ್ಲಿ ಬರುವ ಯಾವನಾದರೊಬ್ಬನ ಮರಣವಾದರೆ “ಪ್ರತಿಕೂಲ’ವೆಂಬ ದೋಷವಾಗುವದೆಂದು ತಾತ್ಪರ್ಯವು ಇಲ್ಲಿ ಅಣ್ಣ, ತಮ್ಮ, ಪುತ್ರ-ಪೌತ್ರಾದಿಗಳು ಅನುಪನೀತರಾದರೂ ಮೂರುವರ್ಷ ಮಿಕ್ಕಿದವರಾಗಿದ್ದರೆ ಇದರಲ್ಲಿ ಗ್ರಾಹ್ಯರು. ಅವಿವಾಹಿತ ಭಗಿನಿ ಮೊದಲಾದವರಿಗೂ ಇದೇ ನ್ಯಾಯವು ಎಂದು ತೋರುತ್ತದೆ. ವಧೂಕುಲದಲ್ಲಿ ಯಾದರೂ “ತ್ರಿಪುರುಷಿಯ ಕ್ರಮವನ್ನು ಹೀಗೆಯೇ ತಿಳಿಯಬೇಕು. ಮಂಡನ ಮುಂಡನ ನಿರ್ಣಯಕ್ಕಾದರೂ “ತ್ರಿಪುರುಷಸಪಿಂಡ” ರ ಗಣನೆಯು ಇದರಂತೆಯೇ, ಇದರಲ್ಲಿಯೂ ವಿಶೇಷವಿದೆ. ತಂದೆ, ತಾಯಿ, ಪಿತಾಮಹ, ಪಿತಾಮಹಿ, ತಂದೆಯ ಭ್ರಾತೃಗಳು, ತನ್ನ ಮೊದಲಿನ ಪತ್ನಿ, ಆ ಪತ್ನಿಯ ಪುತ್ರ, ಅಣ್ಣ-ತಮ್ಮಂದಿರು ಮತ್ತು ಅವಿವಾಹಿತ ಭಗಿನಿಯರು ಇವರ ಮರಣದಲ್ಲಿ ವಿಶೇಷ ಪ್ರತಿಕೂಲದೋಷವೆಂದೆಣಿಸಿ ವಿವಾಹವನ್ನು ಮಾಡಲೇಕೂಡದು. ಇವರ ಹೊರತಾದ ಅನ್ಯತ್ರಿಪುರುಷ ಸಪಿಂಡರ ಮರಣದಲ್ಲಿ ಶಾಂತ್ಯಾದಿಗಳಿಂದ ದೋಷನಿವಾರಣ ಮಾಡಿಕೊಂಡು ವಿವಾಹಮಾಡತಕ್ಕದ್ದು. ಆಪತ್ತಿನಲ್ಲಿ ಪಿತ್ರಾದಿಮರಣದಲ್ಲಾದರೂ ಕಾಲಪ್ರತೀಕ್ಷೆ (ವರ್ಷ,ಆರುತಿಂಗಳು ಇತ್ಯಾದಿ) ಹಾಗೂ ಶಾಂತ್ಯಾದಿಗಳಿಂದ ದೋಷಪರಿಹಾರವಾದ ನಂತರ ವಿವಾಹಮಾಡತಕ್ಕದ್ದು, ಮತ್ತು ಅದರಲ್ಲೂ ಹೀಗೆ ವ್ಯವಸ್ಥೆ ಅಂದರೆ ಮಾತಾಪಿತೃಗಳಿಬ್ಬರೂ ಮರಣಹೊಂದಿದರೆ ಕಾಲಪ್ರತೀಕ್ಷೆ ಹಾಗೂ ಶಾಂತ್ಯಾದಿಗಳಿಂದ ದೋಷಪರಿಹಾರವಾಗುವದಿಲ್ಲ. ಆದ್ದರಿಂದ ವಿವಾಹವನ್ನೇ ಬಿಡಬೇಕಾಗುವದು. ಮಾತಾ-ಪಿತೃಗಳಲ್ಲೊಬ್ಬರ ಮರಣವಾದರೆ ಶಾಂತ್ಯಾದಿ ವಿವಾಹವಾಗತಕ್ಕದ್ದು. ಈ ವಿಷಯದಲ್ಲಿ ಕಾಲನಿರೀಕ್ಷೆ ಅಂದರೆ “ತಂದೆಯ ಆಶೌಚವು ಒಂದು ವರ್ಷಪರ್ಯಂತವಿರುವದು. ತಾಯಿಯದು ಆರು ತಿಂಗಳಿರುವದು. ಪತ್ನಿಯದು ಮೂರು ತಿಂಗಳು. ಅಣ್ಣ-ತಮ್ಮಂದಿರ ಮತ್ತು ಪುತ್ರರದ್ದು ಒಂದುವರೆ ತಿಂಗಳಿರುವದು. ಅನ್ಯ ಸಪಿಂಡರ ಆಶೌಚವು ಒಂದು ತಿಂಗಳು, ಹೀಗೆ ಆಯಾಯ ಅವಧಿ ಕಳೆದಮೇಲೆ ಶಾಂತಿಮಾಡಿ ಲಗ್ನಮಾಡತಕ್ಕದ್ದು. ಹೀಗೆ ವಚನಗಳಿವೆ. “ಪ್ರತಿಕೂಲವುಂಟಾದಲ್ಲಿ ಮೂರು ಋತುಪರ್ಯಂತ ಲಗ್ನವಾಗಕೂಡದು. ಸಪಿಂಡರಿಂದುಂಟಾದ ಪ್ರತಿಕೂಲದಲ್ಲಿ ಒಂದು ತಿಂಗಳು ಬಿಡತಕ್ಕದ್ದು, ಇತ್ಯಾದಿ ವಚನಗಳಿಂದ ವ್ಯವಸ್ಥೆ ಹೇಳಿದೆ. ಈ ಅಶೌಚಕಾಲವು ಪ್ರತಿಕೂಲದಿಂದುಟಾಗುವ ವಿವಾಹ ಪ್ರತಿಬಂಧಕವಾದ ಕಾಲದ ಅವಧಿಯಾಗಿರುವದರಿಂದ, ಅಷ್ಟು ಕಾಲ ನಿರೀಕ್ಷೆಮಾಡಿ ನಂತರ ಅಂದರೆ ತಂದೆಯ ದಿಗಳಿಂದ ೨೭೪ ಧರ್ಮಸಿಂಧು ಮರಣದಲ್ಲಿ ವರ್ಷಾನಂತರ ಆಪತ್ತಿನಲ್ಲಿ ವಿನಾಯಕ ಶಾಂತಿ ಮಾಡಿ ಮತ್ತು ಶ್ರೀ ಪೂಜನಾದಿ ಶಾಂತಿ ಮಾಡಿ ವಿವಾಹವಾಗತಕ್ಕದ್ದು. ಅತಿಸಂಕಟದಲ್ಲಿ ಆರು ತಿಂಗಳ ನಂತರ ಆ ಎರಡೂ ಶಾಂತಿಗಳನ್ನು ಮಾಡಿ ವಿವಾಹಮಾಡತಕ್ಕದ್ದು. ಅತ್ಯಂತ ಬಿಕ್ಕಟ್ಟಿನಲ್ಲಿ ಒಂದು ತಿಂಗಳ ನಂತರ ಎರಡೂ ಶಾಂತಿಗಳನ್ನು ಮಾಡಿ ವಿವಾಹವಾಗತಕ್ಕದ್ದು. ಹೀಗೆ ಆಪತ್ತಿನ ತಾರತಮ್ಯದಿಂದ ಮೂರು ಪಕ್ಷಗಳಾಗುತ್ತವೆ. ತಾಯಿಯ ಮರಣದಲ್ಲಿ ಆರು ತಿಂಗಳಾದಮೇಲೆ ವಿನಾಯಕಶಾಂತಿ ಮಾಡಿ ವಿವಾಹವಾಗತಕ್ಕದ್ದು. ಅತಿಸಂಕಟದಲ್ಲಿ ತಿಂಗಳ ನಂತರ ಎರಡೂ ಶಾಂತಿಗಳನ್ನು ಮಾಡಿ ವಿವಾಹವಾಗತಕ್ಕದ್ದು. ಇನ್ನು “ತಂದೆ-ತಾಯಿಗಳು ಮೃತರಾದರೆ ಸಾಮಾನ್ಯವಾಗಿ ಸಂವತ್ಸರಪರ್ಯಂತ ಅಶುಚಿತ್ವವಿರುತ್ತದೆ. ದೈವ ಅಥವಾ “ಪಿ"ಯಾವದನ್ನೂ ಮಾಡಬಾರದು. “ಹೀಗೆ, ತಂದೆ- ತಾಯಿಗಳ ಮರಣದಲ್ಲಿ ಸರ್ವ-ಶುಭಕರ್ಮ ನಿಷೇಧವಿದೆ. ಆದರೆ ಅದು “ನಿಶ್ಚಯಕ್ಕಿಂತ ಮೊದಲಾದರೆ ಅಥವಾ ಆಪತ್ತಿಲ್ಲದಿದ್ದರೆ” ಎಂದು ಆ ವಚನಕ್ಕೆ ವ್ಯವಸ್ಥೆ ಮಾಡಿಕೊಳ್ಳುವದು. ಪತ್ನಿಯ ಮರಣವಾದರೆ ಮೂರು ತಿಂಗಳ ನಂತರದಲ್ಲಿ ಅಥವಾ ತಿಂಗಳ ನಂತರ ಶ್ರೀ ಪೂಜನಾದಿ ಶಾಂತಿಮಾಡಿಕೊಳ್ಳುವದು. ಅಣ್ಣ ತಮ್ಮಂದಿರ ಮರಣದಲ್ಲಿ ಒಂದೂವರೆ ತಿಂಗಳ ನಂತರ ಅಥವಾ ತಿಂಗಳ ನಂತರ ವಿನಾಯಕ ಶಾಂತಿಮಾಡಿಕೊಳ್ಳುವದು. ಪುತ್ರ ಮರಣದಲ್ಲಿ ಒಂದುವರೆ ಅಥವಾ ಒಂದು ತಿಂಗಳ ನಂತರ ಪ್ರತೀಕ್ಷೆಮಾಡಿ ಶ್ರೀಪೂಜನಾದಿ ಶಾಂತಿಯಾಗತಕ್ಕದ್ದು. ಪಿತೃವ್ವನ ಮರಣದಲ್ಲಿ ತಿಂಗಳ ನಂತರ ಶಾಂತಿಯು, ಪಿತಾಮಹೀ ಅಥವಾ ಅವಿವಾಹಿತ ಭಗಿನಿ ಮರಣದಲ್ಲಿ ಮಾಸಾಂತ್ಯದಲ್ಲಿ ಶಾಂತಿಯು. ಇವರ ಹೊರತಾದ ಅನ್ಯ ತ್ರಿಪುರುಷ ಸಪಿಂಡರ ಮರಣದಲ್ಲಿ ಮಾಸಾಂತ್ಯದಲ್ಲಿ ಶ್ರೀ ಪೂಜನಾದಿಶಾಂತಿ ನಂತರ ವಿವಾಹವು. ಇತ್ಯಾದಿ ಅತ್ಯಂತ ಗುಣವತಿಯಾದ ತಾಯಿಯು ಮರಣಪಟ್ಟಾಗ, ಆ ದುಃ ಬವು ಆರು ತಿಂಗಳೊಳಗೆ ನಿವಾರಣೆಯಾಗದಿದ್ದಾಗ ಒಂದುವರ್ಷ ನಿರೀಕ್ಷೆ ಮಾಡತಕ್ಕದ್ದು. ಹೀಗೆ ಗುಣವತಿಯಾದ ಪತ್ನಿಯ ಮರಣದಲ್ಲಿಯಾದರೂ ಆರು ತಿಂಗಳು ನಿರೀಕ್ಷೆ ಮಾಡತಕ್ಕದ್ದು. “ಜ್ಯೋತಿ ಪ್ರಕಾಶ"ದಲ್ಲಿ ಅತಿಸಂಕಟ ವಶದಿಂದ ಮಾತ್ರಾದಿಗಳ ಮರಣದಲ್ಲಿ ಒಂದು ತಿಂಗಳಿಗಿಂತ ಹೆಚ್ಚು ನಿರೀಕ್ಷೆ ಮಾಡಲು ಆಗದಿದ್ದಾಗ ತಿಂಗಳೊಳಗಾದರೂ ದಶಾಹಾನಂತರ ಸ್ವಲ್ಪಕಾಲ ನೀರೀಕ್ಷೆ ಮಾಡಿ ಹೇಳಿದ ವ್ಯವಸ್ಥೆಯಿಂದ ವಿನಾಯಕಶಾಂತಿ ಹಾಗೂ ಶ್ರೀ ಪೂಜನಾದಿ ಶಾಂತಿಯನ್ನೂ ಮಾಡಿ ಗೋದಾನ ಕೊಟ್ಟು ಪುನಃ ವಾಗ್ದಾನಾದಿಗಳನ್ನಾಚರಿಸತಕ್ಕದ್ದೆಂದು ಹೇಳಿದೆ. ಈ ಹೇಳಿದ ಎಲ್ಲ ಅಪವಾದವನ್ನೂ ಆಪತ್ತಿನಲ್ಲಿ ತಾರತಮ್ಯನೋಡಿ ವಿನಿಯೋಗಿಸಬೇಕು. ಅಲ್ಪ ಆಪತ್ತಿನಲ್ಲಿ ಮಹಾಸಂಕಟಕಾಲದ ವಿಧಿಯನ್ನು ಹೇಳಿದರೆ ಹೇಳಿದವನಿಗೂ, ಮಾಡಿದವನಿಗೂ ದೋಷವು. ವಿವಾಹನಿಶ್ಚಯದ ನಂತರ, ದುರ್ಭಿಕ್ಷ್ಯ, ರಾಷ್ಟ್ರಭಂಗ ಮೊದಲಾದ ಭಯಪ್ರಾಪ್ತವಾದರೆ ಅಥವಾ ತಾಯಿ ತಂದೆಗಳ ಮರಣಶಂಕೆಯುಂಟಾದರೆ ಅದು “ಪ್ರತಿಕೂಲವೆಂದೆನಿಸುವದಿಲ್ಲ. ದೀರ್ಘರೋಗಿಗಳು, ದೂರದೇಶದಲ್ಲಿದ್ದ ವಿರಕ್ತರು ಇವರ ವಿಷಯದಲ್ಲಿಯೂ, ಕನ್ನೆಯು ಪ್ರೌಢಾವಸ್ಥೆಗೆ ಬಂದಿರುವಾಗಲೂ ಈ ಪ್ರತಿಕೂಲ ದೋಷವಿಲ್ಲ. ಹೀಗೆ ಅಪವಾದವು. ಶ್ರೀ ಪೂಜನಾದಿ ಶಾಂತಿ “ಶ್ರೀಜಾತ” ಎಂಬ ಮಂತ್ರದಿಂದ ಶ್ರೀಯನ್ನೂ, ‘ಇದಂ ವಿಷ್ಣು’ ಎಂಬುದರಿಂದ ವಿಷ್ಯವನ್ನೂ ‘ರ್ಗೌಮಾಯ’ ಎಂದು ಗೌರಿಯನ್ನೂ, ‘ತಂಬಕಂ’ ಎಂದು ರುದ್ರನನ್ನೂ ‘ಪರಮತ.’ ಇದರಿಂದ ಮೃತ್ಯುವನ್ನೂ ಪೂಜಿಸಿ ಅಷ್ಟೋತ್ತರಶತತಿಲಾಚಾಹುತಿಗಳಿಂದ ಪರಿಚ್ಛೇದ - ೩ ಪೂರ್ವಾರ್ಧ 9299 ಹೋಮಿಸುವದು. “ಓಂಭೂಸ್ವಾಹಾಮೃತ್ಯುರ್ನಶ್ಯತಾಂ, ಸ್ನುಷಾಯ್ಕ ಸುಖಂವರ್ಧತಾಂ ಸ್ವಾಹಾ” ಎಂದು ಕೊನಗೆ ಹೋಮಿಸಿ ದಕ್ಷಿಣಾರ್ಥವಾಗಿ ಎರಡು ಗೋದಾನಮಾಡತಕ್ಕದ್ದು ಎಂದು ಕೌಸ್ತುಭದಲ್ಲಿ ಹೇಳಿದೆ. ಅಂತ್ಯ ಕರ್ಮ ಮುಗಿಯದಿದ್ದಾಗ ಪ್ರತಿಬಂಧ ವಿಚಾರ “ಪ್ರೇತಕರ್ಮವನ್ನು ಮುಗಿಸದೆ ಅಭ್ಯುದಯ (ನಾಂದ್ಯಾದಿ) ಕರ್ಮಗಳನ್ನಾಚರಿಸಬಾರದು. ಚತುರ್ಥಪುರುಷಪರ್ಯಂತ ಈ ನಿರ್ಬಂಧವಿದೆ. ಐದನೇ ತಲೆಯಲ್ಲಿ ಅಡ್ಡಿಯಿಲ್ಲ " ಹೀಗೆಂದು ವಚನವಿದೆ. ಇಲ್ಲಿ “ಪ್ರೇತಕರ್ಮ” ಅಂದರೆ ಸಪಿಂಡೀಕರಣದ ಒಳಗಿನ ಕರ್ಮಗಳು ಮತ್ತು ಸಪಿಂಡೀಕರಣ ಹಾಗೂ ನಂತರದ ಪಾರ್ವಣಮಾಸಿಕಗಳು, ಇವೆಲ್ಲವುಗಳನ್ನೂ “ಪ್ರೇತಕರ್ಮ"ವೆಂದೇ ತಿಳಿಯತಕ್ಕದ್ದು, “ಸಪಿಂಡೀಕರಣದ ಒಳಗೆ ಏಕೋದ್ದಿಷ್ಟವಿಧಿಯಿಂದ ಮಾಸಿಕಗಳು ಅಪಕರ್ಷಣ ಮಾಡಲ್ಪಡುತ್ತವೆ. ಆದರೂ ನಾಂದಿಯ ಸಂದರ್ಭದಲ್ಲಿ ಮುಂದೆ ಪಾರ್ವಣವಿಧಿಯಿಂದ ಮಾಡತಕ್ಕ ಅನುಮಾಸಿಕಗಳನ್ನೂ ಅಪಕರ್ಷಣ ಮಾಡಿಕೊಳ್ಳಬೇಕು. ಅವುಗಳನ್ನು ನಾಂದಿಯಾದ ಮೇಲೆ ಮಾಡಲು ನಿಷೇಧವಿದೆ.” ಹೀಗೆ ವಚನವಿದೆ. “ಅಭ್ಯುದಯ” ಅಂದರೆ ಯಾವದೇ ‘ನಾಂದೀಪ್ರಯುಕ್ತವಾದ ಕರ್ಮ’ ಎಂದರ್ಥ. (ಮಂಗಲಕಾರ್ಯ) ಕೆಲವರು ಈ ನಿಷೇಧವು ವಿವಾಹಕ್ಕೆ ಮಾತ್ರ ಸಂಬಂಧಪಟ್ಟದ್ದು ಎನ್ನುವರು. ಚತುರ್ಥಪುರುಷಪರ್ಯಂತ” ಅಂದರೆ ನಾಂದೀಶ್ರಾದ್ಧ ಕರ್ತನನ್ನಾರಂಭಿಸಿ ಆತನ ಹಿಂದೆ ನಾಲ್ಕು, ಮುಂದೆ ನಾಲ್ಕು ಪುರುಷಪರ್ಯಂತ ಎಂದು ತಿಳಿಯಬೇಕು. ಸಂತಾನಭೇದವಿದ್ದಲ್ಲಿ ಆ ನಾಲ್ಕು ಪುರುಷರು. ಇಷ್ಟು ಸಗೋತ್ರಪುರುಷರು ಅದರಲ್ಲಿ ಸಮಾವೇಶಹೊಂದುವರು. ನಾಂದೀಶ್ರಾದ್ಧಕರ್ತನ ಪಿತೃ, ಪಿತಾಮಹ, ಪ್ರಪಿತಾಮಹರು ಮತ್ತು ಅವರ ಪತ್ನಿಯರು; ಕರ್ತೃವಿನ ಪತ್ನಿ, ಪುತ್ರ, ಪೌತ್ರ, ಪ್ರಪೌತ್ರರು ಮತ್ತು ಅವರ ಪತ್ನಿಯರು; ಚಿಗಪ್ಪ, ದೊಡ್ಡಪ್ಪ ಇವರ ಪುತ್ರರು, ಪೌತ್ರರು ಮತ್ತು ಅವರ ಪತ್ನಿಯರು; ಹೀಗೆ ಇಷ್ಟುಜನರೊಳಗಿನವರಾರಾದರೂ ಮೃತಿಹೊಂದಿ ಅವರ ಅನುಮಾಸಿಕಾಂತ ಕಾರ್ಯಗಳು ಮುಗಿಯದಿದ್ದಾಗ ಅಪಕರ್ಷಣ ಮಾಡದ ನಾಂದೀಶ್ರಾದ್ಧವನ್ನು ಮಾಡಬಾರದೆಂದಭಿಪ್ರಾಯ. ಇಲ್ಲಿ ಚತುರ್ಥಪುರುಷ ಗಣನೆಯಲ್ಲಿ “ಮುಖ್ಯನಾಂದೀಶ್ರಾದ್ದ ಕರ್ತನೇ ಹೊರತು ಮಾತುಲ ಮೊದಲಾದ ಗೌಣಕರ್ತನಲ್ಲ’ ಎಂದು ತಿಳಿಯತಕ್ಕದ್ದು, ಮೃತಪಿತೃಕನ ಉಪನಯನಾದಿಗಳಲ್ಲಿ ಆ ಸಂಸ್ಕಾರ್ಯವನ್ನಾರಂಭಿಸಿಯೇ ಚತುಃಪುರುಷಿ’ಯ ಗಣನೆಯು, ಮಾತಾಮಹಾದಿಗಳು ಅನ್ಯಗೋತ್ರದವರಾದರೂ ನಾಂದೀಶ್ರಾದ್ಧದಲ್ಲಿ ಸಮಾವಿಷ್ಟರಾಗುವದರಿಂದ ಅವರ ಪ್ರೇತಕರ್ಮದ ಅಭಾವದಲ್ಲಿ ಮಂಗಲಕಾರ್ಯವಾಗತಕ್ಕದ್ದಲ್ಲ. ಮಾತಾಮಹೀ ಮೊದಲಾದವರಿಗೆ ಸ್ವತಂತ್ರವಾಗಿ ದೇವತಾತ್ವ ಬರುವದಿಲ್ಲವಾದ ಕಾರಣ (ನಾಂದಿಯಲ್ಲಿ ಸಪಕ ಮಾತಾಮಹಾದಿಗಳೇ ದೇವತೆಗಳಾಗಿದ್ದು ಆ ಮಾತಾಮಹಾದಿಗಳಲ್ಲದವರ ಅಂತರ್ಭೂತತ್ವವಾಗಿ ಅವರು ಸ್ವತಂತ್ರರಾಗಿರುವದಿಲ್ಲ. ಅವರ ದಶಾಹಾಂತ್ಯ ಕರ್ಮವಾಗದಿದ್ದರೂ ಮಂಗಲಕಾರ್ಯಕ್ಕೆ ಪ್ರತಿಬಂಧವಿಲ್ಲ. ಹೀಗೆ ಅಂತ್ಯಕರ್ಮಾಭಾವನಿಮಿತ್ತಕ ಮಂಗಲ ಪ್ರತಿಬಂಧ ನಿರ್ಣಯವು. ಚತುರ್ಥೀ ಕರ್ಮಮಧ್ಯದಲ್ಲಿ ದರ್ಶಾದಿ (ಅಮಾವಾಸ್ಯೆ) ಪ್ರಾಪ್ತವಾದರೆ ಉಪನಯನ ವಿವಾಹಾದಿಗಳ ನಾಂದೀಶ್ರಾದ್ಧ ಪ್ರಾಪ್ತವಾದ ನಂತರ ಮಂಡಪೋದ್ಘಾಸನದ 1 ೨೭೬ ಧರ್ಮಸಿಂಧು ಒಳಗೆ ಅಮಾವಾಸ್ಯೆಯು ಬಾರದಂತೆ ಕಾರ್ಯಮಾಡತಕ್ಕದ್ದು. ದರ್ಶದ ಹೊರತಾದ ಮಾತಾಪಿತೃಗಳ ಕ್ಷಯಾಹ ಶ್ರಾದ್ಧದಿನವು ತಿಳಿದೋ ತಿಳಿಯದೆಯೋ ಬರುತ್ತದೆಯಾದರೆ ಆಗ ಸಪಿಂಡರಾದವರು ವಿವಾಹಾದಿ ಮಂಗಲಕಾರ್ಯಾನಂತರ ಶ್ರಾದ್ಧವನ್ನು ಮಾಡತಕ್ಕದ್ದು. ಏವಂಚ ದರ್ಶಹೊರತಾದ ಶ್ರಾಸ್ತ್ರಗಳ ತಿಥಿಯು ಬಂದಮಾತ್ರದಿಂದ ನಿಷೇಧ ಹೇಳುವಂತಿಲ್ಲ. ಸ್ವರೂಪತಃ ಶ್ರಾದ್ಧರೂಪವಾಗಿ (ಪಿಂಡದಾನಾದಿ) ಮಧ್ಯದಲ್ಲಿ ನಡೆಯಬಾರದು. ವಿವಾಹವು ನಡೆಯುತ್ತಿರುವಾಗ ಶ್ರಾದ್ಧದಿನವು ಪ್ರಾಪ್ತವಾದಲ್ಲಿ ಮುಗಿದ ನಂತರ ಶ್ರಾದ್ಧ ಮಾಡತಕ್ಕದ್ದೆಂದು ಉಕ್ತಿಯಿದೆ. ಇದರಿಂದ ಸಂಕ್ರಾಂತಿ, ಮಾದಿ, ಅಷ್ಟಕಾದಿ ದಿನಗಳೂ ಶ್ರಾದ್ದ ದಿನಗಳೇ ಆದರೂ ಮಧ್ಯದಲ್ಲಿ ಬಂದಮಾತ್ರದಿಂದ ವಿವಾಹಕ್ಕೆ ನಿಷೇಧವಿಲ್ಲ. ಷಣ್ಣವತಿಶ್ರಾದ್ಧ ಕರ್ತೃಗಳಾದ ಸಪಿಂಡರು ಮಧ್ಯದಲ್ಲಿ ಬರುವ ಈ ಮನ್ನಾದಿ ಶ್ರಾದ್ಧಸಂಬಂಧವಾಗಿ ಪ್ರಾಯಶ್ಚಿತ್ತಾದಿಗಳನ್ನು ಮಾಡಿಕೊಂಡು ಶ್ರಾದ್ಧವು ಸಿದ್ಧಿಸುವಂತೆ ಇದರಲ್ಲಿಯೂ ಹಾಗೆಯೇ ಮಾಡಿಕೊಳ್ಳುವದು. ಹೀಗೆ ಚತುರ್ಥಿಮಧ್ಯ ದರ್ಶಾದಿ ಪ್ರಾಪ್ತಿ ನಿರ್ಣಯವು. ವಿವಾಹಾದಿಗಳಲ್ಲಿ ರಜೋದೋಷ ಮತ್ತು ಸೂತಕ ನಿರ್ಣಯ ಪ್ರಾರಂಭಕ್ಕಿಂತ ಮೊದಲು ಅಥವಾ ಅನಂತರ ತಾಯಿ ಅಥವಾ ಪಿತೃವ್ಯಾದಿ ಅನ್ಯ ಕರ್ತೃಗಳ ಪತ್ನಿಯರು ರಜಸ್ವಲೆಯಾದರೆ ಹೇಗೆ ಮಾಡಬೇಕೆಂಬುದನ್ನು ಹಿಂದೆ ಉಪನಯನ ಪ್ರಕರಣದಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ. ಈಗ ರಜೋದೋಷ ಮತ್ತು ಜನನಾಶೌಚ ಮೊದಲಾದವುಗಳು ಸಂಭವಿಸಬಹುದಾದ ಸಂದರ್ಭದಲ್ಲಿ (ಸದ್ಯ ಮುಟ್ಟಾಗುವ ಅಥವಾ ಪ್ರಸವವಾಗುವ ಗರ್ಭಿಣಿಯರಿದ್ದಾಗ ನಾಂದೀಶ್ರಾದ್ಧವನ್ನು ಮೊದಲೇ ಮಾಡಿದಲ್ಲಿ ಆ ನಾಂದೀಶ್ರಾದ್ಧದ ಅವಧಿಯಲ್ಲಿ ಪ್ರಾರಂಭಿಸಿದ ಕಾರ್ಯವನ್ನು ಮಾಡಲಡ್ಡಿಯಿಲ್ಲ. ಆದರೆ ಆಯಾಯ ಕಾರ್ಯಕ್ಕೆ ಹೇಳಿದ ನಾಂದಿಯ ಅವಧಿಯನ್ನು ಲಕ್ಷಿಸಬೇಕು. “ಯಜ್ಞದಲ್ಲಿ ನಾಂದಿಯ ಅವಧಿಯು ಇಪ್ಪತ್ತೊಂದು ದಿವಸ, ವಿವಾಹದಲ್ಲಿ ಹತ್ತು ದಿನಗಳು, ಚೌಲದಲ್ಲಿ ಮೂರು ದಿನಗಳು, ಉಪನಯನದಲ್ಲಿ ಆರು ದಿನಗಳು” ಈ ಹೇಳಿದ ಅವಧಿಯು ಮುಗಿದ ನಂತರ ಪುನಃ ನಾಂದಿಮಾಡಿಕೊಳ್ಳಬೇಕೆಂದು ತಾನೇ ಸಿದ್ಧವಾಗುವದು. ನಾಂದೀಶ್ರಾದ್ಧಾನಂತರದಲ್ಲಿ ಸೂತಕ, ಮೃತಾಶೌಚಗಳು ಬಂದಲ್ಲಿ ವಿವಾಹಾದಿಗಳಿಗೆ ಪ್ರತಿಬಂಧಕವಿಲ್ಲ. ವಿವಾಹ, ಉಪನಯನ, ಯಜ್ಞಾದಿ, ಶ್ರಾದ್ಧ, ಹೋಮ, ಅರ್ಚನ ಇವು ಪ್ರಾರಂಭವಾಗಿಬಿಟ್ಟರೆ ಆಮೇಲೆ ಮುಗಿಯುವದರೊಳಗೆ ಆಶೌಚವು ಉಂಟಾಗುವದಿಲ್ಲವೆಂದು ತಾತ್ಪರ್ಯ. ಪ್ರಾರಂಭವಾಗಿರದಿದ್ದರೆ ಸೂತಕವಿದ್ದೇ ಇದೆ. ಇಲ್ಲಿ ಪ್ರಾರಂಭವೆಂದರೆ ಹೇಗೆ? ಯಜ್ಞದಲ್ಲಿ “ಋತ್ವಿಗಾದಿವರಣ” ವಾದಮೇಲೆ “ಪ್ರಾರಂಭ” ಎಂದಾಗುತ್ತದೆ. ವ್ರತಾದಿಗಳಲ್ಲಿ ‘ಸಂಕಲ್ಪ’ವಾದ ಮೇಲೆ ‘ಪ್ರಾರಂಭ’, ವಿವಾಹಾದಿಗಳಲ್ಲಿ ‘ನಾಂದೀಶ್ರಾದ್ಧ ಶ್ರಾದ್ಧದಲ್ಲಿ ‘ಪಾಕಪ್ರೋಕ್ಷಣ’ಇವು ಪ್ರಾರಂಭ"ವೆನ್ನಲ್ಪಡುವವು. ಆದರೆ ಇದಾದರೂ ಆಪದ ರ್ಮದೊಳಗೆ ಬರುವದು. ಮುಂದೆ ಸಮೀಪದಲ್ಲಿ ಮುಹೂರ್ತಾದಿಗಳು ಸಿಗದೆ ಕಾರ್ಯವೇ ನಿಲ್ಲುವ ಸಂಭವವಾದರೆ ಈ ಶೌಚಾಪವಾದವನ್ನು ಹಿಡಿಯಬಹುದು. ಆಪತ್ತಿನಲ್ಲಲ್ಲದ ನಂದೀಶ್ರಾದ್ಧವಾಗಿದ್ದರೂ ಆಶೌಚಾಂತ್ಯದಲ್ಲೇ ಬೇರೆ ಮುಹೂರ್ತದಲ್ಲಿ ಮಾಡತಕ್ಕದ್ದು, ಸಾಮಾನ್ಯ ಎಲ್ಲ ಆಶೌಚಾವವಾದಗಳಾದರೂ “ಅನ್ನಗತಿಯಿಲ್ಲದಾಗ” ಆಚರಿಸಲ್ಪಡತಕ್ಕವುಗಳು ಎಂದು 1 ಪರಿಚ್ಛೇದ - ೩ ಪೂರ್ವಾರ್ಧ 922 “ನಿರ್ಣಯಸಿಂಧು"ವಿನಲ್ಲಿ ಹೇಳಿದೆ. ಆದುದರಿಂದ ವ್ರತಾದಿಗಳಲ್ಲಿ ಸಂಕಲ್ಪದ ನಂತರ ಆಶೌಚಪ್ರಾಪ್ತವಾದರೆ ಬ್ರಾಹ್ಮಣದ್ವಾರದಿಂದಲೇ ಪೂಜೆಮಾಡಿಸಬೇಕು. ಯಜ್ಞಾದಿಗಳಲ್ಲಿ ಮಧುಪರ್ಕ ವಿಧಿಯಿಂದ “ವರಣ"ವಾದರೂ ಬೇರೆ ಋತ್ವಿಜರು ಸಿಗದಂಥ ಅನನ್ಯಗತಿಕತ್ವದಲ್ಲಿ ಮಾತ್ರ ಮಧುಪರ್ಕಪೂರ್ವಕ ವರಣಹೊಂದಿದ ಋತ್ವಿಜರಿಗೆ ಆಶೌಚವಿಲ್ಲವೆಂದು ತಿಳಿಯುವದು. ಹೀಗೆ ಜಪ ಹೋಮಾದಿಗಳಲ್ಲೂ ತಿಳಿಯತಕ್ಕದ್ದು. ಶ್ರಾದ್ಧದಲ್ಲಿ ಪಾಕಪ್ರೋಕ್ಷಣ ಇದು ಸಹ ಆಪದ್ವಿಷಯಕವಾದದ್ದು. ಇನ್ನು ಮಹಾಸಂಕಟದಲ್ಲಿ ಪ್ರಾರಂಭಕ್ಕಿಂತ ಮೊದಲೇ ಸೂತಕಪ್ರಾಪ್ತವಾಗಿದ್ದರೂ ಕೂಶ್ಯಾಂಡಮಂತ್ರಗಳಿಂದ ಮೃತಹೋಮ ಮಾಡಿ ವಿಶೇಷ ಹಾಲು ಕೊಡುವ ಗೋದಾನಮಾಡಿ, ಪಂಚಗವ್ಯಪ್ರಾಶನೆಯಿಂದ ಶುದ್ಧನಾಗಿ ಚೌಲ, ಉಪನಯನ, ವಿವಾಹ, ಪ್ರತಿಷ್ಠಾದಿಗಳನ್ನು ಮಾಡತಕ್ಕದ್ದು. ಬಹುಸಾಹಿತ್ಯ, ಸಂಭಾರಗಳು ಒಟ್ಟಾಗಿದ್ದು, ಸಮೀಪದಲ್ಲಿ ಬೇರೆ ಮುಹೂರ್ತವಿಲ್ಲದೆ ವಿಶೇಷ ನಷ್ಟವಾಗುವಂಥ ಆಪತ್ತಿನಲ್ಲಿಯೂ ಇದೇ ಕ್ರಮದಿಂದ ಶುದ್ದನಾಗಬೇಕು. “ಮುಹೂರ್ತಮಾರ್ತಂಡ” ಮೊದಲಾದವುಗಳಲ್ಲಿ ಇದು ಜನನಾಶೌಚಕ್ಕೆ ಮಾತ್ರ ಸಂಬಂಧಿಸಿದ್ದೆಂದು ಹೇಳಿದೆ. ಕೂತ್ಕಾಂಡಾದಿಗಳಿಂದ ಶುದ್ಧಿಹೊಂದಿ ಸೂತಕಮೃತಕಾಶೌಚಮಧ್ಯದಲ್ಲಿ ಮಾಡುವ ವಿವಾಹಾದಿಗಳಲ್ಲಿ ಬ್ರಾಹ್ಮಣರಿಗೆ ಪೂರ್ವಸಂಕಲ್ಪಿತವಾದ ಅನ್ನಭೋಜನಕ್ಕೆ ದೋಷವಿಲ್ಲ. ಹೋಮಾದಿ ವಿಧಿಯಿಂದ ಶುದ್ಧರಾದ ಸೂತಕಿಗಳು ಪಾಕಗಳನ್ನು ಬಡಿಸಲೂಬಹುದು. ಹೀಗೆ ಕೌಸ್ತುಭದಲ್ಲಿ ಹೇಳಿದೆ. ಆದರೆ ಇದು ಯುಕ್ತವಲ್ಲ. ಜನಸಮ್ಮತವಾದದ್ದೂ ಅಲ್ಲ. ಆದ್ದರಿಂದ ಬಡಿಸುವವರು ಪರಗೋತ್ರದವರೇ ಆಗತಕ್ಕದ್ದೆಂದು ತೋರುತ್ತದೆ. ನಾಂದೀಶ್ರಾದ್ಧಾನಂತರದಲ್ಲಿ ಸೂತಕ, ಮೃತಕಗಳು ಪ್ರಾಪ್ತವಾದರೆ ವಿವಾಹಾನಂತರ ಸಂಕಲ್ಪಿಸಿದ ಅನ್ನವನ್ನು ಬ್ರಾಹ್ಮಣರು ಭೋಜನ ಮಾಡಬಹುದು. ಬಡಿಸುವವರು ವರಗೋತ್ರದವರೇ ಇರಬೇಕು. ಇದು ಸರ್ವಸಮ್ಮತವಾದದ್ದು. ಪರರು ಅಂದರೆ ಭಿನ್ನಗೋತ್ರದವರು ಎಂದರ್ಥ. ಹೀಗೆ ಸಿಂಧು, ಮಯೂಖಾದಿಗಳಲ್ಲಿ ವ್ಯಾಖ್ಯೆಯಿದೆ. “ಪೂರ್ವಸಂಕಲ್ಪಿತ ಅನ್ನವನ್ನಾದರೂ ಭೋಜನಕಾಲದಲ್ಲಿ ಸೂತಕಪ್ರಾಪ್ತವಾದರೆ ಉಣ್ಣುವವರು ಉಳಿದ ಶೇಷವನ್ನು ತ್ಯಜಿಸಿ ಪರರ-ಮನೆಯ ನೀರಿನಿಂದ ಆಚಮನಾದಿಗಳನ್ನು ಮಾಡತಕ್ಕದ್ದು. ವಾಕಶೇಷವನ್ನು ಸೂತಕಿಗಳು ಭೋಜನಮಾಡತಕ್ಕದ್ದು” ಹೀಗೆ ಸ್ಮೃತಿವಚನವಿದೆ. ನಾಂದೀಶ್ರಾದ್ಧಾನಂತರದಲ್ಲಿ ಭೋಜನ ಹೊರತಾದ ಕಾಲದಲ್ಲಿ ಸೂತಕಪ್ರಾಪ್ತವಾದರೆ ಸೂತಕಗೃಹದಲ್ಲಿ ಊಟಮಾಡಬಹುದು. ಊಟಮಾಡುವಾಗ ಸೂತಕ ಪ್ರಾಪ್ತವಾದರೆ ಪಾತ್ರದಲ್ಲಿದ್ದ ಅನ್ನವನ್ನೂ ತ್ಯಜಿಸಬೇಕು. (ಅಷ್ಟಕ್ಕೇ ಊಟ ನಿಲ್ಲಿಸಬೇಕು) ಹೀಗೆ ವಿಶೇಷ ವಚನವಿದೆ. “ವಚನಕ್ಕೆ ಅತಿಭಾರವಾದುದು ಯಾವದೂ ಇಲ್ಲ” ಎಂಬ ನ್ಯಾಯವಿದೆ. ನನಗಾದರೋ ಭುಂಜಾನೇಷತುವಿಪ್ರೇಷ” (ಊಟಮಾಡುತ್ತಿರುವಾಗ) ಎಂಬ ವಾಕ್ಯವು ಆರಂಭವಾದ ಅಥವಾ ಅನಾರಂಭವಾದ ಎಲ್ಲ ಕರ್ಮಗಳಲ್ಲೂ ಸಂಕಲ್ಪಿಸದ ಅನ್ನದ ವಿಷಯದಲ್ಲಿ ಹೇಳಿದ್ದೆಂದು ತೋರುತ್ತದೆ. ಹೀಗೆ ವಿವಾಹಾದಿಗಳಲ್ಲಿ ಸೂತಕಪ್ರಾಪ್ತಿ ವಿಚಾರವು. ಕನ್ಯಾರಜೋದೋಷ ನಿರ್ಣಯ ವಿವಾಹವಾಗುವ ಮೊದಲು ಕನ್ನೆಯು ರಜಸ್ವಲೆಯಾದರೆ ಮಾತಾ-ಪಿತೃಗಳಿಗೆ ನರಕಪ್ರಾಪ್ತಿ. ಕನ್ನೆಗೆ “ವೃಷಲೀತ್ವ” (ಚಾಂಡಾಲತ್ವ) ಪ್ರಾಪ್ತಿ, ಅವಳ ಪತಿಯು ವೃಷಲೀಪತಿಯು, ಹೀಗಿದೆ. ಇದರ ಶುದ್ಧಿಕ್ರಮವೆಂದರೆ- ಕನ್ಯಾದಾತನು, ಋತುಕಾಲಗಳನ್ನೆಣಿಸಿ ಅಷ್ಟು ಗೋದಾನಮಾಡಬೇಕು. ಅಶಕ್ತಿಯಲ್ಲಿ ಒಂದಾದರೂ ಗೋದಾನ ಮಾಡಬೇಕು. ಯಥಾಶಕ್ತಿ, ಬ್ರಾಹ್ಮಣ ಭೋಜನಮಾಡಿಸಬೇಕು. ಅಂದರೆ ಕನ್ಯಾದಾನ ಮಾಡಲು ಯೋಗ್ಯನಾಗುವನು. ಕನ್ನೆಯಾದರೋ ಮೂರು ಉಪವಾಸಗಳನ್ನು ಮಾಡಿ ಆಕಳ ಹಾಲನ್ನು ಕುಡಿದು ಬ್ರಾಹ್ಮಣಕುಮಾರಿಗೆ ರತ್ನಾಲಂಕಾರಗಳನ್ನು ಕೊಡಬೇಕು. ಅಂದರೆ ವಿವಾಹಕ್ಕೆ ಯೋಗ್ಯಳಾಗುತ್ತಾಳೆ, ವರನಾದರೂ ಕೂಶ್ಯಾಂಡಹೋಮ ಪೂರ್ವಕ ಆ ಕನೈಯನ್ನು ವಿವಾಹ ಮಾಡಿಕೊಂಡಲ್ಲಿ ದೋಷವಿಲ್ಲ. ವಿವಾಹ ೨೭೮ ಧರ್ಮಸಿಂಧು ಹೋಮಕಾಲದಲ್ಲಿ ಕಾರಜೋದೋಷವಾದರೆ ಅವಳನ್ನು ಸ್ನಾನಮಾಡಿಸಿ “ಯುಂಜಾನ ಈ ತೈತ್ತಿರೀಯ ಮಂತ್ರದಿಂದ ಪ್ರಾಯಶ್ಚಿತ್ತ ಹೋಮ ಮಾಡಿ ವಿವಾಹ ಹೋಮವನ್ನು ಮುಗಿಸುವದು. ದಾತನ ಅಭಾವದಲ್ಲಿ ಕನ್ನೆಯು ರಜಸ್ವಲೆಯಾದರೆ ಆಗ ಕನ್ನಿಕೆಯು ಮೂರುವರ್ಷ “ದಾತನನ್ನು ನಿರೀಕ್ಷಿಸಿ ತಾನೇ ವರನನ್ನಾರಿಸಿಕೊಳ್ಳುವದು. ಅದರಿಂದ ವರನಿಗೇನೂ ದೋಷಬರುವಂತಿಲ್ಲ. ಹೀಗೆ ಕನ್ಯಾರಜೋದೋಷ ನಿರ್ಣಯವು. ಕ್ಷಯಪಕ್ಷಾದಿ ವಿಚಾರ ಒಂದು ಪಕ್ಷದಲ್ಲಿ ಎರಡು ತಿಥಿಗಳ ಕ್ಷಯವಾಗಿದ್ದಾಗ ಹದಿಮೂರು ದಿನಗಳಿಂದ ಪಕ್ಷವಾಗಿ ಅದು “ಕ್ಷಯಪಕ್ಷ"ವೆಂದಾಗುವದು. ಅದರಿಂದ ಪ್ರಜಾಕ್ಷಯ ಅಥವಾ ರಾಜಸಂಹಾರ ಇತ್ಯಾದಿ ಅನಿಷ್ಟಫಲವನ್ನು ಹೇಳಿದೆ. ಈ ಕ್ಷಯಪಕ್ಷದಲ್ಲಿ ಚೌಲ, ಉಪನಯನ, ವಿವಾಹ, ವಾಸ್ತುಕಾರ್ಯ ಮೊದಲಾದ ಶುಭಕಾರ್ಯಗಳಿಗೆ ನಿಷೇಧ ಹೇಳಿದೆ. ಕ್ಷಯಮಾಸ, ಅಧಿಕಮಾಸ, ಗುರು- ಶುಕ್ರಾಸ್ತಾದಿಗಳಲ್ಲಿ ವಿವಾಹಮಾಡಬಾರದೆಂದು ಮೊದಲನೆಯ ಪರಿಚ್ಛೇದದಲ್ಲಿಯೇ ಹೇಳಿದೆ ಮತ್ತು ಅದರಲ್ಲಿಯೇ ಸಿಂಹಸ್ತಗುರು ನಿಷೇಧವನ್ನೂ ಹೇಳಿದೆ. ಕ್ಷಯಸಂವತ್ಸರವೂ ನಿಷಿದ್ಧವೇ. ಶೀಘ್ರಗತಿಯಿಂದ ಪೂರ್ವರಾಶಿಯ ಶೇಷವನ್ನು ಅತಿಕ್ರಮಿಸಿ ಗ್ರಹರು ಮುಂದೆ ಹೋದರೆ ಅದಕ್ಕೆ “ಅತಿಚಾರ"ವನ್ನುವರು. ಹೀಗೆ ಅತಿಚಾರವನ್ನು ಹೊಂದಿದ ಗುರುವು ವಕ್ರಗತಿಯಿಂದ ತಿರುಗಿಬರದಿದ್ದರೆ ಆ ವರ್ಷಕ್ಕೆ ಕ್ಷಯವರ್ಷವನ್ನುವರು. ಅದು ಎಲ್ಲ ಕರ್ಮಗಳಿಗೆ ವರ್ಜವು. ಆದರೆ ಆ ರಾಶಿಗಳು ಮೇಷ, ವೃಷಭ, ವೃಶ್ಚಿಕ, ಕುಂಭ, ಮೀನ ಈ ರಾಶಿಗಳಾದರೆ ದೋಷವಿಲ್ಲ. ಕೆಲವರು ಗೋದಾವರಿ ನದಿಯ ದಕ್ಷಿಣದ ವರೆಗೆ ಯಾವದೇ ಅತಿಚಾರಾದಿ ಗುರುದೋಷವಿಲ್ಲವೆನ್ನುವರು. ಹೀಗೆ ಕ್ಷಯವಕಾದಿವಿಚಾರವು ವಧೂ-ವರರಿಗೆ ಗುರು ರವಿಬಲ ವಿಚಾರ ವಧುವಿಗೆ ಗುರುಬಲವು ಮುಖ್ಯವು. ವರನಿಗೆ ರವಿಬಲವು ಮುಖ್ಯವು, ಗುರುವು ದ್ವಿತೀಯ, ಪಂಚಮ, ಸಪ್ತಮ, ನವಮ, ಏಕಾದಶಗಳಲ್ಲಿದ್ದರೆ ಕನ್ಯಗೆ ಶುಭವು, ಜನ್ಮ, ತೃತೀಯ, ಷಷ್ಠ, ದಶಮಸ್ಥಾನಗಳಲ್ಲಿದ್ದರೆ ಪೂಜಾಹೋಮರೂಪವಾದ ಶಾಂತಿಮಾಡಿಕೊಂಡಲ್ಲಿ ಶುಭನಾಗುವನು. ಚತುರ್ಥ, ಅಷ್ಟಮ, ದ್ವಾದಶಗಳಲ್ಲಿ ಅಶುಭಫಲವನ್ನು ಕೊಡುವನು. ಚತುರ್ಥದಲ್ಲಿದ್ದರೂ ಆ ರಾಶಿಯು ಕರ್ಕ, ಮೀನ, ಧನುಗಳಾದರೆ ಶುಭನೇ ಆಗುವನು. ಆಪತ್ತಿನಲ್ಲಿ ಗುರುವು ಚತುರ್ಥ ಅಷ್ಟಮಗಳಲ್ಲಿದ್ದರೆ ಕ್ರಮದಿಂದ ಎರಡಾವರ್ತಿ, ಮೂರಾವರ್ತಿ ಹೋಮಾದಿರೂಪವಾದ ಅರ್ಚನೆಯಿಂದ ಶುಭನಾಗುವನು. ವರನ ರಾಶಿಯಿಂದ ರವಿಯು ಮೂರು, ಆರು, ಹತ್ತು, ಹನ್ನೊಂದು ಈ ರಾಶಿಗಳಲ್ಲಿದ್ದರೆ ಶುಭನು, ಬೇರೆ ಸ್ಥಾನಗಳಲ್ಲಿ ಗ್ರಹಶಾಂತಿಯಲ್ಲಿ ಹೇಳಿದ ಪೂಜೆಯಿಂದ ಶುಭನಾಗುವನು. ಗುರುಪೂಜಾದಿ ವಿಧಾನವನ್ನು ಉಪನಯನ ಪ್ರಕರಣದಲ್ಲಿ ಹೇಳಲಾಗಿದೆ. ಕನ್ನೆಯ ವಿವಾಹಕಾಲ ಜನ್ಮದಿಂದ ಅಥವಾ ಗರ್ಭದಿಂದ ಐದನೇ ವರ್ಷದಿಂದ ಎಂಟನೇ ವರ್ಷ ಪರ್ಯಂತ ಕನ್ಯಯ ವಿವಾಹಕ್ಕೆ ಮುಖ್ಯಕಾಲವು. ಆರು ವರ್ಷದ ನಂತರದ ಎರಡು ವರ್ಷಗಳ ಕಾಲವು ಅತಿಪ್ರಶಸ್ತವ, “ಆರುವರ್ಷಗಳೊಳಗೆ ಕನ್ಯಾವಿವಾಹ ಮಾಡಬಾರದು. ಜನ್ಮದಿಂದ ಮೊದಲನೇ, ಎರಡನೇ ವರ್ಷಗಳಲ್ಲಿ “ಸೋಮನ ಮುಂದೆರಡು ವರ್ಷ “ಗಂಧರ್ವನೂ, ಆಮೇಲೆ ಎರಡು ವರ್ಷ “ಅಗ್ನಿಯೂ ಕನ್ನಿಕೆಯನ್ನು ಭೋಗಿಸುವನು” ಹೀಗೆ ಉಕ್ತಿಯಿದೆ. ನವಮ, ದಶಮ ವರ್ಷಗಳುಪರಿಚ್ಛೇದ - ೩ ಪೂರ್ವಾರ್ಧ ಮಧ್ಯಮಗಳು. ಹನ್ನೊಂದನೇ ವರ್ಷವು ಕನಿಷ್ಠವು. ಹನ್ನೆರಡರಿಂದ ಮುಂದ ಪ್ರಾಯಶ್ಚಿತ್ತಾರ್ಹಳಾಗುವಳು. ವಿವಾಹಭೇದಗಳು ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಆಸುರ, ಗಾಂಧರ್ವ, ರಾಕ್ಷಸ, ಪೈಶಾಚ ಹೀಗೆ ವಿವಾಹಗಳು ಎಂಟು ವಿಧಗಳಾಗಿವೆ. ಯೋಗ್ಯ ವರನನ್ನು ತಂದು ಅಲಂಕರಿಸಿ ವಿಧಿಪೂರ್ವಕವಾಗಿ ಕನ್ಯಾದಾನಮಾಡುವದಕ್ಕೆ “ಬ್ರಾಹ್ಮ ವಿವಾಹ"ವೆನ್ನುವರು. ಯಜ್ಞದಲ್ಲಿ ಋತ್ವಿಜಕರ್ಮವನ್ನು ಮಾಡುವವನಿಗೆ ಸಾಲಂಕಾರ ಕನೈಯನ್ನು ಕೊಡುವದಕ್ಕೆ ದೈವ” ವನ್ನುವರು. ವರನಿಂದ ಒಂದು ಅಥವಾ ಎರಡು ಗೋವಿನ ಜೋಡನ್ನು ತೆಗೆದುಕೊಂಡು ಅವನಿಗೆ ಕನೈಯನ್ನು ಕೊಡುವದಕ್ಕೆ “ಆರ್ಷ"ವೆನ್ನುವರು. ಈ ಗೋಮಿಥುನವನ್ನು ತೆಗೆದುಕೊಂಡರೆ ಕನ್ಯಾಶುಲ್ಕವನ್ನು ತಗೆದುಕೊಂಡಂತಲ್ಲ. ಯಾಕೆಂದರೆ ಅದು ಕುಮಾರೀ ಪೂಜಾರ್ಥವಾದದ್ದು. ಆದುದರಿಂದ ಅದು ಕನ್ಯಾವಿಕ್ರಯವಲ್ಲ. “ನೀನು ಇವಳಿಂದಲೇ ಕೂಡಿ ಗೃಹಸ್ಥ ಧರ್ಮವನ್ನಾಚರಿಸತಕ್ಕದ್ದು. ಇವಳ ಜೀವನಪರ್ಯಂತ ಬೇರೆ ವಿವಾಹವನ್ನೂ, ಸಂನ್ಯಾಸವನ್ನೂ ಸ್ವೀಕರಿಸಬಾರದು” ಹೀಗೆ ಹೇಳಿ ಕೊಡುವ ಕನ್ಯಾದಾನಕ್ಕೆ “ಪ್ರಾಜಾಪತ್ಯ” ವೆನ್ನುವರು. ಬಂಧು-ಬಾಂಧವರಿಗೆ ಯಥೇಚ್ಛ ಧನವನ್ನು ಕೊಟ್ಟು ಮಾಡಿಕೊಳ್ಳುವ ವಿವಾಹಕ್ಕೆ “ಆಸುರ"ವನ್ನುವರು. ವಧೂವರರು ಪರಸ್ಪರ ಇಚ್ಛೆಯಿಂದ ಮಾಡಿಕೊಳ್ಳುವ ವಿವಾಹವು “ಗಾಂಧರ್ವ’ವು ಯುದ್ಧಾದಿ ಬಲತ್ಕಾರದಿಂದ ಮಾಡಿಕೊಂಡ ವಿವಾಹಕ್ಕೆ “ರಾಕ್ಷಸ"ವೆನ್ನುವರು. ಚೋರತನದಿಂದ ಕನೈಯನ್ನಪಹರಿಸಿದರೆ ಅದಕ್ಕೆ “ಪೈಶಾಚವಿವಾಹವನ್ನುವರು ಈ ಹೇಳಿದ ಮೊದಲಿನ ನಾಲ್ಕು ವಿವಾಹಗಳಲ್ಲಿ ಪೂರ್ವಪೂರ್ವವು ಶ್ರೇಷ್ಠವು. (ಪ್ರಾಜಾಪತ್ಯಕ್ಕಿಂತ “ಆರ್ಷ”, ಆರ್ಷಕ್ಕಿಂತ “ದೈವ”, ದೈವಕ್ಕಿಂತ “ಬ್ರಾಹ್ಮ” ಹೀಗೆ ಮುಂದಿನ ನಾಲ್ಕು ವಿವಾಹಗಳಲ್ಲಿ ಮುಂದು-ಮುಂದಿನವು ನಿಂದವು. (ಆಸುರಕ್ಕಿಂತ ಗಾಂಧರ್ವವು ನಿಂದವು. ಇತ್ಯಾದಿ) ಬ್ರಾಹ್ಮಣನಿಗೆ ಬ್ರಾಹ್ಮ, ದೈವ ಇವು ಶ್ರೇಷ್ಠಗಳು. ಕ್ಷತ್ರಿಯನಿಗೆ ಗಾಂಧರ್ವ, ಆಸುರಗಳು ಶ್ರೇಷ್ಠಗಳು, ವೈಶ್ಯನಿಗೆ ಆಸುರವು ಶ್ರೇಷ್ಠವು, ಆರ್ಷ, ಪ್ರಾಜಾಪತ್ಯ, ವೈಶಾಚಗಳು ಎಲ್ಲರಿಗೂ ಸಾಮಾನ್ಯವಾದವು. ಬ್ರಾಹ್ಮಣನು ಆಪತ್ತಿನಲ್ಲಿ “ರಾಕ್ಷಸ” ಹೊರತಾದ ಏಳು ವಿಧದ ವಿವಾಹಗಳನ್ನು ಮಾಡಿಕೊಳ್ಳಬಹುದು. ಕ್ಷತ್ರಿಯನು ಬ್ರಾಹ್ಮ, ದೈವ ಹೊರತಾಗಿ ಆರು ವಿಧ ವಿವಾಹಗಳಿಗೆ ಅರ್ಹನು. ವೈಶ್ಯ, ಶೂದ್ರರು-ಬ್ರಾಹ್ಮ, ದೈವ, ರಾಕ್ಷಸ ಈ ಮೂರರ ಹೊರತಾಗಿ ಎಲ್ಲ ಬಗೆಯ ವಿವಾಹಗಳನ್ನೂ ಮಾಡಿಸಿಕೊಳ್ಳಬಹುದು. ಎಲ್ಲ ವಿವಾಹಗಳಲ್ಲಿಯೂ ಆಯಾಯ ರೀತಿಯಿಂದ ಕನ್ಯಾಪರಿಗ್ರಹ ಮಾಡಿದ ನಂತರ ತಮ್ಮ-ತಮ್ಮ ಪ್ರಯೋಗಾನುಸಾರ ವಿವಾಹ ಹೋಮಾದಿಗಳನ್ನು ಅವಶ್ಯವಾಗಿ ಮಾಡಿಕೊಳ್ಳತಕ್ಕದ್ದು. ಕೆಲ ವಿವಾಹಗಳಲ್ಲಿ ವಿಧಿಪೂರ್ವಕ ಕನ್ಯಾದಾನ ನಡೆಯುವದಿಲ್ಲ. ಪೈಶಾಚಾದಿಗಳಲ್ಲಿ ಸಪ್ತಪದಿವಿಧಿಗಿಂತ ಮೊದಲು ಬೇರೆಯವನಿಗೆ ಕನ್ನೆಯನ್ನು ಕೊಡಬಹುದು. ಬ್ರಹ್ಮಾದಿಗಳಲ್ಲಿ ಯಾದರೂ ಕನ್ಯಾದಾನಾನಂತರ ಸಪ್ತಪದಿಯೊಳಗೆ “ವರನು ನಪುಂಸಕನೆಂದು ಕಂಡುಬಂದರೆ ಅಥವಾ ಮೃತನಾದರೆ ಕನ್ನೆಯನ್ನು ಬೇರೆಯವರಿಗೆ ಕೊಡಬಹುದು” ಹೀಗೆ ವಚನವಿದೆ. ಬ್ರಾಹ್ಮವಿಧಿಯಿಂದ ವಿವಾಹಿತಳಾದವಳಲ್ಲಿ ಜನಿಸಿದವನು ಹಿಂದಿನ ಮತ್ತು ಮುಂದಿನ ಹತ್ತು ಪಿತೃಗಳನ್ನುದ್ಧಾರಮಾಡುವನು. ದೈವವಿವಾಹದಿಂದ ಜನಿಸಿದವನು ಏಳೇಳು ಪಿತೃಗಳನ್ನೂ, ೨೮೦ ಧರ್ಮಸಿಂಧು ಪ್ರಾಜಾಪತ್ಯದಿಂದ ಹುಟ್ಟಿದವನು ಆರಾರು, ಆರ್ಷದಿಂದ ಜನಿಸಿದವನು ಮೂರು-ಮೂರು ಪಿತೃಗಳನ್ನುದ್ಧರಿಸುವನು. “ಆಶ್ವಲಾಯನಸೂತ್ರ"ದಲ್ಲಿ ಬ್ರಾಹ್ಮವಿವಾಹದಲ್ಲಿ ಹನ್ನೆರಡು, ದೈವದಲ್ಲಿ ಹತ್ತು, ಆರ್ಷದಲ್ಲಿ ಎಂಟು, ಪ್ರಾಜಾಪತ್ಯದಲ್ಲಿ ಏಳು ಹೀಗೆ ಪಿತೃತಾರಣವನ್ನು ಹೇಳಿದೆ. ಉಳಿದ ದುರ್ವಿವಾಹದಿಂದ ಜನಿಸಿದವರು ಬ್ರಾಹ್ಮಣ ಹಾಗೂ ಧರ್ಮಗಳ ದ್ವೇಷಿಗಳಾಗುತ್ತಾರೆ. ವಾಗ್ದಾನವಾದಮೇಲೆ ವರನು ದೇಶಾಂತರಕ್ಕೆ ಹೋದರೆ ಆರು ತಿಂಗಳು ನಿರೀಕ್ಷೆ ಮಾಡಿ ನಂತರ ಇನ್ನೊಬ್ಬರಿಗೆ ಕೊಡಬಹುದು. ಕನ್ನೆಯ ಬಗ್ಗೆ ಶುಲ್ಕ (ತರ) ವನ್ನು ಕೊಟ್ಟು ಹೋಗಿರುವಲ್ಲಿ ಆತನನ್ನು ಒಂದು ವರ್ಷ ನಿರೀಕ್ಷಣ ಮಾಡತಕ್ಕದ್ದು. ಇನ್ನು ಬಲಾತ್ಕರಿಸಿ ವಿವಾಹವಾದಲ್ಲಿ ಅಥವಾ ಸಗೋತ್ರತ್ವ, ನಪುಂಸಕತ್ವ ಮೊದಲಾದ ದೋಷಗಳು ವರನಲ್ಲಿ ಕಂಡುಬಂದರೆ ಸಪ್ತಪದಿಯ ನಂತರವಾದರೂ ಬೇರೆಯವನಿಗೆ ಕನ್ನಿಕೆಯನ್ನು ಕೊಡಬಹುದು. ಆದರೆ ಇದು ಕಲಿಯುಗದಲ್ಲಿ ನಿಷಿದ್ಧವು. ವಾಗ್ದಾನವಾದಮೇಲೆ ಪಾತಿತ್ಯಮೊದಲಾದ ದೋಷಗಳಿಲ್ಲದಾಗ ಕನೈಯನ್ನು ಕೊಡದಿದ್ದರೆ ಅವನಿಗೆ “ದಂಡ” ಹೇಳಿದೆ. ಹೀಗೆಯೇ ದಾತನು ಕನ್ನೆಯ ಅಪಸ್ಮಾರಾದಿ ದೋಷಗಳನ್ನು ಬಚ್ಚಿಟ್ಟು ಕೊಟ್ಟರೂ “ದಂಡ"ಕ್ಕೆ ಅರ್ಹನು. ಧರ್ಮವಿರುದ್ಧಗಳಾದ ವಿವಾಹಗಳಲ್ಲಿ ಬ್ರಾಹ್ಮಣರು ಭೋಜನಮಾಡಿದರೆ ‘ಆಸುರ’ದಲ್ಲಿ ಒಂದುರಾತ್ರಿ ಉಪವಾಸ, ಗಾಂಧರ್ವದಲ್ಲಿ ಮೂರುರಾತ್ರಿ, ರಾಕ್ಷಸ, ಪೈಶಾಚಗಳಲ್ಲಿ “ಚಾಂದ್ರಾಯಣ” ಇವು ಪ್ರಾಯಶ್ಚಿತ್ತವು. ಹೀಗೆ ವಿವಾಹಭೇದಗಳು. ಪರಿವೇತೃ ಮೊದಲಾದ ವಿಚಾರ ಅಣ್ಣನು ಜೀವಂತನಿದ್ದು, ಪತ್ನಿ ಮತ್ತು ಅಗ್ನಿಹೋತ್ರಗಳನ್ನು ಯಾವ ಕಿರಿಯವನು ಪರಿಗ್ರಹಿಸುವನೋ ಆ ಕಿರಿಯನಿಗೆ ‘ಪರಿವೇತ್ತಾ” ಎನ್ನುವರು. ಆ ಹಿರಿಯನು “ಪರಿವಿ ಎಂದು ಸಂಸ್ಕೃತನಾಗುವನು. ಹಿರಿಯ ಕನ್ಯಗೆ ಲಗ್ನವಾಗದೆ ಕಿರಿಯಳು ವಿವಾಹಿತೆಯಾದರೆ ಹಿರಿಯಳಿಗೆ “ದಿಧೀಷ” ಎಂದೂ, ಕಿರಿಯಳಿಗೆ"ಅಗೋದಿಧೀಷ” ಎಂದೂ ಹೇಳುವರು. ಅಜ್ಞಾನಾದಿಗಳಿಂದ ತಂದೆ ಮೊದಲಾದವರು ವಿವಾಹಮಾಡಿದಲ್ಲಿ ಆ ಪರಿವೇತೃ-ವರಿವಿತ್ತಿಯರಿಬ್ಬರಿಗೂ ಎರಡು ಕೃಚ್ಛಗಳು ಪ್ರಾಯಶ್ಚಿತ್ತವು. ಕನ್ನೆಗೆ ಒಂದು ಕೃಷ್ಣ, ಕೊಟ್ಟವನಿಗೆ ಅತಿಕೃಚ್ಛ ಹೀಗೆ ಪ್ರಾಯಶ್ಚಿತ್ತವು. ಪುರೋಹಿತನು ಚಾಂದ್ರಾಯಣವ್ರತವನ್ನು ಮಾಡತಕ್ಕದ್ದು. ತಂದೆ ಮೊದಲಾದವರು ದಾನಮಾಡದೆ, ಇದನ್ನು ತಿಳಿದು ವಿವಾಹದಲ್ಲಿ ಎಲ್ಲರೂ “ವರ್ಷ ಕೃಚ್ಛವನ್ನಾಚರಿಸಬೇಕು. ತಂದೆ ಮೊದಲಾದವರು ಸ್ಟೇಚ್ಛೆಯಿಂದ ವಿವಾಹಮಾಡಿದ್ದರೆ “ಮಾಸಿಕಕೃವು. ತಂದೆ ಮೊದಲಾದವರು ಕೊಡದೆ ಅಜ್ಞಾನದಿಂದಾದ ಈ ವಿವಾಹದಲ್ಲಿ ಚಾಂದ್ರಾಯಣಾದಿ ಪ್ರಾಯಶ್ಚಿತ್ತವು. ದಿಧೀಷ ಮೊದಲಾದವರ ಪತಿಗೆ ಅತಿಕೃಷ್ಣ ಮತ್ತು ಕೃಷ್ಣಗಳು. ಇದಕ್ಕೆ ಅಪವಾದ ಜೇಷ್ಠ ಪುತ್ರನ ಸೋದರನಾಗಿರದ ಸಾಪತಪುತ್ರ ಅಥವಾ ದತ್ತಕವಾಗಿ ಇರುವಾಗ ತಾನು ಪತ್ನಿ ಮತ್ತು ಅಗ್ನಿಹೋತ್ರ ಗ್ರಹಣಮಾಡಿದಲ್ಲಿ ದೋಷವಿಲ್ಲ. ಇನ್ನು ಸಹೋದರ ಅಣ್ಣನಾದರೂ ನಪುಂಸಕ, ಮೂಕ, ಕಿವುಡ, ಕುಳ್ಳ-ಕುಂಟನಾದರೆ ಅಥವಾ ದೇಶಾಂತರಕ್ಕೆ ಹೋಗಿದ್ದರೆ, ವೇಶ್ಯಯಾಸಕ್ತನಾಗಿದ್ದರೆ, ಪತಿತನಾದರೆ, ಮಹಾರೋಗಿಯಾದರೆ, ಅತಿ ಮುದುಕನಾದರೆ, ಪರಿಚ್ಛೇದ - ೩ ಪೂರ್ವಾರ್ಧ ೨೮೧ ಕೃಷಿಕನಾದರೆ, ಹಣದ ಬಡ್ಡಿ, ರಾಜಸೇವಾ ಇತ್ಯಾದಿಗಳಲ್ಲಾಸಕ್ತನಾಗಿದ್ದರೆ, ಚೋರನಾದರೆ, ಹುಚ್ಚನಾದರೆ, ವಿವಾಹ, ಅಗ್ನಿಹೋತ್ರಗಳಲ್ಲಾ ಸಕ್ತಿಯಿಲ್ಲದವನಾಗಿದ್ದರೆ ಆಗ ತಮ್ಮನು ವಿವಾಹ ಅಗ್ನಿಹೋತ್ರಗಳನ್ನು ಪರಿಗ್ರಹಿಸಿದಲ್ಲಿ ದೋಷವಿಲ್ಲ. ದೇಶಾಂತರಗತನಾದ ಅಣ್ಣನನ್ನು ಹನ್ನೆರಡು ವರ್ಷ ಅಥವಾ ಎಂಟು ವರ್ಷ ನಿರೀಕ್ಷೆ ಮಾಡಬಹುದು. ಇದರಂತೆ ತಾಯಿಯು ಬೇರೆಯವಳಾಗಿ ಹಿರಿಯ ಕನ್ನಿಕೆಯ ವಿವಾಹವಾಗದಿದ್ದರೂ, ಕಿರಿಯವಳ ವಿವಾಹವನ್ನು ಮಾಡಬಹುದು. ಅಥವಾ ಸೋದರಿ ಹಿರಿಯ ಕನ್ನೆಯು ಮೂಕತ್ವಾದಿ ದೋಷಯುಕ್ತಳಾಗಿದ್ದರೆ ಅವಳನ್ನು ಬಿಟ್ಟು ಕಿರಿಯಳಿಗೆ ಲಗ್ನಮಾಡಿದಲ್ಲಿ ದೋಷವಿಲ್ಲ. ಹೀಗೆ ಪರಿವೇತ್ರಾದಿ ನಿರ್ಣಯವು ಕನ್ಯಾದಾತೃ ಕ್ರಮ ತಂದೆಯು ಮುಖ್ಯ ಕರ್ತೃವು. ನಂತರ, ಅಭಾವದಲ್ಲಿ ಅಜ್ಜ, ಅಣ್ಣ, ಪಿತೃಕುಲದಲ್ಲಿರುವ ದೊಡ್ಡ ತಂದೆ, ಚಿಕ್ಕ ತಂದೆ ಮೊದಲಾದವರು. ಹೀಗೆ ಹಿಂದು ಹಿಂದಿನವರಿಲ್ಲದಾಗ ಕನ್ಯಾದಾನಾಧಿಕಾರಿಗಳು ಮಾತೃಕುಲದಲ್ಲಿಯ ತಾಯಿಯ ತಂದೆ, ಸೋದರಮಾವ, ಇವರಾರೂ ಇಲ್ಲದಿದ್ದರೆ ತಾಯಿ ಹೀಗೆ ವಿವಾಹಕರ್ಮಾಧಿಕಾರಿಗಳು, ಭ್ರಾತೃಗಳಲ್ಲಾದರೂ ಉಪನೀತರಾದವರಿಗೇ ಅಧಿಕಾರ, ಅಣ್ಣನು ಅನುಪನೀತನಾಗಿದ್ದು ತಾಯಿಮೊದಲಾದವರಿದ್ದರೆ ಅವರೇ ಅಧಿಕಾರಿಗಳಾಗುವರು. ಹೊರತು ಉಪನಯನವಾಗದ ಭ್ರಾತೃಗಳಲ್ಲ. ಸರ್ವರ ಅಭಾವದಲ್ಲಿ ಕನ್ನೆಯು ತಾನೇ ವರನನ್ನು ವರಿಸಬಹುದು. ಕನ್ನೆಯು ಸ್ವಯಂವರಿಸುವಾಗ ಅಥವಾ ತಾಯಿಯು ರ್ಕಯಾದರೆ ನಾಂದೀಶ್ರಾದ್ಧವನ್ನು ಅವರವರೇ ಮಾಡತಕ್ಕದ್ದು. ತಾಯಿಯಾಗಲೀ, ಕನೈಯಾಗಲೀ ತಾವೇ ಪ್ರಧಾನಸಂಕಲ್ಪ ಮಾಡಿ ಉಳಿದದ್ದನ್ನು ಬ್ರಾಹ್ಮಣದ್ವಾರಾ ಮಾಡಿಸತಕ್ಕದ್ದು. ವರನಾದರೂ ಸಂಸ್ಕಾರಹೊಂದಿರುವ ಭ್ರಾತ್ರಾದಿಗಳ ಅಭಾವದಲ್ಲಿ ತಾನೇ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು. ತಾಯಿಯಿಂದ ಮಾಡಿಸತಕ್ಕದ್ದಲ್ಲ. ಈ ವರನಿಗೆ ಉಪನಯನವಾಗಿರುವದರಿಂದ ಕರ್ಮಾಧಿಕಾರವಿದ್ದೇ ಇದೆ, ಮತ್ತು ಎರಡನೇ ವಿವಾಹಾದಿಗಳಲ್ಲಿ ಬೇರೆ ಅಧಿಕಾರಿಗಳಿದ್ದರೂ ನಾಂದೀಶ್ರಾದ್ಧವನ್ನು ತಾನೇ ಮಾಡತಕ್ಕದ್ದು. ಪರಕೀಯ ಕನ್ಯಾದಾನದಲ್ಲಿ ವಿಶೇಷವಿದೆ. ಪರಗೋತ್ರದವಳಾದ ಕನ್ನಿಕೆಯನ್ನು ಸುವರ್ಣಾದಿಗಳನ್ನು ಕೊಟ್ಟು ತಾನು ಪಡಕೊಂಡು ಧರ್ಮ ವಿಧಾನದಿಂದ ದಾನಮಾಡತಕ್ಕದ್ದು. ಹೀಗೆ ದಾತ್ಮನಿರ್ಣಯದಲ್ಲಿ ವರ-ವಧೂಗಳ ನಾಂದೀಶ್ರಾದ್ಧ ಕರ್ತೃನಿರ್ಣಯವು ವಧೂ-ವರರ ಮೂಲ ಜನನಾದಿ ಗುಣದೋಷಗಳು ಮೂಲನಕ್ಷತ್ರದ ಆದಿ ಮೂರು ಪಾದಗಳೊಳಗೆ ಜನಿಸಿದ ವಧೂ-ವರರು ತಮ್ಮ-ತಮ್ಮ ಮಾವಂದಿರನ್ನು ನಾಶಮಾಡುವರು. ಆಶ್ಲೇಷಾ ನಕ್ಷತ್ರದ ಅಂತ್ಯ ಮೂರು ಪಾದಗಳಲ್ಲಿ ಜನಿಸಿದವರು ತಮ್ಮ ತಮ್ಮ ಅತ್ತೆಯರನ್ನು ನಾಶಮಾಡುವರು. ಜೇಷ್ಠಾ ನಕ್ಷತ್ರದ ಅಂತ್ಯಪಾದದಲ್ಲಿ ಜನಿಸಿದವರು ಅನ್ನೋನ್ಯವಾಗಿ ಹಿರೇ ಅಣ್ಣನನ್ನು ನಾಶಮಾಡುವರು. ವಿಶಾಖಾ ನಕ್ಷತ್ರದ ಅಂತ್ಯಪಾದದಲ್ಲಿ ಜನಿಸಿದವರು ಅನ್ನೋನ್ಯ ತಮ್ಮಂದಿರನ್ನು ನಾಶಮಾಡುವರು. ಮಘಾನಕ್ಷತ್ರದ ಮೊದಲನೇ ವಾದದಲ್ಲಿ ಜನಿಸಿದವರಿಗೆ ಮೂಲದಂತೆಯೇ ಫಲವೆಂದು ಕೆಲವರನ್ನುವರು. ಇನ್ನು ಕಲವರು ಪನಯನವು ಎರಡನೇ ಜನ್ಮರೂಪವಿರುವದರಿಂದ ಉಪನಯನವಾದವರಿಗೆ ಮೊದಲು ಜನಿಸಿದ ನಕ್ಷತ್ರ ದೋಷವುಂಟಾಗುವದಿಲ್ಲವೆನ್ನುವರು. ಆದಕಾರಣ ವರನಿಗೆ “ಶ್ವಶುರಘಾತ” ಮೊದಲಾದ GOG ಧರ್ಮಸಿಂಧು ದೋಷವಿಲ್ಲವೆಂದೂ ಅನ್ನುವರು. ಇಂಥ ಅಪವಾದವನ್ನು “ಆಪತ್ತಿನಲ್ಲಿ ಹೇಳುವರು, ಮಾವ ಮೊದಲಾದ ಆಯಾಯ ಜನರಿಲ್ಲದಿದ್ದರೆ ವಧುವಿಗಾದರೂ ಆಯಾಯ ನಕ್ಷತ್ರದೋಷ ಸಂಭವಿಸುವದಿಲ್ಲ. ಕನೈಯುಹಂದಿಮೊದಲಾದ ಪ್ರಾಣಿಗಳ, ವೃಕ್ತಾದಿಗಳ, ನದಿಗಳ ಹೆಸರಿನವಳಾಗಿರಬಾರದು. ಚಾಂಡಾಲ, ಪರ್ವತದ ಹೆಸರಿನವಳಾಗಬಾರದು. ಪಕ್ಷಿ, ಸರ್ಪ, ದಾಸ ಇತ್ಯಾದಿ ನಾಮಗಳನ್ನು ಹೊಂದಿರಬಾರದು. ಭಯಂಕರವಾದ ಹೆಸರಾಗಿರಬಾರದು. ಇಂಥ ಕನ್ನಿಕೆಯನ್ನು ವರಿಸತಕ್ಕದ್ದು.” ಹೀಗೆ ವಚನವಿದೆ. ವರನ ಪುರುಷತ್ಯಾದಿಗಳನ್ನು ಪರೀಕ್ಷಿಸಿ ಕನೈಯನ್ನು ಕೊಡಬೇಕೆಂದು ಹೇಳಿದೆ. ಪುರುಷನ ರೇತಸ್ಸು ನೀರಿನಲ್ಲಿ ತೇಲಬೇಕು. ಮೂತ್ರಮಾಡುವಾಗ ಶಬ್ದವಾಗಬೇಕು. ನೊರೆಯಿಂದ ಕೂಡಿರಬೇಕು. ಇತ್ಯಾದಿ ವರನ ಪರೀಕ್ಷೆಯನ್ನೂ ಹೇಳಿದೆ. ಕುಲ, ಶೀಲ, ದೇಹ, ವಯಸ್ಸು, ಧನ, ವಿದ್ಯಾ ಮತ್ತು ಪಾಲಕತ್ವ (ಕುಲಂ ಚ ಶೀಲಂ ಚ ವಪುರ್ವಯಶ್ಚ ವಿತ್ತಂ ಚ ವಿದ್ಯಾಂ ಚ ಸನಾಥತಾಂ ಚ ಇತ್ಯಾದಿ) ಹೀಗೆ ಏಳು ಗುಣಗಳನ್ನು ಪರಿಶೀಲಿಸಿ ಕನ್ನೆಯನ್ನು ಕೊಡತಕ್ಕದ್ದು. ಉಳಿದ ವಿಷಯಗಳಿಗೆ ಅಷ್ಟು ಪ್ರಾಮುಖ್ಯತೆಯಿಲ್ಲ. ಹೀಗೆ ವಧೂ-ವರರ ಮೂಲಜತ್ಪಾದಿ ಗುಣದೋಷ ನಿರ್ಣಯವು ವಿವಾಹದಲ್ಲಿ ಮಾಸಾದಿ ನಿರ್ಣಯ ಮಾಘ, ಫಾಲ್ಗುಣ, ವೈಶಾಖ, ಜೇಷ್ಠ ಮಾಸಗಳು ಶುಭಗಳು, ಮಾರ್ಗಶೀರ್ಷವು ಮಧ್ಯಮವು ಕೆಲಕಡೆಯಲ್ಲಿ ಆಷಾಢ, ಕಾರ್ತಿಕಗಳೂ ಉಕ್ತವಾಗಿವೆ. ಮಿಥುನದಲ್ಲಿ ರವಿಯಿದ್ದಾಗ ಆಷಾಢವೂ, ವೃಶ್ಚಿಕದಲ್ಲಿ ರವಿಯಿದ್ದಾಗ ಕಾರ್ತಿಕವೂ ಶುಭವು, ದೇಶಾಚಾರದಂತೆ ಗ್ರಾಹ್ಯಗಳು. ಕೆಲ ದೇಶಗಳಲ್ಲಿ ತ್ಯಾಜ್ಯಗಳು. ಇದರಂತೆ ಮಕರಪುಷ್ಯ, ಮೇಷ ಚೈತ್ರಗಳೂ ದೇಶಾಚಾರದಂತ ಗ್ರಾಹ್ಮಗಳು. ಜೇಷ್ಠಮಾಸ ನಿಷೇಧ ಮತ್ತು ಅಪವಾದಗಳು ಜೇಷ್ಠರಾದ ವಧೂವರರಿಗೆ ಶ್ರೇಷ್ಟ ಮಾಸದಲ್ಲಿ ವಿವಾಹವು ಶುಭಕರವಲ್ಲ. ಜೇಷ್ಠ ವಧೂವರರ ವಿವಾಹವು ಉಳಿದ ಮಾಸಗಳಲ್ಲಿ ಮಧ್ಯಮವು. ಹೆಚ್ಚಾಗಿ ಇಬ್ಬರೂ ಶ್ರೇಷ್ಠರಾಗಿ ಪ್ರವಾಸದಲ್ಲಿ ವಿವಾಹ ಮಾಡತಕ್ಕದ್ದಲ್ಲ. (ಷ) ಅನ್ಯ ಮಾಸಗಳಲ್ಲಿ ಮಧ್ಯಮವೆಂದಭಿಪ್ರಾಯ. ಈ “ಜೇಷ್ಟ"ವು ನಿಷಿದ್ರವು, ಇನ್ನು “ದ್ವಿಷ” ಅಂದರೆ ವಧೂ- ವರರೊಳಗೊಬ್ಬರು ಜೇಷ್ಟರಾಗಿದ್ದು ಜೇಷ್ಠಮಾಸ ಕೂಡಿದರೆ ಮಧ್ಯಮವು. ಒಂದೇ ಶ್ರೇಷ್ಠವಾದರೆ ಶುಭವು ಹೀಗೆ ವಚನವಿದೆ. “ಜೈಪ್ರತ್ರಯ"ವಾಗಕೂಡದೆಂಬದು ಸರ್ವಸಂಮತವು ಶ್ರೇಷ್ಠತ್ವದಲ್ಲಿ ವರನು ಪ್ರಥಮ ಗರ್ಭದವನಾಗಿ ಕನ್ನೆಯು ದ್ವಿತೀಯಾದಿ ಗರ್ಭದವಳಾಗಿದ್ದಾಗ, ಅಥವಾ ಪ್ರಥಮ ಗರ್ಭದ ವಧೂ ಆಗಿದ್ದಾಗ ಜೇಪ್ಪ ಮಾಸದಲ್ಲಿ ವಿವಾಹವು ಮಧ್ಯಮವು. ಈ ಪ್ರಥಮ ಗರ್ಭದ “ವರ” ಅಥವಾ “ವರೂ” ಇವರಿಗೆ ಜನ್ಮಮಾಸ, ಜನ್ಮನಕ್ಷತ್ರ ಮೊದಲಾದವುಗಳು ನಿಷಿದ್ಧವು “ಸಾರ್ವಕಾಲಮೇಕ ವಿವಾಹು” ಅಂದರೆ ವಿವಾಹಕ್ಕೆ ಎಲ್ಲ ಕಾಲಗಳೂ ಶ್ರೇಷ್ಠಗಳೇ ಎಂದು ವಚನವಿದೆಯಾದರೂ ಈ ವಚನವು “ಆಸುರ” ಮೊದಲಾದ ಅಧರ್ಮವಿವಾಹದ ವಿಷಯಕ್ಕೆ ಹೇಳಿದ್ದು “ಮಯೂಖ"ದಲ್ಲಿ ಆದ್ರ್ರಾದಿ ಹತ್ತು ಮಹಾನಕ್ಷತ್ರಗಳಲ್ಲಿ ವಿವಾಹ, ಉಪನಯನ ಪರಿಚ್ಛೇದ - ೩ ಪೂರ್ವಾರ್ಧ ೨೮೩ ಮೊದಲಾದವುಗಳನ್ನು ವಸಿಷ್ಠಾದಿಗಳು ನಿಷೇಧಿಸಿದ್ದಾರೆಂದು ಹೇಳಿದೆ. ಆದರೆ ಕೌಸ್ತುಭ, ನಿರ್ಣಯಸಿಂಧು, ಜ್ಯೋತಿರ್ಮಾರ್ತಂಡ ಮೊದಲಾದ ಗ್ರಂಥಗಳಲ್ಲಿ ಇದನ್ನು ಹೇಳಿಲ್ಲವಾದ ಕಾರಣ ಅದು ಕೇಚಿನ್ಮತವೆಂದು ಬಹು ವಿದ್ವಾಂಸರ ಅಭಿಪ್ರಾಯ. ಶಿಷ್ಟರು ಆದ್ರ್ರಾಪ್ರವೇಶಾದಿ ದೋಷವನ್ನು ಮನ್ನಿಸುವದಿಲ್ಲ. ತಿಥಿಗಳಲ್ಲಿ ಅಮಾವಾಸೆಯು ನಿಷಿದ್ದವು, ರಿಕ್ರಾತಿಥಿ, ಅಷ್ಟಮೀ, ಷಷ್ಠಿ ಇವು ಅಲ್ಪಫಲಗಳನ್ನು ಕೊಡುವವು. ಉಳಿದ ತಿಥಿಗಳು ಪೂರ್ಣಫಲಪ್ರದಗಳು, ಶುಕ್ಲಪಕ್ಷವು ಶ್ರೇಷ್ಠವು. ಬಹುಳದಲ್ಲಿ ತ್ರಯೋದಶೀ ಪರ್ಯಂತ ಮಧ್ಯಮವು. ಚಂದ್ರ, ಬುಧ, ಗುರು, ಶುಕ್ರವಾರಗಳು ಶುಭಗಳು. ಉಳಿದವುಗಳು ಮಧ್ಯಮವು ರೋಹಿಣಿ, ಮೃಗಶಿರಾ, ಮಘಾ, ಉತ್ರಾ, ಉತ್ರಾಷಾಢಾ ಉತ್ರಾಭದ್ರಾ, ಹಸ್ತ, ಸ್ವಾತೀ, ಮೂಲಾ, ಅನುರಾಧಾ, ರೇವತೀ ಈ ನಕ್ಷತ್ರಗಳು ವಿವಾಹಕ್ಕೆ ಸರ್ವಸಮ್ಮತಗಳು. “ಹರದತ್ತನ ಮತದಲ್ಲಿ ಚಿತ್ರಾ, ಶ್ರವಣ, ಧನಿಷ್ಠಾ-ಅಶ್ವಿನಿ ಹೀಗೆ ನಾಲ್ಕು ನಕ್ಷತ್ರಗಳನ್ನು ಹೆಚ್ಚಿಗೆ ಹೇಳಿದೆ. ಅದರಲ್ಲಾದರೂ ದುಷ್ಟಗ್ರಹಯುಕ್ತವಾದ ನಕ್ಷತ್ರವು ತ್ಯಾಜ್ಯವು ವಧೂ-ವರರಿಬ್ಬರಿಗೂ ಚಂದ್ರತಾರಾಬಲವು ಆವಶ್ಯಕವು. ಇಬ್ಬರೊಳಗೊಬ್ಬರಿಗೆ ತಾರಾಬಲವಿಲ್ಲದಿದ್ದರೆ ರಜತಾದಿ ದಾನಮಾಡತಕ್ಕದ್ದು. ಘಾತಚಂದ್ರ ವಿಚಾರ ಮೇಷರಾಶಿಯವನಿಗೆ ಮೇಷದಲ್ಲಿ ಚಂದ್ರನಿದ್ದರೆ “ಘಾತಚಂದ್ರ"ನಂದಾಗುವದು. ವೃಷಭರಾಶಿಗೆ ಕನ್ಯಾ, ಮಿಥುನಕ್ಕೆ ಕುಂಭ, ಕರ್ಕಕ್ಕೆ ಸಿಂಹ, ಸಿಂಹಕ್ಕೆ ಮಕರ, ಕನ್ಯಾಕ್ಕೆ ಮಿಥುನ, ತುಲೆಗೆ ಧನು, ವೃಶ್ಚಿಕಕ್ಕೆ ವೃಷಭ, ಧನುವಿಗೆ ಮೀನ, ಮಕರಕ್ಕೆ ಸಿಂಹ, ಕುಂಭಕ್ಕೆ ಧನು, ಮೀನಕ್ಕೆ ಕುಂಭ ಹೀಗೆ ಘಾತಚಂದ್ರ ದೋಷವು, ಯಾತ್ರೆ, ಯುದ್ಧ ಇತ್ಯಾದಿ ಕಾರ್ಯಗಳಲ್ಲಿ ಈ ಘಾತಚಂದ್ರನು ವರ್ಜ್ಯ. ಆದರೆ ವಿವಾಹಾದಿ ಎಲ್ಲ ಮಂಗಲಕಾರ್ಯ, ಚೌಲೋಪನಯನಾದಿಗಳು, ಯಜ್ಞ ಸೀಮಂತ, ಜಾತಕರ್ಮಾದಿಗಳು ಇತ್ಯಾದಿಗಳಲ್ಲಿ ಘಾತಚಂದ್ರನನ್ನು ಲಕ್ಷಿಸಬೇಕಿಲ್ಲ. ಇನ್ನು ತ್ಯಾಜ್ಯಗಣಗಳು- “ಮೃತ್ಯುಯೋಗ, ಪರಿಘಾರ್ಧ, ಭದ್ರಾ, ಪಾತ, ವೈಧೃತಿ, ವಿಷ್ಕಂಭಾದಿಗಳ ತ್ಯಾಜ್ಯಾಂಶ, ತಿಥಿವೃದ್ಧಿ, ಕ್ಷಯ, ಯಾಮಾರ್ಧ, ಗುಳಿಕ, ಗಂಡಾಂತ, ರವಿಸಂಕ್ರಾಂತಿ, ಕೇತೂದಯ, ಭೂಕಂಪ” ಇತ್ಯಾದಿ ದೋಷಗಳನ್ನು ವಿವಾಹದಲ್ಲಿ ಬಿಡಬೇಕು. ಗ್ರಹಣವಿಷಯದಲ್ಲಿ ನಾಲ್ಕನೇ ಒಂದು ಭಾಗ ಗ್ರಾಸವಾದಲ್ಲಿ ಮೂರುದಿನ, ಅರ್ಧಗ್ರಾಸವಾದರೆ ನಾಲ್ಕು ದಿನ, ಮುಕ್ಕಾಲು ಪಾಲು ಗ್ರಾಸವಾದರೆ ಆರುದಿನ, ಪೂರ್ಣಗ್ರಾಸವಾದರೆ ಎಂಟುದಿನಗಳನ್ನು ಬಿಡಬೇಕು. ಈ ಹೇಳಿದಷ್ಟು ದಿನಗಳನ್ನು ಹಿಂದೆ ಅರ್ಧ ಮುಂದೆ ಅರ್ಧ ಕೂಡಿ ಅಷ್ಟುದಿನಗಳನ್ನು ಬಿಡಬೇಕು. ಉದಾ:- ಕಾಲಂಶ ಗ್ರಾಸವಾದಲ್ಲಿ ಹಿಂದೆ ಒಂದೂವರೆ ಮುಂದೆ ಒಂದೂವರೆ ಅಂತೂ ಮೂರು ದಿನ ಬಿಡತಕ್ಕದ್ದು, ಉಳಿದದ್ದನ್ನೂ ಹೀಗೆಯೇ ತಿಳಿಯಬೇಕು. ಭೂಕಂಪ ಮತ್ತು ಉಲ್ಕಾಪಾತದಲ್ಲಿ ಮೂರು ದಿನ, ಅಶನಿ(ಸಿಡಿಲು) ಪಾತದಲ್ಲಿ ಒಂದು ದಿನ ಬಿಡುವದು. ಕೇತೂದಯದಲ್ಲಿ ಅದು ಕಾಲ ಬಿಟ್ಟರಾಯಿತು. ಇದಕ್ಕೆ ಅಪವಾದ-ನಾಂದೀಶ್ರಾದ್ಧವಾದ ಮೇಲೆ ಭೂಕಂಪಾದಿಗಳಾದರೆ ದೋಷವಿಲ್ಲ. ವಿವಾಹವು ಹಗಲಿನಲ್ಲಿ ಪ್ರಶಸ್ತವು. “ಹೇಮಾದ್ರಿ” ಮೊದಲಾದ ಗ್ರಂಥಗಳಲ್ಲಿ ರಾತ್ರಿಯಲ್ಲಾದರೂ ಕನ್ಯಾದಾನ ಪ್ರಾಶಸ್ತ್ರವನ್ನು ಹೇಳಿದೆ. ತೋರುವಷ್ಟು ೨೮೪ ಧರ್ಮಸಿಂಧು ಮುಹೂರ್ತ ವಿಚಾರ ಮೊದಲು ಲಗ್ನ ಬಲ ವಿಷಯ- ಲಗ್ನದಿಂದ ಮೂರು, ಆರು, ಎಂಟು ಈ ಸ್ಥಾನಗಳಲ್ಲಿ ರವಿ, ಮೂರು, ನಾಲ್ಕು, ಎರಡು ಈ ಸ್ಥಾನಗಳಲ್ಲಿ ಚಂದ್ರ, ಮೂರು, ಆರು ಈ ಸ್ಥಾನಗಳಲ್ಲಿ ಕುಜ, ಹನ್ನೆರಡು, ಎಂಟು ಈ ಸ್ಥಾನಗಳ ಹೊರತಾದ ಸ್ಥಾನಗಳಲ್ಲಿ ಬುಧ, ಗುರು, ಎರಡು, ನಾಲ್ಕು, ಐದು, ಒಂಬತ್ತು, ಹತ್ತು ಮತ್ತು ಲಗ್ನ ಇವುಗಳಲ್ಲಿ ಶುಕ್ರ, ಮೂರು, ಆರು, ಎಂಟು ಈ ಸ್ಥಾನಗಳಲ್ಲಿ ಶನಿ, ರಾಹು, ಕೇತುಗಳು. ಹೀಗೆ ಇದ್ದರೆ ಲಗ್ನವು ಬಲಯುತವಾದದ್ದೆಂದು ತಿಳಿಯಬೇಕು. ಏಕಾದಶ ಸ್ಥಾನದಲ್ಲಿ ಎಲ್ಲ ಗ್ರಹರ ಇರುವಿಕೆಯೂ ಶುಭವಾದದ್ದು. ಲಗ್ನಕ್ಕೆ ವರ್ಜಗ್ರಹರು ಲಗ್ನದಲ್ಲಿ ರವಿ, ಲಗ್ನ, ಷಷ್ಠ, ಅಷ್ಟಮಗಳಲ್ಲಿ ಚಂದ್ರ, ಅಷ್ಟಮ, ಲಗ್ನ, ದಶಮಸ್ಥಾನಗಳಲ್ಲಿ ಕುಜ, ಅಷ್ಟಮದಲ್ಲಿ ಬುಧ, ಗುರುಗಳು; ತೃತೀಯ, ಅಷ್ಟಮ, ಷಷ್ಠಗಳಲ್ಲಿ ಶುಕ್ರ; ಲಗ್ನದಲ್ಲಿ ಶನಿ ಮತ್ತು ಶೇಷಗ್ರಹಗಳು (ರಾಹು ಕೇತು) ಹೀಗಿದ್ದರೆ ಆ ಲಗ್ನವು ಅಶುಭ ಫಲಪ್ರದವಾಗುವದು. ಅಷ್ಟಮ ಮತ್ತು ಸಪ್ತಮದಲ್ಲಿ ಎಲ್ಲ ಗ್ರಹರೂ ಅರಿಷ್ಟಪ್ರದರು. ಕಲ ಗ್ರಂಥಕಾರರು-ದ್ವಾದಶದಲ್ಲಿರುವ ಚಂದ್ರನನ್ನು ವರ್ಜಮಾಡಬೇಕೆಂದೂ, ದ್ರೇಕ್ಕಾಣಾಧಿಪತಿ ಮತ್ತು ನವಾಂಶಾಧಿಪತಿಗಳು ಆರನೇ, ಎಂಟನೇ ಸ್ಥಾನದಲ್ಲಿರಬಾರದೆಂದೂ, ಮತ್ತು ದಶಮದಲ್ಲಿ ಬುಧನು ವರ್ಜನೆಂದೂ ಹೇಳುವರು. ನವಮಾಂಶವೆಂದರೆ ರಾಶಿಯನ್ನು ಒಂಭತ್ತು ಪಾಲುಮಾಡಿದ ಒಂದಂಶ. ಅಂದರೆ ಮೂರು ಅಂಶ ಇಪ್ಪತ್ತು ಕಲೆಗಳು. ಮೇಷಾದಿ ನಾಲ್ಕು ನಾಲ್ಕು ರಾಶಿಗಳಿಗೆ ಮೇಷ, ಮಕರ, ತುಲಾ, ಕರ್ಕ ಹೀಗೆ ಕ್ರಮದಿಂದ ಅಂಶಗಳ ಗಣನೆಮಾಡುವದು. ಉದಾ-ಮೇಷದಲ್ಲಿ ಮೊದಲನ ನವಾಂಶಕ್ಕೆ ಮೇಷಾಧಿಪತಿ ಕುಜನಾಗುತ್ತಾನೆ. ಮುಂದೆ ಎರಡನೇ ನವಾಂಶ ವೃಷಭಾಧಿಪತಿ ಶುಕ್ರನಾಗುತ್ತಾನೆ. ಹೀಗೆ ಒಂಭತ್ತು ನವಾಂಶ ಅಧಿಪತಿಗಳನ್ನು ತಿಳಿಯತಕ್ಕದ್ದು. ಒಂಭತ್ತನೇ ನವಾಂಶ ಅಂದರೆ ಮೇಷಾದಿಯಿಂದ ಧನು ನವಾಂಶವಾಗುತ್ತದೆ. ಇಲ್ಲಿಗೆ ಮೇಷರಾಶಿಯ ನವಾಂಶ ಮುಗಿಯುತ್ತದೆ. ಇನ್ನು ವೃಷಭರಾಶಿಯ ಪ್ರಥಮ ನವಾಂಶ ಮಕರ ಬರುತ್ತದೆ. ಅದರಿಂದ ನವಾಂಶಗಳನ್ನೆಣಿಸುವದು. ಒಂಭತ್ತನೆಯದು ಕನ್ನೆಯಾಗುತ್ತದೆ. ಮಿಥುನದಲ್ಲಿ ಆದಿನವಾಂಶವು ತುಲೆಯಿಂದ ಪ್ರಾರಂಭವಾಗಿ ಮಿಥುನದವರೆಗೆ ಮುಗಿಯುತ್ತದೆ. ಕರ್ಕದ ಆದಿನವಾಂಶವು ಕರ್ಕದಿಂದ ಆರಂಭವಾಗುತ್ತದೆ. ಮೀನ ನವಾಂಶವು ಅಂತದ್ದಾಗುವದು. ಹೀಗೆಯೇ ಸಿಂಹದಿಂದ ಇದೇ ಕ್ರಮದಿಂದೆಣಿಸಿ ವೃಶ್ಚಿಕದ ವರೆಗೆ, ಮುಂದೆ ಧನು ಆದಿಯಿಂದ ಮೀನಾಂತದ ವರೆಗೆ ತಿಳಿಯುವದು. ವೃಷಭ, ಮಿಥುನ, ಕರ್ಕ, ಕನ್ಯಾ, ತುಲಾ, ಧನು, ಮೀನ, ಇವು ಶುಭ ನವಾಂಶಗಳು, ಇಪ್ಪತ್ತೊಂದು (ಏಕವಿಂಶತಿ) ಮಹಾದೋಷಗಳು ೧) ತಿಥಿ, ವಾರ, ನಕ್ಷತ್ರ, ಯೋಗ, ಕರಣ ಹೀಗೆ ಪಂಚಾಂಗದೋಷ; ೨) ಅಷ್ಟಮದಲ್ಲಿ ಅಂಗಾರಕನಿರುವಿಕೆ ೩) ಚಂದ್ರ ಹಾಗೂ ದುಷ್ಟ ನಕ್ಷತ್ರಯುಕ್ತವಾದ ಲಗ್ನ: ೪) ಷಷ್ಠ ಹಾಗೂ ಅಷ್ಟಮದಲ್ಲಿ ಚಂದ್ರನಿರುವಿಕೆ, 5) ಪತ್ರದಲ್ಲಿ ಶುಕ್ರನಿರುವಿಕೆ;೬) ಸಂಕ್ರಾಂತಿ, ೭) ಗಂಡದೋಷ (ನಕ್ಷತ್ರ, ತಿಥಿ, ಲಗ್ನ, ಗಂಡಾಂತ) ೮)ಪಾಪ-ಗ್ರಹಯುಕ್ತ ನಕ್ಷತ್ರ; ೯)ಕುಲಿಕ (ಗುಳಿಕ) ಪರಿಚ್ಛೇದ • ೩ ಪೂರ್ವಾರ್ಧ ೨೮೫ ಅರ್ಧಯಾಮಾದಿ; ೧೦) ಚಕ್ರ, ಚಕ್ರಾರ್ಧಪಾತ ಯೋಗ; ೧) ವಧೂ-ವರರ ಲಗ್ನ ಅಥವಾ ಚಂದ್ರರಾಶಿಯಿಂದ ಲಗ್ನವು ಅಷ್ಟಮವಾಗಿರುವಿಕೆ; ೧೨) ದುಷ್ಟ ಷಡ್ವರ್ಗ (ಷಡ್ವರ್ಗಗಳಲ್ಲಿ ಪಾಪಬಾಹುಲ್ಕವಿರುವಿಕೆ)೧೩) ಸಪ್ತಮದಲ್ಲಿ ಪಾಪಗ್ರಹರಿರುವಿಕೆ; ೧೪) ಲಗ್ನ ಮತ್ತು ಸಪ್ತಮ ಶುದ್ಧಿಯಿಲ್ಲದಿರುವಿಕೆ; ೧೫) ನಕ್ಷತ್ರವು ಪಾಪಗ್ರಹರಿಂದ ವಿದ್ಧವಾಗುವಿಕೆ; ೧೬) ಕರ್ತರೀಯೋಗ (ಲಗ್ನ, ಚಂದ್ರರ ಹಿಂದೆ ಮುಂದಿನ ರಾಶಿಗಳಲ್ಲಿ ಪಾಪಗ್ರಹಗಳಿರುವಿಕೆ ) ೧೭) ಏಕಾರ್ಗ೮; ೧೮) ಗ್ರಹಣ ನಕ್ಷತ್ರ; ೧೯) ದುಷ್ಟನವಾಂಶ ೨೦) ದುರ್ಮುಹೂರ್ತ ೨೧)ಉತ್ಪಾತಹೊಂದಿದ ನಕ್ಷತ್ರ. ಹೀಗೆ ೨೧ ಮಹಾದೋಷಗಳನ್ನು ವಿವಾಹದಲ್ಲಿ ತ್ಯಾಜ್ಯ ಮಾಡತಕ್ಕದ್ದು. (ಈ ೨೧ ಮಹಾದೋಷಗಣನೆಯಲ್ಲಿ ಮುಹೂರ್ತಾದಿ ಗ್ರಂಥಗಳೊಳಗೆ ಸ್ವಲ್ಪ ವಿಸಂಗತ್ವವಿದೆ. ಕೆಲಕಡೆಯಲ್ಲಿ ವಿಷಘಟಿಗಳನ್ನೂ ಈ ಗಣದಲ್ಲಿ ಸೇರಿಸಿದ್ದಾರೆ. ಚಕ್ರಾರ್ಧಪಾತ, ಅರ್ಧಯಾಮ, ಏಕಾರ್ಗಲಾದಿ ವಿಷಯಗಳ ವಿವರಗಳನ್ನು “ಮುಹೂರ್ತ ಗ್ರಂಥಗಳಲ್ಲಿ ನೋಡತಕ್ಕದ್ದು.) ಆಪತ್ಕಾಲದಲ್ಲಿ ಗೋಧೂಲಿ ಲಗ್ನವು ಸೂರ್ಯನು ಅಸ್ತವಾಗುವಾಗ ಅರ್ಧ ಅಸ್ತಕ್ಕಿಂತ ಮೊದಲು ಹದಿನೈದು ಪಳೆ, ಮುಂದೆ ಹದಿನೈದು ಪಳೆ ಕೂಡಿ ಅರ್ಧಘಟಿ ಇದಕ್ಕೆ “ಗೋಧೂಲಿ” ಎನ್ನುವರು. ಗೋಧೂಲಿ ಮುಹೂರ್ತಕ್ಕ ವಿವಾಹಕ್ಕೆ ಹೇಳಿದ ಪಂಚಾಂಗ ಶುದ್ಧಿಯು ಆವಶ್ಯಕವು, ಗೋಧೂಲಿ ಮುಹೂರ್ತವು ಶೂದ್ರರಿಗೆ ಶುಭವು. ಆರನೇ ಅಥವಾ ಎಂಟನೇ ಸ್ಥಾನದಲ್ಲಿ ಚಂದ್ರ, ಪಾಪಗ್ರಹಯುಕ್ತವಾದ ಲಗ್ನ, ಅಷ್ಟಮದಲ್ಲಿ ಮಂಗಳ, ಗುರು ಮತ್ತು ಶನಿವಾರ, ಮಹಾಪಾತ, ಸಂಕ್ರಾಂತಿ ದಿನ ಈ ದೋಷಗಳಿರುವಾಗ “ಗೋಧೂಲಿ"ಯು ವರ್ಜವು. ಇತರ ದೋಷಗಳಿದ್ದರೆ ಅಡ್ಡಿ ಇಲ್ಲ. ಬ್ರಾಹ್ಮಣಾದಿಗಳು ಅಪತ್ಕಾಲದಲ್ಲಿ ಅಥವಾ ಕನ್ಯ ಪ್ರೌಢಾವಸ್ಥೆಗೆ ಬಂದಾಗ ಗೋಧೂಲಿ ಮುಹೂರ್ತವನ್ನು ವಿವಾಹದಲ್ಲಿ ಸ್ವೀಕರಿಸಬಹುದೆಂದು ಕೆಲಗ್ರಂಥಗಳಲ್ಲಿ ಹೇಳಿದೆ. ಇನ್ನು ಚಂದ್ರ ತಾರಾಬಲಾದಿಗಳ ಅಭಾವದಲ್ಲಿ ದಾನಗಳು-ಚಂದ್ರನ ಸಲುವಾಗಿ “ಶಂಖ”, ತಾರಾ ಸಲುವಾಗಿ “ಲವಣ”, ತಿಥಿಯು ನಿಷಿದ್ಧವಾದಲ್ಲಿ “ತಂಡುಲ,ವಾರ, ಕರಣಗಳ ಸಲುವಾಗಿ “ಧಾನ್ಯ”, ಯೋಗವು ನಿಷಿದ್ಧವಾಗಿದ್ದರೆ ಬಂಗಾರ, ಹೀಗೆ ದಾನಮಾಡತಕ್ಕದ್ದು. ಷಡ್ವರ್ಗ ಶುದ್ಧಾದಿ ವಿಚಾರ, ಕಾಲಸಾಧನಾದಿ ರೀತಿ, ಕುಲಿಕ ಮೊದಲಾದವುಗಳ ವಿವರ ಇವುಗಳನ್ನೆಲ್ಲ ಜ್ಯೋತಿಷ ಗ್ರಂಥಗಳಿಂದ ತಿಳಿಯತಕ್ಕದ್ದು. ವಿಸ್ತರ ಭೀತಿಯಿಂದ ಇಲ್ಲಿ ಹೇಳಿಲ್ಲ. ಹೀಗೆ ಸಂಕ್ಷೇಪವಾಗಿ ಮುಹೂರ್ತ ವಿಚಾರವು. ವಿವಾಹದ ಅಂಗವಾದ ಮಂಡಪ ಮೊದಲಾದ ವಿಚಾರ ಮಂಟಪ ನಿರ್ಮಾಣ ಮೊದಲಾದ ಅಂಗಕಾರ್ಯಗಳನ್ನು ವಿವಾಹಕ್ಕೆ ಎತ್ತಿದ ನಕ್ಷತ್ರಾದಿಗಳಲ್ಲಿ ಮಾಡಬೇಕು. “ಕುಟ್ಟುವದು, ಬೀಸುವದು, ಮಂಟಪದ ಮಣ್ಣನ್ನು ಸಂಗ್ರಹಿಸುವದು, ವೇದಿ ಮಾಡುವದು, ಅದರ ಸಂಬಂಧ ಓಡಾಟ ಮಾಡುವದು ಇವುಗಳಿಗೆಲ್ಲ ವಿವಾಹಕ್ಕೆ ಹೇಳಿದ ನಕ್ಷತ್ರಗಳೇ ಪ್ರಶಸ್ತವು” ಹೀಗೆ ವಚನವಿದೆ. ಅರಿಶಿನ ಹಚ್ಚುವದು ಮೊದಲಾದ ಅಂಗಕಾರ್ಯಗಳಲ್ಲಿ ಚಂದ್ರಬಲವನ್ನು ನೋಡಬೇಕಾಗಿಲ್ಲ. ವಿವಾಹಾಂಗ ಕಾರ್ಯಗಳನ್ನು ವಿವಾಹದ ಮೊದಲು ಮೂರು, ಆರು, ಒಂಭತ್ತು ದಿನಗಳಲ್ಲಿ ಮಾಡಬಾರದು. ಇನ್ನು “ಮಂಡವ” ಹದಿನಾರು, ಹನ್ನೆರಡು, ಹತ್ತು, ಎಂಟು ಸಂಖ್ಯೆಗಳ ಹಸ್ತಪ್ರಮಾಣ ಮಾಡಿ ನಾಲ್ಕು ದ್ವಾರಗಳನ್ನಿಡಬೇಕು. ಮಂಡಪದ ಒಳಗಡೆ ೨೮೬ ಧರ್ಮಸಿಂಧು ವರನ ನಾಲ್ಕು ಹಸ್ತ ಅಥವಾ ವಧುವಿನ ಐದು ಹಸ್ತ ಪರಿಮಾಣದ ಚೌಕವನ್ನು ಮಾಡಿ ಮೆಟ್ಟಿಲಗಳನ್ನಿಡಬೇಕು. ಪೂರ್ವಕ್ಕೆ ತಗ್ಗಾಗಿರಬೇಕು. ಬಾಳೆಕಂಬ ಮೊದಲಾದವುಗಳಿಂದ ಅಲಂಕರಿಸಲ್ಪಡಬೇಕು. ಮನೆಯ ಹೊರಗೆ ಹೋಗುವಾಗ ಎಡದಿಕ್ಕಿಗಾಗುವಂತೆ ರಚಿಸಬೇಕು. ಹೀಗೆ ವೇದಿಯಿರತಕ್ಕದ್ದು. ಕನ್ನೆಯ ಜನ್ಮಕಾಲದಿಂದುಂಟಾದ ಗ್ರಹಾದಿಗಳ ಯೋಗದಿಂದುಂಟಾಗುವ ವೈಧವ್ಯಪರಿಹಾರೋಪಾಯವು ಅದಕ್ಕೆ “ಮೂರ್ತಿದಾನ”, ಕನ್ನೆಯು ದೇಶಕಾಲಗಳನ್ನು ಚ್ಚರಿಸಿ “ವೈಧವ್ಯಹರಂ ಶ್ರೀ ವಿಷ್ಣು ಪ್ರತಿಮಾದಾನಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಪಲ, ಅರ್ಧಫಲ ಅಥವಾ ಕಾಲು ಪಲ ಪ್ರಮಾಣದ ಬಂಗಾರದಿಂದ ನಿರ್ಮಿತವಾದ ಆಯುಧಗಳಿಂದ ಯುಕ್ತವಾದ, ನಾಲ್ಕು ಭುಜಗಳುಳ್ಳ ವಿಷ್ಣು ಪ್ರತಿಮೆ ಮಾಡಿಸಿ, ಆಚಾರ್ಯನ ಕಡೆಯಿಂದ ಅನ್ನುತ್ತಾರಣಾದಿಗಳನ್ನು ಮಾಡಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. ವಸ್ತ್ರ ಉಪಚಾರಕ್ಕಾಗಿ ಹಳದೀವಸ್ತ್ರವನ್ನರ್ಪಿಸಬೇಕು. ಪೂಜಾನಂತರ ದೇವನನ್ನು ನಮಸ್ಕರಿಸಿ “ದನ್ಮಯಾ ಪ್ರಾತಿ ಜನುಷಿಯಂತ್ಯಾ ಪುಸಮಾಗಮಂ ವಿಷೇಷವಿಷ ಶಸ್ತ್ರಾದ್ಯ: ಹತೋವಾಪಿ ವಿರಕ್ತಯಾ | ಪ್ರಾಪ್ತಮಾಣಂ ಮಹಾಘೋರಂ ಯಶಃ ಸೌಖ್ಯ ಧನಾಪಹಂ ವೈಧವ್ಯಾಕೃತಿ ದುಃಖಘಂ ತನ್ನಾಶಯ ಸುಖಾಪ್ತಯೇ ಬಹುಸೌಭಾಗ್ಯವೃಧ್ವಚ ಮಹಾವಿಷ್ಟೋರಿಮಾಂ ತನುಂ ಸೌವರ್ಣಂ ನಿರ್ಮಿತಾಂ ಶಾತುಭಂ ಸಂಪ್ರದರೇ ದ್ವಿಜ” ಎಂಬ ಈ ಮಂತ್ರವನ್ನು ಹೇಳಿ ಪ್ರತಿಮೆಯ ದಾನಮಾಡಬೇಕು. ಆಮೇಲೆ ಯಥಾಶಕ್ತಿ ಸುವರ್ಣ ದಕ್ಷಿಣೆಯನ್ನು ಕೊಟ್ಟು “ಅನಘಾದ್ಯಾಹಮಸ್ಮಿ” ಹೀಗೆ ಮೂರಾವರ್ತಿ ಹೇಳಬೇಕು. ಹಾಗೆ ಆಗಲಿ (ತಥಾಸ್ತು) ಎಂದು ಬ್ರಾಹ್ಮಣರೂ ಮೂರಾವರ್ತಿ ಹೇಳತಕ್ಕದ್ದು. ನಂತರ ಬ್ರಾಹ್ಮಣಭೋಜನ ಇತ್ಯಾದಿ. ವೈಧವ್ಯಹರ ಕುಂಭವಿವಾಹ ವಿವಾಹಕರ್ತೃಗಳಾದ ತಂದೆ ಮೊದಲಾದವರು “ಕನ್ಯಾವೈಧವ್ಯಹರಂ ಕುಂಭವಿವಾಹಂ ಕರಿಷ್ಯ ಹೀಗೆ ಸಂಕಲ್ಪಿಸಿ ನಾಂದೀಶ್ರಾದ್ಧಾನಂತರ “ಮಹೀದ್ಯಾ” ಇತ್ಯಾದಿಗಳಿಂದ ಕಲಶಸ್ಥಾಪನೆ ಮಾಡಿ ವರುಣ ಪ್ರತಿಮೆಯಲ್ಲಿ ವರುಣನನ್ನಾವಾಹಿಸಿ ಪೂಜಿಸಿ ಕಲಶಮಧ್ಯದಲ್ಲಿ ವಿಷ್ಣು ಪ್ರತಿಮೆಯನ್ನಿಟ್ಟು ಷೋಡಶೋಪಚಾರಗಳಿಂದ ಪೂಜಿಸುವದು, ಮತ್ತು ಪ್ರಾರ್ಥಿಸುವದು. “ವರುಣಾಂಗ ಸ್ವರೂಪಾಯ ಜೀವನಾನಾಂ ಸಮಾಶ್ರಯಃ ಪತಿದೇವಯ ಕಾಯಾಃ ಚಿರಂಪುತ್ರ ಸುಖಂ ಕುರು, ದೇಹಿವಿಷ್ಟೂ ವರಂದೇವ ಕಾಂಪಾಲಯ ದುಃಖತಃ” ಹೀಗೆ ಪ್ರಾರ್ಥಿಸಬೇಕು. ನಂತರ “ಎಷ್ಟು ರೂಪಿಈ ಕುಂಭಾಯ ಇಮಾಂ ಕಾಂ ಶ್ರೀ ರೂಪಿಣೀಂ ಸಮರ್ಪಯಾಮಿ” ಹೀಗೆ ಸಮರ್ಪಿಸಿ “ಪರಿತ್ವಾ” ಇತ್ಯಾದಿ ಮಂತ್ರಗಳಿಂದ ಕೆಳಗಡೆ ಹಾಗೂ ಮೇಲೆ ಕುಂಭವನ್ನು, ಕನ್ನೆಯನ್ನೂ ಬೇರೆ ಬೇರೆಯಾಗಿ ಮಂತ್ರಗಳನ್ನು ಹೇಳಿ ಸುತ್ತಿ ಆಮೇಲೆ ಕುಂಭವನ್ನು ತೆಗೆದು ಜಲಾಶಯದಲ್ಲಿ ಒಡೆಯುವದು. ಶುದ್ಧ ಜಲದಿಂದ “ಸಮುದ್ರ” ಇತ್ಯಾದಿ ಮಂತ್ರಗಳಿಂದ, ಪಂಚಪಲ್ಲವಗಳಿಂದ ಕನ್ನೆಗೆ ಅಭಿಷೇಕ ಮಾಡಿ ಬ್ರಾಹ್ಮಣಭೋಜನ ಮಾಡಿಸುವದು. ಹೀಗೆ ಕುಂಭವಿವಾಹವು. ವರನ ಮೃತಭಾರ್ಯಾ ಪರಿಹಾರೋಪಾಯ “ಪರಿವೇತೃತ್ವ” ವಾಪದಿಂದ ಪತ್ನಿಯು ಮೃತಳಾಗುವಳು ಎಂದಿದೆ. ಅದರ ಪರಿಹಾರಕ್ಕಾಗಿ ಮೂರು ಪ್ರಾಜಾವ, ಮೂರು ಚಾಂದ್ರಾಯಣ ಪ್ರಾಯಶ್ಚಿತ್ತ ಮಾಡಿ ಪುನಃ ಪುನಃ ಪತ್ನಿಯು ಪರಿಚ್ಛೇದ • ೩ ಪೂರ್ವಾರ್ಧ ೨೮೭ ಮೃತಳಾಗುವಲ್ಲಿ ಎರಡೂ ಪ್ರಾಯಶ್ಚಿತ್ತಗಳನ್ನು, ಮೃತರಾದವರ ಸಂಖ್ಯೆಯಿಂದ ಆವೃತ್ತಿ ಮಾಡಿ ‘ಮೃತಭಾರ್ಯಾತ್ವನಿರಾಸನಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಆಯುತಸಂಖ್ಯಾಕ ಚರ್ವಾಜ ಹೋಮಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಅಗ್ನಿಪ್ರತಿಷ್ಠೆ ಮಾಡಿ ಅನ್ನಾಧಾನಮಾಡುವದು. “ದುರ್ಗಾಗ್ನಿ ವಿಷ್ಣನ್ ಅಷ್ಟಾಧಿಕಾಯುತ ಸಂಖ್ಯಾಭಿ: ಚರ್ವಾಹ್ಮಾಹುತಿಭಿಃ ಶೇಷೇಣ ಸ್ವಿಷ್ಟಕೃತ್‌ ಇತ್ಯಾದಿ ಪ್ರತಿ ದೇವತೆಗಳಿಗೂ ಅಮಂತ್ರಕವಾಗಿ ನಿರ್ವಾವಮಾಡಿ ಪ್ರೋಕ್ಷಿಸಿ ತ್ಯಾಗಕಾಲದಲ್ಲಿ (ಹತ್ತುಸಾವಿರದ ಎಂಟು) “ಅಷ್ಟೋತ್ತರಾಧಿಕ ದಶಸಹಸ್ರ ಸಂಖ್ಯಾಹು ಪರ್ಯಾಪ್ತಂ ಚರ್ವಾಜ್ಯದ್ರವ್ಯಂ ಯಥಾಮಂತ್ರಲಿಂಗಂ ದುರ್ಗಾಯ್ಯ ಅಗ್ನಯೇ ವಿಷ್ಣು ವೇಚ ನಮಮ ಹೀಗೆ ತ್ಯಾಗಮಾಡತಕ್ಕದ್ದು. “ಜಾತವೇದರ ಇತ್ಯನುವಾರಸ್ಯ ಉಪನಿಷದ ಋಷಯ: ದುರ್ಗಾಗ್ನಿ ವಿಷ್ಣವೋದೇವತಾಃ ತ್ರಿಷ್ಟುಪ್ ಛಂದಃ ಚರ್ಮಾಜ್ಯಮ ವಿನಿಯೋಗ: ಅನುವಾಕದ ಆವೃತ್ತಿಯಿಂದ ಪ್ರತಿಮಂತ್ರದಿಂದಲೂ ಹೋಮಿಸುವದು. ಅದರಲ್ಲಿ ಮೊದಲು ಚತುರಧಿಕ ಪಂಚಸಹಸ್ರ (೫೦೦೪) ಸಂಖ್ಯಾಕ ಚರುವನ್ನು ಹೋಮಿಸುವದು. ಆಮೇಲೆ ಐದು ಸಹಸ್ರ ನಾಲ್ಕು ಆಜ್ಯಹೋಮ ಮಾಡುವದು. ಹೀಗೆ ಹತ್ತುಸಾವಿರದ ಎಂಟು ಹೋಮವು. ಹೋಮಶೇಷವನ್ನು ಮುಗಿಸಿ ಹತ್ತು ಬ್ರಾಹ್ಮಣಭೋಜನ ಮಾಡಿಸುವದು; ಅಥವಾ ಯಾವನಾದರೊಬ್ಬನಿಗೆ ವಿವಾಹ ಮಾಡಿಸುವದು. ಮೃತಪುತ್ರತ್ವ (ಹುಟ್ಟಿ-ಹುಟ್ಟಿದವರು ಮೃತರಾಗುವದು) ದೋಷ ಅದಕ್ಕೆ ಬ್ರಾಹ್ಮಣರಿಗೆ, ವಿವಾಹ ಮಾಡಿಸಬೇಕು. ಹರಿವಂಶ ಶ್ರವಣಮಾಡಬೇಕು. ಮಹಾರುದ್ರ ಜಪಗಳನ್ನು ಮಾಡಬೇಕು. ಶಕ್ಯವಾದಲ್ಲಿ ಈ ಮೂರನ್ನೂ ಮಾಡಬೇಕು. ರುದ್ರ, ಜಪದಲ್ಲಿ ದಶಾಂಶದಿಂದ ಆಜ್ಞಾರ ಪೂರ್ವಾಹೋಮವನ್ನು ಮಾಡತಕ್ಕದ್ದು. ಹರಿವಂಶಶ್ರವಣ ಹಾಗೂ ಅನ್ಯವಿಧಾನಗಳನ್ನು ವಿಸ್ತಾರವಾಗಿ ಮೊದಲೇ ಹೇಳಿದೆ. ಇನ್ನು ಕನ್ಯಾದಾನ ಪ್ರಶಂಸಾ ಹಾಗೂ ಅವಳ ಮನೆಯಲ್ಲಿ ಭೋಜನ ನಿಷೇಧಾದಿಗಳು:- ಯಥಾಶಕ್ತಿ ಅಲಂಕೃತಳಾದ ಕನ್ಯಾದಾನ ಮಾಡಿದವನು ಮತ್ತು ಅಶ್ವಮೇಧಯಾಗ ಮಾಡಿದವನು, ಭೀತಿಯುಂಟಾದಾಗ ಪ್ರಾಣದಾನಮಾಡಿದವನು- ಈ ಮೂವರೂ ಸಮವಾದ ಪುಣ್ಯ ಉಳ್ಳವರಾಗುವರು. ಕನ್ಯಾದಾನ ಮಾಡಿದವನ ಪಿತೃ-ಪಿತಾಮಹಾದಿಗಳು ಈ ವಾರ್ತೆಯನ್ನು ಕೇಳಿ ಸಮಸ್ತ ಪಾಪಗಳಿಂದ ಮುಕ್ತರಾಗಿ ಬ್ರಹ್ಮಲೋಕವನ್ನು ಸೇರುವರು. ಹೀಗೆ ಕನ್ಯಾದಾನ ಪ್ರಶಂಸೆಯಿದೆ. “ಅಳಿಯನು ವಿಷ್ಣು ರೂಪನು” ಎಂದು ತಿಳಿದು ಅವನ ಮೇಲೆ ಕೋಪಾದಿಗಳನ್ನು ಮಾಡಬಾರದು. ಕನ್ನೆಯು ಸಂತತಿಯನ್ನು ಹೊಂದುವ ವರೆಗೆ ಕನ್ನೆಯ ತಂದೆಯು ಮತ್ತು ತಾಯಿಯರು ಅವಳ ಮನೆಯಲ್ಲೂಟಮಾಡಬಾರದು. ಹೀಗೆ ಭೋಜನ ನಿಷೇಧವನ್ನು ಹೇಳಿದೆ. ವಿವಾಹಕಾರ್ಯದಲ್ಲಿ ವರನು ವಧುವಿನಿಂದ ಸಹಿತ ಭೋಜನ ಮಾಡಿದರೆ ದೋಷವಿಲ್ಲ. ಬೇರೆ ಕಾಲದಲ್ಲಿ ಪತ್ನಿಯೊಡನೆ ಭೋಜನ ಮಾಡಿದಲ್ಲಿ ಚಾಂದ್ರಾಯಣ ಪ್ರಾಯಶ್ಚಿತ್ತವನ್ನು ಹೇಳಿದೆ. ವಾಗ್ದಾನಾದಿ ವಿಚಾರ ವಿವಾಹನಕ್ಷತ್ರಾದಿ ಸುದಿನದಲ್ಲಿ ವರನ ತಂದೆ ಮೊದಲಾದವರು ಕನ್ನೆಯ ಮನೆಗೆ ಹೋಗಿ ‘ಕನ್ಯಾಪೂಜನಂ ಕರಿಷ್ಟೇ, ತದಂಗನ ಗಣಪತಿಪೂಜನಂ ವರುಣಪೂಜನಂ ಚ ಕರಿಷ್ಟೇ"ಹೀಗ ಸಂಕಲ್ಪಿಸುವದು. ಕನ್ಯಾಪಿತನು “ಕರಿಷ್ಯಮಾಣಕನ್ಯಾದಾನಾಂಗಭೂತಂ ವಾಗ್ದಾನಂ ಕರಿಷ್ಯ; ತರಂಗಂ SOG ಧರ್ಮಸಿಂಧು ಗಣಪತಿಪೂಜನಂ ವರುಣಪೂಜನಂ ಚ ಕರಿಷ್ಯ ಹೀಗೆ ಸಂಕಲ್ಪಿಸುವದು. ಉಳಿದ ಪ್ರಯೋಗಗಳನ್ನು ಆಯಾಯ ಸೂತ್ರಗ್ರಂಥದಿಂದ ತಿಳಿಯತಕ್ಕದ್ದು. ವಿವಾಹ ದಿನದಲ್ಲಾಗಲೀ, ಮೊದಲಿನ ದಿನದಲ್ಲಾಗಲೀ ವಧುವಿಗೆ ಅರಿಶಿನ ಕುಂಕುಮಾದಿಗಳಿಂದ ಅಭ್ಯಂಗಸ್ನಾನಮಾಡಿಸುವದು ಮತ್ತು ಆ ಶೇಷವನ್ನು (ಅರಿಶಿನ ಎಣ್ಣೆ) ವರನಿಗೂ ಲೇಪಿಸಿ ಅಭ್ಯಂಗಸ್ನಾನ ಮಾಡಿಸುವ ಆಚಾರವಿದೆ. ವಿವಾಹ ಸಂಕಲ್ಪಾದಿಗಳು ವರಪಿತನು ಪತ್ನಿ-ಪುತ್ರಸಹಿತನಾಗಿ ಅಭ್ಯಂಗಸ್ನಾನಮಾಡಿ ಅಹತವಸ್ತ್ರವನ್ನುಟ್ಟು ಪೂರ್ವಾಭಿಮುಖನಾಗಿ ಬಲಗಡೆಗೆ ಪತ್ನಿ, ಅವಳ ಬಲಗಡೆಯಲ್ಲಿ ಪುತ್ರ ಹೀಗೆ ಕೂಡ್ರಿಸಿ ದೇಶಕಾಲಗಳನ್ನುಚ್ಚರಿಸಿ “ಮಮ ಅಸ್ಯ ಪುತ್ರಸ್ಯ ದೈವ, ಪಿತ್ರ ಋಣಾಪಾಕರಣ ಹೇತು ಧರ್ಮಪ್ರಜೋತ್ಪಾದನದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ವಿವಾಹಾಖ್ಯಂ ಸಂಸ್ಕಾರಕರ್ಮ ಕರಿಷ್ಟೇ, ತದಂಗನ ಸ್ವಸ್ತಿವಾಚನ, ಮಾತೃಕಾಪೂಜನಂ, ನಾಂದೀಶ್ರಾದ್ಧಂ, ನಂದಿನ್ಯಾದಿ ಮಂಡಪದೇವತಾಸ್ಥಾಪನಂ ಚ ಕರಿಷ್ಟೇ; ಆದೌ ನಿರ್ವಿಘ್ನತ ಸಿಧ್ಯರ್ಥಂ ಗಣಪತಿಪೂಜಾಂ ಕರಿಷ್ಮ“ಹೀಗೆ ಪುತ್ರನ ವಿವಾಹದಲ್ಲಿ ಸಂಕಲ್ಪವು. ಕನ್ಯಾ ವಿವಾಹದಲ್ಲಿ ಜಾತಕರ್ಮಾದಿ ಲೋಪವಾಗಿದ್ದರೆ’ಮಮ ಅಸ್ಕಾ ಕನ್ಯಾಯಾಃ ಜಾತಕರ್ಮ, ನಾಮಕರ್ಮ, ಸೂರ್ಯಾವಲೋಕನ, ನಿಷ್ಟ್ರಮಣ, ಉಪವೇಶನ, ಅನ್ನಪ್ರಾಶನ, ಚೌಲಸಂಸ್ಕಾರಾಣಾಂ ಬುದ್ದಿಪೂರ್ವಕ ಲೋಪಜನ್ಮ ಪ್ರತ್ಯವಾಯ ಪರಿಹಾರಾರ್ಥಂ ಪ್ರತಿಸಂಸ್ಕಾರಂ ಅರ್ಧ ಕೃಚ್ಛಂ ಚೂಡಾಯಾಃ ಕೃಚ್ಛಂ ತತ್ಪಾಮ್ಮಾಯ ಗೋನಿಯೀಭೂತ ಯಥಾಶಕ್ತಿ ರಜತ ದಾನೇನ ಅಹಮಾಚರಿ” ಗರ್ಭಾಧಾನ, ಸೀಮಂತ ಲೋಪವಾದಲ್ಲಿ ಅದರಂತ ಹೇಳಬೇಕು. ನಂತರ “ಮಮ ಅಸ್ಕಾಂ ಕಾಯಾಃ ರ್ಭಾಸವ ಧರ್ಮ ಪ್ರಜೋತ್ಪಾದನ ದ್ರವ್ಯಪರಿಗ್ರಹ ಧರ್ಮಾಚರಣೇಷು ಅಧಿಕಾರ ಸಿದ್ದಿ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ವಿವಾಹಾಂ ಸಂಸ್ಕಾರಂ ಕರಿಷ್ಯ” ಹೀಗೆ ವಿಶೇಷವು. ಉಳಿದದ್ದೆಲ್ಲ ಮೊದಲಿನಂತೆ, ಅಣ್ಣನು ಕರ್ತೃವಾದರೆ ವರನಿಗೆ “ಮಮ ಭ್ರಾತು” ಹೀಗೆ ಹೇಳುವದು, ವಧುವಿಗಾದರೆ “ಮಮ ಭಗಿನ್ಯಾ’, ದೊಡ್ಡ ತಂದೆ, ಚಿಗಪ್ಪ ಮೊದಲಾದವರು ಕರ್ತೃಗಳಾದರೆ “ಮಮ ಭ್ರಾತೃಪುತ್ರ” ಅಥವಾ “ಭ್ರಾತೃಕನ್ಯಾಯಾಃ” ಹೀಗೆ ಸಂಕಲ್ಪಮಾಡುವದು. ವರ-ವಧೂಗಳು ಸ್ವಯಂ ಕರ್ತೃಗಳಾದರೆ “ಮಮ ದೈವಪಿತ್ರ್ಯ ಋಣ” “ಮಮ ಛತ್ರ್ರಾ ಸಹ” ಇತ್ಯಾದಿ ಸಂಕಲ್ಪವು. ಕೆಲವರು ಸ್ವಸ್ತಿವಾಚನ ಕಾಲದಲ್ಲಿ ಅಥವಾ ಕನ್ಯಾದಾನಾದಿ ಕಾಲದಲ್ಲಿ ಪ್ರಧಾನ ವಿವಾಹ ಸಂಕಲ್ಪವನ್ನು ಮಾಡುವದಿಲ್ಲ. ಅದು ಪ್ರಮಾದವೆಂದು ಬಹು ಶಿಷ್ಟರು ಹೇಳುವರು. ಇನ್ನು ಕೆಲವರು ಕನ್ಯಾದಾನ, ವಿವಾಹ ಹೋಮಾದಿಗಳ ಸಂಕಲ್ಪವೇ ಪ್ರಧಾನ ಸಂಕಲ್ಪ ಹೊರತು ಅವುಗಳ ಹೊರತಾಗಿ ವಿವಾಹ ಪದಾರ್ಥಗಳು ಬೇರೆ ಇಲ್ಲವೆನ್ನುವರು. ನಾಂದೀಶ್ರಾದ್ಧದಲ್ಲಿ ದೇವತಾವಿಚಾರ ವರನ ಅಥವಾ ವಧುವಿನ ತಂದೆಗೆ ಪಿತೃ, ಮಾತೃ, ಮಾತಾಮಹ ಇವರು ತೀರಿಕೊಂಡಿದ್ದರೆ ತನ್ನ ಅಂದರೆ ಕರ್ತೃದ ತಂದೆಯು ಪಿತ್ರಾದಿ ಉದ್ದೇಶ, ಮಾತ್ರಾದಿ ಉದ್ದೇಶ, ಮಾತಾಮಹಾದಿ ಉದ್ದೇಶ ಹೀಗೆ ಮೂರು ಪಾರ್ವಣಯುಕ್ತವಾದ ನಾಂದೀಶ್ರಾದ್ಧವನ್ನು ಮಾಡುವ ಬಗ್ಗೆ ಸಂಶಯವೇಪರಿಚ್ಛೇದ - ೩ ಪೂರ್ವಾರ್ಧ ಇಲ್ಲ. ತಾಯಿಯು ಜೀವಿಸಿರುವಾಗ ಮಾತೃಪಾರ್ವಣವು ಲೋಪವಾಗುವದು. ಮಾತಾಮಹನೊಬ್ಬನು ಬದುಕಿದ್ದರೆ ಆ ಮಾತಾಮಹ ಪಾರ್ವಣವು ಲೋಪವಾಗುವದು. ಹೇಳಿದ ಈ ಎರಡರ ವಿಷಯದಲ್ಲಿ ಎರಡನೇ ಪಾರ್ವಣಗಳಿಂದ ನಾಂದೀಶ್ರಾದ್ಧವಾಗಬೇಕಾಗುವದು. ಮಾತೃ, ಮಾತಾಮಹರು ಜೀವಿಸಿರುವಾಗ ಪಿತೃಪಾರ್ವಣ ಒಂದರಿಂದಲೇ ಅದು ಸಿದ್ಧಿಸುವರು. ಪಿತಾಮಹನು ಬದುಕಿದ್ದು ಪಿತೃ-ಪ್ರಪಿತಾಮಹರು ಮೃತರಾದಲ್ಲಿ “ಪಿತೃ ಪಿತಾಮಹ ತತರೋ ನಾಂದೀಮುಖಾಃ ಇದಂ ವಃ ಪಾದ್ಯಂ ಹೀಗೆ ಪ್ರಯೋಗಿಸುವದು. ಪಿತೃ, ಪಿತಾಮಹರು ಮೃತರಾಗಿದ್ದು ಪ್ರಪಿತಾಮಹನೊಬ್ಬನೇ ಬದುಕಿದ್ದರೆ “ಪಿತೃ ಪಿತಾಮಹ ತಪ್ಪಿತಾಮಹಾಃ” ಹೀಗೆ ಉದ್ದೇಶಿಸುವದು. ತಂದೆಯು ಮರಣಪಟ್ಟಿದ್ದು ಪಿತಾಮಹ, ಪ್ರಪಿತಾಮಹರು ಜೀವಿಸಿರುತ್ತಿದ್ದರೆ " ಪಿತುಃ ಪಿತಾಮಹಸ್ಯ ಪಿತಾಮಹ ಪ್ರಪಿತಾಮಹೌ ಚ ನಾಂದೀಮುಖಾಃ” ಹೀಗೆ ಉಚ್ಚರಿಸುವದು. ಮಾತೃವು ಮೃತಳಾಗಿದ್ದು ಪಿತಾಮಹಿಯು ಮಾತ್ರ ಜೀವಿಸಿರುತ್ತಿದ್ದರೆ ಮಾತು:ಪಿತು: ಪಿತಾಮಹೀ ಪ್ರಪಿತಾಮಹ ಚ ನಾಂದೀಮುಖ್ಯ: ಹೀಗೆ ಉಚ್ಚರಿಸುವದು. ಪಿತಾಮಹೀ, ಪ್ರಪಿತಾಮಹಿಗಳು ಜೀವಂತರಾಗಿದ್ದರೆ ಮಾತು: ಪ್ರಪಿತಾಮಹಸ್ಯ ಪಿತಾಮಹೀ ಪ್ರಪಿತಾಮಹ ಚ” ಹೀಗೆ ಉಚ್ಚಾರವು. ಮುಖ್ಯ ಮಾತೃವು ಜೀವಂತಳಾಗಿದ್ದು ಸವತೀತಾಯಿಯು ತೀರಿಕೊಂಡಲ್ಲಿಯಾದರೂ “ಮಾತೃಪಾರ್ವಣ” ಲೋಪವು. ಮುಖ್ಯ ಪಿತಾಮಹಿಯು ಜೀವಿಸಿರುವಾಗ ಆ ಪಿತಾಮಹಿಯ ಸವತಿಯು ತೀರಿಕೊಂಡಿದ್ದರೂ ಅವಳಿಂದ ಕೂಡಿ ಮಾತೃಪಾರ್ವಣವಿಲ್ಲ. ಆಗ ಹಿಂದೆ ಹೇಳಿದಂತೆ ಉಚ್ಚಾರವು ಪ್ರಪಿತಾಮಹಿಯ ಸವತಿಯ ವಿಷಯದಲ್ಲಿಯೂ ಹೀಗೆಯೇ ತಿಳಿಯತಕ್ಕದ್ದು. ಮಾತಾಮಹಿಯು ಜೀವಿಸಿರುವಾಗ ಅವಳ ಸವತಿಯರು ಮೃತಿಹೊಂದಿದ್ದಲ್ಲಿ ಮಾತಾಮಹಪಾರ್ವಣವನ್ನುಚ್ಚರಿಸುವಾಗ “ಸಪಕರೆಂದು ಉಚ್ಚರಿಸತಕ್ಕದ್ದಲ್ಲ. ಬರೇ ಮಾತಾಮಹ, ಮಾತುಃ - ಪಿತಾಮಹ ಹೀಗೆ ಕೇವಲವಾಗಿ ಉಚ್ಚರಿಸುವದು. ದರ್ಶಾದಿ ಶ್ರಾದ್ಧಗಳಲ್ಲಾದರೂ ಮಾತೃವು ಜೀವಿಸಿರುತ್ತಿದ್ದಾಗ ಸವತೀಮಾತೃವು ಮೃತಪಟ್ಟಿದ್ದರೂ ಅವರನ್ನುದ್ದೇಶಿಸದೆ ಕೇವಲ ಪಿತ್ರಾದಿಗಳನ್ನಷ್ಟೇ ಉಚ್ಚರಿಸುವದು ಸಿದ್ಧವಾದದ್ದು. ಮಾತಾಮಹನು ಮೃತನಾಗಿದ್ದು ಮಾತೃಪಿತಾಮಹನು ಜೀವಿಸಿರುವಲ್ಲಿ “ಮಾತಾಮಹ ತಪ್ಪಿತಾಮಹ ಪ್ರಪಿತಾಮಹಾಃ” ಹೀಗೆ ಉಚ್ಚರಿಸತಕ್ಕದ್ದು. ತಾಯಿಯ ಪ್ರಪಿತಾಮಹನೊಬ್ಬನು ಜೀವಂತನಾಗಿದ್ದರೆ’ಮಾತಾಮಹ ಮಾತೃ ಪಿತಾಮಹೌ ಮಾತಾಮಹಸ್ಯ ಪ್ರಪಿತಾಮಹಶ್ಚ ನಾಂದೀಮುಖಾಃ” ಹೀಗೆ ಉಚ್ಚರಿಸುವದು. ಇಬ್ಬರು ಜೀವಿಸಿರುವಲ್ಲಿ “ಮಾತಾಮಹ ಮಾತುಃಪ್ರಪಿತಾಮಹಸ್ಯ ಪಿತಾಮಹ ಪ್ರಪಿತಾಮಹ ಚ ನಾಂದೀಮುಖಾ:” ಹೀಗೆ ಉಚ್ಚಾರಮಾಡತಕ್ಕದ್ದು. ಜೀವತೃಕಾದಿ ದೇವತಾವಿಚಾರ ತಂದೆಯು ಬದುಕಿದ್ದಾನೆ; ತಾಯಿ ಮತ್ತು ತಾಯಿಯ ತಂದೆ ಇವರು ಮೃತರಾಗಿದ್ದಾರೆ. ಆಗ ವಿವಾಹ, ಉಪನಯನ, ಜಾತಕರ್ಮಾದಿ ಪುತ್ರಸಂಸ್ಕಾರ ಮಾಡುವಾಗ ಮಾತ್ರ ಮಾತಾಮಹ ಈ ಎರಡೇ ಪಾರ್ವಣಗಳನ್ನು ಮಾಡತಕ್ಕದ್ದು, ಪಿತೃ ಪಾರ್ವಣವಿಲ್ಲ. ತಾಯಿಯೂ ಜೀವಿಸಿರುವಲ್ಲಿ ಮಾತೃಪಾರ್ವಣವೂ ಇಲ್ಲ. ಬರೇ ಮಾತಾಮಹಪಾರ್ವಣ ಒಂದೇ ಮಾಡತಕ್ಕದ್ದು. ಮಾತಾಮಹನು ಜೀವಿಸಿರುತ್ತಿದ್ದು ತಾಯಿಯು ಮೃತಳಾಗಿದ್ದರೆ ಜೀವಶ್ಚಿತೃಕನಾದವನು ತನ್ನ ಪುತ್ರ ಸಂಸ್ಕಾರದಲ್ಲಿ ವಿಶ್ವೇದೇವರಹಿತವಾಗಿ ಮಾತೃಪಾರ್ವಣವನ್ನಷ್ಟೇ ಮಾಡತಕ್ಕದ್ದು. ಆ ಮೂವರು ಅಂದರೆ ತಂದೆ, ೨೯೦ ಧರ್ಮಸಿಂಧು ತಾಯಿ, ಮಾತಾಮಹ ಇವರು ಜೀವಿಸಿರುತ್ತಿದ್ದರೆ ಪುತ್ರಾದಿಗಳ ಸಂಸ್ಕಾರದಲ್ಲಿ ತಂದೆಯ ತಂದೆಯನ್ನುದ್ದೇಶಿಸಿ ಮೂರು ಪಾರ್ವಣವನ್ನು ಮಾಡತಕ್ಕದ್ದು. ಈ ಮೂವರೂ ಜೀವಿಸಿರುವಾಗ ಪುತ್ರಾದಿಗಳ ಸಂಸ್ಕಾರದಲ್ಲಿ “ನಾಂದೀ ಶ್ರಾದ್ಧವೇ ಲೋಪವು” ಎಂಬದೊಂದು ಪಕ್ಷವಿದೆ. ಅದನ್ನು ಗ್ರಂಥಾರಂಭದಲ್ಲಿ ಹೇಳಿದೆ. ದ್ವಿತೀಯ ವಿವಾಹ, ಸಮಾವರ್ತನ, ಆಧಾನಾದಿ ಸ್ವಸಂಸ್ಕಾರದಲ್ಲಿ ನಾಂದೀಶ್ರಾದ್ಧ ಮಾಡುವಾಗ ತಂದೆಯಿರುವವನು ತಂದೆಯ ತಂದೆಯ ಉದ್ದಿಶ್ಯ ಪಾರ್ವಣತ್ರಯವನ್ನು ಮಾಡತಕ್ಕದ್ದು. “ಪಿತು: ಮಾತೃಪಿತಾಮಹೀ ಪ್ರಪಿತಾಮಹ: ಪಿತುಃ ಪಿತೃಪಿತಾಮಹ ಪ್ರಪಿತಾಮಹಾ: ಪಿತು: ಮಾತಾಮಹ ಮಾತೃಪಿತಾಮಹ ಮಾತು: ಪ್ರಪಿತಾಮಹಾಃ ನಾಂದೀಮುಖಾಃ” ಹೀಗೆ ಉಚ್ಚಾರಮಾಡುವದು. ಈ ಸಂದರ್ಭದಲ್ಲಿ ತಂದೆ ತಾಯಿಗಳು ಜೀವಿಸಿರುವಲ್ಲಿ ಆ ಪಾರ್ವಣವೇ ಲೋಪವಾಗುವದು. ತಂದೆ ತೀರಿದವನು ತನ್ನ ಪಿತ್ರಾದಿಗಳನ್ನುದ್ದೇಶಿಸಿ ಮಾಡುವಲ್ಲಿ ಸಂದಿಗ್ಧವಿರುವದಿಲ್ಲ. ಪಿತೃ ಪಿತಾಮಹರು ಜೀವಿಸಿರುವಲ್ಲಿ ಪಿತಾಮಹಸ್ಯ ಮಾತ್ರಾದಿ ಪಾರ್ವಣತ್ರಯವನ್ನುದ್ದೇಶಿಸುವದು. ಆ ಮೂವರೂ ಜೀವಿಸಿರುವಲ್ಲಿ ಪಿತೃಪಾರ್ವಣವು ಲುಪ್ತವಾಗುವದು. ಪುತ್ರ ಸಂಸ್ಕಾರದಂತೆ ತನ್ನ ಸಂಸ್ಕಾರದಲ್ಲಿ ಮಾತೃ ಮಾತಾಮಹ, ಈ ಎರಡು ಪಾರ್ವಣಗಳಿಂದಲೇ ನಾಂದೀಶ್ರಾದ್ಧವು ಸಿದ್ಧಿಸುವದು.. ಪಿತ್ರಾದಿ ಮೂವರೂ ಜೀವಿಸಿರುವಾಗ ಮಾತೃ, ಮಾತಾಮಹರು ಮಾತ್ರ ಜೀವಿಸಿದ್ದಲ್ಲಿ ಪ್ರಪಿತಾಮಹನ, ಪಿತ್ರಾದಿ ಮೂವರೂ ಜೀವಿಸಿರುವಾಗ ಮಾತೃ, ಮಾತಾಮಹರು ಮಾತ್ರ ಜೀವಿಸಿದ್ದಲ್ಲಿ ಪ್ರಪಿತಾಮಹನ ಪಿತ್ರಾದಿ ಮೂರು ವರ್ಗಗಳನ್ನುದ್ದೇಶಿಸಿ ನಾಂದೀಶ್ರಾದ್ಧ ಮಾಡುವದು. ಹೀಗೆ ಪ್ರಥಮ ವಿವಾಹದಲ್ಲಿಯೂ ಮತ್ತು ಬೇರೆ ಕರ್ತೃಗಳಿಲ್ಲದಾಗ ವರನು ತಾನೇ ನಾಂದೀಶ್ರಾದ್ಧ ಮಾಡುವಾಗ ತಂದೆ ತೀರಿದ ಆತನು ತನ್ನ ಪಿತ್ರಾದಿಗಳನ್ನುದ್ದೇಶಿಸಿ ನಾಂದೀಶ್ರಾದ್ಧವನ್ನು ಮಾಡತಕ್ಕದ್ದು. ತಂದೆಯು ಜೀವಿಸುತ್ತಿದ್ದಾಗ “ಪಿತುಃ ಪಿತೃ” ಇತ್ಯಾದಿ ಉಚ್ಚಾರಮಾಡುವದು. ಪಿತೃ ಪಿತಾಮಹರು ಜೀವಿಸಿರುವವನು “ಪಿತಾಮಹಸ್ಯಪಿತೃ” ಇತ್ಯಾದಿ ಪಾರ್ವಣತ್ರಯದ ಉದ್ದೇಶದಿಂದ ಮಾಡತಕ್ಕದ್ದು. ಅಥವಾ ಪಿತೃಪಾರ್ವಣವನ್ನೇ ಲೋಪಮಾಡಿ ನಾಂದೀಶ್ರಾದ್ಧ ಮಾಡತಕ್ಕದ್ದು. ಇಲ್ಲಿ ಎಲ್ಲ ಕಡೆಯಲ್ಲಿ ಪಿತೃ ಅಥವಾ ಪಿತಾಮಹ ಮೊದಲಾದವರ ಪಿತ್ರಾದಿ ಉದ್ದೇಶದಿಂದ ಮಾಡತಕ್ಕದ್ದೆಂಬ ಈ ಪಕ್ಷದಂತೆ ತನ್ನ ತಾಯಿಯ ಅಥವಾ ಮಾತಾಮಹನ ಮರಣವಾಗಿದ್ದಾಗಲೂ ತನ್ನ ಮಾತೃ-ಮಾತಾಮಹರ ಪಾರ್ವಣ ಮಾಡತಕ್ಕದಿಲ್ಲ. ತಂದೆಯ ಮಾತೃ-ಮಾತಾಮಹರನ್ನೇ ಉದ್ದೇಶಿಸುವದೆಂದು ತಿಳಿಯತಕ್ಕದ್ದು. ಹೀಗೆ ದೇವತ್ತಿಕ ನಾಂದೀಶಾದ ಕ್ರಮವು. ಕರ್ತೃಗಳು ತಂದೆಯ ಹೊರತಾದವರಿದ್ದರೆ ನಾಂದೀಶ್ರಾದ್ದ ಕ್ರಮ ಕನ್ಯಾವಿವಾಹ, ಪುತ್ರನ ಉಪನಯನ ಮತ್ತು ಪ್ರಥಮ ವಿವಾಹ ಇವುಗಳಲ್ಲಿ ತಂದೆಯ ಅಣ್ಣ-ತಮ್ಮಂದಿರು ಅಥವಾ ಮಾತುಲ ಮೊದಲಾದವರು ಕರ್ತೃಗಳಾಗಿ ಮಾಡುವಾಗ ಸಂಸ್ಕಾರ್ಯನ ತಂದೆಯು ತೀರಿಕೊಂಡಿದ್ದರೆ ಆಗ “ಆ ಸಂಖ್ಯಾರ್ಯಸ್ಯ ಪಿತೃ ಪಿತಾಮಹ ಪ್ರಪಿತಾಮಹಾ: ಇತ್ಯಾದಿಯಾಗಿ ಪ್ರಯೋಗಿಸತಕ್ಕದ್ದು. ಅದೇ, ಸಹೋದರ ಅಣ್ಣನು ಹೀಗೆ ಉಚ್ಚರಿಸತಕ್ಕದ್ದಲ್ಲ. ಯಾಕೆಂದರೆ ಆ ಭಾತೃವಿನ ಒತ್ರಾದಿಗಳ, ಸಂಸ್ಕಾರ್ಯನ ಪಿತ್ರಾದಿಗಳೂ ಒಂದೇ ಆಗುತ್ತಾರೆ. ಇರ ವಿಶೇಷವ ಸವತಿಯ ಅಣ್ಣನಾದರ ಮಾತೃಪರ್ಯಾಯದಲ್ಲಿ “ಆತ್ಮ ಸಂಸ್ಕಾರ್ಯ ಮಾತ್ರ ಪರಿಚ್ಛೇದ - ೩ ಪೂರ್ವಾರ್ಧ ತಾಮಹೀ ಪ್ರಪಿತಾಮಹ:” ಹೀಗೆ ಉಚ್ಚರಿಸತಕ್ಕದ್ದು, ಸಂಸ್ಕಾರ್ಯನ ತಾಯಿಯು ಜೀವಿಸಿರುತ್ತಿದ್ದರೆ ಆ ಪಾರ್ವಣವೇ ಲುಪ್ತವಾಗುವದು. ಸಂಸ್ಕಾರ್ಯನಿಗೆ ತಂದೆಯು ಜೀವಿಸಿರುತ್ತಿದ್ದರೆ ಮಾತುಲಾದಿ ಸಂಸ್ಕಾರಕರ್ತನು “ಸಂಸ್ಕಾರ್ಯ ಪಿತುಃ, ಮಾತೃಪಿತಾಮಹೀ ಪ್ರಪಿತಾಮಹ: ಸಂತ್ಕಾರ್ಯ ಪಿತು: ಪಿತಾಮಹ ಪ್ರಪಿತಾಮಹಾಃ” ಹೀಗೆ ಉಚ್ಚರಿಸಿ ಆ ಸಂಸ್ಮಾರ್ಯನ ತಂದೆಯ ಪಿತ್ರಾದಿ ಪಾರ್ವಣಗಳಿಂದ ಶ್ರಾದ್ಧ ಮಾಡತಕ್ಕದ್ದು, ಸಂಸ್ಕಾರ್ಯನ ಪಿತೃ-ಪಿತಾಮಹರು ಜೀವಿಸಿರುತ್ತಿದ್ದರೆ ಆಗ ಮಾತುಲ ಮೊದಲಾದ ಸಂಸ್ಕರ್ತರು ಸಂಸ್ಕಾರ್ಯನ ತಂದೆಯ ಮಾತೃ ಮೊದಲಾದವರನ್ನೂ, ಮಾತಾಮಹ ಮೊದಲಾದವರನ್ನೂ ಉದ್ದೇಶಿಸಿ ಮಾಡತಕ್ಕದ್ದು. (ಎರಡು ಪಾರ್ವಣ) ತಂದೆಯ ಎರಡು ವರ್ಗಗಳಲ್ಲಿ ಮೊದಲನೆಯವನು ಪಿತಾಮಹನ ಮಾತ್ರಾದಿ ಪಾರ್ವಣತ್ರಯದ ಉದ್ದೇಶದಿಂದ ಮಾಡುವದು. ಪಿತಾಮಹನ ಮಾತ್ರಾದಿಗಳು ಜೀವಿಸುತ್ತಿರುವಲ್ಲಿ ಹಿಂದೆ ಹೇಳಿದಂತೆ ಆ ಪಾರ್ವಣವೇ ಲೋಪವು. ತಂದೆಯ ಅಣ್ಣ-ತಮ್ಮಂದಿರು ಜೀವತೃಕನ ಸಂಸ್ಕಾರದಲ್ಲಿ ಹಾಗೆ ಉಚ್ಚರಿಸತಕ್ಕದ್ದಲ್ಲ. ಇದೇ ವಿಶೇಷವು. ಯಾಕೆಂದರೆ ಸಂಸ್ಕಾರ್ಯನ ತಂದೆಯ ತಂದೆ ಮೊದಲಾದವರು, ಅವರ ತಂದೆ ಮೊದಲಾದವರೂ ಒಂದೇ ಆಗುತ್ತಾರೆ. ಪಿತಾಮಹನು ಸಂಸ್ಕಾರಕರ್ತನಾದರೆ ಆಗ ಸಂಸ್ಕಾರ್ಯನ ತಂದೆಯು ಮೃತನಾಗಿದ್ದಾಗ “ಸಂಸ್ಕಾರ್ಯಸ್ಯ ಪಿತು: ಮಮ ಪಿತೃಪಿತಾಮಹ ಚ ನಾಂದೀಮುಖಾ: ಸಂಸ್ಕಾರ್ಯ ಮಾತ್ರಾದಯೋ ಮಾತಾಮಹಾದಯ:” ಇತ್ಯಾದಿ ಊಹಿಸಬೇಕು. ಸಂಸ್ಕಾರ್ಯನ ತಂದೆಯು ಜೀವಿಸುತ್ತಿರಲು ಪಿತಾಮಹನು ಕರ್ತೃವಾದರೆ ತನ್ನ ಮಾತೃ-ಪಿತೃ-ಮಾತಾಮಹ ಪಾರ್ವಣಗಳನ್ನು “ಮಮ” ಎಂಬ ಪದರಹಿತವಾಗಿಯೇ ಹೇಳತಕ್ಕದ್ದು, ಅಥವಾ “ಮಮ” ಎಂಬ ಪದಸಹಿತವಾಗಿಯೂ ಉಚ್ಚರಿಸಬಹುದು. ಪ್ರಪಿತಾಮಹನು ಕರ್ತೃವಾದರೂ ಹೀಗೆಯೇ ಮಾಡತಕ್ಕದ್ದು. ಕನ್ಯಾದಾನಾಧಿಕಾರಿಯು ತಾನು ಅಸಮರ್ಥನಾಗಿದ್ದು “ನೀನು ಕನ್ಯಾದಾನ ಮಾಡು” ಎಂದು ಪ್ರಾರ್ಥಿಸಿಕೊಂಡ ಪರಕೀಯನು ಮತ್ತು ಸುವರ್ಣಾದಿಗಳನ್ನು ಕೊಟ್ಟು ಕನ್ನೆಯನ್ನು ತನ್ನವಳನ್ನಾಗಿ ಮಾಡಿಕೊಂಡವನು ಅಥವಾ ಅನಾಥಳಾದವಳೆಂದು ತಿಳಿದುಬಂದಾಗ ಆ ಕನೈಯನ್ನು ತಾನು ಸ್ವೀಕರಿಸಿದವನು, ಇವರು ಕನ್ಯಾದಾನ ಮಾಡುವಾಗ ಸಂಸ್ಕಾರ್ಯಳಾದ ಕನ್ನೆಯ ಪಿತ್ರಾದಿಗಳನ್ನುಚ್ಚರಿಸಬೇಕು. ಆ ಕನೈಯ ತಂದೆಯು ಜೀವಿಸಿರುವಾಗ ಅವಳ ಮಾತೃ ಮೊದಲಾದವರನ್ನುಚ್ಚರಿಸುವದು. ಅವಳ ವರ್ಗತ್ರಯದಲ್ಲಿ ಮೊದಲನೆಯವನು (ಳು) ಜೀವಿಸಿರುತ್ತಿದ್ದರೆ ಪಿತುಃ ಪಿತ್ರಾದಿಗಳನ್ನುಚ್ಚರಿಸತಕ್ಕದ್ದು. ಇತ್ಯಾದಿ ಊಹೆಯು. ಹೀಗೆ ಪಿತನ ಹೊರತು ಅನ್ಯ ಕರ್ತೃಕ ನಾಂದೀಶ್ರಾದ್ಧ ಕ್ರಮವು. ದತ್ತಕ ಕನ್ಯಾಪುತ್ರರ ವಿಷಯ ದತ್ತಕ ಕನ್ನೆಯ ವಿವಾಹ ಮಾಡುವ ದತ್ತಕತಂದೆಯು ತನ್ನ ಪಿತ್ರಾದಿಗಳ ಉದ್ದೇಶದಿಂದ ನಾಂದೀಶ್ರಾದ್ಧವನ್ನು ಮಾಡಬೇಕು. ದತ್ತಕ ಪುತ್ರನು ಜನಕನ ಸ್ವತ್ತಿಗೆ ಅಧಿಕಾರಿಯಾಗಿ ಬೇರೆ ಕರ್ತೃಗಳಿಲ್ಲದೆ ತಾನೇ ಕರ್ತನಾದರೆ ಜನಕನ ಪಿತ್ರಾದಿಗಳನ್ನೂ, ದತ್ತಕ ಪಿತ್ರಾದಿಗಳನ್ನೂ ಒತರೆ, ಪಿತಾಮಣ್‌, ಪ್ರಪಿತಾಮಹೌ ಚ ನಾಂದೀಮುಖಾ: ಹೀಗೆ ಉಚ್ಚರಿಸಿ ಮಾಡತಕ್ಕದ್ದು. ಇದರಂತೆ ಮಾತೃಪಾರ್ವಣ, ಮಾತಾಮಹ ಪಾರ್ವಣಗಳನ್ನೂ ಹೇಳಿದಂತೆ ಮಾಡತಕ್ಕದ್ದು, ಇನ್ನು ಜನಕ ಪಿತೃಧನಕ್ಕೆ ಬೇರೆಯವನು ಅಧಿಕಾರಿಯಾಗಿದ್ದರೆ ಆಗ ದತ್ತಕ ಪಿತ್ರಾದಿಗಳನ್ನಷ್ಟೇ ಧರ್ಮಸಿಂಧು ಉಚ್ಚಾರಮಾಡುವದು. ಎರಡೂ ಕಡೆಯ ಪಿತೃಗಳನ್ನುಚ್ಚರಿಸತಕ್ಕದ್ದಲ್ಲ. ಇಲ್ಲಿ ಕೆಲಕಡೆ ಮಾತೃ. ಪಿತ್ರಾದಿ ಪಾರ್ವಣ ಕ್ರಮಗಳನ್ನು ಅನುಕ್ರಮವಾಗಿ ಹೇಳಿರಲಿಕ್ಕಿಲ್ಲ. ಅದರ ಸಲುವಾಗಿ ಹೇಳಿದ ಪ್ರಕರಣವು ಇದಲ್ಲ. ಆ ಕ್ರಮವನ್ನು ಈಗ ಹೇಳಲಾಗುವದು. ನಾಂದೀಶ್ರಾದ್ಧದಲ್ಲಿ ಮೊದಲು ಮಾತೃಪಾರ್ವಣ, ನಂತರ ಪಿತೃಪಾರ್ವಣ ಆಮೇಲೆ ಮಾತಾಮಹಪಾರ್ವಣ ಹೀಗೆ ಅದರ ಕ್ರಮವು ನಿಶ್ಚಿತವಾಗಿದೆ. ಋಗ್ವದಿ, ಕಾತ್ಯಾಯನರು “ಮಾತೃ, ಪಿತಾಮಹೀ, ಪ್ರಪಿತಾಮಹ:” ಹೀಗೆ ಅನುಲೋಮವಾಗಿ ಪಾರ್ವಣವನ್ನು ಚ್ಚರಿಸುವದು. ತೈತ್ತಿರೀಯರು “ಪ್ರಪಿತಾಮಹ ಪಿತಾಮಹ ಪಿತರಃ” ಹೀಗೆ ಪ್ರತಿಲೋಮವಾಗಿ ಉಚ್ಚರಿಸುವದು. ಒಂದೇ ಕಾಲದಲ್ಲಿ ಅನೇಕ ಸಂಸ್ಕಾರಗಳನ್ನು ಮಾಡುವಾಗ ನಾಂದೀಶ್ರಾದ್ಧವನ್ನು ಆ ಎಲ್ಲ ಸಂಸ್ಕಾರಾಂಗವಾಗಿ ಒಂದನ್ನೇ ಮಾಡತಕ್ಕದ್ದು. ಅವಳಿ ಪುತ್ರರು ಅಥವಾ ಎರಡು ಪುತ್ರರು, ಪುತ್ರಿಯರು ಇವರ ವಿವಾಹೋಪನಯನಾದಿ ಸಂಸ್ಕಾರಗಳನ್ನು ಕೂಡಿಯೇ ಮಾಡುವಾಗಲೂ ಒಂದೇ ನಾಂದೀಶ್ರಾದ್ಧವನ್ನು ಮಾಡಿದರೆ ಸಾಕಾಗುವದು. ಯಮಲರ ಸಂಸ್ಕಾರಗಳನ್ನು ಒಂದೇ ಮಂಟಪದಲ್ಲಿ ಒಂದೇ ಕಾಲದಲ್ಲಿ, ಒಬ್ಬನೇ ಕರ್ತನು ಮಾಡಿದಲ್ಲಿ ದೋಷವಿರುವದಿಲ್ಲವೆಂದು ಹೇಳಿದೆ. ನಾಂದೀಶ್ರಾದ್ದ ಗೌಣಕಲ್ಪವು ನಾಂದೀಶ್ರಾದ್ಧವನ್ನು ಅನ್ನದ ಅಭಾವದಲ್ಲಿ “ಆಮಾನ್ನ’ದಿಂದ ಮಾಡುವದು. ಆಮದ ಅಭಾವದಲ್ಲಿ “ಹಿರಣ್ಯ” ದಿಂದ ಮಾಡುವದು. ಹಿರಣ್ಯದ ಅಭಾವದಲ್ಲಿ “ಯುಗ್ಧ ಬ್ರಾಹ್ಮಣಭೋಜನ ಪರ್ಯಾಪ್ರಾನ್ನ ನಿಸ್ಮಯೀಭೂತಂ ಯಥಾಶಕ್ತಿ ಕಿಂಚಿದ್ದಂ ಸ್ವಾಹಾ ನಮಮ” ಹೀಗೆ ಸಂಕಲ್ಪಿಸಿ ನೀರು ಬಿಡತಕ್ಕದ್ದು. ಉಳಿದ ಎಲ್ಲ ಶೇಷಗಳನ್ನು ಗರ್ಭಾಧಾನ ಪ್ರಕರಣದಲ್ಲಿ ಹೇಳಲಾಗಿದೆ. ಅದನ್ನು ನೋಡಿ ತಿಳಿಯಬೇಕು, ನಾಂದೀಶ್ರಾದ್ಧವಾದಮೇಲೆ ಮಂಡಪದೇವತಾ ಸ್ಥಾಪನ ಹಾಗೂ ಗ್ರಹಯಜ್ಞ ಇವುಗಳನ್ನು ಪುಣ್ಯಾಹವಾಚನೆಯ ಮೊದಲು ಅಥವಾ ನಾಂದೀಶ್ರಾದ್ಧದ ನಂತರ ಮಾಡತಕ್ಕದ್ದು. ಸೀಮಾಂತಪೂಜನ ಮತ್ತು ಗೌರೀಹರಪೂಜೆಯು ಕನ್ಯಾದಾತನು ವರಗೃಹಕ್ಕೆ ಹೋಗಿ “ಕರಿಷ್ಯಮಾಣ ಕನ್ಯಾವಿವಾಹಾಂಗನ ವರಸ್ಯ ಸೀಮಾಂತಪೂಜಾಂ ಕರಿಷ್ಯ” ಹೀಗೆ ಸಂಕಲ್ಪಿಸಿ, ಗಣೇಶ, ವರುಣರನ್ನು ಪೂಜಿಸಿ, ವರನ ಪಾದಗಳನ್ನು ತೊಳೆದು, ವಸ್ತ್ರ, ಗಂಧ, ಪುಷ್ಪ, ಆರತಿ ಮೊದಲಾದವುಗಳಿಂದ ಕುಲಾಚಾರದಂತೆ ಪೂಜಿಸಿ, ಕುಡಿಯಲು ಹಾಲು ಮೊದಲಾದವುಗಳನ್ನು ಕೊಡತಕ್ಕದ್ದು. ಆಮೇಲೆ ವರನು ಮಂಗಲ ವಾದ್ಯಾದಿ ಘೋಷಗಳೊಡನೆ ವಾಹನಾರೂಢನಾಗಿ ವಗೃಹವನ್ನು ಪ್ರವೇಶಿಸುವದು. ವರನ ತಂದೆಯು ವಧೂವಿಗೆ ವಸ್ತ್ರಾದಿಗಳನ್ನು ಕೊಟ್ಟು ಸತ್ಕರಿಸತಕ್ಕದ್ದು. ಹೀಗೆ ಕುಲಾಚಾರದಂತೆ ವರ್ತಿಸತಕ್ಕದ್ದು. ವಿವಾಹ ದಿನದಲ್ಲಿ ಕನ್ಯಾಪಿತನು ಅಥವಾ ಕನೈಯು ಅನ್ನೋನ್ಯ ಆಲಿಂಗಿಸಿರುವ ಗೌರೀ-ಹರರ ಬಂಗಾರ ಇಲ್ಲವೆ ಬೆಳ್ಳಿಯಿಂದ ನಿರ್ಮಿಸಿರುವ ಪ್ರತಿಮೆಯನ್ನು, ಕಾತ್ಯಾಯಿನೀ, ಮಹಾಲಕ್ಷ್ಮಿ, ಶಚಿ ಇವರಿಂದ ಕೂಡಿ ಪೂಜಿಸುವದು. ನಾಲ್ಕು ಕೋಷ್ಠಗಳಲ್ಲಿ ಕಲಶಗಳನ್ನು ಸ್ಥಾಪಿಸಿ ಆ ಸಾಲುಗಳ ಮಧ್ಯದಲ್ಲಿ ಶಿಲಾಹಲಿಗೆ ಅಥವಾ ವಸ್ತ್ರದಲ್ಲಿ ಅಕ್ಕಿಗಳನ್ನು ಹರವಿ, ಅದರ ಮೇಲೆ ಗೌರೀ-ಹರರನ್ನು ಪರಿಚ್ಛೇದ - ೩ ಪೂರ್ವಾರ್ಧ ಮಂತ್ರವತ್ತಾಗಿ ಪೂಜಿಸುವದು. “ಸಿಂಹಾಸನಾಂ ದೇವೇಶೀಂ ಸರ್ವಾಲಂಕಾರಸಂಯುತಾಂ ಪೀತಾಂಬರಧರಂ ದೇವಂ ಚಂದ್ರಾರ್ಧ ಕೃತಶೇಖರ ಕರಣಾಧಋಧಾಪೂರ್ಣಂ ಕಲಶಂ ದಕ್ಷಿಣೇನ ತು ವರದಂಚಾಭಯಂ ವಾಮೇನಾ ಚ ತನುಪ್ರಿಯಾಂಗ್ ಈ ಮಂತ್ರದಿಂದ ಧ್ಯಾನಿಸುವದು. ‘ಗೌರೀಹರಮಹೇಶಾನ ಸರ್ವಮಂಗಲ ದಾಯಕ | ಪೂಜಾಂಗೃಹಾಣ ದೇವೇಶ ಸರ್ವದಾ ಮಂಗಲಂಕುರು’ ಇದು ಪೂಜಾಮಂತ್ರವು. ಕನ್ನೆಯ ದೇಹಪರಿಮಾಣದಿಂದ ಇಪ್ಪತ್ತೇಳು ಸೂತ್ರಗಳಿಂದ ಮಾಡಿದ ವರ್ತಿಯಿಂದ ದೀಪವನ್ನು ಹಚ್ಚಿ ಸುವಾಸಿನೀ ಬ್ರಾಹ್ಮಣಸಂತರ್ಪಣೆಗಳನ್ನು ಮಾಡುವದು. ಹೀಗೆ ಗೌರೀ-ಹರ ಪೂಜೆಯು. ಆಸನಲಕ್ಷಣ:- ಇಪ್ಪತ್ತೈದು ದರ್ಭೆಗಳನ್ನು ಹೆಣೆದು ತುದಿಯಲ್ಲಿ ಗಂಟುಹಾಕಿ ಉದ್ದವಾದ ಸರಗನ್ನಿಡುವದು. ಮಧುಪರ್ಕ ವಿಚಾರ ದಾತನು ಯಾವ ಶಾಖೆಯವನೇ ಇರಲಿ, ಮಧುಪರ್ಕವನ್ನು ವರನ ಶಾಖೆಯಂತೆಯೇ ಮಾಡಬೇಕು. ‘ದಧಿ-ಮಧು ಮಿಶ್ರಣವೇ ಮಧುಪರ್ಕ’ ವೆನ್ನಲ್ಪಡುವದು. ಮೊಸರಿನ ಅಭಾವದಲ್ಲಿ ಹಾಲು, ಇಲ್ಲವೆ ನೀರು, ಜೇನುತುಪ್ಪದ ಅಭಾವದಲ್ಲಿ ತುಪ್ಪ ಅಥವಾ ಬೆಲ್ಲ ಹೀಗೆ ಪ್ರತಿನಿಧಿಗಳು. “ಗೃಹಾಗತಂ ಸ್ನಾತಕಂವರಂ ಮಧುಪರ್ಕಣಾರ್ಹಯಿ” ಹೀಗೆ ಸಂಕಲ್ಪವು. ವರನ ವಿವಾಹವು ಎರಡನೆಯದಾಗಿದ್ದರೆ “ಸ್ನಾತಕ” ಎಂಬ ಪದವನ್ನು ಬಿಡಬೇಕು. ಮಧುಪರ್ಕ ವಿಧಾನವನ್ನು ತಮ್ಮ ತಮ್ಮ ಶಾಖಾಪ್ರಯೋಗಗಳಿಂದ ತಿಳಿಯತಕ್ಕದ್ದು. ಗುರುಜನರು, ಶ್ರೇಷ್ಠರು, ಬ್ರಾಹ್ಮಣರು, ರಾಜರು, ಯಜ್ಞದಲ್ಲಿ ವೃತರಾದ ಋತ್ವಿಜರು ಇವರೆಲ್ಲ ಮನೆಗೆ ಬಂದಾಗ ಮಧುಪರ್ಕದಿಂದ ಪೂಜಿಸಬೇಕೆಂದು ಹೇಳಿದೆ. ಋತ್ವಿಜಾದಿಗಳಿಗೆ ಮಧುಪರ್ಕ ಮಾಡುವಾಗಲೂ ಅವರವರ ಶಾಖೆಗಳಿಂದಲೇ ಮಧುಪರ್ಕವಾಗಬೇಕು. ಇನ್ನು “ಜಯಂತ “ನು ಎಲ್ಲವುಗಳಲ್ಲಿಯೂ ಯಜಮಾನನ ಶಾಖೆಯಂತೆಯೇ ಮಾಡಬೇಕೆನ್ನುತ್ತಾನೆ. ಗಂಧ, ಪುಷ್ಪ, ಧೂಪ, ದೀಪ ಇತ್ಯಾದಿಗಳಿಂದ ಪೂಜಿಸಿ ಭೋಜನಾರ್ಥವಾಗಿ ಮಾಷಭಕ್ಷ (ಉದ್ದು)ವನ್ನು ಕೊಡತಕ್ಕದ್ದು. ಮಧುಪರ್ಕದಲ್ಲಿ ಅಥವಾ ಅದಕ್ಕೂ ಮೊದಲು ಭೋಜನ ಮಾಡಿರುವ ವರನಿಗೆ ದಾತನು ಉಪವಾಸದಿಂದಿದ್ದು ಕನ್ಯಾದಾನ ಮಾಡತಕ್ಕದ್ದು. ಲಗ್ನಘಟ್ ಸ್ಥಾಪನೆ ಹತ್ತು ಪಲ ತೂಕದ ತಾಮ್ರದಿಂದ ಆರು ಅಂಗುಲ ಎತ್ತರವಾಗಿರುವ, ಹನ್ನೆರಡಂಗುಲ ವಿಸ್ತಾರವಾದ ಘಟೀಯಂತ್ರ (ಗಳಿಗೆಯ ಪಾತ್ರ) ವನ್ನು ನಿರ್ಮಿಸಬೇಕೆಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. “ದ್ವಾದಶಾರ್ಧಪಲೋನ್ಮಾನಂ ಚತುರ್ಭಿಶ್ಚತುರಂಗು: ಸ್ವರ್ಣಮಾ: ಕೃತಬ್ಬಿದ್ರ ಯಾವತ್ಪಸ್ಥಜಲಪ್ಲವಂ " ಎಂದು ಭಾಗವತದ ಮೂರನೇ ಸ್ಕಂದದಲ್ಲಿ ಹೇಳಿದೆ. ಎಂಭತ್ತು ಗುಂಜಿಯ ತೂಕಕ್ಕೆ ಒಂದು “ಕರ್ಷ"ವಾಗುವದು. ಇದಕ್ಕೆ “ಸುವರ್ಣಮಾನ"ವೆಂದೂ ಹೇಳುವರು. ನಾಲ್ಕು ಕರ್ಷ ಅಂದರೆ ಒಂದು “ಪಲವಾಗುವದು. ಈ ಮಾನದಿಂದ ಆರು ಪಲ ಭಾರದ ತಾಮ್ರದಿಂದ ಘಟೀಯಂತ್ರವನ್ನು ತಯಾರಿಸುವದು; ಮತ್ತು ಇಪ್ಪತ್ತು ಗುಂಜಿಯ ತೂಕದ ಚಿನ್ನದಿಂದ ನಾಲ್ಕು ಅಂಗುಲ ಪ್ರಮಾಣದ ಶಲಾಕ (ಸೂಜಿ)ಯನ್ನು ತಯಾರಿಸಿ ಆ ಘಟಿಯ ಪಾತ್ರೆಗೆ ರಂಧ್ರಮಾಡಬೇಕು. ಆ ರಂಧ್ರದಿಂದ ಪ್ರಸ್ಥಪರಿಮಿತವಾದ ಜಲವು ತುಂಬಿದ ಕೂಡಲೇ ಅದು ಜಲದಲ್ಲಿ ಮುಳುಗುವದು ೨೯೪ ಧರ್ಮಸಿಂಧು ಈ ಒಂದು ಕ್ರಿಯೆಯ ಕಾಲವಿಶೇಷವು “ಘಟಿ” (ಗಳಿಗೆ) ಎಂದಾಗುವದು. ಪ್ರಸ್ಥಪರಿಮಾಣವೆಂದರೆ ಹದಿನಾರು ಪಲಗಳು. ನಾಲ್ಕು ಸುವರ್ಣಗಳಿಗೆ ಒಂದು ಪಲವಾಗುವದು. ನಾಲ್ಕು ಪಲಗಳಿಗೆ ಒಂದು ಕುಡವ, ನಾಲ್ಕು ಕುಡವಗಳಿಗೆ ಒಂದು ಪ್ರಸ್ಥ, ನಾಲ್ಕು ಪ್ರಸ್ಥಗಳಿಗೆ ಒಂದು ಅಡಕ, ನಾಲ್ಕು ಅಢಕಗಳಿಗೆ ಒಂದು ದ್ರೋಣ, ನಾಲ್ಕು ದ್ರೋಣಗಳಿಗೆ ಒಂದು ಖಾರಿಕಾ ಹೀಗೆ ತಿಳಿಯತಕ್ಕದ್ದು ಎಂದು ಉಕ್ತಿಯಿದೆ. ಇನ್ನು ಬೇರೆ-ಬೇರೆ ಗ್ರಂಥಗಳಲ್ಲಿ ನಾಲ್ಕು ಮುಷ್ಟಿಗಳಿಗೆ ಒಂದು ‘ಕುಡವ’, ನಾಲ್ಕು ಕುಡವಗಳಿಗೆ ಒಂದು ‘ಪ್ರಸ್ಥ’ ಹೀಗೆ ಹೇಳಿದೆ. ಕಾಲಪರಿಮಾಣದಲ್ಲಿ ಅರವತ್ತು ಗುರ್ವಕ್ಷರಗಳ ಉಚ್ಚಾರ ಕಾಲವು " ಒಂದು ಪಲ (ಪಳ), ಅರವತ್ತು ಬೆಳೆಗಳಿಗೆ ಒಂದು ನಾಡೀ (ಘಟಿ)“ಯಾಗುವದನ್ನುವರು. ಹೀಗೆ ಪ್ರಮಾಣೀಕರಿಸಿದ ಘಟೀಯಂತ್ರವನ್ನು ಸೂರ್ಯಮಂಡಲದ ಅರ್ಧಮೂಡಿದಾಗ ಅಥವಾ ಅರ್ಧಾಸ್ತವಾದಾಗ ಜಲಪೂರ್ಣವಾದ ತಾಮ್ರಪಾತ್ರದಲ್ಲಿ ಅಥವಾ ಮಣ್ಣಿನ ಪಾತ್ರೆಯಲ್ಲಿ ಇಡಬೇಕು. ಅದಕ್ಕೆ ಮಂತ್ರವು “ಮುಖ್ಯಂತ್ವಮಸಿಯಂತ್ರಾಣಾಂ ಬ್ರಹ್ಮಣಾ ನಿರ್ಮಿತಂ ಪುರಾ/ಭವಭಾವಾಯ ದಂಪ ಕಾಲಸಾಧನ ಕಾರಣಂ’ ಈ ಮಂತ್ರದಿಂದ ಘಟಿಕಾಪಾತ್ರವನ್ನು ಸ್ಥಾಪಿಸತಕ್ಕದ್ದು. ಮೊದಲು ಗಣಪತಿ ಪೂಜೆ, ವರುಣ ಪೂಜೆಗಳನ್ನು ಮಾಡುವದು. ಜಲಮಧ್ಯದಲ್ಲಿ ಸ್ಥಾಪಿಸಿದ ಈ ಪಾತ್ರವು ಆಕ್ಷೇಯ, ಯಾಮ್ಯ, ನೈಋತ್ಯ, ವಾಯುವ್ಯ ಈ ದಿಕ್ಕಿಗೆ ಸರಿದರೆ ಶುಭವಲ್ಲ. ಮಧ್ಯದಲ್ಲೇ ನಿಂತರ ಅಥವಾ ಹಿಂದೆ ಹೇಳಿದ ದಿಕ್ಕನ್ನು ಬಿಟ್ಟು ಉಳಿದ ದಿಕ್ಕಿನಲ್ಲಿ ಹರಿದರೆ ಶುಭವು. ಆಯ್ಕೆಯಾದಿ ಐದು ದಿಕ್ಕುಗಳಲ್ಲಿ ಜಲವು ಪೂರ್ಣವಾದರೆ ಶುಭವಲ್ಲ. ಹೀಗೆ ಘಟೇ ವಿಚಾರವು. ಅಂತಃಪಟಾದಿ

ಜ್ಯೋತಿಷಜ್ಞನು ನಿರ್ದೇಶಿಸದ ಶುಭಕಾಲದಲ್ಲಿ ಒಂದು ಮೊಳ ಅಂತರದಿಂದ ಪೂರ್ವ ಹಾಗೂ ಪಶ್ಚಿಮಗಳಲ್ಲಿ ಅಕ್ಕಿಯ ರಾಶಿಮಾಡಿ, ಪೂರ್ವರಾಶಿಯ ಮೇಲೆ “ವರ"ನನ್ನು ಪಶ್ಚಿಮಾಭಿಮುಖಮಾಡಿ ನಿಲ್ಲಿಸುವದು. ಪಶ್ಚಿಮರಾಶಿಯ ಮೇಲೆ “ವಧು"ವನ್ನು ಪೂರ್ವಾಭಿಮುಖಮಾಡಿ ನಿಲ್ಲಿಸುವದು. ಈ ವಧೂ-ವರರ ಮಧ್ಯದಲ್ಲಿ ತೆರೆಯ ವಸ್ತ್ರವನ್ನು ಹಿಡಿಯಬೇಕು. ಅದಕ್ಕೆ ಕುಂಕುಮಾದಿಗಳಿಂದ ಸ್ವಸ್ತಿಕ ಚಿಹ್ನೆಯನ್ನಿಡಬೇಕು. ಅದರ ಸೆರಗು ಉತ್ತರಕ್ಕಾಗುವಂತಿರಬೇಕು. ವಧೂ-ವರರ ತಂದ ಮೊದಲಾದವರು ಜೋಯಿಸನನ್ನು ಪೂಜಿಸಿ ಅವನಿಂದ ಫಲಸಹಿತವಾದ ಅಕ್ಷತೆಯನ್ನು ತೆಗೆದುಕೊಂಡು ವಧೂ-ವರರ ಅಂಜಲಿಯಲ್ಲಿ ಇಡಬೇಕು. ಹೀಗೆ ವಧ-ವರರು ಅಕ್ಷತಹಸ್ತರಾಗಿಯೂ, ಅಂತಃಪಟದ ಸ್ವಸ್ತಿಕ ಚಿಹ್ನೆಯನ್ನು ನೋಡುತ್ತಿರುವವರಾಗಿಯೂ, “ಅಮುಕದೇವತಾಯನಮ:” ಹೀಗೆ ತಮ್ಮ-ತಮ್ಮ ಕುಲದೇವತೆಯನ್ನು ಧ್ಯಾನಿಸುತ್ತಿರುವವರಾಗಿಯೂ ನಿಲ್ಲಬೇಕು. ಜೋಯಿಸನು ಮಂಗಲ ಪದ್ಯಗಳನ್ನು ಪಠಿಸಬೇಕು. (ಮಂಗಲಾಷ್ಟಕ) ಉಕಾಲದಲ್ಲಿ “ತದೇವಲಗ್ನಂ” ಎಂದು ಪರಿಸಿ “ಸುಮುಹೂರ್ತಮಸ್ತು, ಓ೦ ಪ್ರತಿಷ್ಠಾ” ಹೀಗೆ ಹೇಳಿದ ನಂತರ ಅಂತಃಪಟವನ್ನು ಉತ್ತರ ದಿಕ್ಕಿಗೆ ಸರಿಸುವದು. ಆಮೇಲೆ ವಧೂ-ವರರು ಅನ್ನೋನ್ಯವಾಗಿ ಶಿರಸ್ಸಿನಲ್ಲಿ ಅಕ್ಷತೆಯನ್ನು ಚೆಲ್ಲಿ ಪರಸ್ಪರ” ಈಕ್ಷಣ” ಮಾಡುವದು. (ಪರಸ್ಪರರನ್ನು ನೋಡಿಕೊಳ್ಳು ವದು ವರನು ಕನ್ನೆಯ ಹುಬ್ಬುಗಳ ಮಧ್ಯದಲ್ಲಿ ದರ್ಭೆಯ ತುದಿಯಿಂದ “ಓರ್ಭವಸುವ” ಎಂದು ಒರಿಸುವದು. ಒರಿಸಿದ ದರ್ಭೆಯನ್ನು ಚೆಲ್ಲಿ ಪರಿಚ್ಛೇದ • ೩ ಪೂರ್ವಾರ್ಧ ೨೯೫ ಜಲಸ್ಪರ್ಶಮಾಡುವದು. ವೈದಿಕರು ಬ್ರಾಹ್ಮಣ ಭಾಗದ ಖಂಡ ಮಂತ್ರಗಳನ್ನು ಹೇಳಿದ ನಂತರ (ಪ್ರಜಾಪತಿಃ ಸ್ತ್ರೀಯಾಂ ಯಶಃ ಇತ್ಯಾದಿ) ಕನಾಪೂರ್ವಕವಾಗಿ ವಧೂ-ವರರು “ಅಕ್ಷತಾರೋಪಣ” (ಶಿರಸ್ಸಿನಲ್ಲಿ ಅಕ್ಷತೆಗಳನ್ನು ಚೆಲ್ಲುವದು) ಮಾಡುವದು. ಕನ್ಯಾದಾನ ಪ್ರಯೋಗ น ಹೀಗೆ ಮಾಡಿದ ನಂತರ ವರನನ್ನು ಪೂರ್ವಾಭಿಮುಖನನ್ನಾಗಿಯೂ, ವಧುವನ್ನು ಪಶ್ಚಿಮಾಭಿಮುಖಳನ್ನಾಗಿಯೂ ಕೂಡ್ರಿಸಿ ಕನ್ಯಾದಾತನು ಬಲಭಾಗದಲ್ಲಿ ಪತ್ರೀಸಹಿತನಾಗಿ ಕುಳಿತು ಕನ್ಯಾದಾನ ಮಾಡತಕ್ಕದ್ದು. ದಾನದ ಪೂರ್ವದಲ್ಲಿ ವರನು ಆಭರಣಾದಿಗಳನ್ನು ಕನ್ನೆಗೆ ತೂಡಿಸಬಾರದು. ಆಹತವಸ್ತ್ರ, ದಾತನು ಹಾಕಿದ ಆಭರಣಗಳಿಂದ ಯುಕ್ತಳಾಗಿರಬೇಕು. ಹಸ್ತದಲ್ಲಿ ಬಂಗಾರವನ್ನಿಡಬೇಕು. ವರನನ್ನರ್ಚಿಸಿ ಉಳಿದಿರುವ ಗಂಧದಿಂದ ಹಸ್ತ-ಪಾದಗಳಲ್ಲಿ ಲೇಪಿಸುವದು. ಈ ರೀತಿ ಹೇಳಿದ ಕನ್ನೆಯನ್ನು ದಾನಮಾಡತಕ್ಕದ್ದು, ದಾತನು ದರ್ಭಹಸ್ತನಾಗಿ ದೇಶ ಕಾಲಗಳನ್ನುಚ್ಚರಿಸಿ “ಅಮುಕ ಪ್ರವರ ಅಮುಕಗೋತ್ರೋsಮುಕಶರ್ಮಾಹಂ ಮಮ ಸಮಸ್ತ ಪಿತೃಣಾಂ ನಿರತಿಶಯಾನಂದ ಬ್ರಹ್ಮಲೋಕಾವಾಪ್ಪಾದಿ ಕನ್ಯಾದಾನ ಕಣೋಕ್ತ ಫಲಾವಾಪ್ತಯೇ ಅನೇನ ವರೇಣ ಅಸ್ಕಾಂ ಕನ್ಯಾಯಾಂ ಉತ್ಪಾದಯಿಷ್ಯಮಾಣಸಂತತ್ಯಾ ದ್ವಾದಶಾವರಾನ್ ದ್ವಾದಶಾಪರಾನ್ ಪುರುಷಾಂಶ್ಚ ಪವಿತ್ರೀಕರ್ತು೦ ಆತ್ಮನ ಶ್ರೀ ಲಕ್ಷ್ಮೀನಾರಾಯಣ ಪ್ರೀತಿಯೇ ಬ್ರಾಹ್ಮ ವಿವಾಹವಿಧಿನಾ ಕನ್ಯಾದಾನಂ ಕರಿಷ್ಟೇ” ಹೀಗೆ ದರ್ಭಾಕೃತಜಲದಿಂದ ಸಂಕಲ್ಪಿಸಿ ಎದ್ದು ನಿಂತು ಕನ್ನೆಯನ್ನು ಹಿಡಿದುಕೊಂಡು “ಕಾಂ ಕನಕಸಂಪನ್ನಾಂ ಕನಕಾಭರಣೆರ್ಯುತಾಂ| ದಾಸ್ಯಾಮಿ ವಿಷ್ಣವೇ ತುಭಂ ಬ್ರಹ್ಮಲೋಕಜಿಗೀಷಯಾ ವಿಶ್ವಂಭರಃ ಸರ್ವಭೂತಾಃ ಸಾಕ್ಷಿಣ್ಯಃ ಸರ್ವದೇಮಾಃ| ಇಮಾಂ ಕನ್ಯಾಂ ಪ್ರದಾಸ್ಯಾಮಿ ಪಿತ್ತೂಣಾಂ ತಾರಣಾಯ ಚ” ಹೀಗೆ ಪ್ರಾರ್ಥಿಸಿ ಕಂಚಿನ ಪಾತ್ರೆಯಲ್ಲಿ ಕನ್ಯಾಹಸ್ತವನ್ನಿಟ್ಟು ಅದರ ಮೇಲೆ ವರನ ಹಸ್ತವನ್ನಿಡುವದು. ಬಲಗಡೆಯಲ್ಲಿರುವ ಪತ್ನಿಯು ಸಂತತಧಾರೆಯಿಂದ ಶುದ್ಧೋದಕವನ್ನು ಬಿಡುವದು. ಆ ಜಲವು ಹಿರಣ್ಯ ಸಹಿತವಾದ ವರನ ಹಸ್ತದಲ್ಲಿ ಬೀಳಬೇಕು. “ಕನ್ಯಾತಾರಯತು ಪುಣ್ಯಂ ವರ್ಧತಾಂ ಶಾಂತಿಃ ಪುಷ್ಟಿಸ್ತುಷ್ಟಿಶ್ಚಾಸ್ತು ಪುಣ್ಯಾಹಂ ಭವಂತೋಬ್ಬವಂತು " ಇತ್ಯಾದಿ ನಾಲ್ಕು ವಾಕ್ಯಗಳನ್ನುಚ್ಚರಿಸಿ “ಅಮುಕಪ್ರವರ ಅಮುಕಗೋತ್ರೋsಮುಕಶರ್ಮಾಹಂ” ಹೀಗೆ ಹಿಂದೆ ಹೇಳಿದಂತೆ “ಮಮಸಮಸ್ತತ್ಯಾದಿ” ಹೇಳಿ “ಪ್ರೀತಯೇ ಅಮುಕ ಪ್ರವರೋಪೇತ ಅಮುಕ ಗೋತ್ರಾಯ ಅಮುಕಶರ್ಮಣ: ಪ್ರಪೌತ್ರಾಯ, ಅಮುಕಶರ್ಮಣಃ ಪೌತ್ರಾಯ, ಅಮುಕಶರ್ಮಣಃ ಪುತ್ರಾಯ, ಅಮುಕಶರ್ಮಣೇ ಶ್ರೀಧರರೂಪಿಣೇ ವರಾಯ, ಅಮುಕಪ್ರವರ ಅಮುಕಗೋತ್ರಾಂ ಅಮುಕಶರ್ಮಣಃ ಪ್ರಪೌತ್ರೀಂ, ಅಮುಕಶರ್ಮಣ: ಪೌತ್ರೀಂ, ಅಮುಕಶರ್ಮಹೋಮಮ ಪುತ್ರಿಂ ಅಮುಕನಾಂ ಕಾಂ ಶ್ರೀ ರೂಪಿಣೀಂ ಪ್ರಜಾಪತಿದೈವತ್ಕಾಂ ಪ್ರಜೋತ್ಪಾದನಾರ್ಥಂ ತುಭ್ರಮಹಂ ಸಂಪ್ರದದೇ” ಹೀಗೆ ಹೇಳಿ ಹಿರಣ್ಯ ಸಹಿತವಾದ ಹಸ್ತದಲ್ಲಿ ಅಕ್ಷತಯುಕ್ತವಾದ ಜಲವನ್ನು ಬಿಡತಕ್ಕದ್ದು. “ಪ್ರಜಾಪತಿ: ಪ್ರೀಯತಾಂ, ಕನ್ಯಾಂ ಪ್ರತಿಗೃಹಾತು ಭವಾನ್, ಕನ್ಯಾತಾರಋತು “ ಹೀಗೆ ಮೂರಾವರ್ತಿ ಹೇಳಿ ದಾನಮಾಡತಕ್ಕದ್ದು. ವರನು “ಓಂ ಸ್ವಸ್ತಿ” ಎಂದು ಹೇಳಿ ಕನ್ನೆಯ ಬಲಹೆಗಲನ್ನು ಮುಟ್ಟಿಕೊಂಡು ಓಂ ೨೯೬ ಧರ್ಮಸಿಂಧು “ಧರ್ಮಪ್ರಜಾಸಿಧ್ಯರ್ಥಂ ಪ್ರತಿಕೃಶ್ಚಾಮಿ” ಹೀಗೆ ಹೇಳುವದು. ದಾತನು ‘ಗೌರೀಂಕಸ್ವಾಮಿಮಾಂವಿತ್ರ ಯಥಾಶಕ್ತಿ ವಿಭೂಷಿತಾಂ ಗೋತ್ರಾಯ ಶರ್ಮಣೇ ತುಭಂ ದತ್ತಾಂ ವಿಪ್ರ ಸಮಾಶ್ರಯ ಕಮಮಾಗ್ರತೋಭೂಯಾಃ ಕಮೇ ದೇವಿ ಪೃಷ್ಠತಃಕಮೇ ಪಾಶ್ವಯೋರ್ಭೂಯಾದ್ದಾನಾನ್ನೋಕ್ಷ ಮಾಪ್ಪುಯಾಂ| ಮಮ ವಂಶಕುಲೇ ಜಾತಾ ಪಾಲಿತಾವತ್ಸರಾಷ್ಟಕಂ (ಪಾಲಿತಾನೇಕವತ್ಸರಂ) ತುಭ್ರಂ ವಿಪ್ರ ಮಯಾದತ್ತಾ ಪುತ್ರಪೌತ್ರಪ್ರವರ್ಧನೀ ಧರ್ಮಚಾರ್ಥ ಚ ಕಾಮೇ ಚ ನಾತಿಚರಿತವ್ಯಾತ್ವಯೇಯಂ” ಆಗ ವರನು ‘ನಾತಿಚರಾಮಿ’ ಎಂದು ಹೇಳತಕ್ಕದ್ದು, ದಾತನು ಕುಳಿತು ‘ಕನ್ಯಾದಾನಪ್ರತಿಷ್ಟಾ ಸಿಧ್ಯರ್ಥಂ ಇದು ಸುವರ್ಣಮಗ್ನಿದೈವಂ ದಕ್ಷಿಣಾನ ಸಂಪ್ರದದೇ” ಎಂದು ಹೇಳಿದ ನಂತರ ವರನು “ಓಂ ಸ್ವಸ್ತಿ” ಹೀಗೆ ಹೇಳುವದು. ಆಮೇಲೆ ಭೋಜನ ಪಾತ್ರ, ಜಲಪಾತ್ರಾದಿಗಳ ದಾನಮಾಡತಕ್ಕದ್ದು. ಪಿತಾಮಹನು ದಾತೃವಾದರೆ “ಪೌಂ” ಹೀಗೆ ಹೇಳುವದಕ್ಕಿಂತ ಮೊದಲು “ಮಮ” ಎಂದು ಹೇಳುವದು. (ಮಮ ಪೌತ್ರೀಂ ಹೀಗೆ ) * ಪುಂ” ಎಂದು ಹೇಳುವಾಗ ಹೀಗೆ ಹೇಳಬಾರದು. ಅಣ್ಣ ಮೊದಲಾದವರು ಮೂರು ಪುರುಷರನ್ನು ಹೇಳುವಾಗ ಎಲ್ಲಿಯೂ ‘ಮಮ’ ಎಂದು ಹೇಳತಕ್ಕದ್ದಿಲ್ಲ. ಪ್ರಪಿತಾಮಹನು ದಾತೃವಾದರೆ ‘ಪ್ರಪೌತ್ರೀಂ’ ಎಂದು ಹೇಳುವಾಗ’ಮಮ’ ಎಂದು ಹೇಳಬೇಕು. ಮಾತುಲ ಮೊದಲಾದ ಅನ್ಯಗೋತ್ರದವರು ದಾತೃಗಳಾದಾಗ ‘ಅಹಂ’ ಇತ್ಯಾದಿ ತನ್ನನ್ನುದ್ದೇಶಿಸಿ ಹೇಳುವಾಗ ತನ್ನ ಗೋತ್ರವನ್ನು ಹೇಳತಕ್ಕದ್ದು. “ಅಮುಕಶರ್ಮಣ: ಸಮಸ್ತ ಪಿತೃಣಾಂ’ ಇತ್ಯಾದಿಯಾಗಿ ಕನ್ಯಾಪಿತೃವಿನ ನಾಮವನ್ನು ಷಷ್ಠಿ ವಿಭಕ್ತಿಯಿಂದ ಹೇಳಿ, ಕನ್ನೆಗೆ ವಿಶೇಷಣವಾಗಿ ಹೇಳುವಾಗ ಅವಳ ಗೋತ್ರವನ್ನೇ ಹೇಳತಕ್ಕದ್ದು. “ಮಮ ವಂಶಕುಲೇಜಾತಾ ಎಂಬಲ್ಲಿ “ಮಮ ಸ್ಥಾನದಲ್ಲಿ ಕನ್ಯಾಪಿತೃವಿನ ನಾಮವನ್ನು ಹೇಳತಕ್ಕದ್ದು. ದತ್ತಕನ್ಯಾದಾನದಲ್ಲಿ ಮಮ ವಂಶಕುಲೇ ದತ್ತಾ ಹೀಗೆ ಊಹಿಸುವದು. ಕನ್ಯಾದಾನಾಂಗ ದಾನಮಂತ್ರಗಳು ಗೋವಿಗೆ- “ಯಜ್ಞ ಸಾಧನಭೂತಾಯಾ ವಿಶ್ವ ಸಾಫ್‌ಘನಾಶಿನಿ ವಿಶ್ವರೂಪಧರೋದೇವ: ಪ್ರೀಯತಾಮನಯಾ ಗವಾ” ಉಂಗುರಕ್ಕೆ “ಒರಣ್ಯಗರ್ಭಸಂಭೂತಂ ಸೌವರ್ಣಂಚಾಂಗುಲೀಯಕಂಗೆ ಸರ್ವಪ್ರದಂ ಪ್ರಯಟ್ನಾಮಿ ಪ್ರೀಣಾತು ಕಮಲಾ ಪತಿ: ಕುಂಡಲಗಳಿಗೆ -“ಕ್ಷೀರೋದಮಥನೇ ಪೂರ್ವ ಉರತು ಕುಂಡಲದ್ವಯಂಶ್ರಿಯಾಸಹ ಸಮುದ್ರತಂ ದರಶ್ರೀ ಪ್ರೀಯಾಮಿತಿ” ಬಳೆಗಳಿಗೆ-“ಕಾಂಚನ ಹಸ್ತವಲಯ ರೂಪಕಾಂತಿಸುಖಪ್ರರ ವಿಭೂಷಣಂ ಪ್ರದಾಸ್ಯಾಮಿ ವಿಭೂಷಯತು ಮೇ ಸದಾ ತಾವ ಜಲಪಾತ್ರಕ್ಕೆ “ಪರಾಪವಾದ ಶೂನಾರಭಕ್ಷ್ಯ ಚ ಭಕ್ಷಣಾತ್’ ಉತ್ಪನ್ನ ಪಾಪಂ ದಾನೇನ ತಾಮ್ರಪಾತ್ರ ಸತು ಭೋಜನಾರ್ಥವಾದ ಕಂಚಿನ ಬಟ್ಟಲಿಗೆ -“ಯಾನಿ ಪಾಪಾನಿ ಕಾವ್ಯಾನಿ ಕಾಮೋತ್ಥಾನಕೃತಾನಿ ಚ| ಕಾಂಸಪಾತ್ರಪ್ರದಾನೇನಾ ತಾನಿನಂತಮೇಸದಾ” ಜಲಾರ್ಥವಾದ ಹಾಗೂ ಭೋಜನಾರ್ಥವಾದ ಬೆಳ್ಳಿಯ ಪಾತ್ರೆಗೆ -“ಅಗಮ್ಯಾಗಮನಂದೈವ ಪರದಾರಾಭಿಮರ್ಶನಂ|ಪಾತ್ರಪ್ರದಾನೇನ ತಾನಿ ನಶ್ಯಂತು ಮ ಸದಾ” ತಾಂಬೂಲಕ್ಕೆ “ಪೂರಿತ ತೂಗಪ್ಪಗೇನ ನಾಗವಲ್ಲಿ ದಲಾನ್ವಿತಂ|ಪೂರ್ಣೇನ ಚರ್ಣಪಾತ್ರೇಣ ಕರ್ಪೂರ ‘ಕೇನ ಚ||ಸಪ್ಪಗಖಂಡ ನಂದಿವ್ಯಂ ಗಂಧರ್ವಾಪ್ಪರಸಾಂಪ್ರಿಯ ಪರಿಚ್ಛೇದ - ೩ ಪೂರ್ವಾರ್ಧ ೨೯೭ ರದೇದೇವನಿರಾತಂಕಂ ತತ್ ಸಾದಾತ್ಕುರುಷ್ಟಮಾಂ” ಇತ್ಯಾದಿ ದಾಸೀ, ಮಹಿಷೀ, ಆನೆ, ಕುದುರೆ, ಭೂಮಿ, ಸುವರ್ಣಪಾತ್ರ, ಪುಸ್ತಕ, ಶಯ್ಯಾ, ಗೃಹ, ಬೆಳ್ಳಿ, ವೃಷಭ ಈ ದಾನಮಂತ್ರಗಳನ್ನೆಲ್ಲ ಕೌಸ್ತುಭಾದಿಗಳಲ್ಲಿ ನೋಡತಕ್ಕದ್ದು. ಕೆಲವರು ಅಂತಃಪಟಾದಿ ಕನ್ಯಾದಾನಾಂತ ಕಾರ್ಯವನ್ನು ಅಗ್ನಿಪ್ರತಿಷ್ಠೆಯಾದ ಮೇಲೆ ಮಾಡುವರು. ಕೆಲವರು ಪೂರ್ವಾಂಗ ಹೋಮಾನಂತರ, ಕೆಲವರು ಆಜ್ಯಸಂಸ್ಕಾರದ ನಂತರ ಹೀಗೆ ಅನೇಕ ಪಕ್ಷಗಳಿವೆ. ಅವುಗಳನ್ನೆಲ್ಲ ತಮ್ಮ-ತಮ್ಮ ಗೃಹ್ಯಾನುಸಾರ, ಆಚಾರಾನುಸಾರ ಮಾಡತಕ್ಕದ್ದು. ಮುಂದೆ ವಧೂ-ವರರ ಸ್ನಾನ, ಕಂಕಣಬಂಧನ, ಅಕ್ಷತಾರೋಪಣ, ಅನ್ನೋನ್ಯ ತಿಲಕಧಾರ, ಮಾಲಾಬಂಧನ, ಅಷ್ಟಪುತ್ರಿ, ಕಂಚುಕೀ, ಮಾಂಗಲ್ಯ ತಂತು ಇತ್ಯಾದಿ ಕ್ರಮಗಳಿವೆ. ಗಣೇಶಪೂಜಾ, ಲಡ್ಡು ಬಂಧನ, ಉತ್ತರೀಯ ವಸ್ತ್ರದ ತುದಿಗಳ ಗಂಟು, ಲಕ್ಷ್ಮೀ ಪೂಜಾದಿ ವಿಧಾನಗಳಿವೆ. ಹೀಗೆ ಕನ್ಯಾದಾನಾನುಕ್ರಮವನ್ನು ಹೆಚ್ಚಾಗಿ ಋಗ್ವದಿಗಳು ಆಚರಿಸುವರು. ಅನ್ಯರಿಗಾದರೂ ಅವರವರ ಪ್ರಯೋಗವಿದ್ದೇ ಇದೆ. ಅದರಂತೆ ಆಚರಿಸುವದು. ವಿವಾಹ ಹೋಮ ವಧೂ-ವರರು ಹಿಂದೆ ಹೇಳಿದ ರೀತಿಯಿಂದ ತಯಾರಿಸಿದ ವೇದಿಕೆಯನ್ನು ಮಂತ್ರಘೋಷದೊಡನೆ ಪ್ರವೇಶಿಸಿ ವರನು ತನ್ನ ಆಸನದಲ್ಲಿ ಕುಳಿತು ವಧುವನ್ನು ತನ್ನ ಬಲಗಡೆಯಲ್ಲಿ ಕೂಡ್ರಿಸಿ ದೇಶಕಾಲಗಳನ್ನುಚ್ಚರಿಸಿ “ಪ್ರತಿಗೃಹೀತಾಯಾಂ ಅಸ್ಕಾಂ ವಾಂ ಭಾರ್ಯಾತ್ವಸಿದ್ಧಯೇ ವಿವಾಹಹೋಮಂ ಕರಿಷ್ಯ” ಹೀಗೆ ಸಂಕಲ್ಪಿಸಿ ತನ್ನ ಪ್ರಯೋಗಾನುಸಾರ ವಿವಾಹ ಹೋಮವನ್ನು ಮಾಡತಕ್ಕದ್ದು. ಇಲ್ಲಿಂದ ಮುಂದೆ ವಿವಾಹಾಗ್ನಿಯನ್ನು ಸಂರಕ್ಷಿಸಿ ಇಡಬೇಕು. ಸಂರಕ್ಷಿತವಾದ ಅಗ್ನಿಯು ಚತುರ್ಥಿಹೋಮ ಮುಗಿಯುವದರೊಳಗೆ ಗೃಹಪ್ರವೇಶನೀಯ ಹೋಮಕ್ಕಿಂತ ಮೊದಲು ನಷ್ಟವಾದರೆ ವಿವಾಹಹೋಮವನ್ನು ಪುನಃ ಮಾಡತಕ್ಕದ್ದು. ಗೃಹಪ್ರವೇಶನೀಯಾನಂತರದಲ್ಲಿ ಹೋದರ ಎರಡು ಹೋಮಗಳನ್ನೂ (ವಿವಾಹ ಹೋಮ, ಗೃಹಪ್ರವೇಶನೀಯ ಹೋಮ) ಪುನಃ ಮಾಡತಕ್ಕದ್ದು. ವೃತ್ತಿಯಲ್ಲಿ ಹನ್ನೆರಡು ರಾತ್ರಿಗಳೊಳಗೆ ಗೃಹ್ಯಾಗ್ನಿಯು ನಷ್ಟವಾದರೆ “ಅಯಾಶ್ಚಾಗೇ” ಈ ಆಹುತಿಯಿಂದ ಹೋಮಿಸಬೇಕು ಎಂದು ಹೇಳಿದ್ದು ಸಾರ್ವತ್ರಿಕವಾದ್ದರಿಂದ ಇಲ್ಲಿಯೂ “ಅಯಾಶ್ಚ” ಎಂಬ ಆಹುತಿಯನ್ನೇ ಕೆಲವರು ಹೇಳುತ್ತಾರೆ. ಗೃಹಪ್ರವೇಶನೀಯ ಹೋಮ ಇದನ್ನು ವಧೂಸಮೇತನಾಗಿ ತನ್ನ ಮನೆಗೆ ಹೋದ ನಂತರ ಮಾಡತಕ್ಕದ್ದೆಂದು ಹೇಳಿದೆ. ಆದರೂ ಶಿಷ್ಟರು ಮಾವನ ಮನೆಯಲ್ಲಿಯೇ ಮಾಡುತ್ತಾರೆ. ಅರ್ಧರಾತ್ರಿಯ ನಂತರ ವಿವಾಹ ಹೋಮವಾದರೆ ಮಾರನೇ ದಿನ ಪ್ರಾತಃಕಾಲದಲ್ಲಿ ವಿದ್ಯಾದಿಗಳನ್ನುಚ್ಚರಿಸಿ ಮಮ ಅಸ್ವರ್ಗಹಾಗ್ನಿತ್ವಸಿದ್ದಿ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಗೃಹಪ್ರವೇಶನೀಯಾಖ್ಯಂ ಹೋಮಂ ಕರಿಷ್ಯ’’ ಹೀಗೆ ಸಂಕಲ್ಪಿಸಿ ಹೋಮವನ್ನು ಮಾಡತಕ್ಕದ್ದು. ಅರ್ಧರಾತ್ರಿಗಿಂತ ಮೊದಲು ವಿವಾಹ ಹೋಮವಾದಲ್ಲಿ ಆಗಲೇ ವಿವಾಹ ಹೋಮಾನಂತರದಲ್ಲಿ ಮಾಡತಕ್ಕದ್ದು. ತಿಥ್ಯಾದಿಗಳನ್ನುಚ್ಚರಿಸಿ ಸಂಕಲ್ಪಪೂರ್ವಕವಾಗಿ ರಾತ್ರಿಯಲ್ಲಾದರೂ ಗೃಹಪ್ರವೇಶನೀಯ ಹೋಮಮಾಡಿದಲ್ಲಿ ದೋಷವಿಲ್ಲ. ವಿವಾಹಹೋಮ, ಗೃಹಪ್ರವೇಶನೀಯ ಹೋಮಗಳನ್ನು ಸಮಾನತಂತ್ರವಾಗಿಯೂ ಮಾಡುವದಿದೆ. ಆದರೆ ಅದು ಯುಕ್ತವಲ್ಲ. ಆಶ್ವಲಾಯನ, ತೈತ್ತಿರೀಯಾದಿಗಳಿಗೆ ವಿವಾಹಾಗ್ನಿಗೆ, ೨೯೮ ಧರ್ಮಸಿಂಧು ಗೃಹಪ್ರವೇಶನೀಯ ಹೋಮಾನಂತರದಲ್ಲಿ “ಗೃಹ್ಯತ್ವ ಸಿದ್ಧಿಯಾಗುತ್ತದೆ. ತೈತ್ತಿರೀಯ, ಕಾತ್ಕಾಯನಾದಿಗಳಿಗೆ ಪುನರಾಧಾನದಲ್ಲಿ ಬೇರೆ ರೀತಿಯಿದೆ. ಔಪಾಸನ ಹೋಮ ರಾತ್ರಿಯ ಆರು ಘಟಿ ಒಳಗೆ ಅಗುತ್ಪತ್ತಿಯಾಗಿದ್ದಲ್ಲಿ ಗೃಹಗ್ರವೇಶನೀಯ ಹೋಮವಾಗದಿದ್ದರೂ, ವ್ಯತೀಪಾತಾದಿಗಳು ಸಂಭವಿಸಿದ್ದರೂ ಆಗಲೇ ಔಪಾಸನ ಹೋಮವನ್ನಾರಂಭಿಸತಕ್ಕದ್ದು. ಅನ್ನುತ್ಪತ್ತಿಯು ಅದಕ್ಕೂ ಮುಂದಾದರೆ ಮಾರನೇದಿನ ಸಾಯಂಕಾಲದಲ್ಲಿ ಔಪಾಸನಾರಂಭವಾಗತಕ್ಕದ್ದು, ಸಾಯಂ ಸಂಧ್ಯಾವಂದನಮಾಡಿ ವಿವಾಹಾಗ್ನಿಯನ್ನು ಪ್ರಜ್ವಲಿಸಿ ಪ್ರಾಣಾಯಾಮ ಮಾಡಿ ದೇಶಕಾಲಗಳನ್ನುಚ್ಚರಿಸಿ “ಅಸ್ಮಿನ್ ವಿವಾಹಾಗೇ ಯಥೋಕ್ತಕಾಲೇ ಶ್ರೀ ಪರಮೇಶ್ವರಪ್ರೀತ್ಯರ್ಥಂ ಯಾವವಂ ಉಪಾಸನಂ ಕರಿ” ಹೀಗೆ ಸಂಕಲ್ಪಿಸಿ ಪುನಃ ದೇಶಕಾಲಗಳನ್ನುಚ್ಚರಿಸಿ “ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಸಾಯಂ ಪ್ರಾತರೌಪಾಸನಮಂ ಕರಿಷ್ಯ ಆಗ “ಸಾಯವಪಾನಸಹೋಮಂ ಕರಿ” ಪ್ರಾತಃಕಾಲದಲ್ಲಿ “ಪೂರ್ವಸಂಕಲ್ಪಿತಂ ಪ್ರಾತರೌಪಾಸನಮಂ ಕರಿಷ್ಟೇ” ಇತ್ಯಾದಿ ಊಹಿಸುವದು. ಮುಂದೆ ಮೂರು ರಾತ್ರಿಪರ್ಯಂತ ವಧೂ-ವರರು ಬ್ರಹ್ಮಚರ್ಯಯಲ್ಲಿರತಕ್ಕದ್ದು. ಉಪ್ಪು, ಕಾರ ಆಹಾರಗಳನ್ನು ಬಿಡಬೇಕು. (ವಿವಾಹವ್ರತ) ನಾಲ್ಕನೆಯ ದಿನ ಐರಿಣೀದಾನ (ಪರಿಣೀದಾನವೆಂದರೆ-ವರನ ತಾಯಿಗೆ ಬಿದಿರಿನ ಪಾತ್ರೆ(ಮೊರ)ಯಲ್ಲಿ ಕಲಶಾದಿಗಳನ್ನಿಟ್ಟು ಗೌರೀ-ಹರಪೂಜೆಮಾಡಿ ವಾಯನರೂಪದಿಂದ ದಾನಮಾಡುವದು- ಋಕ್‌ಶಾಖೆಯ ಪ್ರಯೋಗದಲ್ಲಿದೆ.) ಆ ದಿನ ವಧುವಿನ ತಂದೆ-ತಾಯಿಗಳು ಉಪೋಷಿತರಾಗಿದ್ದು ಉಪೋಷಿತಳಾದ ವರನ ತಾಯಿಗೆ “ಐರಿಣೀ” ದಾನಮಾಡತಕ್ಕದ್ದು. ವರನ ತಾಯಿಯು ರಜಸ್ವಲೆಯಾಗಿದ್ದಲ್ಲಿ ಅವಳ ಶುದ್ಧಿಯಾಗುವ ವರೆಗೆ ಅಸಂಭವವಾದರೆ “ಮನಸಾ ಪಾತ್ರಮುದ್ದಿಶ್ಯ” ಎಂಬ ವಚನದಂತ ಮನಸ್ಸಿನಿಂದಲೇ ದಾನಮಾಡತಕ್ಕದ್ದು. ವಧೂವರರ ತಾಯಂದಿರು ವಿವಾಹಾನಂತರ ದೇವರೋತ್ಪಾಪನದ ಒಳಗೆ ರಜಸ್ವಲೆಯರಾದರೆ ಹಿಂದೆ ಹೇಳಿದಂತೆ ಶಾಂತಿಮಾಡಿ ಶುದ್ಧಿಯ ನಂತರ ದೇವರೋತ್ಥಾಪನ ಮಾಡತಕ್ಕದ್ದು. ಆಪತ್ತಿನಲ್ಲಿ ಅದಕ್ಕಿಂತ ಮೊದಲಾದರೂ ಮಾಡಬಹುದು. (ಶುದ್ಧಿಗಿಂತ) ಮಾತುಲ ಮೊದಲಾದವರು ಕರ್ತೃಗಳಾದಾಗ ಅವರ ಪತ್ನಿಯರು ರಜಸ್ವಲೆಯಾದರೆ ಹೇಗೆ ಮಾಡಬೇಕೆಂಬುದನ್ನು ಮೌಂಜೀಪ್ರಕರಣದಲ್ಲಿ ಹೇಳಿದೆ. ವಿವಾಹಾನಂತರ ರಜಸ್ವಲೆಯರಾದರೆ, ವಿವಾಹಾನಂತರ ಆಶೌಚಬಂದರೆ ಚತುರ್ಥಿ ವರೆಗಿನ ಕರ್ಮಗಳನ್ನು ಹೇಗೆ ಮಾಡಬೇಕು? ಈಗ ಅದರ ನಿರ್ಣಯವನ್ನು ಹೇಳಲಾಗುವದು. ಕನ್ಯಾದಾತ, ವರ, ಕನ್ನೆ ಇವರಿಗೆ ಆಶೌಚವುಂಟಾಗುವದಿಲ್ಲ. ಆದರೆ ದೇವಕೋತ್ಥಾಪನೆಯನ್ನು ಆಶೌಚಾಂತದಲ್ಲಿ ಮಾಡತಕ್ಕದ್ದು. ಅಸಂಭವವಾದರೆ ಆಶೌಚಮಧ್ಯದಲ್ಲೇ ದೇವಕೋಷ್ಣಾಪನಮಾಡಿ ಆಶೌಚ ತಕ್ಕೊಳ್ಳಬೇಕು. ವಿವಾಹಕ್ಕಿಂತ ಮೊದಲು ಪ್ರಾಪ್ತವಾದ ಆಶೌಚ, ರಜೋದೋಷ ಈ ವಿಷಯದಲ್ಲಿ ನಿರ್ಣಯವನ್ನು ಮೊದಲೇ ಹೇಳಿದೆ. ಚತುರ್ಥಿಕರ್ಮ ‘ಹೋಮಂತು ಕೌಸ್ತುಭ’ದಲ್ಲಿ ಹೇಳಿದೆ. ಇದನ್ನು ಕೆಲ ಋಕ್‌ ಶಾಖೆಗಳು ಮಾಡುತ್ತಾರೆ. ಇನ್ನು ಮಂಡಾಸನ ದಿನ ನಿರ್ಣಯಪರಿಚ್ಛೇದ - ೩ ಪೂರ್ವಾರ್ಧ ೨೯೯ ಮಂಡವೋದ್ವಾಸನಪರ್ಯಂತದ ಕರ್ತವ್ಯಾಕರ್ತವ್ಯಗಳನ್ನು ಉಪನಯನ ಪ್ರಕರಣದಲ್ಲಿ ಹೇಳಲಾಗಿದೆ. ಮಂಡಪೋದ್ಯಾಸನ ನಂತರ ಕಾರ್ಯಾಕಾರ್ಯಗಳು ಮಂಗಲಕಾರ್ಯ ಮುಗಿದ ಕೂಡಲೇ “ಸದ್ಯಸ್ನಾನ” (ಕೂಡಲೇ ಮಾಡಬಾರದು. ಹೀಗೆಯೇ ಮಿತ್ರ, ಬಂಧುಗಳನ್ನು ಬೀಳ್ಕೊಟ್ಟಾಗ, ಇಷ್ಟದೇವತೆಯನ್ನು ಪೂಜಿಸಿದಾಗಲೂ ಸದ್ಯಃಸ್ಥಾನ ಮಾಡಕೂಡದು. ಮಂಗಲಕಾರ್ಯವಾದ ವರ್ಷದ ಒಳಗೆ ಸಲಸ್ನಾನ, ತಿಲಯುಕ್ತವಾದ ಕಾರ್ಯ, ಶವದ ಅನುಗಮನ, ಕುಂಭದಾನ, ಹೊಸದಾಗಿ ತೀರ್ಥಯಾತ್ರಾ, ವಿಶೇಷ ದೇವತಾದರ್ಶನ ಇವುಗಳನ್ನು ಮಾಡಬಾರದು. ವಿವಾಹಾದಿಗಳಲ್ಲಿ, ಮುಂಜಿಯ ಕಾರ್ಯದಲ್ಲಿ, ಕಾರ್ಯವಾದ ಆರು ತಿಂಗಳೊಳಗೆ ಜೀರ್ಣ ಭಾಂಡಾದಿಗಳನ್ನೂ, ಕಸದ ರಾಶಿಯನ್ನೂ ಮನೆಯಿಂದ ಹೊರಗೆ ಚೆಲ್ಲಬಾರದು. ಪುತ್ರನ ವಿವಾಹಾನಂತರ ಮತ್ತು ಉಪನಯನ ನಂತರ ಒಂದು ವರ್ಷ ಅಥವಾ ಆರು ತಿಂಗಳೊಳಗೆ ತಾನು (ಕರ್ತನಾದ ತಂದೆಯು)ಮುಂಡನ ಕ್ಷೌರವನ್ನು ಮಾಡಬಾರದು. ಉಳಿದ ಸಂಸ್ಕಾರಗಳಲ್ಲಿ ಒಂದು ತಿಂಗಳು, ಚೌಲದಲ್ಲಿ ಮೂರು ತಿಂಗಳು ಇವುಗಳ ಪರ್ಯಂತ ಪಿಂಡದಾನ ಮತ್ತು ಮೃತ್ತಿಕಾಸ್ನಾನ, ತಿಲತರ್ಪಣ ಇವುಗಳನ್ನು ಮಾಡಬಾರದು. ಅಂದರೆ ವಿವಾಹದಲ್ಲಿ ಒಂದು ವರ್ಷ, ಉಪನಯನದಲ್ಲಿ ಆರು ತಿಂಗಳು, ಚೌಲದಲ್ಲಿ ಮೂರು ತಿಂಗಳು ಇವುಗಳೊಳಗೆ ಹಿಂದೆ ಹೇಳಿದವುಗಳನ್ನು ತ್ಯಜಿಸತಕ್ಕದ್ದೆಂದರ್ಥ. ಬೇರೆ ನಾಂದೀಶ್ರಾದ್ಧಯುಕ್ತ ಮಂಗಲಕಾರ್ಯದಲ್ಲಿ ಕಾರ್ಯಾನಂತರ ಒಂದು ತಿಂಗಳೊಳಗೆ “ಪಿಂಡದಾನ” “ತಿಲತರ್ಪಣಗಳು ವರ್ಜಗಳು, ಇದು ತ್ರಿಪುರುಷ ಸಪಿಂಡರಿಗೆ ಮಾತ್ರ. ಮುಂಡನ ನಿಷೇಧಕ್ಕೂ ಇದೇ ನಿಯಮವು. ವಿವಾಹ, ಉಪನಯನ ಇವು “ಮಂಗಲ"ದೊಳಗೆ ಬರುತ್ತವೆ ಎಂಬುದೊಂದು ಪಕ್ಷವಿದೆ. ಅಂದಾಗ ಉಪನಯನದ ನಂತರ ಮುಂಡನನಿಷೇಧವು ಪ್ರಸಕ್ತವಾಗುವದು. ಉಪನಯನವಾದರೂ “ಮುಂಡನದಲ್ಲೇ ಬರುತ್ತದೆ ಎಂಬ ಪಕ್ಷದಂತೆ ನಿಷೇಧ ಪ್ರಾಪ್ತವಾಗುವದಿಲ್ಲ. ಹಿಂದೆ ತನ್ನ ಮುಂಡನ ಎಂದಿದೆ. ಅಂದರೆ ನಾಂದೀಕರ್ತನು ಬೇರೆ ಕರ್ಮಾಂಗದ ಸಲುವಾಗಿ ಅಥವಾ ಸ್ಟೇಚ್ಛೆಯಿಂದ “ಮುಂಡನ ಮಾಡಿಕೊಳ್ಳತಕ್ಕದ್ದಲ್ಲ ಎಂದರ್ಥ. ಇದಕ್ಕೆ ಅಪವಾದ ಗಂಗಾಯಾತ್ರೆ, ಭಾಸ್ಕರಕ್ಷೇತ್ರ ಯಾತ್ರೆ, ತಾಯಿತಂದೆಗಳ ಮರಣ, ಆಧಾನ, ಸೋಮಯಾಗ, ದರ್ಶಾದಿ ಇತ್ಯಾದಿಗಳಲ್ಲಿ ಮುಂಡನಕ್ಷೌರ ಮಾಡಿಕೊಳ್ಳಬಹುದು. ಮಹಾಲಯ, ಗಯಾಶ್ರಾದ್ಧ, ತಂದೆತಾಯಿಗಳ ಪ್ರತ್ಯಾಬ್ಬಿ ಕಶ್ರಾದ್ಧ, ಸಪಿಂಡೀಕರಣಾಂತ ಪ್ರೇತಕಾರ್ಯ, ಷೋಡಶಶ್ರಾದ್ಧ ಇವುಗಳಲ್ಲಿ ವಿವಾಹಿತನಾದವನು ಪಿಂಡದಾನ, ತಿಲತರ್ಪಣಗಳನ್ನು ಮಾಡಬಹುದು, ಕೆಲವರು-ಅಣ್ಣತಮ್ಮಂದಿರು, ತಂದೆಯ ಅಣ್ಣ ತಮ್ಮಂದಿರು ಮೊದಲಾದವರ ಆಬ್ಲಿಕದಲ್ಲಿಯಾದರೂ ಪಿಂಡದಾನ, ತಿಲತರ್ಪಣಗಳನ್ನು ಮಾಡಬಹುದೆನ್ನುವರು; ಮತ್ತು ಪಿಂಡಪಿತೃಯಜ್ಞದಲ್ಲಿ, ಅಷ್ಟಕಾ, ಅನ್ನಷ್ಟಕಾ, ಪೂರ್ವರು: ಶ್ರಾದ್ಧಗಳಲ್ಲಿ ಪಿಂಡದಾನಕ್ಕೆ ನಿಷೇಧವಿಲ್ಲ. ದರ್ಶಶ್ರಾದ್ಧವನ್ನು ಪಿಂಡರಹಿತವಾಗಿ ಮಾಡತಕ್ಕದ್ದು. ಈ ಕಾರಣದಿಂದ ದರ್ಶಶ್ರಾದ್ಧದಲ್ಲಿ ವೃತಿಷಂಗ” (ಕೂಡಿ ಮಾಡುವದು) ದಿಂದ ಮಾಡಲು ಬರುವದಿಲ್ಲ. ಹೀಗೆ ಮಂಡಪೋದ್ಘಾಸನಾನಂತರದ ಕಾರ್ಯಾಕಾರ್ಯ ನಿರ್ಣಯವು. ೩೦೦ ವಧೂಗೃಹಪ್ರವೇಶ ಧರ್ಮಸಿಂಧು ವಿವಾಹದಿನದಿಂದ ಹದಿನಾರು ದಿನಗಳೊಳಗೆ ಸರಿ ದಿನಗಳಲ್ಲಿ ವಧೂಪ್ರವೇಶವಾಗತಕ್ಕದ್ದು. ಮಿಗಿಲು ದಿನಗಳಲ್ಲಿ ಪಂಚಮ, ಸಪ್ತಮ, ನವಮ ದಿನಗಳು ಅಡ್ಡಿ ಇಲ್ಲ. ರಾತ್ರಿಯ ಸ್ಥಿರಲಗ್ನದಲ್ಲಿ ವಧೂಪ್ರವೇಶವು ಶುಭವು, ನೂತನ ಗೃಹಪ್ರವೇಶವು ನಿಷಿದ್ಧವು. ಪ್ರಥಮ ದಿನದಲ್ಲಿಯೂ ಆಗಬಹುದೆಂದು ಕೆಲವರ ಮತವು. “ಪ್ರಯೋಗರತ್ನ"ದಲ್ಲಿ ಆರನೇದಿನವು ನಿಷಿದ್ಧವೆಂದು ಹೇಳಿದೆ. ಆದರೆ ಅದು ನಿರ್ಮೂಲವಾದದ್ದು. ಈ ಹದಿನಾರು ದಿನಗಳ ಮಧ್ಯದಲ್ಲಿ ಹೇಳಿದ ದಿನ ಪ್ರವೇಶಿಸುವದಾದರೆ ಪ್ರವೇಶೋಕ್ತ ನಕ್ಷತ್ರ, ತಿಥಿ, ವಾರಗಳೇ ಬೇಕೆಂಬುದೇನಿಲ್ಲ. ಮತ್ತು ಗೋಚರದಲ್ಲಿ ಚಂದ್ರಬಲಾದಿಗಳು ಬೇಕೆಂದಿಲ್ಲ. ಗುರು ಶುಕ್ರಾಸ್ತ್ರ ದೋಷವೂ ಇಲ್ಲ. ಆದರೆ ವ್ಯತೀಪಾತ, ಕ್ಷಯತಿಥಿ, ಗ್ರಹಣ, ವೈಧೃತಿ, ಅಮಾವಾಸೆ, ಸಂಕ್ರಾಂತಿ, ವಿಷ್ಟಿ ಮೊದಲಾದ ದೋಷಗಳಿರಬಾರದು. ಪ್ರಥಮ ವಧೂಪ್ರವೇಶ ಹಾಗೂ ವಿವಾಹಾರ್ಥವಾಗಿ ಪ್ರಯಾಣ ಇವುಗಳಲ್ಲಿ “ಪ್ರತಿಶುಕ್ರ” ದೋಷವಿಲ್ಲ. ಎರಡನೇ ಗಮನದಲ್ಲಿ “ಪ್ರತಿಶುಕ್ರ” ದೋಷವಿದೆ. ಹದಿನಾರು ದಿನ ಕಳೆದ ಮೇಲೆ ತಿಂಗಳೊಳಗೆ ಹೋಗುವದಿದ್ದರೆ ವಿಷಮ ದಿನವು ಶ್ರೇಷ್ಠವು. ತಿಂಗಳು ಕಳೆದಮೇಲೆ ವಿಷಮ ಮಾಸಗಳು ಶುಭಗಳು, ವರ್ಷ ಕಳೆದಮೇಲೆ ವಿಷಮ ವರ್ಷವು ಶುಭವು. ಹೇಳಿದವುಗಳಲ್ಲಿ ಸಮದಿನ, ಸಮಮಾಸ, ಸಮ ವರ್ಷಗಳಲ್ಲಿ ಪ್ರವೇಶಿಸಿದರೆ “ವೈಧವ್ಯಾದಿ” ದೋಷವನ್ನು ಹೇಳಿದೆ. ಐದುವರ್ಷ ಕಳೆದ ಮೇಲೆ ಸಮ-ವಿಷಮವೆಂಬ ದೋಷವಿಲ್ಲ. ಹದಿನಾರು ದಿನಗಳೊಳಗೆ ಹೇಳಿದ ಕಾಲದಲ್ಲಿ ಪ್ರವೇಶಿಸುವದಕ್ಕೆ ನಕ್ಷತ್ರಾದಿಗಳನ್ನು ನೋಡತಕ್ಕದ್ದಿಲ್ಲವೆಂಬುದನ್ನು ಮೊದಲೇ ಹೇಳಿದ. ನಂತರವಾದರೆ ದಿವಸಗಳನ್ನು ನೋಡತಕ್ಕದ್ದು. ಅಶ್ವಿನೀ, ರೋಹಿಣೀ, ಮೃಗಶಿರ, ಶಿಷ್ಯ, ಮಘಾ, ಉತ್ತರಾತ್ರಯ, ಹಸ್ತ, ಚಿತ್ರಾ, ಸ್ವಾತಿ, ಅನುರಾಧಾ, ಮೂಲ, ಶ್ರವಣ, ಧನಿಷ್ಠಾ, ರೇವತಿ ಇವು ಶುಭಗಳು. ಆ ತಿಂಗಳ ನಂತರದ ಮಾಸಗಳಲ್ಲಿ ಮಾರ್ಗಶೀರ್ಷ, ಮಾಘ, ಫಾಲ್ಗುಣ, ವೈಶಾಖ, ಜೇಷ್ಠ ಮಾಸಗಳು ಶುಭಗಳು, ಚತುರ್ಥಿ, ನವಮಿ, ಚತುರ್ದಶೀ, ಪಂಚದಶೀ ತಿಥಿಗಳು ವರ್ಜಗಳು, ಮಂಗಳ, ರವಿವಾರ ಹೊರತಾದ ವಾರಗಳು ಶುಭಗಳು, ದ್ವಿರಾಗಮನ (ಎರಡನೇ ಬಾರಿ ಹೋಗುವದು) ಮಾಘ, ಫಾಲ್ಗುಣ, ವೈಶಾಖ, ಶುಕ್ಲಪಕ್ಷ ಇವು ಶುಭಗಳು, ಅಶ್ವಿನೀ, ರೋಹಿಣೀ, ಪುನರ್ವಸು, ಪುಷ್ಯ, ಉತ್ತರಾತ್ರಯ, ಅನುರಾಧಾ, ಜೇಷ್ಠಾ, ಹಸ್ತ, ಸ್ವಾತಿ, ಚಿತ್ರಾ, ಶ್ರವಣ, ಶತಭಿಷ ಈ ನಕ್ಷತ್ರಗಳು ಶುಭಗಳು. ಚಂದ್ರ, ಬುಧ, ಗುರು, ಶುಕ್ರವಾರಗಳು ಶುಭಗಳು. ಗುರು-ಶುಕ್ರಾಸ್ತವು ವರ್ಜವು. ಸ್ಥಿರಲಗ್ನಾದಿಯು ಶುಭವು. ಈ ಹೇಳಿದ ಕಾಲದಲ್ಲಿ ವಧುವಿನ ಎರಡನೇ ಬಾರಿಯ ಪ್ರವೇಶಮಾಡಿಸಬೇಕು. ದ್ವಿರಾಗಮನದಲ್ಲಿ ಅಧಿಮಾಸ, ವಿಷ್ಣು ಶಯನಮಾಸಗಳು ವರ್ಜಗಳು, ಸಮಸಂವತ್ಸರ “ಪ್ರತಿಶುಕ್ರ” ಮೊದಲಾದ ದೋಷಗಳೂ ವರ್ಜಗಳು, ಈ ರಾಗಮನವನ್ನಾದರೂ ವಿವಾಹದಿಂದ ಹದಿನಾರು ದಿನಗಳೊಳಗೆ ಮಾಡುವದಿದ್ದಲ್ಲಿ ಆಗ ಪ್ರತಿಶುಕ್ರ, ಆಸ್ತ್ರ ಮೊದಲಾದ ದೋಷವಿಲ್ಲವೆಂದು ಉಕ್ತಿಯಿದೆ. ಉಕ್ತಿಯ ತಾತ್ಪರ್ಯ ಹೀಗೂ ಇದೆ. “ಹದಿನಾರು ದಿನಗಳೊಳಗೆ ಹನ್ನೊಂದನೇ ದಿನ ಮತ್ತು ಸಮದಿನಗಳಲ್ಲಿ ಮಾಡುವದಿದ್ದಲ್ಲಿ ನಕ್ಷತ್ರ, ತಿಥಿ, ಯೋಗ, ವಾರ ಇತ್ಯಾದಿ ಶುದ್ದಿಯನ್ನು ನೋಡುವ ಕಾರಣವಿಲ್ಲ ಎಂದಿದೆ. ಪರಿಚ್ಛೇದ ೩ ಪೂರ್ವಾರ್ಧ 100 ಕೇವಲ ಆಂಗಿರಸ, ಕೇವಲ ಭಗು, ಭರದ್ವಾಜ, ಕಶ್ಯಪ, ಅತ್ರಿ, ವತ್ಸ ಈ ಗೋತ್ರದವರಿಗೆ “ಪ್ರತಿಶುಕ್ರ"ದೋಷವಿರುವದಿಲ್ಲ. ರೇವತಿ, ಅಶ್ವಿನೀ, ಭರಣಿ, ಕೃತ್ತಿಕಾ ಇವುಗಳ ಆದಿಪಾದಗಳಲ್ಲಿ ಚಂದ್ರನಿರುವಾಗ ಶುಕ್ರನಿಗೆ ಅಂಧತ್ವವಿರುವದರಿಂದ ಪ್ರತಿಶುಕ್ರ ದೋಷವಾಗುವದಿಲ್ಲ. ದುರ್ಭಿಕ್ಷ, ದೇಶಸಂಕಟ, ವಿವಾಹ, ತೀರ್ಥಯಾತ್ರ ಇವುಗಳಲ್ಲಿ ಮತ್ತು ಪ್ರಯಾಣವು ಒಂದು ನಗರದೊಳಗೇ ಅಥವಾ ಒಂದು ಗ್ರಾಮದ ಒಳಗೇ ಆಗಿರುವಾಗಲೂ ಪ್ರತಿಶುಕ್ರ ದೋಷವಿರುವದಿಲ್ಲ. ವಧುವಿನ ಪ್ರಥಮ ವರ್ಷದಲ್ಲಿಯ ನಿವಾಸ ವಿವಾಹವಾದ ನಂತರ ಮೊದಲನೇ ವರ್ಷದಲ್ಲಿ ಪತಿಗೃಹದಲ್ಲುಳಿಯುವಾಗ ಅದು ಆಷಾಢಮಾಸವಾದರೆ ಪತಿಯ ತಾಯಿಗೆ ಮೃತ್ಯುಕಾರಕವು, ಕ್ಷಯಮಾಸದಲ್ಲುಳಿದರೆ ತನ್ನ ಹಾನಿಮಾಡಿಕೊಳ್ಳುವಳು. ಜೇಷ್ಠ ದಲ್ಲುಳಿದರೆ ಪತಿಯ ಜೇಷ್ಠನಿಗೆ ಹಾನಿ, ಪುಷ್ಯದಲ್ಲಿ ಮಾವನಿಗೆ ಹಾನಿ, ಅಧಿಕಮಾಸದಲ್ಲಿ ಪತಿಗೆ ಹಾನಿ, ಚೈತ್ರದಲ್ಲಿ ತನ್ನ ತಂದೆಯ ಮನೆಯಲ್ಲುಳಿದರೆ ತಂದೆಗೆ ಹಾನಿ. ಆದರೆ ಆಯಾಯ ಜನರು ಮೊದಲೇ ಇಲ್ಲವಾದಲ್ಲಿ ದೋಷವಿಲ್ಲ. ಅತ್ತೆಯಿಲ್ಲದಿದ್ದರೆ ಆಷಾಢದಲ್ಲಿ ಪತಿಗೃಹದಲ್ಲುಳಿಯಬಹುದು ಇತ್ಯಾದಿ.) ಪುನರ್ವಿವಾಹ ದುಷ್ಟಲಗ್ನದಲ್ಲಿ ಅಥವಾ ಉಕ್ತಗ್ರಹತಾರಾದಿಗಳನ್ನು ಬಿಟ್ಟು ವಿವಾಹವಾಗಿದ್ದರೆ ಇನ್ನೂ ಉಳಿದಿರುವ ದುಷ್ಟಯೋಗಾದಿ ಕಾಲಗಳಲ್ಲಿ ಕೂಶ್ಚಾಂಡೀಘ್ರತ ಹೋಮಾದಿ ಯಥೋಕ್ತ ವಿಧಿಯನ್ನು ಮಾಡಿಕೊಳ್ಳದೆ ಅಥವಾ ಸೂತಕಾದಿಗಳಲ್ಲಿ ವಿವಾಹವಾಗಿದ್ದರೆ ಅದೇ ದಂಪತಿಗೆ ಉತ್ತಮ ಮುಹೂರ್ತ ನೋಡಿ ಪುನಃ ವಿವಾಹವಿಧಿಯನ್ನು ಮಾಡತಕ್ಕದ್ದು, ಪತ್ನಿಯು ಸುರಾಪಾನ ಮಾಡುವವಳಾದರೆ, ವ್ಯಾಧಿಗ್ರಸ್ತಳಾದರೆ, ವಂಚಕಳಾದರೆ, ಬಂಜೆಯಾದರೆ, ಸಂಪತ್ತನ್ನು ಸೂರಮಾಡುವವಳಾದರೆ, ಬರೇ ಹೆಣ್ಣು ಸಂತತಿಯನ್ನು ಹಡೆಯುವವಳಾದರೆ, ಪತಿಯನ್ನು ದ್ವೇಷಿಸುವವಳಾದರೆ ಆಗ ಬೇರೆಯವಳನ್ನೇ ವಿವಾಹವಾಗತಕ್ಕದ್ದು. ಅದು “ಅಧಿವೇದನ’ವೆನ್ನಲ್ಪಡುವದು. ಗರ್ಭಿಣಿಯಾಗದಿದ್ದವಳನ್ನು ಒಂಭತ್ತು ವರ್ಷ ನಿರೀಕ್ಷಿಸಿ ಹತ್ತನೇ ವರ್ಷ ಬೇರೆ ವಿವಾಹಮಾಡಿಕೊಳ್ಳಬಹುದು. ಬರೇ ಹೆಣ್ಣು ಹಡೆಯುವವಳನ್ನು ಹನ್ನೊಂದು ವರ್ಷ ನಿರೀಕ್ಷಿಸಬೇಕು. ಹನ್ನೆರಡನೇ ವರ್ಷ ತ್ಯಜಿಸಬಹುದು. ಹುಟ್ಟು ಹುಟ್ಟಿದ ಪುತ್ರರು ಮೃತರಾಗುತ್ತಿದ್ದರೆ ಹದಿನೈದನೇ ವರ್ಷ ತ್ಯಜಿಸುವದು. ಅಪ್ರಿಯವಾದಿನಿಯನ್ನು ಕೂಡಲೇ ತ್ಯಜಿಸಬೇಕು. ಇಲ್ಲಿ “ಅಪ್ರಿಯ"ವೆಂದರೆ “ವ್ಯಭಿಚಾರ” ಎಂದು ತಿಳಿಯತಕ್ಕದ್ದು. ಕಲಿಯುಗದಲ್ಲಿ ಪ್ರತಿಕೂಲ ಭಾಷಣಮಾಡುವದು ಸಾಮಾನ್ಯವೇ ಆಗಿದೆ. ಇನ್ನು ಆಜ್ಞಾನುವರ್ತಿನಿಯೂ, ದಕ್ಷಳೂ, ವೀರಪುತ್ರನನ್ನು ಹಡೆಯುವವಳೂ, ಪ್ರಿಯವಾದಿನಿಯೂ ಆದ ಪತ್ನಿಯನ್ನು ಬಿಟ್ಟು ಭೋಗಾರ್ಥವಾಗಿ ಅನ್ಯ ಸ್ತ್ರೀಯರನ್ನು ಮದುವೆಯಾದರೆ ಮೊದಲಿನ ಹೆಂಡತಿಗೆ ತನ್ನ ಸ್ವತ್ತಿನಲ್ಲಿ ಮೂರನೇ ಒಂದಂಶವನ್ನು ಕೊಡಬೇಕು, ನಿರ್ಧನನಾದರೆ ಅವಳ ಪೋಷಣ ಮಾಡಬೇಕು. ಹಿರೇಹೆಂಡತಿಯು ಮನೆಯನ್ನು ತ್ಯಜಿಸಿ ಹೋಗುವಂತಿದ್ದರೆ ಅವಳನ್ನು ತಡೆ ಹಿಡಿದು ಪ್ರತ್ಯೇಕವಾದ ಮನೆಯಲ್ಲಿಡಬೇಕು. ಅಥವಾ ಕುಲಜನರ ಸಮಕ್ಷಮ ತ್ಯಾಜ್ಯ ಮಾಡಬೇಕು” ಹೀಗೆ ಮನುವಚನವಿದೆ. ಅನೇಕ ಪತ್ನಿಯರಿದ್ದರೆ ಅಗ್ನಿಶುಶೂಷಾದಿ ಧರ್ಮಾಚರಣೆಯನ್ನು ಹಿರೇಹೆಂಡತಿಯೊಡನೆಯೇ ಧರ್ಮಸಿಂಧು ಮಾಡಬೇಕು. ಕಿರಿಯವರಿಗಧಿಕಾರವಿಲ್ಲ. ಆದರೆ ಜೇಷ್ಠಪತ್ನಿಯು ಆಜ್ಞಾನುವರ್ತಿಯಾದರೆ ಮಾತ್ರ. ದೋಷಾದಿಶೀಲಳಾದವಳ ವಿಷಯದಲ್ಲಿ ಹಿಂದೆ ಹೇಳಿದ ಮನುವಚನದಂತೆ ಕುಲದವರ ಸನ್ನಿಧಿಯಲ್ಲಿ ತ್ಯಾಜ್ಯಮಾಡುವದು. (ಅವರ ರಕ್ಷಣೆಯಲ್ಲಿಡುವದು) ಅಥವಾ ಬೇರೆ ಗೃಹದಲ್ಲಿ ನಿರ್ಬಂಧಿಸಿಡಬೇಕು. ಇಂಥ ಸಂದರ್ಭದಲ್ಲಿ ಕನಿಷ್ಠ ಪತ್ನಿಯಿಂದಾದರೂ ಕೂಡಿ ಧರ್ಮಾಚರಣೆ ಮಾಡತಕ್ಕದ್ದು. ಇಲ್ಲವಾದರೆ “ಧರ್ಮಭ್ರಂಶ"ವಾಗುವದು. ವೀರರನ್ನು ಹಡೆಯುವ, ಆಜ್ಞಾನುವರ್ತಿನಿಯಾದ ಹಾಗೂ ಸಮರ್ಥಳಾದ, ಪ್ರಿಯವಾದಿನಿಯೂ, ಪರಿಶುದ್ಧಳೂ ಆದ ಪತ್ನಿಯು ಕಿರಿಯವಳಾದರೂ ಅವಳೊಡನೆ ಧರ್ಮಕಾರ್ಯಗಳನ್ನಾಚರಿಸುವದು. ಹೀಗೆ “ಮಾಧವೀಯ"ಸ್ಕೃತಿಯಲ್ಲಿ ಹೇಳಿದೆ. ದ್ವಿತೀಯ ವಿವಾಹಹೋಮವನ್ನು ಪೂರ್ವವಿವಾಹಹೋಮ ಸಂಬಂಧಿಯಾದ ಗೃಹ್ಯಾಗ್ನಿಯಲ್ಲೇ ಮಾಡತಕ್ಕದ್ದು. ಲೌಕಿಕಾಗ್ನಿಯಲ್ಲಿ ಮಾಡುತ್ತಿದ್ದಲ್ಲಿ ದ್ವಿತೀಯ ವಿವಾಹ ಹೋಮಾದಿಗಳಿಂದ ಉತ್ಪನ್ನವಾದ ಅಗ್ನಿಯೇ ಗೃಹ್ಯಾಗ್ನಿಯಾಗುವದರಿಂದ ಆ ಎರಡೂ ಗೃಹ್ಯಾಗ್ರಿಗಳನ್ನು ಸಂಸರ್ಗಮಾಡತಕ್ಕದ್ದು. ಅಗ್ನಿನ್ವಯ ಸಂಸರ್ಗ ಪ್ರಯೋಗ ದೇಶಕಾಲಗಳನ್ನುಚ್ಚರಿಸಿ “ಮಮಾಭ್ಯಾಂ ಭಾರ್ಯಾಭ್ಯಾಂ ಸಹ ನಿನ್ನ ಗೃಹಾಗ್ಯೂ ತಾಭ್ಯಾಂ ಸಹ ಅಧಿಕಾರದ್ವಾರಾ ಶ್ರೀ=ರ್ಥಂ ಸಂಸರ್ಗಂ ಕರಿಷ್ಯ “ಹೀಗೆ ಸಂಕಲ್ಪ ಮಾಡಿ ಪುಣ್ಯಾಹಪೂರ್ವಕ ದಕ್ಷಿಣದಿಕ್ಕಿನಲ್ಲೊಂದು, ಉತ್ತರದಿಕ್ಕಿನಲ್ಲೊಂದು ಹೀಗೆ ಎರಡು ಸ್ಲಂಡಿಲಗಳನ್ನು ಮಾಡಿ ದಕ್ಷಿಣಸ್ತ್ರಂಡಿಲದಲ್ಲಿ ಹಿರಿಯವಳ ಗೃಹಾಗ್ನಿಯನ್ನೂ, ಉತ್ತರಸ್ಥಂಡಿಲದಲ್ಲಿ ಕನಿಷ್ಠಳ ಪೃಹಾಗ್ನಿಯನ್ನೂ ಪ್ರತಿಷ್ಠಾಪಿಸಿ ಪ್ರಥಮಾಗ್ನಿಯಲ್ಲಿ ಶ್ರೇಷ್ಠ ಪಸಹಿತನಾಗಿ ಅಷ್ಟಾಧಾನ ಮಾಡತಕ್ಕದ್ದು. ಅಗ್ನಿದ್ವಯ ಸಂಸರ್ಗಾರ್ಥ ಪ್ರಥಮಾಗ್ನಿ ಹೋಮಕರ್ಮಣಿ ದೇವತಾಪರಿಗ್ರಹಾರ್ಧ ಅಷ್ಟಾಧಾನಂ ಕರಿಷ್ಟೇ, ಚಕ್ರುಷೀ ಆಜೇನೇತ್ಯಂತೇ ಅಗ್ನಿಂ ನವಭಿರಾಜ್ಯಾಹುತಿಭಿಃ ಶೇಷೇಣ” ಇತ್ಯಾದಿ. “ಅಗ್ನಿಮೀಳೇ ಇತಿ ನವಾನಾಂ ಮಧುಚ್ಛಂದಾ ಅಗ್ನಿರ್ಗಾಯ ಅಗ್ನಿದ್ವಯ ಸಂಸರ್ಗಾರ್ಥ೦ ಪ್ರಧಾನಾಗೌ ಪ್ರಧಾನಾ ಹೋಮೇ ವಿನಿಯೋಗಃ” ಇತ್ಯಾದಿ ಒಂಭತ್ತು ಮಂತ್ರಗಳಿಂದ ಪ್ರತಿಮಂತ್ರದಿಂದ ಸೃವೆಯಿಂದ ಒಂಭತ್ತು ಆಚ್ಯಾಹುತಿಗಳನ್ನು ಹೋಮಿಸುವದು. “ಅಗ್ನಯ ಇದಂ ಎಂದು ತ್ಯಾಗಮಾಡುವದು. ಹೋಮಶೇಷವನ್ನು ಮುಗಿಸಿ “ಅಯಂತೇಯೋನಿಃ” ಈ ಮಂತ್ರದಿಂದ ಜೇಷ್ಟಾಗ್ನಿಯನ್ನು ಸಮಿಧದಲ್ಲಿ ಸಮಾರೋಪಿಸಿ “ಪ್ರತ್ಯವರೋಹ” ಮಂತ್ರದಿಂದ ಅದನ್ನು ದ್ವಿತೀಯಾಗ್ನಿಯಲ್ಲಿ ಪ್ರತ್ಯವರೋಹ ಮಾಡಿ ಧ್ಯಾನಿಸಿ ಇಬ್ಬರು ಪತ್ನಿಯರಿಂದ ಕೂಡಿ ಅನ್ನಾಧಾನ ಮಾಡತಕ್ಕದ್ದು. “ಅಗ್ನಿಯ ಸಂಪರ್ಕಾರ್ಥ ಪ್ರಥಮಸಂಸೃಷ್ಟಿ ದ್ವಿತೀಯಾ ವಿಹಿತಹೋಮೇ ದೇಮಾತುಗ್ರ ಹಾರ್ಥಂ ಅನ್ನಾಧಾನ ಕಷ್ಠ ಆಭಾಗಾಂತೇ ಅಗ್ನಿಂ ಪ್ರಧಾನಂ ಪಾರಮಾಜೈನ ಶೇಷೇಣ” ಇತ್ಯಾದಿ. ಪ್ರೋಕ್ಷಣೀ, ಕುಶ, ದರ್ವಿ, ಸೃವೆ, ಪ್ರಣೀತ, ಆಜ್ಯಪಾತ್ರ, ಇ, ಬರ್ಹಿ ಹೀಗೆ ಎಂಟು ಪಾತ್ರಗಳನ್ನು ಸ್ಥಾಪಿಸುವನು. ಸೃಚೆಯಲ್ಲಿ ನಾಲ್ಕಾವರ್ತಿ ಹಾಕಿಕೊಂಡ ತುಪ್ಪವನ್ನು ಹಿಡಿದುಕೊಂಡು ಇಬ್ಬರು ಪತ್ನಿಯರಿಂದ ಸಹಿತವಾಗಿ ಹೋಮಿಸುವದು. “ಅಗ್ನಾವಗಿರಿತ್ಯಕ್ಕೆ ಹಿರಣ್ಯಗರ್ಭೋಗಿರಷ್ಟಿ: ಅಗ್ನಿಯ ಸಂಸರ್ಗಾರ್ಥ ಸಂಸ್ಕಾಗೆ ಪ್ರಧಾನಾಜ್ಯಹೋಮ ವಿ = ಓಂ ಆಗ್ರಾ ವಗ್ನಿಶ್ಚರು ಪ್ರತಿ ಋಷೀಣಾಂ ಪುತ್ರೋ ಅಧಿರಾಜಷತಸ್ಕೃ ಮಹೋಮಿ ಹವಿಷಾ ಈತನ ಮಾಡೇವಾನಾಂ ಮೋಮಮಾಗಧೇಯಂ ಸ್ವಾಹಾ| ಅಗ್ನ ಇದು” ಹೀಗೆ ಮುಂದೆಯೂ ಆರ

22 ಪರಿಚ್ಛೇದ ೩ ಪೂರ್ವಾರ್ಧ ಇತ್ಯ ಚತುಗ್ರ್ರಹೀತ, ವಿನಿಯೋಗ, ತ್ಯಾಗಗಳನ್ನು ಮಾಡತಕ್ಕದ್ದು. “ಅಗ್ನಿನಾಗ್ನಿರ್ಮಧಾತಿಥಿ: ಕಾಗ್ನಿರ್ಗಾಯ| ಓಂ ಅಗ್ನಿನಾಗ್ನಿ: ಸಮಿಧ್ಯತ=ಅದಮಿಸ್ಕಣಾಂ ಮಿಶ್ರಾಮಿಗಿರನುಷ್ಟುಪ್ ಅಂತ್ಯ ತ್ರಿಷ್ಟು ಓಂ ಅಸೀದ ಮಧಿಂ ಅರ=ಓಂ ಉತ್ಪಾನಾಯಾಮ-ಪಾಹಿನೋ ಭರ್ಗ: ಪ್ರಗಾಥೋಗಿರ್ಬೃಹತೀ ಓಂ ಪಾಹಿ= ಭರ್ವಸೋಸ್ವಾಹಾ|” ಹೋಮಶೇಷವನ್ನು ಮುಗಿಸಿ ಅಗ್ನಿಹೋತ್ರಿ ಬ್ರಾಹ್ಮಣನಿಗೆ ಎರಡು ಗೋವುಗಳನ್ನು ಕೊಟ್ಟು ಬ್ರಾಹ್ಮಣ ಭೋಜನ ಮಾಡಿಸುವದು. ಹೀಗೆ ಅಗ್ನಿದ್ವಯ ಸಂಸರ್ಗಪ್ರಯೋಗವು. ಒಬ್ಬಳು ಮೃತಳಾದಲ್ಲಿ ಆ ಸಂಸರ್ಗಾಗ್ನಿಯಿಂದಲೇ ದಹನಮಾಡಿ ನಂತರ ಎರಡನೇ ಸ್ತ್ರೀಯಿಂದ ಕೂಡಿ ಆಧಾನ ವಿಧಿಯಿಂದ ಅಗ್ನಿಯನ್ನುತ್ಪಾದಿಸಿ ಅಗ್ನಿಧಾರಣ ಮಾಡಬೇಕು. ದ್ವಿತೀಯಾದಿ ವಿವಾಹ ಕಾಲವು ಪತ್ನಿಯು ಮೃತಳಾದಾಗ ಎರಡನೇ ವಿವಾಹ ಮಾಡಿಕೊಳ್ಳುವದಿದ್ದರೆ ಮೃತದಿನದಿಂದ ವಿಷಮವರ್ಷದಲ್ಲಿ ಮಾಡಿಕೊಳ್ಳುವದು ಶುಭಕರವು, ಸಮವರ್ಷದಲ್ಲಿ ಮಾಡಿದಲ್ಲಿ ಮಾಡಿಕೊಂಡ ಪತ್ನಿಯು ಮರಣಹೊಂದುವಳು. ಆಪತ್ತಿನಲ್ಲಿ ರುದ್ರಾಭಿಷೇಕ, ಮೃತ್ಯುಂಜಯ ಜಪಾದಿಗಳನ್ನು ಮಾಡಿ ವಿವಾಹವಾಗತಕ್ಕದ್ದೆಂದು ಕಾಣುತ್ತದೆ. ಎರಡನೆಯವಳೂ ತೀರಿಕೊಂಡರೆ ಮೂರನೇ ವಿವಾಹವನ್ನು ಮನುಷ್ಯಸ್ತ್ರೀಯೊಡನೆ ಮಾಡಬಾರದು. ಮಾಡಿದಲ್ಲಿ ಅವಳು ಸಾಯುವಳು. ಅಥವಾ ವಿಧವೆಯಾಗುವಳು. ಆದುದರಿಂದ ಮೂರನೇ ವಿವಾಹವನ್ನು ಅರ್ಕ (ಎಕ್ಕಗಿಡ) ದೊಡನೆ ಮಾಡಿಕೊಳ್ಳುವದು. ಅರ್ಕವಿವಾಹ ರವಿ ಅಥವಾ ಶನಿವಾರದಲ್ಲಿ ಹಸ್ತನಕ್ಷತ್ರ ಅಥವಾ ಬೇರೆ ಶುಭದಿನದಲ್ಲಿ ಪುಷ್ಪ ಫಲಯುಕ್ತವಾದ ಅರ್ಕವೃಕ್ಷದ ಸಮೀಪಕ್ಕೆ ಹೋಗಿ ಅರ್ಕಕನ್ಯಾದಾನಕ್ಕಾಗಿ ಆಚಾರ್ಯನನ್ನು ವರಿಸಿ ರಕ್ತಗಂಧಾದಿಗಳಿಂದಲಂಕೃತನಾಗಿ ದೇಶಕಾಲಗಳನ್ನುಚ್ಚರಿಸಿ “ಮಮ ತೃತೀಯಮಾನು ವಿವಾಹಜನ್ಯ ದೋಷ ಪರಿಹಾರಾರ್ಥಂ ತೃತೀಯಮರ್ಕವಿವಾಹಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಆಚಾರ್ಯವರಣಮಾಡಿ ನಾಂದೀಶ್ರಾದ್ಧಾಂತ ಮಾಡತಕ್ಕದ್ದು. ಆಗ “ದಾತನು ಮಧುಪರ್ಕ, ಯಜ್ಞಪವೀತ, ವಸ್ತ್ರ, ಗಂಧ, ಮಾಲ್ಯಾದಿಗಳಿಂದ ವರನನ್ನು ಪೂಜಿಸುವದು. ಅರ್ಕವೃಕ್ಷದ ಮುಂದೆ ನಿಂತು “ತ್ರಿಲೋಕವಾಸಿನ್ ಸಪ್ತಾಶ್ವಚ್ಛಾಯಯಾ ಸಹಿತೋರವೇ! ತೃತೀಯೋದ್ವಾಹಜಂದೋಷಂ ನಿವಾರಯ ಸುಖಂ ಕುರು” ಛಾಯಾದೇವಿಯಿಂದ ಯುಕ್ತನಾದ ಸೂರ್ಯನನ್ನು ಅರ್ಕವೃಕ್ಷದಲ್ಲಿ ಧ್ಯಾನಿಸಿ ಜಲಚಿತ ಮಂತ್ರದಿಂದ ಅಭಿಷೇಕ ಮಾಡಿ ವಸ್ತ್ರಾದಿಗಳಿಂದ “ಆಕೃಷ್ಣನ” ಎಂಬ ಮಂತ್ರದಿಂದ ಪೂಜಿಸಿ ಬಿಳೇವಸ್ತ್ರ ಮತ್ತು ಸೂತ್ರವನ್ನು ಅರ್ಕವೃಕ್ಷಕ್ಕೆ ಸುತ್ತಿ, ಬೆಲ್ಲ, ಅನ್ನವನ್ನು ನಿವೇದಿಸಿ ಫಲ ತಾಂಬೂಲವನ್ನು ಕೊಡುವದು. “ಮಮ ಪ್ರೀತಿಕರಾಯೇಯಂ ಮಯಾ ಸೃಷ್ಟಾ ಪುರಾತನೀ ಅರ್ಕಜಾ ಬ್ರಹ್ಮಣಾಸೃಷ್ಟಾನ ದ್ಯಾಸ್ಮಾನ್ ಸಂಪ್ರತಿ ರಕ್ಷತು” ಹೀಗೆ ಹೇಳಿ ಪ್ರದಕ್ಷಿಣೆಮಾಡಿ “ನಮಸ್ತೇ ಮಂಗಲೇ ದೇವಿ ನಮ: ಸವಿತುರಾತ್ಮಜೇ ಕೃಪಯಾ ದೇವಿ ಪತ್ನಿತ್ವಂಮ ಇಹಾಗತಾ| ಅರ್ಕಂ ಬ್ರಹ್ಮಣಾ ದೃಷ್ಟ: ಧರ್ಮಸಿಂಧು ಸರ್ವಪ್ರಾಣಿ ಹಿತಾಯ ವೃಕ್ಷಾಣಾಮಧಿಭೂತಂ ದೇವಾನಾಂ ಪ್ರೀತಿವರ್ಧನ ತೃತೀಯೋದ್ಯಾಹಜಂ ಪಾಪಂ ಮೃತ್ಯುಂಬಕು ವಿನಾಶಯ” ಹೀಗೆ ಹೇಳಿ ಪ್ರದಕ್ಷಿಣ ಮಾಡಬೇಕು. ಅಂತಃಪಟಧಾರಣಾದಿ ಕನ್ಯಾದಾನಪರ್ಯಂತ ವಿಧಾನವನ್ನು ಮಾಡಿ “ಕನ್ಯಾದಾತನು “ಆದಿತ್ಯಸ್ಯ ಪ್ರಪೌತ್ರೀಂ ಸವಿತು: ಪೌಂ ಅರ್ಕಸ್ಕಪುಂ ಕಾಶ್ಯಪಗೋತ್ರಾಂ ಅರ್ಕಕಾಂ ಅಮುಕಗೋತ್ತಾಯ ವರಾಯ ತುಭ್ರಮಹಂ ಸಂಪ್ರದದೇ, ಅರ್ತಕಸ್ವಾಮಿಮಾಂ ಮಿಶ್ರ ಯಥಾಶಕ್ತಿ ವಿಭೂಷಿತಾಂಗೋತ್ರಾಯ ಶರ್ಮಣೇ ತುಭಂ ರಾಂ ವಿಪ್ರ ಸಮಾತ್ರಯ” ಆಮೇಲೆ ದಕ್ಷಿಣೆಯನ್ನು ಕೊಟ್ಟು ಗಾಯತ್ರಿಯನ್ನು ಹೇಳಿ ಸುತ್ತಿದ ಸೂತ್ರದಿಂದ “ಬೃಹತ್ನಾಮ” ಈ ಮಂತ್ರದಿಂದ ಅರ್ಕವರರಿಗೆ ಕಂಕಣಬಂಧನಮಾಡಿ ಅರ್ಕದ ನಾಲ್ಕು ದಿಕ್ಕುಗಳಲ್ಲಿ ಕಲಶಗಳನ್ನಿಟ್ಟು ಅವುಗಳಲ್ಲಿ ವಿಷ್ಣುವಿನ ನಾಮಮಂತ್ರಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡುವದು, ಅರ್ಕದ ಎಡಭಾಗದಲ್ಲಿ ವರನು ಅರ್ಕಪಸಹಿತನಾಗಿ “ಅಸ್ಕಾ ಸದ್ಗುಾಯಾವಿಧ್ಯರ್ಥಂ ಪಾಣಿಗ್ರಹದಂ ತಂ ಆಧಾರದೇವತೇ ಆನ ಇತ್ಯಯ ಬೃಹಸ್ಪತಿಂ ಅಗ್ನಿ, ಅಗ್ನಿ, ವಾಯು, ಸೂರ್ಯ, ಪ್ರಜಾಪತಿಂ ಚ ಆದ್ರಣ ರೇಷಣ ಸ್ಟಕೃತ್” ಇತ್ಯಾದಿ ಆಧಾರಾಂತಮಾರಿ “ಸಂಗೋಛಿರಿತೃನ್ನ ಆಂಗಿರಸ ಬೃಹಸ್ಪತಿ ಬ್ರಹ್ಮನ್ ಆಡೋದು ವಿನಿಯೋಗ ಓಂ ಸಂಗೋಧಿರಾಂಗಿರಬೃಹಸ್ಪತಯ ಇದಂ ಯ ವಾದುದೇಗಿದ್ರುನ್ ಯಸ್ಮಿತ ಕಾದುಕಾಮಯ ವಯಂ ಸಮ್ರಹಾದುಹೇತದುಂ ದುಂ ಈಥೇದಂ ತಂ ಭ್ರತಃ ಬಾವಾ ಆಗ್ನಯ ಇದು” ಆಮೇಲೆ ವ್ಯಸ್ತ, ಸಮಸ್ತ ವ್ಯಾಹೃತಿಗಳಿಂದ ಹೋಮಿಸಿ ಹೋಮಶೇಷವನ್ನು ಮುಗಿಸಿ “ದುಯಾಕೃತದಿದಂ ಕರ್ದುಾದರೇನು ಜರಾಯು ಆರ್ಕಾನಿನೋ ದೇಹಿ ತಪ್ಪದಂ ಯದುರ್ಹ” ಹೀಗೆ ಪ್ರಾರ್ಥಿಸಿ ಶಾಂತಿಸೂಕ್ತವನ್ನು ಪಠಿಸಿದ ನಂತರದಲ್ಲಿ ಎರಡು ಆಕಳುಗಳನ್ನು ಆಚಾರ್ಯನಿಗೆ ಕೊಟ್ಟು, ತಾನು ಧರಿಸಿದ ವಸ್ತ್ರವನ್ನು ಆಚಾರ್ಯನಿಗೆ ದಾನಮಾಡಿ ಬೇರೆ ವಸ್ತ್ರಗಳನ್ನು ಧರಿಸಿ ಹತ್ತು ಅಥವಾ ಮೂರು ಬ್ರಾಹ್ಮಣಭೋಜನ ಮಾಡಿಸುವದು. ಹೀಗೆ ಅರ್ಕವಿವಾಹವು ಆತ ಪ್ರಕರಣ ಬ್ರಾಹ್ಮಮೂಹೂರ್ತದಲ್ಲಿದ್ದು ಶ್ರೀ ವಿಷ್ಣುವನ್ನು ಸ್ಮರಿಸಿ “ಗಜೇಂದ್ರಮೋಕ್ಷ” ಮೊದಲಾದವುಗಳನ್ನು ಪಠಿಸಿ ಇಷ್ಟದೇವತಾದಿಗಳ ಸ್ಮರಣೆಮಾಡುವದು. “ಸಮುದ್ರವಸನದೇವಿ ಪರ್ವತಕ್ಕನದುಂಡಲೇ ವಿಷ್ಟುನ್ನು ಸದುಸ್ತುಂ ಪಾರ್ತಂ (ದುಶ್ಯದ” ಹೀಗೆ ಭೂಮಿಯನ್ನು ಪ್ರಾರ್ಥಿಸಬೇಕು ಮತ್ತು ಗೋ ಮೊದಲಾದ ಮಂಗಲ ವಸ್ತುಗಳನ್ನು ದರ್ಶನ ಮಾಡಬೇಕು. ಮಲ-ಮೂತ್ರ ವಿಸರ್ಜನಾದಿ ವಿಧಿ ತಲೆಗೆ ವಸ್ತ್ರವನ್ನು ಸುತ್ತಿಕೊಂಡು ಹುಲ್ಲು ಮೊದಲಾದವುಗಳಿಂದ ಮುಟ್ಟಿರುವ ನೆಲದಲ್ಲಿ, ಜನಿವಾರವನ್ನು ಮಾಲಿಕೆ ಮಾಡಿಕೊಂಡು, ಅದನ್ನು ಕಿವಿಯ ಮೇಲಾಗಲೀ ಹಿಂಬದಿಗಾಗಲೀ ಮಾಡಿಕೊಂಡು, ಮೂಗನ್ನು ಮುಚ್ಚಿಕೊಂಡು ಮಲಮೂತ್ರಗಳನ್ನು ವಿಸರ್ಜಿಸುವದು. ಹಗಲು ಅಥವಾ ಸಂಸ್ಥೆಯಾದರೆ ಉತ್ತರಮುಖ ಮಾಡಿಕೊಳ್ಳಬೇಕು, ರಾತ್ರಿಯಲ್ಲಾದರೆ ದಕ್ಷಿಣಮುಖಮಾಡಿ ಕುಳಿತುಕೊಳ್ಳಬೇಕು, ಆ ಕಾಲದಲ್ಲಿ ಮಾತನಾಡಬಾರದು, ಕಾಲೆಟ್ಟು ಹಾಕಿಕೊಳ್ಳಬಾರದು. ನಿಯ ಪರಿಚ್ಛೇದ - ೩ ಪೂರ್ವಾರ್ಧ BOX ಮಾಡಬಾರದು. ಯಜ್ಞಪವೀತವನ್ನು ಮಾಲಿಕೆಮಾಡಿಕೊಳ್ಳದೆ ಬರೇ ಕಿವಿಗೆ ಸಿಕ್ಕಿಸಿಕೊಳ್ಳುವದು ಇದು ಅನಾಚಾರವು. ಮಾರ್ಗ, ಜಲಾಶಯ, ದೇವಾಲಯ, ನದೀತೀರ ಮೊದಲಾದವುಗಳಲ್ಲಿ ಮಲವಿಸರ್ಜನೆಯು ನಿಷಿದ್ದವು. ಜಲಾಶಯದಲ್ಲಿ ಹನ್ನೆರಡು ಹಸ್ತಗಳನ್ನು ಬಿಟ್ಟು ಮೂತ್ರವಿಸರ್ಜನ ಮಾಡಬೇಕು. ಸೂರ್ಯಾಭಿಮುಖನಾದರೆ ಮತ್ತು ತನ್ನ ಮಲವನ್ನು ನೋಡಿದರೆ ಆ ದೋಷಪರಿಹಾರಕ್ಕಾಗಿ ಸೂರ್ಯನನ್ನಾಗಲೀ, ಗೋವನ್ನಾಗಲೀ ದರ್ಶನಮಾಡಬೇಕು. ಆಮೇಲೆ ಶಿಶ್ನವನ್ನು ಹಿಡಕೊಂಡು ಅಲ್ಲಿಂದ ಎದ್ದು ಶೌಚಾಚಾರಮಾಡುವದು. ಮೂತ್ರವಿಸರ್ಜನೆಯಲ್ಲಿ ಶುದ್ಧ ಮೃತ್ತಿಕೆಯನ್ನು ತೆಗೆದುಕೊಂಡು ಲಿಂಗದಲ್ಲಿ ಒಂದಾವರ್ತಿ, ಎಡಗೈಗೆ ಮೂರಾವರ್ತಿ, ಪುನಃ ಎರಡೂಕೈಗಳಿಗೆ ಮೂರಾವರ್ತಿ ಮೃತ್ತಿಕೆಯಿಂದ ತಿಕ್ಕಬೇಕು. ಆನಂತರ ಅಷ್ಟೇ ಆವರ್ತಿ ಜಲದಿಂದ ತೊಳೆಯಬೇಕು. ಈ ಮೂತ್ರದಲ್ಲಿ ಹೇಳಿದ್ದಕ್ಕಿಂತ ರೇತಸ್ಸಲನದಲ್ಲಿ ಎರಡುಪಟ್ಟು ಶೌಚವು. ಮೈಥುನದಲ್ಲಿ ಮೂರುಪಟ್ಟು ಹೆಚ್ಚು ಮಾಡಬೇಕು. ಇನ್ನು ಮಲದ ವಿಷಯದಲ್ಲಿ ಲಿಂಗಕ್ಕೆ ಒಂದು, ಮಲದ್ವಾರದಲ್ಲಿ ಮೂರು, ಎಡಗೈಗೆ ಹತ್ತು, ಪುನಃ ಎರಡೂ ಕೈಗಳಿಗೆ ಏಳೇಳು ಹೀಗೆ ಮೃತ್ತಿಕೆಯನ್ನು ಹಾಕಬೇಕು, ಎರಡು ಪಾದಗಳಿಗೂ ಏಳು-ಏಳು ಅಥವಾ ಮೂರು-ಮೂರು ಆವರ್ತಿ ಹಾಕಬೇಕು. ಇದು ಸಾಮಾನ್ಯವಾಗಿ ಗೃಹಸ್ಥನಿಗೆ ಹೇಳಿದ್ದು, ಬ್ರಹ್ಮಚಾರಿಗೆ ಎರಡು ಪಟ್ಟು, ಯತಿಗಳಿಗೆ ನಾಲ್ಕುಪಟ್ಟು “ಶೌಚ"ವನ್ನು ಹೇಳಿದ. ಹೀಗೆ ಮೃತ್ತಿಕೆಯಿಂದ ಮತ್ತು ಜಲದಿಂದ ಶೌಚಾಚಾರ ಮಾಡಬೇಕು. ಈ ಆಚಾರವನ್ನು ರಾತ್ರಿಯಲ್ಲಿ ಅರ್ಧಸಂಖ್ಯೆಯಲ್ಲಿ ಮಾಡಬಹುದು, ಆವನಲ್ಲಿ ಕಾಲುಪಾಲು ಶೌಚವು, ಸ್ತ್ರೀ, ಶೂದ್ರ ಬಾಲಕರು ಇದರ ಅರ್ಧ ಮಾಡಿದರೂ ಸಾಕಾಗುವದು. ಈ ಹೇಳಿದ ಸಂಖ್ಯೆಯಿಂದ ಶೌಚಮಾಡಿದರೂ ವಾಸನೆಯು ಹೋಗದಿದ್ದಾಗ ಅದು ಹೋಗುವ ಪರ್ಯಂತ ಶೌಚವನ್ನಾಚರಿಸಬೇಕು, ಇಲ್ಲಿ ಮೃತ್ತಿಕೆಯ ಪ್ರಮಾಣದಂದರೆ ಒಂದು ನಲ್ಲಿಕಾಯಿಯಷ್ಟಿರತಕ್ಕದ್ದು. (ಹಸೀನೆಲ್ಲಿಕಾಯಿ) ನೀರಿನ ತೊಂದರೆಯಿಂದ ಶೌಚಕ್ಕೆ ವಿಲಂಬವಾದಲ್ಲಿ ಸಲಸ್ನಾನಮಾಡತಕ್ಕದ್ದು, ಹೀಗೆ ಹೇಳಿದ ಶೌಚವನ್ನಾಚರಿಸಲಾಗದಾಗ ನೂರೆಂಟು ಗಾಯತ್ರಿಯನ್ನು ಜಪಿಸಿ ಮೂರು ಪ್ರಾಣಾಯಾಮಗಳನ್ನು ಮಾಡಬೇಕು. ಮೂತ್ರದ ವಿಷಯದಲ್ಲಿ ನಾಲ್ಕು ಗಂಡೂಷಗಳು, (ಬಾಯಿಮುಕ್ಕಳಿಸುವದು) ಮಲದ ವಿಷಯದಲ್ಲಿ ಹನ್ನೆರಡು ಅಥವಾ ಎಂಟು, ಭೋಜನಾನಂತರ ಹದಿನಾರು ಹೀಗೆ ಗಂಡೂಷಗಳು. ಆಚಮನ ವಿಧಿ “ಆಚಮನ"ವೆಂದರೆ ಮೂರಾವರ್ತಿ ಜಲಪ್ರಾಶನ ಮಾಡುವದು. ತಲೆಯಲ್ಲಿ ವಸ್ತ್ರವಿರಬಾರದು. ಕುತ್ತಿಗೆಗೂ ವಸ್ತ್ರ ಸುತ್ತಿರಬಾರದು. ನಿಂತು ಆಚಮನ ಮಾಡಬಾರದು. ಯಜ್ಞಪವೀತಿಯಾಗಿರಬೇಕು. ಪೂರ್ವ ಅಥವಾ ಉತ್ತರಾಭಿಮುಖನಾಗಿರಬೇಕು. ಅಂಗುತ್ನದ ಮೂಲದಿಂದ ಅಂಗುಷ್ಠ ಕನಿಷ್ಠಗಳನ್ನು ಬಿಟ್ಟ ಹಸ್ತದಿಂದ ಪ್ರಾಶನ ಮಾಡಬೇಕು. ಉಷ್ಕಜಲವಾಗಬಾರದು. ಆ ಜಲದಲ್ಲಿ ನೂರ ಮೊದಲಾದವುಗಳಿರಬಾರದು, ಪ್ರಾಶನ ಮಾಡಿದ ಜಲವು ಹೃದಯಕ್ಕೆ ಮುಟ್ಟುವಂತಿರಬೇಕು. ಇತ್ಯಾದಿ ನಿಯಮವಿದೆ. “ಕೇಶವಾಯ ಸಮ, ನಾರಾಯನಾಯ ನಮಃ, ಮಾಧವಾಯ ನಮಃ” ಹೀಗೆ ಮೂರು ಆವರ್ತಿ ಪ್ರಾಶನೆಗೆ ಶ್ರಮದಿಂದ ಮಂತ್ರವು, ಇನ್ನು ಆಚಮನ ಶೇಷ ಅಂದರೆ “ಗೋವಿಂದಾಯ ನಮಃ” ಎಂದು ಹೇಳಿ ಬಲಗೈಯನ್ನು ಧರ್ಮಸಿಂಧು ತೊಳೆದುಕೊಳ್ಳುವದು. “ವಿಷ್ಣವೇ ನಮಃ " “ಮಧುಸೂದನಾಯ ನಮಃ” ಈ ಎರಡು ಮಂತ್ರಗಳಿಂದ ಎರಡು ತುಟಿಗಳನ್ನು ಒರಸಿಕೊಳ್ಳುವದು. “ತ್ರಿವಿಕ್ರಮಾಯ ನಮಃ” ಹೀಗೆ ಹೇಳಿ ಎರಡು ತುಟಿಗಳಿಗೆ ಪ್ರೋಕ್ಷಿಸುವದು. “ವಾಮನಾಯ ನಮಃ” ಎಂದು ಜಲವನ್ನಭಿಮಂತ್ರಿಸಿ “ಶ್ರೀಧರಾಯ ನಮ:” ಹೀಗೆ ಹೇಳಿ ಎಡಗೈಯನ್ನು ತೊಳಕೊಳ್ಳಬೇಕು. “ಹೃಷಿಕೇಶಾಯ ನಮಃ” ಎಂದು ಬಲಪಾದವನ್ನೂ, “ಪದ್ಮನಾಭಾಯ ನಮಃ” ಎಂಬದರಿಂದ ಎಡಪಾದವನ್ನೂ ತೊಳೆದುಕೊಳ್ಳಬೇಕು. “ದಾಮೋದರಾಯನಮಃ” ಎಂದು ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುವದು. “ಸಂಕರ್ಷಣಾಯ ನಮ:” ಎಂದು ಮೇಲಿನ ತುಟಿಗೆ ಪ್ರೋಕ್ಷಿಸಿಕೊಳ್ಳುವದು. “ವಾಸುದೇವಾಯ ನಮಃ” ಎಂದು ಮೂಗಿನ ಬಲದ ಸೊಳ್ಳೆಯನ್ನು ಸ್ಪರ್ಶಿಸುವದು. “ಪ್ರದ್ಯುಮ್ನಾಯ ನಮಃ” ಎಂದು ಮೂಗಿನ ಎಡ ಸೊಳ್ಳೆಯನ್ನು ಸ್ಪರ್ಶಿಸಬೇಕು. “ಅನಿರುದ್ಧಾಯ ನಮಃ” ಎಂದು ಬಲನೇತ್ರವನ್ನೂ, “ಪುರುಷೋತ್ತಮಾಯ ನಮ:” ಈ ಮಂತ್ರದಿಂದ ಎಡನೇತ್ರವನ್ನೂ ಸ್ಪರ್ಶಿಸಬೇಕು. ‘ಅಧೋಕ್ಷಜಾಯ ನಮಃ’ ಎಂದು ಬಲದಕಿವಿಯನ್ನೂ, ‘ನಾರಸಿಂಹಾಯ ನಮಃ’ ಎಂದು ಎಡದ ಕಿವಿಯನ್ನೂ ಮುಟ್ಟುವದು. ‘ಅಚ್ಯುತಾಯ ನಮಃ’ ಎಂದು ನಾಭಿಯನ್ನು ಮುಟ್ಟುವದು. ‘ಜನಾರ್ಧನಾಯ ನಮಃ’ ಎಂದು ಹೃದಯವನ್ನು ಮುಟ್ಟುವದು. ‘ಉಪೇಂದ್ರಾಯ ನಮಃ’ ಎಂದು ತಲೆಯನ್ನು ಸ್ಪರ್ಶಿಸುವದು. ‘ಹರಯೇ ನಮಃ’ ಎಂದು ಬಲಭುಜವನ್ನೂ, ‘ಶ್ರೀ ಕೃಷ್ಣಾಯ ನಮಃ’ ಎಂದು ಎಡದ ಭುಜವನ್ನೂ ಮುಟ್ಟತಕ್ಕದ್ದು. ಈ ವಿಷಯದಲ್ಲಿ ಕೆಲ ಮತಾಂತರವಿದೆ. ಏನೆಂದರೆ ಕೇಶವಾದಿ ಮೂರು ನಾಮಗಳಿಂದ ಪ್ರತ್ಯೇಕ ನಾಮಕ್ಕೆ ಆಚಮನ ಮಾಡತಕ್ಕದ್ದು. ಗೋವಿಂದ, ವಿಷ್ಣು ಈ ಎರಡು ನಾಮಗಳಿಂದ ಎರಡು ಹಸ್ತ ಪ್ರಕ್ಷಾಳನ ಮಾಡಬೇಕು. ಮಧುಸೂದನ, ತ್ರಿವಿಕ್ರಮ ಇವುಗಳಿಂದ ಎರಡು ಕನ್ನೆಗಳನ್ನು ಒರಿಸುವದು. ವಾಮನ, ಶ್ರೀಧರ ಇವುಗಳಿಂದ ಎರಡು ತುಟಿಗಳ ಮಾರ್ಜನ ಮಾಡುವದು. ಹೃಷಿಕೇಶ ಈ ನಾಮದಿಂದ ಹಸ್ತಮಾರ್ಜನ ಮಾಡಬೇಕು. ಪದ್ಮನಾಭ ಇದರಿಂದ ಪಾದಮಾರ್ಜನ ಮಾಡುವದು; ಅಥವಾ ಎರಡೆರಡು ನಾಮಗಳಿಂದ ತುಟಿಗಳ ಮಾರ್ಜನ ಮತ್ತು ಪ್ರಕಾಳನ ಮಾಡುವದು. ಹಸ್ತ, ಪಾದಗಳನ್ನು ಒಂದೊಂದು ನಾಮದಿಂದ ಮಾರ್ಜನಮಾಡುವದು, ಉಳಿದ ನಾಮಗಳಿಂದ ಹಿಂದೆ ಹೇಳಿದಂತೆ ಮಾಡುವದು. ಹೀಗೆ ಕೆಲವರ ಮತವು. ಇವುಗಳಲ್ಲಿ “ಸ್ಪರ್ಶ” ಅಂದರೆ ಬೆರಳಿನ ತುದಿಯಿಂದ ಮೇಲಿನ ತುಟಿಯ ಸ್ಪರ್ಶ. ಅಂಗುಷ್ಠ, ತರ್ಜನಿಗಳಿಂದ ಮೂಗಿನ ಸೊಳ್ಳೆಯ ಸ್ಪರ್ಶ, ಅಂಗುಪ್ಪ, ಅನಾಮಿಕಗಳಿಂದ ನೇತ್ರಸ್ಪರ್ಶ; ಅಂಗುಷ್ಠ, ಕನಿಷ್ಠ ಗಳಿಂದ ಕಿವಿ ಮತ್ತು ನಾಭಿಯ ಸ್ಪರ್ಶ, ತೆರೆದ ಹಸ್ತದಿಂದ ಹೃದಯ ಸ್ಪರ್ಶ, ಹಸ್ತದಿಂದ ತಲೆಯ ಸ್ಪರ್ಶ, ಬೆರಳುಗಳ ತುದಿಯಿಂದ ಭಜಸ್ಪರ್ಶ ಹೀಗೆ ಸ್ಪರ್ಶಕ್ರಮವು. ಹಿಂದೆ ಹೇಳಿದ ರೀತಿಯಿಂದ ಆಚಮನಮಾಡಲಸಮರ್ಥನಾದರೆ ಕೇಶವಾದಿ ಮೂರು ಮಂತ್ರಗಳಿಂದ ಮೂರು ಆಚಮನ ಮಾಡಿ ಕೈ ತೊಳೆದುಕೊಂಡು ಬಲದ ಕಿವಿಯನ್ನು ಸ್ಪರ್ಶಿಸಬೇಕು. ಕಂಚು, ಕಬ್ಬಿಣ, ಸೀಸ, ತವರ, ಹಿತ್ತಾಳಿ ಈ ಪಾತ್ರಗಳಿಂದ ಆಚಮನ ಮಾಡಬಾರದು. ಇನ್ನು “ಶತಾಚಮನ” ಎಂದೂ ಇದೆ. ಗಾಯತ್ರಿಯ ಮೂರು ಪಾದಗಳು, ಆಪೋಹಿಷ್ಠಾ ಮೂರು ಮಂತ್ರಗಳ ಒ೦ಭತ್ತು ಪಾದಗಳು, ಏಳು ವ್ಯಾಹತ ಮಂತ್ರಗಳು, ಪುನಃ ಗಾಯತ್ರಿಯ ಮೂರು ಚರಣಗಳು, ಶಿರೋಮಂತ್ರದ ಎರಡು ವಿಭಾಗಗಳು ಪರಿಚ್ಛೇದ - ೩ ಪೂರ್ವಾರ್ಧ ಅಂತೂ ಇಪ್ಪತ್ತುನಾಲ್ಕರಿಂದ ಆಯಾಯ ಸ್ಥಾನಗಳನ್ನು ಹಿಂದೆ ಹೇಳಿದಂತೆ ತಿಳಿಯತಕ್ಕದ್ದು. ಆಚಮನ ನಿಮಿತ್ತಗಳು 2,02 ಕರ್ಮಾಚರಣ ಮಾಡುವಾಗ- ಅಧೋವಾಯುವು ಹೊರಟರೆ, ಕಣ್ಣೀರು ಬಿದ್ದರೆ, ಸಿಟ್ಟು ಬಂಧರೆ, ಬೆಕ್ಕು ಸ್ಪರ್ಶಮಾಡಿದರೆ, ಸೀನು ಬಂದರೆ, ವಸ್ತ್ರವನ್ನುಟ್ಟರೆ, ಮಡಿವಾಳ, ಅಂತ್ಯಜಾದಿಗಳ ದರ್ಶನವಾದರೆ ಮತ್ತು ಸ್ನಾನಮಾಡಿದ ನಂತರ, ಕುಡಿದ ನಂತರ, ಊಟಮಾಡಿದ ನಂತರ, ಮಲಗಿ ಎದ್ದಾಗ ಆಚಮನ ಮಾಡಬೇಕು, ಮತ್ತು ಮಲ, ಮೂತ್ರ, ರೇತಸ್ಸು ಇವುಗಳ ಶೌಚವಾದ ನಂತರ ಆಚಮನ ಮಾಡಬೇಕು. ಎಲ್ಲ ಕಡೆಯಲ್ಲಿ ಆಚಮನ ಅಸಂಭವವಾದರೆ ಬಲಕಿವಿಯನ್ನು ಸ್ಪರ್ಶಿಸುವದು. ಹಲ್ಲಿಗೆ ಹಿಡಕೊಂಡಿದ್ದ ಅಗುಳನ್ನು ಹಗುರ ಉಪಾಯದಿಂದ ತೆಗೆಯಬೇಕು. ರಕ್ತ ಬಂದರೆ ದೋಷವಾಗುವದು. ಹಲ್ಲಿಗೆ ಹಿಡಿದದ್ದು ಹಲ್ಲಿನಂತೆಯೇ ಉಚ್ಛಿಷ್ಟವು ಅದಕ್ಕೆ ಹಿಡಿದ ಅನ್ನವು ಕಾಲಾಂತರದಲ್ಲಿ ಹೊರಗೆ ಬಿದ್ದರೆ ಆಚಮನ ಮಾಡಬೇಕು. ದರ್ಭೆಯು ಎಡಗೈಯಲ್ಲಿದ್ದಾಗ ಬಲಗೈಯಿಂದ ಆಚಮನ ಮಾಡಬಾರದು. ಎರಡೂ ಕೈಗಳಿಗೆ ದರ್ಭಪವಿತ್ರವಿದ್ದಾಗ ಆಚಮನ ಮಾಡಿದರೆ “ಸೋಮಪಾನ ಮಾಡಿದಂತಾಗುವದು. ಸಾಮಾನ್ಯವಾಗಿ ದರ್ಭಪವಿತ್ರಗಳು ತ್ಯಾಜ್ಯವಾಗುವದಿಲ್ಲ. ಆದರೆ ಊಟದಲ್ಲು ಪಯೋಗಿಸಿದ, ಶ್ರಾದ್ಧಾದಿಗಳಲ್ಲಿಯೂ, ಪಿತೃಕಾರ್ಯದಲ್ಲಿಯೂ ಬಳಸಿದ ದರ್ಭೆಯು ತ್ಯಾಜ್ಯವು ಅದರಂತೆ ಮಲ-ಮೂತ್ರ ಮಾಡುವಾಗ ಇರುವ ದರ್ಭೆಯೂ ತ್ಯಾಜ್ಯವು, ಮಲ-ಮೂತ್ರಗಳನ್ನು ಮಾಡುವಾಗ ದರ್ಭಪವಿತ್ರಗಳನ್ನು ತೆಗೆದಿಟ್ಟುಕೊಳ್ಳಬೇಕು. ದಂತಧಾವನ ಹಲ್ಲುಜ್ಜುವ ಕಡ್ಡಿಯು ಹಾಲುಬರುವ ವೃಕ್ಷದ್ದಾಗಿರಬೇಕು. ಮುಳ್ಳಿನಿಂದ ಕೂಡಿರಬೇಕು. ಉತ್ತರಣೀ ಮೊದಲಾದವುಗಳಡ್ಡಿಯಿಲ್ಲ. ತಕ್ಕ ಕಾವ್ಯವು ಸಿಗದಿದ್ದಾಗ ಅಥವಾ ಶ್ರಾದ್ಧೋಪವಾಸಾದಿ ನಿಷಿದ್ಧದಿನವಾಗಿದ್ದಾಗ ಎಲೆಮೊದಲಾದವುಗಳಿಂದ ಹಲ್ಲನ್ನು ತಿಕ್ಕುವದು. ತರ್ಜನೀಬೆರಳನ್ನು ಉಜ್ಜುವಾಗ ಬಿಡಬೇಕು. ಅಥವಾ ಹನ್ನೆರಡಾವರ್ತಿ ಬಾಯಿಮುಕ್ಕಳಿಸಿದರೂ ಸರಿಯೇ. ಸಂಕ್ಷೇಪವಾಗಿ ಸ್ನಾನವಿಧಿ ಸ್ನಾನಕ್ಕೆ ನದೀ ಮೊದಲಾದ ಪ್ರವಾಹಗಳು ಪ್ರಶಸ್ತವು, ಶಿಖೆಯನ್ನು ಬಿಚ್ಚಿಡಬಾರದು. ಮೊಣಕಾಲು ಕಂತುವಷ್ಟು ಜಲದಲ್ಲಿ ನಿಲ್ಲಬೇಕು ಅಥವಾ ಕೂಡ್ರಬಹುದು. ಆಚಮನವನ್ನು ಮೊದಲು ಮಾಡಿ “ಮಮ ಕಾಯಿಕ, ವಾಚಿಕ, ಮಾನಸಿಕದೋಷ ನಿರಸನಪೂರ್ವಕಂ ಸರ್ವಕರ್ಮಸು ಶುದ್ಧಿಸಿಧ್ಯರ್ಥಂ ಪ್ರಾತಃಸ್ನಾನಂ ಕರಿಷ್ಯ ಹೀಗೆ ಸಂಕಲ್ಪಿಸಿ ಜಲವನ್ನು ನಮಸ್ಕರಿಸುವದು. ಪೂರ್ವಾಭಿಮುಖ ಅಥವಾ ಪ್ರವಾಹಾಭಿಮುಖವಾಗಿ ಮೂರಾವರ್ತಿ ಮುಳುಗಿ ದೇಹವನ್ನು ತಿಕ್ಕಿಕೊಂಡು ಪುನಃಸ್ನಾನಮಾಡುವದು, ನಂತರ ದ್ರಿರಾಚಮನಮಾಡಿ ಆಪೋಹಿಷ್ಠಾ ಮಂತ್ರದಿಂದ ಮಾರ್ಜನ ಮಾಡತಕ್ಕದ್ದು. “ಇಮಂ ಮೇ ಗಂಗೇ ಈ ಮಂತ್ರದಿಂದ ಮೂರಾವರ್ತಿ ಜಲವನ್ನು ಕದು “ಅಘಮರ್ಷಣಸೂಕ್ತ"ವನ್ನು ಮತ್ತು “ಋತಂಚ” ಸೂಕ್ತದಿಂದ ಮೂರಾವರ್ತಿ ಮುಳುಗಿ ಸ್ನಾನಮಾಡತಕ್ಕದ್ದು, ಕಾತ್ಯಾಯನರು, ‘ದೃಪದಾ’ ಈ ಮಂತ್ರದಿಂದ ಸ್ನಾನಮಾಡುವದು, ನಂತರ ಆಚಮನ ಮಾಡಿ ಜಲತರ್ಪಣ ಮಾಡತಕ್ಕದ್ದು; ಅಥವಾ ಜಲತರ್ಪಣವನ್ನು ಬಿಡಲೂಬಹುದು. ೩೦೮ ಧರ್ಮಸಿಂಧು ತರ್ಪಣಮಾಡುವದಿದ್ದಲ್ಲಿ ಉಪವೀತಿಯಾಗಿ “ಬ್ರಹ್ಮಾದಯೋಯೋದೇವಸ್ತಾನ್ ದೇವಾಂಸ್ಕರ್ಪಯಾಮಿ ಭೂರ್ರವಾಂಸ್ತರ್ಪಯಾಮಿ” ಇತ್ಯಾದಿ. ಆಮೇಲೆ ನಿವೀತಿಯಾಗಿ (ಜನಿವಾರವನ್ನು ಮಾಲಿಕ ಮಾಡಿಕೊಂಡು) “ಕೃಷ್ಣಪಾಯನಾದಋಷಯಾನ್ ಇತ್ಯಾದಿ, ನಂತರ ಪ್ರಾಚೀನಾವೀತಿಯಾಗಿ “ಸೋಮಃ ಪಿತೃಮಾನ್ ಯಮೋಂಗಿರಾನ್ ಅಗ್ನಿಸ್ವಾತ್ಯಾದಯೋ ಯೇ ಪಿತರಾನ್” ಇತ್ಯಾದಿ ತರ್ಪಣ ಮಾಡುವದು. ಯಾವದಾದರೊಂದು ನದಿಯಲ್ಲಿ ಸ್ನಾನಮಾಡುವಾಗ ಅಲ್ಲಿ ಬೇರೆ ನದಿಯನ್ನು ಸ್ಮರಿಸಬಾರದು. ಇಲ್ಲಿ ತೈತ್ತೀರಿಯಾದಿಗಳು ತರ್ಪಣದಲ್ಲಿ ಬೇರೆ ಬೇರೆ ಋಷಿಗಳನ್ನು ಹೇಳುತ್ತಾರೆ. ಸಂಕ್ಷೇಪವಾಗಿ ಇಲ್ಲಿ ಹೇಳುವದಿರುವದರಿಂದ ಸಂಕ್ಷೇಪ ವಿಧಿಯಲ್ಲಿ ತರ್ಪಣವು ಕೃತಾಕೃತವಿರುವದರಿಂದ ಇಲ್ಲಿ ವಿವರಿಸಲಿಲ್ಲ. ಮನೆಯಲ್ಲಿ ಸ್ನಾನಮಾಡುವವನು ಬಿಸಿನೀರಿನಿಂದ ಸ್ನಾನಮಾಡಬೇಕು. ತಣ್ಣೀರಿನಿಂದ ಮಾಡತಕ್ಕದ್ದಲ್ಲ. ಪಾತ್ರದಲ್ಲಿ ತಣ್ಣೀರನ್ನು ಸುರುವಿ ಅದರ ಮೇಲೆ ಬಿಸಿನೀರು ತುಂಬಿ “ಓಂ ಶ.ದೇವೀ, ಓಂ ಆಪಪುನಂತು, ಓಂ ದೃಪದಾದಿವೀ, ಓಂ ಋತಂಚ, ಓಂ ಆಪೋಹಿಷ್ಠಾ” ಹೀಗೆ ಐದು ಮಂತ್ರಗಳಿಂದ ಅದನ್ನು ಅಭಿಮಂತ್ರಿಸಿ ‘ಇಮಂ ಮೇ ಗಂಗೇ’‘ಇತ್ಯಾದಿ ಮಂತ್ರಗಳಿಂದ ತೀರ್ಥಗಳನ್ನು ಸ್ಮರಿಸುತ್ತ ಸ್ನಾನಮಾಡತಕ್ಕದ್ದು. ಮನೆಯಲ್ಲಿ ಸ್ನಾನಮಾಡುವಾಗ “ಆಚಮನ, ಆಘಮರ್ಷಣ ಮತ್ತು ತರ್ವಣ’ಗಳನ್ನು ಮಾಡತಕ್ಕದ್ದಿಲ್ಲ. ಸ್ನಾನಾನಂತರ ಆಚಮನ, ಮಾರ್ಜನಗಳನ್ನು ಮಾಡತಕ್ಕದ್ದು. ಹೀಗೆ ಸ್ನಾನಮಾಡಿದ ವಸ್ತ್ರದಿಂದ ಅಥವಾ ಕೈಯಿಂದ ನೀರನ್ನು ಒರಿಸದೆಯೇ ಒಣಗಿದ ಶುಭ್ರವಾದ ಹತ್ತಿಯ ಬಟ್ಟೆಯನ್ನುಟ್ಟು ಸ್ನಾನಕಾಲದಲ್ಲಿದ್ದ ಒದ್ದೆಯ ವಸ್ತ್ರವನ್ನು ಮೇಲ್ಮುಖವಾಗಿ ತೆಗೆಯಬೇಕು. ಕಚ್ಚೆರಹಿತರಾದ, ಉತ್ತರೀಯವಿಲ್ಲದ, ಬೆತ್ತಲೆಯಾಗಿರುವವರು ಶೌತಸ್ಮಾರ್ತಕರ್ಮಕ್ಕೆ ಅನರ್ಹರಾಗುವರು. ಎರಡು ಪಟ್ಟು ಉದ್ದವಾದ ವಸ್ತ್ರ ಧರಿಸಿದವರು, ಸುಟ್ಟವಸ್ತ್ರವನ್ನು ಧರಿಸಿದವರು, ಹೊಲಿದ ವಸ್ತ್ರವನ್ನುಟ್ಟವರು, ತುಂಡು ವಸ್ತ್ರಗಳನ್ನು ಗಂಟು ಮಾಡಿ ಉಟ್ಟವರು, ಕಾವಿಬಟ್ಟೆ ಮೊದಲಾದವುಗಳನ್ನು ಧರಿಸಿದವರು ಮತ್ತು ಬೆತ್ತಲೆಯಾಗಿದ್ದವರು ಇವರೆಲ್ಲ “ನಗ್ನ “ರಂದೇ ಎಣಿಸಲ್ಪಡುವರು. ಹಿಂಡಿದ ವಸ್ತ್ರವನ್ನು ಹಗಲಿನಲ್ಲಿ ಧರಿಸಬಾರದು. ಬಚ್ಚಲಮನೆಯಲ್ಲಿ ಸ್ನಾನಮಾಡಿದವರು ವಸ್ತ್ರವನ್ನು ನಾಲ್ಕು ಮಡಿಕ ಮಾಡಿ ಕೆಳಗೆ ಸೆರಗಾಗುವಂತೆ ಹಿಡಿದು ಒಗೆಯತಕ್ಕದ್ದು. ನದಿಯಲ್ಲಿ ಸ್ನಾನಮಾಡುವಾಗ ಸೆರಗನ್ನು ಮೇಲೆ ಮಾಡಿ ಒಗೆಯಬೇಕು. ವಸ್ತ್ರವನ್ನು ಮೂರು ಮಡಿಕೆ ಮಾಡಿ ಒಗೆಯಬಾರದು, ತಂದೆ, ಅಣ್ಣತಮ್ಮಂದಿರು ಜೀವಿಸಿರುವವನು ಉತ್ತರೀಯವನ್ನು ಧರಿಸಬಾರದು. ಅಂಗವಸ್ತ್ರವನ್ನು ಎಲ್ಲರೂ ಧರಿಸಬಹುದು. ಹೀಗೆ ನಿತ್ಯದ ಪ್ರಾತಃಸ್ಥಾನವು ಸ್ನಾನನಿಮಿತ್ತಗಳು ಚಾಂಡಾಲ, ಸೂತಕಿ, ಹಡೆದವಳು, ರಜಸ್ವಲೆ, ಅತಿ ಕಟ್ಟಿಗೆ, ಶವ, ಚಾಂಡಾಲನ ನೆಳಲು ಇವುಗಳ ಸ್ಪರ್ಶವಾದರೆ ಸ್ನಾನಮಾಡಬೇಕು. ಪರಂಪರೆಯಿಂದ ಮುಟ್ಟಿದ ಮೂವರ ನಂತರ ಆಚಮನ ಮಾತ್ರ. ಅಂದರೆ ಚಾಂಡಾಲನನ್ನು ಸಾಕ್ಷಾತ್ ಮುಟ್ಟಿದವ, (೧) ಈ ಮುಟ್ಟಿದ ಪುರುಷನನ್ನು ಮುಟ್ಟಿಕೊಂಡವ, (೨) ಈ ಎರಡನೆಯವನನ್ನು ಮುಟ್ಟಿಕೊಂಡವ (೩) ಈ ಮೂವರಿಗೂ ಸಲ ಸ್ನಾನವಾಗತಕ್ಕದ್ದು. ಕಡೆಯ ಈ ಮೂರನೆಯವನನ್ನು ಮುಟ್ಟಿದ ನಾಲ್ಕನೆಯವನಿಗೆ ಆಚಮನಪರಿಚ್ಛೇದ - ೩ ಪೂರ್ವಾರ್ಧ 1.OE ಮಾತ್ರ ಎಂದರ್ಥ. ನಂತರದ ಸ್ಪರ್ಶಿಗೆ ಪ್ರೋಕ್ಷಣವು. ಕಟ್ಟಿಗೆ, ತೃಣ ಮೊದಲಾದವುಗಳಿಂದ ಮುಟ್ಟಿಕೊಂಡವನು, ಚಾಂಡಾಲನನ್ನು ಪ್ರತ್ಯಕ್ಷವಾಗಿ ಮುಟ್ಟಿಕೊಂಡಿರುವವನಿಂದ ಎರಡನೆಯವನಾದರೆ ಆಚಮನ ಮಾತ್ರ. ಮೈಲಿಗೆಯಾದವನ ವಸ್ತ್ರ ಸಂಬಂಧವಾದ ಸ್ಪರ್ಶವು ಸಾಕ್ಷಾತ್ ಸ್ಪರ್ಶವಾದಂತೆಯೇ ಎಣಿಸಲ್ಪಡುವದು. ಹೀಗೆ ವಸ್ತ್ರಾಂತರ ಸ್ಪರ್ಶಿಗಳಲ್ಲಾದರೂ ಪರಂಪರೆಯಿಂದ ನಾಲ್ಕನೆಯವನಿಗೆ ಆಚಮನ ಮಾತ್ರ. ನೈಮಿತ್ತಿಕ ಸ್ನಾನವನ್ನು ರಾತ್ರಿಯಲ್ಲಾದರೂ ಮಾಡತಕ್ಕದ್ದು. ಜನನ, ಮರಣ, ಸಂಕ್ರಾಂತಿ, ಶ್ರಾದ್ಧ, ಜನ್ಮದಿನ, ಅಸ್ಪಶ್ಯಸ್ಪರ್ಶ ಇವುಗಳಲ್ಲಿ ಬಿಸಿನೀರಿನಿಂದ ಸ್ನಾನಮಾಡಬಾರದು. ನೈಮಿತ್ತಿಕಸ್ನಾನದಲ್ಲಿ ಜಲತರ್ಪಣಾದಿ ವಿಧಿಯಿಲ್ಲ. ನಿತ್ಯ ಸ್ನಾನಮಾಡದೆ ಭೋಜನ ಮಾಡಿದರೆ ಉಪವಾಸವಿರಬೇಕು. ಗೃಹಸಂಕ್ರಾಂತ್ಯಾದಿ ನೈಮಿತ್ತಿಕದಲ್ಲಿ ಸ್ನಾನ ಮಾಡದೆ ಭೋಜನ, ಪಾನಗಳನ್ನು ಮಾಡಿದರೆ ಎಂಟು ಸಾವಿರ (ಗಾಯ)ಜಪ ಮಾಡಬೇಕು. ಶೂದ್ರಾದಿ ಸ್ಪರ್ಶನಿಮಿತ್ತದಲ್ಲಿ ಉಪವಾಸಮಾಡಬೇಕು. ನಾಯಿ, ಕಾಗೆ, ಚಾಂಡಾಲ ಮೊದಲಾದವರ ಸ್ಪರ್ಶವಾದಾಗ ಸ್ನಾನಮಾಡದೆ ಭೋಜನ, ಪಾನಗಳನ್ನು ಮಾಡಿದರೆ “ತ್ರಿರಾತ್ರ ಉಪವಾಸ’ವು. ರಜಕ (ಮಡಿವಾಳ) ಮೊದಲಾದವರ ವಿಷಯದಲ್ಲಿ ಅದರ ಅರ್ಧವು. ಹೀಗೆ ನೈಮಿತ್ತಿಕಸ್ನಾನವು ಕಾಮ್ಯಸ್ನಾನ ಅಮಾವಾಸೆ, ವ್ಯತೀಪಾತ, ರಥಸಪ್ತಮೀ ಮೊದಲಾದವುಗಳಲ್ಲಿ ಮಾಡುವ ಸ್ನಾನ ಮತ್ತು ಕಾರ್ತಿಕಸ್ನಾನ, ಮಾಘಸ್ನಾನಾದಿಗಳು ಇವುಗಳಿಗೆ “ಕಾಮ್ಯಸ್ನಾನ"ವನ್ನುವರು. ಜಲದಲ್ಲಿ ಮುಳುಗಿ ಸ್ನಾನಮಾಡುವದಕ್ಕೆ “ವಾರುಣಸ್ನಾನ” ಎನ್ನುವರು. ಗೌಣಸ್ನಾನ “ಆಪೋಹಿಷ್ಠಾ” ಮೊದಲಾದ ಮಂತ್ರಗಳಿಂದ ಪ್ರೋಕ್ಷಣಮಾಡಿಕೊಳ್ಳುವದು, ಮಂತ್ರಸ್ನಾನವೆನ್ನಲ್ಪಡುವದು. ಹತ್ತು ಗಾಯತ್ರಿಯಿಂದ ಅಭಿಮಂತ್ರಿಸಿದ ಜಲವನ್ನು ಸರ್ವಾಂಗಗಳಿಗೂ ಪ್ರೋಕ್ಷಿಸುವದು " ಗಾಯತ್ರಸ್ನಾನವು. ಭಸ್ಮದಿಂದ ಸರ್ವಾಂಗಗಳನ್ನು ಲೇಪಿಸಿಕೊಳ್ಳುವದಕ್ಕೆ “ಆಗೇಯಸ್ನಾನ"ವನ್ನುವರು. ಒದ್ದೆವಸ್ತ್ರದಿಂದ ಮೈಯ್ಯನ್ನೊರಸಿಕೊಳ್ಳುವದು “ಕಾಪಿಲಸ್ನಾನವು. ಇನ್ನೂ ವಿಷ್ಣು ಪಾದೋದಕ, ವಿಪ್ರಪಾದೋದಕ ಇವುಗಳ ಪ್ರೋಕ್ಷಣ, ವಿಷ್ಣುಧ್ಯಾನ ಇತ್ಯಾದಿ ಅನೇಕ ವಿಧಸ್ನಾನಗಳು ಹೇಳಲ್ಪಟ್ಟಿವೆ. ಗೌಣಸ್ನಾನಗಳು ಜಪ, ಸಂಧ್ಯಾವಂದನಾದಿಗಳಿಗೆ ಸಾಕಾಗುವದು. ಶ್ರಾದ್ಧ, ದೇವತಾರ್ಚನಾದಿಗಳಿಗೆ ಸಾಲುವದಿಲ್ಲ. ಬ್ರಹ್ಮಯಜ್ಞದ ವಿಷಯದಲ್ಲಿ ವಿಕಲ್ಪವು. ತಿಲಕವಿಧಿ (ಭಸ್ಮಪುಂಡ್ರಾದಿ) ಪ್ರಾತಃಕಾಲದ ಸ್ನಾನವಾದ ನಂತರ ಮೃತ್ತಿಕೆಯಿಂದ (ಗೋಪಿಚಂದನಾದಿ) ನೆಟ್ಟಗೆ ತಿಲಕಹಚ್ಚುವದು. (ಊರ್ಧ್ವಪುಂಡ್ರ), ಹೋಮವಾದ ನಂತರ ಭಸ್ಮದಿಂದ ಅಡ್ಡಲಾಗಿ ತಿಲಕಮಾಡುವದು. ಗೋಪಿಚಂದನ, ತುಲಸಿಯ ಬುಡದ ಮಣ್ಣು, ಸಿಂಧು, ಭಾಗಿರಥಿ, ನದಿತೀರದ ಮಣ್ಣು ಒರಲೆಹುತ್ತಿನ ಮಣ್ಣು ಇತ್ಯಾದಿ ಮೃತ್ತಿಕೆಗಳಿಂದ ಹಣೆ, ಹೊಟ್ಟೆ, ಹೃದಯ, ಕುತ್ತಿಗೆ, ಬಲಪಾರ್ಶ್ವಬಾಹು, ಕಿವಿ, ಹಿಂಬದಿಹೆಗಲು, ಹೀಗೆ ಹನ್ನೆರಡು ಸ್ಥಾನಗಳಲ್ಲಿ ಶುಕ್ಲ ಪಕ್ಷದಲ್ಲಿ ಕೇಶವಾದಿನಾಮಗಳಿಂದ ತಿಲಕಮಾಡುವದು. ಕೃಷ್ಣ ಪಕ್ಷದಲ್ಲಿ ಸಂಕರ್ಷಣಾದಿ ಹನ್ನೆರಡು 200 ಧರ್ಮಸಿಂಧು ನಾಮಗಳಿಂದ ಮಾಡುವದು. ಶಿರಸ್ಸಿನಲ್ಲಿ ವಾಸುದೇವ, ಈ ನಾಮಗಳಿಂದ ಮೃತ್ತಿಕಾದಿಗಳಿಂದ ತಿಲಕವನ್ನು ಹಚ್ಚುವದು. ಶ್ರಾದ್ಧ, ಯಜ್ಞ ಜಪ, ಹೋಮ, ವೈಶ್ವದೇವ, ದೇವತಾರ್ಚನ, ಇವುಗಳಲ್ಲಿ ಭಸ್ಮತ್ತಿವುಂಡ್ರ ಮಾಡಿಕೊಂಡವನು ಶುದ್ಧಾತ್ಮನಾಗಿ ಮೃತ್ಯುವನ್ನು ಜಯಿಸುವನು. ಭಸ್ಮವನ್ನು ತಕ್ಕೊಂಡು “ಆಗ್ನಿರಿತಿಭಸ್ಮ”, ವಾಯುರಿಭಸ್ಮ, ಜಲಮಿತಿಭಸ್ಮ, ಸ್ಥಲಮಿತಿಭಸ್ಮ, “ಮೇತಿಭಸ್ಮ, ಸರ್ವಗುಂಹವಾ ಇದಂ ಭಸ್ಮ, ಮನ ಏತಾನಿ ಚಂಷಿಭಾನಿ” ಈ ಮಂತ್ರದಿಂದ ಅಭಿಮಂತ್ರಿಸಿ ಜಲಮಿಶ್ರಮಾಡಿ ಮಧ್ಯಮಾ, ತರ್ಜನೀ, ಅನಾಮಿಕಾ ಬೆರಳುಗಳಿಂದ ಲಲಾಟ, ಹೃದಯ, ನಾಭಿ, ಕುತ್ತಿಗೆ, ಹೆಗಲು, ಬಾಹುಸಂಧಿ, ಪೃಷ್ಟ, ಶಿರಸ್ಸು, ಈ ಸ್ಥಾನಗಳಲ್ಲಿ ಶಿವಮಂತ್ರದಿಂದ ಅಥವಾ ನಾರಾಯಣ ಅಷ್ಟಾಕ್ಷರಮಂತ್ರದಿಂದ ಇಲ್ಲವೆ ಗಾಯತ್ರಿ ಅಥವಾ ಓಂಕಾರಗಳಿಂದ ತ್ರಿಪುಂಡ್ರ (ಮೂರು ರೇಖೆಗಳನ್ನು ಅಡ್ಡಲಾಗಿ ಹಚ್ಚುವುದು) ವನ್ನು ಮಾಡತಕ್ಕದ್ದು. ಸಂಧ್ಯಾವಂದನೆಯ ಕಾಲ ಪ್ರಾತಃಸಂಧ್ಯೆಯು ಮೂರುವಿಧ. ನಕ್ಷತ್ರದರ್ಶನವಿರುವಾಗ ಮಾಡುವದು ಉತ್ತಮ. ನಕ್ಷತ್ರಗಳು ಅಡಗಿದಮೇಲೆ ಮಾಡುವದು ಮಧ್ಯಮ, ಸೂರ್ಯೋದಯವಾದ ಮೇಲೆ ಮಾಡುವದು ಕನಿಷ್ಠ. ಸಾಯಂಸಂಧ್ಯೆಯಾದರೂ ಸೂರ್ಯನು ಮುಳುಗದೆ ಇರುವಾಗ ಉತ್ತಮ, ಸೂರ್ಯಾಸ್ತವಾದ ಮೇಲೆ ಮಧ್ಯಮ, ತಾರಕೆಗಳ ಉದಯವಾದಮೇಲೆ ಕನಿಷ್ಠ, ಬೆಳಗಿನ ಒಂದೂವರೆ ಯಾಮದ ನಂತರ ಸಾಯಂಕಾಲಪರ್ಯಂತ ಮಾಧ್ಯಾಹ್ನಕ ಸಂಧ್ಯಯನ್ನು ಮಾಡಬಹುದು. ಮೂರು ಸಂಸ್ಥೆಗಳು ಎಲ್ಲ ಆಶ್ರಮದವರಿಗೂ ಸಮಾನವಾದದ್ದು. ಮನೆಯ ಹೊರಗೆ ನದೀತೀರಾದಿಗಳಲ್ಲಿ ಮಾಡುವದು ಪ್ರಶಸ್ತವು. ಅಗ್ನಿಹೋತ್ರಿಯಾದವನಿಗೆ ಅಗ್ನಿಯ ಪ್ರಾದುಷ್ಕರಣ (ಹೋಮಾಗ್ನಿಯನ್ನು ಪ್ರಜ್ವಲಿಸುವದು) ಇರುವದರಿಂದ ಸಾಯಂ ಮತ್ತು ಪ್ರಾತಃಸಂಧೆಗಳನ್ನು ಮನೆಯಲ್ಲಿ ಮಾಡತಕ್ಕದ್ದು. ಋಗ್ವದಿಗಳ ಸಂಕ್ಷಿಪ್ತ ಸಂಧ್ಯಾವಂದನ ಎರಡು ದರ್ಭೆಗಳಿಂದ ಗ್ರಂಥಿಯುಕ್ತ ಅಥವಾ ಗ್ರಂಥಿರಹಿತವಾದ ಪವಿತ್ರಗಳನ್ನು ಎರಡೂ ಹಸ್ತಗಳಲ್ಲಿ ಧರಿಸಿ, ದ್ವಿರಾಚಮನ ಮಾಡಿ ಪ್ರಾಣಾಯಾಮವನ್ನು ಮಾಡತಕ್ಕದ್ದು. “ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತಾದೇವತಾ ದೈವೀ ಗಾಯತ್ರೀಛಂದ: ಸಪ್ತಾನಾಂ ವ್ಯಾಹೃತೀನಾಂ ವಿಶ್ವಾಮಿತ್ರ, ಜನರ, ಭರದ್ವಾಜ್, ಗೌತಮ, ಅತ್ರಿ, ವಸಿಷ್ಟ, ಕತೃಪಾಋಷಯ: ಅಗ್ನಿ, ವಾಯು, ಆದಿತ್ಯ, ಬೃಹಸ್ಪತಿ, ವರುಣ, ಇಂದ್ರ, ವಿಶ್ವದೇವಾ ದೇವತಾ: ಗಾಯತುಷ್ಟಿಗನುಷ್ಟುಪ್ ಬೃಹಪಂಕ್ತಿಷ್ಟುಪ್ ಜಗತ್ಯಶೃಂದಾಂಸಿ ಗಾಯಾ ವಿಶ್ವಾಮಿತ್ರಋಷಿ: ಸವಿತಾದೇವತಾ ಗಾಯತ್ರಿ ಛಂದ: ಗಾಯತ್ರಿ ಶಿರಸ ಪ್ರಜಾಪತಿ: ಬ್ರಹ್ಮಾಗ್ನಿ ವಾಯು ಆತಾ ದೇವತಾ: ಯಜುರಂಗ: ಪ್ರಾಣಾಯಾಮೇ ವಿನಿಯೋಗ:” ಹೀಗೆ ಹೇಳಿ ಎಲ್ಲ ಬೆರಳುಗಳಿಂದ ಕೂಡಿ ಅಥವಾ ತರ್ಜನೀ ಮಧ್ಯಮ ಬೆರಳುಗಳನ್ನುಳಿದು ಇತರ ಬೆರಳುಗಳಿಂದ ಮೂಗನ್ನು ಹಿಡಿದುಕೊಂಡು ಬಲದ ಸೊಳ್ಳೆಯಿಂದ ವಾಯುವನ್ನಾಕರ್ಷಿಸಿ (ಪೂರಕ) ಅದನ್ನು ತಡೆಹಿಡಿದು (ಕುಂಭಕ) “೬ ಭೂ, ೬ ಭುವಃ, ಕೊಪ್ಪ: ಓಂ ಮಹಃ, ಓ೦ ಜನಃ, ಓಂ ತಪಃ, ಓಂ ಪತ್ರ: ಓಂ ತತ್ಸವಿತುರ್ವರ=ಯಾತ್| ಓಮಾಪೋಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವ ಸುವರೋ” ಹೀಗೆ ಓಂಕಾರಸಹಿತ ವ್ಯಾಹೃತಿ ಗಾಯತ್ರಿ ಶಿರಸ್ಸು ಇವುಗಳನ್ನು ಮೂರಾವರ್ತಿ ಪರಿಚ್ಛೇದ • ೩ ಪೂರ್ವಾರ್ಧ “I ಪಠಿಸಿ ಎಡದ ಮೂಗಿನ ಸೊಳ್ಳೆಯಿಂದ ವಾಯುವನ್ನು ವಿಸರ್ಜಿಸುವದು. (ರೇಚಕ) ಹೀಗೆ ಮಾಡಿದರೆ ಅದು “ಪ್ರಾಣಾಯಾಮ"ವಾಗುವದು. ಸಾಮಾನ್ಯ ಎಲ್ಲ ಶಾಖೆಯವರಿಗೂ ಇದು ಸಮಾನವು “ಮಮ ಉಪಾತ್ತದುರಿತ ಕ್ಷಯಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ ಸಂಧ್ಯಾಮುಪಾಸಿ ಆಪೋಹಿಷ್ಟೇ ತಿಚಸ್ಯ ಅಂಬರೀಷ ಸಿಂಧುದ್ದೀಪ ಆಪೋಗಾಯ ಮಾರ್ಜನೇ ವಿನಿಯೋಗ:” ಓಂಕಾರಯುಕ್ತಗಳಾದ “ಆಪೋಹಿಷ್ಕಾ"ದಿ ಒಂಭತ್ತು ಪಾದಗಳಿಂದ ದರ್ಭಗಳನ್ನು ತೆಗೆದುಕೊಂಡು ಜಲದಿಂದ ಶಿರಸ್ಸಿನಲ್ಲಿ ಒಂಭತ್ತು ಬಾರಿ ಮಾರ್ಜನ ಮಾಡುವದು. “ಯಸ್ಯಕ್ಷಯಾಯ” ಇದರಿಂದ ದೇಹದ ಕೆಳಭಾಗಕ್ಕೆ ಮಾರ್ಜನ ಮಾಡುವದು. ನದೀಜಲ, ತೀರ್ಥಾದಿಜಲ ಅಥವಾ ನೆಲದ ಮೇಲಿರುವ ಮೃಣ್ಮಯಾದಿ ಪಾತ್ರೆಗಳಲ್ಲಿರುವ ಅಥವಾ ಎಡಗೈಯ್ಯಲ್ಲಿಟ್ಟುಕೊಂಡ ಜಲವನ್ನು ದರ್ಭಾದಿಗಳಿಂದ ಮಾರ್ಜನ ಮಾಡುವದು. (ಇದು ಸಾರ್ವತ್ರಿಕ) ಇದರ ಹೊರತು ಧಾರೆಯಾಗಿ ಬೀಳುವ ಜಲದಿಂದ ಮಾರ್ಜನಮಾಡತಕ್ಕದ್ದಲ್ಲ. ಮಂತ್ರಾಚಮನ “ಸೂರ್ಯಶ್ಚತಿ ಮಂತ್ರ ಯಾಜ್ಞವಲ್ಕ ಉಪನಿಷದಋಷಿ: ಸೂರ್ಯಮನ್ಯುಪತಯೋ ರಾತ್ರಿಶ್ಚದೇವತಾ: ಪ್ರಕೃತಿಶ್ಚಂದ: ಮಂತ್ರಾಚಮನೇ ವಿನಿಯೋಗಃ, ಓಂ ಸೂರ್ಯಕ್ಕೆ ಮಾಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯ: ಪಾಪೇಭೋರಕ್ಷಂತಾಂ ಯಾತ್ರಾ ಪಾಪಮಕಾರ್ಷಂ ಮನಸಾವಾಚಾ ಹಾಭಾಂ ಪದ್ಮಾ ಮುದರೇಣ ಶಿಶ್ನಾರಾತ್ರಿಸ್ತದವಲುಂಪತುಯಂಚದುರಿತಂ ಮಯಿ ಇದಮಹಂಮಾಮಮೃತಯೋನೌ ಸೂರ್ಯಜ್ಯೋತಿಷಿ ಜುಹೋಮಿ ಸ್ವಾಹಾ” ಹೀಗೆ ಜಲಪ್ರಾಶನ ಮಾಡುವದು. ಪುನಃ ಆಚಮನಮಾಡಿ “ಆಪೋಹಿಷ್ಕತಿ ನವರ್ಚಸ್ಯ ಅಂಬರೀಷ: ಸಿಂಧುದ್ವೀಪ ಆಪೋಗಾಯತ್ರಿ ಪಂಚಮೀ ವರ್ಧಮಾನಾ ಸಪ್ತಮೀ ಪ್ರತಿಷ್ಠಾ ಅಂತೈ ಅನುಷ್ಟಭ ಮಾರ್ಜನೇ ವಿನಿಯೋಗ:” ಪ್ರಣವ ಮತ್ತು ವ್ಯಾಹೃತಿ, ಓಂಕಾರಾಂತವಾದ ಗಾಯ, ಆಪೋಹಿಷ್ಠಾ ಎಂಬ ಸೂಕ್ತ ಇವುಗಳಿಂದ ಮಾರ್ಜನ ಮಾಡತಕ್ಕದ್ದು. ಮಾರ್ಜನವನ್ನು ಮಂತ್ರದ ತುದಿ ಅಥವಾ ಅರ್ಧ ಅಥವಾ ಒಂದು ಚರಣದ ಅಂತ್ಯ ಇವುಗಳಲ್ಲಿ ಮಾಡುವದು. ಗಾಯತ್ರಿಯ ಶಿರಸ್ಸಿನ ಅಂತ್ಯದಲ್ಲಿ ಮಾರ್ಜನಮಾಡಿ ಅಘಮರ್ಷಣ ಮಾಡುವದು. ‘ಋತಂಚೇತಿ ತೃಚಸ್ಯ ಮಾಧುಚ್ಛಂದಸೋsಘಮರ್ಷಣೋ ಭಾವವೃತ್ತಮನುಷ್ಟುಪ್ ಅಘಮರ್ಷಣೇ ವಿನಿಯೋಗ:” ಬಲಹಸ್ತದಲ್ಲಿ ಜಲವನ್ನು ಹಿಡಿದುಕೊಂಡು “ಋತಂಚ” ಎಂಬ ಮೂರು ಮಂತ್ರ ಅಥವಾ “ದೃಪದಾ” ಎಂಬ ಮೂರು ಮಂತ್ರಗಳನ್ನು ಜಪಿಸಿ, ಬಲದ ಮೂಗಿನ ಸೊಳ್ಳೆಯಿಂದ ಪಾಪಪುರುಷನನ್ನು ಹೊರಹಾಕಿ ಆ ಜಲವನ್ನು ನೋಡದ ಎಡಬದಿಯ ಜಲದಲ್ಲಿ ಚೆಲ್ಲುವದು. ಅರ್ತ್ಯಪ್ರದಾನ ಆಚಮನಮಾಡಿ “ಗಾಯಾ ವಿಶ್ವಾಮಿತ್ರ ಋಷಿ: ಸವಿತಾ ಗಾಯತ್ರೀ ಶ್ರೀ ಸೂರ್ಯಾಯ ರ್ತದಾನೇ ವಿನಿಯೋಗ: ಪ್ರಣವ ವ್ಯಾಹೃತಿಪೂರ್ವಕ ಗಾಯತ್ರಿಯನ್ನು ಹೇಳಿ ಎದ್ದು ನಿಂತು ಸೂರ್ಯಾಭಿಮುಖನಾಗಿ ಮೂರು ಜಲಾಂಜಲಿಗಳನ್ನು ಕೊಡತಕ್ಕದ್ದು, ಕಾಲಾತಿಕ್ರಮವಾದರೆ ಪ್ರಾಯಶ್ಚಿತ್ತಕ್ಕಾಗಿ ನಾಲ್ಕನೇ ಅರ್ಥ್ಯವನ್ನು ಕೊಡತಕ್ಕದ್ದು. “ಅಸಾವಾದಿತ್ಯೋಬ್ರಹ್ಮಾ” ಎಂಬ ಮಂತ್ರವನ್ನು ಹೇಳಿ ಪ್ರದಕ್ಷಿಣ ಮಾಡಿ ಜಲವನ್ನು ಸಿಂಪಡಿಸುವದು. ಅರ್ಘಕೂಡುವ ಅಂಜಲಿಯಲ್ಲಿ ೩೧೨ ಧರ್ಮಸಿಂಧು ? ತರ್ಜನೀ ಅಂಗುಷ್ಠಗಳನ್ನು ತಾಗಿ ಇಡಬಾರದು. ಸಂಧ್ಯಾವಂದನೆಯಲ್ಲಿ ಈ ರ್ಅಪ್ರದಾನವು ಪ್ರಧಾನವೆಂದು ಕೆಲವರನ್ನುವರು. ಇನ್ನು ಕೆಲವರು ಇದು “ಅಂಗ"ವೆನ್ನುವರು. ಗಾಯಜಪ ಪ್ರಾಣಾಯಾಮಮಾಡಿ “ಗಾಯತ್ರಾ ವಿಶ್ವಾಮಿತ್ರ: ಸವಿತಾಗಾಯ=ಜಪೇತತ್ಸವಿತು: =ಹೃದಯಾಯ ನಮ: ವರೇಣ್ಯಂ ಶಿರಸೇಸ್ವಾಹಾ| ಭರ್ಗೋದೇವಸ್ಯ ಶಿಖಾಯ್ಕ ವಷಟ್‌|ಧೀಮಹಿ ಕವಚಾಯ ಹುಂಗಧಿಯೋಯೋನ: ನೇತ್ರತ್ರಯಾಯ ವೌಷಟ್ ಪ್ರಚೋದಯಾತ್ ಅಸ್ತ್ರಾಯಘಟ್” ಹೀಗೆ ಷಡಂಗನ್ಯಾಸವನ್ನು ಮಾಡುವದು, ಅಥವಾ ಮಾಡದಿರಲೂ ಬಹುದು. “ನ್ಯಾಸವಿಧಿ"ಯು ಅವೈದಿಕವೆಂದು “ಗೃಹ್ಯಪರಿಶಿಷ್ಟ"ದಲ್ಲಿ ಸ್ಪಷ್ಟಪಡಿಸಿದೆ. ಇದರಂತೆ ಅಕ್ಷರನ್ಯಾಸ, ಪಾದನ್ಯಾಸ, ಮುದ್ರಾವಿಧಿ, ಶಾಪಮೋಚನಾದಿ ವಿಧಿಗಳು ತಾಂತ್ರಿಕಗಳಾದ್ದರಿಂದ ಅವೈದಿಕಗಳಾಗಿವೆ. ಆದ್ದರಿಂದ ನಿತ್ಯಸಂಧ್ಯಾವಂದನಾದಿಗಳಲ್ಲಿ ಇವುಗಳ ಆವಶ್ಯಕತೆಯಿಲ್ಲ. ಆಮೇಲೆ ಮಂತ್ರದೇವತಾಧ್ಯಾನ. ಕೆಲವರು ಗಾಯತ್ರಿ ಧ್ಯಾನವನ್ನು ಹೇಳುತ್ತಾರೆ. “ಆಗವರದೇವಿ ಜನೇ ಮೇ ಸನ್ನಿ ಭವ ಗಾಯತ್ರಂತ್ರಾಯಸೇಯಸ್ಮಾತ್ ಗಾಯತ್ರೀತ್ವಂ ತತಃಸ್ಮಿತಾ ಹೀಗೆ ಆವಾಹನಮಾಡಿ “ಯೋದೇವ ಸವಿತಾತ್ಮಾಕಂ ಧಿಯೋ ಧರ್ಮಾದಿಗೋಚರ ಪ್ರೇರಯೇತ್ತ, ತದ್ಧರ್ಗಸ್ತದ್ವರೇಣ್ಯಮುಪಾಸ್ಮಹೇ ಹೀಗೆ ಮಂತ್ರಾರ್ಥವನ್ನು ಚಿಂತಿಸುತ್ತ ಮೌನಿಯಾಗಿ ಪ್ರಾತಃಸಂಖ್ಯೆಯಲ್ಲಿ ಸೂರ್ಯಾಭಿಮುಖನಾಗಿ ಮಂಡಲ ದರ್ಶನವಾಗುವ ವರೆಗೆ ಪ್ರಣವವ್ಯಾಹೃತಿ ಸಹಿತವಾದ ಗಾಯತ್ರಿಯನ್ನು ನೂರೆಂಟು, ಇಪ್ಪತ್ತೆಂಟು, ಹತ್ತು ಹೀಗೆ ಯಥಾನುಕೂಲ ಜಪ ಮಾಡಬೇಕು. ಸಾಯಂ ಸಂಧ್ಯೆಯಲ್ಲಿ ವಾಯುವ್ಯಾಭಿಮುಖನಾಗಿರಬೇಕು. ನಕ್ಷತ್ರ ದರ್ಶನಪರ್ಯಂತ ಮಾಡುವದು. ಇದೇ ವಿಶೇಷವು. ಅನಧ್ಯಾಯ ದಿನದಲ್ಲಿ ಇಪ್ಪತ್ತೆಂಟು, ಪ್ರದೋಷದಿನ ಹತ್ತು ಜಪಮಾಡತಕ್ಕದ್ದೆಂದು ಕಾರಿಕೆಯಲ್ಲಿ ಹೇಳಿದ. ರುದ್ರಾಕ್ಷ, ಹವಳ ಮುಂತಾದ ಮಾಲಿಕೆಗಳಿಂದ ಅಥವಾ ಬೆರಳುಗಳ ಗಂಟಿನಿಂದ ಲೆಕ್ಕವನ್ನು ಮಾಡಬೇಕು. ಮಾಲೆಗೆ ಐವತ್ತು ನಾಲ್ಕು ಅಥವಾ ಇಪ್ಪತ್ತೇಳು ಹೀಗೆ ಮಣಿಗಳಿರಬೇಕು. ಆಮೇಲೆ ಉತ್ತರನ್ಯಾಸಮಾಡಿ ಉಪಸ್ಥಾನಮಾಡಬೇಕು. “ಓಂ ಜಾತವೇದಸೇ ಓಂ ತಚ್ಛಂಯೋ ಓಂ ನಮೋಬ್ರಹ್ಮಣೇ” ಈ ಮಂತ್ರಗಳಿಂದ ಸಾಯಂಕಾಲ ಮತ್ತು ಪ್ರಾತಃಕಾಲದಲ್ಲಿ ಮಾಡತಕ್ಕದ್ದೆಂದು ಪರಿಶಿಷ್ಯಕಾರರ ಮತವು, ಬೇರೆ ಸ್ಮೃತಿಯಲ್ಲಿ “ಮಿತ್ರಚರ್ಷಣೀ"ಇತ್ಯಾದಿ ಮಿತ್ರದೇವತಾಕವಾದ ಮಂತ್ರಗಳಿಂದ ಪ್ರಾತಃಕಾಲದಲ್ಲಿ ಹಾಗೂ “ಇಮಂ ಮೇ ವರುಣ” ಇತ್ಯಾದಿ ವರುಣ ಪದಯುಕ್ತ ಮಂತ್ರಗಳಿಂದ ಸಾಯಂಕಾಲದಲ್ಲಿ ಉಪಸ್ಥಾನ ಮಾಡತಕ್ಕದ್ದೆಂದು ಹೇಳಿದೆ. “ಪ್ರಾಚ್ಯದಿಶೇ ನಮಃ, ಇಂದ್ರಾಯನಮಃ, ಆ ನಮ:” ಇತ್ಯಾದಿ ದಶದಿಕ್ಕುಗಳಿಗೂ ವಂದಿಸಿ ‘ಸಂಧ್ಯಾಯ ನಮಃ ಗಾಯ ನಮಃ, ಸಾಮಿ ನಮ್ಮ, ಸರಸ್ವತೆ ನಮಃ, ಸರ್ವಾ ದೇವತಾಸ್ಕೋ ನಮಃ” ಹೀಗೆ ನಮಸ್ಕರಿಸಿ ಉತ್ತಮ ಶಿಖರ ಜಾತಃ ಭೂಮ್ಯಾಂ ಪರ್ವತಮೂರ್ಧನಿ ಬ್ರಾಹ್ಮಣರನುಜ್ಞಾತಾ ಗಚ್ಛ ದೇವಿ ಯಥಾ ಸುಖಂ” ಹೀಗೆ ವಿಸರ್ಜಿಸಿ “ಭದ್ರನ ಅಪಿ ವಾತಯ ಮನ: ಹೀಗೆ ಮೂರಾವರ್ತಿ ಹೇಳಿ ಪ್ರದಕ್ಷಿಣಾಕಾರವಾಗಿ ತಿರುಗಿ “ಆ ಪರೋಕಾರಾಪಾತಾಲಾರಾರೋಕಾಲೋಕ ಪರ್ವತಾತ್ ಯೇ ಸಂಯ ಬ್ರಾಹ್ಮಣಾ ದೇವಾ ನಂ ನಮೋನಮ:” ಹೀಗೆ ಹೇಳಿ ಭೂಮಿಗೆ ಎರಡೂ ಕೈಗಳಿಂದ السلام ಪರಿಚ್ಛೇದ - ೩ ಪೂರ್ವಾರ್ಧ ನಮಸ್ಕರಿಸಿ ಎರಡು ಆಚಮನಗಳನ್ನು ಮಾಡುವದು. ತೈತ್ತಿರೀಯರ ಸಂಧ್ಯಾವಂದನ 1.04 ಸಂಕಲ್ಪದ ವರೆಗೆ ಹಿಂದೆ ಹೇಳಿದಂತೆಯೇ ಮಾಡಿ ಗಾಯತ್ರಿಯನ್ನು ಧ್ಯಾನಿಸಿ ಆಯಾತು ವರದಾ ದೇವಿ ಅಕ್ಷರಂ ಬ್ರಹ್ಮ ಸಂಮಿತಂಗಾಯಂ ಛಂದಸಾಂ ಮಾತೇಂ ಬ್ರಹ್ಮಜುಷ ಮೇಂ ಸರ್ವವ್ರ ಮಹಾದೇವಿ ಸಂಧ್ಯಾವಿದ್ಯ ಸರಸ್ವತಿಗೆ ಅಜರೇ ಅಮರೇ ದೇವಿ ಸರ್ವದೇವಿ ನಮೋಸ್ತುತೇ. ಓಸಿ ಸಹೋಸಿ ಬಲಮಸಿ ಭ್ರಾಜೆಸಿ ದೇವಾನಾಂ ಧಾಮ ನಾಮಾಸಿ ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯು ಅಭಿಭೂರೋಂ ಗಾಯತ್ರೀಮಾವಾಹಯಾಮಿ, ಸಾವಿತ್ರೀಮಾವಾಹಯಾಮಿ, ಸರಸ್ವತೀಮಾವಾಹಯಾಮಿ, ಛಂದರ್ಷಿನಾವಾಹಯಾಮಿ, ಶ್ರಿಯಮಾವಾಹಯಾಮಿ, ಪ್ರಿಯಮಾವಾಹಯಾಮಿ, ಸರಸ್ವತೀಮಾವಾಹಯಾಮಿ, ಛಂದರ್ಷಿನಾವಾಹಯಾಮಿ, ಶ್ರೀಯಮಾವಾಹಯಾಮಿ, ಪ್ರಿಯಮಾವಾಹಯಾಮಿ ಹೀಗೆ ಆವಾಹಿಸಿ ಹಿಂದೆ ಹೇಳಿದಂತೆ ಮಾರ್ಜನೆ ಮಾಡುವದು. “ಓಮಾಪೋವಾ ಇದಗುಂ ಸರ್ವಂ ವಿಶ್ವಾಭೂತಾನ್ಯಾಪಃ ಪ್ರಾಣಾವಾ ಆಪ: ಪಶವ ಆಪೋನ್ನಮಾಪೋ ಮೃತಮಾಪ: ಸಮ್ರಾಡಾವೋ ವಿರಾಡಾಪಃ ಸ್ವರಾಡಾಪ: ಛಂದಾಗು ಪ್ಯಾಪೋ ಜ್ಯೋತಿಗ್ಗು ಪ್ಯಾಪೋ ಯಜೂಗುಷ್ಕಾಪ: ಸತ್ಯಮಾಪ: ಸರ್ವಾದೇವತಾ ಆಪೋಭೂರ್ಭುವಃ ಸುವರಾಜ ಓಂ” ಹೀಗೆ ಜಲವನ್ನಭಿಮಂತ್ರಿಸಿ “ಸೂರ್ಯಾಶ್ಚ” ಇತ್ಯಾದಿ ಹಿಂದೆ ಹೇಳಿದಂತೆ ಮಂತ್ರಾಚಮನ ಮಾಡುವದು. “ದಧಿಕಾವೋಅಕಾರಿಷಂ ಈ ಮಂತ್ರವನ್ನು ಹೇಳಿ “ಆಪೋಹಿಷ್ಕಾ” ಇತ್ಯಾದಿ ಮೂರು ಮಂತ್ರ ಹಾಗೂ “ಹಿರಣ್ಯವರ್ಣಾ” ಇತ್ಯಾದಿಗಳಿಂದಲೂ “ಪವಮಾನ” ಈ ಅನುವಾರದಿಂದಲೂ ಮಾರ್ಜನೆಯಾದ ನಂತರ ‘ಅಘಮರ್ಷಣ’ಮಾಡಿ ಅಥವಾ ಅಘಮರ್ಷಣ ರಹಿತವಾಗಿ ಅರ್ತ್ಯಪ್ರದಾನಾದಿ ಗಾಯತ್ರೀಜಪಾಂತಮಾಡಿ ‘ಆವಾಹನೆ’ ಯನ್ನು ಬಿಟ್ಟು ಪೂರ್ವದಂತೆಯೇ ಮಾಡತಕ್ಕದ್ದು, ಅವೈದಿಕವಾದದ್ದೆಂದು ನ್ಯಾಸವನ್ನು ಹೇಳಿಲ್ಲ. ಜಪಾಂತದಲ್ಲಿ ಉಪಸ್ಥಾನ ಮಾಡಬೇಕು. “ಓಂ ಮಿತ್ರ ಚರ್ಷಣಿ:= ಓಂ ಮಿತ್ರೋಜನಾನ್=ಓಂ ಪ್ರತಮಿತ್ರ=ಓಂ ಯಚ್ಛದ್ಧಿತೇ = ಓಂ ಯಂಚೇದ- ಓಂಕಿತವಾಸೋಯ” ಹೀಗೆ ಆರು ಮಂತ್ರಗಳಿಂದ ಉಪಸ್ಥಾನಮಾಡಿ “ಪ್ರಾಚ್ಯದಿಶೇಯಾಶ್ಚದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋನಮಃ” ಇತ್ಯಾದಿ “ಅಧರಾಯ” ಇಲ್ಲಿವರೆಗೆ ಮಾಡಿ ಆರಾವರ್ತಿ ನಮಸ್ಕರಿಸಿ “ಅವಾಂತರಾಯ್ಕೆದಿಶೇ ಯಾಶ್ಚದೇವಾ” ಎಂದೂ ನಮಸ್ಕರಿಸಿ, “ನಮಗಂಗಾಯಮುನರ್ಮ ವಸಂತಿ” ಇತ್ಯಾದಿಯಿಂದ ಮುನಿದೇವತೆಗಳನ್ನು ನಮಸ್ಕರಿಸಿ “ಸಗ್ಗು ಸ್ತವಂತು ದಿಶಃ” ಈ ಮಂತ್ರವನ್ನು ಪಠಿಸಿ ಗೋತ್ರಾದಿಗಳನ್ನು ಚ್ಚರಿಸಿ ಪೂರ್ವದಂತೆ ಭೂಮಿಯನ್ನು ಎರಡೂ ಕೈಗಳಿಂದ ಮುಟ್ಟಿ ನಮಸ್ಕರಿಸುವದು ಹಾಗೂ ಸಂಸ್ಥೆಯನ್ನು ವಿಸರ್ಜಿಸುವದು. ಕಾತ್ಯಾಯನರ ಸಂಧ್ಯಾ ಪ್ರಯೋಗ ಆಚಮನಮಾಡಿ “ಭೂಃ ಪುನಾತು, ಭುವಃ ಪುನಾತು, ಸ್ವಪುನಾತು, ಭೂರ್ಭುವಸ್ವ: ಪುನಾತು ಇತ್ಯಾದಿಗಳಿಂದ ಪಾವನಮಾಡಿ “ಅಪವಿತ್ರ: ಪವಿತ್ರೋವಾ” ಹೀಗೆ ವಿಷ್ಣುವನ್ನು ಸ್ಮರಿಸಿ ಆಸನಾದಿ ವಿಧಿಯನ್ನು ಮಾಡಿ ಎರಡು ಆಚಮನ ಮತ್ತು ಪ್ರಾಣಾಯಾಮ ಮಾಡಿ ಪೂರ್ವದಂತೆ ಸಂಕಲ್ಪಿಸಿ ೩೧೪ PO ಧರ್ಮಸಿಂಧು “ಗಾಯಂತ್ರಕರಾಂ ಬಾಲಾಂ ಸಾಕ್ಷಸೂಕ್ತ ಕಮಂಡಲುಂ ರಕ್ತವಾಂ ಚತುರ್ವಕ್ರಾಂ ಹಂಸವಾಹನ ಸಂಸ್ಕೃತಾಂ! ಬ್ರಹ್ಮಾಂ ಬ್ರಹ್ಮದೈವತ್ವಾಂ ಬ್ರಹ್ಮಲೋಕನಿವಾಸಿನೀಂ! ಆವಾಹಯಾಮ್ಯಹಂ ದೇವೀಂ ಆಯಾಂತೀಂ ಸೂರ್ಯಮಂಡಲಾತ್’ ಆಗ ವರದೇ ದೇವಿ ಕ್ಷರೇ ಬ್ರಹ್ಮವಾದಿನಿ ಗಾಯತ್ರಿ ಛಂದಸಾಂ ಮಾತು ಬ್ರಹ್ಮಯೋನೇ ನಮೋಸ್ತುತೇ” ಹೀಗೆ ಆವಾಹಿಸಿ ಪೂರ್ವದಂತೆ ಆಪೋಹಿಷ್ಠಾ ಮಂತ್ರದಿಂದಲೂ ಮಾರ್ಜನ ಮಾಡುವದು. “ಸೂರ್ಯಶ್ವತಿ ಮಂತ್ರ ನಾರಾಯಣ ಋಷಿಃ ಸೂರ್ಯೋ ದೇವತಾ! ಅನುಷ್ಟುಪ್ ಛಂದ: ಆಚಮನೇ ವಿನಿಯೋಗ: ಸೂರ್ಯಶ್ಚ ಈ ಮಂತ್ರದಿಂದ ಜಲಪ್ರಾಶನ ಮಾಡಿ ಆಚಮನ ಮಾಡಿ “ಆಪೋಹಿಷ್ಠಾ” ಇದರಿಂದ ನವ ಮಾರ್ಜನ ಮಾಡತಕ್ಕದ್ದೆಂದು ಕೆಲವರು ಹೇಳುವರು. ಆದರೆ ಬಹುಜನರು ಸಂಕಲ್ಪಾದಿಗಳ ಅಂತದಲ್ಲಿ ‘ಸೂರ್ಯಶ್ಚ’ ಇದರಿಂದ ಮಂತ್ರಾಚಮನ ಮಾಡಿ ‘ಆಪೋಹಿಷ್ಠಾ’ ಇದರ ಪ್ರತಿಪಾದಗಳಿಂದ ಮಾರ್ಜನ ಮಾಡಿ ಅಂತದಲ್ಲಿ ಅಘಮರ್ಷಣ ಮಾಡತಕ್ಕದ್ದು, ಹೊರತು ಎರಡು ಮಾರ್ಜನಗಳಿಲ್ಲವೆಂದು ಹೇಳುವರು. “ಸುಮಿತ್ರಾ ರುಮಿತ್ರಾ ಇತಿದ್ವಯೋ, ಪ್ರಜಾಪತಿಋಷಿ, ಆಪೋ ದೇವತಾ: ಯಜುಶೃಂದ: ಆದಾನಪ್ರಕ್ಷೇಪೇವಿ= ಓಂ ಸುಮಿತ್ರಾನ ಆಪೋಷಧಯಸಂತು ಇದರಿಂದ ಜಲವನ್ನು ತೆಗೆದುಕೊಂಡು “ದುರ್ಮಿತ್ರಾಸ್ತ್ರ ಸಂತು ಯೋSಸ್ಮಾನ್ ದೃಷ್ಟಿಯಂಚ ವಯಂದ್ವಿ:” ಹೀಗೆ ಹೇಳಿ ಆ ಜಲವನ್ನು ಎಡಬದಿಯ ನೆಲದಲ್ಲಿ ಚಲ್ಲುವದು. ಆಮೇಲೆ ‘ಋತಂಚ’ ಈ ಮಂತ್ರದಿಂದ ಅಥವಾ ಮೂರಾವರ್ತಿಯಾದ ‘ದೃವದಾ’ ಈ ಮಂತ್ರದಿಂದ ಮೊದಲಿನಂತೆ ಅಘಮರ್ಷಣ ಮಾಡುವದು. ಸಾಯಂ ಹಾಗೂ ಪ್ರಾತಃಕಾಲ ಮೂರು ಆರ್ಥ್ಯಗಳನ್ನು ಪುಷ್ಪಯುಕ್ತವಾದ ಜಲದಿಂದ ಮಾಡತಕ್ಕದ್ದು. (ಮೊದಲಿನಂತೆ) ಮಧ್ಯಾಹ್ನದಲ್ಲಿ ಒಂದಾವರ್ತಿ ಮಾಡತಕ್ಕದ್ದು; ಮತ್ತು ಗಾಯತ್ರಿಯಿಂದ ಸುತ್ತಲೂ ಪ್ರೋಕ್ಷಣಮಾಡುವದು. ಇನ್ನು ಉಪಸ್ಥಾನ- “ಉದ್ವಯಮುದುಮಿತಿ ದ್ವಯೋ ಪ್ರಸ್ಕಂ: ಸೂರ್ಯೋನುಷ್ಟುಪ್ ಗಾಯತ್ ಚಿತ್ರಂದೇವಾನಾಮಾಂಗೀರಸ: ಕು: ಸೂರ್ಯಸ್ವಿಷ್ಟುಪ್ ತಚ್ಚ ಕುರ್ದಧ್ಯಾಥರ್ವಣ: ಸೂರ್ಯ: ಪುರಉಷ್ಠಿಕ್ ಉಪಸ್ಥಾನೇವಿ=ಓಂ ಉದ್ವಯಂ ತಮಸಃ ಓಂ ಉದುತಂ ಓಂ ಚಿತ್ರಂದೇ ಓಂ ತಚ್ಚಕ್ಷುರ್ದವಹಿತಂ” ಹೀಗೆ ಹೇಳಿ ಕೈಗಳನ್ನು ಮೇಲಕ್ಕೆತ್ತಿ ಸೂರ್ಯನನ್ನು ನೋಡುತ್ತ ಶಾಖಾನುಸಾರ ಪಠಿಸುವದು. ಪ್ರಾಣಾಯಾಮಾದಿಗಳನ್ನು ಮಾಡಿ ನ್ಯಾಸ, ಮುದ್ರಾ, ತರ್ಪಣಾದಿ ವಿಧಿಯು ಕೃತಾಕೃತವು. “ತೇಜೋಸೀತಿ ಪರಮೇಷ್ಠಿ ಪ್ರಜಾಪತಿರಾಜಂಯಜು: ಆವಾಹನವಿ=ಓಂ ತೇಜೋಸಿ ಶುಕ್ರಮಮೃತಮಸಿ ಧಾಮನಾಮಾಸಿ ಪ್ರಿಯಂ ದೇವಾನಾಮನಾದೃಷ್ಟ: ದೇವಯಜನಮಸಿ, ಪರೋರಜಸ ಇತಿ ವಿಮಲ: ಪರಮಾತ್ಮಾನುಷ್ಟುಪ್ ಗಾಯತ್ತು ಪದ್ಮಾ=ಓಂ ಗಾಯತ್ರ ಕಪದೀ ದ್ವಿಪದೀ ತ್ರಿಪದೀಚತುಷ್ಟದೃಪರಸಿ ನಹಿಪದ್ಯಸೇ ನಮ ತುರೀಯಾಯ ದರ್ಶನಾಯ ಪದಾಯ ಪರೋ ರಜಸಸಾವಂ” ಆಮೇಲೆ, ನಂತರ ಪೂರ್ವದಂತೆ ಗಾಯತ್ರೀ ಜಪಾಂತವಾಗಿ ಮಾಡುವದು. ನಂತರ “ಶನವಿಭ್ರಾಡ್” ಈ ಅನುವಾಕದಿಂದ ಅಥವಾ ಪುರುಷಸೂಕ್ತದಿಂದ ಇಲ್ಲವೆ ಶಿವಸಂಕಲ್ಪದಿಂದ ಅಥವಾ ಮಂಡಲಬ್ರಾಹ್ಮಣದಿಂದ ಉಪಸ್ಥಾನವನ್ನು ಮಾಡುವದು. ಇಲ್ಲಿ ಕ್‌ ಶಾಖೆಗೆ ಹೇಳಿದಂತೆ ಕೆಲವರು “ದಿಗ್ವಂದನ"ವನ್ನು ಮಾಡುವರು. ಆಮೇಲೆ “ಉತ್ತರು ಶಿಖರಪಾತ ದೇವಾಗಾತುಂಗಾತು. ಈ ಎರಡು ಮಂತ್ರಗಳಿಂದ ವಿಸರ್ಜಿಸುವರು. ಭೂಸ್ಪರ್ಶವಂದನಾದಿಗಳು ಒಂದೆ ಹೇಳಿದಂತೆ ಹೀಗೆ ಕಾತ್ಯಾಯನರ ಪರಿಚ್ಛೇದ • ೩ ಪೂರ್ವಾರ್ಧ ಸಂಧ್ಯಾವಂದನ ಫಲ ಮತ್ತು ಲೋಪಪ್ರಾಯಶ್ಚಿತ್ತ ನಿತ್ಯದಲ್ಲೂ ಸಂಧ್ಯಾವಂದನ ಮಾಡುವವರು ಪಾಪರಹಿತರಾಗಿ ಬ್ರಹ್ಮಲೋಕವನ್ನು ಹೊಂದುವರು. ಸಂಧ್ಯಾವಂದನ ಮಾಡದಿದ್ದರೆ ಅಶುಚಿತ್ವವುಂಟಾಗುವದರಿಂದ ಬೇರೆ ಕರ್ಮಮಾಡಿದರೂ ವಿಫಲವಾಗುವದು. ಜೀವಂತನಿರುವಾಗಲೇ ಶೂದ್ರತ್ವವುಂಟಾಗುವದು. ಸತ್ತ ನಂತರ ನಾಯಿಯಾಗಿ ಹುಟ್ಟುತ್ತಾನೆ. ಮೂರು ಸಂಸ್ಥೆಗಳ ಕಾಲಾತಿಕ್ರಮವಾದರೆ ಪ್ರಾಯಶ್ಚಿತ್ತಾರ್ಥವಾಗಿ ಒಂದು ಹೆಚ್ಚು ಅರ್ಭ್ಯವನ್ನು ಕೊಡಬೇಕು. ರಾತ್ರಿಯ ಯಾಮ ಕಾಲದೊಳಗೆ ಅತಿಕ್ರಾಂತವಾದ ದಿನೋಕ್ತ ಕರ್ಮಮಾಡಲಡ್ಡಿ ಇಲ್ಲ. ಅವುಗಳಲ್ಲಿ ಸೂರ್ಯಸಂಬಂಧದ ಮಂತ್ರವನ್ನು ಬಿಡುವದು. ಪೂರ್ಣವಾಗಿ ಸಂಧ್ಯಾಲೋಪವಾದಲ್ಲಿ ಪ್ರತಿಸಂಧ್ಯಗೊಂದರಂತೆ ಉಪವಾಸಮಾಡಿ ಹತ್ತು ಸಾವಿರ ಅಥವಾ ಅಷ್ಟೋತ್ತರ ಸಹಸ್ರ (೧೦೦೮)ಗಾಯತ್ರಿಯನ್ನು ಜಪಿಸುವದು. ಅತ್ಯಶಕ್ತಿಯಲ್ಲಿ ಪ್ರತಿ ಸಂಧ್ಯೆಯ ಬಗ್ಗೆ ಮೂರುನೂರು ಜಪಮಾಡತಕ್ಕದ್ದು. ಎರಡು-ಮೂರುದಿನ ಲೋಪವಾದಲ್ಲಿ ಅದಕ್ಕನುಸರಿಸಿ ಪ್ರಾಯಶ್ಚಿತ್ತವನ್ನೂ ಅಷ್ಟಾವರ್ತಿ ಮಾಡಬೇಕು. ಅದಕ್ಕೂ ಮೇಲಾದರೆ ಕೃಷ್ಣಾದಿಗಳನ್ನು ಮಾಡುವದು. ಔಪಾಸನಹೋಮ, ಅಧಿಕಾರಿ, ಕಾಲ ಇತ್ಯಾದಿ ನಿರ್ಣಯ ಹೋಮವನ್ನು ತಾನೇ ಮಾಡುವದು ಮುಖ್ಯವು. ಅಶಕ್ತನಾದರೆ ಪತ್ನಿ, ಪುತ್ರ, ಕುಮಾರೀ, ಅಣ್ಣ-ತಮ್ಮಂದಿರು, ಶಿಷ್ಯ, ಅಕ್ಕ-ತಂಗಿಯರ ಮಕ್ಕಳು, ಅಳಿಯ ಅಥವಾ ಋತ್ವಿಜರು ಇವರು ಪ್ರತಿನಿಧಿಗಳಾಗಿ ಮಾಡಬಹುದು. ಇವರಲ್ಲಿ ಯಾರಾದರೂ ಮಾಡುವದಿದ್ದಲ್ಲಿ ದಂಪತಿಗಳ ಸನ್ನಿಧಾನದಲ್ಲಿ ಅಥವಾ ದಂಪತಿಗಳಲ್ಲಿ ಒಬ್ಬರಾದರೂ ಸನ್ನಿಧಿಯಲ್ಲಿದ್ದಾಗ ಹೋಮಮಾಡತಕ್ಕದ್ದು. ತ್ಯಾಗವನ್ನು ಮಾತ್ರ ಯಜಮಾನನಾಗಲೀ, ಪತ್ನಿಯಾಗಲೀ ಮಾಡತಕ್ಕದ್ದು. ಆ ಪತ್ನಿಯು ಸನ್ನಿಧಿಯಲ್ಲಿರದಿದ್ದರೆ ಅವಳ ಆಜ್ಞೆಯಿಂದ ಋತ್ವಿಗಾದಿಗಳು ಮಾಡಬಹುದು. ಆ ಪತ್ನಿಯು ರಜಸ್ವಲೆ ಅಥವಾ ಪ್ರಸೂತಳಾದಲ್ಲಿ, ಉನ್ಮಾದ ಮೊದಲಾದ ದೋಷಯುಕ್ತಳಾದಲ್ಲಿ ಅವಳ ಆಜ್ಞೆಯಿಲ್ಲದಿದ್ದರೂ ಋತ್ವಿಗಾದಿಗಳು ತ್ಯಾಗವನ್ನು ಮಾಡಬಹುದು. ಸ್ವತಃ ಹೋಮಮಾಡಿದರೆ “ಪೂರ್ಣಫಲ"ವು. ಅನ್ಯರಿಂದ ಮಾಡಿಸಿದರೆ ಅರ್ಧಫಲವು ಪರ್ವಗಳಲ್ಲಿ ಸ್ವತಃ ಮಾಡತಕ್ಕದ್ದು. ಪ್ರಾತಃಕಾಲ ಸೂರ್ಯೋದಯದ ಮೊದಲು, ಸಾಯಂಕಾಲ ಸೂರ್ಯಾಸ್ತಕ್ಕಿಂತ ಮೊದಲು ಅಗ್ನಿಯ ಪ್ರಾದುಷ್ಕರಣ (ಅಗ್ನಿಪ್ರಜ್ವಲನ) ಮಾಡಿ ಸೂರ್ಯೊದಯ-ಅಸ್ತ್ರಗಳ ನಂತರ ಹೋಮಿಸತಕ್ಕದ್ದು. ಪ್ರಾದುಷ್ಕರಣ ಕಾಲಾತಿಕ್ರಮವಾದರ “ಓಂ ಭೂರ್ಭುವಃಸ್ವ: ಸ್ವಾಹಾ” ಎಂಬ ಮಂತ್ರದಿಂದ ಸೃವಾಹುತಿರೂಪವಾದ ಸರ್ವಪ್ರಾಯಶ್ಚಿತ್ತವನ್ನು ಆಜ್ಯ ಸಂಸ್ಕಾರಪೂರ್ವಕವಾಗಿ ಮಾಡಿ ಆಮೇಲೆ ಹೋಮಿಸತಕ್ಕದ್ದು. ಪ್ರಾತರ್ಹೋಮಕ್ಕೆ ಸೂರ್ಯೋದಯದ ನಂತರ ಹತ್ತು ಘಟಿಗಳಪರ್ಯಂತ ಮುಖ್ಯಕಾಲವು, ನಂತರ ಸಾಯಂಕಾಲಪರ್ಯಂತ ಗೌಣಕಾಲವು, ಸಾಯಂಹೋಮದಲ್ಲಿ ಅಸ್ತಾನಂತರ ಒಂಭತ್ತು ಘಟೀಪರ್ಯಂತ ಮುಖ್ಯಕಾಲವು, ನಂತರ ಪ್ರಾತಃಕಾಲದ ವರೆಗೆ ಗೌಣಕಾಲವು. ಮುಖ್ಯಕಾಲಾತಿಕ್ರಮವಾದಲ್ಲಿ “ಕಾಲಾತಿಕ್ರಮ ನಿಮಿತ್ತ ಪ್ರಾಯಶ್ಚಿತ್ತಪೂರ್ವಕಂ ಅಮುಕ ಹೋಮಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಆಜ್ಯಸಂಸ್ಕಾರಮಾಡಿ ಸೃಜೆಯಲ್ಲಿ ನಾಲ್ಕಾವರ್ತಿ ತುಪ್ಪವನ್ನು ತುಂಬಿ ೩೧೬ ಧರ್ಮಸಿಂಧು ಸಾಯಂಕಾಲದಲ್ಲಿ “ದೋಷಾವಸ್ತರ್ನಮ: ಸ್ವಾಹಾ” ಎಂದು ಹೋಮಿಸಿ, ಪ್ರಾತಃಕಾಲದಲ್ಲಾದರೆ “ಪ್ರಾತರ್ವಸ್ತರ್ನಮ: ಸ್ವಾಹಾ” ಎಂದು ಹೋಮಿಸಿ ಹೋಮದ್ರವ್ಯವನ್ನು ಸಂಸ್ಕರಿಸಿ ನಿತ್ಯ ಹೋಮ ಮಾಡತಕ್ಕದ್ದು, ಶೌತಹೋಮವನ್ನು ಮಾಡಿ ಸ್ಮಾರ್ತಹೋಮ ಮಾಡಬೇಕು. ಕೆಲವರು ಸ್ಮಾರ್ತಹೋಮವನ್ನು ಮೊದಲು ಮಾಡಬೇಕನ್ನುವರು. ಆಧಾನ, ಪುನರಾಧಾನ ಮಾಡುವಾಗ ಉಪಕ್ರಮವನ್ನು ಸಾಯಂಕಾಲದಲ್ಲೇ ಮಾಡಬೇಕು. ಸಾಯಂ ಪ್ರಾತಃಕಾಲಗಳಲ್ಲಿ ದ್ರವ್ಯವು ಒಂದೇ ಆಗಬೇಕು. (ಸಾಯಂಕಾಲಹಿಯಲ್ಲಿ ಹೋಮಿಸಿದರೆ ಪ್ರಾತಃಕಾಲದಲ್ಲಿಯೂ ಸ್ನೇಹಿಯ ಆಗತಕ್ಕದ್ದೆಂದರ್ಥ) ಕರ್ತೃವೂ ಒಬ್ಬನೇ ಆಗತಕ್ಕದ್ದು. (ಸಾಯಂ ತಾನು ಹೋಮಿಸಿದಾಗ ಪ್ರಾತಃ ಪ್ರತಿನಿಧಿಯಾಗಬಾರದೆಂದರ್ಥ) ಇನ್ನು ಪ್ರಾತಃಕಾಲದಲ್ಲಿ ಯಜಮಾನನು ಹೋಮಿಸಿದ್ದಾಗ ಸಾಯಂಕಾಲ ಪ್ರತಿನಿಧಿಗಳಾದವರು ಹೋಮಿಸಬಹುದು. ಆಶ್ವಲಾಯನರ ಸ್ಮಾರ್ತಮ ಕ್ರಮ ಆಚಮನ, ಪ್ರಾಣಾಯಾಮಗಳನ್ನು ಮಾಡಿ ದೇಶ, ಕಾಲಗಳನ್ನುಚ್ಚರಿಸಿ “ಶ್ರೀಪರಮೇಶ್ವರಪ್ರೀತ್ಯರ್ಥಂ” “ಸಾಯಮವಾಸನಹೋದಂ ಅದು ದ್ರಣ ಕಂಖ್ಯ ಪ್ರಾತಃ ಕಾಲದಲ್ಲಾದರೆ “ಪ್ರಾತವಾಸನಮಂ ಕರಿಷ್ಯ ಹೀಗೆ ಸಂಕಲ್ಪಿಸಿ “ಚಾರಿಶೃಂಗಾ” ಇತ್ಯಾದಿಗಳಿಂದ ಅಗ್ನಿಯನ್ನು ಧ್ಯಾನಿಸಿ ಉದಕಸಹಿತವಾದ ಹಸ್ತದಿಂದ ಮೂರಾವರ್ತಿ ಪರಿಸಮೂಹನಮಾರಿ ಪರಿಷ್ಕರಣಮಾಡಿ ಮೂರಾರ್ಮ ವರ್ಯುಣಮಾಡಿ ಸಮಿಧಸಹಿತವಾದ ಮತ್ತು ಉತ್ತರದಿಕ್ಕಿನಲ್ಲಿರುವ ಹೋಮದ ದ್ರವ್ಯವನ್ನು, ಹೊತ್ತಿಸಿದ ದರ್ಭೆಯನ್ನು ನುರಿದು ಪ್ರೋಕ್ಷಣಮಾಡಿ, ಮೂರಾವರ್ತಿ ಅಗ್ನಿಗೆ ಸುಳಿದು, ಅಗ್ನಿಯ ಪಶ್ಚಿಮದಲ್ಲಿರುವ ದರ್ಭಗಳಲ್ಲಿಟ್ಟು “ವಿಶ್ಯಾನಿನ” ಎಂದು ಅರ್ಚನಮಾಡಿ, ಪ್ರಜಾಪತಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತ ಸಮಿಧವನ್ನು ಅಗ್ನಿಯಲ್ಲಿ ಹಾಕಿ, ಆ ಸಮಿಧವು ಹೊತ್ತಿದ ಮೇಲೆ ನೂರು ತಂಡುಲಗಳ ಆಹುತಿದ್ರವ್ಯವನ್ನು “ಅಗ್ನಯೇಸ್ಟಾಹಾ” ಎಂದು ಸಾಯಂಕಾಲದಲ್ಲಿ ಪ್ರಥಮಾಹುತಿಯನ್ನು ಹಾಕತಕ್ಕದ್ದು, ಪ್ರಾತಃ ಕಾಲದಲ್ಲಾದರೆ ಈ ಪ್ರಥಮಾಹುತಿಯನ್ನು “ಸೂರ್ಯಾಯ ಸ್ವಾಹಾ’ ಎಂದು ಹಾಕತಕ್ಕದ್ದು. ಎರಡನೇ ಆಹುತಿಯನ್ನು ನೂರು ಅಕ್ಕಿಗಳಿಗಿಂತ ಹೆಚ್ಚಾಗಿದ್ದದ್ದನ್ನು ಹಾಕಬೇಕು. “ಪ್ರಜಾಪತಯೇ “ಇದನ್ನು ಮನಸ್ಸಿನಲ್ಲಿಯೇ ಹೇಳಿ ದ್ವಿತೀಯಾಹುತಿಯನ್ನು ಹಾಕಬೇಕು. (ಪ್ರಜಾಪತಯೇ ಸ್ವಾಹಾ ಪ್ರಜಾಪತಯ ಇದಂ-ಹೀಗೆ) ಈ ಎರಡನೇ ಆಹುತಿಯು ಸಾಯಂ, ಪ್ರಾತಃ ಈ ಎರಡು ಪ್ರೇಮಗಳಲ್ಲಿಯೂ ಸಮಾನವು ಪರಿಸ್ತರಣವನ್ನು ಬಿಟ್ಟು ಪರ್ಯುಕ್ಷಣ ಪರಿಸಮೂಹನಗಳನ್ನು ಮಾಡಿ ಉಪಾನ ಮಾಡತಕ್ಕದ್ದು ಇಸ್ಮಗಾಂತತಂ ಖಾನ ಆಗ್ನಿ: ಪದಮಾರೋ ಗಾಯ ಆಗುಹಾನೇ ವಿನಿಯೋಗ “ಅಕ್ಷೇತ್ರಂನ” ಇತರರಿಗೌವಾಯನದಾಬಂಧುಃ ಸುಬಂಧು, ಶ್ರುತಬಂಧುಃ, ದಿಬ್ರಬಂಧುತ್ವ ಅಗ್ನಿವಾಸರಾಟ್ ಅನ್ನುತಾನೇವಿ ಪ್ರಜಾಪತೇ ಹಿರಣ್ಯಗಭಗ ಪ್ರಜಾಪನ್ನುದ್ ಪ್ರಜಾಪತ್ಯುವಾನೇದಿ ತಂತುಂ ತನ್ನನ್ ದೇವಾ ಅರ್ಜಗತೀಯಾ ದೇವಾ! ಪ್ರಜಾರ್ಪಗತಿ ಉರಾನೇ ವಿನಿಯೋಗಃ ಹಿರಣ್ಯಗರ್ಭೋ ಹಿರಣ್ಯಗರ್ಭ ಪ್ರಚಾರನ್ನು ಪ್ರಹುವ ಹೀಗೆ ವಾಯುವ್ಯ ಪ್ರದೇಶದಲ್ಲಿ ಇರುವವನಾಗಿ ಪರಿಚ್ಛೇದ - ೩ ಪೂರ್ವಾರ್ಧ ೩೧೭ ಉಪಸ್ಥಾನಮಾಡಿ ಕೂತುಕೊಂಡು “ಮಾನಕ” ಇತ್ಯಾದಿಗಳಿಂದ ವಿಭೂತಿಧಾರಣ ಮಾಡಬೇಕೆಂದು ಕೆಲಕಡೆಗಳಲ್ಲಿ ಹೇಳಿದೆ. ನಂತರ ವಿಷ್ಣು ಸ್ಮರಣ. “ಆನೇನ ಹೋಮಕರ್ಮಣಾ ಪರಮೇಶ್ವರ: ಪ್ರೀಯತಾಂ” ಹೀಗೆ ಅರ್ಪಿಸತಕ್ಕದ್ದು, ಪ್ರಾತಃಕಾಲದಲ್ಲಾದರೆ “ಸೂರ್ಯೋನೋದಿದು ಸೌರ್ಯಶ್ಯರು: ಸೂರ್ಯ ಗಾಯ ಸೂರ್ಯೋದ-ಚಿತ್ರಂ ದೇವಾನಾಮಾಂಗಿರಸಃ ಸುತೃ: ಸೂರ್ಯಷ್ಟುಪ್ ಸೂರ್ಯೋಪಂನ ಮಿತ್ರ ರ್ಯೋಧಿತರಾಃ ಸೂರ್ಯೋ ಜಗತೀ ಸೂಯೋಶ” ಹೀಗೆ ನಾಲ್ಕು ಮಂತ್ರಗಳಿಂದ ಮತ್ತು ಪೂರ್ವೋಕ್ತ ಮೂರು ಪ್ರಾಜಾಪತ್ಯಗಳಿಂದ ಉಪಸ್ಥಾನ ಮಾಡುವದು. ಕೆಲವರು ಪ್ರಾತಃಕಾಲದಲ್ಲಿ “ತಂತುಂತನ್ನನ್ ಇದನ್ನು ಪಠಿಸುವದಿಲ್ಲ. ಪತ್ನಿ ಅಥವಾ ಕುಮಾರಿ ಇವರು ಹೋಮಿಸುವಾಗ ಧ್ಯಾನ, ಉಪಸ್ಥಾನಾದಿಗಳಲ್ಲಿ ಮಂತ್ರಗಳನ್ನು ಹೇಳತಕ್ಕದ್ದಿಲ್ಲ. ಹಿರಣ್ಯಕೇಶಿಯರಿಗೆ ಹಿಂದೆ ಹೇಳಿದಂತೆ ಸಂಕಲ್ಪಾದಿಗಳನ್ನು ಮಾಡಿ “ಯಥಾಹತನ್ನಸವ” ಈ ಮಂತ್ರದಿಂದ ಪರಿಸಮೂಹನ ಮಾಡಿ ಪರಿಷ್ಕರಣ ಹಾಕಿ “ಆದಿತೇನುಮನ್ಯ” ಹೀಗೆ ಹೇಳಿ ಬಲಗಡೆಯಿಂದ ಪೂರ್ವದಿಕ್ಕಿಗೆ ಪರ್ಯುಕ್ಷಣಮಾಡುವದು. “ಅನುಮತೇನುಮನ’ ಇದರಿಂದ ಪಶ್ಚಿಮದಿಂದ ಉತ್ತರಕ್ಕೆ, “ಸರಸ್ವತೇನುಮನಸ ಇದರಿಂದ ಉತ್ತರದಿಂದ ಪೂರ್ವಕ್ಕೆ “ದೇವಸವಿಸುವ” ಎಂದು ಸುತ್ತಲೂ ಪರ್ಯುಕ್ಷಣಮಾಡಿ ಅಮಂತ್ರಕವಾಗಿ ಸಮಿಧವನ್ನು ಹಾಕಿ ಹೋಮಾದಿಗಳನ್ನು ಹಿಂದೆ ಹೇಳಿದಂತೆ ಮಾಡತಕ್ಕದ್ದು. “ಅದಿನ್ನಮಗ್ಗು ಸ್ಟಾ। ಅನುಮತೇ ಸರಸ್ವತೀ ದೇವಸವಿತ ಪ್ರಾಸಾವೀ” ಹೀಗೆ ಪೂರ್ವದಂತೆ ಪರಿಷೇಚನಮಾಡುವದು. ‘ಉದುತಂ ದೇವಾನಾಂ’ ಎಂದು ಪ್ರಾತರುವಸ್ಥಾನವು, “ಆಗ್ನಿಮೂರ್ಧಾದಿದು ತ್ಯಾದಲ್ಲೇ ಪುರುಷಾದ” ಹೀಗೆ ಎರಡು ಮಂತ್ರಗಳಿಂದ ಸಾಯಂ ಉಪಸ್ಥಾನ ಮಾಡತಕ್ಕದ್ದು. ಆಪಸ್ತಂಬರಿಗೆ ಸಾಯಂಕಾಲದಲ್ಲಿ “ಆಯಸ್ವಾಹ ಅಗ್ನಯೇ ತೇರಾ’ ಎಂದು ಎರಡು ಆಹುತಿಗಳು, ಪ್ರಾತಃಕಾಲದಲ್ಲಿ “ಸೂರ್ಯಾಯಾಣ ಅಗ್ನಯೇ ಕೃತಾ” ಎಂಬುದಾಗಿ ಎರಡಾಹುತಿಗಳು, ಇಷ್ಟೇ ವಿಶೇಷವು, ಉಳಿದದ್ದು ಹಿರಣ್ಯಕೇಶಿಯರಂತೆಯೇ ಕಾತ್ಯಾಯನರಿಗೆ ಸಾಯಂಕಾಲ ಅಭ್ರವಾದ ಮೇಲೆ ಹೋಮವು. ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕಿಂತ ಮೊದಲು ಹೋಮವು, ಪ್ರಾತಃಕಾಲದಲ್ಲಿ ಸಂಧ್ಯಾವಂದನೆಯನ್ನು ಉಪಸ್ಥಾನಾಂತವಾಗಿ ಮಾಡಿ ಹೋಮವನ್ನು ಮುಗಿಸಿ ಗಾಯಜಪಾದಿ ಅವಶಿಷ್ಟ ಸಂಧ್ಯಾವಂದನೆಯನ್ನು ಮಾಡತಕ್ಕದ್ದು, ಹೋಮದಲ್ಲಿ ಪೂರ್ವದಲ್ಲಿ ಹೇಳಿದಂತೆ ಸಂಕಲ್ಪವಾದ ನಂತರ “ಉಪಯಮನ” ಸಂಜ್ಞವಾದ ದರ್ಭೆಗಳನ್ನು ಬಲಗೈಯಲ್ಲಿ ಹಿಡಕೊಂಡು ಬಲಗೈಯಿಂದ ಮೂರು ಸಮಿಧಗಳನ್ನು ಅಗ್ನಿಯಲ್ಲಿ ಹಾಕಿ ಕಲಶೋದಕದಿಂದ ವರ್ಯುಕ್ಷಣಮಾಡಿ ಅಗ್ನಿಯನ್ನರ್ಚಿಸಿ ಸಾಯಂಕಾಲದಲ್ಲಾದರೆ “ಅಗ್ನಯೇಸ್ಸಾಹಾ ಪ್ರಜಾಪತಯೇ ಸ್ವಾಹಾ ಎಂದು ಮೊಸರಿನಿಂದ ಅಥವಾ ಅಕ್ಕಿಗಳಿಂದ ಹೋಮಿಸುವದು. ಪ್ರಾತಃಕಾಲದಲ್ಲಿ ಹಾಗೆಯೇ “ಸೂರ್ಯಾಯಾವಾ ಪ್ರಜಾಪತಯೇ ಸ್ವಾಹಾ ಧರ್ಮಸಿಂಧು ಹೀಗೆ ಹೇಳಿ ಹೋಮಿಸುವದು. “ಸಮಾಸ್ತ್ರ” ಎಂಬ ಅನುವಾಕದಿಂದ ಸಾಯಂಕಾಲದಲ್ಲಿ ‘ಉಪಸ್ಥಾನ’ವು ಪ್ರಾತಃಕಾಲದಲ್ಲಿ ‘ವಿಭ್ರಾಡ್’ ಈ ಅನುವಾದದಿಂದ ಉಪಸ್ಥಾನವು, ದಾದಿ ಹೋಮ ಮಾಡಿದಲ್ಲಿ ಸಂಸ್ರಾವ (ಹೋಮ ಮಾಡುವಾಗ ಬಸಿದದ್ದು) ಪ್ರಾಶನಮಾಡತಕ್ಕದ್ದನ್ನುವರು. ಹೋಮಲೋಪವಾದಲ್ಲಿ ಅಷ್ಟೋತ್ತರಸಹಸ್ರ ಗಾಯತ್ರೀಜಪ ಮಾಡಬೇಕು. ಮುಖ್ಯಕಾಲಾತಿಕ್ರಮವಾದಲ್ಲಿ “ಅನಾದಿಷ್ಟ ಹೋಮಮಾಡಬೇಕು. (ಅನಾದಿಷ್ಟ ಹೋಮವೆಂದರೆ ಕರ್ಮಮಾತ್ರವನ್ನು ಹೇಳಿ ಹೋಮವನ್ನು ನಿರ್ದೇಶನಮಾಡದಿದ್ದಾಗ ಮಾಡುವ ಅಗ್ನಿ ೧, ವಾಯು, ಸೂರ್ಯ ೩, ಪ್ರಜಾಪತಿ ೪, ಅಗ್ನಿವರುಣ ಅಗ್ನಿವರುಣ ಅಗ್ನಿವರುಣ ೫, ಸವಿತಾ ವಿಷ್ಣು ೬, ವಿಶ್ವೇದೇವ ೭, ಮರುತ್ ಸ್ಟರ್ಕ ೮, ವರುಣ ಆದಿತ್ಯ ಅದಿತಿ ೯ - ಹೀಗೆ ಒಂಭತ್ತು ಆಹುತಿಗಳಿಂದ ಉಕ್ತದೇವತೋದ್ದೇಶದಿಂದ ಹೋಮಿಸುವದು.) ಹೋಮದ್ರವ್ಯಗಳು ಭತ್ತ, ಶಾಮ, ಅಕ್ಕಿ, ಜವ ಇವುಗಳ ಅಕ್ಕಿಗಳು (ಸಿಪ್ಪೆಸುಲಿದ ಕಾಳು) ಇವು ಹೋಮಕ್ಕೆ ಯೋಗ್ಯಗಳು, ಹಾಲು, ಮೊಸರು, ತುಪ್ಪ, ಜವೆಗೋದಿ, ನವಣಿ ಇವುಗಳನ್ನು ಇದ್ದ ರೂಪದಿಂದಲೇ ಹೋಮಿಸುವದು. ಯಳ್ಳನ್ನೂ ಕೂಡ ಸಿಪ್ಪೆ ಯುಕ್ತವಾಗಿಯೇ ಹೋಮಿಸುವದು. ಒಂದು ಆಹುತಿಗೆ ತಂಡುಲಾದಿಗಳು ನೂರು ಇರತಕ್ಕದ್ದು, ಮತ್ತು ಹಸ್ತದಿಂದಲೇ ಆಹುತಿ ಹಾಕತಕ್ಕದ್ದು. ಮೊಸರು ಮೊದಲಾದವುಗಳನ್ನು ಸವೆಯಿಂದ ಹೋಮಿಸಬೇಕು. ಎರಡು ಆಹುತಿಗಳನ್ನು ಹೋಮಿಸುವಾಗ ಮೊದಲನೇ ಆಹುತಿಗಿಂತ ಎರಡನೇ ಆಹುತಿಯಲ್ಲಿ ಸ್ವಲ್ಪ ಹೆಚ್ಚಿಗಿರಬೇಕು. ಎಕ್ಕೆ, ಮುತ್ತುಗ, ಖೇರ, ಉತ್ತರಣಿ, ಅಶ್ವತ್ಥ, ಅತ್ತಿ, ಶಮೀ, ಗ ಇರ್ವಾ, ದರ್ಭ ಇವು ಸಮಿಧಯೋಗ್ಯಗಳು. ಪ್ರಮಾಣವು ಹತ್ತು ಅಥವಾ ಹನ್ನೆರಡಂಗುಲವಿರಬೇಕು. ತೊಗಟೆಯು ಸುಲಿದಿರಬಾರದು. ಆಲ, ಬಸರಿ, ಬಿಲ್ವ ಮೊದಲಾದವುಗಳನ್ನು ಸಮಿಧಕ್ಕಾಗಿ “ಹೇಮಾದ್ರಿಯಲ್ಲಿ ಹೇಳಿದೆ. ಹೋಮಾಹುತಿಗಳ ಸಂಸರ್ಗವಾದರೆ ‘ಯತ್ರವೇತ್ರ’ ಎಂಬ ಮಂತ್ರದಿಂದ ಅಗ್ನಿಯಲ್ಲಿ ಸಮಿಧವನ್ನು ಹೋಮಿಸುವದು. ಹೂಮಲೋಪದಲ್ಲಿ ಪ್ರಾಯಶ್ಚಿತ್ತ ನಿತ್ಯಹೋಮವು ಅತಿಕ್ರಾಂತವಾದರೆ ಆಜ್ಯಸಂಸ್ಕಾರ ಮಾಡಿ ಅದನ್ನು ನಾಲ್ಕಾವರ್ತಿ ತುಂಬಿಕೊಂಡು ‘ಮನೋಜ್ಯೋತಿರ್ಜುಷತಾರ’ ಈ ಮಂತ್ರದಿಂದ ಹೋಮಿಸುವದು. ಹನ್ನೆರಡುದಿನ ಹೋಮಲೋಪವಾದಲ್ಲಿಯೂ ಇದೇ ಪ್ರಾಯಶ್ಚಿತ್ತವು. ಹನ್ನೆರಡು ದಿನ ಅತಿಕ್ರಮಿಸಿದರೆ ಅಗ್ನಿಯು ‘ನಷ್ಟ’ವೆಂದು ತಿಳಿಯಬೇಕು. ಹೀಗೆ ಹೋಮಲೋಪ ಪ್ರಾಯಶ್ಚಿತ್ತವನ್ನು ಮಾಡಿ ಅತಿಕ್ರಾಂತವಾದ ಹೋಮದ ಸಲುವಾಗಿ ದ್ರವ್ಯವನ್ನು ಸಂಸ್ಕರಿಸಿ ಸಾಯಂ ಪ್ರಾತಃ ಈ ಕ್ರಮದಿಂದ ದಿನಗಳನ್ನೆಣಿಸಿ ಎರಡೆರಡಾಹುತಿಗಳನ್ನು ಹೋಮಿಸುವದು. ಅಗ್ನಿ, ಸೂರ್ಯ, ಪ್ರಜಾಪತಿಗಳ ಉಪಸ್ಥಾನಮಾಡುವದು. ಹೀಗೆ ಉಪಾನಮಾಡಿದರೆ ಹೋಮವು ಬೇಕೆಂದೇನೂ ಇಲ್ಲ. ಪ್ರಾಯಶ್ಚಿತ್ತದಿಂದಲೇ ಅವುಗಳ ಫಲವು ಲಭಿಸುವದು. ಸೂತಕಾದಿಗಳಿಂದ ಹೋಮಲೋಪವಾದರೂ ಹೀಗೆಯೇ ಮಾಡತಕ್ಕದ್ದು. ‘ಹಿರಣ್ಯಕೇಶಿಯರಿಗೂ ಇದೇ ನಿಯಮವು. ಅಪಸ್ತಂಬಾದಿಗಳಿಗೆ ತ್ರಿರಾತ್ರಿ ಅತಿಕ್ರಮವಾದರೆ ಅಗ್ನಿನಾಶವು ಆದುದರಿಂದ ಸೂತಕದಲ್ಲಿಯಾದರೂ ತಾನೇ ಹೋಮಮಾಡತಕ್ಕದ್ದು. ಸಮಾರೋಪದ ನಂತರದಲ್ಲಿ ಸೂತಕಪ್ರಾಪ್ತವಾದರೆ ಪ್ರತ್ಯವರೋಹಕ್ಕವಕಾಶವಾಗುವದಿಲ್ಲವಾದ23 ಪರಿಚ್ಛೇದ - ೩ ಪೂರ್ವಾರ್ಧ ಕಾರಣ ತ್ರಿರಾತ್ರ ಹೋಮ ಲೋಪವಾಗುವದು. ಆಗ “ಪುನರಾಧಾನವನ್ನೇ ಮಾಡತಕ್ಕದ್ದು. ಸಮಸ್ಯಹೋಮ LOE (ಆಪತ್ತಿನಲ್ಲಿ ಸಾಯಂ-ಪ್ರಾತರ್ಹೋಮಗಳನ್ನು ಕೂಡಿ ಸಾಯಂಕಾಲದಲ್ಲೊಂದೇ ಹೋಮಮಾಡುವದಕ್ಕೆ “ಸಮಸ್ಯ” ಹೋಮವನ್ನುವರು) ಸಂಕಲ್ಪದಲ್ಲಿ “ಸಾಯಂಪ್ರಾತರ್ಹೂಮ್ ಸಮಸ್ಯೆ ಕರಿಷ್ಯ ಹೀಗೆ ಮಾಡತಕ್ಕದ್ದು. ಹಿಂದೆ ಹೇಳಿದಂತೆ ಸಾಯಂಕಾಲದ ಹೋಮಮಾಡಿ “ಪರ್ಯುಕ್ಷಣ” ದ್ರವ್ಯಪುನಃಸಂಸ್ಕರಣಗಳನ್ನು ಮಾಡಿ ಸಮಿಧಧಾನ ಮಾಡುವದು, ನಂತರ ಸೂರ್ಯ- ಪ್ರಜಾಪತಿ ಆಹುತಿಗಳನ್ನು ಕೊಟ್ಟು “ಹವಿಷ್ಟಾಂ ತಂ” ಎಂದು ಉಪಸ್ಥಾನ ಮಾಡುವದು. ‘ಹವಿಸ್ಸಾಂತಮಿತಿ ಪಂಚರ್ಚಸ್ಯ ವಾಮದೇವಃ ಸೂರ್ಯ ವೈಶ್ವಾನರ ತ್ರಿಷ್ಟುಪ್’ ಇತ್ಯಾದಿ ನಿತ್ಯದಂತೆ ಪ್ರಜಾಪತಿಯ ಉಪಸ್ಥಾನ ಮಾಡುವದು. ಪಕ್ಷ ಹೋಮ ಶೇಷಹೋಮಗಳು ಪ್ರತಿಪದಿಯಲ್ಲಿ “ಆದ್ಯಸಾಯಮಾರಭ್ಯ ಚತುರ್ದಶೀ ಸಾಯಮವಧಿಕಾನ್ ಪಕ್ಷಹೋಮಾನ್ ತಂತ್ರಣ ಕರಿಷ್ಯ ಹೀಗೆ ಸಂಕಲ್ಪ ಮಾಡುವದು. ಸಾಯಂಕಾಲದಲ್ಲಿ ಎರಡು ಪಾತ್ರಗಳಲ್ಲಿ ತಿಥಿವೃದ್ಧಿ-ಕ್ಷಯಗಳಿಗನುಸಾರ ಅಷ್ಟಾವರ್ತಿ ತಂಡುಲಗಳನ್ನು ತೆಗೆದುಕೊಂಡು ಹೋಮಕಾಲದಲ್ಲಿ “ಅಗ್ನಯೇ ಸ್ವಾಹಾ” ಎಂದು ಹೇಳಿ ಮೊದಲಿನ ಪಾತ್ರೆಯಲ್ಲಿರುವ ಹೋಮದ್ರವ್ಯವನ್ನು ಒಂದೇ ಆವರ್ತಿ ಹೋಮಿಸಿ ಎರಡನೆಯ ಪಾತ್ರದಲ್ಲಿಯ ದ್ರವ್ಯವನ್ನು “ಪ್ರಜಾಪತಯೇ ಸ್ವಾಹಾ” ಎಂದು ಹಾಗೆಯೇ ಹೋಮಿಸುವದು. ಇದರಂತೆ ದ್ವಿತೀಯೆಯಲ್ಲಿ “ಪ್ರಾತರಾವಧಿ ಪರ್ವಪ್ರಾತರವಧಿಕಾನ್ ಪಕ್ಷ ಹೋಮಾನ್ ತಂತ್ರಣ ಕರಿಷ್ಟೇ ಇತ್ಯಾದಿ ಸಾಯಂಕಾಲದಂತೆ ಊಹಿಸುವದು. ಇಲ್ಲಿ (ಪಕ್ಷ ಹೋಮದ ಪ್ರಾತಃಕಾಲದಲ್ಲಿ ) ವಿಶೇಷವೇನೆಂದರೆ ಪ್ರಥಮಪಾತ್ರೆಯ ದ್ರವ್ಯವನ್ನು “ಸೂರ್ಯಾಯ ಸ್ವಾಹಾ” ಎಂದು ಹೋಮಿಸುವದು. ಎರಡನೇ ಪಾತ್ರದಲ್ಲಿಯ ದ್ರವ್ಯವನ್ನು “ಪ್ರಜಾಪತಯೇ ಸ್ವಾಹಾ” ಎಂದು ಹೋಮಿಸುವದು. ಈ ಎರಡೂ ಕಡೆಗಳಲ್ಲಿ ಏಕಸಮಿಧಾಧಾನ, ಏಕ ಉಪಸ್ಥಾನಗಳು. ಪಕ್ಷದ ಮಧ್ಯದಲ್ಲಿ ಆಪತ್ತು ಸಂಭವಿಸಿದಾಗ ಆ ದಿನದ ಸಾಯಂಕಾಲದಿಂದ ಚತುರ್ದಶೀ ಸಾಯಂ ಪರ್ಯಂತ ಶೇಷಹೋಮಗಳನ್ನು ಸಾಯಂ ಪಕ್ಷ ಹೋಮದಂತೆ ಮಾಡುವದು. ಪರ್ವಪ್ರಾತರ್ಹೋಮಾಂತವಾಗಿ ಪ್ರಾತಃಕಾಲದಲ್ಲಿ ಹೋಮಿಸುವದು. ಒಟ್ಟಿನಮೇಲೆ ಪರ್ವಸಾಯಂ ಹೋಮವೂ, ಪ್ರತಿಪತ್‌ ಪ್ರಾತರ್ಹೋಮವೂ ಪ್ರತ್ಯೇಕವಾಗಿಯೇ ಮಾಡಬೇಕಾದದ್ದು. ಹೀಗೆ ಪಕ್ಷ ಹೋಮ ಶೇಷಹೋಮಗಳು, ಪಕ್ಷದ ಮಧ್ಯದಲ್ಲಿ ಆಪತ್ತು ನಿವಾರಣೆಯಾದರೆ ಮೊದಲು ಅಪಕರ್ಷಿಸಿ ಹೋಮಮಾಡಿದ್ದರೂ ಅವುಗಳನ್ನು ಪುನಃ ಮಾಡಬೇಕು. ನಂತರವಾಗಿ ಮೂರುಪಕ್ಷ ಹೋಮಗಳಾದಲ್ಲಿ ಅಗ್ನಿಯು ನಷ್ಟವಾಗುವದರಿಂದ ಮೂರನೇ ಪಕ್ಷದಲ್ಲಿ ಪ್ರತಿದಿನ ಹೋಮಮಾಡಬೇಕು. ಯಾವಾಗಲೂ ಆಪತ್ತು ನಿವೃತ್ತಿಯಾಗದಿದ್ದರೆ ಜೀವಮಾನವಿಡೀ ಪಕ್ಷ ಹೋಮವನ್ನು ಮಾಡುವದು. ಸಮಾರೋಪ “ಆಯಂತೇ ಯೋನಿರಿತ್ಯಸ್ಯ ವಿಶ್ವಾಮಿತ್‌ರನುಷ್ಟುಪ್ ಅಗ್ನಿಸಮಾರೋಪೇವಿ” ಈ ಮಂತ್ರದಿಂದ ಹೋಮಾನಂತರದಲ್ಲಿ ‘ಅರಣಿ’ಯನ್ನಾಗಲೀ, ‘ಅಶ್ವತ್ಥಸಮಿಧ’ವನ್ನಾಗಲೀ ಅಗ್ನಿಯಲ್ಲಿ ೩೨೦ ಧರ್ಮಸಿಂಧು ಕಾಯಿಸಿ ಅಗ್ನಿಯು ಅದರಲ್ಲಿ ‘ಪ್ರವೇಶಿಸಿತು’ ಎಂದು ಭಾವಿಸುವದು. ಇದಕ್ಕೆ ‘ಅಗ್ನಿಸಮಾರೋಪ’ವನ್ನುವರು. ಪುನಃ ಹೋಮಕಾಲದಲ್ಲಿ ‘ಅರಣಿ’ಯನ್ನು ಕಡೆದು ‘ಪ್ರತ್ಯವರೋಹ’ ಮಂತ್ರದಿಂದ ಸ್ಥಂಡಿಲದಲ್ಲಿ ಅಗ್ನಿಯನ್ನು ಪ್ರತಿಷ್ಠಾಪನೆ ಮಾಡುವದು. ಸಮಿಧದಲ್ಲಿ ಸಮಾರೋಪಣ ಮಾಡಿದಲ್ಲಿ ಪ್ರೋತ್ರಿಯನ ಮನೆಯಿಂದ ಅಗ್ನಿಯನ್ನು ತಂದು ಅಗ್ನಿ ಪ್ರತಿಷ್ಠೆ ಮಾಡತಕ್ಕದ್ದು. ಅದರಲ್ಲಿ ‘ಪ್ರತ್ಯವರೋಹ’ ಮಂತ್ರದಿಂದ ಸಮಿಧವನ್ನು ಹಾಕುವದು. ಬೇರೆ ಸೂತ್ರಗಳಲ್ಲಿ “ಆಜುಹ್ವಾನ ಉದ್ಬುಧಸ್ವ” ಈ ಮಂತ್ರಗಳಿಂದ ‘ಪ್ರವರೋಹಣ’ ವನ್ನು ಹೇಳಿದೆ. ಪ್ರತಿನಿತ್ಯ ಸಮಾರೋಪ ಮಾಡುವದಿದ್ದು ಹನ್ನೆರಡು ದಿನಗಳ ವರೆಗೆ ಮಾತ್ರ ಪರ್ವದಲ್ಲಿ ಸಾಯಂಹೋಮ ಪರ್ಯಂತವಾಗಿ ಪ್ರತ್ಯವರೋಹಣವಾಗದಿದ್ದರೆ ಅಗ್ನಿಯು ನಷ್ಟವಾಗುವದೆಂದು ಕೆಲವರನ್ನುವರು. ಈ ಸಮಾರೋಪ- ಪ್ರತ್ಯವರೋಹಣವನ್ನು ಪ್ರತಿನಿಧಿಯಿಂದ ಮಾಡಿಸದೆ ತಾನೇ ಮಾಡಬೇಕು. ಸಮಾರೋಪವಾದ ಮೇಲೆ ಪರ್ವದಲ್ಲಿ ಆಶೌಚಪ್ರಾಪ್ತಿಯಾದರೆ ಪ್ರತ್ಯವರೋಹವು ಅಸಂಭವವಾಗುವದರಿಂದ ಅಗ್ನಿಯು ನಷ್ಟವಾಗುವದು. ಇದು ಆವಸ್ತಂಬಾ’ದಿಗಳ ವಿಷಯದ್ದು. ಆಶ್ವಲಾಯನರಿಗೆ ಹನ್ನೆರಡು ರಾತ್ರಿಗಳೊಳಗೆ ಪರ್ವದಲ್ಲಿ ಪ್ರತ್ಯವರೋಹಣವಾಗದಿದ್ದರೂ ಅಗ್ನಿಯು ನಷ್ಟವಾಗುವದಿಲ್ಲ. ದ್ವಾದಶರಾತ್ರಿ ಕಳೆದಮೇಲೆ ಹೋಮವು ಲೋಪವಾಗುವದೆಂದು ಕೆಲವರನ್ನುವರು. “ರಾಜ್ಯಕ್ರಾಂತಿ"ಮೊದಲಾದ ಸಂಕಟದಲ್ಲಿ ಋತ್ವಿಜಾದಿಗಳಿಂದಾದರೂ ಸಮಾರೋಪಾದಿಗಳನ್ನು ಮಾಡತಕ್ಕದ್ದು. ಕೆಲವರು ಋತ್ವಿಜಾದಿಗಳ ಅಭಾವವಾಗಿ ಅನನ್ಯಗತಿಕರಾದಲ್ಲಿ ಆಶೌಚಪ್ರಾಪ್ತಿಗಿಂತ ಮೊದಲು ಪರ್ವಹೋಮಸಹಿತ ಶೇಷಹೋಮಗಳನ್ನಪಕರ್ಷಣಮಾಡಿ ಸೂತಕಾಂತ್ಯದಲ್ಲಿ ಪ್ರವರೋಹ ಮಾಡತಕ್ಕದ್ದು. ಇಂದೂ ಸಂದರ್ಭದಲ್ಲಿ ಪರ್ವವನ್ನುಲ್ಲಂಘಿಸಿದ ದೋಷವುಂಟಾಗುವದಿಲ್ಲವೆನ್ನುವರು. ಸಮಾರೋಪದ ನಂತರದಲ್ಲಿ ದಂಪತಿಗಳು ಪ್ರವಾಸಕ್ಕೆ ಹೋದಾಗ ಗಡಿ ಅಥವಾ ನದಿಗಳನ್ನು ದಾಟುವಾಗ ಆ ಇಬ್ಬರೂ ಅಥವಾ ಯಜಮಾನನೊಬ್ಬನಾದರೂ ಸಮಾರೋಪ ಮಾಡಿದ ಸಮಿಧವನ್ನು ಮುಟ್ಟಿಕೊಂಡಿರಬೇಕು. ಇಲ್ಲವಾದರೆ ಅಗ್ನಿಯು ನಷ್ಟವಾಗುವದು. ಪರಹಿತನಾಗಿ ಪ್ರವಾಸಮಾಡುವಾಗ “ಅಭಯಂವೋsಭಯಂಮೇsಸ್ತು” ಈ ಮಂತ್ರದಿಂದ ಅಗ್ನಿಯನ್ನು ಪ್ರಾರ್ಥಿಸಿ ಪ್ರವಾಸಕ್ಕೆ ಹೋಗತಕ್ಕದ್ದು. ಪ್ರವಾಸ ಮುಗಿಸಿ ಮನೆಗೆ ಬಂದು “ಗೃಹಾಮಾಬಿಭೀ ತೋಪವಃ ಸ್ವವಾಸ್ಮಾಸುಚ ಪ್ರಜಾಯಧ್ವಂ ಮಾತವೊಗೋಪತೀರಿಷತ್” ಈ ಮಂತ್ರದಿಂದ ತನ್ನ ಮನೆಯನ್ನು ನೋಡಿ, “ಗೃಹಾನಹಂ ಸುಮನಸ: ಪ್ರಪ ವೀರ ವೀರವತ: ಸುವೀರಾನ್ ಇರಾಂ ವಹತೋ ವೃತಮುಕ್ತಮಾಣಾಸ್ತವ್ರತಃ ಸುಮನಾ: ಸಂವಿತಾ” ಹೀಗೆಂದು ಮನೆಯನ್ನು ಪ್ರವೇಶಿಸಿ “ಶಿವಂ ಶ ಶಂಯೋ” ಎಂದು ಪುನಃ ಮನೆಯನ್ನು ಮೂರಾವರ್ತಿ ನೋಡಿ ನಿತ್ಯ ಹೋಮವನ್ನು ಮುಗಿಸಿ “ಅಭಯಂವೋ ಭಯಮಸ್ತು” ಎಂದು ಅಗ್ನಿಯನ್ನು ಉಪಸ್ಥಾನಮಾಡುವದು. ಜೈಪ್ಪ ಪುತ್ರನ ಶಿರಸ್ಸನ್ನು ಎರಡೂ ಕೈಗಳಿಂದ ಓಡಕೊಂಡು “ಅಂಗಾದಂಗಾತ್’ ಈ ಮಂತ್ರದಿಂದ ಮರಾವರ್ತಿ ಮೂಸುವರು. ಇದರಂತೆ ಇತರ ಪುತ್ರರ ಹಾಗೂ ಅವಿವಾಹಿತ ಕನೈಯ ಶಿರಸ್ಸನ್ನೂ ಆಮಂತ್ರಕವಾಗಿ ಮೂರಾವರ್ತಿ ಆಘ್ರಾಣಿಸುವದು. ಪ್ರವಾಸದಿಂದ ಬಂದವನಿಗೆ ಏನಾದರೂ 238 ಪರಿಚ್ಛೇದ ೩ ಪೂರ್ವಾರ್ಧ ೩೨೧ ಮನೆಯಲ್ಲಿ ಅನಿಷ್ಟ ಸಂಭವಿಸಿ ಅದು ಆತನಿಗೆ ಮೊದಲೇ ತಿಳಿದಿದ್ದರೂ ಆ ದಿನ ಹೇಳಬಾರದು. ಪತಿಯು ಪ್ರವಾಸದಲ್ಲಿದ್ದಾಗ ಪತ್ನಿಯು ಸ್ಮಾರ್ತಹೋಮಗಳನ್ನು ತಾನು ಮಾಡಿ ದರ್ಶ, ಪೂರ್ಣಮಾಸ, ಸ್ಥಾಲೀಪಾಕ, ಪಿಂಡಪಿತೃಯಜ್ಞಗಳನ್ನು ಬ್ರಾಹ್ಮಣನಿಂದ ಮಾಡಿಸಬೇಕು. ಆ ಪತ್ನಿಯು ರಜಸ್ವಲೆಯಾಗಿದ್ದರೂ ಅಗ್ನಿನಷ್ಟ ಪ್ರಾಯಶ್ಚಿತ್ತಾದಿಗಳನ್ನು ಋತ್ವಿಜನು ಮಾಡತಕ್ಕದ್ದು. “ಪುನಃ ಸಂಧಾನ” ಮಾತ್ರ ಪತಿಯು ಪ್ರವಾಸದಲ್ಲಿದ್ದಾಗ ಆಗುವದಿಲ್ಲ. ಅದರಂತೆ ನೈಮಿತ್ತಿಕ ಜ್ವಾಲೇಷ್ಟಿ, ಗೃಹದಾಹೇಷ್ಟಿ ಮೊದಲಾದವುಗಳೂ ಆಗುವದಿಲ್ಲ. ಪ್ರಾಯಶ್ಚಿತ್ತಷ್ಟಿಯ ಪೂರ್ಣಾಹುತಿಯೂ ಆಗುವದಿಲ್ಲ. ಔಪಾಸನಾಗ್ನಿಯು ನಷ್ಟವಾದರೆ “ಗೃಹಾಗ್ನರನುಗಮ ಪ್ರಾಯಶ್ಚಿತ್ತಂ ಕರಿಷ್ಯ ಹೀಗೆ ಸಂಕಲ್ಪಿಸಿ ಕುಂಡದಲ್ಲಿರುವ ಭಸ್ಮವನ್ನೆಲ್ಲ ತೆಗೆದು ಶಗಣಿಯಿಂದ ಸಾರಿಸಿ ಅಗ್ನಿಸ್ಥಾಪನ ಮಾಡತಕ್ಕದ್ದು. ಆಜ್ಯವನ್ನು ಸಂಸ್ಕರಿಸಿ ‘ಅಯಾಶ್ಚ’ ಎಂಬ ಮಂತ್ರದಿಂದ ಒಂದು ಆಹುತಿಯನ್ನೂ, ಸರ್ವಪ್ರಾಯಶ್ಚಿತ್ತ ಆಹುತಿಗಳನ್ನೂ ಹೋಮಿಸಿ ಪತಿ-ಪತ್ನಿಯರೊಳಗೊಬ್ಬರು ಮತ್ತೊಂದು ಹೋಮಕಾಲಪರ್ಯಂತ ಉಪವಾಸವಿರತಕ್ಕದ್ದು. ಇದು ಹನ್ನೆರಡು ದಿನಗಳೊಳಗೆ ಹೇಳಿದ್ದು. ಕೆಲವರು ಉಪವಾಸ ಮತ್ತು ‘ಅಯಾಶ್ಚ’ ಈ ಮಂತ್ರದ ಹೋಮ-ಈ ಎರಡನ್ನೂ ಮಾಡಬೇಕೆಂದಿಲ್ಲ; ಹೀಗೆ ಹೇಳುವರು. ಇದು ವೃತ್ತಿಕಾರನ ಮತವು. ಇನ್ನು ಕೆಲವರು ಹೇಳುವದೇನೆಂದರೆ- ಅಗ್ನಿಯು ನಷ್ಟವಾಗಿ ಹೋಮದ ಎರಡೂ ಕಾಲಗಳು ಅತಿಕ್ರಮಿಸಿದಲ್ಲಿ, ಆಗ ನಷ್ಟಾಗಿ ಪುನಃ ಸಂಧಾನ ಮಾಡತಕ್ಕದ್ದು, ಮತ್ತು ಮೂರು ರಾತ್ರಿ ಅಗ್ನಿನಷ್ಟವಾದಲ್ಲಿ ಮೂರು ಪ್ರಾಣಾಯಾಮಾಡುವದು. ಇಪ್ಪತ್ತು ರಾತ್ರಿಗಳೊಳಗೆ ಒಂದು ದಿನ ಉಪವಾಸ; ಆಮೇಲೆ ಎರಡು ತಿಂಗಳಪರ್ಯಂತ ತ್ರಿರಾತ್ರ ಉಪವಾಸ; ಅದರ ನಂತರ ಸಂವತ್ಸರಪರ್ಯಂತ “ಪ್ರಾಜಾಪತ್ಯಕೃ4”. ಆಮೇಲೆ ವರ್ಷ ಒಂದೊಂದರಂತೆ ಕೃಚ್ಛ ಹೀಗೆ ಪ್ರಾಯಶ್ಚಿತ್ತವು ಆಧಾನದ ಸಾಮಗ್ರಿಗಳನ್ನು ಸಂಗ್ರಹಿಸಿ “ನಷ್ಟಸ್ಕಾಗೇ ಪ್ರಾಯಶ್ಚಿತ್ತಂ ಕರಿಷ್ಯ ಹೀಗೆ ಸಂಕಲ್ಪಿಸಿ ಅಯಾಶ್ಚ ಈ ಮಂತ್ರದಿಂದ ಆಜ್ಞಾಹುತಿ ಹಾಗೂ ಪತ್ನಿಯ ಉಪವಾಸಾದಿಗಳನ್ನು ಪೂರ್ವದಲ್ಲಿ ಹೇಳಿದಂತೆ ಮಾಡುವದು; ಅಥವಾ ಲಾಜ ಹೋಮಾದಿಗಳನ್ನು ಮಾಡತಕ್ಕದ್ದು. ಹೀಗೆ ಹನ್ನೆರಡುರಾತ್ರಿ ಪರ್ಯಂತ ಅಗುತ್ಪತ್ತಿ ಮಾಡಲು ಯೋಗ್ಯವು; ಎಂದು ಹೇಳುವರು. ದ್ವಾದಶದಿನಾ ನಂತರದಲ್ಲಿ ವಿಚ್ಛೇದಪ್ರಾಯಶ್ಚಿತ್ತ ಮತ್ತು ಹೋಮಾದಿ ದ್ರವ್ಯದಾನವನ್ನು ಮಾಡಿ ವಿವಾಹ ಹೋಮಾದಿ ವಿಧಿಯಿಂದ ತಮ್ಮ-ತಮ್ಮ ಪ್ರಯೋಗಗಳಲ್ಲಿ ಹೇಳಿದಂತೆ ಪುನಃ ಸಂಧಾನ ಮಾಡಬೇಕು. ಯಾಗಕ್ಕಿಂತ ಮೊದಲು ಅನ್ವಾಧಾನಮಾಡಿದ ಅಗ್ನಿಯು ನಷ್ಟವಾದರೆ “ಅಯಾಶ್ಚ” ಈ ಮಂತ್ರದಿಂದ ಪೂರ್ವದಂತೆ ಅಗ್ನಿಯನ್ನುತ್ಪಾದಿಸಿ ಪುನಃ ಅನ್ನಾಧಾನ ಮಾಡಿ “ಭೂರ್ಭುವಃಸುವಃ ಹೀಗೆ ಉಪಸ್ಥಾನ ಮಾಡಿ ಸರ್ವಪ್ರಾಯಶ್ಚಿತ್ತವನ್ನು ಹೋಮಿಸಿ ಸ್ವಾಲೀಪಾಕವನ್ನು ಮಾಡತಕ್ಕದ್ದು. ಅನಾಧಾನದ ನಂತರದಲ್ಲಿ ಪ್ರಯಾಣಪ್ರಾಪ್ತವಾದಲ್ಲಿ “ತುಂತಾ ಅಂಗಿರಸ್ತಮ"ಈ ಮಂತ್ರದಿಂದ ಅಗ್ನಿಗೋಸ್ಕರ ಹೋಮಿಸಿ ಸರ್ವಪ್ರಾಯಶ್ಚಿತ್ತ ಹೋಮವನ್ನು ಮಾಡಿ ಅಗ್ನಿ ಸಮಾರೋಪಣ ಮಾಡಿ ಹೋಗತಕ್ಕದ್ದು. ೩೨೨ ಧರ್ಮಸಿಂಧು ಪುನರಾಧೇಯ ಪ್ರಾಯಶ್ಚಿತ್ತ ವಿಚಾರ ಅಗ್ನಿಸಮಾರೋಪ ಮಾಡಿದ ಸಮಿಧವು ನಷ್ಟವಾದರೆ “ಪುನರಾಧೇಯ"ವನ್ನು ಮಾಡಬೇಕು. ಕುಂಡವನ್ನು ಸಾರಿಸಿ ನಷ್ಟಾಗಿ ಪ್ರಾಯಶ್ಚಿತ್ತ ಮತ್ತು “ಪುನರಾಧೇಯ"ವನ್ನು ಸಂಕಲ್ಪಿಸಿ ಅನ್ನಾಧಾನ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು, ಅಗ್ನಿಪ್ರತಿಷ್ಠೆ ಮಾಡಿ ‘ಆಯಾಶ್ಚ’ ಎಂದು ಸೃವಾಜ್ಞಾಹುತಿಯನ್ನೂ ಸರ್ವಪ್ರಾಯಶ್ಚಿತ್ತಾಹುತಿಹೋಮವನ್ನೂ ಮಾಡುವದು. ಇದೇ “ಪುನರಾಧೇಯ"ವು. ತನ್ನ ಅಗ್ನಿಯೇ ಎಂಬ ಭಾವನೆಯಿಂದ ಅನ್ಯರ ಅಗ್ನಿಯಲ್ಲಿ ತಾನು ಯಾಗಮಾಡಿದಲ್ಲಿ ಸ್ವಾಗ್ನಿಯಲ್ಲಾಗಲೀ, ಅನ್ಯರ ಅಗ್ನಿಕುಂಡದಲ್ಲಾಗಲೀ “ಪಥಿಕೃಕೃತ್ ಸ್ಟಾಲೀಪಾರಂ ಕರಿಷ್ಯ ಹೀಗೆ ಸಂಕಲ್ಪಿಸಿ ‘ಚರು’ವನ್ನು ಮಾಡುವದು, ಅಥವಾ “ಪಥಿಕೃತ್ ಸ್ಥಾನದಲ್ಲಿ ‘ಪೂರ್ಣಾಹುತಿಂ ಹೋಷ್ಮಾಮಿ’ ಹೀಗೆ ಸಂಕಲ್ಪಿಸಿ ಸೃಚೆಯಲ್ಲಿ ಹನ್ನೆರಡಾವರ್ತಿ ಅಥವಾ ನಾಲ್ಕಾವರ್ತಿ ಆಜ್ಯವನ್ನು ಹಾಕಿ “ಅಗ್ನಯೇ ಪಥಿಕೃತೇ ಸ್ವಾಹಾ” ಎಂದು ಹೋಮಿಸತಕ್ಕದ್ದು. ವಿವಾಹಾನಂತರ ಅಥವಾ ಆಧಾನದ ನಂತರ ಹುಣ್ಣಿವೆಯಲ್ಲಿ ‘ಸ್ಥಾಲೀಪಾಕಾರಂಭ’ವನ್ನು ಮಾಡಬೇಕು. ಪ್ರತಿಪದೆಯಲ್ಲಿ ಯಾಗವು. (ಇಷ್ಟಿ) ಅತಿಕ್ರಾಂತವಾದಲ್ಲಿ ಮುಂದೆ ಪರ್ವದೊಳಗೆ ಬರುವ ತಿಥಿಗಳಲ್ಲಿ ಚತುರ್ಥಿ, ನವಮಿ, ಚತುರ್ದಶೀ, ದ್ವಿತೀಯಾ, ಪಂಚಮೀ, ಅಷ್ಟಮೀ ಈ ತಿಥಿಗಳನ್ನು ಬಿಟ್ಟು ಮಾಡತಕ್ಕದ್ದು. ಇಂಥಲ್ಲಿ ಕಾಲಾತಿಕ್ರಮ ಪ್ರಾಯಶ್ಚಿತ್ತವಿಲ್ಲ. ಅಷ್ಟಾಧಾನಾನಂತರದಲ್ಲಿ ಪ್ರತಿಪದೆಯಲ್ಲಿ “ಇಷ್ಟಿ"ಯನ್ನು ಮಾಡದಿದ್ದರೆ ತೃತೀಯಾದಿ ತಿಥಿಗಳಲ್ಲಿ ಸರ್ವಪ್ರಾಯಶ್ಚಿತ್ತವನ್ನು ಹೋಮಿಸಿ ಪುನಃ ಅನ್ವಾಧಾನಮಾಡಿ ಯಾಗಮಾಡಬೇಕು. ಎರಡನೇ ಪರ್ವ ಬಂದಾಗ ಅತೀತವಾದ ಇಷ್ಟಿಯನ್ನು ಪಥಿಕೃಷ್ಣರು ಪೂರ್ವಕವಾಗಿ ಪರ್ವದಲ್ಲಿ ಮಾಡತಕ್ಕದ್ದು. ಅದರಲ್ಲಿಯೂ ಅತಿಕ್ರಮವಾದರೆ ಎರಡನೇ ಪ್ರತಿ ಪಡೆಯಲ್ಲಿ ಲುಪ್ತವಾದ ಇಷ್ಟಿಯ ಪಾದಕೃಚ್ಛ ಪ್ರಾಯಶ್ಚಿತ್ತ ಮಾಡಿ ಪ್ರಾಪ್ತ ಕಾಲದಲ್ಲಿ ಯಾಗಮಾಡತಕ್ಕದ್ದು, ದ್ವಿತೀಯ ಯಾಗವೂ ಸಹ ಮುಂದಿನ ತಿಥಿಗಳಲ್ಲಿ ಲೋಪವಾದರೆ ಆ ಪರ್ವದಲ್ಲಿ ‘ಪಾದಕೃಚ್ಛ ಪಥಿಕೃತೂರ್ವಕ ಎರಡನೇ ಯಾಗವನ್ನು ಮಾಡಬೇಕು. ಅದರಲ್ಲಿಯೂ ಅತಿಕ್ರಮವಾದರೆ ಮೂರನೇ ಪ್ರತಿಪದೆಯಲ್ಲಿ ಎರಡೂ ಯಾಗಗಳ ಸಲುವಾಗಿ ಅರ್ಧಕೃಚ್ಛವನ್ನು ಮಾಡಿ ಪ್ರಾಪ್ತವಾದ ಯಾಗವನ್ನು ಮಾಡತಕ್ಕದ್ದು. ಆ ತೃತೀಯ ಯಾಗವಾದರೂ ಉಕ್ತತಿಥಿಗಳಲ್ಲಿ ಅರ್ಧಕೃಚ್ಛ ಪಧಿ ಕೃತೂರ್ವಕವಾಗಿ ಆಗದೆ ಚತುರ್ಥ ಪರ್ವದಲ್ಲಿಯೂ ಆಗದಿದ್ದರೆ ಅಗ್ನಿನಾಶವಾಗುವದರಿಂದ “ಪುನರಾಧೇಯವಾಗತಕ್ಕದ್ದು. “ಪುನರಾಧೇಯ “ಸ್ವರೂಪವೆಂದರೆ ಅಧಾನೋಕ್ತ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು ‘ಆಯಾಶ್ಚ’ ಈ ಮಂತ್ರದಿಂದ ಸವಾಚ್ಯಾಹುತಿಯನ್ನು ಹಾಕುವದು. ಈ ವಿಷಯವನ್ನು ಸಮಾರೋಪ ಮಾಡಿದ ಸಮಿಧನಾಶ ಪ್ರಕರಣದಲ್ಲಿಯೇ ಹೇಳಿದೆ. ಇನ್ನು ಪುನರಾಧಾನ ವಿಷಯ. ಅದು ವಿವಾಹಹೋಮ ರೂಪವಾಗಿದ್ದು “ಪುನರಾದೇಯಕ್ಕಿಂತ ಭಿನ್ನವಾದದ್ದು. ಅಗ್ನಿಯಿದ್ದ ಸ್ನಾನದಿಂದ “ಶಮ್ಯಾಪರಾಸ"ದ ಅಳತೆಯೊಳಗೆ (ಶಮ್ಯಾಪರಾಸ ಅಂದರೆ ಮೂವತ್ತಾರು ಅಂಗುಲದ ಅಳತೆ) ಅಗ್ನಿತರುವಾಗ ಚೆಲ್ಲಿದರೆ “ಇದಂತೇಕ” ಈ ಮಂತ್ರದಿಂದ ಅಗ್ನಿಯನ್ನು ಕುಂಡದಲ್ಲಿಟ್ಟು, ಸರ್ವ ಪ್ರಾಯಶ್ಚಿತ್ತವನ್ನು ಹೋಮಿಸುವದು. ಪರ್ವದಲ್ಲಿ ವ್ರತಲೋಪವಾದರೆ ‘ಅಗ್ನಯೇ ವ್ರತಪತಯೇ’ ಎಂದು ‘ಆರು’ ಆಗಬೇಕು. ಅಥವಾ ಪೂರ್ಣಾಹುತಿ ಹೋಮ ಮಾಡುವದು, ವರ್ಷದಲ್ಲಿ ದಂಪತಿಗಳ ಕಣ್ಣೀರು ಬಿದ್ದರೆ “ಅಗ್ನಯೇ ವ್ರತಕೃತೇ ಎಂದು ಪರಿಚ್ಛೇದ - ೩ ಪೂರ್ವಾರ್ಧ ೩ ೨೩ ಚರು ಅಥವಾ ಅದೇ ಮಂತ್ರದಿಂದ ಪೂರ್ಣಾಹುತಿಯಾಗಬೇಕು. ಪವಿತ್ರವು ನಷ್ಟವಾದರೆ ‘ಅಗ್ನಯೇ ಪವಿತ್ರವತೇ’ ಎಂದು ಚರು ಅಥವಾ ಪೂರ್ಣಾಹುತಿಯು, ಅನಾಧಾನೇಷ್ಟಿಮಧ್ಯದಲ್ಲಿ ಚಂದ್ರಗ್ರಹಣಬಂದರೆ “ಅತ್ರಾಹಗೋ” ಎಂಬ ಮಂತ್ರದಿಂದ ಚಂದ್ರನಿಗೆ ಆಜ್ಞಾಹುತಿಕೊಟ್ಟು “ನವೋನವ” ಮಂತ್ರದಿಂದ ಉಪಸ್ಥಾನ ಮಾಡಿ ಇಧ್ಯಾಧಾನಾದಿ ಯಾಗವನ್ನು ಮಾಡುವದು. ಸೂರ್ಯಗ್ರಹಣದಲ್ಲಿ ‘ಉದ್ವಯಂ’ ಮಂತ್ರದಿಂದ ಸೂರ್ಯನ ಸಲುವಾಗಿ ಆಜ್ಞಾಹುತಿಯಿಂದ ಹೋಮಿಸಿ ‘ಚಿತ್ರಂ ದೇವಾನಾಂ’ ಇದರಿಂದ ಉಪಸ್ಥಾನ ಮಾಡುವದು. ಅಾಧಾನದ ನಂತರದಲ್ಲಿ ಸ್ವಪ್ನದಲ್ಲಿ ರೇತಃಸ್ಥಲನವಾದರೆ ‘ಇಮಂ ಮೇ ವರುಣ ತತ್ವಾಯಾಮಿ’ ಈ ಎರಡು ಮಂತ್ರಗಳಿಂದ ವರುಣನಿಗೆ ಆಜ್ಞಾಹುತಿ ಹೋಮಿಸಿ ಸೂರ್ಯನನ್ನು ಪೂಜಿಸುವದು. ‘ಪುನರ್ಮಾಮ’ ಎಂಬ ಸೂರ್ಯಮಂತ್ರಗಳನ್ನು ಜಪಿಸುವದು. ಬುದ್ಧಿಪೂರ್ವಕ ರೇತಃಸ್ಕಲನವಾದರೆ ಅಗ್ನಿವ್ರತಪತಿಚರುವಾಗಬೇಕು. ಅನಾಧಾನಾ ನಂತರದಲ್ಲಲ್ಲದೆ ಅನ್ಯಕಾಲದಲ್ಲಿ ರೇತಃಸ್ಕಲನವಾದರೆ ಮೂರು ಸೂರ್ಯ ನಮಸ್ಕಾರ ಮಾತ್ರ. ಇಧಾಧಾನಾನಂತರ ಹವಿಸ್ಸು ದೂಷಿತವಾದರೆ ಆ ದೂಷಿತ ಸ್ಥಾನದಲ್ಲಿ ಆಜ್ಯವನ್ನು ಪ್ರತಿನಿಧಿಯನ್ನಾಗಿ ಮಾಡಿ ಯಾಗವನ್ನು ಮುಗಿಸಿ, ದುಷ್ಟವಾದ ಹವಿಸ್ಸನ್ನು ಜಲದಲ್ಲಿ ಚಲ್ಲಿ ಅನ್ನಾಧಾನ ಮೊದಲಾದವುಗಳನ್ನು ಮಾಡತಕ್ಕದ್ದು, ಆ ದೇವತಾಕವಾದ ಪುನರ್ಯಾಗ ಮಾಡುವದು. ಇಧ್ಯಾಧಾನಕ್ಕಿಂತ ಮೊದಲು ಹವಿಸ್ಸು ದೂಷಿತವಾದಲ್ಲಿ ಆ ದೇವತಾಕವಾದ ಹವಿಸ್ಸನ್ನು ಪುನಃ ಉತ್ಪನ್ನ ಮಾಡಿ ಯಾಗಮಾಡತಕ್ಕದ್ದು. ಸ್ಟಿಷ್ಟಕೃತ್ ಸಲುವಾಗಿ ಇಟ್ಟ ಹವಿಸ್ಸು ದೂಷಿತವಾದಲ್ಲಿ ಆಜ್ಯದಿಂದ ಸ್ವಿಕೃದ್ಯೋಮ ಮಾಡತಕ್ಕದ್ದು. ಅಂಗಗಳಾದ ಹವಿಸ್ಸು ದೂಷಿತವಾದರೆ ಆ ಆಜ್ಯವನ್ನು ಪುನಃ ಉತ್ಪಾದಿಸತಕ್ಕದ್ದು. ಹವಿರ್ದೊಷಗಳಿಗೆ ಕಾರಣ ಹೇಗೆಂದರೆ ಕಳಚಿಬಿದ್ದ ಉಗುರು, ಕೇಶ, ಕೀಟ, ರಕ್ತ, ಅಸ್ಥಿ, ಮಲ, ಮೂತ್ರ, ಸಿಂಬಳ, ಹೇಸಿಗೆ ಇವುಗಳ ಸ್ಪರ್ಶವಾದರೆ, ಬೆಕ್ಕು, ಮುಂಗಿಲಿ, ಕಾಗೆಗಳು ಮುಟ್ಟಿದರೆ, ಎಂಜಲು ಬೆವರು, ಮೂಗಿನ ಸಿಂಬಳ, ಕಣ್ಣೀರು, ಕಿವಿಯ ಕುಗ್ಗೆಗಳ ಸ್ಪರ್ಶವಾದರೆ ಹಡೆದವಳು, ರಜಸ್ವಲೆ, ಚಾಂಡಾಲ ಇವರ ಸ್ಪರ್ಶವಾದರೆ ಅಥವಾ ದೃಷ್ಟಿ ಬಿದ್ದರೆ ಇತ್ಯಾದಿ ಸಂಪರ್ಕವಾದರೆ ಹವಿಸ್ಸು ದೂಷಿತವಾಗುವದೆಂದು ತಿಳಿಯುವದು. ದೇವತಾ, ಮಂತ್ರ, ಹವಿಸ್ಸು ಇವು ವ್ಯತ್ಯಾಸವಾದರೆ “ಯದ್ಯೋದೇವಾ” ಮಂತ್ರದಿಂದ ಮರುದ್ದೇವತೆಗಳಿಗೆ ಆಜ್ಞಾಹುತಿಗಳಿಂದ ಹೋಮಿಸುವದು. ಹವಿಸ್ಸು ಪೂರ್ಣ ಸುಟ್ಟು ಹೋದರೆ ಆ ಹವಿಸ್ಸನ್ನುತ್ಪಾದಿಸಿ ಅದೇ ಯಾಗವನ್ನು ಮಾಡತಕ್ಕದ್ದು. ಹೊರತು ಪುನರ್ಯಾಗ ಮಾಡತಕ್ಕದ್ದಿಲ್ಲ. ನಿಮಿತ್ತ ವಿಶೇಷದಿಂದ ಪ್ರಾಯಶ್ಚಿತ್ತ ವಿಶೇಷವು ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ಚರುವು ಒಕ್ಕಿದರೆ (ಹೊರಚೆಲ್ಲಿದರೆ) ಕ್ರಮದಿಂದ “ಅಗ್ನಯೇ ಯಮಾಯ ಸೋಯಮಾ” ಹೀಗೆ ಹೋಮಿಸುವದು. ಎಲ್ಲ ಕಡೆಗೂ ಚೆಲ್ಲಿದರೆ ಆ ನಾಲ್ಕು ದೇವತೆಗಳಿಗೆ ಹೋಮಿಸುವದು. ವಿದಿಕ್ಕುಗಳಲ್ಲಿ ಚೆಲ್ಲಿದರೆ ವ್ಯಾಹೃತಿಯಿಂದ ಹೋಮಿಸುವದು. (ಚರುಪ್ರಾಯಶ್ಚಿತ್ತ) ಚರುವನ್ನು “ಆಪ್ಯಾಯಸ್ವ ಸಂತೇ ಪಯಾಂಸಿ’ ಈ ಎರಡು ಮಂತ್ರಗಳನ್ನು ಹೇಳಿ ತುಪ್ಪವನ್ನು ಸಿಂಪಡಿಸುವದು. ಕೆಲವರು ಅಗ್ನಿಯಲ್ಲಿ ‘ಮಿಂದಾಹುತಿ’ ಗಳನ್ನು ಹೋಮಿಸಬೇಕೆನ್ನುವರು. ತನ್ನ ಗ್ರಹಾಗಿಗೆ ಅನ್ಯಗ್ರಹಾಗಿ ಸಂಪರ್ಕವಾದರೆ ಆ ಇಬ್ಬರೂ ಯಜಮಾನರು ಒಂದೇ ಆವರ್ತಿ ಅಗ್ನಿಸಮಾರೋಪಣಮಾಡಿ ಪುನಃ ಪ್ರವರೋಹಣ ಮಾಡಿ ೩೨೪ ಧರ್ಮಸಿಂಧು “ಅಗ್ನಯೇ ವಿವಿಚಯೇ” ಎಂಬ ಚರುವನ್ನು ಮಾಡತಕ್ಕದ್ದು. ಶವಾಗಿ ಸಂಸರ್ಗವಾದರೆ “ಅಗ್ನಯೇ ಶುಚಯೇ” ಎಂಬ ಚರುವು ಪಚನಾಗಿ ಸಂಸರ್ಗವಾದಲ್ಲಿ “ಸಂವರ್ಗಾಯಾಗ್ನಯೇ ಎಂದು ಚರುವು. ಎಲ್ಲವುಗಳಿಂದಲೂ ಸಂಸರ್ಗವಾದರೆ ಸಮಾರೋಪ, ಪ್ರತ್ಯವರೋಹದ ನಂತರ ಚರುವು. ತನ್ನಿಂದ ತಾನೇ ಅಗ್ನಿಯು ಪ್ರಜ್ವಲಿಸಿದರೆ ‘ಉದ್ದೀಪ್ಯಪ್ಪ ಮಾನೋಹಿಗುಂಸೀರ್ಜಾತವೇದೋ ಗಾಮಶ್ಚಂ ಪುರುಷಂ ಜಗತ್) ಅಬಿಭ್ರರಗ್ನ ಆಗಹಿಯಾಮಾ ಪರಿಪಾತಯ’ ಹೀಗೆ ಎರಡು ಮಂತ್ರಗಳಿಂದ ಎರಡು ಸಮಿಧಗಳನ್ನು ಅಗ್ನಿಯಲ್ಲಿ ಹೋಮಿಸುವದು. ಸರ್ವತ್ರ ವಿಧಾನದಲ್ಲಿ ತಪ್ಪಿದರೆ ಸಾಂಗತಾಸಿದ್ಧಿಗಾಗಿ ಸರ್ವಪ್ರಾಯಶ್ಚಿತ್ತ ಹೋಮವನ್ನು ಮಾಡತಕ್ಕದ್ದು. ಮನೆಯು ಸುಟ್ಟರೆ ‘ಅಗ್ನಯೇ ಕಾಮವತೇ’ ಎಂದು ಚರುವಾಗಬೇಕು. ಹೀಗೆ ಅನೇಕ ಪ್ರಾಯಶ್ಚಿತ್ತಗಳು ಬಹ್ಮಚ ಬ್ರಾಹ್ಮಣಾದಿಗಳಲ್ಲಿ ಹೇಳಲ್ಪಟ್ಟಿವೆ. ಅವುಗಳಿಂದ ತಿಳಿಯತಕ್ಕದ್ದು, ಪ್ರಾಯಶ್ಚಿತ್ತವನ್ನು ಹೇಳದೆ ಇರುವಲ್ಲಿ ‘ಸರ್ವಪ್ರಾಯಶ್ಚಿತ್ತ’ವನ್ನು ಹೋಮಿಸುವದು. ‘ಭೂರ್ಭುವಃಸ್ವಾಹಾ’ ಈ ಆಜ್ಞಾಹುತಿಗ ‘ಸರ್ವಪ್ರಾಯಶ್ಚಿತ್ತ’ವೆನ್ನುವರು. ಆಗುಪಘಾತ ನಿಮಿತ್ತಗಳು ನಾಯಿ, ಹಂದಿ, ಕತ್ತೆ, ಕಾಗೆ, ನರಿ, ಮಂಗ, ಶೂದ್ರ, ಚಂಡಾಲ, ಪತಿತ, ಶವ, ಹಡೆದವಳು, ರಜಸ್ವಲೆ ಇವರಿಂದ ಮತ್ತು ಮಲ, ಮೂತ್ರ, ರೇತಸ್ಸು, ಕಣ್ಣೀರು, ಲಸಿಕೆ, ಕಫ, ರಕ್ತ, ಅಸ್ಥಿ, ಮಾಂಸ ಮೊದಲಾದ ಅಶುಚಿವಸ್ತುಗಳಿಂದ ಸಮಾರೋಪಮಾಡಿದ ಅರಣಿಗೆ ಸ್ಪರ್ಶವಾದರೆ ಅಥವಾ ಅಗ್ನಿಗೆ ಸ್ಪರ್ಶವಾದರೆ ಅಗ್ನಿಯು ನಷ್ಟವಾಗುವದು. ಅರಣಿಯಲ್ಲಿಯ ಅಗ್ನಿಯು ನಷ್ಟವಾದರೆ “ಪುನರಾಧೇಯ"ವನ್ನು ಮಾಡಬೇಕು. ಅಗ್ನಿಗೆ ಸ್ಪರ್ಶವಾದರೆ “ಪುನರಾಧಾನ ಮಾಡಬೇಕು. ಇಲ್ಲವೆ “ಓಂ ಪುನಸ್ಸಾದಿತ್ಯಾ ರುದ್ರಾವಸವ ಸಮಿಂಧತಾಂ ಪುನಬ್ರ್ರಹ್ಮಾ ವಸುನೀಥಯತ್ನ ಘತೇನತ್ವಂ ತನುವೋ ವರ್ಧಯಸ್ವ ಸತ್ಯಾಸಂತು ಯಜಮಾನಸ್ಯ ಕಾಮಾಃ ಸ್ವಾಹಾ| ಆದಿತ್ಯರುದ್ರವಸುಬ್ರಹ್ಮ ಇದಂ ನಮಮ” ಹೀಗೆ ಹೇಳಿ ಒಂದು ಸಮಿಧವನ್ನು ಹೋಮಿಸುವದು; ಅಥವಾ ಸೃವೆಯಿಂದ, ಆಜ್ಯಾಹುತಿಯಿಂದ ಹೋಮಿಸುವದು. ನೀರಿನಿಂದ ಅಗ್ನಿಗೆ ಉಪಘಾತವಾದಾಗಲೂ ಹೀಗೆಯೇ ಮಾಡಬೇಕು. ಸ್ವಕೀಯನು ಜೀವಿಸಿರುವಾಗ"ಮೃತನಾದನು” ಎಂಬ ಶಬ್ದಶ್ರವಣವಾದಾಗ “ಅಗ್ನಯೇ ಸುರಭಿಮತ” ಎಂದು ಚರು ಮಾಡುವದು; ಅಥವಾ ಪೂರ್ಣಾಹುತಿ ಮಾಡುವದು. ಪ್ರಧಾನಾಹುತಿಗಳಿಗೆ ಸ್ಪಷ್ಟಕೃತ್ತಿನ ಸ್ಪರ್ಶವಾದರೆ “ಸರ್ವಪ್ರಾಯಶ್ಚಿತ್ತ"ವನ್ನು ಹೋಮಿಸಬೇಕು. ಪಿಂಡ ಪಿತೃಯಜ್ಞದಲ್ಲಿ “ಅತಿಪ್ರಣೀತ"ವೆಂಬ ಅಗ್ನಿಯ ನಾಶವಾದರೆ ಹೋಮವಿಲ್ಲದಿದ್ದಲ್ಲಿ ಸರ್ವಪ್ರಾಯಶ್ಚಿತ್ತ ಹೋಮವು ಹೋಮ ಮಾಡುವದಿದ್ದಲ್ಲಿ ಪುನಃ “ಪ್ರಣಯನ ಮಾಡುವದು. ಆಪಸ್ತಂಬರಿಗೆ ಪ್ರಾಯಶ್ಚಿತ್ತ ಮುಗಿದಮೇಲೆ ಪ್ರಣಯನ ಮಾಡುವದು ನಿತ್ಯವೇ. ಪಿಂಡಪಿತೃಯಜ್ಞ ಲೋಪವಾದಲ್ಲಿ “ವೈಶ್ವಾನರ ಚರು"ವಾಗಬೇಕು ಅಥವಾ ಸಪ್ತಹೋತ್ರ ವೆಂಬ ಹೆಸರಿನ “ಮಹಾಹವಿರ್ಯೋತಾ” ಇತ್ಯಾದಿ ಮಂತ್ರಗಳಿಂದ ಪೂರ್ಣಾಹುತಿಯನ್ನು ಹೋಮಿಸಬೇಕು. ಶ್ರವಣ ಕರ್ಮ, ಸರ್ವಲಿ, ಆಶ್ಚಯುಜಿ, ಆಗ್ರಮಣ, ಪ್ರತ್ಯವರೋಹಣ ಈ ಕರ್ಮಗಳಲ್ಲಿ ಯಾವವಾದರೊಂದು ಲೋಪವಾದಲ್ಲಿ “ಪ್ರಾಜಾಪತ್ಯಕೃತ್ಯ"ವಾಗಬೇಕು. ಆಶ್ರಯಣಮಾಡದೆ ನವಾನ್ನ ಭಕ್ಷಣ ಮಾಡಿದಲ್ಲಿ ‘ಅಗ್ನಯೇ ವೈಶ್ವಾನರಾಯ’ ಎಂದು ಚರುವು, ಅಷ್ಟಕಾಲೋಪವಾದರೆ ಪರಿಚ್ಛೇದ - ೩ ಪೂರ್ವಾರ್ಧ ೩೨೫ ಉಪವಾಸವು ಪೂರ್ವದುಃಶ್ರಾದ್ಧ ಲೋಪವಾದರೂ ಉಪವಾಸವೇ. ಅಥವಾ ಒಂದು ಬ್ರಾಹ್ಮಣಭೋಜನ ಮಾಡಿಸುವದು. ‘ಅನ್ನಷ್ಟಕ್ಕೆ ಲೋಪವಾದರೆ “ಏಭಿರ್ದುಭಿಃಸುಮನಾ ವಿಭಿರಿಂದುಭಿಃ’ ಈ ಮಂತ್ರಗಳನ್ನು ನೂರಾವರ್ತಿ ಜಪಿಸಬೇಕು. ಸರ್ವತ್ರ ಚರುವಿನ ಬಗ್ಗೆ ಪೂರ್ಣಾಹುತಿಯು, ದರ್ಶಪೂರ್ಣಮಾಸಗಳ ಪ್ರಾರಂಭವಾಗದಿದ್ದಾಗ ಆಲಸ್ಕಾದಿಗಳಿಂದ ಪೂರ್ಣಾಹುತಿ ವಿಧಾನಮಾಡುವಲ್ಲಿಯಾದರೋ ಯಾಗಕ್ಕೆ ಬೇಕಾದಷ್ಟು ಭತ್ತ, ತುಪ್ಪವನ್ನು ದಾನಮಾಡಬೇಕೆಂದು ‘ಗೃಹ್ಯಾಗ್ನಿಸಾರ’ದಲ್ಲಿ ಹೇಳಿದೆ. ನಿಷಿದ್ದ ದಿನಗಳಲ್ಲಿ ಪತ್ನಿಗಮನಮಾಡಿದರೆ, ಯಾಗಕ್ಕೆ ಅನರ್ಹರಾದವರಿಗೆ ಯಾಗಮಾಡಿಸಿದರೆ, ಬೆಳ್ಳುಳ್ಳಿ, ವೇಶ್ಯಾನ್ನ ಮೊದಲಾದ ಅಭೋಜ್ಯವಾದದ್ದನ್ನು ಭುಂಜಿಸಿದರೆ, ನಿಷಿದ್ಧವಾದ ವಸ್ತುವನ್ನು ಪ್ರತಿಗ್ರಹಿಸಿದರೆ “ಪುನರ್ಮಾಂದ್ರಿಯಂ, ಇಮೇಯೇಧಿಷ್ಟಾಸ:” ಹೀಗೆ ಎರಡುಮಂತ್ರಗಳಿಂದ ಆಜ್ಯವನ್ನು ಹೋಮಿಸಬೇಕು. ಅಥವಾ ಸಮಿಧಹೋಮ ಇಲ್ಲವಾದರೆ ಈ ಮಂತ್ರಜಪ ಮಾಡಬೇಕು. ಮನೆಯ ಮೇಲೆ ಪಾರಿವಾಳವು ಕುಳಿತರ “ದೇವಾಃಕಪೋತ” ಎಂಬ ಐದು ಮಂತ್ರಯುತವಾದ ಸೂಕ್ತವನ್ನು ಜಪಿಸಬೇಕು. ಅಥವಾ ಪ್ರತಿಮಂತ್ರದಿಂದ ಪಾಕತಂತ್ರದಿಂದ ದುಃಸ್ವಪ್ನ ದರ್ಶನವಾದರೆ ಆಜ್ಯ ಹೋಮ ಮಾಡಬೇಕು. ‘ಯೋಮೇರಾಜ ಸುಜೋವಾ’ ಎಂಬ ಮಂತ್ರದಿಂದ ಸೂರ್ಯೋಪಸ್ಥಾನ ಮಾಡಬೇಕು. ಅತ್ಯಂತ ರೋಗಪೀಡಿತನಾದಾಗ ಅಥವಾ ಕ್ಷಯ ರೋಗವಾದಾಗ ‘ಮುಂಚಾಮಿತ್ವಾ’ ಎಂಬ ಸೂಕ್ತದಿಂದ ಪ್ರತಿಮಂತ್ರದಿಂದ ಚರುಹೋಮ ಮಾಡಬೇಕು. “ಯುಕ್ತನಾ ಶಾಯೇದಂ ನಮಮ” ಎಂದು ಐದು ಆಹುತಿಗಳಲ್ಲೂ ತ್ಯಾಗವನ್ನು ಹೇಳಬೇಕು. ಆರನೇ ಆಹುತಿಯು ‘ಸ್ಪಿಷ್ಟಕೃತ್’ ಎಂದು ತ್ಯಾಗವು. ಪ್ರೋಕ್ಷಣೀ, ಪ್ರಣೀತಾ ಪಾತ್ರೆಯಲ್ಲಿರುವ ಜಲವು ಸೋರಿದರೆ ಅಥವಾ ಚಲ್ಲಿದರ “ಆಪೋಹಿಷ್ಠಾ” ಮಂತ್ರದಿಂದ ಪುನಃ ನೀರನ್ನು ತುಂಬಬೇಕು. “ತತಂಮ ಆಪಸ್ತದುತಾಯತೇ ಈ ಮಂತ್ರದಿಂದ ಆಜ್ಞಾಹುತಿ ಹೋಮಿಸುವದು. ಇಧಾಧಾನ ಲೋಪವಾದಲ್ಲಿ ಅದು ಆಜ್ಯಭಾಗದನಂತರ ಸ್ಮರಣೆಯಲ್ಲಿ ಬಂದರೆ ವಿಪರ್ಯಾಸಪ್ರಾಯಶ್ಚಿತ್ತವನ್ನು ಮಾಡಿ ಮತ್ತು ಇಮ್ಮಾಧಾನಮಾಡಿ ಪ್ರಧಾನಯಾಗ ಮಾಡಬೇಕು. ಪ್ರಧಾನಯಾಗಾನಂತರ ಸ್ಮರಣೆಗೆ ಬಂದರೆ ಅಗ್ನಿಸಮಿಂಧನ ರೂಪದದ್ವಾರವೇ ಅಭಾವವಾಗುವದರಿಂದ ಅದು ಲೋಪವೇ ಎಂದಾಗುವದು. ಪ್ರಾಯಶ್ಚಿತ್ತದಿಂದಲೇ ಅದನ್ನು ಸಿದ್ಧಿಸುವದು. ಬೇರೆ-ಬೇರೆ ಅಂಗಕರ್ಮಗಳಲ್ಲಿಯೂ ಹೀಗೆಂದೇ ತಿಳಿಯಬೇಕು. ಅಗ್ನಿ ನಾಶಕಗಳು ದಂಪತಿಗಳಲ್ಲೊಬ್ಬರು ಉದಯಾಸ್ತ ಕಾಲದಲ್ಲಿ ಅಗ್ನಿಸಮೀಪದಲ್ಲಿರಲೇ ಬೇಕು. ದಂಪತಿಗಳಿಬ್ಬರೂ ಮನೆಯ, ಗ್ರಾಮದ ಗಡಿಯನ್ನು ಅಥವಾ ನದಿಯನ್ನು ದಾಟಿ ಹೋಮಕಾಲದಲ್ಲೂ ಹೊರಗೇ ಉಳಿದರೆ “ಪುನರಾಧಾನ” ಮಾಡಬೇಕು. ಪೂರ್ಣ ಅಗ್ನಿಯನ್ನು ಹೊರಗೊಯ್ಯುವಾಗ ಮೂವತ್ತಾರು ಅಂಗುಲ ಅಳತೆಯ ವರೆಗೆ ಉಸಿರುಬಿಟ್ಟರೆ ಅಗ್ನಿಯು ನಷ್ಟವಾಗುವದು. ಕರ್ಮಾರ್ಥವಾಗಿ ಅಗ್ನಿಯನ್ನೊಯ್ಯುವಾಗ ಉಸಿರನ್ನು ಬಿಗಿಹಿಡಿಯಬೇಕೆಂದೇನಿಲ್ಲ. ಅಗ್ನಿಯನ್ನು ಆತ್ಮಸಮಾರೋಪಣ ಮಾಡಿದಾಗ ನೀರಿನಲ್ಲಿ ಮುಳುಗಿದರೆ, ಮೈಥುನ ಮಾಡಿದರೆ, ಶೂದ್ರಾದಿಗಳನ್ನು ಮುಟ್ಟಿಕೊಂಡರ “ಅಗ್ನಿನಾಶ” ವಾಗುವದು. ಅನೇಕ ಪತ್ನಿಯರಿದ್ದರೂ ೩೨೬ ಧರ್ಮಸಿಂಧು ಅವರಲ್ಲೊಬ್ಬರು ಹೋಮಕಾಲದಲ್ಲಿ ಗಡಿದಾಟಿ ಹೋದರೂ ಅಗ್ನಿನಾಶವು. ಆದರೆ ಜೇಷ್ಠಪತ್ನಿಯು ಅಗ್ನಿಸಮೀಪದಲ್ಲಿದ್ದು, ಕನಿಷ್ಠಳೊಡನೆ ಪತಿಯು ಪ್ರವಾಸಮಾಡಿದಲ್ಲಿ ದೋಷವಿಲ್ಲ; ಮತ್ತು ದಂಪತಿಗಳಿಬ್ಬರೂ ಗ್ರಾಮಗಡಿ ಮೊದಲಾದವುಗಳನ್ನುಲ್ಲಂಘಿಸಿ ಹೋಗಿ ಪುನಃ ಹೋಮಕಾಲದ ಒಳಗೇ ಮನೆಗೆ ಬಂದಲ್ಲಿ ದೋಷವಿಲ್ಲ. ಯಜಮಾನನು ಅಗ್ನಿಸಮೀಪದಲ್ಲಿದ್ದರೂ ಹೋಮಕಾಲದಲ್ಲಿ ಪತ್ನಿಯು ಗ್ರಾಮಾಂತರದಲ್ಲಿದ್ದರೆ “ಪುನರಾಧಾನ"ವಾಗಬೇಕೆಂದು ಹೇಳುತ್ತಾರೆ. ಪ್ರವಾಸದಲ್ಲಿ ನದ್ಯಾದಿಗಳನ್ನು ದಾಟುವ ಪ್ರಸಂಗದಲ್ಲಿ ಸಮಾರೋಪಣಮಾಡಿದ ಅಗ್ನಿಯನ್ನು ದಂಪತಿಗಳಲ್ಲೊಬ್ಬರು ಮುಟ್ಟಿಕೊಂಡಿರದಿದ್ದರೆ ಪುನರಾಧಾನವಾಗಬೇಕು. ಅಗ್ನಿಯನ್ನು ಬಿಟ್ಟು ನೂರುಯೋಜನ ದೂರ ಹೋದರೆ ಅಥವಾ ವರ್ಷವಿಡೀ ಸ್ವತಃ ಹೋಮ ಮಾಡದಿದ್ದರೆ ಅಗ್ನಿನಾಶವಾಗುವದು. ಆಗ ಪುನರಾಧಾನ ಅಥವಾ ಪವಿಷ್ಟಿಯನ್ನು ಮಾಡಬೇಕು. ಅಗ್ನಿಗಳನ್ನು ಬಿಟ್ಟು ಪತ್ನಿಯು ಸಮುದ್ರಗಾಮಿನಿಯಾದ ನದಿಯನ್ನು ದಾಟಿದರೆ ಅಗ್ನಿಯು ನಷ್ಟವಾಗುವದೆಂದು ಶ್ರುತಿವಾಕ್ಯವಿದೆ. ಅಗ್ನಿಸಮೀಪದಲ್ಲಿ ಪತಿಯಿದ್ದು ಅಥವಾ ಬೇರೆ ಪತ್ನಿಯಿದ್ದಲ್ಲಿ ಆಗ ಒಂದು ಪತ್ನಿಯು ನದಿಯನ್ನುಲ್ಲಂಘಿಸಿದರೂ ದೋಷವಿಲ್ಲ. ಪತಿಯು ಪ್ರವಾಸದಲ್ಲಿರುವಾಗ ಪತ್ನಿಯು ಅಗ್ನಿಗಳಿಂದ ಕೂಡಿ ಗಡಿಯನ್ನು ದಾಟಿದರೆ ಅಗ್ನಿನಾಶವಾಗುವದು. ಪತ್ನಿಯು ಪ್ರವಾಸದಲ್ಲಿರುವಾಗ ಅಗ್ನಿಸಹಿತನಾಗಿ ಪತಿಯು ಗಡಿದಾಟಿದರೂ ಅಗ್ನಿನಾಶವು, ನೀರಿನಿಂದ ಅಗ್ನಿಯು ನಂದಿಹೋದರೆ ಪುನರಾಧೇಯವಾಗಬೇಕು. ಅಗ್ನಿಯು ನಷ್ಟವಾದರೆ ಯಜಮಾನನು ಅಗ್ನಿಯ ಉಪಸ್ಥಾನಮಾಡದ ಗಡಿಯನ್ನುಲ್ಲಂಘಿಸಿದರೆ ಅದನ್ನೇ “ಪುನರಾಧೇಯ” ಮಾಡತಕ್ಕದ್ದು. ಸಮಾರೋಪಮಾಡದ ಶಮ್ಯಾಪರಾಸಕ್ಕಿಂತ ಮುಂದೆ ಅಗ್ನಿಯನ್ನು ತೆಗೆದುಕೊಂಡು ಹೋದರೆ ಅಗ್ನಿಯು ನಷ್ಟವಾಗುವದು. ಸ್ತ್ರೀಯು ರಜಸ್ವಲೆಯಾಗಿರುವಾಗ ಅಥವಾ ಜಾತಾಶೌಚ, ಮೃತಾಶೌಚವಿರುವಾಗ ಅಗ್ನಿಯನ್ನು ಧರಿಸಿದವನು ಪ್ರವಾಸಮಾಡಿದರೆ ‘ಪುನರಾಧೇಯ’ವನ್ನು ಮಾಡಬೇಕು. ಬಹುಪತ್ನಿಯರಿರುವಾಗ ಒಬ್ಬಳು ರಜಸ್ವಲೆಯಾದರೂ ಪ್ರವಾಸಮಾಡಬಾರದು. ಕಾರಣದ ದಿನದಿಂದ ಹನ್ನೊಂದು ಅಥವಾ ನಾಲ್ಕನೇ ದಿನದಲ್ಲಿ ಪ್ರವಾಸಕ್ಕೆ ಇಚ್ಛಮಾಡತಕ್ಕದ್ದು. ಅಗ್ನಿಯ ಹೋಮದ ದಿನ ಮತ್ತು ಪರ್ವ ದಿನಗಳಲ್ಲಿ ಪ್ರಯಾಣಮಾಡಬಾರದು. ಎರಡು ಹೋಮಗಳ ಲೋಪವಾದಲ್ಲಿ ಇಲ್ಲವೆ ದರ್ಶಪೂರ್ಣಮಾಸ, ಸ್ವಾಲೀಪಾಕಗಳ ಲೋಪವಾದಲ್ಲಿ “ಪುನರಾಧೇಯ"ವಾಗಬೇಕು ಎಂದು ಆಪಸ್ತಂಬಾವಿ ಶಾಖೆಯವರು ಹೇಳುವರು. ಜನನಾಶೌಚ, ಮೃತಾಶೌಚವಿರುವಾಗ ಪಾಕಾಗ್ನಿಯಿಂದ ಪಾಠಮಾಡತಕ್ಕದ್ದು, ಪಾಕಾಗ್ನಿಯಲ್ಲಿ ಪಾಕಮಾಡದೆ ಒಂದು ರಾತ್ರಿ ಹಾಗೆಯೇ ಇದ್ದರೆ ಪುನರಾಧಾನ ಮಾಡತಕ್ಕದ್ದು ಎಂದು ಕಾತ್ಕಾಯನಾದಿ ಶಾಖೆಗಳಲ್ಲಿ ಹೇಳಿದೆ. ಸ್ತ್ರೀಯು ಪ್ರವಾಸಮಾಡಿದರೆ ಪುನರಾಧಾನ ಮಾಡತಕ್ಕದ್ದು ಎಂಬುದು ಕರ್ತನಿಗೆ ಒಬ್ಬಳೇ ಹೆಂಡತಿಯಾಗಿದ್ದಾಗ ಹೇಳಿದ್ದು. ಅನೇಕ ಪತ್ನಿಯರಿರುವವನು ಹಿರೇಹೆಂಡತಿಯು ಪ್ರವಾಸಕ್ಕೆ ಹೋದಲ್ಲಿ ಪುನರಾಧಾನ ಮಾಡತಕ್ಕದ್ದು ಹೀಗೆ ಕೆಲ ಗ್ರಂಥಕಾರರು ಹೇಳುವರು. ಈ ಹಿಂದೆ ಹೇಳಿದ ನಿಮಿತ್ತಗಳುಂಟಾದಲ್ಲಿ ಮೊದಲಿನ ಅಗ್ನಿಯನ್ನು ಬಿಟ್ಟು ಬೇರೆ ಅಗ್ನಿಯನ್ನಾಧಾನಮಾಡತಕ್ಕದ್ದು. “ಸಾಕಾದುಪಕಾರಕಗಳಾದ ಪ್ರಯಾಣಾದಿ ಅಂಗಕಾರ್ಯಗಳ ಲೋಪವಾದಲ್ಲಿ, ಕರ್ಮಸಮಾಪ್ತಿಯ ಮೊದಲು ಲೋಪವಾದಲ್ಲಿ ಪ್ರಾಯಶ್ಚಿತ್ತ ಮಾಡಿ ಆ ಅಂಗಕರ್ಮಗಳನ್ನು ಮಾಡತಕ್ಕದ್ದು. ಕರ್ಮಸಮಾಪ್ತಿಯ ನಂತರವಾದರೆ ಪರಿಚ್ಛೇದ - ೩ ಪೂರ್ವಾರ್ಧ £92 ಪ್ರಾಯಶ್ಚಿತ್ತ ಮಾತ್ರ ಮಾಡತಕ್ಕದ್ದು. ಹೊರತು ಪುನಃ ಆ ಅಂಗಕರ್ಮಗಳನ್ನು ಮಾಡತಕ್ಕದ್ದಿಲ್ಲ. ಪರಂಪರೆಯಿಂದ (ಸಾಕ್ಷಾತ್ ಅಲ್ಲದೆ) ಉಪಕಾರಗಳಾದ ದ್ರವ್ಯಸಂಸ್ಕಾರಾದಿ ಅಂಗಕರ್ಮ ಲೋಪವಾದಲ್ಲಿ ಪ್ರಧಾನಕ್ಕಿಂತ ಮೊದಲು ಅದನ್ನು ಮಾಡತಕ್ಕದ್ದು. ಪ್ರಧಾನವಾದ ನಂತರವಾದರೆ ಪ್ರಾಯಶ್ಚಿತ್ತ ಮಾತ್ರ ಹೊರತು ಆವೃತ್ತಿಯಿಲ್ಲ. ಮೃತಳಾದ ಪತ್ನಿಯ ದಾಹಕ್ಕೋಸ್ಕರ ಅರ್ಧ ಅಗ್ನಿಯನ್ನು ಕೊಟ್ಟು ಉಳಿದ ಅಗ್ನಿಯಲ್ಲಿ ಸಾಯಂ ಪ್ರಾರ್ತಮ, ಸ್ಥಾಲೀಪಾಕ, ಆಗ್ರಯಣಗಳನ್ನು ಮಾಡತಕ್ಕದ್ದು. “ಕೌಸ್ತುಭ"ದಲ್ಲಿ ಅರ್ಧಾಗ್ನಿಯನ್ನು ಮೃತಳಾದ ಹೆಂಡತಿಗೆ ಕೊಡುವದು. ಇತ್ಯಾದಿಗಳನ್ನು ಹೇಳಿ ವಿಧುರ(ಹೆಂಡತಿಯನ್ನು ಕಳೆದುಕೊಂಡವನಿಗೆ ಅಪೂರ್ವ ಆಧಾನ ರೀತಿಯನ್ನೂ, ಅದರ ವಿಚ್ಛೇದವಾದರೆ ಪುನರಾಧಾನದ ರೀತಿಯನ್ನೂ ಹೇಳಿದೆ. ಅದರಲ್ಲಿಯ ಪ್ರಧಾನಪ್ರಕಾರವು ಇದು. ಅವಶಿಷ್ಟವಾದ ಅಗ್ನಿಯ ಹೋಮಕ್ಕಿಂತ ಮೊದಲು ನಾಶವಾದ ವಿಷಯದಲ್ಲಿ ಹೇಳಿದ್ದು, ಇಲ್ಲವೆ ಶತಾಗ್ನಿಗಳಲ್ಲಿ ಪತ್ನಿಗೋಸ್ಕರ ಅರ್ಧಾಗ್ನಿಯನ್ನು ಕೊಟ್ಟು “ಉತ್ಸರ್ಗೆಷ್ಟಿ"ಯಿಂದ ಮೊದಲಿನ ಅಗ್ನಿಗಳನ್ನು ಪರಿತ್ಯಾಗಮಾಡಿ ಪುನರಾಧಾನಮಾಡಿ ಅಗ್ನಿಹೋತ್ರವನ್ನು ಮಾಡತಕ್ಕದ್ದು. ಹೀಗೆ ತಿಳಿಯಬೇಕು. ಅದರಂತೆ ಇಲ್ಲಿಯೂ ಉತ್ಸರ್ಗೆಷ್ಟಿಯಿಂದ ಪೂರ್ವಾಗ್ನಿಗಳ ತ್ಯಾಗಮಾಡಿದ ನಂತರ ಅಪೂರ್ವಾಧಾನವನ್ನು “ಕೌಸ್ತುಭದಲ್ಲಿ ಹೇಳಿದೆಯೆಂದು ತೋರುತ್ತದೆ. ಅರಣಿ, ಸವ ಮೊದಲಾದ ಅಗ್ನಿಸಾಧನ, ಪಾತ್ರಲಕ್ಷಣಗಳನ್ನು ಬೇರೆ ಗ್ರಂಥಗಳಿಂದ ತಿಳಿಯತಕ್ಕದ್ದು. ಈ ಎಲ್ಲ ವಿಧಾನಗಳ ಸಂಕಲ್ಪಾದಿ ಸವಿಸ್ತರ ಪ್ರಯೋಗಗಳನ್ನು “ಗೃಹ್ಯಾಗಿ ಸಾಗರ"ದಲ್ಲಿ ಹೇಳಿದೆ. ಸಾಮಾನ್ಯವಾಗಿ ಪ್ರಾಯಶ್ಚಿತ್ತಾದಿ ವಿಧಾನಗಳು ಎಲ್ಲ ಸೂತ್ರಗಳಲ್ಲೂ ಸಮಾನಗಳೇ ಆಗಿವೆ. ಕೆಲವಿಷಯಗಳಲ್ಲಿ ಮಾತ್ರ ವಿಶೇಷವಿದೆ. ಋಗೈದಿಗಳಿಗೆ ವಿವಾಹ ಹೋಮವನ್ನು ಗೃಹಪ್ರವೇಶನೀಯ ಹೋಮದೊಡನೆ ಸಮಾನತಂತ್ರದಿಂದ ಮಾಡುವದಿದೆ. ಅವರಿಗೆ ಅದೇ ಪುನರಾಧಾನವು ಅನ್ಯರಿಗೆ ವಿವಾಹಹೋಮಕ್ಕಿಂತ ಪ್ರತ್ಯೇಕವಾಗಿ ಪುನರಾಧಾನ ಹೇಳಿದೆ. ಇದೇ ವಿಶೇಷವು. ಕಾತ್ಯಾಯನರ ಸಲುವಾಗಿ ವಿಶೇಷವು ಕಾತ್ಯಾಯನರು ಬೆಲ್ಲ, ಗೋರಸ ಮೊದಲಾದವುಗಳ ಹೊರತಾದ ಆಹಾರ ಪದಾರ್ಥಗಳನ್ನು ಅನ್ಯರ ಅಗ್ನಿಯಲ್ಲಿ ಪಕ್ವ ಮಾಡಿ ತಿನ್ನಬಾರದು. ಅಗ್ನಿಹೋತ್ರಿಗಳ ಈ ಧರ್ಮವು ಯಾಜ್ಞಕರಿಗೆ ಮಾನ್ಯವಾದದ್ದು. ಕಬ್ಬು ಮತ್ತು ಹಾಲು ಇವುಗಳಿಂದ ತಯಾರಿಸಿದ ವಸ್ತು ಮತ್ತು ಹುರಿದ ಜವೆ ಇವುಗಳನ್ನು ಬೇರೆಯವರ ಅಗ್ನಿಯಲ್ಲಿ ಬೇಯಿಸಿದ್ದರೂ ತಿನ್ನಬಹುದು. ಪ್ರವಾಸದಲ್ಲಿದ್ದವರಿಗೆ ಇದು “ಸ್ವಯಂಪಾಕ’ವೆಂದೇ ಭಾವಿಸಲ್ಪಡತಕ್ಕದ್ದು. ಕೇವಲ ಲೌಕಿಕಾಗ್ನಿಯಲ್ಲಿಯಾದರೂ ಜಲಸಂಪರ್ಕವಿಲ್ಲದ ಅನ್ನವು ಫಲಗಳಿಗೆ ಸಮಾನವೆಂದು ತಿಳಿಯತಕ್ಕದ್ದು. ಅದರಿಂದ ಅನ್ನದೋಷವುಂಟಾಗುವದಿಲ್ಲ. ಪ್ರಾತಃಕಾಲೀನ ಹೋಮವನ್ನು ಮುಗಿಸಿ ಆ ಅಗ್ನಿಯಿಂದ ಸ್ವಲ್ಪ ಅಗ್ನಿಯನ್ನು ಒಯ್ದು ಅಡಿಗೆ ಮನೆಯಲ್ಲಿ ಪ್ರಜ್ವಲಿಸಿ ಅದರಿಂದ ಎಲ್ಲ ಪಾಠಗಳನ್ನೂ ಮಾಡುವದು. ಪುನಃ ಅದನ್ನು ಅಗ್ನಿಕುಂಡದಲ್ಲಿಟ್ಟು ಅದರಲ್ಲಿ ಹೋಮ ಮಾಡಬೇಕು. ಹೀಗೆ ಆಲಸ್ಯತನವನ್ನು ಬಿಟ್ಟು, ವೈಶ್ವದೇವಾದಿ ಕಾರ್ಯಗಳನ್ನು “ಗೃಹ್ಯಾಗಿ"ಯಿಂದ ಮಾಡತಕ್ಕದ್ದು, “ಬ್ರಹ್ಮಚಕಾರಿಕೆ” ಯಲ್ಲಿ ಹೇಳಿರುವದೇನೆಂದರೆ ಪ್ರತಿದಿನದಲ್ಲಿ ಪಾಕತಯಾರಿಸುವ ೩೨೮ ಧರ್ಮಸಿಂಧು ಸಲುವಾಗಿ ಗೃಹ್ಯಾಗ್ನಿಯ ಒಂದು ಬಾಜುವಿನಿಂದ ಉರಿಯುತ್ತಿರುವ ಕೊಳ್ಳಿಯನ್ನು ತೆಗೆದುಕೊಂಡು ಅದನ್ನು ಅಡಿಗೆಮನೆಗೆ ಒಯ್ದು ಅಲ್ಲಿ ಅದನ್ನು ಪ್ರಜ್ವಲಿತಮಾಡಿ ಅದರಿಂದ ಎಲ್ಲ ಪಾಕಗಳನ್ನೂ ತಯಾರಿಸಬೇಕು. ಹೀಗೆ ಪಾಕವನ್ನು ತಯಾರಿಸುವ ಅಗ್ನಿಯು “ಲೌಕಿಕಾಗ್ನಿ” ಎಂದೆನ್ನಿಸಿಕೊಳ್ಳುವದು. ಆದುದರಿಂದ ವೈಶ್ವದೇವವನ್ನು “ಗೃಹ್ಯಾಗ್ನಿ"ಯಿಂದ ಮಾಡಬೇಕು. ಇನ್ನು ಶ್ರಾದ್ಧ ಹಾಗೂ ದೊಡ್ಡ ಪ್ರಮಾಣದಲ್ಲಿ ಮಾಡುವ ಉತ್ಸವ ಇತ್ಯಾದಿಗಳಲ್ಲಿ ಪಾಕವು ತಯಾರಾಗುವ ಅಗ್ನಿಯಲ್ಲಿ ಆ ದಿನ ವೈಶ್ವದೇವ ಮಾಡುವದು. ಯಾಕೆಂದರೆ ಅದು ಕರ್ಮಾರ್ಥವಾದ್ದರಿಂದ “ಲೌಕಿಕಾಗ್ನಿ “ಎನ್ನಿಸಿಕೊಳ್ಳುವದಿಲ್ಲ. ದೀಪಹಚ್ಚುವ ಸಲುವಾಗಿ, ಧೂಪಹಾಕುವ ಸಲುವಾಗಿ ಮತ್ತು ಮೈಕಾಸುವದಕ್ಕೆ ಉಪಯೋಗಿಸುವದಕ್ಕೆ ಗೃಹ್ಯಾಗ್ನಿಯಿಂದ ತೆಗೆದುಕೊಂಡರೆ ಅವೆಲ್ಲ “ಲೌಕಿಕಾಗ್ನಿ"ಗಳೇ ಆಗುವವು. ಯಾಕೆಂದರೆ ಆ ಅಗ್ನಿಗಳು ಆಯಾಯ ಕಾರ್ಯ ಮುಗಿದ ನಂತರ ನಷ್ಟಳಾಗುವವು. (ಗ್ರಹಾಗಿತ್ವ ನಷ್ಟವಾಗುವದು) ಗೃಹ್ಯಾಗ್ನಿಯಿಂದ ಬೇರೆ ಬೇರೆ ಕಾರ್ಯಗಳಿಗೆ ಅನೇಕಾರ್ಮ ತೆಗೆದು ಆಮೇಲೆ ಒಂದು ಕಿಡಿಯಾದರೂ ಶೇಷವಿದ್ದರೆ ಅದನ್ನು ಬಿಟ್ಟು ಅಗ್ನಿಗಾಗಿ ಅರಣಿಯನ್ನು ಕಡೆಯಬೇಕಿಲ್ಲ. ವೈಶ್ವದೇವ ಹೋಮಮಾಡುವ ಮೊದಲು ಅಗ್ನಿಯನ್ನು ಕಡೆಯಬಾರದು. ಪಾಕತಯಾರಿಸುವ ಸಲುವಾಗಿ ಗೃಹ್ಯಾಗ್ನಿಯಿಂದ ತೆಗೆದುಕೊಂಡ ಅಗ್ನಿಗೆ “ವಚನಾಗ್ನಿ"ಯನ್ನುವರು. ಆದ್ದರಿಂದ ಹಗಲಿನಲ್ಲಿ ಪಚನಾಗ್ನಿಯಿಂದ ಪಾಕಮಾಡಿದಲ್ಲಿ ಅದನ್ನು ಪುನರಾಧಾನ ಮಾಡತಕ್ಕದ್ದು. ಅಗ್ನಿಸಮಾರೋಪಮಾಡಿದ ಅರಣಿಗಳಲ್ಲಿ ಒಂದು ಅಥವಾ ಎರಡೂ ನಷ್ಟವಾದಲ್ಲಿ ಆಗ ಅಗ್ನಿಯ “ಆಧೇಯ” ಮಾಡತಕ್ಕದ್ದು; ಅಥವಾ ಪುನರಾಧಾನ ಮಾಡತಕ್ಕದ್ದೆಂದು ಹೇಳುವರು. ಅಗ್ನಿ ಸಮಾರೋಪ ಮಾಡಿರದ ಅರಣಿಯು ನಷ್ಟವಾದರೆ ಬೇರೆ ಹೊಸ ಅರಣಿಯನ್ನು ತಯಾರಿಸಿ ಸ್ವೀಕರಿಸುವದು. ಎರಡನೆಯದಾದ ನೂತನ ಅರಣ ಸಿಗದೆ ಅಗ್ನಿಯೂ ನಷ್ಟವಾದರೆ “ಪುನರಾಧಾನ” ಮಾಡತಕ್ಕದ್ದು. ಸಮಾರೋಪಮಾಡದ ಅರಣಿಗೆ ಶೂದ್ರ, ರಜಸ್ವಲಾ, ಅಂತ್ಯಜ, ಪತಿತ, ಅಪವಿತ್ರಗಳಾದ ಕತ್ರ ಮೊದಲಾದವುಗಳ ಸ್ಪರ್ಶವಾದರೆ ಅದನ್ನು ಬಿಟ್ಟು ಬೇರೆ ಅರಣಿಯನ್ನು ತೆಗೆದುಕೊಳ್ಳುವದು. ಸಮಾರೋಪಮಾಡಿದ ಅರಣಿಗೆ ಅವುಗಳ ಸ್ಪರ್ಶವಾದರೆ “ಪುನರಾಧೇಯ"ವಾಗತಕ್ಕದ್ದೆಂದು ಹೇಳಿದೆ. ಸಮಾರೋಪಿತವಾದ ಅರಣಿಯು ದೂಷಿತವಾದರೆ “ಭವತಂನಃಸಮ” ಎಂಬ ಮಂತ್ರದಿಂದ ಅರಣಿಯನ್ನು ನೀರಲ್ಲಿ ಚಲ್ಲುವರು. ಎರಡರಲ್ಲೊಂದು ದೂಷಿತವಾದರೆ ದೂಷಿತವಾದದ್ದನ್ನು ನೀರಿಗೆ ಹಾಕುವದು. ಒಂದನ್ನು ಹೀಗೆ ಒಗೆದ ನಂತರ ಎರಡನೇ ಅರಣಿಯು ಸಿಗುವದರೊಳಗೆ ಅಗ್ನಿ ನಷ್ಟವಾದರೆ “ಪುನರಾಧಾನ ಮಾಡತಕ್ಕದ್ದು. ಅರಣಿಯು ನಷ್ಟವಾದರೂ ಅಗ್ನಿಯಿರುವಪರ್ಯಂತ ಅದರಲ್ಲಿ ಹೋಮ ಮಾಡುವದು. ಅದು ಪೂರ್ಣನಷ್ಟವಾದಲ್ಲಿ ಪುನರಾಧಾನ ಮಾಡುವದು. ಆಗ ಒಂದು ಅರಣಿಯು ನಷ್ಟವಾಗಿದ್ದರೆ ಎರಡನೇ ಒಂದು ಅರಣಿಯನ್ನು ಸಮಂತ್ರಕವಾಗಿ ತೆಗೆದುಕೊಂಡು ಎರಡೂ ಅರಣಿಗಳನ್ನು ತುಂಡು ಮಾಡಿ ಆ ಅರಣಿಗಳನ್ನು ಕಡೆಯಬೇಕು. ಹೀಗೆ ಹೇಳುವರು. ಎರಡು ಅರಣಿಗಳಲ್ಲಿ ಯಾವದಾದರೊಂದು ದೂಷಿತವಾದರೂ ಎರಡೂ ಅರಣಿಗಳನ್ನು ತ್ಯಜಿಸಿ ಹೊಸ ಎರಡು ಅರಣಿಗಳನ್ನು ಮಾಡಿಕೊಳ್ಳುವದು ಎಂದು “ನಾರಾಯಣ ವೃತ್ತಿ ಗ್ರಂಥಕಾರರ ಅಭಿಪ್ರಾಯವು ಈ ಅರಣಿಗಳ ನಿರ್ಣಯವು ಸಾಮಾನ್ಯ ಶತ ಹಾಗೂ ಸ್ಮಾರ್ತಕರ್ಮಗಳಿಗೆ ಸಮಾನವೇ ಆಗಿದೆ. ಎಲ್ಲ ಶಾಖೆಯವರಿಗೂ ಇದುಪರಿಚ್ಛೇದ - ೩ ಪೂರ್ವಾರ್ಧ ೩೨೯ ಸಮಾನವಾದದ್ದು ಎನ್ನಬಹುದು. ಕಾತ್ಯಾಯನ ಶಾಖೆಯವರು ವೈಶ್ವದೇವ ಮತ್ತು ಸ್ವಯಂಪಾಕಗಳನ್ನು “ಲೌಕಿಕಾಗ್ನಿ"ಯಲ್ಲಿ ಮಾಡತಕ್ಕದ್ದೆನ್ನುವರು. ಮೂರುತಲೆಗಳಪರ್ಯಂತ ಯಾವ ಕುಲದಲ್ಲಿ ವೇದಾಧ್ಯಯನ ಹಾಗೂ ಅಗ್ನಿಹೋತ್ರಗಳು ನಡೆಯುವದಿಲ್ಲವೋ ಅವರು “ದುರ್ಬಾಹ್ಮಣರಾಗುವರು; ಮತ್ತು ಅವರು ಯಾವ ಸತ್ಕರ್ಮಕ್ಕೂ ಅನರ್ಹರಾಗುವರು. ಅಗ್ನಿಹೋತ್ರಕ್ಕೆ ಸಮಾನವಾದ ಧರ್ಮವು ಹಿಂದೆ ಹುಟ್ಟಿಲ್ಲ. ಮುಂದೆ ಹುಟ್ಟುವಂತಿಲ್ಲ. (ನಭೂತೋನಭವಿಷ್ಯತಿ) ಆದುದರಿಂದ ತಿಳಿದವನೂ, ಭಕ್ತಿಯುಳ್ಳವನ್ನೂ ಅಗ್ನಿಹೋತ್ರ ಧಾರಣಮಾಡಬೇಕು. ಜ್ಞಾನ ಮತ್ತು ದ್ರವ್ಯಗಳ ಕೊರತೆಯಿಂದ ಯಾವನಿಗೆ “ಶತ” ಕರ್ಮವನ್ನು ಮಾಡಲು ಶಕ್ಯವಿಲ್ಲವೋ ಆತನು ಯಥಾಶಕ್ತಿ ಸ್ಮಾರ್ತಕರ್ಮ ಮಾಡತಕ್ಕದ್ದು. ಈ ಸ್ಮಾರ್ತಕರ್ಮಗಳಿಂದಲೂ ಸದಾಚಾರ ಧರ್ಮಪ್ರಾಪ್ತಿಯಾಗುವದು. ವಿಧಿವತ್ತಾದ ವಿವಾಹ ವಿಧಿಯಿಂದ ಸ್ತ್ರೀಪರಿಗ್ರಹಮಾಡಿದವನು ಒಂದು ಕ್ಷಣವಾದರೂ “ನಿರಗ್ನಿಕ ನಾಗಿರಕೂಡದು. ಅಗ್ನಿರಹಿತವಾದ ಬ್ರಾಹ್ಮಣನು “ಪ್ರಾತ್ಯ” (ಸಂಸ್ಕಾರಹೀನನೆಂದಾಗಿ ಪತಿತನಾಗುವನು. ವಿವಾಹಾಗ್ನಿಧಾರಣಮಾಡದ ಬ್ರಾಹ್ಮಣನು ತಾನು ಗೃಹಸ್ಥನೆಂಬ ಅಭಿಮಾನದಿಂದಿರಬಹುದು. ಆದರೆ ಆತನ ಅನ್ನವನ್ನೂಟ ಮಾಡಬಾರದು. ಯಾಕೆಂದರೆ ಆತನ “ಪಾಕವು ವ್ಯರ್ಥವಾದದ್ದು. ಸುವರ್ಣಮಯವಾದ ಮೇರುಪರ್ವತ, ಸಮುದ್ರ ಸಹಿತವಾದ ಭೂಮಿಗಳ ದಾನದಿಂದ ಉಂಟಾಗುವ ಪುಣ್ಯವನ್ನು ಸಾಯಂ ಪ್ರಾತಃ ಆಗುಪಾಸನೆ ಮಾಡಿದವನ ಪುಣ್ಯಕ್ಕೆ ಹೋಲಿಸಿದಾಗ ಸರಿದೂಗುವದೋ ಇಲ್ಲವೋ ಎಂಬುದು ಸಂದೇಹ!ಅಂದರೆ ಮೇರುದಾನ ಪೃಥ್ವಿದಾನಕ್ಕಿಂತ ಮಿಗಿಲಾದದ್ದು ಎಂದಭಿಪ್ರಾಯ. ಹೀಗೆ ಹೋಮದ ಪ್ರಕರಣವನ್ನು ಹೇಳಲಾಯಿತು. ನಿತ್ಯದಾನಗಳು ಒಂದೇ ಒಂದು ದಿನವಾದರೂ ದಾನರಹಿತನಾಗಿರತಕ್ಕದ್ದಲ್ಲ. ದಾನಮಾಡದಿದ್ದ ದಿನವು “ಮನೆಯ ಒಡತಿಯು ಕಳವಾದ ದಿನ ಹೇಗೋ ಅದರಂತೆ ದುಃಖಮಾಡುವ ದಿನ"ಕ್ಕೆ ಸಮಾನವಾದದ್ದು. ಆದಕಾರಣ ತನ್ನ ಸ್ಥಿತಿಗನುಸರಿಸಿ ನಿತ್ಯದಲ್ಲೂ ಧನ, ಧಾನ್ಯಾದಿಗಳನ್ನು ದಾನಮಾಡತಕ್ಕದ್ದು. ಶಕ್ಯವಿಲ್ಲದಾಗ ಅಡಿಕೆ ಮೊದಲಾದವುಗಳನ್ನಾದರೂ ದಾನಮಾಡಬೇಕು. ನಂತರ ಗೋ ಬ್ರಾಹ್ಮಣಾದಿಗಳ ದರ್ಶನ ಮಾಡಬೇಕು. ಹೀಗೆ ಎಂಟುಭಾಗ ಮಾಡಿದ ಹಗಲಿನ ಒಂದು ಭಾಗ (ಮೂರು ಮುಕ್ಕಾಲು ಘಟಿ)ದ ಕೃತ್ಯವು ದಿನದ ಎರಡನೇ ಭಾಗದ ಕೃತ್ಯವು ಇದರಲ್ಲಿ “ವೇದಶಾಸ್ತ್ರಾಭ್ಯಾಸ ವೇದವನ್ನು ಪಠಿಸುವದು, ಕಲಿಸುವದು, ಜಪಿಸುವದು, ಚರ್ಚಿಸುವದು, ಧರ್ಮಶಾಸ್ತ್ರಾದಿಗಳನ್ನು ವಿಮರ್ಶಿಸುವದು ಇತ್ಯಾದಿಗಳನ್ನು ಬ್ರಾಹ್ಮಣನು ಮಾಡತಕ್ಕದ್ದು. ದೇವಾರ್ಚನೆಯನ್ನು ಪ್ರಾತಃಕಾಲದ ಹೋಮಾನಂತರದಲ್ಲಾಗಲೀ ಅಥವಾ ದಿನದ ನಾಲ್ಕನೇ ಭಾಗದಲ್ಲಿ ಬ್ರಹ್ಮಯಜ್ಞಾನಂತರವಾಗಲೀ ಮಾಡತಕ್ಕದ್ದು “ಪ್ರಾತಃ ಹೋಮಾನಂತರ, ಬ್ರಹ್ಮಯಜ್ಞಾನಂತರ ದೇವತಾರ್ಚನೆ ಮಾಡುವದು” ಎಂದು ಎರಡೂ ವಿಧವಾಗಿ ಸ್ಮೃತ್ಯುಕ್ತಿಯಿದೆ. ದೇವತಾರ್ಚನೆಯನ್ನು ತ್ರಿಕಾಲದಲ್ಲಿಯೂ ಮಾಡಬೇಕು. ಅಶಕ್ತನಾದರೆ ಪ್ರಾತಃಕಾಲದಲ್ಲಿ ಸವಿಸ್ತರಮಾಡಿ, ಮಧ್ಯಾಹ್ನದಲ್ಲಿ ಗಂಧ ಮೊದಲಾದವುಗಳಿಂದ, ಸಂಜೆಯಲ್ಲಿ ಧೂಪದೀಪಾದಿಗಳಿಂದ A&O ಧರ್ಮಸಿಂಧು ಸಂಕ್ಷಿಪ್ತವಾಗಿ ಮಾಡುವದು. ಮೂರೂ ಕಾಲಗಳಲ್ಲಿ ತುಲಸಿಯನ್ನರ್ಪಿಸಬೇಕು. “ಸಂಧ್ಯಾವಂದನೆಯಂತೆ ತ್ರಿಕಾಲ ದೇವತಾಪೂಜೆಯೂ ಮೋಕ್ಷಕಾರಣವಾದದ್ದು” ಎಂದು “ಕಮಲಾಕರ"ನು ಹೇಳಿರುವನು. ವಿಷ್ಣು, ಸೂರ್ಯ, ಶಿವ, ಬ್ರಹ್ಮ, ಶಕ್ತಿ, ವಿನಾಯಕಾದಿಗಳಲ್ಲಿ ಇಷ್ಟವಾದದ್ದನ್ನು ಪೂಜಿಸತಕ್ಕದ್ದು. ಅದರಲ್ಲಿಯೂ ಕಲಿಯುಗದಲ್ಲಿ “ಹರಿ ಹರ"ಪೂಜೆಯು ಪ್ರಶಸ್ತವ “ಎಷ್ಟು ಆರಾಧನೆಗಿಂತ ಹೆಚ್ಚಿನದಾದ ಯಾವ ವೈದಿಕ ಕರ್ಮವು ಇರುವದಿಲ್ಲ. ಆದಿಮಧ್ಯಾಂತರಹಿತನಾದ ಹರಿಯನ್ನು ನಿತ್ಯದಲ್ಲೂ ಆರಾಧಿಸತಕ್ಕದ್ದು, ಇಲ್ಲವೆ ಷಡ್ಡು ಧೈಶ್ವರ್ಯ ಪರಿಪೂರ್ಣನೂ, ಸನಾತನನೂ ಆದ ಮಹಾದೇವನನ್ನು, ರುದ್ರಗಾಯತ್ರಿ ಅಥವಾ ತಂಬಕ ಮಂತ್ರದಿಂದ ಅಥವಾ “ಓಂನಮಃಶಿವಾಯ” ಈ ಷಡಕ್ಷರ ಮಂತ್ರದಿಂದ ಆರ್ಚನೆಮಾಡುವದು. ಇಲ್ಲವೆ ಓಂಕಾರ"ದಿಂದ ಪೂಜಿಸುವದು. ಪ್ರತಿಮಾ, ಸ್ಟಂಡಿಲಾದಿಗಳಿಗಿಂತ ಶಾಲಿಗ್ರಾಮ ಬಾಣಲಿಂಗಗಳು ಪ್ರಶಸ್ತಿಗಳು, ಯಾಕೆಂದರೆ ಅವುಗಳಿಗೆ ಆವಾಹನಮಾಡುವದಿರುವದಿಲ್ಲ. ದೇವತಾಸಾನ್ನಿಧ್ಯವು ಅವುಗಳಲ್ಲಿ ಸದಾ ಇರುತ್ತದೆ. “ಶ್ರೀಮದ್ಭಾಗವತ"ದಲ್ಲಿ “ಹೇ ಉದ್ಧವಾ!ಸ್ಥಿರಪ್ರತಿಷ್ಠಿತವಾದದ್ದರಲ್ಲಿ ಆವಾಹನ, ಉದ್ಘಾಸನಗಳಿಲ್ಲ. ಚರದೇವತೆಗಳಲ್ಲಿ ಅದು ವಿಕಲ್ಪವು, ಸ್ಥಂಡಿಲದಲ್ಲಿ ಆವಾಹನ, ಉದ್ಘಾಸನಗಳೆರಡೂ ಆವಶ್ಯಕವು’ ಎಂದು ಹೇಳಿದೆ.

ಸಂಕ್ಷಿಪ್ತ ಪೂಜಾಪ್ರಯೋಗ ಇದರ ವಿಶೇಷ ವಿಚಾರವನ್ನು ಮುಂದೆ ಮೂರ್ತಿ ಪ್ರತಿಷ್ಠಾಪ್ರಸಂಗದಲ್ಲಿ ಹೇಳಲಾಗುವದು. ಸೂರ್ಯೋದಯಕ್ಕಿಂತ ಮೊದಲು ನಿರ್ಮಾಲ್ಯವನ್ನು ತೆಗೆದು ಯೋಗ್ಯಕಾಲದಲ್ಲಿ ಪೂಜೆಯನ್ನಾರಂಭಿಸಬೇಕು. “ಓಂ ಯಭೋಮಾತಾ ಓಂ ಓವಾಪಿ ಇದನ್ನು ಪಠಿಸಿ ಘಂಟಾನಾದ ಮಾಡಿ ಆಚಮನ, ಪ್ರಾಣಾಯಾಮ, ದೇಶಕಾಲಾದಿಗಳ ಉಚ್ಚಾರಗಳನ್ನು ಮಾಡಿ “ಶ್ರೀ ಮಹಾವಿಷ್ಣುಪೂಜಾಂ ಕರಿಷ್ಯ” ಎಂದು ಸಂಕಲ್ಪಿಸುವದು ‘ಪಂಚಾಯತ’ಗಳನ್ನು ಪೂಜಿಸುವದಿದ್ದಲ್ಲಿ “ಶ್ರೀ ರುದ್ರ-ವಿನಾಯಕ-ಸೂರ್ಯ-ಶಕ್ತಿ-ಪರಿವೃತ ಶ್ರೀ ಮಹಾವಿಷ್ಣು ಪೂಜಾಂ ಕರಿಷ್ಯ ಹೀಗೆ ಸಂಕಲ್ಪಿಸುವದು. ಆಸನಾದಿ ವಿಧಿಯನ್ನು ಮುಗಿಸಿ “ಸಹಸ್ರ ಶೀರ್ಷತಿ ಷೋಡಶರ್ಚಷ್ಟ ಸೂಕ್ತ ನಾರಾಯಣ: ಪುರುಷನುಷ್ಟುಪ್ ಅಂತ್ಯಾಸ್ತ್ರಿಷ್ಟುಪ್ ನ್ಯಾಸೇ ಪೂಜಾಯಾಂ ವಿ=! ಹೀಗೆ ಹೇಳಿ . ಮೊದಲನೆಯ ಮಂತ್ರದಿಂದ ಎಡಹಸ್ತದಲ್ಲೂ ಎರಡನೇ ಮಂತ್ರದಿಂದ ಬಲಹಸ್ತದಲ್ಲೂ ‘ನ್ಯಾಸ’ ಮಾಡುವದು. ಮೂರನೇದನ್ನು ಎಡಪಾದದಲ್ಲಿ, ನಾಲ್ಕನೇದನ್ನು ಬಲಪಾದದಲ್ಲಿ, ಐದನೇದನ್ನು ಎಡಮೊಣಕಾಲಿನಲ್ಲಿ, ಆರನೇದನ್ನು ಬಲಮೊಣಕಾಲಿನಲ್ಲಿ, ಏಳನೇದನ್ನು ಎಡದ ಕಟಿಯಲ್ಲಿ, ಎಂಟನೇದನ್ನು ಬಲದ ಕಟಿಯಲ್ಲಿ, ಒಂಭತ್ತನೇದನ್ನು ನಾಭಿಯಲ್ಲಿ, ಹತ್ತನೇದನ್ನು, ಹೃದಯದಲ್ಲಿ ಹನ್ನೊಂದನೇದನ್ನು ಕುತ್ತಿಗೆಯಲ್ಲಿ, ಹನ್ನೆರಡನೇದನ್ನು ಎಡಭುಜದಲ್ಲಿ, ಹದಿಮೂರನೆಯದನ್ನು ಬಲಭುಜದಲ್ಲಿ, ಹದಿನಾಲ್ಕನೇದನ್ನು ಮುಖದಲ್ಲಿ, ಹದಿನೈದನೇದನ್ನು ನೇತ್ರಗಳಲ್ಲಿ, ಹದಿನಾರನೆಯದನ್ನು ಶಿರಸ್ಸಿನಲ್ಲಿ ಹೀಗೆ ತನ್ನ ದೇಹಕ್ಕೂ ದೇವಪ್ರತಿಮೆಗೂ ನ್ಯಾಸಮಾಡುವದು. ಕೊನೆಯ ಐದು ಮಂತ್ರ (ಬ್ರಾಹ್ಮಣೋಸ್ಯ ಇತ್ಯಾದಿ) ಗಳಿಂದ ಹೃದಯಾದಿ ಪಂಚನ್ಯಾಸ(ಹೃದಯ, ಶಿರ, ಶಿ, ಕವಡ ನೇತ್ರತ್ರಯ, ಅಸ್ತ್ರ) ಮಾಡುವದು. ಕಲಶ, ಶಂಖ, ಘಂಟಾದಿಗಳನರ್ಚಿಸಿ ತನ್ನನ್ನು ಪ್ರೋಕ್ಷಿಸಿಕೊಂಡು ಪೂಜಾಸಾಮಗ್ರಿಗಳನ್ನೂ ಪ್ರೋಕ್ಷಿಸುವದು. ತನ್ನ ಇಷ್ಟದೇವತೆ

ಪರಿಚ್ಛೇದ - ೩ ಪೂರ್ವಾರ್ಧ ೩೩೧ (ವಿಷ್ಣಾದಿ) ಯನ್ನು ಧ್ಯಾನಿಸಿ ಪೂಜಿಸತಕ್ಕದ್ದು, ಪುರುಷಸೂಕ್ತದ ಮೊದಲನೇ ಮಂತ್ರದಿಂದ ಆವಾಹನ ಮಾಡತಕ್ಕದ್ದು. ಶಾಲಿಗ್ರಾಮಾದಿಗಳಲ್ಲಿ ಆವಾಹನವಿಲ್ಲದ್ದರಿಂದ ಆಸ್ಥಾನದಲ್ಲಿ ಮಂತ್ರ ಪುಷ್ಪವನ್ನರ್ಪಿಸುವದು. ಮಂತ್ರದ ಅಂತದಲ್ಲಿ “ಶ್ರೀ ಮಹಾವಿಷ್ಣವೇ ಶ್ರೀ ಕೃಷ್ಣಾಯ ಇತ್ಯಾದಿ ಚತುರ್ಥಿವಿಭಕ್ತಿಯಿಂದ ದೇವರಿಗೆ ಪೂಜೆಯನ್ನರ್ಪಿಸುವದು. ಪಂಚಾಯತನದಲ್ಲಿ ಐದು ದೇವತೆಗಳಿಗೂ ಬೇರೆ-ಬೇರೆ ನಾಮಗಳಿಂದ ಅರ್ಚನೆ ಮಾಡುವದು. ನೈವೇದ್ಯ ವಿಷಯದಲ್ಲಿ ಏಕಕಾಲದಲ್ಲಾಗುವದರಿಂದ ‘ಯಥಾಂಶತಃ’ ಎಂದು ಹೇಳುವದು. ಎರಡನೇ ಮಂತ್ರದಿಂದ ಆಸನವನ್ನು ಕೂಡುವದು. ಮೂರನೇದರಿಂದ ‘ಪಾದ್ಯವು ನಾಲ್ಕನೆಯದರಿಂದ ‘ಅರ್ಭ್ಯವು. ಐದನೆಯದರಿಂದ ‘ಆಚಮನ’, ಆರನೆಯದರಿಂದ ‘ಸ್ನಾನ’ ಸಂಭವವಾದಲ್ಲಿ ‘ಆಪ್ಯಾಯಸ್ವ’ ಇತ್ಯಾದಿ ಮಂತ್ರಗಳಿಂದ ಪಂಚಾಮೃತಸ್ನಾನ ಮಾಡಿಸುವದು. ಗಂಧ, ವಾಳ, ಕರ್ಪೂರ, ಕುಂಕುಮ, ಅಗರು ಇವುಗಳಿಂದ ಸುವಾಸಿತವಾದ ಜಲದಿಂದ ಸುವರ್ಣಘರ್ಮ ಅನುವಾಕ, ಮಹಾಪುರುಷವಿದ್ಯಾ, (ಜಿತಂತೇ ಪುಂಡರೀಕಾಕ್ಷ ಇತ್ಯಾದಿ) ಪುರುಷಸೂಕ್ತ, ರಾಜನಸಾಮ (ಇಂದ್ರಂನರೋನೇ) ಇತ್ಯಾದಿಗಳಿಂದ ಅಭಿಷೇಕ ಮಾಡುವದು. ಏಳನೇ ಮಂತ್ರದಿಂದ “ವಸ್ತ್ರ"ವು. ಎಂಟನೆಯದರಿಂದ “ಯಜ್ಞಪವೀತ”, ನವಮಮಂತ್ರದಿಂದ “ಗಂಧ’ವು. ದಶಮದಿಂದ ‘ಪುಷ್ಪ’, ಏಕಾದಶದಿಂದ ‘ಧೂಪ, ದ್ವಾದಶದಿಂದ ‘ದೀಪ’ವು, ‘ಸ್ನಾನ, ಧೂಪ, ದೀಪ, ಘಂಟಾಪೂಜೆ’ ಇವುಗಳಲ್ಲಿ ಘಂಟಾನಾದವನ್ನು ಮಾಡಬೇಕು. ತ್ರಯೋದಶ ಮಂತ್ರದಿಂದ ‘ನೈವೇದ್ಯ ಮಾಡುವದು, ಹದಿನಾಲ್ಕರಿಂದ ‘ನಮಸ್ಕಾರ’ವು ಹದಿನೈದರಿಂದ ‘ಪ್ರದಕ್ಷಿಣೆ’ಯು, ಹದಿನಾರನೇ ಮಂತ್ರದಿಂದ ವಿಸರ್ಜನ ಅಥವಾ ಪುಷ್ಪಾಂಜಲಿಯನ್ನು ಅರ್ಪಿಸುವದು. ಸ್ನಾನ, ವಸ್ತ್ರ, ನೈವೇದ್ಯ ಇವುಗಳಲ್ಲಿ ‘ಆಚಮನ’ವನ್ನು ಕೊಡಬೇಕು. ಈ ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಹದಿನಾರು ಅನ್ನಾಹುತಿಗಳನ್ನು ಹೋಮಿಸತಕ್ಕದ್ದು; ಮತ್ತು ಪ್ರತಿಮಂತ್ರದಿಂದಲೂ ಪುಷ್ಪವನ್ನರ್ಪಿಸಿ ಸ್ತುತಿಸುವದು. ಆಮೇಲೆ ಪುರಾಣೋಕ್ತ ಹಾಗೂ ಪ್ರಾಕೃತಸ್ತೋತ್ರಗಳಿಂದ ಸ್ತುತಿಮಾಡುವದು. ದೇವರ ಪಾದಗಳಲ್ಲಿ ತನ್ನ ತಲೆಯನ್ನಿಟ್ಟು ತನ್ನ ಎರಡೂ ಕೈಗಳಿಂದ ಪಾದಗಳನ್ನು ಮುಟ್ಟಿ (ಬಲದಿಂದ ಬಲದವಾದ ಎಡದಿಂದ ಎಡದಪಾದ) ಹೇ ಈಶ! ಶರಣಾಗತನಾದ ನನ್ನನ್ನುದ್ಧರಿಸು. ಮರಣಗ್ರಹರೂಪವಾದ ಸಂಸಾರಸಾಗರದಿಂದ ದಾಟಿಸು. ಹೀಗೆ ಹೇಳಿ ನಮಸ್ಕಾರಮಾಡುವದು. ದೇವರು ಕೊಟ್ಟನು ಎಂದು ಭಾವಿಸಿಕೊಂಡು ಪ್ರಸಾದಪುಷ್ಪವನ್ನು ಶಿರಸ್ಸಿನಲ್ಲಿ ಧರಿಸುವದು. ವಿಷ್ಣುಮೂರ್ತಿಯ ಶಿರಸ್ಸಿನಲ್ಲಿದ್ದ ಪುಷ್ಪವನ್ನು ತನ್ನ ಶಿರಸ್ಸಿನಲ್ಲಿ ಧರಿಸಬಾರದು. (ಉಳಿದ ಸ್ಥಾನದ್ದು ಅಡ್ಡಿ ಇಲ್ಲ ವೆಂದರ್ಥ) ಶಂಖೋದಕವನ್ನು ಶಿರಸ್ಸಿನಲ್ಲಿ ಧರಿಸಿ ದೇವರ ತೀರ್ಥವನ್ನು ಪೂಜೆಯ ಅಂತ್ಯದಲ್ಲಾಗಲೀ, ವೈಶ್ವದೇವದ ನಂತರದಲ್ಲಾಗಲೀ ಶಿರಸ್ಸಿನಲ್ಲಿ ಪ್ರೋಕ್ಷಿಸಿಕೊಳ್ಳುವದು, ಮತ್ತು ಕುಡಿಯುವದು. ಅದರ ಕ್ರಮ- ಬ್ರಾಹ್ಮಣನ ಪಾದೋದಕವನ್ನು ಕುಡಿದು, ನಂತರ ವಿಷ್ಣುಪಾದೋದಕವನ್ನು ಕುಡಿಯಬೇಕು. ಶಾಲಿಗ್ರಾಮ ಶಿಲೆಯ ಕೀರ್ಲ್ಡವನ್ನು ಕುಡಿಯದ ತಲೆಗೆ ಪ್ರೋಕ್ಷಣಮಾತ್ರ ಮಾಡಿಕೊಂಡಲ್ಲಿ ಬ್ರಹ್ಮಹತ್ಯಾದೋಷವುಂಟಾಗುವದು. ಪಾತ್ರಾಂತರ (ಸೌಟು ಮೊದಲಾದವು)ಮಾಡಿಕೊಂಡು ಕುಡಿಯಬೇಕೇ ಹೊರತು ಹಸ್ತದಿಂದ ಕುಡಿಯಬಾರದು. ಹೀಗೆ “ ಕಮಲಾಕರನು ಹೇಳಿರುವನು. ೩೬೨ ಧರ್ಮಸಿಂಧು ಪ್ರತಿದಿನ “ವಸ್ತ್ರ"ವನ್ನರ್ಪಿಸುವಾಗ ಒಂದೇ ವಸ್ತ್ರವಾದರೂ ಅಡ್ಡಿ ಇಲ್ಲ. ಅದು ತೊಳೆದದ್ದಿರಬೇಕು. ಅಂದರೆ ದೋಷವಾಗುವದಿಲ್ಲ ಬಂಗಾರದ ಆಭರಣಾದಿಗಳನ್ನೂ ತೊಳೆದೇ ಹಾಕಬೇಕು. ಸುವರ್ಣ ಯಜ್ಞಪವೀತದ ವಿಷಯದಲ್ಲಿಯೂ ಹೀಗೆಯೇ ಆಚಾರವಿದೆ. ಪೂಜಾಫಲ ಸ್ಕಾಂದದಲ್ಲಿ ಹೀಗೆ ಹೇಳಿದೆ-ಕಾಮಾಸಕ್ತನಾಗಲೀ ಅಥವಾ ಕ್ರೋಧಾವಿಷ್ಟನಾಗಲೀ, ಭಕ್ತಿಯಿಲ್ಲದವನಾಗಲೀ ಶಾಲಿಗ್ರಾಮ ಶಿಲೆಯನ್ನ ರ್ಚಿಸಿದಲ್ಲಿ ಕಲಿಯುಗದಲ್ಲಿ ಮುಕ್ತಿಯನ್ನು ಹೊಂದುವನು. ಶಾಲಿಗ್ರಾಮದ ಮುಂಗಡೆಯಲ್ಲಿ ವಿಷ್ಣುವಿನ ಕಥೆ ಮೊದಲಾದವುಗಳನ್ನು ಹೇಳುವದರಿಂದ ಕಲಿಕಾಲದಿಂದುಂಟಾದ ಯಮನ ಬಾಧೆಯಿಲ್ಲ. ಕಲಿಯುಗದಲ್ಲಿ ಹರಿಯ ಪಾದೋದಕವು ಪಾಪಗಳಿಗೆ ಪ್ರಾಯಶ್ಚಿತ್ತರೂಪವಾದದ್ದು. ಶಿರಸ್ಸಿನಲ್ಲಿ ಧರಿಸಿದರೆ ಅಥವಾ ಕುಡಿದರೆ ಎಲ್ಲ ದೇವತೆಗಳೂ ತೃಪ್ತರಾಗುವರು. ಬೋಧಾಯನೋಕ್ತ ಹರಿ ಹರ ಪೂಜಾವಿಧಿಯನ್ನು “ಪರಾಶರಮಾಧವ"ದಲ್ಲಿ ಹೇಳಿದೆ. ನಾನು ಶಿವಪೂಜಾವಿಧಿಯನ್ನು ದ್ವಿತೀಯ ಪರಿಚ್ಛೇದದ ಶಿವರಾತ್ರಿ ಪ್ರಕರಣದಲ್ಲಿ ಹೇಳಿರುವದರಿಂದ ಪುನಃ ಇಲ್ಲಿ ಹೇಳಿಲ್ಲ. “ಕೂರ್ಮ ಪುರಾಣ’ದಲ್ಲಿ ಅಜ್ಞಾನ ಅಥವಾ ಆಲಸ್ಯಗಳಿಂದ ದೇವಪೂಜೆ ಮಾಡದೆ ಭೋಜನ ಮಾಡಿದರೆ ನರಕಪ್ರಾಪ್ತಿಯಾಗುವದು. ಮರುಜನ್ಮದಲ್ಲಿ ಹಂದಿಯಾಗಿ ಜನಿಸುವನು ಎಂದು ಹೇಳಿದೆ. ಹೀಗೆ ದೇವತಾರ್ಚನೆ ಮುಗಿಸಿ ಮಾತಾ-ಪಿತೃಮೊದಲಾದ ಗುರುಜನರನ್ನು ಪೂಜಿಸುವದು. ಭಕ್ತಿಯುಳ್ಳವನು ದೇವರಲ್ಲಿ ಯಂತ ಗುರುಜನರಲ್ಲೂ ಮಾಡತಕ್ಕದ್ದೆಂದು “ಶ್ರುತಿವಾಕ್ಯ” ವಿದೆಯೆಂದು “ಮಾಧವ"ದಲ್ಲಿ ಹೇಳಿದ. ದಿನದ ತೃತೀಯ ಭಾಗ ಇದರಲ್ಲಿ ಪೋಷ್ಕವರ್ಗ (ಕುಟುಂಬದ ಜನರು)ದ ಸಲುವಾಗಿ ಧನಸಂಪಾದನೆ ಮಾಡಬೇಕು. ಬ್ರಾಹ್ಮಣನಿಗೆ ಯಜನ, (ಯಜ್ಞಮಾಡುವದು) ಯಾಜನ, (ಯಜ್ಞ ಮಾಡಿಸುವದು) ಅಧ್ಯಯನ, (ವೇದವನ್ನಭ್ಯಸಿಸುವದು) ಅಧ್ಯಾಪನ, (ಇತರರಿಗೆ ಕಲಿಸುವದು) ದಾನ, ಪ್ರತಿಗ್ರಹ ಹೀಗೆ ಸಂಪಾದನೆಗಾಗಿ ಆರು “ವೃತ್ತಿಗಳನ್ನು ಹೇಳಿದೆ. ಇವುಗಳಲ್ಲಾದರೂ ಅಧ್ಯಾಪನ, ಯಾಜನ, ಪ್ರತಿಗ್ರಹ ಇವು ಜೀವನ ಸಾಧನಗಳು. ಭಾಗವತದಲ್ಲಿ - ಪ್ರತಿಗ್ರಹದಿಂದ ತಪಸ್ಸು, ತೇಜಸ್ಸು, ಯಶಸ್ಸು ಇವು ನಷ್ಟವಾಗುತ್ತವೆ. ಆದಕಾರಣ ಇದನ್ನು ಬಿಟ್ಟು ಯಜನ, ಅಧ್ಯಾಪನ, ಈ ಎರಡು ವೃತ್ತಿಗಳಿಂದಲೇ ಜೀವಿಸುವರು ಇಷ್ಟ, ಅವುಗಳಲ್ಲಿಯೂ ದೋಷ ಕಂಡುಬಂದಲ್ಲಿ (ಅಧ್ಯಾಪನ ಮಾಡುವಾಗ ಕುಶಿಷ್ಯ ಸಂಪರ್ಕವಾಗಬಹುದು, ಯಜ್ಞಮಾಡಿಸುವಾಗ ದೋಷಗ್ರಸ್ತಯಜಮಾನನ ಸಂಪರ್ಕವಾಗಬಹುದು ಇತ್ಯಾದಿ.) “ಶಿಲೋಂಡ್ಕ” ಮೊದಲಾದ ವೃತ್ತಿಗಳಿಂದ ಜೀವಿಸಬೇಕು. ಆ ವೃತ್ತಿಗಳ ವಿವರ-ಕೃಷ್ಣಾದಿ ಕರ್ಮಗಳಿಗೆ “ವಿಚಿತ್ರವಾರ್ತಾ” ಎನ್ನುವರು. ಇನ್ನೊಬ್ಬರನ್ನು ಯಾಚಿಸದಿರುವಿಕೆಗೆ “ಶಾಲೀನವೆನ್ನುವರು. ಪ್ರತಿದಿನ ಆಯಾಯ ದಿನಕ್ಕೆ ಬೇಕಾಗುವಷ್ಟು ಧಾನ್ಯಯಾಚನ ಮಾಡುವದಕ್ಕೆ “ಯಾಯಾವರ"ವನ್ನುವರು. ತಾನಾಗಿ ಉದುರಿದ ಭತ್ತ ಮೊದಲಾದ ಕಾಳುಗಳನ್ನಾರಿಸಿ ತಂದು ಜೀವಿಸುವದಕ್ಕೆ “ಲೋಂಛನವನ್ನುವರು. ಈ ಹೇಳಿದವುಗಳಲ್ಲಿ ಮುಂದು ಮುಂದಿನವು ಶ್ರೇಷ್ಠವು ಆದರೆ “ಶೋಂಭನವು ಕಲಿಯುಗದಲ್ಲಿ ನಿಷಿದ್ದವು. ಹನ್ನೆರಡು ದಿನ • ಪರಿಚ್ಛೇದ ೩ ಪೂರ್ವಾರ್ಧ 212 ಕುಟುಂಬಪೋಷಣೆಗಾಗಿ ಸಂಗ್ರಹಿಸಿದ ಧಾನ್ಯಕ್ಕೆ ಕುಸೂಲಧಾನ್ಯ’ವನ್ನುವರು. ಆರು ದಿನದ ಸಂಗ್ರಹಕ್ಕೆ “ಕುಂಭೀಧಾನ್ಯ’ವೆಂದು ಹೆಸರು. ಮೂರು ದಿನದ ಸಂಗ್ರಹಕ್ಕೆ “ತಾಹಿಕ” ಎನ್ನುವರು. ಎರಡು ದಿನದ ಸಂಗ್ರಹಕ್ಕೆ “ಶ್ವಸ್ತನ” ಹೀಗೆ ಸಂಸ್ಥೆಯಿದೆ. ಬ್ರಾಹ್ಮಣನು-ಕೃಷಿ ಮತ್ತು ವಾಣಿಜ್ಯ ವ್ಯವಹಾರ ಹಾಗೂ ಸೇವಾವೃತ್ತಿ (ನೌಕರಿ) ಇವುಗಳನ್ನು ಮಾಡಬಾರದು. ಯಾಕೆಂದರೆ ಇದರಿಂದ ಬ್ರಾಹ್ಮಣತ್ವವನ್ನುಳಿಸಿಕೊಳ್ಳಲಾಗುವದಿಲ್ಲ. ಆಪದ್ಧರ್ಮವಾಗಿ “ಕೃಷಿಯನ್ನು ಮಾಡಬಹುದು. ಒಂದು ಕಡೆಯಲ್ಲಿ “ಪುತ್ರನ ಮಾಂಸವನ್ನಾದರೂ ತಿನ್ನಬಹುದು; ಪರಂತು ರಾಜಪ್ರತಿಗ್ರಹವನ್ನು ಮಾಡತಕ್ಕದ್ದಲ್ಲ. ಹೀಗೆ ವಚನವಿದೆ. ಆದರೆ ಈ ವಚನವು ‘ದುಷ್ಟರಾಜ’ನ ವಿಷಯವಾಗಿ ಹೇಳಿದ್ದು, ಪತಿವ್ರತೆಯಾದ ಪತ್ನಿ, ಶಿಶು, ಪುತ್ರ ಇವರ ಪೋಷಣೆಯ ಸಲುವಾಗಿ “ಆಯಾಜ್ಯ, ಯಾಜನ, ಶೂದ್ರಪ್ರತಿಗ್ರಹಗಳನ್ನಾದರೂ ಮಾಡಬಹುದು. ಇದಾದರೂ ಆಪದ್ವಿಷಯವೆಂದು ತಿಳಿಯತಕ್ಕದ್ದು. ತರಕಾರಿ, ಹಾಲು, ಮೊಸರು, ತುಪ್ಪ, ಜಲ, ದರ್ಭ, ಭೂಮಿ ಇವುಗಳನ್ನು ನೀಚ (ಕಡಿಮೆಯಜಾತಿ) ಜನರಿಂದ ಅವರಾಗಿ ಕೊಟ್ಟದ್ದನ್ನು ಸ್ವೀಕರಿಸಿದಲ್ಲಿ ದೋಷವಿಲ್ಲ. ವ್ಯಭಿಚಾರಿಣಿ, ನಪುಂಸಕ, ಪತಿತ ಇವರು ತಾವಾಗಿಕೊಟ್ಟರೂ ಸ್ವೀಕರಿಸತಕ್ಕದ್ದಲ್ಲ. ಸಿದ್ಧವಾದ ಅನ್ನಕ್ಕೆ ಬ್ರಹ್ಮಚಾರಿ, ಸಂನ್ಯಾಸಿ, ವಿಧ್ಯಾರ್ಥಿ, ಗುರುವಿನ ಪೋಷಕ, ಪಥಿಕ, ಕ್ಷೀಣವೃತ್ತಿಯವ ಹೀಗೆ ಆರು, ಭಿಕ್ಷುಕರಿರುವರು. ಶೂದ್ರನಿಗೆ ಬ್ರಾಹ್ಮಣಶುಶೂಷಾದಿ ವೃತ್ತಿಯನ್ನು ಹೇಳಿದೆ. ಆಪತ್ತಿನಲ್ಲಿ ಕೃಷ್ಣಾದಿಗಳನ್ನು ಮಾಡಬಹುದು. ದಿನದ ನಾಲ್ಕನೇ ಭಾಗ ಇದರಲ್ಲಿ “ಮಧ್ಯಾಹ್ನಸ್ನಾನವು ಬೆಳಿಗ್ಗೆ ಗೋಮಯಸ್ನಾನ, ಮಧ್ಯಾಹ್ನದಲ್ಲಿ ಮೃತ್ತಿಕಾಸ್ನಾನ ಇವುಗಳ ವಿಧಾನವನ್ನು ಪ್ರಾಯಶ್ಚಿತ್ತ ಪ್ರಕರಣದಲ್ಲಿ ಹೇಳಲಾಗಿದೆ. ಉಳಿದ ವಿಧಿಯೆಲ್ಲ ಪ್ರಾತಃ ಕಾಲದಂತೆಯೇ, ಬ್ರಹ್ಮಯಜ್ಞಾಂಗ ತರ್ಪಣಕ್ಕಿಂತ ಮೊದಲು ವಸ್ತ್ರವನ್ನು ಹಿಂಡಬಾರದು. ಇದಿಷ್ಟು ವಿಶೇಷವು. ಆಮೇಲೆ ಭಸ್ಮಾದಿಗಳಿಂದ ಪುಂಡ್ರಗಳನ್ನು ಧರಿಸಿ ಮಧ್ಯಾಹ್ನ ಸಂಧ್ಯಾವಂದನೆಯನ್ನು ಮಾಡತಕ್ಕದ್ದು. ಬೆಳಗಿನ ಅರ್ಧಯಾಮದ ನಂತರ ಸಂಜೆಯ ವರೆಗೂ ಮಧ್ಯಾಹ್ನ ಸಂಧ್ಯಾವಂದನೆಗೆ ಗೌಣಕಾಲವಿದೆ. ಅದರಲ್ಲಿ (ಮಧ್ಯಾಹ್ನ ಸಂಧ್ಯೆಯಲ್ಲಿ) “ಸೂರ್ಯಶ್ಚ” ಈ ಸ್ಥಾನದಲ್ಲಿ “ಆಪಃ ಪುನಂತು” ಈ ಮಂತ್ರದಿಂದ ಮಂತ್ರಾಚಮನವು.‘ಆಪ: ಪುನಂತ್ಯ ನಾರಾಯಣ, ಯಾಜ್ಞವಲ್ಕ ಆಪಃ ಪೃಥಿವೀ ಬ್ರಹ್ಮಣಸ್ಪತಿರ: ಮಂತ್ರಾಚಮನೇ ವಿನಿಯೋಗಃ; ಓಂ ಆಪಃ ಪುನಂತು ಪೃಥಿವೀಂ ಪೃಥಿವೀ ಪೂತಾ ಪುನಾತುಮಾಂತ ಪುನಂತು ಬ್ರಹ್ಮಣಸ್ಪತಿ/ಬ್ರಹ್ಮಪೂತಾ ಪುನಾತು ಮಾಂತ ಯದುಚ್ಛಿಷ್ಟಮಭೋಜ್ಯಂ ಯಾ ದುಶ್ಚರಿತಂ ಮಮ ಸರ್ವಂ ಪುನಂತು ಮಾಮಾಪೋ ಸತಾಂಚ ಪ್ರತಿಗ್ರಹನ್ನು ಸ್ವಾಹಾ!’ ಹೀಗೆ ಹೇಳಿ ಜಲಪ್ರಾಶನ ಮಾಡುವದು, ಅಘಮರ್ಷಣವಾದ ಮೇಲೆ ನಿಂತು “ಹಂಸಃಶುಚಿಷದಿತ್ಯ ಗೌತಮ: ಸೂರ್ಯೋ ಜಗತೀ ಸೂರ್ಯಾರ್ಥ್ಯದಾನೇ ವಿನಿಯೋಗ: ಓಂ ಹಗುಂಸಃ ಶುಚಿಷತ್=ತ್” ಇದರಿಂದ ಒಂದು ಅರ್ಥ್ಯವನ್ನು ಕೊಡುವದು. ನಂತರ ಉಪಸ್ಥಾನಮಾಡುವದು. ಕೈಗಳನ್ನು ಮೇಲೆತ್ತಿಕೊಂಡು ‘ದುಮಿ ತ್ರಯೋದಶರ್ಚಸ್ಯ ಪುಸ್ಕಂಣ್ಯ: ಸೂರ್ಯೋ ಗಾಯ ಅಂತ್ಯಾಕೃತ ಸೋನುಷ್ಟುಭ ಸೂರ್ಯೋಪಸ್ಥಾನೇ ವಿನಿಯೋಗ: ಕೆಲವರು “ಚಿತ್ರಂದೇವಾನಾಂ” ಹೀಗೆ ಆರುಮಂತ್ರಗಳಿಂದ ಪಾನಮಾಡುವರು. ಉಳಿದದ್ದು ಉಪಸ್ಥಾನರಹಿತವಾಗಿ ಪ್ರಾತಃಸಂಧ್ಯೆಯಂತೆಯೇ ತಿಳಿಯುವದು. ೩೩೪ ಧರ್ಮಸಿಂಧು ರಾತ್ರಿಯಲ್ಲಿ ಮಧ್ಯಾಹ್ನ ಸಂಧ್ಯಾ ಮಾಡುವದಿದ್ದಲ್ಲಿ “ಆ ಕೃಷ್ಣನ ಇದರಿಂದ ಒಂದು ಅರ್ಘವನ್ನು ಚೆಲ್ಲಿ ಪ್ರಾಯಶ್ಚಿತ್ತಕ್ಕಾಗಿ ಗಾಯತ್ರಿಯಿಂದ ಒಂದು ಅರ್ಥ್ಯವನ್ನು ಕೊಡುವದು; ಮತ್ತು “ಹವಿಷ್ಟಾಂತಂ” ಎಂಬ ಐದು ಮಂತ್ರಗಳಿಂದ ಉಪಸ್ಥಾನ ಮಾಡುವದು. ತೈತ್ತಿರೀಯರಿಗೆ - ‘ಆಪಃ ಪುನಂತು’ ಎಂದು ಜಲವನ್ನು ಕುಡಿದು ‘ದಧಿಕ್ರಾವ’ ಎಂದು ಮೊದಲಿನಂತೆ ಮಾಡಿ ಸೂರ್ಯನಿಗೆ ಒಂದು ಅರ್ಥ್ಯವನ್ನು ಕೊಟ್ಟು (ಗಾಯತ್ರಿಯಿಂದ) ಊರ್ಧ್ವಬಾಹುವಾಗಿ ಎದ್ದು ಉಪಸ್ಥಾನವು. “ಓಂ ಉದ್ವಯಂತ ಉದುತ್ಯಂ ಜಾತವೇದಸಂ ಓಂ ಚಿತ್ರಂದೇವಾನಾಂ, ಓಂ ತಚ್ಚಕುರ್ದೇವಹಿತಂ, ಓಂಯ ಉದಗಾತ್ಮಹತೋ” ಎಂದು ನಂತರ ಜಪಾದಿಗಳನ್ನು ಉಪಸ್ಥಾನರಹಿತವಾಗಿ ಹಿಂದಿನಂತೆ ಮಾಡುವದು, ಕಾತ್ಯಾಯನರಿಗೆ - “ಆಪಃ ಪುನಂತು"ಎಂದು ಹಿಂದೆ ಹೇಳಿದಂತೆ ಗಾಯತ್ರಿಯಿಂದ ಒಂದು ಅರ್ಘ, “ಉದ್ವಯಂ” ಇತ್ಯಾದಿ ನಾಲ್ಕರಿಂದ ಉಪಸ್ಥಾನವು. ಜಪದ ನಂತರ ಶಕ್ತನಾದವನು ಪೂರ್ವೋಕ್ತಗಳಾದ ‘ವಿಭ್ರಾಡ್’ ಇತ್ಯಾದಿ ಅನುವಾಕಗಳಿಂದ ಉಪಸ್ಥಾನ ಮಾಡುವದು. ಉಳಿದದ್ದು ಹಿಂದಿನಂತೆಯೇ. ಬ್ರಹ್ಮಯಜ್ಞ ಇದನ್ನು ಪ್ರಾತರ್ಹೋಮಾನಂತರ ಅಥವಾ ಮಧ್ಯಾಹ್ನ ಸಂಧ್ಯಾನಂತರ ಇಲ್ಲವೆ ವೈಶ್ವದೇವದ ನಂತರ ಒಂದೇ ಆವರ್ತಿ ಮಾಡತಕ್ಕದ್ದು. “ಭಟ್ಟೋಜಿದೀಕ್ಷಿತೀಯ"ದಲ್ಲಿ ಆಶ್ವಲಾಯನರು ಮಧ್ಯಾಹ್ನ ಸಂಧೋತ್ತರದಲ್ಲಿಯೇ ಮಾಡಬೇಕು. “ಪ್ರಾತರ್ಹೋಮಾನಂತರ"ವೆಂದು ಹೇಳಿದ್ದು ಬೇರೆ ಶಾಖೆಯವರ ವಿಷಯವು ಎಂದು ಹೇಳಿದೆ. ಒಣಗಿದ ವಸ್ತ್ರವನ್ನುಟ್ಟುಕೊಳ್ಳುವದು. ಅಭಾವವಾದರೆ ಒದ್ದೆಯ ಬಟ್ಟೆಯನ್ನೇ ಮೂರಾವರ್ತಿ ಕೊಡಹಿ ಉಟ್ಟುಕೊಳ್ಳುವದು. ಆಚಮನ, ಪ್ರಾಣಾಯಾಮಾದಿಗಳನ್ನು ಮಾಡಿ ‘ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಬ್ರಹ್ಮಯಜ್ಞಂ ಕರಿಷ್ಯ ತರಂಗತಯಾ ದೇವರ್ಷಾಚಾರ್ಯತರ್ಷಾಂ ಕರಿಷ್ಯ ಹೀಗೆ ಸಂಕಲ್ಪಿಸಿ ದರ್ಭಾಸೀನನಾಗಿ, ದರ್ಭಹಸ್ತನಾಗಿ ಮತ್ತು ಪೂರ್ವಕ್ಕೆ ಮುಖಮಾಡಿಕೊಂಡು ಎಡದ ಮೊಣಕಾಲ ಮೇಲೆ ಮೂಲಸ್ಥಾನದಲ್ಲಿ ಬಲಪಾದವನ್ನಿಟ್ಟು ಅಥವಾ ಎಡದ ಪಾದಾಂಗುಷ್ಟದ ಮೇಲೆ ಬಲವಾದದ ಅಂಗುಷ್ಯವನ್ನಿಟ್ಟು, ಹೀಗೆ ಉಪಾ ಮಾಡಿ, ಬಲದ ಮೊಳಕಾಲಿನ ಮೇಲಿಟ್ಟ ಎಡಹಸ್ತವನ್ನು ಮೇಲ್ಮುಖ ಹಾಗೂ ಪೂರ್ವದಿಕ್ಕಿಗೆ ಅಂಗುಲಗಳಾಗುವಂತೆ ಇಟ್ಟು, ಪೂರ್ವಾಭಿಮುಖಗಳಾದ ಎರಡು ದರ್ಭೆಗಳನ್ನು ಧರಿಸಿ ಬಲಹಸ್ತದಿಂದ ಸಂಪುಟಿತ (ಮುಚ್ಚಿ) ಮಾಡಿ, ಆಕಾಶ-ಭೂಮಿಗಳ ಸಂಧಿಯನ್ನು ನೋಡುತ್ತಿರುವವನಾಗಿ ಅಥವಾ ಕಣ್ಣುಗಳನ್ನು ಮುಚ್ಚಿಕೊಂಡು, ಓಂಕಾರ ಮತ್ತು ವ್ಯಾಹೃತಿಗಳನ್ನು ಒಂದಾವರ್ತಿ ಹೇಳಿ ಗಾಯತ್ರಿಯನ್ನು ಪಾದಶಃ ಅರ್ಧಚ್ರಶಃ (ಮೊದಲು ಪಾದವನ್ನು ಮಾತ್ರ ಹೇಳಿ ಎರಡನೇ ಅರ್ಧವಾಗಿ ಹೇಳಿ) ಆಮೇಲೆ ಆದಿಯಿಂದ ಪೂರ್ಣವಾಗಿ ಹೇಳುವದು. ನಂತರ “ಅಗ್ನಿಮೀಳೇ” ಈ ಸೂಕ್ತ, ಸಂಹಿತಾ, ಬ್ರಾಹ್ಮಣ, ಷಡಂಗಗಳು ಇವುಗಳನ್ನು ಪಠಿಸುವದು ಅಥವಾ ಒಂದು ಅಧ್ಯಾಯವನ್ನು ಮುಗಿಸಿ ಇನ್ನೊಂದು ಅಧ್ಯಾಯ ಅಥವಾ ಒಂದು ಸೂಕ್ತ ಮುಗಿಸಿ ಇನ್ನೊಂದು ಸೂಕ್ತ ಇಲ್ಲವೆ ಮಂತ್ರ ಇವುಗಳನ್ನು ಯಥಾಶಕ್ತಿ ಕ್ರಮದಿಂದ ಪಠಿಸುವದು. ಪರಿಚ್ಛೇದ - ೩ ಪೂರ್ವಾರ್ಧ ೩೩೫ ಪ್ರತಿದಿನ ಮಂತ್ರ-ಬ್ರಾಹ್ಮಣಾದಿಗಳನ್ನು ಭಾಗ ಭಾಗವಾಗಿ ಅಥವಾ ಎಲ್ಲವನ್ನೂ ಯಥಾಶಕ್ತಿ ಪರಿಸತಕ್ಕದ್ದೆಂದು ಕೆಲವರನ್ನುವರು. ಚತುರ್ವೇದಾಧ್ಯಾಯಿಯಾದವನು ಋಗೈದಾದಿಯಾಗಿ ಚತುರ್ವದಗಳನ್ನು ವಿಭಾಗದಿಂದಾಗಲೀ, ಪೂರ್ಣವಾಗಿಯಾಗಲೀ ಪಠಿಸುವದು, ಏಕಶಾಖಿಯು ಸ್ವಶಾಖೆಯನ್ನೇ ಪಠಿಸುವದು. ಇಡೀ ಶಾಖೆಯನ್ನಧ್ಯಯಮಾಡದಿದ್ದಲ್ಲಿ ಸೂಕ್ತ ಅಥವಾ ಮಂತ್ರಗಳನ್ನು ಪಠಿಸಿದ ನಂತರ ಒಂದೊಂದು ಯಜುರ್ವೇದ, ಸಾಮ, ಅಥರ್ವ ಮಂತ್ರಗಳನ್ನು ಹೇಳಿ ಉಪನಿಷತ್ತು ಮತ್ತು ಇತಿಹಾಸ ಪುರಾಣಾದಿಗಳನ್ನೂ ಪಠಿಸುವದು. ಆಮೇಲೆ ಪುರುಷಸೂಕ್ತವನ್ನು ಪಠಿಸಿ “ನಮೋಬ್ರಹ್ಮನೇ ನಮೋಸ್ವಗ್ನ ಈ ಮಂತ್ರವನ್ನು ಮೂರಾವರ್ತಿ ಪಠಿಸುವದು. ಇಲ್ಲಿ ಹೇಳಿದ ಮಂತ್ರಗಳಿಗೆ ಋಷ್ಯಾದಿ ಸ್ಮರಣಮಾಡಬೇಕೆಂದಿಲ್ಲ. ತೈತ್ತಿರೀಯರು ಆದ್ಯಂತಗಳಲ್ಲಿ ವಿದ್ಯುದಸಿ” ಇತ್ಯಾದಿಗಳನ್ನು ಪಠಿಸುವರು. ಕೂತುಕೊಂಡು ಪಾಠಮಾಡಲಸಮರ್ಥನಾದರೆ ನಿಂತು, ತಿರುಗಾಡುತ್ತ ಅಥವಾ ಮಲಗಿಯಾದರೂ ಪಠಿಸಬಹುದು; ಎಂದು ಆಶ್ವಲಾಯನ” ಮತವು. ಅನಧ್ಯಾಯ ದಿನದಲ್ಲಿ ಸ್ವಲ್ಪವನ್ನೇ ಪರಿಸುವದು. ತರ್ಪಣ ಜನಿವಾರವು ಬಲಗಡೆಯಾಗಿರಬೇಕು. ಬೆರಳುಗಳ ತುದಿಯಿಂದ (ದೇವತೀರ್ಥ) ತರ್ಪಣಮಾಡಬೇಕು. ದರ್ಭೆಗಳನ್ನು ತುದಿಮುಂದೆ ಮಾಡಿ ಹಿಡದುಕೊಳ್ಳುವದು. “ದೇವ ಋಷಿ ತರ್ಪಣವನ್ನು ಅಕ್ಷತಜಲದಿಂದಲೂ, ಆಚಾರ್ಯ-ಪಿತೃತರ್ಪಣವನ್ನು ತಿಲೋದಕದಿಂದಲೂ ಮಾಡಬೇಕು” “ಪ್ರಜಾಪತಿಸ್ಪಪ್ಪತು, ಬ್ರಹ್ಮಾತೃಶ್ಯತು, ವೇದಾಶ್ಚತ್ಯಂತು, ದೇವಾಸ್ಪಶ್ಯಂತು, ಋಷಯದೃಶ್ಯಂತು, ಸರ್ವಾಣಛಂದಾಂಸಿ ಕೃಪ್ಯಂತು, ಓಂಕಾರದೃತು, ವಷಟ್ಕಾರದೃತು, ವ್ಯಾಹೃತಯನ್ನಪಂತು, ಸಾವಿತ್ರಿ ಕೃಷ್ಣತು, ಯಜ್ಞಾವಸ್ವಂತ, ದ್ಯಾವಾಪೃಥಿವೀ ಕೃತಾಂ, ಅಂತರಿಕ್ಷಂತ್ರತು, ಅಹೋರಾತ್ರಾಣಿಪಂತು, ಸಾಂಖ್ಯಾ ಸಂತು, ಸಿದ್ದಾಕೃಪ್ಯಂತ, ಸಮುದ್ರಾವ್ಯಯ, ನರ ಸಂತು, ಗಿರಯಸ್ಸಂತು, ಕೃಷಧಿ ವನಸ್ಪತಿ ಗಂಧರ್ವಾಪ್ಪರಸದೃಶ್ಯಂತು, ನಾಗಾಸ್ವಯ, ವಯಾಂಸಿ ತೃಪ್ಪಂತು, ಗಾವಕೃಂತು, ಸಾಧ್ಯಾಗ್ನಂತು, ವಿಪ್ರಾÂಂತು, ಯಕ್ಷಾಕೃಶ್ಯಂತು, ರಾರಿಸಿ ತೃಪ್ಪಂತು, ಭೂತಾನಿ ಕೃಂತು” ಇನ್ನು ಋಷಿಗಳು -ಜನಿವಾರ ಮಾಲಿಕೆಯಾಗಿರಬೇಕು. ಕನಿಷ್ಠಿಕೆಯ ಬುಡದಿಂದ (ಕಾಯತೀರ್ಥ) ಮಧ್ಯದರ್ಭೆಯಿಂದ ತರ್ಪಣವು. “ಶಚರ್ಚಿನದೃಶ್ಯಂತ, ಮಾಧ್ಯಮಾಸೃಂತು, ಕೃತ್ಸಮದಸೃಷ್ಟತು, ವಿಶ್ವಾಮಿತ್ರಸ್ಸತು, ವಾಮದೇವಸೃತು, ಸತು, ಭರದ್ವಾಜಸ್ಸತು, ವಸಿಷ್ಠ ನೃಪತು, ಪ್ರಗಾಥಾಸ್ಕಶ್ಚಯ, ಪಾವಮಾನ್ಯ ನೃಪತು, ಕುದ್ರಸೂಕ್ತಾದೃಶ್ಯಂತ, ಮಹಾಸೂಕ್ತಾಕೃದ್ಯಂತು” (ಏಕವಚನವಿದ್ದಲ್ಲಿ “ತೃತು” ದ್ವಿವಚನವಿದ್ದಲ್ಲಿ “ತೃತಾಂ” ಬಹುವಚನವಿದ್ದಲ್ಲಿ “ತೃವ್ಯಂತು” ಹೀಗೆ ಎಲ್ಲ ಕಡೆಯಲ್ಲಿಯೂ ಉಚ್ಚಾರವು ಇನ್ನು ಆಚಾರ್ಯ ಪಿತೃತರ್ಪಣ – ಜನಿವಾರವನ್ನು ಎಡಕ್ಕೆ ಮಾಡಿಕೊಳ್ಳುವದು. ತರ್ಪಣವನ್ನು ಪಿತೃತೀರ್ಥ (ಅಂಗುಷ್ಟ, ಬೆರಳುಗಳ ಮಧ್ಯ) ದಿಂದ ಕೊಡತಕ್ಕದ್ದು. ಅಗ್ರ ಮೂಲಗಳನ್ನು ಕೂಡಿಸಿದ ದ್ವಿಗುಣ ದರ್ಭಗಳು. “ಸುಮಂತು, ಜೈಮಿನಿ, ವೈಶಂಪಾಯನ, ಶೈಲ, ಸೂತ್ರಭಾಷ್ಯ, ಭಾರತ, ಮಹಾಭಾರತ, ಧರ್ಮಾಚಾರ್ಯಾನೃಶ್ಯಂತು, ಜಾನಂತಿ, ಬಾಹವಿ, ಗಾರ್ಗ್, ಗೌತಮ, ಶಾಕಲ್ಯ, ಬಾಭ್ರವ್ಯ, ಮಾಂಡವ್ಯ, ಮಾಂಡುಕೇಯಾದೃಶ್ಯಂತು, ಗರ್ಗಿ, ವಾಚಕವೀತೃತು, ವಡವಾ ಪ್ರಾತಿಥೇಯ ಕೃತು, ಸುಲಭಾ ೩೩೬ ಧರ್ಮಸಿಂಧು ಮೈತ್ರೇಯಿ ತೃಪ್ಪತು, ಕಹೋಳಂ ತರ್ಪಯಾಮಿ, ಕೌಷೀತಕೀತರ್ಪಯಾಮಿ, ಮಹಾಕೌಶೀತಕೀಂತರ್ಪಯಾಮಿ ಪೈಂಗ್ಯಂ ತರ್ಪಯಾಮಿ, ಮಹಾಂಗಂ ತರ್ಪಯಾಮಿ, ಸುಯಜ್ಞಂ ತರ್ಪಯಾಮಿ, ಸಾಂಖ್ಯಾಯನಂ ತರ್ಪಯಾಮಿ, ಐತರೇಯಂತರ್ಪಯಾಮಿ, ಮಹೆತರೇಯಂ ತರ್ಪಯಾಮಿ, ಶಾಕಲು ತರ್ಪಯಾಮಿ, ಬಾಷ್ಕಲು ತರ್ಪಯಾಮಿ, ಸುಜಾತವಕ್ರಂ ತರ್ಪಯಾಮಿ, ಔದವಾಹಿಂ ತರ್ಪಯಾಮಿ, ಮಹೌದವಾಹಿಂ ತರ್ಪಯಾಮಿ, ಸೌಜಾಮಿಂ ತರ್ಪಯಾಮಿ, ಶೌನಕಂ ತರ್ಪಯಾಮಿ, ಆಶ್ವಾಲಾಯನಂ ತರ್ಪಯಾಮಿ, ಯಚಾನ ಆಚಾರ್ಯಾ ಸರ್ವತೃಂತು” ತಂದೆ ತೀರಿರುವವನು- “ಪಿತೃತ್ರಯೀ, ಮಾತೃತ್ರಯೀ, ಸಪತ್ನಿಕ ಮಾತಾಮಹತ್ರಯೀ, ವ” ಇತ್ಯಾದಿ ಏಕೋದ್ದಿಷ್ಟಗಣ ಈ ಎಲ್ಲ ಮಹಾಲಯೋಕ್ತ ಮೃತರಾದವರಿಗೆ ತರ್ಪಣ ಕೊಡತಕ್ಕದ್ದು. ತರ್ಪಣಾದಿ ವಿಚಾರ ಮೊದಲು ಸಂಬಂಧ (ಪಿತೃನ್ ಇತ್ಯಾದಿ) ನಂತರ ನಾಮ, ಗೋತ್ರ, ರೂಪ ಈ ಕ್ರಮದಂತ ಉಚ್ಚರಿಸಿ ತರ್ಪಣ ಕೊಡಬೇಕು. ದೇವತೆಗಳಿಗೆ ಒಂದೊಂದೇ ಅಂಜಲಿ, ಋಷಿಗಳಿಗೆ ಎರಡೆರಡು, ಪಿತೃಗಳಿಗೆ ಮೂರು ಮೂರು ಅಂಜಲಿಗಳನ್ನು ಕೊಡತಕ್ಕದ್ದು, ಈ ಸಂಖ್ಯೆಯು ಆಶ್ವಲಾಯನರಿಗೆ ವಿಕಲ್ಪವು. ಆ ಸೂತ್ರದಲ್ಲಿ ಸಂಖ್ಯೆಯನ್ನು ಹೇಳಿಲ್ಲ. ಸಂಖ್ಯೆಯನ್ನು ಸೂತ್ರದಲ್ಲಿ ಹೇಳಿದ್ದರೆ ಅದು ಆವಶ್ಯಕ ಎಂದು “ಮಾಧವ” ಮತವು, ಮಾತೃತ್ರಯಿಗಿಂತ ಭಿನ್ನರಾದ ಸ್ತ್ರೀಯರಿಗೆ ಒಂದೇ ಅಂಜಲಿಯು. ಇಷ್ಟೆಲ್ಲ ವಿಕೃತವಾದ ತರ್ಪಣದಲ್ಲಿ ಅಸಮರ್ಥನಾದರೆ “ಆಬ್ರಹ್ಮಸ್ತಂಬಪರ್ಯಂತಂ ದೇವರ್ಷಿ ಪಿತೃಮಾನವಾಗಿ ತುಂತು ಪಿತರಃ ಸರ್ವ ಮಾತೃಮಾತಾಮಹಾದಯ: ಅತೀತ ಕುಲಕೋತೀನಾಂ ಸಪ್ತದ್ವೀಪನಿವಾಸಿನಾಂ|ಆಬ್ರಹ್ಮಭುವನಾಲೋಕಾದಿದಮಸ್ತು ತಿಲೋದಕಂ” ಹೀಗೆ ಹೇಳಿ ಮೂರು ಅಂಜಲಿಗಳನ್ನು ಕೊಡುವದು. ನಂತರ “ಯೇಕೇಶಾಸ್ಕುತ್ತುಲೇಜಾತಾ ಅಪುತ್ರಾಗೋತ್ರಿಸೋಮೃತಾ: ತೇಗ್ನಹಂತು ಮಯಾರುಂವಸ್ತ್ರ ನಿಪೀಡನೋದಕಂ” ಹೀಗೆಂದು ಉಟ್ಟ ವಸ್ತ್ರದ ತುದಿಯನ್ನು ಹಿಂಡಿ ಜಲವನ್ನು ಬಿಡತಕ್ಕದ್ದು. ಈ ಕ್ರಮದಲ್ಲಿ ಋಗ್ವದಿಗಳು ಪ್ರಾಚೀನಾವೀತಿಗಳಾಗತಕ್ಕದ್ದು. ಇತರರು ನಿವೀತಗಳಾಗತಕ್ಕದ್ದು, ಇದು ಮನೆಯಲ್ಲಿ ನಿಷಿದ್ದವು. ಬ್ರಹ್ಮಯಜ್ಞವು ಗ್ರಾಮದ ಹೊರಗೆ ಜಲಸಮೀಪದಲ್ಲಿ ಪ್ರಶಸ್ತವು, ಗ್ರಾಮದಲ್ಲಿ ಮನಸ್ಸಿನಿಂದಲೇ ಪಠನವು ಎಡಗೈಯಿಂದ ಮುಟ್ಟಿಕೊಂಡ ಬಲಹಸ್ತದಿಂದಾಗಲೀ ಅಥವಾ ಅಂಜಲಿಯಿಂದಾಗಲೀ ತರ್ಪಣ ಮಾಡಬೇಕು. ದರ್ಭೆಯನ್ನು ಹಾಸಿ ಅದರ ಮೇಲೆ ತರ್ಪಣ ಮಾಡಬೇಕು. ಬರೇ ನೆಲದಲ್ಲಿ ಮಾಡತಕ್ಕದ್ದಲ್ಲ. ಮತ್ತು ಬರೇ ಜಲದಲ್ಲಿ ಮಾಡಬಾರದು. ಪಾತ್ರೆಯಿಂದ ಜಲವನ್ನು ತಕ್ಕೊಂಡು ಒಳ್ಳೇಪಾತ್ರದಲ್ಲಿ ಚೆಲ್ಲಬಹುದು. ಅಥವಾ ತುಂಬಿದ ನೀರಿನ ಹೊಂಡದಲ್ಲಿ ಬಿಡತಕ್ಕದ್ದು, ಬಂಗಾರ, ಬೆಳ್ಳಿ, ತಾಮ್ರ, ಕಂಚು ಈ ಪಾತ್ರಗಳಲ್ಲಾಗಬಹುದು. ಮಣ್ಣಿನ ಪಾತ್ರೆಯಾಗಕೂಡದು. ನೆಲವು ಅಶುಚಿಯಾಗಿದ್ದರೆ ಅದನ್ನು ಬಿಟ್ಟು ನವೀಜಲದಲ್ಲಿ ಮಾಡಬಹುದು. ಅನಾಮಿಕಾ ಬೆರಳಲ್ಲಿ ಬಂಗಾರ, ತರ್ಜನಿಯಲ್ಲಿ ಬೆಳ್ಳಿ, ಕನಿಷ್ಠಿಕೆಯಲ್ಲಿ ಖಡ್ಗಮೃಗದ ಕೋಡಿನ ಉಂಗುರ ಇವುಗಳ ಧಾರಣಮಾಡುವಿಕೆಯಿಂದ ಮನುಷ್ಯನು ಪನೀತನಾಗುವನು. ಬೆರಳುಗಳ ತುದಿಗೆ “ದೈವತೀರ್ಥ"ವೆನ್ನುವರು. ಅನಾಮಿಕಾ, ಕನಿಷ್ಠ ಬೆರಳುಗಳ ಮಲಕ್ಕೆ “ಕಾಯತೀರ್ಪ"ವೆನ್ನುವರು. ಅಂಗುಷ್ಟ ಮತ್ತು ಬೆರಳುಗಳ ಮಧ್ಯಕ್ಕೆ

ಪರಿಚ್ಛೇದ ೩ ಪೂರ್ವಾರ್ಧ 242 “ಪಿತೃತೀರ್ಥ"ವನ್ನುವರು. ಅಂಗುಷ್ಠದ ಡಕ್ಕೆ “ಬ್ರಾಹ್ಮತೀರ್ಥ"ವೆನ್ನುವರು, ಬಾವಿಯ ನೀರನ್ನು ಎತ್ತಿ ಅದರಿಂದ ತರ್ಪಣ ಮಾಡುವದಿದ್ದಲ್ಲಿ ನೀರಿಗೆ ತಿಲಗಳನ್ನು ಮಿಶ್ರ ಮಾಡಿಕೊಳ್ಳಬೇಕು. ಹರಿಯುವ ಅಥವಾ ಹೊಂಡದ ಜಲದಲ್ಲಿ ತರ್ಪಣ ಮಾಡುವಾಗ ಎಳ್ಳುಗಳನ್ನು ಎಡಗೈಯಿಂದ ಬಲಗೈಯ್ಯಲ್ಲಿ ತೆಗೆದುಕೊಂಡು ಅದರಿಂದ ತರ್ಪಣಮಾಡುವದು. ತಿಲತರ್ಪಣವು ಮನೆಯಲ್ಲಿ ನಿಷಿದ್ಧವು. ರವಿ, ಶುಕ್ರವಾರ, ಸಪ್ತಮಿ, ನಂದಾದಿತಿಥಿ, ಕೃತ್ತಿಕಾ, ಮಘಾ, ಭರಣಿ ನಕ್ಷತ್ರ, ಮನ್ನಾದಿ, ಯುಗಾದಿ ಇವುಗಳಲ್ಲಿ ಪಿಂಡದಾನ, ಮೃತ್ತಿಕಾ ಸ್ನಾನ, ತಿಲತರ್ಪಣ ಇವುಗಳನ್ನು ಮಾಡತಕ್ಕದ್ದಲ್ಲ. ತಂದೆತಾಯಿಗಳ ಶ್ರಾದ್ಧದಿನದಲ್ಲಿ ನಿತ್ಯತರ್ಪಣಕ್ಕೆ ತಿಲಗಳು ವರ್ಜಗಳು, ಪರ್ವದಿನಗಳಲ್ಲಿ ಈ ಹೇಳಿದ ನಿಷಿದ್ದ ತಿಥಿ, ವಾರಾದಿಗಳು ಬಂದರೂ ತಿಲತರ್ಪಣಕ್ಕಡ್ಡಿಯಿಲ್ಲ. ವಿಕಿರ, ಪಿಂಡಪ್ರದಾನ, ತರ್ಪಣ, ಸ್ನಾನ ಇವುಗಳಲ್ಲಿ ಆಚಮನ ಮಾಡಿದ ದರ್ಭೆಗಳನ್ನು ತ್ಯಜಿಸತಕ್ಕದ್ದು, ದರ್ಭತ್ಯಾಗಕ್ಕೆ “ಯೇಷಾಂಪಿತಾನನ ಭ್ರಾತಾರಪುತ್ರೋ ನಾನ್ಯಗೋತ್ರಿಣತೇಸರ್ವೆ ತೃಪ್ತಿ ಮಾಯಾಂತು ಮಯೋತ್ಸ ಕುಸ್ತಥಾ” ಇದು ಮಂತ್ರವು. ಹಿರಣ್ಯಕೇಶೀಯ ಬ್ರಹ್ಮಯಜ್ಞ ಹಿರಣ್ಯಕೇಶೀಯರಿಗೆ ಸಂಕಲ್ಪದ ನಂತರ, ಮೂರು ಗಾಯತ್ರಿಪಠನದ ನಂತರ ಹಿಂದೆ ಹೇಳಿದಂತೆಯೇ ಕ್ರಮವು. ಆಮೇಲೆ “ಇಷೇತ್ರೋರ್ಜೆತ್ವಾ” ಇತ್ಯಾದಿ ಅನುವಾರ ಅಥವಾ ಅಧ್ಯಾಯಗಳನ್ನು ಯಥಾಶಕ್ತಿ ಪಠಿಸಿ ಋಜಂತ್ರ, ಸಾಮಮಂತ್ರ, ಷಡಂಗ, ಇತಿಹಾಸ, ಪುರಾಣಾದಿಗಳನ್ನು ಪಠಿಸಿ “ನಮೋಬ್ರಹ್ಮಣ” ಈ ಮಂತ್ರವನ್ನು ಮೂರಾವರ್ತಿ ಹೇಳುವದು. ತರ್ಪಣ ವಿಷಯ ಇದು ತೈತ್ತಿರೀಯರಿಗೆ ಬ್ರಹ್ಮಯಜ್ಞಾಂಗವಾದದ್ದಲ್ಲ. ಆದಕಾರಣ ಬ್ರಹ್ಮಯಜ್ಞಾನಂತರ ಬಿಡುವೇಳೆಯಲ್ಲಿ ಅಥವಾ ಬ್ರಹ್ಮಯಜ್ಞಕ್ಕಿಂತ ಮೊದಲು ಮಾಡಬಹುದು. ಕಾಣ್ಯ, ಮಾಧ್ಯಂದಿನಾದಿಗಳಿಗೂ ಇದರಂತೆಯೇ “ದೇರ್ವಾಚಾರ್ಯ ಪಿತೃತೃಪ್ತಿದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ದೇವರ್ಷಾಚಾರ್ಯ ಪಿತೃತರ್ಪಣಂ ಕರಿಷ್ಯ” ಹೀಗೆ ಪ್ರತ್ಯೇಕವಾಗಿ ಸಂಕಲ್ಪಿಸುವದು. ಹಿಂದೆ ಹೇಳಿದಂತೆ ಒಂದೊಂದು ಅಂಜಲಿಯಿಂದ ದೇವತರ್ಪಣವು “ಬ್ರಹ್ಮಾಣಂ ತರ್ಪಯಾಮಿ ಬೃಹಸ್ಪತಿಂ ಅಗ್ನಿಂ-ವಾಯು-ಸೂರ್ಯಂ-ಚಂದ್ರಮಸಂ-ನಕ್ಷತ್ರಾಣಿ-ಇಂದ್ರಂ ರಾಜನಂಯಮಂ ರಾಜಾನಂ ವರುಣಂ ರಾಜಾನಂ-ಸೋಮಂ ರಾಜಾನಂ-ವೈಶ್ರವಣಂ ರಾಜಾನಂ-ವಜ್ರನ್-ರುದ್ರಾನ್-ಆದಿತ್ಯಾನ್ ವಿಶ್ವಾನ್‌ವಾನ್ ಸಾಧ್ಯಾನ್ಋಧೂನ್ ಭಸ್ಮರುತಃ ಅಥರ್ವಣ:ಅಂಗಿರಸಃ ತರ್ಪಯಾಮಿ, ನಂತರ ನಿವೀತಿಯಾಗಿ ಉತ್ತರಕ್ಕೆ ಮುಖಮಾಡಿಕೊಂಡು ಎರಡೆರಡು ತರ್ಪಣಗಳನ್ನು ಮಾಡುವದು. “ವಿಶ್ವಾಮಿತ್ರಂ ಜಮದಗ್ನಿ೦ಭರದ್ವಾಜರಿ-ಗೌತಮಂ-ಅಂವಂಕಶ್ಯಪಂಅರುಂಧತೀಂ, ಅಗಸ್ಕ ಕೃಷ್ಣಪಾಯನಂ-ಜಾತೂರ್ಕಂ ತರುಂತೃಣಬಿಂದುಂ-ವರ್ಮಿಣಂವರೂಥಿನಂ-ವಾಜಿನಂ ವಾಜಿಶ್ರವಸಂ ತರ್ಪಯಾಮಿ-ತರ್ಪಯಾಮಿ ಸತ್ಯಶ್ರವಸಂ-ಸುಶ್ರವಸಂ-ಸುತಶ್ರವಸಂ ಸೋಮಶುಷ್ಮಾಣಂ-ಸತ್ವವಂತಂ-ಬೃಹದುಂ-ವಾಮದೇವಂ-ವಾಜಿರತ್ನಂ-ಹರ್ಯಾಯನಂ- ಉದಮಯಂ-ಧನಂಜಯಂ ಬಭ್ರುಂರುಣಂ-ತ್ರಿವರ್ಷ೦ತ್ರಿಧಾತುಂ ಶಿಬಿಂ ಪರಾಶರಂ ವಿಷ್ಣುಂ ರುದ್ರಂ ಸ್ಕಂದಂ ಕಾಶೀಶ್ವರಂ ಜ್ವರಂ ಧರ್ಮಂ ಅರ್ಥಂ ಕಾಮಂ ಕ್ರೋಧಂ ವಸಿಷ್ಠಂ ಇಂದ್ರಂ · aau ಧರ್ಮಸಿಂಧು ಇಷ್ಟಾರಂ ಕರ್ತಾರಂ ಧರ್ತಾರಂ ಧಾತಾರಂ ಮೃತ್ಯುಂ ಸವಿತಾರಂ ಸಾಂ ಋಗೈದಂ ಯಜುರ್ವೇದು ಸಾಮವೇರಂ ಅಥರ್ವವೇದಂ ಇತಿಹಾಸಪುರಾಣಂ ತರ್ಪಯಾಮಿ ತರ್ಪಯಾಮಿ, ಆಮೇಲೆ ಪ್ರಾಚೀನಾವೀತಿಯಾಗಿ ದಕ್ಷಿಣಮುಖ ಮಾಡಿಕೊಂಡು ಮೂರು ಮೂರು ಅಂಜಲಿಗಳಿಂದ ತರ್ಪಣಮಾಡುವದು. “ವೈಶಂಪಾಯನಂ ಪಿಂಗಲಂ ತಿತ್ತಿರಂ ಉಖಂ ಆಯಂ ಪದಕಾರಂ ಕೌಂಡಿಂ ವೃತ್ತಿಕಾರಂ ಸೂತ್ರಕಾರಾನ್ ಸತ್ಯಾಷಾಢಂ ಪ್ರವಚನ ಕರ್ತ್ಯನ್ ಆಚಾರ್ಯಾನ್ ಋಷಿನ್ ವಾನಪ್ರಸ್ಥಾನ್ ಊರ್ಧ್ವರೇತಸಃ ಏಕಷ್ಟಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ”, (ಹೀಗೆ) ಇದಿಷ್ಟು ವಿಶೇಷವು. ಉಳಿದದ್ದೆಲ್ಲ ಹಿಂದಿನಂತೆಯೇ. ಆಪಸ್ತಂಬಾದಿಗಳಿಗೆ “ಬ್ರಹ್ಮಾದಯೋ ಯೇ ದೇವಾಃ ತಾನ್ ಸರ್ವಾನ್ ದೇವಾಂಸಮರ್ಪಯಾಮಿ, ಸರ್ವಾನ್ ದೇವಗಣಾನ್ ಪರ್ವಾದೇವಪ ಪರ್ವಾನ್ ಪುತ್ರಾನ್ ಸರ್ವಾನ್ ಪುತ್ರಾನ್ ಭೂರ್ದವಾನ್ ಭುವರ್ದವಾನ್ ಸುವರ್ದವಾನ್ ಭೂರ್ಭುವಃ ಸುರ್ವವಾನ್ ಕೃಷ್ಣಪಾಯನಾದಯೋ ಯೇ ಋಷಯಃ ತಾಋಷೀಂದ್ರರ್ಪಯಾಮಿ ಸರ್ವಾನ್‌ಋಷೀನ್ ಸರ್ವಾನ್ ಋಷಿಗಳಾನ್ ಸರ್ವಋಷಿಪತ್ನಿ ಸರ್ವಾನ್‌ಋಷಿಪುತ್ರಾನ್ ಸರ್ವಋಷಿಪೌತ್ರಾನ್ ಭೂಋಷಿನ್ (೪) ಸೋಮ, ಪಿತೃಮಾನ್, ಅಂಗಿರಸ್ವತ್ ಅಗ್ನಿಷ್ಪಾತ್ರ ತಾನ್ ಪಿಳ್ಳೂನ್” ಇತ್ಯಾದಿ ದಶಪಿತೃ ಪರ್ಯಾಯಗಳನ್ನು ತರ್ಪಿಸುವದು. ಉಳಿದವರಿಗೂ ಹೀಗೆಯೇ. ಕಾತ್ಯಾಯನರಿಗೆ ಪೂರ್ವಾಭಿಮುಖವಾಗಿ ಆಚಮನಮಾಡಿ ಪವಿತ್ರಗಳನ್ನು ಧರಿಸಿ ಪ್ರಾಣಾಯಾಮ ಮಾಡಿ “ಶ್ರೀ ಪರ=ರ್ಥಂ ಬ್ರಹ್ಮಯನ ಯತ್ನ” ಹೀಗೆ ಸಂಕಲ್ಪಿಸಿ ದರ್ಭೆಗಳನ್ನು ಅಂಜಲಿಯಲ್ಲಿ ಧರಿಸಿ ಅಂಜಲಿಯನ್ನು ಬಲದಮೊಣಕಾಲಿನಲ್ಲಿಟ್ಟು ಅನ್ಯಸೂತ್ರದಲ್ಲಿ ಹೇಳಿದಂತೆ ಗಾಯತ್ರಿಯನ್ನು ಮೂರಾವರ್ತಿ ಉಚ್ಚರಿಸಿ “ಇಷೇತ್ವಾ” ಇತ್ಯಾದಿ ಸಂಹಿತಾ ಬ್ರಾಹ್ಮಣಗಳನ್ನು ಹಿಂದೆ ಹೇಳಿದಂತೆ ಪರಿಸುವದು. ತುದಿಯಲ್ಲಿ ಉಪನಿಷತ್, ಇತಿಹಾಸ, ಪುರಾಣಾದಿಗಳನ್ನು ಪಠಿಸಿ “ಓಂಸ್ವಸ್ತಿ ಎಂದು ಪರಿಸುವದು. ಬೇರೆ ಸೂತ್ರದಲ್ಲಿ ಹೇಳಿರುವದರಿಂದ “ನಮೋಬ್ರಹ್ಮಣ” ಎಂದು ಮೂರಾವರ್ತಿ ಕೆಲವರು ಪಠಿಸುವರು. ತರ್ಪಣ ಇದನ್ನು ಪ್ರಾತಃ ಸಂಧ್ಯಾವಂದನೆಯ ನಂತರ ಅಥವಾ ಮಧ್ಯಾಹ್ನ ಬ್ರಹ್ಮಯಜ್ಞದ ನಂತರ ಒಂದೇ ಆವರ್ತಿ ಮಾಡತಕ್ಕದ್ದು. ಬ್ರಹ್ಮಯಜ್ಞಕ್ಕೆ ಮೂರು ಕಾಲಗಳನ್ನು ವಿಕಲ್ಪವಾಗಿ ಹೇಳಿದೆ. “ದೇವರ್ಷಿ ತರ್ಪಣಂ ಕರಿಷ್ಯ ಹೀಗೆ ಸಂಕಲ್ಪವು. ಹಿಂದೆ ಹೇಳಿದಂತೆ ಮೊದಲು ದೇವತರ್ಪಣ ಮಾಡುವದು. ನೆಲ ಅಥವಾ ತಾಮ್ರಾದಿ ಪಾತ್ರಗಳಲ್ಲಿ ದರ್ಭಗಳನ್ನಿಟ್ಟು “ವಿಶ್ವೇದೇವಾಸಆಗತ ಹೀಗೆಂದು ದೇವತೆಗಳನ್ನಾವಾಹಿಸಿ “ದೇವಾ: ಶ್ರುಣಮು” ಹೀಗೆ ಜಪಿಸಿ ಮೂರು ಪೂರ್ವಾಗ್ರ ದರ್ಭಗಳನ್ನು ಹಿಡಕೊಂಡು ದೇವತೀರ್ಥದಿಂದ “ಓಂ ಬ್ರಹ್ಮಾತೃಕೃತಾಂ ವಿಷ್ಣು ಸ್ವಷ್ಟತು ರುದ್ರ: ಪ್ರಜಾಪತಿ: ರವಾ: ಭಂಜಾ೦ಸಿ ವೇದಾ ಋಷಯಃ ಪುರಾಣಾಚಾರ್ಯಾ ಗಂಧರ್ವಾಣ ಇತರಾಚಾರ್ಯಾ: ಸಂವತ್ಸರಾ:ಪರಿಚ್ಛೇದ - ೩ ಪೂರ್ವಾರ್ಧ LAE ಸಾವಯವಾ: ದೇವ್ಯ: ಅಪ್ಸರಸ: ದೇವಾನುಗಾ: ನಾಗಾ: ಸಾಗರಾ: ಪರ್ವತಾ: ಸರಿತಃ ಮನುಷ್ಮಾ: ಯಕ್ತಾ: ರಕ್ಷಾಂಸಿ ಪಿಶಾಚಾ: ಸುಪರ್ಣಾ: ಭೂತಾನಿ ಪಶವ: ವನಸ್ಪತಯ: ಓಷಧಯ: (ತೃಪಂತು) ಭೂತಗ್ರಾಮಶ್ಚತುರ್ವಿಧನೃಶ್ಯತಾಂ” ಹೀಗೆ ಸರ್ವತ್ರ ಓಂಕಾರಸಹಿತವಾಗಿ ಹಾಗೂ ಪ್ರಥಮಾವಿಭಕ್ತಿಯಿಂದ ಕೂಡಿ ಹೆಸರು ಹೇಳಿ ತರ್ಪಣಮಾಡತಕ್ಕದ್ದು. “ಸಪ್ತ ಋಷಯಃ” ಹೀಗೆ ಹೇಳಿ ಋಷಿಗಳನ್ನಾವಾಹಿಸಿ ನಿವೀತಿಯಾಗಿ ಎರಡೆರಡಾವರ್ತಿ ತರ್ಪಣವು ಸದಕರು ತೃಪತು ಸನಂದನ: ಸನತ್ಕುಮಾರ: ಕಪಿಲ: ಆಸುರಿ: ವೋಡು: ಪಂಚಶಿಖತು. ನಂತರ ಅಪಸವ್ಯವಾಗಿ “ಉಶಂತಾ” ಎಂದು ಪಿತೃಗಳನ್ನಾವಾಹಿಸಿ “ಆಯಂತುನಃಪಿತರಃ” ಹೀಗೆ ಹೇಳಿ ಪಿತೃತೀರ್ಥದಿಂದ ಮೂರಾವರ್ತಿ ತರ್ಪಣ ಮಾಡತಕ್ಕದ್ದು. “ಕವ್ಯವಾಡನಲಕೃಷ್ಕತಾಂ ಸೋಮ: ಅರ್ಯಮಾ ಅಗ್ನಿಷ್ಟಾತ್ರ: ಪಿತರಸ್ಪಶ್ಯಂ ತಾಂ ಸೋಮಪಾಃ ಪಿತರ ಬರ್ಹಿಷದ=ಯಮಾಯ ನಮಸ್ತರ್ಪಯಾಮಿ, ಧರ್ಮರಾಜಾಯ ಮೃತ್ಯುವ ಅಂತಕಾಯ -ವೈವಸ್ವತಾಯ-ಕಾಲಾಯ-ಸರ್ವಭೂತಕ್ಷಯಾಯ-ಔದಂಬರಾಯ ನೀಲಾಯ ಪರಮೇಷ್ಟಿನೇ -ವೃಕೋದರಾಯ-ಚಿತ್ರಾಯ್”ಚಿತ್ರಗುಪ್ತಾಯ ನಮಸ್ತರ್ಪಯಾಮಿ ಈ ಯಮ ತರ್ಪಣವು ವಿಕಲ್ಪವು, ಸೂತ್ರದಲ್ಲಿ ಏಕೇ” ಎಂದು ಕೇಚಿನ್ಮತವನ್ನು ಸೂಚಿಸಿದೆ. ಜೀವಿತ್ರಿತೃಕನು ಉಪವೀತವನ್ನು ಮುಂಗೈವರೆಗೆ ಮಾತ್ರ ಅಪಸವ್ಯಮಾಡುವದು. ತಂದೆ ತೀರಿದವನು, ಪಿತ್ರಾದಿತ್ರಯೇ ಮೂತ್ರಾದಿತ್ರಯಿಗಳ ತರ್ಪಣಮಾಡಿ ಉದೀರತಾಂ” ಇತ್ಯಾದಿ ಒಂಭತ್ತು ಮಂತ್ರಗಳಿಂದ ಜಲದಲ್ಲಿ ಅಂಜಲಿಯಿಂದ ಧಾರಾಕಾರವಾಗಿ ಬೀಳುವಂತೆ ತರ್ಪಣ ಮಾಡುವದು. “ಉದೀರಾಂ ಅಂಗೀರಸೋನ: ಪಿತರೋ “ಆಯಂತುನ ಊರ್ಜಂವಹಂತೀ-ಪಿತೃಜ್ಞ ಸ್ವಧಾನಮ ಯೇಬೇಹ ಮಧುವಾತಾ(೩)” ಹೀಗೆ ಒಂಭತ್ತು ಮಂತ್ರಗಳಿಗೂ ಪ್ರತ್ಯೇಕವಾಗಿ ತರ್ಪಣಮಾಡತಕ್ಕದ್ದು. ‘ತಧ್ವಂ” ಎಂದು ಮೂರಾವರ್ತಿ ಸೇಚನ ಮಾಡುವದು. ಆಮೇಲೆ “ನಮೋವಃ ಪಿತರಃ” ಎಂಬ ಎಂಟು ಯಜುರ್ವೇದ ಮಂತ್ರಗಳನ್ನು ಪಠಿಸಿ ಮಾತಾಮಹಾದಿಗಳಿಗೂ ಏಕೋದ್ದಿಷ್ಟಗಣಗಳಿಗೂ ತರ್ಪಣ ಕೊಡತಕ್ಕದ್ದು. “ದೇವಾಗಾತುವಿದ” ಎಂದು ವಿಸರ್ಜನ ಮಾಡುವದು. ಸ್ನಾನವಸ್ತ್ರನಿಡನ ಉದಕಾದಿಗಳನ್ನು ಹಿಂದೆ ಹೇಳಿದಂತೆಯೇ ಮಾಡತಕ್ಕದ್ದು, ಪ್ರಾತರ್ಹೋಮಾನಂತರದಲ್ಲಿ ದೇವತಾರ್ಚನೆ-ನಂತರ ನಾಲ್ಕನೇ ಭಾಗದಲ್ಲಿ ಬ್ರಹ್ಮಯಜ್ಞದ ನಂತರ ಮಾಡತಕ್ಕದ್ದು. ದಿನದ ಐದನೇಭಾಗಕೃತ್ಯ-ವೈಶ್ವದೇವಾದಿಗಳು “ಪಂಚಸೂನಾ” ದೋಷ ಪರಿಹಾರಕ್ಕಾಗಿ “ವೈಶ್ವದೇವ"ವನ್ನು ಮಾಡಬೇಕು. ಕಂಡನೀ (ಕುಟ್ಟುವದು) ಪೇಷಣೀ (ಹಿಟ್ಟು ಮಾಡುವದು) ಚು (ಒಲೆ) ಜಲಕುಂಭೀ (ಉದಕದ ಕೊಡ) ಮಾರ್ಜನೀ (ಉಡುಗುವ ಹಿಡಿಕಟ್ಟು ಹೀಗೆ ಮನೆಯಲ್ಲಿ ಐದು ವಿಷಯದಲ್ಲಿ ಕೆಲಮಟ್ಟಿಗೆ ಹಿಂಸೆಯಾಗುತ್ತಿದೆ. ಇವುಗಳಿಗೆ ಕೂಡಿ"ಪಂಚಸೂನಾ” ಎನ್ನುವರು. ವೈಶ್ವದೇವ ಆರಂಭವನ್ನು ಪ್ರಾತಃ ಕಾಲದಲ್ಲೇ ಮಾಡಬೇಕು. ಅಗ್ನಿಹೋತ್ರಾದಿಗಳಂತೆ ಸಂಜೆ ಪ್ರಾರಂಭಿಸುವದಲ್ಲ. ಆದಕಾರಣ - ಸಂಕಲ್ಪವನ್ನು “ಪ್ರಾತಃಸಾಯಂ ವೈಶ್ವದೇವಂ” ಹೀಗೆಂದು ಮಾಡತಕ್ಕದ್ದು. ಬ್ರಹ್ಮಯಜ್ಞದೇವಯಜ್ಞ ಭೂತಯಜ್ಞ, ಪಿತೃಯಜ್ಞ ಮನುಷ್ಯಯಜ್ಞ ಹೀಗೆ ಐದು ಪಂಚ ಮಹಾಯಜ್ಞಗಳು, ಬ್ರಹ್ಮಯಜ್ಞ ವಿಷಯವನ್ನು ಮೊದಲೇ ಹೇಳಿದ. ಋಗೈದಿ ಮೊದಲಾದವರಿಗೆ -ದೇವಯಜ್ಞ ಭೂತಯಜ್ಞ ಪಿತೃಯಜ್ಞ ಈ ಮೂರು ರೂಪವಾದದ್ದೇ “ವೈಶ್ವದೇವ’ವೆಂದಾಗುವದು. ಮನುಷ್ಯರಿಗೆ ಅನ್ನದಾನ ૩૫૦ ಧರ್ಮಸಿಂಧು ಮಾಡಿದರೆ “ಮನುಷ್ಯಯಜ್ಞ ಎಂದಾಗುವದು. ಕಾರವಲ್ಲದ ಮತ್ತು ಮನೆಯಲ್ಲಿ ಬೇಯಿಸಿದ ಹವಿಷ್ಯಾನ್ನವನ್ನು ತುಪ್ಪದಿಂದ ಅಭಿಘಾರ ಮಾಡಿ ಗೃಹ್ಯಾಗಿ ಅಥವಾ ಲೌಕಿಕಾಗ್ನಿಯಲ್ಲಿ ಹೋಮಿಸುವದು. ಅನ್ನವನ್ನು ಬೇಯಿಸಿದ ಅಗ್ನಿಯಲ್ಲೇ ಹೋಮವು, ವೈಶ್ವದೇವಾಂತರ್ಗತವಾದ ಪಿತೃಯಜ್ಞದಿಂದಲೇ ನಿತ್ಯಶ್ರಾದ್ಧವು ಸಿದ್ಧಿಸುವದರಿಂದ ಮತ್ತೆ ಪ್ರತ್ಯೇಕವಾಗಿ ನಿತ್ಯಶಾದ್ಧಕ್ಕಾಗಿ ಬ್ರಾಹ್ಮಣ ಭೋಜನ ಮಾಡಿಸುವದವಶ್ಯವಿಲ್ಲ. ಅಶಕ್ತರಾದವರಿಗೆ “ದರ್ಶಶ್ರಾದ್ಧವಾದರೂ ಇದರಿಂದ ಸಿದ್ಧಿಯಾಗುತ್ತಿದ್ದು ಇಡೀ ವರ್ಷದೊಳಗೆ ಒಂದೇ ದರ್ಶಶ್ರಾದ್ಧವನ್ನು ಮಾಡಿದರೆ ಸಾಕು ಎಂದು ‘ಭಟ್ಟೋಜೀಯ"ದಲ್ಲಿ ಹೇಳಿದೆ. ಸೂತಕ ಪ್ರಾಪ್ತವಾದಾಗ ಪಂಚಮಹಾಯಜ್ಞಗಳು ಲೋಪವಾಗುವದೆಂದು ಹೇಳಿದೆ. ಈ “ವೈಶ್ವದೇವ"ವು ಆತ್ಮಸಂಸ್ಕಾರ ಮತ್ತು ಅನ್ನ ಸಂಸ್ಕಾರ ಇವೆರಡಕ್ಕೂ ಕಾರಣವಾಗಿರುವದರಿಂದ ಅವಿಭಕ್ತವಾಗಿದ್ದು ಒಂದೇ ಪಾಕವಾಗಿದ್ದಲ್ಲಿ ಯಜಮಾನನ ಹೊರತು ಅನ್ಯರು ಪ್ರತ್ಯೇಕವಾಗಿ ವೈಶ್ವದೇವ ಮಾಡಬೇಕಾಗಿಲ್ಲ. ಇನ್ನು ವಿಭಕ್ತರಾಗಿ ಏಕಪಾಕದಲ್ಲಿದ್ದಾಗ ಬೇರೆ ಹವಿಷ್ಯ ಮಾಡಿ ಪ್ರತ್ಯೇಕವಾಗಿ ಮಾಡತಕ್ಕದ್ದು. ಅವಿಭಕ್ತರಾಗಿದ್ದು ಪಾಕ ಬೇರೆಯಾಗಿದ್ದಲ್ಲಿ ಪ್ರತ್ಯೇಕ ವೈಶ್ವದೇವ ಮಾಡುವದು “ಕೃತಾಕೃತವು” ಎಂದು “ಭಟ್ಟೋಜೀಯ"ದಲ್ಲಿ ಹೇಳಿದೆ. ಏಕಾದಶ್ಯಾದಿಗಳಲ್ಲಿ ಪಾಕವು ಅಸಂಭವವಾದಾಗ ಅಕ್ಕಿಕಾಳುಗಳಿಂದಾಗಲೀ ಹಾಲು, ಮೊಸರು, ತುಪ್ಪ, ಫಲ, ಜಲ ಇವುಗಳಿಂದಾಗಲೀ ಮಾಡತಕ್ಕದ್ದು. ಅನ್ನಾದಿಗಳ ಆಹುತಿಯನ್ನು ಹಸ್ತದಿಂದ ಮಾಡತಕ್ಕದ್ದು. ಜಲದಲ್ಲಿ ಮಾಡುವಾಗ ಹಸ್ತಾಂಜಲಿಯಿಂದ ಮಾಡುವದು. ಕೋದ್ರವ (ಹಾರಕಧಾನ) ಬೇಳೆ, ಕಡಲೆ, ಉದ್ದು ಮತ್ತು ಒಗರುವಸ್ತು, ಉಪ್ಪು ಇವು ವೈಶ್ವದೇವದಲ್ಲಿ ವರ್ಜಗಳು, ಪ್ರವಾಸದಲ್ಲಿದ್ದಾಗ ಮನೆಯಲ್ಲಿದ್ದ ಪುತ್ರರು, ಋತ್ವಿಜರು ಇವರು ವೈಶ್ವದೇವ ಮಾಡತಕ್ಕದ್ದು. ಮನೆಯಲ್ಲಿ ಕರ್ತೃಗಳ ಅಭಾವದಲ್ಲಿ ಪ್ರವಾಸದಲ್ಲಿದ್ದವನು ತಾನೇ ಮಾಡತಕ್ಕದ್ದು. ಋಗ್ವದಿ ಹಾಗೂ ತೈತ್ತಿರೀಯರು ಹಗಲು ಮತ್ತು ರಾತ್ರಿ ಹೀಗೆ ಎರಡು ಹೊತ್ತು ಮಾಡತಕ್ಕದ್ದು. ಅಶಕ್ತನಾದವನು ಒಂದೇ ಕಾಲದಲ್ಲಿ ಎರಡಾವರ್ತಿ ಕೂಡಿಮಾಡುವದು, ಋಗ್ವದಿ ಮತ್ತು ತೈತ್ತಿರೀಯರು ಲೌಕಿಕಾಗ್ನಿಯಲ್ಲಿ ಪಾಕವನ್ನೂ, ವೈಶ್ವದೇವನನ್ನೂ ಮಾಡುವದು ಆಚರಣೆಯಲ್ಲಿದೆ. (ಹೆಚ್ಚಾಗಿ) ಪ್ರಾತಃಕಾಲದಲ್ಲಿಯೇ ಸಾಯಂವೈಶ್ವದೇವವನ್ನು ಮಾಡುವ ಪಕ್ಷದಲ್ಲಿ ಸಮಾನ ತಂತ್ರದಿಂದ ಮಾಡತಕ್ಕದ್ದು. ವೈಷ್ಣವರು ದೇವರ ಷೋಡಶೋಪಚಾರಗಳಲ್ಲಿ ದೀಪದರ್ಶನ ಮಾಡಿದ ನಂತರ ಪುರುಷನಿಗೆ ಸಾಕಾಗುವಷ್ಟು ಅನ್ನವನ್ನು ಪಾಕದಿಂದ ಪೃಥಕ್ ತೆಗೆದು ನೈವೇದ್ಯ ಮಾಡಿ ಉಳಿದ ಶೇಷ ಅನ್ನದಿಂದ ವೈಶ್ವದೇವವನ್ನು ಮಾಡತಕ್ಕದ್ದು. ವೈಷ್ಣವ ಹೊರತಾದವರು ವೈಶ್ವದೇವ ಮಾಡಿ ಉಳಿದ ಅನ್ನವನ್ನು ನೈವೇದ್ಯ ಮಾಡತಕ್ಕದ್ದು. “ವಿಷ್ಣುವಿಗೆ ನೈವೇದ್ಯವಾಗಿ ಉಳಿದದ್ದನ್ನು ಬೇರೆ ದೇವತೆಗಳಿಗೆ ನಿವೇದಿಸುವದು. ಪಿತೃಗಳಿಗಾದರೂ ಅದನ್ನೇ ಕೊಡತಕ್ಕದ್ದು. ಅದು ಅಕ್ಷಯವಾಗುವುದು” ಎಂದು ವಚನವಿದೆಯಾದರೂ, ಅದು ವೈಷ್ಣವರ ವಿಷಯವಾಗಿ ಹೇಳಿದ್ದೆಂದು ನಿಬಂಧಕಾರರ ಮತವು ನಾರಾಯಣಾಷ್ಟಾಕ್ಷರಾದಿ ವೈಷ್ಣವ ಮಂತ್ರದೀಕ್ಷೆ ಪಡೆದು ಆ ಉಪದೇಶದಂತೆ ಜಪಾದಿಗಳನ್ನು ಮಾಡುವವರು “ಮುಖ್ಯ ವೈಷ್ಣವರು. ದೀಕ್ಷೆಯ ವಿಷಯದಲ್ಲಿ ಉಪದೇಶ: ಕಲೌಯುಗೇ” ಎಂಬ ಸ್ಮೃತಿವಚನದಂತೆ ಉಪದೇಶಮಾತ್ರದಿಂದಲೇ ಕಲಿಯುಗದಲ್ಲಿ ದೀಕ್ಷೆಯ ಫಲ ಪರಿಚ್ಛೇದ ೩ ಪೂರ್ವಾರ್ಧ ೩೪೧ ಪ್ರಾಪ್ತಿಯಾಗುವದು. “ಗೌಣವೈಷ್ಣವರೆಂದರೆ ಪರಂಪರಾಗತವಾದ ಅರುಣೋದಯವಿದ್ದ ಏಕಾದಶಿಯಲ್ಲಿ ಉಪವಾಸಮಾಡದೆ ಶುಕ್ಲ-ಕೃಷ್ಣ ಎರಡೂ ಏಕಾದಶಿಗಳಲ್ಲಿ ಉಪವಾಸ ಮಾಡುವವರು. (ನಿಜವೈಷ್ಣವರಿಗಾದರೆ ಅರುಣೋದಯವಿದ್ದ ಏಕಾದಶಿಯೇ ಇರಬೇಕು) ಏನೋ ಅಲ್ಪ ಸ್ವಲ್ಪ ವೈಷ್ಣವಧರ್ಮವನ್ನಾಚರಿಸುವವರು ಮತ್ತು ಉಪದೇಶವನ್ನು ಹೊಂದದೆ ಇರುವವರು ಇತ್ಯಾದಿ. ಇನ್ನು “ಪಾಂಚರಾತ್ರಾದಾಗಮೋಕ್ತ ದೀಕ್ಷೆಯನ್ನು ಹೊಂದಿದವನೇ ವೈಷ್ಣವನು” ಎಂದು ಉಕ್ತಿಯಿದೆಯಲ್ಲ! ಅಂದರೆ ಕ್ಷತ್ರಿಯ, ವೈಶ್ಯರಿಗೂ ಹೇಳಿದ ಗಾಯತ್ರ್ಯುಪದೇಶ ಮೊದಲಾದ ಸಾಮಾನ್ಯ ಧರ್ಮವನ್ನು ಹೊಂದಿದ ಯಾಜನ, ಅಧ್ಯಾಪನ, ಪ್ರತಿಗ್ರಹ ವಿಷಯದಲ್ಲಿ ಹೇಳಿದ ವಿಶೇಷಧರ್ಮ (ತ್ಯಾಗರೂಪ)ವನ್ನು ಪಾಲಿಸದಿರುವ, ಪಿತ್ರಾದಿ ಪರಂಪರೆಯಿಂದ ವೈಶ್ಯಾದಿ ವೃತ್ತಿಯಲ್ಲಾಸಕ್ತರಾಗಿರುವ ಇಂಥವರಾದರೂ ಗೋತ್ರಾದಿ ವಿಷಯಗಳಲ್ಲಿ ಅನ್ಯ ವಿಶಿಷ್ಟಬ್ರಾಹ್ಮರಲ್ಲಿ ಯಂಚಿತ್ ಬ್ರಾಹ್ಮಣಧರ್ಮವನ್ನು ಪಾಲಿಸುವವರಾಗಿ ಹೇಗೆ ಬ್ರಾಹ್ಮಣತ್ವದಲ್ಲಿರುವರೋ ಅದರಂತೆ ಉಚಿತವಾದ ಆಶೌಚಾದಿಗಳನ್ನೂ ವಿಶಿಷ್ಟರಂತೆ ಅವರೂ ಪಾಲಿಸುವರೋ ಹಾಗೆಯೇ ಕಲಿಯುಗದಲ್ಲಿ ಕಿಂಚಿದ್ಧರ್ಮಾಚರಣೆಯಿಂದಾದರೂ ವೈಷ್ಣವತ್ವವಿರುವದು ಉಚಿತವೇ ಇದೆ. ಆಚಾರವೂ ಹಾಗೆಯೇ ಇದೆ. ಕ್ಷತ್ರಿಯನಿಗೆ ಪುರೋಹಿತನ ಗೋತ್ರವನ್ನೇ ಹಿಡಿಯಬೇಕೆಂದಿದೆ. ಅದರಿಂದ ಯದುವಂಶದಲ್ಲಿ ಪರಸ್ಪರ ವಿವಾಹವಾಗಿದೆ. ಹಾಗೆಂದು ಬ್ರಾಹ್ಮಣರಲ್ಲಾಗುವದಿಲ್ಲ. ಇದರಂತೆ ಶ್ರಾದ್ಧದಲ್ಲಿ ನೈವೇದ್ಯವಾದನಂತರ ಪಿತೃಗಳಿಗೆ ಬಡಿಸುವ ವೈಷ್ಣವಾಚಾರವಿದೆ. ಹೀಗೆ ಅಲ್ಪಸ್ವಲ್ಪ ಆಚಾರಭಿನ್ನತೆಯಿಂದ ಮೂಲಭೂತವಾದ ತತ್ವಕ್ಕೆ ಬಾಧೆಯಿರದು. ಆಶ್ವಲಾಯನರ ವೈಶ್ವದೇವ “ಮಮ ಆತ್ಮಾನ್ನ ಸಂಸ್ಕಾರ ಪಂಚನಾಜನಿತ ದೋಷಪರಿಹಾರದ್ವಾರಾ ಶ್ರೀರ್=೦ ಪ್ರಾತರ್ವೈಶ್ವದೇವಂ ಸಾಯಂ ವೈಶ್ವದೇವಂ ಚ ಸಹ ತಂತ್ರಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ಕುಂಡದಲ್ಲಿ ಅಥವಾ ಸ್ಪಂಡಿಲದಲ್ಲಿ “ಪಚನಾಗಿ"ಯನ್ನು ವ್ಯಾಹೃತಿಯಿಂದ “ಪಾವಕ” ನಾಮದಿಂದ ಪ್ರತಿಷ್ಠೆ ಮಾಡಿ ‘ಚತ್ವಾರಿಶೃಂಗಾ’ ಎಂದು ಧ್ಯಾನಿಸಿ ಪರಿಸಮೂಹನ, ಪರ್ಯುಕ್ಷಣಗಳನ್ನು ಮಾಡಿ ‘ವಿಶ್ವಾನಿನ ಎಂದು ಅರ್ಚನಾದಿಗಳನ್ನು ಮಾಡಿ, ತುಪ್ಪದಿಂದ ಅದ್ದಿದ ಅನ್ನವನ್ನು ಅಗ್ನಿಯಲ್ಲಿ ಕಾಯಿಸಿ ಪ್ರೋಕ್ಷಣ ಮಾಡಿ ಅಲ್ಲಿಂದ ಪಶ್ಚಿಮದಲ್ಲಿಟ್ಟು ಮೂರು ವಿಭಾಗಗಳನ್ನು ಮಾಡಿ ಅವುಗಳಲ್ಲಿ ಪ್ರಥಮ ವಿಭಾಗವನ್ನು ದೇವತೆಗಳಿಗೆ ಹೋಮಿಸುವದು. ಎಡದಹಸ್ತವನ್ನು ಎದೆಯಲ್ಲಿಟ್ಟುಕೊಂಡು ಅಂಗಾತಮಾಡಿದ ಬಲದಹಸ್ತದಿಂದ “ಸೂರ್ಯಾಯಸ್ವಾಹಾ ಸೂರ್ಯಾಯ ಇದಂ ನಮಮ ಪ್ರಜಾಪತಯೇ ಸೋಮಾಯ ವನಸ್ಪತಯೇ ಅಗ್ನಿಹೋಮಾಭ್ಯಾಂ ಇಂದ್ರಾಗ್ನಿಭ್ಯಾಂ ದ್ಯಾವಾ ಪ್ರಥಿವೀಭ್ಯಾಂ ಧನ್ವಂತರಯೇ ಇಂದ್ರಾಯ ವಿಶ್ವಭೋ ದೇವೇಭ್ಯ: ಬ್ರಹ್ಮಣೇ ನಮಮ” ಹೀಗೆ ಪ್ರಾತರ್ವೈಶ್ವದೇವದಲ್ಲಿ ಹತ್ತು ಆಹುತಿಗಳನ್ನು ಹಾಕತಕ್ಕದ್ದು, ಸಾಯಂವೈಶ್ವದೇವದಲ್ಲಿ ಮೊದಲು “ಆಗ್ನಿಯೇ ಸ್ವಾಹಾ ಆಗ್ನಯ ಇದಂ ನಮಮ ಪ್ರಜಾಪತಯ” ಇತ್ಯಾದಿ ಒಂಭತ್ತು, ಅಂತೂ ಹತ್ತು ಆಹುತಿಗಳನ್ನು ಹಾಕುವದು. ಹೀಗೆ ಇಪ್ಪತ್ತು ಆಹುತಿಗಳನ್ನು ಹೋಮಿಸಿ ಪ್ರಾಯಶ್ಚಿತ್ತಕ್ಕಾಗಿ ವ್ಯಸ್ತ, ಸಮಸ್ತಾಹುತಿಗಳಿಂದ ಹೋಮಿಸಿ (ಸಕಾಲದಲ್ಲಾದರೆ ಪ್ರಾಯಶ್ಚಿತ್ತವಿಲ್ಲ) ಪರಿಸಮೂಹನ, ಪರ್ಯುಕ್ಷಣಮಾಡಿ ಓಂಚಮ” ಎಂದು ಉಪಸ್ಥಾನ ಮಾಡುವದು. ಹೀಗೆ “ದೇವಯಜ್ಞವು " ೩೪೨ ಧರ್ಮಸಿಂಧು ಬಲಿಹರಣ ಭೂತಯಜ್ಞ ಹಿಂದೆ ಹೇಳಿದ ಮೂರುಭಾಗಗಳಲ್ಲಿ ಎರಡನೇಭಾಗದ ಅನ್ನದಿಂದ ಶುದ್ಧವಾದ ಭೂಮಿಯಲ್ಲಿ “ಸೂರ್ಯಾಯಸ್ವಾಹಾ” ಇತ್ಯಾದಿ ಹತ್ತು ಆಹುತಿಗಳನ್ನು ಎಡೆಬಿಡದೆ ಪೂರ್ವಕ್ಕದುರಾಗಿ ಹಾಕುತ್ತ ಹೋಗುವದು. “ಆ: ಸ್ವಾಹಾ ಓಷಧಿ ವನಸ್ಪತಿಭ್ಯಸ್ವಾಹಾ ಗೃಹಾಯ- ಗೃಹದೇಮಾಭ್ಯ-ವಾಸ್ತುದೇವತಾಭ:” ಈ ಆಹುತಿಗಳನ್ನೂ ಪೂರ್ವಕ್ಕೆ ಎದುರಾಗಿ ಹೋಮಿಸುವರು. “ಅಮ್ಮ” ಈ ಆಹುತಿಯ ಆಚೆಯಲ್ಲಿ ಇಂದ್ರಾಯ, ಅದರ ಉತ್ತರಕ್ಕೆ ಇಂದ್ರಪುರುಷೇಭ್ಯ: ಮಧ್ಯಭಾಗದ ದಕ್ಷಿಣದಲ್ಲಿ ಯಮಾಯ ಯಮಪುರುಷೇಭ್ಯಃ, ಬ್ರಹ್ಮಣ: ಈ ಆಹುತಿಯ ಪೂರ್ವಭಾಗದಲ್ಲಿ ವರುಣಾಯ, ಅದರ ಉತ್ತರದಲ್ಲಿ ವರುಣ ಪುರುಷೇಭ್ಯಃ, ಅವುಗಳ ಮಧ್ಯಭಾಗದ ಉತ್ತರದಲ್ಲಿ ಸೋಮಾಯ, ಅದರ ಉತ್ತರದಲ್ಲಿ ಸೋಮಪುರುಷೇಭ್ಯಃ, ಮಧ್ಯಭಾಗದಲ್ಲಿ ಬ್ರಹ್ಮಣೇ “ಬ್ರಹ್ಮಪುರುಷೇಭ್ಯ: ವಿಶ್ವಭೋದೇವೇಭ್ಯ: ಸರ್ವ ಭೂತೇಭ್ಯ: ದಿವಾಚಾರಿಭ್ಯ, ಸೋಮಪುರುಷ ಇದರ ಉತ್ತರದಲ್ಲಿ ರಕ್ಷೆಭ: ಹೀಗೆ ಇದು ಪ್ರಾತರ್ವೈಶ್ವದೇವದಲ್ಲಿ “ಬಲಿಹರಣ"ವು. ಇನ್ನು ಸಾಯಂವೈಶ್ವದೇವದಲ್ಲಿ ಸೂರ್ಯನ ಸ್ಥಾನದ ಬದಲು ಅಗ್ನಿಗೆ ಹೋಮಿಸಿ ಆಮೇಲೆ ಪ್ರಜಾಪತಯ ಇತ್ಯಾದಿ ಸಾಯಂವೈಶ್ವದೇವ ಸಂಬಂಧವಾದ ದ್ವಿತೀಯ ಬಲಿಹರಣವನ್ನು ಮಾಡುವದು. ದಿವಾಚಾರಿಭ: ಇದರ ಬದಲು “ನಕ್ತಂ ಚಾರಿಭ್ಯ: ಇದೇ ವಿಶೇಷವು ಹೀಗೆ ಭೂತಯಜ್ಞವು ಪಿತೃಯಜ್ಞ ಪ್ರಾಚೀನಾ ವೀತಿಯಾಗಿ ಹಿಂದೆ ಹೇಳಿದ ಮೂರನೇ ಭಾಗದ ಅನ್ನವನ್ನು ತೆಗೆದುಕೊಂಡು “ಸ್ವಧಾಪಿತೃಭ” ಎಂದು ಹಿಂದೆ ಹಾಕಿದ ಯಮಬಲಿಯ ದಕ್ಷಿಣದಲ್ಲಿ ಆಹುತಿಹಾಕಿ ‘ಪಿತೃಭ್ಯ ಇದಂ ನಮಮ” ಎಂದು ತ್ಯಾಗವನ್ನು ಹೇಳಿ ದ್ವಿತೀಯ ಬಲಿಯ ದಕ್ಷಿಣಕ್ಕೆ ದ್ವಿತೀಯ ಪಿತೃಯಜ್ಞವನ್ನು ಹೀಗೆಯೇ ಮಾಡತಕ್ಕದ್ದು. ಇದು ಪಿತೃಯಜ್ಞವು. ಬೇರೆ ಕೆಲವು ಗ್ರಂಥಕಾರರು ಚಕ್ರಾಕಾರವಾದ ಬಲಿಯನ್ನು ಹೇಳಿರುವರು. ಈ ಬಲಿತ್ಯಾಗಮಾಡಿದ ಹೊರತು ಉಣ್ಣಬಾರದು. ಆ ಬಲಿಹರಣದ ಅನ್ನವನ್ನು ತಾನೇ ಎತ್ತಬಾರದು. ನಂತರ ಅಂಗಳದಲ್ಲಿ ನೆಲಕ್ಕೆ ನೀರನ್ನು ಸಿಂಪಡಿಸಿ “ಐಂದ್ರ ವಾರುಣ ವಾಯುವ್ಯಾಂ ಯಾಮ್ಯಾಂ ನೈರುತಿಕಾಶ್ಚಯೇತೇಕಾಕಾ: ಪ್ರತಿಕೃಕ್ಕಂತು ಭೂಮ್ಯಾಂ ಪಿಂಡಂ ಮಹೋತಂ” ಹೀಗೆ ಹೇಳಿ ಪಿತೃಯಜ್ಞ ಶೇಷವನ್ನು ಕೊಟ್ಟು “ವೈವಸ್ವತಕುಲೇಜಾತ್ ಶ್ಯಾಮನಬಲೆ ಶುಭ ತಾಭ್ಯಾಂಪಿಂಡೂ ಮಯಾದ ರತಾಂ ಪಥಿ ಮಾಂ ಸದಾ ಯೇಭೂತಾ: ಪ್ರಚರಂತಿ” ಹೀಗೆ ಎರಡು ಮಂತ್ರಗಳಿಂದ ಭೂತಯಜ್ಞ ಶೇಷವನ್ನು ಕೊಡುವದು. ಪ್ರಾತಃಸಾಯಂ ವೈಶ್ವದೇವವನ್ನು ಮಂತ್ರದಿಂದ ಮಾಡುವಾಗ ದಿವಾನಂ ಎಂದು ಸಂಯುಕ್ತವಾಗಿ ಪಠನ ಮಾಡತಕ್ಕದ್ದು, ಹಗಲು ಮತ್ತು ರಾತ್ರಿ ಬೇರೆ ಬೇರೆ ಮಾಡಿದಲ್ಲಿ ಹಗಲಿನಲ್ಲಿ “ದಿವಾಬಲಿಮಚ್ಚಂತೋ” ಎಂದೂ ರಾತ್ರಿಯಲ್ಲಿ “ನಂಬಲಿಮಿಚ್ಛಂತೋ” ಎಂದೂ ವಿಭಾಗಿಸಿ ಹೇಳುವದು. ನಂತರ ಕೈಕಾಲುಗಳನ್ನು ತೊಳೆದುಕೊಂಡು ಮನೆಯನ್ನು ಪ್ರವೇಶಿಸಿ ಆಚಮನಮಾಡಿ “ಶಾಂತಾಪೃಥಿ“ಇತ್ಯಾದಿ ಮಂತ್ರಗಳನ್ನು ಜಪಿಸಿ ವಿಷ್ಣುಸ್ಮರಣ ಮಾಡಿ ಕರ್ಮವನ್ನರ್ಪಿಸುವದು. " ಪರಿಚ್ಛೇದ - ೩ ಪೂರ್ವಾರ್ಧ ೩೪೩ ಮನುಷ್ಯಯಜ್ಞ ಅತಿಥಿಗೆ ಭೋಜನಕ್ಕೆ ಸಾಕಾಗುವಷ್ಟು ಅನ್ನವನ್ನು ಕೊಡಬೇಕು. ಅಸಮರ್ಥನಾದರೆ ಹದಿನಾರು ಗ್ರಾಸ ಅಥವಾ ನಾಲ್ಕು ಗ್ರಾಸ, ಕೊನೆಯಪಕ್ಷ ಗ್ರಾಸಮಾತ್ರವನ್ನಾದರೂ ಕೊಡಬೇಕು. “ಸನಕಾದಿ ಮನುಷ್ಯಭೋಹಂತ= ಇದಂನಮಮ” ಹೀಗೆ ಕೊಡುವಾಗ ಹೇಳಬೇಕು. ಅನೇಕ ಭಿಕ್ಷುಕರು ಅತಿಥಿಗಳಾಗಿ ಬಂದಾಗ ಅಸಮರ್ಥನಾದವನು ಮೂವರಿಗೆ ಮೂರು ಗ್ರಾಸಗಳನ್ನು ಕೊಡುವದು. ತೈತ್ತಿರಿಯಾದಿಗಳ ವೈಶ್ವದೇವ ತೈತ್ತಿರೀಯರಿಗೆ ಶ್ರಾದ್ಧ ದಿನದಲ್ಲಿ ಬೇರೆ ಪಾಕಮಾಡಿ ಮೊದಲು ವೈಶ್ವದೇವವನ್ನು ಮಾಡಬೇಕೆಂದು ಹೇಳಿದೆ. ಇದರಂತೆ ದೇವಯಜ್ಞಾದಿ ನಾಲ್ಕು ಯಜ್ಞಗಳನ್ನೂ ಮೊದಲೇ ಹೇಳಿದೆ. ಕೆಲವರು ಆದಿಯಲ್ಲಿ ವೈಶ್ವದೇವ, ಅಂತದಲ್ಲಿ ಪಂಚಮಹಾಯಜ್ಞಗಳು ಎಂದು ಹೇಳುವರು. “ಯಜುರ್ವೇದಿಗಳು ಆದಿಯಲ್ಲಿಯೂ, ಅಥರ್ವಣರು ಮಧ್ಯದಲ್ಲಿಯೂ ಮಾಡುವರು. ಋಗ್ವದಿಗಳು ಶ್ರಾದ್ಧ ಶೇಷದಿಂದ ಮಾಡುವರು. ಅದರಲ್ಲೂ ಅಗ್ನಿಹೋತ್ರಿಗಳು ಮೊದಲೇ ಮಾಡುವರು” ಎಂದು ವಚನವಿದೆ. “ಸ್ವರ್ಗಪುಷ್ಪರ್ಥಂ ಆತ್ಮ ಸಂಸ್ಕಾರಾರ್ಥಂ ಪ್ರಾತಸಾಯಂ ವೈಶ್ವದೇವ ತಂತ್ರಣ ಕರಿಷ್ಟೇ ಹೀಗೆ ಸಂಕಲ್ಪಿಸಿ ಔಪಾಸನಾಗಿ ಅಥವಾ ವಚನಾಗ್ನಿಯನ್ನು ಪ್ರತಿಷ್ಠೆ ಮಾಡಿ ಔವಾಸನ ಹೋಮದಂತೆ ಪರಿಸಮೂಹನಾದಿಗಳನ್ನು ಮಾಡಿ ಅನ್ನವನ್ನು ಅಗ್ನಿಯಲ್ಲಿ ಬೇಯಿಸಿ ಪ್ರೋಕ್ಷಿಸಿ ಅಲ್ಲಿಂದ ತೆಗೆದು ಅಭಿಘಾರಮಾಡಿ ಅಗ್ನಿಯನ್ನು ಪೂಜಿಸಿ, ಅನ್ನವನ್ನು ಮೂರುಭಾಗ ಮಾಡಿ ಹಸ್ತದಿಂದ ಹೋಮಿಸತಕ್ಕದ್ದು. “ಆಸ್ವಾಹಾ ವಿಶ್ವಭೋರವೇಭ್ಯ: ಸ್ವಾಹಾ ಧ್ರುವಾಯ ಭೂಮಾಯ ಧ್ರುವಕ್ಷಿತಯೇ ಅಚ್ಯುತಕ್ಷಿತಯೇ ಅಗ್ನಯೇ ಸ್ವಿಷ್ಟಕೃತೇ ಹೀಗೆ ಹೋಮಿಸಿ ಪುನಃ ಪರಿಸಮೂಹನಾದಿಗಳನ್ನು ಮಾಡಿ ಅಗ್ನಿಯ ಪಶ್ಚಿಮದಿಕ್ಕಿನಲ್ಲಿ ಒಂದೇ ಕಡೆಯಲ್ಲಿ ಬೀಸಣಿಕೆಯ ಆಕಾರ ಅಥವಾ ಚಕ್ರಾಕಾರದಿಂದ ಬಲಿಯನ್ನು ಹಾಕುವದು. ‘ಧರ್ಮಾಯಸ್ವಾಹಾ ಧರ್ಮಾಯೇದು ಅಧರ್ಮಾಯಸ್ವಾಹಾ ಅಧರ್ಮಾಯೇದಂ ಅದ್ರ: ಓಷಧಿವನಸ್ಪತಿಭ್ಯ: ರದೇವಜನೇಭ್ಯ: ಗೃಹಾಭ್ಯ: ಅವಸಾನೇಭ್ಯ: ಅವಸಾನಪತಿಭ್ಯ: ಸರ್ವಭೂತೇಭ್ಯ: ಕಾಮಾಯ ಅಂತರಿಕ್ಷಾಯ ಯದೇಜು ಜಗತಿಯ ಚೇಪ್ಪತಿ ನಾಮ್ಮೋಭಾಗೋ ಯನ್ನಾ ಸ್ವಾಹಾ ನಾಯ್ಕ ಇದಂ.” ಇಲ್ಲಿ ಕೆಲವರು ‘ವಾಯವ ಇದು’ ಎಂದು ತ್ಯಾಗವನ್ನು ಹೇಳುವರು. “ಪೃಥಿವ್ಯಸ್ವಾಹಾ ಅಂತರಿಕ್ಷಾಯ-ದಿವೇ-ಸೂರ್ಯಾಯ ಚಂದ್ರಮನೇ- ನಕ್ಷತ್ರಭ: ಇಂದ್ರಾಯ-ಬೃಹಸ್ಪತಯೇ ಪ್ರಜಾಪತಯೇ -ಬ್ರಹ್ಮಣೇ ಹೀಗೆ ಆಹುತಿಗಳನ್ನು ಹಾಕತಕ್ಕದ್ದು. ಅವುಗಳ ಮೇಲೆ ಒಮ್ಮೆಲೇ ಜಲದಿಂದ ಸೇಚನ ಮಾಡುವದು. ಪೃಥಕ್ಕಾಗಿ ಸೇಚನಮಾಡುವದಿದ್ದರೆ ಧರ್ಮ-ಅಧರ್ಮ ಇವೆರಡಕ್ಕೆ ಕೂಡಿ ಒಂದಾವರ್ತಿ ಸೇಚನ ಮಾಡುವುದು. ಅಮ್ಮ: ಇದಕ್ಕೆ ಸೇಚನ, ಓಷಧಿ ವನಸ್ಪತಿ ರಣೋದೇವಜನ ಈ ಎರಡಕ್ಕೆ ಕೂಡಿ ಒಂದು ಸೇಚನ. ಗೃಹಾಭ್ಯ, ಅವಸಾನ, ಅವಸಾನಪತಿ, ಸರ್ವಭೂತ ಹೀಗೆ ನಾಲ್ಕಕ್ಕೆ ಕೂಡಿ ಒಂದು ಸೇಚನ. ಕಾಮ, ಅಂತರಿಕ್ಷ, ಯದೇಜತಿ ಈ ಮೂರಕ್ಕೆ ಪ್ರತ್ರತ್ಯೇಕವಾಗಿ ಸೇಚನ;ಪೃಥಿವೀ, ಇಂದ್ರ, ಬ್ರಹ್ಮವರೆಗಿನ ಹತ್ತು ಆಹುತಿಗಳಿಗೆ ಕೂಡಿ ಒಂದಾವರ್ತಿ ಸೇಚನ;ಇದಕ್ಕೂ ಮುಂದಿನ ಆಹುತಿಗಳಿಗೆ ಬೇರೆ ಬೇರೆ ಸೇಚನ, ಹೀಗೆ ಜಲಸೇಚನ ಮಾಡುವದು. ಅದರ ದಕ್ಷಿಣ ದಿಕ್ಕಿನಲ್ಲಿ ಪ್ರಾಚೀನಾವೀತದಿಂದ “ಸ್ವಧಾಪಿತೃಭಸ್ವಾಹಾ’ ಅದರ ಉತ್ತರಭಾಗದಲ್ಲಿ ಉಪವೀತಿಯಾಗಿ “ನಮೋ ೩೪೪ ಧರ್ಮಸಿಂಧು ರುದ್ರಾಯ ಪಶುಪತಯೇಸ್ವಾಹಾ” ಪಿತೃ, ರುದ್ರ ಆಹುತಿಗಳಿಗೆ ಪ್ರತ್ಯೇಕವಾಗಿ ಸೇಚನ ಮಾಡುವದು. ಹೀಗೆ ವೈಶ್ವದೇವವು. ದೇವಯಜ್ಞಾದಿ “ದೇವಯಜೈನಯ” ಹೀಗೆ ಸಂಕಲ್ಪಿಸಿ ಅಗ್ನಿಪರಿಷೇಚನಾದಿಗಳನ್ನು ಮಾಡಿ “ ದೇವೇಭ್ಯ: ಸ್ವಾಹಾ” ಎಂದು ಅಗ್ನಿಯಲ್ಲಿ ಹೋಮಿಸಿ ಉತ್ತರಪರಿಷೇಕ ಮಾಡುವದು. ಪ್ರಾಚೀನಾವೀತದಿಂದ “ಪಿತೃಯಜ್ಞನಯ” ಹೀಗೆ ಸಂಕಲ್ಪಿಸಿ ದಕ್ಷಿಣ ದಿಕ್ಕಿನ ನೆಲದಲ್ಲಿ “ಪಿತೃಭ್ಯಃಸ್ವಧಾಸ್ತು” ಹೀಗೆ ಅನ್ನಾಹುತಿಕೊಟ್ಟು ತ್ಯಾಗಹೇಳಿ ಪರಿಷೇಚನ ಮಾಡಿ ನ೦ತರ ನಿವೀತಿಯಾಗಿ “ಮನುಷ್ಯಯಜ್ಞನಯಕ್ಷ” ಎಂದು ಹಿಂದೆ ಹೇಳಿದಂತೆ ಆ ಪ್ರಮಾಣದ ಅನ್ನವನ್ನು “ಮನುಷ್ಯಭೋಹಂತ” ಎಂದು ಹೇಳಿ ಕೊಡತಕ್ಕದ್ದು. ಇವರಿಗೆ ಹೆಚ್ಚಾಗಿ ಎಲ್ಲ ಯಜ್ಞಗಳಲ್ಲೂ ಆದ್ಯಂತಗಳಲ್ಲಿ ಕ್ರಮದಿಂದ “ವಿದ್ಯುದಸಿ, ವೃಷ್ಟಿರಸಿ” ಈ ಮಂತ್ರಗಳನ್ನು ಪಠಿಸುವದಿದೆ. ಬಲಿಯ ಶೇಷಾನ್ನವನ್ನು “ಯೇಭೂತಾಃ ಪ್ರಚರಂತಿ” ಈ ಮಂತ್ರ ಹೇಳಿ ಮನೆಯ ಅಂಗಳದಲ್ಲಿ ಹೋಗಿ ಆಕಾಶದಲ್ಲಿ ತೂರುವದು. ಆಮೇಲೆ ಆಚಾರಾನುಸಾರವಾಗಿ ನಾಯಿ, ಕಾಗೆ ಮೊದಲಾದವುಗಳಿಗೆ ಬಲಿಯನ್ನು ಕೊಡುವದು. ಇನ್ನು “ಕಾತ್ಯಾಯನ” ರಿಗೆ ಸಾಗ್ನಿಕರಾಗಿದ್ದಲ್ಲಿ ಏಕಪಾಕದಿಂದಲೇ ಮಾಡತಕ್ಕದ್ದು. ಶ್ರಾದ್ಧದಿನದಲ್ಲಿ ಮೊದಲು ವೈಶ್ವದೇವವು. ಅನ್ಯರಿಗೆ ಕಡೆಯಲ್ಲಿ ವೈಶ್ವದೇವವು. “ಆವಸತ್ತ್ವ” ಎಂಬ ಅಗ್ನಿಯ ಕೊಳ್ಳಿಯನ್ನು ಪಾಕಶಾಲೆಯಲ್ಲಿ ಸ್ಥಾಪಿಸಿ ಅದರಿಂದ ಪಾಕಮಾಡಿ ಅಡಿಗೆಯಮನೆಯ ಆ ಕಂಡಗಳನ್ನು ಗೃಹ್ಯಾಗ್ನಿಯಲ್ಲಿ ಸೇರಿಸಿ ಪಾಕದಿಂದ ಅನ್ನವನ್ನು ತೆಗೆದು ತುಪ್ಪದಿಂದ ಅಭಿಘಾರಮಾಡಿ ಹಿಂದೆ ಹೇಳಿದಂತೆ “ಆತ್ಮಸಂಸ್ಕಾರಾರ್ಥಂ ವೈಶ್ವದೇವಾಖ್ಯಂ ಕರ್ಮ ಕರಿಷ್ಟೇ” ಹೀಗೆ ಸಂಕಲ್ಪಿಸುವದು. ಅಥವಾ “ದೇವ, ಭೂತ, ಪಿತೃ, ಮನುಷ್ಯಾನ್ ವೈಶ್ವದೇವಾನ್ನೇನ ಯಕ್ಷ” ಹೀಗೆ ಸಂಕಲ್ಪವು. ಗೃಹ್ಯಾಗ್ನಿಯನ್ನು ಕಲಶೋದಕದಿಂದ ಪರ್ಯುಕ್ಷಣಮಾಡಿ ಹಸ್ತದಿಂದ ಅಗ್ನಿಯಲ್ಲಿ ಹೋಮಿಸುವದು. “ಬ್ರಹ್ಮಣೇ ಸ್ವಾಹಾ ಇದಂ ಬ್ರಹ್ಮಣೇ ನಮಮ” ಇತ್ಯಾದಿ ಮುಂದೆಯೂ ಇದರಂತೆಯೇ, ‘ಪ್ರಜಾಪತಯೇ ಗೃಹಾಭ್ಯಃ ಕಶ್ಯಪಾಯ ಅನುಮತಯೇ’ ಹೀಗೆ “ದೇವಯಜ್ಞ"ವು. ಆಮೇಲೆ ಕಲಶದ ಸಮೀಪದಲ್ಲಿ ಉತ್ತರಕ್ಕೆ ಮುಂದುವರಿಯುವಂತೆ (ಉತ್ತರಾಗ್ರ) ಮೂರು ಬಲಿಯನ್ನು ಕೊಡುವದು. “ಪರ್ಜನ್ಯಾಯನಮ: ಸ್ವಾಹಾ, ಇದಂ ಪರ್ಜನ್ಯಾಯ ನಮಮ ಅನ್ನೋನ ಪ್ರತಿನ” ಇತ್ಯಾದಿ. ನಂತರ ದ್ವಾರಶಾಖೆಗಳಲ್ಲಿ ಪೂರ್ವದಿಕ್ಕಿಗೆ ಒಂದರಮುಂದೊಂದರಂತೆ ಎರಡು ಬಲಿಗಳನ್ನು ಕೊಡತಕ್ಕದ್ದು. ‘ಧಾತ್ರೇ ವಿಧಾತೇ’ ಹೀಗೆ ಜಲದಿಂದ ಚತುರಶ್ರಮಂಡಲಮಾಡಿ ಅದರ ಪೂರ್ವದಿಕ್ಕಿನಲ್ಲಿ ವಾಯವೇ-ವಾಯುಬಲಿಯ ಪೂರ್ವ ಬದಿಗೆ ಅಥವಾ ಉತ್ತರಕ್ಕೆ “ಪ್ರಾಚ್ಯದಿಶ, ದಕ್ಷಿಣದಿಶ, ಪ್ರತೀದಿಶೇ, ಉದೀಚ್ಯದಿಶೇ (ಹೀಗೆ)” ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಬ್ರಹ್ಮಣೇ ಅಂತರಿಕ್ಷಾಯ ಸೂರ್ಯಾಯ (ಹೀಗೆ). ಇವುಗಳ ಉತ್ತರದಲ್ಲಿ ಉಷನೇ ಭೂತಾನಾಂಚಪತಯೇ ಹೀಗೆ ಭೂತಮಜ್ಞ, ಪ್ರಾಚೀನಾ ವೀತಿಯಾಗಿ ಬ್ರಹ್ಮಾದಿ ಮೂರು ಬಲಿಗಳ ದಕ್ಷಿಣದಲ್ಲಿ ಪಿತೃತೀರ್ಥದಿಂದ “ಪಿತೃ ಪ್ರಧಾನಮ: ಇದಂ ಪಿತೃ ನಮಮ ಹೀಗೆ ಕೊಡತಕ್ಕದ್ದು, ಇದು ಪಿತೃಯಜ್ಞವು, ಪಾಕಪಾತ್ರವನ್ನು ತೊಳೆದು ಉಪವೀತಿಯಾಗಿ ಬ್ರಹ್ಮಾದಿಗಳ ವಾಯವ್ಯದಿಕ್ಕಿನಲ್ಲಿ “ಯತನಿರ್ಗಜನಂ” ಎಂದು ಆ ಜಲವನ್ನು ಪರಿಚ್ಛೇದ - ೩ ಪೂರ್ವಾರ್ಧ ೩೪೫ ಬಿಡತಕ್ಕದ್ದು. ಮನುಷ್ಯಯಜ್ಞವು ಹಿಂದೆ ಹೇಳಿದಂತೆಯೇ, ನಿರಗ್ನಿಯಾದವನು ಲೌಕಿಕಾಗ್ನಿಯನ್ನು ತಂದು “ಪೃಷ್ಟೋದಿವಿ” ಎಂದು ಪ್ರತಿಷ್ಠೆ ಮಾಡಿ “ತತ್ಸವಿತುಃ ತಾಗುವ ಸವಿತು: ವಿಶ್ವಾನಿದೇವ” ಹೀಗೆ ಮೂರು ಸವಿತೃ ಮಂತ್ರಗಳಿಂದ ಪ್ರಜ್ವಲಿಸಿ ಅದರಲ್ಲಿ ನಿತ್ಯಪಾಸನವನ್ನು ಮಾಡಿ ಪಾಕಮಾಡತಕ್ಕದ್ದು, ಮತ್ತು ವೈಶ್ವದೇವವನ್ನೂ ಮಾಡುವದು; ಎಂದು ‘ಗಂಗಾಧರ’ನ ಮತವು ಇದರಲ್ಲಿಯೂ ಅಸಮರ್ಥನಾದರೆ ಋಗ್ವದಿ ಮೊದಲಾದವರಿಗೆ ಹೇಳಿದಂತೆ ಪಚನಾಗ್ನಿಯನ್ನು ಸ್ಥಾಪಿಸಿ, ಧ್ಯಾನಿಸಿ, ಪೂಜಿಸಿ ಅದರಲ್ಲಿ ಹಿಂದೆ ಹೇಳಿದ ರೀತಿಯಿಂದ ವೈಶ್ವದೇವವನ್ನು ಮಾಡತಕ್ಕದ್ದು. ಪಂಚಾಹುತಿಗಳ ನಂತರದಲ್ಲಿ ‘ಅಗ್ನಯೇಷ್ಟಕೃತೇಸ್ವಾಹಾ’ ಎಂದು ಹೋಮಿಸುವದು. ನಿರಗ್ನಿಯಾದವನಿಗೆ ಸಾಮಾನ್ಯ ಇದೇ ಕ್ರಮವು. ಉಳಿದದ್ದು ಹಿಂದಿನಂತೆಯೇ, ಕಾತ್ಯಾಯನರಿಗೆ ಹಗಲಿನಲ್ಲಿ ಒಂದೇ ವೈಶ್ವದೇವವು ರಾತ್ರಿಯಲ್ಲಿ ವೈಶ್ವದೇವವಿಲ್ಲ. ಸಾಮಗರು, ಅಥರ್ವಣರು ಇವರಾದರೂ ತಮ್ಮ ತಮ್ಮ ಶಾಖೋಕ್ತ ರೀತಿಯಿಂದ ಪಂಚಮಹಾಯಜ್ಞಗಳನ್ನು ಮಾಡತಕ್ಕದ್ದು. ತಮ್ಮ-ತಮ್ಮ ಶಾಖೆಯಲ್ಲಿಲ್ಲದ್ದನ್ನು ಋಗೈದಿಗಳಿಗೆ ಹೇಳಿದ ರೀತಿಯಿಂದ ಮಾಡತಕ್ಕದ್ದು. ಪಂಚಯಜ್ಞಾದಿಗಳು ಉಪನಯನಾದಿ ಸಂಸ್ಕಾರಗಳು ಇವುಗಳಲ್ಲೆಲ್ಲ ತನ್ನ ಶಾಖೆಯಲ್ಲಿ ಹೇಳದಿರುವದನ್ನು ಅನ್ಯಶಾಖೆಯಿಂದ ತೆಗೆದುಕೊಳ್ಳುವದು. (ಅನುಕ್ರಮನತೋಗ್ರಾಹ್ಯಂ) ಎಂಬುದೇ ನ್ಯಾಯವು. ಶಾಖಾಂತರಗಳ ಮತವನ್ನು ಚೆನ್ನಾಗಿ ಮನದಟ್ಟುಮಾಡಿಕೊಳ್ಳದೆ ಧೈರ್ಯದಿಂದ ಯಥಾಮತಿಯಾಗಿ ಅನ್ಯಶಾಖೆಗಳ ಆತ್ಮಿಕ ಪ್ರಕರಣವನ್ನು ಹೇಳಿರುವನು. ಇದನ್ನು ತಿಳಿದು ಆಯಾಯ ಶಾಖೆಯವರು ಶೋಧಿಸಿ ನೋಡಿಕೊಳ್ಳತಕ್ಕದ್ದು. ಕಬ್ಬು, ಜಲ, ಫಲ, ಮೂಲ, ತಾಂಬೂಲ, ಹಾಲು, ಔಷಧ ಇವುಗಳ ಆಹಾರಮಾಡಿದ್ದರೂ ಸ್ನಾನ-ದಾನಾದಿಕಾರ್ಯಗಳಿಗೆ ನಿಷೇಧವಿಲ್ಲ. ಪಂಚಮಹಾಯಜ್ಞಗಳಲ್ಲಿ ಯಾವದಾದರೊಂದು ಲೋಪವಾದರೂ ಉಪವಾಸರೂಪವಾದ ಪ್ರಾಯಶ್ಚಿತ್ತವು, ಧನಿಕ, ರೋಗಿ ಇವರಿಗೆ ಪ್ರತಿಯಜ್ಞಕ್ಕೊಂದರಂತೆ ‘ಅರ್ಧಕೃಚ್ಛ’ವು ಪ್ರಾಯಶ್ಚಿತ್ತವು. ಕೆಲವರು ಒಂದು ದಿನ ಲೋಪವಾದರೆ ‘ಮನಸ್ವತೀ’ ಮಂತ್ರದಿಂದ, ಎರಡು ಮೂರು ದಿನ ಲೋಪವಾದಲ್ಲಿ ತಂತುಮತೀ ಮೂರು ಮಂತ್ರಗಳಿಂದ ಹೋಮಿಸತಕ್ಕದ್ದು ಮತ್ತು ನಾಲ್ಕು ವರುಣ ಮಂತ್ರಗಳನ್ನು ಜಪಿಸಬೇಕು. ಹನ್ನೆರಡುದಿನ ಲೋಪವಾದಲ್ಲಿ ತಂತುಮತೀ, ಸ್ಥಾಲೀಪಾಕ, ವರುಣಮಂತ್ರಗಳಿಂದ ಆಜ್ಯಹೋಮ ಮಾಡತಕ್ಕದ್ದೆಂದು ಹೇಳುವರು. ಸರ್ವಸಾಧಾರಣ ಭೋಜನ ನಿಯಮ ಬಂಗಾರ, ಬೆಳ್ಳಿ, ಮಾವು ಮೊದಲಾದ ಪಾತ್ರೆಗಳು ಭೋಜನಕ್ಕೆ ಪ್ರಶಸ್ತಿಗಳು. ಬೇರೆಯವರು ಊಟಮಾಡಿದ ಕಂಚಿನ ಪಾತ್ರೆಯಲ್ಲಿ ಊಟಮಾಡಬಾರದು. ಯತಿ, ಬ್ರಹ್ಮಚಾರಿ, ವಿಧವೆ ಇವರು ತಾಂಬೂಲ, ಅಭ್ಯಂಗ, ಕಂಚಿನಪಾತ್ರೆಯಲ್ಲಿ ಭೋಜನ ಇವುಗಳನ್ನು ಮಾಡಬಾರದು. ಯತಿ ಮೊದಲಾದವರಿಗೆ ಮುತ್ತುಗಲದ ಪತ್ರಾವಳಿಯು ಶ್ರೇಷ್ಠವು, ಗೃಹಸ್ಥನು ಅದರಲ್ಲಿ ಭೋಜನಮಾಡಿದರೆ “ಚಾಂದ್ರಾಯಣ” ಮಾಡತಕ್ಕದ್ದು. ಆದರೆ ಇದು ಲತೆಯರೂಪವಾದ ಪಲಾಶದ ವಿಷಯವೆಂದು “ಸ್ಮತ್ಯರ್ಥಸಾರ"ದಲ್ಲಿ ಹೇಳಿದ (ಅಂದರೆ ವೃಕ್ಷರೂಪವಾದ ಮುತ್ತುಗಲ ಅಡ್ಡಿ ಇಲ್ಲವೆಂದು ತಾತ್ಪರ್ಯ) ಬಾಳೆ, ಕೊಡಸಿಗ, ಮಧುಕ (ಹಿಪ್ಪೆ) ನೇರಳೆ, ಹಲಸು, ಮಾವು, ಸಂಪಿಗೆ, ೩೪೬ ಧರ್ಮಸಿಂಧು ಅತ್ತಿ ಎಲೆಗಳು ಶ್ರೇಷ್ಠ. ಎಕ್ಕ, ಅಶ್ವತ್ಥ, ಆಲ ಮೊದಲಾದ ಎಲೆಗಳು ನಿಷಿದ್ಧಗಳು, ಚತುರಶ್ರ ಮಂಡಲಮಾಡಿ ತೊಳೆದು ಪಾತ್ರೆಯನ್ನಿಟ್ಟು ಪಂಚಯಜ್ಞದ ಅವಶಿಷ್ಟವಾದ ತುಪ್ಪದಿಂದ ಅಭಿಘಾರ ಮಾಡಿದ ಬಡಿಸಿದ ಅನ್ನವನ್ನು “ಅಸ್ಮಾಕಂ ನಿತ್ಯಮಸ್ತು ಏತತ್ ಹೀಗೆ ಹೇಳಿ ನಮಸ್ಕರಿಸುವದು. ಗಂಟಿಲ್ಲದ ಪವಿತ್ರವನ್ನು ಬಲಗೈಗೆ ಸಿಕ್ಕಿಸಿಕೊಂಡು ಎರಡು ಅಥವಾ ಒಂದು ಪಾದದಿಂದ ಭೂಮಿಯನ್ನು ಸ್ಪರ್ಶಿಸಿ ವ್ಯಾಹೃತಿ ಮತ್ತು ಗಾಯತ್ರಿಯಿಂದ ಅಭಿಮಂತ್ರಿಸಿ, ಹಗಲಿನಲ್ಲಾದರೆ “ಸತ್ಯಂತ್ವರ್ತನ ಪರಿಷಿಂಚಾಮಿ” ಎಂದು, ರಾತ್ರಿಯಲ್ಲಿ “ಋತಂತ್ವಾ ಸತ್ಯೇನ ಪರಿಷಿಂಚಾಮಿ” ಹೀಗೆ ಪರಿಷೇಚನಮಾಡಿ “ಅಂತಶ್ಚರತಿಭೂತೇಷು ಗುಹಾಯಾಂ ವಿಶ್ವತೋಮುಖ: ತ್ವಂ ಯಜ್ಞ ವಷಟ್ಕಾರಂ ವಿಷ್ಣು : ಪುರುಷಃ ಪರಃ” ಹೀಗೆ ಹೇಳಿ ಪಾತ್ರದ ಬಲಭಾಗದಲ್ಲಿ ಬಲಿಯನ್ನು ಕೊಡಬೇಕು. “ಭೂಪತಯೇ ನಮಃ, ಭುವನಪತಯೇ ನಮಃ, ಭೂತಾನಾಂ ಪತಯೇನಮಃ"ಹೀಗೆ ಮೂರು ಬಲಿಗಳು. ಇಲ್ಲವೆ ಚಿತ್ರಾಯ-ಚಿತ್ರಗುಪ್ತಾಯ-ಯಮಾಯ-ಯಮಧರ್ಮಾಯ-ಸರ್ವಭೋ ಭೂತಭೋ ನಮಃ(ಹೀಗೆ) ಅಥವಾ ವ್ಯಸ್ತ, ಸಮಸ್ತ ಈ ನಾಲ್ಕು ವ್ಯಾಹೃತಿ ಆಹುತಿಗಳಿಂದ ಕೊಡಬಹುದು; ಅಥವಾ ಧರ್ಮರಾಜಾಯ-ಚಿತ್ರಗುಪ್ತಾಯ ಈ ಎರಡು, ಅಥವಾ ಇವುಗಳಿಂದ ಕೂಡಿ ಭೂವತಿ-ಭುವನಪತಿ-ಭೂತಾನಾಂಪತಿ ಹೀಗೆ ಐದು ಬಲಿಗಳನ್ನು ಕೊಡುವದು. ಹಸ್ತ, ಪಾದ, ಮುಖಗಳು ಒದ್ದೆಯಾಗಿರಬೇಕು. ಆಪೋಶನ ಜಲವನ್ನು ಹಿಡಿದುಕೊಂಡು “ಅನ್ನಂಬ್ರಹ್ಮರಸೋವಿಷ್ಠಃ, ಅಹಂವೈಶ್ವಾನರೋಭೂತ್ವಾ” ಇವುಗಳ ಅರ್ಥವನ್ನು ಸ್ಮರಿಸುತ್ತ ಎಡಗೈಯಿಂದ ಎದೆಯನ್ನು ಸ್ಪರ್ಶಿಸಿಕೊಂಡು “ಅಮೃತೋಪಸ್ತರಣಮಸಿ” ಹೀಗೆ ಪ್ರಾಶನಮಾಡುವದು. ಮೌನಿಯಾಗಿ ‘ಓಂ ಪ್ರಾಣಾಯಸ್ವಾಹಾ-ಓಂ ಅಪಾನಾಯ-ಓಂ ವ್ಯಾನಾಯ-ಓಂ ಉದಾನಾಯ-ಓಂ ಸಮಾನಾಯ ಸ್ವಾಹಾ” ಎಂದು ಮೃತ ಅಥವಾ ಕ್ಷೀರಯುಕ್ತವಾದ ಐದಾಹುತಿಗಳನ್ನು ಎಲ್ಲ ಬೆರಳುಗಳನ್ನು ಕೂಡಿಸಿಕೊಂಡು ಎಲ್ಲ ಗ್ರಾಸಗಳನ್ನೂ ನುಂಗುವದು. ಹೀಗೆ ಬಾಯಲ್ಲಿ ಹೋಮವು. “ಓಂ ಬ್ರಹ್ಮಣೇ ಸ್ವಾಹಾ” ಎಂದು ಆರನೇ ಆಹುತಿಯನ್ನು ನುಂಗುವದೆಂದು ಕಲಕಡೆಯಲ್ಲಿ ಹೇಳಿದೆ. ಪ್ರಾಣಾಹುತಿಪರ್ಯಂತ ಪಾತ್ರವನ್ನು ಮುಟ್ಟಿಕೊಂಡಿರುವದು; ಮತ್ತು ಮೌನದಿಂದಿರುವದು. ಇವು ನಿತ್ಯಗಳು. ನಂತರ ಈ ಎರಡೂ ಐಚ್ಛಿಕಗಳು. (ಇಚ್ಛೆಯಿದ್ದರೆ ಊಟಮುಗಿಯುವ ವರೆಗೆ ಮಾಡಬಹುದು) ಪೂರ್ವಾಭಿಮುಖ ಅಥವಾ ಪಶ್ಚಿಮಾಭಿಮುಖನಾಗಿ ಭೋಜನಮಾಡುವದು ಪ್ರಶಸ್ತವು, ದಕ್ಷಿಣಮುಖವು ಯಶಃಕರವು. (ಇದು ಕಾವ್ಯ) ಉತ್ತರಮುಖವು ಕನಿಷ್ಟವು. ಏದಿಕ್ಕು (ಆಗೇಯಾದಿ) ನಿಷಿದ್ದವು. ಎಲ್ಲ ಗ್ರಾಸವನ್ನೂ ನುಂಗತಕ್ಕದ್ದು. ಮೂವತ್ತೆರಡು ಈ ಗ್ರಾಸನಿಯಮದಿಂದ ಇಲ್ಲವೆ ಅನಿಯಮಿತ ಗ್ರಾಸಗಳಿಂದ ಊಟವನ್ನು ಮುಗಿಸಿ “ಅಮೃತಾಪಿಧಾನಮಸಿ” ಎಂದು ಅರ್ಧಗಂಡೂಷಜಲ (ಅರ್ಧಬಾಯಿ ತುಂಬುವಷ್ಟು) ವನ್ನು ಕುಡಿದು ಅರ್ಧವನ್ನು ಭೂಮಿಯಲ್ಲಿ ಹನಿಸಿ ಪವಿತ್ರವನ್ನು ತ್ಯಜಿಸಿ ಬಾಯಿ ಮತ್ತು ಹಸ್ತಗಳನ್ನು ಚೆನ್ನಾಗಿ ತೊಳೆದುಕೊಳ್ಳತಕ್ಕದ್ದು. ತರ್ಜನಿಯಿಂದ ಮುಖಶೋಧವನ್ನು ಮಾಡಬಾರದು. ಸ್ವಲ್ಪ ಬಾಯಿಮುಕ್ಕಳಿಸಿದನಂತರ ಹಸ್ತವನ್ನು ತೊಳೆದು ನಂತರ ಹದಿನಾರಾವರ್ತಿ ಬಾಯಿಮುಕ್ಕಳಿಸಿ ರಾಚಮನ ಮಾಡತಕ್ಕದ್ದು. ಭೋಜನ ಮಾಡಿದ ಗೃಹದಲ್ಲಿ ಆಚಮನ ಮಾಡಬಾರದು. ಆಚಮನ ಮಾಡದ ಮಲ-ಮೂತ್ರಗಳನ್ನು ವಿಸರ್ಜಿಸಕೂಡದು. ಉತ್ತರಾಪೋಶನಮಾಡದೆ ಎದ್ದರೆ ಸ್ನಾನದಿಂದ ಪರಿಚ್ಛೇದ - ೩ ಪೂರ್ವಾರ್ಧ ೩೪೭ ಶುದ್ದಿಯು, ಹಸ್ತಗಳನ್ನೊರಸಿಕೊಂಡು ಸ್ವಲ್ಪ ನೀರನ್ನು ಕೆಳಗೆ ಚಲ್ಲಿ ಅಂಗುಷ್ಠದಿಂದ ನೇತ್ರಕ್ಕೆ ಜಲಸ್ಪರ್ಶ ಮಾಡಿ ಇಷ್ಟದೇವತೆಯನ್ನು ಸ್ಮರಿಸುವದು. ನೀರನ್ನು ಅಂಜಲಿಯಿಂದ ಕುಡಿಯಬಾರದು. ಮುತ್ತುಗದ ಹಾಗೂ ದಗ್ಧವಾದ ಕಬ್ಬಿಣದಿಂದ ಕಟ್ಟಿದ ಆಸನವಾಗಕೂಡದು. ಸಣ್ಣ ಶಿಶುಗಳಿಂದ ಕೂಡಿ ಉಣ್ಣಬಾರದು. ವಿವಾಹ ಹೊರತಾಗಿ ಪತಿಯೊಡನೆ ಸಹಭೋಜನವು ನಿಷಿದ್ಧವು. ಬಾಲಕರು, ವೃದ್ಧರು ಇವರನ್ನು ಬಿಟ್ಟು ಊಟಮಾಡಬಾರದು. ಪ್ರೌಢವಾದ (ಒಂದು ಕಾಲಮೇಲೆ ಮತ್ತೊಂದನ್ನಿಟ್ಟು)ದಿಂದ ಮತ್ತು ಕಾಲು ನೀಡಿಕೊಂಡು, ವಿದಿಕ್ಕಿಗೆ ಮುಖಮಾಡಿಕೊಂಡು, ದುಷ್ಟರನ್ನು ಪಂಕ್ತಿಯಲ್ಲಿ ಕೂಡ್ರಿಸಿಕೊಂಡು, ಅಗ್ನಿರಹಿತವಾದ ಮನೆಯಲ್ಲಿದ್ದುಕೊಂಡು, ಮತ್ತು ದೇವಾಲಯದಲ್ಲಿದ್ದುಕೊಂಡು ಊಟಮಾಡಬಾರದು. ಸಂಧ್ಯಾಕಾಲ, ಮಧ್ಯರಾತ್ರಿಗಳಲ್ಲಿ, ಮತ್ತು ಯಜ್ಞಪವೀತ ರಹಿತನಾಗಿ ಉಣ್ಣ ಬಾರದು. ಎಡಗೈಯಿಂದ ಮತ್ತು ಶೂದ್ರಶೇಷಾನ್ನವನ್ನುಣ್ಣ ಬಾರದು. ಮೊದಲು ಮಧುರವಸ್ತು, ಮಧ್ಯದಲ್ಲಿ ಉಪ್ಪು, ಹುಳಿ, ಕೊನೆಗೆ ಕಹಿವಸ್ತು ಹೀಗೆ ಊಟಮಾಡತಕ್ಕದ್ದು. ಮೊದಲು ದ್ರವವಸ್ತು, ಮಧ್ಯದಲ್ಲಿ ಘಟ್ಟವನ್ನು, ತುದಿಯಲ್ಲಿ ಪುನಃ ದ್ರವವಸ್ತು ಹೀಗಿರತಕ್ಕದ್ದು. “ಯತಿಗೆ ಎಂಟು ಗ್ರಾಸಗಳು, ಗೃಹಸ್ಥನಿಗೆ ಹದಿನಾರು ಅಥವಾ ಮೂವತ್ತೆರಡು, ವಾನಪ್ರಸ್ಥನಿಗೆ ಹದಿನಾರು, ಬ್ರಹ್ಮಚಾರಿಗೆ ಯಥೇಷ್ಟ ಗ್ರಾಸಗಳು"ಎಲ್ಲವನ್ನೂ ಸ್ವಲ್ಪ ಶೇಷಬಿಟ್ಟು ಮೃತ, ಪಾಯಸಗಳನ್ನು ಮಾತ್ರ ನಿಃಶೇಷವಾಗಿ ಭೋಜನಮಾಡತಕ್ಕದ್ದು, ಹಾಲು, ಮೊಸರು, ಜೇನುತುಪ್ಪ ಇವುಗಳ ಶೇಷವನ್ನು ಬಿಡಬಾರದು. ಸಾಮಾನ್ಯವಾಗಿ ಹಗಲಿನಲ್ಲೊಂದು, ರಾತ್ರಿಯಲ್ಲೊಂದು ಹೀಗೆ ಎರಡು ಭೋಜನಗಳು, ಮಧ್ಯದಲ್ಲಿ ಭೋಜನವು ನಿಷಿದ್ಧವು. ರವಿವಾರ, ಹುಣ್ಣಿವೆ, ಅಮಾವಾಸೆ ಇವುಗಳಲ್ಲಿ ರಾತ್ರಿ ಊಟಮಾಡಬಾರದು. ಚತುರ್ದಶೀ, ಅಷ್ಟಮೀ ಇವುಗಳಲ್ಲಿ ಹಗಲು ಊಟಮಾಡಬಾರದು. ಏಕಾದಶಿಯಲ್ಲಿ ಎರಡೂ ಹೊತ್ತು ಭೋಜನ ನಿಷಿದ್ದವು. ಮಾಡಿದಲ್ಲಿ ಚಾಂದ್ರಾಯಣವನ್ನಾಚರಿಸಬೇಕು. ಪಾತ್ರದಲ್ಲಿಯ ಅನ್ನವನ್ನಲ್ಲದೆ ಕೈಯಲ್ಲಿ ತೆಗೆದುಕೊಂಡು ತಿಂದರೆ, ಬಾಯಿಂದ “ವೂ ಪೂ” ಎಂದು ಊಟಮಾಡಿದರೆ, ಬೆರಳುಗಳನ್ನು ಬಿಚ್ಚಿಕೊಂಡು ಊಟಮಾಡಿದರೆ ಆ ಅನ್ನವು ಗೋಮಾಂಸಕ್ಕೆ ಸಮಾನವಾಗುವದು. ಅಜೀರ್ಣವಾದಾಗ ಅಥವಾ ಬಹಳ ಹಸಿದಾಗ ಊಟಮಾಡಬಾರದು. ಒದ್ದೆ ವಸ್ತ್ರವನ್ನುಟ್ಟು, ತಲೆಯು ಒದ್ದೆಯಾಗಿದ್ದಾಗ, ಕಾಲಿನಮೇಲೆ ಕೈಯನ್ನಿಟ್ಟುಕೊಂಡು ಊಟಮಾಡಬಾರದು. ತುತ್ತನ್ನು ಎತ್ತಿದ ನಂತರ ಅದರ ಶೇಷವು ಬಿದ್ದರೆ ಅದನ್ನು ತಿನ್ನಬಾರದು. ಕುಡಿದುಳಿದ ಶೇಷವನ್ನು ಪುನಃ ಕುಡಿಯಬಾರದು, ತರಕಾರಿ, ಫಲ, ಮೂಲಾದಿಗಳು ಹಲ್ಲಿನಿಂದ ಕಚ್ಚಿ ತುಂಡಾಗಿದ್ದರೆ ಅದನ್ನು ಪಯೋಗಿಸಬಾರದು. ಉಚ್ಛಿಷ್ಟನಾಗಿದ್ದಾಗ ತುಪ್ಪವನ್ನು ತಿನ್ನಬಾರದು. ಕಾಲಿನಿಂದ ಪಾತ್ರವನ್ನು ತುಳಿಯಬಾರದು. ಕುಡಿಯುವಾಗ ಬಿದ್ದ ಜಲ, ಬಾಯಿಯಿಂದ ಪಾತ್ರದಲ್ಲಿ ಬಿದ್ದ ವಸ್ತುವನ್ನು ತಿನ್ನಬಾರದು. ಕುಡಿದು ಅವಶಿಷ್ಟವಾದ ಜಲವನ್ನು ಕುಡಿದರೆ “ಚಾಂದ್ರಾಯಣ” ಮಾಡುವದು. ಕೈಯುಗುರಿನಿಂದ ಕೂಡಿದ ಅಥವಾ ಸ್ಪರ್ಶವಾದ ಜಲವನ್ನು ಪಾನಮಾಡಿದರೆ ಮತ್ತು ಎಡಗೈಯಿಂದು ನೀರು ಕುಡಿದರೆ ಅದು ಸುರಾಪಾನಕ್ಕೆ ಸರಿಯಾಗುವದು. ಒಂದೇ ಪಂಕ್ತಿಯಲ್ಲಿ ಅನೇಕ ಬ್ರಾಹ್ಮಣರು ಊಟಮಾಡುತ್ತಿರುವಾಗ ಯಾವನೊಬ್ಬನು ಮಧ್ಯದಲ್ಲಿ ಎದ್ದರೆ ಅಥವಾ ಆಚಮನಮಾಡಿದರೆ ಅನ್ಯರು ಊಟಮಾಡತಕ್ಕದ್ದಲ್ಲ. ಹೀಗಾದರೆ ಎದ್ದವನಿಗೂ, ಉಣ್ಣುವವನಿಗೂ ದೋಷವು ಆದರೆ ೩೪೮ ಧರ್ಮಸಿಂಧು ಗುರುವಿಗೆ ಆ ದೋಷವಿಲ್ಲ. ಉಪ್ಪು, ಮೇಲೋರಗರ, ತುಪ್ಪ, ಎಣ್ಣೆ, ನೆಕ್ಕುವವಸ್ತು, ಕುಡಿಯುವವಸ್ತು, ಇವುಗಳನ್ನು ಹಸ್ತದಿಂದ ಕೊಟ್ಟಿದ್ದನ್ನು ಭಕ್ಷಿಸಬಾರದು. ತಾಮ್ರ ಪಾತ್ರದಲ್ಲಿಯ ಹಾಲು, ಮೊಸರು ಮೊದಲಾದ ಗವ್ಯ, ಕಂಚಿನಪಾತ್ರೆಯಲ್ಲಿಯ ತೆಂಗಿನರಸ, ಕಬ್ಬಿನರಸ, ಬೆಲ್ಲದಿಂದ ಕೂಡಿದ ಮೊಸರು, ಬೆಲ್ಲರಹಿತವಾದ ಹಸೀ ಶುಂಠಿ ಇವು ಮದ್ಯಕ್ಕೆ ಸಮಾನವಾದದ್ದೆಂದು ತಿಳಿಯುವದು. ಸೈಂಧವ, ಸಮುದ್ರಲವಣಗಳ ಹೊರತಾದ ಲವಣಗಳನ್ನು ಪ್ರತ್ಯಕ್ಷವಾಗಿ ತಿಂದರೆ ಮತ್ತು ಮಣ್ಣನ್ನು ತಿಂದರೆ ಅದು ಗೋಮಾಂಸ ಸಮಾನವು, ರಜಸ್ವಲೆ, ಚಾಂಡಾಲ, ನಾಯಿ, ಕೋಳಿ ಇವುಗಳನ್ನು, ಉಣ್ಣುವಾಗ ನೋಡಿದರೆ ಉಳಿದ ಅನ್ನವನ್ನು ತ್ಯಜಿಸಬೇಕು. ಊಟಮಾಡುವಾಗ ಮಲದ್ವಾರದಲ್ಲಿ ಸ್ರವಿಸಿದರೆ ಉಪವಾಸವನ್ನು ಮಾಡತಕ್ಕದ್ದು. ಮತ್ತು ಪಂಚಗವ್ಯಪ್ರಾಶನ ಮಾಡತಕ್ಕದ್ದು. ಆಪೋಶನಾನಂತರ ಪ್ರಾಣಾಹುತಿಯ ಮೊದಲು ಸ್ರಾವವಾದರೆ ಸ್ನಾನಮಾಡಿ ಆರು ಪ್ರಾಣಾಯಾಮಗಳನ್ನು ಮಾಡಬೇಕು. ಊಟಮಾಡುವಾಗ ಆಶೌಚಪ್ರಾಪ್ತವಾದರೆ ಗ್ರಾಸವನ್ನು ಬಿಟ್ಟು ಸ್ನಾನಮಾಡತಕ್ಕದ್ದು. ಗ್ರಾಸವನ್ನು ತಿಂದಲ್ಲಿ ಉಪವಾಸವು. ಸರ್ವವನ್ನೂ ಊಟಮಾಡಿದರೆ ಮೂರುರಾತ್ರಿ ಉಪವಾಸ ಮಾಡತಕ್ಕದ್ದು. ಮಲ, ಮೂತ್ರಾದಿಗಳ ಸ್ಪರ್ಶವಾದರೆ ಸ್ನಾನ ಮತ್ತು ಮೂರು ಪ್ರಾಣಾಯಾಮಗಳು. ಚಾಂಡಾಲ, ಪತಿತ, ರಜಸ್ವಲೆಯರ ಮಾತನ್ನು ಕೇಳುತ್ತ ಊಟಮಾಡಿದಲ್ಲಿ ಒಂದು ದಿನ ಉಪವಾಸ ಅಥವಾ ಸ್ನಾನಮಾಡಿ ನೂರು ಗಾಯತ್ರಿಯನ್ನು ಜಪಿಸುವದು, ಜಗಳ, ಒರಳುಕುಟ್ಟುವಿಕೆ, ಬೀಸುವಿಕೆ, ಒನಕೆ ಮೊದಲಾದ ಶಬ್ದಗಳಾಗುವಾಗ ಉಣ್ಣಬಾರದು. ಬ್ರಾಹ್ಮಣರು ಕುಳಿತುಕೊಂಡ ಪಂಕ್ತಿಯಲ್ಲಿ ಅಥವಾ ಸ್ವಜನರು ಊಟಮಾಡುವಾಗ ತಾನು ಆ ಪಂಕ್ತಿಯನ್ನು ಬಿಟ್ಟು ಊಟಮಾಡಬೇಕು. ಯಾಕಂದರೆ ಅವರಲ್ಲಿ ಯಾರು ಯಾರು ಏನೇನು ರಹಸ್ಯ ಪಾಪಗಳನ್ನು ಮಾಡಿರುವರೆಂದು ಹೇಗೆ ತಿಳಿಯಬೇಕು? ಆದುದರಿಂದ ಅಂಥ ಸಂದರ್ಭದಲ್ಲಿ ಅಗ್ನಿ ಅಥವಾ ಭಸ್ಮ ಅಥವಾ ಕಂಬ, ಇಲ್ಲವೆ ಜಲ ಇವುಗಳಿಂದ ಅಂತರಮಾಡಿ (ಪಂಕ್ತಿಭೇದಮಾಡಿ ಭೋಜನ ಮಾಡುವದು.ಬೇಯಿಸಿದ ಅನ್ನದಲ್ಲಿ ಕೂದಲು, ಇರುವೆ, ನೊಣ ಮೊದಲಾದವುಗಳು ಬಿದ್ದರೆ ಅದನ್ನು ತ್ಯಜಿಸಬೇಕು. ಪಾಕವು ಸಿದ್ಧವಾದ ನಂತರ ಕೇಶ, ಕೀಟಾದಿಗಳ ಸ್ಪರ್ಶವಾದರೆ ಅಥವಾ ಆಕಳು ಮೂಸಿದರೆ ಶುದ್ದಿಗಾಗಿ ಅದರಲ್ಲಿ ಜಲ ಇಲ್ಲವೆ ಭಸ್ಮ ಇಲ್ಲವೆ ಮೃತ್ತಿಕೆಯನ್ನು ಹಾಕತಕ್ಕದ್ದು. ಅಂದರೆ ಶುದ್ಧವಾಗುವದು ಎಂದು “ವಿಜ್ಞಾನೇಶ್ವರನ ಮತವು. ಶೂದ್ರಾನ್ನ, ಶೂದ್ರನಿಂದ ಕೊಡಲ್ಪಟ್ಟ ಬ್ರಾಹ್ಮಣಾನ್ನ, ತಂಗುಳನ್ನ, ರಜಸ್ವಲಾ, ಚಾಂಡಾಲ, ಪತಿತಾದಿಗಳಿಂದ ನೋಡಲ್ಪಟ್ಟ ಅನ್ನ, ಕಾಗೆ ಮೊದಲಾರವುಗಳಿಂದ ಉಚ್ಚಿಷ್ಟವಾದ ಅನ್ನ ಇವು ತಾಜ್ಯಗಳು, ಎಣ್ಣೆಯಲ್ಲಿ ಪಕ್ವವಾದವುಗಳು ರಾತ್ರಿಯಲ್ಲಿ ಶಿಷ್ಟವಾಗಿ ಉಳಿದಿದ್ದರೂ ಗ್ರಾಹ್ಯವು. (ವಡೆ ಮೊದಲಾದವುಗಳು) ಕರವಿಲ್ಲದ ಹಾಗೂ ಕರುಹಾಕಿ ಹತ್ತು ರಾತ್ರಿ ಕಳೆಯದ ಗೋವು, ಎಮ್ಮೆ, ಕುರಿ ಇವುಗಳ ಹಾಲು ವರ್ಜ್ಯವು, ಗರ್ಭಿಣಿ ಮತ್ತು ಎರಡು ಹೊತ್ತು ಕರೆಯದ ಅವಳಿ ಜವಳಿಯದ ತನ್ನಿಂದ ತಾನೆ ಹಾಲು ಸೊರೆಯುತ್ತಿರುವ ಎರಡು ಮೊಲೆಗಳಿರುವ (ಕುರಿಯ ಹೊರತಾಗಿ ಪಶು, ಒಂಟೆ, ಕುದುರೆ, ಅಡವಿಯಮೃಗ, ಅರಣ್ಯ ಆಡು ಇವುಗಳ ಹಾಲು ವರ್ಜವು ನುಗ್ಗಿ, ಒಂಗು ಇವುಗಳ ಹೊರತಾಗಿ ಕಂಪಾದ ಮರದ ಅಂಟು, ಮಲಸ್ಥಾನದಲ್ಲಿ ಹುಟ್ಟಿರುವ ಹರಿವೆಗಿಡ ಮೊದಲಾದವುಗಳು, ದೇವರ ನೈವೇದ್ಯಕ್ಕಲ್ಲದ ಮಾಡಿದ ಭಕ್ಷ್ಯ, ಪಾಯಸಾದಿಗಳು, ಮೋದಕ, ಚಕ್ಕುಲಿ, ಕಿಚಡಿ ಮೊದಲಾದವುಗಳನ್ನುಪರಿಚ್ಛೇದ - ೩ ಪೂರ್ವಾರ್ಧ ೩೪೯ ವರ್ಜಮಾಡತಕ್ಕದ್ದು. ಶಣ (ಗಿರಿಕರ್ಣಿಕಾಸಣಬು) ಕುಸುಂಭ (ಕುಸಬೆ ಹೂವು) ಹಾಲುಗುಂಬಳ, ಬದನೆ, ಕೋವಿದಾರ (ಕೆಂಪು ಕಾಂಚಿವಾಳದ ಗಿಡ), ಆಲದ ಹಣ್ಣು ಮೊದಲಾದ ಫಲಗಳು ಮತ್ತು ಮಾದಲಕಾಯಿ ಇವು ತ್ಯಾಜ್ಯಗಳು, ಉಳ್ಳಾಗಡ್ಡ, ಬೆಳ್ಳುಳ್ಳಿ, ಗಜ್ಜರಿ ಇವುಗಳನ್ನು ತಿಂದರೆ ಚಾಂದ್ರಾಯಣ ಮಾಡಬೇಕು. ಉಣ್ಣುವದರಲ್ಲಿ ಪರಸ್ಪರ ಸ್ಪರ್ಶವಾದರೆ ಅಥವಾ ಪರಸ್ಪರ ಎಂಜಲನ್ನು ತಿಂದರೆ ಸ್ನಾನಮಾಡಿ ನೂರೆಂಟು ಗಾಯತ್ರೀಜಪವನ್ನು ಮಾಡತಕ್ಕದ್ದು. ಬಹಳ ಊಟಮಾಡಿದಲ್ಲಿ ಸಹಸ್ರ ಜಪವು. ಉಣ್ಣುವವನಿಗೆ ಅಶುಚಿ ಬ್ರಾಹ್ಮಣ ಸ್ಪರ್ಶವಾದರೆ ಅನ್ನವನ್ನು ಬಿಡತಕ್ಕದ್ದು. ಎಂಜಲು ಸ್ಪರ್ಶವಾದರೆ ಸಜಾತಿಯವನದಾದರೆ ಸ್ನಾನ ಅಥವಾ ಜಪಮಾಡಬೇಕು. ಬೇರೆ ಜಾತಿಯವನದಾದರೆ ಉಪವಾಸ ಮಾಡತಕ್ಕದ್ದು. ಊಟಮಾಡಿದ ಎಂಜಲಿಗೆ ನಾಯಿ, ಶೂದ್ರ ಮೊದಲಾದವರ ಸ್ಪರ್ಶವಾದರೆ ಉಪವಾಸಮಾಡಿ ಪಂಚಗವ್ಯಪ್ರಾಶನ ಮಾಡತಕ್ಕದ್ದು. ಮಡಿವಾಳ ಮೊದಲಾದರ ಸ್ಪರ್ಶವಾದರೆ ತ್ರಿರಾತ್ರಿ ಉಪವಾಸವು. ಬಡಿಸುವಾಗ ಉತ್ಕೃಷ್ಟ ಸ್ಪರ್ಶವಾದರೆ ಹಾಲು, ಮೊಸರು, ತುಪ್ಪ ಮೊದಲಾದ ಲಘು ಪದಾರ್ಥಗಳನ್ನು ಬಿಡತಕ್ಕದ್ದಲ್ಲ. ಬರೇ ಆಚಮನದಿಂದ ಶುದ್ದಿಯು, ಭಕ್ತಾದಿಗಳನ್ನಾದರೆ ತ್ಯಜಿಸಬೇಕು. ವಸ್ತ್ರಸ್ಪರ್ಶವಾದರೆ ವಿಕಲ್ಪವು, ಬಡಿಸುವಾಗ ರಜೋದರ್ಶನವಾದರೆ ಅವಳು ಮುಟ್ಟಿದ ಅನ್ನವನ್ನು ತ್ಯಜಿಸುವದು. ಭೋಜನಾನಂತರ “ರೌರವೇಪೂಯನಿಲಯೇ ಪದ್ಮಾರ್ಬುದನಿವಾಸಿನಾಗಿಪ್ರಾಣಿನಾಂ ಸರ್ವಭೂತಾನಾಂ ಅಕ್ಷಯ್ಯಮುಪತಿಷ್ಠತು ಹೀಗೆ ಹೇಳಿ ಉಚ್ಛಿಷ್ಟಶೇಷವನ್ನು ಕೊಡತಕ್ಕದ್ದು ಎಂಜಲು ಎಡೆಯನ್ನು ತೆಗೆಯುವ ವರೆಗೆ ಆಚಮನ ಮಾಡಿದ್ದರೂ ಅಶುಚಿಯೆಂದೇ ತಿಳಿಯುವದು. ಪಾತ್ರೆಯನ್ನು ತೆಗೆದರೂ ಸಾರಿಸುವವರೆಗೆ ಆ ಸ್ಥಾನವು ಅಶುಚಿಯು, ವೀಳ್ಯದೆಲೆಯ ಬುಡ ತುದಿ ಹಾಗೂ ಶಿರಗಳನ್ನು ಬಿಟ್ಟು ಸುಣ್ಣದಿಂದ ಲೇಪಿಸಿದ್ದನ್ನು ಬಿಟ್ಟು ತಾಂಬೂಲವನ್ನು ತಿನ್ನತಕ್ಕದ್ದು. ಬಾಯಲ್ಲಿ ಎಲೆಯನ್ನಿಡದೆ ಅಡಿಕೆಯನ್ನು ತಿನ್ನಬಾರದು. ಹೀಗೆ ಐದನೇ ಭಾಗದ ಕೃತ್ಯವು ದಿನದ ಷಷ್ಠಭಾಗದ ಕೃತ್ಯ ದಿನದ ಆರನೇ ಮತ್ತು ಏಳನೇ ಭಾಗಗಳನ್ನು ಇತಿಹಾಸ, ಪುರಾಣಗಳಿಂದ ಕಳೆಯಬೇಕು. ಎಂಟನೇ ಭಾಗದಲ್ಲಿ ಪ್ರಾಪಂಚಿಕ ವ್ಯವಹಾರಗಳನ್ನು ನೋಡಿಕೊಳ್ಳುವದು. ನಂತರ ಮನೆಯ ಹೊರಗೆ ಸಾಯಂ ಸಂಧ್ಯೆಯನ್ನು ಮಾಡುವದು. ಸಾಯಂ ಸಂಧ್ಯೆಯಾದರೂ ಸಾಮಾನ್ಯ ಪ್ರಾತಃ ಸಂಧ್ಯೆಯಂತೆಯೇ, “ಅಗ್ನಿಶ್ಚಮಾ ಮತ್ಯುಶ್ಚಮಾ ಯದಕ್ಕಾಪಾಪ ಮಕಾರ್ಷಂ ಅಹಸ್ತದ ವಲುಂಪು ಸತ್ಯಜ್ಯೋತಿಷಿ ಜುಹೋಮಿ ಸ್ವಾಹಾ” ಎಂದು ಮಂತ್ರಾಚಮನದಲ್ಲಿ ವಿಶೇಷವು. ಅರ್ಥ್ಯವನ್ನು ಪಶ್ಚಿಮಾಭಿಮುಖನಾಗಿ ಕೊಡತಕ್ಕದ್ದು, ಗಾಯತ್ರಿಯನ್ನಾದರೂ, ಮೊಳಕಾಲು ಮೇಲೆ ಮಾಡಿ ಕುಳಿತು ಗಾಯತ್ರಿಯನ್ನು ಜಪಿಸುವದು. ಸಾಯಂ ವಿಷಯವನ್ನು ಮೊದಲೇ ಹೇಳಲಾಗಿದೆ. ಸಾಯಂವೈಶ್ವದೇವಕ್ಕೆ ಪುನಃಪಾಕ ಮಾಡತಕ್ಕದ್ದು. ಅತಿಥಿಯನ್ನು ಪೂಜಿಸಿ ಮೂರು ಗಳಿಗೆಯ ನಂತರ ಒಂದೂವರ ಯಾಮದೊಳಗೆ ಊಟಮಾಡಿ ಮಲಗುವದು. ಭೋಜನಕಾಲದಲ್ಲಿ ದೀಪನಾಶವಾದರೆ ಪಾತ್ರವನ್ನು ಮುಟ್ಟಿ ಸೂರ್ಯನನ್ನು ಸ್ಮರಿಸಿ ಪುನಃ ದೀಪವನ್ನು ನೋಡಿ ಪಾತ್ರದಲ್ಲಿದ್ದ ಅನ್ನವನ್ನೇ ಉಣ್ಣುವದು ಹೊರತು ಬೇರೆಯನ್ನವನ್ನಲ್ಲ. ಶ್ರಾದ್ಧ, ಶ್ರಾದ್ಧದ ಮುಂಚಿನ ದಿನ, ವ್ಯತಿಪಾತ, ಸಂಕ್ರಾಂತಿ, ವೈಧೃತಿ, ಮೊದಲಾದವುಗಳಲ್ಲಿ ರಾತ್ರಿಭೋಜನವು ನಿಷಿದ್ಧವು. ಧರ್ಮಸಿಂಧು ರಾತ್ರಿಯಲ್ಲಿ ಚತುರ್ಥ ಯಾಮ ಮತ್ತು ಮೊದಲನೆ ಯಾಮಗಳನ್ನು ವಿದ್ಯಾಭ್ಯಾಸದಿಂದ ಕಳೆಯಬೇಕು. ಮಧ್ಯದ ಎರಡು ಯಾಮಗಳಲ್ಲಿ ನಿದ್ರೆ ಮಾಡಬೇಕು. ಹೀಗೆ ದಿನಚರಿ ಇದ್ದರೆ ಅದು ಮೋಕ್ಷಕ್ಕೆ ಕಾರಣವಾಗುವದು. ಪೂರ್ವ, ಪಶ್ಚಿಮ, ಅಥವಾ ದಕ್ಷಿಣ ದಿಕ್ಕಿಗೆ ತಲೆಮಾಡಿ ಮಲಗಬೇಕು. ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಲೇಬಾರದು. ರಾತ್ರಿಸೂಕ್ತವನ್ನು ಪಠಿಸಿ, ಸುಖಶಾಯಿಗಳನ್ನು ಸ್ಮರಿಸಿ, ವಿಷ್ಣುವಿಗೆ ನಮಸ್ಕರಿಸಿ ಮಲಗುವದು. ಅಗಸ್ತಿ, ಮಾಧವ, ಮುಚಕುಂದ ಮುನಿ, ಕಪಿಲ ಮುನಿ, ಆಸ್ತೀಕ, ಇವರು ಸುಖಶಾಯಿಗಳು ಎನ್ನಲ್ಪಡುವರು, ಸಂಧ್ಯಾ ಸಮಯದಲ್ಲಿ, ಧಾನ್ಯದ ಮೇಲೆ, ಕೊಟ್ಟಿಗೆಯಲ್ಲಿ, ದೇವ-ಬ್ರಾಹ್ಮಣ-ಗುರುಗಳ ಮೇಲ್ಬದಿಯಲ್ಲಿ ಮಲಗಬಾರದು. ಅಶುಚಿಯಾಗಿದ್ದಾಗ, ಮತ್ತು ಹಗಲಿನಲ್ಲಿ ಹಾಗೂ ವಸ್ತ್ರರಹಿತನಾಗಿ ಮಲಗಬಾರದು. ನಿದ್ರಾಕಾಲದಲ್ಲಿ ತಾಂಬೂಲ ಬಾಯಿಯಲ್ಲಿರಕೂಡದು. ಸ್ತ್ರೀಯು ಹಾಸಿಗೆಯಲ್ಲಿರಕೂಡದು. ಹಣೆಯಲ್ಲಿ ತಿಲಕವಿರಬಾರದು. ಶಿರಸ್ಸಿನಲ್ಲಿ ಹೂವಿರಬಾರದು. ಗರ್ಭಾಧಾನೋಕ್ತ ಕಾಲದಲ್ಲಿ ರಾತ್ರಿ ಒಂದೂವರೆ ಯಾಮದ ನಂತರ ದೀಪವಿರಲಿ, ಇಲ್ಲದಿರಲಿ ಯಜ್ಞಪವೀತವನ್ನು ಮಾಲಿಕೆ ಮಾಡಿಕೊಂಡು ಪತ್ನಿಗಮನ ಮಾಡತಕ್ಕದ್ದು. ಚತುರ್ದಶಿ, ಪರ್ವತಿಥಿ, ಮತ್ತು ಹಗಲಿನಲ್ಲಿ ಮೈಥುನಮಾಡತಕ್ಕದ್ದಲ್ಲ. ಈ ಹೇಳಿದ ಸಮಯದಲ್ಲಿ ಮೈಥುನಮಾಡಿದವನು ಸಲಸ್ನಾನಮಾಡಿ ವರುಣಸೂಕ್ತದಿಂದ ಮಾರ್ಜನ ಮಾಡತಕ್ಕದ್ದು. “ಪುನರ್ಮಾಮೃತು” ಎಂಬ ಜಪವನ್ನು ಹೇಳಿದೆ. ಹೀಗೆ ಬಹುವಿಧ- ವಿಧಿ ನಿಷೇಧಗಳಿಂದ ಕೂಡಿದ ಸ್ನಾನ, ಭೋಜನಾದಿ-ಆ ಕಕಾರ್ಯದಲ್ಲಿ ನ್ಯೂನಾಧಿಕ ದೋಷವುಂಟಾಗುವದು ಸಹಜ. ವಿಧಿ-ನಿಷೇಧಾತಿಕ್ರಮದೋಷ ಉಂಟಾಗಬಹುದು. ಆ ದೋಷ ನಿವಾರಣೆಗೆ ಸರಿಯಾದ ಪ್ರಾಯಶ್ಚಿತ್ತ ವಿಧಾನವೂ ತಿಳಿಯದೆಹೋಗಬಹುದು. ಅವುಗಳ ಸಾಂಗತಾಸಿದ್ಧಿಗಾಗಿ ಮತ್ತು ಪ್ರಾಯಶ್ಚಿತಸಾಂಗತಾಸಿದ್ಧರ್ಥವಾಗಿ ಶ್ರೀ ವಿಷ್ಣುವಿನ ನಾಮೋಚ್ಚಾರಣೆಮಾಡಬೇಕು. ತಪಸ್ಸು ಕರ್ಮಾಚರಣೆ ರೂಪವಾದ ಎಲ್ಲ ಪ್ರಾಯಶ್ಚಿತ್ತಗಳಿಗೂ ಮಿಗಿಲಾಗಿ ಒಂದು ಪ್ರಾಯಶ್ಚಿತ್ತವಿದೆ. ಅದೆಂದರೆ “ಕೃಷ್ಣನಾಮಸ್ಮರಣೆ”. ಅವನ ಸ್ಮರಣೆ ನಾಮೋಚ್ಚಾರಣೆ ಇವುಗಳಿಂದ ತಪಸ್ಸು, ಯಜ್ಞ ಮೊದಲಾದ ಕರ್ಮಗಳುಂಟಾದ ನ್ಯೂನತೆಯು ತುಂಬಿಬರುವದು. ಹರಿಯ ನಾಮಕ್ಕೆ ಪಾಪಪರಿಹಾರಕಶಕ್ತಿ ಎಷ್ಟಿದೆಯೆಂದರೆ ಪಾಪಿಯು ಅಷ್ಟು ಪಾಪಗಳನ್ನು ಮಾಡಲಾರನು. ಲೌಕಿಕ, ಅಥವಾ ವೈದಿಕ ಯಾವ ಕರ್ಮವೇ ಆಗಲಿ ಅದನ್ನು ಈಶ್ವರಾರ್ಪಣ ಮಾಡಬೇಕು. “ಯಾವುದನ್ನು ಮಾಡುವಿಯೋ, ಯಾವುದನ್ನು ತಿನ್ನುವಿಯೋ, ಯಾವುದನ್ನು ಹೋಮಿಸುವೆಯೋ, ಯಾವುದನ್ನು ಕೊಡುವೆಯೋ, ಯಾವ ತಪಸ್ಸನ್ನು ಮಾಡುವಿಯೋ ಅದನ್ನು ನನಗರ್ಪಣ ಮಾಡು” (ತತ್ಕುರುಷ್ಟ ಮದರ್ಪಣಂ) ಎಂದು ಕೃಷ್ಣನು ಗೀತೆಯಲ್ಲಿ ಅರ್ಜುನನಿಗೆ ಹೇಳಿರುವನು. ಎಲ್ಲ ಕರ್ಮಗಳನ್ನೂ ಒಟ್ಟಾಗಿ ಅರ್ಪಿಸುವ ಮಂತ್ರ - “ಕಾಮತೋಶಕಾಮತೋವಾಪಿಯತ್ಕರೋಮಿ ಶುಭಾ ಶುಭಂತತ್ಸರ್ವಂ ತ್ವ.ಸಂನ್ಯಸ್ತಂ ತತ್ವಯುಕ್ತ ಕರೋತು” ಇದೇ ಆ “ಮಂತ್ರ"ವು. ಬಹುಶಾಖಾ ಭೇದಾದಿಗಳಿಂದ ಕೂಡಿದ ಆತ್ಮಿಕ ಕರ್ಮವು ಅಪಾರವಾದದ್ದು ಹಾಗೂ ಗಹನವಾದದ್ದು, ಅದನ್ನು ಸಂಪೂರ್ಣವಾಗಿ ಹೇಳಲಸಮರ್ಥನಾದ ಈ ಅನಂತೋಪಾಧ್ಯಾಯರ ಪುತ್ರನಾದ ಕಾಶಿನಾಥೋಪಾಧ್ಯಾಯನಾದ ನಾನು ಯಥಾಮತಿಯಾಗಿ ವಿಸುವನು. ಇದರಿಂದ ಭಗವನ್ ವಿಟ್ಟಲನು ಸಂತುಷ್ಟನಾಗಲಿ. 25

ಪರಿಚ್ಛೇದ ೩ ಪೂರ್ವಾರ್ಧ ೩೫೧ ಇಲ್ಲಿಗೆ ಅನಂತೋಪಾಧ್ಯಾಯಸೂನು ಕಾಶೀನಾಥಪಾಧ್ಯಾಯ ವಿರಚಿತವಾದ ‘ಧರ್ಮಸಿಂಧು"ವಿನ ತೃತೀಯ ಪರಿಚ್ಛೇದದ ಪೂರ್ವಾರ್ಧದಲ್ಲಿ ಆಗ್ನಿ ಕಾಚಾರ ಪ್ರಕರಣವು ಸಮಾಪ್ತವಾಯಿತು. ಕಾಮ್ಯ, ನೈಮಿತ್ತಿಕ ವಿಚಾರ ಅತ್ಯಾವಶ್ಯಕಗಳಾದ, ಪ್ರತಿದಿನ ಮಾಡಬೇಕಾದ ಕರ್ತವ್ಯವನ್ನು ಹೇಳಿ ಈಗ ಅದರ ಶೇಷವನ್ನು ಹೇಳುವನು. ಕಾವ್ಯ ನೈಮಿತ್ತಿಕ ಕೃತ್ಯಗಳ ವಿಷಯವು ಇಲ್ಲಿ ಪ್ರಕೃತವು. ಇವುಗಳನ್ನು ಹೆಚ್ಚಾಗಿ “ನಿರ್ಣಯಸಿಂಧು’ವಿಗನುಸರಸಿ ಹೇಳುವೆನು. (ಅಗ್ನಿ) ಆಧಾನ ವಿಚಾರ ಆಧಾನ ನಕ್ಷತ್ರಾದಿ ವಿಷಯವನ್ನು ಮೊದಲನೇ ಪರಿಚ್ಛೇದದಲ್ಲಿ ಹೇಳಿರುವೆನು. ಆವಸಥ್ಯಾಗ್ನಿಯ ಆಧಾನವು ವಿವಾಹ ಕಾಲದಲ್ಲಿ ಅಥವಾ ದಾಯ ವಿಭಾಗ ಕಾಲದಲ್ಲಿ ಆಗತಕ್ಕದ್ದಿದೆ. ಪ್ರಮಾದ ವಶದಿಂದ ವೈವಾಹಿಕಾಗ್ನಿಯನ್ನು ಗ್ರಹಣ ಮಾಡಿರದಿದ್ದರೆ ತಂದೆಯು ತೀರಿದ ನಂತರ ಪ್ರಯತ್ನಪೂರ್ವಕವಾಗಿ ಅಗ್ನಿ ಗ್ರಹಣ ಮಾಡಬೇಕು. ಗೃಹ್ಯಾಗಿ ರಹಿತವಾದ ಅನ್ನವು ಅಭೋಜವಾಗುವದು. ಅವನ ಅನ್ನವನ್ನೋಟ ಮಾಡತಕ್ಕದ್ದಲ್ಲ ಎಂದರಿವುದು. ಅವಿಭಕ್ತ ತಂದೆ ಅಥವಾ ಹಿರಿಯ ಅಣ್ಣ ಇವರು ಸಾಗ್ನಿ ಕರಾಗುತ್ತಿರಲು ಕನಿಷ್ಠನು ನಿರಗ್ನಿಕನಾದರೂ ದೋಷವಿಲ್ಲ. ಹೀಗೆಯೇ ಜ್ಞಾನ ನಿಷ್ಠ, ಅಧ್ಯಯನ ನಿಷ್ಠನಾದವನಿಗೂ ದೋಷವಿಲ್ಲ. ಗೃಹಸ್ಥನಾದ ಮೇಲಾದರೂ ಅಧ್ಯಯನ ಮಾಡತಕ್ಕದ್ದೆಂದು ಹೇಳಿದೆಯಷ್ಟೆ? ಜೇಷ್ಠನು ಆಧಾನ ಮಾಡಿರದಿದ್ದರೆ ಕನಿಷ್ಠನು ಸ್ಮಾರ್ತಾಗಿ ಆಧಾನವನ್ನೂ ಮಾಡಬಾರದೆಂದು ನಿರ್ಣಯಸಿಂಧ್ಯಾದಿಗಳಲ್ಲುದಾಹರಿಸಿರುವ “ಗರ್ಗೊಕ್ತಿ” ಯಿಂದ ತಿಳಿಯುತ್ತದೆ. ಇಲ್ಲಿ ಹೀಗೆ ನಿರ್ಣಯಕ್ಕೆ ಬರಬಹುದು. ಏನೆಂದರೆ - ಎಲ್ಲಿ ಜೇಷ್ಠನಾದವನು ತಾನು ಆದಿ ದಾಯಾದನು ಎಂಬ ಪಕ್ಷವನ್ನು ಹಿಡಿದು ವಿವಾಹ ಕಾಲದಲ್ಲಿ “ಯಾವಜೀವವೂ ಔಪಾಸನ ಮಾಡುವೆನು” ಎಂದು ಸಂಕಲ್ಪಿಸಿ ವಿವಾಹಾಗ್ನಿ ಗ್ರಹಣ ಮಾಡಿಲ್ಲವೋ? ಅಂಥ ಹಿರಿಯನ ಸಲುವಾಗಿ ಈ ಕನಿಷ್ಠನಿಗೆ ನಿಷೇಧ ಹೇಳಿದ್ದು, ಅಂದರೆ ಅಗಾಧಾನ ಮಾಡದೆ. ಅಣ್ಣನ ವಿಷಯ ಎಂದರ್ಥ. ಜೇಷ್ಠನು ವಿವಾಹಕಾಲದಲ್ಲಿ ಸಂಕಲ್ಪ ಪೂರ್ವಕವಾಗಿ ಗ್ರಹಣ ಮಾಡಿದ್ದು. ಮುಂದೆ ಅಗ್ನಿಚರ್ಯ ಮಾಡದೆ ನಿರಗ್ನಿಕನಾದರೂ ಉಚ್ಚನ್ನಾಗಿ” ಎಂದೇ ಆದಾನು ಹೊರತು ಆಧಾನರಹಿತನು ಎಂದಾಗುವದಿಲ್ಲ. ಹೀಗೆ ಜೇಷ್ಠನು ವಿವಾಹಾಗ್ನಿಯನ್ನೇ ಗ್ರಹಣ ಮಾಡದಿದ್ದಾಗ ಕನಿಷ್ಠನು ಆಧಾನ ಮಾಡಿದಲ್ಲಿ ದೋಷವಿಲ್ಲ. ಅಣ್ಣನು ಆಧಾನಕ್ಕೆ ಅಧಿಕಾರಿಯಾದರೂ ಅವನ ಅನುಜ್ಞೆಯಿಂದ ಕಿರಿಯವನು ಆಧಾನ ಮಾಡಬಹುದು, ವಿವಾಹವು ಮಾತ್ರ ಅನುಜ್ಞೆಯಿದ್ದರೂ ಆಗುವಂತಿಲ್ಲ. ಹೀಗೆಯೇ ತಂದೆಯ ಅನುಜ್ಞೆಯಿಂದಲೂ ಆಧಾನ ಮಾಡಬಹುದು. ಅಣ್ಣ ಅಥವಾ ತಂದೆಯು ಸಂನ್ಯಾಸ ಗ್ರಹಣ ಮಾಡಿದಲ್ಲಿ ಅಥವಾ ಹಸ್ತ ಮೊದಲಾದವುಗಳು ಊನವಾದರೆ ಇಲ್ಲವೆ ನಪುಂಸಕತ್ವಾದಿಗಳುಂಟಾದಲ್ಲಿ ಆಗ ತಾನು ನೈಮಿತ್ತಿಕ ಕಾರ್ಯಗಳನ್ನು ಮಾಡಲೇಬೇಕು, ಇತ್ಯಾದಿ ವಿಶೇಷಗಳನ್ನೆಲ್ಲ ವಿವಾಹಪ್ರಕರಣದ “ಪರಿವೇತೃ” ಪ್ರಸಂಗದಿಂದ ಹೇಳಲಾಗಿದೆ. ೩೫೨ ಧರ್ಮಸಿಂಧು ಶೂದ್ರಸಂಸ್ಕಾರ ವಿಷಯ ಬ್ರಾಹ್ಮಣರಿಗೆ ಗರ್ಭಾಧಾನ, ಅನವಲೋಭನ, ಸೀಮಂತ, ಜಾತಕರ್ಮ, ನಾಮಕರಣ, ನಿಮ್ಮಮಣ, ಅನ್ನಪ್ರಾಶನ, ಚೌಲ, ಉಪನಯನ, ಮಹಾನಾಮ್ಮಾದಿ ನಾಲ್ಕು ವ್ರತ, ಸಮಾವರ್ತನ, ವಿವಾಹ, ಹೀಗೆ ಹದಿನಾರು ಸಂಸ್ಕಾರಗಳು, ಬ್ರಾಹ್ಮಣ ಸ್ತ್ರೀಗೆ ಜಾತಕರ್ಮ, ನಾಮಕರಣ, ನಿಮ್ಮಮಣ, ಅನ್ನಪ್ರಾಶನ, ಚೂಡಾ, ವಿವಾಹ, ಹೀಗೆ ಆರು ಸಂಸ್ಕಾರಗಳು. ಇವುಗಳಲ್ಲಿ ವಿವಾಹವು ಸಮಂತ್ರಕವು, ಉಳಿದವುಗಳನ್ನು ಅಮಂತ್ರಕವಾಗಿ ಮಾಡತಕ್ಕದ್ದು, ಗರ್ಭಾಧಾನ, ಸೀಮಂತಗಳಿಗೆ ಸ್ತ್ರೀ-ಪುರುಷರೆಂಬ ಭೇದವಿಲ್ಲ. ಶೂದ್ರರಿಗೆ ಚೌಲಾಂತ ಒಂಭತ್ತು ಸಂಸ್ಕಾರಗಳು, ವಿವಾಹವು ಹತ್ತನೆಯದು. ಇವು ಅಮಂತ್ರಕವೆಂಬುದು ಬಹು ಸಮ್ಮತವು. “ಶೂದ್ರ ಕಮಲಾಕರ"ದಲ್ಲಿ ಶೂದ್ರರಿಗೆ ಪಂಚಮಹಾಯಜ್ಞಗಳೂ ಹೇಳಲ್ಪಟ್ಟಿವೆ. ಕೆಲವರು, ಪುರಾಣೋಕ್ತ ಮಂತ್ರಗಳಿಂದ ಉಪನಯನವೂ ಆಗಬಹುದೆನ್ನುವರು. “ಬ್ರಾಹ್ಮಪುರಾಣ"ದಲ್ಲಿ ಶೂದ್ರನು ‘ವಿವಾಹಮಾತ್ರವಾದ ಸಂಸ್ಕಾರವನ್ನು ಪಡೆಯಲಿ’ ಎಂದು ಹೇಳಿದೆ. ಹೀಗೆ ವಿಕಲ್ಪವಾಗಿ ಹೇಳುವದಕ್ಕೆ ಸಚೂದ್ರ, ಅಸತ್ತೂದ್ರರ ವಿಷಯದಿಂದ ವ್ಯವಸ್ಥೆ ಹೇಳಬಹುದು. ಅಥವಾ ಪರಂಪರೆಯಿಂದ ಬಂದಂತೆ ಮಾಡಬಹುದು. ಶೂದ್ರನಿಗೆ ಬ್ರಾಹ್ಮಣ ಸೇವೆಯು “ವೃತ್ತಿ"ಯು ಆಪತ್ತಿನಲ್ಲಿ ವಾಣಿಜ್ಯ ಶಿಲ್ಪಾದಿಗಳನ್ನು ಮಾಡಬಹುದು. ಶೂದ್ರನು ಉಪ್ಪ ಮೊದಲಾದವುಗಳನ್ನು ವಿಕ್ರಯಿಸಬಹುದು. ಮದ್ಯ-ಮಾಂಸಗಳನ್ನು ವಿಕ್ರಯಿಸಕೂಡದು. ಶೂದ್ರನು ಕೌಲು ಗೋವಿನ ಹಾಲನ್ನು ಮಾರಿದರೆ, ಬ್ರಾಹ್ಮಣ ಸ್ತ್ರೀ ಗಮನ ಮಾಡಿದರೆ, ವೇದಾಕ್ಷರ ವಿಚಾರದಲ್ಲಿದ್ದರೆ “ಚಾಂಡಾಲನಾಗುವನು. ಶೂದ್ರನು ನಾಲ್ಕನೇ ವರ್ಣದವನಾದ್ದರಿಂದ ವರ್ಣಧರ್ಮ ಪಾಲಿಸಲು ಅರ್ಹನು. ವೇದ ಮಂತ್ರಸ್ವಧಾ, ಸ್ವಾಹಾ, ವಷಟ್ಕಾರಗಳಲ್ಲಧಿಕಾರವಿಲ್ಲ. ಸ್ತ್ರೀ, ಶೂದ್ರ ಧರ್ಮಗಳಾದ ವ್ರತಾದಿಗಳಲ್ಲಿ ಬ್ರಾಹ್ಮಣನು ಪೌರಾಣ ಮಂತ್ರಗಳನ್ನು ಪಠಿಸಬಹುದು. ಭಾರತ, ಪುರಾಣ, ಶ್ರವಣದಲ್ಲಿ ಶೂದ್ರನಿಗಧಿಕಾರವಿದೆ ಹೊರತು ಸ್ವತಃ ಪಠನ ಮಾಡಬಾರದು. ಶೂದ್ರನಿಗೆ-ಶ್ರವಣಮಾಡಿಸುವಾಗಲೂ ಬ್ರಾಹ್ಮಣನನ್ನು ಮುಂದಿಟ್ಟುಕೊಳ್ಳಬೇಕು. ಶೂದ್ರನಿಗೆ ಪಂಚಯಜ್ಞಶ್ರಾದ್ಧಾದಿಗಳು-ಕಾತೀಯ ಸೂತ್ರಾನುಸಾರವಾಗಿ ಆಗತಕ್ಕದೆಂದು ಮಯೂಖದಲ್ಲಿ ಹೇಳಿದೆ. ಆಗಮೋಕ್ತಗಳಾದ ವಿಷ್ಣು, ಶಿವ ಮೊದಲಾದವರ ಓಂಕಾರವನ್ನು ಬಿಟ್ಟು ತುದಿಯಲ್ಲಿ ನಮಃ” ಎಂದು ಸೇರಿಸಿ ಹೇಳಲು ಅಧಿಕಾರವಿದೆ. (ಶಿವಾಯನಮಃ ಇತ್ಯಾದಿ) ಸ್ತ್ರೀ, ಶೂದ್ರರಿಗಾದರೂ ಪುರಾಣ ಶ್ರವಣಾದಿಗಳಿಂದ ಶ್ರವಣ, ನಿದಿಧ್ಯಾಸನ ಮೊದಲಾದವುಗಳ ಮೂಲಕ ಬ್ರಹ್ಮಜ್ಞಾನ ಪಡೆಯಲು ಸಾಧ್ಯವಿದೆ. “ಶೂದ್ರಕ್ಕೆ ತದನಾದರ ಶ್ರವಣಾತ್” ಎಂಬ ಬ್ರಹ್ಮಸೂತ್ರದ ಅಭಿಪ್ರಾಯದಂತೆ ಉಪನಿಷತ್ತಿನ ಅಧ್ಯನದಲ್ಲಿ ಅಧಿಕಾರವಿಲ್ಲ ಇಷ್ಟೇ. ಶೂದ್ರರು ಎಲ್ಲ ಶಾಸ್ತ್ರಗಳನ್ನೂ ಆಮದಿಂದಲೇ ಮಾಡತಕ್ಕದ್ದು. ಕೆಲವರು ಸರ್ವಪ್ರಜೆಗಳೂ “ಕಾಶ್ಯಪ"ರಾದರಿಂದ ಶೂದ್ರರು ಶ್ರಾದ್ಧದಲ್ಲಿ ಮಾತ್ರ “ಕಾಶ್ಯಪಗೋತ್ರ” ಎಂದು ಹೇಳತಕ್ಕದ್ದೆಂದು ಹೇಳುವರು. ಶಾಂತಿಕ, ಪೌಫ್ರಿಕಾದಿಗಳಲ್ಲಿ ಶೂದ್ರರಿಗೆ ಬ್ರಾಹ್ಮಣದ್ವಾರದಿಂದಲೇ ಅಧಿಕಾರವು, ಬ್ರಾಹ್ಮಣನು ಶೂದ್ರನಿಂದ ದಕ್ಷಿಣೆ ತೆಗೆದುಕೊಂಡು ವೈದಿಕಮಂತ್ರದಿಂದ ಅವನ ಸಂಬಂಧವಾದ ಹೋಮಾದಿಗಳನ್ನು ಮಾಡಿದರೆ ಶೂದ್ರನಿಗೆ ಅದರ ಪುಣ್ಯಫಲವು ಸಿಗುವದು. ಆದರೆ ಬ್ರಾಹ್ಮಣನು ದೋಷಿಯಾಗುವನೆಂದು ಮಾಧವ ಮತವು. ಅಹಿಂಸಾ, ಸತ್ಯ, ಕಳದಿರುವದು. ಪರಿಚ್ಛೇದ ೩ ಪೂರ್ವಾರ್ಧ a sa ಶುಚಿತ್ವ, ಇಂದ್ರಿಯನಿಗ್ರಹ, ದಾನ, ಶಮ, ದಮ, ಕ್ಷಮಾ ಮೊದಲಾದ ಧರ್ಮಗಳು ನಾಲ್ಕು ವರ್ಣದವರಿಗೂ ಸಮಾನವಾದದ್ದು. ಮತ್ತು ಇವುಗಳಿಂದ ಶ್ರೇಷ್ಠತ್ವವುಂಟಾಗುವದು. ಶೂದ್ರರ ಪುಣ್ಯಾಹ ಮೊದಲಾದ ಕರ್ಮಗಳ ಪ್ರಯೋಗವನ್ನು ಶೂದ್ರಕಮಲಾಕರದಿಂದ ತಿಳಿಯತಕ್ಕದ್ದು. ವಾಪಿಕೂಪಾದಿಗಳ ಉತ್ಸರ್ಗ (ಕೆರೆ ಬಾವಿ ಮೊದಲಾದವುಗಳ ಸಂಸ್ಕಾರ) ಮನೆ ಮತ್ತು ಗ್ರಾಮದ ಆತ್ಮೀಯ, ನೈಋತ್ಯ ಅಥವಾ ಮಧ್ಯದಲ್ಲಿ ಬಾವಿತೋಡಿದರೆ ಅದರಿಂದ ಕೆಡಕಾಗುವದು. ಉಳಿದ ದಿಕ್ಕಿನಲ್ಲಿ ಶುಭವು, ಕೆರೆ, ಬಾವಿ, ತಡಾಗ ಇವುಗಳ ಉತ್ಸರ್ಗವನ್ನು ಉತ್ತರಾಯಣ, ಮಾಘಾದಿ ಆರುಮಾಸ, ಶುಕ್ಲಪಕ್ಷ ಇವುಗಳಲ್ಲಿ ಮಾಡುವದು ಪ್ರಶಸ್ತವು. ಇನ್ನು ನೀರು ಕಡಿಮೆಯಾಗುವಿಕೆ ಇತ್ಯಾದಿ ಕಾರಣದಿಂದ ಕಾರ್ತಿಕ, ಮಾರ್ಗಶೀರ್ಷಗಳಲ್ಲಾದರೂ ಮಾಡಬಹುದು. ಅಂತೂ ಇದಕ್ಕೆ ಕಾಲನಿಯಮ ಅಷ್ಟು ಮಹತ್ವದ್ದಲ್ಲ. ಜಲವೇ ಮುಖ್ಯ. ಹೀಗೆ ಉಕ್ತಿಯಿದೆ. ವಿಷ್ಣು ಶಯನಾದಿ ನಾಲ್ಕು ಮಾಸಗಳು ಮತ್ತು ಶುಕ್ರಾಸ್ತಾದಿಗಳು ವರ್ಜಗಳು, ಅಶ್ವಿನೀ, ರೋಹಿಣಿ, ಮೃಗಶಿರಾ, ಪುಷ್ಯ, ಮಘಾ, ಉತ್ತರಾತ್ರಯ, ಮೂಲ, ಶ್ರವಣ, ಧನಿಷ್ಠಾ, ಶತಭಿಷ, ಹಸ್ತ, ಜೇಷ್ಠಾ, ಅನುರಾಧಾ, ರೇವತಿ ಹಾಗೂ ದ್ವಿತೀಯಾ, ತೃತೀಯಾ, ಪಂಚಮೀ, ಸಪ್ತಮೀ, ದಶಮಿ, ಏಕಾದಶೀ, ತ್ರಯೋದಶಿ ತಿಥಿಗಳು ಬುಧ, ಗುರು, ಶುಕ್ರ, ಚಂದ್ರವಾರ ಇವು ಶ್ರೇಷ್ಠಗಳು. “ಉತೃರ್ಗ” ಮಾಡದಿದ್ದರೆ ಜಲವು “ಅಗ್ರಾಹ್ಯ"ವು, ಇಳಿಬಾವಿ, ಬಾವಿ, ಕೆರೆ ಮುಂತಾದವುಗಳ ಜಲಸಂಸ್ಕಾರವಾಗದಿದ್ದರೆ ಅವುಗಳ ಜಲವನ್ನು ಸ್ಪರ್ಶಮಾಡಬಾರದು ಮತ್ತು ಕುಡಿಯಬಾರದು. ಕುಡಿದರೆ ಚಾಂದ್ರಾಯಣವನ್ನಾಚರಿಸಬೇಕು. ಉತ್ಸರ್ಗಪ್ರಯೋಗವನ್ನು ಬೇರೆ ಗ್ರಂಥಗಳಿಂದ ತಿಳಿಯುವದು. ವ್ಯಾದಿರೋಪಣ (ನೆಡುವದು) ಅಶ್ವಿನಿ, ರೋಹಿಣಿ, ಮೃಗಶಿರ, ಪುಷ್ಯ, ಮಘಾ, ಉತ್ತರಾತ್ರಯ, ಹಸ್ತ, ಚಿತ್ರಾ, ವಿಶಾಖಾ, ಅನುರಾಧಾ, ಮೂಲ, ಶತಭಿಷ, ರೇವತಿ ನಕ್ಷತ್ರ ಹಾಗೂ ಶುಭತಿಥಿವಾರಗಳಲ್ಲಿ ವೃಕ್ಷ, ಬಳ್ಳಿ ಮೊದಲಾದವುಗಳನ್ನು ನೆಡುವದು ಪ್ರಶಸ್ತವು. ಆಶ್ಲೇಷಾ ನಕ್ಷತ್ರವಿರುವಾಗ ಸೋಮವಾರ ಬಂದರೆ ಚಂದ್ರನು ಲಗ್ನದಲ್ಲಿ ಬಲಿಷ್ಠನಾಗಿರುವಾಗ ಕಬ್ಬು, ಬಾಳೆ, ಅಡಿಕೆ ಮೊದಲಾದವುಗಳನ್ನು ನೆಡಬೇಕು. ಅಶ್ವಿನೀನಕ್ಷತ್ರ ಲಗ್ನದಲ್ಲಿ ರವಿಯಿರುವಾಗ ತೆಂಗಿನ ಗಿಡಗಳನ್ನೂ, ಲಗ್ನದಲ್ಲಿ ಗುರು ಚಂದ್ರರು ಸ್ವಾಂಶಕದಲ್ಲಿರುವಾಗ ನಾಗಬಳ್ಳಿಯನ್ನೂ ನಡುವದು. ಮೂರ್ತಿ ಪ್ರತಿಷ್ಠಾ ಪ್ರಕರಣ ವೈಶಾಖ, ಜೇಷ್ಠ, ಫಾಲ್ಕುನ ಈ ಮಾಸಗಳು ಎಲ್ಲ ದೇವಪ್ರತಿಷ್ಟೆಗೂ ಪ್ರಶಸ್ತಿಗಳು. ಚೈತ್ರದಲ್ಲಿ ವಿಕಲ್ಪವು (ನಿಷೇಧವಿಲ್ಲ). ಎಷ್ಟು ಹೊರತಾದ ದೇವಪ್ರತಿಷ್ಠೆಯನ್ನು ಮಾಘಮಾಸದಲ್ಲಿ ಮಾಡತಕ್ಕದ್ದು. ಇದಕ್ಕೆ ಉತ್ತರಾಯಣವು ಪ್ರಶಸ್ತವು, ದಕ್ಷಿಣಾಯನವು ತ್ಯಾಜ್ಯವು, ಮಾತೃಕಾ, ಭೈರವ, ವರಾಹ, ನರಸಿಂಹ, ತ್ರಿವಿಕ್ರಮ, ದುರ್ಗಾ ಇವುಗಳ ಪ್ರತಿಷ್ಠೆಗೆ ದಕ್ಷಿಣಾಯನವಾದರೂ ಅಡ್ಡಿಯಿಲ್ಲ. ಚೈತ್ರ, ಆಶ್ವಿನ, ಶ್ರಾವಣ ಇವು ವಿಷ್ಣು ಅರ್ಚನೆಗೆ ಶ್ರೇಷ್ಠಗಳು, ಮಾಘ, ಫಾಲ್ಕುನ ವೈಶಾಖ, ಜೇಷ್ಠಾ, ಆಷಾಢ, ಮಾರ್ಗಶೀರ್ಷ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಲಿಂಗಪ್ರತಿಷ್ಠೆ ಮಾಡುವದು ಪ್ರಶಸ್ತವು, ಮಾಘ ಮತ್ತು ಅಶ್ವಿನ ಈ ತಿಂಗಳಲ್ಲಿ ದೇವೀಪ್ರತಿಷ್ಠೆ 2.XY ಧರ್ಮಸಿಂಧು ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುವದು. ಅಶ್ವಿನಿ, ರೋಹಿಣೀ, ಉತ್ತರಾತ್ರಯ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಚಿತ್ರಾ, ಸ್ವಾತಿ, ಅನುರಾಧಾ, ಶ್ರವಣ, ಧನಿಷ್ಠಾ, ಶತಭಿಷ, ರೇವತಿ ನಕ್ಷತ್ರ, ಶನಿ, ಕುಜವಾರಗಳ ರಹಿತಗಳಾದ ವಾರ, ಅಮಾವಾಸ್ಕಾ, ಚತುರ್ಥಿ, ನವಮಿ, ಚತುರ್ದಶಿ, ಇವುಗಳ ಹೊರತಾದ ತಿಥಿ ಇವುಗಳಲ್ಲಿ ಎಲ್ಲ ದೇವಪ್ರತಿಷ್ಠೆಯೂ ಶುಭವು. ಶ್ರವಣ, ಕೃತ್ತಿಕಾ, ರೋಹಿಣಿ, ಮೃಗಶಿರ, ಆದ್ರ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಹುಬ್ಬಾ, ಉತ್ತರ, ಹಸ್ತ, ಚಿತ್ರಾ, ಸ್ವಾತಿ, ವಿಶಾಖಾ ಈ ನಕ್ಷತ್ರದ್ವಾದಶೀ ತಿಥಿ ಇವುಗಳಲ್ಲಿ ವಿಷ್ಣು ಪ್ರತಿಷ್ಠೆಯು ಶುಭಕರವು. ಗಣಪತಿಯ ಪ್ರತಿಷ್ಠೆಗೆ ಚತುರ್ಥಿಯನ್ನು ಹೇಳಿದೆ. ದೇವಿ ಪ್ರತಿಷ್ಠೆಯನ್ನು ನವಮೀ, ಮೂಲಾನಕ್ಷತ್ರ ಇವುಗಳಲ್ಲಿ ಮಾಡಲಡ್ಡಿಯಿಲ್ಲ. ಯಾವ ದೇವರಿಗೆ ಯಾವ ನಕ್ಷತ್ರವೋ ಆ ನಕ್ಷತ್ರದಲ್ಲಿ ಆಯಾಯ ದೇವತೆಗಳನ್ನು ಪ್ರತಿಷ್ಠೆ ಮಾಡಲಡ್ಡಿಯಿಲ್ಲ. ಹೇಗೆಂದರೆ ಶಿವನಿಗೆ ಆದ್ರ್ರಾ, ಸೂರ್ಯನಿಗೆ ಹಸ್ತ ಇತ್ಯಾದಿ. ದ್ರವ್ಯ ಕೊರತೆಯಾದರೆ ಯಜಮಾನನನ್ನೂ, ಮಂತ್ರದಲ್ಲಿ ನ್ಯೂನವಾದರೆ ಋತ್ವಿಜನನ್ನೂ, ಮೂರ್ತಿಯು ಲಕ್ಷಣಹೀನವಾದರೆ ಸ್ತ್ರೀಯನ್ನೂ ನಾಶಮಾಡುವದು. ಪ್ರತಿಷ್ಠೆಗೆ ಸಮನಾದ ಶತ್ರುವೇ ಇಲ್ಲವೆಂದು ಹೇಳಬಹುದು. (ವಿಧಿಹೀನವಾದರೆ ಎಂದರ್ಥ) ಗಾಯತ್ರೀ ಸಹಿತನಾದ “ಬ್ರಹ್ಮ"ನನ್ನು ಬ್ರಾಹ್ಮಣರು ಮಾತ್ರ ಸ್ಥಾಪಿಸಬೇಕು. ಸುಖಾರ್ಥಿಗಳಾದ ಯಾವ ವರ್ಣದವರಾದರೂ ವಿಷ್ಣುವನ್ನು ಸ್ಥಾಪಿಸಬಹುದು. ಮಾತೃ ಭೈರವಾದಿಗಳನ್ನು ಎಲ್ಲರೂ ಸ್ಥಾಪಿಸಬಹುದು. ಶಿವಲಿಂಗವನ್ನು ಸಂನ್ಯಾಸಿಯಾದರೂ ಸ್ಥಾಪಿಸಬಹುದು. ಪುರಾಣಪ್ರಸಿದ್ಧವಾದ ಶಿವಲಿಂಗವನ್ನು ಸ್ತ್ರೀಶೂದ್ರರಾದರೂ ಸ್ಥಾಪಿಸಬಹುದು. ಹಾಗೂ ಪೂಜಿಸಬಹುದು. ಹೊಸದಾಗಿ ಸ್ಥಾಪಿಸಿದ ಶಿವಲಿಂಗವನ್ನು ಸ್ತ್ರೀ ಶೂದ್ರರು ಸ್ಪರ್ಶಿಸಬಾರದು. ಶಿವಾದಿಗಳ ಪ್ರತಿಷ್ಠೆಯಲ್ಲಿ ಸ್ತ್ರೀ, ಶೂದ್ರರಿಗೆ ಅಧಿಕಾರವಿಲ್ಲ. ಶೂದ್ರ, ಅನುಪನೀತ, ಸ್ತ್ರೀ, ಪತಿತ ಇವರು ವಿಷ್ಣುವನ್ನು ಅಥವಾ ಶಿವನನ್ನು ಸ್ಪರ್ಶಿಸಿದರೆ ನರಕವನ್ನು ಹೊಂದುವರು. ಸ್ಥಿರಮೂರ್ತಿಗಳನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಿ ತಾನು ಉತ್ತರಾಭಿಮುಖನಾಗಿ ಪೂಜಿಸಬೇಕು. ಚರಮೂರ್ತಿಗಳಲ್ಲಾದರೆ ತಾನು ಪೂರ್ವಾಭಿಮುಖನಾಗಿ ಪೂಜಿಸತಕ್ಕದ್ದು. ಮೂರ್ತಿಯನ್ನು ಬಂಗಾರ, ಬೆಳ್ಳಿ, ತಾಮ್ರ, ಮೃತ್ತಿಕ ಇವುಗಳಿಂದ ನಿರ್ಮಿಸಬಹುದು. ಅಥವಾ ಶಿಲೆ, ಧಾತು, ಮುತ್ತು, ಕಂಚು, ಹಿತ್ತಾಳೆ ಇವುಗಳಿಂದಲೂ ನಿರ್ಮಿಸಬಹುದು. ಮನೆಯಲ್ಲಿಡುವ ಮೂರ್ತಿಯು ಅಂಗುಷ್ಠದ ಗಂಟಿನಿಂದ ಗೇಣು ಎತ್ತರದ ವರೆಗೆ ಇರಬಹುದು. ಅದಕ್ಕೂ ದೊಡ್ಡ ಪ್ರತಿಮೆಯನ್ನು ಮನೆಯಲ್ಲಿಡಬಾರದು. ಕೆಲ ಗ್ರಂಥಗಳಲ್ಲಿ ಮೃತ್ತಿಕೆ, ಕಟ್ಟಿಗೆ, ಅರಗು, ಗೋಮೇಧ, ಮೇಣ ಇವುಗಳಿಂದ ಪ್ರತಿಮೆ ಮಾಡಬಹುದೆಂದು ಹೇಳಿದೆ. ಶ್ರೀಮದ್ಭಾಗವತದಲ್ಲಿ ಪ್ರತಿಮೆಯನ್ನು ಎಂಟುವಿಧವಾಗಿ ಹೇಳಿದೆ. ಶಿಲಾ, ವೃಕ್ಷ, ಲೋಹ, ಮೃಣ್ಮಯ, ಚಿತ್ರ, ವಾಲುಕಾ (ಮಳಲು) ಮನೋಮಯ, ಮಣಿಮಯ ಹೀಗೆ ಎಂಟು ಪ್ರಕಾರಗಳು. ಇಲ್ಲಿ ಲೋಹಮಯೀ ಅಂದರೆ ಬಂಗಾರದ್ದೆಂದರ್ಥ. ದಾರುಮಯೀ ಅಂದರೆ ಮಧೂಕ (ಹಿಪ್ಪೆ) ವೃಕ್ಷದಿಂದ ತಯಾರಿಸಿದ್ದು. ಏಳು ಅಂಗುಲದಿಂದ ಹನ್ನೆರಡಂಗುಲ ಪರ್ಯಂತದ ಪ್ರತಿಮೆಯನ್ನು ಮನೆಯಲ್ಲಿಡಬಹುದು. ಹೀಗೆ ದೇವಿಪುರಾಣದಲ್ಲಿ ಹೇಳಿದೆ. ಅರ್ಚಕನ ತಪಃಪ್ರಭಾವ ಮತ್ತು ವಿಶೇಷಪೂಜಾ ಮತ್ತು ೧೦ಕ್ಕೆ ಸಲಕ್ಷಣವಾಗಿರುವಿಕೆ ಇವುಗಳಿಂದ ದೇವನು ಸಾನ್ನಿಧ್ಯವನ್ನು ಹೊಂದುವನು. ಪಟ್ಟ ವಾದಿಗಳನ್ನು ತೊಡಿಸಿದ ಪ್ರತಿಮೆಗೆ ಮತ್ತು ದುರ್ಗಾಯಂತ್ರಾದಿಗಳಿಗೆ ಪರಿಚ್ಛೇದ ೩ ಪೂರ್ವಾರ್ಧ ಸ್ನಾನಮಾಡಿಸತಕ್ಕದ್ದಿಲ್ಲ, ತೀರ ಕೊಳಕಾದರೆ ಅದನ್ನು ನಿವಾರಿಸುವ ಸಲುವಾಗಿ ಪರ್ವದಿನಗಳಲ್ಲಿ ಸ್ನಾನಮಾಡಿಸತಕ್ಕದ್ದು. ಪಾರ್ಥಿವಲಿಂಗಪೂಜಾದಿ ವಿಚಾರವನ್ನು ಎರಡನೆಯ ಪರಿಚ್ಛೇದದಲ್ಲಿ ಹೇಳಿದೆ. ಪಂಚಸೂತ್ರ ನಿರ್ಣಯ ಲಿಂಗ ಮಸ್ತಕ ವಿಸ್ತಾರ (೧)ಲಿಂಗದ ಎತ್ತರ (೨) ಲಿಂಗದ ಸ್ಕೂಲು (೩) ಪೀಠದ ವಿಸ್ತಾರ (೪) ಸೋಮಸೂತ್ರದ ಅಳತೆ (೫) ಹೀಗೆ ಐದು ಸೂತ್ರಗಳು, ಲಿಂಗದ ಪ್ರಮಾಣಕ್ಕನುಸರಿಸಿ ಉಳಿದದ್ದನ್ನೆಲ್ಲ ಅಳೆಯಬೇಕು. ಹೇಗೆಂದರೆ ಲಿಂಗದ ಮಸ್ತಕದ ವಿಸ್ತಾರವು, ಲಿಂಗವು ಎಷ್ಟು ಎತ್ತರವಿದೆಯೋ ಅದನ್ನು ಸೂತ್ರದಿಂದ ಅಳೆದು ಆ ಸೂತ್ರವು ಸುತ್ತುವಷ್ಟು ಇರಬೇಕು. ಈ ಎತ್ತರದ ಮೂರು ಪಟ್ಟು ಸೂತ್ರದಿಂದ ಸುತ್ತುವಷ್ಟು ಲಿಂಗವು ಸ್ಕೂಲವಾಗಿರಬೇಕು. ಮೂಲದಲ್ಲಿ -ಮೇಲ್ಬಾಗದಲ್ಲಿ ಆ ಮೂರು ಪಟ್ಟು ಸೂತ್ರದಷ್ಟೇ ವ್ಯಾಸ ಬರುವಂತೆ ಚತುರಸ್ರ ಅಥವಾ ವರ್ತುಲಾಕಾರದ ಪೀಠವಿರಬೇಕು. ಪೀಠದ ಎತ್ತರವು ಲಿಂಗದ ಎರಡು ಪಟ್ಟು ಇರಬೇಕು. ಪೀಠದ ಮಧ್ಯಭಾಗದಲ್ಲಿ ಲಿಂಗದ ದ್ವಿಗುಣ ಪಿಂಡವಿರುವಂತೆ ಪೀಠದ ಒಂದು ಮೂರಾಂಶ ಭಾಗದಲ್ಲಿ ಕಂಠವನ್ನು ಮಾಡಬೇಕು. ಆ ಕಂಠದ ಮೇಲ್ಬಾಗದಲ್ಲಿ ಮತ್ತು ಕೆಳಭಾಗದಲ್ಲಿ ಸಮಪ್ರಮಾಣದಲ್ಲಿ ಸುತ್ತಲೂ ಎರಡು (ಮೂರು) ಗುಳಿ ಬೀಳುವಂತೆ ಕತ್ತಿ ತೆಗೆಯಬೇಕು. ಪೀಠದ ಮೇಲ್ಬಾಗದಲ್ಲಿ ಲಿಂಗವಿಸ್ತಾರದ ಒಂದಾರಾಂಶ ಭಾಗದಿಂದ ಹೊರಗೆ ಕಾಣುವಂತೆ ಮೇಖಲೆಯನ್ನು ಮಾಡಬೇಕು. ಆ ಮೇಖಲೆಗೆ ಹೊಂದಿ ಒಳಗಡೆ ಲಿಂಗವಿಸ್ತಾರದ ಒಂದಾರಾಂಶ ಪ್ರಮಾಣ ಬರುವಂತೆ ಖಾತವನ್ನು ಮಾಡಬೇಕು. ಪೀಠವಿನ್ಯಾಸದ ಹೊರಗಡೆ ಉತ್ತರಕ್ಕೆ ಲಿಂಗದಷ್ಟೇ (ಪೀಠವ್ಯಾಸದ ಅರ್ಧದಷ್ಟು) ಉದ್ದವಾದ ಮೂಲದಲ್ಲಿ ಅಷ್ಟೇ ವಿಸ್ತಾರ ಉಳ್ಳ ಸೋಮಸೂತ್ರದ ಮಧ್ಯದಲ್ಲಿ ಒಂದು ಮೂರಾಂಶ ಭಾಗವನ್ನು ಕತ್ತಿ, ಪೀಠಕ್ಕೆ ಮಾಡಿದಂತೆ ಮೇಖಲಾ ಮತ್ತು ಖಾತವನ್ನು ಮಾಡಬೇಕು. ಹೀಗೆ ಮಾಡಿದಲ್ಲಿ ಶಾಸ್ತ್ರ ಪ್ರಮಾಣದಂತೆ ಶುದ್ಧ ಲಿಂಗವಾಗುವದು. (ವಿ.ಸೂ. ಸಾಮಾನ್ಯ ಉಪಲಬ್ಧವಿರುವ ಮೂಲ ಧರ್ಮಸಿಂಧುವಿನಲ್ಲಿ ‘ತದ್ವಿಗುಣ ಸೂತ್ರವೇಷ್ಟನಾರ್ಹಂ” ಎಂದಿದೆ. ಇದು ಯಾವ ಕಾರಣದಿಂದಲೋ ತಪ್ಪಾಗಿದೆ. ಇದನ್ನು ನಂಬಿದರೆ ಸೂತ್ರ ಸಮನ್ವಯವೇ ಆಗುವದಿಲ್ಲ. ನಿಶ್ಚಯಸಿಂಧುದಲ್ಲಿ “ಪರಿಧಿಸತ್ರಿಗುಣಿತ” ಎಂದು ಮೂಲ ವಚನವೇ ಇದ್ದು, ಅದನ್ನನುಸರಿಸಿಯೇ ಈ ವಿಷಯವನ್ನು ಕೊಡಲಾಗಿದೆ. ಈ ಪಂಚ ಸೂತ್ರಿಯನ್ನು ವಿವರಿಸುವದು ಸಾಮಾನ್ಯರಿಗೆ ಎಟುಕದ ವಿಷಯ. ಇದನ್ನು ಒಬ್ಬ ಕ್ಷೇತ್ರವಾಸಿ, ನಿಗಮಾಗಮ ವಿಚಕ್ಷಣ, ಆಹಿತಾಗ್ನಿಗಳು ನಿಃಸಂಶಯವಾಗುವಂತೆ ವಿವರಿಸಿ ತಿಳಿಸಿರುವದರಿಂದ ಅವರು ಚಿರಸ್ಮರಣೀಯರು.) ಲಿಂಗ, ಶಾಲಿಗ್ರಾಮಾದಿ ಪೂಜಾವಿಚಾರ ಮನೆಯಲ್ಲಿ ಎರಡು ಲಿಂಗಗಳನ್ನರ್ಚಿಸಬಾರದು. ಎರಡು ಸಾಲಿಗ್ರಾಮಗಳನ್ನೂ ಅರ್ಚಿಸಬಾರದು. ದ್ವಾರಕಿಯ ಎರಡು ಚಕ್ರ, ಎರಡು ಸೂರ್ಯ ಇವುಗಳನ್ನು ಮನೆಯಲ್ಲಿ ಪೂಜಿಸಬಾರದು. ಮೂರು ಶಕ್ತಿ (ದುರ್ಗಾ)ಗಳನ್ನೂ ಮೂರು ಗಣಪತಿಗಳನ್ನೂ ಎರಡು ಶಂಖಗಳನ್ನೂ ಅರ್ಚಿಸತಕ್ಕದ್ದಲ್ಲ. ಬೇರೆ ಕೆಲ ಗ್ರಂಥಗಳಲ್ಲಿ ಎರಡು ಚಕ್ರಗಳನ್ನು ಪೂಜಿಸಲಡ್ಡಿಯಿಲ್ಲ. ಒಂದೇ ೩೫೬ ಧರ್ಮಸಿಂಧು ಚಕ್ರಾಂಕವನ್ನು ಪೂಜಿಸಬಾರದು ಎಂದಿದೆ. ಇದರಿಂದ ಅದು ವಿಕಲ್ಪವೆಂದು ತಿಳಿಯುವದು. ಮತ್ತ್ವ ಕೂರ್ಮಾದಿ ದಶಾವತಾರ ಮೂರ್ತಿಗಳನ್ನು ಮನೆಯಲ್ಲಿ ಪೂಜಿಸಬಾರದು. ಅಗ್ನಿಯಿಂದ ದಗ್ನವಾದ, ಭಿನ್ನವಾದ ಪ್ರತಿಮೆಗಳನ್ನು ಮನೆಯಲ್ಲಿ ಪೂಜಿಸಬಾರದು. ಸಾಲಿಗ್ರಾಮವು ಮುರಿದ ಅಥವಾ ಒಡಕಾದದ್ದಾರೂ ಆಗಬಹುದು. ಸಾಲಿಗ್ರಾಮಗಳು ಪೂಜೆಯಲ್ಲಿ ಸರಿ ಸಂಖ್ಯೆಯಲ್ಲಿದ್ದವುಗಳಾಗಬೇಕು. ಸರಿ ಸಂಖ್ಯೆಯಲ್ಲಿ ಎರಡು ಸಂಖ್ಯೆಗಳನ್ನು ಬಿಡತಕ್ಕದ್ದು. ವಿಷಮ ಸಂಖ್ಯೆಯಲ್ಲಿ ಒಂದು ಸಂಖ್ಯೆಯನ್ನು ಹೊರತಾದ ಸಂಖ್ಯೆಗಳಿಂದ ಪೂಜಿಸತಕ್ಕದ್ದಲ್ಲ. ಸುವರ್ಣ ಸಹಿತವಾದ ಶಾಲಿಗ್ರಾಮ ದಾನಮಾಡಿದರೆ ಪೃಥ್ವಿದಾನ ಮಾಡಿದ ಫಲವು ಸಿಗುವದು. ನೂರು ಶಾಲಿಗ್ರಾಮದ ಪೂಜೆಗೆ ಅನಂತ ಫಲವಿದೆ. ಅಣ್ಣ ತಮ್ಮಂದಿರು ಅವಿಭಕ್ತರಾಗಿದ್ದರೂ ದೇವಾರ್ಚನ, ಅಗ್ನಿಹೋತ್ರ, ಸಂಧ್ಯಾವಂದನ, ಬ್ರಹ್ಮಯಜ್ಞ ಇವುಗಳನ್ನು ಪೃಥಕ್ಕಾಗಿ ಮಾಡಬೇಕು. ಸ್ತ್ರೀ, ಶೂದ್ರರು ಶಾಲಿಗ್ರಾಮ, ಚಕ್ರಾಂಕಿತ, ಬಾಣಲಿಂಗಗಳನ್ನು ಮುಟ್ಟಿ ಪೂಜಿಸಬಾರದು. ಶೂದ್ರ, ಅನುಪನೀತ, ಸಧವಾಸ್ತ್ರೀ ಅಥವಾ ವಿಧವೆ ಇವರು ಶಿವ-ವಿಷ್ಣುಗಳ ಪೂಜೆಯನ್ನು ಸ್ಪರ್ಶ ಮಾಡದೇ ದೂರದಿಂದಲೇ ಪೂಜಿಸತಕ್ಕದ್ದು. ಈ ಸ್ಪರ್ಶನಿಷೇಧವು ಶಾಲಿಗ್ರಾಮ, ಬಾಣಲಿಂಗಗಳಿಗೇ ಹೊರತು ಪ್ರತಿವಾದಿಗಳಿಗಲ್ಲ. “ಸರ್ವವರ್ಣದವರೂ ಎಲ್ಲ ದೇವರ ಪೂಜೆಗೆ ಅರ್ಹರು. ಮಣಿ ಮೊದಲಾದವುಗಳಿಂದ ರಚಿತವಾದ ಲಿಂಗವನ್ನಾದರೂ ಪೂಜಿಸಬಹುದು” ಎಂದು ವಚನವಿದೆ. ವಿಕ್ರಯಕ್ಕೆ ತಕ್ಕೊಂಡ ಸಾಲಿಗ್ರಾಮವು ಮಧ್ಯಮವು, ಯಾಚನೆಯಿಂದ ತಕ್ಕೊಂಡದ್ದು ಅಧಮವು. ಹೇಳಿದ ಸಲಕ್ಷಣಗಳುಳ್ಳ, ಕುಲಪರಂಪರೆಯಿಂದಿರುವ ಹಾಗೂ ಗುರುವಿನಿಂದ ಕೊಡಲ್ಪಟ್ಟದ್ದು ಉತ್ತಮವು ನಲ್ಲಿಕಾಯಿ ಪ್ರಮಾಣದ ಅಥವಾ ಅದಕ್ಕಿಂತ ಸೂಕ್ಷ್ಮವಾದದ್ದು ಪೂಜೆಗೆ ಯೋಗ್ಯವು ಶಾಲಿಗ್ರಾಮಶಿಲೆಯು ಸೂಕ್ಷ್ಮವಾದಷ್ಟು ಮಹಾಫಲಪ್ರದವು. ಜವೆಗೋಧಿಯಷ್ಟು ಹೊಂಡವಿರುವ, ಜವಯ ಅರ್ಧದಷ್ಟು ಲಿಂಗವಿರುವದಕ್ಕೆ ಶಿವನಾಭಿ ಎನ್ನುವರು ಇದು ತ್ರಿಲೋಕದಲ್ಲಿಯೂ ದುರ್ಲಭವು. ಶಾಲಿಗ್ರಾಮಕ್ಕೆ ಪ್ರತಿಷ್ಠಾದಿ ವಿಧಿಯಿರುವದಿಲ್ಲ. ಪ್ರಾರಂಭದಲ್ಲಿ ಮಹಾಪೂಜೆಯನ್ನು ಮಾಡಿ ಪೂಜೆಗಿಟ್ಟುಕೊಂಡರಾಯಿತು. ಬಾಣಲಿಂಗವೂ ತ್ರಿಲೋಕ ಖ್ಯಾತವಾದದ್ದು, ಅದಕ್ಕೂ ಪ್ರತಿಷ್ಟಾದಿಗಳಿಲ್ಲ, ಸಂಸ್ಕಾರವಿಲ್ಲ, ಆವಾಹನೆಯಿಲ್ಲ. ಬ್ರಾಹ್ಮಣರು ವಾಸುದೇವ, ಕ್ಷತ್ರಿಯರು ಸಂಕರ್ಷಣ, ವೈಶ್ಯರು ಪ್ರದ್ಯುಮ್ನ, ಶೂದ್ರರು ಅನಿರುದ್ಧ, ಹೀಗೆ ಕ್ರಮದಿಂದ ಪೂಜಿಸತಕ್ಕದ್ದು. ಅವುಗಳ ಲಕ್ಷಣಗಳು ಹೇಗೆಂದರೆ- ಐದು ಚಕ್ರಗಳುಳ್ಳದ್ದು “ವಾಸುದೇವವು, ಆರು ಚಕ್ರ ಉಳ್ಳದ್ದು “ಪ್ರದ್ಯುಮ್ನವು”, ಏಳು ಚಕ್ರವುಳ್ಳದ್ದು “ಸಂಕರ್ಷಣ”, ಹನ್ನೊಂದು ಚಕ್ರದ್ದು “ಅನಿರುದ್ದವು”, ಶೂದ್ರನು ಓಂಕಾರವನ್ನುಚ್ಚರಿಸಿದರೆ, ಶಾಲಿಗ್ರಾಮ ಮುಟ್ಟಿ ಪೂಜಿಸಿದರೆ, ಮತ್ತು ಬ್ರಾಹ್ಮಣ ಸ್ತ್ರೀಗಮನ ಮಾಡಿದರೆ, ಚಾಂಡಾಲತ್ವವನ್ನು ಹೊಂದುವನು. ಮದ್ಯಪಾನವನ್ನು ಮಾಡದೆ. ದೀಕ್ಷಾಬದ್ರರಾದ ಶೂದ್ರರು ಬ್ರಾಹ್ಮಣದ್ವಾರಾ ಶಾಲಿಗ್ರಾಮವನ್ನರ್ಚಿಸಬಹುದು. ತುಲಸೀಕಟ್ಟಿಗೆಯ ಗಂಧವು ನಿತ್ಯವೂ ವಿಷ್ಣು ಪ್ರೀತಿಕರವಾದದ್ದು. ಕಾರ್ತಿಕದಲ್ಲಿ ಕೇತಕೀಪುಷ್ಪಗಳಿಂದ ಅರ್ಚಿಸುವವನೂ, ಈ ಕಲಿಕಾಲದಲ್ಲಿ ಯಾವಾಗಲೂ ದೀಪವನ್ನರ್ಪಿಸುವವನೂ, ಕುಲೋದ್ಧಾರಕನಾಗುವನು. ಶಾಲಿಗ್ರಾಮದ ತೀರ್ಥದಂತ ಚಕ್ರಾಂಕಶಿಲಾ ತೀರ್ಥವೂ ಪಾನಕ್ಕೆ ಯುಕ್ತವಾದದ್ದು. ಶಾಲಿಗ್ರಾಮ ಸನ್ನಿಧಿಯಲ್ಲಿ ಇಡಲು ಅದು ಯೋಗ್ಯವಾದದ್ದು. ಮತ್ತು ಪರಿಚ್ಛೇದ ೩ ಪೂರ್ವಾರ್ಧ 2.392 ಪೂಚಾಯೋಗ್ಯವಾದದ್ದು. ಶಿವನಿರ್ಮಾಲ್ಯವಾದ ಪತ್ರ, ಪುಷ್ಪ, ಫಲ, ಜಲಗಳು ಅಗ್ರಾಹ್ಯವಾದರೂ, ಶಾಲಿಗ್ರಾಮ ಸಂಪರ್ಕದಿಂದ ಅವು ಪವಿತ್ರಗಳೇ ಆಗುವವು ಪುಷ್ಪಾರ್ಚನೆಯನ್ನು ಮಧ್ಯಮಾ- ಅನಾಮಿಕಾಮಧ್ಯದಿಂದ ಮಾಡಬೇಕು. ಅಂಗುಷ್ಠ, ತರ್ಜನಿಗಳ ತುದಿಯಿಂದ ನಿರ್ಮಾಲ್ಯವನ್ನು ತೆಗೆಯಬೇಕು. ಭಸ್ಮ, ತ್ರಿಪುಂಡ್ರದ ಹೊರತು ರುದ್ರಾಕ್ಷಿಮಾಲೆಯಿಂದ ರಹಿತವಾಗಿ ಮಾಡಿದ ಶಿವಪೂಜೆಯು ನಿಷ್ಪಲವು. ಮಂತ್ರಹೊರತಾಗಿ ರುದ್ರಾಕ್ಷಮಾಲೆಯನ್ನು ಧರಿಸಬಾರದು, ಪಂಚಾಮೃತ, ಪಂಚಗವ್ಯಗಳನ್ನು ಸ್ನಾನಕಾಲದಲ್ಲಿ ವಿನಿಯೋಗಿಸುವದು. ರುದ್ರಾಕ್ಷಿ ಪ್ರತಿಷ್ಠೆಯಲ್ಲಿ ಪಂಚಾಕ್ಷರ ಮಂತ್ರ, ತಂಬಕಮಂತ್ರಾದಿಗಳನ್ನುಪಯೋಗಿಸುವದು. ಮಾಲೆಗೆ ನೂರೆಂಟು ಅಥವಾ ಐವತ್ನಾಲ್ಕು ಇಲ್ಲವೆ ಇಪ್ಪತ್ತೇಳು ರುದ್ರಾಕ್ಷಿಗಳಿರಬೇಕು. ಇಪ್ಪತ್ತೇಳು ರುದ್ರಾಕ್ಷಿಗಳ ಮಾಲಿಕೆಯನ್ನು ಧರಿಸಿ ಮಾಡಿದ ಪುಣ್ಯವು ಕೋಟಿಗುಣದ್ದಾಗುವದು. ರುದ್ರಾಕ್ಷ-ತುಲಸೀ ಮೊದಲಾದ ಜಪಮಾಲೆಗಳ ಸಂಸ್ಕಾರಕ್ರಮ ಕುಶೋದಕ ಸಹಿತವಾದ ಪಂಚಗವ್ಯದಿಂದ ಮಾಲೆಯನ್ನು ತೊಳೆದು ‘ಓಂ ಹೂಂ ಅಂ ಆಂ ಇಂ ಈಂ ಉಂ ಊಂ ಯಂ ಭೂಂ ಲೈಂ ಊಂ ಏಂ ಐಂ ಓಂ ಔಂ ಅಂ ಅ ಕಂ ಖಂ ಗಂ ಘಂ ಜಂ ಚಂ ಛಂ ಜಂ ಝಂ 7೦ ಟಂ ಠಂ ಡಂ ಢಂ ಣಂ ತಂ ಥಂ ದಂ ಧಂ ನಂ ಪಂ ಪಂ ಬಂ ಭಂ ಮಂ ಯಂ ರಂ ಲಂ ವಂ ಶಂ ಸಂ ಸಂ ಹಂ ಕ್ಷಂ ಹೀಗೆ ಐವತ್ತು ಮೂಲಾಕ್ಷರಗಳನ್ನು ಅಶ್ವತ್ಥ ಪತ್ರದಲ್ಲಿಟ್ಟ ಮಾಲೆಯಲ್ಲಿ ಭಾವಿಸಿ “ಓಂ ಸದ್ಯೋಜಾತಂ-ವಾಮದೇವಾಯ-ಓಂ ಅಘೋರೇಭೋ ಓಂ ತತ್ಪುರುಷಾಯ “ಓಂ ಈಶಾನಃ ಹೀಗೆ ಐದು ಮಂತ್ರಗಳನ್ನು ಜಪಿಸಿ “ಸದ್ಯೋಜಾತಂ’ ಈ ಮಂತ್ರವನ್ನು ಹೇಳಿ, ಪಂಚಗವ್ಯದಿಂದ ಪ್ರೋಕ್ಷಿಸಿ ತಣ್ಣೀರಿನಿಂದ ತೊಳೆದು “ವಾಮದೇವಾಯ” ಈ ಮಂತ್ರ ಹೇಳಿ ಗಂಧವನ್ನು ಲೇಪಿಸಿ, ಅಘೋರ ಮಂತ್ರದಿಂದ ಧೂಪತೋರಿಸಿ ತತ್ಪುರುಷ ಮಂತ್ರದಿಂದ ಗಂಧ, ಕಸ್ತೂರಿ ಮೊದಲಾದವುಗಳಿಂದ ಲೇಪಿಸಿ ಈಶಾನಮಂತ್ರದಿಂದ ಪ್ರತಿ ಮಣಿಯನ್ನೂ ನೂರಾವರ್ತಿ ಅಥವಾ ಹತ್ತಾವರ್ತಿ ಅಭಿಮಂತ್ರಿಸಿ, ಮಧ್ಯದ ಮೇರುಮಣಿಯನ್ನು ಅಘೋರಮಂತ್ರದಿಂದ ಅಭಿಮಂತ್ರಿಸುವದು. ನಂತರ ಇದೇ ಐದು ಮಂತ್ರಗಳಿಂದ ಪಂಚೋಪಚಾರದಿಂದ ಪೂಜಿಸತಕ್ಕದ್ದೆಂದು “ಬೋಪದೇವನ ಮತವು, ರುದ್ರಾಕ್ಷ-ಧಾರಣ ಕ್ರಮ ಕುತ್ತಿಗೆಯಲ್ಲಿ ೩೨ ರುದ್ರಾಕ್ಷಿಗಳನ್ನು ಧರಿಸಬೇಕು. ಕುತ್ತಿಗೆಗೆ ೨೨, ತಲೆಯಲ್ಲಿ ೪೦, ಕಿವಿಯಲ್ಲಿ ೬, ಎರಡು ಕೈಗಳಲ್ಲಿ ಹನ್ನೆರಡು-ಹನ್ನೆರಡು, ಬಾಹುಗಳಲ್ಲಿ ಹದಿನಾರು, ಎರಡು ಕಣ್ಣುಗಳ ಬಗ್ಗೆ ಒಂದು, ಶಿಖೆಯಲ್ಲಿ ಒಂದು, ಎದೆಯಲ್ಲಿ ಎಂಟು, ಹೀಗೆ ನೂರೆಂಟು ರುದ್ರಾಕ್ಷೆಗಳನ್ನು ಧರಿಸಿದವನು ಸಾಕ್ಷಾತ್ “ಶಿವ"ನೇ ಸೈ. ರುದ್ರಾಕ್ಷೆಯನ್ನು ದಾನ ಮಾಡಿದರೆ ರುದ್ರಪದವು ಸಿಗುವದು. ಶಿವ-ವಿಷ್ಣು-ಸ್ನಾನವಿಚಾರ ಲಿಂಗಕ್ಕೆ ಇಪ್ಪತೈದು ‘ಪಲ’ ಪರಿಮಾಣದಿಂದ ಅಭ್ಯಂಗ ಮಾಡಬೇಕು. ಕೈಗಾಣದಿಂದ ತೆಗೆದ ಎಣ್ಣೆಯಿಂದ ಸ್ನಾನ ಮಾಡಿಸತಕ್ಕದ್ದು. ನೂರು ಪಲ ಪ್ರಮಾಣದಿಂದ ನೀರಿನಿಂದ ಸ್ನಾನಮಾಡಿಸುವದು. ಇಪ್ಪತ್ತೈದು ಪಲ ಅಭ್ಯಂಗವು. (ಲೇಪಿಸುವ ವಸ್ತು) ಇನ್ನು ಮಹಾಭಿಷೇಕವನ್ನು ೩೫೮ ಧರ್ಮಸಿಂಧು ಎರಡು ಸಾವಿರ ಪಲದಿಂದ ಮಾಡಿಸತಕ್ಕದ್ದು. ಆಮೇಲೆ ಕ್ರಮದಿಂದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಇವುಗಳಿಂದ (ಪಂಚಾಮೃತ) ಅಭಿಷೇಕ ಮಾಡುವದು. ಶಿವನಿಗೆ ನೂರು ಪಲ ಪರಿಮಾಣ ತುಪ್ಪ, ಜೇನುತುಪ್ಪ, ಹಾಲು, ಮೊಸರುಗಳಿಂದ ಅಭಿಷೇಕವು. ಶಿವನನ್ನು ಉಷ್ಣದಕದಿಂದ ಮತ್ತು ಶೀತೋದಕದಿಂದ ಭಕ್ತಿ ಪೂರ್ವಕವಾಗಿ ಅಭಿಷೇಕ ಮಾಡತಕ್ಕದ್ದು. ವಿಷ್ಣುವಿಗೆ ಕ್ಷೀರಾಭಿಷೇಕ ಮಾಡಿ ಅದರ ಹತ್ತು ಪಟ್ಟು ಮೊಸರು, ಇದರ ಹತ್ತು ಪಟ್ಟು ತುಪ್ಪ, ತುಪ್ಪದ ಹತ್ತು ಹತ್ತುಪಟ್ಟು ಜೇನುತುಪ್ಪ, ಇದರ ಹತ್ತುಪಟ್ಟು ಸಕ್ಕರೆ ಹೀಗೆ ಅಭಿಷೇಕಮಾಡುವದು. ಕೆಲವರು ಐದೈದು ಸಮಪ್ರಮಾಣದಿಂದ ಅಭಿಷೇಕ ಮಾಡತಕ್ಕದ್ದು ಎನ್ನುವರು. ಪಂಚಾಯತನ ಕ್ರಮ ವಿಷ್ಣು ಪಂಚಾಯತನಕ್ಕೆ -ಮಧ್ಯದಲ್ಲಿ ವಿಷ್ಣು, ಈಶಾನ್ಯದಲ್ಲಿ ಶಿವ, ಆಕ್ಷೇಯಕ್ಕೆ ಗಣಪತಿ ಮುಂದೆ ಹೇಳುವ ಪಂಚಾಯತನಗಳಿಗೂ ಈಶಾನ್ಯಾದಿ ನಾಲ್ಕು ದಿಕ್ಕುಗಳು ಸಮಾನವಾದವುಗಳೇ. ಶಿವಪಂಚಾಯತನಕ್ಕೆ ಮಧ್ಯದಲ್ಲಿ ಶಿವ, ಮುಂದೆ ಕ್ರಮವಾಗಿ ವಿಷ್ಣು, ಸೂರ್ಯ, ಗಣಪತಿ, ದುರ್ಗಾ, ಸೂರ್ಯನಿಗೆ-ಮಧ್ಯದಲ್ಲಿ ಸೂರ್ಯ, ಶಿವ, ಗಣಪತಿ, ವಿಷ್ಣು, ದುರ್ಗಾ, ದುರ್ಗಾ:- ಕ್ಕೆ ಮಧ್ಯದಲ್ಲಿ ದುರ್ಗಾ, ವಿಷ್ಣು, ಶಿವ, ಗಣಪತಿ, ಸೂರ್ಯ, ಗಣಪತಿ ಪಂಚಾಯತನ:- ಮಧ್ಯದಲ್ಲಿ ಗಣಪತಿ, ವಿಷ್ಣು, ಶಿವ, ಸೂರ್ಯ, ದುರ್ಗಾ ಹೀಗೆ ಪಂಚಾಯತನಗಳು, ಕೇಶವಾದಿ ಚತುರ್ವಿಂಶತಿ ಮೂರ್ತಿಲಕ್ಷಣ ಕೇಶವಾದಿ ಇಪ್ಪತ್ತುನಾಲ್ಕು ಮೂರ್ತಿಗಳ ನಿರ್ಣಯವುಳ್ಳ “ಬೋಪದೇವ’ನ ಶ್ಲೋಕಗಳನ್ನು ವ್ಯಾಖ್ಯಾನ ಸಹಿತವಾಗಿ “ನಿರ್ಣಯಸಿಂಧು"ವಿನಲ್ಲಿ ಸಂಗ್ರಹಿಸಿದ್ದನ್ನು ಇಲ್ಲಿ ಹೇಳಲಾಗುತ್ತಿದೆ. ನಾಲ್ಕು ಕೈಗಳು, ಬಲದ ಮೇಲಿನ ಕೈಯ್ಯಲ್ಲಿ ಶಂಖ, ಅದೇ ಕೆಳಗಿನ ಕೈಯ್ಯಲ್ಲಿ ಚಕ್ರ, ಎಡದ ಮೇಲಿನ ಕೈಯ್ಯಲ್ಲಿ ಗದಾ, ಅದೇ ಕಳಗಿನ ಕೈಯ್ಯಲ್ಲಿ ಪದ್ಮ ಹೀಗಿದ್ದರೆ ಅದು “ಕೇಶವಮೂರ್ತಿ” ಎಂದಾಗುವದು. ಮುಂದೆ ಹೇಳಿದ ಕೈಗಳನ್ನೂ ಹೀಗೆ ಊಹಿಸುವದು. ನಾರಾಯಣ-ಪದ್ಮ, ಗದಾ, ಚಕ್ರ, ಶಂಖ, ಮಾಧವ-ಚಕ್ರ, ಶಂಖ, ಪದ್ಮ, ಗದಾ, ಗೋವಿಂದ ಗದಾ, ಪದ್ಮ, ಶಂಖ, ಚಕ್ರ ವಿಷ್ಣು -ಪದ್ಮ, ಶಂಖ, ಚಕ್ರ, ಗದಾ, ಮಧುಸೂದನ-ಶಂಖ, ಪದ್ಮ, ಗದಾ, ಚಕ್ರ, ತ್ರಿವಿಕ್ರಮ- ಗದಾ, ಚಕ್ರ, ಶಂಖ, ಪದ್ಮ, ವಾಮನ-ಶಂಖ, ಚಕ್ರ, ಪದ್ಮ, ಗದಾ, ಶ್ರೀಧರ-ಚಕ್ರ, ಗದಾ, ಶಂಖ, ಪದ್ಮ ಹೃಷಿಕೇಶ-ಚಕ್ರ, ಪದ್ಮ, ಶಂಖ, ಗದಾ, ಪದ್ಮನಾಭ-ಪದ್ಮ, ಚಕ್ರ, ಗದಾ, ಶಂಖ, ದಾಮೋದರ-ಶಂಖ, ಗದಾ, ಚಕ್ರ, ಪದ್ಮ ಸಂಕರ್ಷಣ-ಶಂಖ, ಪದ್ಮ, ಚಕ್ರ, ಗದಾ, ವಾಸುದೇವ-ಚಕ್ರ, ಗದಾ, ಶಂಖ, ಪದ್ಮ; ಪ್ರದ್ಯುಮ್ನ-ಶಂಖ, ಗದಾ, ಪದ್ಮ, ಚಕ್ರ, ಅನಿರುದ್ಧ, ಗದಾ, ಶಂಖ, ಪದ್ಮ, ಚಕ್ರ, ಪುರುಷೋತ್ತಮ, ಪದ್ಮ, ಶಂಖ, ಗದಾ, ಚಕ್ರ, ಅಧೋಕ್ಷಜ ಗದಾ, ಶಂಖ, ಚಕ್ರ, ಪದ್ಮ: ನರಸಿಂಹ-ಪದ್ಮ, ಗದಾ, ಶಂಖ, ಚಕ್ರ,ಅಚ್ಯುತ-ಪದ್ಮ, ಚಕ್ರ, ಶಂಖ, ಗದಾ, ಜನಾರ್ಧನ ಚಕ್ರ, ಶಂಖ, ಗದಾ, ಪದ್ಮ ಉಪೇಂದ್ರ-ಗದಾ, ಚಕ್ರ, ಪದ್ಮ, ಶಂಖ, ಹರಿ-ಚಕ್ರ, ಪದ್ಮ, ಗದಾ, ಶಂಖ, ಶ್ರೀ ಕೃಷ್ಣ -ಗದಾ, ಪದ್ಮ, ಚಕ್ರ, ಶಂಖ ಹೀಗಿರುವ ಲಕ್ಷಣದಿಂದಪರಿಚ್ಛೇದ - ೩ ಪೂರ್ವಾರ್ಧ ಮೂರ್ತಿಗಳನ್ನು ಗುರುತಿಸಬೇಕು. ನಿರ್ಣಯಸಿಂಧ್ವನುಸಾರ ದೇವಪ್ರತಿಷ್ಠಾ ಪ್ರಯೋಗ

AXE ಯಜಮಾನನು ದ್ವಾದಶಾದಿ ಯಥಾಸಂಭವ ಹಸ್ತಗಳಿಂದ ಮಂಟಪವನ್ನು ರಚಿಸಿ ಆಗ್ನೆಯ ಅಥವಾ ಪೂರ್ವದಲ್ಲಿ ಹಸ್ತಪ್ರಮಾಣದ ಕುಂಡ ಅಥವಾ ಸ್ಥಂಡಿಲವನ್ನು ಮಾಡಿ ಮಧ್ಯದಲ್ಲಿ ವೇದಿಕ, ಅದರ ಮೇಲೆ ಸರ್ವತೋಭದ್ರ ಗ್ರಹಶಾಂತಿ ಮಾಡುವದಿದ್ದಲ್ಲಿ ಪೂರ್ವ ಅಥವಾ ಈಶಾನ್ಯದಲ್ಲಿ “ಗೃಹವೇದಿಪ್ರಾಸಾದಸಂಸ್ಕಾರ ಮಾಡುವದಿದ್ದರೆ ಅಥವಾ ಮಂಟಪ ಸಂಸ್ಕಾರ ಮಾಡುವದಿದ್ದರೆ ನೈಋತ್ಯದಲ್ಲಿ “ವಾಸ್ತುಪೀಠವನ್ನು ರಚಿಸಿ “ಅಸ್ಸಾಂಮೂರ್ತ ಅಥವಾ ಲಿಂಗೇ ದೇವತಾ ಸಾನ್ನಿಧ್ಯರ್ಥಂ ದೀರ್ಘಾಯುರ್ಲಕ್ಷ್ಮೀ ಸರ್ವಕಾಮ ಸಮೃದ್ಧಯ್ಯ ಸುಖಕಾಮೋ ಮುಕದೇವ ಮೂರ್ತಿಪ್ರತಿಷ್ಠಾಂ ಕರಿಷ್ಯ” ಹೀಗೆ ಸಂಕಲ್ಪಿಸಿ ಸ್ವಸ್ತಿವಾಚನ, ನಾಂದೀಶ್ರಾದ್ಧಾಂತ ಮಾಡಿ ಆಚಾರ್ಯನನ್ನು ವರಿಸುವದು ಮತ್ತು ಪೂಜಿಸುವದು. ಆಚಾರ್ಯನು “ಯದ” ಇತ್ಯಾದಿಗಳಿಂದ ಸಾಸಿವೆಗಳನ್ನು ಬೀರಿ"ಆಪೋಹಿಷ್ಠಾ” ಎಂದು ಕುಶೋದಕಗಳಿಂದ ಭೂಮಿಯನ್ನು ಪ್ರೋಕ್ಷಿಸಿ “ದೇವಾಯಾಂತು ಯಾತುಧಾನಾ ಅಪಯಾಂತು ಎಷ್ಟೋ ದೇವಯಜನಂ ರಕ್ಷಸ್ವ” ಹೀಗೆ ಭೂಮಿಯಲ್ಲಿ ಪ್ರಾದೇಶ ಮಾಡಿ ಮಂಡಪ ಪ್ರತಿಷ್ಠೆಯನ್ನು ಮಾಡಿ (ಅಥವಾ ಮಾಡದೆಯೂ) ಮೂರ್ತಿಗೆ ಪಂಚಗವ್ಯ, ಹಿರಣ್ಯ,ಯವ, ದೂರ್ವಾ, ಅಶ್ವತ್ಥ, ಪಲಾಶದ ಎಲೆ ಇವುಗಳನ್ನು ಕುಂಭದಲ್ಲಿ ಹಾಕಿ ಆ ಜಲದಿಂದ “ಆಪೋಹಿಷ್ಕಾ” ಈ ಮೂರು ಮಂತ್ರಗಳಿಂದ ಮತ್ತು “ಹಿರಣ್ಯ ವರ್ಣಾಣ ಶುಚಯ:ಪಾವಕಾ: ಯಾರುಜಾತ: ಕಶ್ಯಪೋಯಾಂದ್ರ ಅಗ್ನಿಂಯಾಗರ್ಭಂದಧಿರೇ ವಿರೂಪಾಾನ ಆಪಶ್ಯಗ್ಗು ಸ್ಕೋನಾಭವಂತು| ಯಾಸಾಗುಂ ರಾಜಾ ವರುಣ್‌ ಯಾತಿಮರೇಸತ್ಯಾನೃತೇ ಅವಪಶ್ಯಂ ಜನಾನಾಂ ಮಧುಶ್ಚುತ: ಶುಚಯೋಯಾ ಪಾವಕಾಸ್ನಾನ ಆಪಶ್ಯಗ್ಗು ಮನಾ ಭವಂತು | ಯಾ ಸಾಂ ದೇವಾದಿವಿಕೃಣ್ವಂತಿ ಭಕ್ಷಯಾ ಅಂತರಿಕ್ಷೆ ಬಹುಧಾ ಭವಂತಿ ಯಾಃ ಪೃಥಿವೀಂ ಪಯಸೋಂದಂತಿ ಶುಕ್ರಾಸ್ತಾನ ಆಪಶ್ಯಗ್ಗು ಸ್ಕೋನಾ ಭವಂತು|ಶಿವೇನಮಾಚಕ್ಷುಷಾ ಪಶ್ಯತಾಪ: ಶಿವಯಾ ತನುವೋಪಸ್ಪೃಶ ತತ್ವಚಂ ಮಸರ್ವಾಗುಂ ಅಗ್ನಿಗುಂ ರಪ್ಪುಷದೋ ಹುವೇವೋ ಮಯಿವರ್ಚೊ ಬಲಮೋಜೋನಿರ ಪವಮಾನ: ಸುವರ್ಜನ: ಪವಿತ್ರಣವಿಚರ್ಷಣೆ: ಯ:ಪೋತಾರಪುನಾತುಮಾಪುನಂತು ಮಾದೇವಜನಾಪುನಂತು ಮನವೋಧಿಯಾಪುನಂತು ವಿಶ್ವ ಆಯವ: ಜಾತವೇದ: ಪವಿತ್ರವiಪವಿತ್ರಣ ಪುನಾಹಿಮಾಶುಕ್ರಣ ದೇವದೀರತು! ಆಗೇ ಕ್ರತ್ವಾಕ್ರತೂಗುಂರನು ಯಪವಿತ್ರ ಮರ್ಚಿಷಿ ಅಷ್ಟೇ ವಿತತಮಂತರಾ| ಬ್ರಹ್ಮತೇನ ಪುನೀಮಹೇ। ಉಭಾಭ್ಯಾಂ ದೇವಸವಿತ: ಪವಿತ್ರಣ ಸವೇನಚ ಇದು ಬ್ರಹ್ಮ ಮಹೇ ವೈಶ್ವದೇವೀ ಪುರ ದೇವ್ಯಾಗಾತ್ಯ ಬದ್ವೀಸ್ತನುವೋ ವೀತಪ್ರಪ್ರಾಣಿ ತಯಾಮದಂತಃ ಸಧಮಾತು ವಯಗ್ಗು ಸ್ವಾಮ ಪತಯೋರಯೀಕಾಂ/ವೈಶ್ವಾನರೋ ರಶ್ಮಿಭಿರ್ಮಾ ಪುನಾತು ವಾತಪ್ರಾಣೀನೇಷಿರೋಮಯೋಭೂ ದ್ಯಾವಾ ಪೃಥಿವೀ ಪಯಸಾ ಪಯೋಭಿಋತಾವರೀ ಯಜ್ಞಯೇಮಾಪುನೀರಾಂ ಬೃಹದ್ಧಿ: ಸವಿತಹೃಭಿಃ ವರ್ಷಿಷ್ಟರ್ದವ ಮನ್ನ ಅನ್ನೋದಕ್ಕೆ: ಪುನಾಹಿಮಾಯೇನದೇವಾ ಅಪುನತ ಯೇನಾಪೋ ದಿವ್ಯಂಕಶಃ|ತೇನದಿನ ಬ್ರಹ್ಮಣಾ ಇದಂ ಬ್ರಹ್ಮ ಪುನೀಮಹೇ। ಯಪಾವಮಾನೀರತಿ ಋಷಿಭಿ: ಸಂಸ್ಕೃತಗುಂರಸಂ ಸರ್ವಗುಂ ಸಪೂತಮಾತಿ ಸ್ವಮಿತಂ ಮಾತರಿಶ್ವನಾ| ಪಾವಮಾನೀರ್ಯೊ ಆಸ್ಟ್ರೇlಋಷಿಭಿ: ಸಂಸ್ಕೃತಗುಂರಸಂ ತಸರಸ್ವತೀದುಹೇಗೆ ಕ್ಷೀರಗುಂಸರ್ಪಿಮ್ರಧೂದಕಂ! ಪಾವಮಾನೀಸ್ವಯನೀಸುದುಘಾಹಿ ಪಯಸ್ವತೀತಿ ಋಷಿ ಸಂಭ್ಯತೋರಸು ಬ್ರಾಹ್ಮಣೇಷ್ಠಮೃತಗುಂಪಿತಂ ಪಾವಮಾನೀರ್ದತಂತುನಃ ಇಮಂ ಲೋಕಮಥೋ ಆಮುಂಕಾಮಾನ್ ಎಂತುನಃ ದೇವೀರ್ದವ್ಯ: ಸಮಾಧೃತಾಃ ಪಾವಮಾನೀ ಸಯನೀಸುದುಘಾಹಿತತ ಋಷಿಭಿ: ೩೬೦ ಧರ್ಮಸಿಂಧು ಸಂಭ್ರತೋರಸ: ಬ್ರಾಹ್ಮಣೇಷ್ಟಮೃತಗುಂಹಿತಂ ಯೇನದೇವಾಃ ಪವಿತ್ರೇಣ | ಆತ್ಮಾನಂಪುನತೇಸದಾ ತೇನ ಸಹಸ್ರಧಾರೇಣ ಪಾವಮಾನ್ಯ: ಪುನಂತುಮಾ|ಪ್ರಾಜಾಪತ್ಯಂಪವಿತ್ರಂ ಶತೋದ್ಯಾ ಮಗುಂ ಹಿರಣ್ಮಯಂ ತೇನಬ್ರಹ್ಮವಿದೇವಯಂ ಪೂತಂಬ್ರಹ್ಮ ಪುನೀಮಹೇ। ಇಂದ್ರಸುನೀತೀ ಸಹಮಾ ಪುನಾತು ಸೋಮ: ಸ್ವಾವರುಣಃ ಸಮೀಚ್ಚಾಗಿ ಯಮೋರಾಜಾ ಪ್ರಮಣಾಭಿಃ ಪುನಾತುಮಾ| ಜಾತವೇದಾ ಮೋರ್ಜಯಂತಾ ಪುನಾತು” ಈ ಅನುವಾಕದಿಂದಲೂ ಅಭಿಷೇಕಮಾಡಿ “ವ್ಯಾಹೃತಿ” ಮತ್ತು “ಇದಂವಿಷ್ಣು” ಈ ಮಂತ್ರದಿಂದ ಫಲ, ಯವ, ಪೂರ್ವೆಗಳನ್ನು ಸಮರ್ಪಿಸಿ"ರಕ್ಷೆಹಣಂ” ಈ ಮಂತ್ರದಿಂದ ದೇವರ ಹಸ್ತಕ್ಕೆ ಕಂಕಣಬಂಧ ಮಾಡಿ ವಸ್ತ್ರದಿಂದ ಪ್ರತಿಮೆಯನ್ನು ಮುಚ್ಚುವದು, ನಂತರ “ಅವತೇಹೇಳ, ಉದುತ್ತಮ” ಈ ಮಂತ್ರಗಳನ್ನು ಹೇಳಿ ಜಲದಲ್ಲಿ ಅಧಿವಾಸ ಮಾಡತಕ್ಕದ್ದು. ಚಲಪ್ರತಿಷ್ಠೆ ಇದರಲ್ಲಿ ಅಗ್ನಿಪ್ರತಿಷ್ಠೆ ಮಾಡಿ ಧ್ಯಾನಿಸಿ ಗ್ರಹಶಾಂತಿಮಾಡುವದಿದ್ದಲ್ಲಿ ಗ್ರಹರನ್ನೂ, ವಾಸ್ತುದೇವತೆಗಳನ್ನೂ ಪ್ರತಿಷ್ಠಾಪಿಸಿ ಅನ್ನಾಧಾನ ಮಾಡತಕ್ಕದ್ದು. “ಚಕುಷಿ ಆಕ್ಕೇನ” ನಂತರ ಗ್ರಹಹೋಮವಿದ್ದಲ್ಲಿ ಗ್ರಹರನ್ನೂ, ಅಧಿದೇವತೆಗಳನ್ನೂ ಸಮಿಶ್ಚರ್ವಾಜ್ಯಗಳಿಂದ ವಾಸ್ತು ಪೀಠದೇವತೆಗಳನ್ನೂ ಅಾಧಾನದಲ್ಲುದ್ದೇಶಿಸಿ “ಇಂದ್ರಂ ಪೃಥೀವೀಂ, ಶರ್ವ, ಅಗ್ನಿಂ, ಅಗ್ನಿ ಮೂರ್ತಿ೦, ಪಶುಪತಿಂ, ಯಮಂ, ಯಜಮಾನಮೂರ್ತಿಂ, ಉಗ್ರಂ, ನಿಯತಿಂ, ಸೂರ್ಯಮೂರ್ತಿ೦, ರುದ್ರಂ, ವರುಣ, ಜಲಮೂರ್ತಿ೦, ಭವಂ, ವಾಯುಂ, ವಾಯುಮೂರ್ತಿಂ, ಈಶಾನಂ, ಕುಬೇರಂ, ಸೋಮಮೂರ್ತಿ೦, ಮಹಾದೇವ, ಈಶಾನಂ, ಆಕಾಶಂ, ಭೀಮಂ, ವಿತಾ: ಲೋಕಪಾಲಮೂರ್ತಿ ಮೂರ್ತಿಪತಿದೇವತಾ: ಪಲಾಶದುಂಬರಾಶ್ವತ ತಮ್ಮಪಾಮಾರ್ಗ ಸಮಿದ್ದಿ: ಆಜ್ಯಾಹುತಿಥಿ: ತಿಲಾಹುತಿಭಿನ್ನ ಪ್ರತಿವತಂ ಪ್ರತಿದ್ರಂ ಅಷ್ಟಾಷ್ಟಸಂಖ್ಯಾಕಾಭಿ ಸ್ಟಾಪ್ಯದೇವತಾಮಮುಕಾಂ ಪಲಾಶೋದುಂಬರಾಶ್ವತ್ಥ ಶಮೃಪಾಮಾರ್ಗ ಸಮಿಲಚರ್ವಾ: ಪ್ರತಿದ್ರವಮಷ್ಟೋತ್ತರಸಹಸ್ರ ಮಣೋತ್ತರ ಶತಮಿಷ್ಟಾವಿಂಶತಿಂವಾ ಉಕ್ತಸಂಖ್ಯೆಯಾ” ಅಗ್ನಿರ್ಯಜುರ್ಭಿರಿತನುವಾಗೇನ ವಿಶ್ವಾನ್ ದೇವಾನ್ ಲಾಜ್ಯಾಭ್ಯಾಂ ದಶದಶಾಹುತಿಭಿ ಏವಂ ದ್ವಿತೀಯೇ ಪರ್ಯಾಯೇ ವಿತಾವಿವದೇವತಾ: ತತ್ಸಂಖ್ಯಾಕ್ಕೆ: ತೈವ ದ್ರವ್ಯ: ವಿವಂತೃತೀಯೇ ಪರ್ಯಾಯ ವಿತಾವಿವದೇವತಾ ತತ್ಸಂಖ್ಯಾ: ಸ್ವರೇವದ್ರವ್ಯ: ಬ್ರಹ್ಮಾದಿಮಂಡಲದೇವತಾ: ತಿಲಾಾಹುತಿಥಿ: ಪ್ರತಿವತು ದಶ ದಶ ಸಂಖ್ಯಾಕಾಭಿ: ಶೇಷೇಣ ಸ್ಪಷ್ಟಕೃದಿತ್ಯಾರಿ” ಮೊದಲು ಪ್ರಧಾನ ದೇವತೆಯ ಸಲುವಾಗಿ ಮೌನಿಯಾಗಿ ನಾಲ್ಕು ಮುಷ್ಟಿ ನವಣೆಧಾನ್ಯವನ್ನು ನಿರೂಪ (ನಿರ್ವಾಪ)ಮಾಡಿ ಹೋಮಕ್ಕೆ ಬೇಕಾದಷ್ಟನ್ನು ತೆಗೆದುಕೊಂಡು ಪ್ರೋಕ್ಷಿಸಿ ಆಕಳ ಹಾಲಿನಲ್ಲಿ ಆ ಧಾನ್ಯದ ಚರುವನ್ನು ಬೇಯಿಸುವುದು. ಅಜ್ಯ ಸಂಸ್ಕಾರ ಮಾಡಿ ಯಜಮಾನನು ಎಲ್ಲ ಮಂತ್ರಗಳ ತ್ಯಾಗದ ಸಲುವಾಗಿ “ಇದಮುಪಕತಮಾಧಾನಕ ಪ್ರಜಾತಮಾಧಾನಕ್ಕೆ ಆಹುಸಂಖ್ಯಾಪರ್ಯಾಪ್ತ ಮಾಧಾನಕಾಯ್ಯೋ ಯಕ್ಷಮಾಣಾದ್ರೂ ದೇವತಾಸು ನಮಮ ಹೀಗೆ ಹೇಳಿ ನೀರು ಬಿಡತಕ್ಕರು. ಗೃಹಸಿದ್ಧವಾದ ಅನ್ನಾದಿಗಳಿಂದ ಗ್ರಹಾದಿ ಹೋಮಗಳನ್ನು ಮಾಡಿ ಲೋಕವಾಲಮೂರ್ತಿ ಮೂರ್ತಿಪತಿಗಳಿಗೋಸ್ಕರ ಐದು ವಿಧದ ಸಮಿಧಗಳನ್ನು, ತಿರಾಜ್ಯಗಳನ್ನು ಮಿಸತಕ್ಕದ್ದು, ಪ್ರತಿದ ಹೋಮಾಂತದಲ್ಲಿ ದೇವನ ಪಾದ, ನಾಭಿ, ಶಿರಸ್ಸು ಇವುಗಳನ್ನು ಪರಿಚ್ಛೇದ - ೩ ಪೂರ್ವಾರ್ಧ ೩೬೧ ಮುಟ್ಟುವದು. ಆಜ್ಯಹೋಮದಲ್ಲಿ ಜಲಸಹಿತವಾದ ಉತ್ತರ ದಿಕ್ಕಿನಲ್ಲಿರುವ ಕಲಶದಲ್ಲಿ ಸಂಪಾತ ಜಲಗಳನ್ನು ಹಾಕತಕ್ಕದ್ದು, ಸಂಪಾತಮಂತ್ರಗಳು-“ಇಂದ್ರಾಯೇಂದೋ ಎಂದು ಇಂದ್ರನಿಗೆ “ಸೋನಾಪೃಥಿವೀ” ಇದರಿಂದ ಪೃಥಿವೀ ಮೂರ್ತಿಗೆ, “ಅಘೋರೇಭ್ಯ:” ಎಂದು ತತ್ಪತಿಯಾದ ಶರ್ವನಿಗೆ, “ಅಗ್ನಆಯಾಹಿ” ಎಂದು ಅಗ್ನಿಗೆ “ಅಗ್ನಿಂದೂತು” ಎಂದು ಅಗ್ನಿಗೆ, “ನಮಃ ಶರ್ವಾಯಚ ಪಶುಪತಯೇಚ"ಇದು ಪಶುಪತಿಗೆ ; “ಯಮಾಯಸೋಮಂ” ಎಂದು ಯಮನಿಗೆ, “ಅಸಿಹೀವೀರ ಎಂದು ಯಜಮಾನಮೂರ್ತಿಗೆ, “ಸ್ತುಹಿಶ್ರುತಂ” ಎಂದು ತತ್ಪತಿಯಾದ ರುದ್ರನಿಗೆ, ‘ಅಸುನ್ವಂತಂ’ ಎಂದು ನಿಋತಿಗೆ; ‘ಆಕೃಷ್ಣನ’ ಎಂದು ಸೂರ್ಯಮೂರ್ತಿಗ; ‘ಯೋರುಅಗೌ’ ಎಂದು ತತ್ಪತ್ತಿಯಾದ ರುದ್ರನಿಗೆ; ‘ಇಮಂಮ’ ವರುಣನಿಗೆ, ‘ಶನ್ನೋದೇವಿ’ ಜಲಮೂರ್ತಿಗೆ; ‘ನಮೋಭವಾಯಚ’ ಎಂದು ಭವನಿಗೆ, “ಆನೋನಿಯುದ್ಧಿ:” ವಾಯುವಿಗೆ; ‘ವಾತ ಆವಾತು ವಾಯುಮೂರ್ತಿಗೆ; ‘ತಮೀಶಾನಂ’-ಈಶಾನನಿಗೆ; ‘ಆಪ್ಯಾಯಸ್ವ’ಕುಬೇರನಿಗೆ;‘ವಯಂಸೋಮ’- ಸೋಮಮೂರ್ತಿಗೆ, ‘ತತ್ಪುರುಷಾಯ’-ಮಹಾದೇವನಿಗೆ, ‘ಅಭಿತ್ವಾದೇ’-ಈಶಾನನಿಗೆ, ‘ಆದಿತೃತ್ವ’’- ಆಕಾಶಕ್ಕೆ, ‘ನಮ ಉಗ್ರಾಯಚ-ಭೀಮನಿಗೆ ಹೀಗೆ ಆಯಾಯ ದೇವತೆಗಳಿಗೆ ಸಂಪಾತಮಂತ್ರಗಳು. ನಂತರ ಪ್ರತಿಷ್ಠೆ ಮಾಡಬೇಕಾದ ದೇವನ ಮಂತ್ರದಿಂದ ಐದು ವಿಧ ಸಮಿಧ, ಪಾಯಸ, ಚರು, ತಿಲ, ಆಜ್ಯಗಳ ಹೋಮವು. ಪ್ರತಿ ದ್ರವ್ಯ ಹೋಮವಾದ ಕೂಡಲೆ ದೇವನ ಪಾದ, ನಾಭಿ, ಶಿರಸ್ಸುಗಳನ್ನು ಸ್ಪರ್ಶಿಸಬೇಕು. ದೇವ ಮಂತ್ರವೆಂದರೆ-ತಾಂತ್ರಿಕವಾದ ಮೂಲಮಂತ್ರ ಅಥವಾ ಆಯಾಯ ದೇವತೆಗಳ ಗಾಯತ್ರೀ ಅಥವಾ ವೈದಿಕ ಮಂತ್ರ ಇವುಗಳಿಂದ ಮುಖ್ಯ ಹೋಮವು. “ಓಂ ಅಗ್ನಿಯಜುರ್ಭಿಣ ಸವಿತಾಸ್ತೋಮ್ಮೆ:ಇಂದ್ರ ಉಕ್ಷಾಮರ ಮಿತ್ರಾವರುಣಾವಾಶಿಷಾ|ಅಂಗಿರಸೋಧಿಷ್ಠಿರಗ್ನಿಭಿ ಮರುತ: ಸರೋಹವಿರ್ಧಾ ನಾಭ್ಯಾಂ!ಆಪಃ ಪ್ರೋಕ್ಷಣಭಿಓಷಧಯೋಬರ್ಹಿಾಆದಿವಾಸಿ ಸೋಮೋದೀಕ್ಷೆಯಾಗಿ ತರ್ಷನ ವಿಷ್ಣುರ್ಯಕ್ಕೇನ ವಸವ ಆಜೈನ ಆದಿತ್ಯಾದಕ್ಷಿಣಾಭಿ! ವಿಶ್ವೇದೇವಾ ಊರ್ಜಾ ಪೂಷಾಗಾಕಾರೇಣ/ಬೃಹಸ್ಪತಿ: ಪುರೋಧಸಾ ಪ್ರಜಾಪತಿರುದ್ದೀಥೇನ ಅಂತರಿಕ್ಷಂ ಪವಿತ್ರಣ ವಾಯು: ಪಾತ್ರ: ಅಹಗ್ಗು ಶ್ರದ್ಧಯಾಗ್ರಾಹಾ” ಈ ಅನುವಾಕದಿಂದ ತಿಲ, ಆಜ್ಯಗಳ ಹತ್ತು ಹತ್ತು ಆಹುತಿಗಳನ್ನು ಹಾಕತಕ್ಕದ್ದು. ನಂತರ ದೇವನ ಪಾದಗಳನ್ನು ಸ್ಪರ್ಶಿಸುವದು. ಸಂಪಾತಜಲದಿಂದ ಅಭಿಷೇಕ ಮಾಡಬೇಕು. ಹೀಗೆಯೇ ಎರಡನೇ ಪರ್ಯಾಯ ಹೋಮಮಾಡಿ ದೇವರ ನಾಭಿಯನ್ನು ಸ್ಪರ್ಶಿಸುವದು. ಹೀಗೆಯೇ ತೃತೀಯ ಪರ್ಯಾಯದಿಂದ ಹೋಮಿಸಿ ಶಿರಸ್ಸನ್ನು ಸ್ಪರ್ಶಿಸುವದು. ಪ್ರತಿ ಪರ್ಯಾಯದಲ್ಲಿಯೂ ಸಂಪಾತಾಭಿಷೇಕ ಆಗಬೇಕು. ಇಲ್ಲಿ ಆಹುತಿಸಂಖ್ಯೆ ಹೀಗಾಗುವದು. ೨೪ ದೇವತೆಗಳಿಗೆ ಪ್ರತಿದ್ರವ್ಯ ಎಂಟೆಂಟರಂತ-ಮುತ್ತುಗಲ ೧೯೨, ಅತ್ತಿ ೧೯೨, ಅಶ್ವತ್ಥ ೧೯೨, ಶಮೀ ೧೯೨, ಉತ್ತರಣಿ ೧೯೨, ಆಜ ೧೯೨, ತಿಲ ೧೯೨, ಮುಖ್ಯದೇವತೆ ಪ್ರತಿದ್ರವ್ಯವನ್ನು ೨೮ ರಂತ ಹೋಮಿಸಿದರೆ ಐದುವಿಧ ಸಮಿಧಗಳಿಂದ ೧೪೦, ಚರು, ಆಜ್ಯ, ತಿಲಗಳಿಂದ ೮೪, ಅನುವಾಕಹೋಮ ೨೦, ಅಂತೂ ೧೫೮೮, ಮೂರು ಪರ್ಯಾಯಗಳಿಂದ ೪೭೬೪ ಆಹುತಿಗಳಾಗುವವು. ಇದು ಮುಖ್ಯದೇವತೆಗೆ ೨೮ ಆಹುತಿ ಮಾಡಿದಾಗ ಹೇಳಿದ್ದು, ಹೀಗೆ ಹೋಮಿಸಿ ಮೂರ್ತಿಯನ್ನು ಶುದ್ಧ ಮಾಡುವದು. ದೇವರಿಗೆ ನಮಸ್ಕಾರಮಾಡಿ “ಸ್ವಾಗತಂದೇವದೇವೇಶ ಧರ್ಮಸಿಂಧು 11 ವಿಶ್ವರೂಪನಮೋಸ್ತುತೇ|ಶುದ್ಧಪಿ ತ್ವದಧಿಷ್ಠಾನೇ ಶುದ್ಧಿಂಕುಮದ ಸಹಸ್ವತಾಂ” ಹೀಗೆ ಪ್ರಾರ್ಥಿಸಿ “ಉತ್ತಿಷ್ಠ ಬ್ರಹ್ಮಣಸ್ಪತ” ಎಂದು ಋತ್ವಿಜರಿಂದ ಕೂಡಿ ದೇವಮೂರ್ತಿಯನ್ನೆತ್ತಿ ಅನ್ನುತ್ತಾರಣ ಮಾಡತಕ್ಕದ್ದು. “ಅಗ್ನಿಃ ಸಃ” ಎಂಬ ಸೂಕ್ತವನ್ನು “ಅಗ್ನಿ” ಎಂಬ ಪದವನ್ನು ಬಿಟ್ಟು ಪಠಿಸಿ ಪುನಃ ಅಗ್ನಿಪದ ಸಹಿತವಾಗಿ ಪಠಿಸಬೇಕು. ಹೀಗೆ ನೂರೆಂಟು ಅಥವಾ ಇಪ್ಪತ್ತೆಂಟಾವರ್ತಿ ಪಠಿಸಿ ಜಲಾಭಿಷೇಕಮಾಡುವದು. ಆಮೇಲೆ ಪ್ರತಿಮೆಯನ್ನು ಹನ್ನೆರಡು ಬಾರಿ ಮಣ್ಣಿನಿಂದ ಮತ್ತು ಜಲದಿಂದ ತೊಳೆದು ಸಮಂತ್ರಕವಾದ ಪಂಚಗವ್ಯದಿಂದ ಸ್ನಾನ ಮಾಡಿಸಿ “ಪಯಃ ಪೃಥಿವ್ಯಾಂ ಪಯ ಓಷಧೀಮು ಪಯೋದಿವ್ಯಂತರಿಕ್ಷೇ ಪಯೋಧಾಃ ಪಯಸ್ವತೀಃ ಪ್ರದಿಶಃಸಂತುಮಕ್ಕಂ “ಈ ಮಂತ್ರದಿಂದಲೂ, ಮತ್ತು “ಆವೋರಾಜಾನಂ” ಎಂಬ ಮಂತ್ರದಿಂದಲೂ ಸ್ನಾನಮಾಡಿಸಿ “ಆಪ್ಯಾಯಸ್ಕ ಇತ್ಯಾದಿ ಐದು ಮಂತ್ರಗಳಿಂದ ಪಂಚಾಮೃತಸ್ಥಾನ, ಮಾಡಿಸಿ ಲಿಂಗವಾದಲ್ಲಿ “ನಮಸ್ತೇರುದ್ರ"ಇತ್ಯಾದಿ ಅಷ್ಟ ಅನುವಾದಗಳಿಂದ ಸ್ನಾನಮಾಡಿಸಿ ತುಪ್ಪದಿಂದ ಅಭ್ಯಂಗ, ಉದ್ವರ್ತನ ನಂತರ ಉದ್ಯೋದಕದಿಂದ ತೊಳೆಯುವರು. ಆಮೇಲೆ ಗಂಧವನ್ನು ಹಚ್ಚಿ ಸಂಪಾತದ ಉದಕದಿಂದ ಸ್ನಾನಮಾಡಿಸಿ ಪಲ್ಲವ ಸಹಿತಗಳಾದ ನಾಲ್ಕು ಕಲಶಗಳಿಂದ ಕ್ರಮವಾಗಿ “ಓಂ ಆಪೋಹಿಷ್ಠಾ “ಓಂ ಯೋವಃ, ಓಂ ತಸ್ಮಾತ, ಓಂ ಆಕಲಶೇಷು” ಹೀಗೆ ಸ್ನಪನಮಾಡಿಸಿ “ಸಮುದ್ರಜೇಷ್ಠಾ” ಈ ನಾಲ್ಕು ಮಂತ್ರಗಳಿಂದ ಆಕಲಶೇಷು” ಎಂಬುದರಿಂದ ಮಿಶ್ರಿತವಾದ ನಾಲ್ಕು ಕುಂಭಜಲಗಳಿಂದ ಸ್ನಾನಮಾಡಿಸಿ ಅತ್ತಿ ಮೊದಲಾದ ವೃಕ್ಷದ ಪೀಠದಲ್ಲಿ ಪ್ರತಿಮೆಯನ್ನಿಟ್ಟು ಸುತ್ತಲೂ ಎಂಟು ದಿಕ್ಕುಗಳಲ್ಲಿ ಎಂಟು ಕಲಶಗಳನ್ನಿಟ್ಟು, ಅವುಗಳಲ್ಲಿ ಗಂಧ, ಪುಷ್ಪ, ದೂರ್ವೆಗಳನ್ನು ಹಾಕಿ, ಮೊದಲನೇ ಕಲಶದಲ್ಲಿ ಸಪ್ತಮೃತ್ತಿಕೆಗಳು, ಎರಡನೇದರಲ್ಲಿ ಕಮಲದ ಎಲೆ, ಶಮೀ, ಕೋವಿದಾರ, ಮುಳ್ಳುಬೇಲ ಇವುಗಳ ತೊಗಟೆಗಳನ್ನು ಹಾಕಿ ಮೂರನೇದರಲ್ಲಿ ಸಪ್ತಧಾನ್ಯಗಳು (ಯವ, ಓ, ತಿಲ, ಮೂಷ, ನವಣೆ, ಶಾಮ ಅಕ್ಕಿ ಹೆಸರು) ನಾಲ್ಕನೇದರಲ್ಲಿ ಪಂಚ ರತ್ನಗಳು, (ಸುವರ್ಣ, ರಜತ, ಮುತ್ತು, ಮಾಣಿಕ್ಯ, ಪ್ರವಾಳ)ಐದನೇದರಲ್ಲಿ ಫಲ ಪುಷ್ಪಗಳು, ಆರನೇದರಲ್ಲಿ ದರ್ಭ, ದೂರ್ವಾ, ಅರಿಶಿನ, ಏಳನೇದರಲ್ಲಿ ಸಂಪಾತೋದಕ. ಎಂಟನೇದರಲ್ಲಿ ಸರ್ವೌಷಧಿ (ಮೂರಾ, ಜಟಾಮಾಂಸಿ, ಬಜೆ, ಕಂಕೋಷ್ಟ ಶಿಲಾಜಿತು, ಎರಡು ಅರಿಶಿನ, ಕಚೋರ, ಸಂಪಿಗೆ, ಭದ್ರಮುಷ್ಟಿ) ಹೀಗೆ ಕಲಶಗಳಲ್ಲಿ ಹಾಕಿ ಎಂಟು ಮಂತ್ರಗಳಿಂದ ಎಂಟು ಕಲಶೋದಕವನ್ನು “ಆಪೋಹಿಷ್ಠಾ” ಮೂರು ಮಂತ್ರ “ಒರಣ್ಯ ವರ್ಣಾ: ಶುಚಯ:” ಈ ನಾಲ್ಕು ಮಂತ್ರ ಪವಮಾನ ಸೂಕ್ತ ಹೀಗೆ ಅಭಿಷೇಕ ಮಾಡಿ ಪುನಃ ಮತ್ತೊಂದು ಕಲಶಮಾಡಿ ಅದರಲ್ಲಿ ಶಮೀ, ಪಲಾಶ, ವಟ, ಖರ, ಬಿಲ್ವ, ಅಶ್ವತ್ರೆ, ವಿಕಂಕತ, ಹಲಸು, ಮಾವು, ಬಾಗೇಹೂವು, ಅತ್ತಿ ಇವುಗಳನ್ನೂ ಇವುಗಳ ಕಷಾಯವನ್ನೂ ಹಾಕಿ “ಅಶ್ವತ್ತೇವ” ಇದರಿಂದ ಅಭಿಷೇಕಮಾಡಿ ಪಂಚರತೋದಕದಿಂದ “ಹಿರಣ್ಯ ವರ್ಣಾ:* ಈ ಮಂತ್ರವನ್ನು ಹೇಳಿ ಸ್ನಾನಮಾಡಿಸಿ ವಸ್ತ್ರವನ್ನು ತೊಡಿಸುವದು. ಕೆಲವರು ವಸ್ತ್ರದಿಂದ “ಮಲ್ಪಟ್ಟನ್ನು ಕಟ್ಟುವರು. ಯಜೋಪವೀತ, ಗಂಧ, ಪುಷ್ಪ, ಧೂಪ, ದೀಪಗಳನ್ನರ್ಪಿಸಿ “ಓಓ ಓದಣ್ಯಗರ್ಭ~ ಓಯ ಆತ್ಮರಾ“ಓಂಯಃಪ್ರಾಣತೋಓಂಯಮೀಂಯೇನ‌ ಓಂಯಂಕ್ರಂದ ಪರಿಚ್ಛೇದ - ೩ ಪೂರ್ವಾರ್ಧ aLa ಓಆಪೋಹಯತ್ ಓಂಯದಾಪೋ ಹೀಗೆ ಹೇಳಿ ಎಂಟುಪೀಠದೀಪಗಳನ್ನು ಹಚ್ಚಿ ಬಂಗಾರದ ಸಲಾಕೆಯಿಂದ ತವರದ ಪಾತ್ರದಲ್ಲಿರುವ ಜೇನುತುಪ್ಪ ಮತ್ತು ತುಪ್ಪಗಳನ್ನು ತಕ್ಕೊಂಡು “ಓಂ ಚಿತ್ರಂದೇವಾನಾಂ-ಓಂ ತೇಜೋಸಿ ಶುಕ್ರಮಸಮೃತಮಸಿ ಧಾಮನಾಮಾಸಿ ಪ್ರಿಯಂದೇವಾನಾಮನಾದೃಷ್ಟಂ ದೇವಯಜನಮಸಿ’ ಈ ಎರಡು ಮಂತ್ರಗಳಿಂದ “ಓಂ ನಮೋಭಗವತೇ ತುಂ ಶಿವಾಯ ಹರಯೇ ನಮಃ ಹಿರಣ್ಯರೇತಸೇ ಎಷ್ಟೋ ವಿಶ್ವರೂಪಾಯತೇ ನಮಃ” ಈ ಮಂತ್ರವನ್ನು ಎರಡಾವರ್ತಿ ಹೇಳಿ ಬಲ ಮತ್ತು ಎಡ ನೇತ್ರಗಳನ್ನು ಬರೆಯತಕ್ಕದ್ದು, “ಓಂ ಅಂಜನಂತಿತ್ವಾ” ಎಂಬ ಮಂತ್ರದಿಂದ ಕಾಡಿಗೆ ಹಚ್ಚಿ “ಓಂ ದೇವಸ್ಯತ್ಯಾಸವಿತು: ಪ್ರಸವೇ ಇಂದ್ರಸೇಂದ್ರಿಯಣ ಅನ“ ಹೀಗೆ ಹೇಳಿ ಮಧು, ಆಜ್ಯ, ಸಕ್ಕರೆ ಇವುಗಳ ಮಿಶ್ರಣದಿಂದ ಅಂಜನ ಹಚ್ಚಿ ಕಾಡಿಗೆಯಿಂದ ಪುನಃ ಅಂಜನ ಮಾಡುವದು. ಆಮೇಲೆ ಕನ್ನಡಿ, ಭಕ್ಷ್ಯ ಮೊದಲಾದವುಗಳನ್ನು ತೋರಿಸುವದು. ಯಜಮಾನನು ಆಚಾರ್ಯನಿಗೆ ಗೋವು, ಋತ್ವಿಜರಿಗೆ ದಕ್ಷಿಣೆಗಳನ್ನು ಕೊಡತಕ್ಕದ್ದು. ಆಚಾರ್ಯನು ಪ್ರತಿ ಮಂತ್ರದ ಮೊದಲು ಓಂಕಾರವನ್ನು ಹೇಳಿ ಪುರುಷಸೂಕ್ತದಿಂದ ಸ್ತುತಿಸಿ ಬಿದಿರಿನ ಪಾತ್ರೆಯಲ್ಲಿರುವ ಪಂಚವರ್ಣದ ಅನ್ನವನ್ನು ದೇವರಿಗೆ ನಿವಾಳಿಸಿ ರುದ್ರನ ಸಲುವಾಗಿ ನಾಲ್ಕು ಹಾದಿ ಕೂಡಿದ ಸ್ಥಾನದಲ್ಲಿ ಇಡುವದು. ಅದಕ್ಕೆ “ಓಂ ನಮೋರುದ್ರಾಯ ಸರ್ವಭೂತಾಧಿಪತಯೇ ದೀಪ್ತ ಶೂಲಧರಾಯ ಉಮಾರಯಿತಾಯ ವಿಶ್ವಾಧಿಪತಯೇ ರುದ್ರಾಯ ನಮೋನಮಃ ಶಿವಮಗರ್ಹಿತಂ ಕರ್ಮಾಸ್ತು ಸ್ವಾಹಾ” ಎಂದು ಈ ಮಂತ್ರವು. ಅಶ್ವತ್ಥದ ಎಲೆಯಲ್ಲಿ “ಭೂತೇಭೋನಮಃ’ ಎಂದು ಇಡತಕ್ಕದ್ದು. ನಂತರ ಆಚಾರ್ಯನು ಸರ್ವತೋಭದ್ರದಲ್ಲಿ ದೇವತೆಗಳನ್ನು ಆವಾಹಿಸುವದು. ಅದರ ಕ್ರಮ-ಮಧ್ಯದಲ್ಲಿ ಬ್ರಹ್ಮ; ಪೂರ್ವಾದಿ ದಿಕ್ಕುಗಳಲ್ಲಿ ಇಂದ್ರಾದಿ ಲೋಕಪಾಲಕರು; ಈಶಾವ-ಇಂದ್ರಾದಿಗಳ ಅಂತರಾಲಗಳಲ್ಲಿ ವಸು, ರುದ್ರ, ಆದಿತ್ಯ, ಅಶ್ವಿನಿ, ವಿಶ್ವೇದೇವ, ಪಿತೃ, ನಾಗ, ಸ್ಕಂದ, ವೃಷರು. ಬ್ರಹ್ಮ ಈಶಾನಾದಿಗಳ ಅಂತರಾಳದಲ್ಲಿ ದಕ್ಷ, ವಿಷ್ಣು, ದುರ್ಗಾ, ಸ್ವಧಾಕಾರ, ಮೃತ್ಯು, ರೋಗಗಳು, ಸಮುದ್ರ, ನದಿ, ಮರುತ್ತರು, ಗಣಪತಿ, ಮಧ್ಯದಲ್ಲಿ ಪೃಥಿವೀ, ಮೇರು, ಸ್ಥಾಪಿಸಬೇಕಾದ ದೇವ ಹೀಗೆ ಆವಾಹಿಸಿ ಪೂರ್ವಾದಿಗಳಲ್ಲಿ - ವಜ್ರ, ಶಕ್ತಿ, ದಂಡ, ಖಡ್ಗ, ಪಾಶ, ಅಂಕುಶ, ಗದಾ, ಶೂಲ ಇವುಗಳ ಹೊರಗೆ-ಗೌತಮ್, ಭರದ್ವಾಜ, ವಿಶ್ವಾಮಿತ್ರ, ಕಶ್ಯಪ, ಜಮದಗ್ನಿ, ವಸಿಷ್ಠ, ಅತ್ರಿ, ಅರುಂಧತಿ ಇವುಗಳ ಹೊರಗೆ ನವಗ್ರಹರು; ಅವುಗಳ ಹೊರಗೆ ವಿಂದ್ರಿ, ಕೌಮಾರೀ, ಬ್ರಾ, ವಾರಾಹಿ, ಚಾಮುಂಡಾ, ವೈಷ್ಣವಿ, ಮಾಹೇಶ್ವರಿ, ವೈನಾಯಕೀ ಹೀಗೆ ಆಯಾಯ ದೇವತೆಗಳನ್ನು ನಾಮಮಂತ್ರದಿಂದ ಆವಾಹನ, ಪೂಜಾದಿಗಳನ್ನು ಮಾಡುವದು. ದೇವನಲ್ಲಿ ದೇವಮಂತ್ರದಿಂದ ಆವಾಹಿಸಿ ಮಂಡಲಮಧ್ಯದಲ್ಲಿ ಪ್ರತಿಮೆಯನ್ನು “ಸುಪ್ರತಿಷ್ಠಿತೋಭವ” ಎಂದು ಇಟ್ಟು ಪೂಜಿಸಿ ಅಗ್ನಿಯಲ್ಲಿ ಮಂಡಲದೇವತೆಗಳಿಗೆ ನಾಮಮಂತ್ರಗಳಿಂದ ತಿಲ, ಆಜ್ಯಗಳ ಹತ್ತು ಹತ್ತು ಆಹುತಿಗಳನ್ನು ಹೋಮಿಸುವದು. ನಂತರ ಪುಷ್ಪಾಂಜಲಿಯನ್ನು ಸಮರ್ಪಿಸಿ

ಧರ್ಮಸಿಂಧು “ನಮೋಮಹತ್” ಎಂಬ ಮಂತ್ರದಿಂದ ದೇವನಿಗೆ ನಮಸ್ಕಾರಮಾಡಿ ಮಂಡಲದ ಉತ್ತರದಿಕ್ಕಿನಲ್ಲಿ ಸ್ವಸ್ತಿಕವನ್ನು ಬರೆದು ಅದರಮೇಲೆ ಪೀಠವನ್ನು, ಹಾಸಿಗೆಯನ್ನು ರಚಿಸಿ “ಉತ್ತಿಷ್ಠ” ಮಂತ್ರದಿಂದ ದೇವನನ್ನು ಕೂಡ್ರಿಸಿ ಪುರುಷಸೂಕ್ತ, ಉತ್ತರನಾರಾಯಣ ಮಂತ್ರಗಳಿಂದ ಸ್ತುತಿಸಿ ನ್ಯಾಸ ಮಾಡುವದು. “ಓಂ ಪುರುಷಾತ್ಮನೇ ನಮಃ, ಓಂ ಪ್ರಾಣಾತ್ಮನೇ ನಮಃ, ಓಂ ಪ್ರಕೃತಿತತ್ವಾಯ, ಓಂ ಬುದ್ಧಿತತ್ವಾಯ, ಓಂ ಅಹಂಕಾರತತ್ವಾಯ, ಓ೦ ಮನಸ್ತತಾಯ” ಹೀಗೆ ಸರ್ವಾಂಗಗಳಲ್ಲೂ ನ್ಯಾಸಮಾಡುವದು. ಹೃದಯದಲ್ಲಿ “ಓಂ ಪ್ರಕೃತಿತತ್ವಾಯ ಓಂ ಬುದ್ಧಿ ತತ್ವಾಯ” ಎಂದು ನ್ಯಾಸಮಾಡುವದು. ಶಿರಸ್ಸಿನಲ್ಲಿ ‘ಓಂ ಶಬ್ದ ತತ್ವಾಯ’ ಎಂದು; ಚರ್ಮದಲ್ಲಿ ಸ್ಪರ್ಶತತ್ವಾಯ ಎಂದು; ಹೃದಯದಲ್ಲಿ ರೂಪತತ್ವಾಯ ಎಂದು; ಹೃದಯದಲ್ಲಿಯೇ ರಸ, ಗಂಧ, ಶೂತ್ರ, ತ್ವಕ್, ಚಕ್ಷು, ಜಿಹ್ವಾ, ಪ್ರಾಣ, ವಾಕ್, ಪಾಣಿ, ಪಾದ, ಪಾಯು, ಉಪಸ್ತ್ರ, ಪೃಥಿವ್ಯಪೇಜೋ ವಾಯ್ಯಾಕಾಶ, ಸತ್ವ, ರಜಸ್ತಮ, ದೇಹ, ತತ್ವ ಇವುಗಳನ್ನು ನ್ಯಾಸಮಾಡತಕ್ಕದ್ದು. ಆಮೇಲೆ ಪುರುಷಸೂಕ್ತದ ಆದಿಯ ಎರಡು ಮಂತ್ರಗಳಿಂದ ಎರಡು ಕೈಗಳಲ್ಲಿ ಅದರ ಮುಂದಿನ ಎರಡು ಮಂತ್ರಗಳಿಂದ ಪಾದಗಳಲ್ಲಿ; ಅದರ ಮುಂದಿನ ಎರಡು ಮಂತ್ರಗಳಿಂದ ಮೊಣಕಾಲುಗಳಲ್ಲಿ ಅದರ ಮುಂದಿನ ಎರಡು ಮಂತ್ರಗಳಿಂದ ಕಟಿಗಳಲ್ಲಿ; ಅದಕ್ಕೂ ಮುಂದಿನ ಮೂರು ಮಂತ್ರಗಳಿಂದ ನಾಭಿ, ಹೃದಯ, ಕಂಠಗಳಲ್ಲಿ; ಅದರ ಮುಂದಿನ ಎರಡರಿಂದ ಬಾಹುಗಳಲ್ಲಿ, ಮುಂದೆ ಒಂದರಿಂದ ನಾಸಿಕಗಳಲ್ಲಿ ಮುಂದಿನದೊಂದರಿಂದ ಕಣ್ಣುಗಳಲ್ಲಿ ಕೊನೆಯಮಂತ್ರದಿಂದ ಶಿರಸ್ಸಿನಲ್ಲಿ ಹೀಗೆ ನ್ಯಾಸಮಾಡಿ ನಂತರ “ಸುಖಶಾಯೀಭವ” ಎಂದು ಶಯ್ಕೆಯಲ್ಲಿ ದೇವನನ್ನು ಸ್ಥಾಪಿಸಿ, ಮಂಡಲ ಶಯಗಳ ಮಧ್ಯದಲ್ಲಿ ಯಾರೂ ಅಡ್ಡಹೋಗಬಾರದೆಂಬ ಎಚ್ಚರಿಕೆಯನ್ನು ಕೊಟ್ಟು ಸ್ಪಷ್ಟಕೃದಾದಿ ಹೋಮಶೇಷವನ್ನು ಮುಗಿಸಿ ಮಂಡಲದೇವತೆಗಳಿಗೆ ನಾಮಗಳಿಂದ, ಚರುವಿನಿಂದ ಬಲಿಕೊಡತಕ್ಕದ್ದು. ನವಣೆಧಾನ್ಯದ ಚರುಶೇಷದಿಂದ ದಿಗ್ನಲಿಯನ್ನು ಕೊಡುವದು. ನಂತರ “ಧಾಮಂತ” ಎಂದು ಪೂರ್ಣಾಹುತಿ ಮಾಡತಕ್ಕದ್ದು. ಹೀಗೆ ಅಧಿವಾಸಕ್ರಮವು. ಸ್ಥಿರಪ್ರತಿಷ್ಠೆಯಲ್ಲಿ ಕ್ರಮ ವಿಶೇಷ ಸಂಕಲ್ಪಾದಿಯಿಂದ ಜಲಾಧಿವಾಸದ ವರೆಗೆ ಮಾಡಿ ದೇವನನ್ನು ನಮಸ್ಕರಿಸಿ “ಸ್ವಾಗತಂ ದೇವದೇವೇಶ” ಇತ್ಯಾದಿ ಪ್ರಾರ್ಥನ, ಉತ್ಪಾವನ, ಅಗುತ್ತಾರಣ, ನೇತ್ರೋಲನ ವರೆಗೆ ಮೊದಲು ಹೇಳಿದಂತೆಯೇ ಮಾಡುವರು. “ಸ್ಥಿರಶಿವಲಿಂಗ"ದಲ್ಲಿ ಸುವರ್ಣದ ಸೂಜಿಯಿಂದ “ಓಂ ನಮೋಭಗವತೇ ರುದ್ರಾಯ ಹಿರಣ್ಯರೇತಸೇ ಪರಾಯ ಪರಮಾತ್ಮನೇ ವಿಶ್ವರೂಪಾಯ ಉಮಾಪ್ರಿಯಾಯ ನಮ:” ಹೀಗೆ ಹೇಳಿ ಅಂಜನಮಾಡುವದು. ಹೀಗೆ ಲಿಂಗದ ನೇತೋಲನದಲ್ಲಿ ವಿಶೇಷವ, ನಂತರ ಸೂಕ್ತಸ್ತುತಿ ಮೊದಲಾಗಿ ಮಂಡಲದೇವಸ್ಥಾನದವರೆಗೆ ಮಾಡಿ ಮಂಡಲದಲ್ಲಿ ಮೂರ್ತಿಯನ್ನಿಡುವರು. ಶಯ್ಕೆಯಲ್ಲಿ ದೇವನನ್ನು ಕೂಡ್ರಿಸುವದು. ನಂತರ ಸ್ತುತಿ-ಪೂರ್ವೋಕ್ತಾಸಗಳು. ನಂತರ ಶಯ್ಕೆಯಲ್ಲಿ ದೇವನ ಶಯನವು, ಮುಂದೆ ಅಗ್ನಿಪನಾದಿಗಳು. ಹಿಂದೆ ಹೇಳಿದ ಅನಾಧಾನದಲ್ಲಿ ದೇವನು ವಿಷ್ಣುವಾದರೆ “ನಾರಾಯಣ ಇತರ ಆತ್ಮಾಹುತಿ " ಶಿವನಾದರೆ “ಯಾತ ಇದು ದ್ರಾವೇ-ಸಹಸ್ರಾಣಿ” ಈ ಅನುವಾಕಗಳಲ್ಲಿರುವ “’ : ರುದ್ರ ಮಾನ” ಹೀಗೆ ಪ್ರಧಾನರ ನಂತರ ಊಹಿಸುವದು. ಪರಿಚ್ಛೇದ - ೩ ಪೂರ್ವಾರ್ಧ ಇಷ್ಟೇ ವಿಶೇಷವು. ಲೋಕಪಾಲಮೂರ್ತಿ, ಮೂರ್ತಿಪತಿ ಹೋಮದ ವರೆಗೆ ಮೊದಲಿದ್ದಂತೆಯೇ. ಮುಖ್ಯದೇವತಾ ಹೋಮದಲ್ಲಿ ನವಣೆಯ ಚರು ಇಲ್ಲ. ಏಳೇ ಹವಿಸ್ಸುಗಳು, ವಿಷ್ಣುವಿನ ಸಿ ರಪ್ರತಿಷ್ಠೆಯಲ್ಲಿ ಪೂರ್ವೋಕ್ತ ಸಮಿತ್ತಿಲ ಆಜ್ಯಹೋಮಾನಂತರ ಪುರುಷಸೂಕ್ತದಿಂದ, ಪ್ರತಿಮಂತ್ರದಿಂದ ಆಜ್ಯವನ್ನು ಹೋಮಿಸಿ “ಇದಂವಿಷ್ಣು’ ಎಂದು ಪಾದಗಳನ್ನು ಸ್ಪರ್ಶಿಸಿ ಪುನಃ ಅವುಗಳಿಂದಲೇ ಹೋಮಿಸಿ “ಅತೋದೇವಾ” ಎಂದು ಶಿರಸ್ಸನ್ನು ಸ್ಪರ್ಶಿಸಿ ಪುನಃ ಅದರಂತೆ ಹೋಮಿಸಿ ಪುರುಷಸೂಕ್ತದಿಂದ ಸರ್ವಾಂಗವನ್ನೂ ಸ್ಪರ್ಶಿಸುವದು. ಸ್ಥಿರಲಿಂಗದಲ್ಲಾದರೆ ಸಮಿದಾಜ ತಿಲಹೋಮಾಂತಮಾಡಿ"ಯಾತ ಇಷುಃ” ಈ ಅನುವಾಕ ಹೇಳಿ “ದ್ರಾಪೇ ಈ ಅನುವಾಕ, ಇದರ ನಂತರ “ಸಹಸ್ರಾಣಿ” ಈ ಅನುವಾಕ ಹೀಗೆ ಹೇಳಿ, ಪ್ರತಿ ಮಂತ್ರಗಳಿಂದ ಆಜ್ಯಹೋಮವನ್ನು ಮಾಡಿ “ಸರ್ವೋರುದ್ರ” ಇದರಿಂದ ಮೂಲವನ್ನು ಸ್ಪರ್ಶಿಸುವದು. ಪುನಃ ಅದರಂತೆ ಹೋಮಿಸಿ “ನಮೋಹಿರಣ್ಯಬಾಹವೇ” ಎಂದು ತುದಿಯನ್ನು ಸ್ಪರ್ಶಿಸುವದು. ಪುನಃ ಹಾಗೆಯೇ ಹೋಮಿಸಿ ಎಲ್ಲ ರುದ್ರಮಂತ್ರಗಳಿಂದ ಸರ್ವಾಂಗವನ್ನೂ ಸ್ಪರ್ಶಿಸುವದು. ಹೀಗೆ ಅಧಿವಾಸನದಲ್ಲಿ ವಿಶೇಷವು. ಮಾರನೇದಿನ ಪೀಠವನ್ನು ಅಭಿಷೇಕಮಾಡಿ “ಓಂ ಮಹೀಮೂಷು” ಇದರಿಂದ ಆವಾಹನಮಾಡಿ “ಓಂ ಅದಿತಿರ್ದೌ ಇದರಿಂದ ಸ್ತುತಿಸಿ “ಓಂ ಶ್ರೀಂ ನಮಃ” ಹೀಗೆ ಹೇಳಿ ಪೂಜಿಸುವದು. ಇದರಿಂದಲೇ ಪೂರ್ಣಾಹುತಿಯನ್ನು ಹೋಮಿಸಿ “ಉತ್ತಿಷ” ಎಂದು ದೇವಪ್ರತಿಮೆಯನ್ನೆತ್ತಿ ಪುಷ್ಪಾಂಜಲಿಯನ್ನು ಕೊಟ್ಟು, ಪುರುಷಸೂಕ್ತದಿಂದ ಸ್ತುತಿಸಿ “ಉದುತ್ಕಂ ಎಂದು ಎತ್ತಿ ಹಿಡಿದು “ಕನಿಕ್ರದತ್” ಈ ಸೂಕ್ತದಿಂದ ವಿಷ್ಣುವನ್ನು, ಲಿಂಗವಾದರೆ ‘ಸದ್ಯೋಜಾತ” ಆದಿ ಐದು ಅನುವಾಕದಿಂದ ಒಳಗೆ ಪ್ರವೇಶಮಾಡಿಸಿ ಪೀಠದಲ್ಲಿ ಇಂದ್ರಾದಿ ಎಂಟು ನಾಮಗಳಿಂದ ಎಂಟು ರತ್ನಗಳನ್ನು ಹಾಕಿ ಹಾಗೆಯೇ ಸಪ್ತಧಾನ್ಯ, ಬೆಳ್ಳಿ, ಮನಃಶಿಲೆಗಳನ್ನೂ ಹಾಕಿ ಪಾಯಸದಿಂದ ಲೇಪಿಸಿ, ‘ಓಂಕಾರ’ದಿಂದ ಅಂಗನ್ಯಾಸಮಾಡಿ ಸುವರ್ಣ ಶಲಾಕೆಯನ್ನು ಅಡ್ಡಲಾಗಿ ಹಿಡಿದು ಸುಲಗ್ನದಲ್ಲಿ “ಓಂ ಪ್ರತಿತಿಷ್ಟ ಪರಮೇಶ್ವರ” ಎಂದು ಹೇಳಿ ಅತೋದೇವ’ ಇದರಿಂದ ವಿಷ್ಣುವನ್ನೂ, ರುದ್ರದಿಂದ ಲಿಂಗವನ್ನೂ ಸ್ಥಾಪಿಸುವದು. ನಂತರ ಚರುಹೋಮವು. ಪ್ರಾಣಪ್ರತಿಷ್ಠಾದಿಗಳು. ಹೀಗೆ ಸ್ಥಿರಪ್ರತಿಷ್ಠೆಯ ಅಧಿವಾಸನ ಮತ್ತು ಮಾರನೇದಿನದ ಕಾರ್ಯಗಳಲ್ಲಿ ವಿಶೇಷವು, ಉಳಿದೆಲ್ಲ ವಿಷಯಗಳು ಹಿಂದೆ ಹೇಳಿದ ಮತ್ತು ಮುಂದೆ ಹೇಳುವ ಚಲಪ್ರತಿಷ್ಠೆಯಂತೆಯೇ. ಚಲಪ್ರತಿಷ್ಠೆಯಲ್ಲಿ ಅಧಿವಾಸನಾನಂತರದಲ್ಲಿ ಮಾರನೇದಿನ ಅಥವಾ ಏಕಾಹಪಕ್ಷದಲ್ಲಿ ಸದ್ಯ : (ಆಗಲೇ) ‘ಉತ್ತಿಷ್ಟಬ್ರಹ್ಮಣ’ ಎಂದು ದೇವೋತ್ಥಾನ ಮಾಡಿ ಪುರುಷಸೂಕ್ತ, ಉತ್ತರನಾರಾಯಣ ಮಂತ್ರಗಳಿಂದ ಸ್ತೋತ್ರ ಮಾಡುವದು. ಸ್ಥಿರ-ಚಲ ಪ್ರತಿಷ್ಠೆಗಳ ಸರ್ವ ಸಾಧಾರಣ ಪ್ರಯೋಗ ‘ಪ್ರತಿಷ್ಠಾಂಗ ಪರೇದ್ಯುರ್ಹೋಮಂ ಕರಿಷ್ಯ ಹೀಗೆ ಸಂಕಲ್ಪಿಸಿ ‘ಚಕ್ಷು ಆಕ್ಕೇನ’ ಇತ್ಯಾದಿಗಳಾದ ನಂತರ ’ ಅನ್ನಾಧಾನ’ದಲ್ಲಿ ‘ಸ್ಥಾಪ್ಯದೇವಂತನ್ಮಂತ್ರಣ ಪತಪಕ್ವವೀಹಿಚರುಣಾ ದಶಾಹುತಿಭಿಃ ಅಗ್ನಿಂ ಸೋಮಂ ಧನ್ವಂತರಿಂ ಕುಹೂಮನುಮತಿಂ ಪರಮೇಷ್ಠಿನಂ ಬ್ರಹ್ಮಾಣಮಗ್ನಿಂ ಸೋಮಂ ಅಗ್ನಿ, ಅನ್ನಾದು, ಅಗ್ನಿ ಮನ್ನ ಪತಿಂ, ಪ್ರಜಾಪತಿಂ, ವಿಶ್ವಾನ್‌ವಾನ್, ಸರ್ವಾನ್‌ವಾನ್, ಅಗ್ನಿಂ ಬೃಷ್ಟಕೃತಂ ಪೂಜಾರಿಗಹೋಮ್ ವಿಷ್ಣುಂಶ್ವೇತ್ (ವಿಷ್ಣು ದೇವರಾದರೆ) ಸಂಕರ್ಷಣಾದಿ ದ್ವಾದಶದೇವತಾ: ಶಾರ್ಡ್‌ಣ ೩೬೬ ಧರ್ಮಸಿಂಧು ಶ್ರೀಯಂ, ಸರಸ್ವತೀಂ, ವಿಷ್ಣುಂ, ಕೃಸರೇಣ ಏಕೈಕಯಾಹುತ್ಯಾ ವಿಷ್ಣುಂ ಷಡಾರಂ ಕೃಪರೇಣ(ಶಿವನಾದರೆ) ಭವಂಶರ್ವಂ, ಈಶಾನಂ, ಪಶುಪತಿಂ, ರುದ್ರಂ, ಉಗ್ರಂ, ಭೀಮಂ, ಮಹಾಂತಂ, ಕೃಪರೇಣ ಏಕೈಕಯಾಹುತ್ಯಾ ಭವದೇವಸ್ಯ ಪತ್ನಿಮಿತ್ಯಾದಷ್ಟೂ ಗುಡದನೇನೈಕೈಕಯಾಹುತ್ಯಾ ಭವಸ್ಯ ದೇವಸ್ಯ ಸುತಮಿತ್ಯಾದಿ ಆ ಹರಿದನೇನೈಕೈಕಯಾಹುತ್ಯಾ ರುದ್ರಂ ಸಪ್ತದಶವಾರು ಶಿವಂ ಶಂಕರಂ ಸಹಮಾನಂ ಶಿತಿಕಂಠಂ ಕಪರ್ದಿನು ತಾಮ್ರ ಅರುಣಂ ಅಪಗುರಮಾಣಂ ಹಿರಣ್ಯಬಾಹುಂ ಸಂಜರಂ ಬಳ್ಳುಶಂ ಹಿರಣ್ಯಂ ನಿತಾ: ಕೃಸರೇಣೇಕೈಕಯಾಹುತ್ಯಾ ಶೇಷೇಣ ಸ್ವಿಷ್ಟ ಕೃತಮಿತ್ಯಾದಿ.’ ಮೊರದಲ್ಲಿ ಸ್ಥಾಪ್ಯ ದೇವತೆಯ ಸಲುವಾಗಿ ನಾಲ್ಕು ಮುಷ್ಟಿಗಳನ್ನು ಅಗಾದಿ ಷೋಡಶ ದೇವತೆಗಳಿಗೋಸ್ಕರ ಆಯಾಯ ನಾಮಗಳಿಂದ ನಾಲ್ಕು-ನಾಲ್ಕು ಮುಷ್ಟಿಗಳನ್ನು ನಿರೂಪಣಮಾಡಿ, ಪ್ರೋಕ್ಷಿಸಿ, ನೀರು ಮತ್ತು ತುಪ್ಪಗಳನ್ನು ಮಿಶ್ರಮಾಡಿ ಅದರಿಂದ ಚರುವನ್ನು ಬೇಯಿಸಿ ಸೃಚೆಯಿಂದ ಅವಧಾನಕ್ರಮದಂತೆ ಸ್ಥಾಪಿಸಿ ದೇವಮಂತ್ರದಿಂದ ಹತ್ತಾವರ್ತಿ ಹೋಮಿಸಿ ನಂತರ ನಾಮಗಳಿಂದ ಹೋಮಿಸುವದು. “ಅಗ್ನಯೇಸ್ವಾಹಾ ಸೋಮಾಯ ಧನ್ವಂತರಯೇ ಕು“ಅನುಮ-ಪ್ರಜಾಪತಯೇ ಪರಮೇಷ್ಟಿನೇ ಬ್ರಹ್ಮಣೇ ಅಗ್ನಿಯೇ ಸೋಮಾಯ ಅಗ್ನಿಯನ್ನಾದಾಯ-ಅಗ್ನಿಯನ್ನಪತಯೇ -ಪ್ರಜಾಪತಯೇ ವಿಶ್ವೇದೇವೇಭ್ಯ: ಸರ್ವಭೋ ದೇವೇಭ್ಯ: ಭೂರ್ಭುವಃಸ್ವ: ಅಗ್ನಯೇ ಸ್ವಿಷ್ಟಕೃತೇಸ್ವಾಹಾ’ ಇತ್ಯಾದಿ. “ಸಪ್ತತೇ ಅಗ್ನಿಸಮಿಧ: ಸಪ್ತಜಿಹ್ವಾ: ಸಪ್ತ ಋಷಯ: ಸಪ್ತಧಾಮ ಪ್ರಿಯಾಣಿ ಸಪ್ತ ಹೋತ್ರಾ: ಸಪ್ತಧಾತ್ಪಾಯಜಂತಿ ಸಪ್ರಯೋನೀರಾ ಪ್ರಣಸ್ವಾಫತೇನ! ಪುನಸ್ಸಾದಿತ್ಯಾರುದ್ರಾ ವಸವ: ಸಮಿಂಧಾಂ ಪುನಬ್ರ್ರಹ್ಮಣೆ ವಸುನೀ’ಯನ್ನೇ ಜೊತೇನಂ ತನು ವರ್ಧಯಸ್ಕ ಸತ್ಯಾನಂತು ಯಜಮಾನಸ್ಯಕಾಮಾ’’ ಈ ಎರಡು ಮಂತ್ರಗಳಿಂದ ಪೂರ್ಣಾಹುತಿಯನ್ನು ಮಾಡಿ ಆಚಾರ್ಯನು “ಯಾಓಷಧೀ” ಎಂದು ಪುತ್ರ, ಫಲ, ಸರ್ಪೌಷಧಿಗಳನ್ನು ಸಮರ್ಪಿಸಿ ಸಂಪಾತೋದಕವನ್ನು ತಾಮ್ರಪಾತ್ರದಲ್ಲಿ ತೆಗೆದುಕೊಂಡು ದೇವಮಂತ್ರದಿಂದ ನೂರಾವರ್ತಿ ಅಭಿಮಂತ್ರಿಸಿ ದೇವರ ಶಿರಸ್ಸಿನಲ್ಲಿ ಅಭಿಷೇಕಮಾಡುವದು. ಆಮೇಲೆ “ಉತ್ತಿಷ್ಟ ಎಂದು ದೇವನನ್ನು ಎತ್ತಿಕೊಂಡು “ವಿಶ್ವತಶ್ಚಕ್ಷು ” ಈ ಮಂತ್ರದಿಂದ ಪ್ರಾರ್ಥಿಸುವರು. ಈ ಉತ್ಪಾವನ, ಉಪಸ್ಥಾನಗಳನ್ನು ಚಲಪ್ರತಿಷ್ಠೆಯಲ್ಲಿ ಮಾತ್ರ ಮಾಡುವದು. ನಂತರ ದೇವನನ್ನು ಧ್ಯಾನಿಸಿ “ಬ್ರಹ್ಮಣೇ ನಮಃ, ವಿಷ್ಣವೇ ನಮಃ, ರುದ್ರಾಯ ನಮಃ, ಇಂದ್ರಾದೃಷ್ಟ ವಸು-ರುದ್ರೇ ಆದಿತೈಸ್ಕೋ-ಅಭ್ಯಾಂ ಮರುದ್ಯೋ ಕುಬೇರಾಯ-ಗಂಗಾವಿ ಮಹಾನವೀಯ್ಯೋ ಅಗ್ನಿಷ್‌ಮಾಭ್ಯಾಂ-ಇಂದ್ರಾಗ್ನಿಲ್ಯಾ-ಮರು ದ್ಯಾವಾ ಪೃಥಿವೀಜ್ಞಾಂ ಧನ್ವಂತರಯೇ ಸರ್ವಶಾಯ-ವಿಶ್ವ ದೇವೇಭೋ ಬ್ರಹ್ಮಣೇನಮ:” ಹೀಗೆ ಪರಿಸುವದು. ಆಮೇಲೆ ಸಂಪಾತೋದಕದಿಂದ ಯಜಮಾನನ ಅಭಿಷೇಕವು ದೇವಧ್ಯಾನ ಮಾಡಿ “ಪ್ರತಿತಿಪ್ಪ ಪರಮೇಶ್ವರ” ಎಂದು ಪುಷ್ಪಾಂಜಲಿಯನ್ನು ಅರ್ಪಿಸುವರು. ಈ ದೇವನೆಂದರೆ ಸಾಕ್ಷಾತ್ ಸಚ್ಚಿದಾನಂದ ಸ್ವರೂಪನು, ಭಕ್ತರ ಅನುಗ್ರಹಕ್ಕಾಗಿ ದೇಹರೂಪವನ್ನು ಧರಿಸಿ ತನ್ನ ಆಯುಧಗಳನ್ನು ಧರಿಸಿ ಸ್ವಕೀಯ ವಾಹನಾದಿಗಳಿಂದ ಯುಕ್ತನಾಗಿರುವನು. ತನ್ನ ಹೃದಯಕಮಲದಲ್ಲಿ ವಾಸಿಸುವನು. ಸಕಲಲೋಕ ಸಾಕ್ಷಿಯಾಗಿರುವನು ಮತ್ತು ಅತ್ಯಂತ ಸೂಕ್ಷ್ಮವಾಗಿರುವನು ಎಂಬ ಭಾವನೆಯಿಂದ “ಪರಮೇಸಿ ಪರಮಾ ಶ್ರೀಯಂಗಮಯ” ಈ ಮಂತ್ರದಿಂದ ಪುಷ್ಪಾಂಜಲಿಯಲ್ಲಿ ಬಂದನು’ ಎಂದು 26 ಪರಿಚ್ಛೇದ - ೩ ಪೂರ್ವಾರ್ಧ ಭಾವಿಸಿ ಮೂರ್ತಿಯಲ್ಲಿಟ್ಟು ಪ್ರಾಣಪ್ರತಿಷ್ಠೆಯನ್ನು ಮಾಡತಕ್ಕದ್ದು. ೩೬೭ ಯಾಂ “ಅಸ್ಯ ಶ್ರೀ ಪ್ರಾಣಪ್ರತಿಷ್ಠಾ ಮಂತ್ರ ಬ್ರಹ್ಮವಿಷ್ಣು ರುದ್ರಾ ಋಷಯ: ಋಗ್ಯಜು: ಸಾಮಾನಿ ಛಂದಾಂಸಿ ಕ್ರಿಯಾಮಯವಪುಃ ಪ್ರಾಣಾಖ್ಯಾ ದೇವತಾಃ ಆಂ ಬೀಜಂ ಕೊಂ ಶಕ್ತಿ: ಪ್ರಾಣಪ್ರತಿಷ್ಠಾ ವಿನಿಯೋಗ:. ಬ್ರಹ್ಮ ವಿಷ್ಣು ರುದ್ರ ಋಷಿಭೋನಮಃ ಶಿರಸಿ ಋಗ್ಯಜುಸಾಮಾನಿ ಛಂಭೋನಮಃ ಮುಖೇ ಪ್ರಾಣಾಖ್ಯದೇವತಾಯ್ಕಹೃದಿ ಅಂ ಬೀಜಾಯನಮ: ಗುಂ ಶಕ್ತನಮಃ ಪಾದಯೋ ಓಂ ಕಂ ಖಂ ಗಂ ಘಂ ಜಂ |ಅಂ ಪೃಥಿವ್ಯಪ್ರೇಜೋ ವಾಯ್ಯಾಕಾಶಾತ್ಮನೇ ಆಂ ಹೃದಯಾಯನಮಃ ಓಂ ಚಂ ಛಂ ಜಂ ಝಂ 7೦ ಶಬ್ದ ಸ್ಪರ್ಶರೂಪರಸಗಂಧಾತ್ಮನೇ ಈಂ ಶಿರಸೇ ಸ್ವಾಹಾ, ಓಂ ಟಂ ಠಂ ಡಂ ಢಂ ಣಂl ಉಂ ಸ್ತೋತ್ರತ್ವಕ್ ಚಕ್ಕು: ಜಿಹ್ವಾಘ್ರಾಣಾತ್ಮನೇ, ಊಂ ಶಿಖಾಯ್ಕೆ ವಷಟ್ ಓಂ ತಂ ಥಂ ದಂ ಧಂ ನಂ ಏ ವಾಕ್ಕಾಣಿ ಪಾದ ಪಾಯೂಪಸ್ಥ ಆತ್ಮನೇ ಐಂ ಕವಚಾಯ ಹುಂ ಓಂ ಪಂ ಪಂ ಬಂ ಭಂ ಮಂ ಓಂ ವಚನಾದಾನ ವಿಹರಣೋತ್ಸರ್ಗ ಆನಂದಾತ್ಮನೇ ಔಂ ನೇತ್ರತ್ರಯಾಯ ವೌಷಟ್ ಓಂ ಯಂ ರಂ ಲಂ ವಂ ಶಂ ಸಂ ಸಂ ಹಂ ಳಂ ಕಂ ಅಂ ಮನೋ ಬುರಹಂಕಾರಚಿತ್ತಾತ್ಮನೇನಮ: ಅಸ್ರಾಯ ಘಟ್” ಹೀಗೆ ತನ್ನಲ್ಲಿಯೂ ದೇವನಲ್ಲಿಯೂ ಪ್ರಾಣಪ್ರತಿಷ್ಠೆ ಮಾಡಿ ದೇವನನ್ನು ಸ್ಪರ್ಶಮಾಡಿ ಜಪಿಸುವದು. “ಓಂ ಆಂ ಶ್ರೀಂ ಂ ಯಂ ರಂ ಲಂ ವಂ ಶಂ ಪಂ ಪಂ ಹಂ ಸಃ ದೇವಸ್ಯ ಪ್ರಾಣಾ: ಇಹ ಪ್ರಾಣಾಃ ಆಂ ಹೀಂ ಹಂಸ: ದೇವಜೀವ ಇಹಸ್ಥಿತಃ ಓಂ ಆಂ ಪ್ರೀಂ=ಹಂಸ: ದೇವಸ್ಯವಾನರು: ಶೂಜಾ ಫ್ರಾಣ ಪ್ರಾಣಾ ಇಹಾಗತೃಸ್ವಸ್ತಯೇ ಸುಖೇನ ಸುಚಿರಂತಿಂತು ಸ್ವಾಹಾ” ಹೀಗೆ ಪ್ರತಿಮೆಯ ಹೃದಯದಲ್ಲಿ ಅಂಗುಷ್ಠವನ್ನಿಟ್ಟು ಜಪಿಸತಕ್ಕದ್ದು. ಅಪ್ರಾಣಾಕ್ಷರಂತು ಚಲದೇವತ್ಯ ಮರ್ಚಾಯ್ಯ ಮಾಮಹೇತಿಚಕಚ್ಚನ ಹೀಗೆ ಪಠಿಸಿ ಓಂಕಾರದಿಂದ ಸಂಶೋಧಮಾಡಿ ಸಜೀವವನ್ನಾಗಿ ಧ್ಯಾನಿಸಿ ಧೃವಾದ್ಯ” ಎಂದು ಮಂತ್ರವನ್ನು ಪಠಿಸಿ ಕಿವಿಯಲ್ಲಿ ಗಾಯತ್ರಿಯನ್ನೂ ದೇವಮಂತ್ರವನ್ನೂ ಜಪಿಸುವದು. ನಂತರ ಪುರುಷಸೂಕ್ತದಿಂದ ಸ್ತುತಿಸುವದು. ಪಾದ, ನಾಭಿ, ಶಿರಸ್ಸುಗಳನ್ನು ಸ್ಪರ್ಶಿಸಿ “ಇವೇಧೀ” ಎಂದು ಮೂರಾವರ್ತಿ ಪಠಿಸುವದು. ಆಮೇಲೆ ಕರ್ತನು, “ಸ್ವಾಗತಂ ದೇವದೇವೇಶ ಮದ್ಯಾಗ್ಯಾತ್ಯಮಿಹಾಗತಃಪ್ರಾಕೃತಂ ತ್ವಮದೃಪ್ಪಾ, ಮಾಂ ಬಾಲವತ್ಪರಿಪಾಲಯ ಧರ್ಮಾರ್ಥಕಾಮಸಿಧ್ಯರ್ಥಂ ಸ್ಥಿರೋಭವ ಶಿವಾಯನಮರ ಸಾನ್ನಿಧ್ಯತ ಸದಾದೇವಸ್ವಾರ್ಚಾಯಾಂ ಪರಿಕಲ್ಪಯ! ಯಾವಚ್ಚಂದ್ರಾಮನೀರ್ಯಾ ತಿಷ್ಕಂತೈ ಪ್ರತಿಘಾತಿದು, ತಾವಯಾತ್ರ ದೇವೇಶ ತ್ವಂ ಪಿತಾ ಸರ್ವದೇಹಿನಾಂಗಿಯೇನರೂಪೇಣ ಭಗವನ್ ತ್ವಯಾವ್ಯಾಪ್ತಂ ಚರಾಚರಂ |ತೇನರೂಪೇಣ ದೇವೇಶ ಸ್ವಾರ್ಚಾಯಾಂ ಸನ್ನಿಧಭವ” ಹೀಗೆ ನಮಸ್ಕರಿಸುವದು. ನಂತರ ಆಚಾರ್ಯ ಅಥವಾ ಕರ್ತನು ಲಿಂಗ ಅಥವಾ ಪ್ರತಿಮೆಯನ್ನು ಓಂ ಭೂ ಪುರುಷಮಾವಾಹಯಾಮಿ, ಓಂ ಭುವಃ-ಓಂ ಸುವಃ=ಓಂ ಭೂರ್ಭುವಃಸ್ಟ: ಹೀಗೆ ಆವಾಹನ ಮಾಡಿ ಓಂಕಾರದಿಂದ ಆಸನವನ್ನು ಕೊಟ್ಟು ದೂರ್ವಾ ಶಾಮಲಕ್ಕಿ, ವಿಷ್ಣುಕ್ರಾಂತ, ಕಮಲ ಇವುಗಳಿಂದ ಮಿಶ್ರಿತವಾದ ಜಲದಿಂದ ಪಾದ್ಯವನ್ನು ಕೊಡುವದು. ‘ಓಂ ಇಮಾ ಆಪಃ ಶಿವತಮಾ ಪೂತಾ: ಪೂತತಮಾ ಮೇಧ್ಯಾ: ಮೇಧೃತಮಾಃ ಅಮೃತಾ ಅಮೃತರಸಾ: ಪಾರಾಸ್ತಾ ಜುಷಾಂ ಪ್ರತಿಗೃಹ್ಯತಾಂ ಪ್ರತಿಕೃಷ್ಣಾತು ಭಗವಾನ್ ಮಹಾವಿಷ್ಣು: ವಿಷ್ಣವೇನಮಃ’ ಎಂದು ಪಾದ್ಯವನ್ನು ಕೊಡುವದು. ೩೬೮ ಧರ್ಮಸಿಂಧು ಲಿಂಗದಲ್ಲಾದರೆ ‘ಭಗವಾನ್ ಮಹಾದೇವೋ ರುದ್ರಾಯ ನಮಃ’ ಇತ್ಯಾದಿ ಆಯಾಯ ದೇವತೆಗಳಿಗೆ ಸರಿಯಾಗಿ ಹೇಳತಕ್ಕದ್ದು. “ಇಮಾ ಆಪಃ ಶಿವ ಆಚಮನೀಯಾಸ್ತಾ ಜುಷತಾಂ ಪ್ರತಿಗೃಹ್ಯತಾಂ-ಇಮಾ ಆರ್ಪಆ್ರಸ್ತಾ’ ಹೀಗೆ ರ್ಆವು. ಮುಂದೆ ಪಂಚಾಮೃತಸ್ನಾನ, ದೇವಮಂತ್ರಗಳಿಂದ ಅಭಿಷೇಕ ಮಾಡುವದು. ವಿಷ್ಣುವಿನಲ್ಲಿ “ಇದಂ ವಿಷ್ಣು"ಶಿವನಲ್ಲಿ ‘ನಮೋ ಅಸ್ತು ನೀಲಗ್ರೀವಾಯ” ಹೀಗೆ ಹೇಳಿ ಕಂಕಣವನ್ನು ಬಿಡಿಸಿ ವಸ್ತ್ರ, ಮತ್ತು ಯಜ್ಞಪವೀತವನ್ನು ಅರ್ಪಿಸಿ “ಇಮೇ ಗಂಧಾಃ ಶುಭಾ ದಿವ್ಯಾ: ಸರ್ವಗಂಧೈರಲಂಕೃತಾಃ ಪೂತಾ ಬ್ರಹ್ಮ ಪವಿತ್ರಣ ಪೂತಾಃ ಸೂರಸ್ಯ ರಶ್ಮಿಭಿ” ಹೀಗೆ ಹೇಳಿ ಗಂಧವನ್ನೂ “ಇಮೇ ಮಾಲ್ಯಾ: ಶುಭಾ ದಿವ್ಯಾ ಸರ್ವ ಮಾರಲಂಕೃತಾ’ಪೂತಾ” ಇತ್ಯಾದಿಯಿಂದ ಮಾಲೆಯನ್ನೂ, “ಇಮೇಪುಷ್ಪಾ” ಎಂದು ಪುಷ್ಪಗಳನ್ನೂ ಅರ್ಪಿಸುವದು. “ವನಸ್ಪತಿರಸೋಧೂಪೋ=ಧೂಪೋಯಂ ಪ್ರತಿಗೃಹ್ಯತಾಂ” ‘ಪ್ರತಿಗೃಹಾತು ಭಗವಾನ್’ ಎಂದು ಧೂಪವನ್ನೂ, “ಜ್ಯೋತಿಃಶುಕ್ರಂ ಚ ತೇಜಶ್ಚ ದೇವಾನಾಂ ಸತತಂ ಪ್ರಿಯಂ ಭಾಸ್ಕರ: ಸರ್ವಭೂತಾನಾಂ ದೀಪೋಯಂ ಪ್ರತಿಗೃಹ್ಯತಾಂ’ ‘ಪ್ರತಿಗೃಹಾತು ಭಗವಾನ್’ ಎಂದು ದೀಪವನ್ನೂ ತೋರಿಸುವದು. ವಿಷ್ಣುವಿನಲ್ಲಿ ಸಂಕರ್ಷಣಾದಿ ಹನ್ನೆರಡು ನಾಮಗಳಿಂದ ಪುಷ್ಪಗಳನ್ನರ್ಪಿಸಿ, ಆ ನಾಮಗಳಿಂದಲೇ ತರ್ಪಣವನ್ನು ಮಾಡಿ ಪಾಯಸ, ಗುಡಾನ್ನ, ಚಿತ್ರಾನ್ನಗಳನ್ನು “ಪವಿತ್ರಂತೇ ಎಂದು ನಿವೇದಿಸಿ ಸಂಕರ್ಷಣಾದಿ ನಾಮಗಳಿಂದ ಹನ್ನೆರಡು ಗೃಹಸಿದ್ದಾನ್ನ (ಕೃಸರಾನ್ನಗಳಿಂದ) ಆಹುತಿಗಳನ್ನು ಹಾಕಿ ಕೃಸರದಿಂದಲೇ “ಶಾರ್ಜ್‌ಣೇ, ಶಿಯ್ಯ, ಸರಸ್ವತೆ, ವಿಷ್ಣವೇ” ಎಂದು ಹೋಮಿಸಿ “ಓಂ ಏಷ್ಟೋರ್ನುಕಂ ತದಸ್ಕಪ್ರಿಯಓಂ ಪ್ರತಿದ್ವಿಷ್ಟು ಪರೋಮಾತ್ರಯಾ-ಓಂ ವಿಚಕ್ರಮ-ಓಂ ತ್ರಿರ್ದವಪೃಥಿವೀಂ” ಎಂಬ ಆರು ಮಂತ್ರಗಳಿಂದ ಹೋಮಿಸುವದು. ಲಿಂಗದಲ್ಲಾದರೆ ದೀಪಾಂತ ಪೂಜೆಮಾಡಿ, “ಭವಾಯ ದೇವಾಯ, ಶರ್ವಾಯ ದೇವಾಯ, ಈಶಾನಾಯ ದೇವಾಯ, ಪಶುಪತಯೇ ದೇವಾಯ, ರುದ್ರಾಯ ದೇವಾಯ, ಉಗ್ರಾಯ ದೇವಾಯ, ಭೀಮಾಯ ದೇವಾಯ, ಮಹತೇ ದೇವಾಯ ನಮ:” ಎಂದು ಪುಷ್ಪಗಳನ್ನರ್ಪಿಸಿ ಆ ನಾಮಗಳಿಂದಲೇ ತರ್ಪಣವನ್ನು ಮಾಡಿ ಎಂದು ಪಾಯಸ, ಬೆಲ್ಲದ ಅನ್ನಗಳನ್ನು ನಿವೇದಿಸಿ, ‘ಭವಾಯ ದೇವಾಯಸ್ವಾಹಾ’ ಇತ್ಯಾದಿ ಪವಿತ್ರಂತೇ” ಎಂಟು ನಾಮಗಳಿಂದ ಗುದನ್ನವನ್ನು ಹೋಮಿಸಿ ಭವಸ್ಮ ದೇವಸ್ಯ ಸುತಾಯ ಇತ್ಯಾದಿ ಎಂಟು ಅರಿಶಿನ ಅನ್ನವನ್ನು ಹೋಮಿಸಿ “ಓಂ ತ್ರ್ಯಂಬಕಂ ಮಾನೋಮಹಾಂತ, ಓಂ ಮಾನಕೇ ಓಂ ಆರಾ ಓ೦ ಏರಿದ, ಓಂ ಸಹಸ್ರಾಣಿ ಸಹಪ್ರಧಾ” ಇತ್ಯಾದಿ ಹನ್ನೆರಡು ಮಂತ್ರಗಳಿಂದ ಕೃಸರಾನ್ನವನ್ನು ಹೋಮಿಸಿ, ಶಿವಾಯ ಶಂಕರಾಯ-ಸಹಮಾನಾಯ-ಶಿತಿಕಂಠಾಯ-ಕಪರ್ದಿನೇ-ತಾಪ್ರಾಯ-ಅರುಣಾಯ (1 ಅಪಗುರಮಾಣಾಯ-ಓರಬಾಹವೇ-ಸಸ್ಸಿಂದರಾಯ-ಬಭುಶಾಯ-ಓರಾಯ” ಹೀಗೆ ಹನ್ನೆರಡು ನಾಮಗಳಿಂದ ಹರಿದ್ರಾನ್ನವನ್ನು ಹೋಮಿಸತಕ್ಕದ್ದು, ನಂತರ ಷ್ಟಕೃದಾದಿ ಹೋಮಶೇಷವನ್ನು ಮುಗಿಸಿ ಎಷ್ಟು ಅಥವಾ ಲಿಂಗಕ್ಕೆ ಪೂರ್ವೋಕ್ತ ಎಲ್ಲ ಹವಿಸ್ಸುಗಳಿಂದ ಬಲಿಯನ್ನು ಕೊಡತಕ್ಕದ್ದು. ಬಲಿಮಂತ್ರಗಳು “ತಾನಕ ಮಾಡ್ಕಂ ಪುರುಷಂ ಪುರಾತನಂ ನಾರಾಯಣಂ ವಿಶ್ವ ಸ್ಪಜಂ ಯಜಾಮಹೇಮೇದಯ ವಿಹಿತೋ ವಿಧೇಯ: ತ್ವಮಾತ್ಮನಾತ್ಮನ್ ಪ್ರತಿಕೃಷ್ಟಿಷ್ಟಪ” ಇದು ವಿಷ್ಣುವಿಗ, ಲಿಂಗದಾದರೆ “ನಾರಾಯಣ” ಈ ಸ್ನಾನದಲ್ಲಿ “ರುದ್ರಂ ಶಿವ” ಎಂದು ಹೇಳುವದು. ಅಶ್ವತದ ಎಲೆಯಲ್ಲಿ ಹುತ‌ಷವನ್ನಿಡುವರು. ನಂತರ ಪ್ರದಕ್ಷಿಣ ಮಾಡಿ “ವಿಶ್ವಭುಜೇನಮಃಪರಿಚ್ಛೇದ - ೩ ಪೂರ್ವಾರ್ಧ ೩೬೯ ಸರ್ವಭುಜೇ ಆತ್ಮನೇ ನಮ:” ಹೀಗೆ ಹೇಳಿ ನಮಸ್ಕರಿಸಿ ಆಚಾರ್ಯನಿಗೆ ಹನ್ನೆರಡು ಅಥವಾ ಮೂರು ಇಲ್ಲವೆ ಒಂದನ್ನಾದರೂ ಗೋವನ್ನು ಕೊಟ್ಟು ಋತ್ವಿಜರಿಗೆ ದಕ್ಷಿಣೆಯನ್ನು ಕೊಟ್ಟು, ನೂರು ಅಥವಾ ಹತ್ತು ಬ್ರಾಹ್ಮಣ ಸಂತರ್ಪಣೆ ಮಾಡತಕ್ಕದ್ದು, ನೂತನ ಪ್ರಸಾದದಲ್ಲಿ ಜಲಾಶಯೋಕ್ತ ಪ್ರತಿಷ್ಠಾವಿಧಿಯನ್ನು ಮಾಡತಕ್ಕದ್ದು. “ಗೋರುತ್ತಾರಣ-ಪಾತ್ರಿ-ಪ್ರಕ್ಷೇಪ(ಗೋವಿನಿಂದ ಕೆರೆ ಮೊದಲಾದವುಗಳನ್ನು ದಾಟಿಸುವದು. ಮತ್ತು ಹವನ ಪಾತ್ರಾದಿಗಳನ್ನು ನೀರಿನಲ್ಲಿ ಚೆಲ್ಲುವದು. ಇವೆರಡನ್ನು ‘ಜಲೋತೃರ್ಗ’ದಲ್ಲಿ ಹೇಳಿದೆ. ಇವುಗಳನ್ನು ಬಿಟ್ಟು ಉಳಿದ ವಿಧಾನವನ್ನು ಮಾಡತಕ್ಕದ್ದು. ಜಲೋತ್ಸರ್ಗದಲ್ಲಿ “ವಾರುಣಹೋಮ"ವಿದೆ. ಇಲ್ಲಿ “ವಾಸ್ತು ಹೋಮ”, ಇಷ್ಟೇ ಭೇದ. ಹೀಗೆ ಸ್ಥಿರ-ಚರ ಮೂರ್ತಿ ಪ್ರತಿಷ್ಠಾಪ್ರಯೋಗವು. ಇನ್ನೂ ಸಂಕ್ಷಿಪ್ತವಾದ ಏಕಾಧ್ವರ ವಿಧಾನ ಸಂಕ್ಷಿಪ್ತ ಚಲಪ್ರತಿಷ್ಠೆಯಲ್ಲಿ ಸಂಕಲ್ಪ, ನಾಂದೀಶ್ರಾದ್ಧಾಂತವಾಗಿ ಹಿಂದೆ ಹೇಳಿದಂತೆ ಮಾಡುವದು. ಒಬ್ಬ ಆಚಾರ್ಯನನ್ನು ವರಿಸುವದು. ಆಚಾರ್ಯನು “ಅಮುಕದೇವತಾ ಪ್ರತಿಷ್ಠಾಕರ್ಮ ಕರಿಷ್ಮ” ಹೀಗೆ ಸಂಕಲ್ಪಿಸಿ ಸರ್ಷದ ವಿಕಿರಣ ಮಾಡಿ ಸರ್ವತೋಭದ್ರ ಮಂಡಲದಲ್ಲಿ ಹಿಂದೆ ಹೇಳಿದಂತೆ ನಾಮಗಳಿಂದ ಬ್ರಹ್ಮಾದಿದೇವತೆಗಳನ್ನಾವಾಹಿಸಿ ಪೂಜಿಸತಕ್ಕದ್ದು. ಸ್ವಶಾಖೋಕ್ತವಿಧಿಯಿಂದ ಅಗ್ನಿಪ್ರತಿಷ್ಠೆ ಮಾಡಿ ಅನ್ನಾಧಾನ ಮಾಡುವದು “ಆಜ್ಯಭಾಗಾಂತ ಸ್ಟಾಪ್ಯದೇವತಾಂ ಸಹಸ್ರಮಷ್ಟೋತ್ತರಶತಂ ವಾ ಸಮಿದಾಜ್ಯಚರು ತಿಲದ್ರವ್ಯ: ಬ್ರಹ್ಮಾದಿಮಂಡಲದೇಮಾ: ಪ್ರತ್ಯೇಕಂ ದಶ ದಶ ತಿಲಾಜ್ಯಾಹುತಿಭಿಃಶೇಷೇಣ” ಇತ್ಯಾದಿ ನಿರ್ಮಾಪ-ಪ್ರೋಕ್ಷಣಗಳನ್ನು ಅಮಂತ್ರಕವಾಗಿ ಮಾಡತಕ್ಕದ್ದು. ತಡಾಗ, ನದೀತೀರ, ಗೋಷ್ಠ, ನಾಲ್ಕು ಹಾದಿ ಕೂಡಿದ ಸ್ಥಲ, ಪರ್ವತ, ಆನೆ ಕುದುರೆಗಳಿರುವ ಸ್ಥಳ, ಹೊಂಡ, ವಕ, ನದೀಸಂಗಮ ಹೀಗೆ ಹತ್ತು ಸ್ಥಾನದ ಮಣ್ಣಿನಿಂದ (ದಶಮೃತ್ತಿಕೆ) ಎಂಟಾವರ್ತಿ ದೇವನಿಗೆ ಲೇಪಿಸಿ ಪಂಚಗವ್ಯದಿಂದ ಕ್ರಮೇಣ (ಗೋಮೂತ್ರ, ಗೋಮಯ ಇತ್ಯಾದಿ) ಸ್ನಾನಮಾಡಿಸಿ ದೂರ್ವಾ, ಸಾಸಿವೆ, ಪಲ್ಲವಗಳಿಂದ ಯುಕ್ತಗಳಾದ ಎಂಟು ಕಲಶಜಲವನ್ನು “ಆಪೋಹಿಷ್ಠ” ಮಂತ್ರದಿಂದ ಅಭಿಷೇಕಮಾಡಿ ಅನ್ನುತ್ತಾರಣ” ಮಾಡತಕ್ಕದ್ದು. ಸರ್ವತೋಭದ್ರ ಮಂಡಲದಲ್ಲಿ ಪೀಠಸಹಿತ ದೇವರನ್ನಿಟ್ಟು ನಾಮಮಂತ್ರದಿಂದ ವಸ್ತ್ರ, ಗಂಧ, ಧೂಪ, ದೀಪಾದಿಗಳನ್ನು ಕೊಟ್ಟು ಎಂಟು ದಿಕ್ಕುಗಳಲ್ಲಿ ಪಲ್ಲವಾದಿಯುಕ್ತಗಳಾದ ಕಲಶಗಳನ್ನೂ, ಎಂಟು ದೀಪಗಳನ್ನೂ ಇಟ್ಟು ಹಿಂದೆ ಹೇಳಿದಂತೆ “ನೇತ್ರೋಲನ ಮಾಡತಕ್ಕದ್ದು. ಚಿತ್ರಾನ್ನದಿಂದ ಬಲಿಯನ್ನು ಕೊಟ್ಟು ಪುರುಷಸೂಕ್ತದಿಂದ ಸ್ತುತಿಸಿ ಹೇಳಿದ ನಾಲ್ಕು ದ್ರವ್ಯಗಳನ್ನು ಸ್ಟಾಪ್ಯದೇವತಾ ಮಂತ್ರದಿಂದ ಹೋಮಿಸಿ ಒಂದೊಂದು ದ್ರವ್ಯ ಹೋಮಾನಂತರ ದೇವರನ್ನು ಸ್ಪರ್ಶಿಸುವದು. ಆಹೋಮ ಮಾಡುವಾಗ ಕುಂಭದಲ್ಲಿ ಸಂಪಾತಗಳನ್ನು ಚೆಲ್ಲುವದು. ಮಂಡಲದೇವತಾ ಹೋಮಮಾಡಿ ಹೋಮಶೇಷವನ್ನು ಮುಗಿಸಿ ಪೂರ್ಣಾಹುತಿಯನ್ನು ಹೋಮಿಸುವದು. ನಂತರ ಪೂರ್ವೋಕ್ತರೀತಿಯಂತೆ ಸೂಕ್ತನ್ಯಾಸ ಆವಾಹನ ಪ್ರಾಣಪ್ರತಿಷ್ಠೆಯ ವರೆಗೆ ಮಾಡಿ “ಇವೇಧಿ” ಎಂಬ ಮಂತ್ರವನ್ನೂ ಪುರುಷಸೂಕ್ತವನ್ನೂ ಪಠಿಸಿ ೩೭೦ ಧರ್ಮಸಿಂಧು ಮೂಲಮಂತ್ರಾದಿಗಳಿಂದ “ಇಮಾ ಆಪಃ ಶಿವತಮಾ " ಇತ್ಯಾದಿಗಳಿಂದ ಅಭಿಷೇಕ ಮಾಡುವದು. ನಂತರ ವಸ್ತ್ರಾದಿನೈವೇದ್ಯಾಂತಮಾಡಿ ತಾಂಬೂಲ, ಫಲ, ದಕ್ಷಿಣಾ, ನೀರಾಜನ, ನಮಸ್ಕಾರ, ಪ್ರದಕ್ಷಿಣಾದಿಗಳನ್ನು ಮಾಡಿ ಪುಷ್ಪಾಂಜಲಿಯನ್ನು ಸಮರ್ಪಿಸಿದ ನಂತರ ಆಚಾರ್ಯ ಸಹಿತನಾದ ಯಜಮಾನನು ದೇವನನ್ನು ನಮಸ್ಕರಿಸಿ ಕ್ಷಮೆಯನ್ನು ಯಾಚಿಸಿ ಆಚಾರ್ಯ ದಕ್ಷಿಣಾದಾನಾನಂತರ ಆ ಎಂಟು ಕಲಶೋದಕಗಳಿಂದ ಯಜಮಾನನಿಗೆ ಅಭಿಷೇಕ ಮಾಡುವದು. ವಿಷ್ಣು ಸ್ಮರಣ, ಕರ್ಮೇಶ್ವರ ಸಮರ್ಪಣ ಮಾಡಿ ಮುಗಿಸುವದು. ಪುನಃ ಪ್ರತಿಷ್ಠೆ ಕಾರಣಗಳು ಪ್ರತಿಮಗೆ ಮದ್ಯ, ಚಾಂಡಾಲಾದಿಗಳ ಸ್ಪರ್ಶವಾದರೆ, ಅಗ್ನಿಯಿಂದ ದಗ್ಧವಾದರೆ, ಬ್ರಾಹ್ಮಣರ ರಕ್ತದಿಂದ ದೂಷಿತವಾದರೆ, ಶವ, ಪಾಪಿಷ್ಠ ಇವರ ಸ್ಪರ್ಶವಾದರೆ, ಆಗ ಪುನಃ ಪ್ರತಿಷ್ಠೆಯ ಸಂಸ್ಕಾರವಾಗಬೇಕು, ಕಡಿಯಲ್ಪಟ್ಟರೆ, ಒಡೆದು ಹೋದರೆ ಅಥವಾ ಸ್ನಾನಭ್ರಂಶವಾದರೆ, ಪೂಜೆಯು ಇಲ್ಲದಿದ್ದರೆ, ಕುದುರೆ, ಕತ್ತೆ ಮೊದಲಾದವುಗಳ ಸ್ಪರ್ಶವಾದರೆ, ಪತಿತ, ರಜಸ್ವಲೆ, ಚೋರ ಇವರ ಸ್ಪರ್ಶವಾದರೆ ಪುನಃ ಪ್ರತಿಷ್ಠೆಯಾಗಬೇಕು. ತುಂಡಾದ ಅಥವಾ ಮುರಿದಿರುವ ಪ್ರತಿಮೆಯನ್ನು ತೆಗೆದು ಬೇರೆ ಪ್ರತಿಮೆಯನ್ನು ಸ್ಥಾಪಿಸಬೇಕು. ಮೂರ್ತಿಭಂಗವಾದರೆ ಅಥವಾ ಚೋರರಿಂದ ಅಪಹರಿಸಲ್ಪಟ್ಟರೆ ಆ ದಿನ ಉಪವಾಸವಿರಬೇಕು. ತಾಮ್ರ ಮೊದಲಾದ ಧಾತುಮಯ ಮೂರ್ತಿಗಳನ್ನು ಚೋರ ಚಾಂಡಾಲಾದಿಗಳು ಮುಟ್ಟಿದರೆ ತಾಮ್ರಾದಿಗಳಿಗೆ ಹೇಳಿದ ಶುದ್ದಿಯನ್ನು ಮಾಡಿ ಪುನಃ ಅದನ್ನೇ ಸ್ಥಾಪಿಸಬಹುದು. ಮೊದಲು ಪ್ರತಿಷ್ಠೆಯಾದ ಮೂರ್ತಿಗೆ ಬುದ್ದಿಪೂರ್ವಕವಲ್ಲದೆ ಒಂದುರಾತ್ರಿ ಅಥವಾ ಒಂದು ತಿಂಗಳು ಅಥವಾ ಎರಡು ತಿಂಗಳು ಪೂಜೆ ನಡೆಯದಿದ್ದಲ್ಲಿ ಅಥವಾ ಶೂದ್ರ, ರಜಸ್ವಲಾದಿಗಳ ಸ್ಪರ್ಶವಾದಲ್ಲಿ ಜಲಾಧಿವಾಸಮಾಡಿ ಕಲಶಾಭಿಷೇಕ ಮಾಡಬೇಕು. ನಂತರ ಪಂಚಗವ್ಯದಿಂದ ಸ್ನಾನ ಮಾಡಿಸಿ ಅಷ್ಟೋತ್ತರ ಸಹಸ್ರ ಅಥವಾ ಅಷ್ಟೋತ್ತರಶತ ಇಲ್ಲವೆ ಇಪ್ಪತ್ತೆಂಟು ಕುಂಭಗಳಿಂದ, ಪುರುಷಸೂಕ್ತದಿಂದ ಶುದ್ಧೋದಕಸ್ನಾನ ಮಾಡಿಸುವದು. ಗಂಧ, ಪುಷ್ಪಾದಿಗಳಿಂದ ಪೂಜಿಸಿ ಬೆಲ್ಲದ ಅನ್ನವನ್ನು ನೈವೇದ್ಯಮಾಡುವದು. ಹೀಗೆ ಶುದ್ರಿಕ್ರಮವು. ಬುದ್ದಿಪೂರ್ವಕವಾಗಿ ಪೂಜೆಯನ್ನು ನಿಲ್ಲಿಸಿದ್ದರೆ ಮತ್ತು ಅದಕ್ಕೆ ಶೂದ್ರಾದಿ ಸ್ಪರ್ಶವಾದರೆ ಪುನಃ ಪ್ರತಿಷ್ಠೆಯಿಂದಲೇ ಶುದ್ದಿಯು, ಬೇರೆ ಗ್ರಂಥಕಾರರು- ಒಂದು ದಿನ ಪೂಜೆಯಿಲ್ಲವಾದರೆ ಎರಡುಪಟ್ಟು ಪೂಜೆಮಾಡಬೇಕು. ಎರಡುರಾತ್ರಿ ವಿಚ್ಛೇದವಾದರೆ ಮಹಾಪೂಜೆಯನ್ನು ಮಾಡಬೇಕು ಅದಕ್ಕೂ ಹೆಚ್ಚಾದರೆ “ಸಂಪ್ರೋಕ್ಷಣ” ಮಾಡಬೇಕನ್ನುವರು ಮತ್ತು ತಿಂಗಳಿಗೂ ಹೆಚ್ಚಾಗಿ ಪೂಜಾವಿವೃತ್ತಿಯಾದರೆ ಪುನಃ ಪ್ರತಿಷ್ಠೆ ಅಥವಾ ಸಂಪ್ರೋಕ್ಷಣವಾಗತಕ್ಕದ್ದು. ಹೀಗೂ ಹೇಳುವರು. ಪುನಃ ಪ್ರತಿಷ್ಠಾದಿಗಳನ್ನು ಗುರು- ಶುಕ್ರಾಸ್ತಾದಿಗಳಲ್ಲಾದರೂ ಮಾಡಬಹುದು. ದೇವಾಲಯ, ಕೆರೆ, ಬಾವಿ, ಉದ್ಯಾನ, ಒಟ್ಟು, ಸಭಾ ಇವು ಒಡೆದರೆ ಇದುಎಷ್ಟು ಮಾನಕೇ-ವಿಷ್ಯ ಕರ್ಮಾಣಿ-ಪಾದೋಸ್ಯ” ಹೀಗೆ ನಾಲ್ಕು ಆಹುತಿಗಳನ್ನು ಸೋಸಿ ಬ್ರಾಹ್ಮಣಸಂತರ್ಪಣ ಮಾಡತಕ್ಕದ್ದು. ಪ್ರೋಕ್ಷಣ ವಿಧಿ ದೇವನನ್ನು ಉದ್ಘಾಸನ ಮಾಡಿ ಐದುಸಲ ಮಣ್ಣು-ಜಲಗಳಿಂದ ತೊಳೆದು ಪಂಚಗವ್ಯದಿಂದ ಪರಿಚ್ಛೇದ - ೩ ಪೂರ್ವಾರ್ಧ 220 ಸ್ನಾನಮಾಡಿಸಿ ದರ್ಭೋದಕದಿಂದ ಶುದ್ಧ ಮಾಡಿ ಮೂಲಮಂತ್ರಗಳಿಂದ ನೂರೆಂಟುಸಲ ಪ್ರೋಕ್ಷಿಸಿ ಮೂಲಮಂತ್ರದಿಂದ, ಶಿರಸ್ಸಿನಿಂದ ಪೀಠದವರೆಗೆ ಸ್ಪರ್ಶಿಸಿ ತತ್ವನ್ಯಾಸ, ಲಿಪಿನ್ಯಾಸ, ಮಂತ್ರನ್ಯಾಸ ಪೂರ್ವಕ ಪ್ರಾಣಪ್ರತಿಷ್ಠೆಯನ್ನು ಮಾಡಿ ಮಹಾಪೂಜೆಯನ್ನು ಮಾಡತಕ್ಕದ್ದು. ಪೂಜೆಯು ನಡೆಯದಿದ್ದಾಗಲೂ ಇದೇ ಸಂಪ್ರೋಕ್ಷಣವಿಧಿಯನ್ನು ಹೇಳಿದೆ. ಜೀರ್ಣೋದ್ಧಾರ ಲಿಂಗಾದಿಗಳ ಭಂಗದಲ್ಲಿ ಅಥವಾ ದಗ್ಧವಾದಲ್ಲಿ “ಜೀರ್ಣೋದ್ಧಾರವಾಗಬೇಕು. ಅನಾದಿ ಪ್ರತಿಷ್ಠಿತ ಲಿಂಗಾದಿಗಳು ಭಿನ್ನಾದಿ ದೋಷಯುಕ್ತವಾದರೆ ಮಾಡತಕ್ಕದ್ದಿಲ್ಲ. ಅದಕ್ಕೆ ಮಹಾಭಿಷೇಕವಾದರೆ ಸಾಕು, ಕರ್ತನು “ಅಮುಕದೇವಸ್ಯ ಜೀರ್ಣೋದ್ಧಾರಂ ಕರಿಷ್ಯ” ಹೀಗೆ ಸಂಕಲ್ಪಿಸಿ ನಾಂದ್ಯಾದಿಗಳನ್ನು ಮಾಡಿ ಆಚಾರ್ಯನನ್ನು ವರಿಸಿ, ಪೀಠದಲ್ಲಿ ಮಂಡಲ ದೇವತೆಗಳನ್ನಾವಾಹಿಸಿ ಲಿಂಗದಲ್ಲಿ “ಓಂ ವ್ಯಾಪಕೇಶ್ವರಹೃದಯಾಯ ನಮಃ, ಓಂ ವ್ಯಾಪಕೇಶ್ವರ ಶಿರಸೇ ಸ್ವಾಹಾ” ಇತ್ಯಾದಿ ಆಯಾಯ ದೇವತೆಗಳ ಮೂಲಮಂತ್ರದಿಂದ ಷಡಂಗನ್ಯಾಸಮಾಡಿ ಪೂಜಿಸುವದು. ಅಘೋರಮಂತ್ರವನ್ನು ನೂರೆಂಟಾವರ್ತಿ ಜಪಿಸಿ ಅಗ್ನಿಪ್ರತಿಷ್ಠೆ ಮಾಡಿ ಅಘೋರಮಂತ್ರದಿಂದ ತುಪ್ಪದಿಂದ ಮಿಶ್ರಿತವಾದ ಸಾಸಿವೆಗಳಿಂದ ಸಹಸ್ರಾಹುತಿಹೋಮ ಮಾಡಿ ಇಂದ್ರಾದಿಗಳಿಗೆ ನಾಮಮಂತ್ರಗಳಿಂದ ಬಲಿಯನ್ನು ಕೊಟ್ಟು ಜೀರ್ಣವಾದ ದೇವಪ್ರತಿಮೆಯನ್ನು ಓಂಕಾರದಿಂದ ಪೂಜಿಸಿ ಧೃತಮಿಶ್ರ ತಿಲಗಳಿಂದ ಮಂಡಲದೇವತಾ ಹೋಮಮಾಡಿ ಪ್ರಾರ್ಥಿಸತಕ್ಕದ್ದು. “ಭಗವನ್ ಭೂತಭವೇಶ ಲೋಕನಾಥ ಜಗತ್ನಭೋ! ಜೀರ್ಣಲಿಂಗ ಸಮುದ್ದಾರಃ ಕೃತವಾಜ್ಞಯಾ ಮಮಃ ಅಗ್ನಿನಾದಾರುದು ದಗ್ಧಂಕ್ಷಿಪ್ತಂಶೈಲಾದಿಕಂಜಲೇ ಪ್ರಾಯಶ್ಚಿತ್ತಾಯ ದೇವೇಶ ಅಘೋರಾಣ ತರ್ಷಿತಂ ಜ್ಞಾನತೋSಜ್ಞಾನತೋವಾಪಿ ಯಥೋಕ್ತಂ ನ ಕೃತಯುತತ್ಸರ್ವಂ ಪೂರ್ಣಮೇವಾಸ್ತು ತತ್ಪಸಾದಾನ್ಮದೇ ಶ್ವರ ಆಮೇಲೆ ಯಜಮಾನನ ಪ್ರಾರ್ಥನ “ಗೋವಿಪ್ರಶಿಲ್ಪಿ ಭೂಪಾನಾಮಾಚಾರ್ಯಸ್ಯ ಚ ಯಜ್ಜನಃ ಶಾಂತಿರ್ಭವತು ದೇವೇಶ ಅಚ್ಛಿದ್ರಂ ಜಾಯತಾಮಿದಂ ಮೂರ್ತಿಯಲ್ಲಿ ವಿಶೇಷವೇನೆಂದರೆ “ತತ್ಪಸಾದೇನ ನಿರ್ವಿಘ್ನಂ ದೇಹಂ ನಿರ್ಮಾವಯತ್ಯಸೌ ವಾಸಂಕುರು ಸುರಶ್ರೇಷ್ಠ ತಾವಂಚಾಲಕೇಗೃಹೇ। ವಸಕೇಶಂ ಸಹಿತೈಹರ್ಮೂತಿ್ರಂ ತವಪೂರ್ವವತ್ ಯಾಮಾರಯತೇ ಭಕ್ತ: ಕುರು ತಸ್ಯಚವಾಂಛಿತ " ಆಮೇಲೆ ಹೊಸಮೂರ್ತಿ ಅಥವಾ ಲಿಂಗವನ್ನು ಮಾಡಿ ಹೇಳಿದ ವಿಧಿಯಿಂದ ಪ್ರತಿಷ್ಠಾ ಕಾಲವನ್ನು ನಿರೀಕ್ಷಿಸದೇ ಒಂದು ತಿಂಗಳದೊಳಗೆ ಸ್ಥಾಪಿಸುವರು. ಹೀಗೆ ಜೀರ್ಣೋದ್ಧಾರವು. ಕಲಶಾದಿಗಳ ಪತನವಾದರೆ ಮೂರ್ತಿ, ಶಿವಲಿಂಗ, ದೇವಸ್ಥಾನದ ಗರ್ಭಗೃಹ, ಕಲಶ ಇತ್ಯಾದಿಗಳು ಭಿನ್ನ ಅಥವಾ ಪತನವಾದಲ್ಲಿ ಯಜಮಾನನ ಮರಣವಾಗುವದು. ಅದಕ್ಕೆ ಶಾಂತಿ ಮಾಡಬೇಕು. ಕುಂಡವನ್ನು ನಿರ್ಮಿಸಿ ವಿಧಿಪೂರ್ವಕವಾಗಿ ಹೋಮಮಾಡಬೇಕು. ಯಮದೇವತಾಕವಾದ ಚರುವನ್ನು ಮಾಡಬೇಕು. ಮೊಸರು, ಜೇನುತುಪ್ಪ, ತುಪ್ಪ ಇವುಗಳಿಂದ ಮಿಶ್ರಿತವಾದ ಅಶ್ವತ್ಥ ಸಮಿಧಗಳಿಂದ “ಇಮಾರುದ್ರಾ” ಎಂಬ ಮಂತ್ರದಿಂದ ನೂರೆಂಟು ಆಹುತಿ ಹೋಮ ಮಾಡಬೇಕು. ಉದ್ದು, ೩೭೨ ಧರ್ಮಸಿಂಧು ಹೆಸರು, ತಿಲ, ಮೃತ, ಮಧು ಈ ಐದು ದ್ರವ್ಯಗಳು, ಶಕ್ತಿ ಬೀಜ (ಹೀಂ) ಇದು ಮಂತ್ರ. ಐದು ಸಾವಿರ ಹೋಮವು, ಭೂಮಿ, ಧೇನು, ಎತ್ತು, ಸುವರ್ಣ, ಧಾನ್ಯ ಇವುಗಳನ್ನು ದಕ್ಷಿಣಾ ಸಹಿತ ದಾನ ಮಾಡತಕ್ಕದ್ದು. ದೇವಾಲಯಕ್ಕೆ ಪಂಚಗವ್ಯದಿಂದ ಅಭಿಷೇಕ ಮಾಡುವದು. ಯಮ ಮತ್ತು ಈಶಾನನಿಗೆ ಕೃಸರ-ಪಾಯಸಗಳಿಂದ ಬಲಿಯನ್ನು ಕೊಡುವದು. ಇದರಿಂದ ಮನುಷ್ಯನು ಕೃತ ಕೃತ್ಯನಾಗುವನು. ಈ ವಿಷಯದಲ್ಲಿ ಮೂಲವನ್ನು “ಕಮಲಾಕರ"ದಲ್ಲಿ ನೋಡುವದು. ಪುಷ್ಪಾದಿ ವಿಚಾರ ಪುಷ್ಪವು ಹಳತಾಗಬಾರದು. ಛಿದ್ರವಾಗಿರಕೂಡದು. ನೀರಿನಿಂದ ಪ್ರೋಕ್ಷಿಸಿರಬೇಕು. ಅದರಲ್ಲಿ ಜಂತುವಿರಬಾರದು. ತನ್ನ ತೋಟದಲ್ಲಿದ್ದದ್ದು ಶ್ರೇಷ್ಠವು. ಇಂಥ ಪುಷ್ಪಗಳನ್ನು ದೇವರಿಗರ್ಪಿಸಬೇಕು. ಕೀಟಾದಿಗಳಿಂದ ಕೂಡಿದ, ಸೀಳಿರುವ ಎಸಳುಳ್ಳ, ಹಳೆಯದಾದ, ತನ್ನಿಂದತಾನೇ ಬಿದ್ದಿರುವ ಪುಷ್ಪಗಳನ್ನು ತ್ಯಜಿಸುವದು. ಹೇಸಿಗೆಯ ಸ್ಪರ್ಶವಾದದ್ದು ತ್ಯಾಜ್ಯವು. ಮೊಗ್ಗ, ಕೃಮಿಯುಕ್ತವಾದ ಫಲ ಇವುಗಳನ್ನು ಪೂಜೆಯಲ್ಲುಪಯೋಗಿಸಬಾರದು. ಪುಷ್ಪಗಳಿಲ್ಲದಾಗ ಪತ್ರದಿಂದ ಪೂಜಿಸಬಹುದು. ಎಲೆಗಳಿಲ್ಲದಾಗ ಫಲಗಳಿಂದ ಪೂಜಿಸಬಹುದು. ಫಲಗಳೂ ಸಿಗದಾಗ ಹುಲ್ಲು, ಪೊದೆಯಬಳ್ಳಿ, ಔಷಧಿ, ವನಸ್ಪತಿ ಇವುಗಳಿಂದ ಪೂಜಿಸಬಹುದು. ಸಮಿಧ, ಪುಷ್ಪ, ದರ್ಭ ಮೊದಲಾದವುಗಳನ್ನು ಬ್ರಾಹ್ಮಣನು ತಂದದ್ದಾಗಿರಬೇಕು. ಕ್ರಯಕ್ಕೆ ತಂದ ಮತ್ತು ಶೂದ್ರನು ತಂದ ಪುಷ್ಪಗಳಿಂದ ಪೂಜಿಸಿದರೆ ಅಧೋಗತಿಯಾಗುವದು. ಕೆಲವರು, ಲಕ್ಷಪುಷ್ಪಾರ್ಚನೆಯಲ್ಲಿ ವಿಕ್ರಯಿಸಿದ ಪುಷ್ಪಗಳಾದರೂ ಆಗಬಹುದೆನ್ನುವರು. ಧರ್ಮಾರ್ಜಿತ ಧನದಿಂದ ವಿಕ್ರಯಿಸಿದ ಪುಷ್ಪ ಮತ್ತು ಮಾಲಾಕಾರ (ಹೂವಾಡಿಗ) ನಿಂದ ತರಲ್ಪಟ್ಟ ಪುಷ್ಪಗಳು ಇವು “ನಿರ್ಮಾಲ್ಯ"ಗಳೆನ್ನಲ್ಪಡುವದಿಲ್ಲವಾದ್ದರಿಂದ ದೋಷವಿಲ್ಲ. ಹೀಗೆ ಉಕ್ತಿಯಿದ. ಹೀಗ ವಿಕ್ರಯದಪುಷ್ಪ ಮತ್ತು ಮಾಲಾಕಾರನ ಪುಷ್ಪಗಳನ್ನು ಪಯೋಗಿಸುವದು ಆಚಾರದಲ್ಲಿದೆ. ನಿತ್ಯಪೂಜೆಗಾಗಿ ಬೇರೆಯವರ ತೋಟಗಳಿಂದ ತಂದರೂ ಅದು ಚೋರತನವೆನಿಸುವದಿಲ್ಲ. ಪೂಜೆಗಳಿಗಾಗಿ ಪುಷ್ಪಗಳನ್ನು ಬೇಡಬಾರದು. ಸಮಿಧ, ಕುಶ, ಪುಷ್ಪಗಳನ್ನು ಹೊತ್ತುತರುವಾಗ ಆತನಿಗೆ ನಮಸ್ಕಾರ ಮಾಡಬಾರದು, ತರುವವನಾದರೂ ಆ ಸಮಯದಲ್ಲಿ ಬೇರೆಯವರಿಗೆ ನಮಸ್ಕಾರ ಮಾಡಬಾರದು. ಹಾಗೆ ಮಾಡಿದಲ್ಲಿ ಅವು “ನಿರ್ಮಾಲ್ಯ"ಗಳಾಗುವವು. ದೇವರ ಮೇಲಿರುವ, ಎಡದ ಕೈಯ್ಯಲ್ಲಿ ಹಿಡಿದುಕೊಂಡ, ಉಟ್ಟ ವಸ್ತ್ರದಲ್ಲಿ ಕಟ್ಟಿಕೊಂಡಿರುವ, ನೀರಿನಲ್ಲಿ ಅದ್ದಿ ತೊಳೆದ ಪುಷ್ಪಗಳು “ನಿರ್ಮಾಲ್ಯ” (ನಿರ್ಮಾಲ್ಯವೆಂದರೆ ಪುನಃ ಉಪಯೋಗಿಸಲು ಉಪಯುಕ್ತವಲ್ಲದ್ದು) ಪರ್ಯುಪಿತ (ಹಳೆಯದಾದ, ಹಿಂದಿನ ದಿನದ) ವಾದ ಪುಷ್ಪ ಹಾಗೂ ಜಲಗಳು ವರ್ಜಗಳು. ಆದರ ತುಳಸೀತೀರ್ಥದ ಜಲ ಇವುಗಳಿಗೆ ಪರ್ಯುಷಿತ ದೋಷವಿಲ್ಲ. ಜಾಜಿ ಹೂವಿಗೆ ಒಂದು ಪ್ರಹರ ಪರ್ಯಂತ ನಿರ್ಮಾಲ್ಯ ದೋಷವಿಲ್ಲ. ಕರವೀರವು ಒಂದು ದಿನದ ಮಟ್ಟಿಗೆ ನಿರ್ಮಾಲ್ಯವಾಗುವದಿಲ್ಲ. ಕಮಲ, ತುಳಸಿ, ಬಿಲ್ವ ಇವುಗಳಿಗೆ ನಿರ್ಮಾಲ್ಯ ದೋಷವಿಲ್ಲ. ಅದರಂತೆ ಮಾಫಿ ಮಲ್ಲಿಗೆ, ದಮನಕ, ಅಗಸಹೂವು, ಮಲ್ಲಿಗೆಮೊಗ್ಗು ಇವುಗಳಿಗೂ ದೋಷವಿಲ್ಲ. ಬಿಲ್ಲ ಮೊದಲಾದವುಗಳಿಗೆ ನಿರ್ಮಾಲ್ಯ ಅವಧಿಯಿದೆ. ದಿನಗಳ ಲೆಕ್ಕದಂತೆ ಬಿಲ್ವಕ್ಕೆ ೩೦ ದಿನ. ಉತ್ತರಣಿ 4. ಡಾ ೧ ತುಲಸೀ ೬. ಶ ೬. ಶತಾವರಿ (ಹಲವು ಮಕ್ಕಳ ಬಳ್ಳಿ) ೧೧, ಕೇತಕೀ ೪, ಪರಿಚ್ಛೇದ - ೩ ಪೂರ್ವಾರ್ಧ A2A ಶೃಂಗರಾಜ ೯, ದೂರ್ವಾ ೯, ಮಂದಾರ ೧, ಪದ್ಮ ೧, ನಾಗಸಂಪಿಗೆ ೨, ದರ್ಭ ೩೦, ಅಗಸೆ ೩, ಎಳ್ಳು ೧, ಮಲ್ಲಿಗೆ ೪, ಸಂಪಿಗೆ ೪, ಕರವೀರ ೮ ಇವುಗಳಿಗೆ ಇಲ್ಲಿ ಹೇಳಿದಷ್ಟು ದಿನ “ನಿರ್ಮಾಲ್ಯದೋಷ’ವಿಲ್ಲ. ತುಳಸೀ ಸ್ವೀಕಾರಕ್ಕೆ ಕಾಲ ವೈಧೃತಿ, ವ್ಯತೀಪಾತಗಳು, ಕುಜ,ಶುಕ್ರ, ರವಿ ವಾರಗಳು, ಪರ್ವದಿನ, ಸಂಕ್ರಾಂತಿ, ದ್ವಾದಶಿ, ಸೂತಕ ಮೃತಶೌಚಗಳು. ಇವುಗಳಲ್ಲಿ ತುಳಸಿಯನ್ನು ಕೊಯ್ದರೆ, ವಿಷ್ಣುವಿನ ಕೊರಳನ್ನೇ ಕತ್ತರಿಸಿದಂತೆ, ರವಿವಾರ, ರಾತ್ರಿ, ಎರಡು ಸಂಧ್ಯೆ ಇವುಗಳಲ್ಲಿ ದೂರ್ವಾ ಮತ್ತು ತುಳಸಿಗಳನ್ನು ಕೊಯ್ಯಬಾರದು. ಪುಣ್ಯವನ್ನಪೇಕ್ಷಿಸುವವನು ಕಾರ್ತಿಕದಲ್ಲಿ ನಲ್ಲಿ ಕೊಯ್ಯುವದು ನಿಷಿದ್ದವು. ದ್ವಾದಶಿಯಲ್ಲಿ ಹಗಲು ನಿದ್ರೆ ಮತ್ತು ತುಳಸಿ ಗ್ರಹಣವು ನಿಷಿದ್ದವು. ಮತ್ತು ವಿಷ್ಣು ದೇವರ ಹಗಲು ಸ್ನಾನ (ದ್ವಾದಶಿಯಲ್ಲಿ) ನಿಷಿದ್ದವು. ಇಲ್ಲಿ ಹಗಲುದೋಷವನ್ನು ಹೇಳಿದ್ದರಿಂದ ರಾತ್ರಿಯಲ್ಲಿ ಸ್ನಾನಾದಿ ಷೋಡಶೋಪಚಾರಕ್ಕಡ್ಡಿ ಇಲ್ಲ. ಹಗಲಿನಲ್ಲಿ ಸ್ನಾನವನ್ನು ಬಿಟ್ಟು ಗಂಧಾದಿ ಪುಷ್ಪಾಂಜಲಿ ವರೆಗೆ ಪೂಜೆಮಾಡತಕ್ಕದ್ದೆಂದು “ಕಮಲಾಕರ"ದ ಅಂಕ ಪ್ರಕರಣದಲ್ಲಿ ಹೇಳಿದೆ. ದ್ವಾದಶಿಯಲ್ಲಿ ವಿಷ್ಣು ನಿರ್ಮಾಲ್ಯವನ್ನೂ ತೆಗೆಯಬಾರದೆಂದು ಬೇರೆ ತಂತ್ರಗ್ರಂಥಗಳಲ್ಲಿಯ ಸ್ಮೃತಿವಚನದಿಂದ ತಿಳಿಯುತ್ತದೆ. ಇವುಗಳಿಗೆ ಕೆಲ ಅಪವಾದವನ್ನು “ಪುರುಷಾರ್ಥ ಚಿಂತಾಮಣಿ"ಯಲ್ಲಿ ಹೇಳಿದೆ. (ನಾರದೀಯ) ಏಕಾದಶಿಯಲ್ಲಿ ವಿಷ್ಣುವನ್ನು ಪಂಚಾಮೃತದಿಂದ ಸ್ನಾನಮಾಡಿಸಿ ದ್ವಾದಶಿಯಲ್ಲಿ ಹಾಲಿನಿಂದ ಸ್ನಾನಮಾಡಿಸಿದರೆ ಹರಿಸಾಯುಜ್ಯವನ್ನು ಹೊಂದುವನು ಎಂದಿದೆ. ಅಮವಾಸೆಯ ದಿನದಲ್ಲಿ ದೇವರ ಸಲುವಾಗಿ ತುಳಸೀ ಛೇದಮಾಡಿದರೆ, ಹೋಮದ ಸಲುವಾಗಿ ದರ್ಭಚ್ಛೇದ ಮಾಡಿದರೆ, ಗೋವುಗಳ ಸಲುವಾಗಿ ಹುಲ್ಲನ್ನು ಕೊಯ್ದರ ದೋಷವುಂಟಾಗುವದಿಲ್ಲ. ತುಲಸೀಗ್ರಹಣಕ್ಕೆ ಮಂತ್ರ “ತುಲಸ್ಯಮೃತಜನ್ಮಾಸಿ ಸದಾತ್ವಂ ಕೇಶವಪ್ರಿಯ! ಕೇಶವಾರ್ಥಂ ವಿಚಿಸ್ವಾಮಿ ವರದಾಭವ ಶೋಭನೇ” ಹೀಗೆ ಮಂತ್ರವು ಜಾಜಿ, ಮಲ್ಲಿಗೆ, ಕರವೀರ, ಅಶೋಕ, ನೈದಿಲೆ, ಸಂಪಿಗೆ, ರಂಜಲು, ಪುನ್ನಾಗ, ಬಿಲ್ವ, ಶಮೀ, ದರ್ಭ ಇವು ಸಾಮಾನ್ಯ ಎಲ್ಲ ದೇವತೆಗಳಿಗೂ ಪ್ರಶಸ್ತಿಗಳು, ಕೆಲವು ಕಡೆಯಲ್ಲಿ ನಿಷಿದ್ದವೆಂದು ಹೇಳಿದಾಗ ಅದು ವಿಕಲ್ಪವೆಂದು ತಿಳಿಯಬೇಕು. ಸುರಹೊನ್ನೆ, ಶಮೀ ಪುಷ್ಪ ಇವು ದುರ್ಗೆಗೆ ವಿಕಲ್ಪವು ಮಾಫಿಮಲ್ಲಿಗೆ, ಮುತ್ತುಗ, ಬರುಲ, ದೂರ್ವಾ ಇವು ಶಿವನಿಗೂ ನೈದಿಲೆ, ತಗರ ಇವು ಸೂರ್ಯನಿಗೂತುಳಸೀ, ಶೃಂಗರಾಜ, ಹೊಂಗೆ, ಪತ್ರಗಳು ಶಿವ ಮತ್ತು ದುರ್ಗೆಯರಿಗೂ ಅಗಸೀ, ಮಲ್ಲಿಗೆಲತೆ, ಹೊಂಗಪುಷ್ಪ ಇವು ಶಿವ-ವಿಷ್ಣುವಿಗೂ, ಉನ್ಮತ್ತ, ಮಂದಾರ ಇವು ವಿಷ್ಣು-ಸೂರ್ಯರಿಗೂ ವಿಕಲ್ಪಿತಗಳು, ಅಂದರೆ ಇವುಗಳಿಂದ ಅರ್ಚಿಸಬಹುದು ಇಲ್ಲವೆ ಬಿಡಬಹುದು. ವಿಷ್ಣು ಪ್ರೀತಿಕರ ಪುಷ್ಪಾದಿಗಳು ಮಾಲತಿ, ಜಾಜಿ, ಕೇದಿಗೆ, ಮಲ್ಲಿಗೆ, ಅಶೋಕ, ಸಂಪಿಗೆ, ಪುನ್ನಾಗ, ರಂಜಲು, ನೈದಿಲೆ, ಮಾಗಿಮಲ್ಲಿಗೆ, ಕರವೀರ, ಸುರಹೊನ್ನೆ, ತಗರಪುಷ್ಪ ಇತ್ಯಾದಿ ಇನ್ನೂ ಪರಿಮಳದ ಪುಷ್ಪಗಳು ವಿಷ್ಣುಪ್ರಿಯಗಳಾದವುಗಳು. ಉತ್ತರಣಿ, ಭಂಗರಾಜ, ಖೈರ, ಶಮೀ, ದೂರ್ವಾ, ದರ್ಭ, ದಮನಕ, ೩೭೪ ಧರ್ಮಸಿಂಧು ಬಿಲ್ವ, ತುಲಸೀಪತ್ರ ಇವು ಒಂದಕ್ಕಿಂತ ಒಂದು ಹೆಚ್ಚು ಪ್ರಿಯವಾದದ್ದು. ಎಲ್ಲಕ್ಕೂ ಹೆಚ್ಚು ಪ್ರಿಯಕರವಾದದ್ದು “ತುಲಸಿಯು, ಒಂದು ಸಾವಿರದ ಜಾಜಿಹೂವಿನ ಸರವನ್ನು ವಿಷ್ಣುವಿಗೆ ಅರ್ಪಿಸಿದರೆ ಕಲ್ಪಕೋಟಿ ಸಹಸ್ರವರ್ಷಪರ್ಯಂತ ವಿಷ್ಣುಪುರದಲ್ಲಿ ವಾಸವಾಗುವದೆಂದು ಫಲಶ್ರುತಿಯಿದೆ. ಮಾವಿನ ಹೂಗೊಂಚಲವನ್ನು ಹಾಕಿ ಪೂಜಿಸಿದರೆ ಕೋಟಿಗೋದಾನ ಫಲವು ಬರುವದು. ಶಿವಪ್ರಿಯ ಪುಷ್ಪಾದಿಗಳು ಎಕ್ಕ, ಕರವೀರ, ಬಿಲ್ವ, ಬಕ ಈ ನಾಲ್ಕು ಪುಷ್ಪಗಳ ಪರಿಮಳವನ್ನು ಶಿವನು ಮೂಸುತ್ತಿರುವನು. ಬಿಳೇ ಎಕ್ಕೆಯ ಪುಷ್ಪದಿಂದ ಪೂಜಿಸಿದರೆ ಹತ್ತು ಸುವರ್ಣದಾನಮಾಡಿದ ಫಲವು ಸಿಗುವದು. ಬಕಪುಷ್ಪವು ಇದರ ಸಹಸ್ರಪಟ್ಟು ಹೆಚ್ಚಿನ ಫಲಪ್ರದವು. ಇದರಂತೆ ಧತ್ತೂರ, ಶಮೀಪುಷ್ಪ, ದ್ರೋಣಪುಷ್ಪ, (ತುಂಬೇಹೂವು) ನೀಲನೈದಿಲೆ ಇವು ಒಂದಕ್ಕಿಂತ ಒಂದು ಸಹಸ್ರಗುಣ ಪುಣ್ಯಪ್ರದಗಳು, ಮಣಿ, ಮುತ್ತು, ಹವಳ, ರತ್ನ ಇತ್ಯಾದಿಗಳಿಂದ ಅರ್ಚಿಸಿದರೂ ಬಿಲ್ವಪತ್ರೆಯಿಲ್ಲದಿದ್ದರೆ ಅವುಗಳನ್ನು ತಾನು ಸ್ವೀಕರಿಸುವದಿಲ್ಲವೆಂದು ಶಿವನು ಪಾರ್ವತಿಗೆ ಹೇಳಿರುವನು. ಬಿಲ್ವವು ಸರ್ವಕಾಮಪ್ರದವು. ಮತ್ತು ದಾರಿದ್ರೆ ನಿವಾರಕವಾದದ್ದು. ಕನ್ನೈದಿಲೆಗಳ ಒಂದುಸಾವಿರದಿಂದ ಮಾಲೆಮಾಡಿ ಹಾಕಿದರೆ ಕಲ್ಪಕೋಟಿ ಸಹಸ್ರ ವರ್ಷಪರ್ಯಂತ ಶಿವಸಾನ್ನಿಧ್ಯದಲ್ಲಿ ವಾಸವುಂಟಾಗುವದೆಂದು ಫಲಶ್ರುತಿಯಿದೆ. ಉನ್ಮತ್ತ, ಕರವೀರಗಳಿಂದ ಅರ್ಚಿಸಿದರೆ ಲಕ್ಷಗೋದಾನ ಫಲವು, ಸುರಹೊನ್ನೆ, ಮಂದಾರ, ಉತ್ತರಣಿ, ಜಾಜಿ, ಸಂಪಿಗೆ, ವಾಳ, ತಗರ, ನಾಗಸಂಪಿಗೆ, ಪುನ್ನಾಗ, ದಾಸವಾಳ, ಮಲ್ಲಿಗೆ, ಮಾವು, ಕುಸುಂಭ ಪುಷ್ಪಗಳು ಶಿವನಿಗೆ ಪ್ರಿಯಗಳು, ಉನ್ಮತ್ತ, ಕದಂಬ (ಈಚಲು) ಶಿವನಿಗೆ ರಾತ್ರಿಯಲ್ಲರ್ಪಿಸಬೇಕು. “ಮದನರತ್ನ"ದಲ್ಲಿ (ಕೇತಕಾನಿ ಕದಂಬಾನಿ ಎಂದು ಪಾಠಬೇಧವಿದೆ) ಪುಷ್ಪ, ಪತ್ರಗಳ ಅಭಾವದಲ್ಲಿ ಅನ್ನಾದಿಗಳಿಂದ ಪೂಜಿಸುವದು. ಸಣ್ಣ ಅಕ್ಕಿ, ಗೋಧಿ ಜವೆ ಇವುಗಳಿಂದಾದರೂ ಅರ್ಚಿಸಬಹುದು. ನಿಷಿದ್ದಗಳು ಬಂಧಕ, ಮಾಗಿಮಲ್ಲಿಗೆ, ಅತ್ತಿಮುಕ್ತ (ಮಲ್ಲಿಗೆಯ ಭೇದ) ಕೇದಿಗೆ, ಬೆಳವಲ, ರಂಜಲು, ಬಾಗೇಹೂವು, ಕಹಿಬೇವು ಇವು ನಿಷಿದ್ಧಗಳು. ಪುಷ್ಪವನ್ನಾಗಲೀ, ಪತ್ರವನ್ನಾಗಲೀ ತನಗೆ ಸಂಮುಖವಾಗುವಂತೆ ಅಂಗಾತಮಾಡಿ ಅರ್ಪಿಸಬೇಕು. ಪತ್ರ, ಪುಷ್ಪ, ಫಲಗಳು ಹೇಗೆ ಉತ್ಪನ್ನವಾಗಿವೆಯೋ ಆ ರೀತಿಯಿಂದಲೇ ಅರ್ಪಿಸಬೇಕು. ಹೀಗೆ ವಚನವಿದೆ. ಬಿಲ್ವಪತ್ರೆಯನ್ನು ತನಗೆ ಸಂಮುಖವಾಗಿ ಮುದುಡಿದಂತೆ ಮಾಡಿ ಅರ್ಪಿಸುವದು. ಮಾವಿನಹಣ್ಣನ್ನು ಶಿವನಿಗರ್ಪಿಸಿದರೆ ಹತ್ತು ಸಾವಿರವರ್ಷ ಶಿವಸನ್ನಿಧಿಯಲ್ಲಿ ವಾಸವು. ಇನ್ನು ಪ್ರದಕ್ಷಿಣಕ್ರಮ ಹೇಗೆಂದರೆ -ಮೊದಲು ಎಡದಿಂದ ಬಲಕ್ಕೆ ಪ್ರದಕ್ಷಿಣ ಮಾಡಿ ಸೋಮಸೂತ್ರದವರೆಗೆ ಹೋಗಿ ಪುನಃ ಅಪಸವ್ಯವಾಗಿ ಬಂದು ಸೋಮಸೂತ್ರದ ವರೆಗೆ ಪುನಃ ಹೋಗುವದು. ಸೋಮಸೂತ್ರವನ್ನು ದಾಟಬಾರದು. ಇದು ಸಿರಲಿಂಗ ಪ್ರದಕ್ಷಿಣೆಯ ರೀತಿಯು, ಚರಲಿಂಗದಲ್ಲಿ ಸರಿಯಾಗಿಯೇ ಪ್ರದಕ್ಷಿಣೆಯು. ದೇವಿ ಮೂರ್ತಿಗಾದರೂ ಬಕುಲ, ಕುಂದ ಸಹಿತಗಳಾದ ಈ ಹೇಳಿದ ಪುಷ್ಪಗಳು ಪ್ರೀತಿಕರಗಳು, ಧಾನ್ಯಗಿಡಗಳ ಎಲ್ಲ ಪತ್ರ ಪುಷ್ಪಗಳಿಂದ ದೇವಿಯನ್ನರ್ಚಿಸಬಹುದು. ದೂರ್ವಾ, ಕುಂದ, ಸಿಂಧುವಾರ, (ಕರೇನಕ್ಕಿ) ಬಂಧಕ, ಅಗಸ್ತಿ ಇವುಗಳ ಪತ್ರ ಪುಷ್ಪಗಳಿಂದ ಅರ್ಚಿಸುವದು. ಪರಿಚ್ಛೇದ - ೩ ಪೂರ್ವಾರ್ಧ ೩೭೫ ಬಿಲ್ವಪತ್ರೆಯಿಂದ ಪೂಜಿಸಿದರೆ ರಾಜಸೂಯಜ್ಞದ ಫಲವು ಸಿಗುವದು. ಕರವೀರದ ಮಾಲೆಯಿಂದ “ಅಗ್ನಿಷ್ಟೋಮ” ಫಲವು. ರಂಜಲು ಮಾಲಿಕೆಯಿಂದ “ವಾಜಪೇಯ” ಯಜ್ಞದ ಫಲವು; ತುಂಬೆಹೂವಿನಿಂದ ರಾಜಸೂಯಯಜ್ಞದ ಫಲವು, ಸೂರ್ಯ, ಗಣಪತಿ ಮೊದಲಾದ ದೇವರಿಗೂ ವಿಷ್ಣುವಿನಂತೆಯೇ ಎಂದು ತಿಳಿಯತಕ್ಕದ್ದು. ಶಿವನಿರ್ಮಾಲ್ಯ ಸ್ವೀಕಾರವಿಚಾರ ಶಿವನಿಗೆ ನಿವೇದಿಸಿದ ಅನ್ನ, ಪತ್ರ, ಪುಷ್ಪ, ಫಲ, ಜಲ ಇವು “ಅಗ್ರಾಹ್ಯ” ಆದರೆ ಶಾಲಿಗ್ರಾಮ ಶಿಲಾಸಂಪರ್ಕದಿಂದ ಎಲ್ಲವೂ ಪವಿತ್ರಗಳೇ ಆಗುವವು. ಶಿವ ಅಥವಾ ಸೂರ್ಯನಿಗೆ ನೈವೇದ್ಯ ಮಾಡಿದ್ದನ್ನು ಭಕ್ಷಿಸಿದರೆ ಚಾಂದ್ರಾಯಣವನ್ನು ಹೇಳಿದೆ. ಅನೇಕಾವರ್ತಿ ಭಕ್ಷಿಸಿದರೆ ದ್ವಿಗುಣಮಾಡಬೇಕು. ಬುದ್ಧಿಪೂರ್ವಕ ಮಾಡಿದ್ದರೆ “ಸಾಂತಪನ ಕೃಚ್ಛವು. ಆಪತ್ತಿಲ್ಲದಾಗ ಬೇರೆ ದೇವತೆಗಳ ನಿರ್ಮಾಲ್ಯದಲ್ಲಿಯೂ ಇದೇ ನಿಯಮವು. ಇದು ಜ್ಯೋತಿರ್ಲಿಂಗ, ಸ್ವಯಂಭೂಲಿಂಗ ಮತ್ತು ಸಿದ್ಧ ಪುರುಷರು ಸ್ಥಾಪಿಸಿದ ಲಿಂಗಗಳ ಹೊರತಾದವುಗಳಿಗೆ ಹೇಳಿದ್ದು. (ಜ್ಯೋತಿರ್ಲಿಂಗಾದಿಗಳಲ್ಲಿ ನಿರ್ಮಾಲ್ಯದೋಷವಿಲ್ಲ) ಜ್ಯೋತಿರ್ಲಿಂಗಾದಿಗಳ ಅರ್ಚಕನು ಕೊಟ್ಟ ತೀರ್ಥಾದಿಗಳನ್ನು ಭಕ್ತಿಯಿಂದ ಶುಧ್ಯರ್ಥವಾಗಿ ತೆಗೆದುಕೊಳ್ಳಬೇಕು. ಫಲಾಶೆಯಿಂದ ಅಲ್ಲ. ಪಂಚಾಯತನದಲ್ಲಿರುವ ಚರಲಿಂಗ ಅಥವಾ ಪ್ರತಿಮೆಗಳ ಅನ್ನಾದಿಗಳನ್ನು ಗ್ರಹಣಮಾಡಿದರೂ ದೋಷವಿಲ್ಲ. ಜ್ಯೋತಿರ್ಲಿಂಗಾದಿಗಳ ಹೊರತಾದ ಬೇರೆ ಸ್ಥಿರಲಿಂಗಗಳ ವಿಷಯದಲ್ಲಿ ತೀರ್ಥೋದಕ, ಗಂಧಗಳನ್ನು ಶ್ರದ್ಧೆಯುಳ್ಳ ಶಿವಭಕ್ತರು ಸ್ವೀಕರಿಸತಕ್ಕದ್ದು. ಜ್ಯೋತಿರ್ಲಿಂಗಾದಿಗಳಲ್ಲಿ ಅರ್ಚಕನು ಕೊಟ್ಟ ಅನ್ನವನ್ನಾದರೂ ಊಟಮಾಡಬಹುದೆಂದು ಕೆಲವರು ಹೇಳುವರು. ಸಾಮಾನ್ಯ ಮುಹೂರ್ತ ವಿಚಾರ ಉತ್ರಾ, ಉತ್ರಾಷಾಢ, ಉತ್ರಾಭದ್ರಾ, ರೋಹಿಣಿ ಇವು ಧ್ರುವನಕ್ಷತ್ರಗಳು ಮಘಾ, ಭರಣಿ, ಹುಬ್ಬ, ಪೂರ್ವಾಷಾಢಾ, ಪೂರ್ವಾಭದ್ರಗಳು “ಕ್ರೂರನಕ್ಷತ್ರಗಳು, ಶ್ರವಣ, ಧನಿಷ್ಠಾ, ಶತಭಿಷ, ಪುನರ್ವಸು, ಸ್ವಾತಿಗಳು “ಚರನಕ್ಷತ್ರ"ಗಳು. ಅಶ್ವಿನಿ, ಹಸ್ತ ಪುಕ್ಕಗಳು “ಕ್ಷಿಪ್ರನಕ್ಷತ್ರಗಳು. ಅನುರಾಧಾ, ರೇವತಿ, ಮೃಗಶಿರ, ಚಿತ್ರಗಳು “ಮೃದುನಕ್ಷತ್ರ’ಗಳು. ಕೃತಿಕಾ, ವಿಶಾಖೆಗಳು “ಮಿಶ್ರನಕ್ಷತ್ರ"ಗಳು. ಮೂಲಾ, ಆಶ್ಲೇಷಾ, ಜೇಷ್ಠಾ, ಆದ್ರ್ರಾ ಇವು “ತೀಕ್ಷ್ಯನಕ್ಷತ್ರಗಳು. ಹೀಗೆ ನಕ್ಷತ್ರಗಳಿಗೆ ಸಂಜ್ಞೆಯಿದೆ. ಎಲ್ಲಿ ತಿಥಿಗಳನ್ನು ಹೇಳಿಲ್ಲವೋ ಅಲ್ಲಿ ರಿಕ್ತಾತಿಥಿ, ಅಮಾವಾಸೆಗಳನ್ನು ಬಿಟ್ಟು, ಉಳಿದ ತಿಥಿಗಳನ್ನು ಸ್ವೀಕರಿಸುವದು. ವಾರಗಳನ್ನು ಹೇಳದಿದ್ದಲ್ಲಿ ರವಿ, ಕುಜ, ಶನಿವಾರ ಹೊರತಾದವುಗಳನ್ನು ಸ್ವೀಕರಿಸುವದು. ಭೂಮಿಯನ್ನು ಊಳುವದಕ್ಕೆ:- ಚರ, ಮೃದು, ಕ್ಷಿಪ್ರ ಧ್ರುವ, ಮೂಲಾ, ವಿಶಾಖಾ, ಮಘಾ ಈ ನಕ್ಷತ್ರಗಳೂ, ಕುಜ, ಬುಧ, ಗುರು, ಶುಕ್ರವಾರಗಳೂ ಶುಭಗಳು. ಬೀಜಬಿತ್ತಲಿಕ್ಕೆ:- ಸೂರ್ಯನಿಂದ ಬಿಡಲ್ಪಟ್ಟ ನಕ್ಷತ್ರದಿಂದ ಮೂರು, ಎಂಟು, ಒಂಭತ್ತು ಈ ನಕ್ಷತ್ರಗಳಲ್ಲಿ ಕ್ರಮದಿಂದ ಅಂದರೆ ಸೂರನ ಹಿಂದಿನ ನಕ್ಷತ್ರದಿಂದ ಮೂರು ನಕ್ಷತ್ರದಲ್ಲಿ ಅಶುಭ. ಅದರ ನಂತರ ಎಂಟು ನಕ್ಷತ್ರದಲ್ಲಿ ಶುಭ, ಹೇಳಿದ ನಕ್ಷತ್ರದಲ್ಲಿ ಶನಿ, ಕುಜರಿಂದ ಹೊರತಾದ ವಾರದಲ್ಲಿ ಬೀಜವನ್ನು ಬಿತ್ತಬೇಕು (ಇದಕ್ಕೆ ಹಲಚಕ್ರವನ್ನುವರು) ಮತ್ತು ಸಸಿಯನ್ನು ೩೭೬ ಧರ್ಮಸಿಂಧು ನೆಡಬೇಕು. ಮತ್ತು ಧಾನ್ಯವನ್ನು ಕೊಯ್ಯುವದು. ಆಲ ಮೊದಲಾದ ಕ್ಷೀರವೃಕ್ಷಗಳ ಕಂಭವನ್ನು ನಡುವದು. ಧಾನ್ಯ ಒಕ್ಕಲಿಕ್ಕ:- ಜೇಷ್ಯಾ, ಮೂಲ, ಮಘಾ, ಶ್ರವಣ, ರೇವತೀ, ರೋಹಿಣೀ, ಅನುರಾಧಾ, ಹುಬ್ಬಾ, ಇವು ಶುಭಗಳು, ಧಾನ್ಯಸಂಗ್ರಹಕ್ಕೆ:- ಕ್ಷಿಪ್ರ, ಧ್ರುವ, ಚರ, ಮೃದು, ಮೂಲ ಇವುಗಳೂ, ಬುಧ, ಗುರು, ಶುಕ್ರವಾರಗಳೂ, ಚರರಾಶಿ ಹೊರತಾದ ಲಗ್ನವೂ ಶುಭವು. ‘‘ಓಂ ಧನದಾಯ ಸರ್ವಲೋಕಹಿತಾಯ ದೇಹಿಮೇ ಧಾನ್ಯಂ ಸ್ವಾಹಾ” ಎಂಬ ಮಂತ್ರವನ್ನು ಬರೆದು ಧಾನ್ಯದ ಗೃಹದಲ್ಲಿಟ್ಟರ ಧಾನ್ಯ ವೃದ್ಧಿಯಾಗುವದು. ಬುಧವಾರ, ಶನಿವಾರಗಳಲ್ಲಿ ಧಾನ್ಯವನ್ನು ಖರ್ಚುಮಾಡಬಾರದು. ಹೊಸ ಅನ್ನವನ್ನು ಶುಭವಾರ ಮತ್ತು ಮೃದು, ಕ್ಷಿಪ್ರ, ಚರ, ನಕ್ಷತ್ರ ಇವುಗಳಲ್ಲಿ ಹಗಲಿನಲ್ಲಿ ಭೋಜನಮಾಡತಕ್ಕದ್ದು. ವಾದಿ ಧಾರಣೆಗೆ ವಸ್ತ್ರ, ಭೂಷಣಾದಿಗಳನ್ನು ಧ್ರುವನಕ್ಷತ್ರ, ಅಶ್ವಿನೀ, ಹಸ್ತ, ಚಿತ್ರಾ, ಸ್ವಾತಿ, ವಿಶಾಖಾ, ಅನುರಾಧಾ, ಪುನರ್ವಸು, ಪುಷ್ಯ, ರೇವತಿ, ಧನಿಷ್ಟಾ ಈ ನಕ್ಷತ್ರಗಳಲ್ಲಿ ಮತ್ತು ಶುಭತಿಥಿಗಳಲ್ಲಿ,ಶನಿ, ಕುಜ, ಚಂದ್ರವಾರಗಳ ಹೊರತಾದ ವಾರಗಳಲ್ಲಿ ಧರಿಸತಕ್ಕದ್ದು. ಬ್ರಾಹ್ಮಣಾಜ್ಞೆ ಅಥವಾ ಉತ್ಸವದಿನ ಇಲ್ಲವೆ ವಿಶೇಷ ಪ್ರಾಪ್ತಿಯಾಗುವಂತಿದ್ದರೆ ಅನಿಷ್ಟಕಾಲದಲ್ಲಿಯಾದರೂ ಧರಿಸುವದರಿಂದ ಕೆಡಕಾಗುವದಿಲ್ಲ. ಧ್ರುವನಕ್ಷತ್ರ, ಪುಷ್ಯ, ಪುನರ್ವಸು ನಕ್ಷತ್ರಗಳಲ್ಲಿ ಹೊಸವಸ್ತ್ರವನ್ನು ಧರಿಸಿದ ಸ್ತ್ರೀಯು ಮತ್ತು ಶತಭಿಷ ನಕ್ಷತ್ರದಲ್ಲಿ ಸ್ನಾನಮಾಡಿದ ಸ್ತ್ರೀಯು ಪತಿಪ್ರೀತಿ ಪಾತ್ರಳಾಗುವಳು. ಪಾದುಕಾ, ಆಸನ, ಶಯ್ಯಾ ಇವುಗಳನ್ನು ಶುಭತಿಥಿ ವಾರಗಳಲ್ಲು ಪಯೋಗಿಸಬಹುದು. ಧ್ರುವನಕ್ಷತ್ರ, ಕ್ಷಿಪ್ರ, ಮೃದು, ನಕ್ಷತ್ರ, ಶ್ರವಣ, ಭರಣಿ, ಪುನರ್ವಸು ಈ ನಕ್ಷತ್ರಗಳಲ್ಲಿ ಹೊಸವಸ್ತ್ರದ ಮಧ್ಯಾಂಶ ಅಂದರೆ ವಸ್ತ್ರದ ಒಂಭತ್ತನೆಯ ಒಂದಂಶದಂತೆ ಮಧ್ಯದ ಮೂರಂಶಗಳಲ್ಲಿ ಸುಟ್ಟರೆ ಅಥವಾ ಹರಿದರ ಇಲ್ಲವೆ ಕೆಸರು ಮೊದಲಾದವುಗಳಿಂದ ಯುಕ್ತವಾದರೆ ಆ ವಸ್ತ್ರವನ್ನು ಬಿಟ್ಟು ಶಾಂತಿಮಾಡತಕ್ಕದ್ದು, ಅದೇ ತುದಿಯ ಎರಡಂಶಗಳಲ್ಲಾದರೆ ಕೇವಲ ವಸ್ತ್ರವನ್ನು ಮಾತ್ರ ತ್ಯಜಿಸುವದು. ಶಾಂತಿಮಾಡಬೇಕಿಲ್ಲ. ಈ ನಿರ್ಣಯವು ಶಯ್ಯಾ, ಆಸನಾದಿಗಳಿಗೂ ಸಂಬಂಧಿಸಿದ್ದು ಎಂದು ತಿಳಿಯುವದು. ಅನುರಾಧಾ, ಅಶ್ವಿನೀ, ಚಿತ್ರಾ, ಮೃಗಶಿರ, ಪುನರ್ವಸು ಈ ನಕ್ಷತ್ರಗಳಲ್ಲಿ ಸೂಚಕರ್ಮ (ಹೊಲಿಗೆಯ ಕೆಲಸ) ವನ್ನು ಮಾಡತಕ್ಕದ್ದು. ಹೊಸ ವಸ್ತ್ರವನ್ನು ಬುಧವಾರದಲ್ಲಿ ತೊಳೆಯಬಾರದು. ಇದಕ್ಕೆ ವಸ್ತ್ರಧಾರಣೆಗೆ ಹೇಳಿದ ಕಾಲವೇ ಯುಕ್ತವಾದದ್ದು. ಹೊಸದಾಗಿ ಮಾಡಿಸಿದ ಬಂಗಾರ, ಬೆಳ್ಳಿ, ಕಂಚು ಮೊದಲಾದ ಪಾತ್ರಗಳಲ್ಲಿ ಪ್ರಥಮ ಭೋಜನಮಾಡುವಾಗ ಅಮೃತಯೋಗವು ಶುಭವು, ಮತ್ತು ಚರ, ಕ್ಷಿಪ್ರ, ಮೃದು, ಧ್ರುವನಕ್ಷತ್ರ ಇವು ಶುಭಗಳು. ಹೊಸ ಆಭರಣ ಧಾರಣೆಗೆ ಚರ, ಮೃದು, ಕ್ಷಿಪ್ರ, ಧ್ರುವ, ನಕ್ಷತ್ರ ಹಾಗೂ ಶುಭವಾರಗಳು ಪ್ರಶಸ್ತವು. ರತ್ನ ಖಚಿತ ಆಭರಣ ಧರಿಸುವದಕ್ಕೆ ಮಿಶ್ರನಕ್ಷತ್ರ, ರವಿ, ಮಂಗಳವಾರಗಳು ಶುಭವು. ಹೀಗೆ ವಸ್ತ್ರಾಭರಣಾದಿಧಾರಣ ಮುಹೂರ್ತವನ್ನು ಹೇಳಲಾಯಿತು. ಶಸ್ತ್ರಾದಿ ಧಾರಣೆಗ ಕತ್ರ ಮೊದಲಾದ ಶಸ್ತ್ರಗ್ರಹಣಕ್ಕೆ :- ಕ್ರೂರ, ಮಿಶ್ರ, ಅಶ್ವಿನೀ, ಮೃಗಶಿರ, ತೀಕ್ಷ್ಯ ಈ ನಕ್ಷತ್ರಗಳು ಪ್ರಶಸ್ತವ ಶಸ್ತ್ರಗಳ ಧಾರಣೆಗೆ:- ಧ್ರುವ, ಕ್ಷಿಪ್ರ, ಮೃದು, ಜೇಷ್ಯಾ, ವಿಶಾಖಾ ಈ ಪರಿಚ್ಛೇದ • ೩ ಪೂರ್ವಾರ್ಧ ೩೭೭ ನಕ್ಷತ್ರಗಳು ಯುಕ್ತಗಳು. ನೌಕರಿಪ್ರಾರಂಭಕ್ಕೆ:- ಕ್ಷಿಪ್ರ, ಅನುರಾಧಾ, ಧ್ರುವ ಈ ನಕ್ಷತ್ರ, ಬುಧ, ಗುರು, ರವಿ, ಶುಕ್ರವಾರ ಇವು ಪ್ರಶಸ್ತಿ, ಸ್ವಾಮಿ ನಕ್ಷತ್ರ ಹಾಗೂ ಸೇವಕನಕ್ಷತ್ರ ಒಂದೇ ಆಗಿದ್ದರೆ ಶನಿವಾರವಾದರೂ ಅಡ್ಡಿ ಇಲ್ಲ. ಮೇಣೆ (ಪಲ್ಲಕ್ಕಿ) ಆನೆ, ಕುದುರೆ ಇತ್ಯಾದಿ ವಾಹನಗಳ ಆರೋಹಣಕ್ಕೆ :- ಹಸ್ತ, ಚಿತ್ರಾ, ಸ್ವಾತಿ, ವಿಶಾಖಾ, ಅನುರಾಧಾ, ಜೇಷ್ಠಾ, ಧ್ರುವನಕ್ಷತ್ರ, ಶ್ರವಣ, ರೇವತಿ, ಪುಷ್ಯ, ಪುನರ್ವಸು ಈ ನಕ್ಷತ್ರಗಳು ಉತ್ತಮ. ರಾಜದರ್ಶನಕ್ಕೆ:- ಕ್ಷಿಪ್ರ, ಶ್ರವಣ, ಧನಿಷ್ಠಾ, ಮೃದು, ಧ್ರುವ, ಈ ನಕ್ಷತ್ರಗಳು ಶುಭಕರಗಳು, ನರ್ತನಾರಂಭಕ್ಕೆ - ಪುಷ್ಯ, ಮೃಗಶಿರ, ಧ್ರುವ, ಜೇಷ್ಠಾ, ಧನಿಷ್ಠಾ, ಅನುರಾಧಾ, ಶತಭಿಷ, ಹಸ್ತ ಈ ನಕ್ಷತ್ರಗಳು ಮತ್ತು ಶುಭವಾರಗಳು ಉತ್ತಮ, ಅಂಗಡಿ ಪ್ರಾರಂಭಿಸಲಿಕ್ಕೆ:- ಮೃದು, ಕ್ಷಿಪ್ರ, ಧ್ರುವ ಈ ನಕ್ಷತ್ರಗಳು, ರಿಕ್ತಾ ಹೊರತಾದ ತಿಥಿಗಳು, ಕುಜಹೊರತಾದ ವಾರ ಇವು ಪ್ರಶಸ್ತವು, ವಸ್ತುಗಳ ಕ್ರಯ (ಕಿಮ್ಮತ್ತು ಕೊಟ್ಟು ವಸ್ತುವನ್ನು ಪಡೆಯುವದು) : ಶ್ರವಣ, ಚಿತ್ರಾ ಶತಭಿಷ, ರೇವತಿ ಈ ನಕ್ಷತ್ರಗಳೂ, ವಿಕ್ರಯ (ಕಿಮ್ಮತ್ತು ತಗೆದುಕೊಂಡು ವಸ್ತುವನ್ನು ಕೊಡುವದು)ಕ್ಕೆ :- ಭರಣಿ, ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರಾ, ಆಶ್ಲೇಷಾ, ಮಿಶ್ರ ಈ ನಕ್ಷತ್ರಗಳೂ ಶುಭಕರಗಳು, ಸೇತುನಿರ್ಮಾಣ (ಒಡ್ಡು ಹಾಕುವದು)ಕ್ಕೆ:- ಧ್ರುವನಕ್ಷತ್ರ, ಸ್ವಾತಿ ಈ ನಕ್ಷತ್ರ ಹಾಗೂ ಗುರು, ರವಿ, ಶನಿವಾರಗಳು ಉತ್ತಮ, ಪಶುಗಳನ್ನು ಒಯ್ಯಲಿಕ್ಕೆ ಮತ್ತು ತರಲಿಕ್ಕೆ:- ವಾರಗಳಲ್ಲಿ ರವಿ, ಕುಜ, ಚಂದ್ರ, ಶನಿವಾರ ಇವುಗಳನ್ನು ಬಿಡಬೇಕು. ನಕ್ಷತ್ರಗಳಲ್ಲಿ ಶ್ರವಣ, ಚಿತ್ರಾ, ಧ್ರುವ ಈ ನಕ್ಷತ್ರಗಳನ್ನು ಬಿಡತಕ್ಕದ್ದು. ತಿಥಿಗಳಲ್ಲಿ ಅಮಾವಾಸೆ, ರಿಕ್ತಾ, ಅಷ್ಟಮೀ ಈ ತಿಥಿಗಳನ್ನು ಬಿಡಬೇಕು. ಹಸ್ತ ಪುಷ್ಯ, ಆದ್ರ್ರಾ, ಮೃಗಶಿರಾ, ಮಿಶ್ರ ನಕ್ಷತ್ರ, ಪುನರ್ವಸು, ಧನಿಷ್ಠಾ, ಅಶ್ವಿನಿ, ಹುಬ್ಬಾ, ಪೂರ್ವಾಷಾಢಾ, ಪೂರ್ವಾಭದ್ರೆ, ಜೇಷ್ಠಾ, ಶತಭಿಷ, ರೇವತಿ ಇವು ಪ್ರಶಸ್ತಿಗಳು, ಪಶುಗಳ ಕ್ರಯ-ವಿಕ್ರಯಕ್ಕೂ ಇವು ಪ್ರಶಸ್ತಿಗಳು, ಬಡ್ಡಿ ಮೊದಲಾದವು ಹೆಚ್ಚಾಗಬೇಕೆಂದಪೇಕ್ಷಿಸುವವರು:- ಲಘು, ಚರ ಈ ನಕ್ಷತ್ರಗಳಲ್ಲಿ ಮತ್ತು ಚರಲಗ್ನದಲ್ಲಿ ಹಣದ ವ್ಯವಹಾರ ಮಾಡಬೇಕು. ಕುಜವಾರ, ವೃದ್ಧಿಯೋಗ, ಸೂರ್ಯಸಂಕ್ರಾಂತಿ ಇವುಗಳಲ್ಲಿ ಸಾಲವನ್ನು ತೆಗೆದುಕೊಳ್ಳಬಾರದು. ಸಾಲಕೊಡಲಿಕ್ಕ ಮತ್ತು ಧನಸಂಗ್ರಹಮಾಡಲಿಕ್ಕೆ:- ಧನಿಷ್ಠಾ, ಶತಭಿಷ, ಪೂರ್ವಾಭದ್ರ, ಉತ್ರಾಭದ್ರಾ, ರೇವತಿ, ಹಸ್ತ, ತ್ರಿಪುಷ್ಕರ, ದ್ವಿಪುಷ್ಕರಯೋಗ, ಕುಜ, ಬುಧ, ಗುರು, ಶುಕ್ರ, ಶನಿವಾರ ಇವು ಪ್ರಶಸ್ತಿಗಳು. ಬುಧವಾರ ದಿನ ಧನವನ್ನು ಹೊರಗೆ ಕೊಡಬಾರದು. ಬುಧವಾರ ಧನಸಂಗ್ರಹಕ್ಕೆ ಉತ್ತಮ. ಕೃತ್ತಿಕಾ, ಪುನರ್ವಸು, ಉತ್ತರಾ, ವಿಶಾಖಾ, ಉತ್ರಾಷಾಢಾ, ಪೂರ್ವಾಭದ್ರ ಇವು “ತ್ರಿಪಾದ” ನಕ್ಷತ್ರಗಳಾಗಿದ್ದು ಇವುಗಳಾವದಾದರೊಂದಕ್ಕೆ ಭದ್ರಾತಿಥಿ ಹಾಗೂ ಶನಿ, ಕುಜ, ರವಿವಾರ ಇವುಗಳ ಯೋಗವಾದಲ್ಲಿ “ದ್ವಿಪುಷ್ಕರ"ಯೋಗವೆನ್ನುವರು. ಈ ತ್ರಿಪುಷ್ಕರ ದ್ವಿಪುಷ್ಕರ ಯೋಗಗಳಲ್ಲಿ ವಿಶೇಷವೇನೆಂದರೆ ಈ ಯೋಗದಲ್ಲಿ ಘಟಿಸಿದ ಶುಭ ಅಥವಾ ಅಶುಭಗಳು ಕ್ರಮದಿಂದ “ತ್ರಿಗುಣ, ದ್ವಿಗುಣವಾಗುವದು. (ತ್ರಿಪುಷ್ಕರ ಯೋಗದಲ್ಲಿ ಮರಣವಾದರೆ ಮೂರುಮರಣಗಳೂ, ದ್ವಿಪುಷ್ಕರಯೋಗದಲ್ಲಿ ಎರಡುಮರಣಗಳೂ ಆಗುವವು. ಲಾಭದ ವಿಷಯದಲ್ಲಿಯೂ ಹಾಗೆಯೇ ವೃದ್ಧಿಯಾಗುವದಂದರ್ಥ.) “ಮಿಶ್ರ, ಕ್ರೂರ, ತೀಕ್ಷ್ಯ, ಸ್ವಾತಿ ಈ ನಕ್ಷತ್ರಗಳಲ್ಲಿ ಬೇರೆಯವರಿಗೆ ಕೊಟ್ಟ ವಸ್ತು, ಬೇರೆಯವರಲ್ಲಿಟ್ಟ ವಸ್ತು ಅಥವಾ ಕಳೆದುಹೋದ ವಸ್ತುಗಳು ತಿರುಗಿ ಸಿಗಲಾರವು"ಹೀಗೆ ನಾರದವಾಕ್ಯವಿದೆ. ೩೭೮ ಧರ್ಮಸಿಂಧು ನಷ್ಟದ್ರವ್ಯವಿಚಾರ ರೋಹಿಣಿ ನಕ್ಷತ್ರಕ್ಕೆ “ಅಂಧ ಸಂಜ್ಞೆಯೂ, ಮೃಗಶಿರಗೆ “ಮಂದ” ಸಂಜ್ಞೆಯೂ, ಆರ್ದ್ರೆಗೆ “ಚಿಬಿಟ"ಸಂಜ್ಞೆಯೂ, ಪುನರ್ವಸುಗೆ “ಸುಲೋಚನ “ಸಂಜ್ಞೆಯೂ ಇದೆ. ಹೀಗೆಯೇ ಮುಂದೆ ನಾಲ್ಕು- ನಾಲ್ಕು ನಕ್ಷತ್ರಗಳಿಗೆ ಹೇಳಿದ ಸಂಜ್ಞೆಗಳಿರುತ್ತವೆ. ಇವುಗಳಲ್ಲಿ ಅಂಧ ನಕ್ಷತ್ರದಲ್ಲಿ ಕಳೆದ ವಸ್ತುವು ಶೀಘ್ರವಾಗಿ ಸಿಗುವದು. ಮಂದ ನಕ್ಷತ್ರದಲ್ಲಿ ಕಳೆದದ್ದು ಪ್ರಯತ್ನದಿಂದ ಸಿಗುವದು. ಚಿಬಿಟ ಮತ್ತು ಸುಲೋಚನ ನಕ್ಷತ್ರಗಳಲ್ಲಿ ಕಳೆದ ವಸ್ತುವು ಸಿಗುವಂತಿಲ್ಲ. ಅಂಧ ನಕ್ಷತ್ರದಲ್ಲಿ ಕಳವಾದ ವಸ್ತುವನ್ನು ಪೂರ್ವದಿಕ್ಕಿನಲ್ಲಿ ಹುಡುಕಬೇಕು. ಮಂದದಲ್ಲಿ ಕಳೆದದ್ದನ್ನು ದಕ್ಷಿಣ ದಿಕ್ಕಿನಲ್ಲೂ, ಚಿಬಿಟ ನಕ್ಷತ್ರದ್ದನ್ನು ಪಶ್ಚಿಮಕ್ಕೂ, ಸುಲೋಚನದ್ದನ್ನು ಉತ್ತರದಿಕ್ಕಿನಲ್ಲೂ ಹುಡುಕಬೇಕು. ರಾಜನ ಪಟ್ಟಾಭಿಷೇಕಕ್ಕೆ:- ಶ್ರವಣ, ಧ್ರುವನಕ್ಷತ್ರ, ಜೇಷ್ಠಾ, ಮೃದು ನಕ್ಷತ್ರ, ಕ್ಷಿಪ್ರ ನಕ್ಷತ್ರ ಇವು ಶ್ರೇಷ್ಠವು ಉತ್ತರಾಯಣ, ಸೋಮವಾರಗಳು, ಗುರು-ಶುಕ್ರರು ಉದಿಸಿರುವಾಗ ಶುಭವು. ಕುಜವಾರ ಹಾಗೂ ರಿಕ್ತಾತಿಥಿ, ಅಧಿಕಮಾಸ, ಚೈತ್ರಮಾಸ ಮತ್ತು ರಾತ್ರಿಕಾಲ ಇವು ವರ್ಜವು ಉಳಿದ ತಿಥಿ, ಮಾಸಾದಿಗಳಲ್ಲಿ ಶುಭವು. ಕೆರೆ, ಬಾವಿ ಮೊದಲಾದ ಜಲಾಶಯ ನಿರ್ಮಾಣಕ್ಕೆ:- ಮಘಾ, ಪುಷ್ಯ, ಧ್ರುವ ನಕ್ಷತ್ರ, ಮೃಗಶಿರ, ಪೂರ್ವಾಷಾಢಾ, ಅನುರಾಧಾ, ರೇವತಿ, ಧನಿಷ್ಠಾ, ಶತಭಿಷ, ಹಸ್ತ ನಕ್ಷತ್ರಗಳು ಉತ್ತಮ. ಚಂದ್ರನು ಜಲರಾಶಿಯಲ್ಲಿದ್ದರೆ, ಬುಧ ಅಥವಾ ಗುರುವು ಲಗ್ನದಲ್ಲಿದ್ದರೆ ಪ್ರಶಸ್ತವು, ಕ್ಷೌರಕ್ಕೆ :- ಚೌಲದಲ್ಲಿ ಹೇಳಿದ ನಕ್ಷತ್ರ ವಾರಾದಿಗಳು ಪ್ರಶಸ್ತವು. ರಾಜನು ಐದುದಿನಗಳಿಗೊಮ್ಮೆ ಕ್ಷೌರಮಾಡಿಕೊಳ್ಳಬೇಕು. ಇತರರು ಉಕ್ತದಿನಗಳಲ್ಲೇ ಮಾಡಬೇಕು. ಕ್ಷೌರದ ನಂತರ ಒಂಭತ್ತನೇ ದಿನ ಸ್ಮಶುಕರ್ಮ (ಗಡ್ಡ, ಮೀಸೆಗಳ ಕ್ಷೌರ) ವನ್ನು ಮಾಡಬಾರದು. ಪ್ರಾಣದಾಸೆಯಿದ್ದವನು ಚತುರ್ದಶೀ ದಿನ ಸ್ಮಶುಕರ್ಮವನ್ನೂ, ಅಮಾವಾಸೆಯ ದಿನ ಸ್ತ್ರೀಸಂಭೋಗವನ್ನೂ ಮಾಡಬಾರದು. ಅಭ್ಯಂಗ ಮಾಡಿಕೊಂಡಾಗ, ಊಟಮಾಡಿದಾಗ, ಸ್ನಾನಮಾಡಿದಾಗ, ಅಲಂಕಾರಾದಿಗಳಿಂದ ಭೂಷಿತನಾದಾಗ ಕ್ಷೌರವನ್ನು ಮಾಡಬಾರದು. ಪ್ರಯಾಣದ ದಿನ, ಯುದ್ಧಾರಂಭದಿನ, ರಾತ್ರಿ, ಸಂಧ್ಯಾಕಾಲ, ಶ್ರಾದ್ಧದಿನ, ಪ್ರತಿಪದಿ ರಿಕ್ತಾತಿಥಿ, ವ್ರತದಿನ, ವೈಧೃತಿ ಇವುಗಳಲ್ಲಿ ಸ್ಮಶುಕಾರ್ಯವನ್ನು ಮಾಡಕೂಡದು. ಸಾಮಾನ್ಯ ಎಲ್ಲ ಕರ್ಮಗಳಿಗೂ ಜನ್ಮನಕ್ಷತ್ರವು ಪ್ರಶಸ್ತವು. ಆದರೆ ಶುಕರ್ಮ, ಪ್ರಯಾಣ, ಔಷಧಸೇವನ, ವಾದವಿವಾದ ಇವುಗಳಿಗೆ ಪ್ರಶಸ್ತವಲ್ಲ. ಷಷ್ಟಿ, ಅಮಾವಾಸೆ, ಪೂರ್ಣಿಮಾ, ವ್ಯತಿಪಾತ, ಚತುರ್ದಶೀ, ಅಷ್ಟಮೀ ಇವುಗಳಲ್ಲಿ ತೈಲಾಭ್ಯಂಗ, ತೈಲಸೇವನ, ಸ್ತ್ರೀಸಂಭೋಗ, ಶಶ್ರುಕರ್ಮ ಇವು ವರ್ಜಗಳು. ರಾಜಕಾರ್ಯಾಸಕ್ತನಾದವ, ರಾಜನಿಂದ ಉಪಜೀವಿಸುವವನು ಶಶ್ರು, ರೋಮ, ಉಗುರು ಇವುಗಳನ್ನು ಕತ್ತರಿಸುವ ವಿಷಯದಲ್ಲಿ ದಿನಶುದ್ದಿ ನೋಡುವದಿಲ್ಲ. ನಿಷಿದ್ದದಿನವಾದರೂ ನೈಮಿತ್ತಿಕಕಾರ್ಯ, ಯಜ್ಞ ಪಿತ್ರಾದಿ ಮರಣ ಇವುಗಳಲ್ಲಿ ಕ್ಷೌರನಿಷೇಧವಿಲ್ಲ. ಇದರಂತೆ ಕಾರಾಗೃಹದಿಂದ ಬಿಡುಗಡೆಯಾದವನೂ, ರಾಜ, ಬ್ರಾಹ್ಮಣ ಇವರಿಂದ ಆಜ್ಞಾಪಿತನಾದವನೂ ಅವಶ್ಯವಾಗಿ ಕ್ಷೌರಮಾಡಿಕೊಳ್ಳಬೇಕು. ತಂದೆಯು ಬದುಕಿದ್ದವ ಹಾಗೂ ಎಳೇವಯಸ್ಸಿನವನೂ ಮುಂಡನ ಕ್ಷೌರ (ತಲೆ ಬೋಳಿಸುವಿಕೆ) ವನ್ನು ಮಾಡಬಾರದು. ಮುಂಡನ ಮಾಡಬಾರದು” ಎಂದಿದ್ದರೂ ಕೂದಲು ಕತ್ತರಿಸುವಕೆಗತ್ತಿಯಿಲ್ಲ. ಸ್ಮಶುಕರ್ಮಮಾಡುವಾಗ ಉತ್ತರ ಅಥವಾ ಪೂರ್ವಾಭಿಮುಖನಾಗಿರತಕ್ಕದ್ದು, ಕೇಶ, ಶ್ರು, ರೋಮ, ಉಗುರು ಇವುಗಳನ್ನು ಛೇದಮಾಡುವಾಗಪರಿಚ್ಛೇದ - ೩ ಪೂರ್ವಾರ್ಧ A26 ಉತ್ತರಮುಖನಾಗಿರಬೇಕು. ನಿಂದವಾರಾದಿಗಳಲ್ಲಿ ಶುಕರ್ಮಮಾಡುವದಿದ್ದಲ್ಲಿ ಅದರ ದೋಷನಿವಾರಣೆಗಾಗಿ “ಆನರ್ತೋಹಿಚ್ಚತ್ರ: ಪಾಟಲಿಪುತ್ರದಿತಿರ್ದಿತಿ: ಶ್ರೀಶಃ| ಕ್ಷೌರೇಸ್ಮರಣಾದೇಷಾಂ ದೋಷಾನಶ್ಯಂತಿ ನಿಃಶೇಷಾಃ” ಅಂದರೆ ಆನರ್ತ, ಅಹಿಚ್ಛತ್ರ, ಪಾಟಲಿಪುತ್ರ, ಅದಿತಿ, ದಿತಿ, ಶ್ರೀಶ ಇವರನ್ನು ಸ್ಮರಣಮಾಡಿದಲ್ಲಿ (ಶ್ರುಕಾಲದಲ್ಲಿ) ಎಲ್ಲ ದೋಷಗಳೂ ದೂರಾಗುವವು. ರೋಗೋತ್ಪತ್ತಿಕಾಲದ ನಕ್ಷತ್ರಫಲ ಅಶ್ವಿನಿ ನಕ್ಷತ್ರದಲ್ಲಿ ರೋಗೋತ್ಪತ್ತಿಯಾಗಿದ್ದರೆ ಒಂದು ದಿನ ಅಥವಾ ಒಂಭತ್ತು ದಿನ ಅಥವಾ ಇಪ್ಪತ್ತೈದು ದಿನ ಪರ್ಯಂತ. ಪೀಡೆಯು ಭರಣಿಯಲ್ಲಾದರೆ ಹನ್ನೊಂದು, ಇಪ್ಪತ್ತೊಂದು ಅಥವಾ ಮಾಸಪರ್ಯಂತ ಪೀಡೆಯು. ಇಲ್ಲವೆ ಮರಣಕೃತ್ತಿಕೆಯಲ್ಲಿ ಒಂಭತ್ತು, ಹತ್ತು, ಇಪ್ಪತ್ತೊಂದು ದಿನಗಳು, ರೋಹಿಣಿಯಲ್ಲಿ ಹತ್ತು, ಒಂಭತ್ತು, ಏಳು ಅಥವಾ ಮೂರು ದಿನಗಳು, ಮೃಗಶಿರೆಯಲ್ಲಿ ಐದು, ಒಂಭತ್ತು ಅಥವಾ ಮಾಸ. ಆರ್ದ್ರೆಯಲ್ಲಿ ಮರಣ ಅಥವಾ ಹತ್ತುದಿನ. ಒಂದುಮಾಸ. ಪುನರ್ವಸುವಿನಲ್ಲಿ ಏಳು, ಒಂಭತ್ತು ಇಲ್ಲವೆ ಮರಣ, ಪುಷ್ಯದಲ್ಲಿ ಏಳುದಿನ ಇಲ್ಲವೆ ಮರಣ. ಆಶ್ಲೇಷೆಯಲ್ಲಿ ಮರಣ ಅಥವಾ ಇಪ್ಪತ್ತು ಮೂವತ್ತು ಅಥವಾ ಒಂಭತ್ತು ದಿನ ಪೀಡೆಯು, ಮಫೆಯಲ್ಲಿ ಮರಣ ಇಲ್ಲವೆ ಒಂದು ವರೆ ತಿಂಗಳು ಅಥವಾ ಮಾಸ, ಇಪ್ಪತ್ತು ದಿನ ಪೀಡೆಯು, ಹುಬ್ಬೆಯಲ್ಲಿ ಮರಣ, ಒಂದು ಸಂವತ್ಸರ ಇಲ್ಲವೆ ಮಾಸ, ಹದಿನೈದು ಅಥವಾ ಅರವತ್ತು ದಿನಗಳು. ಉತ್ತರೆಯಲ್ಲಿ ಇಪ್ಪತ್ತೈದು, ಹದಿನೈದು ಅಥವಾ ಏಳು ದಿನಗಳು, ಹಸ್ತದಲ್ಲಿ :- ಮರಣ ಅಥವಾ ಎಂಟು, ಒಂಭತ್ತು, ಏಳು ಅಥವಾ ಐದು ದಿನಗಳು, ಚಿತ್ರೆಯಲ್ಲಿ:- ಒಂದು ಪಕ್ಷ ಇಲ್ಲವೆ ಎಂಟು, ಒಂಭತ್ತು, ಏಳು ಇಲ್ಲವೆ ಹನ್ನೊಂದು ದಿನಗಳು, ಸ್ವಾತಿಯಲ್ಲಿ - ಮರಣ ಇಲ್ಲವೆ ಒಂದು, ಎರಡು, ಮೂರು, ನಾಲ್ಕು ಮಾಸಗಳು ಅಥವಾ ಹತ್ತು ದಿನಗಳಲ್ಲಿ ರೋಗನಾಶವು. ಅನುರಾಧಯಲ್ಲಿ :- ಹತ್ತುರಾತ್ರಿ ಅಥವಾ ಇಪ್ಪತ್ತೆಂಟು ರಾತ್ರಿ, ಜೇಷ್ಟೆಯಲ್ಲಿ:- ಮರಣ ಅಥವಾ ಪಕ್ಷ, ಮಾಸ ಇಲ್ಲವೆ ಇಪ್ಪತ್ತೊಂದು ದಿನ ಪೀಡೆಯು. ಮೂಲದಲ್ಲಿ :- ಮರಣ ಇಲ್ಲವೆ ಪಕ್ಷ, ಒಂಭತ್ತು ರಾತ್ರಿ ಇಲ್ಲವೆ ಇಪ್ಪತ್ತು ದಿನ ಪೀಡೆ. ಪೂರ್ವಾಷಾಢದಲ್ಲಿ :- ಮರಣ ಇಲ್ಲವೆ ಎರಡು, ಮೂರು, ಆರು ಮಾಸಗಳು ಇಲ್ಲವೆ ಇಪ್ಪತ್ತು ದಿನಗಳು ಇಲ್ಲವೆ ಪಕ್ಷದಿಂದ ಪೀಡೆ ನಾಶವು. ಉತ್ರಾಷಾಢಾದಲ್ಲಿ - ಒಂದುವರೆ ತಿಂಗಳು ಇಪ್ಪತ್ತು ದಿನ ಇಲ್ಲವೆ ಮಾಸವು. ಶ್ರವಣದಲ್ಲಿ :- ಇಪ್ಪತ್ತೈದು ಇಲ್ಲವೆ ಹತ್ತು, ಹನ್ನೊಂದು ಇಲ್ಲವೆ ಅರವತ್ತು ದಿನಗಳು, ಧನಿಷ್ಠೆಯಲ್ಲಿ :- ಹತ್ತು ರಾತ್ರಿ, ಪಕ್ಷ, ಮಾಸ ಇಲ್ಲವೆ ಹದಿಮೂರು ರಾತ್ರಿಗಳು, ಶತಭಿಷೆಯಲ್ಲಿ :- ಹನ್ನೆರಡು ಇಲ್ಲವೆ ಹನ್ನೊಂದು ದಿನಗಳು. ಪೂರ್ವಾಭದ್ರೆಯಲ್ಲಿ :- ಮರಣ ಇಲ್ಲವೆ ಎರಡು ಮೂರು ಮಾಸಗಳು; ಇಲ್ಲವೆ ಹತ್ತು ರಾತ್ರಿಗಳು, ಉತ್ರಾಭದ್ರೆಯಲ್ಲಿ:- ಒಂದೂ ವರೆ ತಿಂಗಳು. ಪಕ್ಷ, ಏಳು ದಿನ ಇಲ್ಲವೆ ಹತ್ತು ದಿನಗಳು, ರೇವತಿಯಲ್ಲಿ ಜ್ವರಾದಿಗಳುಂಟಾದರೆ ದಶದಿನ ಇಲ್ಲವೆ ಇಪ್ಪತ್ತೆಂಟು ರಾತ್ರಿವರೆಗೆ ಪೀಡೆಯು. ಜನ್ಮನಕ್ಷತ್ರ, ಜನ್ಮರಾಶಿಗಳಲ್ಲಿ ಅಷ್ಟಮ ಚಂದ್ರನಿರುವಾಗ ರೋಗೋತ್ಪತ್ತಿಯಾದರೆ ಮರಣವು ರವಿವಾರ, ಮಘಾ, ದ್ವಾದಶಿಯೋಗವಾದರೆ, ಚಂದ್ರವಾರ ವಿಶಾಖೆ, ಏಕಾದಶಿಗಳು, ಕುಜವಾರ, ಪಂಚಮೀ, ಆದ್ರೆಗಳು, ಬುಧವಾರ, ತೃತೀಯಾ, ೩೮೦ ಧರ್ಮಸಿಂಧು ಉತ್ರಾಷಾಢಗಳು, ಗುರುವಾರ-ಶತಭಿಷ-ಷಷ್ಠಿಗಳು ಶುಕ್ರವಾರ-ಅಷ್ಟಮೀ ಅಶ್ವಿನಿಗಳು, ಶನಿವಾರ- ಪೂರ್ವಾಷಾಢಾ-ನವಮಿಗಳು, ಹೀಗೆ ಮೂರು ಮೂರು ಯೋಗಗಳಲ್ಲಿ ಮರಣವು ರವಿವಾರ ಅನುರಾಧಾ-ಭರಣಿ, ಸೋಮವಾರ ಆದ್ರ್ರಾ ಉತ್ರಾಷಾಢಾ, ಕುಜವಾರ ಮಘಾ-ಶತಭಿಷಗಳು, ಬುಧವಾರ ವಿಶಾಖಾ ಅಶ್ವಿನಿಗಳು, ಗುರುವಾರ ಜೇಷ್ಠಾಮೃಗಶಿರೆಗಳು, ಶುಕ್ರವಾರ ಶ್ರವಣ- ಆಶ್ಲೇಷಗಳು, ಶನಿವಾರ ಪೂರ್ವಾಭದ್ರಾ-ಹಸ್ತ ಹೀಗೆ ಆಯಾಯ ವಾರಕ್ಕೆ ಎರಡು ನಕ್ಷತ್ರಗಳಲ್ಲೊಂದರ ಯೋಗವಾದಾಗ ಉಂಟಾದ ರೋಗವು ನಾಶಕ್ಕೆ ಕಾರಣವು. ಈ ತಿಥಿ, ವಾರ, ನಕ್ಷತ್ರಗಳ ಶಾಂತಿಯನ್ನು ವಿಸ್ತಾರವಾಗಿಯೇ ಮಾಡಬೇಕು ಯಾವ ನಕ್ಷತ್ರದಲ್ಲಿ ಮರಣವನ್ನು ಹೇಳಿದೆಯೋ ಅಲ್ಲಿ ಶಾಂತಿಯು ಆವಶ್ಯಕವು, ಉಳಿದವುಗಳಲ್ಲಿ ಕೃತಾಕೃತವು. ಈ ಶಾಂತಿಪ್ರಯೋಗಗಳನ್ನೆಲ್ಲ “ಶಾಂತಿಸಾರ” ಆದಿ ಗ್ರಂಥಗಳಲ್ಲಿ ತಿಳಿಯತಕ್ಕದ್ದು. ಸರ್ವಸಾಧಾರಣ ಶಾಂತಿಪ್ರಯೋಗ ದೇಶ ಕಾಲಗಳನ್ನುಚ್ಚರಿಸಿ “ಮಮ ಉತ್ಪನ್ನವಾದೇಃ ಜೀವಚ್ಚರೀರಾವಿರೋಧೇನ ಸಮೂಲನಾಶಾರ್ಥಂ ಅಮುಕ ನಕ್ಷತ್ರ ಶಾಂತಿಂ ಕರಿಷ್ಯ” ಹೀಗೆ ಸಂಕಲ್ಪಿಸಿ ಗಣೇಶ ಪೂಜಾದಿಗಳನ್ನು ಮಾಡಿ ಆಚಾರ್ಯನನ್ನು ವರಿಸಿ ಕಲಶದ ಮೇಲಿನ ಪೂರ್ಣ ಪಾತ್ರೆಯಲ್ಲಿ ಹನ್ನೆರಡು ಎಸಳುಗಳ ಪದ್ಮವನ್ನು ಬರೆದು ನಕ್ಷತ್ರದೇವತಾಕವಾದ ಸುವರ್ಣ ಪ್ರತಿಮೆಯನ್ನಿಟ್ಟು ಪೂಜಿಸುವದು. ಪದ್ಮದ ಹನ್ನೆರಡು ದಳಗಳಲ್ಲಿ ಸಂಕರ್ಷಣಾದಿ ಹನ್ನೆರಡು ಅಥವಾ ದ್ವಾದಶಾದಿತ್ಯರನ್ನು ಪೂಜಿಸಿ ದೂರ್ವಾಸಮಿಧ, ತಿಲ, ಕ್ಷೀರ, ಆಜ್ಯಗಳಿಂದ ಗಾಯತ್ರೀ-ಮಂತ್ರದಿಂದ ಆಯಾಯ ದೇವತೆಗೆ ನೂರೆಂಟು ಹೋಮಮಾಡಿ ಮರಣಾದಿ ವಿಶೇಷ ಪೀಡೆ ಹೇಳಿದಲ್ಲಿ ಸಹಸ್ರ ಹೋಮವನ್ನು ಮಾಡಿ, ಮೊಸರು ಅನ್ನದಿಂದ ಬಲಿಯನ್ನು ಹಾಕಿ, ಆಚಾರ್ಯನಿಗೆ ಗೋವು ಹಾಗೂ ಪ್ರತಿಮೆಯನ್ನು ದಾನಮಾಡತಕ್ಕದ್ದು, ಇದು ಸಂಕ್ಷಿಪ್ತ ವಿಧಿಯು, ಶಾಂತಿಮಯೂಖಾದಿಗಳಲ್ಲಿ ನಕ್ಷತ್ರಭೇದದಿಂದ ಹವಿಸ್ಸು, ಮಂತ್ರಬಲಿ, ಧೂಪಾದಿಭೇದ, ತಿಥಿವಾರ ದೇವತಾ ಮಂತ್ರಾದಿಭೇದ ಇವುಗಳನ್ನೆಲ್ಲ ಸವಿಸ್ತರ ಹೇಳಿದೆ. ಅಲ್ಲಿ ನೋಡತಕ್ಕದ್ದು. ಕರ್ಮವಿವಾಕದಲ್ಲಿ “ಜಾತವೇದಸೇ “ಎಂಬ ಮಂತ್ರದ ಹತ್ತು ಸಾವಿರ ಜಪ ಇಲ್ಲವೆ ಲಕ್ಷ ಜಪ. ಶಿವನಿಗೆ ನಮಕಾನುವಾಕಗಳಿಂದ ಸಹಸ್ರ ಕಲಶಾಭಿಷೇಕ ಇಲ್ಲವೆ ವಿಷ್ಣುವಿನಲ್ಲಿ ಪುರುಷಸೂಕ್ತದಿಂದ ಸಹಸ್ರ ಕುಂಭಾಭಿಷೇಕ. ಇವೆಲ್ಲ ಜ್ವರನಾಶಕಗಳೆಂದು ಹೇಳಿದ. ಇಲ್ಲವೇ ಭಾಗವತದಲ್ಲಿ ಹೇಳಿದ ಜ್ವರಸ್ತೋತ್ರ ಜಪಮಾಡುವದು. ಸರ್ವರೋಗ ನಾಶಕ ವಿಧಾನ ರೋಗಾನುಸಾರವಾಗಿ ಲಘುರುದ್ರ, ಮಹಾರುದ್ರ, ಅತಿರುದ್ರ ಇವುಗಳನ್ನು ಮಾಡಬೇಕು. ತೀವ್ರರೋಗದಲ್ಲಿ ಹೆಚ್ಚಿನ ಪ್ರಮಾಣದಿಂದ ಮಾಡಬೇಕೆಂಬುದು ಸಹಜ, ರುದ್ರಗಳ ಜವ ಇಲ್ಲವೆ ಅಭಿಷೇಕ ಮಾಡಬಹುದು. ವಿಷ್ಣು ಸಹಸ್ರನಾಮ ಸ್ತೋತ್ರವನ್ನು ನೂರು ಇಲ್ಲವೆ ಸಹಸ್ರ ಇಲ್ಲವೆ ಹತ್ತು ಸಾವಿರ ಮಾಡತಕ್ಕದ್ದು, “ಉನ್ನ ಈ ಸೂರ್ಯಜಪ ಅಥವಾ ಸೂರ್ಯನಮಸ್ಕಾರ, ಅರ್ಘ ಇತ್ಯಾದಿ. “ಮುಂಡಾತ್ತಾ” ಸೂಕ್ತಜಪ, ಅಚ್ಯುತಾನಂತ ಗೋವಿಂದ ಈ ನಾಮತ್ರಯಜಪ ಅಥವಾ ಮತ್ಯುಂಜಯ ಜಪ ಇವುಗಳನ್ನೆಲ್ಲ ತಾರತಮ್ಯಾನುಸಾರ ಮಾಡತಕ್ಕದ್ದು. ಇವೆಲ್ಲ ಪರಿಚ್ಛೇದ - ೩ ಪೂರ್ವಾರ್ಧ ೩೮೧ ಸರ್ವರೋಗನಾಶಕಗಳು. ಜೇಷ್ಠಾ, ಮೂಲ, ಶ್ರವಣ, ಸ್ವಾತಿ, ಮೃದು ನಕ್ಷತ್ರ, ಕ್ಷಿಪ್ರ ನಕ್ಷತ್ರ, ಪುನರ್ವಸು ಈ ನಕ್ಷತ್ರಗಳಲ್ಲಿ ಗುರು, ಶುಕ್ರ, ಚಂದ್ರವಾರಗಳಲ್ಲಿ ಔಷಧಸೇವನೆಯು ಪ್ರಶಸ್ತ್ರವು. ರೋಗವು ಮುಕ್ತವಾದ ನಂತರ ಸ್ನಾನವನ್ನು ರಿಕ್ತಾ ತಿಥಿ, ಚರಲಗ್ನ, ಮಿಶ್ರನಕ್ಷತ್ರ, ಕ್ಷಿಪ್ರನಕ್ಷತ್ರ, ಜೇಷ್ಯಾ, ಮೂಲ, ಹುಬ್ಬಾ, ಚಿತ್ರಾ, ಭರಣಿ, ಶ್ರವಣ, ಧನಿಷ್ಠಾ, ಶತಭಿಷ ಈ ನಕ್ಷತ್ರ ಹಾಗೂ ರವಿ, ಕುಜ, ಬುಧ, ಶನಿವಾರ ಇವುಗಳಲ್ಲಿ ಮಾಡಿದರೆ ಶುಭವು. ರೋಗಮುಕ್ತಸ್ನಾನವನ್ನು ವೈಧೃತಿ, ವ್ಯತೀಪಾತ, ಭದ್ರಾತಿಥಿ, ಸಂಕ್ರಾಂತಿ ಇವುಗಳಲ್ಲಿ ಮಾಡಬಹುದು. ಇದರಲ್ಲಿ ಚಂದ್ರ-ತಾರಾಬಲಗಳ ಆವಶ್ಯಕತೆಯಿಲ್ಲ. ಅಭ್ಯಂಗ ಭದ್ರಾತಿಥಿ, ಸಂಕ್ರಾಂತಿ, ವ್ಯತಿಪಾತ, ವೈಧೃತಿ, ಶುಕ್ರ, ಗುರು, ರವಿ, ಕುಜವಾರ, ಷಷ್ಠಿ, ಪ್ರತಿಪದಿ, ಶ್ರಾದ್ಧದಿನ ಇವುಗಳಲ್ಲಿ ಕಾರಣವಿಲ್ಲದೆ ಅಭ್ಯಂಗಸ್ನಾನ ಮಾಡಬಾರದು. ಕಾರಣ ಅಂದರೆ ಮಂಗಲಕಾರ್ಯ, ವಿಜಯೋತ್ಸವ, ವಿಜಯದಶಮಿ, ಸಂವತ್ಸರದ ಆದಿ ದಿನ, ದೀಪಾವಳಿ ಇವುಗಳಲ್ಲಿ ದಿನಗಳನ್ನು ನೋಡತಕ್ಕದ್ದಿಲ್ಲ, ಬುಧವಾರ, ಶತಭಿಷ, ಮಘಾ ಇವುಗಳಲ್ಲಿ ಅಭ್ಯಂಗ ಮಾಡಿದ ಸ್ತ್ರೀಯು ಪತಿಘಾತುಕಳಾಗುವಳು. ಇದಕ್ಕೆ ಅಪವಾದ - ಸಾಸಿವೆಎಣ್ಣೆ, ಸುಗಂಧಿ ತೈಲ ಅಥವಾ ಪುಷ್ಪಗಳಿಂದ ತಯಾರಿಸಿದ ತೈಲ, ಬೇರೆ ವಸ್ತುವಿನಿಂದ ಮಿಶ್ರಿತವಾದ ತೈಲ, ಕುದಿಸಿದ ಅಥವಾ ಗೋಧೃತದಿಂದ ಯುಕ್ತವಾದ ತೈಲ, ಅಥವಾ ಬ್ರಾಹ್ಮಣನ ಪಾದಧೂಳಿಯಿಂದ ಯುಕ್ತವಾದ ತೈಲ ಇವುಗಳಿಂದ ಅಭ್ಯಂಗ ಮಾಡಲು ನಿಷಿದ್ಧದಿನವಾದರೂ ಅಡ್ಡಿ ಇಲ್ಲ. ಪ್ರತಿದಿನ ಮಾಡಬೇಕಾದ ಅಭ್ಯಂಗದಲ್ಲಿಯಾದರೂ ದೋಷವಿಲ್ಲ. ರವಿವಾರ ಮಾಡುವದಿದ್ದಲ್ಲಿ ಆ ಎಣ್ಣೆಯಲ್ಲಿ ಪುಷ್ಪವನ್ನು ಹಾಕಿ ಮಾಡಬೇಕು. ಕುಜವಾರದಲ್ಲಿ ಮೃತ್ತಿಕ, ಶುಕ್ರವಾರ ಗೋಮಯ, ಹೀಗೆ ಆಯಾಯ ವಸ್ತುವನ್ನು ಆಯಾಯ ವಾರಗಳಲ್ಲಿ ಹಾಕಿ ಆ ಎಣ್ಣೆಯಿಂದ ಸ್ನಾನಮಾಡಿದರೆ (ನಿಷಿದ್ಧ ದಿನದಲ್ಲಾದರೂ ಅದು ಸುಖದಾಯಕವಾಗುವದು. ಗೃಹಾರಂಭ ಮುಹೂರ್ತಾದಿಗಳು ವೈಶಾಖ, ಫಾಲ್ಗುನ, ಪುಷ್ಯ, ಶ್ರಾವಣ, ಮಾರ್ಗಶೀರ್ಷ ಈ ತಿಂಗಳಲ್ಲಿ ಗೃಹನಿರ್ಮಾಣಾರಂಭ, ಪ್ರವೇಶ, ಕಂಭ ನಿಲ್ಲಿಸುವದು ಇವುಗಳಿಗೆ ಶುಭವು. ಗೃಹಕಾರ್ಯಕ್ಕೆ ಕಾರ್ತಿಕ, ಮಾಘಗಳು ಶುಭವೆಂದು ನಾರದನ ಮತವು, ಹುಲ್ಲಿನ ಮನೆಯನ್ನು ಎಲ್ಲ ತಿಂಗಳಲ್ಲೂ ಕಟ್ಟಬಹುದು. ಮುಖ್ಯವಾದ ಮನೆಯನ್ನು ಪುಷ್ಯದಲ್ಲಿ ಕಟ್ಟತಕ್ಕದ್ದಲ್ಲ. ಹಸ್ತ, ಚಿತ್ರಾ, ಸ್ವಾತಿ, ಧ್ರುವನಕ್ಷತ್ರ, ಮೃದುನಕ್ಷತ್ರ, ಧನಿಷ್ಠಾ, ಶತಭಿಷ, ಪುಷ್ಕ ಇವು ಪ್ರಶಸ್ತಿಗಳು. ರಿಕ್ತಾತಿಥಿ, ಮಂಗಳವಾರ, ರವಿವಾರಗಳು ತ್ಯಾಜ್ಯಗಳು. ಹೀಗೆ ಹೇಳಿದ ಕಾಲದಲ್ಲಿ ಗೃಹಾರಂಭ ಮತ್ತು ಪ್ರವೇಶಗಳನ್ನು ಮಾಡುವದು ಶ್ರವಣ, ಅಶ್ವಿನೀ, ಕ್ರೂರನಕ್ಷತ್ರ, ಅನುರಾಧಾ, ಆಶ್ಲೇಷಾ, ಮೂಲ, ಪುಷ್ಯ, ಹಸ್ತ ಮೃಗಶಿರಾ, ರೇವತಿ, ಧ್ರುವನಕ್ಷತ್ರ ಇವುಗಳಲ್ಲಿ ಶಿಲಾನ್ಯಾಸ (ಕೆಸರುಗಲ್ಲಿಡುವದು) ಮತ್ತು ಖನನ ಕಾರ್ಯವನ್ನು ಮಾಡುವದು. ಕೇಂದ್ರ ಮತ್ತು ಅಷ್ಟಮ ಸ್ಥಾನಗಳಲ್ಲಿ ಪಾಪಗ್ರಹರಿರಬಾರದು. ಸ್ಥಿರಲಗ್ನವು ಉತ್ತಮ. ಧನಿಷ್ಠಾದಿ ರೇವತಿ ವರೆಗಿನ ನಕ್ಷತ್ರಗಳಲ್ಲಿ ಮನೆಯ ಕಂಭವನ್ನು ನೆಡಬಾರದು. ವೃಷವಾಸ್ತುಚಕ್ರ:- ಸೂರ್ಯನಕ್ಷತ್ರದಿಂದ ಆ ದಿನದ ಚಂದ್ರನಕ್ಷತ್ರದ ವರೆಗೆ ಎಣಿಸುವದು. ಮೊದಲಿನ ಏಳು ನಕ್ಷತ್ರಗಳು ಅಶುಭಗಳು. ಎಂಟರಿಂದ ಹನ್ನೊಂದು ನಕ್ಷತ್ರದ ವರೆಗೆ ಶುಭಗಳು. ೩೮೨ ಧರ್ಮಸಿಂಧು ಉಳಿದ ಹತ್ತು ನಕ್ಷತ್ರಗಳು ಅಶುಭಗಳು. ಹೀಗ ವೃಷವಾಸ್ತು ಚಕ್ರವನ್ನು ನೋಡಿ ಶುಭದಿನ ಸಿಕ್ಕಿದಾಗ ಗೃಹಾರಂಭ ಮಾಡಬೇಕು. ಸೂರ್ಯನಿದ್ದ ನಕ್ಷತ್ರದಿಂದ ನಾಲ್ಕು, ಸೂರ್ಯನಿದ್ದ ನಕ್ಷತ್ರದಿಂದ ಹದಿನೈದನೇ ನಕ್ಷತ್ರದಿಂದ ನಾಲ್ಕು, ಇಪ್ಪತ್ತೂರರಿಂದ ಐದು ಈ ನಕ್ಷತ್ರಗಳು ಗೃಹಾರಂಭ-ಪ್ರವೇಶಗಳಿಗೆ ಅಶುಭಗಳು. ಮುಖ್ಯಗೃಹದ ಪೂರ್ವದಿಕ್ಕಿನಲ್ಲಿ ಸ್ನಾನಗೃಹ, ಆತ್ಮೀಯಕ್ಕೆ ಪಾಕಗೃಹ, ದಕ್ಷಿಣಕ್ಕೆ ಶಯನಗೃಹ, ನೈರುತ್ಯದಲ್ಲಿ ವಸ್ತ್ರಗೃಹ, ಪಶ್ಚಿಮಕ್ಕೆ ಭೋಜನಗೃಹ, ವಾಯುವ್ಯಕ್ಕೆ ಪಶುಗೃಹ, ಉತ್ತರಕ್ಕೆ ಭಾಂಡಾರಗೃಹ, ಈಶಾನ್ಯಕ್ಕೆ ದೇವಗೃಹ ಹೀಗೆ ಆಯಾಯ ದಿಕ್ಕಿನಲ್ಲಿ ಆಯಾಯ ಗ್ರಹವಿರಬೇಕು. ಧ್ರುವನಕ್ಷತ್ರದ ಮೇಲಿಂದ ಪೂರ್ವದಿಕ್ಕನ್ನು ನಿಷ್ಕರ್ಷಿಸುವದು. ಮನೆಯದ್ವಾರವನ್ನು ಮೂಲೆಯಲ್ಲಿ ಅಥವಾ ಮಾರ್ಗಬರುವಲ್ಲಿ, ತಿರುಗುಮುರುಗುಸ್ಥಳದಲ್ಲಿ ಬಾವಿ, ಬೇರೆಯವರ ದ್ವಾರದ ಎದುರು ಇವುಗಳಲ್ಲಿ ಹೆಸರು, ಸ್ತಂಭ, ವೃಕ್ಷ, ದೇವಸ್ಥಾನ ಇವು ಎದುರಾದ ಸ್ಥಳದಲ್ಲಿ ಮಾಡಬಾರದು. ಮನೆಯ ಎತ್ತರದ ಎರಡುಪಟ್ಟು ಕೋನ ಮೊದಲಾದವುಗಳ ಅಂತರವಿದ್ದರೆ ದ್ವಾರಕ್ಕೆ “ವೇಧ” ದೋಷವಿಲ್ಲ. ಸೂತ್ರನ್ಯಾಸ, ಗೋಡೆ, ಶಿಲಾನ್ಯಾಸ, ಕಂಭಸ್ಥಾಪನ ಇವುಗಳ ಆರಂಭವನ್ನು ಆತ್ಮೀಯ ದಿಕ್ಕಿನಿಂದ ಪ್ರಾರಂಭಿಸಬೇಕೆಂದು ಕಶ್ಯಪನು ಹೇಳುತ್ತಾನೆ. ಒಂದು ಮನೆಗೆ ಉಪಯೋಗಿಸಿದ ಕಟ್ಟಿಗೆಯನ್ನು ಇನ್ನೊಂದು ಮನೆಗೆ ಉಪಯೋಗಿಸಬಾರದು. ನೂತನ ಗೃಹಕ್ಕೆ ನೂತನ ಕಟ್ಟಿಗೆಯನ್ನೇ ಉಪಯೋಗಿಸಬೇಕು. ಜೀರ್ಣ ಗೃಹಕ್ಕೆ ಹಳೆಯ ಕಟ್ಟಿಗೆಯಾದರಡ್ಡಿಯಿಲ್ಲ. ಮೂವತ್ತೆರಡು ಹಸ್ತ ಪ್ರಮಾಣಕ್ಕಿಂತ ಹೆಚ್ಚಾದ, ನಾಲ್ಕು ದ್ವಾರವುಳ್ಳ, ಹುಲ್ಲಿನ ಹೊದಿಕೆಯದಾದ, ಗೃಹಕ್ಕೆ “ಆಯವ್ಯಯಾದಿಗಳನ್ನು ವಿಚಾರಿಸತಕ್ಕದ್ದಿಲ್ಲ. ಗೃಹಪ್ರವೇಶ ನೂತನ ಗೃಹಪ್ರವೇಶಕ್ಕಿಂತ ಮೊದಲು ವಾಸ್ತುಪೂಜಾವಿಧಿಯನ್ನು ಮುಗಿಸಿಕೊಳ್ಳತಕ್ಕದ್ದು. ಮೈತ್ರ, ಧ್ರುವ, ಕ್ಷಿಪ್ರ,ಚರ, ಮೂಲ, ಈ ನಕ್ಷತ್ರಗಳು ಪ್ರಶಸ್ತಿಗಳು. ಅದರಿಂದ ಧನ, ಪುತ್ರ ಮೊದಲಾದ ಫಲಪ್ರಾಪ್ತಿಯಾಗುವದು. ವಾಸ್ತುಶಾಂತಿಯ ಪ್ರಯೋಗವನ್ನು ಬೇರೆ ಗ್ರಂಥಗಳಲ್ಲಿ ನೋಡತಕ್ಕದ್ದು. ನೂತನ ಗೃಹಪ್ರವೇಶಕ್ಕೆ ರಾತ್ರಿಯು ಉತ್ತಮವೆಂದು ಕೆಲಗ್ರಂಥಗಳಲ್ಲಿ ಹೇಳಿದೆ. ಗೃಹಾರಂಭಕ್ಕೆ ಹೇಳಿದ ಮಾಸ, ನಕ್ಷತ್ರಾದಿಗಳಲ್ಲಿ ಗೃಹಪ್ರವೇಶವೂ ಆಗತಕ್ಕದ್ದು ಶುಭವು. ಕಲ ಗ್ರಂಥಗಳಲ್ಲಿ ಮಾಘ, ಕಾರ್ತಿಕ, ಜೇಷ್ಠ ಮಾಸಗಳೂ ಮೃದುಸಂಜ್ಞಕ, ಧ್ರುವನಕ್ಷತ್ರಗಳೂ ಶುಭಕರವೆಂದು ಹೇಳಿದೆ. ಕ್ಷಿಪ್ರ, ಚರ ನಕ್ಷತ್ರಗಳು ಮಧ್ಯಮಗಳು. ತೀಕ್ಷ್ಯ, ಉಗ್ರ, ಮಿಶ್ರ ನಕ್ಷತ್ರಗಳು ವರ್ಜಗಳು. ಗೃಹಪ್ರವೇಶಕ್ಕೆ ಲಗ್ನಶುದ್ಧಿ- ಯಾವ ಲಗ್ನದಲ್ಲಿ ಪ್ರವೇಶ ಮಾಡತಕ್ಕದ್ದಿದೆಯೋ ಆ ಲಗ್ನದಿಂದ ತೃತೀಯ, ಪಪ್ಪ, ಏಕಾದಶಗಳಲ್ಲಿ ಪಾಪಗ್ರಹರಿದ್ದರೆ ಶುಭವು. ಪಪ್ಪ, ಅಷ್ಟಮ, ದ್ವಾದಶಗಳಲ್ಲಿ ಶುಭಗ್ರಹರರಬಾರದು. ಚತುರ್ಥ, ಅಷ್ಟಮಗಳಲ್ಲಿ ಯಾವ ಗ್ರಹರೂ ಇರಬಾರದು. ಯಜಮಾನನ ಜನ್ಮ ಲಗ್ನ ಅಥವಾ ರಾಶಿಯಿಂದ ಮುಹೂರ್ತಲಗ್ನವು ಅಷ್ಟಮವಾಗಿರಬಾರದು. ಸೂರ್ಯನಿದ್ದ ನಕ್ಷತ್ರದಿಂದ ಮುಂದೆ ಐದುನಕ್ಷತ್ರಗಳು ಅಶುಭಗಳು. ೧೪ ನೇ ನಕ್ಷತ್ರದಿಂದ ಮುಂದೆ ೮ ನಕ್ಷತ್ರಗಳು ಅಶುಭಗಳು. ಅಂದರೆ ಸೂರ್ಯನಿಂದ ೧,೨,೩,೪.೯.೧೪,೧೫,೧೬,೧೭,೧೮,೧೯,೨೦,೨೧ ಈ ನಕ್ಷತ್ರಗಳಲ್ಲಿ ಪ್ರವೇಶಿಸಬಾರದು. ಉಳಿದ ನಕ್ಷತ್ರಗಳು ಶುಭಗಳು. ಇದಕ್ಕೆ “ಕಲಶಚಕ್ರ"ವನ್ನುವರು. ಹೀಗೆ ವಾಸ್ತು ಪ್ರಕರಣವನ್ನು ಹೇಳಲಾಯಿತು. ಪರಿಚ್ಛೇದ ► ೩ ಪೂರ್ವಾರ್ಧ ಧನ ಸಂಪಾದನೆಗಾಗಿ ಪ್ರಯಾಣ ವಿಷಯ ೩೮೩ ಈ ಪ್ರಯಾಣಕ್ಕೆ :- ಶ್ರವಣ, ಧನಿಷ್ಠಾ, ಅಶ್ವಿನಿ, ಪುಷ್ಯ, ರೇವತಿ, ಅನುರಾಧಾ, ಮೃಗಶಿರ, ಹಸ್ತ, ಪುನರ್ವಸು ಇವು ಪ್ರಶಸ್ತಿಗಳು, ಗೋಚರದಲ್ಲಿ ಶುಭರಾಗಿದ್ದ ಗ್ರಹವಾರವು ಶುಭವು, ದಕ್ಷಿಣ ಹೊರತಾದ ದಿಕ್ಕಿಗೆ ಪ್ರಯಾಣಮಾಡಲಿಕ್ಕೆ ಅಭಿಜಿನ್ಮುಹೂರ್ತ ಹಾಗೂ ಅಭಿಜಿನ್ನಕ್ಷತ್ರ ಇವು ಪ್ರಶಸ್ತಿಗಳು ಮಘಾ, ಚಿತ್ರಾ, ಸ್ವಾತಿ, ವಿಶಾಖಾ, ಆಶ್ಲೇಷಾ, ಭರಣಿ, ಆದ್ರ್ರಾ, ಕೃತ್ತಿಕಾ, ಪೂರ್ವಾಭದ್ರಾ, ಜನ್ಮನಕ್ಷತ್ರ ಇವು ಪ್ರಯಾಣಕ್ಕೆ ಅಶುಭವು. ರಿಕ್ತಾತಿಥಿ, ಪರ್ವತಿಥಿ, ಷಷ್ಟಿ, ಅಷ್ಟಮೀ, ದ್ವಾದಶೀ ಈ ತಿಥಿಗಳು ವರ್ಜಗಳು. ಕೃತಿಕಾನಕ್ಷತ್ರದ ಇಪ್ಪತ್ತೊಂದು ಘಟಿ, ಭರಣಿಯ ಏಳು, ಹುದ್ದೆಯ ಹದಿನಾರು, ಮಘಯ ಹನ್ನೊಂದು ಘಟಗಳನ್ನು ಬಿಡಬೇಕು. ಜೇಷ್ಯಾ, ಆಶ್ಲೇಷಾ, ವಿಶಾಖಾ, ಸ್ವಾತಿ ಇವುಗಳ ಹದಿನಾಲ್ಕು-ಹದಿನಾಲ್ಕು ಘಟಿಗಳನ್ನು ಬಿಡಬೇಕು. ಬೃಗುಮತದಂತೆ ಸ್ವಾತಿ ಮತ್ತು ಮಘಾ ಈ ನಕ್ಷತ್ರಗಳನ್ನು ಪೂರ್ಣವಾಗಿಯೇ ಬಿಡತಕ್ಕದ್ದು. ಸ್ವಾತಿ, ಮಘ, ಕೃತ್ತಿಕಾ ಇವುಗಳ ಪೂರ್ವಾರ್ಧವನ್ನೂ, ಚಿತ್ರಾ, ಆಶ್ಲೇಷಾ, ಭರಣಿಗಳ ಉತ್ತರಾರ್ಧವನ್ನೂ ಬಿಡತಕ್ಕದ್ದು. ವಾರಶೂಲ ಯೋಗ ಪೂರ್ವದಿಕ್ಕಿನ ಪ್ರಯಾಣಕ್ಕೆ ಚಂದ್ರ, ಶನಿವಾರಗಳು ವರ್ಜಗಳು, ದಕ್ಷಿಣಕ್ಕೆ ಗುರುವಾರ, ಪಶ್ಚಿಮಕ್ಕೆ ರವಿ, ಶುಕ್ರವಾರಗಳೂ, ಉತ್ತರಕ್ಕೆ ಮಂಗಳವಾರವೂ “ವಾರಶೂಲ"ವಾಗುವದರಿಂದ ಪ್ರಯಾಣ ಮಾಡಬಾರದು. ಸಂಮುಖಚಂದ್ರಾದಿಗಳು:- ಮೇಷ, ಸಿಂಹ, ಧನುಗಳಿಗೆ ಪೂರ್ವದಿಕ್ಕು; ವೃಷಭ, ಕನ್ಯಾ, ಮಕರಗಳಿಗೆ ದಕ್ಷಿಣದಿಕ್ಕು, ಮಿಥುನ, ತುಲಾ, ಕುಂಭಗಳಿಗೆ ಪಶ್ಚಿಮ; ಕರ್ಕ, ವೃಶ್ಚಿಕ, ಮೀನ ಇವುಗಳಿಗೆ ಉತ್ತರದಿಕ್ಕು; ಹೀಗೆಂದು ಕಲ್ಪಿಸಲಾಗಿದೆ. ಪ್ರಯಾಣದಲ್ಲಿ ಚಂದ್ರನಿರುವ ರಾಶಿಯಿಂದ ದಿಕ್ಕು ನಿಶ್ಚಯಿಸಿ ಅದರ ಮೇಲಿಂದ ಸಂಮುಖಚಂದ್ರನೋ ವಾಮಚಂದ್ರನೋ ಎಂಬುದನ್ನು ನೋಡುವದು. ಉದಾ: ಪ್ರಯಾಣಮಾಡುವ ದಿನ ಮೇಷದಲ್ಲಿ ಚಂದ್ರನಿದ್ದರೆ ಪೂರ್ವದಿಕ್ಕಿಗೆ ಗಮನಮಾಡುವಾಗ ಸಂಮುಖಚಂದ್ರನಾಗುವನು. ಚಂದ್ರನು ಸಂಮುಖ ಅಥವಾ ಬಲಕ್ಕೆ ಆದರೆ ಪ್ರಯಾಣಕ್ಕೆ ಶುಭವು. ಹಿಂದೆ ಮತ್ತು ಎಡಕ್ಕಾದರೆ ಅಶುಭವು, ಶುಕ್ರನು ಉದಯಿಸಿದ ದಿಕ್ಕಿನಲ್ಲಿ ಪ್ರಯಾಣ ಮಾಡಬಾರದು. ಬುಧನು ಸಂಮುಖನಾದರೂ ವರ್ಜವು ಬುಧನು ಹಿಂದೆ ಅಥವಾ ಎಡಕ್ಕಾದರೆ ಶುಭವು. ಚಂದ್ರನು ರೇವತಿಯಲ್ಲಿದ್ದಾಗ, ಶುಕ್ರನು ಮೇಷರಾಶಿಯಲ್ಲಿದ್ದರೆ “ಅಂಧ"ನೆಂದೆನಿಸಿಕೊಳ್ಳುವನು. ಇಂಥ ಸಂದರ್ಭದಲ್ಲಿ ಶುಕ್ರನು ಸಂಮುಖನಾದರೂ ಶುಭವು ಎಂದು ತಿಳಿಯುವದು. ಪ್ರಯಾಣಕ್ಕೆ ಲಗ್ನಶುದ್ದಿ ಯಾವ ಲಗ್ನದಲ್ಲಿ ಪ್ರಯಾಣಮಾಡುವದಿದೆಯೋ ಆ ಲಗ್ನದಿಂದ ೧,೪,೭,೯,೧೦,೫ ಈ ಸ್ಥಾನದಲ್ಲಿ ಶುಭಗ್ರಹರಿದ್ದರೆ ಉತ್ತಮ. ೩,೧೦,೧೧,೬, ಈ ಸ್ಥಾನಗಳಲ್ಲಿ ಪಾಪಗ್ರಹರಿದ್ದರೆ ಶುಭವು ದಶಮದಲ್ಲಿ ಶನಿಯಿದ್ದರೆ ಅಶುಭವು ಸಪ್ತಮ ಶುಕ್ರನು ಅನಿಷ್ಟನು. ೬,೮,೧೨,೧ ಈ ಸ್ಥಾನದಲ್ಲಿರುವ ಚಂದ್ರನು ಅಶುಭಕಾರಿಯು, ಕೇಂದ್ರದಲ್ಲಿ ವಕ್ರೀಗ್ರಹ, ಲಗ್ನದಲ್ಲಿ ವಕ್ರೀಗ್ರಹನ ವರ್ಗ, ವಗ್ರಹರವಾರ, ಕುಂಭಲಗ್ನ, ಕುಂಭಲಗ್ನನವಾಂಶ ಇವುಗಳನ್ನು ಪ್ರಯತ್ನದಿಂದಾದರೂ ಬಿಡತಕ್ಕದ್ದು. ಮೀನಲಗ್ನದಲ್ಲಿ ಅಥವಾ ಮೀನನವಾಂಶದಲ್ಲಿ ಪ್ರಯಾಣಮಾಡಿದರೆ ಮಾರ್ಗದಲ್ಲಿ I RUY ಧರ್ಮಸಿಂಧು ಅತಿದುಃಖವುಂಟಾಗುವದು. ತನ್ನ ಜನ್ಮಲಗ್ನ ಅಥವಾ ರಾಶಿಯಿಂದ ಆರನೇ ರಾಶಿಯಲ್ಲಿ ಅಥವಾ ಆರನೇ ರಾಶ್ಯಧಿಪತಿಯ ಇರುವಿಕೆಯು ಮೃತ್ಯುಪ್ರದವಾದದ್ದು. ಶತ್ರುಗೃಹದಲ್ಲಿ ಅಥವಾ ಅದರ ನವಾಂಶದಲ್ಲಿ ಆ ಶತ್ರುಗೃಹದೃಷ್ಟಿ ಇರುವಾಗ ಪ್ರಯಾಣಮಾಡಿದರೆ ಕೆಡಕಾಗುವದು. ವರ್ಗೋತ್ತಮದಲ್ಲಿ ಅಥವಾ ವರ್ಗೋತ್ತಮಯುಕ್ತವಾದ ಚಂದ್ರನು ಲಗ್ನದಲ್ಲಿದ್ದರೆ ಜಯಪ್ರಾಪ್ತವಾಗುವದು. ಶುಕ್ಲಪಕ್ಷದ ಆದಿಯಿಂದ ಆ ದಿನದ ವರೆಗೆ ತಿಥಿ, ವಾರ, ನಕ್ಷತ್ರಗಳನ್ನೆಣಿಸಿ ಅವುಗಳ ಬೇರೀಜಿಗೆ ೭,೮,೩ ಹೀಗೆ ಮೂರು ಅಂಕೆಗಳಿಂದ ಪ್ರತ್ಯೇಕವಾಗಿ ಭಾಗಿಸಿ ಬಂದ ಮೂರು ಶೇಷಗಳು ಅಂಕೆಯಾಗಿ ಬಂದರೆ ಅದು ಸರ್ವಕಾಮಪ್ರದವಾಗುವದು. ಮೂರೂ ಸ್ಥಾನಗಳಲ್ಲಿ ಶೇಷವು ಶೂನ್ಯವಾಗಿ ಬಂದರೆ ಅಂದರೆ ೭ ರಿಂದ ಭಾಗಿಸಿದ ಶೇಷವು ಶೂನ್ಯವಾದರೆ “ದುಃಖ” ವು. ೮ ರಿಂದ ಭಾಗಿಸಿದ ಶೇಷವು ಶೂನ್ಯವಾದರೆ “ದಾರಿದ್ರವು. ೩ ರಿಂದ ಭಾಗಿಸಿ ಬಂದ ಶೇಷವು ಶೂನ್ಯವಾದರೆ “ಮರಣ"ವು. ಒಂದೇ ದಿನ ಒಂದು ನಗರದಿಂದ ಮತ್ತೊಂದು ನಗರದಲ್ಲಿ ಪ್ರಯಾಣಿಸಿದರೆ ಪ್ರದೇಶಕಾಲಕ್ಕೆ ಕಾಲಶುದ್ಧಿಯನ್ನು ನೋಡತಕ್ಕದ್ದು. ಒಂದೇ ದಿನ ಒಂದೇ ನಗರದ ಒಳಗೆ ಹೋಗುವದಿದ್ದಲ್ಲಿ ಪ್ರಯಾಣದ ಕಾಲಶುದ್ಧಿಯನ್ನು ನೋಡತಕ್ಕದ್ದಿಲ್ಲ. ಜಯವನ್ನಪೇಕ್ಷಿಸುವವನು ಪ್ರಯಾಣದಿನದಿಂದ ಒಂಭತ್ತನೇ ವಾರ, ಒಂಭತ್ತನೇ ತಿಥಿ ಮತ್ತು ಒಂಭತ್ತನೇ ನಕ್ಷತ್ರದಲ್ಲಿ ಮನೆಯನ್ನು ಸೇರಬಾರದು. ಮತ್ತು ಪ್ರವೇಶ ಮಾಡಿದಂದಿನಿಂದ ಒಂಭತ್ತನೆಯ ವಾರದಲ್ಲಿ, ಒಂಭತ್ತನೇ ತಿಥಿಯಲ್ಲಿ ಮತ್ತು ಒಂಭತ್ತನೇ ನಕ್ಷತ್ರದಲ್ಲಿ ಪುನಃ ಪ್ರಯಾಣಮಾಡಬಾರದು. ಕುಂಭ ಮತ್ತು ಮೀನಗಳಲ್ಲಿ ಚಂದ್ರನಿರುವಾಗ ದಕ್ಷಿಣದಿಕ್ಕಿನ ಪ್ರಯಾಣ, ಶಯ್ಕೆಯ ಮೇಲ್ಬಟ್ಟು, ಮನೆಯ ಛಾವಣಿ ಇವುಗಳನ್ನು ಮಾಡಬಾರದು. ಹಾಗೂ ಹುಲ್ಲು, ಕಟ್ಟಿಗೆಗಳ ಸಂಗ್ರಹವನ್ನೂ ಮಾಡಬಾರದು. ಪ್ರಯಾಣಮಾಡುವಾಗ ಅಗ್ನಿ, ಮಿತ್ರ, ಬ್ರಾಹ್ಮಣ, ಸ್ತ್ರೀ ಇವರನ್ನು ತೃಪ್ತಿಪಡಿಸಿ ಪ್ರಯಾಣಮಾಡಬೇಕು. ತಾನೂ ಸಂತುಷ್ಟನಾಗಿರಬೇಕು. ತನ್ನ ಅಥವಾ ಬೇರೆಯವರ, ಸ್ತ್ರೀ ಅಥವಾ ಪುರುಷರನ್ನು ಹೊಡೆದು ಬಡಿದು ಇಲ್ಲವೆ ಬ್ರಾಹ್ಮಣರನ್ನು ಅವಮನ್ನಿಸಿ ಪ್ರಯಾಣ ಮಾಡಿದರೆ ಅಥವಾ ತಾನು ರೋಗಿಯಾಗಿದ್ದರೆ, ಹಸಿದವನಾಗಿದ್ದರೆ ಆಗ ಪ್ರಯಾಣವನ್ನು ಮಾಡಬಾರದು. ಪ್ರಯಾಣಕಾಲದಲ್ಲಿ ಇವು ವರ್ಜಗಳು:- ಕ್ರೋಧ, ಕ್ಷೌರ, ವಾಂತಿ, ತೈಲಾಭ್ಯಂಗ, ಕಣ್ಣೀರು ತೆಗೆಯುವದು, ಮದ್ಯ, ಮಾಂಸ, ಬೆಲ್ಲ, ತೈಲ, ಬಿಳೇದಲ್ಲದ ತಿಲಕಧಾರಣ, ಬಿಳೇದಲ್ಲದ ವಸ್ತ್ರ ಇವು ವರ್ಜಗಳು, ಪ್ರಯಾಣದ ದಿನಕ್ಕಿಂತ ಮೊದಲು ಐದುದಿನಗಳೊಳಗೆ ಕ್ಷೌರ, ಮೂರುದಿನಗಳೊಳಗೆ ಹಾಲು, ಏಳುದಿನಗಳಿಂದ ಮೈಥುನ, ಮತ್ತು ಜೇನುತುಪ್ಪ, ತುಪ್ಪ, ಎಣ್ಣೆ ಇವು ವರ್ಜಗಳು, ಸ್ತ್ರೀಋತುಕಾಲವಾಗಿದ್ದರೂ ರೇತಃಸ್ಥಲನಪರ್ಯಂತ ಮಾಡಬಾರದು. (ಪ್ರಯಾಣದಿನ) ಕೆಟ್ಟ ಶಕುನವಾದರೆ ಪ್ರಯಾಣ ಮಾಡಬಾರದು. ಸುಮುಹೂರ್ತದಲ್ಲಿ ಸ್ವತಃ ಗಮನಮಾಡುವಾಗದಿದ್ದಲ್ಲಿ ಪ್ರಸ್ಥಾನ (ಪ್ರಯಾಣ ತೆಗೆದಿಡುವದು) ಮಾಡತಕ್ಕದ್ದು, ಪ್ರಸ್ಥಾನವೆಂದರೆ ಇಷ್ಟುವಸ್ತುವನ್ನು ಒಟ್ಟು ಇಡುವದು. ಆ ವಸ್ತುಗಳೆಂದರೆ ಬ್ರಾಹ್ಮಣನು ಯಜೋಪವೀತ, ಕ್ಷತ್ರಿಯನು - ಆಯುಧ, ವೈಶ್ಯನು - ಧನ, ಶೂದ್ರನು ಫಲ ಇವುಗಳನ್ನು ಹೊರಡುವದಕ್ಕಿಂತ ಮೊದಲು ಬೇರೆಯವರ ಮನೆಯಲ್ಲಿ ಇಡಬೇಕು. ಇವುಗಳಲ್ಲದಿದ್ದರೆ ಸುವರ್ಣ, ಧಾನ್ಯ, ವಸ್ತ್ರ ಇತ್ಯಾದಿಗಳನ್ನು ಎಲ್ಲ ವರ್ಣದವರೂ ಪ್ರಸ್ತಾನಕ್ಕಾಗಿ ಇಡಬಹುದು. ಪ್ರಸ್ಥಾನಮಾಡಿದ ನಂತರ ― ୧ ಪರಿಚ್ಛೇದ - ೩ ಪೂರ್ವಾರ್ಧ 2,599 ರಾಜನು ಹತ್ತು ದಿನ, ಅನ್ಯರು ಐದುದಿನ ಮನೆಯಲ್ಲಿರಬಹುದು. ಮೊದಲು ತಾನೇ ಗಮನಮಾಡದ ಹೇಳಿದ ದಿನಗಳ ನಂತರ ಹೋದರೇ ಅರ್ಧ ಫಲವು. ಪ್ರಸ್ಥಾನಕ್ಕೆ ಪ್ರದೇಶದ ಅವಧಿಯಿದೆ. ಪ್ರಸ್ಥಾನ ವಸ್ತುವನ್ನು ಇಡುವಾಗ ತನ್ನ ಮನೆಯಿಂದ ಇನ್ನೊಂದು ಮನೆಗೆ, ಎಂದು “ಗರ್ಗ"ನ ಮತವು. ಗಡಿಯಿಂದ ಗಡಿಯ ವರೆಗೆ ಎಂದು “ಭಗು” ಮತವು, ಬಾಣವನ್ನು ಬಿಟ್ಟರೆ ಎಷ್ಟು ದೂರ ಹೋಗುವದೋ “ಅಷ್ಟು ದೂರ” ಎಂದು ಭರದ್ವಾಜನ ಮತವು, ನಗರದ ಹೊರಗೆ ಎಂದು ವಸಿಷ್ಠ ಮತವು ಪ್ರಸ್ಥಾನವಿಧಿಯಾಗಿದ್ದರೂ ಪುನಃ ಹೊರಡುವಾಗ ಮಹಾದೋಷವಿದ್ದರೆ ಹೋಗಬಾರದು. ಹಿಂದೆ ಹೇಳಿದ ಕ್ರೋಧಾದಿಗಳನ್ನು ಪ್ರಸ್ಥಾನ ದಿನದಲ್ಲಾದರೂ ಮಾಡಬಾರದು. ಶಕುನ ಅಪಶಕುನಾದಿಗಳನ್ನು ಶಕುನಶಾಸ್ತ್ರದಿಂದ ತಿಳಿಯುವದು. ಹೀಗೆ ಯಾತ್ರಾ ಪ್ರಕರಣವು. ಗೋಚರ ಪ್ರಕರಣ ಜನ್ಮರಾಶಿ (ಚಂದ್ರನಿರುವ ರಾಶಿ)ಯಿಂದ ಚಂದ್ರನು ೩,೬,೧೦ ಈ ಸ್ಥಾನಗಳಲ್ಲಿದ್ದರೆ ಶುಭನು. ೭,೧, ಈ ಸ್ಥಾನದಲ್ಲಿಯೂ ಶುಭನೇ, ಬುಧನು ೨,೪,೬,೮,೧೦ ಈ ಸ್ಥಾನಗಳಲ್ಲಿ ಶುಭನು. ಶುಕ್ಲಪಕ್ಷದಲ್ಲಿ ಚಂದ್ರನು ೨,೯,೫ ಈ ಸ್ಥಾನದಲ್ಲಿ ಶುಭನು. ಗುರುವು ೨,೫,೭,೯ ಈ ಸ್ಥಾನಗಳಲ್ಲಿ ಶುಭನು. ಏಕಾದಶದಲ್ಲಿ ಎಲ್ಲ ಗ್ರಹ ಶುಭರು. ತನ್ನ ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರಪರ್ಯಂತ ತ್ರಿರಾವೃತ್ತಿಯಿಂದ ಎಣಿಸುವದು. ತ್ರಿರಾವೃತ್ತಿ ಎಂದರೆ ಒಂಭತ್ತು ನಕ್ಷತ್ರಪರ್ಯಂತ ಎಣಿಸಿ ಪುನಃ ಒಂಭತ್ತನ್ನು ಎಣಿಸಿ ಹದಿನೆಂಟರ ಮೇಲೆ ಪುನಃ ಒಂಭತ್ತನ್ನೆಣಿಸುವದು. ಹೀಗೆ ಪ್ರಥಮ, ದ್ವಿತೀಯ, ತೃತೀಯ ಪರ್ಯಾಯಗಳಾಗುವವು. ಈ ಒಂಭತ್ತು ನಕ್ಷತ್ರಗಳಿಗೆ ಕ್ರಮದಿಂದ ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯರಿ, ಸಾಧಿಕಾ, ವಧ, ಮೈತ್ರ, ಪರಮ ಮೈತ್ರ ಹೀಗೆ ಸಂಜ್ಞೆಗಳುಂಟಾಗುವವು. ಹತ್ತರಿಂದ ಪುನಃ ಜನ್ಮ ಇತ್ಯಾದಿ ಗಣಿಸುವದು. ಹತ್ತೊಂಭತ್ತರಿಂದ ಪುನಃಜನ್ಮ ಇತ್ಯಾದಿ. ಇಷ್ಟಕಾಲದ ನಕ್ಷತ್ರವು ತನ್ನ ಜನ್ಮನಕ್ಷತ್ರದಿಂದಣಿಸಿದಾಗ ಎಷ್ಟನೇದಾಗುವದೋ, ಅದಕ್ಕೆ ಯಾವ ಹೆಸರಿದೆಯೋ ಅದಕ್ಕೆ ಸರಿಯಾದ ಫಲವುಂಟಾಗುವದು. ಉದಾ: ಜನ್ಮ ನಕ್ಷತ್ರವು ಅಶ್ವಿನಿಯಾಗಿದ್ದು ಅನುರಾಧೆಯು ಇಷ್ಟದಿನದ ನಕ್ಷತ್ರವಾದರೆ ಆಗ ಹದಿನೇಳನೇ ನಕ್ಷತ್ರ ಇದು ಮೊದಲಿನ ೯ ರ ನಂತರ ಎಂಟನೇದಾಗುವದು. ಎಂಟನೇದಕ್ಕೆ “ಮೈತ್ರಿ” ಎ೦ಬ ಸಂಜೆಯಿರುವದರಿಂದ ಶುಭವು ಹೀಗೆ ಇವುಗಳ ಹೆಸರಿಂದಲೇ ಶುಭಾಶುಭಗಳನ್ನು ತಿಳಿಯಬಹುದು. ಸಂಪತ್, ಸಾಧಿಕಾ, ಮೈತ್ರ, ಪರಮ ಮೈತ್ರಗಳಾದರೆ ಶುಭವೆಂದು ತಾನೇ ಅರ್ಥವಾಗುವದು. ಕಾರ್ಯಪರತ್ವದಿಂದ ಸೂರ್ಯಾದಿ ಗ್ರಹಗಳ ಬಲವನ್ನು ನೋಡತಕ್ಕದ್ದು. ರಾಜದರ್ಶನಕ್ಕೆ ರವಿಬಲ, ಎಲ್ಲ ಕಾರ್ಯಗಳಿಗೂ ಚಂದ್ರಬಲ, ಯುದ್ಧ ವಿಷಯಕ್ಕೆ ಕುಜಬಲ, ಶಾಸ್ತ್ರಾಭ್ಯಾಸಕ್ಕೆ ಬುಧಬಲ, ವಿವಾಹಕ್ಕೆ ಗುರುಬಲ, ಪ್ರಯಾಣಕ್ಕೆ ಶುಕ್ರಬಲ, ಮಂತ್ರದೀಕ್ಷೆಗೆ ಶನಿಬಲ ಹೀಗೆ ಆಯಾಯ ಕಾರ್ಯಗಳಿಗೆ ಗ್ರಹಬಲವಿರತಕ್ಕದ್ದು. ಅನಿಷ್ಟಗಳಾದ ಸೂರ್ಯಾದಿಗಳಿಗೆ ಮಾಡುವ ದಾನಾದಿಗಳನ್ನು ದ್ವಿತೀಯಪರಿಚ್ಛೇದದಲ್ಲಿ ಹೇಳಲಾಗಿದೆ. ಪಲ್ಲೀ (ಸರಟ, ಗೌಲಿ) ಪತನ ಹಲ್ಲಿಯು ಬಿದ್ದರೆ ಶುಭಾಶುಭ ಫಲಗಳನ್ನು ಹೇಳಿದೆ. ಗಡ್ಡದ ಹೊರತು ಪುರುಷನ ಬಲಭಾಗದ ಅವಯವ ಅಂದರೆ ಹೊಟ್ಟೆಯ ಬಲಭಾಗ, ಅದರಂತೆ ನಾಭಿ, ಹೃದಯ, ಮಸ್ತಕ AUL ಧರ್ಮಸಿಂಧು ಈ ಸ್ಥಾನಗಳಲ್ಲಿ ಬಿದ್ದರೆ ಶುಭವು. ಇದೇ ಸ್ತ್ರೀಯರಿಗೆ ಎಡಭಾಗಲ್ಲಾದರೆ ಶುಭವು. ಸರಟ (ಗೌಳಿ)ವು ಇದೇ ಸ್ಥಾನಗಳಲ್ಲಿ ಹತ್ತಿದರೂ ಇದರಂತೆ ಇದೇ ಫಲವು, ಹಲ್ಲಿಯ ಆರೋಹಣ, ಸರಟದ ಪತನ ಹೀಗಾದರ ಹಿಂದೆ ಹೇಳಿದ ಫಲಗಳು ವ್ಯತ್ಯಾಸವಾಗಿ ಆಗುವದೆಂದು ತಿಳಿಯಬೇಕು. ಹಲ್ಲಿ, ಸರಟಗಳ ಆರೋಹಣ ಪತನಗಳಾದರೆ ಆಗುವ ಶುಭಾಶುಭ ಫಲಗಳು ವ್ಯರ್ಥವಾಗುವಂತಿಲ್ಲವೆಂದು ಕೆಲ ಆಚಾರ್ಯರು ಹೇಳುವರು. ಹಲ್ಲಿ, ಸರಟಗಳ ಪತನ ಆರೋಹಣಗಳಲ್ಲಿ ಸತೈಲ ಸ್ನಾನಮಾಡಿ ಶಾಂತಿ ಮಾಡುವದು. ಅವುಗಳು ಮುಟ್ಟಿದರೂ ಸಾಕು, ಸ್ನಾನಮಾಡಿ ಪಂಚಗವ್ಯ ಪ್ರಾಶನಮಾಡಿ ತುಪ್ಪದಲ್ಲಿ ಮುಖವನ್ನು ನೋಡಿ ಅಶುಭ ನಾಶಕ್ಕಾಗಿ ಹಾಗೂ ಶುಭ ವೃದ್ಧಿಗಾಗಿ ಶಾಂತಿಯನ್ನು ಮಾಡತಕ್ಕದ್ದು. ಹಲ್ಲಿಯ ಅಥವಾ ಗೌಳಿಯ ಬಂಗಾರದ ಪ್ರತಿಮೆ ಮಾಡಿ ಕೆಂಪು ವಸ್ತ್ರದಿಂದ ಸುತ್ತಿ ಪೂಜಿಸಿ ಕಲಶದ ಮೇಲಿಟ್ಟು ರುದ್ರನನ್ನು ಪೂಜಿಸುವದು. ಮೃತ್ಯುಂಜಯ ಮಂತ್ರದಿಂದ ಖೈರ, ಸಮಿಧಗಳಿಂದ ನೂರೆಂಟಾಹುತಿ ಹೋಮಮಾಡುವದು. ವ್ಯಾಹೃತಿಯಿಂದ ತಿಲಹೋಮ ಮಾಡುವದು. ಇದನ್ನು ಅಷ್ಟೋತ್ತರಸಹಸ್ರ ಅಥವಾ ಅಷ್ಟೋತ್ತರಶತ ಹೋಮಮಾಡಿ ಸ್ಪಷ್ಟಕೃದಾದಿ ಅಭಿಷೇಕದ ವರೆಗೆ ಮಾಡಿ ಸ್ವರ್ಣ, ವಸ್ತ್ರ, ತಿಲದಾನಗಳನ್ನು ಮಾಡತಕ್ಕದ್ದು. ಇನ್ನು ಪಾರಿವಾಳವು ಮನೆಯನ್ನು ಪ್ರವೇಶಿಸಿದರೆ, ಜೇನು, ವಕಗಳು ಮನೆಯಲ್ಲಿ ಹುಟ್ಟಿದರೆ, ಪಿಂಗಳಾಪಕ್ಷಿ ಅಥವಾ ಕಾಗೆಗಳು ವಿಕಾರವಾಗಿ ಕೂಗಿದರೆ, ಗ್ರಾಮ ಅಥವಾ ಅರಣ್ಯದ ಮೃಗ, ಪಕ್ಷಿಗಳ ವಿಕಾರ ಕಾಣಿಸಿದಾಗ ಶಾಂತಿಮಾಡತಕ್ಕದ್ದು. “ದೇವಾಃಕಪೋತ” ಈ ಐದು ಮಂತ್ರಗಳ ಸೂಕ್ತವನ್ನು ಸಹಸ್ರಾವರ್ತಿ ಅಥವಾ ನೂರಾವರ್ತಿ ಜಪಿಸಿ " ಯತ ಇಂದ್ರಭಯಾಮಹೇ ಸ್ವಸ್ತಿದಾವಿಶ ತಂಬಕಂ” ಈ ಮಂತ್ರಗಳಿಂದ ಹೋಮಿಸಿ ವ್ಯಾಹೃತಿಗಳಿಂದ ಅಷ್ಟೋತ್ತರಶತ ತಿಲಹೋಮವನ್ನು ಮಾಡತಕ್ಕದ್ದು, ಅಥವಾ ಐವರು ಬ್ರಾಹ್ಮಣರಿಂದ ಕ್ರಮವಾಗಿ “ದೇವಾಃ ಕಪೋತ” ಈ ಸೂಕ್ತ “ಸುದೇವೋಲಿಸಿ” ಈ ಮಂತ್ರ, ‘ಕವಿಕ್ರದ’ ಮಂತ್ರ, ಶಾಕುಂತಸೂಕ್ತ, ‘ನಮೋಬ್ರಹ್ಮಣೇ’ ಎಂಬ ಮಂತ್ರ ಇವುಗಳನ್ನು ಸಹಸ್ರಾದಿ ಸಂಖ್ಯೆಯಿಂದ ಪಾರಾಯಣಮಾಡಿಸಿ ಉಪನಿಷತ್ತುಗಳನ್ನೂ ಪಠಿಸಿ ವ್ಯಾಹೃತಿಗಳಿಂದ ತಿಲಹೋಮವನ್ನು ಮಾಡತಕ್ಕದ್ದು. ಕಾಕಸ್ಪರ್ಶ ಮೈಥುನ ದರ್ಶನಾದಿ ಶಾಂತಿ ಸಂಕಲ್ಪ-ಅಗ್ನಿ ಪ್ರತಿಷ್ಠೆ-ಕಲಶಸ್ಥಾಪನ, ಅದರ ಮೇಲೆ ಬಂಗಾರದ ಇಂದ್ರಪ್ರತಿಮೆ ಇಟ್ಟು ಮತ್ತು ಲೋಕಪಾಲಕರನ್ನೂ ಪೂಜಿಸಿ, ಅಗ್ನಿಯಲ್ಲಿ ಚರುವನ್ನು ಬೇಯಿಸಿ, ಪಲಾಶಸಮಿಧ, ಚರು, ಆಜ್ಯ, ಪ್ರೀಹಿಗಳಿಂದ ಪ್ರತ್ಯೇಕವಾಗಿ ಅಷ್ಟೋತ್ತರಸಹಸ್ರ ಅಥವಾ ಅಷ್ಟೋತ್ತರಶತ"ಯತ ಇಂದ್ರ” ಈ ಮಂತ್ರದಿಂದ ಹೋಮಿಸಿ ಲೋಕಪಾಲಕರಿಗೂ ಅದೇ ದ್ರವ್ಯದಿಂದ ಹತ್ತಾವರ್ತಿ ಹೋಮಿಸಿ ಲೋಕಪಾಲಬಲಿ, ಕಲಶದ ಮುಂಗಡೆಯಲ್ಲಿ ವಾಯಸಬಲಿ ಇವುಗಳನ್ನು “ಐಂದ್ರವಾರುಣ” ಎಂಬ ಮಂತ್ರದಿಂದ ಕೊಟ್ಟು ಯಜಮಾನನ ಅಭಿಷೇಕವಾದ ನಂತರ ನೂರು ಅಥವಾ ಹತ್ತು ಬ್ರಾಹ್ಮಣರ ಭೋಜನ ಮಾಡಿಸುವರು. ರಾಟೆ, ಒರಳುಕಲ್ಲು, ಒನಕೆ, ಶಿಲಾಸನ, ಮಂಚ ಮೊದಲಾದವುಗಳು ಆಕಸ್ಮಾತ್ ಒಡೆದರೆ ಪತ, ಮಧುಯುಕ್ತವಾದ ಅಶ್ವತ ಸಮಿಧಗಳನ್ನು ಪ್ರಜಾಪತಿಗೋಸ್ಕರ ಹಸಿ ಗಾಯತ್ರಿಯಿಂದ ಅಷ್ಟೋತ್ತರಸಹಸ್ರ, ಆವರ್ತಿ ಅಭಿಮಂತ್ರಿಸುವದು. ಪರಿಚ್ಛೇದ - ೩ ಪೂರ್ವಾರ್ಧ ಉತ್ಪಾತ ಶಾಂತಿ ಉತ್ಪಾತಗಳಲ್ಲಿ ಆಕಾಶ, ಭೌಮ, ದಿವ್ಯಾದಿ ನಾನಾ ವಿಧಗಳಿವೆ. ಸಂಕಲ್ಪಾದಿಗಳನ್ನು ಮಾಡಿ ಕಲಶದಲ್ಲಿ ಇಂದ್ರ, ರುದ್ರರನ್ನು ಪೂಜಿಸಿ “ಯತ ಇಂದ್ರ ಸ್ವಸ್ತಿದಾ ಅಘೋರೇಭೋ” ಈ ಮಂತ್ರಗಳಿಂದ ಸಮಿಧ, ಆಜ್ಯ, ಚರು, ಸ್ನೇಹಿ, ತಿಲ ಈ ಪ್ರತಿ ದ್ರವ್ಯವನ್ನೂ ನೂರೆಂಟಾವರ್ತಿ ಹೋಮಿಸಿ, ದ್ರವ್ಯಾನುಕೂಲತೆಯನ್ನು ನೋಡಿಕೊಂಡು ವ್ಯಾಹೃತಿಗಳಿಂದ ತಿಲಹೋಮವನ್ನು ಕೋಟಿ, ಲಕ್ಷ, ಹತ್ತು ಸಹಸ್ರ ಅಥವಾ ಎರಡೂವರೆ ಸಹಸ್ರ ಮಾಡುವದು. ನಿಮಿತ್ತಗಳ ಹೆಚ್ಚು ಕಡಿಮೆ ನೋಡಿ ಏಳುರಾತ್ರಿ, ತ್ರಿರಾತ್ರಿ ಅಥವಾ ಒಂದು ರಾತ್ರಿಗಳಲ್ಲಿ ಮಾಡಿ ಸೂರ್ಯ, ಗಣಪತಿ, ಕ್ಷೇತ್ರಪಾಲ, ದುರ್ಗಾಮಂತ್ರಗಳ ಜಪಮಾಡಿ ಪಾಯಸಾದಿಗಳಿಂದ ಬ್ರಾಹ್ಮಣ ಸಂತರ್ಪಣೆ ಮಾಡಿಸುವದು ಇಲ್ಲವೆ ಚಂಡೀಸಪ್ತಶತೀ ಪಾರಾಯಣ ಅಥವಾ ರುದ್ರಜಪ, ಇಲ್ಲವೆ ಅವುಗಳಿಂದ ಅಭಿಷೇಕಮಾಡುವದು. ಅಶ್ವತ್ಥ ಪ್ರದಕ್ಷಿಣ, ಶಿವಪೂಜಾ, ಗೋ ಬ್ರಾಹ್ಮಣ ಪೂಜಾ ಇತ್ಯಾದಿಗಳಿಂದ ನಾನಾವಿಧ ಉತ್ಪಾತಗಳ ಶಮನವಾಗುವದೆಂದು ಹೇಳಿದೆ. ಗಾಯತ್ರೀ ಪುರಶ್ಚರಣ ಪ್ರಯೋಗ ದೇಶಕಾಲಗಳನ್ನುಚ್ಚರಿಸಿ “ಕರಿಷ್ಯಮಾಣಗಾಯ ಪುರಶ್ಚರಣೇ ಅಧಿಕಾರಸಿಧ್ಯರ್ಥಂ ಕೃಚ್ಛತ್ರಯಂ ಅಮುಕ ಪ್ರತ್ಯಾಮ್ಮಾಯೇನ ಅಹಮಾಚರಿಷ್ಟೇ” ಹೀಗೆ ಸಂಕಲ್ಪಮಾಡಿ ಹೋಮಾದಿ ಪ್ರತ್ಯಾಮ್ನಾಯ ವಿಧಿಯಿಂದ ಕೃಚ್ಛಗಳನ್ನಾಚರಿಸಿ ಅಮುಕ ಶರ್ಮಗೂ ಮಮ ಗಾಯ ಪುರಶ್ಚರಣೇ ಅನೇನ ಕೃಷ್ಣತ್ರಯಾನುಷ್ಠಾನೇನ ಅಧಿಕಾರಸಿದ್ಧಿರತಿ” ಎಂದು ಬ್ರಾಹ್ಮಣರಿಗೆ ಹೇಳಿ “ಅಧಿಕಾರ ಸಿದ್ಧಿರನ್ನು” ಎಂದು ಹೇಳಿದ ನಂತರ “ಕರಿಷ್ಯಮಾಣ ಪುರಶ್ಚರಣಾಂಗನ ವಿಹಿತಂ ಗಾಯತ್ರಿ ಜಪಾದಿ ಕರಿಷ್ಟೇ ಹೀಗೆ ಸಂಕಲ್ಪಿಸಿ ಜಪಗಳನ್ನು ತಾನಾಗಲೀ, ಬ್ರಾಹ್ಮಣದ್ವಾರಾ ಆಗಲೀ ಮಾಡತಕ್ಕದ್ದು. ಮೊದಲು ಓಂಕಾರ, ನಂತರ ವ್ಯಾಹೃತಿ, ನಂತರ ಗಾಯತ್ರಿ ಹೀಗೆ ಹತ್ತು ಸಾವಿರ ಜಪಿಸಿ “ಆಪೋಹಿಷ್ಠಾ ಎಂಬ ಸೂಕ್ತ, “ಸ್ವಸ್ತಿನ” ಇತ್ಯಾದಿ ಸ್ವಸ್ತಿಮತಿ, “ಸ್ವಾದಿಷ್ಠ” ಇತ್ಯಾದಿ ಪವಮಾನಸೂಕ್ತ ಇವುಗಳನ್ನು ಪ್ರತ್ಯೇಕವಾಗಿ ತಾನಾಗಲೀ ಅನ್ಯರ ಮುಖಾಂತರವಾಗಲೀ ಜಪಿಸಿ “ತತ್ಸವಿತುತ್ಯ ಆಚಾರ್ಯಂ ಋಷಿಂ ವಿಶ್ವಾಮಿತ್ರಂ ತರ್ಪಯಾಮಿ ಗಾಯತ್ರೀಛಂದ:ತತ್ಸಮಾರಂ ದೇಮಾಂ” ಹೀಗೆ ತರ್ಪಣ ಮಾಡಿ ರುದ್ರನನ್ನು ನಮಸ್ಕರಿಸಿ “ಕದ್ರುದ್ರಾಯ” ಇತ್ಯಾದಿ ರುದ್ರಸೂಕ್ತಗಳನ್ನು ಜಪಿಸುವದು. ಇದು ಪುರಶ್ಚರಣೆಯಲ್ಲಿ ಮೊದಲು ಮಾಡುವ ವಿಧಾನ, ಬೇರೆ ದಿನದಲ್ಲಿ ದೇಶಕಾಲಗಳನ್ನುಚ್ಚರಿಸಿ “ಮಮ ಸಕಲಪಾಪಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಚತುರ್ವಿಂಶತಿಲಕಾತ್ಮಕ ಗಾಯತ್ರೀಪುರಶ್ಚರಣಂ ಸ್ವಯಂ ವಿಪ್ರದ್ವಾರಾ ವಾ ಕರಿಷ್ಯ, ತದಂಗನ ಸ್ವಸ್ತಿ ವಾಚನ, ಮಾತೃಕಾಪೂಜನಂ, ನಾಂದೀಶ್ರಾದ್ಧಂ* ವಿಪ್ರದ್ವಾರಾ ಜಪಿಸುವದಿದ್ದಲ್ಲಿ “ಜಪಕರ್ತೃವರಣಂ ಚ ಕರಿಷ್ಮ"ಹೀಗೆ ಸಂಕಲ್ಪವು. ಸಂಕಲ್ಪವನ್ನಾದರೂ ಋತ್ವಿಜನು ಮಾಡುವದಿದ್ದಲ್ಲಿ ಅಮುಕ ಶರ್ಮ ಯಜಮಾನ ಸಕಲಪಾಪಕ್ಷಯ ಇತ್ಯಾದಿ ಯಜಮಾನಾನುಜ್ಞಯಾ ಕರಿಷ್ಯ ಹೀಗೆ ಹಿಂದೆಯೂ ಸಹ ಸಂಕಲ್ಪವನ್ನೂಹಿಸುವದು. ನಾಂದೀಶ್ರಾದ್ಧಾಂತದಲ್ಲಿ ‘ಸವಿತಾ ಶ್ರೀಯತಾಂ” ಎಂದು ಹೇಳುವದು. “ಗಾಯಪುರಶ್ಚರಣೇ ಜನಕರ್ತಾರಂತ್ವಾಂಣೇ” ಹೀಗೆ ಒಬ್ಬ ಬ್ರಾಹ್ಮಣನನ್ನು ವರಿಸುವದು, ಮತ್ತು ವಸ್ತ್ರಾದಿಗಳಿಂದ ಪೂಜಿಸುವದು. ಇಷ್ಟಾದ ನಂತರ ನಿತ್ಯದ ಕಾರ್ಯವು ಬ್ರಾಹ್ಮಣ ಅಥವಾ ತಾನು ದರ್ಬಾದಿ ೩೮೮ ಧರ್ಮಸಿಂಧು ಆಸನದಲ್ಲಿ ಕುಳಿತು ಪವಿತ್ರಪಾಣಿಯಾಗಿ ಆಚಮನ, ಪ್ರಾಣಾಯಾಮಗಳನ್ನು ಮಾಡಿ ದೇವತಾಪ್ರಾರ್ಥನೆ ಮಾಡತಕ್ಕದ್ದು. “ಸೂರ್ಯ ಮೋಯಮಕಾಲುಸಂಭವಾನ್ಯಕ್ಷನಾದ ಮಾನ ಪಭರಾಕಾಶಬೇಚಾಮರಾಗಿ ಬ್ರಹ್ಮಶಾಸನಮಾಸ್ಥಾಯ ಕಲ್ಪಭ್ರಮಿಹನಿಧಿ” (ಹೀಗೆ ಪ್ರಾರ್ಥನೆ) ನಂತರ ದೇಶಕಾಲಗಳನ್ನುಚ್ಚರಿಸಿ ಪ್ರತಿದಿನ ಮಾಡುವ ಜಪವನ್ನು ಸಂಕಲ್ಪಿಸಿ “ಗುರುವೇ ನಮಃ, ಗಣಪತಯೇ ನಮಃ, ದುರ್ಗಾಯ್ಯ ನಮಃ, ಮಾತೃ ನಮ:” ಹೀಗೆ ನಮಸ್ಕಾರಮಾಡಿ ಮೂರಾವರ್ತಿ ಪ್ರಾಣಾಯಾಮ ಮಾಡಿ “ತತ್ಸವಿತುರಿತಿಗಾಯಾ ವಿಶ್ವಾಮಿತ್ರ ಋಷಿಃ ಸವಿತಾದೇವತಾ ಗಾಯತ್ರೀಛಂದ: ಜಸೇವಿನಿಯೋಗ ವಿಶ್ವಾಮಿತ್ರ ಋಷಯೇನಮ: ಶಿರಸಿಗಾಯಛಂದಸೇನ ಮುಖೇಸವಿತೃದೇವತಾಯ ನಮೋಹೃದಿ” ಹೀಗೆ ನ್ಯಾಸಮಾಡಿ “ತತ್ಸವಿತುಃ ಅಂಗುಷ್ಠಾಭ್ಯಾಂನಮಃ! ವರೇಣ್ಯಂ ತರ್ಜನೀಭ್ಯಾಂನಮಗೆ ಭರ್ಗೋದೇವಸ್ಯ ಮಧ್ಯಮಾಭ್ಯಾಂನಮಃ ಧೀಮಹಿ ಅನಾಮಿಕಾಭ್ಯಾಂನವು: ಧಿಯೋಯೋನಃ ಕನಿಷ್ಠಿಕಾಭ್ಯಾಂನಮಃ ಪ್ರಚೋದಯಾತ್ ಕರತಲ ಕರಪೃಷ್ಠಾಭ್ಯಾಂ ನಮ” ಹೀಗೆಯೇ ಹೃದಯಾದಿ ಷಡಂಗನ್ಯಾಸವನ್ನೂ ಮಾಡತಕ್ಕದ್ದು. ಪೂರ್ವೋಕ್ತರೀತಿಯಿಂದ ಸಂಸ್ಕರಿಸಲ್ಪಟ್ಟ ಜಪಮಾಲೆಯನ್ನು ಪಾತ್ರೆಯಲ್ಲಿಟ್ಟು ಪ್ರೋಕ್ಷಿಸಿ “ಓಂ ಮಹಾಮಾಯೇ ಮಹಾಮಾಲೇ ಸರ್ವಶಕ್ತಿ ಸ್ವರೂಪಿಣಿ ಚತುರ್ವಗ್ರಯನ್ನಸ್ತ: ತಸ್ಮಾನ್ಮಾರಿಸಿದ್ದಿದಾಭವ” ಹೀಗೆ ಪ್ರಾರ್ಥಿಸಿ ‘ಓಂ ಅವಿಘ್ನಂಕುರುಮಾಲೇತ್ವಂ’ ಎಂದು ಅದನ್ನು ತೆಗೆದುಕೊಂಡು ಮಂತ್ರದೇವತೆಯಾದ ಸೂರ್ಯನನ್ನು ಧ್ಯಾನಿಸುತ್ತಿರುವವನಾಗಿ ಮಂತ್ರಾರ್ಥವನ್ನು ಸ್ಮರಿಸುತ್ತ ಮಧ್ಯಾಹ್ನದ ವರೆಗೆ ಜಪಮಾಡುವದು. ಅತಿ ತ್ವರೆಯಿದ್ದರೆ ಮೂರುವರೆಯಾಮ ಪರ್ಯಂತವೂ ಜಪಿಸಬಹುದು. ಜಪವಾದ ಮೇಲೆ `ಓಂ’ ಎಂದು ಹೇಳಿ ‘ತ್ವಂಮಾಲೇ ಸರ್ವದೇವಾನಾಂ ಪ್ರೀತಿದಾ ಶುಭದಾಭವ ಶಿವಂ ಕುರುಮೇಭದ್ರ ಯಶೋವೀರ್ಯ೦ ಚ ಸರ್ವದಾ!’ ಹೀಗೆ ಹೇಳಿ ಮಾಲೆಯನ್ನು ಶಿರಸ್ಸಿನಲ್ಲಿಟ್ಟು ಮೂರಾವರ್ತಿ ಪ್ರಾಣಾಯಾಮ ಮಾಡಿ ಮತ್ತು ಮೂರು ನ್ಯಾಸ (ವಿಶ್ವಾಮಿತ್ರ ಋಷಯೇನಮಃ ಶಿರಸಿ ಇತ್ಯಾದಿ) ಜಪವನ್ನು ಈಶ್ವರಾರ್ಪಣ ಮಾಡತಕ್ಕದ್ದು. ಪ್ರತಿದಿನ ಮಾಡುವ ಜಪಸಂಖ್ಯೆಯು ಒಂದೇ ರೀತಿಯಿರಬೇಕು. ಒಂದು ದಿನ ಹೆಚ್ಚು, ಒಂದು ದಿನ ಕಡಿಮೆ ಹೀಗಾಗಬಾರದು. ಹೀಗೆ ಪುರಶ್ಚರಣದ ಜಪವು ಮುಗಿದ ನಂತರ ಹೋಮವು. ‘ಪುರಶ್ಚರಣಸಾಂಗತಾಸಿಧ್ಯರ್ಥಂ ಹೋಮವಿಧಿಂ ಕರಿಷ್ಟೇ’ ಹೀಗೆ ಸಂಕಲ್ಪಿಸಿ ಅಗ್ನಿ ಪ್ರತಿಷ್ಠಾಪನ ಮಾಡಿ ಪೀಠದಲ್ಲಿ ನವಗ್ರಹ ಪೂಜಾದಿ ಕಲಶಸ್ಥಾಪನದ ವರೆಗೆ ಮಾಡಿ ಅನ್ನಾಧಾನ ಮಾಡತಕ್ಕದ್ದು. ‘ಚಕ್ಷುಷೀ ಆಕ್ಕೇನ’ ಆದ ನಂತರ ‘ಗ್ರಹದೇವತಾ ಅನಾಧಾನಾದಿ ಸಮಿರ್ವಾಹುತಿ;: ಹೀಗೆ ಮಾಡಿ ‘ಪ್ರಧಾನದೇವತಾಂ ಸವಿತಾರಂ ಚತುರ್ವಿಂಶತಿಸಹಸ್ರ ತಿಲಾಹುತಿಲ್ಲ: ಸಹಸ್ರಸಂಖ್ಯಾಕಾಭಿ: ಪಾಯಸಾಹುತಿ: ಮೃತಮಿಶ್ರತಿಲಾಹುತಿಸಿ: ದೂರ್ವಾಹುತಿಭೆ: ಕ್ಷೀರದ್ರುಮ ಸಮಿದಾನುಭಿ ಶೇಷಣ ಸ್ವಿಷ್ಟಕೃತ್’ ಇತ್ಯಾದಿ ಚರು, ಪಾಯಸ, ತಿಲಗಳಿಂದ ಸಹಿತವಾಗಿ ಆಜ್ಯಕ್ಕೆ ಪರ್ಯ ಕರಣಾದಿಗಳನ್ನು ಮಾಡಿ ‘ಇರಂಹವನೀಯದ್ರ ಅನ್ನಾಧಾನೋಕ್ತ ದೇವತಾಭ್ಯ: ಅಸ್ತು ನ ಮಮ’ ಎಂದು ಯಜಮಾನನು ತ್ಯಾಗ’ ವನ್ನು ಹೇಳಬೇಕು. ಹೋಮದಲ್ಲಿ ಓಂಕಾರ ಸಹಿತ, ವ್ಯಾಹೃತಿಗಳಿಂದ ರಹಿತ, ಸ್ವಾಹಾಕಾರವೇ ಅಂತ್ಯವಾಗುಳ್ಳ ಗಾಯತ್ರಿ ಇರತಕ್ಕದ್ದು. (ಓಂ ತತ್ಸವಿತು: = ಯಾತ್ಮಾಹಾ ಹೀಗೆ) ದೂರ್ವಾಹುತಿ ಒಂದಕ್ಕೆ ಮರು ಪೂರ್ವೆಗಳಿರಬೇಕು.ಪರಿಚ್ಛೇದ - ೩ ಪೂರ್ವಾರ್ಧ ೩೮೯ ದೂರ್ವಾಸಮಿಧಗಳಿಗೆ ದಧಿ, ಮಧುಗಳನ್ನು ಮಿಶ್ರಮಾಡಬೇಕು. ಸ್ವಷ್ಟಕೃದಾದಿ ಬಲಿದಾನದ ವರೆಗೆ ಮಾಡಿ “ಸಮುದ್ರ ಜೇಷ್ಠಾ” ಇತ್ಯಾದಿಗಳಿಂದ ಯಜಮಾನನಿಗೆ ಅಭಿಷೇಕ ಮಾಡಬೇಕು. ಪ್ರತಿಲಕ್ಷಕ್ಕೆ ಸುವರ್ಣ, ನಿಷ್ಕತ್ರಯ ಅಥವಾ ಅದರ ಅರ್ಧ ಅಥವಾ ಶಕ್ರನುಸಾರ ದಕ್ಷಿಣೆಯನ್ನು ಕೊಡಬೇಕು. ಹೋಮಾನಂತರ ಜಲದಲ್ಲಿ ಸೂರ್ಯನನ್ನು ಪೂಜಿಸಿ ಹೋಮಸಂಖ್ಯಾದಶಾಂಶದಿಂದ (೨೪೦೦೦) ಗಾಯತ್ರಿಯ ಅಂತದಲ್ಲಿ “ಸವಿತಾರಂ ತರ್ಪಯಾಮಿ” ಹೀಗೆ ಹೇಳಿ ತರ್ಪಣ ಕೊಡತಕ್ಕದ್ದು. (ಓಂ ತತ್ಸ=ಯಾತ್ ಸವಿತಾರಂ ಹೀಗೆ ತರ್ಪಣದಶಾಂಶದಿಂದ (೨೪೦) ಅಭಿಷೇಕವು ಗಾಯತ್ರಿಯನ್ನು ಹೇಳಿ ‘ಆತ್ಮಾನಮಭಿಷಿಂಚಾಮಿ ನಮಃ’ ಎಂದು ತನ್ನ ತಲೆಯ ಮೇಲೆ ಅಭಿಷೇಕ ಮಾಡಿಕೊಳ್ಳುವದು. ಹೋಮ, ತರ್ಪಣ, ಅಭಿಷೇಕಗಳೊಳಗೆ ಯಾವದಾದರೊಂದು ನಡೆಯದಿದ್ದರೆ ಅದರ ಸಲುವಾಗಿ ಎರಡುಪಟ್ಟು ಜಪಮಾಡಬೇಕು. ಅಭಿಷೇಕದ ದಶಾಂಶ ಅಥವಾ ಅದಕ್ಕೂ ಹೆಚ್ಚು ಬ್ರಾಹ್ಮಣ ಸಂತರ್ಪಣ ಮಾಡಬೇಕು. “ಪುರಶ್ಚರಣಂ ಪೂರ್ಣಮಸ್ತು” ಎಂದು ಬ್ರಾಹ್ಮಣರ ಆಶೀರ್ವಾದ ಪಡೆಯುವದು. ನಂತರ ಈಶ್ವರಾರ್ಪಣ ಮಾಡುವದು. ಪ್ರತಿ ದಿನ “ಯಜ್ಞಾಗ್ರತ ಎಂಬ ಶಿವಸಂಕಲ್ಪ ಮಂತ್ರವನ್ನು ಮೂರಾವರ್ತಿ ಪರಿಸತಕ್ಕದ್ದು. ಕರ್ತನು ಬ್ರಾಹ್ಮಣ ಋತ್ವಿಜರಿಂದ ಕೂಡಿ ಹವಿಷ್ಯಾನ್ನ ಭೋಜನ ಮಾಡುವವನಾಗಿಯೂ, ಬೇರೆ ಹೊರಗೆ ತಿರುಗಾಟಕ್ಕೆ ಹೋಗದವನಾಗಿಯೂ, ಸತ್ಯವನ್ನೇ ಹೇಳುವವನಾಗಿಯೂ, ಭೂಶಯನ ಮಾಡುವವನಾಗಿಯೂ ಇರತಕ್ಕದ್ದು. ಹೀಗೆ “ಅನಂತದೇವೀಯ"ಗ್ರಂಥಾನುಸಾರವಾದ ಚತುರ್ವಿಂಶತಿ ಲಕ್ಷಾತ್ಮಕ ಪುರಶ್ಚರಣ ಪ್ರಯೋಗವು, ಋಧಾನದಲ್ಲಿ, ಮಧ್ಯಾಹ್ನದಲ್ಲಿ, ಮಿತಾಹಾರ, ಮೌನ, ತ್ರಿಕಾಲಸ್ನಾನ, ಪೂಜಾ ಈ ನಿಯಮದಲ್ಲಿದ್ದು ಲಕ್ಷ (ಮೂರು ಲಕ್ಷ) ಜಪವನ್ನು ಹೇಳಿದೆ. ಇದಕ್ಕೆ “ತಿಲಕ್ಷ ಪುರಶ್ಚರಣ"ವೆಂದು ಹೆಸರು. ಜವಶತಾಂಶ ಅಂದರೆ ಮೂರುಸಾವಿರ ಹೋಮ ಹೇಳಿದೆ. “ಕಚತುರ್ಗುಣಂಪ್ರೋಕ್ತಂ ಈ ವಚನದಂತೆ ಈ ಪುರಶ್ಚರಣೆಯನ್ನು ಹನ್ನೆರಡು ಲಕ್ಷಾತ್ಮಕವಾಗಿ ಮಾಡಬೇಕು. ಹನ್ನೆರಡುಸಾವಿರ ಹೋಮವು ಇತ್ಯಾದಿ ಊಹಮಾಡುವದು. ವಿಷ್ಣು ಶಯನ ಮಾಸಗಳಲ್ಲಿ “ಪುರಶ್ಚರಣೆ"ಯನ್ನು ಮಾಡತಕ್ಕದ್ದಲ್ಲ. ತೀರ್ಥಾದಿ ಕ್ಷೇತ್ರಗಳಲ್ಲಿ ಮಾಡಿದರೆ ಶೀಘ್ರಸಿದ್ಧಿಯಾಗುವದು ಎಂದು ಸಾಮಾನ್ಯ ಎಲ್ಲ ಮಂತ್ರಪ್ರಕರಣಗಳಲ್ಲಿಯೂ ಹೇಳಿದೆ. ಹೀಗೆ ಗಾಯತ್ರೀ ಪುರಶ್ಚರಣವು. ಅಶ್ವತೋಪನಯನ ಇದು ‘ಅಪೂರ್ವ ಕಮಲಾಕರ’ ಗ್ರಂಥದಲ್ಲಿ ಹೇಳಿದ್ದು, ಅಶ್ವತೋಪನಯನವನ್ನು ಬ್ರಾಹ್ಮಣರು ಎಂಟನೇ ವರ್ಷದಲ್ಲೂ, ಕ್ಷತ್ರಿಯರು ಹನ್ನೊಂದನೇ ವರ್ಷದಲ್ಲೂ, ವೈಶ್ಯರು ಹನ್ನೆರಡನೇ ವರ್ಷದಲ್ಲೂ ಮಾಡತಕ್ಕದ್ದು. ಶೂದ್ರನು ಸ್ಥಾಪಿಸಿದ ಅಶ್ವತಕ್ಕೆ ಉಪನಯನವಿಲ್ಲ. ಪೌರಾಣಿಕ ಮಂತ್ರಗಳಿಂದ ‘ಆರಾಮಪ್ರತಿಷ್ಠಾ’ ವಿಧಿಯನ್ನು ಮಾತ್ರ ಮಾಡತಕ್ಕದ್ದು, ಪ್ರಯೋಗ:- ಕರ್ತನು ದೇಶಕಾಲಗಳನ್ನುಚ್ಚರಿಸಿ ‘ಸರ್ವಪಾಪಕ್ಷಯ, ಕುಲಕೋಟಿಸಮುದ್ಧರಣ ಪೂರ್ವಕ ವಿಷ್ಣು ಸಾಯುಜ್ಯ ಕಾಮೋsಹಮಶ್ವತೋಪನಯನಂ ಕರಿಷ್ಯ’ ಹೀಗೆ ಸಂಕಲ್ಪಿಸಿ ನಾಂದೀಶ್ರಾದ್ಧಾಂತ ಮಾಡಿ ಆಚಾರ್ಯನನ್ನು ವರಿಸುವದು. ಆಚಾರ್ಯನು ಪಂಚಾಮೃತ, ಶುದ್ಧೋದಕ, ಸರ್ವೌಷಧಿಜಲ ಇವುಗಳಿಂದ ಅಶ್ವತ್ಥವನ್ನಭಿಷೇಕ ಮಾಡಿ, ರಂಗಿಹಿಟ್ಟಿನಿಂದ ಅಲಂಕರಿಸಿ ಅದರ ಪೂರ್ವದಿಕ್ಕಿನಲ್ಲಿ 260 ಧರ್ಮಸಿಂಧು ಸ್ಥಂಡಿಲದಲ್ಲಿ ಅಗ್ನಿ ಪ್ರತಿಷ್ಠೆ ಮಾಡಿ ಅನ್ನಾಧಾನದಲ್ಲಿ ‘ಅಗ್ನಿಂ ವಾಯುಂ ಸೂರ್ಯಂ ತ್ರಿರಂ ಪವಮಾನು ಪ್ರಜಾಪತಿಂ ದ್ವಿರೋಷಧೀ: ವಕೃತಿಂ ಪಿಪ್ಪಲಂ ಪ್ರಜಾಪತಿಂ ಚ ಪಾಲಾಶ ಸಮಿಚ್ಚರ್ವಾಕ್ಯ: ಪ್ರತ್ಯೇಕಮೇಕೈಕಯಾಹುತ್ಮಾ ಶೇಷೇಣ’ ಇತ್ಯಾದಿ ಇಪ್ಪತ್ತೆಂಟು ಪ್ರೀಹಿಮುಷ್ಟಿಗಳಿಗೆ ಅಮಂತ್ರಕವಾಗಿ ನಿರ್ವಾಪ ಪ್ರೋಕ್ಷಣಗಳನ್ನು ಮಾಡತಕ್ಕದ್ದು. ಚರು ಶ್ರವಣಾದಿ ಆಜ್ಯಭಾಗದ ವರೆಗೆ ಮಾಡಿ “ಯುವ ವಾಣಿ” ಎಂದು ಎರಡು ವಸ್ತ್ರಗಳಿಂದ ಸುತ್ತಿ ಯಜ್ಞಪವೀತಂ” ಎಂಬ ಮಂತ್ರದಿಂದ ಯಜ್ಞಪವೀತವನ್ನು ಕೊಟ್ಟು “ಪ್ರಾವೇಪೇಮ” ಎಂಬ ಮಂತ್ರದಿಂದ ಮೂರು ಸುತ್ತಿನ ಮೇಖಲೆಯನ್ನು ಸುತ್ತಿ ಅಜಿನ ಹಾಗೂ ದಂಡಗಳನ್ನು ಆಮಂತ್ರಕವಾಗಿ ಅರ್ಪಿಸತಕ್ಕದ್ದು. “ಅಶ್ವತ್ಥವೋ"ಎಂಬ ಮಂತ್ರವನ್ನು ಹೇಳಿದ ನಂತರ “ಹಸ್ತಂಗೃಷ್ಣಾಶ್ವತ” ಹೀಗೆ ಸ್ಪರ್ಶಿಸಿ ಓಂಕಾರ ವ್ಯಾಹೃತಿ ಸಹಿತವಾದ ಗಾಯತ್ರಿಯನ್ನು ಮೂರಾವರ್ತಿ ಹೇಳಿ “ಅಶ್ವತ್ಥವಃ” ಎಂಬ ಸೂಕ್ತದಿಂದ ಮತ್ತು ವ್ಯಾಹೃತಿಗಳಿಂದ ‘ಅಶ್ವತ್ಥಂ ಸ್ಥಾಪಯಾಮಿ” ಎಂದು ಬಂಗಾರದ ಸಲಾಕೆಯಿಂದ ಸ್ಪರ್ಶಿಸಿ ಆಜ್ಯ, ಪಲಾಶ ಸಮಿಧ, ಚರುಗಳಿಂದ ಪ್ರತ್ಯೇಕವಾಗಿ ಹನ್ನೆರಡು ಮಂತ್ರಗಳಿಂದ ದ್ವಾದಶ ಆಹುತಿಗಳನ್ನು ಹೋಮಿಸುವದು. ಆ ಮಂತ್ರಗಳು - ‘ಓಂ ಭೂಃಸ್ವಾಹಾ ಅಗ್ನಯ ಇದಂ ಓಂ ಭುವಃ ಸ್ವಾಹಾ ವಾಯವ ಇದಂ ಓ೦ ಸುವಃ ಸ್ವಾಹಾ ಸೂರ್ಯಾಯೇದಂ ಓಂ ಅಗ್ನಾ ಗುಂಪಿ; ಓಂ ಅಗ್ನಿರ್‌ಋಷಿಃ, ಓಂ ಅಗ್ನಿಪವಸ್ತ್ರ,’ ಎಂಬ ಮೂರು ಮಂತ್ರಗಳಿಂದ ‘ಅಗ್ನಯೇ ಪವಮಾನಾಯೇದಂ ಓಂ ಪ್ರಜಾಪತೇನತ್ವ=ಪ್ರಜಾಪತಯ ಇದಂ ಓಂ ಓಷಧಯಃ ಸಂವದಂತೇ= ಓಂ ಅಶ್ವತ್ಥವೋ ಓಷಧೀಭ್ಯ ಇದಂ ಓ೦ ವನಸ್ಪತೇಶತಃ ವನಸ್ಪತಯ ಇದಂ ಓಂದ್ಯಾಸುಪರ್ಣಾ ಪಿಪ್ಪಲಾಯೇದಂ’’ ಸಮಸ್ತ ವ್ಯಾಹೃತಿಗಳಿಂದ ಓಂ ಭೂರ್ಭುಸ್ವ: ಪ್ರಜಾಪತಯ ಇದಂಗೆ ನಂತರ ಸ್ವಿಷ್ಟಕೃದಾದಿ ಹೋಮಶೇಷವನ್ನು ಮುಗಿಸಿ “ಅಶ್ವತ್ತೇವ” ಎಂದು ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಫಲ, ತಾಂಬೂಲಾದಿಗಳಿಂದ ಪೂಜಿಸಿ ಅಶ್ವತ್ನವನ್ನು ಸ್ಪರ್ಶಿಸಿ ಆಚಾರ್ಯನಿಗೆ ಗೋವನ್ನೂ, ಅನ್ಯ ಋತ್ವಿಜರಿಗೆ ದಕ್ಷಿಣೆಯನ್ನು ಕೊಟ್ಟು ಅಶ್ವತ್ವದ ವಸ್ತ್ರಾದಿಗಳನ್ನೂ ಆಚಾರ್ಯನಿಗೆ ಕೊಟ್ಟು ಎ ಟು ಬ್ರಾಹ್ಮಣರ ಭೋಜನವನ್ನು ಮಾಡಿಸತಕ್ಕದ್ದು. ತರುಪುತ್ರಕವಿಧಿ ಪುತ್ರರಿಲ್ಲದವರು ಆಲ ಮೊದಲಾದ ವೃಕ್ಷವನ್ನು ಪುತ್ರನನ್ನಾಗಿ ಸ್ವೀಕರಿಸುವ ವಿಧಾನಕ್ಕೆ “ತರುಪುತ್ರವಿಧಿ"ಯನ್ನುವರು. ಪುತ್ರರಿಲ್ಲದ ಪುರುಷ ಅಥವಾ ಸ್ತ್ರೀಯು ವಟ, ಬಸರೀ, ಮಾವು ಮೊದಲಾದ ವೃಕ್ಷಗಳನ್ನು ಪುತ್ರರೂಪದಿಂದ ಪ್ರತಿಗ್ರಹಮಾಡುವದು. ದೇಶಕಾಲಗಳನ್ನುಚ್ಚರಿಸಿ “ಮಹಾಪಾಪಕ್ಷಯ, ಕುಲತ್ರಯ ಸುರಣ, ಪ್ರಜಾಪತಿ ಪುರಗಮನ, ನಿರಯಸ್ಥ ಪಿತ್ರುದ್ಧಾರ, ಮಧುಧಾರಾ ತೃಪ್ತಿ ಸಿಧ್ಯರ್ಥಂ ಸಪುತ್ರತ್ರ ಸಿಧ್ಯರ್ಥಂ ಅನುಕ೦ ಪ್ರತಿಗೃಹಿಷ್ಟೇ” ಹೀಗೆ ಸಂಕಲ್ಪಿಸಿ ಉಪವಾಸವಿದ್ದು ರಾತ್ರಿಯಲ್ಲಿ ಎಂಟು ಬ್ರಾಹ್ಮಣರರನ್ನು ಕರೆದು ಚಂದ್ರನನ್ನು ಪೂಜಿಸಿ ಜಾಗರಣೆ, ಭೂಶಯನಗಳನ್ನು ಮಾಡಿ, ಮಾರನೇ ದಿನ ಬೆಳಿಗ್ಗೆ ವೃಕ್ಷವನ್ನು ಪೂಜಿಸಿ ಅದರ ನೆರಳಲ್ಲಿ ಬ್ರಾಹ್ಮಣಭೋಜನ ಮಾಡಿಸಿ ಪುಣ್ಯಾಹವಾಚನ ಮಾಡಿ ಪ್ರಾರ್ಥಿಸುವದು. “ಅಪುತ್ತೂ ಭಗವಂತೋತ್ರ ಪುತ್ರ ಪ್ರತಿಕೃತಿಂತರು|ಗ್ರ ಹ್ಯಾಮಿನಮಾನುಜ್ಞಾ ಕರ್ತುಮರ್ಹಥಸ ಮಾಃ” ಹೀಗೆ ಪ್ರಾರ್ಥಿಸಿ ತಾಮ್ರ ಪಾತ್ರದಲ್ಲಿ ಪಂಚರತ್ನ ಬೀಜರೂಪವುಳ್ಳ ಐದು ಬಂಗಾರದ ಫಲಗಳನ್ನಿಟ್ಟು ಲೋಕಪಾಲ → ಪರಿಚ್ಛೇದ ೩ ಪೂರ್ವಾರ್ಧ ಬಲಿಯನ್ನು ಮಾಡತಕ್ಕದ್ದು. ಮಾರನೇ ದಿನ ತಿಲ, ಆಜ್ಯ, ಚರುಗಳಿಂದ ಎಂಟು ನೂರು ವನಸ್ಪತಿ ಮಂತ್ರದಿಂದ ಹೋಮಿಸಿ, ಜಾತಕರ್ಮಾದಿ ವಿವಾಹಾಂತ ಸಂಸ್ಕಾರಗಳನ್ನು ಮಾಡಿ ತಾನು ಸ್ನಾನ ಮಾಡಿ, ಪುಷ್ಪವನ್ನು ಅಂಜಲಿಯಲ್ಲಿಟ್ಟುಕೊಂಡು ಪ್ರಾರ್ಥಿಸುವದು. “ಯಶಾಖನ: ಶಿಖರಿಣಾಂ ಶಿರಸಾ ವಿಭೂಷಾಯೇ ನಂದನಾದಿಷ್ಟು ವನೇಷು ಕೃತಪ್ರತಿಷ್ಠಾ! ಯೇ ಕಾಮರಾಯರನರೋರಗ ಕಿನ್ನರಾಣಾಂ ತೇ ಮ ನತಸ್ಯದುರಿತಾರ್ತಿ ಹರಾಭವಂತು|ಏತೇದ್ವಿಜಾ ವಿಧಿವರತ್ರ ಹುಹುತಾಶ: ಪಶ್ಯ ಶೌಚ ಹಿಮದೀಧಿತಿರಂತರಸ್ಥ ತ್ವಂ ವೃಕ್ಷಪುತ್ರ ಪರಿಕಲ್ಪಮಯಾವೃತೋSಸಿ ಕಾರ್ಯಂಸವ ಭವತಾಮಮ ಪುತ್ರಕಾರ್ಯಂ” ಹೀಗೆ ಪ್ರಾರ್ಥಿಸಿ ” ಅಂಗಾದಂಗಾತ್’ ಎಂದು ಸ್ಪರ್ಶಿಸಿ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ವಿಸರ್ಜಿಸುವದು. ಹೀಗೆ ವಟಾದಿ ತರುಪುತ್ರ ವಿಧಿಯು. R ಸಕಲಕರ್ಮ ಸಾಧಾರಣ ಪರಿಭಾಷೆಗಳು ಎಲ್ಲ ಪಾಕಯಜ್ಞಗಳಲ್ಲಿ ಬ್ರಹ್ಮವರಣೆಯು ಕೃತಾಕೃತವು. ಪಾತ್ರಾಸಾದನ, ಆಜ್ಯಾದಿ ದ್ರವ್ಯಶ್ರವಣ ಇವೂ ಸಹ ಐಚ್ಛಿಕಗಳು. ಸೃವಾದಿ ಪಾತ್ರಗಳ ಸಂಮಾರ್ಜನ, ಇದರಷ್ಟು ಪ್ರಹರಣ, ಪೂರ್ಣಪಾತ್ರ, ಆಜ್ಯುತ್ಸವನ ಇವು ನಿತ್ಯಗಳು. ತಂಡುಲ ಸ್ಥಾನದಲ್ಲಿ ಪ್ರೀಹಿ ಕುಟ್ಟುವದು ಕೃತಾಕೃತವು. ದ್ರವಿಸುವ ಧೃತಾದಿಗಳನ್ನು ಕರಗಿಸುವ ವಿಧಾನವೂ ಕೃತಾಕೃತವು. ಪ್ರತಿಪದಗಳಿಂದ ಯುಕ್ತವಾದ ಆಜ್ಯಹೋಮದಲ್ಲಿ ಪರಿಸ್ತರಣವು ವಿಕಲ್ಪವು. ಆದಿಷ್ಟವಲ್ಲದ ಆಜ್ಯಹೋಮದಲ್ಲಿ ಪರಿಷ್ಕರಣವು ನಿತ್ಯವು, ಆಜ್ಯಭಾಗಸಹಿತ ಅಥವಾ ಆಜ್ಯಭಾಗರಹಿತಗಳಾದ ಕರ್ಮಗಳ ತಂತ್ರಪ್ರಯೋಗಗಳಲ್ಲಿ ಆಜ್ಯಭಾಗ ಕೊಡದಿರುವಿಕೆಯು ವಿಹಿತವು. ಯಾಕೆಂದರೆ ಎಲ್ಲ ಸ್ಥಾನಗಳಲ್ಲಿಯೂ ಆದ್ಯಭಾಗವು ವಿಕಲ್ಪವು. ಅನೇಕ ವಾಕಯಜ್ಞಗಳನ್ನು ಏಕಕಾಲದಲ್ಲಿ ಮಾಡುವದಿದ್ದರೆ “ಸಮಾನತಂತ್ರವಾಗಿ ಮಾಡತಕ್ಕದ್ದು. ಇವುಗಳಲ್ಲಿ ಸ್ಪಷ್ಟಕೃತ್ ಇತ್ಯಾದಿಗಳೂ ಒಂದೇ ಇರತಕ್ಕದ್ದು. ಎಲ್ಲಿ ದ್ರವ್ಯಗಳು ಉಕ್ತವಾಗಿಲ್ಲವೋ ಅಲ್ಲಿ ಆಜ್ಯವನ್ನು ಸ್ವೀಕರಿಸುವದು. ಮಂತ್ರಗಳು ಕರ್ಮಕ್ಕೆ ಸಾಧನಗಳಾಗಿರುವದರಿಂದ ಮಂತ್ರಗಳ ಅಂತ್ಯದಲ್ಲಿ ಕರ್ಮಮಾಡತಕ್ಕದ್ದು. ಗೃಹಕರ್ಮಗಳೊಳಗೆ ಕರ್ಮದ ಆವೃತ್ತಿಯಿದ್ದರೆ ಮಂತ್ರಗಳ ಆವೃತ್ತಿಯನ್ನೂ ಮಾಡುವದು. ಸಮಂತ್ರಕ ಹೋಮಗಳಲ್ಲಿ ಅಮಂತ್ರಕವಾಗಿ “ನಿರ್ವಾಪ” ಮಾಡತಕ್ಕದ್ದು. ನಾಮಮಂತ್ರಗಳಿಂದ ಹೋಮವಿದ್ದರೆ ನಾಮಮಂತ್ರದಿಂದಲೇ ನಿರ್ವಾಪಮಾಡುವದು ಎಲ್ಲಿ ಮಂತ್ರ ಅಥವಾ ನಾಮ ಮಂತ್ರಗಳಿಂದ ಹೋಮವನ್ನು ಹೇಳಿಲ್ಲವೋ ಅಲ್ಲಿ ನಾಮಮಂತ್ರದಿಂದಲೇ ಹೋಮಮಾಡತಕ್ಕದ್ದು, ಸಮಂತ್ರಕ ಹೋಮ ಮಧ್ಯದಲ್ಲಿ ಸಂಗಡ ಅನೇಕ ದೇವತಾಕವಾದ ಚರುಶ್ರಪಣವಿದ್ದಾಗ್ಯೂ ವಿಭಾಗ ಮತ್ತು ಅಭಿಮರ್ಶಗಳನ್ನು ಮಾಡತಕ್ಕದ್ದಲ್ಲ. (ತಂಡುಲಗಳನ್ನು ವಿಭಾಗಿಸಿ ಅದಕ್ಕೆ ಇದಮಮುಷ್ಮಾ ಎಂದು ಮುಟ್ಟುವದು. ಹೀಗೆ ವಿಭಾಗ ಮತ್ತು ಅಭಿಮರ್ಶ ಎಂದರ್ಥ) ಇಂಥ ಹಸ್ತದಿಂದಲೇ ಮಾಡಬೇಕೆಂದು ಹೇಳದಿದ್ದಲ್ಲಿ ಬಲಹಸ್ತದಿಂದಲೇ ಮಾಡತಕ್ಕದ್ದು. ದಿಕ್ಕುಗಳನ್ನು ಹೇಳದಿದ್ದಲ್ಲಿ ಪೂರ್ವ ಅಥವಾ ಉತ್ತರ, ಈಶಾನ್ಯಗಳೆಂದು ತಿಳಿಯುವದು. ಎದ್ದು ನಿಂತು ಅಥವಾ ಕುಳಿತು ಮಾಡಬೇಕೆಂದು ಸ್ಪಷ್ಟ ಹೇಳದಿದ್ದಲ್ಲಿ ಕುಳಿತೇ ಮಾಡತಕ್ಕದ್ದು. ಬೇರೆ ಕರ್ತೃಗಳನ್ನು ಹೇಳದಿದ್ದಲ್ಲಿ ತಾನೇ ಕರ್ತನೆಂದು ತಿಳಿಯಬೇಕು. ಶಾಖಾಂತರ ಮಂತ್ರಗಳ ಸ್ವರಜ್ಞಾನವಿಲ್ಲದಾಗ ೩೯೨ ಧರ್ಮಸಿಂಧು ಏಕಶ್ರುತಿ (ಧಾರಾಕಾರ)ಯಿಂದ ಮಂತ್ರ ಹೇಳಬೇಕು. ಹೋಮದಲ್ಲಿ ಮಂತ್ರ ಹೇಳುವಾಗ ಆದಿಯಲ್ಲಿ ಓಂಕಾರ, ಮಂತ್ರಾಂತ್ಯದಲ್ಲಿ ಸ್ವಾಹಾಕಾರ ಹೇಳುವದು. ಬ್ರಾಹ್ಮಣಾದಿಗಳು ಎರಡು ದರ್ಭಗಳನ್ನು ಗ್ರಂಥಿಯುಕ್ತ ಅಥವಾ ರಹಿತವಾಗಿ ಪವಿತ್ರವನ್ನು ಧರಿಸುವದು. ಸಾಮಾನ್ಯವಾಗಿ ಪ್ರತಿಯೊಂದು ಆಹುತಿಗಾಗಿ ಕರ್ಷಪ್ರಮಾಣ (ಶಾಸ್ತ್ರೀಯಮಾನದಿಂದ ಒಂದು ತೊಲೆ) ತುಪ್ಪವನ್ನು ತೆಗೆದುಕೊಳ್ಳುವದು. ಮೊದಲಾದರೆ ಮುಷ್ಟಿ ಪ್ರಮಾಣ, ಅನ್ನವು ಗ್ರಾಸಪ್ರಮಾಣ, ಗಡ್ಡೆ ಒಂದೆಂಟಾಂಶ, ಎಳ್ಳು, ಹಿಟ್ಟು, ಧಾನ್ಯಾದಿಗಳು “ಮೃಗೀಮುದ್ರಾ ಪ್ರಮಾಣ” ಹೀಗಿರತಕ್ಕದ್ದು. ಅಗ್ನಿ ತರುವದಕ್ಕೆ ಬೆಳ್ಳಿ ಅಥವಾ ತಾಮ್ರ ಇಲ್ಲವೆ ಮೃತ್ತಿಕಾ ಪಾತ್ರಗಳಿರತಕ್ಕದ್ದು. ಮೇಲೆ ತಾಮ್ರಪಾತ್ರವು ಮುಚ್ಚಳವಾಗಿರಬೇಕು. ಪ್ರೋತ್ರಿಯನ ಮನೆಯ ಅಗ್ನಿಯು ಉತ್ತಮ. ತನ್ನ ಮನೆಯ ಅಗ್ನಿಯು ಮಧ್ಯಮ, ಅಗ್ನಿಯಲ್ಲಿ ಕಟ್ಟಿಗೆಯನ್ನು ಪ್ರೋಕ್ಷಿಸಿಯೇ ಹಾಕತಕ್ಕದ್ದು. ಕರ್ಮಕಾಲಕ್ಕೆ ಸದಾ ಉಪವೀತಿಯಾಗಿಯೂ, ಜುಟ್ಟನ್ನು ಗಂಟುಹಾಕಿದವನಾಗಿಯೂ ಇರಬೇಕು. “ಸದಾ” ಎಂಬ ಪದದಿಂದ “ಶಿಖಾಬಂಧನ” ಇದು ಕರ್ಮಾಂಗವಾಗಿ ಗಂಟುಹಾಕಬೇಕಾದ ಪ್ರತ್ಯೇಕ ವಿಧಿಸುವದರಿಂದ ಪುರುಷಾರ್ಥವಿದೆ ಎಂದು ಸೂಚಿತವಾಗುವದು. ಇದರ ಮೇಲಿಂದ ಸಿದ್ಧವಾಗುವದೇನೆಂದರೆ ಕರ್ಮಕಾಲದಲ್ಲಿ ಶಿಖಾಬಂಧನಾದಿಗಳನ್ನು ಮಾಡದಿದ್ದರೆ ದ್ವಿಗುಣಪ್ರಾಯಶ್ಚಿತ್ತವು. ಇತರ ಕಾಲದಲ್ಲಿ ಒಂದೇ ಪ್ರಾಯಶ್ಚಿತ್ತವು. ಹತ್ತುವಿಧ ದರ್ಭೆಗಳ ವಿಷಯವನ್ನು ಮೊದಲೇ ಹೇಳಲಾಗಿದೆ. ಕ್ವಚಿತ್ತಾಗಿ ಆಲ, ಬಸರಿ, ಬಿಲ್ವ, ವೈಕಂಕಚಿತ, ಚಂದನ, ದೇವದಾರು, ಸರಲ ಈ ವೃಕ್ಷಗಳ ಸಮಿಧಗಳನ್ನೂ ಹೇಳಿದೆ. ಮುಖ್ಯ ಕಲ್ಪದಿಂದ ಕರ್ಮ ಮಾಡಲು ಸಮರ್ಥವಾಗಿದ್ದು ಗೌಣಕಲ್ಪದಿಂದ ಮಾಡಿದರೆ ಪರಲೋಕದಲ್ಲಿ ಅದರ ಫಲವು ಸಿಗಲಾರದು. ಹೀಗೆ ಶ್ರುತಿ, ಸ್ಮೃತಿ ವಚನಗಳಿವೆ. ಹೆಚ್ಚು ಕಡಿಮೆ ಯಾವವನಿಗೆ ತನ್ನ ಸೂತ್ರದಲ್ಲಿ ಎಷ್ಟು ಕರ್ಮವನ್ನು ಹೇಳಿದೆಯೋ ಅಷ್ಟನ್ನೇ ಆದರೂ ಯಥಾಶಾಸ್ತ್ರವಾಗಿ ಮಾಡಿದರೆ ಅದು ಪೂರ್ಣವೆಂದೇ ಆಗುವದು. ಕರ್ಮವಿಶೇಷದಿಂದ ಅಗ್ನಿನಾಮಗಳು ಗರ್ಭಾಧಾನಸಂಸ್ಕಾರದಲ್ಲಿ ಸ್ಥಾಪಿಸುವ ಅಗ್ನಿಗೆ “ಮರುತ"ವನ್ನುವರು. ಪುಂಸವನದಲ್ಲಿ “ಪವಮಾನ”, ಸೀಮಂತೋನ್ನಯನದಲ್ಲಿ “ಮಂಗಲ, ಜಾತಕರ್ಮದಲ್ಲಿ “ಪ್ರಬಲ, ನಾಮಕರಣದಲ್ಲಿ ಪಾರ್ಥಿವ”, ಅನ್ನಪ್ರಾಶನದಲ್ಲಿ “ಶುಚಿ, ಚೌಲದಲ್ಲಿ “ಸಭ್ಯ, ಮುಂಜಿ ಮೊದಲಾದ ವ್ರತದಲ್ಲಿ ‘ಸಮುದ್ರವ, ಸಮಾವರ್ತನಾದಿಗಳಲ್ಲಿ ‘ಸೂರ್ಯ’, ವಿವಾಹದಲ್ಲಿ ‘ಯೋಜಕ’, ಗೃಹ್ಯಾಗ್ನಿಕಾರ್ಯದಲ್ಲಿ (ಆವಸಥ್ಯ) ‘ಜ’, ಪ್ರಾಯಶ್ಚಿತ್ತದಲ್ಲಿ ‘ವಿಟಿ’ (ಚಿತ್ತಿ ಎಂದು ಕೆಲ ಕಡೆಯಲ್ಲಿ ಹೇಳಿದೆ) ಪಾಕಯಜ್ಞದಲ್ಲಿ ‘ಪಾವಕ’, ಪಿತೃಕಾರ್ಯದಲ್ಲಿ ‘ಕವ್ಯವಾಹನ’, ದೈವಕರ್ಮದಲ್ಲಿ ‘ಹವ್ಯವಾಹನ’, ಶಾಂತಿಕದಲ್ಲಿ ‘ವರದ’, ಪೌಷ್ಟಿಕದಲ್ಲಿ ಬಲವರ್ಧನ’, ಮೃತನ ದಹನದಲ್ಲಿ ‘ಕ್ರವಾದ’ ಹೀಗೆ ಆಯಾಯ ಕರ್ಮಗಳಲ್ಲಿ “ಅಗ್ನಿ” ತಿಳಿದು ಪ್ರತಿಷ್ಠೆ ಮಾಡಬೇಕು. ಮುತ್ತುಗಳ ಕಟ್ಟಿಗೆಯಿಂದ “ಜುಹೂ” (ಅರ್ಧಚಂದ್ರಾಕೃತಿಯ ಸವಟು) ತಯಾರಿಸಬೇಕು. ಖೈರ ಕಟ್ಟಿಗೆಯಿಂದ “ಸವ ಮತ್ತು ಸೃಜೆಗಳನ್ನು ಮಾಡಬೇಕು. ಅಂಥ ವೃಕ್ಷದ ಅಭಾವದಲ್ಲಿ ಯಾವದಾದರೂ “ಯಾಜ್‌ಯ ವೃಕ್ಷದಿಂದ ತಯಾರಿಸುವದು. ಯಾಜ್‌ಯ ವೃಕ್ಷವೂ ಸಿಗದಿದ್ದಲ್ಲಿ ಪಲಾಶದ ಮಧ್ಯದ ಎಲೆಯಿಂದ ಮಾಡತಕ್ಕದ್ದು, ಅಥವಾ ಅಶ್ವತ್ಥ ಪತ್ರದಿಂದ ಹೋಮ ಪರಿಚ್ಛೇದ - ೩ ಪೂರ್ವಾರ್ಧ ೩೯೩ ಮಾಡತಕ್ಕದ್ದು. ಇದರಂತೆ “ಚಮಸ” (ಚಾಕು ಆಕಾರದ ಹಿಡಿಕೆಯುಳ್ಳ ಒಂದು ಗೇಣುದ್ದದ ಕಟ್ಟಿಗೆಯ ಪಾತ್ರ) ಮೊದಲಾದ ಪಾತ್ರಗಳನ್ನು ಖೈರ ಮೊದಲಾದ “ಯಜ್ಜಿಯ” ಕಟ್ಟಿಗೆಯಿಂದಲೇ ಮಾಡಬೇಕು. ಕಾವ್ಯ ಕರ್ಮದಲ್ಲಿ ತನ್ನ ಬಗ್ಗಾಗಿ ಪ್ರತಿನಿಧಿಯನ್ನು ಕೂಡ್ರಿಸತಕ್ಕದ್ದಲ್ಲ. ನಿತ್ಯ ಹಾಗೂ ನೈಮಿತ್ತಿಕಗಳಲ್ಲಿ ಪ್ರತಿನಿಧಿಯಾಗಬಹುದು. ಕಾವ್ಯದಲ್ಲಾದರೂ ಪ್ರಾರಂಭವಾದ ಮೇಲೆ ತೊಂದರೆ ಬಂದರೆ ಪ್ರತಿನಿಧಿಯಾಗಬಹುದು ಎಂದು ಬೇರೆ ಗ್ರಂಥಕಾರರು ಹೇಳುವರು. ಮಂತ್ರ, ಕರ್ಮ, ದೇವತಾ ಮತ್ತು ಕರ್ತಾ ಈ ವಿಷಯದಲ್ಲಿ ಪ್ರತಿನಿಧಿಯಿಲ್ಲ. ಮತ್ತು ದೇಶ, ಕಾಲಗಳಿಗೂ ಪ್ರತಿನಿಧಿಯಿಲ್ಲ. ಮತ್ತು ಯಾವದೇ ಕರ್ಮದಲ್ಲಿ ಪ್ರತಿನಿಧಿ ವಸ್ತುಗಳನ್ನು ಸ್ವೀಕರಿಸುವಾಗ ಕೇವಲ ನಿಷಿದ್ಧವಸ್ತುಗಳನ್ನು ಬಿಡತಕ್ಕದ್ದು. ಕರ್ಮಕ್ಕೆ “ಸ್ವಕಾಲ” ತಪ್ಪಿದಲ್ಲಿ ಅದರ ಮುಂದಿನ ಕಾಲವು “ಗೌಣಕಾಲ ವೆನ್ನಲ್ಪಡುತ್ತದೆ. ತರ್ಪಣ, ಶ್ರಾದ್ಧ, ಆಸನ, ಭೋಜನ, ಮಲಮೂತ್ರ ಈ ಆರರಲ್ಲಿ ಧರಿಸಿದ ಅಥವಾ ಉಪಯೋಗಿಸಿದ ದರ್ಭೆಯು ನಿರ್ಮಾಲ್ಯ (ತಾಜ್ಯ) ವಾಗುವದು. ಅಭಿಚಾರಿಕ (ಮಾಟ ಮೋಡಿ) ಮೊದಲಾದ ಕರ್ಮಗಳನ್ನುಪಯೋಗಿಸಿದ “ದರ್ವಿ” ಮೊದಲಾದ ಪಾತ್ರಗಳೂ ನಿರ್ಮಾಲ್ಯಗಳಾಗುವವು. ಶೂದ್ರನ ಕಾರ್ಯದಲ್ಲುಪಯೋಗಿಸಿದ ಮಂತ್ರ, ಪ್ರೇತ ಶ್ರಾದ್ಧದಲ್ಲಿ ಭೋಜನ ಮಾಡಿದ ಬ್ರಾಹ್ಮಣರೂ ನಿರ್ಮಾಲ್ಯ ಎಂದಾಗುವದು. ಕರ್ಮಾಂಗ ದೇವತೆಗಳು ವಿವಾಹಕಾರ್ಯದಲ್ಲಿ “ಅಗ್ನಿ"ಯು ದೇವತೆಯು. ಆದಕಾರಣ ವಿವಾಹಾಂಗವಾದ ಪುಣ್ಯಾಹವಾಚನಾದಿಗಳ ಅಂತ್ಯದಲ್ಲಿ “ಕರ್ಮಾಂಗ ದೇವತಾಅಗ್ನಿಪ್ರೀಯತಾಂ” ಹೀಗೆ ಹೇಳಬೇಕು. ಔಪಾಸನದಲ್ಲಿ “ಅಗ್ನಿ-ಸೂರ್ಯ-ಪ್ರಜಾವತಿ” ಗಳು, ಸ್ಥಾಲೀಪಾಕದಲ್ಲಿ “ಅಗ್ನಿ"ಯು. ಗರ್ಭಾಧಾನದಲ್ಲಿ ‘ಬ್ರಹ್ಮ’. ಪುಂಸವನದಲ್ಲಿ ‘ಪ್ರಜಾಪತಿ’. ಸೀಮಂತದಲ್ಲಿ ‘ಧಾತಾ’, ಜಾತಕರ್ಮದಲ್ಲಿ ‘ಮೃತ್ಯು’, ನಾಮಕರಣದಲ್ಲಿ ‘ಅನ್ನಪ್ರಾಶನ’, ನಿಮಣಗಳಲ್ಲಿ ‘ಸವಿತಾ’, ಚೌಲದಲ್ಲಿ ಕೇಶಿನ ಉಪನಯನದಲ್ಲಿ ಇಂದ್ರ, ಶ್ರದ್ಧಾ ಮೇಧಾ ಇವು ಅಂತ್ಯದಲ್ಲಿ, ‘ಸುಶ್ರವಾಃ’ ಪುನರುಪನಯನದಲ್ಲಿ, ‘ಆಗ್ನಿ’, ಸಮಾವರ್ತನದಲ್ಲಿ ‘ಇಂದ್ರ’, ಉಪಾಕರ್ಮ ಮತ್ತು ವ್ರತಗಳಲ್ಲಿ ‘ಸವಿತಾ’, ವಾಸ್ತುಹೋಮದಲ್ಲಿ ‘ವಾಸ್ತೋಷ್ಪತಿ, ಕೊನೆಯಲ್ಲಿ “ಪ್ರಜಾಪತಿ, ಆಗ್ರಯಣಕ್ಕೆ ಆಗ್ರಯಣ”, ಸರ್ಪಬಲಿಗೆ “ಸರ್ಪ”, ತಟಕಾದಿಗಳಿಗೆ “ವರುಣ, ಸಹಸ್ರಯಜ್ಞದಲ್ಲಿ “ನವಗ್ರಹ”, ಕೂಶ್ಚಾಂಡ ಹೋಮ, ಚಾಂದ್ರಾಯಣ, ಅಗಾಧಾನ ಇವುಗಳಿಗೆ “ಅಾದಿದೇವತೆ"ಗಳು, ಉಳಿದ ಇಷ್ಟಕರ್ಮಗಳಿಗೆ (ಹೇಳದೆ ಇದ್ದವುಗಳಲ್ಲಿ) ಪ್ರಜಾಪತಿ ದೇವತೆಯು, ಹೀಗೆ ದೇವತೆಗಳನ್ನು ತಿಳಿಯುವದು. ಕಲಿಯುಗದಲ್ಲಿ ಕಾರ್ಯಾಕಾರ್ಯಗಳು ಕಲಿಯುಗದಲ್ಲಿ “ಗೀತಾ, ಗಂಗಾ, ವಿಷ್ಣು, ಕಪಿಲ, ಗೋವು, ಅಶ್ವತ್ಥ ಸೇವೆ, ಏಕಾದಶೀವ್ರತ ಈ ಆರು ಸೇವೆಗಳು, ಏಳನೇಯದು ಯಾವುದೂ ಬೇಕಿಲ್ಲ. ವಿಷ್ಣು, ಶಿವರನ್ನು ಭಜಿಸುವ, ಗುರು, ಮಾತಾಪಿತೃಗಳನ್ನು ಸೇವಿಸುವ, ಗೋವು, ವೈಷ್ಣವ, ಮಹಾಶೈವ, ತುಲಸೀ ಇವುಗಳನ್ನು ಸೇವಿಸುವ, ಕಾಶೀಕ್ಷೇತ್ರದಲ್ಲಿ ವಾಸಮಾಡುವವ ಇವರಿಗೆ ಕಲಿಸಂಬಂಧವಾದ ದೋಷವೂ ತಗಲುವದಿಲ್ಲ. ಕಲಿಯುಗದಲ್ಲಿ ಗುರುಸೇವೆಯು ದೇವರ ಮೇಲಿನ ಭಕ್ತಿಗಿಂತ ಹೆಚ್ಚಿನದು ಎಂದು ಹೇಳಿದೆ. ಜಪಾದಿಗಳ ಸಂಖ್ಯೆಯನ್ನು ಕಲಿಯುಗದಲ್ಲಿ ನಾಲ್ಕುಪಟ್ಟು ಹೆಚ್ಚು ಮಾಡಬೇಕೆಂದಿದೆ. ૧૯૪ ಧರ್ಮಸಿಂಧು ಶಿವ, ವಿಷ್ಣು, ಇವರ ನಾಮ ಸಂಕೀರ್ತನ, ದಾನ ಇವು ಕಲಿಯುಗದಲ್ಲಿ ಅತ್ಯಂತ ಶ್ರೇಷ್ಠಗಳು, ಕೃತ ಯುಗದಲ್ಲಿ ಹತ್ತು ವರ್ಷಗಳಿಂದ ಸಿದ್ಧಿಯಾಗುವದಾದರೆ ತ್ರೇತಾಯುಗದಲ್ಲಿ ಒಂದೇ ವರ್ಷದಿಂದ, ದ್ವಾಪರದಲ್ಲಿ ಒಂದೇ ಮಾಸದಿಂದ, ಕಲಿಯುಗದಲ್ಲಿ ಒಂದೇ ದಿವಸದಲ್ಲಿ ಸಿದ್ಧಿಯಾಗುವದು. “ಭಾಗವತ ಪ್ರಥಮ ಸ್ಕಂಧ"ದಲ್ಲಿ ಕಲಿಯುಗದಲ್ಲಿ ಪುಣ್ಯವು ಶೀಘ್ರವಾಗಿಯೂ, ಪಾಪದ ಫಲವು ತಡವಾಗಿಯೂ ಆಗುತ್ತದೆ ಎಂದು ಹೇಳಿದೆ. ಪುಣ್ಯಕರ್ಮಗಳು ಸ್ಮರಣಮಾತ್ರದಿಂದ ಸಿದ್ಧಿಸುತ್ತವೆ. ಪಾಪಕರ್ಮಗಳಾದರೋ ಆಚರಣೆಯಿಂದಲೇ ಸಿದ್ಧಿಸುವುದು. ಸ್ಮೃತಿಗಳ ವಾಕ್ಯಗಳು ಪರಸ್ಪರ ವಿರೋಧವಾಗಿ ತೋರಿದಲ್ಲಿ ಕಲಿಯುಗದಲ್ಲಿ “ಪರಾಶರ” ಸ್ಮೃತಿಯ ಪ್ರಾಮಾಣ್ಯವನ್ನೇ ಅವಲ೦ಬಿಸತಕ್ಕದ್ದು. ಕೃತಯುಗದಲ್ಲಿ ಧ್ಯಾನದಿಂದ, ತ್ರೇತಾಯುಗದಲ್ಲಿ ಯಜ್ಞದಿಂದ, ದ್ವಾಪರದಲ್ಲಿ ಪೂಜೆಯಿಂದ ಸಿಗುವ ಫಲವು ಕಲಿಯುಗದಲ್ಲಿ ಕೇಶವನಾಮ ಸಂಕೀರ್ತನದಿಂದಲೇ ಲಭಿಸುವದೆಂದು “ಹೇಮಾದ್ರಿ” ಯಲ್ಲಿ ವ್ಯಾಸವಚನವಿದೆ. ಈ ನಾಮಸಂಕೀರ್ತನ ವಿಷಯವನ್ನು “ಕೌಸ್ತುಭ” ಗ್ರಂಥಕರ್ತನಾದ ಅನಂತದೇವನ ಪಿತಾಮಹನಿಂದ ಬರೆಯಲ್ಪಟ್ಟ ‘ಭಕ್ತಿ ನಿರ್ಣಯ"ವೆಂಬ ಗ್ರಂಥದಲ್ಲಿ ಸವಿಸ್ತಾರವಾಗಿ ಹೇಳಿದ. ನಾಲ್ಕು ಯುಗಗಳಲ್ಲಿ “ಕಲಿಯುಗವೇ ಶ್ರೇಷ್ಟವು” ಎಂದು ಕಲಿಯ ಮಹತ್ವವನ್ನು ಹೊಗಳಿರುವ ಗುಣಗ್ರಾಹಿಗಳಾದ ಸಾಧು-ಸತ್ಪುರುಷರು ಕಲಿಯ ಪ್ರಶಂಸೆ ಮಾಡುವರು. ಯಾಕೆಂದರೆ ಕಲಿಯುಗದಲ್ಲಿ ಸಂಕೀರ್ತನೆಯಿಂದಲೇ ಎಲ್ಲ ಪುರುಷಾರ್ಥಗಳೂ ಸಿದ್ಧಿಸುತ್ತವೆ. ಹೀಗೆ ಭಾಗವತ ವಚನವನ್ನು ದಾಹರಿಸಿ “ಸಂಕೀರ್ತನೆ"ಯೆಂದರೆ “ಹರಿಕೀರ್ತನ” ಎಂಬ ಅರ್ಥದಿಂದ ಹೇಮಾದ್ರಿಯಲ್ಲಿ ಹೇಳಿದೆ. ಅಂಗೋಪಾಂಗ (ಹೃದಯ ಕೌಸ್ತುಭಮಾದಿ) ಸುದರ್ಶನಾದಿ ಅಸ್ತ್ರ, ಸುನಂದ ಮೊದಲಾದ, ಪಾರ್ಷದ ಇತ್ಯಾದಿಗಳಿಂದ ಯುಕ್ತನಾದ, ಇಂದ್ರನೀಲ ಮಣಿಯಂತೆ ಉಜ್ವಲ ಕಾಂತಿಯುಕ್ತನಾದ, ಶ್ರೀ ಕೃಷ್ಣ ಪರಮಾತ್ಮನ ಪೂಜೆಯನ್ನು ಮೇಧಾವಿಗಳು ನಾಮಕೀರ್ತನರೂಪವಾದ ಯಜ್ಞಗಳಿಂದ ಮಾಡುತ್ತಾರೆ. ಯಜ್ಞಾದಿಗಳನಾಚರಿಸುವ ಶಿಷ್ಟರಾದರೂ ಉಳಿಕೆಯ ಸಮಯದಲ್ಲಿ ಕೀರ್ತನದಲ್ಲಾಸಕ್ತರಾಗಿರಬೇಕು. ಎಂಬ ಅಭಿಪ್ರಾಯವು ಕೌಸ್ತುಭದಲ್ಲಿ ಉಕ್ತವಾಗಿದೆ. ಇದರ ಮೇಲಿಂದ ಧರ್ಮ, ಅರ್ಥ, ಕಾಮ, ಮೋಕ್ಷ ಈ ಚತುರ್ವಗ್ರದ ಫಲವು ನಾರಾಯಣನನ್ನಾಶ್ರಯಿಸುವದರಿಂದ ಪ್ರಾಪ್ತವಾಗುವದು ಎಂಬುದು “ಸಿದ್ಧ"ವು. ಬೇಕಾದ ಸಾಧನಸಂಪತ್ತಿಯಿಲ್ಲದಿದ್ದರೂ ನಾರಾಯಣನಿಗೆ ಮೊರೆ ಹೋಗುವದರಿಂದ ಅವು ಸಿದ್ಧಿಸುವವು ಎಂದು ಭಾರತದಲ್ಲಿ ಹೇಳಿದೆ. ಭಾಗವತದಲ್ಲಿಯಾದರೂ ಧರ್ಮಾರ್ಥಕಾಮಮೋಕ್ಷರೂಪವಾದ ಶ್ರೇಯಸ್ಸನ್ನು ಬಯಸುವ ಮನುಷ್ಯನ ಇಚ್ಛೆಯನ್ನು ಪೂರೈಸಲು ಹರಿಯ ಪಾದ ಸೇವೆಯೊಂದೇ ಸಮರ್ಥವಾದದ್ದು ಎಂದು ಹೇಳಿದೆ. ಇಲ್ಲಿ ಒಂದೇ (ಏಕಮೇವ) ಎಂಬ “ಅವಧಾರಣಾ” ಪದ ಪ್ರಯೋಗದಿಂದ ‘ಭಕ್ತಿಯೋಗಕ್ಕೆ ಬೇರೆ ಯಾವ ಸಾಧನೆಯ ಆವಶ್ಯಕತೆಯಿಲ್ಲ “ಎಂದು ಹೇಳಿದಂತೆಯೇ ಆಗಿದೆ. ಜ್ಞಾನ, ಯೋಗಾದಿಗಳಿಗಾದರೂ ಭಕ್ತಿಯ ಅಪೇಕ್ಷೆಯಿರುತ್ತದೆ ಎಂದು ಮೇಲಿನ ಶ್ಲೋಕದಿಂದ ಧ್ವನಿತವಾಗುತ್ತದೆ. ಹಾಗೆಯೇ ಭಾಗವತದ ಏಕಾದಶಸ್ಕಂಧಾದಿಗಳಲ್ಲಿಯೂ “ನನ್ನಲ್ಲಿ ಭಕ್ತಿಯುಳ್ಳ, ತನ್ನನ್ನೇ ತನ್ನಲ್ಲಿ ಅರ್ಪಿಸಿಕೊಂಡವನಿಗೆ ಆ ಭಕ್ತಿಯೋಗದಿಂದ ಜ್ಞಾನ, ವೈರಾಗ್ಯ, ಕರ್ಮ, ತಪಸ್ಸು, ದಾನ, ಧರ್ಮ ಹಾಗೂ ಇತರ ಶ್ರೇಯಃ ಸಾಧನಕರ್ಮಗಳಿಂದ ಲಭಿಸದ ಶ್ರೇಯನ್ನು ಶೀಘ್ರವಾಗಿ ಲಭಿಸುವದು. ಸ್ವರ್ಗವಾಗಲೀ, ಮೋಕ್ಷವಾಗಲೀ ಪರಿಚ್ಛೇದ - ೩ ಪೂರ್ವಾರ್ಧ · ೩೯೫ ಭಕ್ತಿಯೋಗದಿಂದ ಶೀಘ್ರವಾಗಿ ಲಭಿಸುವದು, ಶ್ರೇಯಃಪ್ರದವಾದ ಭಕ್ತಿಯೋಗವನ್ನು ಬಿಟ್ಟು ಕಷ್ಟಪ್ರದವಾದ ಜ್ಞಾನಯೋಗಪ್ರಾಪ್ತಿಗಾಗಿ ತೊಳಲಾಡುವದೆಂದರೆ ತೌಡನ್ನು ಕುಟ್ಟಿದಂತೆ ಬರೇ ಕೇಶವೇ ಫಲವಾಗುವದು”, ಇತ್ಯಾದಿ ಸಾವಿರಾರು ವಚನಗಳು ಸಾರಿಹೇಳುತ್ತಿವೆ. ಜ್ಞಾನಯೋಗವಾದರೂ ಭಗವದಾರಾಧನ ಹಾಗೂ ಆತನ ಅನುಗ್ರಹವಿಲ್ಲದ ಸಿಗುತ್ತದೆಂದು ಯಾರೂ ಎಲ್ಲಿಯೂ ಹೇಳಿಲ್ಲ. “ಸರ್ವಾಪೇಕ್ಷಾಚಯಜ್ಞಾದಿಶ್ರುತೇರವತ್ ಎಂಬ ಬ್ರಹ್ಮಸೂತ್ರದ ಅಧಿಕರಣದಲ್ಲಿ ಅಶ್ವವು ಹೇಗೆ ರಥಾದಿಗಳನ್ನೊಯ್ಯಲು ಸಾಧನವಾಗುವಂತ ಎಲ್ಲ ಯಜ್ಞಾದಿಗಳೂ ಜಾನೋತ್ಪತ್ತಿಗೆ ಸಾಧನಗಳಾಗುವವು ಎಂದು ಹೇಳಿದೆ. ಹೀಗೆ ಭಕ್ತಿಯೋಗಕ್ಕೆ ಕಷ್ಟಕರವಾದ “ಸಾಧನ ಸಂಪತ್ತಿ"ಯ ಅಪೇಕ್ಷೆಯೇ ಇಲ್ಲ. ವೈರಾಗ್ಯರಹಿತನಾದರೂ, ದುರಾಚಾರಿಯಾದರೂ ಭಕ್ತಿಯೋಗಕ್ಕೆ “ಅಧಿಕಾರಿ"ಯಾಗುತ್ತಾನೆ. ಗೀತೆಯಲ್ಲಿ ಹೇ ಅರ್ಜುನಾ! ಯಾರು ನನ್ನಲ್ಲಿ ಅನನ್ಯವಾದ ಭಕ್ತಿಯಿಂದ ಆತ್ಮ ಸಮರ್ಪಣ ಮಾಡುತ್ತಾರೋ, ಅವರ ಆಚರಣೆಯು ಏನೇ ಇರಲಿ, ಅವರು ಸತ್ಪುರುಷರು ಹಾಗೂ ಸದಾಚಾರಿಗಳೆಂದೇ ಎಣಿಸಲ್ಪಡುವರು” ಎಂದು ಕೃಷ್ಣನು ಹೇಳಿರುವನು. ಅವರು ಸತ್ಪುರುಷರಂದೇ ಭಾವಿಸಲಾಗುವದು. ಭಕ್ತಿಮಹಿಮೆಯಿಂದ ಶೀಘ್ರವಾಗಿ ಶಾಂತಿಪದವನ್ನು ಹೊಂದುವರು, ಮತ್ತು “ನನ್ನನ್ನು ನಂಬಿದವರು ಎಂದೂ ಕೆಡುವದಿಲ್ಲ” ಎಂದು ಹೇಳಿದೆ. ವೈರಾಗ್ಯ ರಹಿತ ಅಥವಾ ವೈರಾಗ್ಯ ಸಹಿತರಾದವರಿಗೆಲ್ಲ ಭಕ್ತಿಯೋಗವು ಸಿದ್ಧಿಸುವದೆಂದು ವಚನವಿದೆ. ಹೀಗೆ ದುರಾಚಾರಿಯಾಗಿ ದೃಢವೈರಾಗ್ಯಾದಿ ಸಾಧನಚತುಷ್ಟಯ ಸಂಪತ್ತಿಯಿಲ್ಲದಿದ್ದವರಿಗೆ ಶ್ರವಣಾದಿಗಳಿಂದ ಜ್ಞಾನಪ್ರಾಪ್ತಿಯಾಗುತ್ತದೆಂದು ಎಲ್ಲಿಯೂ ಹೇಳಿದ್ದು ಕಂಡುಬರುವದಿಲ್ಲ. ಯಥೋಕ್ತ ಅಧಿಕಾರ ಸಂಪತ್ತಿಯಿಲ್ಲದೆ ಮಾಡಿದ ಸಾಧನವು ಫಲ ಕೊಡಲು ಸಮರ್ಥವಾಗುವದಿಲ್ಲ. ಆದುದರಿಂದ ಸರ್ವಥಾ ಸರ್ವರೂ ಕಲಿಯುಗದಲ್ಲಿ ಶ್ರೀ ಹರಿಪಾದಸೇವನಾದಿ ಭಕ್ತಿಯೋಗವನ್ನೇ ಆಶ್ರಯಿಸುವದು ಶ್ರೇಯಸ್ಕರವೆಂಬುದು ಸಿದ್ಧವು. ಕಲಿಯುಗದಲ್ಲಿ ನಿಷೇಧಗಳು ಕಲಿಯುಗದಲ್ಲಿ-ನೌಕಾಪ್ರವಾಸದಿಂದ ಪರಖಂಡಕ್ಕೆ ಹೋದವನನ್ನು ತಿರುಗಿ ಸೇರಿಸಿಕೊಳ್ಳುವದು, ಜಲಸಹಿತವಾದ ಕಮಂಡಲು ಧರಿಸುವದು, ಸ್ವಜಾತಿಭಿನ್ನವಾದ ಕನ್ನಿಕೆಯನ್ನು ವಿವಾಹಮಾಡಿಕೊಳ್ಳುವದು, ಮೈದುನಾದಿಗಳಿಂದ ಪುತ್ರೋತ್ಪತ್ತಿ ಹೊಂದುವದು, ಮಧುಪರ್ಕದಲ್ಲಿ ಪಶುವಧೆ ಮಾಡುವದು, ಶ್ರಾದ್ಧದಲ್ಲಿ ಮಾಂಸವನ್ನು ಪಯೋಗಿಸುವದು, ವಾನಪ್ರಸ್ಥಾಶ್ರಮವನ್ನು ಹೊಂದುವದು, ಜಲಧಾರಾಪೂರ್ವಕ ದಾನಮಾಡಿದ “ಅಕೃತಯೋನಿ ಕನೈಯನ್ನು ಪುನಃ ಬೇರೊಬ್ಬರಿಗೆ ದಾನಮಾಡುವದು, ದೀರ್ಘಕಾಲ ಬ್ರಹ್ಮಚರ್ಯದಲ್ಲಿರುವದು, ನರಮೇಧ, ಅಶ್ವಮೇಧ ಯಜ್ಞಮಾಡುವದು, ಮಹಾಪ್ರಸ್ಥಾನ ಹಾಗೂ (ಮರಣೇಚ್ಛೆಯಿಂದ ಉತ್ತರಪ್ರದೇಶಗಮನ) ಗೋಮೇಧಯಜ್ಞ ಮಾಡುವದು ಇತ್ಯಾದಿ ವಿಷಯಗಳನ್ನು ಬ್ರಾಹ್ಮಣನು ತ್ಯಾಜ್ಯಮಾಡತಕ್ಕದ್ದು ಎಂದು ತಿಳಿದವರು ಹೇಳುವರು. ಮದ್ಯವು ವರ್ಜ್ಯವು, ಮಹಾಪಾಪದಲ್ಲಿ ಮರಣಾಂತ ಪ್ರಾಯಶ್ಚಿತ್ತ, ಸೌತ್ರಮಣಾದಿ ಸತ್ರಗಳಲ್ಲಿ ಮದ್ಯಪಾತ್ರೆಯ ಸ್ವೀಕಾರ ಇವು ವರ್ಜಗಳು. ಮದ್ಯವಾನಾದಿ ವಾಮಮಾರ್ಗವನ್ನು ಬೋಧಿಸುವ ಶಾಸ್ತ್ರಗಳನ್ನು ಮನ್ನಿಸಬಾರದು. ಯಾಕೆಂದರೆ ಪೂರ್ವೋತ್ತರ ಮೀಮಾಂಸೆಗಳಲ್ಲಿ ಶಿಷ್ಯರು ಮದ್ಯವನ್ನು ನಿಷೇಧಿಸಿರುವರು. ಕಲಿಯುಗದಲ್ಲಿ “ಔರಸ, ೩೯೬ ಧರ್ಮಸಿಂಧು ದತ್ತಕ” ಹೀಗೆ ಎರಡು ವಿಧ ಪುತ್ರರನ್ನು ಹೇಳಿದೆ. ಇತರ “ಕ್ರೀತ"ಮೊದಲಾದ ದಶವಿಧ ಪುತ್ರರನ್ನು ನಿಷೇಧಿಸಿದೆ. “ಕೌಸ್ತುಭ"ದಲ್ಲಿ ಸ್ವಯಂದ” ಎಂಬ ಮೂರನೆಯ ಪುತ್ರನನ್ನು ಸ್ವೀಕರಿಸಬಹುದೆಂದು ಹೇಳಿದೆ. ಅಂತೂ ನವವಿಧಪುತ್ರರು ನಿಷಿದ್ದರು ಎಂದು ಅದರ ತಾತ್ಪರ್ಯ. ಕಲಿಯುಗದಲ್ಲಿ ಬ್ರಹ್ಮಹತ್ಯಾದಿ ಪಾಪಮಾಡಿದವರೊಡನೆ ವ್ಯವಹರಿಸಬಾರದು ಎಂದಿಷ್ಟೇ ಪಾತಿತ್ಯವನ್ನು ಹೇಳಿದೆ. ಅವರ ಸಂಸರ್ಗವು ನರಕಕ್ಕೆ ಕಾರಣವಾದರೂ ಆ ಸಂಸರ್ಗಿಗಳಿಗೆ ಪತಿತತ್ವ ದೋಷವಿರುವದಿಲ್ಲ. “ಸಂಸರ್ಗದೋಷಃ ಪಾಪೇಷು” ಹೀಗೆ ಕಲಿಯ ‘ಅವರ್ಜ’ದಲ್ಲಿ ಹೇಳಿದೆ. ಕೃತಯುಗದಲ್ಲಿ ಪತಿತನ ಸಂಗಡ ಮಾತನಾಡಿದರೂ ಪತಿತನಾಗುತ್ತಿದ್ದನು. ತ್ರೇತಾಯುಗದಲ್ಲಿ ಸ್ಪರ್ಶದಿಂದ, ದ್ವಾಪರಾಯುಗದಲ್ಲಿ ಅನ್ನಭಕ್ಷಣದಿಂದ “ಪತಿತತ್ವ ವಾಗುತ್ತಿತ್ತು. ಕಲಿಯುಗದಲ್ಲಿ ಪಾತಿತ್ಯ ಕಾರ್ಯ ಮಾಡಿದ್ದರೆ ಮಾತ್ರ ಪತಿತನಾಗುವನು ಹೀಗೆ ವಚನವಿದೆ. (ಕಲೌ ಕರ್ತೃವಲಿಪ್ಯತೇ) ಬ್ರಹ್ಮಹತ್ಯಾದಿ ಪಾಪಮಾಡಿದ್ದರೇನೇ ಅವನು “ಪತಿತ"ನೇ ಹೊರತು ಅವರ ಸಂಸರ್ಗದಿಂದ ಪತಿತನಾಗುವದಿಲ್ಲವೆಂದರ್ಥ. ಸಂಸರ್ಗಿಯು ಬಹಿಷ್ಕೃತನಾಗುವದಿಲ್ಲ. ಹೀಗಿರುವಾಗ ಆತನ ಸಂಸರ್ಗ ಮಾಡದಿದ್ದಲ್ಲಿ “ಲೋಕವಿದ್ವಿಷ್ಣತ್ವ” ವುಂಟಾಗುವದು. ಶಿಷ್ಟಪರಿಗ್ರಹವಿರುವಾಗ ಸಂಸರ್ಗಮಾಡದೆ ಇರುವದು ಲೋಕವಿರುದ್ಧವಾಗುವದು. ಹೀಗಿದ್ದು ಅವರ ಸಂಸರ್ಗದಿಂದ ಪತಿತತ್ವವಿಲ್ಲ. ಕೆಲವರು ರಹಸ್ಯವಾಗಿ “ಅಭಕ್ಷ್ಯ ಭಕ್ಷಣ, ಅಪೇಯ ಪಾನ, ಅಗತ್ಯಾಗಮನ ಇವುಗಳನ್ನು ಮಾಡಿರಬಹುದು. ಆದರೆ ಅವರು ಬಹಿಷ್ಕೃತರಾಗಿರುವದಿಲ್ಲ ಮತ್ತು ಪ್ರಕಟವಾಗಿರುವದಿಲ್ಲ. ಮನಸ್ಸಿನಲ್ಲಿ ಗೊತ್ತಿದ್ದರೂ ಈ ಹೇಳಿದ ಕಾರಣದಿಂದ ಸಂಸರ್ಗವನ್ನು ಶಿಷ್ಟರಾದವರು ಮಾಡುತ್ತಿರುತ್ತಾರೆ. ಅದು ನರಕಕ್ಕೆ ಕಾರಣವಾಗಬಹುದಾದರೂ ಸಂಸರ್ಗ ಪರಿಹಾರವು ಅಶಕ್ಯವಾಗಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸಂಸರ್ಗಮಾಡದಿದ್ದರೆ ತಾನೇ ಲೋಕವಿರೋಧಕ್ಕೆ ಗುರಿಯಾಗುತ್ತಾನೆ. ಬಹಿಷ್ಕೃತವಾದ ಪಾಪಿಗಳ ಸಂಸರ್ಗದಿಂದ ಪಾತಿತ್ಯಕ್ಕೆ ಕಾರಣವಾಗೇ ಆಗುತ್ತದೆ. ಮೇಲೆ ಬರದಂತೆ ಶಿಷ್ಟಾಚಾರವಿದೆಯೆಂದು ನನಗನಿಸುತ್ತದೆ. ವಚನಾಂತರದಲ್ಲಿ, ಕೃತಯುಗದಲ್ಲಿ “ಪಾಪಿಯಾದವನ ದೇಶವನ್ನೇ ಬಿಡಬೇಕಾಗುತ್ತಿತ್ತು. ತ್ರೇತಾಯುಗದಲ್ಲಿ ಗ್ರಾಮವನ್ನೂ, ದ್ವಾಪರಯುಗದಲ್ಲಿ ಒಂದು ಕುಲವನ್ನೂ ತ್ಯಜಿಸುತ್ತಿದ್ದರು. ಕಲಿಯುಗದಲ್ಲಿ “ಕರ್ತೃ"ವನ್ನು ಮಾತ್ರ ತ್ಯಜಿಸುವದು” ಎಂಬ ಈ ವಾಕ್ಯದಲ್ಲಿ ಕರ್ತೃವಿನ ತ್ಯಾಗವನ್ನು ವಿಧಿಸಿದೆ. ಇಲ್ಲಿ “ತ್ಯಾಗ " ಎಂದರೆ ಸಂಸರ್ಗವನ್ನು ಬಿಡುವದು. ಇಷ್ಟೇ. ಈ ವಾಕ್ಯದಿಂದ ಯಾವ ಕುಲಾದಿಗಳಲ್ಲಿ ಬ್ರಹ್ಮಹತ್ಯಾದಿ ಪಾತಕಿಯಿರುವನೋ, ಅವನ ಕುಲವನ್ನು ದ್ವಾಪರಾದಿಯುಗಗಳಲ್ಲಿ ಬಹಿಷ್ಕರಿಸುತ್ತಿದ್ದರೇ ಹೊರತು ಕಲಿಯುಗದಲ್ಲಿ ಈ “ಕುಲತ್ಯಾಗ” ವಿಧಿಯಿಲ್ಲ. ಇಲ್ಲಿ ಕರ್ತೃವೊಬ್ಬನೇ ಬಹಿಷ್ಕಾರ್ಯನು ಎಂದು ಹೇಳಿದ. ಇದಕ್ಕೆ ವಿರೋಧವಾಗಿ “ಪತಿತನ ಸಗೋತ್ರ, ಸಪಿಂಡರೊಡನೆ ಕರ್ಮವ್ಯವಹಾರ ಮಾಡಬಾರದೆಂದು ಯಾವ ಗ್ರಂಥದಲ್ಲಿಯೂ ಕಂಡುಬರುವದಿಲ್ಲ. ನಿರ್ಣಯಸಿಂಧುವಿನ ಘಟಸ್ಫೋಟ ಪ್ರಕರಣದಲ್ಲಿ “ಗ್ರಹೇಷುರಮಾವರನ್” ಎಂದು ಅಂದರೆ ಪಾತ್ರನಿನಯವಾದಮೇಲೆ ಬಾಂಧವರೆಲ್ಲರೂ ಬೇಕಾದ ಹಾಗೆ ಧರ್ಮಕಾರ್ಯಗಳನ್ನು ಮಾಡಬಹುದು” ಎಂಬ ವಸಿಷ್ಠ ವಚನವನ್ನು ಅಪರಾರ್ಕವ್ಯಾಖ್ಯಾನದಿಂದ ಉರತಮಾಡಿದೆ. ಅಪರಾರ್ಕವ್ಯಾಖ್ಯಾನದಲ್ಲಿ ಈ ವಸಿಷ್ಟ ವಚನ ಬಲದಿಂದ ಪಾತ್ರನನಯನಕ್ಕಿಂತ ಮೊದಲು ಪತಿತನ ಜ್ಞಾತಿಗಳಿಗೆ ಧರ್ಮ ಪರಿಚ್ಛೇದ - ೩ ಪೂರ್ವಾರ್ಧ ೩೯೭ of ಕಾರ್ಯಗಳಲ್ಲಿ ಅಧಿಕಾರವಿಲ್ಲ ಎಂದು ಹೇಳಿದೆ. ಆದರೆ ಇದು ಎಲ್ಲ ಪತಿತರ ವಿಷಯವಾಗಿ ಹೇಳಿದ್ದಲ್ಲ. ಘಟಸ್ಫೋಟಕ್ಕೆ ಅರ್ಹನಾಗಿದ್ದು ಪ್ರಾಯಶ್ಚಿತ್ತಕ್ಕೆ ಅನುಮತಿಸದ ಪತಿತನ ವಿಷಯವಾಗಿ ಹೇಳಿದ್ದು. ಯಾಕೆಂದರೆ ಹಾಗಿಲ್ಲದಿದ್ದರೆ “ಪ್ರಾಯಶ್ಚಿತ್ತಕ್ಕಿಂತ ಮೊದಲು " ಎಂದೇ ಹೇಳುವದಿತ್ತು. ಘಟಸ್ಫೋಟಕ್ಕಿಂತ ಮೊದಲು ಎಂದು ಹೇಳುತ್ತಿರಲಿಲ್ಲ, ಪ್ರಾಯಶ್ಚಿತ್ತಕ್ಕೊಪ್ಪದ ಪತಿತನಾಗಿರುವಾಗ ಆತನಿಗೆ ಜ್ಞಾತಿಗಳು ಘಟಸ್ಫೋಟಮಾಡಿ ಅವನನ್ನು ತ್ಯಾಜ್ಯ ಮಾಡತಕ್ಕದ್ದಿದೆ. ಆಗ ಘಟಸ್ಫೋಟವು ನಿಶ್ಚಿತವಾದ ಮೇಲೆ ಅದು ಆಗುವ ವರೆಗೆ ಜ್ಞಾತಿ ಬಾಂಧವರಿಗೆ ಕರ್ಮಾನರ್ಹತ್ವ ಹೇಳಿದೆ. ಪ್ರಾಯಶ್ಚಿತ್ತಕ್ಕೆ ಒಪ್ಪಿದಲ್ಲಿ ಅದನ್ನು ಮಾಡಿಕೊಂಡವನ ಜ್ಞಾತಿಗಳಿಗೆ ಕರ್ಮಾನರ್ಹತ್ವ ಸಂಭವಿಸುವದಿಲ್ಲ ಎಂದೇ ಅಪರಾರ್ಕದ ತಾತ್ಪರ್ಯ ಎಂದು ತಿಳಿಯತಕ್ಕದ್ದು. “ಕರ್ತಾರಂತು ಕಲೌಯುಗೇ” ಎಂಬುದು ಪ್ರತ್ಯಕ್ಷವಚನವಿದೆ. ಅದಕ್ಕೆ ವಿರುದ್ಧವಾದರೆ ಪುರುಷವ್ಯಾಖ್ಯಾನಕ್ಕ ಅಪ್ರಾಮಾಣ್ಯವುಂಟಾದೀತು ಎಂದು ತೋರುತ್ತದೆ. ಹಾಗಾದರೆ ಘಟಸ್ಫೋಟ ವಿಧಿಯು ವ್ಯರ್ಥವಾಗುವದಲ್ಲ! ಅಂದರೆ ಹಾಗೇನೂ ಇಲ್ಲ. ಅದು ಅವನಿಗೆ ಪರಲೋಕ ಸಂಬಂಧವಾದ ದೋಷ ಪರಿಹಾರಕವಾಗುವದು. ಜನಬಹಿಷ್ಕೃತವಾದ ಪಾತಕವಿಷಯದಲ್ಲಿ ಸಂಭಾಷಣೆ ಮೊದಲಾದವುಗಳಿಂದ ಪಾತಿತ್ಯ ವುಂಟಾಗದಿದ್ದರೂ ಪರಲೋಕ ಸಂಬಂಧವಾದ ದೋಷಕ್ಕೆ ಅದು ಕಾರಣವಾಗುವದು. ಇಲ್ಲಾದರೂ ಘಟಸ್ಫೋಟ ವಿಧಿಗೇನೇ “ಅರ್ಥಾಪತ್ತಿ ವಿಧಿಯನ್ನುಂಟುಮಾಡಿಕೊಂಡಿದೆ. ಪಾರತ್ರಿಕ ದೋಷಪರಿಹಾರಕ್ಕಾಗಿ ಘಟಸ್ಫೋಟವು ವಿಧಿಸಲ್ಪಟ್ಟಿದೆ ಎಂದು ಆ ಮೂಲಕವಾಗಿ ಬರೇ ಪತಿತಮಾತ್ರನಾದವನ ಕುಲಕ್ಕೆ ಬಹಿಷ್ಕಾರವುಂಟಾಗುವದಿಲ್ಲ. (ಅರ್ಥಾಪತ್ತಿ ಪ್ರಮಾಣಕ್ಕಿಂತ ಪ್ರತ್ಯಕ್ಷ ವಚನ ಪ್ರಮಾಣವು ಬಲಿಷ್ಠವೆಂದಭಿಪ್ರಾಯ) “ಸತ್ರ” ವೆಂದರೆ ಯಜ್ಞವು ಕಲಿಯುಗದಲ್ಲಿ ವರ್ಜವು, ಬ್ರಹ್ಮಹತ್ಯಾದಿ ಮಹಾಪಾತಕಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೂ ನರಕಕ್ಕೆ ಹೋಗುವದು ತಪ್ಪಿದ್ದಲ್ಲ. ಈ ಲೋಕದಲ್ಲಿ ವ್ಯವಹರಿಸಲು ಮಾತ್ರ ಅಧಿಕಾರವುಂಟಾಗುತ್ತದೆ. ಸ್ವರ್ಣಸ್ತೇಯಾದಿಗಳಲ್ಲಾದರೆ ಪ್ರಾಯಶ್ಚಿತ್ತದಿಂದ ನರಕ ನಿವೃತ್ತಿಯೂ ಲೋಕವ್ಯವಹಾರತ್ವವು ಸಿದ್ಧಿಸುತ್ತದೆ. ಕೆಲವರು ರಹಸ್ಯಪಾತಕದಲ್ಲಿ ರಹಸ್ಯಪ್ರಾಯಶ್ಚಿತ್ತವನ್ನು ಕಲಿಯುಗದಲ್ಲಿ ಉಪದೇಶಿಸಬಾರದು ಎನ್ನುವರು. ಬ್ರಾಹ್ಮಣಾದಿಸ್ತ್ರೀ ಸಂಭೋಗದಿಂದ ಭ್ರಷ್ಟರಾದ ಶೂದ್ರಾದಿಗಳಿಗೆ ಪ್ರಾಯಶ್ಚಿತ್ತವಾದರೂ ಸಂಸರ್ಗವು ನಿಷಿದ್ದವು. ಬ್ರಾಹ್ಮಣರಿಗೆ ಯಜ್ಞದಲ್ಲಿ ಪಶುವನ್ನು ಕೊಲ್ಲಿಸಲಡ್ಡಿಯಿಲ್ಲ. ಕಲಿಯುಗದಲ್ಲಿ ಸೋಮರಸವನ್ನು ವಿಕ್ರಯಿಸುವದು ನಿಷಿದ್ಧವು. ಕಲಿಯುಗದಲ್ಲಿ ಜೇಷ್ಠಾದಿ ಎಲ್ಲ ಅಣ್ಣ ತಮ್ಮಂದಿರಿಗೂ ಸಮಪಾಲು ಇರುವದು, ಬ್ರಾಹ್ಮಣರು ಆತತಾಯಿಗಳಾಗಿದ್ದರೂ, ಧರ್ಮಯುದ್ಧ ಪ್ರಾಪ್ತವಾಗಿದ್ದರೂ ಅವರನ್ನು ಕೊಲ್ಲಲಾಗದು. (ಅಗ್ನಿಯನ್ನು ಹಾಕಿದವ, ವಿಷವನ್ನು ಕೊಟ್ಟಿರುವವ, ಕೈಯಲ್ಲಿ ಶಸ್ತ್ರವನ್ನು ಹಿಡಿದವ, ಧನವನ್ನು ಅವಹರಿಸಿದವ, ವತ್ನಿ ಮತ್ತು ಭೂಮಿಗಳನ್ನಪಹರಿಸುವವ ಈ ಆರುಜನರಿಗೆ ಆತತಾಯಿಗಳೆನ್ನುವರು. ಸಮುದ್ರವನ್ನು ನೌಕೆಯಿಂದ ಪರ್ಯಟನಮಾಡಿದ ಬ್ರಾಹ್ಮಣನನ್ನು ಪ್ರಾಯಶ್ಚಿತ್ತದಿಂದಾದರೂ ಸಂಸರ್ಗ ಮಾಡಕೂಡದು. ಕಲಿಯುಗದಲ್ಲಿ ನಿಷಿದ್ದವು. ಬ್ರಾಹ್ಮಣರು ಗೋಪ (ಗೌಳಿಗ) ಶೂದ್ರ ಮೊದಲಾದವರಲ್ಲಿ ಭೋಜನ ಮಾಡಬಾರದು. ಶಿಷ್ಯನು ಗುರು ಪತ್ನಿಯರ ಸನ್ನಿಧಿಯಲ್ಲಿ ಬಹುಕಾಲವಿರಕೂಡದು. ಬ್ರಾಹ್ಮಣನು ಆಪತ್ತಿನಲ್ಲಿ ಕ್ಷತ್ರಿಯ, ವೈಶ್ಯಾದಿ ವೃತ್ತಿಗಳನ್ನು ಧರ್ಮಸಿಂಧು ಮಾಡಬಾರದು. ಕಲಿಯುಗದಲ್ಲಿ ಬ್ರಾಹ್ಮಣನು ಕುದುರೆ ಕಾಸಗಾರಿಕೆಯನ್ನು ಮಾಡಬಾರದು. ಹನ್ನೆರಡು ವರ್ಷ ಪರ್ಯಂತ ಗುರುಕುಲವಾಸ, ಮುಖದಿಂದ ಅಗ್ನಿಯನ್ನೂದುವದು, ಯತಿಯು ಎಲ್ಲ ವರ್ಣಗಳಲ್ಲಿ ಭಿಕ್ಷೆ ಮಾಡುವದು- ಇವುಗಳನ್ನು ಬಿಡತಕ್ಕದ್ದು. ಹೊಸಜಲವನ್ನು ಪಾನ ಮಾಡಬಾರದೆಂಬ ನಿಷೇಧ, ಗುರುವು ಇಚ್ಛಿಸಿದಷ್ಟು ಗುರುದಕ್ಷಿಣೆ ಕೊಡುವದು, ಜಲ, ಅಗ್ನಿ ಮೊದಲಾದವುಗಳಲ್ಲಿ ಬಿದ್ದು, ವೃದ್ಧರು, ರೋಗಗ್ರಸ್ತರು ಮರಣಪಡುವದು, ಗೋವಿಗೆ ತೃಪ್ತಿಯಾಗುವಷ್ಟು ಇದ್ದ ನೀರಿನಿಂದ ಆಚಮನ ಮಾಡುವದು, ತಂದೆಯ ಸಂಬಂಧವಾದ ವ್ಯಾಜ್ಯದಲ್ಲಿ ಶಿಕ್ಷೆ, ದಂಡಗಳನ್ನು ವಿಧಿಸುವದು ಈ ಐದು ವಿಷಯಗಳು ಕಲಿಯುಗದಲ್ಲಿ ವರ್ಜಗಳು, ಶೂದ್ರನು ಕೊಟ್ಟ ಮೃತ, ತೈಲ, ಪಕ್ವವಾದ ಅನ್ನವು ಕಲಿಯುಗದಲ್ಲಿ ತ್ಯಾಜ್ಯವು, ಯತಿಯು ಭಿಕ್ಷೆಗಾಗಿ ಸಂಚರಿಸುವಾಗ ರಾತ್ರಿ ಗೃಹಸ್ಥಾಶ್ರಮಿಗಳಲ್ಲಿ ಉಳಿಯಬಾರದು. ಹೊಗೆಯಾಡದ ಮತ್ತು ಒನಕೆಯ ಶಬ್ದವಿಲ್ಲದ ಕಾಲದಲ್ಲಿ ಸಂನ್ಯಾಸಿಯು ಭಿಕ್ಷೆ ಮಾಡಬಾರದು. ನಾಲ್ಕು ಸಾವಿರದ ನಾಲ್ಕು ನೂರುವರ್ಷ ಕಲಿಯುಗವು ಸಂದಮೇಲೆ ತ್ರೇತಾಗ್ನಿಗಳನ್ನಿಡಬಾರದು, ಸಂನ್ಯಾಸಸ್ವೀಕಾರ ಮಾಡಕೂಡದು. “ತಾಪರಿಗ್ರಹ” ಎಂದರೆ ಸರ್ವಾಧಾನವು ಶೌತಾಗ್ನಿ ಹಾಗೂ ಸ್ನಾರ್ತಾಗ್ನಿಗಳಲ್ಲಿ ಬೇರೆ-ಬೇರೆ ಉಪಾಸನ ಮಾಡುವವರಿಗೆ “ಅರ್ಧಾಧಾನಿ"ಗಳೆನ್ನುವರು. ಆ ಎರಡನ್ನೂ ಒಂದೇ ಮಾಡಿ ಅದರಲ್ಲಿ ಉಪಾಸನ ಮಾಡುವದಕ್ಕೆ “ಸರ್ವಾಧಾನ” ವೆನ್ನುವರು. ಇದು ಹಿಂದಿನಯುಗದಲ್ಲಿ ಆಚರಣೆಯಲ್ಲಿತ್ತು, ಆದರೆ ಕಲಿಯುಗದಲ್ಲಿ ಇದಕ್ಕೆ ಅಪವಾದವಿದೆ. ಎಲ್ಲಿಯ ವರೆಗೆ ಬ್ರಾಹ್ಮಣಾದಿ ವರ್ಣವಿಭಾಗವಿರುವದೋ, ಎಲ್ಲಿಯ ವರೆಗೆ ವೇದವು ಪ್ರವರ್ತಿಸಿರುವದೋ ಅಲ್ಲಿಯ ವರೆಗೆ ಸಂನ್ಯಾಸ ಮತ್ತು ಅಗ್ನಿಹೋತ್ರ ಇವುಗಳನ್ನು ಮಾಡಲಡ್ಡಿಯಿಲ್ಲ. ಶಪಥ, ಶಕುನ, ಸ್ವಪ್ನ, ಸಾಮುದ್ರಿಕ, ಉಪಶ್ರುತಿ, ಕಾರ್ಯಸಿದ್ಧಿಗಾಗಿ ದೇವಪೂಜೆ, ಕಾರ್ಯಸಿದ್ಧಿಗಾಗಿ ಉಪಾಹಾರಾದಿಗಳ ಸಂಕಲ್ಪ ಇವೆಲ್ಲ ಕ್ವಚಿತ್ತಾಗಿ ಸಂಭವಿಸುವವು. (ಪೂರ್ಣವಾಗಿ ಆಗುವದಿಲ್ಲ) ಹೀಗೆ ಕಲಿಯುಗದಲ್ಲಿ ನಿಷೇಧ ಪ್ರಕರಣವು ಮುಗಿಯಿತು. ಸ್ವಪ್ನ ವಿಚಾರ ಸ್ವಪ್ನದಲ್ಲಿ ಶುಭ, ಅಶುಭ ಎಂದು ಎರಡು ವಿಧವಿದೆ. ಸಾಮಾನ್ಯವಾಗಿ ಶುಭಫಲವನ್ನು ಕೊಡುವ ಸ್ಪಪ್ನಗಳು, ನದಿ, ಸಮುದ್ರಗಳನ್ನು ದಾಟುವದು, ಆಕಾಶಗಮನ, ಗ್ರಹ, ನಕ್ಷತ್ರ, ಸೂರ್ಯಮಂಡಲ, ಚಂದ್ರಮಂಡಲ ದರ್ಶನ, ಮೇಲ್ಮನೆ, ಉಪ್ಪರಿಗೆ ಮನೆಗಳನ್ನು ಹತ್ತುವದು, ಮದ್ಯಪಾನ ಮಾಡುವದು, ವಪ, ಮಾಂಸಗಳನ್ನು ತಿನ್ನುವದು. ಕೃಮಿ, ಮಲ ಇವುಗಳ ಲೇಪನ, ರಕ್ತದಿಂದ ಸ್ನಾನಮಾಡುವರು, ಮೊಸರನ್ನ ಊಟಮಾಡುವದು, ಬಿಳೇವಸ್ತ್ರವನ್ನು ಧರಿಸುವದು. ಇವೆಲ್ಲ ಶುಭ ಫಲಕೊಡುವವು. ರತ್ನಾಭರಣಾದಿಗಳನ್ನು ಸ್ವಪ್ನದಲ್ಲಿ ನೋಡಿದರೆ ಕಾರ್ಯಸಿದ್ಧಿಯಾಗುವದು. ದೇವತೆಗಳು, ಬ್ರಾಹ್ಮಣರು, ರಾಜರು, ಪ್ರಶಸ್ತಿ ಆಭರಣಗಳನ್ನು ಧರಿಸಿದ ಸ್ತ್ರೀಯರು ಇವರನ್ನು ನೋಡಿದರೆ ಬಸವ, ಆನೆ, ಪರ್ವತ, ಹಾಲುಬರುವ ಹಾಗೂ ಫಲಭರಿತವಾದ ವೃಕ್ಷ, ಇವುಗಳನ್ನು ಏರಿದಂತೆ ಕಂಡರೆ, ಕನ್ನಡಿ, ಮಾಂಸ, ಮಾಲಿಕೆ, ಅಗ್ನಿ, ಬಿಳವು, ಬಿಳವಸ್ತ್ರಗಳನ್ನು ಧರಿಸಿರುವವರನ್ನು ನೋಡಿದರೆ ಧನಲಾಭ ಮತ್ತು ರೋಗನಿವಾರಣೆಯಾಗುವರು.ಪರಿಚ್ಛೇದ ೩ ಪೂರ್ವಾರ್ಧ ಅಶುಭ ಫಲ ಕೊಡುವ ಸ್ವಪ್ನಗಳು ೩೯೯ ಮುತ್ತುಗದ ಗಿಡ, ಒರಲೇಹುತ್ತು, ಕಹಿಬೇವು ಇವುಗಳ ಆರೋಹಣ, ಎಣ್ಣೆ, ಹತ್ತಿ, ಹಿಂಡಿ, ಕಬ್ಬಿಣ ಇವುಗಳ ದರ್ಶನಗಳು ಆಪತ್ತಿಗೆ ಕಾರಣಗಳು, ವಿವಾಹಮಾಡುವದು, ಕೆಂಪುಹೂವಿನ ಮಾಲಿಕೆ, ಕಂಪುವಸ್ತ್ರಗಳ ಧಾರಣೆ, ನೀರಿನ ಪ್ರವಾಹದಲ್ಲಿ ಬಳಿದುಬಂದ ಮತ್ತು ಬೇಯಿಸಿದ ಮಾಂಸ ಇವುಗಳ ಭಕ್ಷಣ ಇವು ನಾಶಕರಗಳು, ಸೂರ್ಯ-ಚಂದ್ರರು ಪ್ರಭಾಹೀನರಾಗಿ ಕಂಡರೆ, ಆಕಾಶದಿಂದ ನಕ್ಷತ್ರಗಳು ಬೀಳುವಂತೆ ಕಂಡರೆ ಮರಣಶೋಕವುಂಟಾಗುವದು. ಅಶೋಕ, ಕರವೀರ, ಪಲಾಶಗಳು ಪುಷ್ಪಭರಿತವಾಗಿ ಕಂಡರೆ ಶೋಕಫಲವು. ಡೋಣಿಯನ್ನು ಹತ್ತಿದಂತೆ ಕಂಡರ ಪ್ರವಾಸವುಂಟಾಗುವದು. ಕೆಂಪುವಸ್ತ್ರ ಗಂಧಗಳಿಂದ ಅಲಂಕೃತಳಾದ ಸ್ತ್ರೀಯನ್ನು ಆಲಂಗಿಸಿದಂತ ಕಂಡರೆ “ಮರಣ"ವು, ತುಪ್ಪ, ಎಣ್ಣೆಗಳಿಂದ ಅಭ್ಯಂಗಮಾಡಿದಂತೆ ಕಂಡರೆ “ವ್ಯಾಧಿಯು, ಕೇಶ, ದಂತಗಳು ಉದುರಿಬಿದ್ದಂತೆ ಕಂಡರೆ ಧನನಷ್ಯ, ಅಥವಾ ‘ಪುತ್ರಶೋಕ’ವು, ಕತ್ತ, ಒಂಟೆ, ಎಮ್ಮೆ ಇವುಗಳ ವಾಹನದಲ್ಲಿ ಹೋದಂತೆ ಕಂಡರೆ, ಅವುಗಳ ಮೇಲೆ ಕುಳಿತು ಹೋದರೆ “ಮೃತ್ಯು’ವು. ಕಿವಿ, ಮೂಗು, ಹಸ್ತ ಮೊದಲಾದವುಗಳು ಕತ್ತರಿಸಿದಂತೆ ಕಂಡರೆ, ಕೆಸರಿನಲ್ಲಿ ಬಿದ್ದರೆ, ತೈಲಾಭಂಗವಾದರೆ, ವಿಷವನ್ನು ತಿಂದರೆ, ಶವವನ್ನು ಆಲಂಗಿಸಿದರೆ, ವಾಳದಬೇರಿನ ಮಾಲಿಕೆಯನ್ನು ಧರಿಸಿದ ಹಾಗೂ ಬೆತ್ತಲೆಯಾದ ಕರೇಮನುಷ್ಯನನ್ನು ನೋಡಿದರೆ “ಮೃತ್ಯು"ವು. ಜಾಗೃತಾವಸ್ಥೆಯಲ್ಲಿಯ ಅರಿಷ್ಟ ಆಯುಸ್ಸು ತೀರಿದವನಿಗೆ-ಧ್ರುವನಕ್ಷತ್ರ, ಅರುಂಧತೀನಕ್ಷತ್ರ, ಆಕಾಶಗಂಗಾ, ತನ್ನ ಮೂಗಿನ ತುದಿ, ಚಂದ್ರನ ಕಲಂಕ ಇವು ಕಾಣಿಸುವದಿಲ್ಲ. ಧೂಳಿ, ಕೆಸರುಗಳಲ್ಲಿ ಕಾಲಿಟ್ಟಾಗ ತುಂಡಾದಂತಾದರೆ, ಸ್ನಾನಜಲದಿಂದ ಇಡೀದೇಹವೂ ಒದ್ದೆಯಾದಾಗ ಮೊದಲು ಮುಖವು ಒಣಗಿದರೆ, ದೇಹವು ಒದ್ದೆಯಾಗಿದ್ದಾಗ ಸೂರ್ಯ-ಚಂದ್ರರು ಎರಡಾಗಿ ಕಂಡರೆ, ವೃಕ್ಷಗಳಲ್ಲಿ ಬಂಗಾರ ತೋರಿದಂತಾದರೆ, ತನ್ನ ಹೆಜ್ಜೆಗಳೇ ತನಗೆ ತೋರದಿದ್ದಲ್ಲಿ, ಎರಡೂ ಕಿವಿಗಳನ್ನು ಮುಚ್ಚಿಕೊಂಡಾಗ ದೇಹದ ಒಳಗಿನ ಘೋಷವು ಕೇಳಬರದಿದ್ದಲ್ಲಿ, ತನ್ನ ಶಿರಸ್ಸೇ ತನಗೆ ಜಲಾದಿಗಳಲ್ಲಿ ಪ್ರತಿಬಿಂಬವಾಗಿ ತೋರದಿದ್ದಲ್ಲಿ, ನರಳು ಛಿದ್ರವಾಗಿ ಕಂಡರೆ ಆತನು ಶೀಘ್ರದಲ್ಲಿಯೇ ಸಾಯುವನೆಂದು ತಿಳಿಯತಕ್ಕದ್ದು. ವಿಶೇಷ ಇಷ್ಟಫಲಗಳನ್ನು ಕೊಡವ ಸ್ವಪ್ನಗಳು ಸ್ವಪ್ನದಲ್ಲಿ ರಾಜ, ಆನೆ, ಕುದುರೆ, ಸುವರ್ಣ, ಎತ್ತು, ಗೋವು ಇವುಗಳನ್ನು ನೋಡಿದರೆ “ಕುಟುಂಬವೃದ್ಧಿ “ಯು, ಎತ್ತು ಅಥವಾ ವೃಕ್ಷವನ್ನೇರಿದಂತೆ ಕಂಡು ಆಮೇಲೆ ಎಚ್ಚರಾದರೆ “ಧನಪ್ರಾಪ್ತಿ"ಯು, ಬಿಳೇ ಸರ್ಪದಿಂದ ತನ್ನ ಬಲ ಭುಜವನ್ನು ಕಡಿದಂತೆ ಕಂಡರೆ ಹತ್ತು ದಿನಗಳೊಳಗೆ ಸಾವಿರ ಧನ ಪ್ರಾಪ್ತಿಯಾಗುವದು. ನೀರಿನಲ್ಲಿರುವಾಗ ಚೇಳು ಅಥವಾ ಹಾವಿನಿಂದ ಹಿಡಿಯಲ್ಪಟ್ಟವನಾಗಿ ಕಂಡರ ಜಯ, ಧನ, ಪುತ್ರ ಇವುಗಳ ಪ್ರಾಪ್ತಿಯು, ಉಪ್ಪರಿಗೆ, ಪರ್ವತಗಳನ್ನೇರಿದಂತೆ, ಸಮುದ್ರವನ್ನು ದಾಟಿದಂತೆ ಕಂಡರೆ “ರಾಜ್ಯಪ್ರಾಪ್ತಿ"ಯು, ಕೆರೆಯ ಮಧ್ಯದಲ್ಲಿ ಕಮಲದ ಎಲೆಯಲ್ಲಿ ತುಪ್ಪ, ಪಾಯಸಗಳನ್ನುಂಡಂತೆ ಕಂಡರೆ “ರಾಜ್ಯಪ್ರಾಪ್ತಿ"ಯು, ಬೆಳ್ಳಕ್ಕಿ, ಹೆಣ್ಣು ಕೋಳಿ, ಕ್ರೌಂಚಪಕ್ಷಿಗಳನ್ನು ಕಂಡರೆ “ಪಲಾಭವು, ಬೇಡಿಗಳಿಂದ ಅಥವಾ ಅನೇಕ ಹಗ್ಗಗಳಿಂದ ಬಂಧನವಾದರೆ “ಪುತ್ರಧನಾದಿಪ್ರಾಪ್ತಿ"ಯು, ಆಸನ, ಹಾಸಿಗೆ, ವಾಹನ, ಪಲ್ಲಕ್ಕಿ, ೪೦೦ ಧರ್ಮಸಿಂಧು ಶರೀರ, ಮನೆ ಇವು ದಗ್ಧವಾಗಿ ಜ್ವಲಿಸುವದಾಗಿ ಕಂಡು ಎಚ್ಚರಾದರೆ ಸಕಲವಿಧದಿಂದ “ಐಶ್ವರ್ಯಪ್ರಾಪ್ತಿ"ಯು, ಸೂರ್ಯ-ಚಂದ್ರರ ದರ್ಶನವಾದರೆ “ರೋಗನಾಶ"ವು, ಮತ್ತು ಬೇರೆಯವನ ಧನಪ್ರಾಪ್ತಿಯಾಗುವದು. ಮದ್ಯ, ಮತ್ತು ರಕ್ತವನ್ನು ಕುಡಿದಂತೆ ಕಂಡರೆ ಬ್ರಾಹ್ಮಣನಿಗೆ ವಿದ್ಯಾ, ಶೂದ್ರನಿಗೆ ಧನಪ್ರಾಪ್ತಿಯು, ಬಿಳವಸ್ತ್ರ, ಗಂಧವನ್ನು ಧರಿಸಿದ ಸುಂದರ ಸ್ತ್ರೀಯಿಂದ ಆಲಿಂಗನವಾದರೆ “ಸಂಪತ್ತು”, ಛತ್ರ, ಪಾದುಕಾ, ಕಾಲುಜೋಡು, ಖಡ್ಗ ಇವು ಸಿಕ್ಕಿದಂತೆ ಕಂಡರೆ “ಧನಲಾಭ"ವು ಎತ್ತುಗಳನ್ನು ಹೂಡಿದ ಗಾಡಿಯನ್ನೇರಿದರೆ “ಧನಪ್ರಾಪ್ತಿ"ಯು, ಮೊಸರು ಸಿಕ್ಕಿದಂತಾದರೆ “ವೇದಪ್ರಾಪ್ತಿ"ಯು. ಮೊಸರು, ಹಾಲು, ತುಪ್ಪಗಳನ್ನು ಪ್ರಾಶನಮಾಡಿದರೆ “ಯಶಃ ಪ್ರಾಪ್ತಿ"ಯು, ಬರೇ ತುಪ್ಪವನ್ನೇ ಪ್ರಾಶನಮಾಡಿದರೆ “ಕೇಶ"ವು, ಕರುಗಳಿಂದ ಆವೃತನಾದರೆ “ರಾಜ್ಯಪ್ರಾಪ್ತಿ"ಯು. ಮನುಷ್ಯನ ಕಾಲುಗಳ ಮಾಂಸ ಭಕ್ಷಣಮಾಡಿದರೆ “ನೂರುದ್ರವ್ಯಲಾಭ"ವು. ಅದೇ ಕೈಗಳನ್ನು ತಿಂದರೆ ‘ಸಹಸ್ರಲಾಭ’ವು ತಲೆಯ ಮಾಂಸವನ್ನು ತಿಂದರೆ “ರಾಜ್ಯ ಅಥವಾ ಸಹಸ್ರ ನಾಣ್ಯ ಪ್ರಾಪ್ತಿ.” ನೊರೆಯಿಂದ ಸಹಿತವಾದ ಹಾಲನ್ನು ಕುಡಿದರೆ ಸೋಮಪಾನ’ ಪ್ರಾಪ್ತಿಯು. ಗೋಧಿಯ ದರ್ಶನವಾದರೆ ‘ಧನಲಾಭ’ವು. ಜವೆಯನ್ನು ನೋಡಿದರೆ ‘ಯಜ್ಞಪ್ರಾಪ್ತಿ’. ಬಿಳೇಸಾಸಿವೆಯ ದರ್ಶನವಾದರೆ ‘ಲಾಭ’ವು. ನಾಗಬಳ್ಳಿಯ ಎಲೆ, ಕರ್ಪೂರ ಇವುಗಳನ್ನು ತರುವದು, ಚಂದನ, ಬಿಳೇಪುಷ್ಪ ಇವುಗಳನ್ನು ಕಂಡರೆ ಎಲ್ಲ ವಿಧದಿಂದ ಐಶ್ವರ್ಯ ಪ್ರಾಪ್ತಿಯು, ಹತ್ತಿ, ಭಸ್ಮ, ಅನ್ನ, ಮಜ್ಜಿಗೆ ಇವುಗಳಿಂದ ಹೊರತಾದ ಎಲ್ಲ ಬಿಳೇವಸ್ತುಗಳೂ ಶುಭಗಳು, ಗೋವು, ಆನೆ, ದೇವ, ಬ್ರಾಹ್ಮಣ, ಕುದುರೆ ಇವುಗಳ ಹೊರತಾಗಿ ಎಲ್ಲ ಕರವಸ್ತುಗಳೂ ಅಶುಭಗಳು. ಪ್ರಥಮಯಾಮದಲ್ಲಾದ ಸ್ವಪ್ನವು ಸಂವತ್ಸರಾಂತ್ಯದಲ್ಲಿ ಫಲಕೊಡುವದು. ಎರಡನೇ ಯಾಮದಲ್ಲಾದದ್ದು ಎಂಟು ತಿಂಗಳಲ್ಲಿ, ಮೂರನೇ ಯಾಮದ್ದು ಮೂರುಮಾಸ, ನಾಲ್ಕನೇಯಾಮದ್ದು ಒಂದುಮಾಸ, ಅರುಣೋದಯದ್ದು ಹತ್ತು ದಿವಸ, ಸೂರ್ಯೋದಯಲ್ಲಾದದ್ದು ಸದ್ಯಃಫಲಪ್ರದವು ದುಷ್ಟಪ್ರಶಮನ ಕರ್ತವ್ಯಗಳು “ಯೋ ಮೇ ರಾಜನ್” ಎಂಬ ಮಂತ್ರದಿಂದ ಸೂರ್ಯನಮಸ್ಕಾರ ಮಾಡಿದರೆ ದುಃಸ್ವಪ್ನ ನಾಶವಾಗುವದು. “ಅಧಸ್ವಪ್ನ” ಈ ಮಂತ್ರವನ್ನು ಜಪಿಸಿದರೆ, ಇಲ್ಲವೆ ದರ್ಶದಂತೆ ಶ್ರಾದ್ಧ ಮಾಡಿದರೆ ದುಃಸ್ವಪ್ನದೋಷ ಪರಿಹಾರವು, ಅಥವಾ ಚಂಡೀಸಪ್ತಶತೀ ಪಾರಾಯಣದಿಂದ ಶಮನವು. ವಿಷ್ಣು ಸಹಸ್ರನಾಮಸ್ತೋತ್ರ ಜಪ, ಭಾರತದಲ್ಲಿರುವ ಅಥವಾ ಭಾಗವತದಲ್ಲಿರುವ “ಗಜೇಂದ್ರಮೋಕ್ಷ"ದ ಶ್ರವಣ ಅಥವಾ ಪಾರಾಯಣ ಇವುಗಳೆಲ್ಲ ದುಃಸ್ವಪ್ನ ದೋಷ ಪರಿಹಾರಕಗಳಾಗಿವೆ. ಇಲ್ಲಿಗೆ ತೃತೀಯ ಪರಿಚ್ಛೇದದ ಪೂರ್ವಾರ್ಧವು ಮುಗಿಯಿತು. 28 ತೃತೀಯ ಪರಿಚ್ಛೇದ (ಉತ್ತರಾರ್ಧ) ಜೀವತೃಕಾದಿ ಶ್ರಾದ್ಧಾಧಿಕಾರ ನಿರ್ಣಯ ತಂದೆ ಮತ್ತು ಹಿರೇ ಅಣ್ಣನಿರುವಾಗ ಪಾದುಕ, ಉತ್ತರೀಯ, ತರ್ಜನೀಬೆರಳಲ್ಲಿ ಬೆಳ್ಳಿ ಇವುಗಳನ್ನು ಧರಿಸಬಾರದು. ಇಲ್ಲಿ ಪಾದುಕೆಯೆಂದರೆ ಕಟ್ಟಿಗೆಯಿಂದ ತಯಾರಿಸಿದ್ದು ಎಂದು ತಿಳಿಯುವದು. “ಉತ್ತರೀಯ"ವೆಂದರೆ ಗಂಟಿನಿಂದ ಸಹಿತವಾದ ಮಾಲೆಯಾಕಾರದ ವಸ್ತ್ರ ಎಂದರ್ಥ. ಒಂದು ಅಥವಾ ಎರಡಂಗುಲ ಅಗಲದ ಸೂತ್ರದಿಂದ ನಿರ್ಮಿಸಿರುವ ಮಾಲಾಕಾರವಾದ ವಸ್ತ್ರ ಮತ್ತು ಉತ್ತರೀಯಾರ್ಥವಾಗಿ ಸ್ಮೃತ್ಯುಕ್ತ ತೃತೀಯ ಯಜ್ಞಪವೀತ ಇವುಗಳನ್ನು ಜೀವತ್ಸಕನು ಅಥವಾ ಶ್ರೇಷ್ಠ ಭ್ರಾತೃಗಳಿದ್ದವನು ಧರಿಸಬಾರದೆಂದಭಿಪ್ರಾಯ, ಹೊದ್ದುಕೊಳ್ಳುವ ರೂಪದ್ದಾದ ಉತ್ತರೀಯ ವಸ್ತ್ರವನ್ನು ಎಲ್ಲರೂ ಧರಿಸಬಹುದು. “ಒಂಟಿವಸ್ತ್ರದಿಂದ ಊಟಮಾಡಬಾರದು; ಹಾಗೂ ದೇವತಾರ್ಚನ ಮಾಡಬಾರದು” ಇತ್ಯಾದಿ ವಚನಗಳಿಂದ ಎಲ್ಲ ಕರ್ಮಗಳಲ್ಲಿ ಏಕವಸ್ತ್ರ ನಿಷೇಧವಿರುವದು. ತಂದೆ ಅಥವಾ ಪಿತಾಮಹ ಇಲ್ಲವೆ ಶ್ರೇಷ್ಠ ಭ್ರಾತೃ ಇವರು ಆಧಾನ ಮಾಡದವರಾಗಿ ಜೀವಂತರಾಗಿದ್ದರೆ ಪುತ್ರ ಇಲ್ಲವೆ ಪೌತ್ರ ಅಥವಾ ಕನಿಷ್ಠ ಭ್ರಾತೃ ಇವರು “ಆಧಾನ"ವನ್ನು ಮಾಡಬಾರದು. ಹಿರೇ ಅಣ್ಣನ ವಿವಾಹವಾಗದಿದ್ದಾಗ ಕಿರಿಯವನು ವಿವಾಹವಾಗಬಾರದು. ಈ ಸಂಬಂಧದ ವಿಶೇಷವನ್ನು ಪೂರ್ವಾರ್ಧದಲ್ಲಿ ಹೇಳಿದೆ. ಇದರಂತೆ ಪಿತ್ರಾದಿಗಳು ಸೋಮಯಾಗ ಮಾಡದಿರುವಲ್ಲಿ, ಅವರು ಜೀವಂತರಾಗಿರುವಲ್ಲಿ ಪುತ್ರಾದಿಗಳಿಗೆ ಸೋಮಯಾಗಕ್ಕಧಿಕಾರವಿರುವದಿಲ್ಲ. ಹೀಗೆ ಪೂರ್ಣಿಮಾಸೇಷ್ಟಿ, ದರ್ಶಷ್ಟಿ ಮತ್ತು ಅಗ್ನಿ ಹೋತ್ರ ಹೋಮಗಳಲ್ಲಿಯೂ ಪಿತ್ರಾದಿಗಳು ಪ್ರಾರಂಭಿಸದೆ ಇರುವಾಗ ಪುತ್ರಾದಿಗಳಿಗೆ ಅಧಿಕಾರವಿಲ್ಲ. ಸಂನ್ಯಾಸವಿಷಯದಲ್ಲಿಯೂ ಇದರಂತೆಯೇ, ಇದು ಸಹೋದರನಿರುವ ಕನಿಷ್ಠನಿಗೆ ಮಾತ್ರ ದೋಷಕರವು. ಭಿನ್ನೋದರನಾದವನಿಗೆ ದೋಷವಿಲ್ಲ. ಕೆಲವರು ತಂದೆಮೊದಲಾದವರ ಅನುಜ್ಞೆಯಿದ್ದರೆ ಅಡ್ಡಿಯಿಲ್ಲವೆನ್ನುವರು. ಅಧಿಕಾರಿಯಾದ ತಂದೆಯಿರುವಾಗ ಆಜ್ಞೆಯಿದ್ದರೂ ದೋಷಕರವಾಗುವದು. ತಂದೆಮೊದಲಾದವರು ಪತಿತರಾದಲ್ಲಿ, ಕುರುಡುತನ ಮೊದಲಾದ ದೋಷಯುಕ್ತರಾದಲ್ಲಿ ಅವರು ಅನಧಿಕಾರಿಗಳಾಗುವದರಿಂದ ಆಗ ಅವರ ಅನುಜ್ಞೆಯಿಂದ ಮಾಡಿದರೆ ದೋಷವಿಲ್ಲ. ಪತಿತತ್ವಾದಿಗಳಿಂದ ಅವರು ಅನಧಿಕಾರಿಗಳಾದಾಗ ಅವರ ಅನುಜ್ಞೆಯಿಲ್ಲದಿದ್ದರೂ ಮಾಡಬಹುದೆಂದು ಕೆಲವರು ಹೇಳುವರು. ಇದರಂತೆ ಜೀಮತಕನಿಗೆ ಪಿತೃಕಾರ್ಯಗಳಾದ ದರ್ಶಾದಿ ಧರ್ಮಸಿಂಧು ಶ್ರಾದ್ಧ, ತರ್ಪಣ, ಪಿತೃಸಂಬಂಧವಾದ ದಾನ ಇವುಗಳಲ್ಲಿ ಅಧಿಕಾರವಿರುವದಿಲ್ಲ. ಇಲ್ಲಿ ವಿಶೇಷವೇನೆಂದರೆ ಜೀವಶ್ಚಿತೃಕನಿಗೆ ತನ್ನ ಪುತ್ರಾದಿಗಳ ಸಂಸ್ಕಾರ, ದ್ವಿತೀಯಾದಿ ವಿವಾಹ ಮೊದಲಾದವುಗಳ ನಿಮಿತ್ತದಿಂದ ಮಾಡುವ ನಾಂದೀಶ್ರಾದ್ಧ, ಚಾತುರ್ಮಾಸ್ಕಾಂತರ್ಗತವಾದ ಪಿತೃಯಜ್ಞ, ಸೋಮಯಾಗದ ತೃತೀಯಸವನದಲ್ಲಿರುವ ಪಿತೃಯಜ್ಞ ಇವುಗಳಲ್ಲಿ ಅಧಿಕಾರವಿದೆ. ಪಿಂಡಪಿತೃಯಜ್ಞವನ್ನು ಹೋಮದ ವರೆಗೂ ಮಾಡಲಡ್ಡಿ ಇಲ್ಲ; ಅಥವಾ ಪಿಂಡಪಿತೃಯಜ್ಞವನ್ನು ಮಾಡಲೇಬೇಕೆಂದಿಲ್ಲ. ಹೀಗೆ ಎರಡು ಪಕ್ಷಗಳಿವೆ. ಕೆಲ ಗ್ರಂಥಗಳಲ್ಲಿ ತಂದೆಯ ಪಿತೃಮೊದಲಾದವರ ಉದ್ದೇಶವಾಗಿ “ಪಿಂಡದಾನ” ಮಾಡತಕ್ಕದ್ದು. ಎಂಬ ಮೂರನೆಯ ಪಕ್ಷವೂ ಒಂದಿದೆ. ಹೀಗೆ ಅಷ್ಟಕಾದಿ ವಿಕೃತಿಕರ್ಮಗಳಲ್ಲಿಯೂ ಮೂರು ಪಕ್ಷಗಳಾಗುವವು. ಪ್ರಸಂಗಾನುಸಾರವಾಗಿ ಗಯೆಗೆ ಹೋಗಿದ್ದರೆ ಪುತ್ರನು ತಾಯಿಯ ಶ್ರಾದ್ಧವನ್ನು ಮಾಡಲೇಬೇಕಾಗುವದು. ಆದರೆ ತಂದೆಯು ಜೀವಿಸಿರುವಾಗ ತಾಯಿಯ ಶ್ರಾದ್ಧದ ಉದ್ದೇಶದಿಂದಲೇ ಗಯೆಗೆ ಹೋಗತಕ್ಕದ್ದಲ್ಲ. ಎಲ್ಲ ಮಹಾನದಿ ಮತ್ತು ತೀರ್ಥಗಳಿಗೆ ಹೋದಾಗ ಜೀವತ್ರಿತೃಕನು ತಂದೆಯ ಪಿತೃ, ಮಾತ್ರಾದಿಗಳ ಉದ್ದೇಶದಿಂದ ಶ್ರಾದ್ಧಮಾಡತಕ್ಕದ್ದು. ಜೀವತೃಕನು ನವಮಿಯಲ್ಲಿ ಅಷ್ಟಕಾಶ್ರಾದ್ದ ಹಾಗೂ ಮೃತತಿಥಿಯಲ್ಲಿ ತಾಯಿಯ ಶ್ರಾದ್ಧಗಳನ್ನು ಪಿಂಡಸಹಿತವಾಗಿಯೇ ಮಾಡತಕ್ಕದ್ದು, ತಂದೆಯು ಜೀವಿಸಿದ್ದು ಪತಿತನಾದರೆ ಅಥವಾ ಸಂನ್ಯಾಸಸ್ವೀಕರಿಸಿದ್ದರೆ ಜೀವತೃಕನು ದರ್ಶಶ್ರಾದ್ಧ, ಮಹಾಲಯಶ್ರಾದ್ಧ, ಸಂಕ್ರಾಂತಿ-ಗ್ರಹಣಾದಿಶ್ರಾದ್ಧ ಇವುಗಳನ್ನೆಲ್ಲ ತಂದೆಯ ಪಿತ್ರಾದಿಗಳ ಉದ್ದೇಶದಿಂದ ಮಾಡತಕ್ಕದ್ದು. ಇವುಗಳನ್ನು ಸಾಂಕ ಕವಿಧಿಯಿಂದ ಪಿಂಡರಹಿತವಾಗಿ ಮಾಡತಕ್ಕದ್ದು. ಅನ್ನಷ್ಟಕ್ಕಾದಿಗಳಲ್ಲಿಯಂತೆ ಪಿಂಡದಾನಮಾಡಲು ವಿಶೇಷ ವಚನವಿರುವದಿಲ್ಲ. ಜೀವತೃಕನಾದ ದೌಹಿತ್ಯ (ಮಗಳ ಮಗನು ಅಶ್ವಿನಶುಕ್ಲ ಪ್ರತಿಪದಿಯಲ್ಲಿ ಮಾತಾಮಹನ ಶ್ರಾದ್ಧವನ್ನು ಸಪಿಂಡಕವಾಗಿಯೇ ಮಾಡತಕ್ಕದ್ದು. ಅದರಂತೆ ಭ್ರಾತೃಪುತ್ರನು ತಂದೆಯ ಅಣ್ಣ ತಮ್ಮಂದಿರಿಗೆ ಪುತ್ರರಿಲ್ಲದಾಗ ಪ್ರತ್ಯಾಭಿಕ ಶ್ರಾದ್ಧವನ್ನು ಪಿಂಡಸಹಿತವಾಗಿ ಮಾಡತಕ್ಕದ್ದು. ಹೀಗೆಯೇ ಕಿರಿಯ ತಮ್ಮನು ಅಪುತ್ರಕನಾದ ಅಣ್ಣನಿಗೂ ಮಾಡತಕ್ಕದ್ದು, ಸವತೀಪುತ್ರನೂ ಸವತಿತಾಯಿಯ ಪ್ರತ್ಯಾಬ್ರಿಕವನ್ನು ಪಿಂಡಸಹಿತವಾಗಿಯೇ ಮಾಡತಕ್ಕದ್ದು. ಹೀಗೆ ಮಗಳ ಮಗನಾದರೂ ಅಪುತ್ರಿಕ ಮಾತಾಮಹನ ಶ್ರಾದ್ಧವನ್ನೂ ಮಾಡತಕ್ಕದ್ದು. ಒಟ್ಟಿನಮೇಲೆ ಈ ಹೇಳಿದ ನಾಲ್ಕೂ ವಿಧ ಶಾಸ್ತ್ರಗಳನ್ನು ಮಾಡಲು ಜೀವಶ್ಚಿತೃಕನಿಗೆ ಅಧಿಕಾರವಿದೆ. ತಂದೆಯ ಅಣ್ಣ - ತಮ್ಮಂದಿರು, ತನ್ನ ಅಣ್ಣ-ತಮ್ಮಂದಿರು ಇವರಿಗೆ ಪತ್ನಿಯಿದ್ದರೆ ಅಪುತ್ರಕರಾದಾಗ ಅವಳೇ ಅಧಿಕಾರಿಣಿಯಾಗುವಳು. ಆಗ ಭ್ರಾತೃಪುತ್ರಾದಿಗಳಿಗೆ ಅಧಿಕಾರವಿಲ್ಲ. ಇದರಂತೆ ಪುತ್ರರಿಲ್ಲದಾಗ ಪತಿಯೇ ಪತ್ನಿಯ ಶ್ರಾವನ್ನು ಮಾಡತಕ್ಕದ್ದು, ಸವತಿಪತ್ನಿಯರಿಗೆ ಪುತ್ರರಿದ್ದರೆ ಅವರೇ ಅಧಿಕಾರಿಗಳು, ಹೊರತು “ಪತಿಯಲ್ಲ. ಮಗಳ ಪುತ್ರ, ಅಣ್ಣ ತಮ್ಮಂದಿರ ಪುತ್ರ ಇವರಿರುವಾಗ ಮೃತನು ವಿಭಕ್ತನಾಗಿದ್ದರ “ಹಿತ್ರ"ನೇ ಅಧಿಕಾರಿಯು, ಹೊರತು ಭಾತೃಪುತ್ರನಲ್ಲ. ಅವಿಭಕ್ತನಾಗಿದ್ದರೆ ಭ್ರಾತೃಪುತ್ರ ಅಧಿಕಾರಿಯು, ಕೆಲವರು ಭ್ರಾತೃ ಹಾಗೂ ಭ್ರಾತೃಪುತ್ರರಿದ್ದರೆ ಭ್ರಾತೃವೇ ಶ್ರಾಪ್ತಾಧಿಕಾರಿಯನ್ನುವರು. ಜೀವಶ್ಚಿತೃಕನಿಗೆ ಪಿತೃಪಿತಾಮಹಾದಿ ಮನುಷ್ಯಪಿತೃ ತರ್ಪಣ ಷೇಧವಿದ್ದರೂ “ಅಗ್ನಿಷ್ಕಾತಾ ದೇವಪಿತೃತರ್ಪಣ ನಿಷೇಧವಿಲ್ಲದಿರುವದರಿಂದ ಸ್ನಾನಾಂಗ ಪರಿಚ್ಛೇದ ೩ ಉತ್ತರಾರ್ಧ ೪೦೩ ಪಿತೃತರ್ಪಣದಲ್ಲಿ ಮತ್ತು ಬ್ರಹ್ಮಯಜ್ಞಾಂಗವಾದ ದೇವರೂಪಿ ಪಿತೃತರ್ಪಣದಲ್ಲಿಯೂ ಅಧಿಕಾರವಿದೆ. ತಂದೆಯು ಜೀವಿಸುತ್ತಿದ್ದರೂ ಯಮ ಹಾಗೂ ಭೀಷ್ಮ ಈ ತರ್ಪಣ ಮಾಡತಕ್ಕದ್ದು; ಎಂದು ವಚನವಿದೆ. ಜೀವತೃಕನು ಶ್ರಾದ್ಧಾಂಗವಲ್ಲದ ತಿಲತರ್ಪಣ ಮಾಡಬಾರದು. ಶ್ರಾದ್ಧ ಮಾಡುವಾಗ ಎಡಕಾಲು ಮಡಚುವದು ಮತ್ತು ಕಟಬಂಧ ಇವುಗಳನ್ನು ಮಾಡಬಾರದು. ಜೀವತ್ರಿತೃಕನು ನದ್ಯಾದಿಗಳಲ್ಲಿ ಸ್ನಾನಮಾಡಿ ತರ್ಪಣದ ಅಂತ್ಯದಲ್ಲಿ ವಿಹಿತವಾದ “ವಸ್ತ್ರನಿಪೀಡನ” ವನ್ನು ಮಾಡಬಾರದು. ಅದರಂತೆ ಖಡ್ಗಮೃಗದ ಕೋಡಿನ ಉಂಗುರ, ಮುತ್ತು ಇವುಗಳನ್ನು ಕೈಯ್ಯಲ್ಲಿ ಹಿಡಕೊಂಡು ಪಿತೃತರ್ಪಣ ಮಾಡಬೇಕೆಂದು ವಚನವಿದೆ. ಆದರೆ ಜೀವಶ್ಚಿತೃಕನು ಅವುಗಳಲ್ಲಿ ಖಡ್ಗವಸ್ತುವನ್ನು ಧಾರಣಮಾಡಬಾರದು. ಪಿತೃಕಾರ್ಯದಲ್ಲಿ ಬ್ರಾಹ್ಮಣರಿಗೆ ಅಪಸವ್ಯ” ಹೇಳಿದೆಯಷ್ಟೇ, ಆದರೆ ಜೀವಶ್ಚಿತ್ಸಕನು ಮುಂಗೈಯ ಕೆಳಭಾಗಪರ್ಯಂತ ಮಾತ್ರ ಜನಿವಾರವನ್ನು ಇಟ್ಟುಕೊಳ್ಳುವದು. ಸಂನ್ಯಾಸ ಸ್ವೀಕಾರಾದಿಯುಕ್ತ ತಂದೆಯು ಜೀವಂತನಿರುವಾಗ ತಾಯಿ, ತಾಯಿಯ ತಂದೆಗಳು ಮೃತರಾಗಿದ್ದರೆ ಪುತ್ರನು “ಪಿತು:-ಪಿತಾಮಹ ಪ್ರಪಿತಾಮಹಾನಾಂ ಪಿತೃ: ಮಾತೃಪಿತಾಮಹೀ ಪ್ರಪಿತಾಮಹೀನಾಂ” ಹೀಗೆ ಮೂರು ಪಾರ್ವಣಗಳನ್ನೂ, ಏಕೋದ್ದಿಷ್ಟಗಣಗಳನ್ನೂ ಉದ್ದೇಶಿಸಿ ಮಾಡುವದು. ತನ್ನ ತಾಯಿಯನ್ನು ಪಿತುಃಪಾ, ಪಿತೃವ್ಯನನ್ನು ಪಿತುರ್ಭಾತುಃ, ತನ್ನ ಮಾತಾಮಹನನ್ನು ಪಿತುಃಶ್ವಶುರಸ್ಯ ಇತ್ಯಾದಿ ಪಿತೃಮೂಲಕವಾಗಿಯೇ ಉಚ್ಚರಿಸಿ ಸಂಬಂಧಿಸಿ ಮಹಾಲಯ ಶ್ರಾದ್ಧವನ್ನು ಮಾಡತಕ್ಕದ್ದು. ಹೀಗೆ ದರ್ಶಾದಿಗಳಲ್ಲಿಯೂ ಊಹಿಸುವದು. ಸನ್ಯಸ್ತಾದಿರೂಪನಾದ ತಂದೆಯು ಜೀವಿಸಿರುವಾಗ ಬ್ರಹ್ಮಯಜ್ಞ ಮುಗಿದ ನಂತರ ನಿತ್ಯವಾದ ಪಿತೃತರ್ಪಣವನ್ನು ಹೀಗೆಯೇ ಮಾಡತಕ್ಕದ್ದನ್ನುವರು. ತಾಯಿಯ ವಾರ್ಷಿಕ ಶ್ರಾದ್ಧ, ಅಪುತ್ರಕನಾದ ಮಾತಾಮಹನ ವಾರ್ಷಿಕಶ್ರಾದ್ಧ, ಅಪುತ್ರರಾದ ಪಿತೃಭ್ರಾತೃಗಳ ವಾರ್ಷಿಕ ಶ್ರಾದ್ಧ ಇವುಗಳನ್ನು ಮಾಡುವಾಗ ಕ್ರಮದಿಂದ “ಮಾತೃಪಿತಾಮಹಿ, ಪ್ರಪಿತಾಮಹೀನಾಂ, ಮಾತಾಮಹ, ಮಾತೃಪಿತಾಮಹ, ಮಾತೃಪ್ರಪಿತಾಮಹಾನಾಂ, ಪಿತೃವ್ಯಪಿತಾಮಹ, ಪ್ರಪಿತಾಮಹಾನಾಂ” ಹೀಗೆಯೇ ಉದ್ದೇಶವು. ಅಶಕ್ತರಾದ ತಂದೆ ಮೊದಲಾದವರಿಂದ ಪ್ರತಿನಿಧಿಯಾಗಿ ಅವರು ಮಾಡುವ ಶ್ರಾದ್ಧವನ್ನು ತಾನು ಮಾಡುವಾಗ “ಪಿತ್ರ: ಅಮುಕ ಶರ್ಮಣ: ಯಜಮಾನ ಪಿತೃಪಿತಾಮಹ ಪ್ರಪಿತಾ ಮಹಾನಾಂ” ಹೀಗೆಂದು ಶ್ರಾದ್ಧಕ್ಕನುಗುಣವಾಗಿ ಉದ್ದೇಶಿಸುವದು. ಎಲ್ಲ ಪಿತೃ ಕಾರ್ಯಗಳಲ್ಲೂ ಅವಿಭಕ್ತರಾದ ಸಹೋದರರಲ್ಲಿ ಹಿರಿಯವನಿಗೇ ಅಧಿಕಾರವು, ವಿಭಕ್ತರಾಗಿದ್ದಲ್ಲಿ ಬೇರೆ ಬೇರೆ ಮಾಡತಕ್ಕದ್ದು. ಸವತಿಯ ಪುತ್ರನು ಹಿರಿಯವನಾಗಿದ್ದು ಸ್ವಪುತ್ರನು ಕಿರಿಯವನಾಗಿದ್ದರೂ ತಮ್ಮ ತಮ್ಮ ಮಾತಾಪಿತೃಗಳ ಶ್ರಾದ್ಧವನ್ನೂ ಅನ್ನಷ್ಟಕ್ಕಾದಿಗಳನ್ನೂ ಆ ಕನಿಷ್ಠನಾದ ಸ್ವಪುತ್ರನೇ ಮಾಡತಕ್ಕದ್ದು. ಜೀವತೃ-ಪಿತಾಮಹಕನಾದ ಅಥವಾ ಸನ್ಯಸ್ತ ಪಿತಾಮಹಕನಾದವನು ಪಿತಾಮಹನ ಪಿತ್ರಾದುದ್ದೇಶದಿಂದ ವೃದ್ಧಿ ಶ್ರಾದ್ಧ, ತೀರ್ಥಶ್ರಾದ್ಧ, ದರ್ಶಾದಿ ಶ್ರಾದ್ಧಗಳನ್ನು ಮಾಡತಕ್ಕದ್ದು. ಪಿತ್ರಾದಿ ಮೂವರು ಜೀವಿಸುರುತ್ತಿದ್ದರೆ ಅಥವಾ ಸಂನ್ಯಾಸವನ್ನು ಹೊಂದಿದರೆ ಯಾವ ಶ್ರಾದ್ಧವನ್ನೂ ಮಾಡತಕ್ಕದ್ದಿಲ್ಲ. ಕೆಲವರು ಪಿತ್ರಾದಿತ್ರಯಕ್ಕಿಂತ ಹಿಂದಿನ ಪಿತೃಗಳಿಗೆ ಶ್ರಾದ್ಧವನ್ನು ಕೊಡಬೇಕೆಂದು ಹೇಳುವರು. ತಂದೆಯು ಮೃತನಾಗಿದ್ದು ಪಿತಾಮಹನು ಜೀವಿಸಿರುತ್ತಿದ್ದರೆ ಆಗ ತಂದೆಗೆ ಮತ್ತು ಪಿತಾಮಹನಿಗಿಂತ ಹಿಂದಿನವರಿಗೆ ಶ್ರಾದ್ಧ ಮಾಡತಕ್ಕದ್ದು. ಹೀಗೆ ಪಿತೃಪಿತಾಮಹರು ಮೃತರಾಗಿ ೪೦೪ ಧರ್ಮಸಿಂಧು ಪ್ರಪಿತಾಮಹನು ಜೀವಿಸುತ್ತಿದ್ದರೆ ಹಾಗೆಯೇ ಊಹಿಸುವದು. ತಾಯಿತಂದೆಗಳು ಜೀವಿಸಿರುವ ಗೃಹ್ಯಾಗಿ ಅಥವಾ ಶೌತಾಗ್ನಿಯುಳ್ಳವನು ತಂದೆಯ ಪಿತ್ರಾದಿಗಳಿಗೆ ಪಿಂಡದಾನ ಮಾಡತಕ್ಕದ್ದೆಂಬ ಮೂರನೇ ಪಕ್ಷವನ್ನು ಹಿಡಿದು ಪ್ರಾರಂಭಿಸಿದ ಪಿಂಡಪಿತೃಯಜ್ಞ ಅಷ್ಟಕಾ, ಅನ್ನಷ್ಟಕಾ ಇವುಗಳ ಪೈಕಿ “ಅನ್ನಷ್ಟಕಾಶ್ರಾದ್ಧದಲ್ಲಿ ಪಿತೃವಿನಪಿತೃತ್ರಯ ಮಾತಾಮಹಾದಿತ್ರಯ ಇವರನ್ನುದ್ದೇಶಿಸಿ ಪಿಂಡಾದಿಗಳನ್ನು ಕೊಡತಕ್ಕದ್ದು. ಆಮೇಲೆ ತಾಯಿಯು ಮೃತಳಾದರೆ ಆತನು ಅನ್ನಷ್ಟಕಾ ಶ್ರಾದ್ಧದಲ್ಲಿ ಸ್ವಕೀಯಮಾತೃತ್ರಯ, ತಂದೆಯ ಪಿತ್ರಾದಿತ್ರಯ ಅವುಗಳ ಉದ್ದೇಶದಿಂದ ಪಿಂಡಾದಿಗಳನ್ನು ಕೊಡುವದು. ಪಿಂಡಪಿತೃಯಜ್ಞ ಅನ್ವಷ್ಟಕಾದಿಗಳನ್ನಾರಂಭಿಸದೇ ಇರುವ ಇನ್ನೊಂದು ಪಕ್ಷದಂತೆ ತಂದೆಯು ಜೀವಿಸಿದ್ದರೂ ಸಂನ್ಯಾಸಾದಿಗಳನ್ನು ಹೊಂದಿದಲ್ಲಿ ಜೀವತೃಕನಿಗೆ ದರ್ಶಾದಿಶ್ರಾದ್ದವು ಪಿತೃವಿನ ಪಿತ್ರಾದುದ್ದೇಶದಿಂದ ಪರಸ್ಪರ ಸಂಬಂಧ ರಹಿತವಾದ ಪ್ರಯೋಗದಂತೆ ಸಾಂಕಿಕ ವಿಧಾನದಿಂದ ಆಗತಕ್ಕದ್ದು, ತಂದೆಯೊಡನೆ ವಿಭಕ್ತರಾಗದಿದ್ದ ಪುತ್ರರಿಗೆ ವೈಶ್ವದೇವವು ಪ್ರತ್ಯೇಕವಾಗತಕ್ಕದ್ದಿಲ್ಲ. “ಪಿತೃಪಾಕದಿಂದ ಅಥವಾ ಭ್ರಾತೃವಿನ ಪಾಕದಿಂದ ಉಪಜೀವಿಸತಕ್ಕದ್ದು” ಎಂದು ವಚನವಿದೆ. ಆದ್ದರಿಂದ ಗೃಹ್ಯಾಗ್ನಿಯಲ್ಲಿ ಪಾಕ, ವೈಶ್ವದೇವ ಮಾಡತಕ್ಕದ್ದೆಂಬ ಪಕ್ಷವಿದ್ದರೂ ತಂದೆಯು ಸಾಗ್ನಿಕನಾಗಿದ್ದರೂ, ಅವಿಭಕ್ತಪುತ್ರರು ಸಾಗ್ನಿಕರಾಗಿರುತ್ತಿದ್ದರೂ ಪ್ರತ್ಯೇಕ ವೈಶ್ವದೇವ ಮಾಡತಕ್ಕದ್ದಿಲ್ಲ. ಯಾರಿಗೆ ಪಾಕದ ಅಭಾವದಿಂದಾಗಿ ಅಗ್ನಿಯು ಲೌಕಿಕವಾಗುವದೆಂದನ್ನಿಸುವದೋ ಅವರು ಅಗ್ನಿಸಂಸ್ಕಾರಕ್ಕಾಗಿ ಮಾತ್ರ ಪಾಕವನ್ನು ಮಾಡತಕ್ಕದ್ದೆಂದು ತೋರುತ್ತದೆ. ವಿಭಕ್ತರಾದರ ಪ್ರತ್ಯೇಕ ವೈಶ್ವದೇವವಾಗತಕ್ಕದ್ದು. ಅಲ್ಲಿಯ ವೈಶ್ವದೇವವು ದೇವಯಜ್ಞ ಭೂತಯಜ್ಞ, ಪಿತೃಯಜ್ಞ ಸ್ವರೂಪವಾಗಿರುವದರಿಂದ ಜೀವತೃಕರಾದರೂ ಪಂಚಮಹಾಯಜ್ಞಾಂತರ್ಗತವಾದ ಪಿತೃಯಜ್ಞವನ್ನು ಮಾಡಲಡ್ಡಿ ಇಲ್ಲ. ತೈತ್ತಿರೀಯರಿಗೆ ವೈಶ್ವದೇವವು ಪಂಚಮಹಾಯಜ್ಞ ಭಿನ್ನವಾಗಿದೆ. ಆದರೂ ವಿಭಕ್ತ ಜೀವತೃಕಗಳಾಗಿದ್ದರೆ ಪಿತೃಯಜ್ಞವನ್ನು ಮಾಡತಕ್ಕದ್ದು. ಅದು ದೇವರೂಪಿ, ಪಿತೃದೇವತಾಕವಿರುವದರಿಂದ ಪಿತಾಮಹಾದಿ ಮನುಷ್ಯರೂಪಿ ಪಿತೃದೇವತಾಕತ್ವವುಂಟಾಗುವದಿಲ್ಲವಾದ್ದರಿಂದ ಆ ಪಿತೃಯಜ್ಞವನ್ನು ಮಾಡತಕ್ಕದ್ದು, ಜೀವತೃಕನೂ, ಗರ್ಭಿಣೀಪತಿಯಾದವನ, ಮುಂಡನ, ಪಿಂಡದಾನ, ಎಲ್ಲ ಪ್ರೇತಕರ್ಮ ಇವುಗಳನ್ನು ಮಾಡಬಾರದು ಎಂದಿದೆ. ಇಲ್ಲಿ “ಮುಂಡನ” ಎಂದರೆ ಕ್ಷೌರದ ಕತ್ತಿಯಿಂದ ಶಿರಸ್ಸನ್ನು ವಪನಮಾಡುವದು. ಆದುದರಿಂದ “ಕರ್ತನ"ಕ್ಕಡಿ ಇಲ್ಲವೆಂದರ್ಥ. “ಸರ್ವಪ್ರೇತಕರ್ಮ” ಅಂದರೆ ಪ್ರೇತದಹನ, ಸಪಿಂಡೀಕರಣಾಂತವಾದ ಅರ್ಧ್ವದೇಹಿಕಕಾರ್ಯ ಇತ್ಯಾದಿ ಎಂದರ್ಥ. ಮುಂಡನ ವಿಷಯದಲ್ಲಿ ರಾಗಪ್ರಾಪ್ತ (ಸ್ವಚ್ಛೆಯಿಂದ ಮಾಡುವ) ವಾದ ಮುಂಡನ ಮಾತ್ರ ನಿಷಿದ್ಧವು. ಆದ್ದರಿಂದ ಚೌಲ, ಉಪನಯನಾದಿಗಳು ಮತ್ತು ಆಧಾನ, ದರ್ಶ-ಪೌರ್ಣಮಾಸ, ಜ್ಯೋತಿಷ್ಟೋಮಾದಿಗಳಲ್ಲಿ, ನಿತ್ಯವಾಗಿ (ಅವಶ್ಯಕವಾಗಿ ಪ್ರಾಪ್ತವಾದ ಮತ್ತು ತೀರ್ಥ, ಪ್ರಾಯಶ್ಚಿತ್ತ, ಮಾತೃಮರಣಾದಿ ನೈಮಿತ್ತಿಕಗಳಲ್ಲಿ ಪ್ರಾಪ್ತವಾದ ಮುಂಡನಕ್ಕೆ ನಿಷೇಧವಿಲ್ಲ. ಕೆಲವರು ಕಾವ್ಯ ನಾಗಲ್ಯಾದಿಗಳಲ್ಲಿಯೂ ಅಡ್ಡಿಯಲ್ಲವನ್ನುವರು. ಗಂಗಾ, ಭಾಸ್ಕರಕ್ಷೇತ್ರ, ತಂದೆ-ತಾಯಿ-ಗುರು ಮರಣ, ಆಧಾನ, ಸೋಮಯಾಗ ಈ ಏಳು ವಿಷಯಗಳಲ್ಲಿ ವಪನವನ್ನು ಹೇಳಿದೆಯೆಂದು ಸ್ಮೃತಿವಚನವಿದೆ. ಇಲ್ಲಿ “ಗುರು” ಎಂದರೆ ದತ್ತಕತಂದೆ, ಜನಕತಂದೆಗಳು ಎಂದರ್ಥ. ಬೇರೆ ಪರಿಚ್ಛೇದ - ೩ ಉತ್ತರಾರ್ಧ ೪೦೫ ಗ್ರಂಥದಲ್ಲಿ “ತೀರ್ಥಮಾತ್ರದಲ್ಲಿ ಗೌರಮಾಡತಕ್ಕದ್ದು” ಎಂದಿದೆ. ಆದರೂ ಗಂಗಾ, ಭಾಸ್ಕರ ಕ್ಷೇತ್ರ ಎಂದು ಪ್ರತ್ಯೇಕವಾಗಿ ಹೇಳಿದ್ದು, ಅಲ್ಲಿ ಜೀವಶ್ಚಿತೃಕನಿಗೆ ವಿಶೇಷವಾಗಿ ಗೌರವು ವಿಧಿಸಲ್ಪಡುತ್ತದೆ ಎಂಬರ್ಥಕ್ಕಾಗಿ ಹೇಳಿದ್ದು. ಜೀವಶ್ಚಿತೃಕನಿಗೆ “ಪಿಂಡದಾನ ನಿಷೇಧ"ವನ್ನು ಹೇಳಿದ್ದು ಅದು ನಾಂದೀಶ್ರಾದ್ಧ, ತೀರ್ಥಶ್ರಾದ್ಧಾದಿಗಳಿಗೆ ಎಂದು ತಿಳಿಯುವದು, ಸಂನ್ಯಾಸವನ್ನು ಹೊಂದಿದ ತಂದೆಯುಳ್ಳವನಿಗೆ ದರ್ಶ-ಮಹಾಲಯಾದಿಗಳಲ್ಲಿ ಪಿಂಡರಹಿತ ಮತ್ತು ಸಾಂಕರ್ಿಕ ವಿಧಾನವನ್ನು ತಿಳಿಸುವದಕ್ಕಾಗಿರುತ್ತದೆ. ಮಹಾಪಿತೃಯಜ್ಞದಲ್ಲಿ ಮತ್ತು ಸೋಮಯಾಗದಲ್ಲಿ, ಮಾತೃಮಾತಾಮಹಾದಿಗಳ ವಾರ್ಷಿಕಶ್ರಾದ್ಧಗಳಲ್ಲಿ, ಗಯೆಯಲ್ಲಿ ಮತ್ತು ಅಷ್ಟಕ್ಕಾದಿಗಳಲ್ಲಿಯೂ ಪಿಂಡದಾನವು ಆವಶ್ಯಕವಾದದ್ದೇ ಎಂದು ಹೇಳಿದ. “ಮಾತಾಪಿತೃಗಳ ಕ್ಷಯಾಹದಲ್ಲಿ ಪಿಂಡದಾನಮಾಡತಕ್ಕದ್ದು” ಎಂಬ ವಚನವಿದೆ. ಶ್ರಾದ್ಧದಲ್ಲಿ ಪಿಂಡದಾನವು ಸಿದ್ಧವಾಗಿದ್ದ ಮೇಲೆ ಪುನಃ “ಪಿಂಡ” ವಿಷಯವನ್ನು ಯಾಕೆ ಹೇಳಿದ್ದು? ಅಂದರೆ ಸಾಮಾನ್ಯವಾಗಿ ‘ಗರ್ಭಿಣೀಪತಿಯು ಪಿಂಡದಾನ ಮಾಡಬಾರದು” ಎಂದು ಹೇಳಿದ್ದಕ್ಕೆ, ಮಾತಾಪಿತೃಗಳ ಶ್ರಾದ್ಧದಲ್ಲಿ ಪಿಂಡದಾನವು ಅವಶ್ಯವು ಎಂದು ಅಪವಾದವಾಗಿ ಹೇಳಿದ್ದೆಂದು ತಿಳಿಯುವದು. ಇದಲ್ಲದೆ ವಿವಾಹ, ಮುಂಜಿ, ಚೌಲ ಇವುಗಳಲ್ಲಿ ವರ್ಷ ಅಥವಾ ಆರುತಿಂಗಳೊಳಗೆ ಪಿಂಡದಾನ, ಮೃತ್ತಿಕಾಸ್ನಾನ, ತಿಲತರ್ಪಣಗಳನ್ನು ಮಾಡಬಾರದೆಂದು ನಿಷೇಧ ಹೇಳಿದ್ದರೂ ಈ ಮಾತಾಪಿತೃಗಳ ಶ್ರಾದ್ಧದಲ್ಲಿ ಪಿಂಡದಾನ ಮಾಡಬೇಕು, ಎಂಬ ವಚನವು ಅವುಗಳಿಗೂ ಅಪವಾದಾತ್ಮಕಗಳೆಂದು ತಿಳಿಯುವದು. “ಕ್ಷಯಾಹ” ಈ ಶಬ್ದವು ಸಪಿಂಡೀಕರಣ ಮಾಸಿಕ ಪಿಂಡಗಳಿಗೂ ಸಂಬಂಧಿಸಿದ್ದೆಂದು (ಉಪಲಕ್ಷಕ)ತಿಳಿಯತಕ್ಕದ್ದು. ಪ್ರೇತಕರ್ಮ ಪ್ರತಿಪ್ರಸವ ಜೀವಶ್ಚಿತೃಕನು “ಪ್ರೇತಕರ್ಮ ಮಾಡಬಾರದು” ಎಂದು ಹೇಳಿದೆಯಷ್ಟೇ. ಆದರೆ ಆತನು ಮಾಡಲೇಬೇಕಾದ “ಪ್ರೇತ ಕರ್ಮ"ಗಳೂ ಇವೆ ಎಂದು ಹಿಂದೆ ಹೇಳಿದ ನಿಷೇಧಕ್ಕೂ ಅಪವಾದವಾಗಿ ಕೆಲ ವಿಷಯಗಳಿವೆ. (ಇದಕ್ಕೆ ಪ್ರತಿಪ್ರಸವ ಎನ್ನುವರು) ಜೀವತ್ಯಕನು ತನ್ನ ತಾಯಿ, ಪುತ್ರರಹಿತಳಾದ ಸವತೀತಾಯಿ, ಸ್ವಪುತ್ರ ಮತ್ತು ಸವತಿಪುತ್ರರಹಿತಳಾದ ಸ್ತ್ರೀ, ಅಪುತ್ರನಾದ ಪಿತೃವ್ಯ, ಅಪುತ್ರನಾದ ಮಾತಾಮಹ, ಮಾತಾಮಹಿಯರು ಇವರ ದಹನಾದಿ ಪ್ರೇತಕರ್ಮವನ್ನು ಮಾಡತಕ್ಕದ್ದು. ಇಲ್ಲಿ “ಅಪುತ್ರ” ಎಂಬ ಪದದಿಂದ ಮುಖ್ಯಪುತ್ರರು ಹಾಗೂ ಗೌಣಪುತ್ರರು ಮತ್ತು ಪೌತ್ರ ಪ್ರಪೌತ್ರ “ಇವರಿಲ್ಲದ” ಎಂದು ತಿಳಿಯುವದು. ಜೀವತ್ಯಕನು ಉಪನಯನವಾಗದಿದ್ದರೂ ತಾಯಿಯ ಔರ್ಧ್ವದೇಹಿಕವನ್ನು ಮಾಡತಕ್ಕದ್ದು. ಅದರಲ್ಲಿಯೂ ಸ್ವಲ್ಪ ವಿಶೇಷವಿದೆ. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಾದ, ಚೌಳವಾಗದಿದ್ದವನು ಸಮಂತ್ರಕವಾಗಿ ದಹನ ಮಾತ್ರಮಾಡಿ ಉಳಿದದ್ದನ್ನು ಬೇರೆಯವರಿಂದ ಮಾಡಿಸುವದು. ಚೂಡಾಸಂಸ್ಕಾರವಾದವನು ಅಥವಾ ಮೂರು ವರ್ಷ ಮಿಕ್ಕಿದವನು ಎಲ್ಲವನ್ನೂ ಸಮಂತ್ರಕವಾಗಿಯೇ ಮಾಡತಕ್ಕದ್ದು. ಬ್ರಹ್ಮಚಾರಿಯಾಗಿದ್ದವನಾದರೂ ಮಾತೃ, ಪಿತೃ, ಮಾತಾಮಹ ಇವರ ಅಂತ್ಯಕರ್ಮಗಳನ್ನು ಮಾಡಬಹುದು. ಬೇರೆಯವರ ಪ್ರೇತಕರ್ಮವನ್ನು ಮಾಡಬಾರದು. ಪತಿ ಮತ್ತು ದೌಹಿತ್ರರಲ್ಲಿ ಪತಿಯೇ ಪತ್ನಿಯ ದಾಹಾದಿಗಳನ್ನು ಮಾಡತಕ್ಕದ್ದು. ಪತಿಗೆ ಮುಂಡನ ಮಾತ್ರವಿಲ್ಲ. ಇದರಂತೆ ಪುತ್ರರಿಲ್ಲದ, ಪತ್ನಿ, ದೌಹಿತರಿರುವವನಿಗೆ ಪತ್ನಿಯೇ ೪೦೬ ಧರ್ಮಸಿಂಧು ಪತಿಯ ಕಾರ್ಯವನ್ನು ಮಾಡತಕ್ಕದ್ದು. ಆಗ ದಹನ ಮಾತ್ರವನ್ನು ಸಮಂತ್ರಕವಾಗಿ ಮಾಡಿ, ಉಳಿದ ಕೆಲಸಗಳ ಸಂಕಲ್ಪವನ್ನು ಮಾತ್ರ ತಾನು ಮಾಡಿ ಬ್ರಾಹ್ಮಣದ್ವಾರಾ ಮಾಡಿಸತಕ್ಕದ್ದು. ಪತಿ ಮತ್ತು ಸವತಿಯ ಪುತ್ರರಿರುವಲ್ಲಿ ಸವತಿಯ ಪುತ್ರನೇ ಮಾಡತಕ್ಕದ್ದು. ಅಪುತ್ರರಾದ ವಿಧವಾ- ವಿಧುರರಿಗೆ ಭ್ರಾತೃಪುತ್ರ, ದೌಹಿತರಿದ್ದರೆ ದೌಹಿತ್ರನೇ ಅಧಿಕಾರಿಯು ಎಂದು ಬಹುಗ್ರಂಥದ ಅಭಿಪ್ರಾಯವು ವಿಧವೆಗಾದರೆ ಪತಿಯ ಅಣ್ಣ, ಅಥವಾ ತಮ್ಮನ ಪುತ್ರನೇ ಅಧಿಕಾರಿಯು, ವಿಧುರನಿಗೆ ತನ್ನ ಭ್ರಾತೃಪುತ್ರನೇ ಅಧಿಕಾರಿಯು ಎಂದು “ಜೀವಶ್ಚಿತೃಕ ನಿರ್ಣಯ” ಗ್ರಂಥದಲ್ಲಿ “ಭಟ್ಟರ ಮತವು, ಅಪುತ್ರನಿಗೆ ಪತ್ನಿ ಮತ್ತು ಭ್ರಾತೃಪುತ್ರರಿದ್ದರೆ ಪತ್ನಿಯೇ ಅಧಿಕಾರಿಣಿಯು, ಪುತ್ರರು ಸನ್ನಿಧಿಯಲ್ಲಿಲ್ಲದಿದ್ದರೆ ಪಿತಾಮಹ, ಪ್ರಪಿತಾಮಹಾದಿಗಳ ಔರ್ಧ್ವದೇಹಿಕಕ್ಕೆ ಪೌತ್ರಾದಿಗಳು ಅಧಿಕಾರಿಗಳು, ಹೀಗೆ ಜೀವಶ್ಚಿತೃಕನಿಗೆ ಪಿತೃಸಂಬಂಧಿ ಕರ್ಮ, ಮುಂಡನ, ಪ್ರೇತಕರ್ಮ ಮೊದಲಾದವುಗಳಲ್ಲಿ ಅಧಿಕಾರ ಅನಧಿಕಾರಗಳನ್ನು ವಿವರಿಸಲಾಯಿತು. ಇಲ್ಲಿ ಅನೇಕ ಕಡೆ ‘ಪುನರುಕ್ತಿ” ಯಾಗಿರಬಹುದು. ಆದರೂ ವಿಷಯಭೇದದಿಂದ ಅದು ಅನಿವಾರ್ಯವಾದ್ದರಿಂದ ದೋಷಕರವಲ್ಲ. ಸಪಿಂಡರಾದವರು ಸಗೋತ್ರ, ಸಪಿಂಡರ ಮರಣದಲ್ಲಿ ಒಂದೊಂದು ತಿಲಾಂಜಲಿ ಕೊಡತಕ್ಕದ್ದಿದೆ. ಅದನ್ನು ಜೀವತೃಕನಾದರೂ ಮಾಡಲಡ್ಡಿಯಿಲ್ಲ. ಹೀಗೆ ಮಾತಾಮಹ, ಆಚಾರ್ಯಾದಿಗಳಿಗೂ ಕೊಡಬಹುದು. ಹೀಗೆ ಜೀವತೃಕ ನಿರ್ಣಯವು. ಶ್ರಾದ್ಧಾದ್ಯಧಿಕಾರಿ ನಿರ್ಣಯ ಸಾಂವತ್ಸರಿಕಶ್ರಾದ್ಧ, ದಹನಾದಿ ಔರ್ಧ್ವದೇಹಿಕಕಾರ್ಯ ಇವುಗಳಲ್ಲಿ ಔರಸಪುತ್ರನು ಮುಖ್ಯಾಧಿಕಾರಿಯು, ಔರಸ ಪುತ್ರರು ಅನೇಕರಿದ್ದರೆ ಜೇಷ್ಠನೇ ಅಧಿಕಾರಿಯು, ಜೇಷ್ಠನ ಅಭಾವದಲ್ಲಿ ಅಥವಾ ಅಸನ್ನಿಧಾನದಲ್ಲಿ ಇಲ್ಲವೆ ಪತಿತತ್ವಾದಿಗಳಿಂದ ಅನಧಿಕಾರಿಯಾದಲ್ಲಿ ಜೇಷ್ಠನ ತಮ್ಮ (ಬೆನ್ನಿನವ) ನೇ ಅಧಿಕಾರಿಯು, ಜೇಷ್ಠನ ಅಸನ್ನಿಧಿಯಲ್ಲಿ ತೀರ ಕನಿಷ್ಠನೇ ಅಧಿಕಾರಿಯು, ಹೊರತು ಮಧ್ಯಮನಲ್ಲವೆಂದು ಕೆಲವರು ಹೇಳುವರಾದರೂ ಅದು “ನಿರ್ಮೂಲ"ವು. ಪುತ್ರರಲ್ಲ ವಿಭಕ್ತರಾಗಿರುವಲ್ಲಿ ಕನಿಷ್ಠರಿಂದ ಧನವನ್ನು ಸ್ವೀಕರಿಸಿ ಸಪಿಂಡೀಕರಣಾಂತಕ್ರಿಯೆಯನ್ನು ಮಾಡತಕ್ಕದ್ದು. ಸಾಂವತ್ಸರಿಕಾದಿಗಳನ್ನು ಪೃಥಕ್ ಆಗಿಯೇ ಮಾಡತಕ್ಕದ್ದು, ವಿಭಕ್ತರಾಗಿರದಿದ್ದರೆ ಸಾಂವತ್ಸರಿಕಾರಿಗಳನ್ನೂ ಹಿರಿಯನೇ ಮಾಡತಕ್ಕದ್ದು. ಹಿರಿಯನೊಬ್ಬನೇ ಮಾಡಿದರೂ ಎಲ್ಲರೂ ಫಲಭಾಗಿಗಳಾಗುವರು. ಆದರೆ ಎಲ್ಲರೂ ಬ್ರಹ್ಮಚರ್ಯ, ಪರಾನ್ನ ವರ್ಜನ ಮೊದಲಾದ ನಿಯಮಗಳನ್ನು ಪಾಲಿಸಬೇಕು. ಎಲ್ಲ ಪುತ್ರರೂ ಒಂದೇ ಕಡೆಗಿರದ ದೇಶಾಂತರ ಅಥವಾ ಗೃಹಾಂತರಗಳಲ್ಲಿ ವಾಸವಾಗಿದ್ದರೆ ಅವರು ಅವಿಭಕ್ತರಾಗಿದ್ದರೂ ಪೃಥಕ್ ಆಗಿಯೇ ವಾರ್ಷಿಕಾದಿಗಳನ್ನು ಮಾಡತಕ್ಕದ್ದು, ಜೇಷನು ಸನ್ನಿಧಿಯಲ್ಲಿಲ್ಲದಾಗ ದಹನಾದಿಗಳನ್ನು ಕನಿಷ್ಟನು ಮಾಡುವದು. ಷೋಡಶಾದದ ವರೆಗೂ ಮಾಡಲಡ್ಡಿಯಿಲ್ಲ. ಸಪಿಂಡೀಕರಣವನ್ನು ಮಾಡಬಾರದು. ಹಿರಿಯವನನ್ನು ಸಂವತ್ಸರಪರ್ಯಂತವೂ ನಿರೀಕ್ಷಿಸಬೇಕು. ಜೇಷನಿಗೆ ತಿಳಿದು ಸಂವತ್ಸರಮಧ್ಯದಲ್ಲಿ ಬಂದರೆ ಆತನು ಆಗ ಸಪಿಂಡೀಕರಣ ಮಾಡಬೇಕು. ಇಲ್ಲವಾದರೆ ಸಂವತ್ಸರ ಅಂತ್ಯದ ವರೆಗೆ ನೋಡಿ ಅಂತದಲ್ಲಿ ಕನಿಷ್ಠನಾದರೂ ಮಾಡತಕ್ಕದ್ದು. ವರ್ಷದ ಒಳಗೆ ಪುತ್ರರಲ್ಲದವರು ಮಾಡಿದ್ದರೂ ಮಾಸಿಕ, ಅನುಮಾಸಿಕ ಸಪಿಂಡೀಕರಣಗಳನ್ನು ಪುತ್ರನು ಪುನಃ ಮಾಡತಕ್ಕದ್ದು. ಹೀಗೆಯೇ ಕನಿಷ್ಕನಿಂದ

ಪರಿಚ್ಛೇದ ೩ ಉತ್ತರಾರ್ಧ ೪೦೭ ಮಾಡಲ್ಪಟ್ಟಿದ್ದರೂ ಜೇಷ್ಠನು ಪುನಃ ಮಾಡತಕ್ಕದ್ದು, ವಿಶೇಷವನ್ನು ಮುಂದೆ ಹೇಳಲಾಗುವದು. ಕನಿಷ್ಠನು ಸಾಗ್ನಿಕನಾಗಿದ್ದರೆ ಹನ್ನೆರಡನೇ ದಿನ ಸಪಿಂಡೀಕರಣವನ್ನೂ ಮಾಡತಕ್ಕದ್ದು. ಔರಸಪುತ್ರರ ಅಭಾವದಲ್ಲಿ ಪುತ್ರಿಯ ಪುತ್ರ, ಕ್ಷೇತ್ರಜಾದಿದ್ವಾದಶವಿಧ ಪುತ್ರರು ಹೇಳಲ್ಪಟ್ಟಿದ್ದರೂ ಕಲಿಯುಗದಲ್ಲಿ ಅವರಿಗೆ ನಿಷೇಧವಿರುವದರಿಂದ ಔರಸಪುತ್ರನ ಅಭಾವದಲ್ಲಿ “ದತ್ತಕ"ನೇ ಅಧಿಕಾರಿಯು, ತಾಯಿತಂದೆಗಳಿಂದ ಅಥವಾ ಇನ್ನೊಬ್ಬನಿಂದ ವಿಧಿಪೂರ್ವಕವಾಗಿ ಕೊಡಲ್ಪಟ್ಟ ಸಮಾನಜಾತಿಯಾದವನೇ “ದುಕನಾಗುವನು. ಆಪತ್ತಿನಲ್ಲಿ ಪತ್ನಿಯ ಅನುಮತಿಯಿಂದ ಪತಿಗೆ ಪುತ್ರನನ್ನು ಕೊಡಲು ಅಧಿಕಾರವಿದೆ. ಅತ್ಯಾಪತ್ತಿನಲ್ಲಿ ಪತ್ನಿಯ ಅನುಮತಿಯಿಲ್ಲದಿದ್ದರೂ ಕೊಡಬಹುದು. ಪತ್ನಿಗಾದರೆ ಪತಿಯ ಅನುಮತಿಯೇ ಬೇಕು. ಈ ವಿಷಯದ ವಿಶೇಷವನ್ನು ಹಿಂದೆ ದತ್ತಕ ಪ್ರಕರಣದಲ್ಲಿ ಹೇಳಲಾಗಿದೆ. ದತ್ತಕನ ಅಭಾವದಲ್ಲಿ “ಪೌತ್ರನು ಅಧಿಕಾರಿಯು ಪೌತ್ರನ ಅಭಾವದಲ್ಲಿ “ಪ್ರಪೌತ್ರ” ಹೀಗೆ ಅಧಿಕಾರವು ಕೆಲವರು ಔರಸನ ಅಭಾವದಲ್ಲಿ ಪೌತ್ರ ಅವನ ಅಭಾವದಲ್ಲಿ ಪ್ರಪೌತ್ರ, ಪ್ರಪೌತ್ರನ ಅಭಾವದಲ್ಲಿ ದತ್ತಕನೆನ್ನುವರು. ಪೌತ್ರನಿಗೆ ಉಪನಯನವಾಗದಿದ್ದರೂ ಅನುಪನೀತನಾದ ಔರಸನಿಗೇ ಅಧಿಕಾರವು. ಒಂದು ವರ್ಷಕ್ಕೆ ಮಿಕ್ಕಿದ ಚೂಡಾಕರ್ಮಹೊಂದಿದ, ಪುತ್ರನಾದರೂ ಅಧಿಕಾರಿಯು, ಮೂರು ವರ್ಷದ ನಂತರ ಚೂಡಾಕರ್ಮವಾಗದಿದ್ದರೂ ಆತನು ಅಧಿಕಾರಿಯಾಗುವನು. ಉಪನಯನವಾಗದಿದ್ದರೂ ತಂದೆ ತಾಯಿಗಳ ಔರ್ಧ್ವದೇಹಿಕಸಂಸ್ಕಾರ, ಸಾಂವತ್ಸರಿಕ ಶ್ರಾದ್ಧ ಮೊದಲಾದವುಗಳನ್ನು ಮಂತ್ರಪೂರ್ವಕವಾಗಿಯೇ ಮಾಡತಕ್ಕದ್ದು, ಅನುಪನೀತನಾದವನು ಅಸಮರ್ಥನಾದಲ್ಲಿ ಸಮಂತ್ರಕವಾಗಿ ಅಗ್ನಿದಾನ ಮಾತ್ರ ಮಾಡತಕ್ಕದ್ದು. ಉಳಿದದ್ದನ್ನು ಅನ್ಯರ ಮುಖಾಂತರ ಮಾಡಿಸತಕ್ಕದ್ದು. ಹೀಗೆ ಶ್ರಾದ್ಧ, ದರ್ಶಮಹಾಲಯಾದಿಶ್ರಾದ್ಧಗಳಲ್ಲಿಯೂ ಸಂಕಲ್ಪ ಮಾತ್ರ ಮಾಡತಕ್ಕದ್ದು. ನಂತರ ಎಲ್ಲ ಕಾರ್ಯಗಳನ್ನು ಅನ್ಯರಿಂದ ಮಾಡಿಸುವದು. ಕೆಲವರು ಮೂರು ವರ್ಷಕ್ಕಿಂತ ಕಡಿಮೆಯವನಾದ ಚೌಲಸಂಸ್ಕಾರ ರಹಿತನಾದವನಿಂದಲಾದರೂ “ಸಮಂತ್ರಕದಾಹ” ಮಾಡಿಸಿ ಉಳಿದದ್ದನ್ನು ಬೇರೆಯವರಿಂದ ಮಾಡಿಸತಕ್ಕದ್ದೆನ್ನುವರು. ದತ್ತಕನಾದರೆ ಉಪನೀತನೇ ಅಧಿಕಾರಿಯಾಗುವನು. ದತ್ತಕ ಹಾಗೂ ಪ್ರಪೌತ್ರನ ಅಭಾವದಲ್ಲಿ ದಾಹಾದಿ ಔರ್ಧ್ವದೇಹಿಕ, ಸಾಂವತ್ಸರಿಕ ಶ್ರಾದ್ಧಾದಿಗಳಲ್ಲಿ ಪತಿಗೆ ಪತ್ನಿಯೂ, ಪತ್ನಿಗೆ-ಪತಿಯೂ ಅಧಿಕಾರಿಗಳಾಗುವರು. ಸಪತ್ನಿಯರಿಗೆ ಪುತ್ರರಿದ್ದರೆ ಪತಿಗೂ ಅಧಿಕಾರವಿಲ್ಲ. “ಎದಾನೌರಸ: ಪುತ್ರೋಜನನ್ಯಾ ಔರ್ಧ್ವದೇಹಿಕಂ ತರಭಾವೇ ಸಹಜ ಹೀಗೆ ವಚನವಿದೆ. ಪತ್ನಿಯಾದರೂ ಔರ್ಧ್ವದೇಹಿಕಾದಿ ಕಾರ್ಯಗಳನ್ನು ಸಮಂತ್ರಕವಾಗಿಯೇ ಮಾಡತಕ್ಕದ್ದು. ಅಶಕ್ತಿಯಲ್ಲಾದರೆ ಅಗ್ನಿದಾನವನ್ನು ಮಾತ್ರ ಸಮಂತ್ರಕವಾಗಿ ಮಾಡಿ ಉಳಿದದ್ದನ್ನು ಬೇರೆಯವರಿಂದ ಮಾಡಿಸುವದು. ಶ್ರಾದ್ಧದಲ್ಲಿ ಸಂಕಲ್ಪ ಮಾತ್ರ. ಉಳಿದದ್ದನ್ನು ಬೇರೆಯವರಿಂದ ಮಾಡಿಸುವದು. ಪತಿಗೆ ಯದ್ಯಪಿ ಅವಿಭಕ್ತನಾದ ಅಥವಾ ಸಂಸ್ಕಷ್ಟ (ಸಂಸ್ಕೃಷ್ಟ ಅಂದರೆ ಒಮ್ಮೆ ವಿಭಕ್ತನಾಗಿ ಪುನಃ ಏಕಪಾಕದೊಳಗಿರುವವ. ಅಸಂಸೃಷ್ಟನೆಂದರೆ ಅವಿಭಕ್ತನಾಗಿದ್ದು ಪ್ರತ್ಯೇಕ ಪಾಕದಲ್ಲಿರುವವ) ನಾದ ಭ್ರಾತೃವಿಗೆ “ಧನಗ್ರಾಹಿತ್ವ” (ಧನಭಾಗಿತ್ವ) ಅಧಿಕಾರವಿದೆಯಾದರೂ ಕ್ರಿಯಾಧಿಕಾರವು ಪತ್ನಿಗೇ ೪೦೮ ಧರ್ಮಸಿಂಧು ಇದೆ. ವಿಭಕ್ತ ಅಥವಾ ಅಸಂಸೃಷ್ಟನಾದ ತಮ್ಮನಿದ್ದರೂ ಧನಾಧಿಕಾರವು ಪತ್ನಿಗೇ ಇದೆ. ಪತ್ನಿಯ ಅಭಾವದಲ್ಲಿ ವಿಭಕ್ತ, ಅಸಂಸೃಷ್ಟನಾದ ಮೃತನ ಭ್ರಾತೃವಿನ ಕನ್ನೆಯೇ ಪಿಂಡದಾತಳೂ, ಧನಹಾರಿಣಿಯೂ ಆಗುವಳು. ಅದರಲ್ಲಾದರೂ ವಿವಾಹಿತಳೇ ಪಿಂಡದಾತೃವಾಗುವಳು. ಇನ್ನು ಧನಕ್ಕೆ ಅಧಿಕಾರಿಣಿಯಾದ ಅವಿವಾಹಿತಳೂ ಪಿಂಡದಾತೃವಾಗುವಳು. ಪುತ್ರಿಯ ಅಭಾವದಲ್ಲಿ ದೌಹಿತ್ರನು ಧನಾಧಿಕಾರಿ ಹಾಗೂ ಪಿಂಡಾಧಿಕಾರಿಯಾಗುವನು. ದೌಹಿತನ ಅಭಾವದಲ್ಲಿ ಅಣ್ಣ ತಮ್ಮಂದಿರು, ಭ್ರಾತೃಗಳ ಅಭಾವದಲ್ಲಿ ಭಾತೃಪುತ್ರರು, ವಿಭಕ್ತ ಹಾಗೂ ಸಂಸೃಷ್ಟನ ಪದ್ಮಭಾವದಲ್ಲಿ ಭಾತೃವು, ಭ್ರಾತೃಗಳಲ್ಲಿ ಸೋದರ ಅಸೋದರರು ಅನೇಕರಿದ್ದಾಗ ಸೋದರನು ಮುಖ್ಯನು. ಅದರಲ್ಲೂ ಶ್ರೇಷ್ಠ ಕನಿಷ್ಠರಿದ್ದರೆ ಕನಿಷ್ಠನೇ ಪಿಂಡದಾನಾದಿಗಳಿಗೆ ಅಧಿಕಾರಿಯು, ಕನಿಷ್ಠ ಭ್ರಾತೃವಿನ ಅಭಾವದಲ್ಲಿ ಶ್ರೇಷ್ಠ ಭ್ರಾತೃವೇ ಅಧಿಕಾರಿಯು, ಕನಿಷ್ಠರು ಅನೇಕರಿರುವಾಗ ಮೃತನ ಅನಂತರದ ಕನಿಷ್ಠನು, ಅವನ ಅಭಾವದಲ್ಲಿ ಅವನ ನಂತರದವನು ಹೀಗೆ ತಿಳಿಯತಕ್ಕದ್ದು. ಜೇಷ್ಠರು ಅನೇಕರಿದ್ದರೆ ಮೃತನ ಅನಂತರ ಕ್ರಮದಿಂದಲೇ ಅಧಿಕಾರನಿರ್ಣಯವು. ಸೋದರಭಾತೃವಿನ ಅಭಾವದಲ್ಲಿ ಸಾವನ್ನ ಭಾತೃವು. ಇಲ್ಲಾದರೂ ಜೇಷ್ಠ ಕನಿಷ್ಠಾದಿ ವಿಷಯವು ಮೊದಲು ಹೇಳಿದಂತೆಯೇ, ಕೆಲವರು ಪುತ್ರಿ ಹಾಗೂ ಪುತ್ರಿಯ ಪುತ್ರರಿಗೆ ಧನಸ್ವಾಮಿತ್ವವಿದ್ದರೂ ವಿಭಕ್ತನಾದ ಅಸಂಸೃಷ್ಟನಿಗೆ ದಾಹಾದಿಗಳನ್ನು ಭ್ರಾತೃವೇ ಮಾಡತಕ್ಕದ್ದು. ಯಾಕಂದರೆ ಸಗೋತ್ರರಿರುವಾಗ ಭಿನ್ನಗೋತ್ರದವರಿಗೆ ಅಧಿಕಾರ ಬರುವದಿಲ್ಲವೆಂದು ಹೇಳುವರು. ಭ್ರಾತೃವಿನ ಅಭಾವದಲ್ಲಿ ಭಾತೃಪುತ್ರನು ಅಧಿಕಾರಿಯು, ಅದರಲ್ಲೂ ಸೋದರಭಾತೃಪುತ್ರನು ಮುಖ್ಯನು. ಅವನ ಅಭಾವದಲ್ಲಿ ಸಾಪತ್ರ ಭ್ರಾತೃಪುತ್ರನು, ಅವನ ಅಭಾವದಲ್ಲಿ ತಂದೆಯು, ತಂದೆಯ ಅಭಾವದಲ್ಲಿ ತಾಯಿಯು, ತಾಯಿಯ ಅಭಾವದಲ್ಲಿ ಸೊಸೆ, ಅವಳ ಅಭಾವದಲ್ಲಿ ಅಕ್ಕ, ತಂಗಿ, ಅವರಲ್ಲಾದರೂ ಹಿರಿ-ಕಿರಿಯರಿದ್ದರೆ ಹಿಂದೆ ಹೇಳಿದ ಭ್ರಾತೃಗಳಂತೆಯೇ ನಿರ್ಣಯವು. ಭಗಿನಿಯ ಅಭಾವದಲ್ಲಿ ಭಗಿನೀಪುತ್ರನು ಸಮುದಾಯವಿದ್ದಲ್ಲಿ ಹಿಂದಿನಂತೆಯೇ, ಅವರ ಅಭಾವದಲ್ಲಿ “ಪಿತೃವ್ಯ (ಪಿತೃಭ್ರಾತೃಗಳು) ಅವರ ಪುತ್ರರು ಮೊದಲಾದ ಸಪಿಂಡರು, ಅವರ ಅಭಾವದಲ್ಲಿ ಸೋದರಕರು, ಅವರ ಅಭಾವದಲ್ಲಿ ಸಗೋತ್ರರು, ಅವರ ಅಭಾವದಲ್ಲಿ ಮಾತಾಮಹ, ಮಾತುಲ, ಅವರ ಪುತ್ರಾದಿ ಮಾತೃಸಪಿಂಡರು, ಅನುಕ್ರಮದಿಂದ ಮಾತೃಸಪಿಂಡರು ಇಲ್ಲದಾಗ ತನ್ನ ತಂದೆಯ ತಂಗಿ, ಮಾತೃವಿನ ತಂಗಿ, ಅವರ ಪುತ್ರರು, ಅವರು ಇಲ್ಲದಾಗ ತನ್ನ ತಂದೆಯ ಅಕ್ಕ-ತಂಗಿಯರು ಮೊದಲಾದವರ ಪುತ್ರರೂಪ ಮಾತ್ರಬಂಧುಗಳು, ಪಿತೃಬಂಧುಗಳು ಇಲ್ಲದಾಗ ಶಿಷ್ಯ, ಅಳಿಯ (ಅಳಿಯನಿಗೆ ಮಾವ, ಮಾವನಿಗೆ ಅಳಿಯ) ಅವರು ಇಲ್ಲದಾಗ ಮಿತ್ರ, ನಂತರ ಬ್ರಾಹ್ಮಣನಾದವನ ಯಾವನೋ ಒಬ್ಬ “ಧನಹಾರಿ” ಬ್ರಾಹ್ಮಣನಲ್ಲದಿದ್ದರೆ ಅವನ ಧನವನ್ನು ರಾಜನು ತೆಗೆದುಕೊಂಡು ಆ ಧನದಿಂದ ಬೇರೆಯವರ ಕಡೆಯಿಂದ ಕ್ರಿಯಾಚರಣೆ ಮಾಡಿಸುವದು. ಬ್ರಾಹ್ಮಣನು ಮರಣೋನ್ಮುಖಿಸಿದ್ದಾಗ “ಧರ್ಮಪುತ್ರ"ನೆಂದು ಯಾವನನ್ನಾದರೂ ಅಧಿಕಾರಿಯನ್ನಾಗಿ ಮಾಡಿಕೊಳ್ಳಬಹು. ಸ್ತ್ರೀಯರಿಗೆ ದಾಹಾದಿ ಅಧಿಕಾರಿಗಳು ವಿವಾಹವಾಗದಿರುವ ಸ್ತ್ರೀಗೆ ತಂದೆಯು ದಾಹಾದೃಧಿಕಾರಿಯು, ಅವನು ಇಲ್ಲದಾಗ ಅಣ್ಣ- ಪರಿಚ್ಛೇದ ೩ ಉತ್ತರಾರ್ಧ ತಮ್ಮಂದಿರು. ವಿವಾಹವಾದವಳಿಗೆ ಪುತ್ರರಿಲ್ಲದೆಹೋದರೆ ಸವತಿಪುತ್ರ. ಅವನು ಇಲ್ಲದಾಗ ಪೌತ್ರ, ಪ್ರಪೌತ್ರರು, ಅವರು ಇಲ್ಲದಾಗ ಪತಿಯು, ಅವನು ಇಲ್ಲದಾಗ ಪುತ್ರಿಯು, ಅವಳು ಇಲ್ಲದಲ್ಲಿ ದೌಹಿತ್ಯ, ಅವನು ಇಲ್ಲದಾಗ ಪತಿಯ ಅಣ್ಣ-ತಮ್ಮಂದಿರು, ಅವರು ಇಲ್ಲದಾಗ ಪತಿಯ ಅಣ್ಣ- ತಮ್ಮಂದಿರ ಪುತ್ರರು, ಅವರು ಇಲ್ಲದಾಗ ಸೊಸೆ, ಅವಳು ಇಲ್ಲದಾಗ ತಂದೆ, ತಂದೆಯು ಇಲ್ಲದಾಗ ಅಣ್ಣ-ತಮ್ಮಂದಿರು, ಅವರು ಇಲ್ಲದಾಗ ಅಣ್ಣ-ತಮ್ಮಂದಿರ ಪುತ್ರಾದಿ ಹಿಂದೆ ಹೇಳಿದವರು. ಈ ಎಲ್ಲ ಕಡೆಯಲ್ಲಿ ಪುತ್ರ ಹೊರತಾದವರಿಗೆ ಪುತ್ರನು ಸನ್ನಿಧಿಯಲ್ಲಿರದಿದ್ದಾಗ ಅಥವಾ ಪುತ್ರರಿಲ್ಲದಾಗ ಕರ್ತೃತ್ವಪ್ರಾಪ್ತಿಯೆಂದು ತಿಳಿಯುವದು. ಉತ್ತರಕ್ರಿಯಾ ಕರ್ತವ್ಯಾಕರ್ತವ್ಯ ನಿರ್ಣಯ ಪುತ್ರನು ಸನ್ನಿಧಿಯಲ್ಲಿಲ್ಲದಾಗ ಕರ್ತೃವು ಬೇರೆಯವನಾದರೆ ಅವನು ದಾಹವನ್ನಾರಂಭಿಸಿ ಸಪಿಂಡೀಕರಣದ ವರೆಗಿನ ಕರ್ಮಗಳನ್ನು ಮಾಡತಕ್ಕದ್ದು. ಸಪಿಂಡೀಕರಣವನ್ನು ಪುತ್ರರ ಹೊರತು ಬೇರೆಯವರು ಮಾಡತಕ್ಕದ್ದಲ್ಲ. ಪುತ್ರರಿಲ್ಲದವರಿಗೆ ಅನ್ಯರು ಸಪಿಂಡೀಕರಣ ಮಾಡಬಹುದು. ಅದರಲ್ಲಿ ದಾಹಾದಿ ದಶಾಹದ ವರೆಗಿನ ಕಾರ್ಯಗಳಿಗೆ ಸಪಿಂಡಾದಿ ರಾಜನ ವರೆಗಿನವರಿಗೆಲ್ಲರಿಗೂ ಅಧಿಕಾರವಿದೆ. ಅದಕ್ಕೆ “ಪೂರ್ವಕ್ರಿಯೆ"ಯೆನ್ನುವರು. ಆಮೇಲೆ ಏಕಾದಶಾಹದಿಂದ ಸಪಿಂಡೀಕರಣಾಂತದವರೆಗಿನ ಕ್ರಿಯೆಗೆ “ಮಧ್ಯಮಕ್ರಿಯೆ"ಯನ್ನುವರು. ಇದನ್ನು ಸಪಿಂಡರು ಮಾಡಲೂಬಹುದು, ಬಿಡಲೂಬಹುದು. ನಂತರದ ಅನುಮಾಸಿಕ ಸಾಂವತ್ಸರಿಕಾದಿಗಳಿಗೆ “ಉತ್ತರಕ್ರಿಯೆ"ಯನ್ನುವರು. ಇದನ್ನು ಸಪಿಂಡಾದಿಗಳು ಮಾಡತಕ್ಕದ್ದಲ್ಲ, ಇದು ಮೃತನ ಚರ, ಸ್ಥಿರ ಸ್ವತ್ತನ್ನು ಸ್ವೀಕರಿಸದವರ ಸಲುವಾಗಿ ಹೇಳಿದ್ದು. ಸ್ವತ್ತಿಗಧಿಕಾರಿಯಾದ ಯಾವ ಸಪಿಂಡನಾದರೂ ಈ ಮೂರು ಕ್ರಿಯೆಗಳನ್ನೂ ಮಾಡತಕ್ಕದ್ದೇ. ಇವನು ರಾಜನಿಗೆ ಸ್ವತ್ತು ಸೇರಿದರೆ, ಮೃತನು ಧನಿಕನಾಗಿದ್ದರೆ ಆ ಧನವನ್ನು ಜಾತೀಯ ಯಾವನಿಗಾದರೂ ಕೊಟ್ಟು ಅವನ ಕಡೆಯಿಂದ ಎಲ್ಲ ಕರ್ಮವನ್ನೂ ಮಾಡಿಸಬೇಕು. ಧನವಿಲ್ಲದಿದ್ದಾಗ ಪೂರ್ವಕ್ರಿಯೆಯನ್ನು ಪೂರ್ತಿಯಾಗಿ ಮಾಡಬೇಕು. ಉಳಿದ ಕ್ರಿಯೆಗಳನ್ನು ಮಾಡಿಸುವದವಶ್ಯವಿಲ್ಲ. ಸಪಿಂಡಾದಿ ರಾಜನವರೆಗಿನವರ ಅಭಾವದಲ್ಲಿ ಯಾವನಾದರೊಬ್ಬ ಜಾತೀಯನು ತನ್ನ ಧನದಿಂದ ಸಪಿಂಡೀಕರಣಾಂತ ಕ್ರಿಯೆಗಳನ್ನು ಮಾಡಿಸಬಹುದು. ರಾಜನ ವರೆಗಿನ ಜನರು ಮೃತನ ಧನವನ್ನು ತೆಗೆದುಕೊಂಡು ಪ್ರೇತಕಾರ್ಯವನ್ನು ಮಾಡದಿದ್ದರೆ ಆ ವರ್ಣದವನ ವಧೆ ಮಾಡಿದ ಪ್ರಾಯಶ್ಚಿತ್ತವನ್ನು ಹೇಳಿದೆ. ಪುತ್ರಾದಿ ಭ್ರಾತೃಸಂತತಿವರೆಗಿನವರು ಮತ್ತು ದೌಹಿತ್ಯ ತತ್ಪುತ್ರರು ಧನಸ್ವೀಕಾರ ಮಾಡಲಿ, ಮಾಡದಿರಲಿ ತಮ್ಮ ಕರ್ತವ್ಯವೆಂದು ಮೂರು ವಿಧದ ಕ್ರಿಯೆಗಳನ್ನು ಮಾಡಲೇಬೇಕು. ಸ್ತ್ರೀಯರಿಗೆ “ಉತ್ತರಕ್ರಿಯೆ (ಮಾಸಿಕಾದಿ) ಯನ್ನು ಮೃತಾಹದಲ್ಲಿಯೇ ಮಾಡತಕ್ಕದ್ದು. ಹೊರತು ದರ್ಶಾದಿಗಳಲ್ಲಲ್ಲ. ಅಲ್ಲಿ ಪತಿಯ ಶ್ರಾದ್ಧದಿಂದಲೇ ಅವರ ಶ್ರಾದ್ಧವೂ ನಿರ್ವಹಿಸುವದು” ಹೀಗೆ ಸ್ಮೃತಿವಚನವಿದೆ. ಪೂರ್ವ ಹಾಗೂ ಮಧ್ಯಮ ಕ್ರಿಯೆಯನ್ನು ಸ್ತ್ರೀಯರಿಗೆ ಪ್ರತ್ಯೇಕವಾಗಿಯೇ ಮಾಡತಕ್ಕದ್ದು. ಕೆಲವರು ಸ್ತ್ರೀಯರಿಗೆ ಪತಿ ಪುತ್ರರಿಲ್ಲದಾಗ ದೌಹಿತ್ರ ಮೊದಲಾದವರು ಉತ್ತರ (ಮಾಸಿಕಾದಿ) ಕಾರ್ಯಗಳನ್ನು ಸಪಿಂಡೀಕರಣ ರಹಿತವಾಗಿಯೇ ಮಾಡತಕ್ಕದ್ದು, ಸಪಿಂಡೀಕರಣವನ್ನು ಮಾಡತಕ್ಕದ್ದಿಲ್ಲ. ಸಪಿಂಡೀಕರಣವಿಲ್ಲದಿದ್ದರೂ ಏಕೋದ್ದಿಷ್ಟವಿಧಿಯಿಂದ ವಾರ್ಷಿಕಾದಿಗಳನ್ನು ಮಾಡತಕ್ಕದ್ದೆಂದು ೪೧೦ ಧರ್ಮಸಿಂಧು ಹೇಳುವರು. ಬ್ರಾಹ್ಮಣನು ಅನ್ಯಜಾತಿಯವರ ಪೈತೃಕಕಾರ್ಯವನ್ನು ಮಾಡಬಾರದು. ಸ್ಟೇಚ್ಛೆಯಿಂದ ಅಥವಾ ಭಯದಿಂದ ಇಲ್ಲವೆ ಲೋಭದಿಂದ ಮಾಡಿದಲ್ಲಿ ಆ ಜಾತಿತ್ವವನ್ನೇ ಹೊಂದುವನು. ಶೂದ್ರನಾದರೂ ಬ್ರಾಹ್ಮಣನ ಪೈತ್ಯಕ ಕರ್ಮವನ್ನು ಮಾಡಬಾರದು. ದತ್ತಕನ ಕರ್ತವ್ಯ ನಿರ್ಣಯ ದತ್ತಕನು ಜನಕತಂದೆಗೆ ಪುತ್ರರಿಲ್ಲದಿದ್ದರೆ ಅವನ ಶ್ರಾದ್ಧವನ್ನು ಮಾಡಬೇಕು. ಮತ್ತು ಅವನ ಧನವನ್ನೂ ಸ್ವೀಕರಿಸತಕ್ಕದ್ದು. ಜನಕ ಪಾಲಕರಿಬ್ಬರಿಗೂ ಪುತ್ರರಿಲ್ಲದಿದ್ದರೆ ಆ ಇಬ್ಬರ ಧನವನ್ನೂ ಸ್ವೀಕರಿಸುವದು. ಇಬ್ಬರಿಗೂ ಪ್ರತಿವಾರ್ಷಿಕ ಶ್ರಾದ್ಧವನ್ನು ಮಾಡಬೇಕು. ದರ್ಶ, ಮಹಾಲಯಾದಿಗಳಲ್ಲಿ ಅವರಿಬ್ಬರಿಗೂ ಶ್ರಾದ್ಧವನ್ನು ಕೊಡಬೇಕು. ಇಬ್ಬರಿಗೂ ಪ್ರಕೃತ್ಯೇಕ ಪಿಂಡದಾನ ಮಾಡತಕ್ಕದ್ದು. ಎರಡು ಪಿತೃಗಳ ಉದ್ದೇಶದಿಂದ ಒಂದೊಂದನ್ನಾಗಲೀ ಪಿಂಡವನ್ನು ಕೊಡುವದು. ಹೀಗೆ ದತ್ತಕನ ಪುತ್ರನಾದರೂ ದತ್ತಕನ ಜನಕನಿಗೆ ಪುತ್ರಾದಿಗಳಿರದಿದ್ದರೆ ತನ್ನ ಪಿತೃವನ್ನೂ, ಪಿತಾಮಹದ್ವಯ, ಪ್ರಪಿತಾಮಹದ್ವಯವನ್ನೂ ಉಚ್ಚರಿಸಿ ದರ್ಶಾದಿಗಳನ್ನು ಮಾಡತಕ್ಕದ್ದು. ಮತ್ತು ಧನವನ್ನೂ ಸ್ವೀಕರಿಸತಕ್ಕದ್ದು. ಹೀಗೆ ದತ್ತಕನ ಪೌತ್ರನಾದರೂ ಆತನ ಜನಕಕುಲದಲ್ಲಿ ಪ್ರಪಿತಾಮಹನಿಗೆ ಪುತ್ರಾದಿಗಳಿರದಿದ್ದಲ್ಲಿ ಪಿತನನ್ನೂ, ಪಿತಾಮಹನನ್ನೂ ಒಂಟಿಯಾಗಿ ಉಚ್ಚರಿಸಿ, ಪ್ರಪಿತಾಹಮದ್ವಯವನ್ನುಚ್ಚರಿಸಿ, ದರ್ಶಾದಿಶ್ರಾದ್ಧವನ್ನು ಮಾಡತಕ್ಕದ್ದು. ಪ್ರಪಿತಾಮಹನ ಧನವನ್ನೂ ಸ್ವೀಕರಿಸತಕ್ಕದ್ದು. ಯದೃಪಿ ಇವರಿಗೆ ತಮ್ಮ ಪತ್ನಿಯರಲ್ಲಿ ಸಂತತಿಯಿಲ್ಲದಿದ್ದರೆ ದತ್ತಕನು ಅಥವಾ ಅವನ ಪುತ್ರಾದಿಗಳು ತ್ರಿಪುರುಷರಿಗೆ ಪಿಂಡವನ್ನು ಕೊಟ್ಟು ಅವರ ಧನವನ್ನು ತೆಗೆದುಕೊಳ್ಳುವದು. ಒಂದು ಪಿಂಡದ ಸ್ಥಾನದಲ್ಲಿ ದತ್ತಕ ತೆಗೆದುಕೊಂಡ ತಂದೆ ಮತ್ತು ಜನಕತಂದ ಈ ಇಬ್ಬರನ್ನುಚ್ಚರಿಸುವದು. ಈ ರೀತಿಯಿಂದ ಮೂರು ತಲೆಗಳ ವರೆಗೆ ಎಂದು “ಲೌಗಾಕ್ಷಿಸ್ಮೃತಿ ವಚನವಿದೆ. ಇನ್ನು ಜನಕಪಿತೃ ಮತ್ತು ಪಾಲಕಪಿತೃ ಈ ಇಬ್ಬರಿಗೂ ಸಂತತಿಯಿದ್ದರೆ ದತ್ತಕನು ಆ ಇಬ್ಬರ ಅಂತ್ಯಕರ್ಮ ಮತ್ತು ವಾರ್ಷಿಕಾಗಿ ಶ್ರಾಸ್ತ್ರಗಳನ್ನು ಮಾಡತಕ್ಕದ್ದಲ್ಲ. ಪಾಲಕ ತಂದೆಗೆ ಔರಸಪುತ್ರನಿದ್ದು ಅವನಿಂದ ದತ್ತಕನು ವಿಭಕ್ತನಾಗಿದ್ದರೆ ಆಗ ದರ್ಶ, ಮಹಾಲಯಾದಿ ಶಾಸ್ತ್ರಗಳನ್ನು ಮಾತ್ರ ಪಾಲಕತಂದೆಯ ಪಾರ್ವಣದ ಉದ್ದೇಶದಿಂದ ಮಾಡತಕ್ಕದ್ದು. ಅವಿಭಕ್ತನಾಗಿದ್ದರೆ ಔರಸಪುತ್ರನು ಮಾಡಿದ ದರ್ಶಾದಿಶಾಸ್ತ್ರಗಳಿಂದಲೇ ದತ್ತಕನಿಗೂ ದರ್ಶಾದಿಶಾದವು ಸಿದ್ಧಿಸುವದು. ಹೀಗೆಂದು ತೋರುತ್ತದೆ. ಬ್ರಹ್ಮಚಾರಿ ವಿಷಯ ನಿರ್ಣಯ ಬ್ರಹ್ಮಚಾರಿಯ ಮಾಸಿಕ, ಅಭಿಕಾರಿ ಶ್ರಾದ್ಧವನ್ನು ಮಾತಾಪಿತೃಗಳು ಮಾಡತಕ್ಕದ್ದು. ಬ್ರಹ್ಮಚಾರಿಯಾದವನು ಮಾತೃ, ಪಿತೃ, ಮಾತಾಮಹ, ಉಪಾಧ್ಯಾಯ, ಆಚಾರ್ಯ ಇವರಿಂದ ಹೊರತಾದವರ ಶವದಹನ, ದಾಹಾದಿ ಅಂತ್ಯಕರ್ಮ ಮೊದಲಾದವುಗಳನ್ನು ಮಾಡಬಾರದು. ಬೇರೆ ಅಧಿಕಾರಿಗಳಿಲ್ಲದಿದ್ದರೆ ಮಾತೃ, ಪಿತೃ, ಮಾತಾಮಹ, ಆಚಾರ್ಯ ಇವರ ದಾಹಾದಿಗಳನ್ನು ಬ್ರಹ್ಮಚಾರಿಯು ಮಾಡತಕ್ಕದ್ದು, ಈ ಸಂದರ್ಭದಲ್ಲಿ ದಶಾಹಕರ್ಮಮಾಡಿದಲ್ಲಿ ದಶಾಹ ಆಶೌಚವು. ಬರೇ ದಹನ ಮಾಡಿದರೆ ಒಂದುದಿನದ ಆಶೌಚವು ಈ ಆಶೌಚದಲ್ಲಾದರೂ ಬ್ರಹ್ಮಚಾರಿಗೆ ನಿತ್ಯ ಕರ್ಮಕ್ಕೆ ಲೋಪವಿಲ್ಲ. ತಾನು ಅಶುಚಿತ್ವದಲ್ಲಿದ್ದರೂ ಆಶೌಚಿಗಳ ಅನ್ನವನ್ನು ಬ್ರಹ್ಮಚಾರಿಯು ಪರಿಚ್ಛೇದ - ೩ ಉತ್ತರಾರ್ಧ ಭೋಜನಮಾಡಬಾರದು. ಅವರೊಡನೆ ವಾಸವಾಗಿರಕೂಡದು. ಮಾಡಿದರೆ ಪ್ರಾಯಶ್ಚಿತ್ತ ಮತ್ತು ಪುನರುಪನಯನವನ್ನು ಹೇಳಿದೆ. ಬೇರೆಯವರ ದಹನಮಾಡಿದರೆ ಮೂರು ಕೃಷ್ಣ ಮತ್ತು ಪುನರುಪನಯನವು, ಸ್ವಜಾತಿಯವನು ನಿರ್ಗತಿಕನಾಗಿ ಮೃತನಾದಲ್ಲಿ, ಯಾವನಾದರೂ ಸ್ವಬುದ್ಧಿಯಿಂದ ದಾಹಾದಿ ಶ್ರಾದ್ಧಗಳನ್ನು ಮಾಡಿದರೆ ಸಂಪತ್ತು ಮೊದಲಾದ ಫಲವನ್ನು ಹೇಳಿದೆ. ಸ್ತ್ರೀಶೂದ್ರಾದಿ ಕರ್ತವ್ಯ ನಿರ್ಣಯ “I ಹೇಳಿದ ಎಲ್ಲ ಶ್ರಾದ್ಧಾದಿಗಳನ್ನೂ ಶೂದ್ರರಿಗೆ ಅಮಂತ್ರಕವಾಗಿ ಮಾಡತಕ್ಕದ್ದು. ಈ ವಿಷಯದಲ್ಲಿ ಕೆಲವರು ಶೂದ್ರರಿಗೆ ವೈದಿಕಮಂತ್ರಮಾತ್ರ ನಿಷಿದ್ದವೇ ಹೊರತು ಪೌರಾಣಮಂತ್ರಗಳಡ್ಡಿಯಿಲ್ಲವೆನ್ನುವರು. ಪೌರಾಣಮಂತ್ರಗಳನ್ನಾದರೂ ಶೂದ್ರನು ತಾನು ಪರಿಸತಕ್ಕದ್ದಲ್ಲ. ಬ್ರಾಹ್ಮಣದ್ವಾರಾ ಪಠಿಸಲಡ್ಡಿಯಿಲ್ಲ. ಶೂದ್ರರಬಗ್ಗಾಗಿ ಬ್ರಾಹ್ಮಣನೇ ಆದರೂ ವೇದಮಂತ್ರವನ್ನು ಹೇಳಬಾರದು ಎಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. ಬ್ರಾಹ್ಮಣಸ್ತ್ರೀಯರಾದರೂ ವ್ರತೋದ್ಯಾಪನ ಮೊದಲಾದವುಗಳಲ್ಲಿಯಂತೆ ಸಂಕಲ್ಪವನ್ನು ಮಾತ್ರ ತಾನು ಮಾಡಿ ವೈದಿಕಮಂತ್ರಯುಕ್ತವಾಗಿ ಎಲ್ಲ ಶ್ರಾದ್ಧವನ್ನು ಬ್ರಾಹ್ಮಣದ್ವಾರಾ ಮಾಡಿಸತಕ್ಕದ್ದೆಂದು “ಪಾರಿಜಾತ"ಕಾರರ ಮತವು ಶೂದ್ರರಿಗೆ ಯಾವಾಗಲೂ ಆಮಶ್ರಾದ್ಧವೇ ಉಕ್ತವಾಗಿದೆ “ಪಿತೇನಮಃ, ಪಿತಾಮಹಾಯನಮಃ ಇತ್ಯಾದಿ ನಮಃ ಅಂತವಾದ ನಾಮಮಂತ್ರದಿಂದ ನಿಮಂತ್ರಣ, ಪಾದ್ಯ, ಆಸನ, ಗಂಧ, ಪುಷ್ಪ ಮೊದಲಾದವುಗಳಿಂದ ಬ್ರಾಹ್ಮಣರನ್ನರ್ಚಿಸಿ ಆಮದ್ರವ್ಯವನ್ನರ್ಪಿಸಿ ಹಿಟ್ಟಿನಿಂದ, ಪಿಂಡದಾನಾದಿಗಳಿಂದ ಮತ್ತು ದಕ್ಷಿಣಾದಾನಾದಿಗಳಿಂದ ಶ್ರಾದ್ಧವನ್ನು ಮುಗಿಸಿ, ಸಮಾನಜಾತಿಯವರನ್ನು ಗೃಹಸಿದ್ಧವಾದ ಪಕ್ವಾನ್ನದಿಂದ ಭೋಜನಮಾಡಿಸುವದು. ನಿರ್ಣಯಸಿಂಧುವಿನಲ್ಲಿ -ನಾಮಮಂತ್ರದಿಂದ ಆವಾಹನ, ಅಗೌಕರಣ, ಕಾಶ್ಯಪಗೋತ್ರೋಚ್ಚಾರಪೂರ್ವಕ ಪಿಂಡದಾನ, ತರ್ಪಣಾದಿ, ಪಾಕಾನ್ನದಿಂದ ಪಿಂಡದಾನ ಇವುಗಳನ್ನು ಹೇಳಿದೆ. ಆದರೆ ಅದು ಸತ್ತೂದ್ರರ ವಿಷಯವು. ಏಳು ತಲೆಮಾರಿನಿಂದ ಅಥವಾ ಮೂರು ತಲಗಳಿಯಿಂದ ಪರಂಪರಾಗತವಾದ ಸ್ನಾನ, ವೈಶ್ವದೇವ ತರ್ಪಣಾದಿಗಳನ್ನು ‘ಶೂದ್ರಕಮಲಾಕ’ರಾದಿ ಗ್ರಂಥಾನುಸಾರ ನಿಯಮಗಳನ್ನಾಚರಿಸುವವನೇ “ಸಚ್” ನು. ಹೀಗೆ ಕಿರಾತ, ಯವನ ಮೊದಲಾದ ಹೀನ ಜಾತಿಯವರು ಬ್ರಾಹ್ಮಣರಿಗೆ ಆಮದಾನ, ದಕ್ಷಿಣಾದಾನ ಪೂರ್ವಕವಾಗಿ ತಮ್ಮ ತಮ್ಮ ಜಾತಿಯರನ್ನು ಭೋಜನ ಮಾಡಿಸತಕ್ಕದ್ದು, ಇದೇ ಅವರಿಗೆ “ಶ್ರಾದ್ಧವು. ರಾಜಕಾರ್ಯನಿರತನಾದವ, ಕಾರಾಗೃಹಾದಿ ಬಂಧನದಲ್ಲಿರುವವ ಇತ್ಯಾದಿ ಆಪತ್ತಿನಲ್ಲಿರುವವರಾದರೂ ಶ್ರಾದ್ಧವನ್ನು ಬ್ರಾಹ್ಮಣನಿಂದ ಮಾಡಿಸುವದು. ಈ ಮೊದಲು ಜೀವತೃಕನಿರ್ಣಯ ಪ್ರಸಂಗಾನುಸಾರ ಕೆಲ ಅಧಿಕಾರ ವಿಚಾರವನ್ನೂ ಹೇಳಿ ಈಗ ಸಮಗ್ರ ಅಧಿಕಾರ ವಿಷಯವನ್ನು ಸವಿಸ್ತರವಾಗಿ ಹೇಳಲಾಯಿತು. ಹೀಗೆ ಹೇಳಿದ್ದರಿಂದ ಉಂಟಾದ “ಪುನರುಕ್ತಿ"ಯು ಅಜ್ಞರ ತಿಳಿವಳಿಕೆಗಾಗಿರುವದರಿಂದ ದೋಷಕರವಾಗಲಾರದು. ಹೀಗೆ ಶಾರಾದ್ಯಧಿಕಾರ ನಿರ್ಣಯವು ಶ್ರಾದ್ಧ ಶಬ್ದಾರ್ಥ ಮೃತರಾದ ಪಿತ್ರಾದಿಗಳನ್ನುದ್ದೇಶಿಸಿ ವಿಹಿತವಾದ ಕಾಲ, ದೇಶಗಳಲ್ಲಿ ಪಕ್ವಾನ್ನ, ಆಮಾನ್ನ, ೪೧೨ ಧರ್ಮಸಿಂಧು ಹಿರಣ್ಯ ಇವುಗಳೊಳಗೆ ಯಾವದಾದರೊಂದನ್ನು ವಿಧಿಪೂರ್ವಕವಾಗಿ ಕೊಡುವದಿದು “ಶ್ರಾದ್ಧವು ಇದರಲ್ಲಿ ಅಕರಣ, ಪಿಂಡದಾನ, ಬ್ರಾಹ್ಮಣ ಭೋಜನ” ಇವು ಪ್ರಧಾನವು. “ಹೋಮ, ಪಿಂಡದಾನ, ಬ್ರಾಹ್ಮಣ ಭೋಜನ ಈ ಮೂರು ಕೂಡಿ ಆದ ಕರ್ಮವಿಶೇಷವು “ಶ್ರಾದ್ಧವೆಂಬ ಹೆಸರುಳ್ಳದ್ದು. " ಹೀಗೆ ಉಕ್ತಿಯಿದೆ. ಅಶಕ್ತಿ ಮೂಲಕ ಪಿಂಡದಾನಾದಿಗಳನ್ನು ಮಾಡಲಾಗದಾಗ ಬರೇ ಬ್ರಾಹ್ಮಣಭೋಜನ ಮಾಡಿಸಿದರೂ ಅದೂ ಶ್ರಾದ್ಧವೆಂದೇ ಅನ್ನಿಸುವದು. ಹೀಗೆ ವಚನವೂ ಇದೆ. ಹೇಳಿದ ಶ್ಲೋಕದಲ್ಲಿ “ಹೋಮಂ ಚ” ಎಂಬ ಚತುರ್ಥಪಾದದ ಅರ್ಥವೂ ಹೀಗೇ ಆಗುವದು. ಬೇರೆ ವಚನಗಳೂ ಇವೆ. ಏನೆಂದರೆ-ಋಗೈದಿಗಳಿಗೆ ಬ್ರಾಹ್ಮಣಾರ್ಚನೆ, ಯಜುರ್ವೇದಿಗಳಿಗೆ ಪಿಂಡದಾನ, ಸಾಮವೇದಿಗಳಿಗೆ ಈ ಎರಡೂ “ಶ್ರಾದ್ಧಶಬ್ದದ ಅಭಿಧೇಯ’ವು ಅಶ್ರದ್ಧೆಯಿಂದ ಪಿತೃಗಳೇ ಇಲ್ಲವೆಂದು ತಿಳಿದು ಶ್ರಾದ್ಧ ಮಾಡದಿದ್ದರೆ ಪಿತೃಗಳು ರಕ್ತವನ್ನು ಕುಡಿಯುವರು. ಇತ್ಯಾದಿ ಶ್ರಾದ್ಧ ಭೇದಗಳು ಶ್ರಾದ್ಧದಲ್ಲಿ ಪಾರ್ವಣ, ಏಕೋದ್ದಿಷ್ಟ, ನಾಂದೀಶ್ರಾದ್ಧ, ಸಪಿಂಡೀಕರಣ ಹೀಗೆ ನಾಲ್ಕು ಭೇದಗಳಿವೆ. ಈಗ ಪಾರ್ವಣ ವಿಚಾರ, ಪಿತ್ರಾದಿತ್ರಯದ ಉದ್ದೇಶದಿಂದ ವಿಹಿತವಾದ ಮೂರು ಪಿಂಡಗಳಿಂದ ಯುಕ್ತವಾದ ಶ್ರಾದ್ಧಕ್ಕೆ “ಪಾರ್ವಣ ಶ್ರಾದ್ಧವೆನ್ನುವರು. ಇದರಲ್ಲಾದರೂ ಏಕಪಾರ್ವಣ, ದ್ವಿಪಾರ್ವಣ, ತ್ರಿಪಾರ್ವಣ ಹೀಗೆ ಮೂರು ವಿಧವಿದೆ. ಪಿತ್ರಾದಿಗಳ ಮೃತತಿಥಿಯಲ್ಲಿ ಮಾಡತಕ್ಕ “ಪ್ರತಿಸಾಂವತ್ಸರಿಕ"ವು “ಏಕಪಾರ್ವಣಕವು. ಮಹಾಲಯ, ಅನ್ನಷ್ಟಕ್ಕೆ ಹೊರತಾದ ಅಮಾವಾಸ್ಕಾದಿ ಷಣ್ಣವತಿಶ್ರಾದ್ಧ, ನಿತ್ಯಶ್ರಾದ್ಧಗಳು “ದ್ವಿಪಾರ್ವಣಕ"ವು. ಇವುಗಳಲ್ಲಿ “ಸಪತ್ನಿಕ ಪಿತ್ರಾದಿತ್ರಯ, ಸವಕ ಮಾತಾಮಹಾದಿತ್ರಯ ಇವೆರಡು ಪಾರ್ವಣಗಳ ಉದ್ದೇಶವಿರುವದರಿಂದ ಇದು “ದ್ವಿಪಾರ್ವಣಕ” ವು. ಅನ್ನಷ್ಟಕಾಶ್ರಾದ್ಧವು “ತ್ರಿಪಾರ್ವಣಕ"ವು. ಯಾಕೆಂದರೆ ಇದರಲ್ಲಿ ಪಿತ್ರಾದಿತ್ರಯ, ಮಾತಾದಿತ್ರಯ, ಸಪಕ ಮಾತಾಮಹಾದಿತ್ರಯ ಹೀಗೆ ಮೂರು ಪಾರ್ವಣಗಳ ಉದ್ದೇಶವಾಗುವಿಕೆಯಿಂದ ಇದು “ತ್ರಿಪಾರ್ವಣಕ"ವು. ಮಹಾಲಯಶಾಸ್ತ್ರ ಮತ್ತು ತೀರ್ಥಶ್ರಾದ್ಧ ಇವು “ಪಾರ್ವ ಕೋಷ್ಟರೂಪಗಳಾಗಿವೆ. ಯಾಕೆಂದರೆ ಇದರಲ್ಲಿ ಪಿತ್ರಾದಿ ಪಾರ್ವಣತ್ರಯ, ಪಾದಿ ಏಕೋದ್ದಿಷ್ಟಗಣಗಳ ಉದ್ದೇಶವು ಇವುಗಳಲ್ಲಿದೆ. ಕೆಲವರ ಮತದಂತೆ ಸಪತ್ನಿಕ ಮಾತಾಮಹಾದಿಗಳನ್ನು ಹೇಳಿದೆ ಪ್ರತ್ಯೇಕವಾಗಿ ಮಾತಾಮಹಾದಿತ್ರಯ, ಮಾತಾಮಹಾದಿತ್ರಯ ಹೀಗೆ ಪ್ರತ್ಯೇಕ ಪಾರ್ವಣಗಳನ್ನು ಹೇಳಿ “ನಾಲ್ಕು ಪಾರ್ವಣಗಳು ಎಂದಾಗುವದು. ಕೆಲವರ ಸೂತ್ರದಲ್ಲಿ ದರ್ಶವಾದರೂ “ತ್ರಿಪಾರ್ವಣಕ” ಇಲ್ಲವೆ “ಚತುಃಪಾರ್ವಣಕ” ಎಂದು ಹೇಳಿದೆಯೆಂದು ಹೇಮಾದ್ರಿಯಲ್ಲಿ ಉಕ್ತವಾಗಿದೆ. ಏಕೋದ್ದಿಷ್ಟಾದಿ ವಿಚಾರ ಒಂದೇ ಒತನ ಉದ್ದೇಶ, ಏಕಪಿಂಡ ವಿಧಾನ ಹೀಗೆ ಮಾಡುವ ಶ್ರಾದ್ಧಕ್ಕೆ “ಏಕೋದ್ದಿಷ್ಟ"ವನ್ನುವರು. ಏಕೋದ್ದಿಷ್ಟದಲ್ಲಾದರೂ ಮೂರು ವಿಧಗಳಿವೆ. ಮೃತನ ಮೃತದಿನಾರಭ್ಯ ದಶಾಹದ ವರೆಗೆ ಮಾಡುವ ಏಕೋಷ್ಟಕ್ಕೆ “ನವಸಂಜ್ಞಕವೆನ್ನುವರು. ಏಕಾದಶಾಹಾದಿ ಏನಾತ್ಮಕದ ವರೆಗೆ ಮಾಡುವ ಏಕೋಷ್ಟಕ್ಕೆ “ನವಮಿಶ್ರ"ವೆನ್ನುವರು. ಇವುಗಳಲ್ಲಿ ಪರಿಚ್ಛೇದ • ೩ ಉತ್ತರಾರ್ಧ ೪೧೩ ವಿಶ್ವೇದೇವತೆಗಳಿಲ್ಲ, ಅದಕ್ಕೂ ಮುಂದಿನ ಕನಿಷ್ಠ ಭ್ರಾತೃವಾರ್ಷಿಕ, ಶಸ್ತ್ರಹತ, ಚತುರ್ದಶೀ ಶ್ರಾದ್ಧಾದಿಗಳು “ಪುರಾಣಸಂಜ್ಞಕ ಗಳು. ಕೆಲವರು ಸಪೀಂಡಿಕರಣದ ನಂತರ ಮಾಡುವ ಪಾರ್ವಣಗಳಿಗೂ “ಪುರಾಣಸಂಜ್ಞಕ’ಗಳೆನ್ನುವರು. ಪುತ್ರಜನ್ಮ, ವಿವಾಹಾದಿಗಳಲ್ಲಿ ಮಾಡತಕ್ಕ ವೃದ್ಧಿ ಶ್ರಾದ್ಧಗಳಿಗೆ “ನಾಂದೀಶ್ರಾದ್ಧ’ವನ್ನುವರು. ಈ ವಿಷಯದ ವಿಸ್ತಾರವನ್ನು ಪೂರ್ವಾರ್ಧದಲ್ಲಿ ಹೇಳಿದೆ. ಗರ್ಭಾಧಾನ, ಪುಂಸವನ, ಸೀಮಂತ, ಆಧಾನ, ಸೋಮಯಾಗ, ಕರ್ಮಾಂಗವಾಗಿ ಮಾಡುವ ಇದೇ ಶ್ರಾದ್ದಕ್ಕೆ ‘ಇಷ್ಟಿಶ್ರಾದ್ಧ’ವೆಂದೂ ಹೇಳುವರು. ಇವುಗಳಲ್ಲಿ ಕ್ರತುದಕ್ಷಸಂಜ್ಞಕ ವಿಶ್ವೇದೇವತೆಗಳು. ಉಳಿದ ಕರ್ಮಗಳಲ್ಲಿ ಇದಕ್ಕೆ ‘ವೃದ್ಧಿ’ ಸಂಜ್ಞೆಯು ಬರುವದು. ಇವುಗಳಲ್ಲಿ ಸತ್ಯವನು ವಿಶ್ವೇದೇವತೆಗಳು. ಹೀಗೆ ನಾಮಭೇದ, ದೇವಭೇದಗಳು. ಉಳಿದೆಲ್ಲ ವಿಷಯಗಳೂ ಸಮಾನಗಳೇ. ಇದೂ ಸಹ ಪಾರ್ವಣತ್ರಯಯುಕ್ತವಾದದ್ದೇ ಇರುವದರಿಂದ ಪಾರ್ವಣಾಂತರ್ಗತವೇ ಆಗುವದು. ಆದರೂ ದರ್ಶಾದಿಗಳಿಗಿಂತ ಧರ್ಮ ಭೇದವಿರುವದರಿಂದ ಪೃಥಕ್ಕಾಗಿ ಹೇಳಿದೆ. ಮೃತನ ದ್ವಾದಶಾಹ ಮೊದಲಾದ ಉಕ್ತ ಕಾಲಗಳಲ್ಲಿ ಪಿಂಡಸಂಯೋಜನ, ಅರ್ಘಸಂಯೋಜನ ರೂಪವಾಗಿ ಮಾಡಿದ ಶ್ರಾದ್ಧಕ್ಕೆ “ಸಪಿಂಡೀಕರಣ"ವೆನ್ನುವರು. ಇದಾದರೂ ಪಾರ್ವಕೋದ್ದಿಷ್ಟರೂಪವಾದದ್ದೇ. ಈ ವಿಷಯದ ವಿಶೇಷವನ್ನು ಮುಂದೆ ಹೇಳಲಾಗುವದು. ಒಟ್ಟಿನಮೇಲೆ “ಪಾರ್ವಣ, ಏಕೋದ್ದಿಷ್ಟ” ಹೀಗೆ ಶ್ರಾದ್ಧದಲ್ಲಿ ಎರಡೇ ವಿಧವು. ಇದು ಪುನಃ ಮೂರು ವಿಧವಾಗುವದು. ನಿತ್ಯ, ನೈಮಿತ್ತಿಕ, ಕಾಮ್ಯ ಹೀಗೆ ಮೂರು ವಿಧವಾಗುವದು. ನಿಶ್ಚಿತವಾದ ನಿಮಿತ್ತದಿಂದ ಮಾಡುವದು “ನಿತ್ಯ"ವು. ದರ್ಶಶ್ರಾದ್ಧಾದಿಗಳು ನಿಶ್ಚಿತನಿಮಿತ್ತಕಗಳಾಗಿವೆ. ಪ್ರತಿದಿನ ಮಾಡುವ ಶ್ರಾದ್ಧವಾದರೂ ನಿತ್ಯವೇ. ಇವು ಎರಡು ಪಾರ್ವಣಯುಕ್ತಗಳು. ಸೂರ್ಯಗ್ರಹಣಾದಿಗಳು ಅನಿಯತಗಳು, ಅವುಗಳಲ್ಲಿ ಮಾಡುವ ಶ್ರಾದ್ಧವು “ನೈಮಿತ್ತಿಕಗಳಾಗುವವು. ಇದಾದರೂ ಪಡೇವತಾಕ (ಎರಡು ಪಾರ್ವಣ) ವಾದದ್ದು. ಫಲೇಚ್ಛೆಯಿಂದ ಮಾಡುವ ಶ್ರಾದ್ಧವು. “ಕಾಮ್ಯಶ್ರಾದ್ಧ"ವನ್ನಲ್ಪಡುವದು. ಪಂಚಮ್ಯಾದಿತಿಥಿ, ಕೃತ್ತಿಕಾದಿ ನಕ್ಷತ್ರ ಇತ್ಯಾದಿಗಳಲ್ಲಿ ಮಾಡಿದ ಶ್ರಾದ್ಧಕ್ಕೆ ವಿಶಿಷ್ಟಫಲವನ್ನು ಹೇಳಿದೆ. ಆದುದರಿಂದ ಇದು “ಕಾಮ"ವು. ಶ್ರಾದ್ಧದೇಶಗಳು ದಕ್ಷಿಣಕ್ಕೆ ತಗ್ಗಾಗಿರುವ, ಗೋಮಯದಿಂದ ಸಾರಿಸಿದ, ಕೃಮಿ, ಕೇಶ, ಸಿಂಬಳ ಮೊದಲಾದವುಗಳಿಂದ ರಹಿತವಾದ, ಕೃತ್ರಿಮ ಭೂಮಿಯಲ್ಲದ, ರಜಸ್ವಲಾದಿ ದರ್ಶನರಹಿತವಾದ ಸ್ಥಾನದಲ್ಲಿ ಶ್ರಾದ್ಧವನ್ನು ಮಾಡಬೇಕು. ಕುರುಕ್ಷೇತ್ರ, ಪ್ರಭಾಸ, ಪುಷ್ಕರ, ಪ್ರಯಾಣ, ಕಾಶೀ, ಗಂಗಾ, ಯಮುನಾ ಮೊದಲಾದ ನದೀತೀರ, ನೈಮಿಷ, ಗಂಗಾದ್ವಾರ, ಗಯಾಶೀರ್ಷ, ಅಕ್ಷಯ್ಯವಟ ಮೊದಲಾದ ಸ್ಥಾನಗಳಲ್ಲಿ ಮಾಡಿದ ಶ್ರಾದ್ದವು ವಿಶೇಷ ಫಲದಾಯಕವು ಗಯಾಶೀರ್ಷದಲ್ಲಿ ಶಮೀಪತ್ರಪ್ರಮಾಣದ ಪಿಂಡಗಳನ್ನು ಹಾಕಿ ಶ್ರಾದ್ಧಮಾಡಿದರೂ ಅದು ಆತನ ಸಪ್ತಗೋತ್ರ, ಹಾಗೂ ನೂರಾಒಂದು ಕುಲವನ್ನು ಉದ್ಧಾರಮಾಡುವದು. ಇಲ್ಲಿ ‘ಸಪ್ತಗೋತ್ರಗಳೆಂದರೆ ಪಿತೃ, ಮಾತೃ, ಪತ್ನಿ, ಸಹೋದರಿ, ಪುತ್ರಿ, ಪಿತೃಭಗಿನೀ, ಮಾತೃಭಗಿನೀ ಹೀಗೆ ಈ ಏಳುಜನರ ಗೋತ್ರಗಳಲ್ಲಿ ಬರುವವರು ಎಂದರ್ಥ. ಉದ್ದಾರವಾಗುವವರು-ಪಿತೃಗೋತ್ರದಲ್ಲಿ ಇಪ್ಪತ್ತುನಾಲ್ಕು ಪುರುಷರು, ಮಾತೃಗೋತ್ರದಲ್ಲಿ ಇಪ್ಪತ್ತು, ಪತ್ನಿಗೋತ್ರದಲ್ಲಿ ಹದಿನಾರು, ಭಗಿನೀಗೋತ್ರದಲ್ಲಿ · ೪೧೪ ಧರ್ಮಸಿಂಧು ಹನ್ನೆರಡು, ಪುತ್ರಿಯ ಗೋತ್ರದಲ್ಲಿ ಹನ್ನೊಂದು, ಪಿತೃಭಗಿನಿಯ ಗೋತ್ರದಲ್ಲಿ ಹತ್ತು, ಮಾತೃಭಗಿನಿಯ ಗೋತ್ರದಲ್ಲಿ ಎಂಟು ಪುರುಷರು ಅಂತೂ ನೂರೆಂಟುಪುರುಷರ ಉದ್ಧಾರವಾಗುವದು. ಇದರಲ್ಲಿ ಪಿತೃಕುಲದಲ್ಲಿ ಹಿಂದಿನ ಹನ್ನೆರಡು, ಮುಂದಿನ ಹನ್ನೆರಡು ಹೀಗೆ ಇಪ್ಪತ್ತುನಾಲ್ಕು, ಇದರಂತೆ ಆಯಾಯ ಗೋತ್ರಕ್ಕೆ ಹೇಳಿದ ಪುರುಷರಲ್ಲಿ ಹಿಂದೆ ಮುಂದೆ ಕೂಡಿ ಹೇಳಿದ್ದೆಂದು ತಿಳಿಯತಕ್ಕದ್ದು. ತುಲಸೀಗಿಡದ ನೆರಳು, ಶಾಲಿಗ್ರಾಮ ಸನ್ನಿಧಿ, ಚಕ್ರಾಂಕಿತ ಸನ್ನಿಧಿ ಇವುಗಳಲ್ಲಿ ಮಾಡಿದ ಶ್ರಾದ್ಧವು ಅಕ್ಷಯ್ಯವಾಗುವದು. ಗೋವು, ಆನೆ, ಕುದುರೆ ಮೊದಲಾದವುಗಳ ವಾಸಸ್ಥಾನದಲ್ಲಿ ಶ್ರಾದ್ಧವನ್ನು ಮಾಡಬಾರದು. ಪರಕೀಯ ಗೃಹಾದಿಗಳಲ್ಲಿ ಶ್ರಾದ್ಧ ಮಾಡಿದರೆ ಆ ಭೂಮಿಯ ಸ್ವಾಮಿಯ ಪಿತೃಗಳು ಶ್ರಾದ್ಧಭಾಗವನ್ನೊಯ್ಯುವರು. ಆದ್ದರಿಂದ ಭೂಮಿಯ ಅಧಿಪತಿಗೆ ಮೂಲ್ಯವನ್ನು ಕೊಟ್ಟು ಶ್ರಾದ್ಧವನ್ನು ಮಾಡತಕ್ಕದ್ದು. ಅದೂ ಸಾಧ್ಯವಾಗದಿದ್ದರೆ ಆತನ ಅನುಮತಿಯನ್ನಾದರೂ ಪಡೆಕೊಳ್ಳಬೇಕು. ಅರಣ್ಯ, ಪರ್ವತ, ನದಿತೀರ, ಜಲಾಶಯ, ದೇವಸ್ಥಾನಾದಿಗಳು, ತಗ್ಗು ದಿನ್ನೆಗಳು ಇವುಗಳಲ್ಲಿ ಸ್ವಾಮಿತ್ವ ವಿಚಾರಿಸತಕ್ಕದ್ದಿಲ್ಲ. ಒಂಟಿ ವಸ್ತ್ರದಿಂದ ಮತ್ತು ದ್ವೀಪ, ಅಂತರಿಕ್ಷಗಳಲ್ಲಿ ಮತ್ತು ಅಶುಚಿಯಾಗಿ ಯಾವ ಶ್ರುತಿ-ಸ್ಕೃತ್ಯುಕ್ತ ಕರ್ಮಗಳನ್ನೂ ಮಾಡಬಾರದು. ಶ್ರಾದ್ಧ ಕಾಲಗಳು ಶ್ರಾದ್ಧಕ್ಕೆ ಕಾಲಗಳೆಂದರೆ- ಸಾಮಾನ್ಯವಾಗಿ ಅಮಾವಾಸ, ಸಂಕ್ರಾಂತಿ, ಯುಗಾದಿ, ಮನ್ವಾದಿ, ಮಹಾಲಯ ಮೊದಲಾದವುಗಳು. ಇವುಗಳನ್ನು ಪೂರ್ವಪರಿಚ್ಛೇದದಲ್ಲಿ ಹೇಳಲಾಗಿದೆ. ಕೆಲವನ್ನು ಈಗ ಹೇಳಲಾಗುವದು. ಮಹಾತೀರ್ಥಕ್ಕೆ ಹೋದಾಗ, ವ್ಯತೀಪಾತ, ಮೃತತಿಥಿ, ಗ್ರಹಣ, ಶ್ರಾದ್ದ ವಿಷಯದಲ್ಲಿ ಅಭಿರುಚಿಯುಂಟಾದಾಗ, ಶೂತ್ರಿಯಾದಿ ಬ್ರಾಹ್ಮಣರು ಬಂದಾಗ, ಅರ್ಧೋದಯ, ಕಪಿಲಾಷಷ್ಟಿ ಮೊದಲಾದ ಅಲಭ್ಯಯೋಗ ಪ್ರಾಪ್ತವಾದಾಗ, ಗ್ರಹಪೀಡೆ, ದುಃಸ್ವಪ್ನ ದರ್ಶನ, ನವಾನ್ನ ಪ್ರಾಪ್ತಿ, ನವೋದಕ ಪ್ರಾಪ್ತಿ, ಮನೆಹೊದಿಸುವದು ಮೊದಲಾದ ನಿಮಿತ್ತವುಂಟಾದಾಗ, ಇತ್ಯಾದಿಗಳೆಲ್ಲ ಉಕ್ತಕಾಲಗಳು, ವಿಷ್ಟಿ, ವ್ಯತೀಪಾತ, ಭಾನುವಾರ ಇವುಗಳ ಯೋಗಕ್ಕೆ “ಪದ್ಮಕಯೋಗ"ವನ್ನುವರು. ಇದು ಅಯನಕ್ಕಿಂತ ನಾಲ್ಕು ಪಟ್ಟು ಹೆಚ್ಚಿನದು. ಇದರಲ್ಲಿ ಮತ್ತು ಎಲ್ಲ ಮಾಸಗಳ ಕೃಷ್ಣ ಪಕ್ಷಗಳಲ್ಲಿ ಶ್ರಾದ್ದವು ಹೇಳಲ್ಪಟ್ಟಿದೆ. ಈ ಕೃಷ್ಣಪಕ್ಷ ಶ್ರಾದ್ಧ ವಿಷಯದಲ್ಲಿ ಪ್ರತಿದಿನ ಮಾಡುವದೊಂದು, ಪಂಚಮ್ಮಾದಿ ಅಮಾವಾಸೆ ವರೆಗೆ ಒಂದು, ಅಥವಾ ಯುಕ್ತವಾದ ಯಾವದಾದರೊಂದು ಹೀಗೆ ಹೇಳಲ್ಪಟ್ಟಿದೆ. ಒಂದು ದಿನದ ಪಕ್ಷದಲ್ಲಾದರೆ ಅಮಾವಾಸೆಯೇ ವಿಹಿತವು. “ನಾರಾಯಣವೃತ್ತಿಯಲ್ಲಿ ದರ್ಶಶ್ರಾದದಿಂದಲೇ ಪಕ್ಷಶ್ರಾದ್ಧವೂ ಸಿಸುವರೆಂದು ಹೇಳಿದೆ. ಎಲ್ಲ ಮಾಸಗಳ ದರ್ಶದಲ್ಲಿ ಸಾಧ್ಯವಾಗದಿದ್ದರೆ ಕನ್ಯಾ, ಕುಂಭ ಅಥವಾ ವೃಷಭದಲ್ಲಿ ಸೂರ್ಯನಿರುವಾಗ ಬರುವ ಯಾವದಾದರೊಂದು ಅಮಾವಾಸೆಯಲ್ಲಿ ಮಾಡತಕ್ಕದ್ದು. ಸಾಗ್ನಿ ಕನಾಗಿದ್ದು ಅಸಮರ್ಥನಾದರೆ ಆತನಿಗೆ ಪಿಂಡ ಪಿತೃಯಜ್ಞ ಮಾಡುವಿಕೆಯಿಂದಲೇ ದರ್ಶಶಾದವೂ ಸಿದ್ಧಿಸುವರು. ಅದೇ ನಿರಕನಾದವನಿಗೆ ಬರೇ ಬ್ರಾಹ್ಮಣಭೋಜನ ಮಾತ್ರದಿಂದ ಅದು ಸಿದ್ಧಿಸುವರು. ಇಲ್ಲವೆ ದ್ರವದಿ ದಾನದಿಂದಲೂ ಸಿದ್ದಿಸುವದು. ಕೃಷ್ಣ ಪಕ್ಷಗಳ ಪೈಕಿ ಮಹಾಲಯ ಅಪರ ಪಕ್ಷವು ಶ್ರೇಷ್ಟವು. ಇತ್ಯಾದಿ ವಿಸ್ತರವನ್ನು ದ್ವಿತೀಯ ಪರಿಚ್ಛೇದದಲ್ಲಿ ಹೇಳಿದೆ. ಪರಿಚ್ಛೇದ ೩ ಉತ್ತರಾರ್ಧ ೪೧೫ ಇಲ್ಲಿ ಕೆಲವು ಬೇರೆ ವಿಷಯಗಳನ್ನು “ಕಾಲತತ್ವ ವಿವೇಚನೆ’ಯಲ್ಲಿ ಹೇಳಿದೆ. ಈ ಪಂಚದಶದಿನ ಮಾಡುವ ಮಹಾಲಯಗಳ ಮಧ್ಯದಲ್ಲಿ ಅಶೌಚಪ್ರಾಪ್ತವಾದರೆ ಮಾಡಿದ ಮಹಾಲಯಗಳು ವಿಫಲಗಳಾಗುವವು. ಆದಕಾರಣ ಶುದ್ಧಿಯ ನಂತರ ಯಾವದಾದರೊಂದು ತಿಥಿಯಲ್ಲಿ ಸಕೃನ್ಮಹಾಲಯ ಒಂದನ್ನು ಮಾತ್ರ ಮಾಡತಕ್ಕದ್ದು. ಪಂಚಮ್ಮಾದಿ ಪಕ್ಷದಲ್ಲಾದರೂ ಇದೇ ತೊಂದರೆಯುಂಟು. ಬೇರೆ ವಿಧದ ಪ್ರತಿಬಂಧಕವುಂಟಾದಲ್ಲಿ ಉಳಿದ ಮಹಾಲಯಗಳನ್ನು ಪ್ರತಿನಿಧಿದ್ದಾರಾ ಮಾಡಿಸುವದು. ಜೀವತೃಕನಾದರೂ ಪಿತೃವ್ಯ ಶ್ರೇಷ್ಠ ಭ್ರಾತ್ರಾದಿಗಳು ಅಪುತ್ರರಾಗಿದ್ದಾಗ ಮಹಾಲಯ, ಅಪರ ಪಕ್ಷದಲ್ಲಿ ಅವರವರ ಮೃತತಿಥಿಗಳಲ್ಲಿ ಏಕಪಾರ್ವಣಕವಾದ ಶ್ರಾದ್ಧವನ್ನು ಮಾಡತಕ್ಕದ್ದೆಂದು ಹೇಳಿದೆ. ಹನ್ನೆರಡು ಹುಣ್ಣಿವಗಳಲ್ಲೂ ಅಗತ್ಯವಾಗಿ ಮಾಡತಕ್ಕದ್ದು. ಕೃಷ್ಣಪಕ್ಷದ ಪ್ರತಿವಾದಿ ಹದಿನೈದು ತಿಥಿ, ಕೃತ್ತಿಕಾದಿ ಭರಣಿ ನಕ್ಷತ್ರಗಳ ವರೆಗಿನ ನಕ್ಷತ್ರಗಳು, ವಿಷ್ಕಂಭಾದಿ ಯೋಗ, ಸೂರ್ಯಾದಿ ವಾರ, ಬವಾದಿ ಕರಣ ಇತ್ಯಾದಿಗಳಲ್ಲೂ ಆಯಾಯ ಶ್ರಾದ್ಧದಲ್ಲಿ ವಿಶೇಷ ಹೇಳಿರುವದರಿಂದ ಈ ಹೇಳಿದ ತಿಥ್ಯಾದಿಗಳಲ್ಲಿಯೂ ಶ್ರಾದ್ಧ ಕಾಲ ಪ್ರಾಪ್ತವಾಗುವದು. ಇವೆಲ್ಲ ಕಾವ್ಯಶ್ರಾದ್ಧಗಳೆಂದು ತಿಳಿಯತಕ್ಕದ್ದು. ಹೀಗೆ ಸಾಮಾನ್ಯಕಾಲಗಳು. ಅಪರಾಹ್ಲಾದಿ ವಿಶೇಷ ನಿರ್ಣಯ ದಿನಮಾನ ೩೦ ಘಟಿ ಇದ್ದಾಗ ಐದು ಪಾಲು ಮಾಡಿದರೆ ಒಂದೊಂದಕ್ಕೆ ಆರು-ಆರು ಘಟಿಗಳು ಬರುವವು. ದಿನಮಾನ ಹೆಚ್ಚು ಕಡಿಮೆಯಿದ್ದಾಗ ಈ ವಿಭಾಗಗಳಲ್ಲೂ ಸ್ವಲ್ಪ ಹೆಚ್ಚು ಕಡಿಮೆಯಾಗುವದು ಸಹಜ. ಮೊದಲನೇ ಭಾಗವು “ಪ್ರಾತಃಕಾಲ ವೆನ್ನಲ್ಪಡುವದು. ಎರಡನೆಯದು “ಸಂಗವ”, ಮೂರನೇಯದು “ಮಧ್ಯಾಹ್ನ, ನಾಲ್ಕನೇಯದು “ಅಪರಾಹ್ನ”, ಐದನೇಯದು “ಸಾಯಾಹ್ನ” ಹೀಗೆ ಸಂಸ್ಕೃತಗಳಾಗುವವು. ದಿನಮಾನದ ಹದಿನೈದನೇ ಒಂದು ಭಾಗಕ್ಕೆ “ಮುಹೂರ್ತ"ವನ್ನುವರು. ಸರಾಸರಿ ಎರಡು ಘಟಿಗಳು, ಇವುಗಳಲ್ಲಿ ಏಳನೇ ಮುಹೂರ್ತಕ್ಕೆ “ಗಾಂಧರ್ವ"ವೆನ್ನುವರು. ಎಂಟನೆಯ ಮುಹೂರ್ತವು “ಕುತಪ” ಎಂಬ ಸಂಜ್ಞೆಯುಳ್ಳದ್ದು. ಒಂಭತ್ತನೆಯದು “ರೌಹಿಣ"ವು, ದರ್ಶಾದಿ ಶ್ರಾದ್ಧ ನಿರ್ಣಯಗಳನ್ನು ಹೆಚ್ಚಾಗಿ ಹಿಂದಿನ ಎರಡು ಪರಿಚ್ಛೇದಗಳಲ್ಲಿ ಹೇಳಿದೆ. ವಿಶೇಷವನ್ನು ಮಾತ್ರ ಇಲ್ಲಿ ಹೇಳಲಾಗುವದು. ಸಾಗ್ನಿಕರಾದ ಕಾತ್ಕಾಯನಾದಿಗಳಿಗೆ ಅನ್ನಾಧಾನ, ಪಿಂಡಪಿತೃಯಜ್ಞ ದರ್ಶಶ್ರಾದ್ಧ ಈ ಮೂರನ್ನೂ ಒಂದೇ ದಿನ ಮಾಡಬೇಕಾಗುವದರಿಂದ ಶ್ರೀಧಾವಿಭಕ್ತ ಅಪರಾಹ್ನವನ್ನು ಹೇಳಿದೆ. ಅಂದರೆ ದಿನಮಾನವನ್ನು ಮೂರು ಪಾಲು ಮಾಡಿದಾಗ ೧೦-೧೦ ಘಟಿಗಳಿಗೆ ಒಂದೊಂದು ಭಾಗವಾಗಿ, ಮೊದಲನೇ ಭಾಗವು ಪೂರ್ವಾಹ್ನ, ಎರಡನೇ ಭಾಗವು ಮಧ್ಯಾಹ್ನ, ನಂತರದ ಭಾಗವು ಅಪರಾಹ್ನ ಈ ಕ್ರಮದಿಂದ ಬಂದ ಅಪರಾಹ್ನವ್ಯಾಪಿನಿಯಾದ ದರ್ಶದಲ್ಲಿ ಶ್ರಾದ್ಧವನ್ನು ಮಾಡುವದು. ಪ್ರತಿಸಾಂವತ್ಸರಿಕ ಮಾಸಿಕಾದಿಗಳ ನಿರ್ಣಯ ಏಕೋದ್ದಿಷ್ಟ ಶ್ರಾದ್ಧವನ್ನು ಸಪ್ತಮ, ಅಷ್ಟಮ, ನವಮ ಮುಹೂರ್ತರೂಪವಾದ ಮಧ್ಯಾಹ್ನದಲ್ಲಿ ಮಾಡತಕ್ಕದ್ದು. ಅದರಲ್ಲಾದರೂ ಕುತುಪ ರೌಹಿಣ ರೂಪಗಳಾದ ಎಂಟು, ಒಂಭತ್ತು ಈ ಮುಹೂರ್ತಗಳು ಮುಖ್ಯಕಾಲವು ಇಂಥ ಮಧ್ಯಾಹ್ನವು ಪೂರ್ವದಿನದಲ್ಲಿ ಅಥವಾ ಪರದಿನದಲ್ಲಿ ವ್ಯಾಪ್ತಿಯಿದ್ದರೆ ವ್ಯಾಪ್ತಿಯಿದ್ದದಿನವೇ ಮಾಡತಕ್ಕದ್ದು. ಎರಡೂ ದಿನ ವ್ಯಾಪ್ತಿಯಿದ್ದರೆ ಅಥವಾ ಧರ್ಮಸಿಂಧು ಎರಡೂ ದಿನ ವ್ಯಾಪ್ತಿಯಿಲ್ಲದಿದ್ದರೆ ಪೂರ್ವದಿನದಲ್ಲಿಯೇ ಮಾಡತಕ್ಕದ್ದು, ಎರಡೂ ದಿನ ಸಮವಾಗಿ ಏಕದೇಶವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು. ಕೆಲವರು ತಿಥಿಯ ಖರ್ವ (ಕ್ಷಯ)ದರ್ಪ (ವೃದ್ಧಿ) ಲಕ್ಷಣದಿಂದ ವ್ಯವಸ್ಥೆಗೊಳಿಸಬೇಕೆನ್ನುವರು. ವಿಷಮ (ಹೆಚ್ಚು-ಕಡಿಮೆ)ವಾಗಿ ಏಕದೇಶವ್ಯಾಪ್ತಿಯಿದ್ದರೆ ಯಾವ ದಿನ ಹೆಚ್ಚಿರುವದೋ ಆ ದಿನವು ಗ್ರಾಹ್ಯವು, ಪಾರ್ವಣದಲ್ಲಿ “ಅಪರಾಹ” ವೇ ಗ್ರಾಹ್ಯವು. ಹಿಂದಿನ ದಿನ ಆ ದಿನ ಅಪರಾಹ್ನ ವ್ಯಾಪ್ತಿಯಿದ್ದದ್ದು ಗ್ರಾಹ್ಮವು. ಎರಡೂದಿನ ಅಪರಾಹ್ನ ವ್ಯಾಪ್ತಿಯಿದ್ದರೆ ಅಥವಾ ಎರಡೂದಿನ ವ್ಯಾಪ್ತಿಯಿಲ್ಲದಿದ್ದರೆ ಅಥವಾ ಅಂಶತಃ ಸಮವ್ಯಾಪ್ತಿಯಿದ್ದರೆ ಪೂರ್ವವೇ ಗ್ರಾಹ್ಯವು. ವಿಷಮವ್ಯಾಪ್ತಿಯಿದ್ದರೆ ಹೆಚ್ಚು ಇದ್ದ ದಿನವು ಗ್ರಾಹ್ಯವು ಮಾಧವಾಚಾರ್ಯರ ಮತವೇನೆಂದರೆ ಎರಡೂ ದಿನ ಪೂರ್ಣ ಅಪರಾಹ್ನವ್ಯಾಪ್ತಿಯಿದ್ದರೆ, ಅಂಶತಃ ಸಮವ್ಯಾಪ್ತಿಯಿದ್ದಾಗಲೂ ಮುಂದಿನ ತಿಥಿಯು ಕ್ಷಯಿಸುತ್ತಿದ್ದರೆ ಪೂರ್ವವೇ ಗ್ರಾಹ್ಯವು. ವೃದ್ಧಿಯಾಗುತ್ತಿದ್ದರೆ ಪರವು ಗ್ರಾಹ್ಯವು, ಮುಂದಿನ ತಿಥಿಯು ಕ್ಷಯ ವೃದ್ಧಿಯಾಗದೆ ಸಮವಾಗಿರುವಾಗಲೂ ಪರವೇ ಗ್ರಾಹ್ಯವು. ಎಂದು ಹೇಳಿರುವರು. ಈ ನಿರ್ಣಯವು ಪ್ರತ್ಯಾಬ್ಲಿಕ, ಮಾಸಿಕ, ಸಕೃನ್ಮಹಾಲಯ ಇವುಗಳಿಗೆ ಹೇಳಿದ್ದು, ಶ್ರಾದ್ಧದಲ್ಲಿ ಭರಣಾದಿ ನಕ್ಷತ್ರ, ವ್ಯತೀಪಾತಾದಿ ಯೋಗಗಳುಂಟಾದಾಗ ಅಪರಾಹ್ನವ್ಯಾಪ್ತಿಯಿರತಕ್ಕದ್ದು- ಇತ್ಯಾದಿ ವಿಷಯಗಳನ್ನು ದ್ವಿತೀಯ ಪರಿಚ್ಛೇದದಲ್ಲಿ ಹೇಳಲಾಗಿದೆ. ಈ ನಕ್ಷತ್ರಯೋಗ ವಿಷಯದಲ್ಲಿ ಶುಕ್ಲ ಪಕ್ಷವಾದರೆ ಉದಯವ್ಯಾಪಿನಿಯೂ, ಕೃಷ್ಣಪಕ್ಷವಾದರೆ ಅವ್ಯಾಪಿನಿಯೂ ಆಗಿರಬೇಕೆಂದು ಕೆಲವರ ಮತವು. ಯೋಗಗಳಿಗೆ ಕುತುಪಾದಿ ವ್ಯಾಪ್ತಿಯನ್ನೂ ಹೇಳುವರು. ಈ ಪಾರ್ವಣ ಶ್ರಾದ್ಧವನ್ನು ಕುತುಪಾದಿ ಐದು ಮುಹೂರ್ತಗಳಲ್ಲಿ ಮಾಡತಕ್ಕದ್ದು. ಸಾಯಾಹ್ನ, ರಾತ್ರಿ, ಪ್ರಾತಃಕಾಲ, ಸಂಗವಕಾಲ ಇವುಗಳಲ್ಲಿ ಮಾಡಬಾರದು. ಪಿಂಡಪಿತೃಯಜ್ಞದಲ್ಲಿ ಸಾಯಾಹ್ನದಲ್ಲಿಯಾದರೂ ಅನುಜ್ಞೆಯಿದೆ. ವಿಘ್ನವಶದಿಂದ ಹಗಲಿನಲ್ಲಿ ಮಾಡಲು ಶಕ್ಯವಾಗದಿದ್ದರೆ ಸಾಯಂಕಾಲ ಪ್ರಥಮ ಪ್ರಹರ ಮುಗಿಯುವದರೊಳಗಾದರೂ ಮಾಡಬಹುದು. ಯಾಕೆಂದರೆ ಮೃತಾಹಾತಿಕ್ರಮಕ್ಕೆ ಚಾಂಡಾಲತ್ಯಾದಿ ದೋಷವನ್ನು ಹೇಳಿದೆ. ಗ್ರಹಣದಿನದಲ್ಲಿ ದರ್ಶ, ಮಾಸಿಕ, ಪ್ರತಿವಾರ್ಷಿಕ ಮೊದಲಾದ ಶ್ರಾದ್ಧಗಳು ಪ್ರಾಪ್ತವಾದರೆ ಆ ದಿನದಲ್ಲಿಯೇ ಅನ್ನದಿಂದ ಅಥವಾ ಆಮದಿಂದ ಇಲ್ಲವೆ ಹಿರಣ್ಯದಿಂದ ಮಾಡತಕ್ಕದ್ದು. ಹೊರತು ಮಾರನೇ ದಿನ ಮಾಡತಕ್ಕದ್ದಲ್ಲ. ಪ್ರಥಮಾಕವನ್ನು ಮಲಮಾಸಬರಿದಾಗ ಹದಿಮೂರನೇ ತಿಂಗಳಲ್ಲಿ ಮಾಡತಕ್ಕದ್ದೆಂದು ಮೊದಲೇ ಹೇಳಿದ. ಹನ್ನೆರಡನೇ ಮಾಸಿಕವು ಶುದ್ಧಮಾಸದಲ್ಲಾಗಿ ಹದಿಮೂರನೇ ಮಾಸವು ಮಲಮಾಸವಾಗಿ ಬಂದರೆ ಆ ಮಲಮಾಸದಲ್ಲೇ ಪ್ರಥಮಾಕವನ್ನು ಮಾಡತಕ್ಕದ್ದು. ಹನ್ನೆರಡನೆ ಮಾಸಿಕವು ಅಧಿಕಮಾಸದಲ್ಲಿ ಬಂದಾಗ, ಆಗ ಹನ್ನೆರಡನೇ ಮಾಸಿಕವನ್ನು ರಾವರ್ತಿಮಾಡಿ ಹದಿನಾಲ್ಕನೇ ಶುದ್ಧ ಮಾಸದಲ್ಲಿ ಪ್ರಥಮಾಕವನ್ನು ಮಾಡತಕ್ಕದ್ದು. ದ್ವಿತೀಯಾದಿ ಮಾಸಿಕಗಳನ್ನಾದರೂ ಅಧಿಕಮಾಸದಲ್ಲಿ ಬಂದಾಗ ದ್ವಿರಾವೃತ್ತಿ ಮಾಡಬೇಕು. ದ್ವಿತೀಯಾದಿ ಆಕ ಶ್ರಾದ್ಧವು ಅಧಿಕಮಾಸದಲ್ಲಿ ಪ್ರಾಪ್ತವಾದರೆ ಅದನ್ನು ಬಿಟ್ಟು ಶುದ್ಧ ಮಾಸದಲ್ಲಿಯೇ ಮಾಡತಕ್ಕದ್ದು, ಮಹಾಲಯವನ್ನಾದರೂ ಶುದ್ಧಮಾಸದಲ್ಲಿಯೇ ಮಾಡಬೇಕು. ಅಧಿಕಮಾಸದಲ್ಲಿ ಯಾವ ಶ್ರಾದ್ಧವನ್ನೂ ಮಾಡಬಾರದು. ಮಲಮಾಸದಲ್ಲಿಯೇ ಪರಿಚ್ಛೇದ

೩ ಉತ್ತರಾರ್ಧ ೪೧೭ ಮೃತರಾದವರ ಶ್ರಾದ್ಧವನ್ನು ಕಾಲಾಂತರದಲ್ಲಿ ಆ ಮಾಸವು ಅಧಿಕವಾಗಿ ಬಂದಲ್ಲಿ ಅದರಲ್ಲೇ ಮಾಡತಕ್ಕದ್ದು. ಹೊರತು ಶುದ್ಧ ಮಾಸದಲ್ಲಲ್ಲ. ದರ್ಶ ದಿನದಲ್ಲಿ ವಾರ್ಷಿಕಶ್ರಾದ್ಧವು ಪ್ರಾಪ್ತವಾದರೆ, ಮೊದಲು ವಾರ್ಷಿಕಶ್ರಾದ್ಧ, ನಂತರ ಪಿಂಡಪಿತೃಯಜ್ಞ, ನಂತರ ದರ್ಶಶ್ರಾದ್ಧ ಹೀಗೆ ಮಾಡುವದು, ಪಾಕವನ್ನು ಬೇರೆ-ಬೇರೆ ಮಾಡಬೇಕು. ಕಲವರು ಮೊದಲು ಪಿಂಡಪಿತೃಯಜ್ಞ ನಂತರ ವಾರ್ಷಿಕ, ಆಮೇಲೆ ದರ್ಶ ಹೀಗೆ ಕ್ರಮವನ್ನು ಹೇಳುವರು. ಹೀಗೆ ಮಾಸಿಕಾದಿಗಳು ಪ್ರಾಪ್ತವಾದರೂ ತಿಳಿಯತಕ್ಕದ್ದು. ಸಪಿಂಡೀಕರಣ ಶ್ರಾದ್ಧವಾದ ಪಿತೃವಿನ ವಾರ್ಷಿಕಶ್ರಾದ್ಧವನ್ನು ಮೂರು ವರ್ಷಗಳಪರ್ಯಂತ ಊಟಮಾಡಬಾರದು. ಪ್ರಥಮ ವರ್ಷದ ಶ್ರಾದ್ಧವನ್ನುಂಡರೆ ಅಸ್ಥಿಮೊದಲಾದವುಗಳನ್ನುಂಡಂತೆ, ಎರಡನೇ ವರ್ಷದಲ್ಲಿ ಮಾಂಸವನ್ನು ತಿಂದಂತೆ, ಮೂರನೇ ವರ್ಷದಲ್ಲಿ ರಕ್ತವನ್ನು ಕುಡಿದಂತೆ ಆಗುವದು, ನಾಲ್ಕನೇ ವರ್ಷದಲ್ಲಿ ಅದು ಶುದ್ಧವಾಗುವದು. ಇತ್ಯಾದಿ ವಚನವಿದೆ. ಪ್ರಾಸಂಗಿಕ ಇರಲಿ. ಪ್ರಕೃತವನ್ನನುಸರಿಸೋಣ. ಪಾರ್ವಣಶ್ರಾದ್ಧವನ್ನು ಆಮದಿಂದ ಅಥವಾ ಹಿರಣ್ಯದಿಂದ ಮಾಡುವದಾದಲ್ಲಿ ದಿನದ ಪೂರ್ವಭಾಗದಲ್ಲಿ ಅಂದರೆ ಹದಿನೈದು ಘಟಿಗಳೊಳಗೆ ಮಾಡತಕ್ಕದ್ದು. ಎಲ್ಲ ಶ್ರಾದ್ಧಗಳನ್ನು ಅವುಗಳಿಗೆ ಹೇಳಿದ ಕಾಲದಲ್ಲಿ ಆಯಾಯ ತಿಥಿಯು ತಪ್ಪಿಹೋಗಿದ್ದರೂ ಅದೇ ದಿನ ಮಾಡತಕ್ಕದ್ದು. ಸಾಕಲ್ಯವಚನದಂತೆ (ಅಂದರೆ ಅಷ್ಟಷ್ಟು ಘಟಿಗಳಿದ್ದರೆ ತೀರಿತು. ತಿಥಿಯು ತಪ್ಪಿದರೂ ಚಿಂತೆಯಿಲ್ಲ. ಅದು ಪೂರ್ಣವಾಗಿದ್ದಂತೆ) ಶಾಸ್ತ್ರತಃ ಆ ಕಾಲದಲ್ಲಿ ಆಯಾಯ ತಿಥಿ ಇರುವದರಿಂದ ಅದು ಯುಕ್ತವೇ ಆಗುವದೆಂದು “ಕಾಲತತ್ವ ವಿವೇಚನೆ"ಯಲ್ಲಿ ಹೇಳಿದೆ. ವೃದ್ಧಿ ಶ್ರಾದ್ಧವನ್ನು ಪ್ರಾತಃಕಾಲ ಅಥವಾ ಸಂಗವಕಾಲದಲ್ಲಿ ಮಾಡತಕ್ಕದ್ದು. ಮಧ್ಯಾಹ್ನವು ಗೌಣಕಾಲವು. ಅಪರಾಹ್ನ, ಸಾಯಾಹ್ನ, ರಾತ್ರಿಗಳು, ನಿಷಿದ್ಧಗಳು. ರಾತ್ರಿಯಲ್ಲಿ ವಿವಾಹವಾಗುವದಿದ್ದು, ಆ ದಿನ ಪ್ರಾತಃಕಾಲದಲ್ಲಿ ವೃದ್ಧಿಶ್ರಾದ್ಧವು ಆಗದಿದ್ದಾಗ ರಾತ್ರಿಯಲ್ಲಾದರೂ ವೃದ್ಧಿ ಶ್ರಾದ್ಧವನ್ನು ಮಾಡಬಹುದೆಂದು ಕೆಲ ಗ್ರಂಥಕಾರರ ಮತವಿದೆ. ಗ್ರಹಣನಿಮಿತ್ತಕವಾದ ಪಾರ್ವಣಶ್ರಾದ್ದ ಹಾಗೂ ಪುತ್ರಜನ್ಮನಿಮಿತ್ತಕ ವೃದ್ಧಿ ಶ್ರಾದ್ಧಗಳನ್ನು ರಾತ್ರಿಯಲ್ಲಾದರೂ ಮಾಡತಕ್ಕದ್ದು. ಹೀಗೆ ಕಾಲನಿರ್ಣಯವು. ಅನ್ನಾದಿ ಪಿತೃತೃಪ್ತಿ ವಿಚಾರ ಪುತ್ರಾದಿಗಳು ತಂದೆ-ತಾಯಿ ಮೊದಲಾದವರ ಉದ್ದೇಶದಿಂದ ಶ್ರಾದ್ಧ ಮಾಡುವಾಗ ನಾಮ, ಗೋತ್ರ, ಮಂತ್ರ ಇವು ಆಯಾಯ ಅನ್ನವನ್ನು ಆಯಾಯ ಪಿತೃಗಳಿಗೆ ಮಟ್ಟಿಸುವವು. ಪಿತೃ ಮೊದಲಾದವರು ದೇವತಾಸ್ಥಿತಿಯಲ್ಲಿದ್ದಾಗ ಕೊಟ್ಟ ಅನ್ನವು ಅಮೃತರೂಪವಾಗಿ ಅವರಿಗೆ ಮುಟ್ಟುವದು. ಗಂಧರ್ವರಾದರೆ ಭೋಗ್ಯರೂಪದಿಂದ, ಪಶುಗಳಾದರೆ ತೃಣರೂಪದಿಂದ, ಸರ್ಪಯೋನಿಯಲ್ಲಿದ್ದರೆ ವಾಯುರೂಪದಿಂದ, ಯಕ್ಷರಾದರೆ ಪಾನರೂಪದಿಂದ, ರಾಕ್ಷಸರಾಗಿದ್ದರೆ ಮಾಂಸರೂಪದಿಂದ, ಪ್ರೀತರಾದರೆ ರಕ್ತ ರೂಪದಿಂದ, ಮನುಷ್ಯರೂಪದಲ್ಲಿದ್ದರೆ ಅನ್ನರೂಪದಿಂದ ಹೀಗೆ ಪಿತೃಗಳು ಯಾವ ಸ್ಥಿತಿಯಲ್ಲಿದ್ದರೂ ಅವರಿಗೆ ತೃಪ್ತಿಕರವಾದ ಆಹಾರರೂಪದಿಂದ ಅವರಿಗೆ ಮುಟ್ಟುವದು. ಹೀಗೆ ಅನೇಕ ಗ್ರಂಥಗಳಲ್ಲಿ ಉಕ್ತವಾಗಿದೆ. ಪಿತೃಗಳು ಶ್ರಾದ್ಧಕಾಲಪ್ರಾಪ್ತವಾದಾಗ ಅದನ್ನು ಮನದಲ್ಲಿ ಧ್ಯಾನಿಸಿ ಮನೋವೇಗದಿಂದ ಒಂದು ವಾಯುರೂಪದಿಂದ ಆಮಂತ್ರಿತ ೪೧೮ ಧರ್ಮಸಿಂಧು ಬ್ರಾಹ್ಮಣರಲ್ಲಿ ಪ್ರವೇಶಿಸಿ ಊಟಮಾಡುವರು. ಅಂತೆಯೇ ಶ್ರೀ ರಾಮಚಂದ್ರನು ಶ್ರಾದ್ಧ ಮಾಡುವಾಗ ಸೀತಾದೇವಿಯು ಬ್ರಾಹ್ಮಣರಲ್ಲಿ ದಶರಥಾದಿ ಪಿತೃಗಳನ್ನು ನೋಡಿದಳೆಂದು ರಾಮಾಯಣದಲ್ಲಿ ಕಥೆಯಿದೆ. ವರ್ಷಋತುವು ಕಳೆದ ನಂತರ ಯಮನು ಯಮಾಲಯದಿಂದ ಎಲ್ಲ ಮೃತಪಿತೃಗಳನ್ನು ಹೊರಹಾಕಿ (ಭೂಲೋಕಕ್ಕೆ ಕಳಿಸಿ) ತನ್ನ ಪಟ್ಟಣವನ್ನು ಖಾಲಿಮಾಡುವನಂತೆ. ಆಗ ಆ ಪಿತೃಗಳು ತಮ್ಮ-ತಮ್ಮ ಪುತ್ರಾದಿಗಳಿಂದ ಜೇನುತುಪ್ಪ, ಪಾಯಸಾದಿಗಳನ್ನಪೇಕ್ಷಿಸುವರಂತೆ. ಸೂರ್ಯನು ಕನ್ಯಾರಾಶಿಯನ್ನು ಪ್ರವೇಶಿಸುತ್ತಿರಲು ಪಿತ್ರಾದಿಗಳು ಪುತ್ರಾದಿಗಳ ಸನ್ನಿಧಿಗೆ ಹೋಗುವರು. ಅಮಾವಾಸೆಯು ಬರುತ್ತಿರಲು ಪಿತೃಗಳು ಮನೆಯ ಬಾಗಿಲಲ್ಲಿ ನಿಂತು ಶ್ರಾದ್ಧವನ್ನಪೇಕ್ಷಿಸುವರು. ಆಗ ಶ್ರಾದ್ಧವನ್ನು ಮಾಡದಿದ್ದರೆ ಶಾಪವನ್ನು ಕೊಟ್ಟು ಹೋಗುವರು. ಆದುದರಿಂದ ಕಂದಮೂಲಾದಿಗಳಿಂದಾದರೂ ಅಥವಾ ಜಲತರ್ಪಣಾದಿಗಳಿಂದಾದರೂ ಪಿತೃಗಳನ್ನು ತೃಪ್ತಿಪಡಿಸಬೇಕು. ಅಂತೂ ಶ್ರಾದ್ಧವನ್ನು ಮಾಡದೆ ಉಳಿಯಬಾರದು. ಶ್ರಾದ್ಧದಿಂದ ಆ ಬ್ರಹ್ಮಸ್ತಂಬಪರ್ಯಂತ (ಬ್ರಹ್ಮನಿಂದ ಹಿಡಿದು ಹುಲ್ಲು ಕಡ್ಡಿಯ ವರೆಗೆ) ಎಲ್ಲ ಪ್ರಾಣಿಗಳೂ ತೃಪ್ತಿಹೊಂದುವರೆಂದು ಶ್ರುತಿ ವಚನವಿದೆ. ಪಿತೃಗಳು ಪಿಶಾಚರೂಪದಲ್ಲಿದ್ದರೂ ವಿಕಿರ ಮೊದಲಾದವುಗಳಿಂದ ತೃಪ್ತರಾಗುವರು. ವ್ಯಕ್ತಾದಿರೂಪಿಗಳಾಗಿದ್ದರೆ ಸ್ನಾನದವಸ್ತ್ರ, ನಿಡನದಕಾದಿಗಳಿಂದ ತೃಪ್ತರಾಗುವರು. ನಿಕೃಷ್ಟಯೋನಿಯಲ್ಲಿದ್ದರೂ ಉಚ್ಛಿಷ್ಟಪಿಂಡಾದಿಗಳಿಂದ ತೃಪ್ತಿಯು. ಆದಕಾರಣ ತಂದ ಮೊದಲಾದವರು ಸಂನ್ಯಾಸತೆಗೆದುಕೊಂಡು ಮುಕ್ತರಾಗಿದ್ದರೂ ಪುತ್ರನು ಪಿತೃಭಕ್ತಿಗಾಗಿ, ತೃಪ್ತಿಗಾಗಿ ಶ್ರಾದ್ಧವನ್ನು ಮಾಡಲೇಬೇಕು.

ಶ್ರಾದ್ಧದೇವತಾ ವಿಚಾರ ಪಿತೃ, ಪಿತಾಮಹ, ಪ್ರಪಿತಾಮಹ ಈ ಪಾರ್ವಣದಲ್ಲಿ ಕ್ರಮದಿಂದ ವಸು, ರುದ್ರ, ಆದಿತ್ಯ ಭೇದದಿಂದ ತಿಳಿಯತಕ್ಕದ್ದು. (ಪಿತೃ-ವಸುರೂಪ, ಪಿತಾಮಹನು-ರುದ್ರರೂಪ, ಪ್ರಪಿತಾಮಹನು- ಆದಿತ್ಯರೂಪ) ಹೀಗೆ; ಏಕೋದ್ದಿಷ್ಟವು ಬರೇ ವಸುರೂಪಮಾತ್ರದ್ದು, ಎಂದು ಎಲ್ಲ ಕಡೆಗೂ ತಿಳಿಯತಕ್ಕದ್ದು. ಕೆಲವರು ಪಿತೃ, ಪಿತಾಮಹ, ಪ್ರಪಿತಾಮಹರನ್ನು ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪರನ್ನಾಗಿ ತಿಳಿಯಬೇಕೆನ್ನುವರು. ಕರ್ತನನ್ನು ಅನಿರುದ್ಧರೂಪದಿಂದ ತಿಳಿಯತಕ್ಕದ್ದು, ಹೀಗೆನ್ನುವರು. ಇನ್ನು ಕೆಲವರು ವರುಣ, ಪ್ರಜಾಪತಿ, ಅಗ್ನಿ ಈ ರೂಪದಿಂದ ತಿಳಿಯಬೇಕೆನ್ನುವರು. ಕೆಲ ಕಡೆಯಲ್ಲಿ ಮಾಸ, ಋತು, ವತ್ಸರ ಈ ರೂಪದಿಂದಲೂ ಹೇಳಿದೆ. ಆಚಾರ ಹೇಗಿದೆಯೋ ಹಾಗೆ ತಿಳಿಯುವದು ಯುಕ್ತವು. ಪಿತ್ರಾದಿ ಪಾರ್ವಣವಿರುವಲ್ಲಿ ಮಾತಾಮಹಾದಿಗಳನ್ನೂ ಉದ್ದೇಶಿಸುವದು ಎಂದು ಎಲ್ಲ ಕಡೆಗೂ ತಿಳಿಯತಕ್ಕದ್ದು. ಆಬ್ಲಿಕ, ಮಾಸಿಕ ಇವುಗಳಲ್ಲಿ ಮಾತ್ರ ಮಾತಾಮಹಾದಿಗಳನ್ನುದ್ದೇಶಿಸತಕ್ಕದ್ದಿಲ್ಲ. ಮಾಸಿಕ, ಆಬ್ರಿಕ ಶಾಸ್ತ್ರಗಳಲ್ಲಿ ಮೂರುದೇವತೆಗಳನ್ನು ಹೇಳತಕ್ಕದಿದೆ. ವೃದ್ಧಿ ಶ್ರಾದ, ತೀರ್ಥಶ್ರಾದ್ಧ, ಅನ್ನಷ್ಟಕಾಶ್ರಾರ, ಗಯಾಶ್ರಾದ್ಧ, ಮಹಾಲಯಶ್ರಾದ್ಧ ಇವುಗಳಲ್ಲಿ ಮೂರು ಪಾರ್ವಣಗಳು ಹೇಳಲ್ಪಟ್ಟಿವೆ. ಉಳಿದ ಶ್ರಾದ್ಧಗಳು “ಪಾರುಷಗಳು. ಸವಕ ಪಿತ್ರಾದಿತ್ರಯ, ಸಪತ್ನಿಕ ಮಾತಾಮಹಾದಿತ್ರಯ ಹೀಗೆ “ಪರುಷತ್ವ"ವು. ಸ್ತ್ರೀಯರಿಗೆ ಮೃತತಿಥಿಯ ಹೊರತಾಗಿ ಬೇರೆಕಾಲದಲ್ಲಿ ಶ್ರಾದ್ಧ ಮಾಡತಕ್ಕದ್ದಿಲ್ಲ. ಅನ್ನಷ್ಟಕ, ವೃದ್ಧಿ, ಗಯಾ ಮತ್ತು ಮೃತತಿಥಿ ಇವುಗಳಲ್ಲಿ ಮಾತೃವಿಗೆ ಪೃಥಕ್‌ಶ್ರಾದ್ರವು ಉಕ್ತವಾಗಿದೆ. ಉಳಿದಕಡೆಗಳಲ್ಲಿ- ಪರಿಚ್ಛೇದ ೩ ಉತ್ತರಾರ್ಧ ೪೧೯ ಪತಿಯಿಂದ ಕೂಡಿ ಶ್ರಾದ್ಧವು ಸಿದ್ಧಿಸುವದು. ಇನ್ನು ವಿಶ್ವೇದೇವ ವಿಷಯ-ವಿಶೇಷವಾಗಿ ಉಕ್ತವಾಗದಿದ್ದ ಸಾಮಾನ್ಯ ಪಾರ್ವಣಶ್ರಾದ್ಧಗಳಲ್ಲಿ ಪುರೂರವ ಆದ್ರ್ರವ ವಿಶ್ವೇದೇವತೆಗಳು. ಕಾಮ್ಯಶ್ರಾದ್ಧ ಮತ್ತು ಮಹಾಲಯ ಶ್ರಾದ್ಧಗಳಲ್ಲಿ “ಧೂರಿ ಲೋಚನ"ರು. ನೈಮಿತ್ತಿಕ ಹಾಗೂ ಅಷ್ಟಕಾಖ್ಯ ಅಷ್ಟಮೀ ಶ್ರಾದ್ಧಗಳಲ್ಲಿ “ಕಾಮಕಾಲಸಂಸ್ಕೃತರು. ಏಕೋದ್ದಿಷ್ಟ ಅಥವಾ ಸಪಿಂಡೀಕರಣವು ನೈಮಿತ್ತಿಕಸಂಸ್ಕೃತಗಳಾದ್ದರಿಂದ “ಕಾಮ ಕಾಲರು. ನಾಂದೀಶ್ರಾದ್ಧದಲ್ಲಿ “ಸತ್ಯವಸ್ತು ಸಂಸ್ಕೃತಗಳು. ಗರ್ಭಾಧಾನ, ಪುಂಸವನ, ಸೀಮಂತ ಇವುಗಳ ಅಂಗವಾದ ಮತ್ತು ಅಕ್ಷಾಧಾನ, ಸೋಮಯಾಗ ಇವುಗಳ ಅಂಗವಾದಾಗ ನಾಂದೀಶ್ರಾದ್ಧ, ಇಷ್ಟಿಶ್ರಾದ್ಧ ಹಾಗೂ ಕರ್ಮಾಂಗಶ್ರಾದ್ದ ಸಂಜ್ಞೆಯೂ ಉಂಟಾಗುವದರಿಂದ ಇವುಗಳಲ್ಲಿ “ಕ್ರತುದಕ್ಷ” ಸಂಜ್ಞಕ ವಿಶ್ವೇದೇವತೆಗಳು. ಪಿತೃ, ಮಾತಾಮಹ ಈ ಎರಡು ಪಾರ್ವಣದವರಲ್ಲಿ ಮೊದಲನೆಯವನು ಜೀವಿಸಿರುವಲ್ಲಿ ಮಾತೃಪಾರ್ವಣ ಒಂದನ್ನೇ ಮಾಡಬೇಕಾದಾಗ “ದೇವ” ರಹಿತವಾಗಿಯೇ ನಾಂದೀಶ್ರಾದ್ಧ ಮಾಡತಕ್ಕದ್ದು. ಹೀಗೆಯೇ ಪಾರ್ವಣತ್ರಯವನ್ನೂ ಬೇರೆ ಬೇರೆಯಾಗಿ ಮಾಡಿ, ನಾಂದೀಶ್ರಾದ್ಧ ಮಾಡುವಾಗ ಅವುಗಳೊಳಗೂ ಮಾತೃಪಾರ್ವಣವನ್ನು ದೇವರಹಿತವಾಗಿ ಮಾಡತಕ್ಕದ್ದು. ನಾಂದೀಶ್ರಾದ್ಧವನ್ನು ಮೂರುದಿನ ಮಾಡುವ ಕ್ರಮದಲ್ಲಿ ಕ್ರಮದಿಂದ ಮೂರು ಪಾರ್ವಣಗಳನ್ನು ಮಾಡತಕ್ಕದ್ದು. ಇನ್ನು ಒಂದೇ ದಿನ ಪೃಥಕ್ ಪೃಥಕ್ಕಾಗಿ ಪಾರ್ವಣತ್ರಯ ಮಾಡುವಲ್ಲಿ ಸಹತಂತ್ರದಿಂದಲಾದರೂ ಮಾಡಬಹುದು. ಹೀಗೆ ಮೂರು ಪಕ್ಷಗಳಿರುವವು. ನಿತ್ಯಶ್ರಾದ್ಧವನ್ನು ದೇವರಹಿತವಾಗಿ ಮಾಡತಕ್ಕದ್ದು, ಹೀಗೆಯೇ ಸಪಿಂಡೀಕರಣಕ್ಕಿಂತ ಮೊದಲು ಮಾಡುವ ಏಕೋದ್ದಿಷ್ಟ ಶ್ರಾದ್ಧಗಳಾದರೂ ದೇವರಹಿತವಾಗಿ ಆಗತಕ್ಕದ್ದೆಂದು ತಿಳಿಯತಕ್ಕದ್ದು. ಹೀಗೆ ಶ್ರಾದ್ಧದೇವತಾ ನಿರ್ಣಯ. ಶ್ರಾದ್ಧದಲ್ಲಿ ಬ್ರಾಹ್ಮಣರು ಜಾತಕರ್ಮಾದಿ ಸಂಸ್ಕಾರದಿಂದ ಸಂಸ್ಕೃತನಾದ, ಸತ್ಯಮಾತಾಡುವ, ಶುಚಿರ್ಭೂತನಾದ ವೇದಾಧ್ಯಯನಯುಕ್ತನಾದ, ಷಟ್ಕರ್ಮ ನಿರತನಾದ, ಪ್ರಖ್ಯಾತ ತಂದೆ ಮೊದಲಾದ ಮೂರು ಪಿತೃಗಳುಳ್ಳ (ಇಂಥ) ಬ್ರಾಹ್ಮಣನೇ ಶ್ರಾದ್ಧಕ್ಕೆ ಯೋಗ್ಯನು. ಹೀಗೆ ಸಾಮಾನ್ಯವಾಗಿ ಬ್ರಾಹ್ಮಣನ ಲಕ್ಷಣವನ್ನು ಹೇಳಲಾಯಿತು. ಅದರಲ್ಲಿ ಉತ್ತಮ, ಮಧ್ಯಮ, ಕನಿಷ್ಠ ಹೀಗೆ ಮೂರು ಭೇದಗಳಿವೆ. ಉತ್ತಮ ಬ್ರಾಹ್ಮಣನೆಂದರೆ-ವೇದಾಧ್ಯಯನ ಮಾಡಿದವ, ವೇದಾಂಗಗಳನ್ನಭ್ಯಾಸ ಮಾಡಿದವ, ವ್ಯಾಕರಣ, ಮೀಮಾಂಸಾದಿಗಳನ್ನು ಬಲ್ಲಾದವ, ಪೌರಾಣಿಕ, ವೇದಾಂತಿ, ಧರ್ಮಶಾಸ್ತ್ರಜ್ಞ ಇವರು ಹಾಗೂ ಇವರ ಪುತ್ರರು, ಬ್ರಹ್ಮಜ್ಞಾನಿ, ವೇದಾರ್ಥಜ್ಞ ಕರ್ಮನಿ, ತಪೋನಿಷ್ಠ, ಯೋಗಿ, ಮಾತಾಪಿತೃ ಶುಶೂಷಕ, ಸ್ವಧರ್ಮಾಸಕ್ತ, ಎಳೆವಯಸ್ಸಿನವನಾದರೂ ಅಗ್ನಿಹೋತ್ರಿಯಾದವ, ಸೋಮಯಾಗಾದಿ ಯಜ್ಞನಿರತ, ಶಿವ-ವಿಷ್ಣು ಭಕ್ತ, ಸ್ವಯಲ್ಲಿ ಋತುಕಾಲದಲ್ಲಿ ಗಮನಮಾಡುವವ, ಗುರುಭಕ್ತ, ಜ್ಞಾನನಿಷ್ಠ, ಸೋಮಯಾಗಾದಿಗಳನ್ನು ಮಾಡುತ್ತಿರುವವ, ಸತ್ಯವಕ್ರ, ಒಳ್ಳೇಶೀಲವುಳ್ಳವ, ಸ್ನಾತಕ, ಸಂನ್ಯಾಸಿ, ಬ್ರಹ್ಮಚಾರಿ ಇವರೆಲ್ಲ ಉತ್ತಮ ಬ್ರಾಹ್ಮಣರಲ್ಲಿ ಸೇರುವವರು. ಇವರೆಲ್ಲರೂ ಸಪಕರೂ, ಯೌವನಾವಸ್ಥೆಯಲ್ಲಿರುವವರೂ, ಸಾಪಿಂಡ ಸಂಬಂಧ, ಯೋನಿಸಂಬಂಧ, ಶಿಷ್ಟತ್ಯಾದಿ ಸಂಬಂಧರಹಿತರೂ ಆಗಿರಬೇಕು. ಕುಷ್ಕ, ಅಪಸ್ಮಾರ ಮೊದಲಾದ ೪೨೦ ಧರ್ಮಸಿಂಧು ದೋಷವಿರಬಾರದು. ಹೀಗಾದರೆ “ಉತ್ತಮ"ರನ್ನಲ್ಪಡುವರು. ಸಾಪಿಂಡ ಸಂಬಂಧವೆಂದರೆ ದಶಾಹಸೂತಕ ಬಳಸುವವರು. ಸಪಿಂಡ, ಸಗೋತ್ರ, ಸೋದಕರು ಇವರೆಲ್ಲ ಸಾಪಿಂಡ್ಕ ಸಂಬಂಧದಲ್ಲಿ ಬರುವರು. ಯೋನಿಸಂಬಂಧವೆಂದರೆ ಮಾತುಲತ್ವ, ಶ್ವಶುರತ್ವ, ಶಾಲಕತ್ವ, ಆದಿಶಬ್ದದಿಂದ ಗುರುತ್ವ, ಸಹಾಧ್ಯಾಯಿತ್ನ, ಮಿತ್ರತ್ವ ಮೊದಲಾದ ಸಂಬಂಧವುಳ್ಳವರು. ಹೀಗೆ ಸಪಕತ್ವಾದಿ ಗುಣಯುಕ್ತ ಹಾಗೂ ಹೇಳಿದ ಸಂಬಂಧ ರಹಿತ, ಅಪಸ್ಮಾರಾದಿ ದೋಷರಹಿತ, ವೇದಾಧ್ಯಾಯಿತ್ವ ಮೊದಲಾದ ಇಪ್ಪತ್ತೇಳು ಲಕ್ಷಣಯುಕ್ತ ಇವರು " ಉತ್ತಮ"ರು ಎಂಬುದು ಸಿದ್ಧವು. ಇದರಲ್ಲಿ ಒಂದು ವಿಶೇಷವಿದೆ. ಒಂದೇ ಬ್ರಾಹ್ಮಣನನ್ನು ಶ್ರಾದ್ಧದಲ್ಲಿ ಭೋಜನಮಾಡಿಸುವದಿದ್ದರೆ ಅಥರ್ವಣ ವೇದದವನನ್ನೇ ಆಮಂತ್ರಿಸಬೇಕು. ಯಾಕೆಂದರೆ ಆತನಲ್ಲಿ ಋಕ್, ಯಜು, ಸಾಮ ಈ ಮೂರು ವೇದಗಳೂ ಇರುತ್ತವೆ. ನಾಲ್ಕುಮಂದಿ ಬ್ರಾಹ್ಮಣರನ್ನು ನಿಮಂತ್ರಿಸುವಾಗ ಪಿತೃಸ್ಥಾನದಲ್ಲಿ “ಋಗ್ವದಿ"ಯನ್ನೂ, ಪಿತಾಮಹ ಸ್ಥಾನದಲ್ಲಿ “ಯಜುರ್ವೇದಿ"ಯನ್ನೂ, ಪ್ರಪಿತಾಮಹನ ಸ್ಥಾನದಲ್ಲಿ “ಸಾಮವೇದಿ"ಯನ್ನೂ, ವಿಶ್ವೇದೇವ ಸ್ಥಾನದಲ್ಲಿ ಅಥರ್ವವೇದಿ’ಯನ್ನೂ ಕೂಡ್ರಿಸತಕ್ಕದ್ದೆಂದು ವಚನವಿದೆ. ಇದರಿಂದ “ತನ್ನ ಶಾಖೆಯ ಬ್ರಾಹ್ಮಣರ ಅಭಾವದಲ್ಲಿ ಅನ್ಯ ಶಾಖೆಯ ಬ್ರಾಹ್ಮಣರನ್ನು ನಿಮಂತ್ರಿಸತಕ್ಕದ್ದು” ಎಂಬ ಉಕ್ತಿಯು ನಿರಸ್ತವಾಗುವದು. (ತಿರಸ್ಕೃತ) ಕೆಲವರು ಯಥಾಕನ್ಯಾ ತಥಾಹವಿ:” ಹೀಗಿರುವದರಿಂದ ಯಾರಲ್ಲಿ ಪರಸ್ಪರ ಸ್ತ್ರೀ ಸಂಬಂಧವಿರುವದೋ ಅಂಥ ಪರಶಾಖೆಯವರು ಶ್ರಾದ್ಧಕ್ಕೆ ಅರ್ಹರೆಂದು ಹೇಳುವರು. ಆದರೆ ಇದು ನಿರ್ಮೂಲವಾದದ್ದು. ಕೆಲವರು ಶ್ರಾದ್ಧ ಕರ್ತೃವಿನ ಸಗೋತ್ರರೂ, ಸಮಾನ ಪ್ರವರವುಳ್ಳವರೂ ವರ್ಜರು. ಯಾಕೆಂದರೆ “ಪಿತೃಪುತ್ರರು, ಅಣ್ಣ ತಮ್ಮಂದಿರು, ನಿರಗ್ನಿಯಾದವನು, ಗರ್ಭಿಣೀಪತಿಯು, ಸಮಾನಗೋತ್ರಪ್ರವರ ಉಳ್ಳವನು ಇತ್ಯಾದಿಗಳನ್ನು ಶ್ರಾದ್ಧದಲ್ಲಿ ಬಿಡಬೇಕು” ಎಂದು ವಚನವಿದೆ- ಹೀಗೆ ಹೇಳುವರು. ಯತಿಗಳು ಶ್ರಾದ್ಧದಲ್ಲಿ ಭೋಜನಾರ್ಥಕ್ಕಾಗಿ ಇದ್ದರೆ ಮಾಂಸ, ಮಧುರಹಿತ ಆಹಾರವಿರತಕ್ಕದ್ದು. ಯತಿಗಳಿಂದ ಶ್ರಾದ್ಧದಲ್ಲಿ ದಕ್ಷಿಣಾ, ಆಶೀರ್ವಾದ ಇತ್ಯಾದಿಗಳಿಲ್ಲದಿದ್ದರೂ ಶ್ರಾದ್ಧವು ಪೂರ್ಣವಾಗುವದೆಂದು ವಚನವಿದೆ. ಆದರೆ ಇದು ಯತಿಯ ಪ್ರಾಶಸ್ತ್ರಹೇಳುವ ವಚನವೆಂದು ತಿಳಿಯತಕ್ಕದ್ದು. ಮಧ್ಯಮ ವಿಪ್ರರು ಮಾತಾಮಹ, ಮಾತುಲ, ಭಗಿನೀಪುತ್ರ, ಮಗಳಮಗ, ಅಳಿಯ, ಗುರು, ಶಿಷ್ಯ, ಯಜ್ಞಮಾಡಿಸಲ್ಪಟ್ಟಿವೆ, ಮಾವ, ಋತ್ವಿಜ, ಭಾವ, ತಂದೆಯ ತಂಗಿಯ ಮಗ, ತಾಯಿಯ ತಂಗಿಯ ಮಗ, ಸೋದರಮಾವನ ಮಗ, ಅತಿಥಿ, ಸಗೋತ್ರದವ, ಮಿತ್ರ ಇವರು “ಮಧ್ಯಮ"ರು. ಪುತ್ರಿಯ ಪುತ್ರ, ಅಳಿಯ, ತಂಗಿಯ ಮಗ ಇವರು ವಿದ್ಯಾದಿ ಬಹುಗುಣವುಳ್ಳವರಾದರೆ ಅಂಥವರನ್ನು ಶ್ರಾದ್ಧಕ್ಕೆ ನಿಮಂತ್ರಿಸದಿದ್ದರೆ ದೋಷವನ್ನು ಹೇಳಿದೆ. ಗುಣಹೀನರಾದರೆ ಬಿಟ್ಟರೂ ದೋಷವಿಲ್ಲ. ಗೋತ್ರದವರಲ್ಲಿ ಆರು ತಲೆಮಾರಿನವರೊಳಗಾದರೆ ಶ್ರಾದ್ದಕ್ಕೆ ಅಯೋಗ್ಯರು. ಅದಕ್ಕೂ ಹಿಂದಿನವರಿಗೆ ದೋಷವಿಲ್ಲ: ಅಥವಾ ಬ್ರಾಹ್ಮಣರ ಅಭಾವದಲ್ಲಿ ಹೇಳಿದ ಗೋತ್ರದವರಾದರೂ ಅಡ್ಡಿ ಇಲ್ಲ. ಪರಿಚ್ಛೇದ - ೩ ಉತ್ತರಾರ್ಧ ೪೨೧ ಇದರಲ್ಲಿ ವಿಶೇಷವೇನೆಂದರೆ- ಋತ್ವಿಜ, ಸಪಿಂಡ, ಸಂಬಂಧಿ, ಶಿಷ್ಯ ಇವರನ್ನು ವಿಶ್ವೇದೇವರ ಸ್ಥಾನದಲ್ಲಿ ಕೂಡ್ರಿಸಬೇಕು, ಹೊರತು ಪಿತೃಸ್ಥಾನದಲ್ಲಿ ಕೂಡ್ರಿಸಬಾರದು. ಇದರಂತೆ ಉಳಿದ ಗುಣಹೀನರನ್ನು ವಿಶ್ವೇದೇವ ಸ್ಥಾನದಲ್ಲಿ ನಿಯೋಚಿಸತಕ್ಕದ್ದು. ಪಿತೃ, ಪಿತಾಮಹ, ಭ್ರಾತೃ, ಪುತ್ರ, ಸಪಿಂಡರು, ಋತ್ವಿಜರು ಇವರನ್ನು ಶ್ರಾದ್ಧದಲ್ಲಾಮಂತ್ರಿಸಿದರೆ ಪೂಜ್ಯ, ಪೂಜಕತ್ವವುಂಟಾಗುವದಿಲ್ಲ. ಇವರು ಅತ್ಯಂತ ಗುಣಯುಕ್ತರಾದರೆ ವಿಶ್ವೇದೇವರ ಸ್ಥಾನದಲ್ಲಿ ನಿಯೋಜಿಸಬಹುದು. ವರ್ಜ ವಿಪ್ರರು ಕ್ಷಯ, ಶ್ವಾಸ, ಮೂತ್ರಕೃ, ಭಗಂದರೆ ಮೊದಲಾದ ಮಹಾರೋಗವುಳ್ಳವ, ಹೀನವಾದ ಅಂಗವುಳ್ಳವ, ಹೆಚ್ಚಾದ ಅವಯವವುಳ್ಳವ, ಒಕ್ಕಣ್ಣಿನವ, ಕಿವುಡ, ಮೂಕ, ಶತ್ರು, ವಂಚಕ, ಸಂಬಳತೆಗೆದುಕೊಂಡು ಕಲಿಸುವವ, ಮಿತ್ರದ್ರೋಹಿ, ಮುತ್ಸರಿ, ಕಟ್ಟ ಉಗುರಿನವ, ಕಪ್ಪುಹಲ್ಲುಗಳುಳ್ಳವ, ನಪುಂಸಕ, ಮಾತಾ-ಪಿತೃ-ಗುರುಗಳ ತ್ಯಾಗಮಾಡಿದವ, ಚೋರ, ನಾಸ್ತಿಕ, ಪಾಪಕರ್ಮ ಮಾಡುವವ, ವಿಹಿತಕರ್ಮವನ್ನು ಮಾಡದವ, ನಕ್ಷತ್ರವಿದ್ಯೆ (ಜ್ಯೋತಿಷ)ಯಿಂದ ಜೀವಿಸುವವ, ವೈದ್ಯ, ರಾಜನೌಕರ, ಗಾಯಕ, ಲೇಖಕ, ಬಡ್ಡಿಯಿಂದ ಜೀವಿಸುವವ, ವೇದವನ್ನು ವಿಕ್ರಯಿಸುವವ, ಕವಿತೆಯಿಂದ ಜೀವಿಸುವವ, ದೇವಪೂಜೆಯಿಂದ ಜೀವಿಸುವವ, ನಾಟ್ಯ ಮಾಡುವವ, ಮನೆಗೆ ಬೆಂಕಿಹಾಕಿದವ, ಸಮುದ್ರ ಪರ್ಯಟನ ಮಾಡುವವ, ಆಯುಧವನ್ನು ತಯಾರಿಸುವವ, ಸೋಮರಸವನ್ನು ವಿಕ್ರಯಿಸುವವ, ಪಕ್ಷಿಯನ್ನು ಸಾಕುವವ, ಅಣ್ಣನ ಲಗ್ನವಾಗದೆ ತಾನು ಲಗ್ನವಾದವ, ಹಿರಿಯವಳ ಲಗ್ನವಾಗದೆ ಕಿರಿಯವಳ ಲಗ್ನ ಮಾಡಿಕೊಂಡವ, ತೀರ ಸಣ್ಣ ಬಾಲಕರಿಗೆ ಪಾಠ ಹೇಳುವವ, ಮಗನಿಂದ ವಿದ್ಯೆಯನ್ನು ಕಲಿತವ, ದ್ರವ್ಯ ಪ್ರಾಪ್ತಿಗಾಗಿ ವೇದಘೋಷ ಮಾಡುವವ ಗ್ರಾಮಪುರೋಹಿತ, ಕೇಶಪಶುಗಳನ್ನು ವಿಕ್ರಯಿಸುವವ, ಶಿಲ್ಪಿ, ತಂದೆಯೊಡನೆ ಜಗಳಾಡುವವ, ಶೂದ್ರ ಪೌರೋಹಿತ್ಯ ಮಾಡಿಸುವವ, ಜಡೆಯನ್ನು ಬೆಳೆಸಿದವ, ಮೀಸೆಯಿಂದ ರಹಿತನಾದವ, ದಯಾರಹಿತನಾದವ, ರಜಸ್ವಲಾಸ್ತ್ರೀ ಪತಿ, ಗರ್ಭಿಣಿಪತಿ, ಕುಳ್ಳ, ಮುದುಡಿದವ, ಕೆಂಪುಕಣ್ಣಿನವ, ವ್ಯಾಪಾರದಿಂದ ಜೀವಿಸುವವ, ಕತ್ತರಿಸಿದ ತುಟಿ ಹಾಗೂ ಲಿಂಗವುಳ್ಳವ, ಗಂಡಮಾಲೆಯ ರೋಗವುಳ್ಳವ, ಜ್ವರವಿರುವವ, ಧನಕ್ಕಾಗಿ ದೇವರಪೂಜೆ ಮಾಡುವವ, ಹೆಂಡತಿಯಿಲ್ಲದವ, ಅಗ್ನಿರಹಿತನಾದವ, ಶೂದ್ರರಿಗೆ ಗುರುವಾದವ, ಶೂದ್ರನಿಗೆ ಶಿಷ್ಯನಾದವ, ದಾಂಭಿಕ, ಗೋವಿಕ್ರಯ ಮಾಡುವವ, ರಸವಸ್ತುಗಳನ್ನು ವಿಕ್ರಯಿಸುವವ, ವೇದವನ್ನು ನಿಂದಿಸುವವ, ಮರಗಳನ್ನು ಕಡಿವವ, ಕೃಪಣ, ಯಾವಾಗಲೂ ಬೇಡುವವ, ಕೃಷಿಯಿಂದ ಜೀವಿಸುವವ, ಸಾಧುಜನರಿಂದ ನಿಂದಿಸಲ್ಪಟ್ಟವ, ಕುರಿ, ಮಹಿಷ ಮೊದಲಾದವುಗಳನ್ನು ಸಾಕುವವ, ಕಂದುಬಣ್ಣದ ಕೇಶ (ಕಪಿಲಲೇಶ) ವುಳ್ಳವ, ವೇದವನ್ನು ಮರೆತವ, ಕಠಿಣಭಾಷೆಯನ್ನಾಡುವ ಇತ್ಯಾದಿ ಬ್ರಾಹ್ಮಣರು ಹವ್ಯ ಮತ್ತು ಕವ್ಯಗಳಲ್ಲಿ ವರ್ಜರು. ಧರ್ಮಾರ್ಥಕ್ಕಾಗಲೀ, ಉದರಾರ್ಥವಾಗಿಯಾಗಲೀ ಔಷಧ ತಯಾರಿಸುವವನು ವರ್ಜನು. ದ್ರವ್ಯಾಪೇಕ್ಷೆಯಿಂದ ಮೂರು ವರ್ಷ ಸತತ ದೇವಪೂಜೆ ಮಾಡಿದವನಿಗೆ “ದೇವಲಕ"ನೆನ್ನುವರು. ಆತನು ಎಲ್ಲ ಕಾಲಗಳಲ್ಲೂ, ಸಕಲ ಕರ್ಮಗಳಲ್ಲೂ ವರ್ಜನು. ಇದು ಮನುಷ್ಯ ಸ್ಥಾಪಿತ ದೇವರಪೂಜೆಯ ವಿಷಯವಾಗಿ ಹೇಳಿದ್ದೆಂದು ತೋರುತ್ತದೆ. ಅಣ್ಣನು ಇರುತ್ತಿರಲು ಕನಿಷ್ಕನು ವಿವಾಹ, ಅಗ್ನಿಹೋತ್ರಗಳನ್ನು ಸ್ವೀಕರಿಸಿದರೆ ಅವನಿಗೆ ೪೨೨ ಧರ್ಮಸಿಂಧು “ಪರಿವೇತ್ತಾ” ಅನ್ನುವರು. ಅಣ್ಣನಿಗೆ “ಪರಿಮಿತಿ"ಯೆಂದು ಹೆಸರು. ಅಣ್ಣನ ಅನುಜ್ಞೆಯಿದ್ದಲ್ಲಿ ಅಡ್ಡಿಯಿಲ್ಲವೆಂದು ಹಿಂದೆ ಹೇಳಿದೆ. ಅದರಂತ ಹಿರಿಯವಳಿಗೆ ಲಗ್ನವಾಗದೆ ಕಿರಿಯವಳು ವಿವಾಹವಾದರೆ ಅವಳಿಗೆ “ಅಗ್ರೇದಿಧಿಷ’ ಎಂದೂ, ಹಿರಿಯಳಿಗೆ “ದಿಧಿಗೂ” ಎಂದೂ ಹೇಳುವರು. ದೇವತಾಪ್ರತಿಮೆಯನ್ನು ವಿಕ್ರಯಿಸುವವ, ಜೀವನಾರ್ಥವಾಗಿ ಬೇರೆಯವರ ಅಸ್ತಿಗಳನ್ನು ಒಯ್ಯುವವ ಇವರು “ಪತಿತರಾಗುವರು. ಗಾಯನ, ನರ್ತನಾದಿಗಳು ಉದರಾರ್ಥವಾಗಿ ನಿಷಿದ್ಧವೇ ಹೊರತು ಭಗವದಾರಾಧನದ ಬಗ್ಗಾಗಿ ನಿಷಿದ್ಧವಲ್ಲ. ಇಲ್ಲಿ “ಗ್ರಾಹ್ಯವಿಪ್ರರು” ಎಂದು ಹೇಳಿದ್ದರಿಂದಲೇ ಉಳಿದವರು “ಅಗ್ರಾಹ್ಮರು” ಎಂದಾಗುವದರಿಂದ ಪುನಃ ವರ್ಜಪರಿಗಣನೆಯಾಕೆ? ಅಂದರೆ ವರ್ಜಗಳಿಗೆ ಹೊರತಾದ ನಿರ್ಗುಣರಾದವರಿಗೂ “ಗ್ರಾಹ್ಯತ್ವ ಹೇಳುವದಕ್ಕಾಗಿ” ಎಂದು ತಿಳಿಯತಕ್ಕದ್ದು. ವಿದ್ಯಾ, ಶೀಲಾದಿಗುಣಗಳಿರುವಾಗ ಕುಷ್ಠಿತ್ವ, ಕಾಣತ್ವ ಮೊದಲಾದ ಶರೀರ ಸಂಬಂಧ ದೋಷಗಳಿಗೆ ನಿಂದ್ಯವಿಲ್ಲ. ಗಯಯಲ್ಲಿ ನಿರ್ಗುಣಿಗಳನ್ನಾದರೂ ಭೋಜನಮಾಡಿಸತಕ್ಕದ್ದು. ಅಲ್ಲಿ ಕುಲ, ಶೀಲ, ವಿದ್ಯಾ, ತಪಸ್ಸು ಇವುಗಳನ್ನು ವಿಚಾರಿಸತಕ್ಕದ್ದಿಲ್ಲ. ಬ್ರಾಹ್ಮಣರ ಅರ್ಚನೆಯಿಂದ ದೇವತೆಗಳು, ಪಿತೃಗಳು, ಗುಹ್ಯಕರು ಸಂತುಷ್ಟರಾಗುವರು. ಇತ್ಯಾದಿ ವಚನಗಳಿವೆ. ತೀರ್ಥಕ್ಷೇತ್ರಗಳಲ್ಲಿರುವ ಬ್ರಾಹ್ಮಣರನ್ನು ಪರೀಕ್ಷಿಸಬಾರದು. ಇನ್ನು ‘ಧರ್ಮಜ್ಞನಾದವನು ದೈವಕರ್ಮದಲ್ಲಿ ಬ್ರಾಹ್ಮಣರನ್ನು ಪರೀಕ್ಷಿಸಬಾರದು. ಪಿತೃಕಾರ್ಯದಲ್ಲಿ ಅವಶ್ಯವಾಗಿ ಪರೀಕ್ಷಿಸತಕ್ಕದ್ದು ಎಂದು ಇದೆ. ಈ ವಚನದಂತೆ ಸಂಭವ ಇದ್ದಲ್ಲಿ ಪರೀಕ್ಷಿಸುವದು. ಬ್ರಾಹ್ಮಣಾಭಾವ ಮೊದಲಾದವುಗಳಲ್ಲಿ ಪರೀಕ್ಷಿಸುವ ಕಾರಣವಿಲ್ಲ ಎಂದು ಅದರ ತಾತ್ಪರ್ಯವು ಒಳ್ಳೆ ನಿಯಮದಲ್ಲಿರುವ ಬರೇ ಗಾಯತ್ರಿ ಉಪಾಸಕನು ಶ್ರೇಷ್ಠನು. ಪರಂತು, ಸರ್ವವನ್ನೂ ತಿನ್ನುವ, ಸರ್ವವನ್ನೂ ವಿಕ್ರಯಿಸುವ ದುಷ್ಕರ್ಮಿಯು ಚತುರ್ವೇದಪಾರಂಗತನಾದರೂ ವರ್ಜನಂದಭಿಪ್ರಾಯ” ಹೀಗೆ ಹೇಮಾದ್ರಿಯಲ್ಲಿ ವ್ಯಾಸವಚನವಿದೆ. ಮತ್ತು ಅದೇ ವ್ಯಾಸ ಸವಚನದಂತ -ಶ್ರಾದ್ಧದಲ್ಲಿ ವೇದಪಾರಂಗತರ ಸಂಗಡ “ಕಾಣ” ಮೊದಲಾದವರನ್ನು ಭೋಜನಮಾಡಿಸತಕ್ಕದ್ದು. ಬ್ರಾಹ್ಮಣರನ್ನು ನಿಮಂತ್ರಣಕ್ಕಿಂತ ಮೊದಲು ಪರೀಕ್ಷಿಸಬೇಕೇ ಹೊರತು ನಿಮಂತ್ರಣಾನಂತರ ಪರೀಕ್ಷಿಸತಕ್ಕದ್ದಲ್ಲ. ಹೀಗೆ ಬ್ರಾಹ್ಮಣವಿಚಾರವು. ಶ್ರಾದ್ಧಯೋಗ್ಯವಾದ ವಸ್ತುಗಳು ದರ್ಭೆಯ ಸಂಗ್ರಹಕ್ಕೆ ಕಾಲ, ಮಂತ್ರ, ಹಾಗೂ ದರ್ಭೆಯ ಭೇದ ಇವುಗಳನ್ನು ಎರಡನೆಯ ಪರಿಚ್ಛೇದದಲ್ಲಿಯೇ ಹೇಳಿದೆ. ವಿಶೇಷವನ್ನು ಈಗ ಹೇಳಲಾಗುತ್ತಿದೆ. ದರ್ಭೆ (ಕುಶ) ಇದು ಮುಖ್ಯವು, ಕುಶದ ಅಭಾವದಲ್ಲಿ ಕಾಶ (ಜೊಂಡು ಹುಲ್ಲು), ದೂರ್ವಾ, ವಾಳ, ಹುಲ್ಲು ಇವುಗಳನ್ನುಪಯೋಗಿಸುವದು. ಇವುಗಳಲ್ಲಿ ಕಾಶ, ದೂರ್ವಾ ಪವಿತ್ರಧರಿಸಿದ ಹಸ್ತನಾದಾಗ ಆಚಮನ ಮಾಡಬಾರದು. ದರ್ಭಪವಿತ್ರಗಳನ್ನು ಎರಡೂ ಹಸ್ತಗಳ ಅನಾಮಿಕಾ ಬೆರಳುಗಳಲ್ಲಿ ಧರಿಸುವದು. ಇಲ್ಲವೆ ಒಂದು ಅನಾಮಿಕೆಯಲ್ಲಾದರೂ ಧರಿಸಬೇಕು. ಅನಾಮಿಕಾ ಮಧ್ಯಗಂಟುಗಳಲ್ಲಿ ಧರಿಸಬೇಕು. ಮಧ್ಯದಲ್ಲಿ ಬೇರೆ ದಳವಿಲ್ಲದ ಮತ್ತು ತುದಿಯಿರುವ ದರ್ಭಗಳೆರಡರಿಂದ ಪವಿತ್ರ ಮಾಡತಕ್ಕದ್ದು, ಎರಡು ಅಥವಾ ನಾಲ್ಕು ದರ್ಭೆಗಳಿಂದ ಮಾಡಿದ ಗಂಟಿನಿಂದ ಯುಕ್ತ ಅಥವಾ ರಹಿತವಾದ ಪವಿತ್ರವನ್ನು ಮಾಡತಕ್ಕದ್ದು, ಸ್ನಾನ, ದಾನ, ಜಪ, ಹೋಮ, ವೇದಾಧ್ಯಯನ, ಪರಿಚ್ಛೇದ ೩ ುತ್ತರಾರ್ಧ ೪೨೩ ಪಿತೃಕಾರ್ಯ ಇವುಗಳಲ್ಲಿ ಗ್ರಂಥಿಯುಕ್ತ ಅಥವಾ ಕೇವಲ ದರ್ಭಗಳನ್ನು ಹಸ್ತಗಳಲ್ಲಿ ಹಾಕಿಕೊಳ್ಳುವದು. ಪವಿತ್ರದ ಹೊರತು ಯಾವ ಕರ್ಮವನ್ನೂ ಮಾಡಬಾರದು. ತಿಳಿದವನು ಬ್ರಹ್ಮಗ್ರಂಥಿಯುಕ್ತವಾದ ಪವಿತ್ರದಿಂದ ಯುಕ್ತನಾದಾಗ ಆಚಮನ ಮಾಡಬಾರದು. ಕೆಲವರು - ಗ್ರಂಥಿಮಾಡಿದ ಪವಿತ್ರಾಭಾವದಲ್ಲಿ ತುದಿಯುಳ್ಳ ಎರಡು ದರ್ಭೆಗಳನ್ನು ಬಲಹಸ್ತ ಹಾಗೂ ಎಡಹಸ್ತದಲ್ಲಿ ಎರಡು ಅಥವಾ ಮೂರು ದರ್ಭೆಗಳನ್ನು ಧರಿಸತಕ್ಕದ್ದೆಂದು ಹೇಳುವರು. ಆಸನಕ್ಕೆ ಎರಡು ದರ್ಭೆಗಳು, ಪಿತೃಕಾರ್ಯದಲ್ಲಿ ಬುಡಸಹಿತವಾದ ದ್ವಿಗುಣಿತಮಾಡಿದ ದರ್ಭಗಳು ಉಪಯುಕ್ತಗಳು. ದೇವಕಾರ್ಯದಲ್ಲಿ ತುದಿಸಹಿತವಾದ ಸರಳ ದರ್ಭೆಗಳನ್ನುಪಯೋಗಿಸುವದು. ಪಿತೃಕಾರ್ಯದಲ್ಲಾದರೂ ಸಪಿಂಡೀಕರಣಪರ್ಯಂತವಾಗಿ ಋಜು ದರ್ಭಗಳೇ. ಅದರ ನಂತರ ದ್ವಿಗುಣ ಹಾಗೂ ಮಡಚಿದ್ದು, ಪಿಂಡದ ಸಲುವಾಗಿ ಉಪಯೋಗಿಸಿದ ಹಾಗೂ ಪಿತೃತರ್ಪಣಕ್ಕೆ ಬಳಸಿದ, ಮಲಮೂತ್ರಗಳ ಕಾಲದಲ್ಲಿ ಧರಿಸಿದ, ಮಲ-ಮೂತ್ರಗಳ ಸ್ಪರ್ಶವಾದ, ಮಾರ್ಗ, ಚಿತಿ, ಯಜ್ಞಭೂಮಿ ಇವುಗಳಲ್ಲಿ ಹಾಸಿದ, ಆಸನಾದಿಗಳನ್ನುಪಯೋಗಿಸಿದ, ಬ್ರಹ್ಮಯಜ್ಞದಲ್ಲುಪಯೋಗಿಸಿದ ದರ್ಭಗಳು ತ್ಯಾಜ್ಯಗಳು, ಕುಶದೂರ್ವಾದಿಗಳಿಂದ ತಯಾರಿಸಿದ ಪವಿತ್ರವು ಬಂಗಾರದ ಪವಿತ್ರದ ಷೋಡಶಾಂಶ ಯೋಗ್ಯತೆಯನ್ನೂ ಹೊಂದಲಾರದು. ಐದು ಗುಂಜಿಗೆ ಒಂದು ಮಾಷ, ಈ ಮಾನದಿಂದ ಹದಿನಾರು ಮಾಷ ತೂಕ ಬಂಗಾರದಿಂದ ಪವಿತ್ರವನ್ನು ಮಾಡತಕ್ಕದ್ದೆನ್ನುವರು. ಶ್ರಾದ್ಧದಲ್ಲಿ ಹವಿಸ್ಸು ಭತ್ತದ ಅಕ್ಕಿ, ಜವ, ತಿಲ, ಗೋಧಿ, ಶಾಮಲಕ್ಕಿ, ನವಣೆ, ಪಚ್ಚೆಸರು, ಸಾಸಿವೆ ಇವು ಶ್ರಾದ್ಧಕ್ಕೆ ಪ್ರಶಸ್ತಿಗಳು. ಕಡಲೆಯು ವಿಕಲ್ಪವು. ಜೋಳವೂ ವಿಕಲ್ಪಿತವಾದದ್ದು. ಇಷ್ಟಾಪೂರ್ತ (ವಾಪೀಕೂಪಾದ್ಯುತ್ರ್ಗ) ಕರ್ಮಗಳಲ್ಲಿ ಮೃತಾಹಶ್ರಾದ್ಧದಲ್ಲಿ ದರ್ಶ, ವೃದ್ಧಿ, ಅಷ್ಟಕ ಶ್ರಾದ್ಧಗಳಲ್ಲಿ ಯೋಗ್ಯರಾದವರಿಗೆ ನಿಷಿದ್ಧ ಪದಾರ್ಥಗಳಿಂದ ಭೋಜನ ಮಾಡಿಸಬಾರದು. ಗೋಧಿ, ಉದ್ದು, ಹೆಸರು ಇವುಗಳಿಂದ ರಹಿತವಾದ, ತೈಲಪಕ್ವವಿಲ್ಲದ ಶ್ರಾದ್ಧವು ಮಾಡಿದಂತೆಯೇ ಅಲ್ಲ’ ಎಂದು ತಿಳಿಯತಕ್ಕದ್ದು. ಚವಳಿ, ವಾಟಾಣಿ, ಬಾಳೆಕಾಯಿ, ಮಾವಿನಕಾಯಿ, ಪಂಜರಗಡ್ಡೆ, ಹಲಸು, ಮಾವು ಮೂರುವಿಧದ ಸೌತೇಕಾಯಿ, ಹೀರೆಕಾಯಿ, ಕುತ್ತುಂಬರಿ, ಇವು ಶ್ರಾದ್ಧದಲ್ಲಿ ವಿಕಲ್ಪಿತಗಳು, ಪಡುವಲ, ಬೊಗರಿ, ನೆಲ್ಲಿ, ಖರ್ಜೂರ, ಹುಣಸೇಹಣ್ಣು, ಶುಂಠಿ, ಕೇಸುಗಡ್ಡೆ, ದ್ರಾಕ್ಷೆ, ಲವಂಗ, ಯಾಲಕ್ಕಿ, ಪತ್ರಿ, ಜೀರಿಗೆ, ಹಿಂಗು, ಡಾಳಿಂಬ, ಕಬ್ಬು, ಸಕ್ಕರೆ, ಬೆಲ್ಲ, ಕರ್ಪೂರ, ಸೈಂಧವ, ಸಾಮುದ್ರ- ಲವಣ, ಅಡಿಕೆ, ವೀಳ್ಯದೆಲೆ ಇವು ಶ್ರಾದ್ಧಕ್ಕೆ ಹೇಳಿದ ಹವಿಷ್ಯಗಳು. ಗೋವಿನ ಮೊಸರು, ಹಾಲು, ತುಪ್ಪ ಇವು ಗ್ರಾಹ್ಯಗಳು, ತುಪ್ಪವು ಎಮ್ಮೆಯದಾದರೂ ಅಡ್ಡಿ ಇಲ್ಲ. ಕೆಲವರು ಸದ್ಯದಲ್ಲೇ ತಯಾರಿಸಲಾದ, ಬೆಣ್ಣೆಯನ್ನು ತೆಗೆಯದಿರುವ, ಎಮ್ಮೆಯ ಮೊಸರಾದರೂ ಆಗಬಹುದೆನ್ನುವರು. ಕೆಲವರು-ಎಮ್ಮೆಯ ಹಾಲಿಗೆ ಸಕ್ಕರೆಯನ್ನು ಕೂಡಿಸಿದರೆ ಅಡ್ಡಿಯಿಲ್ಲವೆನ್ನುವರು. ಜಲವನ್ನು ಹಾಕದೆ ಕಡೆದ ಎಲ್ಲ ಮಜ್ಜಿಗೆಯೂ ನಿಷಿದ್ದವು. ಸಕ್ಕರೆಕಂಚಿಯು ನಿಷಿದ್ಧವೂ, ಗ್ರಾಹ್ಯವೂ ಅಂದರೆ ವಿಕಲ್ಪವು. ಅಕ್ರೋಡ, ಕೋಡು ಅವರ, ಕೆಮ್ಮುಂಡ, ಲೋಳಸರ ಇವು ಶ್ರಾದ್ಧಕ್ಕೆ ಗ್ರಾಹ್ಯಗಳು, ಅಮಟೆಕಾಯಿ, ಪಾಂಡವಹರಿಗೆ ಇವು ವಿಕಲ್ಪಗಳು, ಕೆಲವರು-ರಾಜಮಾಷ, ಕಪ್ಪಲ್ಲದ ಹೆಸರು, ಕಪ್ಪು ಅವರೆ ಇವು ೪೨೪ ಧರ್ಮಸಿಂಧು ನಿಷಿದ್ಧಗಳೆಂದು ಹೇಳುವರು. ಭೋಜನದಲ್ಲಿ ಮಧುವನ್ನು ಬಡಿಸದಿದ್ದರೂ ಚಿಂತೆಯಿಲ್ಲ. ಪಿಂಡಪ್ರದಾನವನ್ನು ಮಾತ್ರ ಮಧುವಿನ ಹೊರತಾಗಿ ಮಾಡಬಾರದು. “ಅಕ್ಷತಯೋನಿವಿವಾಹ, ಯಜ್ಞದಲ್ಲಿ ಗೋವಧೆ, ಶ್ರಾದ್ಧದಲ್ಲಿ ಮಾಂಸ, ಮಧು, ಮೈದುನನಿಂದ ಪುತ್ರೋತ್ಪತ್ತಿ- ಈ ಐದು ವಿಷಯವನ್ನು ಕಲಿಯುಗದಲ್ಲಿ ಬಿಡತಕ್ಕದ್ದು ಹೀಗೆ ಎರಡೂವಿಧವಾಗಿ ವಚನವಿರುವದರಿಂದ “ಮಧು"ವು ವಿಕಲ್ಪವೆಂದು ಕೆಲವರ ಅಭಿಪ್ರಾಯ. ಮಧು, ಮಾಂಸಾದಿಗಳನ್ನು ಆಚಾರಾನುಸಾರವಾಗಿ ಕೊಡತಕ್ಕದ್ದೆಂದು ಹೇಳಿರುವದರಿಂದ ದೇಶಾಚಾರದಂತೆ ಮಾಡತಕ್ಕದ್ದು. ಕಲಿಯುಗದಲ್ಲಿ ವರ್ಜವಾಗಿರುವದರಿಂದ ಮಾಂಸವು ವರ್ಜವು. ಶ್ರೀ “ಭಾಗವತ"ದಲ್ಲಿ - “ಶ್ರಾದ್ಧದಲ್ಲಿ ಮಾಂಸವನ್ನು ಕೊಡಬಾರದು. ಧರ್ಮಜ್ಞನಾದವನು ತಾನೂ ತಿನ್ನಬಾರದು” ಎಂದು ಹೇಳಿದೆ. ಕಾಡುಪಂಜರ, ದಾಲಚಿನ್ನಿ, ಕಮಲದಗಡ್ಡ, ಮರದರಿಶಿನ ಇತ್ಯಾದಿ ಬಹುಪದಾರ್ಥಗಳನ್ನು ಮಹಾನಿಬಂಧಗಳಲ್ಲಿ ಹೇಳಿದ, ಪರಂತು ಅವು ಅಪ್ರಸಿದ್ಧವಿರುವದರಿಂದ ಮತ್ತು ಶ್ರಾದ್ದ ವಿಷಯದಲ್ಲಿ ಅವಶ್ಯ ಉಪಯೋಗಿಗಳಲ್ಲದ್ದರಿಂದ ಇಲ್ಲಿ ಹೇಳಿಲ್ಲ. ಶ್ರಾದ್ದದಲ್ಲಿ ವರ್ಜಗಳು ಯದಪಿ ವಿಹಿತವಾದವುಗಳನ್ನು ಹೇಳಿದ್ದರಿಂದಲೇ ಅವುಗಳ ಹೊರತಾದವುಗಳು ನಿಷಿದ್ಧಗಳೆಂದು ತಾನೇ ಹೇಳಿದಂತಾಗುವದಾದರೂ ವಿಶೇಷ ದೋಷತೋರಿಸುವದಕ್ಕಾಗಿ “ಅಪ್ರಾಪ್ತ ನಿಷೇಧ” ಅಂದರೆ, ಪ್ರಾಪ್ತವಲ್ಲದವುಗಳ ನಿಷೇಧಭಾವನೆಗಾಗಿಯೂ ಅವುಗಳನ್ನು ಸಂಗ್ರಹಿಸಲಾಗುತ್ತಿದೆ. ಉತ್ಕಚ (ಲಂಚ) ಮೊದಲಾದವುಗಳಿಂದ ಪ್ರಾಪ್ತವಾದ, ಅಂತ್ಯಜ ಮೊದಲಾದವರಿಂದ ಪ್ರಾಪ್ತವಾದ, ಅನ್ಯಾಯ ಸಂಪಾದನೆ, ಕನ್ಯಾವಿಕ್ರಯ ಇತ್ಯಾದಿಗಳಿಂದ ಪ್ರಾಪ್ತವಾದ ಧನವು ತ್ಯಾಜ್ಯವು ಪಿತೃಕಾರ್ಯಕ್ಕಾಗಿ ಬೇಡಿ ತಂದದ್ದೂ ನಿಷಿದ್ದವು. ತೊಗರಿ, ಹುರಳಿ, ಹಾರಕಧಾನ್ಯ, ಕಪ್ಪುಸಾಸಿವೆ ಇವು ನಿಷಿದ್ಧಗಳು. ಮರ್ಕಟಿಕ (ಕಲಾಂಕ) ಎಂಬ ಧಾನ್ಯವಿಶೇಷ, ನುಗ್ಗಿ, ಕೂಷ್ಮಾಂಡ, ಎರಡುವಿಧ ಸೋರೆಕಾಯಿ, ಕಮರಿಕ ಗಿಡ, ಹಸಿಮೆಣಸು, ಕೆಂಪುಪಂಜರ, ಕುಸುಬೆಗಿಡ, ಸಣಬು, ಕಳತ, ಹತ್ತುವಿಧ ಬಳ್ಳುಳ್ಳಿ, ನೀರುಳ್ಳಿ ಮೊದಲಾದವುಗಳು, ಕೃತ್ರಿಮದಿಂದ ತಯಾರಿಸಿದ ಉಪ್ಪು, ಕೆಂಪುಬಿಲ್ವ, ಬಿಳೇ ಹಾಗೂ ಕಪ್ಪು ಬದನೇಕಾಯಿ, ಗಜ್ಜರಿ, ಅಂಟಿನಕಾಯಿ, ಕೆಂಪು ಅಂಟು ಇವು ವರ್ಜಗಳು, ಶ್ರಾದ್ಧದಲ್ಲಿ ಸಾಮುದ್ರ ಹಾಗೂ ಸೈಂಧವ ಲವಣಗಳನ್ನು ಪ್ರತ್ಯಕ್ಷವಾಗಿ ತಿನ್ನಬಹುದು. ಬೆಕ್ಕಿನ ಉತ್ಕೃಷ್ಟ ಹಾಗೂ ಮಾಸಿದ ವಸ್ತುವನ್ನು ಶ್ರಾದ್ಧದಲ್ಲಿ ಬಿಡತಕ್ಕದ್ದು. ಬಿದಿರಿನ ಮೊಳಕೆ, ವಾಯುವಿಳಂಗ, ಮೆಣಸು, ಕಂಚಿ, ಪಡುವಲಕಾಯಿ ಇವುಗಳನ್ನು ಶ್ರಾದ್ಧದಲ್ಲಿ ಕೊಟ್ಟರೆ ಅಧೋಗತಿಯು, ಶ್ರಾದ್ಧ ಕಾರ್ಯದಲ್ಲಿ ಎಳ್ಳು, ಉದ್ದು ಹೊರತಾಗಿ ಉಳಿದ ಎಲ್ಲ ಕಪ್ಪು ಧಾನ್ಯಗಳನ್ನು ಬಿಡತಕ್ಕದ್ದು. ನಿಂದ್ಯವಲ್ಲದ ಹಾಗೂ ಕರ್ತನಿಗೆ ಇಷ್ಟವಾದದ್ದನ್ನು ಕೊಡತಕ್ಕದ್ದು, ಕುರಿ, ಆಡು, ಎಮ್ಮೆ ಇವುಗಳ ಹಾಲು, ಮೊಸರು ಮೊದಲಾದವುಗಳು ಅಗ್ರಾಹ್ಯಗಳು. ಮಳಲು, ಹುಳ, ಹುಪ್ಪಡಿ, ಕಲ್ಲು, ಕೇಶ ಮೊದಲಾದವುಗಳು ಅನ್ನದಲ್ಲಿ ಬಿದ್ದರೆ ಮತ್ತು ವಸ್ತ್ರದಿಂದ ಬೀಸಲ್ಪಟ್ಟರೆ ಅದು ತ್ಯಾಜ್ಯ ಮಾಡುವದು. ಅಶುಚಿಗಳಾದ ಪಶುಪಕ್ಕಾದಿಗಳಿಂದ ಸ್ಪರ್ಶವಾದ, ಒಣಗಿರುವ, ಹಳಸಿದೆ, ಎರಡಾವರ್ತಿ ಬೇಯಿಸಿದ ಮತ್ತು ಕರಟಿದ, ಮೊದಲೇ ತಯಾರಿಸಿ ಇಟ್ಟಿರುವ, ಭಕ್ಷ್ಯ, ಅನ್ನಾದಿಗಳು ವರ್ಜಗಳು, ಒಂದಾವರ್ತಿ ಬೇಯಿಸಿದ, ತಿನ್ನಲು ಯೋಗ್ಯವಾದದ್ದನ್ನು ಪರಿಚ್ಛೇದ - ೩ ಉತ್ತರಾರ್ಧ ೪೨೫ ಹಿಂಗು, ಜೀರಿಗೆ ಮೊದಲಾದವುಗಳಿಂದ ಪುನಃ ಸಂಸ್ಕರಿಸಿ ಇನ್ನೂ ರುಚಿಕಟ್ಟಾಗಿ ಮಾಡಬೇಕೆಂದು ಪುನಃ ಪಕ್ವ ಮಾಡಿದಲ್ಲಿ ಅದು “ದ್ವಿಪಕ್ಷ“ವೆಂದಾಗುವದು. ಅದು ವರ್ಜವು ದ್ವಿಪಕ್ವವಾಗದ ಹೊರತು ತಿನ್ನಲು ಯೋಗ್ಯವಾಗದ ಭಕ್ಷವು ದ್ವಿಪಕ್ವವಾದರೂ ದೋಷವಿಲ್ಲವೆಂದು “ನಿರ್ಣಯಸಿಂಧು"ವಿನ ಮತವು. ಅನ್ನದ ಕೆಲಭಾಗವನ್ನು ಯಾವವನಾದರೂ ತಿಂದರೆ ಅದು ಶ್ರಾದ್ಧಕ್ಕೆ ವರ್ಜವಾಗುವದು. ರಾಜಗಿರ (ಕಿರುಚಿಲಸೊಪ್ಪು)ಅದರ ಪದಾರ್ಥವನ್ನೂ, ಧಾನ್ಯವನ್ನೂ ತ್ಯಾಜ್ಯಮಾಡತಕ್ಕದ್ದು. ಆಲ, ಬೀಣುಆಲ, ಅತ್ತಿ, ಬೆಳವಲ, ಈಚಲು, ಮಾದಲಕಾಯಿ ಇವು ಅಭಕ್ಷ್ಯಗಳು, ಲವಣದಿಂದ ಕೂಡಿದ ಹಾಲು, ತಾಮ್ರಪಾತ್ರದಲ್ಲಿಯ ಹಾಲು ಮೊದಲಾದ ಗೋರಸಗಳು ಇವು ಹೆಂಡಕ್ಕೆ ಸಮಾನವಾದವುಗಳು. ಇದಕ್ಕೆ ಅಪವಾದವೆಂದರೆ ತಾಮ್ರ ಪಾತ್ರದಲ್ಲಿದ್ದರೂ ಕೆನೆಯನ್ನು ತೆಗೆಯದಿರುವ ಹಾಲು, ಹಾಲಿನಿಂದ ಮಿಶ್ರವಾದ ಹಾಲು ಮತ್ತು ತುಪ್ಪ ಇವು ದೂಷಿತಗಳಾಗುವದಿಲ್ಲ. ಹಿಪ್ಪಲಿ, ಕಾಳುಮೆಣಸು ಮೊದಲಾದವುಗಳು ಪ್ರತ್ಯಕ್ಷ ಭಕ್ಷಣದಲ್ಲಿ ಮಾತ್ರ ದೋಷಕರವು, ಹೊರತು ಬೇರೆ ವಸ್ತುಗಳಿಂದ ಮಿಶ್ರಿತವಾದಲ್ಲಿ ದೋಷವಿಲ್ಲ. ತೆಂಗಿನಕಾಯಿಯು ವಿಹಿತವೂ, ನಿಷಿದ್ಧವೂ ಆಗಿದೆ. ಹಳೇಮಜ್ಜಿಗೆ, ಸಂಧಿನಿ ಮೊದಲಾದ ಮತ್ತು ಹಡೆದು ಹತ್ತು ದಿನ ಕಳೆಯದ ಆಕಳಿನ ಕ್ಷೀರ, ಚಿಗರೆ ಮೊದಲಾದವುಗಳ ಕ್ಷೀರ, ನೊರೆಬಂದ ಮಜ್ಜಿಗೆ, ಕೈಯಿಂದ ಬಡಿಸಿದ ತೈಲ, ಉಪ್ಪು ಮೊದಲಾದವುಗಳು, ಇವು ನಿತ್ಯಭೋಜನಕ್ಕೆ ನಿಷೇಧವಿರುವಾಗ ಶ್ರಾದ್ಧಕ್ಕೆ ಪುನಃ ಹೇಳುವದೇ ಬೇಡ. “ಮಾಧವೀಯ” ಗ್ರಂಥದಲ್ಲಿ - ಸತ್ತಿರುವ ನೊಣ, ಕೃಮಿ, ಜಂತು, ಉಗುರು, ಕೇಶ ಇತ್ಯಾದಿಗಳಿಂದ ದೂಷಿತವಾದದ್ದನ್ನು ಸಾಧ್ಯವಾದಲ್ಲಿ ಬಿಡತಕ್ಕದ್ದು. ಅಸಂಭವವಾದಲ್ಲಿ ಕೇಶಾದಿಗಳನ್ನು ತೆಗೆದುಹಾಕಿ, ಪ್ರೋಕ್ಷಿಸಿ, ಹಿರಣ್ಯ ಸ್ಪರ್ಶಮಾಡಿಸಿ ಭೋಜನಮಾಡತಕ್ಕದ್ದು, ನಾಯಿ, ಮಾರ್ಜಾರ, ಮೂಷಕ ಮೊದಲಾದವುಗಳಿಂದ ತಿನ್ನಲ್ಪಟ್ಟಿದ್ದನ್ನು ಆಪತ್ತಿನಲ್ಲೂ ಬಿಡತಕ್ಕದ್ದೆಂದು ಹೇಳಿದೆ. ಪಟ್ಟೆ ಅನ್ನ, ವಡೆ, ಹಿಟ್ಟು, ಪಾಯಸ, ಮೋದಕಾದಿ ಹಿಟ್ಟಿನಭಕ್ಷ್ಯ, ತಿಲಾನ್ನ ಮೊದಲಾದವುಗಳಿಗೆ “ಪರ್ಯುಷಿತತ್ವ’ ದೋಷವಿಲ್ಲವೆಂಬ ವಚನವು ನಿತ್ಯಭೋಜನಕ್ಕೇ ಹೊರತು ಶ್ರಾದ್ಧಾದಿಗಳಿಗಲ್ಲವೆಂದು ಶಿಷ್ಟರು ಹೇಳುವರು. ಯಾವದೇ ಅಗ್ನಿಯಿಂದ ಪಕ್ಷವಾದ ಭಕ್ತಾದಿಗಳು ಒಂದೆರಡು ರಾತ್ರಿ ಕಳೆದ ನಂತರ ಅವು ಪರ್ಯುಷಿತ ಎನ್ನಲ್ಪಡುತ್ತವೆ. ಕೃಪಣ ಮೊದಲಾದವರ ಅನ್ನವನ್ನು ನಿತ್ಯದಲ್ಲೂ, ಶ್ರಾದ್ಧಭೋಜನದಲ್ಲೂ ತ್ಯಜಿಸತಕ್ಕದ್ದು. “ಕದರ್ಯ” ಆದಿಗಳೆಂದರೆ-ಕೃಪಣ, ಚೋರ, ನಟ, ವೀಣೆಯಿಂದ ಜೀವಿಸುವವ, ಬಡ್ಡಿಯಿಂದ ಜೀವಿಸುವವ, ಶಾಪಗ್ರಸ್ತನಾದವ, ವೇಶೈಯರಿಗೆ ಚಿಕಿತ್ಸೆ ಮಾಡುವವ, ಕೋಪಿಷ್ಯ, ದುಷ್ಟಸ್ತ್ರೀಯರಲ್ಲಾಸಕ್ತನಾದವ, ಕ್ರೂರ, ಶತ್ರು, ಪತಿತ, ದಾಂಭಿಕ, ಇತ್ಯಾದಿಗಳು. ಇವರ ಅನ್ನವು ತ್ಯಾಜ್ಯವೆಂದಭಿಪ್ರಾಯ, ಇದಲ್ಲದೆ ಪತಿ, ಪುತ್ರ ರಹಿತಳಾದ ಸ್ತ್ರೀ, ಸ್ವರ್ಣಕಾರ, ಸ್ತ್ರೀಯಿಂದ ಜಯಿಸಲ್ಪಟ್ಟವ, ಗ್ರಾಮಪುರೋಹಿತ, ಹಿಂಸೆಮಾಡುವವ, ಕಮ್ಮಾರ, ನೇಯಿಗೆಯವ, ಕೃತಘ್ನ ರಜಕ, ಪತ್ನಿಯ ಮೂಲಕ ಜೀವಿಸುವವ, ಸೋಮರಸ ವಿಕ್ರಯಮಾಡುವವ, ಚಿತ್ತಾರ ಬರೆಯುವವ, ಗಾಯಕ ಇತ್ಯಾದಿಗಳು. ಇವರು ಬ್ರಾಹ್ಮಣರಿರಲಿ, ಕ್ಷತ್ರಿಯಾದಿಗಳಿರಲಿ ಇವರ ಅನ್ನವು ತ್ಯಾಜ್ಯವು. ಜಿಪುಣತನದಿಂದ ತನ್ನನ್ನೂ, ಧರ್ಮಕಾರ್ಯವನ್ನೂ, ಪುತ್ರ, ಪತ್ನಿಯರನ್ನೂ, ತಂದೆ ತಾಯಿಗಳನ್ನೂ, ನೃತ್ಯರನ್ನೂ ಪೀಡಿಸುವವನೇ “ಕದರ್ಯ"ನು. ೪೨೬ ಧರ್ಮಸಿಂಧು ಬ್ರಹ್ಮಚಾರಿ, ಗೃಹಸ್ಥ ಈ ಎರಡು ಆಶ್ರಮಿಗಳನ್ನು ಭೋಜನಮಾಡಿಸುವದು. ವಾನಪ್ರಸ್ಥ, ಯತಿ ಮತ್ತು ವರ್ಣದ ಸೋಗುಹಾಕಿದವ ಇವರನ್ನು ಶ್ರಾದ್ಧದಲ್ಲಿ ನಿಮಂತ್ರಿಸತಕ್ಕದ್ದಲ್ಲ. ನಿಂದ್ಯವಾದ ಶೂದ್ರಾನ್ನವನ್ನು ನಿರಂತರ ಆರು ತಿಂಗಳು ಭೋಜನಮಾಡುವವನು ಜೀವಿಸಿರುವಾಗಲೇ ಶೂದ್ರನಾಗುವನು. ಮರಣದ ನಂತರ ನಾಯಿಯಾಗಿ ಜನಿಸುವನು. ಇನ್ನೂ ಎಷ್ಟೋ ದ್ರವ್ಯಗಳು ತ್ಯಾಜ್ಯಗಳೆಂದು ನಿಬಂಧಗಳಲ್ಲಿ ಹೇಳಿದೆ. ಅವಲ್ಲ ವಿಹಿತವಾದವುಗಳ ಅರ್ಥಾಪತ್ತಿಯಿಂದ ಅಂದರೆ- ವಿಹಿತಗಳಲ್ಲದ್ದಲ್ಲ ಅವಿಹಿತಗಳು ಎಂದು ಅರ್ಥಾತ್ ಸಿದ್ಧವಾಗುವದರಿಂದ; ಆದರೆ ಅವು ಅಪ್ರಸಿದ್ಧಗಳಾದ ಕಾರಣದಿಂದ ಇಲ್ಲಿ ಹೇಳಿಲ್ಲ. ಶ್ರಾದ್ಧದಲ್ಲಿ ದುರ್ಗಂಧಯುಕ್ತವಾದ, ನೊರೆಯಿಂದ ಕೂಡಿದ, ಒಗರಾದ, ಕೆಸರಿನಿಂದ ಕೂಡಿದ, ಸಣ್ಣ ಹೊಂಡದಲ್ಲಿರುವ, ಗೋವಿಗೆ ತೃಪ್ತಿಯಾಗದಷ್ಟಿರುವ, ಹಳ್ಳದ, ರಾತ್ರಿಯಲ್ಲಿ ಸಂಗ್ರಹಿಸಿಟ್ಟ, ಅಭೋಜ್ಯವಾದ ಪಾತ್ರೆಯಲ್ಲಿರುವ ಇಂಥ ಜಲವು ಅಗ್ರಾಹ್ಮವು, ಸ್ನಾನ, ಆಚಮನ, ದಾನ, ದೇವ-ಪಿತೃತರ್ಪಣ ಇವುಗಳನ್ನು ಶೂದ್ರೋದಕದಿಂದ ಅಥವಾ ಮಳೆಯ ನೀರಿನಿಂದ ಮಾಡಬಾರದು. ರಾತ್ರಿಯಲ್ಲಿ ಉದಕ, ತುಳಸಿ, ಗೋಮಯ, ಮೃತ್ತಿಕೆ ಇವುಗಳನ್ನು ತರಬಾರದು. ತುಳಸೀ, ಬಿಲ್ವ, ಭಾಗೀರಥಿಜಲ ಇವು ಹಳತಾದರೂ ಅಡ್ಡಿ ಇಲ್ಲ. ಉಳಿದ ಪುಷ್ಪಾದಿಗಳು ಹಳತಾದವು ತ್ಯಾಜ್ಯಗಳು. ದೌಹಿತ್ರ, ಕುತಪಕಾಲ, ಕುರಿ, ಕೃಷ್ಣಾಜಿನ, ಬೆಳ್ಳಿ, ದರ್ಭೆ, ತಿಲ, ಗೋವು, ಖಡ್ಗಮೃಗದ ಶೃಂಗ ಇವು ಪಿತೃತೃಪ್ತಿಪ್ರದಗಳು. ಅರಣ್ಯದಲ್ಲಿ ಬೆಳೆದ ಕರೇ ಎಳ್ಳುಗಳು ಮುಖ್ಯಗಳು. ಅಭಾವದಲ್ಲಿ ಗ್ರಾಮದಲ್ಲಿ ಬೆಳೆದ ಬಿಳೇ ಅಥವಾ ಕರೇ ಎಳ್ಳುಗಳನ್ನುಪಯೋಗಿಸಬಹುದು. ಕುರಿಯ ಸನ್ನಿಧಿಯು ಶ್ರಾದ್ಧಕ್ಕೆ ಅತಿಪ್ರಶಸ್ತವು. ಕೋಳಿ, ಮಲಹಂದಿ, ಕಾಗೆ, ಬೆಕ್ಕು, ಶೂದ್ರ, ನಪುಂಸಕ, ರಜಸ್ವಲಾ ಇವರ ಸಾನ್ನಿಧ್ಯ ಅತಿ ನಿಂದ. ಚಾಂಡಾಲ, ರಜಸ್ವಲೆ, ಕುಂಟ, ಕುಷ್ಠರೋಗಿ, ಹೀನಾಂಗ, ಅಧಿಕಾಂಗ ಇತ್ಯಾದಿಗಳಿಂದ ನೋಡಲ್ಪಟ್ಟ ಅನ್ನ ಇದು ನಿಂದ, ಆಪತ್ತಿನಲ್ಲಿ ಮಣ್ಣು, ಭಸ್ಮ, ಹಿರಣ್ಯ ಜಲದಿಂದ ಪ್ರೋಕ್ಷಿಸಿದಲ್ಲಿ ಶುದ್ಧವಾಗುವದು. “ಪಾವಮಾನೀ-ತರತ್ನಮಂದೀ ಮಂತ್ರಗಳಿಂದ ಮತ್ತು ಗಾಯತ್ರೀ ಮೊದಲಾದ ಮಂತ್ರಗಳಿಂದಲೂ ದರ್ಭೆಯ ಜಲದಿಂದ ಪ್ರೋಕ್ಷಿಸಿದರೆ ದುಷ್ಟವಾದ ಅನ್ನವಾದರೂ ಶುದ್ಧವಾಗುವದು. ಶ್ರಾದ್ಧಪ್ರವೇಶದಲ್ಲಿ ಪಾದುಕಾ, ಕಾಲ್ಮಟ್ಟು, ಛತ್ರ, ಕೆಂಪುಚಿತ್ರ ವಸ್ತ್ರಗಳು, ಕೆಂಪು ಹೂವು, ಬೆಕ್ಕುಗಳಿರಬಾರದು. ಘಂಟಾನಾದ, ಕುದುರೆ, ಉನ್ಮತ್ತಪುಷ್ಪ, ಶಂಖ, ಮುತ್ತಿನಚಿಪ್ಪುಗಳು ಇರತಕ್ಕದ್ದಲ್ಲ. ಶ್ರಾದ್ಧ ದಿನದ ಕೃತ್ಯ ಗೋಮಯಾದಿಗಳಿಂದ ಭೂಮಿ, ಭಾಂತ ಇತ್ಯಾದಿಗಳನ್ನು ಶುದ್ಧಮಾಡಬೇಕು. ದೇವತಾ, ಬ್ರಹ್ಮಚಾರಿ, ಯತಿ, ಶಿಶು ಇವರಿಗೆ ಪಿಂಡಪ್ರದಾನವಾಗುವ ವರೆಗೆ ಅನ್ನವನ್ನು ಕೊಡಬಾರದು. ತೀರ ಸಣ್ಣ ಮಕ್ಕಳಿಗೆ ಬೇರೆಯವರ ಮನೆಯಲ್ಲಿ ಭೋಜನ ಮಾಡಿಸುವದು. ಶ್ರಾದ್ಧಭೂಮಿಯಲ್ಲಿ ಎಳ್ಳುಗಳನ್ನು ಬಿಡಬೇಕು ಮತ್ತು ಎಲ್ಲ ದಿಕ್ಕುಗಳಲ್ಲಿ ಕುರಿಗಳನ್ನು ಕಟ್ಟಿಡಬೇಕು. ಪಾಕವನ್ನು ಶ್ರಾವಕರ್ತನೇ ಮಾಡುವದು ಮುಖ್ಯವು. ಅಸಂಭವದಲ್ಲಿ ಶುದ್ಧಳಾದ ಪತ್ನಿಯಿಂದ ಮಾಡಿಸುವದು. ಇಲ್ಲವೆ ಬಾಂಧವರು, ಸಪಿಂಡರು, ಸಗೋತ್ರರು ಅಥವಾ ಸದ್ಗುಣಿಗಳಾದ ಮಿತ್ರರು ಇವರಿಂದ ಮಾಡಿಸಬಹುದು. ದುರ್ನಿತಿಯ ಸ್ತ್ರೀ, ಬಂಜೆ, ವಿಧವೆ, ಬೇರೆ ಗೋತ್ರದವಳು, ಮಾತೃ-ಪಿತೃ ಪರಿಚ್ಛೇದ ೩ ಉತ್ತರಾರ್ಧ ೪೨೭ ವಂಶದವಳು, ಪುತ್ರಿ, ಗರ್ಭಿಣೀ ಇವರನ್ನು ಪಾಕದ ಸಲುವಾಗಿ ತೊಡಗಿಸಬಾರದು. ಪಾಕಭಾಂಡಗಳು ಬಂಗಾರ, ಬೆಳ್ಳಿ ಅಥವಾ ತಾಮ್ರ, ಕಂಚುಗಳದ್ದಾಗಿರಬೇಕು. ಮೃತ್ತಿಕೆಯದಾದರೆ ಹೊಸದಾಗಿರಬೇಕು. ಹಿತ್ತಾಳಿ ಮೊದಲಾದವುಗಳು ಪ್ರಶಸ್ತ್ರಗಳೂ ಅಲ್ಲ. ನಿಷಿದ್ಧಗಳೂ ಅಲ್ಲ. ಪಿತೃ ಸಂಬಂಧದ ಪಾಕವನ್ನು ಯಾವಾಗಲೂ ಕಬ್ಬಿಣಪಾತ್ರೆಯಲ್ಲಿ ಮಾಡಕೂಡದು, ಕಾಯಿಪಲ್ಲೆ ಮೊದಲಾದವುಗಳನ್ನು ಕತ್ತರಿಸುವ ಸಾಧನ (ಮೆಟ್ಟುಕತ್ತಿ, ಕೆರೆಮಣೆ)ಗಳ ಹೊರತಾಗಿ ಯಾವ ಕಬ್ಬಿಣದ ಶಸ್ತ್ರಾದಿಗಳೂ ಆ ಸ್ಥಾನದಲ್ಲಿರಬಾರದು. ಅವುಗಳ ದರ್ಶನವೂ ಆಗಬಾರದು. ಪಕ್ವಾನ್ನವನ್ನಿಟ್ಟುಕೊಳ್ಳುವ ಸಲುವಾಗಿ ಕಟ್ಟಿಗೆಯ ಪಾತ್ರವಾದರೂ ಆಗಬಹುದು. ಶ್ರಾದ್ಧ ಸಂಬಂಧವಾದ ಅನ್ನವನ್ನು ಗೃಹ್ಯಾಗ್ನಿಯಲ್ಲಿ ಅಥವಾ ಲೌಕಿಕ ಅಗ್ನಿಯಲ್ಲಿ ಬೇಯಿಸತಕ್ಕದ್ದು. ಅನ್ನವನ್ನು ಬೇಯಿಸುವ ಅಗ್ನಿಯಲ್ಲಿಯೇ ಹೋಮವನ್ನೂ ಮಾಡತಕ್ಕದ್ದು. ಗೃಹ್ಯಾಗ್ನಿಯಲ್ಲಿಯ ಪಾಕಕ್ಕೆ ವಿಶೇಷವಿದೆ. ಪ್ರಾತಃಕಾಲದ ಹೋಮವನ್ನು ಮಾಡಿ ಅದರ ಒಂದು ಭಾಗವನ್ನು ಅಡಿಗೆಯ ಒಲೆಯಲ್ಲಿಟ್ಟು ಪಾಕವನ್ನು ಮಾಡತಕ್ಕದ್ದು, ಪಾಕವಾದ ನಂತರದಲ್ಲಿ ಪಾಕಾಗ್ನಿಯ ಒಂದು ಭಾಗವನ್ನು ಗೃಹ್ಯಾಗ್ನಿಯಲ್ಲಿ ಸಂಯೋಜಿಸಿ ಅದರಲ್ಲಿ ಅಕರಣ, ವೈಶ್ವ ದೇವಾದಿಗಳನ್ನು ಮಾಡತಕ್ಕದ್ದು. ಇಲ್ಲಿ ವ್ಯವಸ್ಥೆಯೇನೆಂದರೆ-ಕಾತ್ಯಾಯನಾದಿಗಳಿಗೆ ಗೃಹ್ಯಾಗ್ನಿಯಲ್ಲಿ ಪಾಕವಾಗತಕ್ಕದ್ದು. ಆಶ್ವಲಾಯನರಿಗೆ ನಿತ್ಯದ್ದಾದ ಪಚನಾಗ್ನಿಯಲ್ಲಿ ಪಾಕವು, ಅಗೌಕರಣವನ್ನು ಆಶ್ವಲಾಯನರು ವೃತಿಷಂಗದಿಂದ (ಬೇರೆ ಕರ್ಮಾದಿಗಳಿಂದ ಮಾಡುವದಿದ್ದಲ್ಲಿ) ಶ್ರಾದ್ಧ ಮಾಡುವದಿದ್ದಲ್ಲಿ ಗೃಹ್ಯಾಗ್ನಿಯಲ್ಲಿ ಪಕ್ವವಾದ ಚರುವಿನಿಂದ ಗೃಹ್ಯಾಗ್ನಿಯಲ್ಲೇ ಮಾಡತಕ್ಕದ್ದು. ವೃತಿಷಂಗವಿಲ್ಲದಿದ್ದರೆ ಪಾಣಹೋಮ ಮಾಡತಕ್ಕದ್ದು, ಬೇರೆ ಶಾಖೀಯರಿಗೆ ಗೃಹ್ಯಾಗ್ನಿಯಲ್ಲಿ ಅಕರಣವು. ಪತ್ನಿಯಿಲ್ಲದವನು, ಅಗ್ನಿವಿಚ್ಛತ್ತಿಯಾದವನು ಪೃಷ್ಟೋದಿವಿ” ವಿಧಾನಾದಿಗಳಿಂದ ಅಗ್ನಿಯನ್ನು ಸಂಪಾದಿಸತಕ್ಕದ್ದು. ಅದನ್ನು ಪೂರ್ವಾರ್ಧದಲ್ಲಿ ಹೇಳಿದ. ಭೋಜನಪಾತ್ರಗಳು ಬಂಗಾರ, ಬೆಳ್ಳಿ, ಕಂಚು ಮೊದಲಾದವುಗಳದ್ದಾಗಿರಬೇಕು ಇಲ್ಲವೆ ಪಲಾಶ, ಕಮಲ, ಕದಲೀ, ಹಿಪ್ಪೆ ಇವುಗಳ ಎಲೆಗಳ ಪಾತ್ರಗಳಾದರೂ ಆಗಬಹುದು. ನಿಮಂತ್ರಣದಿಂದ ಶ್ರಾದ್ಧದಿನ ಊಟಮಾಡಿದ ಅನ್ನಪರಿಣಾಮ (ಜೀರ್ಣ) ಪರ್ಯಂತ ಕರ್ತೃ ಮತ್ತು ಬ್ರಾಹ್ಮಣರಿಗೆ ಕೆಲ ನಿಯಮಗಳಿವೆ. ಸ್ತ್ರೀಸಂಗ, ಪುನಭೋಜನ, ಸುಳ್ಳುಹೇಳುವದು, ಪಾಠಾಭ್ಯಾಸ ಮಾಡಿಸುವದು, ದೂತ, ಆಯಾಸ, ಒಜ್ಜೆ ಹೊರುವದು, ಹಿಂಸೆ, ಕೊಡಕೊಳ್ಳುವದು, ಬೋರತನ, ಮಾರ್ಗಗಮನ, ಹಗಲುನಿದ್ರೆ, ಜಗಳ ಮೊದಲಾದವುಗಳನ್ನು ಕರ್ತೃವೂ, ಭೋಕ್ತನೂ ಬಿಡತಕ್ಕದ್ದು. ಕರ್ತೃ- ಬ್ರಾಹ್ಮಣರಿಬ್ಬರಿಗೂ ಇವು ಸಮಾನವಾದ ಧರ್ಮಗಳು, ಶ್ರಾದ್ಧ ದಿನ, ಮುಂಚಿನದಿನ, ಋತುಕಾಲವಾಗಿದ್ದರೂ ಸ್ತ್ರೀಸಂಗವು ವರ್ಜವು ಕರ್ತನು ತಾಂಬೂಲ, ಕ್ಷೌರ, ಅಭ್ಯಂಗ, ದಂತಧಾವನ ಇವುಗಳನ್ನು ಬಿಡತಕ್ಕದ್ದು. ಭೋಜನಬ್ರಾಹ್ಮಣರಿಗೆ ತೈಲಾಭ್ಯಂಗ, ಎಣ್ಣೆ ತಿಕ್ಕಿಕೊಳ್ಳುವದು, ಕ್ಷೌರ ಇವು ವಿಕಲ್ಪಗಳು, ಕರ್ತೃ-ಭೋಕ್ಷಗಳಿಬ್ಬರಿಗೂ ಮುಖ್ಯವಾದ ವಾರುಣಸ್ನಾನವಾಗಲೇಬೇಕು. ಗೌಣಸ್ನಾನ (ಮಂತ್ರಸ್ನಾನಾದಿ)ವಾಗುವಂತಿಲ್ಲ. ಶ್ರಾದ್ಧ ಕರ್ತನು ಶುಭ್ರವಾದ ವಸ್ತ್ರವನ್ನು ಧರಿಸಬೇಕು. ಮೌನವನ್ನು ಪಾಲಿಸಬೇಕು. ಜೀತೇಂದ್ರಿಯನಾಗಿರಬೇಕು. ಉಪವಾಸ, ಪರಾನ್ನ, ಔಷಧ ಇವುಗಳನ್ನು ವರ್ಜಮಾಡಬೇಕು. ಕರ್ತೃ-ಭೋಗ್ಯಗಳಿಬ್ಬರೂ “ನಗ್ನತ್ವವನ್ನು ಬಿಡಬೇಕು. “ನಗ್ನತ್ವ” ವು ಹನ್ನೊಂದು ವಿಧವಾಗಿದೆ. ವಸ್ತ್ರವೇ ಇಲ್ಲದಿರುವಿಕೆ, ಕೊಳಕುವಸ್ತ್ರ ಧರಿಸುವರು, ಕೌಪೀನಮಾತ್ರ ೪೨೮ ಧರ್ಮಸಿಂಧು ತೊಟ್ಟುಕೊಳ್ಳುವದು, ಕಚ್ಚರಹಿತನಾಗಿರುವದು, ಉತ್ತರೀಯವಿಲ್ಲದಿರುವಿಕೆ, ಕಾಷಾಯವಸ್ತ್ರವನ್ನು ಧರಿಸುವದು, ಒದ್ದೆವಸ್ತ್ರವನ್ನು ಧರಿಸುವದು, ಎರಡುಪಟ್ಟು ಉದ್ದವಾದ ವಸ್ತ್ರವನ್ನುಡುವದು, ಕೆಂಪುವಸ್ತ್ರ ಧರಿಸುವದು, ಸುಟ್ಟವಸ್ತ್ರ, ಹೊಗೆಹಾಕಿದ ವಸ್ತ್ರ ಧರಿಸುವದು ಇತ್ಯಾದಿಗಳೆಲ್ಲ “ನಗ್ನತ್ವ” ಲಕ್ಷಣದಲ್ಲಿ ಬರುತ್ತವೆ. ಕರ್ತೃವಿಗೆ-ಲಲಾಟದಲ್ಲಿ ಊರ್ಧ್ವಪುಂಡ್ರ (ತಿಲಕ) ಮೊದಲಾದವುಗಳು ವಿಕಲ್ಪಗಳು. ಭೋಕ್ತನಿಗೆ ಅಡ್ಡಿ ಇಲ್ಲ. ಕರ್ತೃವಿಗೆ ಪಿಂಡದಾನಕ್ಕಿಂತ ಮೊದಲು ಗಂಧತಿಲಕವು ವರ್ಜವು ಭೋಕ್ತನಿಗೆ ಭೋಜನಕಾಲಕ್ಕಿಂತ ಮೊದಲು ವರ್ಜವು, ಹಸ್ತದಲ್ಲಿ ದರ್ಭೆಯಿರುವಾಗ ತಿಲಕಧಾರಣ ಮಾಡಬಾರದು. ಮಾಡಿದಲ್ಲಿ ಆಚಮನಮಾಡಿ ಆ ದರ್ಭೆಯನ್ನು ತ್ಯಜಿಸುವದು: ಕರ್ತೃವು ನಿಮಂತ್ರಿತನಾದ ಬ್ರಾಹ್ಮಣವನ್ನು ಬಿಡಬಾರದು. ಪ್ರಮಾದವಶದಿಂದ ಬಿಟ್ಟರೆ ಆತನನ್ನು ಯೇನಕೇನಪ್ರಕಾರದಿಂದ ಸುಪ್ರಸನ್ನನನ್ನಾಗಿ ಮಾಡಬೇಕು ಬುದ್ದಿಪೂರ್ವಕವಾಗಿ ಬಿಟ್ಟರೆ ಚಾಂದ್ರಾಯಣ ಪ್ರಾಯಶ್ಚಿತ್ತವನ್ನು ಹೇಳಿದೆ. ಬ್ರಾಹ್ಮಣನಾದರೂ ನಿಮಂತ್ರಿತನಾಗಿ ಬೇರೆ ಕಡೆಗೆ ಭೋಜನಕ್ಕೆ ಹೋದರೆ ನೂರಾರು ನರಕಗಳನ್ನು ಹೊಂದುವನು, ಮತ್ತು ಚಾಂಡಾಲ ಜಾತಿಯಲ್ಲಿ ಜನ್ಮಸುವನು. ಆಮಂತ್ರಿತನಾದ ಬ್ರಾಹ್ಮಣನು ವೇಳೆ ಮೀರಿ ಬಂದರೆ ದೇವದ್ರೋಹಿಯೂ, ಪಿತೃದ್ರೋಹಿಯೂ ಆಗುವನಲ್ಲದ ನರಕವನ್ನು ಹೊಂದುವನು. ಶ್ರಾದ್ಧಭೋಕ್ಷವು ಹತ್ತಾವೃತ್ತಿ ಗಾಯತ್ರಿಯಿಂದಭಿಮಂತ್ರಿತವಾದ ಜಲಪ್ರಾಶನಮಾಡಿ ಸಾಯಂಸಂಧ್ಯೆ, ಜಪ, ಹೋಮಗಳನ್ನು ಮಾಡಬಹುದು. ಸೂತಕಬಂದರೆ, ಪ್ರವಾಸದಲ್ಲಿದ್ದಾಗ, ಅಶಕ್ತನಾದಾಗ, ಶ್ರಾದ್ಧಭೋಜನಮಾಡಿದಾಗ ಔಪಾಸನಾದಿ ಹೋಮವನ್ನು ತಾನು ಮಾಡದೆ ಬೇರೆಯವರಿಂದ ಮಾಡಿಸತಕ್ಕದ್ದು, ಶ್ರಾದ್ಧಕ್ಕೆ ನಿಮಂತ್ರಿತನಾದವನು ತನ್ನ ಹೆಂಡತಿ ಮೊದಲಾದವರನ್ನು ಹೊಡೆಯಬಾರದು. ಅಪರಾಹ್ನ ಸಂಜಿತ ಮೂರು ಮುಹೂರ್ತ (ಹದಿನೆಂಟು ಘಟಿಯಿಂದ ಇಪ್ಪತ್ತುನಾಲ್ಕು ಘಟೀಪರ್ಯಂತ) ಕಾಲದಲ್ಲಿ ಯಾರೇ ಆದರೂ ಗಿಡವನ್ನು ಕತ್ತರಿಸಬಾರದು. ಮೊಸರನ್ನು ಕಡೆಯಬಾರದು. ಕರ್ತೃವು ಅಸಮರ್ಥನಾಗಿ ಅವನ ಪುತ್ರ, ಶಿಷ್ಠಾದಿಗಳು ಪ್ರತಿನಿಧಿಗಳಾಗಿ ಶ್ರಾದ್ಧ ಮಾಡುವಾಗ ಯಜಮಾನ ಹಾಗೂ ಪ್ರತಿನಿಧಿಗಳು ಪೂರ್ವೋಕ್ತ ಎಲ್ಲ ಕರ್ತೃನಿಯಮಗಳನ್ನು ಪಾಲಿಸತಕ್ಕದ್ದು. ಪತ್ನಿಯು ವಸ್ತ್ರದತುದಿ, ತಲೆಕೂದಲುಗಳನ್ನು ಬಿಚ್ಚಿ ದೊಡ್ಡನಗೆ ಮಾಡಿದರೆ, ದೊಡ್ಡದಾಗಿ ಮಾತನಾಡಿದರೆ ಪಿತೃಗಳು ನಿರಾಶರಾಗಿ ಹೋಗಿಬಿಡುವರು. (ಶ್ರಾದ್ಧದಲ್ಲಿ ಇದು ವರ್ಜವೆಂದಭಿಪ್ರಾಯ) ಬ್ರಾಹ್ಮಣರ ನಿಮಂತ್ರಣೆಗೆ ಸಜಾತೀಯನಾದ ಆಪ್ತನನ್ನೇ ಕಳಿಸಬೇಕು. ಶೂದ್ರನಿಂದ ಹೇಳಿಕಳಿಸಬಾರದು. ಶೂದ್ರಮೂಲಕ ಆಮಂತ್ರಿಸಿದ ಶ್ರಾದ್ಧದ ಅನ್ನವು ಅಯೋಜವಾಗುವದು. ಇನ್ನು ಶೂದ್ರನ ಅನ್ನಕ್ಕಾಗಿ ಬ್ರಾಹ್ಮಣನಿಮಂತ್ರಕನಾದರೂ ಆ ಶೂದ್ರಾನ್ನವು ತ್ಯಾಜ್ಯವು ಶ್ರಾದ್ಧಕ್ಕೆ ಬ್ರಾಹ್ಮಣಸಂಖ್ಯೆ ವಿಶ್ವೇದೇವರಸ್ಥಾನಕ್ಕೆ ಬ್ರಾಹ್ಮಣರು ಸಮಸಂಖ್ಯಾಕರಾಗಿರಬೇಕು. ಪಿತೃಸ್ಥಾನದಲ್ಲಿ ವಿಷಮಸಂಖ್ಯಾಕ ಬ್ರಾಹ್ಮಣರಿರತಕ್ಕದ್ದು, ಅಂದರೆ ವಿಶ್ವೇದೇವರಸ್ಥಾನದಲ್ಲಿ ಇಬ್ಬರು, ಪಿತೃಸ್ಥಾನದಲ್ಲಿ ಮೂವರು, ಅಂತೂ ಐದು ಬ್ರಾಹ್ಮಣರು, ಇಲ್ಲವೆ ದೈವಸ್ಥಾನದಲ್ಲಿ ನಾಲ್ಕು, ಪಿತೃಗಳಲ್ಲಿಪರಿಚ್ಛೇದ - ೩ ಉತ್ತರಾರ್ಧ ೪೨೯ ಒಬ್ಬೊಬ್ಬರಿಗೆ ಮೂರರಂತೆ ಒಂಭತ್ತು; ಅಂತೂ ಹದಿಮೂರು ಬ್ರಾಹ್ಮಣರು. ಅಥವಾ ಪಿತ್ರಾದಿ ಒಬ್ಬೊಬ್ಬರಿಗೆ ಐದೈದರಂತೆ ಹದಿನೈದು; ಅಂತೂ ಹತ್ತೊಂಭತ್ತು ಬ್ರಾಹ್ಮಣರು, ಇಲ್ಲವೆ ಒಬ್ಬೊಬ್ಬರಿಗೆ ಏಳೇಳರಂತೆ ಇಪ್ಪತ್ತೊಂದು; ಅಂತೂ ಇಪ್ಪತ್ತೈದು. ಹೀಗೆ ದರ್ಶಾದಿಗಳಲ್ಲಿ ಪಾರ್ವಣಗಳು ಹೆಚ್ಚಾದಂತೆ ಬ್ರಾಹ್ಮಣರೂ ಹೆಚ್ಚಾಗುವರೆಂದು ಊಹಿಸುವದು. ಏವಂಚ ವೈಶ್ವದೇವಸ್ಥಾನದಲ್ಲಿ ಎರಡು ಅಥವಾ ನಾಲ್ಕು ಬ್ರಾಹ್ಮಣರನ್ನು ಕೂಡ್ರಿಸಿ ಪಿತ್ರಾದಿಗಳಲ್ಲಿ ಒಬ್ಬೊಬ್ಬನ ಸ್ಥಾನದಲ್ಲಿ ಒಂದು, ಮೂರು, ಐದು, ಏಳು ಅಥವಾ ಒಂಭತ್ತು ಈ ಸಂಖ್ಯೆಗಳಿಂದ ಬ್ರಾಹ್ಮಣರನ್ನು ಕೂಡಿಸುವದೆಂದು ನಿಷ್ಕರ್ಷವು “ಸತ್ಕಾರ್ಯ, ದೇಶ, ಕಾಲ, ದ್ರವ್ಯ, ಬ್ರಾಹ್ಮಣ, ಶುಚಿತ್ವ ಇವುಗಳನ್ನು ವಿಸ್ತರಿಸಬಾರದು” ಎಂಬ ಉಕ್ತಿಯ ಪಕ್ಷದಂತೆ ಅಥವಾ ಅಶಕ್ತಿಯಲ್ಲಿ ದೈವದಲ್ಲಿ ಒಂದು, ಪಿತೃಪಾರ್ವಣಕ್ಕಾಗಿ ಒಂದು; ಅಂತೂ ಇಬ್ಬರಾದರೂ ಬೇಕೇಬೇಕು. “ಶ್ರೀ ಭಾಗವತ"ದಲ್ಲಿ, ದೈವದಲ್ಲಿ ಎರಡು, ಪಿತೃಸ್ಥಾನಕ್ಕೆ ಮೂರು ಅಥವಾ ಒಂದು ಈ ಸಂಖ್ಯೆಯಿಂದ ಬ್ರಾಹ್ಮಣರನ್ನು ನಿಮಂತ್ರಿಸುವದು. ಶ್ರೀಮಂತನಾದರೂ ಇದಕ್ಕೆ ಮಿಕ್ಕಿ ಮಾಡಬಾರದು. ಶ್ರಾದ್ಧದಲ್ಲಿ ವಿಸ್ತಾರಮಾಡಬಾರದೆಂದು ಹೇಳಿದೆ. ಇವರು ಸ್ವಜನರು, ಸಂಬಂಧಿಕರು ಎಂದು ಅನೇಕ ಜನರನ್ನು ಕರೆದು ವಿಸ್ತರಿಸಹೋದರೆ ದೇಶ, ಕಾಲ, ಶ್ರದ್ಧೆ, ದ್ರವ್ಯ, ಪಾತ್ರತೆ, ಯೋಗ್ಯವಸ್ತುಗಳು ಇವೆಲ್ಲ ಸರಿಯಾಗಿ ಲಭ್ಯವಾಗುವಂತಿಲ್ಲವಾದ್ದರಿಂದ ಮಿತವಾಗಿಯೇ ಮಾಡತಕ್ಕದ್ದೆಂದೂ ಹೇಳಿದೆ. ಇದರಿಂದ ದೈವದಲ್ಲಿ ಎರಡು, ಪಿತೃಸ್ಥಾನದಲ್ಲಿ ಒಂದು ಹೀಗೆ ಮೂರು ಬ್ರಾಹ್ಮಣರನ್ನು ನಿಮಂತ್ರಿಸಬೇಕೆಂಬ ಪಕ್ಷವು ನಿರ್ಮೂಲವಾದದ್ದೆಂದು ತಿಳಿಯಬೇಕು. ಅಥರ್ವಣವೇದಿಗಳಾದ ಇಬ್ಬರು ಬ್ರಾಹ್ಮಣರನ್ನು ವಿಶ್ವೇದೇವರ ಸ್ಥಾನದಲ್ಲಿ ಪೂರ್ವಮುಖರನ್ನು ಮಾಡಿ ಕೂಡ್ರಿಸುವದು. ಪಿತೃಸ್ಥಾನದಲ್ಲಿ ಋಕ್, ಯಜು, ಸಾಮವೇದಿಗಳನ್ನು ಒಬ್ಬೊಬ್ಬರಂತೆ ಮೂರು ಜನರನ್ನು ಉತ್ತರಾಭಿಮುಖರನ್ನಾಗಿ ಕೂಡ್ರಿಸುವದು. ಅತ್ಯಶಕ್ತನಾದರೆ ಎರಡು ಪಾರ್ವಣಗಳಲ್ಲಿ ಒಬ್ಬ ಬ್ರಾಹ್ಮಣನು, ಶ್ರಾದ್ಧದಲ್ಲಿ ಒಬ್ಬನೇ ಬ್ರಾಹ್ಮಣನನ್ನು ನಿಮಂತ್ರಿಸಿದಲ್ಲಿ ವಿಶ್ವೇದೇವರಸ್ಥಾನದಲ್ಲಿ ಶಿವಲಿಂಗ ಅಥವಾ ಶಾಲಿಗ್ರಾಮವನ್ನು ಸ್ಥಾಪಿಸಿ ಎಲ್ಲ ಶ್ರಾದ್ಧವನ್ನು ಮಾಡತಕ್ಕದ್ದು, ದೇವತಾ ಸಲುವಾಗಿ ಮಾಡಿದ ಅನ್ನವನ್ನು ಅಗ್ನಿಯಲ್ಲಿ ಹಾಕತಕ್ಕದ್ದು. ಇಲ್ಲವ ಬ್ರಹ್ಮಚಾರಿಗೆ ಕೊಡತಕ್ಕದ್ದು, ಮೂರು ಸ್ಥಾನಗಳ ಸಲುವಾಗಿ “ಒಬ್ಬನೇ ಬ್ರಾಹ್ಮಣ” ಎಂಬ ಪಕ್ಷವು ಸಪಿಂಡೀಕರಣ ಹೊರತಾದ ಶ್ರಾದ್ಧಗಳಲ್ಲಿ ಎಂದು ತಿಳಿಯುವದು. ಸಪಿಂಡೀಕರಣದಲ್ಲಿ, ಪಾರ್ವಣದಲ್ಲಿ ಮೂರು ಬ್ರಾಹ್ಮಣರಿರಲೇಬೇಕು. ವೃದ್ಧಿ ಶ್ರಾದ್ಧದಲ್ಲಿ ವಿಶ್ವೇದೇವರ ಸ್ಥಾನದಲ್ಲಿ ಇಬ್ಬರು. ಪ್ರತಿ ಪಾರ್ವಣಕ್ಕೆ ಎರಡೆರಡು, ಅಂದರೆ ಅದರಲ್ಲಿ ಪಿತೃಪಾರ್ವಣ, ಮಾತೃಪಾರ್ವಣ, ಸಪಕ ಮಾತಾಮಹಪಾರ್ವಣ ಹೀಗೆ ಮೂರು ಪಾರ್ವಣಗಳು, ಪ್ರತಿಯೊಂದು ಪಾರ್ವಣಕ್ಕೆ ಎರಡು ಅಂದರೆ ಆರು ಬ್ರಾಹ್ಮಣರು. ವಿಶ್ವೇದೇವ ಬ್ರಾಹ್ಮಣರು ಇಬ್ಬರು ಅಂತೂ ಎಂಟು ಬ್ರಾಹ್ಮಣರಿರತಕ್ಕದ್ದು. ಇದು ನಿಕೃಷ್ಟ ಪಕ್ಷವು, ಇನ್ನು ಸಂಪತ್ತಿದ್ದಲ್ಲಿ ದೈವದಲ್ಲಿ ನಾಲ್ಕು, ಪ್ರತಿ ಪಾರ್ವಣಕ್ಕೆ ನಾಲ್ಕು-ನಾಲ್ಕು ಹೀಗೆ ಹದಿನಾರು. ದೈವದಲ್ಲಿಯೂ, ಪಿತ್ರದಲ್ಲಿಯೂ ಸಮಸಂಖ್ಯೆಯಿರತಕ್ಕದ್ದು. ಹೀಗೆ “ವೃದ್ಧಿಶ್ರಾದ್ಧದಲ್ಲಿ ವಿಶೇಷವು. ಸರ್ವಥಾ ಬ್ರಾಹ್ಮಣರು ಸಿಗದಿದ್ದಾಗ ದರ್ಭೆಗಳಿಂದ ಕೂರ್ಚಬ್ರಾಹ್ಮಣರನ್ನು ಮಾಡಿ ಪ್ರೇಷ, ಧರ್ಮಸಿಂಧು ಅನುಪ್ರೇಷ ಯುಕ್ತವಾದ ಎಲ್ಲ ಶ್ರಾದ್ಧವನ್ನು ಮಾಡತಕ್ಕದ್ದು. ಹೀಗೆ ಕೂರ್ಚಬ್ರಾಹ್ಮಣರಿಗೆ ದಕ್ಷಿಣಾದಿಗಳನ್ನು ಕೊಟ್ಟಿದ್ದರಿಂದ ಲೌಕಿಕಪ್ರಯೋಜನ ಕಾಣದಿದ್ದರೂ ಅದೃಷ್ಟಪ್ರಯೋಜನಕ್ಕಾಗಿ ದಕ್ಷಿಣಾದಿಗಳನ್ನು ಕೊಡಬೇಕು. ಯತಿಯನ್ನು ಶ್ರಾದ್ಧದಲ್ಲಿ ಕೂಡಿಸಿದರೂ ಹೀಗೆಯೇ. ಯತಿಗೆ ಕೊಡಬೇಕಾದ ದಕ್ಷಿಣೆಯನ್ನು ನೀರುಬಿಟ್ಟು ಯತಿಯು ಸ್ವೀಕರಿಸದಿದ್ದರೆ ಬೇರೆಯವರಿಗೆ ಕೊಡಬೇಕು. ಬ್ರಾಹ್ಮಣರನ್ನಾಮಂತ್ರಿಸಿ ಶ್ರಾದ್ಧ ಮಾಡಲಾಗದಿದ್ದಲ್ಲಿ ತಾನು ಪೂಜಿಸಿದ ಲಿಂಗ ಅಥವಾ ಶಾಲಿಗ್ರಾಮಗಳನ್ನು ದೇವ-ಪಿತೃಗಳ ಸ್ಥಾನದಲ್ಲಿಟ್ಟು ಶ್ರಾದ್ಧವನ್ನು ಮಾಡತಕ್ಕದ್ದು. ಹೀಗೆ ಪಿತೃಶ್ರಾದ್ಧ ಮಾಡುವಿಕೆಯಿಂದ ಕರ್ತನ ಪಿತೃಗಳು ನೂರುಕೋಟಿವರ್ಷವರ್ಯಂತ ಸ್ವರ್ಗದಲ್ಲಿರುವರು. ಬ್ರಾಹ್ಮಣನಿಮಂತ್ರಣವನ್ನು ಪೂರ್ವದಿನ ಅಥವಾ ಶ್ರಾದ್ಧದಿನ ಮಾಡತಕ್ಕದ್ದು ಮತ್ತು ಬ್ರಾಹ್ಮಣರಿಗೆ ಪಿತೃಸಂಬಂಧಗಳಾದ ಮಂತ್ರಗಳನ್ನು ಶ್ರವಣಮಾಡಿಸಬೇಕು. ಶ್ರಾದ್ಧ ಮಾಡುವವನೂ, ಊಟಮಾಡುವವನೂ, ಕ್ರೋಧರಹಿತನಾಗಿ, ಶುಚಿತ್ವದಲ್ಲಿದ್ದು ಬ್ರಹ್ಮಚರ್ಯೆಯನ್ನು ಪಾಲಿಸತಕ್ಕದ್ದು. ಸಾಮಾನ್ಯ ಶ್ರಾದ್ದ ಪರಿಭಾಷೆಯು ವಿಶ್ವೇದೇವರ ಅರ್ಚನೆಯಲ್ಲಿ ಬಲಗಾಲನ್ನು ಮಡಚಿ ಇಟ್ಟುಕೊಳ್ಳಬೇಕು. ಪಿತೃಗಳ ಅರ್ಚನೆಯಲ್ಲಿ ಎಡದ ಮೊಳಕಾಲನ್ನೂರಿಕೊಳ್ಳಬೇಕು. ದೇವರ ಅರ್ಚನೆಯಲ್ಲಿ ಪ್ರದಕ್ಷಿಣ, ಪಿತೃಗಳ ಅರ್ಚನೆಯಲ್ಲಿ ಅಪ್ರದಕ್ಷಿಣ ಈ ಕ್ರಮವಿದೆ. ದೇವರಲ್ಲಿ ಸರಳದರ್ಭೆಗಳು, ಪಿತೃಕಾರ್ಯದಲ್ಲಿ ಮಡಚಿದ ದರ್ಭೆಗಳು, ವಿಶ್ವೇದೇವರ ಅರ್ಚನೆಯಲ್ಲಿ ಉತ್ತರಾಭಿಮುಖನಾಗಿಯೂ, ಪಿತ್ರರ್ಚನೆಯಲ್ಲಿ ದಕ್ಷಿಣಾಭಿಮುಖನಾಗಿಯೂ ಇರತಕ್ಕದ್ದು. ಸಂಕಲ್ಪ, ಕ್ಷಣದಾನ, ಪಾದ್ಯ, ಆಸನ, ಆವಾಹನ, ಆರ್ಫ್, ಗಂಧಾದಿ ಆಚ್ಛಾದನಾಂತ ಪಂಚೋಪಚಾರ, ಅನ್ನದಾನ, ಪಿಂಡದಾನ, ಅಂಜನ, ಅಭ್ಯಂಜನ, ಅಕ್ಷಯ್ಯ, ಸ್ವಧಾವಾಚನ ಇವುಗಳಲ್ಲಿ ಸಂಬಂಧ, ನಾಮ, ಗೋತ್ರ, ರೂಪ ಹೀಗೆ ಕ್ರಮದಿಂದ ಉಚ್ಚರಿಸಬೇಕು. “ಸಕಾರಯುಕ್ತವಾಗಿ ಗೋತ್ರೋಚ್ಚಾರಣ ಮಾಡಬೇಕು” ಎಂದೂ ವಚನವಿರುವದರಿಂದ “ಕಾಶ್ಯಪಗೋತ್ರ ಅಥವಾ ಕಾಶ್ಯಪಸಗೋತ್ರ” ಎಂದುಚ್ಚರಿಸುವದು. ಕೆಲವರು ಈ ಕ್ರಮವನ್ನು ಶಾಖಾಭೇದದಿಂದ ವ್ಯವಸ್ಥೆಗೊಳಿಸುವದು ಎಂದು ಹೇಳುವರು. ಗೋತ್ರವು ಗೊತ್ತಿಲ್ಲದಾಗ “ಕಾಶ್ಯಪಗೋತ್ರ"ವನ್ನು ಹೇಳತಕ್ಕದ್ದು. ಬ್ರಾಹ್ಮಣನಿಗೆ “ಶರ್ಮಾ” ಅಂತವಾಗಿಯೂ, ಕ್ಷತ್ರಿಯನಿಗೆ “ವರ್ಮಾ” ಅಂತವಾಗಿಯೂ, ವೈಶ್ಯನಿಗೆ “ಗುಪ್ತ” ಎಂಬ ನಾಮಾಂತವಾಗಿಯೂ, ಶೂದ್ರನಿಗೆ “ದಾಸ” ನಾಮಾಂತವಾಗಿಯೂ ಉಚ್ಚರಿಸುವದು. ಪಿತೃ ಮೊದಲಾದವರ ನಾಮಗಳು ಗೊತ್ತಿಲ್ಲದಾಗ “ತಾತ, ಪಿತಾಮಹ, ಪ್ರಪಿತಾಮಹ” ಎಂದು ಹೇಳತಕ್ಕದ್ದು. ಆಶ್ವಲಾಯನನು ನಾಮೋಚ್ಛಾರಣೆಯನ್ನು ಮಾಡಬಾರದು” ಎಂದು ಹೇಳಿರುವನು. ಬೇರೆ ಕೆಲ ಶಾಖೆಯಲ್ಲಿ ತಂದೆಯ ನಾಮಸ್ಥಾನದಲ್ಲಿ “ಪೃಥಿವೀಷತ್”, ಪಿತಾಮಹಸ್ಥಾನದಲ್ಲಿ “ಅಂತರಿಕ್ಷತ್” ಎಂದೂ, ಪ್ರಪಿತಾಮಹನ ಸ್ಥಾನದಲ್ಲಿ “ದಿವಿಷತ್” ಎಂದೂ ಉಚ್ಚಾರಣಮಾಡಲು ಹೇಳಿದೆ. ಸ್ತ್ರೀಯರಿಗೆ “ದಾ” ಅಂತವಾಗಿ ಅಂದರೆ “ಸಾವಿತ್ರೀದಾ” ಇತ್ಯಾದಿ ಉಚ್ಚರಿಸುವದು. ಕೆಲವರು “ದೇವೀದಾ” ಶಬ್ದಾಂತವಾಗಿ ಉಚ್ಚರಿಸತಕ್ಕದ್ದೆನ್ನುವರು. ಹಲವರು ಬರೇ “ದೇವೀ ಶಾಂತವಾಗಿ ಉಚ್ಚರಿಸಲು ಹೇಳುವರು. ಪಿತೃಕಾರ್ಯದಲ್ಲಿ, ಆಯಾಯ ಕಾರ್ಯಗಳಲ್ಲಿ ಪರಿಚ್ಛೇದ ೩ ಉತ್ತರಾರ್ಧ ೪೩೧ ಆಯಾಯ ವಿಭಕ್ತಿಗಳಿಂದ ಅರ್ಚನ ಮಾಡಿದಲ್ಲಿ ಅದು ಸಫಲವಾಗುವದು. ಇಲ್ಲವಾದರೆ ಒಂದು ವಿಭಕ್ತಿಯ ಬಗ್ಗೆ ಬೇರೊಂದು ವಿಭಕ್ತಿ ಹೇಳಿದರೆ ಅದು ನಿರರ್ಥಕವಾಗುವದು. ಸಂಕಲ್ಪ, ಕ್ಷಣ, ಆಸನಗಳಲ್ಲಿ ಷಷ್ಠಿ ವಿಭಕ್ತಿಯನ್ನು ಹೇಳತಕ್ಕದ್ದು; ಅಥವಾ ಚತುರ್ಥಿ ವಿಭಕ್ತಿಯಿಂದಲೂ ಕೊಡಬಹುದು. ಆವಾಹನೆಯನ್ನು ದ್ವಿತೀಯಾ ವಿಭಕ್ತಿಯಿಂದ ಮಾಡಬೇಕು. ಅನ್ನದಾನ, ಸ್ವಧಾ, ಪಿಂಡಪೂಜಾ, ಸ್ವಸ್ತಿ ಇವುಗಳನ್ನು ಚತುರ್ಥಿಯಿಂದ ಮಾಡಬೇಕು. ಪಿಂಡದಾನದಲ್ಲಿ “ಯೇಚತ್ವಾ” ಇತ್ಯಾದಿ ವರೆಗೆ ಸಂಬೋಧನ ವಿಭಕ್ತಿ ಹೇಳುವದು. “ಯೇಚತ್ವಾಮನು” ನಂತರ ಚತುರ್ಥಿ ವಿಭಕ್ತಿಯನ್ನು ಹೇಳತಕ್ಕದ್ದು. ಇವೆರಡು ಸರ್ವಸಮಂತವಾದದ್ದು. ಉಳಿದ ಎಲ್ಲ ಕಾರ್ಯಗಳನ್ನು ಸಂಬುದ್ಧಂತವಾಗಿ ಮಾಡತಕ್ಕದ್ದು. ಅರ್ಚನ ಮಾಡುವಾಗ “ಇದಂತೇ” ಅಥವಾ “ಇದಂವೋ” ಎಂದು ಮಾಡತಕ್ಕದ್ದು. ದೈವಕಾರ್ಯಗಳನ್ನು ಉಪವೀತಿಯಾಗಿಯೂ, ಪಿತೃಕಾರ್ಯವನ್ನು ಪ್ರಾಚೀನಾ ವೀತಿಯಾಗಿಯೂ ಮಾಡತಕ್ಕದ್ದು. ಬ್ರಾಹ್ಮಣ ಪ್ರದಕ್ಷಿಣ, ಬ್ರಾಹ್ಮಣ ಸ್ವಾಗತ, ಅರ್ಘದಾನ, ಸೂಕ್ತ ಸ್ತೋತ್ರ ಅನ್ನಸೂಕ್ತಜಪ, ಅನ್ನ ಬಡಿಸುವದು, ಆಹ್ವಾನ, ಅನ್ನ ಆಘ್ರಾಣ, ಸ್ವಸ್ತಿ ಹೇಳುವದು, ತಾಂಬೂಲದಾನಾದಿ ಸಮಾಪ್ತಿ ಪ್ರದಕ್ಷಿಣ ಇತ್ಯಾದಿಗಳನ್ನು ಸವ್ಯವಾಗಿಯೇ ಮಾಡತಕ್ಕದ್ದು. ವಿಶ್ವದೇವ ಅರ್ಚನೆಯನ್ನು ಬ್ರಾಹ್ಮಣನ ಬಲಪಾದ, ಮೊಣಕಾಲು, ಶಿರಸ್ಸುಗಳಲ್ಲಿ ಮಾಡತಕ್ಕದ್ದು. ಪಿತೃ ಅರ್ಚನೆಯನ್ನು ಎಡಬದಿಯಲ್ಲಿ ಶಿರಸ್ಸು, ಹೆಗಲು, ಮೊಣಕಾಲು ಈ ಕ್ರಮದಿಂದ ಮಾಡತಕ್ಕದ್ದು. ಪಿತೃಸ್ಥಾನದಲ್ಲಿ ಅಕ್ಷಯ್ಯ, ಆಸನ, ಅರ್ಥ್ಯ ಇವುಗಳನ್ನು ಬಿಟ್ಟು ಉಳಿದ ಅರ್ಚನೆಯಲ್ಲಿ ‘ಸ್ವಧಾ’ಕಾರ ಉಚ್ಚಾರದಿಂದ ಮಾಡುವದು. ವಿಶ್ವೇದೇವರಲ್ಲಿ “ಸ್ವಾಹಾ” ಕಾರದಿಂದ ಮಾಡತಕ್ಕದ್ದು. ದೈವದಲ್ಲಿ “ದೈವತೀರ್ಥ” ದಿಂದಲೂ, ಪಿತೃಸ್ಥಾನದಲ್ಲಿ “ಪಿತೃತೀರ್ಥ"ದಿಂದಲೂ ಕೊಡತಕ್ಕದ್ದು. ಆಚಮನಗಳು ಶ್ರಾದ್ಧವನ್ನು ಪ್ರಾರಂಭಿಸುವಾಗ ‘ರಾಚಮನ ಮಾಡಬೇಕು. ಬ್ರಾಹ್ಮಣರ ಪಾದಪ್ರಕಾಳನದ ನಂತರವೂ ದ್ವಿರಾಚಮನವು, ವಿಶ್ವದೇವಾರ್ಚನೆಯ ನಂತರ ಮತ್ತು ಪಿತೃಅರ್ಚನೆಯ ನಂತರ ಒಂದೊಂದಾಚಮನವು. ಆಘ್ರಾಣದ ನಂತರ ಒಂದು, ವಿಕಿರದ ನಂತರ ಒಂದು ಅಥವಾ ಎರಡಾಚಮನಗಳು, ಶ್ರಾದ್ಧಮುಗಿದ ನಂತರ, ಪಾದಪ್ರಕ್ಷಾಳನ ಮಾಡಿಕೊಂಡ ನಂತರ ದ್ವಿರಾಚಮನ ಮಾಡತಕ್ಕದ್ದು, ಭಸ್ಮಮರ್ಯಾದಾ ಅಂದರೆ ಬ್ರಾಹ್ಮಣರ ಭೋಜನಪಾತ್ರೆಗಳಿಗೆ ಮಂಡಲಮಾಡುವದು. ಇದರ ನಂತರ ಮತ್ತು ಉಚ್ಛಿಷ್ಟಚಾಲನದ ನಂತರ ಒಂದೊಂದು ಆಚಮನ ಮಾಡತಕ್ಕದ್ದೆಂದು ಕೆಲವರು ಹೇಳುವರು. ಭೋಜನ ಮಾಡುವ ಬ್ರಾಹ್ಮಣನು ಪಾದಪ್ರಕ್ಷಾಳನದ ನಂತರ ದ್ವಿರಾಚಮನ ಮಾಡುವದು. ಪಾಣಿಹೋಮಾನಂತರದಲ್ಲಿ ಒಂದು, ಭೋಜನವಾದಮೇಲೆ ಎರಡು ಹೀಗೆ ಆಚಮನ ಮಾಡತಕ್ಕದ್ದು. ಶ್ರಾದ್ಧದಲ್ಲಿ ದರ್ಭೆಗಳು ಆಚಮನ ಮಾಡಿದನಂತರ ಹಿಂದೆ ಧರಿಸಿದ ದರ್ಭೆಗಳನ್ನು ತ್ಯಜಿಸಿ ಬೇರೆ ದರ್ಭೆಗಳನ್ನು ಧರಿಸುವದು. ಶ್ರಾದ್ಧಾರಂಭದಲ್ಲಿ ಧರಿಸಿದ ದರ್ಭಗಳನ್ನು ಪಾದ್ಯದ ನಂತರ ವಿಸರ್ಜಿಸುವದು. ೪೩೨ ಧರ್ಮಸಿಂಧು ದೇವ, ಪಿತ್ರರ್ಚನೆಯನಂತರ, ಪಿಂಡಶೇಷ ಆಘ್ರಾಣದ ನಂತರ, ವಿಕರವಾದ ನಂತರ, ಶ್ರಾದ್ಧ ಸಮಾಪ್ತಿಯ ನಂತರವೂ ಮೊದಲು ಧರಿಸಿದ ದರ್ಭೆಗಳನ್ನು ತ್ಯಜಿಸುವದು. ಆದರೆ “ಶ್ರಾದ್ಧ ಸಾಗರಾದಿ” ಪ್ರಯೋಗಗಳಲ್ಲಿ ಪಿತ್ರರ್ಚನೆಯ ನಂತರ ದರ್ಭತ್ಯಾಗವನ್ನು ಹೇಳಿದ್ದು ಕಂಡುಬರುವದಿಲ್ಲ. ಆದುದರಿಂದ ಕೆಲಕಡೆ ಮತ್ತು ಆಚಮನದಲ್ಲಿ ದರ್ಭೆಯನ್ನು ತ್ಯಜಿಸಬೇಕಾಗಿಲ್ಲವೆಂದು ತೋರುತ್ತದೆ. ಊಹವಿಚಾರ ಊಹವಿಚಾರವೆಂದರೆ, ಊಹೆಮಾಡಿಕೊಂಡು ಸಂದರ್ಭಾನುಸಾರ ಉಚ್ಚಾರಾದಿಗಳನ್ನು ಮಾಡುವದು. ಬಹುವಚನಾಂತವಾಗಿ ಹೇಳಿದ ‘ಪಿತೃ’ ಶಬ್ದದ ವಿಷಯದಲ್ಲಿ ಎಲ್ಲ ಪಿತೃಗಳ ಉದ್ದೇಶವೂ ಇದೆಯೆಂದು ತಿಳಿದು ಅದನ್ನು ಬದಲಾಯಿಸತಕ್ಕದ್ದಿಲ್ಲ. ಹೇಗಂದರೆ ‘ಆರ್ತ್ಮಪಾತ್ರ’ದ ಅರ್ಚನೆಯಲ್ಲಿ ‘ಪಿತ್ರನಿಮಾನ್ ಪ್ರೀಣಯ’ ಎಂಬ ಮಂತ್ರೋಚ್ಚಾರದಲ್ಲಿ ತಾಯಿಯ ಶ್ರಾದ್ಧದಲ್ಲಾದರೂ ಬದಲಾಯಿಸುವದಿಲ್ಲ. ಅಂದರೆ ‘ಮಾತೃ’ ಎಂದು ಸ್ತ್ರೀಲಿಂಗದಿಂದ ಹೇಳಬೇಕಾಗಿಲ್ಲ. ಆದರೆ ‘ಶುಂಧಂತಾಂ’ ಎಂಬಲ್ಲಿ ‘ಶುಂಧಂತಾಂ ಪಿತರಃ’, ಮಾತೃಶ್ರಾದ್ಧದಲ್ಲಿ ‘ಶುಂಧಂತಾಂ ಮಾತರಃ’ ಹೀಗೆ ಊಹದಿಂದ ಹೇಳಬೇಕು. ಬಹುವಚನವು ಎರಡೂ ಕಡೆ ಸಮಾನವು. ಪ್ರಥಮ ಮಂತ್ರದಲ್ಲಿಯೇ ಪೂಜ್ಯತ್ವದ ಅರ್ಥವಿದೆ. ‘ಋಚಂಸ್ಕೃಹತ್’ ಎಂದು ನಿಷೇಧವಿರುವದರಿಂದ ಅಂದರೆ ‘ಋಗ್ವದಮಂತ್ರವನ್ನು ಬದಲಾಯಿಸಬಾರದು’ ಎಂದಿದೆಯಾದ್ದರಿಂದ ಪಿಂಡದಾನದಲ್ಲಿ ‘ಯೇಚತ್ವಾಮತ್ರಾನುತೇಭ್ಯಶ್ಚ’ ಇಲ್ಲಿ ಮಾತೃಶ್ರಾದ್ಧದಲ್ಲಿ ‘ಯಾಶ್ಚತಾಮತ್ರಾನುತಾಭ್ಯಶ್ಚ’ ಎಂದು ಹೇಳಬಾರದು. ಸ್ತ್ರೀಯರು ಪುರುಷಾನುಗತರು. ‘ಪುಮಾನ್‌ಯಾ’ ಈ ವ್ಯಾಕರಣಾನುಸಾರ ಸ್ತ್ರೀಯಿಂದ ಕೂಡಿ ಪುರುಷನನ್ನು ಚ್ಚರಿಸುವಾಗ ‘ಪುಲ್ಲಿಂಗವೇ ಶೇಷವಾಗುಳಿಯುವದು’ ಎಂದು ‘ವೃತ್ತಿಕಾರ’ ರ ಮತವು. ಕೆಲವರು ಸ್ತ್ರೀವಿಷಯದಲ್ಲಿ ‘ಯಾ’ ಎಂದು ಹೇಳಬೇಕೆನ್ನುವರು. ಎರಡು ಮಾತೃಗಳನ್ನುದ್ದೇಶಿಸಿ ಮಾಡುವಲ್ಲಿ, ಪಿಂಡದಾನದಲ್ಲಿ “ಏತಾಮಸ್ಮನ್ಮಾತ‌ ಯಜ್ಞರಾ ಶ್ರೀದೇ ಯೇಚಯುವಾ ಮತ್ರಾನು” ಹೀಗೆ ಹೇಳಿ ಒಂದು ಪಿಂಡವನ್ನು ಕೊಟ್ಟು ‘ಆತ್ಮನ್ಮಾತೃಭ್ಯಾಂ ಆಯಂ ಪಿಂಡ: ಹೀಗೆ ಊಹಿಸಿ ಉಚ್ಚರಿಸುವದು. ಅಭ್ಯಂಜನದಲ್ಲಿ “ಅಂಜಾಥಾಂ ಹೀಗೆ ಪಿತಾಮಹಾದಿಗಳಲ್ಲೂ ಊಹಿಸತಕ್ಕದ್ದು. ಇನ್ನು ಬಹುಮಾತೃಗಳನ್ನುದ್ದೇಶಿಸುವಾಗ “ಏತಸ್ಮನ್ಮಾತರೋ ಯಜ್ಞದೇ ಶ್ರೀರೇರುದ್ರದೇ” ಹೀಗೆ ಹೇಳಿದ ನಂತರ ನಾಮ ಗೋತ್ರಗಳನ್ನು ಹೇಳಿ"ಯೇಚಯುಷ್ಮಾನಾನು” ಹೀಗೆ ಹೇಳಿ ಒಂದು ಪಿಂಡಪ್ರದಾನ ಮಾಡುವರು. ಅಭ್ಯಂಜನರಲ್ಲಿ “ಅಭ್ಯಂಗ್ಯ ಧ್ವಂ”, ಅಂಜನದಲ್ಲಿ “ಆಂಧ್ವಂ” ಇತ್ಯಾದಿ ಊಹಿಸತಕ್ಕದ್ದು. ಏಕನಾಮದ ವಿಷಯದಲ್ಲಿ ಏಕನಾಮವನ್ನೇ ದ್ವಿವಚನ ಬಹುವಚನಾಂತವಾಗಿ ಹೇಳತಕ್ಕದ್ದು. ಇದರಂತೆ ಅರ್ಘದಾನ ಕಾಲದಲ್ಲಿಯೂ “ಅಸ್ಮಾತ” ಇತ್ಯಾದಿ ಊಹದಿಂದ ಸಂಬೋಧಿಸಿ, ದ್ವಿವಚನದಲ್ಲಿ “ಇದಂವಾಂ ಅಘ೦ ಬಹುವಚನದಲ್ಲಿ ಹೇಳುವಾಗ “ಇದಂವೋ ಅರ್ಘ ಇತ್ಯಾದಿ ಊಹಿಸುವದು. ಹಾಗೆಯೇ “ಆಂತುನಃಪಿತರಃ ತಿಲೋಸಿಸೋಮದೇವ ಶಂತಾ” ಇತ್ಯಾದಿಗಳಲ್ಲೂ ಮತ್ತು ಪಿಂಡಾನುಮಂತ್ರಣ, ವಾಸೋದಾನ, ಉಪಸ್ಥಾನ, ಪರಿಚ್ಛೇದ - ೩ ಉತ್ತರಾರ್ಧ YAA ಪ್ರವಾಹಣ, (ಉದ್ಘಾಸನ) ಪ್ರಾಶನ ಮೊದಲಾದವುಗಳಲ್ಲಿಯೂ, ಅಲ್ಲಿ ಬಹುವಚನಾಂತ ಪಿತೃಪದಯುಕ್ತವಾಗಿರುವದರಿಂದ ಉಚ್ಚಾರಬದಲಾವಣೆಯಿಲ್ಲ ಎಂಬದು ಸಿದ್ಧವು. ಶ್ರಾದ್ಧದಲ್ಲಿ ಯಾವ ವಸ್ತುವನ್ನಾದರೂ ಪ್ರೋಕ್ಷಿಸದೆ ಮುಟ್ಟಬಾರದು. ಮಾತುಗಳನ್ನಾಡುವಾಗ ಮನುಷ್ಯ ಸಂಬಂಧ ರಹಿತವಾದದ್ದನ್ನೇ ಮಾತನಾಡಬೇಕು. ಊಟಮಾಡುವವನನ್ನು ನೋಡಬಾರದು. ಕಣ್ಣೀರನ್ನು ಸುರಿಸಬಾರದು. ದೇವ ಅಥವಾ ಪಿತೃಸಂಬಂಧಿಗಳಾದ ಜಪ, ಹೋಮ, ಅರ್ಚನಾದಿಗಳಲ್ಲಿ ಪ್ರಯತ್ನಪೂರ್ವಕವಾದರೂ ಮೌನವನ್ನು ಪಾಲಿಸಬೇಕು. ಅದರಿಂದ ಪೂರ್ಣಫಲವು ಸಿಗುವದು. ಜಪ, ಹೋಮ, ಅರ್ಚನಾದಿಗಳಲ್ಲಿ ಮೌನ ಮೊದಲಾದ ನಿಯಮಗಳು ಲೋಪವಾದಲ್ಲಿ ವಿಷ್ಣು ಸಂಬಂಧವಾದ ಮಂತ್ರವನ್ನು ಹೇಳತಕ್ಕದ್ದು. ಮತ್ತು ವಿಷ್ಣು ಸ್ಮರಣೆ ಮಾಡತಕ್ಕದ್ದು. “ಯಸ್ಯಸ್ಮೃತ್ಯಾಚನಾಮೋಕ್ತಾ ತಪೋಯಜ್ಞ ಕ್ರಿಯಾದಿಷ್ಟು ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ” ಇದೇ ಆ “ಮಂತ್ರ"ವು. ಶ್ರಾದ್ಧದ ಆದಿ, ಮಧ್ಯ ಮತ್ತು ಅಂತ್ಯದಲ್ಲಿ ಇದನ್ನು ಹೇಳತಕ್ಕದ್ದು. ಸಂಕ್ಷಿಪ್ತ ಆಶ್ವಲಾಯನಾದಿಗಳ ಶ್ರಾದ್ದ ಪ್ರಯೋಗ ಸವ್ಯ ಅಥವಾ ಅಪಸವ್ಯದಿಂದ ದೇಶಕಾಲಗಳನ್ನುಚ್ಚರಿಸಿ ಷಷ್ಠಿ ವಿಭಕ್ತಿಯುತರಾದ ಶ್ರಾದ್ಧಪಿತೃಗಳನ್ನುದ್ದೇಶಿಸಿ “ಏತೇಷಾಂ ಅಮುಕ ಶ್ರಾದ್ಧಂ ಸದೈವಂ, ಸಪಿಂಡಂ, ಪಾರ್ವಣವಿಧಿನಾ ಅಥವಾ ಏಕೋದ್ದಿಷ್ಟವಿಧಿನಾ ಅನ್ನೋನ ಆಮೇನ ವಾ ಹಿರನವಾಶ್ವ: ಸದ್ಯೋವಾ ಕರಿ ಹೀಗೆ ಯಥಾಸಂಭವವಾಗಿ ಸಂಕಲ್ಪ ಮಾಡತಕ್ಕದ್ದು. ಸರ್ವತ್ರ “ಕುರುಷ್ಟ” ಹೀಗೆ ಯಥೋಚಿತವಾಗಿ ಬ್ರಾಹ್ಮಣರ ಕಡೆಯಿಂದ ಪ್ರತಿವಚನವನ್ನು ಪಡೆಯತಕ್ಕದ್ದು, ವಿಶ್ವೇದೇವರಲ್ಲಿ ದೈವವಿಧಾನದಿಂದ ಬ್ರಾಹ್ಮಣನ ಬಲಮೊಣಕಾಲನ್ನು ಮುಟ್ಟಿ “ಅಮುಕಪಿಗಾಂ ಅಮುಕ ಶ್ರಾದ್ಧ ಅಮುಕ ವಿಶ್ವೇದೇವಾರ್ಥಂ ತ್ವಯಾಕ್ಷಣ ಕ್ರಿಯಾಂ” ಎಂದು “ಕ್ಷಣ” (ವಿಧ್ಯುಕ್ತನಿಮಂತ್ರಣ)ವನ್ನು ಕೊಡತಕ್ಕದ್ದು. “ಓಂ ತಥಾ” ಎಂದು ಬ್ರಾಹ್ಮಣನು ಹೇಳತಕ್ಕದ್ದು. ಕರ್ತನು. “ಪ್ರಾಫ್ಟ್ತುಭವಾನ್’ ಎಂದು ಹೇಳತಕ್ಕದ್ದು. ಆಗ ಬ್ರಾಹ್ಮಣನು ಪ್ರಾಷ್ಟವಾನಿ’ ಎಂದು ಹೇಳುವದು. ಇದರಂತೆ ಪಿತೃಸಂಬಂಧವಾದ ಧರ್ಮದಿಂದ ಬ್ರಾಹ್ಮಣನ ಎಡಮೊಣಕಾಲನ್ನು ಸ್ಪರ್ಶಿಸಿ, “ಅಮುಕಾ ಅಮುಕಾನೇ’ತ್ವಯಾಕ್ಷಣ:” ಇತ್ಯಾದಿ ಪೂರ್ವದಲ್ಲಿ ಹೇಳಿದಂತೆ ಮಾಡತಕ್ಕದ್ದು. ಮೂರು ಪಿತೃಸ್ಥಾನಗಳಿಗೆ ಒಬ್ಬನೇ ಬ್ರಾಹ್ಮಣನಾದರೆ “ತೃ, ಪಿತಾಮಹ, ಪ್ರಪಿತಾಮಹಾನೇ’ ಇತ್ಯಾದಿ ಹೇಳತಕ್ಕದ್ದು. ನಂತರ ‘ಅಕ್ರೋಧ:” ಇತ್ಯಾದಿಗಳಿಂದ ಪ್ರಾರ್ಥಿಸುವದು. ಸಾಮಾನ್ಯ ಎಲ್ಲ ಕಡೆಯಲ್ಲಿ ಮೊದಲು ದೇವಾರ್ಚನೆ, ನಂತರ ಪಿತ್ರರ್ಚನೆ ಹೀಗೆ ಮಾಡುವದು. ಕೆಲವು ವಿಷಯದಲ್ಲಿ ಪಿತೃಪೂರ್ವಕವಾಗಿಯೂ ಮಾಡುವ ವಿಧಾನವುಂಟು. ಅದನ್ನು ಮುಂದೆ ಹೇಳಲಾಗುವದು. ಸಂಕಲ್ಪ, ಕ್ಷಣ ಮೊದಲಾದವುಗಳನ್ನು ಪೂರ್ವ ದಿನ ಅಥವಾ ಸದ್ಯವೇ ಮಾಡತಕ್ಕದ್ದು. ನಂತರ ಕುತುಪಕಾಲದಲ್ಲಿ (ಹಗಲಿನ ಎಂಟನೇ ಮುಹೂರ್ತ) ಸ್ನಾನಮಾಡಿ, ಸ್ನಾನಮಾಡಿದ ಮತ್ತು ಕಾಲುಗಳನ್ನು ತೊಳೆದುಕೊಂಡ ಬ್ರಾಹ್ಮಣರನ್ನು ಸನ್ನಿಧಿಯಲ್ಲಿ ಕೂಡ್ರಿಸುವದು. ಆಮೇಲೆ ಸವ್ಯದಿಂದ ತಿಲೋದಕ, ಯವೋದಕಗಳನ್ನು ಯಥಾ ಆಚಾರದಂತೆ ಮಾಡತಕ್ಕದ್ದು, ನಂತರ ಶುಧ್ಯರ್ಥವಾಗಿ ಪ್ರಾಯಶ್ಚಿತ್ತಾರ್ಥಕ ಸೂಕ್ತ ಜಪಮಾಡುವದು. “ಸಮಗ್ರಸಂಪತ್” ಇದರಿಂದ ಪದಕಿ ಣ ಮಾಡುವದು. ೪೩೪ ಧರ್ಮಸಿಂಧು (ಅಪಸವ್ಯವಾಗಿ) ಆಚಾರವಿರುವದರಿಂದ ಅಧಿಕಾರವಚನವನ್ನು ಕೇಳತಕ್ಕದ್ದು. ನಂತರ ಆಚಮನ, ಪ್ರಾಣಾಯಾಮಗಳನ್ನು ಸವ್ಯದಿಂದ ಮಾಡಿ ಅಪಸವ್ಯದಿಂದ ಎರಡನೇ ಸಂಕಲ್ಪವನ್ನು ಮಾಡತಕ್ಕದ್ದು. ಕೆಲವರು ಸದ್ಯಃ ಕರಣಪಕ್ಷದಲ್ಲಿ ದ್ವಿತೀಯ ಸಂಕಲ್ಪವನ್ನಪೇಕ್ಷಿಸುವದಿಲ್ಲ. ನಂತರ ಎದ್ದು ನಿಂತು ಸವ್ಯದಿಂದಲೇ ದೈವ ಮತ್ತು ಪಿತೃಸ್ಥಾನದಲ್ಲಿರುವ ಬ್ರಾಹ್ಮಣರನ್ನು “ಭವತಾಂ ಸ್ವಾಗತಂ"ಎಂದು ಸ್ವಾಗತವನ್ನು ಕೇಳುವದು. ಎರಡನೇ ‘ಕ್ಷಣ’ದಲ್ಲಿಯೂ ಇದರಂತೆಯೇ. ಇಲ್ಲಿ ಗೃಹ್ಯಾಗ್ನಿಯುಳ್ಳ ಋಗ್ವದಿಗಳಿಗೆ ದರ್ಶಶ್ರಾದ್ಧ, ಅನ್ನಷ್ಟಕಾ, ಪೂರ್ವದುಃಶ್ರಾದ್ಧಗಳು ಒಟ್ಟಾಗಿ ಬಂದಲ್ಲಿ ಪಿಂಡಪಿತೃಯಜ್ಞ ಸಂಮಿಶ್ರವಾಗಿ ಶ್ರಾದ್ಧ ಮಾಡುವದು. ಅನ್ಯರಿಗೆ ಹಾಗಿಲ್ಲ, ಮತ್ತು ಬೇರೆ ಶ್ರಾದ್ಧಗಳಲ್ಲಿಯೂ ಇಲ್ಲ. ‘ತಿಷಂಗದ ಕ್ರಮ’ವೆಂದರೆ ದ್ವಿತೀಯಕ್ಷಣದಾನಾಂತ ಶ್ರಾದ್ಧತಂತ್ರವನ್ನು ಮಾಡಿ ಪರಿಸಮೂಹನ ಮೊದಲಾದ ಇಧ್ಯಾಧಾನದ ವರೆಗೆ ಮಾಡಿ, ಪಿಂಡಪಿತೃಯಜ್ಞಗಳು ಮುಗಿದನಂತರ ಬ್ರಾಹ್ಮಣರ ಪಾದಪ್ರಕಾಳನಾದಿ ‘ಪಾತ್ರಾಸಾದನಾರ್ಥಂ ಮಂಡಲೋದ್ವರ್ತನಂ ಕರಿಷ್ಟೇ’ ವರೆಗೆ ಮಾಡುವದು. ನಂತರ ಅಗ್ನಿಯಲ್ಲಿ ಅಕರಣಮಾಡಿ ಬ್ರಾಹ್ಮಣರಿಗೆ ಬಡಿಸುವದು. ಅಲ್ಲಿಂದ ‘ಸಂಪನ್ನ ವಚನದ ವರೆಗೆ ಮುಗಿಸಿ ಪಿಂಡದಾನಾದಿ ಪಾತ್ರವಿಸರ್ಜನದ ವರೆಗೆ ಮಾಡಿ, ವಿಕಿರಾದಿ ಶ್ರಾದ್ಧಶೇಷವನ್ನು ಮುಗಿಸತಕ್ಕದ್ದು. ಹೀಗೆ ಕರ್ಮಗಳನ್ನು ಒಂದಕ್ಕೊಂದು ಹೊಂದಿಸಿ ಮಾಡುವದಕ್ಕೆ “ವೃತಿಷಂಗ” ಎನ್ನುವರು. ಹೀಗೆ ಹಿರಣ್ಯ ಕೇಶೀಯರಿಗಾದರೂ ಪ್ರಥಮ ಸಂಕಾನಂತರ ಅಗುಪಸಮಾಧಾನ, ಅನ್ನಾಧಾನಾದಿ ಆಜ್ಯ ಸಂಸ್ಕಾರದ ವರೆಗೆ ಮಾಡಿ ಪಾದ್ಯಾದಿ ಪೂಜಾಂತ್ಯದ ವರೆಗೆ ಮಾಡತಕ್ಕದ್ದು. ಹೀಗೆ ಆಯಾಯ ಮಂತ್ರಗಳ ಊಹಯುಕ್ತವಾದ ಸವಿಸ್ತರ ಶ್ರಾದ್ಧ ಅ ಕರಣ ಹೋಮವನ್ನು ತಿಳಿಯತಕ್ಕದ್ದು. ಶ್ರಾದ್ಧದಲ್ಲಿ ಪಾದ್ಯವು ದೇವಪಾದಮಂಡಲವನ್ನು ಎರಡುಹಸ್ತ ಅಥವಾ ಪ್ರಾದೇಶಮಾತ್ರ ಪ್ರದೇಶದಲ್ಲಿ ಉತ್ತರದಿಕ್ಕಿಗೆ ತಾಗುವಂತೆ ಅಂಗಳದಲ್ಲಾಗಲೀ ಅಥವಾ ಶ್ರಾದ್ಧ ಮಾಡುವ ಸ್ಥಳದಲ್ಲಾಗಲೀ ಮಾಡಬೇಕು. ಅದು ಚತುರಸ (ನಾಲ್ಕು ಮೂಲೆಯ ಚೌಕ)ವಾಗಿರತಕ್ಕದ್ದು. ಅದರ ದಕ್ಷಿಣದಲ್ಲಿ ಆರಂಗುಲ ಬಿಟ್ಟು ದಕ್ಷಿಣಕ್ಕೆ ತಗ್ಗಾಗುವಂತೆ ನಾಲ್ಕು ಹಸ್ತ ಪ್ರಮಾಣದ ಅಥವಾ ವಿತಸ್ತಿ ಪ್ರಮಾಣದ ವರ್ತುಲಾಕಾರ ಮಂಡಲವನ್ನು ಮಾಡಬೇಕು. ಸವ್ಯ, ಪ್ರದಕ್ಷಿಣಕ್ರಮದಿಂದ ದೈವದಲ್ಲಿಯೂ, ಅಪಸವ್ಯ, ಅಪ್ರದಕ್ಷಿಣ ಕ್ರಮದಿಂದ ಪಿತೃಮಂಡಲದಲ್ಲಿಯೂ ಗೋಮೂತ್ರ-ಗೋಮಯಗಳಿಂದ ಶುದ್ದೀಕರಿಸಬೇಕು. ದರ್ಭ, ಯವ, ತಿಲ, ಗಂಧ, ಪುಷ್ಪಗಳಿಂದ ದೈವಪಿತ್ರ್ಯಕ್ರಮಾನುಸಾರ ಅರ್ಚಿಸತಕ್ಕದ್ದು. ಮಂಡಲ ಸಮೀಪದಲ್ಲಿ ಮಣೆಯ ಮೇಲೆ ಪೂರ್ವಮುಖನಾಗಿ ಕುಳಿತ ಬ್ರಾಹ್ಮಣನ ಪಾದಗಳಲ್ಲಿ ಉತ್ತರ ಅಥವಾ ಪಶ್ಚಿಮಾಭಿಮುಖನಾದ ಕರ್ತನು “ಅಮುಕ ಸಂಜ್ಞಾ ವಿಶ್ವೇದೇವಾ ಇದು ಮ ಪಾದ್ಯಂ ಸ್ವಾಹಾನಮ:” ಎಂದು ಯವ, ಗಂಧ, ಪುಷ್ಪಯುಕ್ತವಾದ ಜಲವನ್ನು ಅಂಜಲಿಯಿಂದ ಸುರುವಿ “ಶನ್ನೂದೇವಿ” ಮಂತ್ರದಿಂದ ಶುದ್ಧೋದಕದಿಂದ ಪಾದಗಳ ಮೇಲ್ಬಾಗವನ್ನು ತೊಳೆಯತಕ್ಕದ್ದು. ಅಧ್ಯಭಾಗದಲ್ಲಿ ತೊಳೆಯಬಾರದು; ಮತ್ತು ತೊಳೆಯುವಾಗ ಪವಿತ್ರವಿರಬಾರದು. ಪಿತೃಮಂಡಲದಲ್ಲಿ ಉತ್ತರಾಭಿಮುಖನಾಗಿ ಕುಳಿತ ಬ್ರಾಹ್ಮಣನ ಪಾದಗಳಲ್ಲಿ ದಕ್ಷಿಣಾಭಿಮುಖನಾದ ಕರ್ತನು ತಿಲಗಂಧಾದಿಯುಕ್ತ ಜಲವನ್ನೂ ಪಿತೃತೀರ್ಥವಾಗಿ ಚೆಲ್ಲಿ “ಪಿತಃ ಪರಿಚ್ಛೇದ • ೩ ಉತ್ತರಾರ್ಧ ೪೩೫ ಅಮುಕ ನಾಮನ್ ಗೋತ್ರ, ರೂಪ, ಇದಂತೇ ಪಾದ್ಯಂ ಸ್ವಧಾನಮಃ” ಹೀಗೆ ಪಾದ್ಯವನ್ನು ಕೊಡತಕ್ಕದ್ದು. ಮೂರು ಸ್ಥಾನಗಳ ಸಲುವಾಗಿ ಒಬ್ಬನೇ ಆದರೆ “ಪಿತೃಪಿತಾಮಹ ಪ್ರತಾಮಹಾ ಇದಂವಃ ಪಾದ್ಯಂ ಹೀಗೆ ಹೇಳತಕ್ಕದ್ದು, ‘ಶನದೇವೀ’ ಇತ್ಯಾದಿ ಪೂರ್ವದಂತೆಯೇ. ಮುಂದೆಯಾದರೂ ಮೂರು ಪಿತ್ರಾದಿಗಳಿಗೆ ಮೂರು ಬ್ರಾಹ್ಮಣರಾದರೆ, ಇದರಂತೆಯೇ ಏಕವಚನಾಂತವಾಗಿ ಹೇಳುವದು. ಒಬ್ಬನೇ ಆದರೆ ಬಹುವಚನಾಂತವಾಗಿ ಹೇಳುವದು. ಹೀಗೆ ಮಾತಾಮಹಾದಿ ಪಾರ್ವಣದಲ್ಲಿಯೂ ತಿಳಿಯುವದು. ಇಲ್ಲಿ ಪಾದ್ಯಕ್ಕಿಂತ ಮೊದಲು ಪಾದಾರ್ಥ್ಯವನ್ನು ಕೊಡುವದು. ಪಾದ್ಯದ ನಂತರ ಗಂಧ, ಪುಷ್ಪಾಕೃತಗಳಿಂದ ಪಾದಾದಿ ಮೂರ್ಧಾಂತ ಅರ್ಚನಪೂರ್ವಕವಾಗಿ “ಏಷವಃ ಪಾದಾರ್ಥ್” ಹೀಗೆ ಹೇಳಿ ವಿಶ್ವೇದೇವರಲ್ಲಿ ಕೂಡುವದು. ಪಿತೃಸ್ಥಾನದಲ್ಲಿ ತಿಲಾದಿಗಳಿಂದ ಮೂರ್ಧಾದಿ ಅರ್ಚನಪೂರ್ವಕವಾಗಿ ಪಾದಾರ್ಥ್ಯವನ್ನು ಕೊಡುವದು. ಆದರೆ ಇದು ಆಚಾರವಿರುವದರಿಂದ ಕಾತ್ಯಾಯನಾದಿಗಳಿಗೆ ಮಾತ್ರ ಎಂದು ತಿಳಿಯುವದು. ಈ ಆಚಾರವು ಋದ್ವೇದಿಗಳಲ್ಲಿಲ್ಲ. ನಂತರ ಪಾದ್ಯವು ಮುಗಿದು ಉಳಿದ ಶೇಷಗಂಧ, ಯವ, ತಿಲ ಮೊದಲಾದವುಗಳನ್ನು ಸವ್ಯ, ಅಪಸವ್ಯಗಳಿಂದ ಮಂಡಲಗಳಲ್ಲಿ ಚಲ್ಲಿ ತನ್ನ ಪಾದಗಳನ್ನು ತೊಳೆದುಕೊಂಡು ಪವಿತ್ರವನ್ನು ಬಿಡಿಸಿಹಾಕಿ ಆಚಮನಮಾಡಿ ಪುನಃ ಪವಿತ್ರವನ್ನು ಧರಿಸಿ ದೇವಮಂಡಲದ ಉತ್ತರದಲ್ಲಿ ತಾನು ಮತ್ತು ಬ್ರಾಹ್ಮಣರು ದ್ವಿರಾಚಮನಮಾಡಿ ಶ್ರಾದ್ಧ ಪ್ರದೇಶಕ್ಕೆ ಹೋಗತಕ್ಕದ್ದು, ಪಾದತೊಳೆದ ಮತ್ತು ಆಚಮನಶೇಷದ ಜಲವನ್ನು ಉಳಿದ ಜಲದಲ್ಲಿ ಸಂಪರ್ಕಮಾಡಬಾರದು. ಅಪಸವ್ಯದಿಂದ ಅಮುಕ ಶ್ರಾದ್ಧ ಸಿದ್ಧಿಸ್ತು” ಹೀಗೆ ಹೇಳಿ ಅದರಂತೆ ಪ್ರತಿವಚನ ಪಡೆಯತಕ್ಕದ್ದು. ಅಂಗುಷ್ಕರಹಿತವಾಗಿ ಬ್ರಾಹ್ಮಣನ ಬಲಹಸ್ತವನ್ನು ಹಿಡಿದು ಸವ್ಯ ಅಪಸವ್ಯಗಳಿಂದ “ಭೂರ್ಭುವಃಸ್ಟ: ಸಮಾಧ್ವಂ” ಎಂದು ದರ್ಭಸಹಿತವಾದ ಪೀಠದಲ್ಲಿ ವಿಲಂಬವಾಗದಂತೆ ಕೂಡ್ರಿಸತಕ್ಕದ್ದು, ವಿಶ್ವೇದೇವಬ್ರಾಹ್ಮಣನು ಪೂರ್ವಮುಖವಾಗಿಯೂ, ಪಿತೃಬ್ರಾಹ್ಮಣನು ಉತ್ತರಮುಖನಾಗಿಯೂ ಕೊಡತಕ್ಕದ್ದು. ಅಸಂಭವವಾದಲ್ಲಿ ದಕ್ಷಿಣವನ್ನು ಬಿಟ್ಟು ಉಳಿದ ಯಾವ ದಿಕ್ಕಿನಲ್ಲಾದರೂ ಕೂಡ್ರಿಸಬಹುದು. ಆಸನಗಳು ಬಂಗಾರ, ಬೆಳ್ಳಿ, ತಾಮ್ರ, ವಸ್ತ್ರ, ಕಂಬಲ, ಮರದ ಮಣೆ, ಹುಲ್ಲಿನ ಚಾಪೆ ಅಥವಾ ಎಲೆಯಿಂದ ಮಾಡಿದ ಆಸನ ಇವು ಆಸನಕ್ಕಾಗಿ ಪ್ರಶಸ್ತಿಗಳು, ಕಟ್ಟಿಗೆಗಳಲ್ಲಿ ಶ್ರೀಪರ್ಣಿ, (ದೇವದಾರು) ನೇರಳೆ, ಈಚಲು, ಮಾವು ಎರಜಲು, ಶಮೀ, ಶ್ಲೇಷ್ಮಾತಕ, ಸಾಲವೃಕ್ಷ ಇವುಗಳಿಂದ ತಯಾರಿಸಿದ ಆಸನವು ಪ್ರಶಸ್ತವು, ಕಬ್ಬಿಣದ ಮೊಳೆಗಳಿಂದ ಯುಕ್ತವಾದ ಆಸನದಲ್ಲಿ ಕೂಡಬಾರದು. ಅಗ್ನಿದರ ಅಥವಾ ಒಡೆದಿರುವ ಮಣೆಯನ್ನುಪಯೋಗಿಸಬಾರದು. ಪಿತೃಗಳ ಪಂಕ್ತಿಯು ವಿಶ್ವೇದೇವರ ದಕ್ಷಿಣದಿಕ್ಕಿನಲ್ಲಿ ಪೂರ್ವಅಗ್ರವಾಗಿಯೂ ಇರತಕ್ಕದ್ದು. ಅಂದರೆ ಪಿತೃಸ್ಥಾನದ ಬಲಕ್ಕೆ ಪಿತಾಮಹ, ಅವನ ಬಲಕ್ಕೆ ಪ್ರಪಿತಾಮಹ ಹೀಗಿರತಕ್ಕದ್ದು. ವಿಶ್ವೇದೇವರ ಆಸನಾರ್ಥವಾಗಿ ಪೂರ್ವಾಭಿಮುಖವಾಗಿ ಎರಡು ದರ್ಭೆಗಳನ್ನು ಇಡತಕ್ಕದ್ದು, ಪತೃಕದಲ್ಲಿ ದಕ್ಷಿಣಾಗ್ರವಾಗಿ ಒಂದೊಂದು ದರ್ಭೆಯು ತುಪ್ಪದಿಂದ ಅಥವಾ ತಿಲತೈಲಾದಿಗಳಿಂದ ಪ್ರತಿ ಬ್ರಾಹ್ಮಣನಲ್ಲಿಯೂ ೪೩೬ ಧರ್ಮಸಿಂಧು ಸವ್ಯಾಪಸವ್ಯಕ್ರಮದಿಂದ ದೀಪವನ್ನಿಡತಕ್ಕದ್ದು. ಹೀಗೆ ಬ್ರಾಹ್ಮಣಾರ್ಥವಾಗಿ ಕುಳಿತ ನಂತರ ಬ್ರಾಹ್ಮಣರು ಶ್ರಾದ್ದ ಸಮಾಪ್ತಿ ಪರ್ಯಂತ ಮೌನಿಗಳಾಗಿ, ಪವಿತ್ರಹಸ್ತರಾಗಿ, ಉತ್ಕೃಷ್ಟ ಸ್ಪರ್ಶಮಾಡದವರಾಗಿಯೂ ಇರತಕ್ಕದ್ದು. ಈ ಮಧ್ಯದಲ್ಲಿ ಅಯಾಚಿತನಾಗಿ ಯೋಗ್ಯ ಬ್ರಾಹ್ಮಣನು ಅತಿಥಿಯಾಗಿ ಬಂದರೆ ಸವ್ಯದಿಂದ ಬ್ರಾಹ್ಮಣಪಂಕ್ತಿಯಲ್ಲಿ ವಿಷ್ಣು ಉದ್ದೇಶದಿಂದ ಕೂಡ್ರಿಸಿ ಅರ್ಚಿಸುವದು. ಸವ್ಯದಿಂದ “ಅಪವಿತ್ರಃ ಪವಿತ್ರೋವಾ” ಈ ಮಂತ್ರವನ್ನು ಪಠಿಸಿ, “ವೈಷ್ಣವೈನಮಃ, ಕಾಶ್ಯಪ್ಪನಮಃ, ಕ್ಷಮಾಯ್ಕನಮ: ಹೀಗೆ ಭೂಮಿಯನ್ನು ನಮಸ್ಕರಿಸಿ ಮತ್ತು “ಮೇದಿನೀ ಲೋಕಮಾತಾ ತ್ವಂ’ ಇತ್ಯಾದಿ ಸ್ತೋತ್ರಗಳಿಂದಲೂ ಸ್ತುತಿಸಿ ‘ಶ್ರಾದ್ಧಭೂಮಿ ಇದು ಗಯಾ’ ಎಂಬ ಭಾವನೆಯಿಂದ ಮತ್ತು ವಿಶ್ವೇದೇವನನ್ನು ‘ಜನಾರ್ದನ’ ಎಂಬ ಭಾವನೆಯಿಂದ ಧ್ಯಾನಿಸಿ, ಪಿತೃಗಳೆಂದರೆ " ವಾದಿರೂಪರು” ಎಂದೂ ಭಾವಿಸುವದು. ಪ್ರಾಚೀನಾವೀತಿಯಾಗಿ ತದ್ವಿಷ್ಟೋ ಪರಮಂಪದಂ, ತದ್ವಿಪ್ರಾಸೋ” ಈ ಮಂತ್ರ ಮತ್ತು ಗಾಯತ್ರಿಯನ್ನೂ ಜಪಿಸಿ, ಸವ್ಯದಿಂದ ಪ್ರಾಣಾಯಾಮಾದಿ ತಿಥ್ಯಾದಿ ಸಂಕಲ್ಪಮಾಡಿ ಅಪಸವ್ಯದಿಂದ “ಅಮುಕ ಪಿತೃಣಾಂ ಉಪಕ್ರಾಂತಂ ಶ್ರಾದ್ಧಂ ಕರಿಷ್ಟೇ” ಹೀಗೆ ಸಂಕಲ್ಪಿಸತಕ್ಕದ್ದು, ಶ್ರಾದ್ಧದ ಆದಿ, ಮಧ್ಯ, ಅಂತ್ಯಗಳಲ್ಲಿ “ದೇವತಾಭ್ಯ: ಪಿತೃಭಶ್ಯ, ಅಮೂರ್ತಾನಾಂಚ, ಚತುರ್ಭಿಶ್ಚ ಮತ್ತು ಯಸ್ಕಸ್ಮತ್ಯಾ” ಇವುಗಳನ್ನು ಮೂರಾವರ್ತಿ ಹೇಳತಕ್ಕದ್ದು. ನಂತರ ಬಲ, ಎಡ ಕುಕ್ಷಿಗಳಲ್ಲಿ ತಿಲಗಳಿಂದ ಯುಕ್ತವಾದ ಮೂರು ದರ್ಭೆಗಳನ್ನು ಉಟ್ಟವಸ್ತ್ರದ ತುದಿಗೆ ಕಟ್ಟಿ ಕಟಿಯಲ್ಲಿ ಸುತ್ತಿದ ವಸ್ತ್ರದ ಹೊರಭಾಗದಿಂದ ಸುತ್ತಿ “ರಕ್ಷಣ"ವೆಂಬ ನೀವೀಬಂಧ (ಬದ್ಧಪರಿಕರ) ಮಾಡತಕ್ಕದ್ದು. ಅದನ್ನು ‘ನಿಹಸರ್ವಂ’ ಈ ಶ್ಲೋಕಮಂತ್ರದಿಂದ ಮಾಡತಕ್ಕದ್ದು. ಇದೆಲ್ಲ ಅಪಸವ್ಯದಿಂದ ಆಗತಕ್ಕದ್ದು. ‘ಅಪಹತ’ ಎಂದು ಅಪ್ರದಕ್ಷಿಣವಾಗಿ ‘ಉದೀರತಾ’ ಮಂತ್ರದಿಂದ ತಿಲಗಳನ್ನು ಬೀರಿ ಸವ್ಯದಿಂದ ಪ್ರೋಕ್ಷಣ ಮಾಡತಕ್ಕದ್ದು. ‘ತಿಲಾರಕ್ಷಂತು’ ಮಂತ್ರದಿಂದ ಬಾಗಿಲಿನಲ್ಲಿ ಕುಶತಿಲಗಳನ್ನು ಚಲ್ಲತಕ್ಕದ್ದು, “ತರಸ್ಸಮಂದೀ” ಸೂಕ್ತದಿಂದ ಮತ್ತು ಪವಮಾನ ಮಂತ್ರದಿಂದ ಜಲವನ್ನಭಿಮಂತ್ರಿಸಿ ಪಾಕಾದಿಗಳನ್ನು ಪ್ರೋಕ್ಷಿಸುವದು. ಇಲ್ಲವೆ “ತದ್ವಿಷ್ಟೋ” ಮಂತ್ರದಿಂದ ಅಥವಾ ಗಾಯತ್ರಿಯಿಂದ ಅಭಿಮಂತ್ರಿತವಾದ ಜಲದಿಂದ ಪ್ರೋಕ್ಷಿಸುವದು. ಬೇರೆಶಾಖೆಯವರು ‘ಯದೇವಾ’ ಎಂಬ ಮೂರು ಮಂತ್ರಗಳಿಂದ ಪ್ರೋಕ್ಷಿಸುವರು. ‘ಪಾಕವು ಪವಿತ್ರವಾಯಿತು’ ಎಂದು ಪ್ರತಿವಚನವನ್ನು ಹೇಳಿಸುವದು ಮತ್ತು ಪುಷ್ಪ ಮೊದಲಾದವುಗಳನ್ನೂ ಪ್ರೋಕ್ಷಿಸುವದು. ಯಾಕೆಂದರೆ ಶ್ರಾದ್ಧದಲ್ಲಿ “ಅಪ್ರೋಕ್ಷಿತ"ವಾದದ್ದನ್ನು ಮುಟ್ಟಬಾರದು. ನಂತರ “ಶ್ರಾದ್ಧ ಕಾಲೇ” ಎಂಬ ಮಂತ್ರವನ್ನು ಜಪಿಸುವದು. “ಪದಾರ್ಥವು ಶಾಯೋಗ್ಯವಾಯಿತು” ಎಂದು ಹೇಳಿಸಿ ವಿಶ್ವೇದೇವಾರ್ಚನೆಯನ್ನು ಮಾಡುವದು. ದೈವ ಹಾಗೂ ಪಿತ್ರ್ಯ ಈ ಎರಡರ ಉಪಚಾರದಲ್ಲಿಯೂ ಆದಿ ಮತ್ತು ಅಂತ್ಯದಲ್ಲಿ ಜಲವನ್ನು ಮುಟ್ಟಿಸುವದು. ವಿಶ್ವದೇವ ಬ್ರಾಹ್ಮಣನ ಸನ್ನಿಧಿಯಲ್ಲಿ ಉತ್ತರಾಭಿಮುಖವಾಗಿ ಕುಳಿತು ಆತನ ಅಂಗಾತವಾದ ಬಲಹಸ್ತವನ್ನು ಎಡಗೈಯಿಂದ ಓಡಕೊಂಡು, ಬಲಗೈಯಿಂದ ಯವಸಹಿತವಾದ ಎರಡು ದರ್ಭಗಳನ್ನು ಹಿಡಕೊಂಡು “ಅಮುಕಷಾಂ ವಿಶೇಷಾಂದೇವಾನಾಂ ಭೂರ್ಭುವಃ

ಪರಿಚ್ಛೇದ ೩ ಉತ್ತರಾರ್ಧ ೪೩೭ ಸರಿದಮಾಸನಂಸ್ವಾಹಾ” ಎಂದು ಬಲಹಸ್ತದಲ್ಲಿ ಜಲವನ್ನು ಚೆಲ್ಲಿ ಆಸನದ ಬಲಭಾಗದಲ್ಲಿ ಆ ಎರಡು ದರ್ಭೆಗಳನ್ನಿಡತಕ್ಕದ್ದು. ಹೊರತು ಕೈಯಲ್ಲಿ ಕೊಡಬಾರದು. ಪಿತೃಸ್ಥಾನದಲ್ಲಿ ಎಡಭಾಗದಲ್ಲಿಡತಕ್ಕದ್ದು. “ಧರ್ಮೊಸಿವಿಶಿರಾಜಾಪ್ರತಿಷ್ಠಿತಃ” ಈ ಮಂತ್ರದಿಂದ “ಸ್ವಾಸನಂ” ಎಂದು ಹೇಳತಕ್ಕದ್ದು. ಕರ್ತನು ಆಸನವನ್ನು ಸ್ಪರ್ಶಿಸಿ “ಆಸ್ಕತಾಂ” ಎಂದು ಹೇಳಿ ಕೊಡತಕ್ಕದ್ದು. ಬ್ರಾಹ್ಮಣನು ‘ಧರ್ಮೊಸಿ’ ಎಂದು ಪ್ರತಿವಚನವನ್ನು ಹೇಳುವದು. ಜಲವನ್ನು ಕೊಟ್ಟು ‘ದೈವೀಕ್ಷಣ: ಕ್ರಿಯತಾಂ’ ಹೀಗೆ ಹೇಳಿ ಅಂಗುಷ್ಕರಹಿತವಾದ ಹಸ್ತವನ್ನು ಹಿಡಿಯತಕ್ಕದ್ದು. ‘ಓಂತಥಾ’ ಎಂದು ಹಿಂದಿನಂತೆಯೇ ಹೇಳುವದು. ಇದು ಮೂರನೇ ನಿಮಂತ್ರಣ’ವು ಅರ್ತ್ಯಪಾತ್ರ ಬಂಗಾರ, ಬೆಳ್ಳಿ, ತಾಮ್ರ, ವೃಕ್ಷ, ಎಲೆ, ಕಂಚು, ಶಂಖಚಿಪ್ಪು, ಖಡ್ಗಮೃಗದ ಕೋಡು ಇವುಗಳ ಪಾತ್ರೆಗಳು ಪ್ರಶಸ್ತವು, ವಿಶ್ವೇದೇವರಲ್ಲಿ ಮೂರು, ನಾಲ್ಕು ಬ್ರಾಹ್ಮಣರಿದ್ದರೂ ಎರಡೇ ಅರ್ಘಪಾತ್ರೆಗಳು, ಪಿತೃಸ್ಥಾನದಲ್ಲಿ ಮೂರು ಅರ್ತ್ಯ ಪಾತ್ರೆಗಳು, ಅಶಕ್ತಿಯಲ್ಲಿ ಒಂದೊಂದಾದರೂ ಇರತಕ್ಕದ್ದು. ಎರಡು ಪಾತ್ರಗಳನ್ನು ಪ್ರೋಕ್ಷಿತವಾದ ಭೂಮಿಯಲ್ಲಿ ಪೂರ್ವಾಭಿಮುಖಗಳಾದ ದರ್ಭಗಳಲ್ಲಿ ಬೋರಲವಾಗಿ ಅಥವಾ ಅಂಗಾತವಾಗಿ ಇಡತಕ್ಕದ್ದು; ಮತ್ತು ಪ್ರೋಕ್ಷಿಸುವದು, ಬೋರಲವಾಗಿ ಇಡುವ ಪಕ್ಷದಲ್ಲಿ ಅದನ್ನು ಅಂಗಾತಮಾಡಿ ಅವುಗಳಲ್ಲಿ ಎರಡು ದರ್ಭಗಳಿಂದ ಮಾಡಿದ ಪವಿತ್ರಗಳನ್ನಿಟ್ಟು “ಶನ್ನೂದೇವಿ” ಎಂಬ ಮಂತ್ರದಿಂದ ಎರಡಾವರ್ತಿ ಜಲವನ್ನು ಸುರುವಿ’ಯವೋಸಿ’ ಎಂಬ ಮಂತ್ರವನ್ನು ಎರಡಾವರ್ತಿ ಹೇಳಿ ಯವಗಳನ್ನು ಚಲ್ಲಿ ಅಮಂತ್ರಕವಾಗಿ ಗಂಧ, ಪುಷ್ಪಗಳನ್ನು ಹಾಕತಕ್ಕದ್ದು. ಕೆಲವರು “ಗಂಧದ್ವಾರಾಂ, ಔಷಧೀ ಪ್ರಮೋದಧ್ವಂ” ಈ ಎರಡು ಮಂತ್ರಗಳಿಂದ ಗಂಧ-ಪುಷ್ಪಗಳನ್ನು ಹಾಕುತ್ತಾರೆ. “ದೇವಾರ್ಘಪಾ ಸಂಪನ್ನೇ’ ಎಂದು ಹೇಳಿ, “ಸುಸಂಪನ್ನೇ” ಎಂದು ಪ್ರತಿವಚನ ಪಡೆಯುವದು. ಎಡದ ಹಸ್ತವನ್ನು ಬ್ರಾಹ್ಮಣನ ಮೊಣಕಾಲಿನಲ್ಲಿಟ್ಟು “ಅಮುಕವಿಶ್ಯಾನ್‌ದೇವಾನ್ ಭವತ್ತು ಆವಾಹಯಿಷ್ಟೇ” ಹೀಗೆ ಕೇಳಿ, ‘ಆವಾಹಯ’ ಎಂದು ಹೇಳಿಸಿಕೊಳ್ಳುವದು. “ವಿಶ್ವೇದೇವಾಸಆಗತ” ಈ ಮಂತ್ರದಿಂದ ಪ್ರತಿ ಬ್ರಾಹ್ಮಣನಲ್ಲೂ ದಕ್ಷಿಣಪಾದಾದಿ ಯುಕ್ರಮದಿಂದ ಮೊಣಕಾಲು, ಹಗಲು, ಶಿರಸ್ಸುಗಳಲ್ಲಿ ಯವೆಯನ್ನು ಹಾಕತಕ್ಕದ್ದು. ‘ವಿಶ್ವದೇವಾಃಶ್ರುಣುತ ಈ ಋಕ್ಕಿನಿಂದ ಉಪಸ್ಥಾನ ಮಾಡಿ ಭೂಮಿಯಲ್ಲಿ ಅವಶಿಷ್ಟವಾದ ಯವಗಳನ್ನು ಚಲ್ಲುವದು. ಹಿರಣ್ಯಕೇಶೀಯ ಮೊದಲಾದವರು ಅರ್ಘದಾನ, ಗಂಧಾದಿ ಪೂಜೆಯ ನಂತರದಲ್ಲಿ ಅಕರಣಕಾಲದಲ್ಲಿ ‘ಯೇದೇವಾಸ’ ಎಂದೂ, ‘ಆಯಾತಪಿತರ’’ ಎಂದೂ ಮಂತ್ರಗಳನ್ನು ಹೇಳಿ ಅಗ್ನಿಯ ಬಲಗಡೆಯಲ್ಲಿ ದೇವ-ಪಿತೃಗಳ ಆವಾಹನೆಯನ್ನೂ ಮಾಡುವರು. ಕಾತ್ಯಾಯನರು ಅರ್ಘಪಾತ್ರಾಸಾದನೆಗಿಂತ ಮೊದಲು ದೇವ-ಪಿತೃಗಳ ಆವಾಹನ ಮಾಡುವರು. ಹಾಗೆಂದು ‘ಕಾತ್ಯಾಯನಸೂತ್ರ’ವಿದೆ. ಇರಲಿ, ನಂತರ ಅರ್ಘಪಾತ್ರ ಸಂಪತ್ತಿಯನ್ನು ಹೇಳಿಸಿ ಅವರ ಮುಂಗಡೆಯಲ್ಲಿ ಅರ್ಘಪಾತ್ರವನ್ನು ‘ಸ್ವಾಹಾರ್ಫ್ಟ್‌ಂ’ ಎಂದು ಇಡುವದು, ಬ್ರಾಹ್ಮಣಹಸ್ತದಲ್ಲಿ ಜಲವನ್ನು ಕೊಟ್ಟು ಮತ್ತು ಅರ್ಫ್ ಪವಿತ್ರವನ್ನಿಟ್ಟು ‘ಯಾದಿವ್ಯಾ’ ಈ ಮಂತ್ರದಿಂದ ಅರ್ಘವನ್ನು ೪೩೮ ಧರ್ಮಸಿಂಧು ಕೊಡತಕ್ಕದ್ದು. ‘ವಿಶ್ವೇದೇವಾ ಇದರವೋ ಅರ್ಘಾಹಾನಮಃ’ ಹೀಗೆ ಹೇಳುವದು. ಪ್ರತಿಬ್ರಾಹ್ಮಣನಲ್ಲಿ ‘ಯಾದಿವ್ಯಾ’ ಇದನ್ನು ಪ್ರತ್ಯೇಕವಾಗಿಯೇ ಹೇಳತಕ್ಕದ್ದು. ಕೆಲವರು ‘ಯಾದಿವ್ಯಾ’ ಈ ಮಂತ್ರದಿಂದ ಕೊಟ್ಟ ಅರ್ಘಕ್ಕೆ ‘ಅನುಮಂತ್ರಣ’ ಎಂದು ಹೇಳುವರು. ಮಯೂಖದಲ್ಲಿಯ ಕಾತ್ಕಾಯನ ಪ್ರಯೋಗದಲ್ಲಿ ಬ್ರಾಹ್ಮಣಹಸ್ತದಲ್ಲಿ ಅರ್ಘಪವಿತ್ರವನ್ನು ಕೊಟ್ಟ ನಂತರ ಆವಾಹನೆಯಂತೆಯೇ ಅವಯವಗಳಲ್ಲಿ ಅರ್ಚನೆಯನ್ನು ಮಾಡಿ ಅರ್ಥ್ಯವನ್ನು ಕೊಡತಕ್ಕದ್ದೆಂದು ಹೇಳಿದ. ಬ್ರಾಹ್ಮಣನು ಒಬ್ಬನೇ ಆದರೆ ಆ ಒಬ್ಬನ ಹಸ್ತದಲ್ಲಿಯೇ ಎರಡು ಆರ್ಘಗಳನ್ನು ಕೊಡತಕ್ಕದ್ದು. ನಾಲ್ಕು ಬ್ರಾಹ್ಮಣರಾಗಿದ್ದಲ್ಲಿ ಒಂದೊಂದು ಪಾತ್ರವನ್ನೇ ವಿಭಾಗಿಸಿ ಇಬ್ಬರಿಬ್ಬರಿಗೆ ಕೊಡತಕ್ಕದ್ದು. ಕೂರ್ಚೆಯಾದರೂ ಆಯಾಯ ಪಾತ್ರೆಗಳಲ್ಲಿದ್ದದ್ದೇ ಹೊರತು ಪ್ರತ್ಯೇಕ ಮಾಡತಕ್ಕದ್ದಿಲ್ಲ. ಕೆಲ ಗ್ರಂಥಗಳಲ್ಲಿ ಕ್ಷೀರ, ದಧಿ, ಧೃತ, ತಿಲ, ತಂಡುಲ, ಸಾಸಿವೆ, ದರ್ಭೆಯ ತುದಿ, ಪುಷ್ಪ ಹೀಗೆ ಅಷ್ಟದ್ರವ್ಯಗಳನ್ನು ತೆಗೆದುಕೊಂಡು ಅರ್ಘಪಾತ್ರದಲ್ಲಿ ಹಾಕಬೇಕೆಂದು ಹೇಳಿದೆ. ವಿಶ್ವೇದೇವರಲ್ಲಿ ಗಂಧಾದೃರ್ಚನೆ ಹಿಂದೆ ಹೇಳಿದಂತೆ ಆದಿ, ಅಂತ್ಯಗಳಲ್ಲಿ ಜಲವನ್ನು ಕೊಡುವದು. “ಅಮುಕ ವಿಶ್ವೇದೇವಾ: ಅಯುಂವೋಗಂಧಃಸ್ವಾಹಾ ನಮಃ” ಎಂದು ಕೈಯಿಂದಲೇ ಬ್ರಾಹ್ಮಣನ ಹಸ್ತದಲ್ಲಿ ಎರಡಾವರ್ತಿ ಗಂಧವನ್ನು ಕೊಡುವದು. ಹೀಗೆ ದೈವದಲ್ಲಿ “ಸ್ವಾಹಾ ನಮ:” ಎಂದು ಎಲ್ಲ ಉಪಚಾರಗಳನ್ನೂ ಮಾಡುವದು. ಚಂದನ, ಅಗರು, ಕರ್ಪೂರ, ಕುಂಕುಮ ಇವುಗಳನ್ನು ಕೊಡಬಹುದು. ‘ಗಂಧದ್ವಾರಾ’ ಎಂದು ಗಂಧವನ್ನೂ, ‘ಆಯನೇತೇ’ ಎಂದು ಪುಷ್ಪವನ್ನೂ, ‘ಧೂರಸಿ’ ಇದರಿಂದ ಧೂಪ, ಉದ್ದೀಪಸ್ವ ಇದರಿಂದ ದೀಪವನ್ನೂ ಕೊಡತಕ್ಕದ್ದು. “ಯವವಸ್ತ್ರಾಣಿ ಇದರಿಂದ ವಸ್ತ್ರವನ್ನು ಕೊಡುವದು. ಬ್ರಾಹ್ಮಣನು ಆಸನದಲ್ಲಿ ‘ಸ್ವಾಸನಂ’, ಅರ್ಘದಲ್ಲಿ ಅರ್ಥ್ಯಂ’, ಗಂಧದಲ್ಲಿ ‘ಸುಗಂಧಃ’, ಪುಷ್ಪದಲ್ಲಿ ಸುಪುಷ್ಪಾಣಿಮಾಲ್ಯಾನಿ ‘ಸುಧೂಪಃ, ಸುಜ್ಯೋತಿಃ, ಸುದೀಪಃ, ಸ್ವಾಚ್ಛಾದನಂ” ಇತ್ಯಾದಿ ಪ್ರತಿವಚನವನ್ನು ಹೇಳತಕ್ಕದ್ದು, ಕರ್ತನು ಉತ್ತರೀಯವನ್ನು ಧರಿಸಿ ಪವಿತ್ರವನ್ನು ತೆಗೆದಿಟ್ಟುಕೊಂಡು ಹಸ್ತದಲ್ಲಿ ಕೊಟ್ಟ ಗಂಧವನ್ನೇ ಬ್ರಾಹ್ಮಣನ ಹಣ ಮೊದಲಾದ ಅವಯವಗಳಲ್ಲಿ ಲೇಪಿಸುವುದು. ವರ್ತುಲ ತಿಲಕ ಅಥವಾ ತ್ರಿಪುಂಡ್ರವನ್ನು ಮಾಡಬಾರದು. ಬ್ರಾಹ್ಮಣರಿಗೆ ಕಸ್ತೂರಿಯ ತಿಲಕವು ವಿಕಲ್ಪವು. “ಆಯನೇತೇ” ಮಂತ್ರ ಅಥವಾ “ಓಷಧೀಃ ಪ್ರತಿದಧ್ವಂ” ಎಂಬ ಮಂತ್ರದಿಂದಾಗಲೀ ಗಂಧವನ್ನು ಕೊಟ್ಟಂತ ಹಸ್ತದಲ್ಲಿಯೇ ಇದಂವಃಪುಂ” ಎಂದು ಕೊಡತಕ್ಕದ್ದು. ಯುಕ್ತವಾದ ಪುಷ್ಪಗಳು ಅಗಸ, ಶೃಂಗರಾಜ, ತುಲಸೀ, ಕಮಲ, ಸಂಪಿಗೆ, ತಿಲಪುಷ್ಪ, ದೂರ್ವಾ ಇವು ಪಿತೃಪ್ರೀತಿಕರಗಳು, ಪಿಂಡಪೂಜೆಯಲ್ಲಿ ತುಲಸಿಯು ವಿಕಲ್ಪವು, ಎಳೇಚಿಗುರು, ಜವೆ, ದೂರ್ವಾಂಕುರ, ಜಲದಲ್ಲಿ ಹುಟ್ಟಿದ ಪುಷ್ಪ, ಮಲ್ಲಿಗೆ, ಕಾಡು ಇರುವಂತಿಗೆ, ತಗರ ಈ ಪುಷ್ಪಗಳು ಪಿತೃಗಳ ಅರ್ಚನೆಗೆ ಯೋಗ್ಯಗಳು, ಜಾಜಿಹೂವು ಬ್ರಾಹ್ಮಣಾರ್ಚನೆಗೆ ಅಡ್ಡಿ ಇಲ್ಲ. ಪಿಂಡಪೂಜೆಯಲ್ಲಿ ಮಾತ್ರ ನಿಷಿದ್ದವು.· ಪರಿಚ್ಛೇದ ೩ ಉತ್ತರಾರ್ಧ ೪೩೯ ವರ್ಜ ಪುಷ್ಪಗಳು ಕರವೀರ, ದತ್ತೂರ, ಬಿಲ್ವಪತ್ರ, ಕೇದಿಗೆ, ರಂಜಲು, ಮಾಗಿಮಲ್ಲಿಗೆ, ಮುತ್ತುಗ, ಹಳದಿ ಗೊರಟಿಗೆ, ಎಲ್ಲ ಕೆಂಪು ಹೂವುಗಳು ಇವು ಶ್ರಾದ್ಧದಲ್ಲಿ ತ್ಯಾಜ್ಯಗಳು, ಕೆಂಪುಹೂವಾದರೂ ನೀರಲ್ಲಿ ಹುಟ್ಟಿದ್ದಾದರೆ ಅಡ್ಡಿಯಿಲ್ಲ. ಧೂಪ ಗುಗ್ಗುಲು, ಗಂಧಸಾರ, ಅರಗು, ಕರ್ಪೂರ ಇವುಗಳನ್ನು ಮೃತ, ಮಧು ಇತ್ಯಾದಿಗಳಿಂದ ಕೂಡಿಸಿ ಮಾಡತಕ್ಕದ್ದು. ಪ್ರಾಣಿ ಅವಯವದಿಂದುತ್ಪನ್ನವಾದ ಹಾಗೂ ಉಗ್ರವಾಸನೆಯ ಮತ್ತು ಕೈಯಿಂದ ಅರೆದ ಧೂಪವು ಶ್ರಾದ್ಧದಲ್ಲಿ ವರ್ಜವು, ಕೆಟ್ಟುಹೋದ ತುಪ್ಪ ಹುಲ್ಲುಗುಗ್ಗುಳ ಇವು ವರ್ಜಗಳು, ಧೂಪವನ್ನು ಪಾದದ ಬಳಿಯಲ್ಲಿ ಅಯಂವೋ ಧೂಪಃ"ಎಂದು ಕೊಡತಕ್ಕದ್ದು. ದೀಪ ತುಪ್ಪ ಅಥವಾ ತಿಲತೈಲ ಇವುಗಳಿಂದ ದೀಪವನ್ನು ಮಾಡತಕ್ಕದ್ದು. ಚರಬಿ, ಮೇದಸ್ಸು ಇವುಗಳಿಂದ ಮಾಡಿದ ತೈಲವು ವರ್ಜವು ದೀಪವನ್ನು ಮುಖ ಸಮೀಪದಲ್ಲಿ “ಇದಂವೋಜ್ಯೋತಿ” ಅಥವಾ “ಅಯಂವೋದೀಪಪ್ರಕಾಶಃ"ಎಂದು ತೋರಿಸುವದು, ವಸ್ತ್ರದ ಸಲುವಾಗಿ ಪಟ್ಟರೇಷ್ಮೆ ಅಥವಾ ಹತ್ತಿಯ ಬಟ್ಟೆಯು ಶ್ರೇಷ್ಠವು, ಕಪ್ಪಾದ, ಹೊಲಸಾದ, ಬಳಸಿರುವ, ಹರಿದಿರುವ, ಅಂಚುಗಳಿಲ್ಲದ, ಮಡಿವಾಳನಿಂದ ತೊಳೆಯಲ್ಪಟ್ಟ ವಸ್ತ್ರಗಳು ನಿಷಿದ್ಧಗಳು, ವಸ್ತ್ರದ ಅಭಾವದಲ್ಲಿ ಯಜ್ಞಪವೀತವನ್ನು ಕೊಡತಕ್ಕದ್ದು, ಪಿತೃಗಳನ್ನು ವಸ್ತ್ರದಿಂದ ಸತ್ಕರಿಸಿದ್ದರೂ ಯಜ್ಞಪವೀತವನ್ನು ಅವಶ್ಯವಾಗಿ ಕೊಡತಕ್ಕದ್ದು. ಯಜ್ಞಪವೀತವಿಲ್ಲದ ಶ್ರಾದ್ಧವು ನಿಷ್ಕಲವು ಯತಿ, ಮತ್ತು ಸ್ತ್ರೀಯರ ಶ್ರಾದ್ಧದಲ್ಲಾದರೂ ಯಜೋಪವೀತವನ್ನು ಕೊಡತಕ್ಕದ್ದು. ಇನ್ನೂ ಉಳಿದ ದಾನವಸ್ತುಗಳು ಧಾತುಮಯವಾದ ಧೂಪಪಾತ್ರೆ, ದೀಪದಗುಡ್ಡ, ತಾಮ್ರ, ಕಟ್ಟಿಗೆ ಅಥವಾ ಮೃತ್ತಿಕೆಗಳಿಂದ ಮಾಡಿದ ಕಮಂಡಲು ಇಲ್ಲವೆ, ತೆಂಗಿನ ಕರಟೆ, ಕಮಂಡಲು, ಛತ್ರ, ಪಾದಾಣ, ಪಾದುಕಾ, ಆಸನ, ಹಾಸಿಗೆ, ಕನ್ನಡಿ, ಚಾಮರ, ಬೀಸಣಿಗೆ, ಬಾಚಣಿಗೆ, ಪಟವಸ್ತ್ರ, ಸುಗಂಧಚೂರ್ಣ, ಅಗ್ಗಿಷ್ಟಿಕ, ದಂಡ, ಕಂಬಳಿ, ಕಾಡಿಗೆಯ ಕರಡಿಗೆ ಇತ್ಯಾದಿ ವಸ್ತುಗಳನ್ನೂ, ಯಥಾಶಕ್ತಿ ಬಂಗಾರದ ಆಭರಣ, ಬಾಹುಪುರಿ, ಸರ, ಕಂಕಣ, ಉಂಗುರ, ಕಿವಿಯ ಉಂಗುರ ಇತ್ಯಾದಿ ಸ್ತ್ರೀ ಆಭರಣಗಳನ್ನು ಸ್ತ್ರೀಯರಿಗೆ ಕೊಡುವದು. ಸ್ತ್ರೀಯರ ಆಭರಣ ಅಂದರೆ ಕಿರುಗೆಜ್ಜೆ, ವಡ್ಯಾಣ, ಬಳೆ, ಬೆಂಡೋಲೆ, ಸರ ಇತ್ಯಾದಿಗಳನ್ನು ಕೊಡತಕ್ಕದ್ದು; ಮತ್ತು ಬಂಗಾರ, ಬೆಳ್ಳಿ, ಕಂಚು ಈ ಲೋಹಗಳ ಭೋಜನಪಾತ್ರೆಗಳನ್ನೂ ಕೊಡುವದು.ಕರ್ಪೂರಕರಡಿಗೆ, ತಾಂಬೂಲಪಾತ್ರ ಇತ್ಯಾದಿ ಯಥೇಚ್ಛದಾನ ಮಾಡಬಹುದು. ಸ್ವಕರ್ಮದಿಂದ ಬದ್ಧರಾದ ಪಿತೃಗಳನ್ನು ವಿಮೋಚನಗೊಳಿಸಲು ಯಾವ ವಿಧವಾದರೂ ಅವಶ್ಯವೇ ಎಂದು ತಿಳಿಯಕ್ಕದ್ದು, ಸ್ಪರ್ಶಯೋಗ್ಯರಾದ ಬ್ರಾಹ್ಮಣರಿಗೆ ಸಂಕಲ್ಪ ಮಾಡಿ “ಸಂಪೂರ್ಣಮಸ್ತು ಸಂಕಲ್ಪಸಿದ್ಧಿರಸ್ತು” ಹೀಗೆ ಹೇಳಿ ಪ್ರತಿವಚನಪಡಕೊಂಡು “ಮಂತ್ರಹೀನಂ ಕ್ರಿಯಾಹೀನಂ ಸಂಪದ್ದೀನಂ ದ್ವಿಜೋತ್ತಮಾ ಶ್ರಾದ್ಧಂ ಸಂಪೂರ್ಣತಾಂ ಯಾತು ಪ್ರಸಾರಾರಾಂ ಮಮ” “ಯಾ ದೇವತಾಭ್ಯ: ಇವುಗಳನ್ನು ಪಠಿಸುವದು. ೪೪೦ ಧರ್ಮಸಿಂಧು ಕಾಂಡಾನುಸಮಯ ಪದಾರ್ಥಾನುಸಮಯಗಳು ಹೀಗೆ ಆಸನಾದಿ ಎಲ್ಲ ಪೂಜಾಕಾಂಡವನ್ನು ವಿಶ್ವೇದೇವರಲ್ಲಿ ಮುಗಿಸಿ ಪಿತೃಸಂಬಂಧವಾದ ಆಸನಾದಿ ಪೂಜಾಕಾಂಡವನ್ನು ಆರಂಭಿಸತಕ್ಕದ್ದು. ಇದು ಕಾಂಡಾನುಸಮಯಕ್ರಮವು. ಇದೇ ಮಾಧವಸಂಮತವಾದದ್ದು. ಕಾತ್ಯಾಯನರು ಆಸನ, ಕ್ಷಣ, ಆವಾಹನ, ಅರ್ಘಪರ್ಯಂತವಾಗಿ ಮಾಡಿ ಪಾದ್ಯಾಂತಪ್ರಯೋಗವುಳ್ಳ ಪದಾರ್ಥಾನುಸಮಯಕ್ರಮದಿಂದಲೇ ದೈವ ಹಾಗೂ ಪಿತ್ರಗಳಲ್ಲಿ ಮಾಡಿ ಗಂಧಾದಿ ಪೂಜೆಯನ್ನೇ ಕಾಂಡಾನುಸಮಯದಿಂದ ಮಾಡುತ್ತಾರೆ. ಒಂದು ವಿಷಯವನ್ನು ದೈವ- ಪಿತ್ರಗಳಲ್ಲಿ ಎಲ್ಲ ಅನುಷ್ಠಾನ ಮಾಡಿ ಎರಡನೇ ಪದಾರ್ಥವನ್ನು ಎತ್ತುಗಡೆಮಾಡುವದಿದು “ಪದಾರ್ಥಾನುಸಮಯ"ವೆಂದಾಗುವದು. ಅಂದರೆ ದೈವದಲ್ಲಿ ಗಂಧವನ್ನು ಕೊಡುವದು. ನಂತರ ಮುಂದಿನ ಪೂಜೆಯನ್ನು ಹಿಂದಿಟ್ಟು ಪಿತ್ರದಲ್ಲಿ ಗಂಧ ಕೊಡುವದು. ಹೀಗೆ ಪದಾರ್ಥಾನುಸಮಯವು “ಕಾಂಡಾನುಸಮಯ"ವೆಂದರೆ ಪೂಜಾಪ್ರಕರಣವನ್ನು ಒಂದು ಕಡೆಯಲ್ಲಿ ಪೂರ್ಣಮುಗಿಸಿ ಮತ್ತೊಂದು ಕಡೆಯಲ್ಲಿ ಪೂಜೆಯನ್ನು ಪ್ರಾರಂಭಿಸುವದು. ಅನ್ಯ ಪವಿತ್ರವನ್ನು ಧರಿಸಿ ಪಿತ್ರರ್ಚನೆಯನ್ನು ಸಂಕಲ್ಪಿಸಿ ಆಸನಾದಿ ಆಚ್ಛಾದನಾಂತ ಅರ್ಚನೆಗಳನ್ನು ವಿಶ್ವೇದೇವ ಹಾಗೂ ಪಿತೃಗಳಲ್ಲಿ ಆಯಾಯ ಧರ್ಮೋಕ್ತವಾಗಿ ಮಾಡತಕ್ಕದ್ದು. ವಿಶೇಷವನ್ನು ಮುಂದೆ ಹೇಳಲಾಗುವದು. ಪಿತೃ ಆಸನಾದಿಗಳು ದ್ವಿಗುಣಮಾಡಿ ಮಡಚಿದ ಮೂರು ದರ್ಭೆಗಳನ್ನು ಬ್ರಾಹ್ಮಣನ ಎಡಭಾಗದಲ್ಲಿಡತಕ್ಕದ್ದು. ಪಾರ್ವಣ ಸ್ಥಾನದಲ್ಲಿ ಮೂರು ಪಿತೃಗಳಾದರೆ “ಪಿತುಃ ಯಥಾ ನಾಮ ಗೋತ್ರ ಇದಮಾಸನಂ” ಹೀಗೆ ಪೃಥಕ್ ಉಚ್ಚಾರವು. ಒಬ್ಬನೇ ಬ್ರಾಹ್ಮಣನಾದಲ್ಲಿ “ಪಿತೃಪಿತಾಮಹ ಪ್ರಪಿತಾಮಹಾನಾಂ ಇದಮಾಸನಂ” ಹೀಗೆ ಉಚ್ಚರಿಸುವದು. ಹೀಗೆ ಮುಂದೆಯೂ ಉಪಚಾರಕ್ರಮವನ್ನು ತಿಳಿಯತಕ್ಕದ್ದು. ಉಳಿದದ್ದಲ್ಲ ಹಿಂದಿನಂತೆಯೇ, ಮೂರನೇ ನಿಮಂತ್ರಣವನ್ನಾದರೂ ಹಿಂದೆ ಹೇಳಿದಂತೆ ಹಸ್ತಗ್ರಹಣಪೂರ್ವಕವಾಗಿ ಮಾಡತಕ್ಕದ್ದು. ಅರ್ಥ್ಯ ಆಸಾದನ ಬ್ರಾಹ್ಮಣನ ಮುಂಗಡೆಯಲ್ಲಿ ದಕ್ಷಿಣಾಗ್ರಗಳಾದ ಮೂರು ದರ್ಭೆಗಳನ್ನು ಮೂರು ಕಡೆಗೆ ಹಾಸಿ ಅವು ಆಕ್ಷೇಯ ದಿಕ್ಕಿಗೆ ಮುಂದರಿಯುವಂತೆ (ಒಂದರ ಬೆನ್ನಿಗೆ ಮತ್ತೊಂದು) ಪ್ರತಿ ಪಾರ್ವಣಕ್ಕೆ ಮೂರು ಪಾತ್ರೆಗಳನ್ನಿಟ್ಟು ಪಿತೃಪಾತ್ರದ ಪಶ್ಚಿಮ ದಿಕ್ಕಿನಲ್ಲಿ ಬ್ರಾಹ್ಮಣರು ಎಷ್ಟೇ ಇರಲಿ; ಒಬ್ಬನಿರಲಿ ಅಥವಾ ಒಂಭತ್ತಿರಲಿ, ಪಾತ್ರಗಳು ಮೂರೇ ಇರತಕ್ಕದ್ದು. ಏಕವಿಪ್ರನಾದರೆ ಆತನ ಹಸ್ತದಲ್ಲಿಯೇ ಮೂರು ಅರ್ಥ್ಯಗಳನ್ನು ಕೊಡತಕ್ಕದ್ದು. ಒಂಭತ್ತು ಬ್ರಾಹ್ಮಣ ಪಕ್ಷದಲ್ಲಿ ಒಂದೊಂದು ಪಾತ್ರೆಯನ್ನು ವಿಭಾಗಿಸಿ ಮೂರು-ಮೂರು ಬ್ರಾಹ್ಮಣರಿಗೆ ಕೊಡತಕ್ಕದ್ದು. ಪ್ರತಿ ಪಾತ್ರದ ಮೇಲೆ ದ್ವಿಗುಣಿತ ಹಾಗೂ ದಕ್ಷಿಣಾಗ್ರಗಳಾದ ತುದಿಯಿರುವ ಅಥವಾ ಇಲ್ಲದಿರುವ ಮೂರು-ವ.ರ. ದರ್ಭಗಳನ್ನಿಡುವದು. ಪಿತೃತೀರ್ಥದಿಂದ ಪಾತ್ರಗಳಲ್ಲಿ ಜಲವನ್ನು ತುಂಬಿ “ಶನೋದೇವೀ” ಎಂದು ಎಲ್ಲ ಪಾತ್ರಗಳಲ್ಲಿಯೂ ಒಂದಾವರ್ತಿ “ಅನುಮಂತ್ರಣ” ಮಾಡತಕ್ಕದ್ದು ಎಂದು ಆಶ್ವಲಾಯನರಿಗೆ ಹೇಳಿದೆ. ಉಳಿದ ಶಾಖೆಯವರಿಗೆ “ಶನ್ನೋದೇವಿ” ಎಂಬ ಮಂತ್ರದಿಂದ ಮಂತ್ರಾವೃತ್ತಿ ಮಾಡಿ ಪ್ರತಿ ಪಾತ್ರಯಲ್ಲಿಯೂ ಜಲವನ್ನು ತುಂಬಿ ಮಾಡುವದು. ಹಿರಣ್ಯ ಕೇಶೀಯರು ಪರಿಚ್ಛೇದ - ೩ ‘ತ್ತರಾರ್ಧ ೪೪೧ “ಶನದೇವಿ” ಎಂಬ ಮಂತ್ರವನ್ನಿಚ್ಛಿಸುವದಿಲ್ಲ. “ತಿಲೋಸಿ” ಈ ಮಂತ್ರಾವೃತ್ತಿ ಮಾಡಿ ಪ್ರತಿಪಾತ್ರಗಳಲ್ಲಿಯೂ ತಿಲವನ್ನು ಚಲ್ಲುವದು. ಇದು ಸರ್ವರ ಮತವು. ಇಲ್ಲಿ ಪಿತೃ ಶಬ್ದವನ್ನು ಬದಲಾಯಿಸತಕ್ಕದ್ದಿಲ್ಲವೆಂದು ಹೇಳಿದೆ. ಇಲ್ಲಿ ಗಂಧಾದಿಗಳನ್ನು ಹಿಂದೆ ಹೇಳಿದಂತೆ ಹಾಕತಕ್ಕದ್ದು. ಆಮೇಲೆ ಪಿತ್ರರ್ಜ್ಞಪಾತ್ರದಲ್ಲಿ - “ಪಿತ್ರರ್ಘಂಸಂಪನ್ನಂ” ಇತ್ಯಾದಿ ಲಿಂಗಕ್ಕನುಸರಿಸಿ ಸಂಪತ್ತಿಯನ್ನು ಹೇಳಿಸಿಕೊಂಡು, ಜಲವನ್ನು ಕೊಟ್ಟು, ದಕ್ಷಿಣಾಭಿಮುಖನಾಗಿ ನಿಂತು ಎಡ ಹಸ್ತವನ್ನು ದರ್ಭ, ಎಳ್ಳುಗಳಿಂದ ಸಹಿತವಾಗಿ ಬ್ರಾಹ್ಮಣನ ಎಡಮೊಣಕಾಲಿನಲ್ಲಿಟ್ಟು ಪಿತೃ-ಪಿತಾಮಹಾದಿಗಳನ್ನು ದ್ವಿತೀಯಾವಿಭಂತವಾಗಿ ಉಚ್ಚಾರಮಾಡಿ “ಭವತ್ತು ಆವಾಹಯಿಷ್ಟೇ” ಎಂದು ಪಂಕ್ತಿಯಲ್ಲಿಯ ಮುಖ್ಯ ವಿಪ್ರನನ್ನು ಕೇಳತಕ್ಕದ್ದು. ಎಲ್ಲ ಕಡೆಯಲ್ಲಿಯೂ ಪಂಕ್ತಿಧುರೀಣನೇ ಪ್ರಶ್ನಾರ್ಹನು. “ಆವಾಹಯ” ಎಂದು ಅನುಜ್ಞಾತನಾಗಿ “ಉಶಂತಾ” ಎಂಬ ಮಂತ್ರವನ್ನು ಆವರ್ತಿಸಿ " ಅಮುಕಂ ಅಮುಕನಾಮ ಗೋತ್ರರೂಪಂ ಆವಾಹಯಾಮಿ” ಹೀಗೆ ಪ್ರತಿ ಬ್ರಾಹ್ಮಣನಲ್ಲಿಯೂ ಮೂರ್ಧಾದಿ ಪಾದಾಂತವಾಗಿ ಅಂದರೆ ಶಿರಸ್ಸು, ಹೆಗಲು, ಪಾದ ಈ ಕ್ರಮದಂತೆ ತಿಲವನ್ನು ತಳಿದು ಆವಾಹನ ಮಾಡುವದು. ಎಲ್ಲ ಬ್ರಾಹ್ಮಣರ ಆವಾಹನೆಯ ನಂತರ ಆಯಂತುನಃಪಿತರಃ” ಹೀಗೆ ಹೇಳಿ ಒಂದಾವರ್ತಿ ಉಪಸ್ಥಾನ ಮಾಡತಕ್ಕದ್ದು. J ಇಲ್ಲಿ ಕಾತ್ಯಾಯನರು- “ನಮೋವಃಪಿತರಃ” ಇತ್ಯಾದಿ “ಇಹಸಂತಃಾಮ” ಇದರ ನಂತರ ಅರ್ಚನೆಯನ್ನು ಹೇಳುವರು, ಆವಾಹನೆಯಲ್ಲಿ, ಸವ್ಯ ಅಪಸವ್ಯಗಳಲ್ಲಿ ವಿಕಲ್ಪವು. ಹಸ್ತದಲ್ಲಿ ಶೇಷವಿದ್ದ ತಿಲಗಳನ್ನು ಬ್ರಾಹ್ಮಣನ ಮುಂಗಡೆಯಲ್ಲಿ ಚೆಲ್ಲಿ “ಪಿತ್ರರ್ಘ್ನಪಾತ್ರಸಂಪದಸ್ತು” ಹೀಗೆ ಹೇಳಿ ಪ್ರತ್ಯುತ್ತರ ಪಡೆದು ಸವ್ಯದಿಂದ ಅಡಿಯಲ್ಲಿರುವ ದರ್ಭಸಹಿತವಾಗಿ ಒಂದೊಂದೇ ಅರ್ಘಪಾತ್ರವನ್ನು ಎರಡು ಕೈಗಳಿಂದ ಎತ್ತಿ ಬ್ರಾಹ್ಮಣನ ಮುಂಗಡೆಯಲ್ಲಿ “ಸ್ವಧಾರ್ಘಾ:” ಎಂದು ಮಂತ್ರಗಳ ಆವೃತ್ತಿಯಿಂದ ಅಂದರೆ ಪ್ರತಿಪಾತ್ರಕ್ಕೂ ಬೇರೆ-ಬೇರೆ ಹೇಳಿ ಪಾತ್ರಗಳನ್ನು ಸ್ಥಾಪಿಸುವದು. ಒಬ್ಬನೇ ಬ್ರಾಹ್ಮಣನಾದಲ್ಲಿ ಒಬ್ಬನ ಮುಂಗಡೆಯಲ್ಲಿಯೇ ಮೂರೂ ಪಾತ್ರಗಳನ್ನು ಹೀಗೆ ಆಸಾದನ ಮಾಡುವದು. ಒಂಭತ್ತು ಬ್ರಾಹ್ಮಣರಾದಾಗ ಮೂರ ಮೂರರೊಳಗೆ ಮುಖ್ಯನಾದವನ ಮುಂಗಡೆಯಲ್ಲಿ ಒಂದೊಂದರಂತೆ; ಹೀಗೆಯೇ ಪಾತ್ರಗಳನ್ನಿಡುವದು. ‘ಸ್ವಧಾರ್ಘಾ’ ಮಂತ್ರವು ಇದೇ. ಪಿತಾಮಹಾದಿಗಳಲ್ಲಿಯೂ ಇದೇ ಕ್ರಮವು. ಅಥರ್ವವೇದಿಗಳಿಗೆ ಪ್ರತಿ ಪಾರ್ವಣದಲ್ಲಿ ಪ್ರಪಿತಾಮಹಾದಿ ಪಿತ್ರಂತವಾಗಿ ಪ್ರತಿಲೋಮವಾಗಿ ಅಂದರೆ ‘ಪ್ರಪಿತಾಮಹ, ಪಿತಾಮಹ, ಪಿತೃ’ ಹೀಗೆ ಉಚ್ಚಾರವು. ನಂತರ ‘ಸಂತೃರ್ಘಾ’ ಎಂದು ಪ್ರತಿವಚನವಾದಮೇಲೆ ಜಲವನ್ನು ಕೊಟ್ಟು ಪಾತ್ರದಲ್ಲಿರುವ ಪವಿತ್ರವನ್ನು ಬ್ರಾಹ್ಮಣ ಹಸ್ತದಲ್ಲಿ ಕೊಟ್ಟು ಪ್ರಥಮ ಪಾದೋದಕಶೇಷವನ್ನು ಖಡ್ಗಮೃಗದ ಶೃಂಗದ ಪಾತ್ರೆಯಲ್ಲಿ ಅಥವಾ ಬೇರೆ ಪಾತ್ರೆಯಲ್ಲಿ ಹಿಡಿದು “ಪಿತರಿದಂತೇ ಅರ್ಘ, ಪಿತಾಮಹ ಇದಂತೇ ಅರ್ಘಂ” ಇತ್ಯಾದಿ ಯಥೋದ್ದೇಶದಿಂದ ಪ್ರತ್ಯೇಕವಾಗಿ ಅರ್ಥ್ಯವನ್ನು ಕೊಡತಕ್ಕದ್ದು. ಮೂರು ಪಿತೃಗಳ ಸ್ಥಾನದಲ್ಲಿ ಒಬ್ಬನೇ ಬ್ರಾಹ್ಮಣನಾದರೆ ಮೂರೂ ಪಾತ್ರಗಳಿಂದ ಆ ಒಬ್ಬನ ಹಸ್ತದಲ್ಲಿಯೇ ಕೊಡತಕ್ಕದ್ದು. ಆರು ಜನರ ಬಗ್ಗಾಗಿ ಒಬ್ಬ ವಿಪ್ರನಾದರ ಆರು ಪಾತ್ರಗಳಿಂದ ಒಬ್ಬನ ಹಸ್ತದಲ್ಲಿಯೇ ಕೊಡತಕ್ಕದ್ದು. ಪಿತೃಸ್ಥಾನದಲ್ಲಿ ಮೂರು ಬ್ರಾಹ್ಮಣರಿದ್ದ ಪಕ್ಷದಲ್ಲಿ ಒಂದು ಅರ್ಘೋಪಾತ್ರವನ್ನು ವಿಭಾಗಮಾಡಿ ಅವರಲ್ಲಿ ಕೊಡತಕ್ಕದ್ದು. ಅರ್ಮ್ಮದನಂತರ ಜಲವನ್ನು ಕೊಡುವದು. “ಪಿತರಿದಂತೇ ಅರ್ಘಂ” ಎಂಬ ಅರ್ಥ್ಯಮಂತ್ರವನ್ನು ಪ್ರತಿಯೊಬ್ಬ ೪೪೨ ಧರ್ಮಸಿಂಧು ವಿಪ್ರನಲ್ಲೂ ಆವರ್ತಿಸತಕ್ಕದ್ದು. ಹೀಗೆ ಪಿತಾಮಹಾದಿ ವಿಪ್ರರಲ್ಲಿಯೂ ಹೀಗೆಯೇ ಅರ್ಥ್ಯವನ್ನು ಕೊಡುವದು. ಬ್ರಾಹ್ಮಣಹಸ್ತದಲ್ಲಿ ಹನಿಸುತ್ತಿರುವ ಜಲವನ್ನು “ಯಾದಿವ್ಯಾ” ಈ ಮಂತ್ರದಿಂದ ಪ್ರತಿಬ್ರಾಹ್ಮಣನಲ್ಲಿಯೂ " ಅನುಮಂತ್ರಿಸುವದು” ಎಂದು ಋಗ್ವದಿಗಳ ಪ್ರಯೋಗವು. ಬೇರೆ ಶಾಖೆಯವರಿಗೆ “ಯಾದಿವ್ಯಾ’ ಈ ಮಂತ್ರದಿಂದ ಅರ್ಥ್ಯವು, ಅರ್ಘ ಕೊಟ್ಟ ನಂತರ ಪ್ರತಿ ವಿಪ್ರನಿಗೂ ಜಲವನ್ನು ಕೊಡುವದು. ಏಕಬ್ರಾಹ್ಮಣನಾದಲ್ಲಿ ಅನುಮಂತ್ರಣ ಮತ್ತು ಜಲದಾನ ಇವುಗಳನ್ನು ಕೊನೆಗೆ ಒಂದೇ ಆವರ್ತಿ ಕೊಡುವದು. ಬ್ರಾಹ್ಮಣಭೇದವಾದರೆ ಅದರಂತೆ ಆವೃತ್ತಿಯು. ಅರ್ಘಕೊಡುವಾಗ ನಾಮಗೋತ್ರಾದಿ ಉಚ್ಚಾರವಿಲ್ಲ. ಆದರೆ “ಶ್ರಾದ್ಧ ಸಾಗರ"ದಲ್ಲಿ ನಾಮಗೋತ್ರಾದಿ ಉಚ್ಚಾರಗಳನ್ನು ಮಾಡುವದು ಯುಕ್ತವೆಂದು ತೋರುತ್ತದೆ;ಎಂದು ಹೇಳುತ್ತಾರ ಸಂಸ್ರಾವ, ಮುಖಾಂಜನ ಮೊದಲಾದ ವಿಚಾರ ಶೇಷೋದಕಯುಕ್ತವಾದ ಮೊದಲನೆಯ ಅರ್ಘಪಾತ್ರದಲ್ಲಿ ಎರಡು ಪಾತ್ರಗಳ ಜಲವನ್ನು ಏಕೀಕರಿಸಿ ಆ ಜಲದಿಂದ ಮುಖಾಂಜನ; ಅಂದರೆ ಮುಖದಲ್ಲಿ ಒರಿಸಿಕೊಳ್ಳುವದು. ಆಯುಷ್ಯಕಾಮನಾದವನು ನೇತ್ರಗಳಲ್ಲಿ ಹಚ್ಚಿಕೊಳ್ಳುವದು. “ಸಂಸ್ರವಾನ್ ಸಮವನೀಯ ಎಂದು ಆಶ್ವಲಾಯನಸೂತ್ರವಿದೆ. ಸಂಸ್ರವ ಅಂದರೆ ಅರ್ಘಪಾತ್ರಜಲದ ಸ್ರವಿಸುವಿಕೆ. ಕೆಲಗ್ರಂಥಕಾರರು ಬ್ರಾಹ್ಮಣರ ಹಸ್ತದಿಂದ ಬೀಳುವ ಜಲಕ್ಕೆ “ಸಂಸ್ರಾವ” ಎನ್ನುವರು. ಅವುಗಳನ್ನು ಏಕೀಕರಿಸತಕ್ಕದ್ದೆನ್ನುವರು. ದರ್ಶಾದಿಶ್ರಾದ್ಧಗಳಲ್ಲಿ ಮಾತಾಮಹನ ಪಾತ್ರದ ಜಲದಲ್ಲಿ ಉಳಿದ ಎರಡು ಪಾತ್ರಗಳ ಜಲವನ್ನು ಕೂಡಿಸಿ ಮಾತಾಮಹಪಾತ್ರೋದಕವನ್ನು ಪಿತೃಪಾತ್ರದಲ್ಲಿರುವ ಸಂಸ್ರಾವದಲ್ಲಿ ಕೂಡಿಸುವದು. ಮಾತೃಪಾರ್ವಣವು ಪೃಥಕ್ಕಾದರೆ ಮಾತಾಮಹಪಾತ್ರದಲ್ಲಿ ಕೂಡಿಸಿದ ಜಲವನ್ನು ಮಾತೃವಾತ್ರದಲ್ಲಿ ಏಕೀಕರಿಸಿ ಆ ಜಲವನ್ನು ಪಿತೃಪಾತ್ರದಲ್ಲಿ ಕೂಡಿಸಿ ಈ ಕ್ರಮ ಮಾಡಿ, ಸಂಸ್ರಾವಪಾತ್ರವನ್ನು ವಿಶ್ವೇದೇವಬ್ರಾಹ್ಮಣನ ಉತ್ತರದಿಕ್ಕಿನಲ್ಲಿ ಒಂದು ಹಸ್ತದ ಅಂತರದಲ್ಲಿ ಸ್ಥಾನವನ್ನು ಪ್ರೋಕ್ಷಿಸಿ ದರ್ಭಗಳನ್ನಿಟ್ಟು, ಅದರ ಮೇಲೆ ಕೂರ್ಚಸಹಿತ ಬೋರಲವಾಗಿ “ಪಿತೃಭ್ಯಃಸ್ಥಾನಮಸಿ” ಎಂದು ಆಸಾದನ ಮಾಡುವದು; ಅಥವಾ ಮೊದಲಿನ ಪಾತ್ರವನ್ನು ಅಂಗಾತಮಾಡಿ, ಸಂಸ್ರಾವಜಲಸಹಿತವಾಗಿ ಮಂತ್ರದಿಂದ ಆಸಾದನ ಮಾಡಿ ಮೂರನೆಯ ಪಾತ್ರದಿಂದ ಆಚ್ಛಾದಿಸುವದು. ಅದು ಕೂರ್ಚಪವಿತ್ರ ಸಹಿತವಾಗಿರಬೇಕು. ಈ ಎರಡು ಕ್ರಮಗಳಲ್ಲಿಯೂ ಗಂಧಾದಿಗಳಿಂದ ಅರ್ಚಿಸಿ ಸಮಾಪ್ತಿ ಪರ್ಯಂತ ಅಲುಗಾಡಿಸಬಾರದು, ಮತ್ತು ಮುಟ್ಟಬಾರದು. ಕಾತ್ಕಾಯನರು- “ಶುಂಧಂತಾಂ"ಎಂದು ಭೂಮಿಯನ್ನು ಪ್ರೋಕ್ಷಿಸಿ ‘ಪಿತೃಷದನಮಸಿ’ ಎಂದು ದರ್ಭೆಗಳನ್ನು ಹಾಸಿ ‘ಪಿತೃಭ್ಯಃಸ್ಥಾನಮಸಿ’ ಎಂದು ಮೊದಲಿನದನ್ನು ಬೋರಲಾಗಿ ಇಟ್ಟು ಗಂಧಾದಿ ದೀಪಾಂತವಾಗಿ ಅರ್ಚಿಸುತ್ತಾರೆ. ಪಿತೃಗಳ ಗಂಧಾದಿ ಅರ್ಚನೆಯು ಪ್ರಾಚೀನಾನೀತಿಯಾಗಿ ಆದ್ಯಂತ ಜಲವನ್ನು ಮುಟ್ಟಿಸಿ ಗಂಧಾದಿಗಳಿಂದ ಅರ್ಚಿಸತಕ್ಕದ್ದು. “ಅಮುಕ ಶರ್ಮನ್ ಯಥಾ ನಾಮಗೋತ್ರ ಅಯಂತೇಗಂಧಃ ಸ್ವಧಾನಮ:” ಎಂದು ಅರ್ಚನೆಯು. ಒಬ್ಬ ಬ್ರಾಹ್ಮಣನಾದರೆ “ಶರ್ಮಾಣ” ಹೀಗೆ ಬಹುವಚನಾಂತವಾಗಿ ಮೂರು ಸರ್ತಿ ಕೊಡತಕ್ಕದ್ದು. ಪರಿಚ್ಛೇದ ೩ ಉತ್ತರಾರ್ಧ ೪೪೩ “ಶರ್ಮಾಣೋಯಂಗಂಧಃ” ಹೀಗೆ, ಉಳಿದದ್ದು ಪೂರ್ವದಂತೆ. ಕೆಲವರು “ಅಮೀತೇಗಂಧಾಃ” ಹೀಗೆ ಗಂಧವನ್ನು ಬಹುವಚನಾಂತವಾಗಿ ಹೇಳುತ್ತಾರೆ. ಅರ್ತ್ಯದ ಹೊರತಾದವುಗಳಲ್ಲಿ ‘ಸ್ವಧಾನಮಃ’ ವಂದು ಕೊಡತಕ್ಕದ್ದು. ಈ ಪೂಜೆಯಲ್ಲಿ ಗಂಧಾದಿ ಪದಾರ್ಥಗಳನ್ನು ಪದಾರ್ಥಾನುಸಮಯ ಅಥವಾ ಕಾಂಡಾನುಸಮಯದಂತೆಯಾದರೂ ಕೊಡತಕ್ಕದ್ದು. ವಾಚನಾದಿಗಳನ್ನು ಹಿಂದೆ ಹೇಳಿದಂತೆ ಮಾಡಿ ಚತುರಸ್ರ ಹಾಗೂ ವರ್ತುಲ ಮಂಡಲಗಳನ್ನು ಯಥಾಕ್ರಮದಿಂದ ಜಲ ಅಥವಾ ಗೋಮಯ ಇಲ್ಲವೆ ಭಸ್ಮ (ಶೇಡಿ) ಮೊದಲಾದವುಗಳಿಂದ ಮಾಡತಕ್ಕದ್ದು. ಮಂಡಲವನ್ನು ನೈಋತ್ಯದಿಂದ ಈಶಾನ್ಯಪರ್ಯಂತ ವಿಶ್ವೇದೇವರಲ್ಲಿ ಹಾಗೂ ಈಶಾನ್ಯದಿಂದ ನೈಋತ್ಯಪರ್ಯಂತ ಪಿತೃಸ್ಥಾನದಲ್ಲೂ ಮಾಡತಕ್ಕದ್ದು, ಮತ್ತು ಪ್ರದಕ್ಷಿಣ, ಅಪ್ರದಕ್ಷಿಣ ಕ್ರಮದಿಂದ ಮಾಡುವದು. ಈ ಮಂಡಲಗಳಲ್ಲಿ ಭೋಜನಪಾತ್ರಗಳನ್ನಿಡತಕ್ಕದ್ದು. ಭೋಜನಪಾತ್ರ ವಿಚಾರ ಕಬ್ಬಿಣ, ಹಿತ್ತಾಳೆ ಪಾತ್ರಗಳು ನಿಷಿದ್ಧಗಳು, ಸೀಸ, ತವರುಗಳೂ ನಿಷಿದ್ಧಗಳು. ಕಂಚಿನ ಪಾತ್ರವು ವಿಕಲ್ಪವು. ಎಲೆಗಳ ಪತ್ರಾವಳಿಗಳಲ್ಲಿ ಪಲಾಶ, ಮಧೂಕ, ಅತ್ತಿ, ಕೊಡಸಿಗ, ಬೀಣುಲಲ ಇವು ಪ್ರಶಸ್ತಿಗಳು, ಬಾಳೆ, ಮಾವು, ಹಲಸು, ನೇರಳೆ, ಸಂಪಿಗೆ ಇವು ಮಧ್ಯಮವು. ಹೀಗೆ ಪಾತ್ರಗಳನ್ನಿಟ್ಟು ಪಿತೃಪೂರ್ವಕವಾಗಿ ಸುತ್ತಲೂ ಭಸ್ಮದಿಂದ ಗಡಿ ಮಾಡಿ ಮತ್ತು ಪಿತೃಪೂರ್ವಕ ಬ್ರಾಹ್ಮಣರ ಕರಶುದ್ಧಿಯನ್ನೂ ಅಪಸವ್ಯ-ಸವ್ಯಗಳಿಂದ ಮಾಡತಕ್ಕದ್ದು, ಅದರಲ್ಲಿ “ಪಿಶಂಗ, ರಕ್ಷಾಣ” ಎಂಬ ಎರಡು ಮಂತ್ರಗಳನ್ನು ಕೆಲವರು ಹೇಳುವರು. ಆಚಮನ ಮಾಡಿ ಹಸ್ತಶುದ್ಧಿಯ ಜಲವನ್ನು ಪಾದಪ್ರಕಾಳನ ಮಂಡಲದಲ್ಲಿ ಚಲ್ಲತಕ್ಕದ್ದು. ಅಗೌಕರಣ ಗೃಹ್ಮಾಗ್ನಿಯುಳ್ಳ ಆಶ್ವಲಾಯನರು ವೃತಿಷಂಗದಿಂದ ಶ್ರಾದ್ಧ ಮಾಡುವಾಗ ಗೃಹ್ಯಾಗ್ನಿಯಲ್ಲಿ ಪಕ್ವವಾದ ಚರುವಿನಿಂದ ‘ಗೃಹ್ಯಾಗಿ’ಯಲ್ಲಿಯೇ ಹೋಮ ಮಾಡತಕ್ಕದ್ದು. ವ್ಯತಿಷಂಗವಿಲ್ಲದಲ್ಲಿ ಪಾಣಿಹೋಮ ಮಾಡುವದು. ಶೌತಾಗ್ನಿಯುಳ್ಳವರಿಗೆ ವೃತಿಷಂಗ ಪ್ರಸಂಗವಿಲ್ಲದ್ದರಿಂದ ಅವರು ಪಾಣಿಹೋಮವನ್ನೇ ಮಾಡುವದು. ಪೂರ್ವದು ಹಾಗೂ ಅನ್ನಷ್ಟಕ್ಕೆ ಶ್ರಾದ್ಧದಲ್ಲಿ ದಕ್ಷಿಣಾಗ್ನಿಯಲ್ಲಿ ಹೋಮಮಾಡುವದು. ‘ಚರುಶ್ರವಣ’ವೂ ಅದರಲ್ಲಿಯೇ, ನಿರಗ್ನಿಗಳಾದವರು ಸರ್ವತ್ರ ಪಾಣಿಹೋಮವನ್ನೇ ಮಾಡತಕ್ಕದ್ದು. ಶ್ರತಾಗಿ ಹಾಗೂ ಸರ್ವಾಧಾನಿಗಳಾದ ಆಪಸ್ತಂಬಾದಿಗಳು ದಕ್ಷಿಣಾಗ್ನಿಯಲ್ಲಿ ಹೋಮಮಾಡುವದು. ಬರೇ ಗೃಹ್ಯಾಗಿಗಳಾದ ಅರ್ಧಾಧಾನಿಗಳು ಗೃಹಾಗ್ನಿಯಲ್ಲಿ ಮಾಡತಕ್ಕದ್ದು. ಪ್ರವಾಸದಲ್ಲಿರುವವರ, ನಿರಗ್ನಿಕರಾಗಿರುವವರೂ “ಅಯಾಶ್ಚಾಗೇ ಮನೋಜ್ಯೋತಿಃ ಉದ್ದುದ್ರ ವ್ಯಾಹೃತಿ” ಹೋಮದಿಂದುತ್ಪಾದಿತವಾದ ಲೌಕಿಕಾಗ್ನಿಯಲ್ಲಿ ಹೋಮಿಸಿ ಅಗ್ನಿಯನ್ನು ವಿಸರ್ಜಿಸತಕ್ಕದ್ದು. ಹೊರತು ಇವರಿಗೆ ಎಲ್ಲಿಯೂ ಪಾಣಿಹೋಮವಿರುವದಿಲ್ಲ. ಪಾಕವನ್ನಾದರೂ ಸರ್ವತ್ರ ಪಚನಾಗ್ನಿಯಲ್ಲಿಯೇ ಮಾಡುವದು. ಶೌತಾಗ್ನಿ ಸರ್ವಾಧಾನಿಗಳು ದಕ್ಷಿಣಾಗ್ನಿಯಲ್ಲಿ ಹೋಮಮಾಡುವದು. ಅರ್ಧಾದಾನ ಪಕ್ಷದಲ್ಲಿ ಔಪಾಸನಾಗ್ನಿಯಲ್ಲಿ ಹೋಮಿಸುವದು. ಹೀಗೆ “ಕಾಶಿಕೆಯಲ್ಲಿ ಹೇಳಿದೆ. ಕಾತ್ಯಾಯನರಿಗೆ ೪೪೪ ಧರ್ಮಸಿಂಧು ಅರ್ಧಾಧಾನ ಪಕ್ಷವೇ ಯುಕ್ತವೆಂದು ತೋರುತ್ತದೆ. ನಿರಗ್ನಿಗಳಾದ ಕಾತ್ಯಾಯನರು ಅಪಸಾದಿಗಳಿಂದ ಪಿತ್ರಾದಿ ಬ್ರಾಹ್ಮಣರ ಹಸ್ತದಲ್ಲಿಯೇ “ಅಕರಣ ಮಾಡುವದು. ಅದರಲ್ಲಿ ಎರಡು ಪಕ್ಷಗಳಿವೆ. ವಿಶ್ವೇದೇವಬ್ರಾಹ್ಮಣನ ಪಾಣಿಯಲ್ಲಿಯೇ ಸವ್ಯದಿಂದ ಹೋಮಿಸುವದು; ಅಥವಾ ಅಪಸವ್ಯದಿಂದ ಪಿತೃಪಂಕ್ತಿಯಲ್ಲಿರುವ ಪ್ರಥಮ ಬ್ರಾಹ್ಮಣನ ಪಾಣಿಯಲ್ಲಿ ಹೋಮಿಸುವದು. ಋಗ್ವದಿಗಳು ಪಿತೃಬ್ರಾಹ್ಮಣರ ಪ್ರತಿಯೊಬ್ಬರ ಪಾಣಿಯಲ್ಲೂ ಹೋಮಿಸತಕ್ಕದ್ದು. ವಾಜಸನೇಯಿಗಳು ಒಂದೇ ಹೋಮ ಮಾಡತಕ್ಕದ್ದೆಂದು ಕಾಶಿಕೆಯಲ್ಲಿರುವ “ಕಾತೀಯಸೂತ್ರವೃತ್ತಿ"ಯಲ್ಲಿ ಹೇಳಿದೆ. ಕೆಲವರು “ಪೃಷ್ಟೋದಿವಿ” ಮಂತ್ರದಿಂದ ಅಗ್ನಿಯನ್ನುತ್ಪಾದಿಸಿ ಆ ಅಗ್ನಿಯಲ್ಲಿಯೇ ಹೋಮ ಮಾಡುತ್ತಾರೆ. ಸಾಗ್ನಿಗಳಾದ ಸಾಮವೇದಿಗಳು ಅಗ್ನಿಯಲ್ಲಿ, ಅಗ್ನಿಯ ಅಭಾವದಲ್ಲಿ ವಿಶ್ವದೇವ ಬ್ರಾಹ್ಮಣ ಅಥವಾ ಪಿತೃಬ್ರಾಹ್ಮಣನ ಪಾಣಿಯಲ್ಲಿ ಹೋಮಮಾಡುವದು. ನಿರಗ್ನಿಗಳು ವಿಶ್ವೇದೇವ ಬ್ರಾಹ್ಮಣನ ಪಾಣಿಯಲ್ಲೇ ಹೋಮಿಸುತ್ತಾರೆ. ಪತ್ನಿಯು ಮೃತಳಾಗಿದ್ದು, ಪುನಃ ವಿವಾಹವಾಗದ ವಿಧುರನು ಪ್ರಥಮ ವಿಶ್ವದೇವಬ್ರಾಹ್ಮಣನ ಹಸ್ತದಲ್ಲಿಯೇ ಹೋಮಿಸತಕ್ಕದ್ದು. ಪಿತೃಹಸ್ತದಲ್ಲಿ ಹೋಮಿಸತಕ್ಕದ್ದಲ್ಲ. ಇದು ಸರ್ವಸಾಧಾರಣ ನಿಯಮವು. ಹೋಮದ ಕ್ರಮ ಋಗ್ವದಿಗಳು-ವೃತಿಷಂಗವಾಗಿ ಶ್ರಾದ್ಧಗಳನ್ನಾಚರಿಸುವಾಗ “ಅಷ್ಟೇ ಅಗ್ನಿ ಹೋಮಂ ಕರಿಷ್ಟೇ” ಹೀಗೆ ಬ್ರಾಹ್ಮಣರನ್ನು ಕೇಳಿ “ಕ್ರಿಯತಾಂ” ಎಂದು ಪ್ರತಿವಚನ ಹೇಳಿದ ನಂತರ ಗೃಹಾಗ್ನಿಯಲ್ಲಿ ಬೇಯಿಸಿರುವ ಚರುವನ್ನೆತ್ತಿ ಎರಡು ವಿಭಾಗ ಮಾಡಿ ಅಪಸವ್ಯದಿಂದ ಚರುವಿನ ಉತ್ತರಭಾಗದ ಅನ್ನವನ್ನು ಅವದಾನಧರ್ಮದಿಂದ ಮೇಕ್ಷಣಸಹಿತ ಹಿಡಿದು “ಸೋಮಾಯ ಪಿತೃಮತೇ ಸ್ವಧಾನಮ:; ಸೋಮಾಯ ಪಿತೃಮತ ಇದಂನಮಮ” ಹೀಗೆ ಹೋಮ ಮತ್ತು ತ್ಯಾಗಗಳನ್ನು ಮಾಡತಕ್ಕದ್ದು. ಸವ್ಯ ಅಥವಾ ಅಪಸವ್ಯದಿಂದ ಮೇಕ್ಷಣವನ್ನು ಅಗ್ನಿಯಲ್ಲಿ ಹಾಕುವದು; ಅಥವಾ ಸವ್ಯದಿಂದ ಸ್ವಾಹಾಂತವಾದ ಮಂತ್ರದಿಂದ ಎರಡು ಆಹುತಿಗಳನ್ನು ಸೋಮಾಗ್ನಿಗಳಿಗೆ ವ್ಯತ್ಯಾಸದಿಂದ ತಗೆದುಕೊಂಡು ಹೋಮಿಸತಕ್ಕದ್ದು. ಕಾತ್ಕಾಯನರು ಗೃಹ್ಯಾಗ್ನಿಯಲ್ಲಿ ಚರುವನ್ನು ಬೇಯಿಸದೇನೇ ಪಚನಾಗ್ನಿಯಲ್ಲಿ ಪಕ್ವವಾದ ಅನ್ನವನ್ನು ತೆಗೆದುಕೊಂಡು ತುಪ್ಪದಿಂದ ಅಭಿಘಾರಮಾಡಿ ಹಿಂದೆ ಹೇಳಿದಂತೆ ಪ್ರಶ್ನೆ-ಅನುಜ್ಞಾನಂತರ ಸ್ಮಾರ್ತಾದಿ ಅಗ್ನಿಯನ್ನು ಪರಿಷ್ಕರಣಮಾಡಿ ಮೂರು ಸಮಿಧಗಳನ್ನು ಹಾಕಿ ಸವೃದಿಂದ “ಅಗ್ನಯೇಕವಾಹನಾಯಸ್ವಾಹಾ, ಸೋಮಾಯ ಪಿತೃಮತೇಸ್ಸಾಹಾ” ಎಂದು ಮೇಕ್ಷಣದಿಂದ ಎರಡಾಹುತಿಗಳನ್ನು ಹೋಮಿಸತಕ್ಕದ್ದು. ಅಪಸವ್ಯದಿಂದಾದರೂ ಅಡ್ಡಿ ಇಲ್ಲ. ಪಾಣಿಹೋಮದಲ್ಲಾದರೂ ಇದರಂತೆಯೇ ಮಾಡತಕ್ಕದ್ದು. ವಿಶೇಷವನ್ನು ಮೊದಲೇ ಹೇಳಿದೆ. ಆಪಸ್ತಂಬರಿಗೆ-ಆದ್ಯಭಾಗಾನಂತರ “ಉರಿಯತಾಂ ಅಗ್ನಿ ಚಕ್ರಿಯತಾಂ” ಇದು ಪ್ರಶ್ನೆ. “ಕಾಮಮುಖಿಯತಾಂ ಕಾಮಮಗೆ ಚಕ್ತಿಯತಾಂ” ಇದು ಅನುಜ್ಞೆಯು, ಹಿರಣ್ಯಕೇಶಿಯರಿಗೆ “ಉದ್ಧರಿಷ್ಯಾಮಿ ಅಗೆ ಕರಿಷ್ಮಾಮಿ” ಎಂದು ಪ್ರಶ್ನೆಯು. “ಯಮಾತಾ” ಇತ್ಯಾದಿ ಮಂತ್ರಗಳಿಂದ ಏಳು ಅನ್ನಾಹುತಿಗಳು, ಆರು ಆಜ್ಞಾಹುತಿಗಳು, ಹೀಗೆ ಹದಿಮೂರು ಆಹುತಿಗಳು, ಇಲ್ಲಿ ವಿಸ್ತರಭಯದಿಂದ ಮಂತ್ರಗಳನ್ನು ಹೇಳಿಲ್ಲ. ಹಿರಣ್ಯಕೇಶಿಯರಿಗೆ ಆಜ್ಯಭಾಗಾಂತದಲ್ಲಿ ಪರಿಚ್ಛೇದ - ೩ ಉತ್ತರಾರ್ಧ ೪೪೫ ‘ಸೋಮಾಯಪಿತೃಮತೇ"ಇತ್ಯಾದಿ ಹದಿನಾರು ಮಂತ್ರಗಳಿಂದ ಪ್ರತಿಪಾರ್ವಣಕ್ಕೂ ಹದಿನಾರು ಆತ್ಮಾಹುತಿಗಳು, ಮತ್ತು ಹದಿನಾರು ಅನ್ನಾಹುತಿಗಳನ್ನು ಕೊಡತಕ್ಕದ್ದು. ಮಂತ್ರಾದಿಗಳಲ್ಲಿ ಪಿತ್ರಾದಿಪದಗಳ ಊಹ ಹಾಗೂ ಆಜ್ಯ, ಅನ್ನಪದಗಳ ಊಹಗಳನ್ನು ಆಯಾಯ ಗ್ರಂಥಗಳಿಂದಲೇ ತಿಳಿಯತಕ್ಕದ್ದು. ಅತಿವಿಸ್ತಾರವಾಗುವದರಿಂದ ಅವುಗಳನ್ನು ಇಲ್ಲಿ ಹೇಳಿಲ್ಲ. ಪಾಣಿಹೋಮ ಪ್ರಕಾರಗಳು “ವಿಪ್ರವಾಸೌ ಪಾಣಿಹೋಮಂಕರಿಷ್ಯ ಹೀಗೆ ಪ್ರಶ್ನೆಯು. ‘ಕ್ರಿಯತಾಂ’ ಎಂದು ಅನುಜ್ಞೆಯು ‘ಕರಿಷ್ಟೇ’ ಎಂದು ಪ್ರಶ್ನಿಸಿದಾಗ ‘ಕುರುಷ್ಯ’ ಎಂಬ ಪ್ರತಿವಚನವು ಯುಕ್ತವಾಗುವದಿಲ್ಲವೆಂದು ಸರ್ವತ್ರ ಆಶ್ವಲಾಯನ ಮತವು. ಕಾತ್ಕಾಯನಾದಿಗಳಿಗೆ ಅದು ಯುಕ್ತವೇ. ಆಶ್ವಲಾಯನ ಸೂತ್ರವೃತ್ತಿಯಲ್ಲಿ ಪಾಣಿಹೋಮದಲ್ಲಿ ಪ್ರಶ್ನೆ-ಪ್ರತಿವಚನಗಳನ್ನೇ ಮಾಡಬಾರದೆಂದಿದೆ. ದರ್ಭೆಯಿಂದ ಸಹಿತವಾದ ಪಿತೃವಿಪ್ರನ ಹಸ್ತವನ್ನು ದರ್ಭಸಹಿತವಾದ ಎಡಗೈಯಿಂದ ಹಿಡಕೊಂಡು ಸವ್ಯದಿಂದ ಪರಿಸಮೂಹನ, ಪರ್ಯುಕ್ಷಣಗಳನ್ನು ಮಾಡಿ ಮೇಕ್ಷಣದಿಂದ ಅಥವಾ ಹಸ್ತದಿಂದ ಎರಡು ಆಹುತಿಗಳನ್ನು “ಸೋಮಾಯ” ಇತ್ಯಾದಿ ಮಂತ್ರಗಳಿಂದ ಪ್ರಾಚೀನಾವೀತಿಯಾಗಿಯೇ ಹೋಮಿಸುವದು. ಹಸ್ತದಿಂದ ಹೋಮಿಸುವಾಗ ಎಡಹಸ್ತದಿಂದ ದರ್ಭೆಯನ್ನು ತೆಗೆದುಕೊಂಡು, ಅದರಿಂದ ಬಲಹಸ್ತದಲ್ಲಿ ತುಪ್ಪವನ್ನ ಭಿಘಾರಮಾಡಿ ಬಲಗೈಯಿಂದ ಎರಡಾವರ್ತಿ ತೆಗೆದುಕೊಂಡು ಎಡದಿಂದ ಅಭಿಘಾರಮಾಡಿ “ಚತುರವತ್ತಿತ್ವ” ಇತ್ಯಾದಿ ಕ್ರಮದಿಂದ ಮಾಡುವದು. ಋಗೈದಿಗಳು ಎಲ್ಲ ಪಿತೃಬ್ರಾಹ್ಮಣರ ಹಸ್ತಗಳಲ್ಲೂ ಹೋಮಿಸತಕ್ಕದ್ದಿದೆ. ಏಕೋದ್ದಿಷ್ಟವಾದರೆ ವಿಪ್ರನ ಹಸ್ತದಲ್ಲಿ ಹೋಮಿಸುವದು ಕೃತಾಕೃತವು ಹೋಮಿಸಿದ ನಂತರ ಸವ್ಯವಾಗಿ ಪರಿಸಮೂಹನ, ಪರ್ಯುಕ್ಷಣಗಳನ್ನು ಮಾಡತಕ್ಕದ್ದು. ಪಾಣಿಹೋಮದಲ್ಲಿ ಮೇಕ್ಷಣದ ಅನುಪ್ರಹರಣವಿಲ್ಲ. ಕೆಲವರು ಪಾಣಿಹೋಮದಲ್ಲಿ ಪರಿಸಮೂಹನಾದಿಗಳನ್ನೂ, ಮೇಕ್ಷಣವನ್ನೂ ಇಚ್ಛಿಸುವದಿಲ್ಲ. ಕರ್ತೃವು ದೇವಪೂರ್ವಕವಾಗಿ ಸವ್ಯದಿಂದಲೇ “ಆಮಾಸುಪಕ್ಕಂ” ಎಂದು ಬ್ರಾಹ್ಮಣರ ಪಾಣಿಯಲ್ಲಿರುವ ಅನ್ನಕ್ಕೆ ಅಭಿಘಾರ ಮಾಡತಕ್ಕದ್ದು. ಆ ಅನ್ನವನ್ನು ಬ್ರಾಹ್ಮಣರು ತಮ್ಮ ತಮ್ಮ ಪಾತ್ರಗಳಲ್ಲಿಟ್ಟು ಭೋಜನ ಸ್ಥಾನದ ಹೊರತಾದ ಸ್ಥಳದಲ್ಲಿ ಆಚಮನ ಮಾಡಿ ಯಥಾಸ್ಥಾನದಲ್ಲಿ ಕೂಡುವದು. ಅಕರಣದ ಶೇಷವನ್ನು ಪಿಂಡಕ್ಕಾಗಿ ತೆಗೆದಿಟ್ಟು ಪಿತೃಭೋಜನಪಾತ್ರಗಳಲ್ಲಿ ಎಲ್ಲ ಅನ್ನಗಳನ್ನು ಬಡಿಸಿದ ನಂತರ ಬಡಿಸುವದು. ಕೆಲವರು ಅಕರಣದ ಶೇಷವನ್ನು ಬಡಿಸಿದ ನಂತರ ಎಲ್ಲ ಅನ್ನವನ್ನು ಬಡಿಸುವದನ್ನುವರು. ಅಗೌಕರಣ ಶೇಷವನ್ನು ವಿಶ್ವೇದೇವಪಾತ್ರೆಗಳಲ್ಲಿ ಬಡಿಸಬಾರದು. ಸಾಗ್ನಿಕರಾದ ಕಾತ್ಯಾಯನರು ಅಗ್ನಿಯಲ್ಲಿ ಹೋಮಿಸಿ ಶೇಷವಾದದ್ದನ್ನು ದೇವಪೂರ್ವಕವಾಗಿ ಎಲ್ಲ ಪಾತ್ರೆಗಳಲ್ಲಿಯೂ ಇಡತಕ್ಕದ್ದೆಂದು ಹೇಳಿದೆ. ನಿರಗ್ನಿಯಾದವನು ಬ್ರಾಹ್ಮಣಹಸ್ತದಲ್ಲಿ ಹೋಮಿಸಿದ್ದರೆ ಅವುಗಳನ್ನು ಪಿತೃಪಾತ್ರದಲ್ಲಿ ಬಡಿಸತಕ್ಕದ್ದು. ಪಿತೃಬ್ರಾಹ್ಮಣನ ಹಸ್ತದಲ್ಲಿ ಹೋಮಿಸಿದಾಗ ದೇವಾದಿ ಎಲ್ಲ ಪಾತ್ರೆಗಳಲ್ಲಿಯೂ ಹುತಶೇಷವನ್ನು ಕೊಡತಕ್ಕದ್ದೆಂದು “ಕಾಶಿಕಾ"ಮತವು. ಪಾಣಿಯಲ್ಲಿ ಹೋಮಿಸಿದ ಹಾಗೂ ಪಾತ್ರೆಯಲ್ಲಿ ಬೇರೆ ಬಡಿಸಿದ ಅನ್ನವನ್ನು ಮಿಶ್ರ ಮಾಡಿಯೇ ಊಟಮಾಡುವದು. ಹೊರತು ಪೃಥಕ್ ಭಕ್ಷಣ ಮಾಡತಕ್ಕದ್ದಲ್ಲ. ಬೌಧಾಯನರು ವಾಣಿಯಲ್ಲಿ ಹೋಮಿಸಿದ ಅನ್ನವನ್ನು ಭಕ್ಷಿಸಿದ ನಂತರ ಬೇರೆ ಅನ್ನವನ್ನು ಭಕ್ಷಿಸುವದು’ ಎಂದು ಹೇಳಿದೆ. ೪೪೬ ಧರ್ಮಸಿಂಧು ಅನ್ನ ಪರಿವೇಷಣ (ಬಡಿಸುವದು) ಇಲ್ಲಿ ಅನ್ನವೆಂದರೆ ತಿನ್ನುವ ಎಲ್ಲ ವಸ್ತುಗಳು ಎಂದರ್ಥ. ಈ ಹಿಂದೆ ಹೇಳಿದಂತೆ ವಿಶ್ವದೇವ ಮೊದಲ್ಗೊಂಡು ತುಪ್ಪದ ಅಭಿಘಾರವಾದ ಪಾತ್ರಗಳಲ್ಲಿ ಪೂರ್ವೋಕ್ತವಾದ ಹವಿಷಾನ್ನವನ್ನು ತಾನು ಅಥವಾ ಪತ್ನಿ ಇಲ್ಲವೆ ಅನ್ಯರು ಬಡಿಸತಕ್ಕದ್ದು, ಅಶುಚಿಹಸ್ತದಿಂದ ಮತ್ತು ಒಂದೇ ಹಸ್ತದಿಂದ ಬಡಿಸಬಾರದು. ಹಸ್ತದಲ್ಲಿ ದರ್ಭೆಯಿರಬೇಕು. ಕಬ್ಬಿಣಪಾತ್ರದಿಂದ ಬಡಿಸಬಾರದು. ಎಲೆ ಮೊದಲಾದವುಗಳಿಂದ ಮುಟ್ಟಿದ ಉಪ್ಪಿನಕಾಯಿ, ಚಟ್ಟಿ ಮೊದಲಾದವುಗಳನ್ನು ಹಸ್ತದಿಂದ ಬಡಿಸತಕ್ಕದ್ದು. ಮೃತ, ಅನ್ನ ಹಾಗೂ ಸಮಸ್ತ ಭೋಜ್ಯ ಪದಾರ್ಥಗಳನ್ನು ಸೌಟಿನಿಂದ ಬಡಿಸಬೇಕು. ಜಲ ಹಾಗೂ ಪಕ್ವಾನ್ನಗಳನ್ನು ಸೌಟಿನಿಂದ ಬಡಿಸಬಾರದು. ಉಪ್ಪು ಮೊದಲಾದ ವ್ಯಂಜನಗಳನ್ನು ಹಸ್ತದಿಂದ ಬಡಿಸಬಾರದು. ಪಕ್ವವಲ್ಲದ ಹಾಗೂ ತೈಲದಿಂದ ಪಕ್ವವಾದವುಗಳನ್ನು ಹಸ್ತದಿಂದಲೇ ಹಾಕಬೇಕು. ತುಪ್ಪ ಮೊದಲಾದ ಪಾತ್ರಗಳನ್ನು ನೆಲದಲ್ಲಿಡಬೇಕಲ್ಲದೆ ಭೋಜನಪಾತ್ರದಲ್ಲಿ ಡಬಾರದು. ಅನ್ನದಲ್ಲಿ ಮತ್ತು ಪರಮಾನ್ನದಲ್ಲಿ ಪಾತ್ರವನ್ನಿಟ್ಟು ತುಪ್ಪವನ್ನು ಹಾಕಿದರೆ ಅದು “ರಕ್ತ"ಕ್ಕೆ ಸಮಾನವಾಗುವದು. ಪಂಕ್ತಿಯಲ್ಲಿ ಪಕ್ಷಪಾತಮಾಡಿದರೆ ಅದಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ಎಲ್ಲ ಕಾಲದಲ್ಲಿ ತಿಲಗಳು ಗ್ರಾಹ್ಯಗಳು, ಪಿತೃಕಾರ್ಯದಲ್ಲಿ ವಿಶೇಷವಾಗಿ ಗ್ರಾಹ್ಯಗಳು. ಆದರೆ ಊಟಮಾಡುವ ಪಾತ್ರೆಯಲ್ಲಿ ತಿಲವನ್ನು ನೋಡಿದರೆ ಪಿತೃಗಳು ನಿರಾಶರಾಗಿ ಹೋಗುವರು. ಹಿಂಗು, ಶುಂಠಿ, ಹಿಪ್ಪಲಿ, ಮೆಣಸಿನಕಾಳು ಇವು ಶಾಕ ಸಂಸ್ಕಾರಾರ್ಥವಾಗಿಯೇ ಹೊರತು ಪ್ರತ್ಯಕ್ಷ ತಿನ್ನತಕ್ಕವುಗಳಲ್ಲ. ಬಡಿಸುವ ಕಾಲದಲ್ಲಿಯೇ ಎಲ್ಲ ಪ್ರಕಾರದ ಅನ್ನವನ್ನು ಪಿಂಡದ ಸಲುವಾಗಿ ಬೇರೆ ಪಾತ್ರೆಯಲ್ಲಿ ಬಡಿಸತಕ್ಕದ್ದೆಂದು “ಸಾಗರ"ದಲ್ಲಿ ಹೇಳಿದೆ. ಅನ್ನಾಭಿಮಂತ್ರಣಾದಿಗಳು ಉಪವೀತಿಯಾಗಿ ವಿಶ್ವೇದೇವಪಾತ್ರದ ಸುತ್ತಲೂ ದರ್ಭೆ, ಯವಗಳನ್ನು ಬೀರಿ ಪಿತೃಪಾತ್ರದಲ್ಲಿ ತಿಲವನ್ನು ಬೀರಿ ಅನ್ನವನ್ನು ಗಾಯತ್ರಿಯಿಂದ ಪ್ರೋಕ್ಷಿಸಿ ಅಮಂತ್ರಕವಾಗಿ ಪರಿಷೇಚನಮಾಡಿ ಪಾತ್ರಸ್ಪರ್ಶವನ್ನು ಮಾಡುವದು. ಎಡಹಸ್ತವು ಕೆಳಗೆ ಬಲಹಸ್ತವು ಮೇಲೆ ಹೀಗಾಗತಕ್ಕದ್ದು, ಪಿತೃಪಾತ್ರದಲ್ಲಿ ಇದಕ್ಕೆ ವಿಪರೀತವಾದ ಕ್ರಮವು ಹಸ್ತಗಳನ್ನು ಸ್ವಸ್ತಿಕಾಕಾರ ಮಾಡಿಕೊಳ್ಳುವದು. ಅದಕ್ಕೆ ಮಂತ್ರ - “ಪೃಥಿವಿತೇ ಪಾತ್ರಂದ್‌ರವಿಧಾನಂ ಬ್ರಾಹ್ಮಣಸ್ವಾಮುಖೇ ಮೃತಃಜುಹೋಮಿ ಬ್ರಾಹ್ಮಣಾನಾಂತ್ರಾ, ವಿದ್ಯಾವತಾಂ ಪ್ರಾಣಾಪಾನಯೋರ್ಜಸೋಮೃತಮಸಿ ಮೈಷಾಂ ಕೂಷ್ಮಾ: ಅಮುತ್ರಾಮನ್ ಲೋಕೇ” ಹೀಗೆ ಅಭಿಶರ್ಮಮಂತ್ರವು, ಆಪಸ್ತಂಬ, ಕಾತ್ಯಾಯನಾದಿಗಳಲ್ಲಿ ಅನೇಕವಿಧ ಹೇಳಿದೆ. ಸಂಪ್ರದಾಯಕ್ಕನುಸರಿಸಿ ಹೇಳುವದು. ಹೀಗೆ ಅಭಿಮಂತ್ರಿಸಿ “ಅತೋದೇವಾ” ಎಂದು ಅಥವಾ “ಇದಂವಿಷ್ಣು” ಎಂದು ಮಂತ್ರವನ್ನು ಹೇಳಿ “ವಿಶ್ಲೋಹವಂರಕ್ಷಸ್ತ” ಹೀಗೆ ದೈವದಲ್ಲಿ, “ಕಂರಕ್ಷಸ್ವ” ಹೀಗೆ ಪಿತ್ರದಲ್ಲಿ ಹೇಳಿ ಕಮಚದ ಕೈಯಿಂದ ಕಮಲದ ಬ್ರಾಹ್ಮಣನ ಹಸ್ತದ ಅಂಗುಷ್ಯವನ್ನು ನಖಸಹಿತವಾಗಿ ಅನ್ನದಲ್ಲಿಟ್ಟು ಪ್ರದಕ್ಷಿಣವಾಗಿ ತಿರುಗಿಸುವರು. ಪಿತ್ರದಲ್ಲಿ ಅಪ್ರದಕ್ಷಿಣವು. ಇಲ್ಲಿ ಕಾತ್ಯಾಯನರು “ಅಪಹತಾ ಎಂದು ದೈವದಲ್ಲಿ ಯವಗಳನ್ನೂ, ಚಿತ್ರದಲ್ಲಿ ಎಳ್ಳುಗಳನ್ನೂ ಪಾತ್ರದ ಸುತ್ತಲೂ ಹರಡುವರು. ಪರಿಚ್ಛೇದ - ೩ ಉತ್ತರಾರ್ಧ ಹೀಗೆ ನಂತರ ಎಡಗೈಯಿಂದ ಪಾತ್ರವನ್ನು ಸ್ಪರ್ಶಿಸಿ “ಅಮುಕೇವಿಶ್ವೇದೇವಾ ದೇವಾ ಇದಮನ್ನಂ ಹವ್ಯಂ ಅಯಂಬ್ರಾಹ್ಮಣ ಆಹವನೀಯಾರ್ಥ ಇಯಂಭೂರ್ಗಯಾ ಅಯಂಭೋಕ್ತಾ ಗದಾಧರ: ಇದಮನ್ನ ಬ್ರಹ್ಮ ಇದು ಸೌವರ್ಣಪಾತ್ರಮಕ್ಷಯ ವಟಾಯೇಯಂ ಅಮುಕರೇವೇಭ್ಯ: ಇದಮನ್ನಂ ಟೋಪಸ್ಕರಂ ಅಮೃತರೂಪಂ ಪರಿವಿಷ್ಟಂ ಪರಿವೇಕ್ಷ್ಯಮಾಣಂ ಚ ಅತೃಪ್ತ ಗ್ರಾಹಾತವ್ಯಂ ನಮೋ ನಮಮ ಓಂತತ್” ಎಂದು ಯವದರ್ಭೆಗಳಿಂದ ಸಹಿತವಾದ ಜಲವನ್ನು ಬಲಹಸ್ತದಿಂದ ಪಾತ್ರದ ಎಡಬದಿಯ ನೆಲದಲ್ಲಿ ಚಲ್ಲುವದು. ಹೀಗೆ ವಿಶ್ವೇದೇವರಲ್ಲಿರುವ ಇತರ ಬ್ರಾಹ್ಮಣರಿಗೂ ಮಾಡುವದು. ನಂತರ “ಯದೇವಾಸ್‌” ಮಂತ್ರದಿಂದ ಉಪಸ್ಥಾನವು. ಹೀಗೆ ಪಿತೃಪಾತ್ರಸ್ಪರ್ಶನ ಮೊದಲಾದವುಗಳನ್ನು ಪಿತ್ರಧರ್ಮದಂತೆ ಮೂರುಬ್ರಾಹ್ಮಣರಿದ್ದರೆ ಪ್ರಥಮನಲ್ಲಿ “ಪಿತಾದೇವತಾ” ಹೇಳುವದು. ಒಬ್ಬ ಬ್ರಾಹ್ಮಣನಾದರ ಆತನೊಬ್ಬನಲ್ಲಿಯೇ “ಪಿತರೋಯಥಾನಾಮಗೋತ್ರಾದೇವತಾ ಇದಮನ್ನಂ ಕವ್ಯಂ ಇದಂ ರಾಜತಂಪಾತ್ರಂ ಅಕ್ಷಯ್ಯವಟಚ್ಛಾಯೇಯಂ”. ಒಬ್ಬನೇ ಆದರೆ “ಆತ್ಮ ಪಿತಾಮಹ ಪ್ರಪಿತಾಮಹೇಭ್ಯ: ಅಮುಕ ನಾಮ ಗೋತ್ರರೂಪೇಭ್ಯ: ಇದಮನ್ನಂ ಪರಮಮೃತರೂಪಂ ಪರಿವಿಷ್ಟಂ ಪರಿವೇಕ್ಷ್ಯಮಾಣಂ ಚ ಅತೃಪ್ತ ಸ್ವಧಾಕವ್ಯಂ ನಮೋನಮಮ ಓಂ ತತ್ಸತ್ ’ ಎಂದು ತಿಲದರ್ಭಗಳನ್ನು ತೆಗೆದುಕೊಂಡು ಪಿತೃತೀರ್ಥದಿಂದ ಎಡಗೈಯನ್ನು ಮೇಲೆ ಮಾಡಿಕೊಂಡು ಬಲಗೈಯನ್ನು ಕೆಳಗೆಮಾಡಿ ಆ ಬಲಗೈಯಿಂದ ಪಾತ್ರದ ಬಲಬದಿಯ ಭೂಮಿಯಲ್ಲಿ ಜಲವನ್ನು ಚಲ್ಲುವದು. ಹೀಗೆ ಆಯಾಯ ದೈವತಕ್ಕನುಸರಿಸಿ ಮಾಡತಕ್ಕದ್ದು. ಪಿತೃಸ್ಥಾನದಲ್ಲಿ ಅನೇಕ ಬ್ರಾಹ್ಮಣರು ಕುಳಿತಾಗ ಮೂರು ಬ್ರಾಹ್ಮಣರಲ್ಲಿ “ಪಿತ್ರ” ಹೀಗೆ ಏಕವಚನಾಂತದಿಂದ ತ್ಯಾಗಮಾಡುವದು. ಹೀಗೆಯೇ ಮುಂದೆ ಮೂರು ಬ್ರಾಹ್ಮಣರಾದರೆ ತಿಳಿಯುವದು. ನಂತರ “ಕೇಚ” ಎಂದು ಒಂದಾವರ್ತಿ ಉಪಸ್ಥಾನ ಮಾಡತಕ್ಕದ್ದು. ಪ್ರತ್ಯೇಕ ಅತಿಥಿಯಾದವನು ಬ್ರಾಹ್ಮಣತ್ವಕ್ಕೆ ಕುಳಿತರ ದೇವಧರ್ಮದಿಂದ “ಸ್ವಷ್ಟದೇವತಾಯ್ಕ ಇದಮನ್ನಂ” ಇತ್ಯಾದಿ ಹೇಳುವದು. “ಯೇದೇವಾಸ” ಇತ್ಯಾದಿಗಳನ್ನು ಅವಸವ್ಯದಿಂದ ಹೇಳತಕ್ಕದ್ದು. “ದೇವತಾಭ್ಯಪಿತೃಭ:” “ಸಪ್ತಾಧಾ-ಅಮೂರ್ತಾನಾಂ ಬ್ರಹ್ಮಾತ ರ್ಪಣಂ-ಹರಿರ್ದಾತಾ-ಚತುರ್ಭಿ“ಓಂ ಬ್ರಹ್ಮಾರ್ಪಣಮಸ್ತು, ಯೇಷಾಮುದ್ದಿಪ್ರಂತೇಷಾಮಕ್ಷಯ್ಯ ಮತ್ತು ಅಕ್ಷಯ್ಯಾ ಪ್ರೀತಿರಸ್ತು” ಹೀಗೆ ಹೇಳಿ ತಿಲೋದಕವನ್ನು ಬಿಡತಕ್ಕದ್ದು. ಸವ್ಯವಾಗಿ “ಏಕೋವಿಷ್ಟು, ಅನ್ನಹೀನಂ ಕ್ರಿಯಾಹೀನಂ ಮಂತ್ರಹೀನಂ ಚ ಯದ್ವವೇತ್ ತತ್ಸರ್ವಮಚ್ಛಿದ್ರಂಜಾಯತಾಂ” ಹೀಗೆ ಹೇಳಿ ಬ್ರಾಹ್ಮಣರಿಂದ ‘ಚಾಯತಾಂಸರ್ವಂ ಅಚ್ಚಿದ್ರಂ’ ಹೀಗೆ ಹೇಳಿಸಿಕೊಂಡ ನಂತರ “ಅನೇನ ಪಿತೃಯಜೇನ ಪಿತೃರೂಪೀ ಜನಾರ್ದನ: ವಾಸುದೇವಃ ಪ್ರಿಯತಾಂ” ಹೀಗೆ ಹೇಳಿ ತಿಲ, ಕುಶ, ಜಲವನ್ನು ಬಿಡುವ ಆಚಾರವಿದೆ. ಕೆಲವರು- “ಬ್ರಹ್ಮಾರ್ಪಣಂ” ಇತ್ಯಾದಿ ಸಂಕಲ್ಪ ಮುಗಿಸುವಾಗ ಸಮ್ಮ, “ಏಕೋವಿಷ್ಣು” ಇತ್ಯಾದಿಗಳಲ್ಲಿ ಅಪಸವ್ಯ ಹೀಗೆ ಮಾಡುತ್ತಾರೆ. ಆದರೆ ಬ್ರಹ್ಮಾರ್ಪಣಂ, ಏಕೋವಿಷ್ಣು: ಈ ಎರಡು ಮಂತ್ರಗಳಿಂದ ವಿಭಾಗಿಸಿ ಸಂಕಲ್ಪ ಮಾಡುವದಕ್ಕಾಗಲೀ, ಸವ, ಅಪಸವ್ಯ ವಿಭಾಗಕ್ಕಾಗಲೀ ಪ್ರತ್ಯಕ್ಷ ವಚನವು ಉಪಲಬ್ಧವಾಗುವದಿಲ್ಲವಾದ್ದರಿಂದ ಯಥಾಚಾರದಿಂದ ಮಾಡತಕ್ಕದ್ದು. ಸಂಕಲ್ಪವನ್ನು ಮಾಡದಿದ್ದಲ್ಲಿ ಬ್ರಾಹ್ಮಣನು ಅನ್ನವನ್ನು ಮುಟ್ಟುವಂತಿಲ್ಲ. “ಈಶಾನವಿಷ್ಟು, ಗಯಾಯ್ಕೆ, L ೪೪೮ ಧರ್ಮಸಿಂಧು ಗದಾಧರಾಯ, ಪುಂಡರೀಕಾಕ್ಷಾಯನಮ:” ಹೀಗೆ ನಮಸ್ಕರಿಸಿ ಪಿತೃಪೂರ್ವಕವಾಗಿ ಬ್ರಾಹ್ಮಣ ಹಸ್ತಗಳಲ್ಲಿ ಜಲ ಕೊಟ್ಟಮೇಲೆ ಬ್ರಾಹ್ಮಣರು ಆ ಜಲದಿಂದ ಅನ್ನವನ್ನು ಪ್ರೋಕ್ಷಿಸಿ ಮೂರು ಗಾಯತ್ರಿಯಿಂದ ಅಭಿಮಂತ್ರಿಸತಕ್ಕದ್ದು. ಬ್ರಾಹ್ಮಣ ಭೋಜನಾದಿಗಳು ಕರ್ತನು ಸವ್ಯದಿಂದ ಪಿತೃಪೂರ್ವಕವಾಗಿ ಆಪೋಶನಾರ್ಥ ಉದಕವನ್ನು ಕೊಟ್ಟು ವ್ಯಾಹೃತಿಸಹಿತವಾದ ಗಾಯತ್ರಿಯನ್ನು ಮೂರಾವರ್ತಿ ಅಥವಾ ಒಂದಾವರ್ತಿ ಹೇಳಿ “ಮಧುವಾತಾ” ಎಂಬ ಮಂತ್ರವನ್ನು ಪಠಿಸಿ “ಮಧು-ಮಧು-ಮಧು’ ಎಂದು ಮೂರಾವರ್ತಿ ಹೇಳಿ ‘ಓಂ ತತ್ಸತ್ ಯಥಾಸುಖಂಜುಷಧ್ವಂ’ ಎಂದು ಹೇಳತಕ್ಕದ್ದು, ಬ್ರಾಹ್ಮಣರು ಬಲಿದಾನ (ಚಿತ್ರಹಾಕುವದು)ವನ್ನು ವರ್ಜಿಸಿ ನಿತ್ಯದಂತೆ ಆಪೋಶನ ಮಾಡತಕ್ಕದ್ದು. ‘ಶ್ರದ್ಧಾಯಾಂ ಪ್ರಾಣೇನಿವಿಷ್ಟೋs- ಮೃತಂಜುಹೋಮಿ ಶಿವೋಮಾವಿಶಾಪ್ರದಾಹಾಯ ಪ್ರಾಣಾಯಸ್ವಾಹಾ’ ಇತ್ಯಾದಿ ಐದು ಮಂತ್ರಗಳನ್ನು ಹೇಳಿ ಪಂಚಪ್ರಾಣಾಹುತಿಗಳನ್ನು ಮಾಡಿ ‘ಬ್ರಹ್ಮಣಿಮ ಆತ್ಮಾ ಅಮೃತತ್ವಾಯ’ ಎಂದು ಹೇಳಿ ಆರನೇ ಆಹುತಿಯನ್ನು ತೆಗೆದುಕೊಳ್ಳುವದು. ನಂತರ ಮೌನಿಗಳಾಗಿ, ಬಾಯಿಯಿಂದ ಶಬ್ದವನ್ನು ಉಚ್ಚರಿಸದೆ, ಚವಲತನವನ್ನು ಬಿಟ್ಟು, ಪಾತ್ರೆಯಲ್ಲಿ ಅಲ್ಪ ಶೇಷವನ್ನುಳಿಸಿ ಭೋಜನ ಮಾಡತಕ್ಕದ್ದು, ಬ್ರಾಹ್ಮಣನು ಹಸ್ತದಲ್ಲಿ ಆಪೋಶನ ಧರಿಸಿದ ಮೇಲೆ ಆಲೋಚನೆಮಾಡುವದು, ಮತ್ತು ಛಿದ್ರಮಾತುಗಳನ್ನಾಡುವದು- ಇತ್ಯಾದಿಗಳಿಂದ ಪಿತೃಗಳು ನಿರಾಶರಾಗಿ ಗಮಿಸುವರು. ಆಪೋಶನವನ್ನು ಬಲಭಾಗದಲ್ಲಿ ಮಾಡುವದೇ ಹೊರತು ಎಡಭಾಗದಲ್ಲಿ ಮಾಡತಕ್ಕದ್ದಲ್ಲ. ಎರಡಾವರ್ತಿ ಜಲವನ್ನು ತುಂಬಿ ಮಾಡಿದ ಆಪೋಶನವು ಸುರಾಪಾನಕ್ಕೆ ಸಮನಾಗುವದು. ಆಪೋಶನವನ್ನು ಮಾಡದೆಯೇ ಅನ್ನವನ್ನು ನುರಿಸತಕ್ಕದ್ದಲ್ಲ. ಬ್ರಾಹ್ಮಣರು ಭೋಜನ ಪೂರ್ವದಲ್ಲಿ ಬಲಿಯನ್ನು (ಚಿತ್ರ)ಹಾಕತಕ್ಕದ್ದಿಲ್ಲ. ಕೆಲವರು ತುಪ್ಪದಿಂದ ಬಲಿಹಾಕುವರು. ಇದು ಯುಕ್ತವಲ್ಲ, ವಾಯಸ, ಆಜ್ಯ, ಮಾಷಾನ್ನ ಇವುಗಳಿಂದ ಬಲಿಹಾಕುವದು ನಿಷಿದ್ಧವಿದೆ. ಬ್ರಾಹ್ಮಣರಾದರೂ ಎಡಹಸ್ತದಿಂದ ಅನ್ನವನ್ನು ಮುಟ್ಟಬಾರದು. ಕಾಲುಗಳಿಂದ ಪತ್ರೆಯನ್ನು ಸ್ಪರ್ಶಿಸಬಾರದು. ತಯಾರಿಸಿದ ಪದಾರ್ಥಗಳೊಳಗೇ ಕೈಸನ್ನೆಯಿಂದ ಯಾಚಿಸತಕ್ಕದ್ದು, ತಯಾರಿಸದ ಯಾವ ವಸ್ತುವನ್ನೂ ಯಾಚಿಸಬಾರದು. ಅನ್ನದ ಗುಣ ದೋಷಗಳನ್ನು ವರ್ಣಿಸಬಾರದು. ಕರ್ತನಾದರೂ ನಿಷಿದ್ಧವಾದ ಅನ್ನವನ್ನು ಕೊಡಬಾರದು. ಭೋಜನ ಮಾಡುವವನಿಗೂ, ಪಿತೃವಿಗೂ, ತನಗೂ ಪ್ರಿಯವಾದದ್ದನ್ನೇ ಬಡಿಸಬೇಕು. ಆಯಾಯ ಅನ್ನಗಳ ಮಾಧುರ್ಯಾದಿ ಗುಣಗಳನ್ನು ಹೇಳುತ್ತ, ಅವರಿಗೆ ಪ್ರೀತಿಯನ್ನುಂಟುಮಾಡುತ್ತ, “ಇದನ್ನು ಕೊಡುವನು” ಎಂದು ಹೇಳದೆ, ಅವರಿಗೆ ಬೇಕಾದದ್ದನ್ನು ಕೊಡುತ್ತ, ಊಟಮಾಡುವವರನ್ನು ನೋಡದೆ, ಅನ್ನದ ಗುಣಗಳನ್ನು ಕೇಳದ, ದೈನ್ಯ, ಕಣ್ಣೀರು ಸ್ರವಿಸುವದು ಮೊದಲಾದವುಗಳನ್ನು ಮಾಡದೆ ಮತ್ತು ಸಿಟ್ಟು ಮಾಡದ ಜಲವನ್ನು ಕುಡಿಯಲಿಕ್ಕೆ ಕೊಟ್ಟು ಸಾವಕಾಶ ಭೋಜನ ಮಾಡಿಸತಕ್ಕದ್ದು. ಉಪ್ಪು ಮೊದಲಾದವುಗಳನ್ನು “ಬೇಕೋ?” ಎಂದು ಕೇಳಿದಲ್ಲಿ ಅವನ ಪಿತೃಗಳು “ರಾಗಿ ಹೋಗಿ ಬಿಡುವರು. ನಂತರ ಸವ್ಯವಾಗಿಯೇ ವ್ಯಾಹೃತಿಸಹಿತವಾದ ಮೂರಾವರ್ತಿ ಗಾಯತ್ರಿಯನ್ನು ಹೇಳಿಪರಿಚ್ಛೇದ ೩ ಉತ್ತರಾರ್ಧ ೪೪೯ ಪುರುಷಸೂಕ್ತ, ಕೃಣುಷ್ಟಪಾಜ, ರಕ್ಷಹಣ ಇತ್ಯಾದಿ ರಾಕ್ಷಘ್ನಮಂತ್ರ, ಪಿತೃಲಿಂಗಕಗಳಾದ ಇಂದ್ರ, ಈಶಾನ, ಸೋಮಸೂಕ್ತ, ಪವಮಾನಸೂಕ್ತ, ಅಪ್ರತಿರಥ ಸಂಜ್ಞಕಗಳಾದ ಆಶುಃಶಿಶಾನಸೂಕ್ತ, ವಿಷ್ಣು, ಬ್ರಹ್ಮ, ರುದ್ರ, ಅರ್ಕ, ಸ್ತೋತ್ರ ಇತ್ಯಾದಿಗಳನ್ನು ಭೋಜನಮಾಡುವಾಗ ಬ್ರಾಹ್ಮಣರಿಗೆ ಶ್ರವಣ ಮಾಡಿಸುವದು. ಅಸಂಭವವಾದಲ್ಲಿ ಗಾಯತ್ರೀಜಪವನ್ನು ಮಾಡತಕ್ಕದ್ದು. ವೀಣೆ, ಕೊಳಲುಗಳ ಸ್ವರವನ್ನು ಕೇಳಿಸುವದು, ಋಗ್ವದಮಂಡಲ, ಬ್ರಾಹ್ಮಣ, ನಾಚಿಕೇತದ ಮೂರುವಲ್ಲಿ ತ್ರಿಮಧು, ತ್ರಿಸುಪರ್ಣ, ಪವಮಾನ ಯಜುರ್ವೇದ ಸೂಕ್ತ, ಆಶು:ಶಿಶಾನ, ಅಗ್ನಯೇಕವ್ಯವಾಹನಮಂತ್ರ ಇವುಗಳನ್ನು ಪಠಿಸುವದು. ಕಾಲಮೇಲೆ ಕಾಲುಹಾಕಿಕೊಂಡು, ಕಂಕುಳವನ್ನು ಹೊರಗೆ ಮಾಡಿ, ಮೊಣಕಾಲು, ಕೈಗಳನ್ನು ಹೊರಗೆ ಮಾಡಿಕೊಂಡು (ಅಸ್ತವ್ಯಸ್ತಮಾಡಿಕೊಂಡು) ಹಾಗೂ ಅಂಗುಷ್ಯವನ್ನು ಬಿಟ್ಟು ಬಾಯಿಯಿಂದ ಶಬ್ದ ಮಾಡುತ್ತ ಭೋಜನಮಾಡಬಾರದು. ಕುಡಿದು ಹೆಚ್ಚಾದ ಜಲವನ್ನು ಪುನಃ ಕುಡಿಯಬಾರದು. ತಿಂದ ಅನ್ನದ ಅರ್ಧವನ್ನು ಪುನಃ ತಿನ್ನಬಾರದು. ಮುಖದಿಂದ ಅನ್ನವನ್ನು ಊದಿ ತಣಿಸಬಾರದು. ತಿಂದದ್ದನ್ನೇ ಪುನಃ ಭೋಜನಪಾತ್ರೆಯಲ್ಲಿ ಚಲ್ಲಬಾರದು. ಹೀಗಲ್ಲದೆ ಭೋಜನಮಾಡಿದರೆ ಬ್ರಾಹ್ಮಣನು ಶ್ರಾದ್ಧವನ್ನು ಕೆಡಿಸುವದಲ್ಲದೆ ಅಧೋಗತಿಗೆ ಹೋಗುವನು. ಪಂಕ್ತಿಯಲ್ಲಿ ಭೋಜನಮಾಡುವಾಗ ಮತ್ತೊಬ್ಬನನ್ನು ಸ್ಪರ್ಶಿಸಿದಲ್ಲಿ ಅನ್ನವನ್ನು ತ್ಯಜಿಸುವ ಅಗತ್ಯವಿಲ್ಲ. ಭೋಜನಮಾಡಿ ನೂರೆಂಟು ಗಾಯತ್ರಿಯನ್ನು ಜಪಿಸುವದು. ಭೋಜನಪಾತ್ರೆಗೆ ಇನ್ನೊಬ್ಬನ ಎಂಜಲು ತಾಗಿದರೆ ಅದನ್ನು ಬಿಟ್ಟು ಕೈತೊಳೆದು ಸ್ನಾನ ಮಾಡಿ ಬೇರೆ ಭೋಜನಮಾಡಿ ಇನ್ನೂರು ಗಾಯತ್ರೀಜಪ ಮಾಡತಕ್ಕದ್ದು. ಆ ಉಚ್ಛಿಷ್ಟವನ್ನು ಭೋಜನಮಾಡಿದರೆ ಸಹಸ್ರ ಗಾಯತ್ರಿ ಜಪ ಮಾಡಬೇಕು. ಬ್ರಾಹ್ಮಣರು ಭೋಜನಮಾಡುವಾಗ ಪ್ರಮಾದದಿಂದ ಮಲದ್ವಾರವು ಒಸರಿದರೆ ಪಾದಕೃಚ್ಛಪ್ರಾಯಶ್ಚಿತ್ತ ಮಾಡಿ ಅನ್ನವನ್ನು ಬಿಟ್ಟು ಇನ್ನೊಬ್ಬನನ್ನು ನಿಯೋಜಿಸತಕ್ಕದ್ದು. ಬ್ರಾಹ್ಮಣನು ವಾಂತಿಮಾಡಿದರೆ ಪಿತೃ ಮೊದಲಾದವರ ವಾಂತಿಯಾದಲ್ಲಿ ಲೌಕಿಕಾಗ್ನಿಯನ್ನು ಸ್ಥಾಪಿಸಿ ಚರುನಿರ್ವಾಪ, ಆಜ್ಯಭಾಗಾಂತಮಾಡಿ ನಾಮಗೋತ್ರಪೂರ್ವಕವಾಗಿ ಅಗ್ನಿಯಲ್ಲಿ ಪಿತೃಗಳನ್ನಾವಾಹಾಸಿ “ವಿಶ್ವೇದೇವರವಮನ"ದಲ್ಲಿ ದೇವರನ್ನಾವಾಹಾಸಿ ದೇವತೋದ್ದೇಶದಿಂದ ಅನ್ನ ತ್ಯಾಗವನ್ನು ಮಾಡಿ “ಪ್ರಾಣಾಯಸ್ವಾಹಾ” ಇತ್ಯಾದಿ ಮಂತ್ರಗಳಿಂದ ಮೂವತ್ತೆರಡು ಆಹುತಿಗಳಿಂದ ಹೋಮಿಸುವದು; ಅಥವಾ ಪುನಃ ಶ್ರಾದ್ಧ ಮಾಡತಕ್ಕದ್ದು. ಹೀಗೆ ಎರಡು ಪಕ್ಷಗಳಿವೆ. “ಇಂದ್ರಾಯಸಾಮ” ಎಂಬ ಸೂಕ್ತಜಪವು ಆವಶ್ಯವು. ಈ ಎರಡೂ ಪಕ್ಷಗಳ ವ್ಯವಸ್ಥೆ ಹೇಳುವದಾದರೆ-ವಿಶ್ವೇದೇವ ಬ್ರಾಹ್ಮಣನ ವಾಂತಿಯಲ್ಲಿ ಹೋಮವೇ ಹೊರತು ಪುನಃ ಶ್ರಾದ್ಧವಿಲ್ಲ. ಪಿತೃ ಸಂಬಂಧಿ ಬ್ರಾಹ್ಮಣನ ವಾಂತಿಯಲ್ಲಾದರೂ ಪಿಂಡಪ್ರದಾನಾಂತರ ವಾಂತಿಯಾದಲ್ಲಿ ಹೋಮವೇ ಹೊರತು ಪುನಃಶ್ರಾದ್ಧವಿಲ್ಲ. ಪಿಂಡಪ್ರದಾನಕ್ಕಿಂತ ಮೊದಲು ಪಿತೃಬ್ರಾಹ್ಮಣನು ವಾಂತಿಮಾಡಿದರೆ ಆ ದಿನ ಉಪವಾಸಮಾಡಿ ಮಾರನೇದಿನ ಪುನಃ ಶ್ರಾದ್ಧಮಾಡತಕ್ಕದ್ದು. ಇದು ಸಪಿಂಡೀಕರಣ, ಮಕೋದ್ದಿಷ್ಟ ಮಾಸಿಕ, ಆಬ್ಲಿಕ ಶ್ರಾದ್ಧಗಳಿಗೆ ಮಾತ್ರ ಹೇಳಿದ್ದು. ದರ್ಶಾದಿಗಳಲ್ಲಾದರೆ ಅದೇದಿನ ಆಮಶ್ರಾದ್ಧವನ್ನು ಮಾಡತಕ್ಕದ್ದು. ಇದರಂತೆ ಅಪ್ರಕಾ, ಅನ್ನಷ್ಟಕಾ, ಪೂರ್ವದ್ಯು: ಶ್ರಾದ್ಧಗಳಲ್ಲಿಯೂ ತಿಳಿಯತಕ್ಕದ್ದು. ಆಮಶ್ರಾದ್ಧದಲ್ಲಿ ಸಾಗ್ನಿಯ ಋಗ್ವದಿಗಳಿಗೆ ೪೫೦ ಧರ್ಮಸಿಂಧು ವ್ಯತಿಷಂಗಾದಿ ಉಕ್ತ ಪ್ರಯೋಗವು ಸಂಭವಿಸುವದಿಲ್ಲವಾದ್ದರಿಂದ ಸಾಂಕಿಕವಿಧಿಯಿಂದ ದರ್ಶ, ಅನ್ನಷ್ಟಕಾ, ಪೂರ್ವದ್ದು: ಶ್ರಾದ್ಧಗಳನ್ನು ಆಮದಿಂದ ಮಾಡತಕ್ಕದ್ದು; ಮತ್ತು ಆಯಾಯ ನಿಬಂಧೋಕ್ತ ಪ್ರಾಯಶ್ಚಿತ್ತವನ್ನು ಮಾಡತಕ್ಕದ್ದೆಂದು ತೋರುತ್ತದೆ. ವೃದ್ಧಿ ಶ್ರಾದ್ಧ, ಪಿಂಡರಹಿತ ಸಂಕ್ರಾತ್ಮಾದಿಶ್ರಾದ್ಧ ಮತ್ತು ನಿತ್ಯಶ್ರಾದ್ಧ ಇವುಗಳಲ್ಲಿ ವಮನವಾದರೆ ಪುನಃ ಶ್ರಾದ್ಧವೇ ಆಗಬೇಕು. ತೀರ್ಥ ಶ್ರಾದ್ಧದಲ್ಲಿ ದರ್ಶಶ್ರಾದ್ಧದಂತೆ ಆಮದಿಂದಲೇ ಆಗುವದು. ಮಹಾಲಯಶ್ರಾದ್ಧದಲ್ಲಿ ಪಾರ್ವಣಸ್ಥಾನದಲ್ಲಿರುವ ವಿಪ್ರನ ವಮನವಾದರೆ ಪುನರಾವರ್ತಿಯಾಗತಕ್ಕದ್ದು. ಏಕೋದ್ದಿಷ್ಟಗಣದಲ್ಲಿರುವ ವಿಪ್ರನ ವಮನವದಲ್ಲಿ ಹೋಮಮಾತ್ರವೆಂದು ಮೊದಲೇ ಹೇಳಿದೆ. ಹೋಮಪಕ್ಷ ಅಥವಾ ಆವೃತ್ತಿ ಪಕ್ಷದಲ್ಲಿಯಾದರೂ ಸೂಕ್ತಜಪವು ಅಗತ್ಯದ್ದು; ಎಂದೂ ಹೇಳಲಾಗಿದೆ. ಭೋಜನಾನಂತರ ತೃಪ್ತಿ ಪ್ರಶ್ನಾದಿಗಳು ಪ್ರಾಚೀನಾವೀತಿಯಾಗಿ “ತೃಪ್ತಾಸ್ಥ” ಎಂದು ಬ್ರಾಹ್ಮಣರನ್ನು ಕೇಳಿ “ತೃಪ್ತಾಃಸ್ಮ” ಎಂದು ಬ್ರಾಹ್ಮಣರ ಪ್ರತಿವಚನದ ನಂತರ “ಗಾಯತ್ರಿ, ಮಧುವಾತಾ, ಅಕ್ಷನ್ನ ಮೀ” ಇವುಗಳನ್ನು ಶ್ರವಣಮಾಡಿಸಿ ಅಥವಾ “ಅಕ್ಷನ್ನಮೀ” ಇದರ ನಂತರ ತೃಪ್ತಿ ಪ್ರಶ್ನೆಯನ್ನು ಮಾಡಿ “ಶ್ರಾದ್ಧಂಸಂಪನ್ನಂ” ಈ ಪ್ರಶ್ನೆ, ಸುಸಂಪನ್ನ ಈ ಪ್ರತಿವಚನದ ನಂತರ ಬಡಿಸುವಕಾಲದಲ್ಲಿ ಪಿಂಡಕ್ಕಾಗಿ ಅನ್ನವನ್ನು ತೆಗೆದಿಡದಿದ್ದರೆ ಈಗ ತೆಗೆದಿಟ್ಟು ವಿಕಿರ-ಸಲುವಾಗಿಯೂ ಶೇಷಾನ್ನವನ್ನು ತೆಗೆದಿರಿಸಿ “ಅನ್ನಶೇಪೈಶ್ಚಕಿಂಕಾರ್ಯಂ” ಹೀಗೆ ಬ್ರಾಹ್ಮಣರನ್ನು ಕೇಳುವದು. ಅವರು “ಇಷ್ಟಸಹ ಭೋಕ್ತವ್ಯಂ” ಹೀಗೆ ಪ್ರತಿವಚನವನ್ನು ಹೇಳುವದು, ಮತ್ತು ಎಲ್ಲವನ್ನು ಕರ್ತನಿಗೆ ಕೊಡತಕ್ಕದ್ದು, ಅಥವಾ ತಾವೇ ತೆಗೆದುಕೊಳ್ಳಬಹುದು. ಇಷ್ಟಬಂದಂತೆ ಮಾಡಬಹುದು. ಕಾತ್ಯಾಯನರು ಬ್ರಾಹ್ಮಣರು ತೃಪ್ತರಾದದ್ದನ್ನು ನೋಡಿ ಮುಂದೆ ಹೇಳುವ ರೀತಿಯಿಂದ ವಿಕಿರಪಿಂಡವನ್ನು ವಿಶ್ವದೇವರಲ್ಲಿಯೂ, ಪಿತೃಗಳಲ್ಲಿಯೂ ಕೊಟ್ಟು, ಪಿತೃಪೂರ್ವಕವಾಗಿ ಬ್ರಾಹ್ಮಣರಿಗೆ ಒಂದಾವರ್ತಿ ಜಲವನ್ನು ಕೊಟ್ಟು ಗಾಯತ್ರಿ ಹಾಗೂ ಮಧುಮತೀ ಇವುಗಳನ್ನು ಶ್ರವಣ ಮಾಡಿಸಿ ತೃಪ್ತಿಪ್ರಶ್ನೆ ಹಾಗೂ ಸಂಪತ್ತಿ ಪ್ರಶ್ನೆಗಳನ್ನು ಮಾಡತಕ್ಕದ್ದು. ಇದರಂತೆ ಬೇರೆ ಶಾಖೆಗಳಲ್ಲೂ ಉತ್ತರಾಪೋಶನಕ್ಕಿಂತ ಮೊದಲು ವಿಕಿರವನ್ನು ಕೊಡತಕ್ಕದ್ದು. ಋಗೈದಿಗಳಿಗಾದರೆ ಪಿಂಡದ ನಂತರವೇ ವಿಕಿರವು. ಹಿರಣ್ಯಕೇಶಿಯರಿಗೆ ಆಚಮನದ ನಂತರ ಹೇಳಿದೆ. ಆಮೇಲೆ “ಉಚ್ಚಿಷ್ಟಭಾಗೊನಂದೀಯತಾಂ” ಹೀಗೆ ಹೇಳಿದ ನಂತರ ಬ್ರಾಹ್ಮಣರು ಪಾತ್ರದಲ್ಲಿರುವ ಭೋಜನ ಶೇಷವನ್ನು ವಿಶ್ವೇದೇವರಲ್ಲಿ ಬಲಗಡೆಯಲ್ಲೂ, ಪೈತೃಕದಲ್ಲಿ ಎಡಗಡೆಯಲ್ಲೂ ಹೊರಗೆ ಇಟ್ಟು ಪಿತೃಪೂರ್ವಕವಾಗಿ ಕೊಟ್ಟ ಆಪೋಶನವನ್ನು “ಅಮೃತಾಪಿಧಾನಮಸಿ’ ಎಂದು ಪ್ರಾಶನ ಮಾಡುವದು. ಪಿಂಡದಾನವನ್ನು ಬ್ರಾಹ್ಮಣರ ಆಚಮನದ ನಂತರ ಅಥವಾ ಪೂರ್ವದಲ್ಲಿ ಮಾಡತಕ್ಕದ್ದು. ಬ್ರಾಹ್ಮಣರು ಮುಖಪ್ರಕಾಳನಪೂರ್ವಕ ಹಸ್ತಪ್ರಕಾಳನಾದಿಗಳನ್ನು ತಪ್ಪೇಲಿ ಮೊದಲಾದ ಪಾತ್ರಗಳಲ್ಲಿ ಮಾಡತಕ್ಕದ್ದು. ಕಂಚಿನ ಅಥವಾ ತಾಮ್ರದ ಪಾತ್ರೆಯಲ್ಲಿ ಮಾಡಬಾರದು. ಶುದ್ಧೋದಕದಿಂದ ಆಚಮನಮಾಡಿ “ಕಯಾನ” ಎಂಬ ಮಂತ್ರವನ್ನು ಜಪಿಸತಕ್ಕದ್ದು. ಪರಿಚ್ಛೇದ - ೩ ಉತ್ತರಾರ್ಧ ಪಿಂಡಪ್ರದಾನ ಪಿಂಡಪ್ರದಾನಕ್ಕೆ ಸ್ಮೃತಿಗಳಲ್ಲಿ ಆರು ಕಾಲುಗಳನ್ನು ಹೇಳಿದೆ. ಅರ್ಚನೆಯ ನಂತರ (೧) ಅಕರಣದ ನಂತರ (೨) ಭೋಜನದ ನಂತರ (೩) ವಿಕಿರದ ನಂತರ (೪) ಸ್ವಧಾವಾಚನದ ನಂತರ (೫) ಬ್ರಾಹ್ಮಣವಿಸರ್ಜನೆಯ ನಂತರ (೬) ಹೀಗೆ ಆರು ಪಕ್ಷಗಳಿವೆ. ಅವುಗಳ ವಿಷಯದಲ್ಲಿ “ಶಾಖಾಭೇದದಿಂದ ವ್ಯವಸ್ಥೆಯನ್ನು ತಿಳಿಯುವದು” ಎಂದು “ನಿರ್ಣಯ ಸಿಂಧು’ವಿನ ಅಭಿಪ್ರಾಯ. ಆಶ್ವಲಾಯನರಿಗೆ ಬ್ರಾಹ್ಮಣಭೋಜನದ ನಂತರ, ಆಚಮನದ ನಂತರ ಅಥವಾ ಅವುಗಳ ಮೊದಲು ಪಿಂಡದಾನವು, ನಂತರ “ವಿಕಿರ"ವು. ಆಪಸ್ತಂಬ, ಹಿರಣ್ಯರೇಶೀಯ ಮೊದಲಾದವರಿಗೆ ಬ್ರಾಹ್ಮಣವಿಸರ್ಜನೆಯ ನಂತರ ಪಿಂಡದಾನವು. ಕಾತೀಯರಿಗೆ ವಿಕಿರವಾದಮೇಲೆ, ಆಚಮನದ ನಂತರ ಅಥವಾ ಮೊದಲು ಪಿಂಡದಾನವು, ಋಗೈದಿಗಳಿಗೆ ಅಗ್ನಿ ಹೋಮವಿದ್ದಲ್ಲಿ ಅಗ್ನಿ ಸಮೀಪದಲ್ಲಿ ಪಿಂಡದಾನವು ಪಾಣಿಹೋಮವಿದ್ದಲ್ಲಿ ಬ್ರಾಹ್ಮಣನ ಸಮೀಪದಲ್ಲಿ ಪಿಂಡದಾನವು ಉಳಿದವರಿಗೆ ಹೆಚ್ಚಾಗಿ ಬ್ರಾಹ್ಮಣ ಸಮೀಪದಲ್ಲಿಯೇ ಪಿಂಡಹಾಕತಕ್ಕದ್ದು. ಬ್ರಾಹ್ಮಣರ ಉಚ್ಛಿಷ್ಟಪಾತ್ರೆಯ ಉತ್ತರದಲ್ಲಿ ಒಂದು ಮಾರಿನ ಅಥವಾ ಒಂದು ಮೊಳದ ಅಂತರದಲ್ಲಿ ಪಿಂಡಪ್ರದಾನವನ್ನು ಸಂಕಲ್ಪಿಸುವದು. ಋಗ್ವದಿಗಳು ಖೈರಕಟ್ಟಿಗೆಯಿಂದ ಮಾಡಿದ ಖಡ್ಗವನ್ನು ಒಂದು ಕೈಯಿಂದ ಹಿಡಕೊಂಡು ಉಳಿದವರು ಎರಡು ಕೈಗಳಿಂದ ಹಿಡಕೊಂಡು ಅಥವಾ ದರ್ಭಗಳ ಬುಡವನ್ನು ಹಿಡಕೊಂಡು ರೇಖಮಾಡತಕ್ಕದ್ದು, ಪ್ರತಿರೇಖೆಗೂ “ಅಪಹತಾ’ ಎಂಬ ಮಂತ್ರವನ್ನು ಹೇಳತಕ್ಕದ್ದು. ತುದಿಯು ಆಗ್ನೆಯ ದಿಕ್ಕಿಗಾಗಬೇಕು. ಪಶ್ಚಿಮಾಪವರ್ಗವಾಗಿರಬೇಕು. ಪಾರ್ವಣಸಂಖ್ಯೆಗನುಗುಣವಾಗಿ ಸಂಖ್ಯೆಯಿರತಕ್ಕದ್ದು. ಅಂದರೆ ಒಂದೋ, ಎರಡೂ, ಮೂರೋ ಹೀಗೆ ಉಲ್ಲೇಖನ (ಗೆರೆ ಎಳೆಯುವದು) ಮಾಡಿ ಪ್ರತ್ಯೇಕವಾಗಿ ನೀರಿನಿಂದ ಪ್ರೋಕ್ಷಣಮಾಡತಕ್ಕದ್ದು. ಪಿಂಡಸಂಕಲ್ಪ ಮತ್ತು ರೇಖಮಾಡುವದು ಇವುಗಳಲ್ಲಿ ಸವ್ಯ ಅಪಸವ್ಯಗಳ ವಿಕಲ್ಪವು. ಇಲ್ಲಿ ಕಾತೀಯರು “ಯರೂಪಾಣಿ” ಎಂಬ ಮಂತ್ರದಿಂದ ಅಕರಣಾಗ್ನಿಯ ಕೊಳ್ಳಿಯನ್ನು ರೇಖೆಯ ದಕ್ಷಿಣಭಾಗದಲ್ಲಿಡತಕ್ಕದ್ದು. ರೇಖೆಗಳಲ್ಲಿ ಒಂದೇ ಆವರ್ತಿ ಛೇದಿಸಿದ ದರ್ಭಗಳನ್ನು ದಕ್ಷಿಣಾಗ್ರವಾಗಿ ಹಾಸಿ, “ಶುಂಧಂತಾಂ ಪಿತರಃ ಶುಂಧಂತಾಂ ಪಿತಾಮಹಾಃ” ಇತ್ಯಾದಿ ಮಂತ್ರಗಳಿಂದ ತಿಲೋದಕವನ್ನು ದರ್ಭೆಗಳಲ್ಲಿ ಸೇಚನಮಾಡುವರು. ಇಲ್ಲಿ ಕಾತೀಯರಿಗೆ “ಪಿತಃ ಅಮುಕ ನಾಮಗೋತ್ರ ಅವನೇನಿಕ್ಸ್ ಇತ್ಯಾದಿ ಮಂತ್ರಗಳು, ಅಕರಣದ ಹೋಮಶೇಷಯುಕ್ತವಾದ ಎಲ್ಲ ಅನ್ನದಿಂದ ಮಧು, ತಿಲ ಮಿಶ್ರಮಾಡಿ ಪತ್ನಿಯಿಂದ ಪಿಂಡವನ್ನು ಮಾಡಿಸುವದು. ನಂತರ ರೇಖೆಯಲ್ಲಿ ಹಸ್ತವನ್ನು ತಿರುಗಿಸಿಕೊಂಡು ಪಿತೃತೀರ್ಥದಿಂದ ಪಿತ್ರಾದಿಗಳಿಗೆ ಕೊಡತಕ್ಕದ್ದು. “ಏತತ್ತೇಽಸ್ಮತಃ ಯಥಾನಾಮಗೋತ್ರರೂಪ ಯೇಚತ್ವಾಮತ್ರಾನು ಪಿತ್ರಮುಕನಾಮಗೋತ್ರ ರೂಪಾಯ ಅಯಂ ಪಿಂಡಃ ಸ್ವಧಾನಮ: ತೇಭ್ಯಶ್ಚ ಗಯಾಯಾಂ ಶ್ರೀ ರುದ್ರಪದೇ ದತ್ತಮಸ್ತು” ಇತ್ಯಾದಿ ಮಂತ್ರಗಳನ್ನೂಹಿಸಿಕೊಳ್ಳುವದು. ಇಲ್ಲಿ ಕೆಲವರಿಗೆ ಪಿಂಡಪಾತ್ರವನ್ನು ತೊಳೆಯುವದು; ಮತ್ತು ಆ ಪಾತ್ರವನ್ನು ಬೋರಲಾಗಿಡುವದು - ಹೀಗೆ ಹೇಳಿದ. ಕೆಲವರು ಪಿಂಡಗಳಲ್ಲಿ ಉದ್ದಿನ ಅನ್ನವನ್ನು ವರ್ಜ ಮಾಡುವರು. ನಂತರ ಲೇಪಭಾಗಿ ಪಿತೃಗಳ ತೃಪ್ತಿಗಾಗಿ ಹಸ್ತಕ್ಕೆ ಹಿಡಿದ ಲೇಪವನ್ನು ಪಿಂಡದ ದರ್ಭೆಯ ಬುಡದಲ್ಲಿ ಒರಿಸಿ, “ಅಪಿತರೋ ಮಾದಯಧ್ವಂ ಯಥಾಭಾಗ ಮಾವೃಷಾಯಧ್ವಂ” ಎಂದು ಪಿಂಡಗಳನ್ನು ಒಮ್ಮೆ ಅನುಮಂತ್ರಣಮಾಡಿ (ಅನುಮಂತ್ರಣ - ೪೫೨ ಧರ್ಮಸಿಂಧು ಮಂತ್ರಪೂರ್ವಕವಾದ ಆಹ್ವಾನ) ಉತ್ತರ ಪಾರ್ಶ್ವದಿಂದ ಉತ್ತರಕ್ಕೆ ತಿರುಗಿ ಯಥಾಶಕ್ತಿ ಪ್ರಾಣಾಯಾಮ ಮಾಡಿ ಹಿಂತಿರುಗಿ “ಅಮೀಮದಂತ ಪಿತರಃ” ಹೀಗೆ ಪುನಃ ಅನುಮಂತ್ರಣ ಮಾಡಿ ಸವ್ಯದಿಂದ ಪಿಂಡಶೇಷವನ್ನಾಘ್ರಾಣಿಸಿ ಆಚಮನಮಾಡಿ ಬೇರೆ ಪವಿತ್ರವನ್ನು ಧರಿಸಿ ಅಪಸವ್ಯದಿಂದ “ಶುಂಧಂತಾಂ” ಇತ್ಯಾದಿ ತಮ್ಮ ತಮ್ಮ ಸೂತ್ರಾನುಸಾರವಾಗಿ ಪೂರ್ವದಂತ ಜಲವನ್ನು ಸೇಚಿಸುವದು. ಬ್ರಾಹ್ಮಣರಿಗೆ ಬಡಿಸಿದ ಅನ್ನ ಶೇಷವಿಲ್ಲದಿದ್ದರೆ ಬೇರೆ ಅನ್ನದಿಂದ ಪಿಂಡದಾನ ಮಾಡತಕ್ಕದ್ದು. ಬೆಳವಲ, ಬಿಲ್ವ, ಕೋಳಿಯ ಮೊಟ್ಟೆ, ನಲ್ಲಿ, ಬಗರಿ ಇವು ಪಿಂಡಕ್ಕೆ ಹೇಳಿದ ಪ್ರಮಾಣಗಳು. ಕೆಲವರು ಮೂರು ಪಾರ್ವಣ ಪಿಂಡಗಳಲ್ಲಿ ಮುಂದು ಮುಂದಿನದನ್ನು ದೊಡ್ಡದಾಗಿ ಮಾಡತಕ್ಕದ್ದೆನ್ನುವರು. ಹಸ್ತಕ್ಕೆ ಲೇಪವು ಹಿಡಿದಿಲ್ಲವಾದರೂ ದರ್ಭಗಳಲ್ಲಿ ಹಸ್ತವನ್ನು ಒರಿಸಲೇಬೇಕೆಂದು ಮೇಧಾತಿಥಿಯ ಮತವು. ಏಕೋದ್ದಿಷ್ಟ ಶ್ರಾದ್ಧಗಳಲ್ಲಿ ದರ್ಭಲೇಪವಿಲ್ಲವೆಂದು “ಸುಮಂತು"ವಿನ ಮತವು. ಇಲ್ಲಿ ಸೊಂಟದ ಕಟ್ಟನ್ನು ಸಡಿಲಿಸಿ ಅಭ್ಯಂಜನಾದಿಗಳನ್ನು ಮಾಡತಕ್ಕದ್ದೆಂದು ಕೆಲವರು ಹೇಳುವರು. ಪಿಂಡಪೂಜೆಯ ನಂತರ ಉಪಸ್ಥಾನಕ್ಕಿಂತ ಮೊದಲು ಕಟಿಬಂಧವನ್ನು ಸಡಿಲಿಸುವದೆಂದು “ಶ್ರಾದ್ಧಸಾಗರ"ದಲ್ಲಿ ಹೇಳಿದೆ. ಆಮೇಲೆ “ಅಸ್ಮತಃ ಅಮುಕನಾಮಗೋತ್ರರೂಪ ಅಭ್ಯಂಕ್ಷ” ಹೀಗೆ ಆಯಾಯ ಚಿಹ್ನೆಗನುಸಾರ ಮಂತ್ರಾವೃತ್ತಿಯಿಂದ ಪಿಂಡಗಳಲ್ಲಿ ಎಣ್ಣೆ ಅಥವಾ ತುಪ್ಪದಿಂದ ಅಭ್ಯಂಜನ ಮಾಡತಕ್ಕದ್ದು. ಅದನ್ನು ದರ್ಭೆಯಿಂದ ಕೊಡತಕ್ಕದ್ದು. ಹಾಗೆಯೇ “ಅಂ” ಎಂದು ಕಾಡಿಗೆಯನ್ನು ಕೊಡುವದು. ಆಪಸ್ತಂಬರಿಗೆ ಆದಿಯಲ್ಲಿ ಅಂಜನ, ನಂತರ ಅಭ್ಯಂಜನ ಹೀಗೆ ಕ್ರಮ ಹೇಳಿದೆ. “ಏತದ್ಭ ಪಿತರೋವಾಸಃ” ಈ ಮಂತ್ರವನ್ನು ಪ್ರತಿಪಿಂಡದಲ್ಲಿಯೂ ಹೇಳಿ ವಸ್ತ್ರ ಅಥವಾ ವಸ್ತ್ರದ ಅಂಚು ಅಥವಾ ತ್ರಿಗುಣಮಾಡಿದ ಸೂತ್ರಗಳನ್ನು ಕೊಡತಕ್ಕದ್ದೆಂದು “ಹೇಮಾದ್ರಿ “ಯ ಹೇಳಿಕೆ. ಒಂದೇ ಆವರ್ತಿ ಪಠಿಸಿ ಒಂದೇ ಆವರ್ತಿ ಕೊಡತಕ್ಕದ್ದೆಂದು ಅನ್ಯರ ಮತವು. ಕಾತೀಯರು:-ಮಂತ್ರದಿಂದ ಪ್ರತಿಪಿಂಡದಲ್ಲಿಯೂ ನಾಮ ಗೋತ್ರಾದಿಗಳನ್ನುಚ್ಚರಿಸಿ ತ್ರಿಗುಣಸೂತ್ರವನ್ನು ಕೊಡತಕ್ಕದ್ದು, ನಂತರ ಶಯ್ಯಾ, ತಲೆದಿಂಬುಗಳನ್ನರ್ಪಿಸಿ “ಅತೃಭ:” ಎಂದು ಚತುರ್ಥಿವಿಭಕ್ತಿಯಿಂದ ಅಕ್ಷತ, ಗಂಧ, ಪುಷ್ಪ, ಧೂಪ, ದೀಪ, ಸಮಸ್ತ ಭಕ್ಷ್ಯ ನೈವೇದ್ಯ, ತಾಂಬೂಲ, ದಕ್ಷಿಣಾ ಇತ್ಯಾದಿಗಳಿಂದ ಪಿಂಡಪೂಜೆಯನ್ನು ಸವ್ಯ ಅಥವಾ ಅಪಸವ್ಯದಿಂದ ಮಾಡತಕ್ಕದ್ದು. ನಿಂದವಲ್ಲದ, ತಯಾರಿಸಿದ ಭಕ್ಷ್ಯಗಳನ್ನು ಪಿಂಡಮೂಲದಲ್ಲಿ ಅರ್ಪಿಸದೆ ತಾನು ತಿನ್ನಬಾರದು. ನಂತರ " ನಮೋವಪಿತರ ಇಷ್ಟೇ” ಇತ್ಯಾದಿ ಮಂತ್ರಗಳಿಂದ ಪಿಂಡದಲ್ಲಿ ಉಪಸ್ಥಾನ ಮಾಡಿ ಅಂಗಾತಹಸ್ತದಿಂದ “ಪರೇತನ” ಈ ಮಂತ್ರದಿಂದ ಕೂಡಲೇ ಪಿಂಡವನ್ನಲುಗಾಡಿಸುವದು. ನಂತರ ದಕ್ಷಿಣಾಗ್ನಿಹೋಮ ಮಾಡುವದಿದ್ದಲ್ಲಿ “ಅಗ್ನತಮಾಶ್ಚಂ” ಎಂದು ಹೇಳಿ ಅಗ್ನಿಸಮೀಪಕ್ಕೆ ಹೋಗಿ “ಯದಂತರಿಕ್ಷ” ಈ ಮಂತ್ರದಿಂದ “ಗಾರ್ಹಪತ್ಯಾಗಿ"ಯ ಉಪಸ್ಥಾನ ಮಾಡುವದು. ಇದು ಋಗ್ವವಿಗಳಿಗೆ ಮಾತ್ರ; ಅದೂ ಪಾಣಿಹೋಮದಲ್ಲಿಲ್ಲ. “ವೀರಂಮೇದತ್ತ ಪಿತರಃ” ಈ ಮಂತ್ರದಿಂದ ಮಧ್ಯದ ಒಂದು ಪಿಂಡವನ್ನು ಪಾರ್ವಣಗಳು ಎರಡಾದರೆ ಮಧ್ಯದ ಎರಡು ಪಿಂಡಗಳನ್ನು ಅನ್ನಷ್ಟಕ್ಕಾವಿಗಳಲ್ಲಿ (ಮೂರು ಪಾರ್ವಣವಿರುವದರಿಂದ) ಮಧ್ಯದ ಮೂರು ಪಿಂಡಗಳನ್ನು ಪತ್ನಿಗೆ ಕೊಡತಕ್ಕದ್ದು, ಪತ್ನಿಯು, “ಅಧಪಿತರಃ’ ಈ ಮಂತ್ರವನ್ನು ಒಂದಾವರ್ತಿ ಪರಿಚ್ಛೇದ ೩ ಉತ್ತರಾರ್ಧ ೪೩ ಪಠಿಸಿದ ಕೂಡಲೇ ಒಂದು ಅಥವಾ ಅನೇಕ ಪಿಂಡಗಳನ್ನು ಭಕ್ಷಿಸುವದು. ಆಪಸ್ತಂಬರು- ‘ಅವಾಂಷಧೀನಾಂ ರಸಂ ಪ್ರಾಶಯಾಮಿ ಭೂತಂಕೃತಂ ಗರ್ಭಂಧತ್ವ ಹೀಗೆ ಹೇಳಿ ಮಧ್ಯದ ಪಿಂಡವನ್ನು ಪತ್ನಿಗೆ ಕೂಡುವದು. ಪತ್ನಿಯ ಪಿಂಡಪ್ರಾಶನೆಗೆ ಅದೇ ಮಂತ್ರವು, “ಯಹಪುರುಷೋಅಸತ್” ಎಂದು ಪಾಠಮಾತ್ರ ಭೇದವು. ಕಾತೀಯರಿಗೂ ಇದರಂತೆಯೇ, ಈ ಪತ್ನಿಯ ಪಿಂಡಪ್ರಾಶನೆಯು ಪ್ರಜಾಕಾಮನಾದರೆ ಮಾತ್ರ. ಕೆಲವರು “ಅವಶ್ಯವೇ“ಎನ್ನುವರು. ಅನೇಕ ಪತ್ನಿಯರಿದ್ದರೆ ಪಿಂಡವನ್ನು ವಿಭಾಗಿಸಿ ಪ್ರತಿಪತ್ನಿಗೂ ಮಂತ್ರದಿಂದ ಪ್ರಾಶನಮಾಡಿಸುವದು. ಎರಡು ಪಾರ್ವಣ ಇದ್ದಲ್ಲಿ ಎರಡು ಪಿಂಡಗಳನ್ನು ಇಬ್ಬರಿಗೆ ಕೊಡುವದು. ಬಹುಪತ್ನಿಯರಿದ್ದರೆ ಗುಣದಿಂದಲೂ, ವಯಸ್ಸಿನಿಂದಲೂ ಹಿರಿಯಳಾದವಳಿಗೆ ಕೊಡುವದು. ಎಲ್ಲ ಪತ್ನಿಯರೂ ಯೋಗ್ಯರಾದರೆ ಒಂದು ಶ್ರಾದ್ಧದಲ್ಲಿ ಒಬ್ಬರಿಗೆ, ಇನ್ನೊಂದು ಶ್ರಾದ್ಧದಲ್ಲಿ ಮತ್ತೊಬ್ಬರಿಗೆ ಹೀಗೆ ಕೊಡುವದು. ಪತ್ನಿಯು ರೋಗಿಯಾದರೆ ಅಥವಾ ಬೇರೆ ಕಡೆಗಿದ್ದರೆ ಇಲ್ಲವೆ ಗರ್ಭಿಣಿಯಾಗಿದ್ದರೆ ಅಥವಾ ಹಡದಿದ್ದರೆ ಆಗ ಆ ಪಿಂಡವನ್ನು ಮುದುಕಾದ ಎತ್ತು ಅಥವಾ ಕುರಿ ಇವುಗಳಿಗೆ ಕೊಡುವದು ಯುಕ್ತವು. ಉಳಿದ ಎರಡು ಪಿಂಡಗಳನ್ನು ಜಲದಲ್ಲಿ ಹಾಕುವದು, ಪುತ್ರಾದಿಕಾಮನಲ್ಲದವನು ಮೂರೂ ಪಿಂಡಗಳನ್ನು ಅಗ್ನಿಯಲ್ಲಿ ಅಥವಾ ಜಲದಲ್ಲಿ ಚಲ್ಲುವದು; ಅಥವಾ ಗೋವು, ಕುರಿ, ವಿಪ್ರ, ಕಾಗೆ ಇವುಗಳಿಗೆ ಕೊಡತಕ್ಕದ್ದು. ತೀರ್ಥಶ್ರಾದ್ಧದಲ್ಲಿ ಯಾವಾಗಲೂ ತೀರ್ಥದಲ್ಲೇ ಪಿಂಡಗಳನ್ನು ಹಾಕತಕ್ಕದ್ದು. ಪಿಂಡ ಉಪಘಾತ ವಿಷಯ ನಾಯಿ, ನರಿ, ಕತ್ತೆ, ಇಲಿ, ಬೆಕ್ಕು, ಚಾಂಡಾಲ, ಪತಿತ ಇತ್ಯಾದಿಗಳಿಂದ ಪಿಂಡಸ್ಪರ್ಶವಾದರೆ ಅಥವಾ ಪ್ರಮಾದದಿಂದ ಪಿಂಡವು ಭಿನ್ನವಾದರೆ ಸ್ನಾನಮಾಡಿ ಪ್ರಾಜಾಪತ್ಯಕೃಚ್ಛವನ್ನಾಚರಿಸಿ ಬೇರೆ ಪಾಕದ ಅನ್ನದಿಂದ ಅಥವಾ ಅದೇ ಪಾಕದ ಅನ್ನದಿಂದ ಪಿಂಡಪ್ರದಾನ ಮಾಡತಕ್ಕದ್ದು. ಹೊರತು ಪುನಃ ಶ್ರಾದ್ಧ ಮಾಡುವದಿಲ್ಲ. ಎಂಬುದು ಸರ್ವಸಮ್ಮತವು. ಕಾಗೆಯ ಸ್ಪರ್ಶವಾದರೆ ದೋಷವಿಲ್ಲ. ಪಿಂಡನಿಷೇಧ ವಿಚಾರ ವಿವಾಹನಂತರ ಒಂದುವರ್ಷ, ಉಪನಯನದ ನಂತರ ಆರು ತಿಂಗಳು, ಚೌಲದಲ್ಲಿ ಮೂರು ತಿಂಗಳು, ಉಳಿದ ಸಂಸ್ಕಾರ ಹಾಗೂ ಬರೇ ನಾಂದೀಶ್ರಾದ್ಧದ ನಂತರ ಒಂದು ತಿಂಗಳು. ಇವುಗಳೊಳಗೆ ಪಿಂಡಸ್ನಾನ, ಮೃತ್ತಿಕಾಸ್ನಾನ, ತಿಲತರ್ಪಣ ಇವುಗಳನ್ನು ಮಾಡಬಾರದು, ತಿಲತರ್ಪಣ ಅಂದರೆ ಶ್ರಾದ್ಧಾಂಗತರ್ಪಣ ಮತ್ತು ನಿತೃತರ್ಪಣಗಳನ್ನು ತಿಲದಿಂದ ಮಾಡಬಾರದು ಎಂದಭಿಪ್ರಾಯ. ಮಂಗಲಕಾರ್ಯವಾಗಿದ್ದರೂ ಮಹಾಲಯ, ಗಯಾಶ್ರಾದ್ಧ, ತಂದೆತಾಯಿಗಳ ಪ್ರಾಬ್ಲಿಕ ಶ್ರಾದ್ಧ, ಮೃತನಾದವನ ಸಪಿಂಡೀಕರಣ, ಷೋಡಶಮಾಸಿಕ ಅಂತ್ಯದ ವರೆಗಿನ ಪ್ರೇತಕೃತ್ಯ ಇತ್ಯಾದಿಗಳಲ್ಲಿ ಪಿಂಡಗಳನ್ನು ಕೊಡಲಡ್ಡಿ ಇಲ್ಲ. ಕೆಲವರು, ಅಣ್ಣ-ತಮ್ಮಂದಿರ ವಾರ್ಷಿಕ ಶ್ರಾದ್ಧದಲ್ಲಿಯೂ ಅಡ್ಡಿಯಿಲ್ಲವೆನ್ನುವರು. (ಜೀವತ್ವಕತ್ವ, ಗರ್ಭಿಣಿಪತಿತ್ವಗಳಿಂದ ಪ್ರಯುಕ್ತವಾದ ಒಂಡನಿಷೇಧ ಹಾಗೂ ಪ್ರತಿಪ್ರಸವಗಳನ್ನು ಮೊದಲೇ ಹೇಳಿದ) ಪಿಂಡಯಜ್ಞ ಯಜ್ಞ, ಸಪಿಂಡೀಕರಣ ಇವುಗಳಲ್ಲಿ ಪಿಂಡಗಳನ್ನು ಕೊಡಲೇಬೇಕು. ಹಾಗೆಯೇ ವಿಕೃತಿರೂಪಗಳಾದ ಅನ್ನಷ್ಟಕಾದಿಗಳಲ್ಲಿ ಪುನಃ ಪಿಂಡದಾನ ವಿಧಿಯನ್ನು ಹೇಳಿದ ಸಂದರ್ಭದಲ್ಲಿ, ಪೂರ್ವದು: ಶ್ರಾದ್ಧಾದಿಗಳಲ್ಲಿ ಪಿಂಡಪಿತೃಯಜ್ಞಕ್ಕೆ ೪೫೪ ಧರ್ಮಸಿಂಧು ವಿಕೃತಿತ್ವವನ್ನು ಹೇಳಿದ ಪ್ರಸಂಗದಲ್ಲಿಯೂ ಪಿಂಡದಾನ ನಿಷೇಧವಿಲ್ಲ. ಹೀಗೆ ನಿರ್ಣಯಸಿಂಧುವಿನಲ್ಲಿ ಹೇಳಿದೆ. ಆದಕಾರಣ ಅಷ್ಟಕಾಶ್ರಾದ್ಧದಲ್ಲಿಯಾದರೂ ನಿಷೇಧವಿಲ್ಲವೆಂದು ತೋರುತ್ತದೆ. ವಿಕಿರಪಿಂಡ ವಿಚಾರ ಪಿಂಡೋದ್ವಾಸನವಾದಮೇಲೆ ವಿಕಿರವನ್ನು ಕೊಡತಕ್ಕದ್ದು. ಉಪವೀತಿಯಾಗಿ ವಿಶ್ವೇದೇವ ಬ್ರಾಹ್ಮಣಸನ್ನಿಧಿಯಲ್ಲಿ ದರ್ಭೆಗಳನ್ನು ಹಾಕಿದ ಭೂಮಿಯಲ್ಲಿ “ಅಸೋಮಪಾಶ್ಚಯೇದೇವಾ” ಈ ಮಂತ್ರದಿಂದ ಜಲ ಹಾಗೂ ಯವ ಸಹಿತವಾದ ಅನ್ನವನ್ನು ಬೀರತಕ್ಕದ್ದು. ನಂತರ ಪಿತೃಸ್ಥಾನದಲ್ಲಿ ಪ್ರಾಚೀನಾವೀತಿಯಾಗಿ ದರ್ಭೆಸಹಿತವಾದ ಭೂಮಿಯಲ್ಲಿ, “ಯೇ ಅಗ್ನಿ ದಾಯೇನರಾ ಈ ಮಂತ್ರದಿಂದ ತಿಲಸಹಿತವಾದ ಅನ್ನವನ್ನು ಬೀರಿ “ಅಗ್ನಿದಾಶ್ಚಯೇಜೀವಾಯೇಷ್ಯ ದಗ್ದಾ ಕುಲೇಮಮ ಭೂಮದಕ್ಕೇನತೃಪ್ಯತು ತೃಪ್ತಾಯಾಯಪರಾಂಗಂ’ ಎಂದಿರುವ ಕಾತೀಯ ಪ್ರಯೋಗದ ಮಂತ್ರದಿಂದ ತಿಲಸಹಿತವಾದ ಜಲವನ್ನು ಅನ್ನದಲ್ಲಿ ಬಿಡತಕ್ಕದ್ದು. ಪಿಂಡದಂದೇ ಏಕಿರವನ್ನಾದರೂ ಸಾರ್ವತ್ರಿಕವಾದ ಅನ್ನದಿಂದಲೇ ಮಾಡತಕ್ಕದ್ದು. ಕೆಲವರು “ಅಸೋಮವಾ” ಇದರಿಂದ ವಿಶ್ವೇದೇವರಲ್ಲಿ ವಿಕಿರವನ್ನು ಕೊಟ್ಟು “ಅಸಂಸ್ಕೃತ ಪ್ರಮೀತಾಯೇ” ಎಂಬ ಪೌರಾಣಮಂತ್ರದಿಂದ ಪಿತೃವಿನಲ್ಲಿ ಕೊಟ್ಟು " ಯೇ ಅಗ್ನಿದಾ ಈ ಮಂತ್ರದಿಂದ ಪೃಥಕ್ಕಾಗಿ ಉಚ್ಛಿಷ್ಟಪಿಂಡವನ್ನು ದರ್ಭೆಯಲ್ಲಿ ಕೊಡುವದು- ಹೀಗೆ ಹೇಳುತ್ತಾರೆ. ಹಸ್ತಗಳನ್ನು ತೊಳೆದುಕೊಂಡು ದ್ವಿರಾಚಮನ ಮಾಡಿ ಬೇರೆ ಪವಿತ್ರವನ್ನು ಧರಿಸಿ ವಿಷ್ಣುವನ್ನು ಸ್ಮರಿಸುವದು. ವಿಕಿರವನ್ನು ಪ್ರತ್ಯೇಕವಾಗಿಯೇ ತೆಗೆದು ಕಾಗೆಗಳಿಗೆ ಕೊಡತಕ್ಕದ್ದೆಂದು “ಕಾಶಿಕಾ"ಗ್ರಂಥದಲ್ಲಿ ಹೇಳಿದೆ. ವಿಶ್ವೇದೇವಹಸ್ತದಲ್ಲಿ “ಶಿವಾಆಪಃಸಂತು” ಇತ್ಯಾದಿಗಳಿಂದ ಜಲ, ಗಂಧ, ಪುಷ್ಪ, ಯವಗಳನ್ನು ಕೊಡತಕ್ಕದ್ದು. ಭೂಮಿಯಲ್ಲುದುರಿದ ಅಕ್ಷತೆಯನ್ನು ಬಿಟ್ಟು ಆಶೀರ್ವಾದದ ಸಲುವಾಗಿ ಪ್ರತ್ಯೇಕ ಅಕ್ಷತೆಗಳನ್ನು ಕೊಡತಕ್ಕದ್ದು. " ಆಶೀರ್ವಾದ ಪ್ರಾರ್ಥನಾದಿಗಳು ಹೀಗೆ ಪಿತೃಬ್ರಾಹ್ಮಣನಲ್ಲಿಯೂ ಅಪಸವ್ಯದಿಂದ ಜಲ, ಗಂಧ, ಪುಷ್ಪ, ತಿಲಗಳನ್ನು ಕೊಟ್ಟು ಸವೃದಿಂದ “ಅಮುಕ ಗೋತ್ರಶರ್ಮಾಹಮಭಿವಾದಯೇ ಅಹ್ಮದ್ರೋತ್ರಂ ವರ್ಧತಾಂ” ಇತ್ಯಾದಿ ಹೇಳತಕ್ಕದ್ದು. ಕೆಲವರು ಪಿತೃಸ್ಥಾನದಲ್ಲಿ ಕೊಡುವ ಗಂಧ, ತಿಲಾದಿಗಳನ್ನಾದರೂ ಸವದಿಂದಲೇ ಕೊಡತಕ್ಕದ್ದೆನ್ನುವರು. ಕಾತ್ಸಾಯನರು- ಹಸ್ತದಲ್ಲಿ ಅಕ್ಷತೆಯನ್ನು ಕೊಟ್ಟ ನಂತರ ಅಕ್ಷಯ್ಯೋದಕವನ್ನು ಕೊಟ್ಟು “ಅಘೋರಾ: ಪಿತರ: ಸಂತು” ಎಂದು ಹೇಳಿ “ದಾತಾರೋನೋಭಿವರ್ಧಂತಾಂ” ಇತ್ಯಾದಿ ಅಭಿವಾದನವನ್ನು ಹೇಳುವರು. ಹೀಗೆ ಆಶೀರ್ವಾದವನ್ನು ಸ್ವೀಕರಿಸಿ ಅಕ್ಷತೆಗಳನ್ನು ತಲೆಯ ಮೇಲೆ ತಳಿದುಕೊಂಡು ತಾನಾಗಲೀ ಶಿಷ್ಯನಾಗಲೀ ಭೋಜನಪಾತ್ರೆಗಳನ್ನು ತೆಗೆದು ಆಚಮನಮಾಡತಕ್ಕದ್ದು. ಉಪನಯನವಾಗದಿದ್ದವನು ಹಾಗೂ ಸ್ತ್ರೀ ಜನರು ಮತ್ತು ಪರಕೀಯರು ಪಾತ್ರಗಳನ್ನು ತೆಗೆಯಬಾರದು. ಸವ್ಯದಿಂದ ದೈವ ಹಾಗೂ ಪಿತ್ರಬ್ರಾಹ್ಮಣರಲ್ಲಿ “ಸ್ವಸ್ತಿ” ಎಂದು ಹೇಳತಕ್ಕದ್ದು, “ದೇವೇ, ಸ್ವಬೂತ, ಪಿತೃಭ್ಯ: ಅಮುಕನಾಮಗೋತ್ರಜ್ಞ: ಸ್ವಪ್ರೀತಿಬ್ರತ” ಹೀಗೆ ಹೇಳತಕ್ಕದ್ದು. ನಂತರ ಸವ್ಯ-ಅವಸಕ್ರಮದಿಂದ ಅಕ್ಷಯ್ಯೋದಕವನ್ನು ಕೊಡತಕ್ಕದ್ದು, ಆಮೇಲೆ ಕಮಹಾಕಿದ ಪಾತ್ರೆಯನ್ನು ಅಂಗಾತಮಾಡುವದು. ಮುಂದೆ ಎಲ್ಲವನ್ನೂ ಉಪವೀತಿಯಾಗಿಯೇ ಪರಿಚ್ಛೇದ - ೩ ಉತ್ತರಾರ್ಧ ೪೫೫ ಮಾಡತಕ್ಕದ್ದು. ಬ್ರಾಹ್ಮಣರಿಗೆ ಕರ್ಪೂರಸಹಿತವಾದ ತಾಂಬೂಲಾದಿಗಳನ್ನು ಕೊಟ್ಟು ಪಿತೃಪೂರ್ವಕವಾಗಿ ನಾಮಗೋತ್ರೋಚ್ಚಾರಮಾಡಿ ದಕ್ಷಿಣೆಯನ್ನು ಕೊಡತಕ್ಕದ್ದು. “ಅಮುಕಶರ್ಮಾಹಂ ಅಮುಕನಾಮಗೋತ್ರ ಪಿತ್ರಾದಿಸ್ಥಾನಪವಿಷ್ಟಾಯ ವಿಪ್ರಾಯ ರಜತದಕ್ಷಿಣಾಂ ಪ್ರತಿಪಾದಯಾಮಿ” ಇತ್ಯಾದಿ ವಿಶ್ವೇದೇವರಲ್ಲಿ ಸುವರ್ಣದಕ್ಷಿಣೆಯನ್ನು ಕೊಡತಕ್ಕದ್ದು. ಅಶಕ್ತಿಯಲ್ಲಿ ಎರಡೂ ಕಡೆಗಳಲ್ಲಿ ಯಜ್ಞಪವೀತವನ್ನು ದಕ್ಷಿಣೆಯ ಪ್ರತಿನಿಧಿಯಾಗಿ ಕೊಡತಕ್ಕದ್ದು, “ದಕ್ಷಿಣಾಪಾಂತು” ಎಂದು ಹೇಳಿ “ಸ್ಪಧಾರವಾಚಯಿಷ್ಟೇ” ಎಂದು ಕೇಳತಕ್ಕದ್ದು. “ವಾಚ್ಯತಾಂ” ಎಂದು ಹೇಳಿದಾಗ ಪಿತೃ-ಪಿತಾಮಹ ಇತ್ಯಾದಿ ಉಚ್ಚಾರಮಾಡಿ “ಸ್ವದೋತಾಂ” ಹೀಗೆ ಹೇಳಿ “ಅಸ್ತುಸ್ವಧಾ"ಎಂದು ಬ್ರಾಹ್ಮಣರು ಹೇಳಿದ ನಂತರ ಪಿಂಡಸಮೀಪದಲ್ಲಿ ಜಲವನ್ನು ಸೇಚಿಸಿ “ಸ್ವಧಾಸಂಪದ್ಮಂತಾಂ’ ಎಂದು ಸಂಪತ್ತಿಯನ್ನು ಹೇಳಿಸತಕ್ಕದ್ದು. ಕಾತೀಯ ಸೂತ್ರದಲ್ಲಿ “ದಾತಾರೋನೋಭಿವರ್ಧಂತಾಂ” ಎಂಬ ಆಶೀರ್ವಾದ ಪ್ರಾರ್ಥನೆಯ ನಂತರ ಸ್ವಧಾವಾಚನ, ಕಮಚಿದಪಾತ್ರೆಯನ್ನು ಮೇಲ್ಮುಖಮಾಡುವದು, ದಕ್ಷಿಣೆ ಕೊಡುವದು ಹೀಗೆ ಕ್ರಮವನ್ನು ಹೇಳಿದೆ. ನಂತರ ವಿಶ್ವೇದೇವಾದಿಗಳಿಂದ ಪ್ರೀತಿಯನ್ನು ಹೇಳಿಸಿ ಪಿಂಡಸ್ಥಾನದಲ್ಲಿ ಅಕ್ಷತಾದಿಗಳನ್ನು ಬೀರಿ ಸವ್ಯದಿಂದಲೇ “ವಾಜೇವಾಜೇ’ ಈ ಮಂತ್ರ ಹೇಳಿ “ಉಯಪಿತರೋ ವಿಶ್ವೇದೇವ್ಯ ಸಹ” ಎಂದು ಕೂಡಲೇ ದರ್ಭೆಯಿಂದ ಪಿತೃಪೂರ್ವಕವಾಗಿ ಬ್ರಾಹ್ಮಣರನ್ನು ಸ್ಪರ್ಶಿಸಿ ವಿಸರ್ಜಿಸತಕ್ಕದ್ದು. “ಆಮಾವಾಜ” ಎಂದು ಪ್ರದಕ್ಷಿಣಮಾಡಿ ನಂತರ “ದಾತಾರೋನೋಭಿವರ್ಧಂತಾಂ” ಇತ್ಯಾದಿ ವರವನ್ನು ಯಾಚಿಸುವದು. ವಿಸರ್ಜನದ ನಂತರ ಪಿಂಡದಾನ ಹೇಳಿದ ಶಾಖೆಯವರಿಗೆ ಬ್ರಾಹ್ಮಣರ ಆಚಮನದ ನಂತರ ಸೌಮನಸ್ಯ, ದಕ್ಷಿಣಾದಿಗಳು, ಅಕ್ಷಯ್ಯ, ಸ್ವಧಾವಾಚನ ನಂತರ, " ದಾತಾರೋನಭಿವರ್ಧಂತಾಂ” ಇತ್ಯಾದಿಗಳಾಗತಕ್ಕದ್ದು, ನಂತರ ಪಿಂಡದಾನಾದಿಗಳು; ಹೀಗೆ ಕ್ರಮವು ಹಿರಣ್ಯ ಕೇಶೀಯಾದಿಗಳಿಗೆ ಪಿಂಡದಾನಾದಿ ಪ್ರಯೋಗವು ಸವಿಸ್ತರವಾಗಿರುವದರಿಂದ ಇಲ್ಲಿ ಹೇಳಿಲ್ಲ. ಬ್ರಾಹ್ಮಣರು ಇಷ್ಟವನ್ನು ಕೊಟ್ಟ ನಂತರ “ಸ್ವಾರುಷಂಸ, ಬ್ರಾಹ್ಮಣಾಸಃಪಿತರು ಈ ಮಂತ್ರಗಳನ್ನು ಪಠಿಸುವದು. ಬ್ರಾಹ್ಮಣರು- “ವಂ ಆಯು: ಪ್ರಜಾಂ” ಹೀಗೆ ಹೇಳುವದು. ಆಶೀರ್ವಾದದಿಂದ ಸಂತುಷ್ಟನಾಗಿ ಬ್ರಾಹ್ಮಣರ ಪಾದಗಳಿಗೆ ಅಭ್ಯಂಗಾದಿಗಳನ್ನು ಮಾಡಿ ಅವರನ್ನು ಸಂತುಷ್ಟಗೊಳಿಸಿ ನಮಸ್ಕರಿಸಿ “ಆದ್ಯಮೇಸಫಲಂಜನ್ಮ ಮಂತ್ರಹೀನಂ-ಯಸ್ಯಸ್ವತ್ಯಾ” ಇತ್ಯಾದಿ ವಿಷ್ಣು ಸ್ಮರಣಪೂರ್ವಕವಾಗಿ ಕರ್ಮವನ್ನು ಬ್ರಹ್ಮಾರ್ಪಣ ಮಾಡತಕ್ಕದ್ದು; ಮತ್ತು ಬ್ರಾಹ್ಮಣರಲ್ಲಿ ಕ್ಷಮಾಯಾಚನೆ ಮಾಡತಕ್ಕದ್ದು. ಎಂಟುಹೆಜ್ಜೆ ನಡೆದು ಅವರ ಅನುಗಮನಮಾಡಿ ಅವರು ಬಲಕ್ಕಾಗುವಂತೆ ಮಾಡಿಕೊಂಡು ಬಂದು ಪವಿತ್ರವನ್ನು ಬಿಡಿಸಿ ದೀಪವನ್ನು ಹಸ್ತದಿಂದ ನೊಂದಿಸುವದು. ಪಾದಶುದ್ಧಿಮಾಡಿಕೊಂಡು ಎರಡು ಆಚಮನ ಮಾಡಿ ಎಂಜಲನ್ನು ತೆಗೆಯುವದು. ಋಗ್ವದಿಯು ನಂತರ ವೈಶ್ವದೇವವನ್ನು ಮಾಡಿ ನೃತ್ಯ, ಪುತ್ರ, ಬಾಂಧವರನ್ನೊಳಗೊಂಡು ಹಾಗೂ ಅತಿಥಿಯನ್ನು ಸಂಗಡಕರೆದುಕೊಂಡು ಪಿತೃಗಳಿಗೆ ಅರ್ಪಿಸಿದ್ದವುಗಳನ್ನು ಭೋಜನಮಾಡತಕ್ಕದ್ದು. ೪೫೬ ಧರ್ಮಸಿಂಧು ಶ್ರಾದ್ಧ ಶೇಷ ಭೋಜನ ವಿಚಾರ ಶ್ರಾದ್ಧದ ಶೇಷಾಂಶವನ್ನು ಶಿಷ್ಯನಿಗೂ, ಜ್ಞಾತಿಗಳಿಗೂ ಕೊಡತಕ್ಕದ್ದು, ಶೂದ್ರನಿಗೆ ಕೊಡಬಾರದು. ಬ್ರಾಹ್ಮಣರು ಭೋಜನಪಾತ್ರೆಯಲ್ಲಿ ಬಿಟ್ಟ ಶೇಷವನ್ನು ಶುದ್ಧವಾದ ನೆಲದಲ್ಲಿ ಹೂಳತಕ್ಕದ್ದು, ಉದ್ದು ಮೊದಲಾದವುಗಳು ಪರ್ವಾದಿಗಳಲ್ಲಿ ನಿಷಿದ್ಧಗಳಾದರೂ ಶ್ರಾದ್ಧದಲ್ಲಿ ನಿಷೇಧವಿಲ್ಲ. ವಿಧಿಯಿರುವದರಿಂದ ನಿಷೇಧಕ್ಕವಕಾಶವಿಲ್ಲವೆಂದು ಕೆಲವರು ಹೇಳುವರು. ನಿಷಿದ್ದ ವಸ್ತುಗಳನ್ನು ಬಿಟ್ಟು ಉಳಿದವುಗಳನ್ನು ಭಕ್ಷಣಮಾಡಿದರೂ ಶ್ರಾದ್ಧ ಶೇಷ ಭೋಜನವು ಸಿದ್ಧಿಸುವದೆಂದು ಕೆಲವರು ಹೇಳುವರು. ಶ್ರಾದ್ಧ ಶೇಷಭೋಜನಮಾಡದಿದ್ದರೆ ದೋಷವನ್ನು ಹೇಳಿದೆ. ಶ್ರಾದ್ಧದಿನ “ಉಪವಾಸ” ಮಾಡಬಾರದೆಂದಿರುವದರಿಂದ ಶೇಷವಿಲ್ಲದಿದ್ದರೂ ಬೇರೆ ಪಾಕಮಾಡಿ ಭೋಜನಮಾಡುವದು. ಏಕಾದಶಿಯಲ್ಲಿ ಶ್ರಾದ್ಧಪ್ರಾಪ್ತವಾದರೆ ಶ್ರಾದ್ಧ ಶೇಷವನ್ನಾಘ್ರಾಣಿಸುವದು. ಉಪವಾಸದ ಅಗತ್ಯವಿಲ್ಲದಲ್ಲಿ ಒಪ್ಪತ್ತಿನ ಊಟಮಾಡುವದು. ಶ್ರಾದ್ಧ ಶೇಷಭೋಜನವನ್ನು ಹಗಲಿನಲ್ಲಿಯೇ ಮಾಡತಕ್ಕದ್ದು. ರಾತ್ರಿ ಮಾಡತಕ್ಕದ್ದಲ್ಲ. ನಕ್ತವ್ರತವಿದ್ದವರು ಆಘ್ರಾಣಮಾಡುವದು. ಪರಕೀಯರು ಶ್ರಾದ್ಧ ಶೇಷಭೋಜನಮಾಡಿದರೆ ನರಕಕ್ಕೆ ಹೋಗುವರು. ಸಗೋತ್ರ, ಸಕುಲ್ಮ, ಜ್ಞಾತಿ ಇವರಿಗೆ ದೋಷವಿಲ್ಲ. ಬ್ರಹ್ಮಚಾರಿ, ಯತಿ, ವಿಧವೆ ಇವರು ಊಟಮಾಡದಿರುವದು ಅಗತ್ಯವು. ಜ್ಞಾತಿ, ಗೋತ್ರ, ಸಂಬಂಧಿಗಳಾಗಿರದವರಲ್ಲಿ ಶ್ರಾದ್ಧ ಶೇಷ ಭೋಜನ ಮಾಡಿದರೆ “ಪ್ರಾಜಾಪತ್ಯಕೃಜ್ಞ"ವನ್ನು ಹೇಳಿದೆ. ಯತಿಗಳಿಗೆ ಮುಂಡನಕ್ಷೌರ, ಲಕ್ಷ ಓಂಕಾರಜವಗಳನ್ನು ಹೇಳಿದೆ. ಗುರು, ಯೋಗಿ ಇವರ ಶ್ರಾದ್ಧ ಶೇಷಭೋಜನದಲ್ಲಿ ದೋಷವಿಲ್ಲ. ಶ್ರಾದ್ಧದಿನ ಮನೆಯಲ್ಲಿ ಶೂದ್ರನಿಗೆ ಬಡಿಸಬಾರದು. ಶೇಷವನ್ನು ಕೊಡಲೂಬಾರದು ಹೀಗೆ ಪಾರ್ವಣಶ್ರಾದ್ಧ ಪ್ರಕರಣವು ಮುಗಿಯಿತು. ಶ್ರಾದ್ದ ದಿನದಲ್ಲಿ ವೈಶ್ವದೇವ ನಿರ್ಣಯ ಶೌತಾಗ್ನಿಯುಳ್ಳ ಋಗ್ವದಿಗಳು ಶ್ರಾದ್ಧಕ್ಕಿಂತ ಮೊದಲು ಪೃಥಕ್ ಮಾಡಿದ ಪಾಕದಿಂದ ವೈಶ್ವದೇವನನ್ನು ಮಾಡತಕ್ಕದ್ದೆಂದು ಹೇಳಿದ. ಸ್ಮಾರ್ತಾಗಿ ಅಥವಾ ನಿರಗ್ರಿಗಳಾದ ಋಗ್ವದಿಗಳು ಶ್ರಾದ್ಧದ ನಂತರ ಶ್ರಾದ್ಧ ಶೇಷದಿಂದ ಅಥವಾ ಬೇರೆ ಪಾಕದಿಂದ ವೈಶ್ವದೇವವನ್ನು ಮಾಡತಕ್ಕದ್ದು. ಸ್ಮಾರ್ತ-ಶ್ರತ ಅಗ್ನಿಯುಳ್ಳ ಕಾತೀಯರು ಶ್ರಾದ್ಧಪಾಕದಿಂದ ಪೂರ್ವದಲ್ಲಿಯೇ ಮಾಡತಕ್ಕದ್ದು. ನಿರಗ್ನಿಗಳಾದವರಿಗೆ ಶ್ರಾದ್ಧಾನಂತರ ಶೇಷದಿಂದ ಅಥವಾ ಪೃಥಕ್ ಪಾಕದಿಂದ ಆಗತಕ್ಕದ್ದು. ಸಾಗ್ನಿಕರಾದ ತೈತ್ತಿರೀಯರಿಗೆ ಸರ್ವತ್ರ ಆದಿಯಲ್ಲಿ ವೈಶ್ವದೇವವು. ಕೊನೆಯಲ್ಲಿ ಪಂಚಯಜ್ಞಗಳು. ಉಳಿದವರಿಗೆ ಆದಿಯಲ್ಲಿ ಅಥವಾ ಅಂತ್ಯದಲ್ಲಿ ಹೀಗೆ ವಿಕಲ್ಪವು. ವೈಶ್ವದೇವಕ್ಕಿಂತ ಪಂಚಯಜ್ಞವು ಪ್ರತ್ಯೇಕವಾಗಿರುವದು ತೈತ್ತಿರೀಯರಿಗೆ ಮಾತ್ರ. ಎಲ್ಲ ಶಾಖೆಯವರೂ ವೃದ್ಧಿ ಶ್ರಾದ್ಧವನ್ನು ಪಾಕದಿಂದ ಮಾಡಿದಲ್ಲಿ ಪೂರ್ವದಲ್ಲಿಯೇ ವೈಶ್ವದೇವವು, ಋಗೈದಿಗಳಿಗೆ ಕೊನೆಗೆ ಅಥವಾ ಮೊದಲು ಆಗತಕ್ಕದ್ದು. ಆಮಾದಿಗಳಿಂದ ವೃದ್ಧಿ ಶ್ರಾದ್ಧವಾದಲ್ಲಿ ಕೊನೆಗೆ ಅಥವಾ ಮೊದಲು; ಇದು ಎಲ್ಲರಿಗೂ ಸಮಾನವು ಎಂದು ತೋರುತ್ತದೆ. ನಿತ್ಯಶ್ರಾದ್ಧದಲ್ಲಿ ಪೂರ್ವವೇ. ಏಕಾದಶಾಹಾದಿ ಏಕೋದ್ದಿಷ್ಟದಲ್ಲಿ ಸಾಗ್ನಿಕನಾಗಲೀ, ನಿರ‍ಕನಾಗಿರಲಿ ಎಲ್ಲರೂ ಶ್ರಾದ್ಧ ಶೇಷವನ್ನು ಬ್ರಾಹ್ಮಣರಿಗರ್ಪಿಸಿ ಬೇರೆ ಪಾಕದಿಂದಲೇ ವೈಶ್ವದೇವ ಮಾಡತಕ್ಕದ್ದು. ಪರಿಚ್ಛೇದ - ೩ ಉತ್ತರಾರ್ಧ ನಿತ್ಯಶ್ರಾದ್ಧ ನಿತ್ಯಶ್ರಾದ್ಧವನ್ನು ವಾರ್ಷಿಕಾಗಿಶ್ರಾದ್ಧಪ್ರಾಪ್ತವಾದಾಗ ಶ್ರಾದ್ಧಾನಂತರ ಅದೇ ಪಾಕದಿಂದ ಅಥವಾ ಬೇರೆ ಪಾಕದಿಂದ ಮಾಡತಕ್ಕದ್ದು. ನಿತ್ಯಶ್ರಾದ್ಧ ಸಂಬಂಧವಾದ ಎಲ್ಲ ದೇವತೆಗಳು ಮೊದಲು ಮಾಡುವ ಶ್ರಾದ್ಧದಲ್ಲಿ ಸಮಾವಿಷ್ಟರಾದರೆ “ಪ್ರಸಂಗಸಿದ್ಧಿಯೇ ಆಗುವದು. (ಅಂದರೆ ಪ್ರತ್ಯೇಕ ಮಾಡುವದವಶ್ಯವಿಲ್ಲವೆಂದರ್ಥ) ಮತ್ತೇನೆಂದರೆ, ದರ್ಶಾದಿಗಳಲ್ಲಿ, ಮಹಾಲಯ, ಅನ್ನಷ್ಟಕಾದಿಗಳಲ್ಲಿ ನಿತ್ಯಶ್ರಾದ್ಧವು ಲೋಪವೇ ಆಗುವದು, ನಿತ್ಯಶ್ರಾದ್ಧದಲ್ಲಿ ವಿಶ್ವೇದೇವರಿಲ್ಲ. ದರ್ಶದಂತೆ ಷಡ್‌ವತವಾಗಿ ಮಾಡತಕ್ಕದ್ದು. ಒಬ್ಬ ಅಥವಾ ಇಬ್ಬರು ಬ್ರಾಹ್ಮಣರನಾಮಂತ್ರಿಸುವದು. ದೇಶ, ಕಾಲ, ಅನ್ನ ಇವುಗಳ ನಿರ್ಬಂಧವಿಲ್ಲ. ಪುನರ್ಭೋಜನ, ಬ್ರಹ್ಮಚರ್ಯ ಇತ್ಯಾದಿ ಕರ್ತೃ-ಭೋಕ ನಿಯಮವಿಲ್ಲ. ಅಂತೂ ನಿಷಿದ್ಧವಲ್ಲದ ಅನ್ನದಿಂದ ಹಗಲಿನಲ್ಲಿಯೇ ಮಾಡತಕ್ಕದ್ದು ಅಥವಾ ರಾತ್ರಿ ಪ್ರಹರಪರ್ಯಂತವೂ ಆಗಬಹುದು. ತಾನು ಅಶಕ್ತನಾದರೆ ಪುತ್ರಾದಿ ಪ್ರತಿನಿಧಿಗಳಿಂದ ಮಾಡಿಸುವದು. ಆಶೌಚ ಬಂದರೆ ದರ್ಶಾದಿಗಳಂತೆಯೇ ಲೋಪವು. ನಾಂದಿಯಾದ ನಂತರ ಮಂಡಪೋತ್ಥಾನದ ವರೆಗೆ ಸಪಿಂಡರಿಗೆ ನಿತ್ಯಶ್ರಾದ್ಧವಿಲ್ಲ. ಆದರೂ ಅವಶ್ಯಕವಾದ ನಿತ್ಯವೈಶ್ವದೇವದೊಳಗೆ ಬರುವ ಪಿತೃ ಯಜ್ಞದ ನಂತರ ಮನುಷ್ಯಯಜ್ಞಕ್ಕಿಂತ ಮೊದಲು ಮಾಡತಕ್ಕದ್ದೆಂದು ತೋರುತ್ತದೆ. ಅದರಲ್ಲಿ ದರ್ಶದಂತೆ ಆರು ಪಿತೃಗಳನ್ನು ವಿಶ್ವೇದೇವರಹಿತವಾಗಿ ಉಚ್ಚರಿಸಿ “ನಿತ್ಯಶ್ರಾದ್ಧಂಕರಿಷ್ಟೇ” ಹೀಗೆ ಸಂಕಲ್ಪಿಸುವದು. “ಒತೃಣಾಮಿದಮಾಸನಂ” ಎಂದು ಆಸನವನ್ನು ಕೊಡುವದು. “ನಿತ್ಯಶ್ರಾಕ್ಷಣ:ಕ್ರಿಯತಾಂ” ಹೀಗೆ ಕ್ಷಣವು ‘ಪೂರ್ವೋಚ್ಚಾರಿತಾ: ಪಿತರಃ ಅಯಂವೋ ಗಂಧ:’ ಇತ್ಯಾದಿ ಗಂಧಾದಿಗಳಿಂದ ಬ್ರಾಹ್ಮಣರನ್ನು ಪೂಜಿಸಿ ವರ್ತುಲ ಅಥವಾ ಚತುರಸ್ರ ಮಂಡಲದಲ್ಲಿ ಪಾತ್ರೆಯನ್ನಿಟ್ಟು ಅನ್ನವನ್ನು ಬಡಿಸಿ “ಪೃಥಿವಿತೇ ಪಾತ್ರಂ” ಇತ್ಯಾದಿ ಬ್ರಹ್ಮಾರ್ಪಣಪರ್ಯಂತ ದರ್ಶದಂತೆಯೇ ಮಾಡತಕ್ಕದ್ದು, ಭೋಜನಾನಂತರ ದಕ್ಷಿಣೆಯನ್ನು ಕೊಟ್ಟು, ಅಥವಾ ದಕ್ಷಿಣೆಯಿಲ್ಲದೆಯೇ ನಮಸ್ಕಾರ ಮಾಡಿ ವಿಸರ್ಜಿಸುವದು. ಬ್ರಾಹ್ಮಣನ ಅಥವಾ ಅನ್ನಾದಿಗಳ ಅಭಾವದಲ್ಲಿ ಯಥಾಶಕ್ತಿ ಅನ್ನವನ್ನು ತೆಗೆದು ಆರು ಪಾಲು ಮಾಡಿ “ಅಸ್ಮತೃಪಿತಾಮಹ"ಇತ್ಯಾದಿ ಚತುರ್ಥಿ ವಿಭಂತವಾಗಿ ದೇವತೆಗಳನ್ನುಚ್ಚರಿಸಿ “ಇದಮನ್ನಂಸ್ವಧಾನ ಮಮ” ಎಂದು ತ್ಯಜಿಸುವದು. ಆ ಅನ್ನವನ್ನು ಬ್ರಾಹ್ಮಣ ಅಥವಾ ಗೋವುಗಳಿಗೆ ಕೊಡುವದು; ಅಥವಾ ನೀರಿಗೆ ಹಾಕುವದು. ಹೀಗೆ ಅನ್ನತ್ಯಾಗಕ್ಕೂ ಲೋಪವಾದಲ್ಲಿ “ಅರ್ಚನ್ನತ್ರಮರುತಃ” ಈ ಮಂತ್ರವನ್ನು ಹತ್ತಾವರ್ತಿ ಜಪಿಸುವದು. ಹೀಗೆ ನಿತ್ಯಶ್ರಾದ್ಧವಿಧಿಯು. ಶ್ರಾದ್ಧಗಳ ಅನುಕಲ್ಪ (ಗೌಣ)ಗಳು ಒಬ್ಬನಿಗಿಂತ ಹೆಚ್ಚು ಬ್ರಾಹ್ಮಣರು ಸಿಗದಿದ್ದಾಗ ವಿಶ್ವೇದೇವರ ಸ್ಥಾನದಲ್ಲಿ ಶಾಲಿಗ್ರಾಮಾದಿಗಳನ್ನು ಸ್ಥಾಪಿಸಿಕೊಂಡು ಆ ಒಬ್ಬ ಬ್ರಾಹ್ಮಣನಲ್ಲಿಯೇ ಪಿತ್ರಾದಿ ಮೂರು, ಮಾತಾಮಹಾದಿ ಮೂರು ಹೀಗೆ ಆರು ದೇವತೆಗಳನ್ನು ಆವಾಹನ ಮಾಡಿ ಎಲ್ಲ ಶ್ರಾದ್ಧವಿಧಿಯನ್ನೂ ಮಾಡುವದು ಎಂದು ಹೇಳಿದೆ. ಸರ್ವಥಾ ಬ್ರಾಹ್ಮಣರು ಸಿಗದಿದ್ದಾಗ “ದರ್ಭಬಟು” ಶ್ರಾದ್ಧ ಮಾಡತಕ್ಕದ್ದೆಂದು ಈ ಮೊದಲೇ ಹೇಳಲಾಗಿದೆ. ೪೫೮ ಧರ್ಮಸಿಂಧು ಆಮಶ್ರಾದ್ಧ ಯಾವದಾದರೊಂದು ಸಂಕಟದಿಂದ ಪಾಕವು ಅಸಂಭವವಾದಲ್ಲಿ ಮತ್ತು ಜಾತಕರ್ಮಸಂಸ್ಕಾರಶ್ರಾದ್ಧ, ಗ್ರಹಣಶ್ರಾದ್ಧ ಇವುಗಳಲ್ಲಿ ಆಮಶ್ರಾದ್ಧವನ್ನು ಮಾಡತಕ್ಕದ್ದು. ಸಪಿಂಡೀಕರಣ, ಮಾಸಿಕ, ವಾರ್ಷಿಕ, ಮಹಾಲಯ, ಅಷ್ಟಕ, ಅನ್ನಷ್ಟಕಾದಿ ಶ್ರಾದ್ಧಗಳನ್ನು “ಆಮ"ದಿಂದ ಮಾಡತಕ್ಕದ್ದಲ್ಲ. ಶೂದ್ರನಾದವನು ದಶಾಹ ಪಿಂಡಸಹಿತವಾದ ಎಲ್ಲ ಶ್ರಾದ್ಧವನ್ನೂ ಆಮದಿಂದಲೇ ಮಾಡತಕ್ಕದ್ದು. ಹೊರತು ಪಾಕದಿಂದ ಮಾಡತಕ್ಕದ್ದಲ್ಲ. ಆಮಶ್ರಾದ್ಧದಲ್ಲಿ ಪಿತೃಗಳನ್ನುದ್ದೇಶಿಸಿ “ಅಮುಕಶ್ರಾದ್ಧಂ ಸದೈವಂ ಸಪಿಂಡಂ ಆಮೇನ ಹವಿಷಾ ಕರಿಷ್ಯ ಹೀಗೆ ಸಂಕಲ್ಪಿಸುವದು. ಉಳಿದ ಪ್ರಯೋಗವೆಲ್ಲ ಪೂರ್ವೋಕ್ತದಂತೆಯೇ. ಪಾಕಪ್ರೋಕ್ಷಣಸ್ಥಾನದಲ್ಲಿ ಆಮಪ್ರೋಕ್ಷಣವು ಆವಾಹನದಲ್ಲಿಯ “ಉಶಂತಾ ಈ ಮಂತ್ರದಲ್ಲಿ “ಹವಿಷೇಅತ್ತವೇ” ಎನ್ನುವ ಬದಲು “ಹವಿಷೇಸ್ವೀಕರ್ತವೇ” ಹೀಗೆ ಊಹಿಸುವದು. ಭೋಜನಪಾತ್ರೆಗಳಿಗೆ ಶೇಡಿಯಿಂದ ಮಂಡಲಮಾಡುವ ಪರ್ಯಂತ ಹಿಂದೆ ಹೇಳಿದಂತೆಯೇ, ಬ್ರಾಹ್ಮಣನ ಪಾಣಿಯಲ್ಲಿ ತಂಡುಲಗಳಿಂದ “ಅಕರಣ"ವು. ಅನ್ನದ ನಾಲ್ಕು ಪಟ್ಟು ಅಥವಾ ದ್ವಿಗುಣವಾಗುವಷ್ಟು ಇಲ್ಲವೆ ಸರಿಸಮನಾಗುವಷ್ಟು ಆಯಾಯ ಆಮದ್ರವ್ಯವನ್ನು ಪಾತ್ರಗಳಲ್ಲಿ ಕೊಟ್ಟು ಪಾಣಿಹೋಮಶೇಷವನ್ನು ಪಿಂಡಕ್ಕಾಗಿ ತೆಗೆದಿಟ್ಟು ಪಾತ್ರಗಳಲ್ಲಿ ಬಡಿಸಿ “ಪೃಥಿವಿತೇಪಾತ್ರಂ” ಇತ್ಯಾದಿ ‘ಮಮಾಮಂ, ಹವ್ಯಂ ಕವ್ಯಮಿತ್ಯಾದಿ ಇದಮಾಮಮಮೃತರೂಪಂಾಹಾ” ಇತ್ಯಾದಿ ಯಥಾವಿಧಿಯಂತೆ “ಮಧು” ಇಲ್ಲಿಯ ಪರ್ಯಂತ ಹಿಂದೆ ಹೇಳಿದಂತೆಯೇ ಮಾಡತಕ್ಕದ್ದು. ಮುಂದೆ “ಯಥಾಸುಖಂಜುಷಧ್ವಂ” ಇದರ ಹಾಗೂ ಆಪೋಶಾನ, ಪ್ರಾಣಾಹುತಿ, ತೃಪ್ತಿಪ್ರಶ್ನೆ ಇವು ಲೋಪಗಳು. ತಂಡುಲ ಅಥವಾ ಅದರ ಹಿಟ್ಟಿನಿಂದ ಪಿಂಡಮಾಡತಕ್ಕದ್ದೆಂಬುದು ಸರ್ವಸಂಮತವು. ಕೆಲವರು ಮನೆಯಲ್ಲಿ ತಯಾರಿಸಿದ ಅನ್ನ ಅಥವಾ ಪಾಯಸದಿಂದ ಪಿಂಡಮಾಡತಕ್ಕದ್ದೆಂದು ಹೇಳುವರು. ಹೀಗೆ ಬ್ರಾಹ್ಮಣರ ಸಮೀಪದಲ್ಲಿ ಪಿಂಡಪ್ರದಾನಮಾಡಿದ ನಂತರದಲ್ಲಿ “ನಮೋವಃಪಿತರ ಇಷ್ಟೇ’ ಈ ಉಪಸ್ಥಾನ ಮಂತ್ರದಲ್ಲಿ ‘ಇಷ್ಟೇ’ ಬದಲಾಗಿ ‘ಆಮದ್ರವ್ಯಾಯ’ ಹೀಗೆ ಊಹಿಸುವದು. ಪಿಂಡೋದ್ವಾಸನದ ನಂತರ ಪಿಂಡಶೇಷ ದ್ರವ್ಯದಿಂದಲೇ ವಿಕಿರವನ್ನು ಹಾಕತಕ್ಕದ್ದು. ಆಮಶ್ರಾದ್ಧದಲ್ಲಿ “ಸ್ವಸ್ತಿತೀಬೂತ ಇದು ವರ್ಜವು. “ವಾಜೇವಾಜೇ’ ಈ ಮಂತ್ರದಲ್ಲಿಯ “ತೃಪ್ತಾಯಾತ” ಈ ಸ್ಥಾನದಲ್ಲಿ “ರ್ತಥಯಾತ” ಹೀಗೆ ಹೇಳತಕ್ಕದ್ದು, ನಂತರ ಹಿಂದಿನಂತೆ ಶೇಷವನ್ನು ಮುಗಿಸುವದು. ಆಮಶ್ರಾದ್ಧವನ್ನು ಬ್ರಾಹ್ಮಣರು ಪೂರ್ವಾಷ್ಠದಲ್ಲಿಯೂ, ಶೂದ್ರರು ಅಪರಾಹ್ನದಲ್ಲಿಯೂ ಮಾಡತಕ್ಕದ್ದು. ಹಿರಣ್ಯಶ್ರಾದ್ಧ ಆಮಾನ್ನದ ಅಭಾವದಲ್ಲಿ “ಹಿರಣ್ಯ ಶ್ರಾದ್ಧವನ್ನಾದರೂ ಹೀಗೆಯೇ ಮಾಡುವದು. ಎಲ್ಲ ಸಂಕಲ್ಪಾವಿಗಳಲ್ಲಿ ‘ಆಮ’ದ ಬದಲು ‘ಹಿರಣ್ಯ’ ಪದವನ್ನು ಸೇರಿಸುವದು. ಆಮದಂತೆ ಹಿರಣ್ಯವನ್ನು ಪ್ರೋಕ್ಷಿಸುವದು. ‘ಅತ್ತವೆ’ ಇತ್ಯಾದಿ ಮಂತ್ರಗಳ ಊಹೆಯು ಮೊದಲಿನಂತೆಯೇ. ತಂಡುಲಾದಿಗಳಿಂದ ಹಸ್ತದಲ್ಲಿ ಅಕರಣ ಮಾಡುವದು. ಹಿರಣ್ಯವನ್ನು ಅನ್ನಕ್ಕಿಂತ (ಅನ್ನದ ಕಿಮ್ಮತ್ತಿಗಿಂತ) ಎಂಟು ಪಟ್ಟು, ನಾಲ್ಕು ಪಟ್ಟು ಅಥವಾ ಎರಡುಪಟ್ಟು ಅಥವಾ ಸರಿಮೌಲ್ಯದಷ್ಟು ಕೊಡತಕ್ಕದ್ದು.ಪರಿಚ್ಛೇದ - ೩ ಉತ್ತರಾರ್ಧ ೪೫೯ ಹಿರಣ್ಯಶ್ರಾದ್ಧದಲ್ಲಾದರೂ ದಕ್ಷಿಣೆಯಿದ್ದೇ ಇದೆ. ಶ್ರಾದ್ಧಸಂಬಂಧ ದತ್ತವಾದ ಅಮ ಅಥವಾ ಹಿರಣ್ಯವನ್ನು ತನ್ನಿಚ್ಛೆಯಂತೆ ಬ್ರಾಹ್ಮಣನು ಉಪಯೋಗಿಸಬಹುದು. ಶೂದ್ರದತ್ತವಾದದ್ದನ್ನು ಭೋಜನವನ್ನುಳಿದು ಉಳಿದ ವ್ಯವಹಾರದಲ್ಲು ಪಯೋಗಿಸಬಹುದು. ಶ್ರಾದ್ಧದಲ್ಲಿ ಕೊಟ್ಟ ಅಮವನ್ನು ಪಂಚಯಜ್ಞಗಳಿಗೂ, ಶ್ರಾದ್ಧಕ್ಕೂ ಉಪಯೋಗಿಸಬಾರದು. ಹಿರಣ್ಯಶ್ರಾದ್ಧ, ಆಮಶ್ರಾಸ್ತ್ರಗಳಲ್ಲಿ ಪಿಂಡವು ವಿಕಲ್ಪವಾಗಿರುವದರಿಂದ ಎರಡನ್ನೂ “ಸಾಂಕಿಕ"ವಿಧಿಯಿಂದ ಮಾಡಬಹುದು. ಸಾಂಕಲ್ಪಿಕದಲ್ಲಿ ಸಮಂತ್ರಕ ಆವಾಹನ, ಆರ್ಥ್ಯ, ಅಕರಣ, ಪಿಂಡದಾನ, ವಿಕಿರ, ಅಕ್ಷಯ್ಯ, ಸ್ವಧಾವಾಚನ, ಪ್ರಶ್ನೆ ಈ ಏಳು ವಿಷಯಗಳಿಲ್ಲ. “ಅಮುಕಶ್ರಾದ್ಧಂ ಆಮೇನ, ಹವಿಷಾ, ಹಿರಣ್ಯನ ವಾ ಸಾಂಕಿಕವಿಧಿನಾ ಕರಿಷ್ಯ” ಹೀಗೆ ಸಂಕಲ್ಪವು. ಶೂದ್ರನ ಮನೆಯಲ್ಲಿ ಬೇರೆಯವರು ಕೊಟ್ಟರೂ ಕ್ಷೀರಾದಿಗಳನ್ನು ಭಕ್ಷಿಸತಕ್ಕದ್ದಲ್ಲ. ಹೀಗಿದ್ದು ಆತನೇ ಕೊಟ್ಟ ಆಮಾದಿಗಳನ್ನು ಆತನ ಮನೆಯಲ್ಲಿಯೇ ಹೇಗೆ ಭಕ್ಷಿಸಲಾದೀತು? ಆತನು ಕೊಟ್ಟ ಆಮವನ್ನು ಅವನ ಮನೆಯಲ್ಲಿ ಬೇಯಿಸಿ ಊಟಮಾಡತಕ್ಕದ್ದಲ್ಲವೆಂದು ಹೇಳಬೇಕಾದದ್ದೇ ಇಲ್ಲ. ಆದ್ದರಿಂದ ಶೂದ್ರನು ಕೊಟ್ಟದ್ದನ್ನು ಬ್ರಾಹ್ಮಣನ ಮನೆಯಲ್ಲಿ ಬೇಯಿಸಿ ಭೋಜನಮಾಡತಕ್ಕದ್ದು. ಹೀಗೆ ಆಮಶ್ರಾದ್ಧ, ಹೇಮಶ್ರಾದ್ಧ ವಿಧಾನವು. ಪಕ್ವಾನ್ನದಿಂದ ಮಾಡುವ ಸಾಂಕಲ್ಪಿಕ ಶ್ರಾದ್ಧವಿಧಿ ಸಂಕ್ರಾಂತಿ, ಯುಗಾದಿ, ಮನ್ವಾದಿ ಶ್ರಾದ್ಧಗಳು ಮತ್ತು ವೃದ್ಧಿ ನಿಮಿತ್ತವಾಗಿ ಮುಂದೆಹಾಕಿದ ದರ್ಶಾದಿಗಳು ಇವುಗಳಲ್ಲಿ ಪಿಂಡದಾನವು ಹೇಳಿಲ್ಲವಷ್ಟೇ? ಆ ಎಲ್ಲವುಗಳಲ್ಲಿಯೂ ಸಾಂಕಲ್ಪಿಕ ವಿಧಿಯಿಂದ ಆಚರಿಸತಕ್ಕದ್ದು ಮತ್ತು ಪಿಂಡದಾನಾದಿ ವಿಕೃತಶ್ರಾದ್ಧ ಮಾಡಲಾಗದವನೂ ಸಾಂಕಲ್ಪಿಕವನ್ನು ಮಾಡತಕ್ಕದ್ದು. ಅದು ಹೇಗಂದರೆ ಅಮುಕ ಶ್ರಾದ್ಧಂ ಸಾಂಕಲ್ಪಿಕ ವಿಧಿನಾ ಅನ್ನೇನ ಹವಿಷಾ ಕರಿಷ್ಯ” ಹೀಗೆ ಸಂಕಲ್ಪಿಸಿ ತೃತೀಯಕ್ಷಣ ಕೊಡುವ ವರೆಗೆ ಪೂರ್ವದಂತೆ ಮಾಡಿ ಅರ್ಘದಾನ ಹಾಗೂ ಸಮಂತ್ರಕ ಆವಾಹನಗಳನ್ನು ತ್ಯಜಿಸುವುದು. ‘ದೇವಾನ್ ಆವಾಹಯಾಮಿ, ಪಿತೃನ್ ಆವಾಹಯಾಮಿ” ಇಷ್ಟೇ ಹೇಳಿ, ಆವಾಹನ ಮಾಡಿ, ಗಂಧಾದಿಗಳಿಂದರ್ಚಿಸಿ ಭೋಜನದ ಎಲೆಗಳ ಮಂಡಲಹಾಕುವ ಪರ್ಯಂತ ಮಾಡಿ ಅಕರಣವನ್ನು ಬಿಟ್ಟು ಬಡಿಸುವದು. ಇತ್ಯಾದಿ ಸಂಪನ್ನದ ವರೆಗೆ ಮಾಡಿ “ಉತ್ತರಾಪೋಶನ, ವಿಕಿರ” ಇವುಗಳನ್ನು ಬಿಟ್ಟು ಅಕ್ಷಯ್ಯ ವಚನದ ವರೆಗೆ ಮಾಡಿ ‘ಸ್ವಧಾಂವಾಚಯಿಷ್ಟೇ ಸ್ವಧೋಚ್ಚತಾಂ” ಈ ವಾಕ್ಯವನ್ನು ಬಿಟ್ಟು ಎಲ್ಲವನ್ನೂ ಹಿಂದೆ ಹೇಳಿದಂತೆ ಮಾಡತಕ್ಕದ್ದು. ಹೀಗೆ ಸಾಂಕಿಕ ಪ್ರಯೋಗವು, ಕೆಲ ಗೌಣಪಕ್ಷಗಳು ಬ್ರಾಹ್ಮಣರ ಅಭಾವದಲ್ಲಿ “ದರ್ಭಬಟು” (ಕೂರ್ಚಬ್ರಾಹ್ಮಣ) ವಿಧಾನದಿಂದ ಪಿಂಡದಾನಮಾಡತಕ್ಕದ್ದೆಂದು ಈ ಮೊದಲು ಹೇಳಿದೆ. ದ್ರವ್ಯ, ಬ್ರಾಹ್ಮಣರ ಅಭಾವದಲ್ಲಿ ಪೈತೃಕಸೂಕ್ತದಿಂದ ಪಕ್ವಾನ್ನಹೋಮ ಮಾಡತಕ್ಕದ್ದು; ಅಥವಾ ಏನೂ ಇಲ್ಲದವನು ಶ್ರಾದ್ಧದಿನ ಉಪವಾಸವಿದ್ದು “ಉದಕುಂಭ’ ಮೊದಲಾದ ಏನನ್ನಾದರೂ ಬ್ರಾಹ್ಮಣನಿಗೆ ಕೊಡತಕ್ಕದ್ದು. ಹುಲ್ಲ (ಗ್ರಾಸನ್ನಾದರೂ ಕೊಡಬಹುದು. ಬರೇ ಪಿಂಡ ಮಾತ್ರ ಮಾಡಬಹುದು. ಇಲ್ಲವೆ ಸ್ನಾನಮಾಡಿ ತಿಲದರ್ಭಗಳಿಂದ ತರ್ಪಣ ಮಾಡುವದು, ಅಥವಾ ಹುಲ್ಲು ಹೊರೆಯನ್ನು ಅಗ್ನಿಯಲ್ಲಿ ಸುಡುವದು. ಧರ್ಮಸಿಂಧು ಧಾನ್ಯ, ಎಳ್ಳು ಅಥವಾ ಅಲ್ಪ ದಕ್ಷಿಣೆಗಳನ್ನು ಬ್ರಾಹ್ಮಣನಿಗೆ ಕೊಡತಕ್ಕದ್ದು, ಅಥವಾ ಸಂಕಲ್ಪದಿಂದಾರಂಭಿಸಿ ಸರ್ವಶ್ರಾದ್ಧ ಪ್ರಯೋಗವನ್ನು ಪಠಿಸುವದು. ಎಲ್ಲವೂ ಅಭಾವವಾದರ ಅರಣ್ಯಕ್ಕೆ ಹೋಗಿ ಕೈಗಳನ್ನು ಮೇಲಕ್ಕೆತ್ತಿ ಕಂಕುಳವನ್ನು ತೋರಿಸುತ್ತ ಹೀಗೆ ಹೇಳುವದು - “ನಮೇಸ್ತ್ರಿನಿಂ ಸಧನಂ ಸಚಾನ್ಯತ್ ಶ್ರಾದ್ಧೋಪಯೋಗಿ ಸ್ವಪಿನ್ನತೋsಸ್ಮಿ ತೃಪ್ಂತುಭಾಪಿತರೌ ಮತ್ ಭುಜಕೃತೌರ್ಮನಿ ಮಾರುತ ಹೀಗೆ “ಪ್ರಭಾಸಖಂಡ"ದಲ್ಲಿ ಬೇರೆ ಮಂತ್ರಗಳೂ ಹೇಳಲ್ಪಟ್ಟಿವೆ. ಶ್ರಾದ್ದ ಭೋಜನದಲ್ಲಿ ಪ್ರಾಯಶ್ಚಿತ್ತಗಳು ದರ್ಶಶ್ರಾದ್ದ ಭೋಜನ ಮಾಡಿದರೆ ಆರು ಪ್ರಾಣಾಯಾಮಗಳು, ಮಹಾಲಯಾದಿಶ್ರಾದ್ಧ ಹಾಗೂ ಮೃತನಾದವನ ಮೂರು ವರ್ಷದ ನಂತರ ಆಗತಕ್ಕ ಶ್ರಾದ್ಧ ಇವುಗಳಲ್ಲಿಯೂ ಆರು ಪ್ರಾಣಾಯಾಮಗಳು, ಅಥವಾ ಗಾಯತ್ರಿಯಿಂದ ಹತ್ತಾವರ್ತಿ ಅಭಿಮಂತ್ರಿಸಿದ ಜಲಪ್ರಾಶನ ಮಾಡುವದು. ಉಳಿದ ಶ್ರಾದ್ಧಗಳಲ್ಲಿಯಾದರೂ ಪ್ರತ್ಯೇಕ ಪ್ರಾಯಶ್ಚಿತ್ತ ಹೇಳಿರದಿದ್ದರೆ ಹೇಳಿದ ಜಲಪ್ರಾಶನವೇ ಪ್ರಾಯಶ್ಚಿತ್ತವು, ವೃದ್ಧಿಶ್ರಾದ್ಧದಲ್ಲಿ ಮೂರು ಪ್ರಾಣಾಯಾಮಗಳು, ಜಾತಕರ್ಮಾದಿ ಚೌಲಾಂತಸಂಸ್ಕಾರಗಳ ಅಂಗವಾದ ಶ್ರಾದ್ಧದಲ್ಲಿ “ಸಾಂತಪನಕೃಚ್ಚವು. ಜಾತಕರ್ಮಾಂಗದ ಶ್ರಾದ್ಧದಲ್ಲಿ ಚಾಂದ್ರಾಯಣ"ವಾದರೂ ಆಗಬಹುದು. ಉಳಿದ ಅಂಗಶ್ರಾದ್ಧದಲ್ಲಿ “ಉಪವಾಸವು ಸೀಮಂತಸಂಸ್ಕಾರ ಹಾಗೂ ಆ ಸಂಸ್ಕಾರದ ಅಂಗಶ್ರಾದ್ಧದಲ್ಲಿ “ಚಾಂದ್ರಾಯಣ"ವು, ಆಪತ್ತಿನ ಮೂಲಕ ದಶಾಹ ಪರ್ಯಂತದ ನವಸಂಜ್ಞಕಶ್ರಾದ್ಧ ಮತ್ತು ಹನ್ನೊಂದನೆಯ ದಿನದ ಶ್ರಾದ್ಧದಲ್ಲಿ ಭೋಜನ ಮಾಡಿದರೆ “ಪ್ರಾಜಾಪತ್ಯಕೃಚ್ಛವು. ಹನ್ನೆರಡನೇ ದಿನದ ಸಪಿಂಡೀಕರಣಶ್ರಾದ್ಧದಲ್ಲಿ ಹಾಗೂ ಊನಮಾಸಿಕದಲ್ಲಿ “ಪಾದೋನಕೃಜ್ಞ"ವು. ದ್ವಿತೀಯ ಮಾಸಿಕ, ಪಾಕ್ಷಿಕ, ಊನಮಾಸಿಕ, ಊನಾಬ್ಲಿಕಗಳಲ್ಲಿ “ಅರ್ಧಕೃಚ್ಛವು. ಉಳಿದ ಮಾಸಿಕ, ಪ್ರಥಮಾಕಗಳಲ್ಲಿ ಮತ್ತು ವರ್ಷಾಂತದಲ್ಲಿ ಮಾಡಿದ ಸಪಿಂಡೀಕರಣ ಶ್ರಾದ್ಧದಲ್ಲಿಯೂ “ಪಾದಕೃಚ್ಛವು ಅಥವಾ ಉಪವಾಸವು ಗುರುವಿಗೆ ಕೊಡುವ ದಕ್ಷಿಣೆಯ ಸಲುವಾಗಿ ಶ್ರಾದ್ಧಭೋಜನ ಮಾಡಿದರೆ ಹೇಳಿದ ಅರ್ಧ ಪ್ರಾಯಶ್ಚಿತ್ತವು ಜಪದಲ್ಲಾಸಕ್ತನಾದವನಿಗೆ ಅದರ ಅರ್ಧ ಪ್ರಾಯಶ್ಚಿತ್ತವು. ಆಪತ್ತಿನ ಹೊರತು ಊನಮಾಸಾಂತದ ವರೆಗಿನ ಶ್ರಾದ್ಧಗಳಲ್ಲಿ ಚಾಂದ್ರಾಯಣ ಮತ್ತು ಪ್ರಾಯಶ್ಚಿತ್ತವು. ದ್ವಿಮಾಸಾದಿ ಹೇಳಿದ ನಾಲ್ಕರಲ್ಲಿ “ಪಾದೋನಕೃಚ್ಛ"ವು ದ್ವಿತೀಯ, ತೃತೀಯ, ಆಕ ಇವುಗಳಲ್ಲಿ ಒಂದು ಉಪವಾಸವು, ಕ್ಷತ್ರಿಯರ ಶ್ರಾದ್ಧದಲ್ಲಿ “ದ್ವಿಗುಣ"ವು. ವೈಶ್ಯಶಾದದಲ್ಲಿ “ಗುಣ"ವು, ಶೂದ್ರಶಾದದಲ್ಲಿ ಸರ್ವತ್ರ ಚತುರ್ಗುಣವು, ಚಾಂಡಾಲ ಹಾಗೂ ವಿಷ, ಜಲ, ಸರ್ಪ, ಪಶು ಮೊದಲಾದವುಗಳಿಂದ ಹತನಾದವ, ಪತಿತ, ನಪುಂಸಕ ಇತ್ಯಾದಿಗಳ ನವಶ್ರಾದ್ಧದಲ್ಲಿ “ಚಾಂದ್ರಾಯಣ"ವು. ಏಕಾದಶಾಂತವಾಗಿ “ಪರಾಕವು ಮತ್ತು ಚಾಂದ್ರಾಯಣವು. ದ್ವಾದಶಾಹಾದಿಗಳಲ್ಲಿ “ಪರಾಕ"ವು. ದ್ವಿಮಾಸಾದಿ ನಾಲ್ಕರಲ್ಲಿ “ಅತಿಕೃಚ್ಛ"ವು, ಉಳಿದ ಮಾಸಿಕದಲ್ಲಿ ‘ಕೃತ್ರ’ವು, ಆಕದಲ್ಲಿ “ಪಾದಕೃಚ್ಛ"ವು. ಸರ್ವತ್ರ ಅಭ್ಯಾಸದಿಂದ (ಪದೇ ಪದೇ) ಮಾಡಿದಲ್ಲಿ ಎಲ್ಲವೂ ‘ದ್ವಿಗುಣ’ವು, ಆಮಶ್ರಾದ್ಧ, ಹಿರಣ್ಯಶ್ರಾದ್ಧ ಮತ್ತು ಸಾಂಕಲ್ಲಿ ಕತ್ತಾದ ಇವುಗಳಲ್ಲಿ ಹೇಳಿದ್ದರಲ್ಲಿ ಅರ್ಧಪ್ರಾಯಶ್ಚಿತ್ತವು. ಯತಿ ಮತ್ತು ಪರಿಚ್ಛೇದ - ೩ ಉತ್ತರಾರ್ಧ ೪೬೧ ಬ್ರಹ್ಮಚಾರಿಗಳು ಪೂರ್ವೋಕ್ತ ಪ್ರಾಯಶ್ಚಿತ್ತವನ್ನು ಮಾಡಿ ಮೂರು ಉಪವಾಸ, ನೂರು ಪ್ರಾಣಾಯಾಮ ಮತ್ತು ಮೃತಪ್ರಾಶನ ಇವಿಷ್ಟನ್ನು ಹೆಚ್ಚಿಗೆ ಮಾಡತಕ್ಕದ್ದು. ಆಪತ್ತಿಲ್ಲದಾಗ “ದ್ವಿಗುಣ” ಮಾಡತಕ್ಕದ್ದು. ದರ್ಶಾದಿಗಳಲ್ಲಿ ಗೃಹಸ್ಥನಂತೆಯೇ, ಚೌಲಸಂಸ್ಕಾರದಲ್ಲಿ ಭೋಜನ ಮಾಡಿದರೆ “ಕೃ"ವು. ಸೀಮಂತದಲ್ಲಿ ‘ಚಾಂದ್ರಾಯಣ"ವು, ಉಳಿದವುಗಳಲ್ಲಿ ಉಪವಾಸವು. ಏಕಾದಶಾಹ ಶ್ರಾದ್ಧದಲ್ಲಿ ಭೋಜನ ಮಾಡಿದಲ್ಲಿ ಚಾಂದ್ರಾಯಣ ಮತ್ತು ಪುನಃ ಸಂಸ್ಕಾರವಾಗತಕ್ಕದ್ದೆಂದು ಹೇಮಾದ್ರಿಯ ಮತವು. ಕ್ಷಯಾಹಶ್ರಾದ್ಧದಲ್ಲಿ ವಿಶೇಷವು ಯಾವನ ತಂದೆತಾಯಿಗಳು ಯಾವ ಮಾಸದ, ಯಾವ ಪಕ್ಷದ, ಯಾವ ತಿಥಿಯಲ್ಲಿ ಮೃತರಾಗಿರುವರೋ ಆ ದಿನವು ಅವರ “ಮೃತತಿಥಿ"ಯನ್ನಲ್ಪಡುವದು. ಆ ದಿನದಲ್ಲಿ ಪಿತೃಮೊದಲಾದವರ ವಾರ್ಷಿಕ ಶ್ರಾದ್ಧವನ್ನು “ಪುರೂರವಾದ್ರ್ರವ” ವಿಶ್ವೇದೇವ ಸಹಿತವಾಗಿ ಮಾಡತಕ್ಕದ್ದು. ಇಲ್ಲಿ ಪಿತೃ-ಪಿತಾಮಹ-ಪ್ರಪಿತಾಮಹರಿಗೆ “ಸಪಕ” ಎಂದು ಉಚ್ಚಾರ ಮಾಡುವದಿಲ್ಲ ಮತ್ತು ಈ ವಾರ್ಷಿಕಶ್ರಾದ್ಧದಲ್ಲಿ ಮಾತಾಮಹಾದಿ ಮೂರು ಪಾರ್ವಣಗಳೂ ಇಲ್ಲ. ಎರಡು ತಿಥಿಗಳು ಬಂದಾಗ ಮಾಡುವ ವಿಚಾರ ಹಾಗೂ ರಾತ್ರಿಯಲ್ಲಿ ಮಾಡತಕ್ಕ ವಿಚಾರ, ಗ್ರಹಣಪ್ರಾಪ್ತವಾದಾಗ ನಿರ್ಣಯ, ಮಲಮಾಸಾದಿಗಳಲ್ಲಿ ನಿರ್ಣಯ, ದರ್ಶದಿನದಲ್ಲಿ ಬಂದಾಗ, ಅದರ ನಿರ್ಣಯ, ಶುದ್ಧಿಶ್ರಾದ್ಧ ನಿರ್ಣಯ ಇವುಗಳನ್ನೆಲ್ಲ ಶ್ರಾದ್ಧ ಕಾಲ ನಿರ್ಣಯ ಪ್ರಸಂಗದಲ್ಲಿ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾರಣ ಮತ್ತು ಮರಣದಲ್ಲಿ ತಾತ್ಕಾಲಿಕೀ ತಿಥಿಯು ಸಂಮತವಾದದ್ದು ಎಂಬ ವಚನದಂತೆ ಮರಣ ದಿನದ ತಿಥಿಯು ಅಪರಾಷ್ಟ್ರವ್ಯಾಪ್ತಿಯಾಗಿದ್ದಾಗ ಆಬ್ಬಿಕಶ್ರಾದ್ಧವಾಗುವದೆಂಬ ನಿರ್ಣಯವನ್ನು ತಿಳಿಯತಕ್ಕದ್ದು. ಮಾತಾಪಿತೃಗಳ ಪ್ರಥಮಾದಿ ವಾರ್ಷಿಕಶ್ರಾದ್ಧಗಳನ್ನು ವಿಭಕ್ತರಾದ ಪುತ್ರರು ಪೃಥಕ್ಕಾಗಿಯೇ ಮಾಡತಕ್ಕದ್ದು, ಅವಿಭಕ್ತರಿದ್ದಾಗ ಜೇಷ್ಠನೊಬ್ಬನೇ ಮಾಡತಕ್ಕದ್ದು. ತಾಯಿಯ ಮೃತಾಹದಲ್ಲಿ ತಾಯಿ, ಅಜ್ಜಿ (ಪಿತಾಮಹಿ), ಮುತ್ತಜ್ಜಿ (ಪ್ರಪಿತಾಮಹಿ) ಹೀಗೆ ಮೂರುಪಾರ್ವಣದಿಂದ ಮಾಡುವದು. ತಾಯಿ-ತಂದೆಗಳ ಮೃತದಿನವು ಒಂದೇ ದಿನದಲ್ಲಿ ಬಂದರೆ, ಮೊದಲು ತಂದೆಯ ಶ್ರಾದ್ಧವನ್ನು ಮುಗಿಸಿ ಸ್ನಾನಮಾಡಿ ತಾಯಿಯ ಶ್ರಾದ್ಧವನ್ನು ಮಾಡತಕ್ಕದ್ದು. ಸಹಗಮನದಿಂದ ಮೃತರಾದ ತಾಯಿ-ತಂದೆಗಳ ಶ್ರಾದ್ಧವನ್ನೂ ಹೀಗೆಯೇ ಮಾಡತಕ್ಕದ್ದು. ಸಹಗಮನ ಪದ್ಧತಿಯಿಂದ ದಹನವಾದಲ್ಲಿ ಒಂದೇ ಪಾಕವನ್ನು ಮಾಡಿ ಪಿತೃ ಮತ್ತು ಮಾತ್ರ ಹೀಗೆ ಎರಡು ಪಾರ್ವಣಗಳಿಂದ ಯುಕ್ತವಾದ ಶ್ರಾದ್ಧವನ್ನು ಮಾಡತಕ್ಕದ್ದು, ಪಿಂಡಗಳು ಆರು, ಅರ್ಘಗಳೂ ಆರು. ವಿಶ್ವೇದೇವರನ್ನು ಎರಡಕ್ಕೂ ಕೂಡಿಯೇ ವರಿಸತಕ್ಕದ್ದು. ಪ್ರತ್ಯೇಕವಿಶ್ವೇದೇವರ ಆವಶ್ಯಕತೆಯಿಲ್ಲ. ಸಹಗಮನದಲ್ಲಿ ಮತ್ತು ಸುವಾಸಿನಿಯ ಮರಣದಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಪ್ರತ್ಯೇಕವಾಗಿ ಒಬ್ಬ ಸುವಾಸಿನಿಯನ್ನು ಕೂಡ್ರಿಸುವದು. ಸುವಾಸಿನಿಗೆ ಕುಂಕುಮಾದಿ ಸ್ತ್ರೀ ಅಲಂಕಾರಗಳನ್ನು ಕೊಡತಕ್ಕದ್ದು. ಸ್ತ್ರೀಯರ ಶ್ರಾದ್ಧವಾಗಿದ್ದರೂ ಬ್ರಾಹ್ಮಣರಿಗೆ ಗಂಧಾದಿಗಳನ್ನೇ ಕೊಡತಕ್ಕದ್ದು. ಹೊರತು ಕುಂಕುಮಾದಿಗಳನ್ನು ಕೊಡತಕ್ಕದ್ದಲ್ಲ. ಹೀಗೆ ಪುತ್ರಾದಿಗಳಿಲ್ಲದ ಸವತೀತಾಯಿ, ಮಾತಾಮಹ, ಮಾತಾಮಹೀ, ಸೋದರಮಾವ, ಪಿತೃಭಾತ್ಯ ೪೬೨ ಕೆಲವರು · ಧರ್ಮಸಿಂಧು ಅವರ ಪತ್ನಿ, ಸ್ವಭಾತೃ, ಅತ್ತೆ, ಮಾವ, ಗುರು, ಪಿತೃಭಗಿನಿ, ಮಾತೃ ಭಗಿನಿ, ಸ್ವಪತ್ನಿ, ಪತಿಯ ಭಗಿನಿ ಇತ್ಯಾದಿಗಳಿಗೆಲ್ಲ ಪಾರ್ವಣವಿಧಿಯಿಂದಲೇ ಪ್ರತ್ಯಾಬ್ಲಿಕ ಶ್ರಾದ್ಧವನ್ನು ಮಾಡತಕ್ಕದ್ದು. ಪಿತೃ, ಮಾತೃ, ಮಾತಾಮಹ, ಮಾತಾಮಹಿ ಇವರ ಹೊರತಾದವರ ಶ್ರಾದ್ಧವನ್ನು ಎಕೋದ್ದಿಷ್ಟದಿಂದಲೇ ಮಾಡತಕ್ಕದ್ದೆನ್ನುವರು. ಈ ವಿಷಯದಲ್ಲಿ ದೇಶಾಚಾರವನ್ನು ನೋಡಿಕೊಳ್ಳುವದು. ಮಾತಾಪಿತೃ ಮೊದಲಾದವರ ಶ್ರಾದ್ಧದಲ್ಲಿ ಪಿತೃವ್ಯ ಮೊದಲಾದವರ ಶ್ರಾದ್ಧವು ಪ್ರಾಪ್ತವಾದರೆ ಪಿತ್ರಾದಿಶ್ರಾದ್ಧವನ್ನು ತಾನು ಮಾಡುವದು. ಪಿತೃವ್ಯಾದಿ ಶ್ರಾದ್ಧಗಳನ್ನು ಪುತ್ರ, ಶಿಷ್ಟಾದಿಗಳಿಂದ ಮಾಡಿಸತಕ್ಕದ್ದು ಅಥವಾ ಬೇರೆ ದಿನದಲ್ಲಿ ತಾನೇ ಮಾಡುವದು. ತಂದೆ ಮೊದಲಾದವರು ಸಂನ್ಯಾಸಿಗಳಾದರೂ ಪುತ್ರರು ಅದ್ದಿ ಕಾದಿಶ್ರಾದ್ಧಗಳನ್ನು ಪಾರ್ವಣವಿಧಿಯಿಂದಲೇ ಮಾಡತಕ್ಕದ್ದು. ಪ್ರಥಮ ವರ್ಷದಲ್ಲಿ ವರ್ಷಾಂತಕದಲ್ಲಿ ಸಪಿಂಡೀಕರಣ ಮಾಡುವದಿದ್ದಲ್ಲಿ ಮೃತಾಹದ ಪೂರ್ವದಿನದಲ್ಲಿ ಸಪಿಂಡನ ಮತ್ತು ಅಬ್ದಪೂರ್ತಿ ಶ್ರಾದ್ಧವನ್ನೂ ಮಾಡಿ ಮಾರನೇದಿನ ವಾರ್ಷಿಕಶ್ರಾದ್ಧವನ್ನು ಮಾಡತಕ್ಕದ್ದು. ಮೃತಾಹವು ಅಜ್ಞಾತವಾದರೆ ನಿರ್ಣಯ ದೇಶಾಂತರದಲ್ಲಿ ಮೃತನಾದವನ ಮೃತಮಾಸವು ತಿಳಿದಿದ್ದು ದಿನವು ಗೊತ್ತಿಲ್ಲದಿದ್ದರೆ ಅವನಿಗೆ ಆ ಮಾಸದಲ್ಲಿ ಅಮಾವಾಸೆ, ಶುಕ್‌ಕಾದಶಿ ಅಥವಾ ಕೃಷ್ಣಕಾದಶಿ ಇವುಗಳಲ್ಲಿ ವಾರ್ಷಿಕ ಶ್ರಾದ್ಧವನ್ನು ಮಾಡತಕ್ಕದ್ದು. ಮರಣದ ತಿಥಿಯು ತಿಳಿದಿದ್ದು ಮಾಸವು ತಿಳಿಯದಿದ್ದಾಗ ಮಾರ್ಗಶೀರ್ಷ, ಮಾಘ ಅಥವಾ ಭಾದ್ರಪದ ಇಲ್ಲವೆ ಆಷಾಢ ಈ ಮಾಸಗಳ ಅದೇ ಮಿತಿಗೆ ಶ್ರಾದ್ಧವನ್ನು ಮಾಡತಕ್ಕದ್ದು. ಎರಡೂ ತಿಳಿಯದಿದ್ದಾಗ ಯಾವ ಮಾಸದಲ್ಲಿ ಆತನು ಮನೆಯನ್ನು ಬಿಟ್ಟಿದ್ದನೋ ಆ ಮಾಸ, ದಿನಗಳಲ್ಲಿ ಮಾಡತಕ್ಕದ್ದು. ಪ್ರಯಾಣದಿನವು ತಿಳಿಯದಿದ್ದರೆ ಯಾವ ಮಾಸದ ಯಾವ ತಿಥಿಯಲ್ಲಿ ಅವನ ಮರಣವಾರ್ತೆಯು ಸಿಕ್ಕಿದೆಯೋ ಅವುಗಳನ್ನು ಹಿಡಿಯತಕ್ಕದ್ದು. ಈ ಪ್ರಯಾಣ, ವಾರ್ತಾಶ್ರವಣ ಇವುಗಳ ಮಾಸವು ತಿಳಿದಿದ್ದು ತಿಥಿಯು ಗೊತ್ತಿಲ್ಲದಿರುವಾಗ ಆ ಮಾಸದ ದರ್ಶಾದಿ ದಿನಗಳಲ್ಲಿ ಮಾಡುವದು. ಪ್ರಯಾಣಾದಿ ಮಾಸಗಳು ಸ್ಮರಣೆಯಲ್ಲಿರದೆ ತಿಥಿಯು ಮಾತ್ರ ಸ್ಮರಣೆಯಲ್ಲಿದ್ದರೆ ಹಿಂದೆ ಹೇಳಿದ ಮಾರ್ಗಶೀರ್ಷಾದಿ ನಾಲ್ಕು ಮಾಸಗಳೊಂದರಲ್ಲಿ ಮಾಡತಕ್ಕದ್ದು. ಮರಣ, ಅದರ ಶ್ರವಣ ಮತ್ತು ಪ್ರಯಾಣ ಈ ಮಾಸಗಳಲ್ಲಿ ಯಾವದೂ ತಿಳಿಯದಿದ್ದರೆ ಮಾಘ ಇಲ್ಲವೆ ಮಾರ್ಗಶೀರ್ಷ ಇವುಗಳ ಅಮಾವಾಸೆಯಲ್ಲಿ ಮಾಡತಕ್ಕದ್ದು. ಹನ್ನೆರಡು ವರ್ಷ ಪರ್ಯಂತ ನಿರೀಕ್ಷೆಮಾಡಿ ಬಾರದಿದ್ದಾಗ ಶಾಖಾಸಂಸ್ಕಾರ ಮಾಡಿದಲ್ಲಿ ಆ ವಾಹದ ದಿನದಲ್ಲಿಯೇ ವಾರ್ಷಿಕ ಶ್ರಾದ್ಧವನ್ನು ಮಾಡತಕ್ಕದ್ದು. ಶ್ರಾದ್ಧದಲ್ಲಿ ವಿಘ್ನವು ಪ್ರಾಪ್ತವಾದರೆ ನಿರ್ಣಯ ನಿಮಂತ್ರಣವಾದ ನಂತರ ಬ್ರಾಹ್ಮಣನಿಗೆ ಜನನ-ಮರಣಾಶೌಚ ಪ್ರಾಪ್ತವಾದರೆ ಆಶೌಚವಿಲ್ಲ. ನಿಮಂತ್ರಣ ಅಂದರೆ ಎರಡನೇ “ಕ್ಷಣ"ರೂಪವಾದ ಸಮಂತ್ರಕ ನಿಮಂತ್ರಣವು ಎಂದು ತಿಳಿಯಬೇಕು. (ಮೊದಲು ಸಾಮಾನ್ಯಶಾದ ಬ್ರಾಹ್ಮಣತ್ವಕ್ಕೆ ಕರೆಕೊಡುವದು. ಇದು ಮೊದಲನೆಯ ಅಮಂತ್ರಕವಾದ ನಿಮಂತ್ರಣ) ಲೌಕಿಕನಿಮಂತ್ರಣದ ನಂತರ ಪ್ರಾಪ್ತವಾದರೆ 32. ಪರಿಚ್ಛೇದ ೩ ಉತ್ತರಾರ್ಧ ಆಶೌಚವಿದ್ದೇ ಇದೆ ಎಂದು ತೋರುತ್ತದೆ. ಕರ್ತೃವಿಗೆ “ಪಾಕಪರಿಕ್ರಿಯ"ದ ನಂತರ ಆಶೌಚವಿಲ್ಲ. “ಪಾಕಪರಿಕ್ರಿಯ” ಅಂದರೆ ಸಮಂತ್ರಕವಾದ “ಪಾಕ ಪ್ರೋಕ್ಷಣ” ಎನ್ನುವರು. ಕರ್ತೃವಿನ ಮನೆಯಲ್ಲಿ ಭೋಜನ ಪ್ರಾರಂಭವಾದಮೇಲೆ ಜನನ ಅಥವಾ ಮರಣವಾದರೆ ಭೋಜನ ಶೇಷವನ್ನು ಬಿಟ್ಟು ಪರಕೀಯ ಜಲದಿಂದ ಆಚಮನ ಮಾಡತಕ್ಕದ್ದು, ನನಗೆ ತೋರುವದೇನಂದರೆ -ಎಲ್ಲ ಆಶೌಚಾಪವಾದಗಳೂ ಅನನ್ಯಗತಿಕವಾದಲ್ಲಿ ಮಾತ್ರ ಹೊರತು ಸಂಕಟವಿಲ್ಲದಾಗ ಪಾಕಪರಿಕ್ರಿಯೆಯಾದನಂತರವಾದರೂ ಕರ್ತೃವಿಗೆ ಆಶೌಚಬಂದರೆ ಆಶೌಚಾಂತದಲ್ಲೇ ಶ್ರಾದ್ಧವಾಗತಕ್ಕದ್ದು ಯುಕ್ತವು. ಭೂವಿಗಾದರೆ ಭೋಜನಾರಂಭಕ್ಕಿಂತ ಮೊದಲು ಆಶೌಚಜ್ಞಾತವಾದರೆ ಬೇರೆಯವನನ್ನು ನಿಯಮಿಸುವದು. ಭೋಜನಾರಂಭವಾದಮೇಲೆ ಆಶೌಚಪ್ರಾಪ್ತವಾದರೆ ಕರ್ತೃವು ಹಾಗೆಯೇ ಶ್ರಾದ್ಧವನ್ನು ಮುಗಿಸತಕ್ಕದ್ದು, ಭೋಗ್ಯವು ಭೋಜನಾನಂತರ ಮುಂದೆ ಆಶೌಚಪ್ರಕರಣದಲ್ಲಿ ಹೇಳುವ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವದು. ಆಪತ್ತಿನಲ್ಲಾದರೆ ಪೂರ್ವದಲ್ಲಿ ಹೇಳಿದಂತೆ ಯುಕ್ತವಾಗಿ ಕಂಡರೆ ಅದನ್ನು ಗ್ರಾಹ್ಯಮಾಡುವದು. “ನಿರ್ಣಯ ಸಿಂಧು"ವಿನಲ್ಲಿ ಪಾಕಾನಂತರ ಆಶೌಚವಿಲ್ಲ” ಎಂಬುದು ಕರ್ತೃವಿಗೆ ಮಾತ್ರ ಸಂಬಂಧಿಸಿದ್ದು . ಆದಕಾರಣ ಭೋಕೃವಿಗೆ ಪ್ರಾಯಶ್ಚಿತ್ತ ಹಾಗೂ ಆಶೌಚವಿದೆ ಎಂದು ಹೇಳಿದೆ. ಅದು ಹೇಗೆಂದರೆ-ಬ್ರಾಹ್ಮಣನಿಗೆ ಆಶೌಚವಿದ್ದಾಗ ಶ್ರಾದ್ಧದಲ್ಲಿ ಒಂದು ಬಾರಿ ಸ್ಟೇಚ್ಛೆಯಿಂದ ಭೋಜನ ಮಾಡಿದಲ್ಲಿ ಸಾಂತವನಕೃಚ್ಛವು ಪ್ರಾಯಶ್ಚಿತ್ತವು. ಅನೇಕಾವರ್ತಿ ಮಾಡಿದಲ್ಲಿ ಒಂದು ತಿಂಗಳು ಕೃಚ್ಛಾಚರಣ ಮಾಡತಕ್ಕದ್ದು. ಆಶೌಚವು ತಿಳಿದಿರುವ ಬ್ರಾಹ್ಮಣಾದಿಗಳ ಅನ್ನವನ್ನು ಅಜ್ಞಾನದಿಂದ ಭೋಜನ ಮಾಡಿದಲ್ಲಿ ಕ್ರಮದಿಂದ ಅಂದರೆ ಬ್ರಾಹ್ಮಣರ ಅನ್ನವಾದರೆ ಒಂದುದಿನ, ಕ್ಷತ್ರಿಯನದಾದರೆ ಮೂರುದಿನ, ವೈಶ್ಯನದಾದರೆ ಐದುದಿನ, ಶೂದ್ರನದಾದರೆ ಏಳುದಿನ ಹೀಗೆ ಉಪವಾಸಮಾಡಿ ಕೊನೆಗೆ ಪಂಚಗವ್ಯಪ್ರಾಶನ ಮಾಡತಕ್ಕದ್ದು. ಅನೇಕಾವರ್ತಿ ಮಾಡಿದರೆ ಎರಡು ಪಟ್ಟು ಮಾಡುವದು. ಆಶೌಚವಿದ್ದ ಬ್ರಾಹ್ಮಣನ ಅನ್ನವನ್ನು ಒಂದು ಬಾರಿ ಊಟಮಾಡಿದಲ್ಲಿ ಊಟವನ್ನು ಕೊಟ್ಟ ಬ್ರಾಹ್ಮಣನಿಗೆ ಎಷ್ಟು ಅಶೌಚವಿರುವದೋ ಊಟಮಾಡಿದವನಿಗೂ ಅಷ್ಟೇ ಆಶೌಚವು. ಅಂತದಲ್ಲಿ ಪ್ರಾಯಶ್ಚಿತ್ತವು. ಹೀಗೆಂದು “ವಿಷ್ಟು “ಸ್ಮೃತಿಯಲ್ಲಿದೆ. ಇದು ಶ್ರಾದ್ಧ ಕಾಲದಲ್ಲಿಯೂ ಬೇರೆ ಭೋಜನ ಕಾಲದಲ್ಲಿಯೂ ಸಮವು. ದಾತೃ ಹಾಗೂ ಭೋಗ್ಯ ಇಬ್ಬರಿಗೂ ಆಶೌಚ ಗೊತ್ತಿಲ್ಲದಾಗ ದೋಷವಿಲ್ಲ. ಶ್ರಾದ್ಧಾತಿಕ್ರಮ ವಿಚಾರ ಅಶೌಚಮಧ್ಯದಲ್ಲಿ ಶ್ರಾದ್ಧದಿನವು ಪ್ರಾಪ್ತವಾದಾಗ ಆಶೌಚಾಂತ ಅಂದರೆ ಹನ್ನೊಂದನೇ ದಿನ ಮಾಡತಕ್ಕದ್ದು. ಹನ್ನೊಂದನೇ ದಿನ ಮಲಮಾಸ ಪ್ರಾಪ್ತವಾಗಿದ್ದರೂ ಮಾಡತಕ್ಕದ್ದು. ಆದಿನ ಅಸಂಭವವಾದರೆ ಶುದ್ಧಮಾಸದಲ್ಲಿ ಮಾಡತಕ್ಕದ್ದು. ಇದು ಮಾಸಿಕ ಹಾಗೂ ಪ್ರತಿವಾರ್ಷಿಕ ಶ್ರಾದ್ಧಗಳಿಗೆ ಹೇಳಿದ್ದು, ದರ್ಶಾದಿಗಳಿಗೆ ಪಂಚಮಹಾಯಜ್ಞಾದಿಗಳಂತ “ಲೋಪವೇ ಎಂದು ತಿಳಿಯುವದು. ಅವುಗಳನ್ನು ಆಶೌಚಾಂತದಲ್ಲಿ ಮಾಡತಕ್ಕದ್ದಲ್ಲ ಮತ್ತು ಪ್ರಾಯಶ್ಚಿತ್ತ ಮಾಡತಕ್ಕದ್ದಿಲ್ಲ. ಆಶೌಚವಿಲ್ಲದೆಯೂ ರ್ದಾದಿಶ್ರಾಸ್ತ್ರಗಳ ಲೋಪವಾದಲ್ಲಿ ಉಪವಾಸರೂಪವಾದ ಪ್ರಾಯಶ್ಚಿತ್ತವೇ ಹೊರತು ಕಾಲಾಂತರದಲ್ಲಿ ಮಾಡತಕ್ಕದ್ದಿಲ್ಲ. ವಾರ್ಷಿಕ ಶ್ರಾದ್ಧವನ್ನು મ ಧರ್ಮಸಿಂಧು ಆಶೌಚಾಂತದಲ್ಲಿ ಮಾಡಲಾಗದಿದ್ದಲ್ಲಿ ಅಮಾವಾಸ ಅಥವಾ ಶುಕ್ಲ ಕಾದಶಿಯಲ್ಲಿ ಮಾಡತಕ್ಕದ್ದು. ಮಾಸಿಕಶ್ರಾದ್ಧ, ಉದಕುಂಭಶ್ರಾದ್ಧ ಇತ್ಯಾದಿ ತಪ್ಪಿಹೋದ ಶ್ರಾದ್ಧಗಳನ್ನು ಮುಂದಿನ ಶ್ರಾದ್ಧ ಕಾಲದಲ್ಲಿ ಸಹತಂತ್ರದಿಂದ ಮಾಡತಕ್ಕದ್ದನ್ನುವರು. ಕೆಲವರು ಅತಿಕ್ರಾಂತವಾದ “ಆಬ್ಲಿಕ"ವನ್ನಾದರೂ ಅಮಾವಾಸ್ಕಾದಿ ಕಾಲಗಳಲ್ಲಿ ಅಸಂಭವವಾದರೆ ಮುಂದಿನ ತಿಂಗಳಲ್ಲಿ ಆ ಮೃತತಿಥಿಯಲ್ಲಿ ಮಾಡತಕ್ಕದ್ದನ್ನುವರು. ಆಶೌಚಹೊರತಾಗಿ ವ್ಯಾಧಿ ಮೊದಲಾದ ವಿಘ್ನವುಂಟಾದಲ್ಲಿ ಅಥವಾ ಮರೆತುಹೋದರೆ ಹೀಗೆಯೇ ಮಾಡತಕ್ಕದ್ದು, ಕೆಲವರು ವ್ಯಾಧಿಮೊದಲಾದ ವಿಘ್ನಗಳಲ್ಲಿ ಪುತ್ರಾದಿಗಳಿಂದ ಆ ದಿನದಲ್ಲಿ ಅನ್ನಾದಿಗಳಿಂದ ಆಬ್ಲಿಕವನ್ನು ಮಾಡಿಸತಕ್ಕದ್ದೆಂದು ಹೇಳುವರು. ಪತ್ನಿಯ ರಜೋದೋಷ ವಿಚಾರ ಪತ್ನಿಯು ರಜಸ್ವಲೆಯಾಗಿದ್ದರೂ ದರ್ಶ, ಯುಗಾದಿ, ಮನ್ನಾದಿ, ಅಷ್ಟಕಾ, ಅನ್ನಷ್ಟಕ್ಕಾದಿ ಶ್ರಾದ್ಧಗಳನ್ನು ಪಾಕ ಕರ್ತೃಗಳು ಬೇರೆ ಇದ್ದರೆ ಆಯಾಯ ದಿನಗಳಲ್ಲಿಯೇ ಅನ್ನದಿಂದ ಅಥವಾ ಆಮದಿಂದ ಇಲ್ಲವೆ ಹಿರಣ್ಯದಿಂದಾದರೂ ಮಾಡತಕ್ಕದ್ದು. “ಕಾಲಾದರ್ಶ"ದಲ್ಲಿ “ದರ್ಶಶ್ರಾದ್ಧ"ವನ್ನು ರಜಸ್ಸಿನ ಐದನೇದಿನ ಮಾಡತಕ್ಕದ್ದೆಂಬ ಬೇರೆಪಕ್ಷವನ್ನೂ ಹೇಳಿದೆ. ಅಮಾವಾಸೆಯಲ್ಲಿ ಸಕೃನ್ಮಹಾಲಯವನ್ನು ಮಾಡುವದಿದ್ದಲ್ಲಿ ಆದಿನ ವತ್ನಿಯು ರಜಸ್ವಲೆಯಾದರೂ ಕಾಲಾತಿಕ್ರಮ ಭೀತಿಯಿಂದ ಮುಂದೆಹಾಕದೆ ಆದಿನವೇ ಮಾಡತಕ್ಕದ್ದು. ಆಶ್ವಿನ ಶುಕ್ಲ ಪಂಚಮಿ ವರೆಗೆ ಮಹಾಲಯಕಾಲದ ಅವಧಿಯಿರುವದು. ಅಮಾವಾಸೆನಂತರ ಐದುದಿನಗಳೊಳಗೆ ಸಕ್ಕನ್ಮಹಾಲಯ ಮಾಡುವಾಗಲೂ ಇದೇ ನಿಯಮವು. ಯಾಕೆಂದರೆ ಮುಂದೆ ಕಾಲಾವಧಿ ಮುಗಿಯುತ್ತದೆ. ಕೃಷ್ಣಾಷ್ಟಮ್ಯಾದಿಗಳಲ್ಲಿ ಭಾರ್ಯಾರಜೋದೋಷವುಂಟಾದಲ್ಲಿ ಸಕ್ಕನ್ಮಹಾಲಯವನ್ನು ಮಾಡತಕ್ಕದ್ದಲ್ಲ. ಯಾಕಂದರೆ ಮುಂದೆ ಕಾಲಾವಕಾಶವಿದೆ. ಇತ್ಯಾದಿ ವಿಷಯಗಳನ್ನು ಮಹಾಲಯ ಪ್ರಕರಣದಲ್ಲಿ ಹೇಳಿದೆ. ಪ್ರತ್ಯಾಬ್ರಿಕ ಮತ್ತು ಮಾಸಿಕವನ್ನು ರಜೋದೋಷದಲ್ಲಿಯಾದರೂ ಅದೇ ದಿನ ಮಾಡತಕ್ಕದ್ದೆಂಬ ಒಂದು ಪಕ್ಷವಿದೆ. ಐದನೇದಿನ ಮಾಡತಕ್ಕದ್ದೆಂಬುದಿನ್ನೊಂದು ಪಕ್ಷವೂ ಇದೆ. ಎರಡು ಪಕ್ಷಗಳಿಗೂ ಗ್ರಂಥದಲ್ಲಿ ಆಧಾರ ದೊರಕುತ್ತದೆ. ಶಿಷ್ಟಾಚಾರವೂ ಹಾಗೆಯೇ ಇದ. ಬೇರೆ ಪತ್ನಿಯರಿದ್ದರೆ ಅದೇ ದಿನವೇ ಮಾಡತಕ್ಕದ್ದೆಂಬುದು ಸರ್ವಸಮ್ಮತವಾದದ್ದು. ಅದೇ ದಿನ ಮಾಡುವದಿದ್ದರೆ ಶ್ರಾದ್ಧ ಕಾಲದಲ್ಲಿ ರಜಸ್ವಲೆಯ ದರ್ಶನವು ನಿಷಿದ್ಧವಿರುವದರಿಂದ ಆ ದರ್ಶನವಾಗುವಂತಿರುವ ಮನೆಯಲ್ಲಿ ಶ್ರಾದ್ಧ ಮಾಡಲು ಬರಲಾರದು ಮತ್ತು ಯೋಗ್ಯರಾದ ಪಾಕಕರ್ತೃಗಳು ಸಿಗದಿದ್ದಾಗಲೂ ರಜೋದಿನದಿಂದ ಐದನೇದಿನವೇ ಮಾಡತಕ್ಕದ್ದು. ಇದು ಉತ್ತಮವಾದ ಪಕ್ಷವು, ಪುತ್ರರಹಿತಳಾದ ಪತ್ನಿಯು ಪತಿಶ್ರಾದ್ಧಕ್ಕೆ ರಜಸ್ವಲೆಯಾಗಿ ತೊಂದರೆಯಾದಾಗ ಐದನೇದಿನವೇ ಮಾಡತಕ್ಕದ್ದು; ಹೊರತು ಅನ್ಯರ ಕಡೆಯಿಂದ ಆ ದಿನದಲ್ಲಿ ಮಾಡತಕ್ಕದ್ದಲ್ಲ. ಪತಿಯನ್ನನುಸರಿಸಿ ಅಗ್ನಿಪ್ರವೇಶಮಾಡಿದಾಗ ಪತಿಯನ್ನನುಸರಿಸಿ ಮೃತಿ ಹೊಂದುವಲ್ಲಿ “ಸಹಗಮನ” ಮತ್ತು “ಅನುಗಮನ” ಹೀಗೆ ಎರಡು ವಿಧಗಳಿವೆ. ಬ್ರಾಹ್ಮಣರಿಗೆ ಸಹಗಮನವೇ ಮುಖ್ಯವು. ಕ್ಷತ್ರಿಯಾದಿಗಳಿಗೆ ಸಹಗಮನ ಮತ್ತು ಅನುಗಮನ ಈ ಎರಡನ್ನೂ ಹೇಳಿದೆ. ದಂಪತಿಗಳಿಬ್ಬರಿಗೂ ಒಂದೇ “ಚಿತೆ"ಯಾಗಿದ್ದು ಪರಿಚ್ಛೇದ - ೩ ಉತ್ತರಾರ್ಧ ಕೂಡಲೇ ಮಂತ್ರವತ್ತಾಗಿ ದಹನವಾಗುವದಕ್ಕೆ “ಸಹಗಮನ’ವೆನ್ನುವರು. ಪತಿಗೆ ಮಂತ್ರವತ್ತಾಗಿ ದಹನವಾದ ಮೇಲೆ ಬೇರೆ ಚಿತೆಯಲ್ಲಿ ಅಗ್ನಿಪ್ರವೇಶಮಾಡುವದಕ್ಕೆ “ಅನುಗಮನ"ವನ್ನುವರು. ಈ ಎರಡೂ ವಿಧಿಗಳಲ್ಲಿಯಾದರೂ ತಿಥಿಯು ಒಂದೇ ಆಗಿದ್ದರೆ ಒಂದೇ ದಿನದಲ್ಲಿ ತಂತ್ರದಿಂದ ಪಾಕಾದಿಗಳನ್ನು ಮಾಡಿ ದರ್ಶದಂತೆ ಷಟ್‌ಪಿಂಡ, ಷಡರ್ಥ್ಯ, ಪ್ರತ್ಯೇಕ ಬ್ರಾಹ್ಮಣರು ಹೀಗೆ ಪಿತೃಪಾರ್ವಣ, ಮಾತೃಪಾರ್ವಣ ವಿಶಿಷ್ಟವಾಗಿ ಶ್ರಾದ್ಧವನ್ನು ಮಾಡತಕ್ಕದ್ದು. ವಿಶ್ವೇದೇವರಲ್ಲಿ ಬ್ರಾಹ್ಮಣರು ಭಿನ್ನ ಅಥವಾ ಅಭಿನ್ನ ಹೀಗೆ ವಿಕಲ್ಪವಿದೆ. ತಿಥಿಭೇದವಿದ್ದರೂ ಶ್ರಾದ್ಧದಿನ ಒಂದೇ ಆದರೆ ಒಟ್ಟಾಗಿಯೇ ಮಾಡತಕ್ಕದ್ದು. ತಿಥಿ ಭಿನ್ನವಾಗಿ ಶ್ರಾದ್ದ ದಿನ ಭೇದವಾದರೆ “ವಾರ್ಷಿಕಾದಿ"ಗಳನ್ನು ಪ್ರತ್ಯೇಕವಾಗಿಯೇ ಮಾಡತಕ್ಕದ್ದು, ಕೆಲವರು ಸಹಗಮನದಲ್ಲಿ ತಿಥಿಭೇದವಾದರೂ ಪತಿಯ ಕ್ಷಯಾಹ ಶ್ರಾದ್ಧ ದಿನದಲ್ಲಿಯೇ ಪತ್ನಿಯ ಶ್ರಾದ್ಧವನ್ನು ಮಾಡಬೇಕನ್ನುವರು. ಹೊರತು ಬೇರೆ ದಿನ ಮಾಡತಕ್ಕದ್ದಲ್ಲವೆಂದು ಹೇಳುವರು. ಆದರೆ ಇದು ಅಲ್ಪಕಾಲದ ಅಂತರದಲ್ಲಾದರೆ ಮಾತ್ರ ಎಂದು ತಿಳಿಯತಕ್ಕದ್ದು. ಹೊರತು ಎರಡು -ಮೂರು ದಿನ ಅಂತರವಾದರೆ ಮಾಡತಕ್ಕದ್ದಲ್ಲ. ಶ್ರಾದ್ಧ ಸಂಪಾತ ನಿರ್ಣಯ “ಶ್ರಾದ್ಧ ಸಂಪಾತ” ವೆಂದರೆ ಒಂದೇ ಕಾಲದಲ್ಲಿ ಅನೇಕ ಶ್ರಾದ್ಧ ಪ್ರಾಪ್ತವಾಗುವದು. ತಂದೆ-ತಾಯಿಗಳ ಶ್ರಾದ್ದವು ಒಂದು ದಿನದಲ್ಲಿ ಬಂದರೆ ಪೂರ್ವದಲ್ಲಿ ತಂದೆಯ ಶ್ರಾದ್ಧವಾಗತಕ್ಕದ್ದು. ನಂತರ ಪಾಕಭೇದದಿಂದ ತಾಯಿಯಶ್ರಾದ್ಧ ಮಾಡತಕ್ಕದ್ದು ಎಂದು ಹಿಂದೆಯೇ ಹೇಳಿದೆ. ಗೃಹದಾಹಾದಿಗಳಿಂದ ಅನೇಕ ಸಪಿಂಡರು ಒಂದೇ ದಿನ ಮರಣಹೊಂದಿದಾಗ ಹತ್ತಿರದ ಸಂಬಂಧ ಕ್ರಮದಿಂದ ಪಾಕಭೇದದಿಂದ ಪ್ರತೀಕವಾಗಿ ಮಾಡತಕ್ಕದ್ದು. ಪೃಥಕ್ ಪಾಠದಿಂದ ಬೇರೆ ಬೇರೆ ಶ್ರಾದ್ಧೆಗಳನ್ನು ಮಾಡಲಾಗದಿದ್ದಲ್ಲಿ ತಂತ್ರದಿಂದ ಪಾಕಮಾಡಿ ಪ್ರತ್ಯೇಕ ಶ್ರಾದ್ಧ ಮಾಡತಕ್ಕದ್ದು. ಏಕ ದಿನದಲ್ಲಿ ಮರಣವಾದಾಗ ಮರಣಕ್ರಮದಿಂದ ಅಂದರೆ ಮೊದಲು ಮೃತನಾದವನಿಗೆ ಮೊದಲು, ಈ ಕ್ರಮದಿಂದ ಶ್ರಾದ್ಧವನ್ನು ಮಾಡತಕ್ಕದ್ದು. ಒಂದು ದಿನದಲ್ಲಿ ಒಬ್ಬನೇ ಮೂರು ಶ್ರಾದ್ಧಗಳನ್ನು ಮಾಡಬಾರದು. ಮೂರು ವಾರ್ಷಿಕ ಶ್ರಾದ್ಧಗಳು ಪ್ರಾಪ್ತವಾದಾಗ ಎರಡು ವಾರ್ಷಿಕಗಳನ್ನು ತಾನು ಮಾಡತಕ್ಕದ್ದು. ಮೂರನೇ ಮೊದಲಾದವುಗಳನ್ನು ಅಣ್ಣ- ತಮ್ಮಂದಿರು ಮೊದಲಾದವರ ಕಡೆಯಿಂದ ಮಾಡಿಸುವದು ಅಥವಾ ಬೇರೆ ದಿನಗಳಲ್ಲಿ ಮಾಡುವದು. ತಂದೆ-ತಾಯಿಗಳ ಸಪಿಂಡೀಕರಣ ಸಂಪಾತ ವಿಷಯವನ್ನು ಈ ಮೊದಲೇ ಹೇಳಿದೆ. “ಒಬ್ಬನ ಶ್ರಾದ್ಧ ಮುಗಿದ ನಂತರ ಅದೇದಿನ ಪುನಃ ಆತನ ಶ್ರಾದ್ಧವನ್ನು ಮಾಡಬಾರದು.” ನೈಮಿತ್ತಿಕ ಶ್ರಾದ್ಧವಾದರೆ ಅಡ್ಡಿ ಇಲ್ಲ. ಆಯಾಯ ನಿಮಿತ್ತದ ಪ್ರಾಪ್ತಿಕಾರಣದಿಂದ ಅದು ಆಗತಕ್ಕದ್ದೇ. ಹಾಗೆ ಷಣ್ಣವತಿ ಶ್ರಾದ್ಧಗಳಲ್ಲಿ ಸಮಾನದೇವತಾಕತ್ವವಿದ್ದಲ್ಲಿ ತಂತ್ರದಿಂದ ಶ್ರಾದ್ಧ ಮಾಡತಕ್ಕದ್ದು. ಅಧಿಕದೇವತಾಕಗಳಾದರೆ ಪೃಥಕ್ಕಾಗಿ ಮಾಡತಕ್ಕದ್ದು. ವಾರ್ಷಿಕ, ಮಾಸಿಕ, ಉದಕುಂಭ, ಶ್ರಾದ್ಧಗಳು ನಡೆಯುವಾಗ ನಿತ್ಯಶ್ರಾದ್ಧ, ದರ್ಶಶ್ರಾದ್ಧಗಳು ಪ್ರಾಪ್ತವಾದರೆ ದೇವತಾಭೇದವಿರುವದರಿಂದ ಪೃಥಕ್ಕಾಗಿ ಮಾಡುವದು. ಮಹಾಲಯ, ತೀರ್ಥಶ್ರಾದ್ಧ, ದರ್ಶಾದಿ ಮಣ್ಣ ಶ್ರಾದ್ಧ ಇವುಗಳಲ್ಲಿ ನಿತ್ಯಶ್ರಾದ್ಧದ ಪ್ರಸಂಗ ಸಿದ್ಧಿಯಾಗುವದು. ಅಂದರೆ ಅವುಗಳಲ್ಲಿಯೇ ಅದು ಅಂತರ್ಗತವಾಗಿ ಧರ್ಮಸಿಂಧು ಅದನ್ನು ಮಾಡಿದಂತೆಯೇ ಆಗುವದು. ಮಾಸಿಕಶ್ರಾದ್ಧಗಳಲ್ಲಿ ಉದಕುಂಭಶ್ರಾದ್ಧ ಪ್ರಸಂಗ ಸಿದ್ಧಿಯಾಗುವದು. ಹೀಗೆ ಪ್ರಸಂಗಸಿದ್ಧಿಯ ಸಂದರ್ಭದಲ್ಲಿ ದರ್ಶಾದಿ “ಪ್ರಸಂಗಿ ಶ್ರಾದ್ಧಗಳನ್ನು ಸಂಕಲ್ಪದಲ್ಲಿ ಉಚ್ಚರಿಸಬೇಕು ಅಷ್ಟೇ, ಪ್ರಸಂಗಸಿದ್ಧವಾದ ನಿತ್ಯಾದಿ ಶ್ರಾದ್ಧಗಳನ್ನು ಸಂಕಲ್ಪದಲ್ಲು ಚ್ಚರಿಸಬೇಕಾಗಿಲ್ಲ. “ಪ್ರಸಂಗಸಿದ್ಧಿ"ಯೆಂದರೆ ಲೋಪದ ಇನ್ನೊಂದು ಪರ್ಯಾಯ ನಾಮವೆಂದರೂ ಅಡ್ಡಿ ಇಲ್ಲ. ತಂತ್ರಸಿದ್ಧಿಯಲ್ಲಿ ಎರಡು ವಿಧವುಂಟು. “ದರ್ಶ, ವ್ಯತೀಪಾತ” ಈ ಎರಡು ಶ್ರಾದ್ಧಗಳನ್ನು ತಂತ್ರದಿಂದ ಮಾಡುವಾಗ “ಹಟ್ಟುರುಷಾನುದ್ದಿಶ್ಯ ದರ್ಶ ಶ್ರಾದ್ಧಂ ವ್ಯತೀಪಾತಶ್ರಾದ್ಧಂಬ ತಂತ್ರಣಕರಿಷ್ಯ ಹೀಗೆ ಸಂಕಲ್ಪಿಸಿ ‘ದರ್ಶಪಾತಶ್ರಾದ್ಧ ಯೋ: ದೇವಾರ್ಥ ಕ್ಷಣ: ಕರಣೀಯ:’ ಹೀಗೆ ವಿಶ್ವೇದೇವರ ಸ್ಥಾನದಲ್ಲಿ ನಿಮಂತ್ರಣ ಮಾಡಿ, “ದರ್ಶಪಾತಶ್ರಾದ್ಧಯೋ ಪಿತ್ರಾರ್ಥ ಕ್ಷಣ: ಕರಣೀಯ: ಹೀಗೆ ಎರಡು ವರ್ಗಗಳಂತೆ ಇಬ್ಬರು ಇತ್ಯಾದಿ ಬ್ರಾಹ್ಮಣರನ್ನು ನಿಮಂತ್ರಿಸಿ ಒಂದೇ ಶ್ರಾದ್ಧವನ್ನು ಮಾಡತಕ್ಕದ್ದೆಂದು " ಒಂದು ಪಕ್ಷ"ವು. ಅಥವಾ ಮೊದಲಿನಂತೆ ಸಂಕಲ್ಪಿಸಿ ವಿಶ್ವೇದೇವರ ಬಗ್ಗೆ ಒಬ್ಬನನ್ನೇ ನಿಮಂತ್ರಿಸಿ ಷೋಡಶಮಾಸಿಕಗಳ ತಂತ್ರದಂತೆ “ದರ್ಶಶ್ರಾದ್ಧ ಕ್ಷಣಃ ಕರಣೀಯಃ” ಹೀಗೆ ದರ್ಶಬ್ರಾಹ್ಮಣನನ್ನು ನಿಮಂತ್ರಿಸಿ ನಂತರ “ವ್ಯತೀಪಾತಶ್ರಾದ್ದೇಕ್ಷಣಃ ಕರಣೀಯಃ” ಎಂದು ಬೇರೆ ಬ್ರಾಹ್ಮಣನನ್ನು ನಿಮಂತ್ರಿಸುವದು. ನಾಲ್ಕು ಬ್ರಾಹ್ಮಣ ಮೊದಲಾದವರಿಂದ ಯುಕ್ತವಾದ ಪಾತಶ್ರಾದ್ಧದಲ್ಲಿ ಪಿಂಡವಿಲ್ಲದಿರುವದರಿಂದ ಅದನ್ನು ಷಡರ್ಥ್ಯ ಪಿಂಡಗಳಿರುವ ಶ್ರಾದ್ಧಗಳಲ್ಲಿ ತಂತ್ರದಿಂದ ಮಾಡುವಾಗ ಒಂದೇ ಪಾಕದಿಂದ ಮಾಡತಕ್ಕದ್ದು. ಇದು ಎರಡನೆಯ ಪ್ರಕಾರದ್ದು. ಇದರಂತೆ ಮೂರು, ನಾಲ್ಕು ಇತ್ಯಾದಿ ಶ್ರಾದ್ಧ ಸಂಪಾತದಲ್ಲಿ ತಂತ್ರದಿಂದ ಮಾಡುವದನ್ನು ಊಹಿಸತಕ್ಕದ್ದು. ಈ ಎರಡೂ ಪಕ್ಷಗಳನ್ನು ವಿಮರ್ಶಿಸಿ ಯುಕ್ತವಾದ ಪಕ್ಷವನ್ನು ತಿಳಿದವನು ಹಿಡಿಯತಕ್ಕದ್ದು. “ಮಯೂಖ"ದಲ್ಲಿ ಪಿಂಡಸಹಿತವಾದ ದರ್ಶಶ್ರಾದ್ಧದಿಂದ ಅಪಿಂಡಕಗಳಾದ ವ್ಯತೀಪಾತಾದಿ ಶ್ರಾದ್ಧಗಳಿಗೆ ಏಕದೇವಕತ್ವವಿರುವದರಿಂದ ಪ್ರಸಂಗಸಿದ್ಧಿ (ಅದರಲ್ಲೇ ಅಂತರ್ಗತ) ಯೇ ಹೊರತು ತಂತ್ರಸಿದ್ಧಿಯಲ್ಲ. (ಸಹತಂತ್ರವಾಗಿ ಮಾಡತಕ್ಕದ್ದಿಲ್ಲ) ಎಂದು ಹೇಳಿದೆ. ୧ ವ್ಯತೀಪಾತ-ಸಂಕ್ರಾಂತಿಶ್ರಾದ್ಧ ಮೊದಲಾದವುಗಳನ್ನು ಉದಾಹರಣೆಗಾಗಿ ಹೇಳಬಹುದಾಗಿದೆ. ಇನ್ನು ಅಷ್ಟಕಾಶ್ರಾದ್ಧದಿಂದ ಪಿತೃ-ಮಾತೃಗಳ ವಾರ್ಷಿಕ, ಮಾಸಿಕಾದಿಗಳಿಗೆ “ಪ್ರಸಂಗಸಿದ್ಧಿಯಾಗಬಹುದಲ್ಲ! ಅಂದರೆ ಅದು ಸರಿಯಲ್ಲ. ಯಾಕೆಂದರೆ ಹಾಗಿದ್ದರೆ ಮಹಾಲಯದಿಂದ ವಾರ್ಷಿಕ ಸಿದ್ಧಿಯೂ ಆಗಬೇಕಾದೀತು. ಅದರಲ್ಲಿ ಇಂಥ ಆಪತ್ತಿಯು ಬರುವದು ಮತ್ತು ಬಹುಗ್ರಂಥ ವಿರುದ್ಧವಾಗುವ ಪ್ರಸಂಗವುಂಟಾದೀತು. ದರ್ಶ-ವಾರ್ಷಿಕಾದಿ ಶ್ರಾದ್ಧಗಳಲ್ಲಿ ದೇವತಾಭೇದವಾಗಿ ಶ್ರಾದ್ಧವೂ ಭಿನ್ನವಾಗುವಲ್ಲಿ “ನಿಮಿತ್ತಾನಿಯಶ್ಚಾತ್ರ ಪೂರ್ವಾನುಷ್ಠಾನಕಾರಣಂ” ಅಂದರೆ ನಿಮಿತ್ತಗಳು ಅನಿಯತಗಳಾಗಿದ್ದಾಗ ನಿಯತಗಳಾಗಿದ್ದ ವಾರ್ಷಿಕಾದಿಗಳನ್ನು ಮೊದಲು ಮಾಡುವದು ಎಂಬ ವಾಕ್ಯವಿರುವದರಿಂದ ಮೊದಲು ವಾರ್ಷಿಕ ನಂತರ ದರ್ಶ ಹೀಗೆ ಮಾಡತಕ್ಕದ್ದು. “ಅನಿಯತ ನಿಮಿತ್ತಕ” ಅಂದರೆ ಎಲ್ಲ ಕಾಲದಲ್ಲಿ ಏಕರೂಪವಾಗಿ ಬಾರದೇ ಇದ್ದದ್ದು ಎಂದರ್ಥ. ಅಂದರೆ ವಾರ್ಷಿಕ, ಮಾಸಿಕಾದಿಗಳು ಅನಿಯತನಿಮಿತ್ತಕಗಳು. ಯಾಕೆಂದರೆ ಎಲ್ಲರಿಗೆ ಎಲ್ಲ ಕಾಲದಲ್ಲಿ ಅವು ಏಕರೂಪಗಳಾಗುವದಿಲ್ಲ. ತಂದೆ ತೀರಿದ ನಿಮಿತ್ತದಿಂದ ಅದು ಪ್ರಾಪ್ತವಾಗುವದು. · ಪರಿಚ್ಛೇದ - ೩ ಉತ್ತರಾರ್ಧ ೪೬೭ ತಂದೆಯಿರುವವನಿಗೆ ಆ ನಿಮಿತ್ತವಿಲ್ಲವಷ್ಟೇ. ದರ್ಶವಾದರೆ ಎಲ್ಲರಿಗೂ ಎಲ್ಲ ಕಾಲದಲ್ಲೂ ಸಮಾನವಾದದ್ದು. ಆದುದರಿಂದ ದರ್ಶದಿನದಲ್ಲಿ ವಾರ್ಷಿಕಪ್ರಾಪ್ತಿಯಾದರೆ ವಾರ್ಷಿಕವನ್ನು ಮೊದಲು ಮಾಡಿ ದರ್ಶವನ್ನು ನಂತರ ಮಾಡತಕ್ಕದ್ದು. ಹೀಗೆ ಫಲಿತಾರ್ಥವು ವಾರ್ಷಿಕ, ಮಾಸಿಕಾದಿಗಳ ಸಂಪಾತದಲ್ಲಿ ಮೊದಲು ತಂದೆಯ ಶ್ರಾದ್ಧ ನಂತರ ಸಮೀಪ ಸಂಬಂಧಿಕರ ಶ್ರಾದ್ಧ ಹೀಗೆ ಮಾಡತಕ್ಕದ್ದೆಂದು ಮೊದಲೇ ಹೇಳಿದೆ. ದರ್ಶ, ಮಹಾಲಯಗಳ ಸಂಪಾತವಾದರೆ ಮೊದಲು ಮಹಾಲಯ, ನಂತರ ದರ್ಶ ಹೀಗೆ ಮಾಡುವದು. ದರ್ಶದಿನದಲ್ಲಿ ವಾರ್ಷಿಕ, ಮಹಾಲಯಗಳು ಪ್ರಾಪ್ತವಾದರೆ ಮೊದಲು ವಾರ್ಷಿಕ, ನಂತರ ಮಹಾಲಯ, ಆಮೇಲೆ ದರ್ಶ ಹೀಗೆ ಒಂದೇ ದಿನ ಮೂರನ್ನೂ ಪಾಕಭೇದದಿಂದ ಮಾಡತಕ್ಕದ್ದು. ವಿಸ್ತರವನ್ನು ಮಹಾಲಯ ಪ್ರಕರಣದಲ್ಲಿ ಹೇಳಿದೆ. ಇದರಂತೆ ಕಾಮೃತಂತ್ರದಿಂದ ನಿತ್ಯದ ತಂತ್ರವು ಶ್ರಾದ್ಧದಲ್ಲಿ ಸಿದ್ಧಿಸುವದು. ಸಂಕ್ರಾಂತಿ, ಎರಡು ಅಯನಗಳು, ಎರಡು ವಿಷುವಗಳು, ಯುಗಾದಿ, ಮನ್ನಾದಿ, ಭಾದ್ರಕೃಷ್ಣ ತ್ರಯೋದಶಿ, ಪ್ರೋತ್ರಿಯಾಗಮನ ಪ್ರಯುಕ್ತವಾದ ಶ್ರಾದ್ಧ, ಮಘಾ-ಭರಣಿ, ಮಘಾಯುಕ್ತ ತ್ರಯೋದಶಿ, ವೈಧೃತಿ, ವ್ಯತೀಪಾತ, ಗ್ರಹಣ, ಪುತ್ರೋತ್ಪತ್ತಿನಿಮಿತ್ತಕ, ಅಲಭ್ಯಯೋಗ ನಿಮಿತ್ತಕ ಇತ್ಯಾದಿ ಶ್ರಾದ್ಧಗಳನ್ನು ಮತ್ತು ಪ್ರೌಷ್ಕಪದೀ ಹೊರತಾದ ಎಲ್ಲ ಪೂರ್ಣಿಮಾಶ್ರಾದ್ಧಗಳು ಇವುಗಳನ್ನು ಪಿಂಡರಹಿತವಾಗಿ ಸಾಂಕಿಕ ವಿಧಿಯಿಂದ ಮಾಡತಕ್ಕದ್ದು. ಇವುಗಳಲ್ಲಿ ದರ್ಶದಂತೆ ಷಟ್ಟುರುಷೋದ್ದೇಶವಿದೆ. ಆದ್ದರಿಂದ ಇವು ಒಂದೇಕಾಲದಲ್ಲಿ ಪ್ರಾಪ್ತವಾದರೆ ತಂತ್ರದಿಂದ ಸಿದ್ದಿಸುವದು. “ನಿತ್ಯಶ್ರಾದ್ಧ “ವು ಲೋಪವೇ ಆಗುವದು. ಗ್ರಹಣಶ್ರಾದ್ಧವು ಭಿನ್ನವಾಗಿ ಬಂದಲ್ಲಿ ವೃಥಕ್ಕಾಗಿ ಮಾಡತಕ್ಕದ್ದು, ಗ್ರಹಣಶ್ರಾದ್ಧದಿಂದ ಸಂಕ್ರಾಂತಿ, ದರ್ಶಾದಿ ಶ್ರಾದ್ಧಗಳಿಗೆ ಪ್ರಸಂಗಸಿದ್ಧಿಯಾಗುವದೆಂದು ಕೆಲವರ ಮತವಿದ್ದು ಅದನ್ನು ಪ್ರಥಮ ಪರಿಚ್ಛೇದ"ದಲ್ಲಿ ಹೇಳಿದೆ. ಪುತ್ರೋತ್ಪತ್ತಿ ನಿಮಿತ್ತಕವಾದ ಶ್ರಾದ್ಧವು ನವದೇವತಾತ್ಮಕವಾಗಿರುವದರಿಂದ ಪ್ರತ್ಯೇಕ ಮಾಡತಕ್ಕದ್ದು. ಅದನ್ನು ಹಿರಣ್ಯದಿಂದಲೇ ಮಾಡತಕ್ಕದ್ದು, ಹೊರತು ಆಮದಿಂದಲ್ಲ. ಅನ್ನದಿಂದಲೂ ಅಲ್ಲ. ಹೀಗೆ ಶ್ರಾದ್ದ ಸಂಪಾತ ನಿರ್ಣಯ. ತಿಲತರ್ಪಣ ವಿಚಾರ ಶ್ರಾದ್ಧಾಂಗತರ್ಪಣವನ್ನು ಆಯಾಯ ಶ್ರಾದ್ಧದಲ್ಲಿ ಉದ್ದೇಶಿಸಿದ ಪಿತೃಗಳನ್ನಷ್ಟೇ ತರ್ಪಣ ಮಾಡತಕ್ಕದ್ದು. ಅದಕ್ಕೆ ಕಾಲನಿಯಮ:- ದರ್ಶದಲ್ಲಿ ಮೊದಲು, ಪ್ರತ್ಯಾಬ್ಲಿಕದಲ್ಲಿ ಮಾರನೇ ದಿನ ಮಾಡತಕ್ಕದ್ದು. ಅದರ ನಿಷ್ಕರ್ಷ ಹೀಗೆ - ದರ್ಶಶ್ರಾದ್ಧದಲ್ಲಿ ಶ್ರಾದ್ಧಾಂಗತರ್ಪಣವನ್ನು ಶ್ರಾದ್ಧಕ್ಕಿಂತ ಮೊದಲು ಮಾಡತಕ್ಕದ್ದು. ಬ್ರಾಹ್ಮಣ ನಿಮಂತ್ರಣೆಯ ನಂತರ ಅಥವಾ ಪಾಕಾರಂಭವಾದ ನಂತರ ಬ್ರಹ್ಮಯಜ್ಞ ಮಾಡುವದಿದ್ದಲ್ಲಿ ಆ ಬ್ರಹ್ಮಯಜ್ಞಾಂಗ ನಿತ್ಕತರ್ಪಣದಿಂದಲೇ ದರ್ಶಶ್ರಾದ್ಧಾಂಗ ತಿಲತರ್ಪಣವನ್ನು ಮಾಡಿದಂತೆಯೇ ಆಗುವದು. ಅದಕ್ಕಿಂತ ಮೊದಲು ಅಥವಾ ವೈಶ್ವದೇವಾನಂತರ ಬ್ರಹ್ಮಯಜ್ಞ ಮಾಡುವಲ್ಲಿ ಶ್ರಾದ್ಧಕ್ಕೆ ಸಂಬಂಧಿಸಿರುವ ಷಟ್ಟುರುಷರ ಉದ್ದೇಶದಿಂದ ಶ್ರಾದ್ಧಾಂಗ ತರ್ಪಣವನ್ನು ಮಾಡಿ ಶ್ರಾದ್ಧಾರಂಭ ಮಾಡತಕ್ಕದ್ದು. ಪ್ರತಿ ದಿನ ಮಾಡತಕ್ಕ ಸರ್ವಪಿತೃ ತರ್ಪಣವನ್ನು ಬ್ರಹ್ಮಯಜ್ಞದ ಕಾಲದಲ್ಲೇ ಮಾಡತಕ್ಕದ್ದು. ತೀರ್ಥಶ್ರಾದ್ಧದಲ್ಲಿ ಶ್ರಾದ್ಧಕ್ಕಿಂತ ಮೊದಲು ಸರ್ವಪಿತೃತರ್ಪಣವನ್ನು ಮಾಡತಕ್ಕದ್ದು. ವಾರ್ಷಿಕಶ್ರಾದ್ಧದಲ್ಲಿ ಶ್ರಾದ್ಧ ಸಂಬಂಧಿ ಮೂರು ಪಿತೃಗಳ ಉದ್ದೇಶದಿಂದ ಮಾಡುವದು. ವಾರ್ಷಿಕ ಶ್ರಾದ್ಧದಿನದಲ್ಲಿ ನಿತ್ಯತರ್ಪಣವನ್ನು ತಿಲಗಳಿಂದ ಧರ್ಮಸಿಂಧು ಮಾಡಬಾರದು. ಸಕೃನ್ಮಹಾಲಯದಲ್ಲಿ ಸರ್ವಪಿತೃಗಳ ಉದ್ದೇಶದಿಂದ ತರ್ಪಣವನ್ನು ಮಾರನೇ ದಿನ ಮಾಡತಕ್ಕದ್ದು. ಉಳಿದ ಪಕ್ಷಮಹಾಲಯ ಅಷ್ಟಕಾ, ಅನ್ವಷ್ಟಕಾ, ಪರದು ಶ್ರಾದ್ಧ, ಮಾಘಾವರ್ಷಶ್ರಾದ್ಧ, ಅರ್ಧೋದಯ, ಗಜಚ್ಛಾಯಾ, ಷಷ್ಠಿ-ಭರಣಿ, ಮಘಾ ಈ ಶ್ರಾದ್ಧಗಳಲ್ಲಿ ಮತ್ತು ಹಿರಣ್ಯಶ್ರಾದ್ಧಗಳಲ್ಲಿ ಶ್ರಾದ್ಧ ಮುಗಿದಕೂಡಲೇ ಮಾಡತಕ್ಕದ್ದು. ಶ್ರಾದ್ಧಗಳ ಸಂಪಾತವಾದಾಗ ಪ್ರಸಂಗಸಿದ್ಧಿಯಾದಲ್ಲಿ ಆ ಸಂಬಂಧದಿಂದಲೇ ತರ್ಪಣವು. ತಂತ್ರಪ್ರಾಪ್ತವಾದಲ್ಲಿ ಪೂರ್ವತರ್ಪಣದ ನಂತರ ತರ್ಪಣದ ಶ್ರಾದ್ಧಗಳು ಸಮಸಂಖ್ಯಾಕಗಳಾಗಿದ್ದರೆ ಆದಿಯಲ್ಲಿ ಅಥವಾ ಅಂತ್ಯದಲ್ಲಿ ತರ್ಪಣವು, ವಿಷಮ ಸಂಖ್ಯೆಗಳಾದಲ್ಲಿ ಹೆಚ್ಚಿನ ಶ್ರಾದ್ಧಕ್ಕನುಸರಿಸಿ ಪೂರ್ವವೋ ಅಥವಾ ನಂತರವೋ ಎಂದು ವಿಮರ್ಶಿಸಿ ಮಾಡುವದು. ಸಂಕ್ರಾಂತಿ, ಗ್ರಹಣ, ಮಾತಾಪಿತೃಗಳ ಶ್ರಾದ್ಧ, ದರ್ಶಶ್ರಾದ್ಧ, ವ್ಯತೀಪಾತ, ಪಿತೃವ್ಯಾದಿಗಳ ಶ್ರಾದ್ದ, ಮಹಾಲಯ ಇವುಗಳಲ್ಲಿ ತಿಲತರ್ಪಣಕ್ಕೆ ನಿಷಿದ್ಧದಿನವಾದರೂ ಶ್ರಾದ್ಧಾಂಗತರ್ಪಣವನ್ನು ಮಾಡತಕ್ಕದ್ದೆಂದು ಕೆಲವರು ಹೇಳುವರು. ಇನ್ನು ಕೆಲವರು ಎಲ್ಲ ಶ್ರಾದ್ಧಾಂಗತರ್ಪಣಕ್ಕೆ ಯಾವ ತಿಥ್ಯಾದಿಗಳೂ ನಿಷಿದ್ಧಗಳಲ್ಲವೆನ್ನುವರು. ಶ್ರಾದ್ಧಾಂಗ ತರ್ಪಣ ನಿಷೇಧ ವಿಚಾರ ವೃದ್ಧಿ ಶ್ರಾದ್ಧ, ಸಪಿಂಡೀಕರಣ, ಪ್ರತಶ್ರಾದ್ಧ, ಅನುಮಾಸಿಕ, ಸಂವತ್ಸರಾಂತಶ್ರಾದ್ಧ ಇವುಗಳಲ್ಲಿ ತಿಲತರ್ಪಣ ಮಾಡತಕ್ಕದ್ದಿಲ್ಲ. ತಿಲತರ್ಪಣರೀತಿ:- ಪರದಿನದಲ್ಲಿ ತರ್ಪಣಮಾಡುವಾಗ ಸ್ನಾನತರ್ಪಣಗಳನ್ನು ಮಾಡಿ ನಿತ್ಯಸ್ನಾನ, ಪ್ರಾತಃಸಂಧ್ಯಾ ಇವುಗಳಾದ ನಂತರ ಶ್ರಾದ್ಧಾಂಗ ತರ್ಪಣವನ್ನು ಸಂಬಂಧ, ನಾಮ, ಗೋತ್ರ, ರೂಪ ಇವುಗಳನ್ನು ದ್ವಿತೀಯಾ ವಿಭಂತವಾಗಿ ಹೇಳಿ “ಸ್ವಧಾನಮಸ್ತರ್ಪಯಾಮಿ” ಎಂದು ಋಗ್ವದಿಗಳು ಬಲಹಸ್ತದಿಂದ, ಅನ್ಯರು ಅಂಜಲಿಯಿಂದ ಮೂರು ಮೂರಾವರ್ತಿ ತರ್ಪಣ ಮಾಡತಕ್ಕದ್ದು. ಪ್ರತಿ ಅಂಜಲಿಗೂ ಮಂತ್ರಾವೃತ್ತಿ ಮಾಡುವದು. ಹೀಗೆ ನಿತರ್ಪಣದಲ್ಲಿಯೂ ಕ್ರಮವು ಬ್ರಹ್ಮಯಜ್ಞಾಂಗ ನಿಷ್ಕತರ್ಪಣದಲ್ಲಿ ಕೆಲಕಾಲದಲ್ಲಿ ತಿಲಗಳಿಂದ ತರ್ವಣಮಾಡುವದು ನಿಷಿದ್ಧವಿದೆ. ರವಿ, ಕುಜ, ಶುಕ್ರವಾರ, ಪ್ರತಿಪದಿ, ಷಷ್ಟಿ, ಏಕಾದಶೀ, ಸಪ್ತಮಿ, ತ್ರಯೋದಶಿ, ಭರಣಿ, ಕೃತ್ತಿಕಾ, ಮಘಾ ನಕ್ಷತ್ರ, ರಾತ್ರಿ, ಸಂಧ್ಯ, ಗೃಹ, ಜನ್ಮನಕ್ಷತ್ರ, ಶುಭಕಾರ್ಯದಿನ, ಶುಭಕಾರ್ಯನಡೆಯುವ ಯಾವದೇ ಗೃಹ, ಮನ್ನಾದಿ, ಯುಗಾದಿ, ಗಜಚ್ಛಾಯಾ ಯೋಗ, ಎರಡು ಅಯನಗಳು ಇವುಗಳಲ್ಲಿ ತಿಲತರ್ಪಣ, ಮೃತ್ತಿಕಾಸ್ನಾನ, ಪಿಂಡದಾನ” ಇವುಗಳನ್ನು ಮಾಡಬಾರದು. ಕೆಲವರು ಅಯನದ್ವಯದಲ್ಲಿ ಯುಗಾದಿ, ಮಾದಿಗಳಲ್ಲಿ ತಿಲತರ್ಪಣವು ದೋಷಕರವಲ್ಲವೆನ್ನುವರು. ವಿವಾಹ, ಉಪನಯನ, ಚೌಲ ಇವುಗಳಲ್ಲಿ ಕ್ರಮದಿಂದ ಒಂದು ವರ್ಷ, ಆರು ಮಾಸ, ಮೂರು ಮಾಸಪರ್ಯಂತ, ಉಳಿದ ಸಂಸ್ಕಾರಗಳಲ್ಲಿ ಒಂದು ತಿಂಗಳ ಪರ್ಯಂತ ಅಥವಾ ಹದಿನೈದು ದಿವಸಪರ್ಯಂತ ತಿಲತರ್ಪಣಾದಿಗಳನ್ನೂ, ಮಹಾಲಯ, ಗಯಾ, ಕ್ಷಯಾಹ ಹೊರತು ಉಳಿದ ಶಾಸ್ತ್ರಗಳನ್ನೂ ಮಾಡಬಾರದೆನ್ನುವರು. ಈ ನಿಷಿದ್ಧ ದಿನದಲ್ಲಿ ಅಥವಾ ತಿಲಗಳ ಅಭಾವವಾದಾಗ ತರ್ಪಣ ಪ್ರಸಂಗದಲ್ಲಿ ಬಂಗಾರ ಅಥವಾ ಬೆಳ್ಳಿ ಇಲ್ಲವೆ ದರ್ಭೆಯನ್ನು ಹಸ್ತದಲ್ಲಿಟ್ಟುಕೊಂಡು ನಿತೃತರ್ಪಣವನ್ನು ಮಾಡತಕ್ಕದ್ದು.ಪರಿಚ್ಛೇದ - ೩ ಉತ್ತರಾರ್ಧ ತಿಥ್ಯಾದಿ ನಿಷೇಧಗಳಿಗೆ ಅಪವಾದ ತೀರ್ಥ, ತಿಥಿವಿಶೇಷ, ಗಯಾ, ಪಿತೃಪಕ್ಷ ಇವುಗಳಲ್ಲಿ ನಿಷಿದ್ಧದಿನವಾದರೂ ತಿಲತರ್ಪಣ ಮಾಡಲಡ್ಡಿಯಿಲ್ಲ. “ತಿಥಿ ವಿಶೇಷ"ವೆಂದರೆ ಅಷ್ಟಕಾದಿಗಳು ಎಂದು ಮಯೂಖದಲ್ಲಿ ಹೇಳಿದೆ. ಇಲ್ಲಿ ಕೆಲ ಕಾತೀಯರಿಗೆ ವಾರ್ಷಿಕಾದಿಗಳಲ್ಲಿ ‘ಪರೇಹನಿ’ ಭರಣ್ಯಾದಿಗಳಲ್ಲಿ “ಶ್ರಾದ್ಧಾನಂತರ ಶ್ರಾದ್ಧಾಂಗತರ್ಪಣದ ಆಚಾರವು ಕಂಡುಬರುವದಿಲ್ಲ. ಆದರೆ ಅದಕ್ಕೆ ಮೂಲವನ್ನು ಹುಡುಕಬೇಕಾದದ್ದು; (ನಿರ್ಮೂಲ) ಕ್ಷಯಾಹ ಶ್ರಾದ್ಧ ದಿನದಲ್ಲಿ ನಿತ್ಯತರ್ಪಣ ಮಾಡುವಾಗ ತಿಲವನ್ನು ಪಯೋಗಿಸುವದು ಬಹುಗ್ರಂಥ ವಿರೋಧವಾದದ್ದು. ಪುನಃ ನಾಂದೀಶ್ರಾದ್ಧ ವಿಚಾರ ನಾಂದೀಶ್ರಾದ್ಧ ವಿಷಯವಾಗಿ ಹೇಳಬೇಕಾದದ್ದನ್ನೆಲ್ಲ ಪೂರ್ವಾರ್ಧದಲ್ಲಿ ಹೇಳಿದೆ. ಉಪನಯನಾದಿ ಮಹಾಕಾರ್ಯದಲ್ಲಿ ಮುಂಚಿನ ದಿನ ನಾಂದೀಶ್ರಾದ್ಧ ಮಾಡತಕ್ಕದ್ದು. ಜಾತಕರ್ಮಾದಿ ಅಲ್ಪ ಕಾರ್ಯದಲ್ಲಿ ಆ ದಿನವೇ ಮಾಡತಕ್ಕದ್ದು. ಅದರಲ್ಲಿ ದೇಶಕಾಲಗಳನ್ನುಚ್ಚರಿಸಿ “ಸತ್ಯವನುಸಂಜ್ಞಾ ವಿಶ್ವೇದೇವಾ: ನಾಂದೀಮುಖಾಃ ಮಾತೃಪಿತಾಮಹೀ ಪ್ರಪಿತಾಮಹೋನಾಂದೀಮುಖ್ಯ: ಪಿತೃಪಿತಾಮಹ ಪ್ರಪಿತಾಮಹಾ ನಾಂದೀಮುಖಾಃ ಸಪಕ ಮಾತಾಮಹ ಮಾತು: ಪಿತಾಮಹ ಮಾತು: ಪ್ರಪಿತಾಮಹಾ: ನಾಂದೀಮುಖಾ: ಮತಾನುದ್ದಿಶ್ಯ ಪಾರ್ವಣ ವಿಧಾನೇನ ಸಪಿಂಡಂ ನಾಂದೀಶ್ರಾದ್ಧಂ ಕರಿಷ್ಯ ಹೀಗೆ ಸಂಕಲ್ಪವು. ಅರ್ತ್ಯದ ಸಲುವಾಗಿ ಒಂಭತ್ತೇ ಪಾತ್ರೆಗಳನ್ನಾಸಾದನ ಮಾಡಿ ಅವುಗಳಲ್ಲಿ ಎರಡೆರಡು ದರ್ಭೆಗಳನ್ನಿಟ್ಟು “ಯವೋಸಿಸೋಮವ” ಎಂದು ಹಿಂದೆ ಹೇಳಿದಂತೆ ಯವಗಳನ್ನು ಹಾಕಿ “ಉಶಂತಾ” ಎಂದು ಎರಡೆರಡರಲ್ಲಿ ಆವಾಹನಮಾಡಿ ‘ಆಮುಕವಿಶ್ವೇದೇವಾಃ ಪ್ರಿಯಾಂ ನಾಂದೀಮುಖಾ ಮಾತರಃಪ್ರಿಯಂತಾಂ ನಾಂದೀಮುಖಾಃ ಪಿತಾಮಹಃ ಪ್ರಿಯಂತಾಂ” ಇತ್ಯಾದಿ ಪುರುಷ, ಸ್ತ್ರೀ ಭೇದವಿದ್ದಂತೆ ಹೇಳಿ ಪಾತ್ರಗಳನ್ನು ಮುಂಗಡೆಯಲ್ಲಿಡತಕ್ಕದ್ದು, “ನಾಂದೀಮುಖಾಮಾತರ: ಇದಂವೋ ಅರ್ಥ್ಯಂ” ಇತ್ಯಾದಿ ಯಥಾ ಲಿಂಗವಾಗಿ ಇಬ್ಬರಿಗೆ ಅರ್ತ್ಯಪಾತ್ರವನ್ನು ವಿಭಾಗಿಸಿ ಕೊಡತಕ್ಕದ್ದು. ಎರಡು ಎರಡರಂತೆ ಗಂಧವನ್ನು ಕೊಡುವದು. ಅನ್ನದಾನವನ್ನು ಚತುರ್ಥಿ ವಿಭಂತವಾಗಿ “ಸ್ವಾಹಾಹಂ ನಮಮ"ಎಂದು ವಿಶ್ವೇದೇವರಲ್ಲಿ ಮಾಡಿದಂತೆ ಮಾಡತಕ್ಕದ್ದು. ಪಿಂಡದಾನ ಕಾಲದಲ್ಲಿ ‘ನಾಂದೀಮುಖಾ ಮಾತೃಭ್ಯ: ಸ್ವಾಹಾ ನಾಂದೀಮುಖಾಭ್ಯ: ಪಿತಾಮಹೀಭ್ಯ: ಸ್ವಾಹಾ” ಇತ್ಯಾದಿಯಾಗಿ ಪ್ರತ್ಯೇಕ ಎರಡೆರಡರಂತೆ ಹದಿನೆಂಟು ಪಿಂಡಗಳನ್ನು ಕೊಡತಕ್ಕದ್ದು, “ಅನುಮಂತ್ರಣ’ವು ಕೃತಾಕೃತವು. ಹೀಗೆ ಎಲ್ಲವೂ ವೈತೃಕಗಳಾದರೂ ಸವ್ಯಾದಿ ದೈವಧರ್ಮದಿಂದಲೇ ಮಾಡತಕ್ಕದ್ದು - ಇತ್ಯಾದಿಗಳನ್ನೆಲ್ಲ ಪೂರ್ವಾರ್ಧದಲ್ಲಿ ಹೇಳಿದ್ದನ್ನು ಸ್ಮರಿಸಬಹುದು. ಅಲ್ಲಿ ಹೇಳದ ವಿಶೇಷವನ್ನು ಮಾತ್ರ ಇಲ್ಲಿ ಹೇಳಿದೆ. ವಿಭಕ್ತ ಅವಿಭಕ್ತ ವಿಚಾರ ಜೀವಶ್ಚಿತೃಕನಿರ್ಣಯ ಹಾಗೂ ಶ್ರಾದ್ಧಾಧಿಕಾರನಿರ್ಣಯ ಇವುಗಳಲ್ಲಿ ಹೆಚ್ಚಾಗಿ ಈ ವಿಷಯವನ್ನು ಹೇಳಲಾಗಿದೆ. ವಿಶೇಷವನ್ನು ಮಾತ್ರ ಇಲ್ಲಿ ಹೇಳಲಾಗುತ್ತಿದೆ. ಸ್ವತ್ತುಗಳನ್ನು ವಿಭಾಗಿಸಿಕೊಂಡ ಅಣ್ಣ-ತಮ್ಮಂದಿರಿಗೆ ಎಲ್ಲ ಧರ್ಮಗಳೂ ಪ್ರತ್ಯೇಕವೇ. ಸಪಿಂಡೀಕರಣಾಂತ ಧರ್ಮಸಿಂಧು ತಕಾರ್ಯ ಹಾಗೂ ಷೋಡಶಮಾಸಿಕಗಳನ್ನು ಒಬ್ಬನೇ ಮಾಡುವದೆಂದು ಹಿಂದೆಯೇ ಹೇಳಿದ. ಅವಿಭಕ್ತರಿಗಾದರೂ ಸ್ವತ್ತಿಗೆ ಸಂಬಂಧಿಸಿರದ ಸ್ನಾನ, ಸಂಧ್ಯಾ, ಬ್ರಹ್ಮಯಜ್ಞ ಮಂತ್ರಜಪ, ಉಪವಾಸ, ಪಾರಾಯಣ ಮೊದಲಾದ ನಿತ್ಯ ನೈಮಿತ್ತಿಕ ಕಾಮ್ಯಕರ್ಮಗಳೂ ಪ್ರತ್ಯೇಕಗಳೇ. “ಪಿತೃಪಾಕೋಜೀವಿ, ಭ್ರಾತೃವಾಕೋಜೀವಿ” ಇತ್ಯಾದಿ ಹಿಂದೆ ಹೇಳಿದ ವಿಷಯವು ಕಾತ್ಯಾಯನಾದಿಗಳ ಪರವಾದದ್ದು. ಪಂಚಮಹಾಯಜ್ಞಗಳ ಮಧ್ಯದಲ್ಲಿ ದೇವ, ಭೂತ, ಪಿತೃ, ಮನುಷ್ಯ ಯಜ್ಞಗಳು ಹಿರಿಯವನಿಗೇ ಸೇರಿದ್ದು. ಅಶ್ವಲಾಯನರಿಗೆ ಪಾಕಭೇದವಾದಲ್ಲಿ ವೈಶ್ವದೇವಭೇದವು ವಿಕಲ್ಪವು. ಜೇಷ್ಠನು ವೈಶ್ವದೇವವನ್ನು ಮಾಡಿದ್ದಲ್ಲಿ ಸಿದ್ಧವಾದ ಪಕ್ವಾನ್ನವನ್ನು ಸ್ವಲ್ಪ ತೆಗೆದು ಕನಿಷ್ಠನು ಅಗ್ನಿಯಲ್ಲಿ ಹಾಕಿ ಬ್ರಾಹ್ಮಣನಿಗೆ ಕೊಟ್ಟು ಭೋಜನ ಮಾಡತಕ್ಕದ್ದೆಂದು ಕೆಲವರು ಹೇಳುವರು. ದೇವಪೂಜೆಯನ್ನು ಪ್ರತ್ಯೇಕ ಅಥವಾ ಒತ್ತಟ್ಟಿಗೆ ಮಾಡಬಹುದು. ಪ್ರತಿವಾರ್ಷಿಕ, ದರ್ಶ, ಸಂಕ್ರಾಂತಿ, ಗ್ರಹಣ ಮೊದಲಾದ ಶ್ರಾದ್ಧಗಳೆಲ್ಲ ಜೇಷ್ಠನಿಗೇ ಸೇರಿದ್ದು. ತೀರ್ಥಶ್ರಾದ್ಧಾದಿಗಳು ಅವಿಭಕ್ತರಿಗೆ ಏಕಕಾಲದಲ್ಲಿ ಪ್ರಾಪ್ತವಾದರೆ ಒಬ್ಬನೇ ಮಾಡತಕ್ಕದ್ದು. ಕಾಲಭೇದ ಪ್ರಾಪ್ತವಾದಲ್ಲಿ ಬೇರೆ ಮಾಡತಕ್ಕದ್ದು. ಗಯಾಶ್ರಾದ್ಧವನ್ನೂ ಇದರಂತೆಯೇ ತಿಳಿಯುವದು. ಕಾವ್ಯಗಳಾದ ದಾನಧರ್ಮಾದಿಗಳೂ ದ್ರವ್ಯಸಾಧ್ಯವಾಗುವದರಿಂದ ಭ್ರಾತ್ರಾದಿಗಳ ಅನುಮತಿಯಿಂದ ಅಧಿಕಾರವುಂಟಾಗುವದು. “ಮಘಾತ್ರಯೋದಶೀಶ್ರಾದ್ಧವು ಪ್ರತ್ಯೇಕ ಆಚರಿಸಲ್ಪಡತಕ್ಕದ್ದು. ತೀರ್ಥಶ್ರಾದ್ಧ ಗಂಗಾದಿ ಪುಣ್ಯತೀರ್ಥಗಳಿಗೆ ಹೋದಾಗ ಅರ್ಥ್ಯ, ಆವಾಹನ, ದ್ವಿಜಾಂಗುಷ್ಠ ನಿವೇಶನ, ತೃಪ್ತಿಪ್ರಶ್ನ, ವಿಕಿರ ವಿಸರ್ಜನ, ದಿಗ್ಧಂಧ ಇವುಗಳನ್ನು ಬಿಟ್ಟು ಸಕ್ಕನ್ಮ ಹಾಲಯದಂತೆ ಸರ್ವಪಿತೃಗಣದ ಉದ್ದೇಶದಿಂದ “ಧೂರಿಲೋಚನ” ವಿಶ್ವದೇವ ಸಹಿತವಾಗಿ ತೀರ್ಥಶ್ರಾದ್ಧವನ್ನು ಮಾಡತಕ್ಕದ್ದು. ಅಗೌಕರಣವು ಕೃತಾಕೃತವು. ಅದನ್ನು ಮಾಡುವದಿದ್ದಲ್ಲಿ ತೀರ್ಥಸಮೀಪದಲ್ಲಿ ಶ್ರಾದ್ಧ ಮಾಡುವದಾದರೆ ಪ್ರಾಕೃತಮಂತ್ರಯುತವಾಗಿ ತೀರ್ಥಜಲದಲ್ಲಿ ಮಾಡತಕ್ಕದ್ದು. ಇಲ್ಲವಾದರೆ ಪಾಣಿಯಲ್ಲಿ ಹೋಮಮಾಡುವದು. ಪಿಂಡಗಳನ್ನು ತೀರ್ಥದಲ್ಲಿ ಹಾಕುವದೇ ರ. ಢಿಯಲ್ಲಿದೆ. ತೀರ್ಥವಾಸಿ ಬ್ರಾಹ್ಮಣರು ಗುಣಹೀನರಾದರೂ ಅವರೇ ಮುಖ್ಯರು. ಅವರಿಲ್ಲದಿದ್ದರೆ ಬೇರೆಯವರಾದರೂ ಆಗಬಹುದು. ತೀರ್ಥಭೂಮಿಯಲ್ಲಿ ಅನ್ನಾದಿ ಶ್ರಾದ್ಧವಸ್ತುಗಳನ್ನು ನಾಯಿ, ಕಾಗ ಮೊದಲಾದವುಗಳು ನೋಡಿದರೂ ದೋಷವಿರುವದಿಲ್ಲ. ತೀರ್ಥಶ್ರಾದ್ಧಾಂಗತರ್ಪಣವನ್ನು ದರ್ಶದಂತ ಮೊದಲೇ ಮಾಡತಕ್ಕದ್ದು. ದೇಶಕಾಲಗಳನ್ನುಚ್ಚರಿಸಿ ಎಲ್ಲ ಪಿತೃಗಳನ್ನುದ್ದೇಶಿಸಿ “ಏತೇಷಾಂ ಅಮುಕತೀರ್ಥ ಪ್ರಾಪ್ತಿ ನಿಮಿತ್ತಕಂ ತೀರ್ಥಶ್ರಾದ್ಧಂ ಸಪಿಂಡ ಸದೈವಂ ಸದ್ಯ.: ಕರಿಷ್ಯ ಹೀಗೆ ಸಂಕಲ್ಪವು. ಧರಿಲೋಚನ ಇತ್ಯಾದಿಗಳೆಲ್ಲ ಸಕ್ಷ ಹಾಲಯದಂತೆಯೇ. ತೀರ್ಥಯಾತ್ರೆಯಲ್ಲಿ ಸಾಗ್ನಿಕ ಹಾಗೂ ಸಪಕನಾದವನಿಗೇ ಅಧಿಕಾರವು. ಸ್ತ್ರೀಯರಿಗೆ ವಿಶೇಷಸ್ನಾನ, ದಾನ, ತೀರ್ಥಯಾತ್ರಾ, ನಾಮಸ್ಮರಣ ಇತ್ಯಾದಿಗಳಲ್ಲಿ ಪುತ್ರಾದಿಗ: ಅನುಮತಿಯಿಂದಲೇ ಅಧಿಕಾರಪ್ರಾಪ್ತಿ, ಪತಿಸಹಿತಳಾದವಳು ಪತಿಯಿಂದ ಕೂಡಿಯೇ ಯಾತ್ರಾ ಗಳನ್ನು ಮಾಡತಕ್ಕದ್ದು. ತೀರ್ಥಯಾತ್ರಾ ವಿಧಿ ತೀರ್ಥಯಾತ್ರೆಯನ್ನು ಮಾಡಲಿಚ್ಚಿಸಿದವನು-ಮೊದಲು ಮನೆಯಲ್ಲಿ ಉಪವಾಸಮಾಡಿ ಪರಿಚ್ಛೇದ - ೩ ತ್ತರಾರ್ಧ ೪೭೧ ಪಾರಣದಿನದಲ್ಲಿ ವೃದ್ಧಿ ಶ್ರಾದ್ಧ ಕ್ರಮದಿಂದ ಧೃತದಿಂದ ಶ್ರಾದ್ಧವನ್ನು ಮಾಡತಕ್ಕದ್ದು. ಷಡ್ಡೆವತ ಅಥವಾ ನವದೈವತ ಇಲ್ಲವೆ ದ್ವಾದಶದೈವತವಾಗಿ ಭೂರಿಘ್ರತಯುಕ್ತವಾದ ಅನ್ನದಿಂದ ಶ್ರಾದ್ಧವನ್ನು ಮಾಡತಕ್ಕದ್ದು. ನಿವೇದನಕಾಲದಲ್ಲಿ “ಇದಂಘತಂ ಸಾನ್ನಂ ದತ್ತಂ ದಾಸ್ಯಮಾನಂಚ ಇತ್ಯಾದಿ ಹೇಳತಕ್ಕದ್ದು. (ಯಾತ್ರೆಯನ್ನು ಮುಗಿಸಿ ಮನೆಗೆ ಬಂದಮೇಲೆಯೂ ಈ ಶ್ರಾದ್ಧವನ್ನು ಮಾಡತಕ್ಕದ್ದೆಂದು “ತ್ರಿಸ್ಥಲೀಸತು” ಗ್ರಂಥದಲ್ಲಿ ಹೇಳಿದೆ) ಗಣಪತಿ, ಬ್ರಾಹ್ಮಣ, ಸಾಧು ಇವರನ್ನು ಯಥಾಶಕ್ತಿ ಪೂಜಿಸಿ ಯಾತ್ರಾಸಂಕಲ್ಪ ಮಾಡಿ ಶ್ರಾದ್ಧದಲ್ಲಿ ಹೆಚ್ಚಾಗಿ ಉಳಿದ ತುಪ್ಪವನ್ನು ತೆಗೆದುಕೊಂಡು ಒಂದು ಹರದಾರಿಯೊಳಗಿರುವ ಬೇರೆ ಗ್ರಾಮವನ್ನು ಸೇರಿ ಇಲ್ಲಿ ಶ್ರಾದ್ದ ಶೇಷಘ್ನತದೊಡನೆ ಬೇರೆ ಅನ್ನ ಮಾಡಿ ಪಾರಣಮಾಡತಕ್ಕದ್ದೆಂದು ಹೇಳುವರು. “ಶ್ರೀ ಪರಮೇಶ್ವರ ಪ್ರೀತಿಕಾಮ: ಪಿತೃಮುಕ್ತಿಕಾಮೋವಾ ಅಹಂ ಅಮುಕಪ್ರಾಯಶ್ಚಿತಾರ್ಥಂ ವಾ ಅಮುಕ ತೀರ್ಥಯಾತ್ರಾಂ ಕರಿಷ್ಯ” ಹೀಗೆ ಯಾತ್ರಾಸಂಕಲ್ಪವನ್ನು ಮಾಡತಕ್ಕದ್ದು. • ಉಪವಾಸಕ್ಕಿಂತ ಮೊದಲು “ಮುಂಡನಕ್ಷೌರ ಮಾಡತಕ್ಕದ್ದೆಂದು ಕೆಲವರನ್ನುವರು. ಇನ್ನೂ ಕೆಲವರು ಪ್ರಾಯಶ್ಚಿತ್ತ ಸಲುವಾಗಿ ಮಾಡುವ ತೀರ್ಥಯಾತ್ರೆಯಲ್ಲಿ ಮಾತ್ರ ಮುಂಡನಕ್ಷೌರವನ್ನು ಹೇಳುವರು. ಇದರಂತೆ ಗಯೆಗೆ ಹೋಗುವ ಯಾತ್ರೆಯಲ್ಲಾದರೂ ಮುಂಡನವನ್ನು ವಿಕಲ್ಪದಿಂದ ಹೇಳಿದೆ. ತೀರ್ಥಯಾತ್ರೆ ಇಲ್ಲವೆ ಗಯಾಯಾತ್ರೆಗೆ ಹೋಗಬೇಕೆಂದಿರುವವನು ಮನೆಯಲ್ಲಿ ಮೃತಭೂಯಿಷ್ಟವಾದ ಶ್ರಾದ್ಧವನ್ನು ಮಾಡಿ “ಕಾರ್ಪಟೀವೇಷ” (ತೀರ್ಥಯಾತ್ರೆಗೆ ಹೋಗುವ ವೇಷವಿಶೇಷ) ದಿಂದ ಗ್ರಾಮವನ್ನು ಪ್ರದಕ್ಷಿಣಮಾಡಿಕೊಂಡು (ಬಲಕ್ಕೆ ಮಾಡಿಕೊಂಡು) ಪ್ರತಿದಿನವೂ ಬಿಡದೆ ನಡೆಯತಕ್ಕದ್ದು. ಪ್ರತಿಗ್ರಹ ಮಾಡಬಾರದು. ರಾಜನಾದವನು ತೀರ್ಥಯಾತ್ರೆ ಮಾಡುವವರಿಗೆ ಧನಸಹಾಯಮಾಡಿದರೆ ಅಂದರೆ ಖರ್ಚಿಗೆ ಕೊಟ್ಟು ವಾಹನಾದಿಗಳ ವ್ಯವಸ್ಥೆಮಾಡಿದರೆ ನಾಲ್ಕು ಪಟ್ಟು ತೀರ್ಥಯಾತ್ರೆಯ ಫಲವನ್ನು ಹೊಂದುವನು. ಯಾತ್ರಾಮಧ್ಯದಲ್ಲಿ ಆಶೌಚ ಪ್ರಾಪ್ತಿಯಾದರೆ ಇಲ್ಲವೆ ಪತ್ನಿಯು ರಜಸ್ವಲೆಯಾದರೆ ಶುದ್ದಿಪರ್ಯಂತವಾಗಿ ಅಲ್ಲಿಯೇ ಉಳಿದು ನಂತರ ಹೋಗತಕ್ಕದ್ದು. ಉಳಿಯುವ ಸ್ಥಾನವು ಅಪಾಯಕಾರಿಯೆಂದು ಕಂಡುಬಂದರೆ ಮುಂದೆ ಹೋದರೂ ದೋಷವಿಲ್ಲ. ಸಂಕಲ್ಪಿಸಿಕೊಂಡ ಯಾತ್ರಾಮಧ್ಯದಲ್ಲಿ ಬೇರೆ ತೀರ್ಥವು ಪ್ರಾಪ್ತವಾದರೆ ಆ ನಿಮಿತ್ತವಾಗಿ ಶ್ರಾದ್ಧಾದಿಗಳನ್ನು ಮಾಡಲೇಬೇಕು. ಬೇರೆ ವ್ಯಾಪಾರೋದ್ಯಮಾದಿಗಳ ಸಲುವಾಗಿ ಹೋದಾಗ ತೀರ್ಥವು ಪ್ರಾಪ್ತವಾದರೆ ಆ ನಿಮಿತ್ತವಾಗಿ ಶ್ರಾದ್ಧಾದಿಗಳನ್ನು ಮಾಡಲೇಬೇಕು. ಬೇರೆ ವ್ಯಾಪಾರೋದ್ಯಮಾದಿಗಳ ಸಲುವಾಗಿ ಹೋದಾಗ ತೀರ್ಥವು ಪ್ರಾಪ್ತವಾದರೂ ಆ ನಿಮಿತ್ತವಾಗಿ ಮುಂಡನ, ಉಪವಾಸಾದಿಗಳನ್ನು ಮಾಡಬೇಕು. ಅನ್ಯ ಕಾರ್ಯದ ಸಲುವಾಗಿ ಹೋದಾಗ ಪ್ರಸಂಗಾನುಸಾರ ತೀರ್ಥಯಾತ್ರೆಯು ಘಟಿಸಿದರೆ “ಅರ್ಧಫಲ"ವು, ವ್ಯಾಪಾರದ ಸಲುವಾಗಿಯೇ ತೀರ್ಥಯಾತ್ರೆಯಾದಲ್ಲಿ ಕಾಲುಪಾಲು ಫಲವು ಮಾರ್ಗದಲ್ಲಿ ಎರಡು ಭೋಜನ ಮಾಡುತ್ತ, ಕಾಲ್ಕೆಟ್ಟುಗಳನ್ನು ಧರಿಸಿ ನಡೆಯುತ್ತ ಹೋದರೆ ಮುಕ್ಕಾಲು ಫಲವು. ವಾಹನವನ್ನೇರಿ ಹೋದರೆ ಅರ್ಧಫಲವು. ಬೇರೆ ಪ್ರಸಂಗದಿಂದ ತೀರ್ಥಸ್ನಾನಮಾಡಿದರೆ “ಸ್ನಾನ” ದ ಫಲವೇ ಹೊರತು ಯಾತ್ರೆಯ ಫಲ ಸಿಗುವದಿಲ್ಲ. ಮಾರ್ಗದಲ್ಲಿ ನದಿಯನ್ನು ದಾಟಿದ ಮೇಲೆ ಸ್ನಾನವಾಗತಕ್ಕದ್ದು. ಅದು “ಸರಸ್ವತಿ” ನದಿಯಾದರೆ ದಾಟುವ ಮೊದಲೇ ಸ್ನಾನಮಾಡಬೇಕು. ೪೭೨ ಧರ್ಮಸಿಂಧು ತೀರ್ಥದ ಹತ್ತಿರ ಹೋದಾಗ ವಾಹನಾದಿಗಳನ್ನು ಬಿಟ್ಟು ಪಾದಚಾರಿಯಾಗಿ ಹೋಗಬೇಕು ಮತ್ತು “ಉರುಳುಸೇವೆ"ಯನ್ನು ಮಾಡಬೇಕು. “ಕಾರ್ಪಟ ವೇಷದಿಂದ ಇರತಕ್ಕದ್ದು. ತೀರ್ಥಸ್ನಾನದ ಮೊದಲನೇ ದಿನ ಅಥವಾ ಆ ದಿನ ಉಪವಾಸವಿರತಕ್ಕದ್ದು. ತೀರ್ಥದಲ್ಲಿ ಮೊದಲು “ಮುಸಲಸ್ನಾನ” (ವಿಧಿರಹಿತ ಲೌಕಿಕಸ್ನಾನ) ಮಾಡಿ, ಉತ್ತರ ಅಥವಾ ಪೂರ್ವಾಭಿಮುಖನಾಗಿ ಕೇಶ, ಮೀಸೆ, ಗಡ್ಡ, ರೋಮ, ಉಗುರು ಇವುಗಳನ್ನೆಲ್ಲ ನೀರಿನಿಂದ ನೆನೆಯಿಸಿ ಒದ್ದೆಯಾಗಿರುವಂತೆಯೇ ಕ್ಷೌರಮಾಡಿಕೊಳ್ಳತಕ್ಕದ್ದು. ನಂತರ ಮಂತ್ರಸಹಿತನಾಗಿ ಸ್ನಾನಮಾಡತಕ್ಕದ್ದು. ಓಂಕಾರದಿಂದ ಜಲವನ್ನು ಕದಡಿ ತೀರ್ಥವನ್ನಾವಾಹಿಸಿ “ಓಂ ನಮೋ ದೇವದೇವಾಯ ಶಿತಿಕಂಠಾಯ ದಂಡಿನೇರುದ್ರಾಯ ಚಾಪಹಾಯ ಚಣೇ ವೇಧಸೇನಮ: ಸರಸ್ವತೀ ಚ ಸಾವಿ ವೇದಮಾತಾ ಗರೀಯಸೀ ಸಂನಿಧಾತ್ರಿ ಭವತ್ಪತ್ರ ತೀರ್ಥ ಪಾಪಪ್ರಣಾಶಿನೀ” ಹೀಗೆ ಮಂತ್ರೋಚ್ಚಾರಣ ಮಾಡಿ ಸ್ನಾನಮಾಡತಕ್ಕದ್ದು. ಉಳಿದ ಸ್ನಾನವಿಧಿಯು ನಿತ್ಯದಂತೆಯೇ. ನಂತರ ತರ್ಪಣಾದಿಯಾಗಿ ತೀರ್ಥಶ್ರಾದ್ಧ ಮಾಡುವದು. ಶ್ರಾದ್ಧದ ದಿನ ಅಲ್ಲಿಂದ ಹೊರಡಬಾರದು. ಎಲ್ಲ ಮಹಾತೀರ್ಥಗಳಲ್ಲಿ ಕುರುಕ್ಷೇತ್ರ, ವಿಶಾಲಾ, ವಿರಜ, ಗಯಾ ಇವುಗಳನ್ನು ಬಿಟ್ಟು ಮುಂಡನ ಮತ್ತು ಉಪವಾಸ ಇವು ಆವಶ್ಯಕವು. “ಎಲ್ಲ ತೀರ್ಥ” ಅಂದರೆ ಪ್ರಸಿದ್ಧ ಮಹಾತೀರ್ಥ ಎಂದರ್ಥ. ಹತ್ತು ತಿಂಗಳ ನಂತರ ಪುನಃ ಅದೇ ತೀರ್ಥಕ್ಕೆ ಹೋದರೆ ಮುಂಡನಾದಿ ತೀರ್ಥ ವಿಧಿಯು ಆವಶ್ಯಕವು. ಪ್ರಯಾಗದಲ್ಲಾದರೆ- ಮೂರುಯೋಜನ ದೂರದಿಂದ ಪುನಃ ಬಂದರೆ ತೀರ್ಥವಿಧಿಯು ಅಗತ್ಯವು. ಹತ್ತು ತಿಂಗಳ ಅವಧಿ ನಿಯಮವಿಲ್ಲ. ಪ್ರಯಾಗದ ಪ್ರಥಮ ಯಾತ್ರೆಯಲ್ಲಿ ಜೀವತೃಕ, ಗರ್ಭಿಣೀಪತಿ, ಚೌಲವಾಗಿರುವ ಬಾಲಕರು, ಪತಿವತಿಯರಾದ ಸ್ತ್ರೀಯರು ಇವರಿಗಾದರೂ “ವಚನ” ಹೇಳಿದೆ. ಕೆಲವರು ಪತಿವತಿಯರಾದ ಸ್ತ್ರೀಯರ ಕೇಶಗಳನ್ನೆಲ್ಲ ಕೂಡಿಸಿ ಎರಡಂಗುಲ ತುದಿಯನ್ನು ಕತ್ತರಿಸತಕ್ಕದ್ದು ಎಂದು ಹೇಳುವರು. ಅಲ್ಲಿ ವೇಣಿದಾನಮಾಡುವ ವಿಧಿಯನ್ನು ಎರಡನೆಯ ಪರಿಚ್ಛೇದದಲ್ಲಿ ಹೇಳಿದೆ. ಯತಿಗಳು ತೀರ್ಥದಲ್ಲಿಯಾದರೂ ಋತುಸಂಧಿಗಳಲ್ಲಿಯೇ ಕಂಕುಳ, ಗುಹ್ಯ ಇವುಗಳನ್ನು ಬಿಟ್ಟು ವಪನಮಾಡಿಕೊಳ್ಳಬೇಕು. ತೀರ್ಥಕ್ಕೆ ಹೋದಕೂಡಲೇ ವಿಲಂಬವಾಗದಂತೆ ಸ್ನಾನ, ಪಿತೃತರ್ಪಣ, ಶ್ರಾದ್ಧಾದಿಗಳನ್ನು ಮಾಡುವದು. ಅಲ್ಲಿ ಪರ್ವಾದಿ ಕಾಲಗಳನ್ನು ನಿರೀಕ್ಷಿಸತಕ್ಕದಿಲ್ಲ. ಆಕಸ್ಮಿಕ ಮಾರ್ಗನ ಮಹತೀರ್ಥಗಳು ಪ್ರಾಪ್ತವಾದಾಗ ಎರಡು ಮೂರು ದಿನ ಉಳಿಯಲು ಶಕ್ಯವಿಲ್ಲದಿದ್ದರೆ ಕೂಡಲೇ ಊಟಮಾಡಿದ್ದರೂ, ರಾತ್ರಿಯಾಗಿದ್ದರೂ, ಸೂತಕ ಪ್ರಾಪ್ತಿಯಿದ್ದರೂ ಗ್ರಹಣ ಪರ್ವಕಾಲದಂತ ಸ್ನಾನವನ್ನೂ ಹಿರಣ್ಯಾದಿಗಳಿಂದ ಶ್ರಾದ್ಧವನ್ನೂ ಮಾಡತಕ್ಕದ್ದು. ಮಲಮಾಸವಾಗಿದ್ದರೂ ಸರಿಯೇ. ಪರಾರ್ಥಸ್ನಾನ ವಿಚಾರ ತನ್ನ ತಂದೆ, ತಾಯಿ, ಪತ್ನಿ, ಭ್ರಾತೃ, ಗುರು ಇವರಿಗೆ ತೀರ್ಥಸ್ನಾನ ಮಾಡಿಸಿದವನಿಗೆ ಆ ಪುಣ್ಯದಲ್ಲಿ ಒಂದೆಂಟಾಂಶವು ಲಭಿಸುವದು. ಬೇರೆ ಯಾರನ್ನುದ್ದೇಶಿಸಿಯಾದರೂ ಆತನ ಪ್ರತಿಮೆಯನ್ನು ದರ್ಭೆಯಿಂದ ಮಾಡಿ ಮಹಾತೀರ್ಥದಲ್ಲಿ ಮುಳುಗಿಸಿದವನಿಗೂ ಅದರಂತೆಯೇ ಪರಿಚ್ಛೇದ ೩ ಉತ್ತರಾರ್ಧ જી ಫಲವು, ತೀರ್ಥಶ್ರಾದ್ಧವನ್ನು ಪಕ್ವಾನ್ನದಿಂದ ಮಾಡಿದರೆ ಆ ಅನ್ನದಿಂದಲೇ ಪಿಂಡಗಳನ್ನು ಕೊಡತಕ್ಕದ್ದು. ಹಿರಣಾದಿಗಳಿಂದ ಮಾಡಿದ್ದರೆ ಹಿಟ್ಟು, ಗಂಜಿ, ಪಾಯಸ, ಹಿಂಡಿ ಅಥವಾ ಬೆಲ್ಲ ಇತ್ಯಾದಿಗಳಿಂದ ಪಿಂಡಮಾಡತಕ್ಕದ್ದು. ಪಿಂಡಗಳನ್ನು ತೀರ್ಥದಲ್ಲಿಯೇ ಚಲ್ಲತಕ್ಕದ್ದು. ಅದರಲ್ಲಿ ವಿಚಾರಿಸುವಂತಿಲ್ಲ. ಅಪುತ್ರಳಾದ ವಿಧವೆಗೆ ತೀರ್ಥ ಶ್ರಾದ್ಧ ಮಾಡಲು ಅಧಿಕಾರವಿದೆ. “ಪುತ್ರಸಹಿತಳಾದವಳು ಯಾವಾಗಲೂ ಪತಿಯ ಶ್ರಾದ್ಧವನ್ನು ಮಾಡಬಾರದು” ಎಂಬ ವಚನವಿರುವದರಿಂದ ಅವಳಿಗೆ ಸ್ವತಃ ಶ್ರಾದ್ಧಾಧಿಕಾರವಿಲ್ಲ. ಉಪನಯನವಾಗದವನೂ, ಯತಿಯೂ ಇದನ್ನು ಮಾಡತಕ್ಕದ್ದಲ್ಲ. ಸಂನ್ಯಾಸಿಯು ಗಯೆಗೆ ಹೋದರೆ ತನ್ನ ದಂಡವನ್ನು ತೋರಿಸಬೇಕೇ ಹೊರತು ಪಿಂಡಕೊಡತಕ್ಕದ್ದಿಲ್ಲ. ವಿಷ್ಣುಪಾದದಲ್ಲಿ ದಂಡಸ್ಪರ್ಶಮಾಡಿದರೆ ಪಿತೃಸಹಿತವಾಗಿ ಮುಕ್ತನಾಗುತ್ತಾನೆ. ಇದರಂತೆ ಭಾವಿ, ವಟವೃಕ್ಷ ಮೊದಲಾದವುಗಳಲ್ಲಿಯೂ ಸಹ. ತೀರ್ಥಸ್ನಾನದಲ್ಲಿ ಕ್ಷೀಣವೃತ್ತಿಯ ಕಾರಣದಿಂದ ಪ್ರತಿಗ್ರಹ ಮಾಡಬಾರದು. ಪ್ರತಿಗ್ರಹ ಮಾಡಿದರೂ ಅದರ ಹತ್ತನೇ ಒಂದಂಶವನ್ನು ದಾನಮಾಡಬೇಕು. ಅದರಿಂದ ಶುದ್ಧನಾಗುವನು. ಇಲ್ಲಿಗೆ ಸಾಮಾನ್ಯ ಶ್ರಾದ್ಧಪ್ರಕರಣವು ಮುಗಿಯಿತು. ಆಶೌಚ ಪ್ರಕರಣ ||ಶ್ರೀ ವಿಟ್ಠಲಂ ರುಕ್ಕಿಣೀಂ ಚ ಪಿತರೌ ದೀನವತ್ಸಗೆ ಧ್ಯಾತ್ವಪ್ಪಸಿದ್ಧ ಯೇನಾವಾಶೌಚು ಶ್ರೀ ವಿಟ್ಠಲ, ರುಕ್ಷ್ಮಿಣಿಯರನ್ನೂ, ದೀನದಲಿತರಲ್ಲಿ ದಯಾಪರರಾದ ತಾಯಿ-ತಂದೆಗಳನ್ನೂ ಇಷ್ಟಸಿದ್ಧಿಗಾಗಿ ಧ್ಯಾನಿಸಿ ಈ “ಆಶೌಚನಿರ್ಣಯ"ವನ್ನು ಹೇಳುವನು. ಗರ್ಭನಾಶ-ಜನನಾದಿಆಶೌಚ ಗರ್ಭಿಣಿಯು ನಾಲ್ಕು ತಿಂಗಳೊಳಗೆ ಗರ್ಭವನ್ನು ಕಳಕೊಂಡರೆ ಅದಕ್ಕೆ “ಸ್ರಾವವನ್ನುವರು. ಐದು, ಆರು ತಿಂಗಳಲ್ಲಿ ನಷ್ಟವಾದರೆ ಅದಕ್ಕೆ “ಪಾತ"ವನ್ನುವರು, ಏಳನೇ ತಿಂಗಳಿಂದ ನಂತರ ಜನನವಾದರೆ “ಪ್ರಸೂತಿ ಎಂದಾಗುವದು. ಈ ವಿಷಯದಲ್ಲಿ ಆಶೌಚವು ಹೇಳಲ್ಪಡುವದು. ಗರ್ಭಸ್ರಾವವು ಮೂರು ತಿಂಗಳೊಳಗಾದರೆ ತಾಯಿಗೆ ಮೂರು ರಾತ್ರಿ ಆಶೌಚವು. ನಾಲ್ಕನೇ ತಿಂಗಳಲ್ಲಾದರೆ ನಾಲ್ಕು ರಾತ್ರಿಗಳು. ಇದು ಬರೇ ಅಸ್ಪೃಶ್ಯತ್ವರೂಪವಾದ ಆಶೌಚವು. ತಂದೆ ಮೊದಲಾದ ಸಪಿಂಡರಿಗೆ ಸ್ರಾವದಲ್ಲಿ ಸ್ನಾನಮಾತ್ರದಿಂದ ಶುದ್ಧಿಯು, ಐದನೇ, ಆರನೇ ತಿಂಗಳಲ್ಲಿ ಗರ್ಭಪಾತವಾದರೆ ಗರ್ಭಿಣಿಗೆ ಆ ಮಾಸಗಳ ಸಂಖ್ಯೆಯಂತೆ ಅಂದರೆ ಐದನೇ ತಿಂಗಳಲ್ಲಾದರೆ ಐದು, ಆರನೇ ತಿಂಗಳಲ್ಲಿ ಆರು ದಿನಗಳು, ಇವಾದರೂ ಅಸ್ಪೃಶ್ಯತಾರೂಪವಾದ ಆಶೌಚವೇ. ಪಿತ್ರಾದಿ ಸಪಿಂಡರಿಗೆ ತ್ರಿದಿನ ಜನನಾಶೌಚವು ಮೃತಾಶೌಚವೆಂದು ಹಿಡಿಯತಕ್ಕದ್ದಿಲ್ಲ. ಈ ಸ್ರಾವ ಮತ್ತು ವಾತ ಆಶೌಚವು ಸಾಮಾನ್ಯ ಎಲ್ಲ ವರ್ಣದವರಿಗೂ ಸಮಾನವಾದದ್ದು. ಗರ್ಭಿಣಿಯು ಏಳನೇ ತಿಂಗಳಿಂದಾರಂಭಿಸಿ ಹಡೆದಲ್ಲಿ ತಾಯಿ ಮತ್ತು ಪಿತ್ರಾದಿ ಸಪಿಂಡರಿಗೆ ಸಂಪೂರ್ಣ ಜನನಾಶೌಚವು, ಬ್ರಾಹ್ಮಣನಿಗೆ ಹತ್ತು ದಿನಗಳು. ಕ್ಷತ್ರಿಯರಿಗೆ ಹನ್ನೆರಡು, ವೈಶ್ಯರಿಗೆ ಹದಿನೈದು, ಶೂದ್ರನಿಗೆ ಒಂದು ತಿಂಗಳು. ಹೀಗೆ ಸ್ಮೃತ್ಯುಕ್ತ ಆಶೌಚ ದಿನಗಳು. ಸಂಕರ (ಮಿಶ್ರ) ಜಾತಿಯವರಿಗೂ ಶೂದ್ರರಂತೆ ಆಶೌಚವು. ೪೭೪ ಧರ್ಮಸಿಂಧು ವಿಜ್ಞಾನೇಶ್ವರಮತದಂತೆ ಸಂಕರಜಾತಿಯವರಿಗೆ ಆಶೌಚವೆಂಬುದೇ ಇಲ್ಲ. ಆದರೆ ಸ್ನಾನಮಾತ್ರ ಉಂಟು ಅಥವಾ ಎಲ್ಲ ವರ್ಣದವರಿಗೂ ಹತ್ತು ದಿನ ಆಶೌಚವು(ಇದು ಸಾರ್ವತ್ರಿಕ ಆಚಾರ), ಜನನಾಶೌಚದಲ್ಲಿ ಬಾಣಂತಿಗೆ ಹತ್ತು ದಿನ ಅಸ್ಪೃಶ್ಯತ್ವವು. ಶೌತ ಸ್ಮಾರ್ತಾದಿ ಯಾವ ಕರ್ಮಗಳಿಗೂ ಅರ್ಹಳಾಗುವಂತಿಲ್ಲ. ಆದರೆ ಅಸ್ಪೃಶ್ಯತ್ವವಿಲ್ಲ. ವಿಶೇಷ ಕರ್ಮಕ್ಕೆ ಕನ್ನೆಯ ಜನನದಲ್ಲಿ ಒಂದು ತಿಂಗಳು ಅಂದರೆ ಅಸ್ಪೃಶ್ಯತ್ವರೂಪದ ಹತ್ತು ದಿನಗಳ ನಂತರ ಒಂದು ತಿಂಗಳು ಅಂದರೆ ಒಟ್ಟು “ನಾಲ್ವತ್ತು ರಾತ್ರಿ” ಎಂದರ್ಥ. ಇದರಂತೆ ಪುತ್ರೋತ್ಪತ್ತಿಯಲ್ಲಿ ಇಪ್ಪತ್ತು ರಾತ್ರಿ (ಜನನದಿಂದ ಒಂದು ತಿಂಗಳು) ಅನರ್ಹಳಾಗುವಳು. ಅಷ್ಟು ಕಾಲ ಅವಳಿಗೆ ಕರ್ಮಾಧಿಕಾರವಿಲ್ಲ. ಪುತ್ರೋತ್ಪತ್ತಿಯಲ್ಲಿ ತಂದೆಗೆ ಮತ್ತು ಸವತೀತಾಯಿಗೆ ಸಲಸ್ನಾನವಾಗುವ ಮೊದಲು ಅಸ್ಪೃಶ್ಯತೆಯಿದೆ. ಜನನಾಶೌಚದಲ್ಲಿ ಪಿತ್ರಾದಿಸಪಿಂಡರಿಗೆ ಕರ್ಮಗಳಲ್ಲಿ ಅಧಿಕಾರವಿಲ್ಲ. ಕರ್ಮಕಾಲದ ಹೊರತಾಗಿ ಅನ್ಯರು ಅವರ ಸ್ಪರ್ಶಮಾಡಬಹುದು. ಅದರಿಂದ ದೋಷವಿಲ್ಲ. ತಂದೆಗೆ ಜಾತಕರ್ಮ ಮತ್ತು ದಾನ ಇವುಗಳಲ್ಲಿ ನಾಲಚ್ಛೇದಕ್ಕಿಂತ ಮೊದಲು ಅಧಿಕಾರವಿದೆ. ಹೀಗೆಯೇ ಪಂಚಮ, ಷಷ್ಠ, ಸಪ್ತಮ ದಿನಗಳಲ್ಲಿ ಮಾಡತಕ್ಕ ದಾನ ಮತ್ತು ಜನ್ಮದಾಪೂಜಾ ಇತ್ಯಾದಿಗಳಲ್ಲಿ ಅಧಿಕಾರವಿದೆ. ಆಗ ಪ್ರತಿಗ್ರಹಮಾಡಿದ ಬ್ರಾಹ್ಮಣರಿಗೂ ದೋಷವಿಲ್ಲ. ಸಪಿಂಡ-ಸಮಾನೋದಕ-ಸಗೋತ್ರ ನಿರ್ಣಯ " ಮೂಲಪುರುಷನಿಂದಾರಂಭಿಸಿ ಏಳು ಪುರುಷಪರ್ಯಂತದವರು “ಸಪಿಂಡರು. ಅದಕ್ಕೂ ಮುಂದೆ ಏಳು ತಲೆಮಾರಿನವರು “ಸಮಾನೋದಕರು. ಮುಂದೆ ಏಳು ಅಂದರೆ ಇಪ್ಪತ್ತೊಂದು ಪುರುಷಪರ್ಯಂತರು “ಸಗೋತ್ರ"ರು. ಸಪಿಂಡರಿಗೆ “ದಶರಾತ್ರ” ಆಶೌಚವು ಎಂದು ಮೊದಲೇ ಹೇಳಿದೆ. ಸೋದಕರಿಗೆ “ತ್ರಿರಾತ್ರ"ವು. ಇನ್ನು ಸಗೋತ್ರರಿಗೆ ಒಂದು ರಾತ್ರಿಯು ಎಂದು “ನಾಗೋಜಿಭಟೀಯ"ದಲ್ಲಿ ಹೇಳಿದೆ. ಇನ್ನು ಕೆಲವರು ಸಗೋತ್ರರಿಗೆ ಆಶೌಚವಿಲ್ಲವೆನ್ನುವರು. ಈ ಸಪಿಂಡ-ಸಮಾನೋದಕಾದಿಗಳ ಆಶೌಚವಿಭಾಗವು ಜನನದಲ್ಲಿಯೂ, ಮರಣದಲ್ಲಿಯೂ ಸಮಾನವು ಮರಣದಲ್ಲಿ ವಿಶೇಷವೇನೆಂದರೆ ಆಶೌಚ ವಿಚ್ಛೇದವಾಗಿದ್ದರೂ ಎಲ್ಲಿಯವರೆಗೆ ತಮ್ಮದು “ಏಕಕುಲ’ವೆಂಬ ಜ್ಞಾನವಿರುವದೋ ಅಲ್ಲಿಯವರೆಗೂ ಸ್ನಾನಮಾತ್ರವು. ಅದರಲ್ಲಿ ಇದನ್ನು ತಿಳಿಯಬೇಕು. ಏನೆಂದರೆ ಮೂಲಪುರುಷನನ್ನಾರಂಭಿಸಿ ಸಂತತಿಭೇದವಾಗುತ್ತ ಅವುಗಳಲ್ಲೊಬ್ಬ ಎಂಟನೆಯವನೂ, ಇನ್ನೊಬ್ಬನು ಏಳನೆಯವನೂ ಆಗಬಹುದು. ಅಲ್ಲಿ ಎಂಟನೆಯವನಿಗೆ ಸಾಪಿಂಡ ನಿವೃತ್ತಿಯೂ, ಏಳನೆಯವನಿಗೆ ಸಾಪಿಂಡ ಇರುವಿಕೆಯೂ ಆಗುವದು. ಆಗ ಏಳನೆಯವನ ಮರಣದಲ್ಲಿ ಎಂಟನೆಯವನು ತ್ರಿರಾತ್ರ ಆಶೌಚಕ್ಕೆ ಅರ್ಹನು, ಎಂಟನೆಯವನ ಮರಣದಲ್ಲಿ ಏಳನೆಯವನು ಪೂರ್ಣ ದಶರಾತ್ರಾಶೌಚವನ್ನು ತೆಗೆದುಕೊಳ್ಳತಕ್ಕದ್ದು. ಮರಣದಂತೆ ಅಷ್ಟಮ, ಸಪ್ತಮಾದಿಗಳ ಜನನಾಶೌಚವನ್ನೂ ತಿಳಿಯತಕ್ಕದ್ದು, ಸೋದಕರ ತ್ರಿರಾತ್ರಾದಿಗಳಲ್ಲಿ ಕನ್ಯಾ ವಿಷಯಕ ತ್ರಿಪುರುಷ ಸಾಪಿಂಡ ವಿಷಯದಲ್ಲಿಯೂ ಊಹಿಸುವದು. ಎಂಟನೆಯವನ ಮರಣದಲ್ಲಿ ಎಂಟನೆಯವನು ತ್ರಿರಾತ್ರ ಆಶೌಚಕ್ಕೆ ಅರ್ಹನು, ಎಂಟನೆಯವನ ತಂದೆಯು ಜೀವಿಸಿರಲಿ, ಇಲ್ಲದಿರಲಿ ತ್ರಿದಿನವೇ ಆಶೌಚವು. ಕೆಲವರು “ತಂಬಕೀಯದಲ್ಲಿಯ ಭಟ್ರೋಜಿಯ ವಚನದಂತ, ನಾಗೋಜಿಯ ಆಶೌಚ ಪ್ರಕರಣದಂತೆಯೂ ಮತ್ತು ಉಳಿದ ಗ್ರಂಥಗಳಂತೆಯೂ ಪಿತ್ರಾದಿಗಳ

ಪರಿಚ್ಛೇದ ೩ ಉತ್ತರಾರ್ಧ ೪೭೫ ಜೀವನ ಅಜೀವನ ವಿಷಯದಿಂದ ವಿಶೇಷವೇನೂ ಕಂಡುಬರುವದಿಲ್ಲ ಎನ್ನುವರು. ಇನ್ನೂ ಕೆಲವರು ನಿರ್ಣಯಸಿಂಧುವಿನ ಸಾಪಿಂಡ ಪ್ರಕರಣದಲ್ಲಿ “ಆದಶಮಾದರ್ಮ ವಿವೃತ್ತಿ” ಅಂದರೆ ಹತ್ತನೆಯವನಿಂದ ಹಿಡಿದು ಧರ್ಮವಿಚ್ಛಿತ್ತಿಯಾಗುವದು ಎಂದು ಹೇಳಿದ “ಸುಮಂತು” ವ್ಯಾಖ್ಯಾನಕ್ಕೆ “ಶೂಲಪಾಣಿಕೃತಟೀಕೆ” ಯಲ್ಲಿ “ಏಕಪಿಂಡದಾನಕ್ರಿಯಾನ್ವಯಿತ್ವ ರೂಪಸಾಪಿಂಡ” ಅಂದರೆ ಒಂದು ಪಿಂಡದಾನಕ್ಕನುಸರಿಸಿ ಅನ್ವಯಿಸುವ ರೂಪವಾದ ಸಾಪಿಂಡ್ಯಲಕ್ಷಣಕ್ಕನುಸಾರವಾಗಿ ಜೀವಂತವಾಗಿರುವ ಪಿತೃಪಿತಾಮಹ, ಪ್ರಪಿತಾಮಹರುಳ್ಳವನಿಗೆ ಪ್ರಪಿತಾಮಹನ ನಂತರ ಮೂರು ಪಿತೃಗಳು ಪಿಂಡಭಾಗಿಗಳಾಗುವರು. ನಂತರದ ಮೂರು ಪಿತೃಗಳು ಲೇಪಭಾಗಿಗಳಾಗುವರು. ಹೀಗೆ ಒಂಭತ್ತು ತಲೆಗಳ ನಂತರ “ಶ್ರಾದ್ಧ ಕರ್ತ"ನು ದಶಮನಾಗುವನು. ಹೀಗೆ ದಶಮ ಪುರುಷ ನಂತರ ಸಾಪಿಂಡ ನಿವೃತ್ತಿಯು ಪಿತೃ ಪಿತಾಮಹರು ಜೀವಂತರಾಗಿದ್ದರೆ ಒಂಭತ್ತು ಪುರುಷ ಪರ್ಯಂತ, ಪಿತೃ ಒಬ್ಬನೇ ಜೀವಂತನಾಗಿದ್ದರೆ ಅಷ್ಟಮ ಪರ್ಯಂತ “ಸಾಪಿಂಡವು. ಹೀಗೆ ಪ್ರತಿಪಾದಿಸಿರುವದರಿಂದ (ಹಿಂದ ಹೇಳಿದ ಸುಮಂತು ವ್ಯಾಖ್ಯಾನದಲ್ಲಿ) ಅಷ್ಟಮಾದಿಗಳಿಗೆ ಪಿತೃ ಮೊದಲಾದವರು ಜೀವಿಸಿರುವಾಗ ಹತ್ತುದಿನ ಆಶೌಚವು. ಪಿತ್ರಾದಿಗಳ ಮರಣನಂತರವೇ “ತ್ರಿದಿನ” ವು. ಹೀಗೆ ಹೇಳುವರು. ಈ ವಿಷಯದಲ್ಲಿ ನನಗೆ ಎರಡನೇ ಪಕ್ಷವೇ ಯುಕ್ತವಾಗಿ ತೋರುತ್ತದೆ. (ಇನ್ನೂ ವಿವರಿಸಬೇಕೆಂದರೆ- ತಂದೆ, ಅಜ್ಜ, ಮುತ್ತಜ್ಜ ಇವರು ಪಿಂಡಭಾಗಿಗಳು, ನಂತರ ಮೂರು ಪಿತೃಗಳು ‘ಲೇಪಭಾಗಿ’ಗಳು. ಕರ್ತನು ಏಳನೆಯವನು. ಇದು ಸಾಮಾನ್ಯ ಏಕಪಿಂಡಾನ್ವಯಿ ಸಾಪಿಂಡವಾಗುವದು. ಪಿತೃ, ಪಿತಾಮಹ, ಪ್ರಪಿತಾಮಹರು ಜೀವಂತರಾಗಿದ್ದರೆ ಪ್ರಪಿತಾಮಹನ ನಂತರದ ಮೂರು ಪಿತೃಗಳು ಪಿಂಡಭಾಗಿಗಳೂ, ಆನಂತರದ ಮೂರು ಪಿತೃಗಳು ಲೇಪಭಾಗಿಗಳೂ ಆಗಿ ಆ ಲೇಪಭಾಗಿಗಳ ನಂತರವೇ “ಸಾಪಿಂಡ್ಯನಿವೃತ್ತಿ ಎಂದಿಟ್ಟುಕೊಂಡಾಗ ಕರ್ತನನ್ನು ಹಿಡಿದು ದಶಮ ಪರ್ಯಂತ ಸಾಪಿಂಡವು ಇರುವದೆಂದರ್ಥ.) ಪಿತೃಗೃಹದಲ್ಲಿ ಕನೈಯ ಪ್ರಸೂತಿ ತಂದೆಯ ಮನೆಯಲ್ಲಿ ಕನೈಯು ಹಡೆದರೆ ತಂದೆ ತಾಯಿಗಳಿಗೆ ಮತ್ತು ಮನೆಯಲ್ಲಿರುವ ಅಣ್ಣ ತಮ್ಮಂದಿರಿಗೆ ಒಂದು ದಿನ ಅಶೌಚವು. ಪಿತೃಗೃಹದಲ್ಲಿರುವ ಎಲ್ಲ ಪಿತೃಸಪಿಂಡರಿಗೆ” ಒಂದು ದಿನ"ವೆಂದು ಸ್ಮೃತ್ಯರ್ಥಸಾರದಲ್ಲಿ ಹೇಳಿದೆ. ಹೀಗೆ ಅಣ್ಣ ತಮ್ಮಂದಿರ ಮನೆಯಲ್ಲಿ ಭಗಿನ್ಯಾದಿಗಳ ಪ್ರಸೂತಿಯಾದರೂ ಅವರಿಗೆ “ಒಂದು ದಿನ ಆಶೌಚವು, “ಮಾಧವ” ಮತದಲ್ಲಿ - ಪಿತೃಗೃಹದಲ್ಲಿ ಕನ್ನೆಯು ಪ್ರಸೂತಳಾದರೆ ತಂದೆ ತಾಯಿಗಳಿಗೆ “ತ್ರಿರಾತ್ರ"ವು. ಆ ಮನೆಯಲ್ಲಿರುವ ಭ್ರಾತ್ರಾದಿಗಳ “ಏಕಾಹ"ವು ಎಂದು ಹೇಳಿದೆ. ಕನ್ನೆಯು ಪತಿಗೃಹದಲ್ಲಿ ಪ್ರಸೂತಳಾದರ ಪಿತ್ರಾದಿಗಳಿಗೆ ಆಶೌಚವಿಲ್ಲ. ಶಿಶುವು ಮೃತವಾಗಿ ಹುಟ್ಟಿದರೆ ಸಪಿಂಡರಿಗೆ ಸಂಪೂರ್ಣ ಜನನಾಶೌಚವು, ಹೊರತು ಮೃತಾಶೌಚವೆಂದಿಲ್ಲ. ಜನನಾನಂತರ ನಾಳಚ್ಛೇದನಕ್ಕಿಂತ ಮೊದಲು ಶಿಶುವು ಮೃತವಾದರೂ ಪಿತ್ರಾದಿ ಸಪಿಂಡರಿಗೆ ತ್ರಿದಿನ ಜನನಾಶೌಚವು. ತಾಯಿಗೆ ಹತ್ತು ದಿನ ಆಶೌಚವು. ೪೭೬ ಧರ್ಮಸಿಂಧು ನಾಳಚ್ಛೇದನಾನಂತರದಲ್ಲಿ ಹತ್ತುದಿನಗಳೊಳಗೆ ಶಿಶುಮರಣವಾದಲ್ಲಿ ಸಪಿಂಡರಿಗೆ ಸಂಪೂರ್ಣ ಜನನಾಶೌಚವು; ಹೊರತು ಮರಣಾಶೌಚವಿಲ್ಲ. ಮೃತಾಶೌಚ ವಿಚಾರ ಮೃತಾಶೌಚವುಳ್ಳವರು ಅಸ್ಪೃಶ್ಯರೂ, ಕರ್ಮಗಳಿಗೆ ಅಯೋಗ್ಯರೂ ಆಗುವರು. ದಶಾಹಾನಂತರದಲ್ಲಿ ನಾಮಕರಣಕ್ಕಿಂತ ಮೊದಲು ಶಿಶು ಮರಣವಾದರೆ ಸಪಿಂಡರಿಗೆ ಸ್ನಾನಮಾತ್ರದಿಂದ ಶುದ್ಧಿಯು ನಾಮಕರಣಕ್ಕಿಂತ ಮೊದಲು ಪುತ್ರ ಮರಣವಾದರೆ ಮಾತಾಪಿತೃಗಳಿಗೆ ತ್ರಿರಾತ್ರವು ಕನ್ಯಾಮರಣದಲ್ಲಿ ಏಕಾಹವು, ಸವತಿತಾಯಿಗೆ ಎಲ್ಲವುಗಳಲ್ಲಿಯೂ ತಂದೆಯಂತೆಯೇ. ನಾಮಕರಣಕ್ಕಿಂತ ಮೊದಲು ಮರಣವಾದರೆ ಖನನವು ಅವಶ್ಯವು. ನಾಮಕರಣದ ನಂತರ ಚೌಲಪರ್ಯಂತ ಅಥವಾ ಚೌಳದ ಅಭಾವದಲ್ಲಿ ಮೂರುವರ್ಷ ಪರ್ಯಂತ ದಾಹ-ಖನನಗಳಲ್ಲಿ ವಿಕಲ್ಪವು. (ದಹನಮಾಡಲೂ ಬಹುದು, ಖನನಮಾಡಲೂ ಬಹುದು) ನಾಮಕರಣಾನಂತರ ಹಲ್ಲು ಮೂಡುವದರೊಳಗೆ ಮರಣವಾದಲ್ಲಿ ದಾಹಮಾಡಿದರೆ ಸಪಿಂಡರಿಗೆ ಏಕಾಹ ಆಶೌಚವು. ಖನನ ಮಾಡಿದಲ್ಲಿ ಸ್ನಾನದಿಂದ ಶುದ್ಧಿಯು. ಈ ಎರಡರಲ್ಲೂ ಮಾತಾಪಿತೃಗಳಿಗೆ “ತ್ರಿರಾತ್ರ ಆಶೌಚವು. ಕನ್ಯಾಮರಣದಲ್ಲಿ ಈ ದಹನ, ಖನನಗಳಲ್ಲಿ ತ್ರಿಪುರುಷಸಪಿಂಡರಿಗೆ ಸ್ನಾನದಿಂದ ಶುದ್ಧಿಯು, ಕನ್ಯಾಮರಣದಲ್ಲಿ ತಾಯಿತಂದೆಗಳಿಗೆ ಈ ಎರಡು ವಿಧದಲ್ಲೂ ದಂತೋತ್ಪತ್ತಿ ಪರ್ಯಂತ ಏಕಾಹವು. ಇಲ್ಲಿ ನಾಮಕರಣವೆಂದರೆ ಹನ್ನೆರಡು ದಿನಗಳನ್ನನುಲಕ್ಷಿಸಿ ಹೇಳಿದ್ದು. ದಂತೋತ್ಪತ್ತಿ ಶಬ್ದವು ಏಳನೇ ತಿಂಗಳನ್ನು ಸೂಚಿಸುತ್ತದೆ. ಆದುದರಿಂದ ಹನ್ನೆರಡು ದಿನಗಳ ನಂತರ ಆರು ತಿಂಗಳ ಪರ್ಯಂತ ಮರಣವಾಗಿ ದಹನವಾಗಲೀ ಖನನವಾಗಲೀ ಸಪಿಂಡರಿಗೆ “ಏಕಾಹ"ವು. ಇತ್ಯಾದಿ ತಿಳಿಯತಕ್ಕದ್ದೆಂದು ಮಥಿತಾರ್ಥವು. ಏಳನೇ ತಿಂಗಳಿಂದ ಹಿಡಿದು ಚೂಡಾಕರಣ ಪರ್ಯಂತ, ಚೌಳವಾಗದಿದ್ದರೆ ಮೂರು ವರ್ಷ ಪರ್ಯಂತ ಮರಣವಾಗಿ ದಹನವಾಗಲೀ ಖನನವಾಗಲೀ ಸಪಿಂಡರಿಗೆ “ಏಕಾಹ"ವು. ಕೆಲವರು ಖನನವಾದಲ್ಲಿ ಏಕಾಹವು; ದಹನವಾದಲ್ಲಿ ತ್ರಿರಾತ್ರವು ಎಂದು ಹೇಳುವರು. ಈ ಎರಡೂ ವಿಷಯಗಳಲ್ಲಿ ಮಾತಾಪಿತೃಗಳಿಗೆ “ತ್ರಿರಾತ್ರ"ವು, ಇದು ಪುತ್ರಮರಣದಲ್ಲಿ ಮಾತ್ರ. ಕನ್ಯಾಮರಣದಲ್ಲಿ ಮೂರು ವರ್ಷ ಪರ್ಯಂತವಾಗಿ ಸಪಿಂಡರಿಗೆ ಸ್ನಾನದಿಂದ ಶುದ್ಧಿಯು, ಮಾತಾಪಿತೃಗಳಿಗೆ ಏಳನೇ ತಿಂಗಳಿಂದಾರಂಭಿಸಿ ಕನ್ಯಾಮರಣದಲ್ಲಿ ತ್ರಿರಾತ್ರವು, “ವಿಜ್ಞಾನೇಶ್ವರನಾದರೋ ಹನ್ನೊಂದನೇ ದಿನದಿಂದ ಉಪನಯನ ಪರ್ಯಂತ ಪುತ್ರಮರಣದಲ್ಲಿ ತ್ರಿರಾತ್ರವು, ಕನ್ನೆಯಾದರೆ ವಿವಾಹಪರ್ಯಂತ ಮಾತಾಪಿತೃಗಳಿಗೆ ತ್ರಿರಾತ್ರವೇ ಎಂದು ಹೇಳುವನು. ಪ್ರಥಮ ವರ್ಷಾದಿಗಳಲ್ಲಿ ಪುತ್ರನಿಗೆ ಚೌಳವಾಗಿದ್ದು ಮೃತನಾದಲ್ಲಿ ಪಿತ್ರಾದಿ ಎಲ್ಲರಿಗೂ ತ್ರಿದಿನವು ನಿಶ್ಚಿತವು. ದಹನವೂ ಆವಶ್ಯಕವು. ಮೂರು ವರ್ಷಗಳ ನಂತರ ಚೌಳವಾಗಲೀ ಆಗದಿರಲಿ, ಉಪನಯನದ ಒಳಗೆ ಮರಣವಾದಲ್ಲಿ ಪಿತ್ರಾದಿ ಎಲ್ಲ ಸಪಿಂಡರಿಗೂ ತ್ರಿದಿನವು. ದಾಹವೂ ಆವಶ್ಯಕ. ಸೋದಕರಿಗೆ ಅನುಪನೀತನ ಮರಣದಲ್ಲಿ ಮತ್ತು ಅವಿವಾಹಿತ ಕನ್ಯಾಮರಣದಲ್ಲಿ ಆಶೌಚವಿಲ್ಲ. ಸ್ನಾನಮಾತ್ರವು ಅನುಪನೀತರಾದ ಭ್ರಾತೃಗಳ ಮರಣದಲ್ಲಿ ಅಕ್ಕ-ತಂಗಿಯರಿಗೆ ಆಶೌಚವಿಲ್ಲ. ಎರಡು ವರ್ಷಗಳಿಗಿಂತ ಕಡಿಮೆಯಾದವನಿಗೆ ಖನನವು ಮುಖ್ಯವು. ಶವದ ಸಂಗತ ಪರಿಚ್ಛೇದ - ೩ ಉತ್ತರಾರ್ಧ ೪೭೭ ಅನುಗಮನಮಾಡುವದು ಕೃತಾಕೃತವು. ಎರಡು ವರ್ಷ ಪೂರ್ಣವಾದ ಮೇಲೆ ದಾಹವು ನಿತ್ಯವು. ಅನುಗಮನವೂ ಆವಶ್ಯಕವು ಇಲ್ಲಿ ದಾಹ, ಜಲಾಂಜಲ್ಮಾದಿಗಳನ್ನು ಅಮಂತ್ರಕವಾಗಿ ಮಾಡತಕ್ಕದ್ದು. ಚೌಲವಾದವ ಅಥವಾ ಮೂರು ವರ್ಷ ವಯಸ್ಸಿನವನಿಗೆ ಭೂಮಿಯಲ್ಲಿ ಪಿಂಡ ಕೊಡತಕ್ಕದ್ದು. ದಂತಜನನ ಪರ್ಯಂತವಾಗಿ ಮೃತನಾದವನ ಸಲುವಾಗಿ ಆತನಷ್ಟೇ ವಯಸ್ಸಿನ ಬಾಲಕರಿಗೆ ಮೃತದಿನದ ಮಾರನೇ ದಿನ ಹಾಲನ್ನು ದಾನಮಾಡತಕ್ಕದ್ದು. ಮೂರು ವರ್ಷದ ಅಂತ್ಯದೊಳಗೆ ಅಥವಾ ಚೌಳಪರ್ಯಂತ ಮೃತನಾದವನಿಗೆ “ಪಾಯಸದಾನವು. ಅನಂತರ ಉಪನಯನ ಪರ್ಯಂತ ಆಶೌಚಾಂತದಲ್ಲಿ ಸಮವಯಸ್ಕರಾದವರಿಗೆ ಆತನ ಉದ್ದೇಶದಿಂದ ಭೋಜನಾದಿಗಳನ್ನು ಕೊಡತಕ್ಕದ್ದು. ಸ್ತ್ರೀ ಶೂದ್ರರಿಗಾದರೋ ಚೌಲಸಂಸ್ಕಾರವಾಗಿದ್ದರೂ ಜಲಾಂಜಲಿ ದಾನಾದಿಗಳು ವಿಕಲ್ಪಗಳು. ಶೂದ್ರನಿಗೆ ಮೂರು ವರ್ಷಪರ್ಯಂತ ಇದೇ ಆಶೌಚವು. ಅವನಿಗೆ ಉಪನಯನ ಸ್ಥಾನದಲ್ಲಿ “ವಿವಾಹವು ಇಷ್ಟೇ, ಮತ್ತೇನೆಂದರೆ ಮೂರು ವರ್ಷಗಳನಂತರ ವಿವಾಹಪರ್ಯಂತವಾಗಿ ಅಥವಾ ಹದಿನಾರು ವರ್ಷವರ್ಯಂತ ಶೂದ್ರನ ಮರಣವಾದರೆ ಮೂರು ದಿನ ಆಶೌಚವು. ಅದರ ನಂತರ ಜಾತ್ಯುಕ್ತ ಆಶೌಚವು. ಕನ್ನೆಯು ಮೂರು ವರ್ಷಗಳ ನಂತರ ವಾಗ್ದಾನದ ಒಳಗೆ ಮೃತಳಾದರೆ ತ್ರಿಪುರುಷ ಸಪಿಂಡರಿಗೆ ಒಂದು ದಿನ ಆಶೌಚವು. ಮಾತಾಪಿತೃಗಳಿಗೆ ತ್ರಿರಾತ್ರವು, ಅಮಂತ್ರಕವಾಗಿ ದಹನವು ವಾಗ್ದಾನದ ನಂತರ ವಿವಾಹದ ಒಳಗೆ ಕನ್ಯಾಮರಣವಾದರೆ ಪಿತೃಸಪಿಂಡರಿಗೂ, ಪತಿಯ ಸಪಿಂಡರಿಗೂ ತ್ರಿರಾತ್ರವು. ಈ ಸಾಪಿಂಡವು ಎರಡೂ ಕುಲಗಳಲ್ಲಿ “ಸಾಪ್ತಪೌರುಷ” ದ್ವಂದು ತಿಳಿಯತಕ್ಕದ್ದು, ದಾಹಾದಿಗಳನ್ನು ಅಮಂತ್ರಕವಾಗಿಯೇ ಮಾಡುವದು. ಜನನದಲ್ಲಿ ಮತ್ತು ಅನುಪನೀತನ ಮರಣದಲ್ಲಿ “ಅತಿಕ್ರಾಂತಾಶೌಚವಿಲ್ಲ. (ಆಶೌಚದ ಅವಧಿ ಮುಗಿದ ನಂತರ ಪುನಃ ಆಶೌಚ ತೆಗೆದುಕೊಳ್ಳತಕ್ಕದ್ದಿಲ್ಲ) ತಂದೆಗೆ ದೇಶಾಂತರ, ಕಾಲಾಂತರಗಳಿಂದ ಪುತ್ರಜನನವಾರ್ತೆ ಬಂದರೆ ಸ್ನಾನವು ಆವಶ್ಯಕವು. ಆಶೌಚದ ಅವಧಿ ಕಳೆದಿದ್ದರೂ ಅನುಪನೀತನಾದ ಪುತ್ರನ ಮರಣವಾರ್ತೆ ಕೇಳಿದ ಕೂಡಲೇ ಅವಶ್ಯ ಸ್ನಾನ ಮಾಡತಕ್ಕದ್ದೆಂದು “ಸ್ಮತ್ಯರ್ಥಸಾರ"ದಲ್ಲಿ ಹೇಳಿದೆ. ಆದರೆ ಅನುಪನೀತನಾದ ಪುತ್ರ ಹಾಗೂ ಅವಿವಾಹಿತ ಕನ್ಯಾ ಇವರಿಗೆ ತಂದೆತಾಯಿಗಳ ಮರಣದಲ್ಲಿ “ದಶಾಹಾಶೌಚ"ವಿದೆ. ಅನ್ಯರ ಮರಣದಲ್ಲಿ ಆಶೌಚವೇ ಇಲ್ಲ. ಉಪನಯನವಾದವನು ಮರಣಹೊಂದಿದರೆ ಸಪಿಂಡರಿಗೆ ದಶಾಹ ಆಶೌಚವು ಸೋದಕರಿಗೆ ತ್ರಿರಾತ್ರವು ಸಗೋತ್ರರಿಗೆ ಒಂದು ದಿನ ಅಥವಾ ಸ್ನಾನದಿಂದ ಶುದ್ಧಿಯು. ಇದೇ ವಿಶೇಷವು. ಇದನ್ನು ಹಿಂದೆಯೇ ಹೇಳಿದೆ. ಸ್ತ್ರೀ, ಶೂದ್ರರಿಗೆ ವಿವಾಹದ ನಂತರ ಮರಣವಾದಲ್ಲಿ ಸಪಿಂಡರಿಗೆ ದಶಾಹಾಶೌಚವು. ವಿವಾಹವಾಗದಿದ್ದರೂ ಹದಿನಾರು ವರುಷಗಳಾದ ಮೇಲೆ ಹೇಳಿದ ನಿಯಮವು ಸಂಬಂಧಿಸುವದು. ವಿವಾಹದ ನಂತರ ಕನ್ನೆಯು ಪಿತೃಗೃಹದಲ್ಲಿ ಮೃತಳಾದರೆ ಮಾತೃ, ಪಿತೃ, ಸವತಿತಾಯಿ, ಸವತಿ ಅಣ್ಣ-ತಮ್ಮಂದಿರು, ತನ್ನ ಅಣ್ಣ ತಮ್ಮಂದಿರು ಇವರೆಲ್ಲರಿಗೂ “ತ್ರಿರಾತ್ರ’ವು ತಂದೆಯ ಅಣ್ಣ- ತಮ್ಮಂದಿರು ಮನೆಯಲ್ಲಿದ್ದರೆ ಅವರಿಗೆ ಏಕಾದವು, ಕೆಲವರು ಸಪಿಂಡರು ಯಾರಾದರೂ ಅದೇ ಮನೆಯಲ್ಲಿದ್ದರೆ ಅವರಿಗೂ ಏಕಾಹವೆಂದು ಹೇಳುವರು, ಬೇರೆ ಗ್ರಾಮದಲ್ಲಿ ಮರಣವಾದರೆ ತಂದೆ-ತಾಯಿಗಳಿಗೆ ಪಕ್ಷಿಣೀ, ಪಿತೃವ್ಯಾದಿಗಳಿಗೆ ಏಕಾಹ ಎಂದು ಕೆಲವರ ಮತವು ತಾಯಿ, ತಂದೆ,

ಧರ್ಮಸಿಂಧು ಸವತಿತಾಯಿಗಳ ಮರಣದಲ್ಲಿ ವಿವಾಹಿತಳಾದ ಕನ್ನೆಗೆ “ತ್ರಿರಾತ್ರ” ಆಶೌಚವು. ನವಮ ಅಥವಾ ದಶಮ ದಿನದಲ್ಲಿ ತಿಳಿದರೂ ಶೇಷದಿಂದಲೇ ಶುದ್ಧಿ ಯು. ಆಗ ಅತಿಕ್ರಾಂತ ಆಶೌಚ ತೆಗೆದುಕೊಳ್ಳತಕ್ಕದ್ದಿಲ್ಲ. ದಶಾಹದ ನಂತರ ಕಾಲಾಂತರ ಅಥವಾ ವರ್ಷಾಂತರದಲ್ಲಿ ತಿಳಿದಾಗ “ಪಕ್ಷಿಣೀ” ಆಶೌಚವು. ಉಪನೀತನಾದ ಭ್ರಾತೃವಿನ ಮತ್ತು ವಿವಾಹಿತ ಭಗಿನಿಯರ ಮರಣದಲ್ಲಿ ಪರಸ್ಪರರಿಗೆ ಪರಸ್ಪರರ ಗೃಹದಲ್ಲಿ ಮರಣವಾದಾಗ “ತ್ರಿರಾತ್ರ"ವು. ಬೇರೆ ಗೃಹದಲ್ಲಿ ಮರಣವಾದರೆ ಪರಸ್ಪರ “ಪಕ್ಷಿಣಿ"ಯು. ಗ್ರಾಮಾಂತರಗಳಲ್ಲಾದರೆ “ಏಕಾಹ"ವು. ಅತ್ಯಂತ ನಿರ್ಗುಣತ್ವವಿದ್ದರೂ (ಆಶೌಚ ತೆಗೆದುಕೊಳ್ಳದಷ್ಟು ಗುಣರಹಿತತ್ವ) ಒಂದೇ ಗ್ರಾಮದಲ್ಲಾದರೆ ಸ್ನಾನಮಾಡತಕ್ಕದ್ದು. ಹೀಗೆ ಸವತಿಯ ಭ್ರಾತೃಭಗಿನಿಯರ ಮರಣಕ್ಕೂ ಇದೇ ನಿಯಮವು ಭಗಿನಿಯ ಮರಣದಲ್ಲಿ ಇನ್ನೊಂದು ಭಗಿನಿಗೂ ಹೀಗೆಯೇ ಎಂದು ತೋರುತ್ತದೆ. ವಿವಾಹಿತಳಾದ ಕನ್ನೆಗೆ ಪಿತಾಮಹ, ಪಿತೃವ್ಯಾದಿಗಳ ಮರಣದಲ್ಲಿ ಸ್ನಾನಮಾತ್ರ, ಮಾತುಲನ ಮರಣದಲ್ಲಿ ಭಗಿನೀಪುತ್ರ, ಪುತ್ರಿಯರಿಗೆ “ಪಕ್ಷಿಣಿ"ಯು, ಉಪಕಾರಕನಾದ ( ಎಲ್ಲ ವಿಧದಿಂದ ಸಹಕರಿಸಿದ) ಮಾತುಲನು ಮನೆಯಲ್ಲಲ್ಲದೆ ಅನ್ಯತ್ರ ಮೃತನಾದಾಗ ಅಥವಾ ಕೇವಲ ಮಾತುಲನು ಮನೆಯಲ್ಲಿ ಮೃತನಾದರೆ “ತ್ರಿರಾತ್ರ"ವು. ಉಪನಯನವಾಗಿರದ ಮಾತುಲನ ಮರಣದಲ್ಲಿ ಮತ್ತು ಗ್ರಾಮಾಂತರದಲ್ಲಿ ಮಾತುಲನ ಮರಣದಲ್ಲಿ “ಏಕರಾತ್ರ"ವು. ಹೀಗೆ ಸವತಿಯ ಮಾತುಲನ ವಿಷಯದಲ್ಲಿಯೂ ತಿಳಿಯತಕ್ಕದ್ದು. ಮಾತುಲನ ಪತ್ನಿಯು ಮೃತಿಹೊಂದಿದಲ್ಲಿ ಪತಿಯ ತಂಗಿಯ ಪುತ್ರಾದಿಗಳಿಗೆ “ಪಕ್ಷಿಣಿ"ಯು. ಸಾಪತ್ನಮಾತುಲನ ಪತ್ನಿಯ ಮರಣದಲ್ಲಿ “ಆಶೌಚವಿಲ್ಲ. ಉಪನೀತನಾದ ಭಗಿನಿಯ ಪುತ್ರನ ಮರಣದಲ್ಲಿ ಮಾತುಲನಿಗೆ ಮತ್ತು ಮಾತುಲನ ಭಗಿನಿಗೆ “ಪಕ್ಷಿಣಿಯು, ಹೀಗೆ ಸಾಪತ್ರ ಭಾಗಿನೇಯನು ಮೃತನಾದರೂ ಅದರಂತೆಯೇ. “ಅನುಪನೀತ” ಎಂಬ ಪದವು ಉಪನಯನ ಸಂಸ್ಕಾರ ಮಾತ್ರ ಆಗದಿರುವ ಎಂದು ತಿಳಿಯಬೇಕು. ಅಂದರೆ ಚೌಲಸಂಸ್ಕಾರ ಹೊಂದಿರುವವ ಅಥವಾ ಮೂರು ವರ್ಷ ವಯಸ್ಸು ಮೀರಿದವನೆಂದು ತಿಳಿಯತಕ್ಕದ್ದೆಂದು ತೋರುತ್ತದೆ. ಮುಂದಾದರೂ “ಅನುಪನೀತ” ಪದದ ಅರ್ಥವನ್ನು ಗ್ರಹಿಸತಕ್ಕದ್ದು, ಭಗಿನೀಪುತ್ರಿಯ ಮರಣದಲ್ಲಿ “ಸ್ನಾನಮಾತ್ರ"ವೆಂದು ತೋರುತ್ತದೆ. ಮಾತಾಮಹನ ಮರಣದಲ್ಲಿ ಪುತ್ರಿಯ ಪುತ್ರ ಅಥವಾ ಪುತ್ರಿಯರಿಗೆ ತ್ರಿರಾತ್ರವು. ಗ್ರಾಮಾಂತರದಲ್ಲಾದರೆ ಪಕ್ಷಿಣಿಯು, ಮಾತಾಮಹಿಯ ಮರಣದಲ್ಲಿ ಪುತ್ರಿಯ ಮಗನಿಗೆ ಮತ್ತು ಪುತ್ರಿಗೆ ಪಕ್ಷಿಣಿ"ಯು. ಇಲ್ಲಿ ಎಲ್ಲ ಕಡೆಯಲ್ಲಿ ಪುರುಷನಾದರೆ ಉಪನೀತ, ಸ್ತ್ರೀಯಾದರೆ ವಿವಾಹಿತ ಇವರಿಗೇನೇ ಮಾತಾಪಿತೃಗಳ ಹೊರತಾದವರ ಆಶೌಚದಲ್ಲಿ ಅಧಿಕಾರವು ಎಂದು ತಿಳಿಯತಕ್ಕದ್ದು, ಇಲ್ಲಿ ಮಾತುಲ, ಮಾತುಲಪತ್ನಿ, ಮಾತಾಮಹಾದಿಗಳ ಮೃತಿಯಲ್ಲಿ ಸ್ತ್ರೀಸಂತತಿಗೆ ಹೇಳಿದ್ದೆಲ್ಲ “ತ್ರ್ಯಂಬಕೀಯ ಆಶೌಚಪ್ರಕರಣ"ಕ್ಕನುಸಾರವಾಗಿ ಹೇಳಿದ್ದು. ಬೇರೆ ಗ್ರಂಥಗಳಲ್ಲಿ ಇಷ್ಟು ಸ್ಪಷ್ಟವಾಗಿ ಹೇಳಿದ್ದು ಕಂಡುಬರುವದಿಲ್ಲ. ಉಪನೀತನಾದ ಮಗಳ ಮಗನು ಮೃತನಾದಲ್ಲಿ ಮಾತಾಮಹ-ಮಾತಾಮಹಿ ಇವರಿಗೆ “ಪಕ್ಷಿಣಿಯು, ಮಗಳ ಪುತ್ರಿಯ ಮರಣದಲ್ಲಿ ಇವರಿಗೆ ಆಶೌಚವಿಲ್ಲವೆಂದು ತೋರುತ್ತದೆ. ಪತ್ನಿಯ ತಂದೆ-ತಾಯಿಗಳ ಮರಣದಲ್ಲಿ ಅಳಿಯನ್ನು ಸನ್ನಿಧಿಯಲ್ಲಿದ್ದಾಗ “ತ್ರಿರಾತ್ರ"ವು. ಅಸನ್ನಿಧಿಯಲ್ಲಿ ಪಕ್ಷಿಯು, ಸನ್ನಿಧಿಯಲ್ಲದಿದ್ದರೂ ಅವರು ಉಪಕಾರಕರಾಗಿದ್ದರೆ “ತ್ರಿರಾತ್ರ"ವು.· ಪರಿಚ್ಛೇದ ೩ ಉತ್ತರಾರ್ಧ ಗ್ರಾಮಾಂತರದಲ್ಲಾದರೆ ಒಂದು ರಾತ್ರಿಯು, ಪತ್ನಿಯು ಮೃತಳಾಗಿ ಸಂಬಂಧ ಕಡಿದುಹೋದ ಅತ್ತೆ ಮಾವಂದಿರ ಮರಣದಲ್ಲಿ ಅವರು ಉಪಕಾರಕರಲ್ಲದಿದ್ದರೆ ಪಕ್ಷಿಣಿಯು ಅಥವಾ “ ಒಂದು ರಾತ್ರಿ” ಎಂದು ತೋರುತ್ತದೆ. ಅಳಿಯನು ಮೃತನಾದರೆ ಅತ್ತೆ ಮಾವಂದಿರಿಗೆ ಒಂದು ರಾತ್ರಿಯು ಅಥವಾ ಸ್ನಾನದಿಂದ ಶುದ್ಧಿಯು, ಸ್ವಗೃಹದಲ್ಲಿ ಅಳಿಯನು ಮೃತನಾದರೆ ಅತ್ತೆ ಮಾವಂದಿರಿಗೆ ತ್ರಿರಾತ್ರವು, ಉಪನೀತನಾದ ಭಾವನು ಮೃತನಾದರೆ ತಂಗಿಯ ಅಥವಾ ಅಕ್ಕನ ಗಂಡನಿಗೆ ಒಂದು ದಿನವು, ಭಾವನು ಅನುಪನೀತನಾದರೆ ಸ್ಥಾನಮಾತ್ರವು, ಗ್ರಾಮಾಂತರದಲ್ಲಿ ಮೃತನಾದರೂ ಸ್ನಾನ ಮಾತ್ರ. ಪತ್ನಿಯ ಮರಣಕಾರಣದಿಂದ ಸಂಬಂಧ ಕಳೆದುಕೊಂಡ ಭಾವನು ಮೃತನಾದರೆ ಸ್ನಾನ ಮಾತ್ರವು ಎಂದು “ನಾಗೋಜಿಭಟ್ಟಿಯ” ದಲ್ಲಿ ಹೇಳಿದೆ. ಭಾವನ ಪುತ್ರನ ಮರಣದಲ್ಲಿ ಸ್ನಾನಮಾತ್ರ. ಯಾವನೋ ಒಬ್ಬ ಗ್ರಂಡ್ ಕಾರನು ಅತ್ತಿಗೆಯ ಮರಣದಲ್ಲಿಯೂ ಶಾಲಕನಂತೆಯೇ “ಏಕಾಹ” ಎಂದು ಹೇಳಿರುವನು. ತಾಯಿಯ ತಂಗಿಯು ಮೃತಳಾದರೆ ತಂಗಿಯ ಸಂತತಿಪುತ್ರ ಅಥವಾ ಪುತ್ರಿಗೆ ಪಕ್ಷಿಣಿಯು, ಹೀಗೆ ಸಾವನ್ನ ತಾಯಿಯ ತಂಗಿಯು ಮೃತಳಾದರೂ ಪಕ್ಷಿಣಿಯು, ತಂದೆಯ ಅಕ್ಕ-ತಂಗಿಯರ ಮರಣದಲ್ಲಿಯಾದರೂ ಭ್ರಾತೃಗಳ ಪುತ್ರ-ಪುತ್ರಿಯರಿಗೆ ಪಕ್ಷಿಣಿಯು, ಪಿತೃವಿನ ಸಾಪನ್ನ ತಂಗಿಯ ಮರಣದಲ್ಲಾದರೋ ಸ್ನಾನ ಮಾತ್ರವು, ಭ್ರಾತೃಪುತ್ರಾದಿಗಳ ಮರಣದಲ್ಲಿ ತಂದೆಯ ತಂಗಿಗೆ ಸ್ನಾನ ಮಾತ್ರ. ಸ್ವಗೃಹದಲ್ಲಿ ಪಿತೃಭಗಿನಿ, ಮಾತೃಭಗಿನಿಯರು ಮೃತರಾದಲ್ಲಿ ತ್ರಿದಿನವು. ಉಪನೀತರಾದ “ಬಂಧುತ್ರಯರ ಮರಣದಲ್ಲಿ ಪಕ್ಷಿಣಿಯು, ಅನುಪನೀತ ಅಥವಾ ಗುಣರಹಿತ ಬಂಧುತ್ರಯರ ಮರಣದಲ್ಲಿ ಏಕಾಹವು, ಸ್ವಗೃಹದಲ್ಲಿ ಮೃತರಾದರೆ ತ್ರಿರಾತ್ರ"ವು. ಇಲ್ಲಿ “ಬಂಧುತ್ರಯ” ಎಂದು ಹೇಳಿದ್ದರಿಂದ “ಆತ್ಮಬಂಧುತ್ರಯ, ಪಿತೃಬಂಧುತ್ರಯ, ಮಾತೃ ಬಂಧುತ್ರಯ” ಹೀಗೆ ಒಂಭತ್ತು ಬಂಧುಗಳು ಎಂದು ತಿಳಿಯತಕ್ಕದ್ದು. ಅದು ಹೇಗೆಂದರೆ- ತನ್ನ ಪಿತೃಭಗಿನಿಯರ ಪುತ್ರರು, ತನ್ನ ತಾಯಿಯ ಭಗಿನಿಯ ಪುತ್ರರು, ತನ್ನ ಸೋದರಮಾವನ ಪುತ್ರರು ಇವರು “ಆತ್ಮಬಾಂಧವ"ರನ್ನಲ್ಪಡುವರು, ತಂದೆಯ ಭಗಿನಿಯ ಪುತ್ರರು, ತಂದೆಯ ತಾಯಿಯ ಭಗಿನೀ ಪುತ್ರರು, ತಂದೆಯ ಸೋದರಮಾವನ ಪುತ್ರರು ಇವರು “ಪಿತೃಬಂಧುಗಳಾಗುವರು. ತಾಯಿಯ ತಂದೆಯ ಭಗಿನೀ ಪುತ್ರರು, ತಾಯಿಯ ತಾಯಿಯ ಭಗಿನೀ ಪುತ್ರರು, ತಾಯಿಯ ಸೋದರಮಾವನ ಪುತ್ರರು ಇವರು “ಮಾತೃಬಾಂಧವರು. ಹೀಗೆ ಬಂಧುತ್ರಯವು, ಪಿತೃಭಗಿನಿ ಮೊದಲಾದವರ ವಿವಾಹಿತ ಕನೈಯು ಮೃತಳಾದರೆ ಆ ಬಂಧು ವರ್ಗಕ್ಕೆ “ಒಂದು ದಿನ’ ಎಂಬ ವಚನಬಲದಿಂದ “ಏಕಾಹ"ವು. ಅವಿವಾಹಿತರಾಗಿ ಮೃತಿಹೊಂದಿದಲ್ಲಿ “ಸ್ನಾನಮಾತ್ರ ಹೀಗೆ ನಿರ್ಣಯಸಿಂಧುವಿನ ಅಭಿಪ್ರಾಯ. ನಾಗೋಜಿಭಟ್ಟರು-ಬಂಧುತ್ರಯ ವಾಕ್ಯದಲ್ಲಿಯ ಪುತ್ರ ಶಬ್ದವು ಕನ್ನೆಯರಿಗೂ ಸಂಬಂಧಿಸುವದೆಂದು ಹೇಳುವರು. ಅವರ ಮತದಂತೆ ಪಿತೃಭಗಿನಿಯ ಕನ್ನೆಯರು ವಿವಾಹಿತರಾಗಿದ್ದು ಮರಣಪಟ್ಟರೆ ಪಕ್ಷಿಣಿಯು, ವಿವಾಹವಾಗದಿದ್ದರೆ “ಏಕಾಹ’ವು - ಇತ್ಯಾದಿ. ಪಿತೃಭಗಿನಿಯ ಕನ್ನೆಯರು ಬಂಧುತ್ರಯ ಮರಣದಲ್ಲಿ ಸ್ನಾನ ಮಾತ್ರ ಮಾಡತಕ್ಕದ್ದೆಂದು ನಿರ್ಣಯಸಿಂಧುವಿನ ಅಭಿಪ್ರಾಯದಿಂದ ಸಿದ್ಧವಾಗುತ್ತದೆ. ಭಟ್ಟಮತದಲ್ಲಿ ಪುತ್ರ ಪದದಂತೆ ಆ ವಾಕ್ಯದಲ್ಲಿರುವ ಆತ್ಮಪದಕ್ಕಾದರೂ ಕನ್ಯಾಪರತ್ವವುಂಟಾಗುವದರಿಂದ ಕನೈಯರಾದರೂ ೪೮೦ ಧರ್ಮಸಿಂಧು ಬಂಧುತ್ರಯದ ಆಶೌಚವನ್ನು ತೆಗೆದುಕೊಳ್ಳತಕ್ಕದ್ದೆಂದಾಗುತ್ತದೆ. ಈ ವಿಷಯದಲ್ಲಿ ಬಹುಶಿಷ್ಟಾಚಾರವು ಹಾಗಿರದ್ದರಿಂದ ನಿರ್ಣಯಸಿಂಧುವಿನ ಅಭಿಪ್ರಾಯವೇ ಯುಕ್ತವಾಗಿ ಕಾಣುತ್ತದೆ. ಇದರ ತಾತ್ವಿಕ ವಿಚಾರವೇನೆಂದರೆ ಒಬ್ಬ ದೇವದತ್ತನ (ಯಾವನೋ ಒಬ್ಬ) ಒಂಭತ್ತು ಬಂಧುಗಳ ಮಧ್ಯದಲ್ಲಿಯ ಆತ್ಮಬಂಧುತ್ರಯದಲ್ಲಿ ಸಂಬಂಧವು ಸಮಾನವಾಗಿರುವ ಕಾರಣ ಪರಸ್ಪರ ಆಶೌಚವು. ಉಳಿದ ಆರು ಬಂಧುಗಳ ಮಧ್ಯದಲ್ಲಿ ಯಾವನಾದರೊಬ್ಬನ ಮರಣದಲ್ಲಿ ಈ ದೇವದತ್ತನಿಗೆ ಆಶೌಚವಿದೆ. ಈ ದೇವದತ್ತನ ಮರಣದಲ್ಲಿ ಆ ಆರುಬಂಧುಗಳಿಗೆ ಆಶೌಚವಿಲ್ಲ. ಯಾಕೆಂದರೆ ಸಂಬಂಧವಿರುವದಿಲ್ಲ. ಹೀಗೆ ತಿಳಿದವರು ಊಹಿಸತಕ್ಕದ್ದು. “ದತ್ತಕ’ನ ಮರಣದಲ್ಲಿ ಹಿಂದು ಮುಂದಿನ ತಂದೆ ತಾಯಿಗಳಿಗೆ ತ್ರಿರಾತ್ರವು, ಸಪಿಂಡರಿಗೆ ಏಕಾಹವು. ನೀಲಕಂಠೀಯ ದತ್ತಕ ಪ್ರಕರಣದಲ್ಲಿ ಉಪನೀತನಾದ ದತ್ತಕನ ಮರಣದಲ್ಲಿ ಪಾಲಕ ಪಿತ್ರಾದಿ ಸಪಿಂಡರಿಗೆ ದಶರಾತ್ರಾಶೌಚವೆಂದೇ ಹೇಳಿದೆ. ದತ್ತಕನಾದರೂ ಪೂರ್ವಾಪರ ಪಿತೃಗಳ ಮರಣದಲ್ಲಿ ತ್ರಿರಾತ್ರ ತೆಗೆದುಕೊಳ್ಳುವದು. ಪೂರ್ವಾಪರ ಸಪಿಂಡರ ಮರಣದಲ್ಲಿ ಏಕಾಹವು. ತಂದೆತಾಯಿಗಳ ಔರ್ಧ್ವದೇಹಿಕವನ್ನು ಮಾಡಿದಲ್ಲಿ ಕರ್ಮಾಂಗವಾಗಿ ದಶಾಹ ಆಶೌಚ ಬಳಸತಕ್ಕದ್ದು. ದತ್ತಕನ ಪುತ್ರ, ಪೌತ್ರಾದಿಗಳ ಜನನ ಅಥವಾ ಮರಣದಲ್ಲಿ ಪೂರ್ವಾಪರ ಸಪಿಂಡರಿಗೆ ಏಕಾಹವು. ಹೀಗೆ ಪೂರ್ವಾಪರ ಸಪಿಂಡರ ಮರಣದಲ್ಲಾದರೂ ದತ್ತಕನ ಪುತ್ರ, ಪೌತ್ರಾದಿಗಳಿಗೆ ಏಕಾಹವು. ಇದು ದತ್ತಕನು ಸಪಿಂಡ, ಸಗೋತ್ರನಾಗಿರದಾಗ ಹೇಳಿದ್ದು. ದತ್ತಕನು ಸಪಿಂಡ, ಸಗೋತ್ರನಾದರೆ ಸಗೋತ್ರ, ಸಪಿಂಡರಿಗೆ “ದಶರಾತ್ರ’ವು ಸೋದಕನಾದರೆ “ತ್ರಿರಾತ್ರ"ವು. ಅದೇ ಗ್ರಾಮಾಂತರದಲ್ಲಾದರೆ “ಪಕ್ಷಿಣಿ"ಯು. “ಆಚಾರ್ಯ"ನೆಂದರೆ ಉಪನಯನ ಮಾಡಿ ವೇದಾಧ್ಯಯನ ಮಾಡಿಸಿದವನು, ಸ್ಮಾರ್ತಕರ್ಮವನ್ನು ನಿರ್ವಹಿಸುವವನೂ ಆಚಾರ್ಯನೇ. ಆಚಾರ್ಯನ ಪತ್ನಿ, ಪುತ್ರರ ಮರಣದಲ್ಲಿ ಏಕಾಹವು. ಮಂತ್ರೋಪದೇಶಕನಾದ ಗುರುವು ಮೃತನಾದರೆ “ತ್ರಿರಾತ್ರ’ವು. ಗ್ರಾಮಾಂತರದಲ್ಲಾದರೆ “ಪಕ್ಷಿಣಿ”, ಶಾಸ್ತ್ರಗಳನ್ನಧ್ಯಯನಮಾಡಿಸಿದವನು ಮತ್ತು ವ್ಯಾಕರಣ ಜ್ಯೋರ್ತಿ ಶಾಸ್ತ್ರಗಳನ್ನಧ್ಯಯನ ಮಾಡಿಸಿದವನು “ಅನೂಚಾನ"ನೆನ್ನಲ್ಪಡುವನು. ಅವನ ಮರಣದಲ್ಲಿ “ಏಕಾಹವು. ಸಕಲ ವೇದಾಧ್ಯಾಪಕನಾದ ಗುರುವಿನ ಮರಣದಲ್ಲಿ ಪಕ್ಷಿಣಿಯು, ವೇದದ ಒಂದು ಭಾಗವನ್ನಧ್ಯಯನಮಾಡಿಸಿದವನು “ಉಪಾಧ್ಯಾಯನು. ಅವನ ಮರಣದಲ್ಲಿ ಏಕಾಹವು. ಉಪನಯನಮಾಡಿ ಅಧ್ಯಯನ ಮಾಡಿಸಲ್ಪಟ್ಟ ಶಿಷ್ಯನ ಮರಣದಲ್ಲಿ ಏಕಾಹವು. ಸಹಾಧ್ಯಾಯಿ (ಸಂಗಡ ಅಭ್ಯಾಸಮಾಡಿದವ) ಯ ಮರಣದಲ್ಲಿ ಪಕ್ಷಿಣಿಯು, ಆರ್ತಿ ಮುಗಿಯದಿರುವಾಗ ಋತ್ವಿಜನು ಮೃತನಾದರೆ “ತ್ರಿರಾತ್ರ"ವು, ಗ್ರಾಮಾಂತರದಲ್ಲಾದರೆ ಪಕ್ಷಿಣಿಯು, ಋತ್ವಿ ಕಾರ್ಯವು ಮುಗಿದು ಗ್ರಾಮಾಂತರದಲ್ಲಿ ಮೃತನಾದರ ಏಕಾಹವು. ಒಂದೇ ಗ್ರಾಮದಲ್ಲಾದರೆ ಪಕ್ಷಿಣಿಯು. ಹೀಗೆಯೇ ಯಾಜ್ಯ (ಯಜಮಾನ) ಮರಣದಲ್ಲಿಯೂ ತಿಳಿಯುವದು. ಅರ್ಥಸಹಿತವಾಗಿ ವೇದಾಧ್ಯಯನ ಮಾಡಿದವನು ಮತ್ತು ಶೌತ, ಸ್ಮಾರ್ತ ಕರ್ಮಾನುಷ್ಠಾನ ಮಾಡಿದ ಶತ್ರಿಯನ್ನು ಇವರ ಮರಣದಲ್ಲಿ ಮಿತ್ರತ್ವ ಹಾಗೂ ಒಂದೇ ಮನೆಯಲ್ಲಿರುವಿಕೆ; ಈ ಸಂದರ್ಭದಲ್ಲಿ ತ್ರಿರಾತ್ರ"ವು. ಎರಡರಲ್ಲೊಂದು ಸಂಬಂಧವಿದ್ದಲ್ಲಿ ಪಕ್ಷಿಣಿಯು, ಸಂಬಂಧವಿರದಲ್ಲಿ ಏಕಾಹವು, ಯತಿಯ ಮರಣದಲ್ಲಿ ಸರ್ವ ಸಪಿಂಡರಿಗೆ ಸ್ನಾನ ಮಾತ್ರ. ತನ್ನ ಮನೆಯಲ್ಲಿ ತ್ಯಾಜ್ಯನಾದ ಪರಿಚ್ಛೇದ - ೩ ಉತ್ತರಾರ್ಧ ೪೮೧ ಅಸಪಿಂಡನು ಮೃತನಾದಲ್ಲಿ ಏಕಾಹವು ತಾನಿರುವ ಮನೆಯಲ್ಲಿ ಸಪಿಂಡನಲ್ಲದವನು ಮೃತನಾದಲ್ಲಿ “ಮೂರು ರಾತ್ರಿ"ಯು. ಆಶೌಚವುಂಟಾಗುವದಕ್ಕೆ ಕಾರಣನಾದವನ ಸಂಬಂಧವುಳ್ಳವನು ಸ್ವಗೃಹದಲ್ಲಿ ಮೃತನಾದರೆ ತ್ರಿರಾತ್ರವು. ಗ್ರಾಮಾಧಿಪತಿ ಹಾಗೂ ದೇಶಾಧಿಪತಿಗಳು ಮೃತರಾದಲ್ಲಿ “ಸಜ್ಯೋತಿ” ಆಶೌಚವು. ಅಂದರೆ ಹಗಲು ಮರಣವಾದರೆ ರಾತ್ರಿಯಲ್ಲಿ ಸ್ನಾನದಿಂದ ಶುದ್ಧಿಯು, ರಾತ್ರಿ ಮರಣವಾದಲ್ಲಿ ಹಗಲಿನಲ್ಲಿ ಶುದ್ಧಿಯು. ಇದಕ್ಕೆ “ಸಜ್ಯೋತಿಯೆನ್ನುವರು. ಪಕ್ಷಿಣೀ ಅಂದರೆ ಹಗಲಿನಲ್ಲಿ ಮರಣವಾದರೆ ಆ ಹಗಲು, ಆ ರಾತ್ರಿ, ಎರಡನೇದಿನ ನಕ್ಷತ್ರ ಪರ್ಯಂತ ಇದು ಪಕ್ಷಿಣಿಯು, ಈಗ ಇರುವ, ಮುಂದೆ ಬರುವ ಹಗಲುಗಳ ಮಧ್ಯದಲ್ಲಿಯ ರಾತ್ರಿ ಇದೂ ಪಕ್ಷಿಣಿಯು, ರಾತ್ರಿ ಮರಣವಾದಲ್ಲಿ ಆ ರಾತ್ರಿ, ಮುಂದಿನ ಹಗಲು, ರಾತ್ರಿಗಳು ಇದಾದರೂ ಪಕ್ಷಿಣೀ ಎಂದಾಗುವದು. ಕೆಲವರು ರಾತ್ರಿ ಮರಣದಲ್ಲಾದರೂ ಮರಣದಿನದಿಂದ ಎರಡನೇ ದಿನದ ನಕ್ಷತ್ರಪರ್ಯಂತವೆ ಪಕ್ಷಿಣಿಯನ್ನುವರು. ಹೀಗೆ ಅತಿಕ್ರಾಂತ ವಿಷಯದಲ್ಲಿ ಹಗಲು ಅಥವಾ ರಾತ್ರಿಗಳ ಮರಣಕ್ಕನುಸಾರವಾಗಿ ವ್ಯವಸ್ಥೆಯನ್ನು ತಿಳಿಯತಕ್ಕದ್ದು. ಆಚಾರ್ಯ, ಮಾತುಲ, ಮೊದಲಾದವರ ಆಶೌಚವು ತ್ರಿರಾತ್ರವೆಂದು ಹೇಳಿದೆಯಷ್ಟೇ! ಆದರೆ ಇದು ಕ್ರಿಯಾಕರ್ತನು ಬೇರೆಯವನಾದರೆ ಎಂದು ತಿಳಿಯುವದು. ಅಂತ್ಯಕರ್ಮ ಕರ್ತೃಗಳು ಶಿಷ್ಟಾದಿಗಳಾದರೆ ದಶಾಹ ಆಶೌಚವೆಂದೇ ತಿಳಿಯತಕ್ಕದ್ದು. ಗ್ರಾಮ ಮಧ್ಯದಲ್ಲಿ ಎಷ್ಟು ಕಾಲ “ಶವ” ವಿರುತ್ತದೆಯೋ ಅಲ್ಲಿಯವರೆಗೆ ಗ್ರಾಮಕ್ಕೆ ಆಶೌಚವು. ಪಟ್ಟಣದಲ್ಲಿ ಈ ನಿಯಮವಿರುವದಿಲ್ಲ. ಪಟ್ಟಣ, ಗ್ರಾಮ ಇತ್ಯಾದಿ ಲಕ್ಷಣಗಳನ್ನು ಬೇರೆಡೆಯಲ್ಲಿ ಹೇಳಿದೆ. ಮನೆಯಲ್ಲಿ ಗೋವು ಮೊದಲಾದ ಪಶುಗಳು ಮೃತವಾದಲ್ಲಿ ಎಷ್ಟು ಪರ್ಯಂತ ಶವವಿರುವದೋ ಅಷ್ಟು ಪರ್ಯಂತ ಆಶೌಚವು. ಬ್ರಾಹ್ಮಣನ ಮನೆಯಲ್ಲಿ ನಾಯಿಯು ಸತ್ತರೆ ಮನೆಗೆ ಹತ್ತು ರಾತ್ರಿ ಪರ್ಯಂತ ಆಶೌಚವು. ಶೂದ್ರಮರಣವಾದರೆ ಒಂದು ಮಾಸವು ಪತಿತನು ಮೃತನಾದರೆ ಎರಡು ಮಾಸಗಳು. ಮೈಂಛಾದಿಗಳು ಮೃತರಾದರೆ ನಾಲ್ಕು ತಿಂಗಳು. ಮನೆಯಲ್ಲಿ ಹುಟ್ಟಿದ ಅಥವಾ ಕ್ರಯಕ್ಕೆ ತೆಗೆದುಕೊಂಡ ಇಲ್ಲವೆ ಋಣದಿಂದ ಬಿಡಿಸಲ್ಪಟ್ಟ ಅಥವಾ ಅಕಸ್ಮಾತ್ ಲಬ್ಧನಾದ ದಾಸ ಇವನಿಗೆ, ಸ್ವಾಮಿಯು ಮೃತನಾದರೆ ಸ್ವಜಾತ್ಯುಕ್ತ ಆಶೌಚವು ಯುದ್ಧದಲ್ಲಿ ಆಯುಧದ ಹೊಡೆತದಿಂದ ತತ್‌ಕ್ಷಣ ಮೃತನಾದರೆ ‘ಸ್ನಾನಮಾತ್ರ"ವು. ಆತನ ಸಂಬಂಧವಾಗಿ ಆಶೌಚವಿಲ್ಲ. ಆತನ ದಶಕರ್ಮಾದಿಗಳನ್ನೂ ಸದ್ಯವೇ ಮಾಡತಕ್ಕದ್ದು. ಯುದ್ಧದಲ್ಲಿ ಗಾಯ ಹೊಂದಿ ಕಾಲಾಂತರದಲ್ಲಿ ಮೃತನಾದರೆ ಏಕಾಹವು ಆ ಗಾಯದಿಂದ ಮೂರುದಿನ ನಂತರ ಮರಣಪಟ್ಟರೆ, ಕಪಟದಿಂದ ಮೃತನಾದರೆ ಮೂರು ರಾತ್ರಿಗಳು. ಯುದ್ಧದ ಗಾಯದಿಂದ ಏಳು ರಾತ್ರಿಗಳ ನಂತರ ಮೃತನಾದರೆ “ದಶಾಹ” ವಂದನ್ನುವರು. ಶಿಷ್ಯರಾದರೋ ಯುದ್ಧದಲ್ಲಿ ಮೃತನಾದವನಿಗೆ “ಸದ್ಯಃಶೌಚಾದಿಗಳು ಲೋಕಾಚಾರವಿರುದ್ಧವಾಗಿರುವದರಿಂದ ಹಾಗೆ ಆಚರಿಸಲು ಬರುವಂತಿಲ್ಲವೆನ್ನುವರು. ಪ್ರಯಾಗಾದಿಗಳಲ್ಲಿ ಕಾವ್ಯಮರಣವಾದರೆ ಸ್ನಾನಮಾತ್ರ, ಪ್ರಾಯಶ್ಚಿತ್ತ ನಿಮಿತ್ತದಿಂದ ಅಗಾದಿಗಳಲ್ಲಿ ಮರಣವಾದರೆ ಏಕಾಹವು, ಮಹಾರೋಗಾದಿಗಳ ಪೀಡೆಗಳನ್ನು ತಡೆಯಲಾಗದೆ ಜಲಾದಿಗಳಲ್ಲಿ ಮರಣವಾದರೆ ತ್ರಿರಾತ್ರವು. ಇದರ ವಿಷಯಕ್ಕಾದರೂ ಶಿಷ್ಯಸಮ್ಮತಿಯಿಲ್ಲ. ಇದರಂತೆ ಕಾರಾಗಾರದಲ್ಲಿ ಮರಣವಾದರ ಏಕಾಹ ಎಂಬುದೂ ೪೮೨ ಧರ್ಮಸಿಂಧು ಶಿಷ್ಟ ಸಮ್ಮತವಲ್ಲ. ಅತಿಕ್ರಾಂತ ಆಶೌಚ ಜನನದಲ್ಲಿ “ ಅತಿಕ್ರಾಂತ ಆಶೌಚ” ವಿಲ್ಲ. ಆದರೆ ದಶಾಹಾನಂತರ ಶ್ರವಣವಾದಲ್ಲಿ ಸ್ನಾನವಿದೆ. ಮೃತರ ವಿಷಯದಲ್ಲಾದರೂ ಅನುಪನೀತನ ಮರಣನಿಮಿತ್ತಕಗಳಾದ ತ್ರಿರಾತ್ರ, ಏಕರಾತ್ರಗಳಲ್ಲಿ ಮತ್ತು ಮಾತುಲಾದಿ ವರಗೋತ್ರದವರ ಮರಣನಿಮಿತ್ತಕಗಳಾದ ಪಕ್ಷಿಣೀ, ತ್ರಿರಾತ್ರಾದಿಗಳಲ್ಲಾದರೂ ಅತಿಕ್ರಾಂತ ಆಶೌಚವಿಲ್ಲ. ವಿವಾಹಿತಳಾದ ಕನ್ನೆಗೆ ತಂದೆ, ತಾಯಿಗಳ ಮರಣನಿಮಿತ್ತಕಗಳಾದ ತ್ರಿರಾತ್ರ ಕಳೆದಿದ್ದರೂ ಹತ್ತುದಿನಗಳ ಒಳಗೆ ಪುನಃ ತ್ರಿರಾತ್ರ ಆಶೌಚ ತೆಗೆದುಕೊಳ್ಳುವದಿದೆ. ಹತ್ತು ದಿನಗಳ ನಂತರ ವರ್ಷಾಂತದ ವರೆಗೆ ಯಾವಾಗ ತಿಳಿದರೂ ಆ ದಿನದಿಂದ ಪಕ್ಷಿಣಿ ಆಶೌಚ ಸ್ವೀಕರಿಸತಕ್ಕದ್ದು ಎಂದು ಉಕ್ತವಾಗಿದೆ. ಸೋದಕಾದಿ ತ್ರಿರಾತ್ರಾಶೌಚಕ್ಕೆ ಅತಿಕ್ರಾಂತತ್ವವಿಲ್ಲ. ಆದರೆ ಕಾಲಾಂತರದಲ್ಲಾದರೂ ಸ್ನಾನ ಮಾತ್ರ ಇದ್ದೇ ಇದೆ. ದಶಾಹಾದಿ ಮೃತಾಶೌಚವಿಷಯದಲ್ಲಿಯೇ ಅತಿಕ್ರಾಂತ ಆಶೌಚ ಬಳಸತಕ್ಕದ್ದು. ದಶಾಹಾದಿ ಆಶೌಚಗಳ ಮತ್ತು ರಾತ್ರಾ ಶೌಚಗಳ ಜ್ಞಾನವು ಆಯಾಯ ಆಶೌಚಗಳ ಮಧ್ಯದಲ್ಲಾದರೆ ಉಳಿದ ದಿನಗಳಿಂದಲೇ ಶುದ್ಧಿಯು, ಪುತ್ರಾದಿಗಳಿಗಾದರೂ ಶೇಷದಿನಗಳಿಂದಲೇ ಶುದ್ಧಿಯು. ಅಂತ್ಯಕ್ರಿಯೆಯನ್ನಾದರೂ ಉಳಿದ ದಿನಗಳಿಂದಲೇ ಮುಗಿಸುವದು. ಇದರಂತೆ ಅಸ್ಥಿಸಂಸ್ಕಾರ ಶಾಖಾಸಂಸ್ಕಾರಗಳನ್ನಾದರೂ ಶೇಷದಿನಗಳಿಂದಲೇ ಮುಗಿಸತಕ್ಕದ್ದು, ಸೋದಕರ ತ್ರಿರಾತ್ರ ಮಾತುಲಾದಿಗಳ ತ್ರಿರಾತ್ರ, ಪಕ್ಷಿಣಿ ಇತ್ಯಾದಿಗಳಲ್ಲಿಯೂ ಹೀಗೆಯೇ ತಿಳಿಯತಕ್ಕದ್ದು. ಅಂದರೆ ಶೇಷಕಾಲದಿಂದಲೇ ಶುದ್ಧಿಯು, ತ್ರಿರಾತ್ರಾನಂತರ ದಶರಾತ್ರೆಗೆ ಕಡಿಮೆಯಾದ ಆಶೌಚಗಳ ಜ್ಞಾನವು ದಶಾಹದ ಒಳಗಾದರೂ ಅತಿಕ್ರಾಂತಾಶೌಚವಿಲ್ಲ. ಬರೇ ಸ್ನಾನ ಮಾತ್ರ. ಮಾತಾಪಿತೃಗಳ ಮರಣವು ದೂರದೇಶದಲ್ಲಾಗಿ ಸಂವತ್ಸರದ ಒಳಗೆ ಶ್ರವಣವಾದಲ್ಲಿ ಪುತ್ರನಿಗೆ ತಿಳಿದ ದಿನದಿಂದ ದಶಾಹಾದಿ ಪೂರ್ಣ ಆಶೌಚವು. ದಂಪತಿಗಳಿಬ್ಬರೂ ಬೇರೆ ಬೇರೆ ದೇಶಗಳಲ್ಲಿ ಬೇರೆ ಕಾಲಗಳಲ್ಲಿ ಮೃತರಾದರೆ ಪರಸ್ಪರರ ಆಶೌಚವನ್ನು ಶ್ರವಣ ದಿನದಿಂದ ದಶಾಹ ಆಶೌಚವನ್ನು ತೆಗೆದುಕೊಳ್ಳುವದು. ಸವತೀತಾಯಿಯ ಮರಣದಲ್ಲಿ ಪುತ್ರನಿಗೆ ಹತ್ತು ದಿನಗಳ ನಂತರ ಶ್ರವಣವಾದಲ್ಲಿ ದೇಶ, ಕಾಲಭೇದವಿಲ್ಲದ “ತ್ರಿರಾತ್ರ"ವು ಔರಸ ಪುತ್ರನ ಮರಣದಲ್ಲಿ ತಾಯಿ-ತಂದೆಗಳಿಗೆ ಸಂವತ್ಸರ ಕಳೆದ ಮೇಲೆ ತಿಳಿದರೂ “ತ್ರಿರಾತ್ರ"ವು, ದಶಾಹಾನಂತರದಲ್ಲಿ ಒಂದೇ ದೇಶದೊಳಗೆ ಸಪಿಂಡರ ಮರಣವು ಜ್ಞಾತವಾದರೆ, ಮೂರು ತಿಂಗಳೊಳಗಾದರೆ ತ್ರಿರಾತ್ರವು, ಆರು ತಿಂಗಳೊಳಗೆ ಪಕ್ಷಿಣ, ಒಂಭತ್ತು ತಿಂಗಳು ಪರ್ಯಂತ “ಏಕರಾತ್ರ”. ಆಮೇಲೆ ವರ್ಷಪರ್ಯಂತ “ಸಜ್ಯೋತಿ” ಯು ಅಥವಾ ಸ್ನಾನ ಮಾತ್ರ. ಮಾಧವಮತದಲ್ಲಿ ಮೂರು ತಿಂಗಳ ಪರ್ಯಂತ ತ್ರಿರಾತ್ರವು. ಆರು ತಿಂಗಳ ಪರ್ಯಂತ ಪಕ್ಷಿಣಿಯು, ವರ್ಷಪರ್ಯಂತ ಏಕರಾತ್ರವು, ವರ್ಷದ ನಂತರ ಸ್ನಾನ ಮಾತ್ರ. ಇವುಗಳನ್ನು ಆಪತ್ತು, ಅನಾಪತ್ತುಗಳನ್ನನುಲಕ್ಷಿಸಿ ಆಚರಿಸುವದು. ದೇಶಾಂತರದಲ್ಲಿದ್ದ ಸಪಿಂಡನು ಮೃತನಾಗಿದ್ದು ಹತ್ತು ದಿನಗಳ ನಂತರ ಗೊತ್ತಾದರೆ ‘ಸ್ನಾನ ಮಾತ್ರ’ವೆಂದು ಹೇಳಿರುತ್ತಾನೆ. ಇಲ್ಲಿ ಮಾಧವಮತವೇ ಯುಕ್ತವೆಂದು ತೋರುತ್ತದೆ. ಅತಿಕ್ರಾಂತ ಆಶೌಚ ಮತ್ತು ವಯಸ್ಸು, ಅವಾ ಇತ್ಯಾದಿ ಕಾರಣದಿಂದುಟಾಗುವ ಆಶೌಚ, ಇವು ಎಲ್ಲ ವರ್ಣದವರಿಗೂ ಸರ್ವಸಾಧಾರಣವಾದದ್ದು.

ಪರಿಚ್ಛೇದ ೩ ಉತ್ತರಾರ್ಧ ೪೮೩ “ದೇಶಾಂತರ"ವೆಂದರೆ ಬ್ರಾಹ್ಮಣನಿಗೆ ತನ್ನ ಮನೆಯಿಂದ ಇಪ್ಪತ್ತು ಯೋಜನಕ್ಕಿಂತ ದೂರದ ಪ್ರದೇಶವೆಂದು ತಿಳಿಯುವದು. ಕ್ಷತ್ರಿಯನಿಗೆ ಇಪ್ಪತ್ತುನಾಲ್ಕು, ವೈಶ್ಯನಿಗೆ ಮೂವತ್ತು, ಶೂದ್ರನಿಗೆ ಅರವತ್ತು ಯೋಜನಗಳು- ಹೀಗೆ ತಿಳಿಯತಕ್ಕದ್ದು. ಕೆಲವರು ಬ್ರಾಹ್ಮಣನಿಗೆ ಮೂವತ್ತು ಯೋಜನದ ಆಚೆ ಎಂದು ಹೇಳುವರು. ಭಾಷಾಭೇದ ಸಹಿತವಾದ, ಮಹಾಪರ್ವತ, ಮಹಾನದಿ, ಗಡಿಯಂತಿರುವ ಪ್ರದೇಶವೂ “ದೇಶಾಂತರ ವೆನ್ನಲ್ಪಡುವದು. ಇಂಥಲ್ಲಿ ಭಾಷಾಭೇದವಿಲ್ಲದಿದ್ದರೂ ಹೇಳಿದ ಗಡಿಗಳಿಂದಲೇ ದೇಶಾಂತರತ್ವವುಂಟಾಗುವದೆಂದು ಹೇಳುವರು. ಆದರೆ ತೀರಹತ್ತರದ ನದೀ, ಪರ್ವತಾದಿ ಗಡಿಗಳಿಂದ “ದೇಶಾಂತರ"ವೆನ್ನಲಾಗದು. ಇನ್ನು ಹಿಂದೆ ಹೇಳಿದ ಯೋಜನಗಳಿಗೆ ಮೂರು ನಾಲ್ಕು ಯೋಜನ ಹೆಚ್ಚು ಕಡಿಮೆಯಿದ್ದ ನದೀ ಪರ್ವತಗಳಿರತಕ್ಕದ್ದು. ಹಾಗಲ್ಲದಿದ್ದರೆ ಮಹಾಗಿರಿಯ ಅಥವಾ ಮಹಾನದಿಯ ಈಚಿನ ಮತ್ತು ಆಚಿನ ಪ್ರದೇಶಗಳೂ ಪರಸ್ಪರ “ದೇಶಾಂತರಗಳೇ” ಎಂದು ಹೇಳಬೇಕಾದೀತು. ಅಂಥ ಒಂದೇ ಯೋಜನ ಅಂತರಕ್ಕೆ “ದೇಶಾಂತರ” ಎಂದು ಹೇಳಲಾದೀತೇ? ಸಗೋತ್ರ ಸಂಬಂಧಿ ಆಶೌಚವನ್ನು ಪತ್ನಿ, ಪತಿ, ಪುತ್ರರೆಲ್ಲರೂ ಸ್ವೀಕರಿಸತಕ್ಕದ್ದು. ಇನ್ನು ಮಾತುಲತ್ವ, ಭಗಿನೀತ್ವ ಯುಕ್ತರಾದ ಭಿನ್ನಗೋತ್ರದವರ ಆಶೌಚವನ್ನು ಪತ್ನಿ, ಪತಿ, ಪುತ್ರರಲ್ಲಿ ಯಾರಿಗೆ ಅವರ ಸಂಬಂಧವಿದೆಯೋ ಅಂಥ ಸಂಬಂಧವಿರುವವನೇ ಆ ಆಶೌಚವನ್ನಾಚರಿಸತಕ್ಕದ್ದು; ಹೊರತು ಎಲ್ಲರೂ ಅಲ್ಲ. ರಾತ್ರಿಯಲ್ಲಿ ಜನನ ಅಥವಾ ಮರಣವಾದ ವಿಷಯದಲ್ಲಿ ರಾತ್ರಿಯ ಮೂರು ಭಾಗಗಳಲ್ಲಿ ಮೊದಲನೆಯ ಎರಡರಲ್ಲಾದರೆ ಪೂರ್ವದಿನ, ಮೂರನೆಯ ಭಾಗದಲ್ಲಾದರೆ ಮಾರನೇ ದಿನಗಳಿಂದ ಆಶೌಚ ಆರಂಭವನ್ನು ಹಿಡಿಯತಕ್ಕದ್ದು ಅಥವಾ ಅರ್ಧರಾತ್ರಿಯ ಒಳಗಾದರೆ ಪೂರ್ವದಿನ, ನಂತರವಾದರೆ ಪರದಿನ ಹೀಗೂ ತೆಗೆದುಕೊಳ್ಳುವ ಪಕ್ಷವುಂಟು. ಈ ವಿಷಯದಲ್ಲಿ ದೇಶಾಚಾರದಂತೆ ಆಚರಿಸತಕ್ಕದ್ದು. ಆಹಿತಾಗ್ನಿ ಅನಾಹಿತಾಗ್ನಿ ವಿಷಯ ಆಹಿತಾಗ್ನಿಯಾದವನ ಆಶೌಚವನ್ನು ಪುತ್ರಾದಿಗಳು ಮಂತ್ರವತ್ತಾಗಿ ದಹನವಾದ ದಿನವನ್ನಾರಂಭಿಸಿ ಸ್ವೀಕರಿಸುವದು. ಇಲ್ಲಿ “ಆಹಿತಾಗ್ನಿ” ಅಂದರೆ ಶೌತಾಗ್ನಿ (ದಕ್ಷಿಣ, ಗಾರ್ಹಪತ್ಯ, ಆಹವನೀಯ ಹೀಗೆ ಮೂರು ಶೌತಾಗಿ ಧಾರಣ ಮಾಡಿದವ)ಅವನ ಹೊರತಾದವನು “ಗೃಹ್ಯಾಗಿ” (ಸ್ಮಾರ್ತಾಗ್ನಿ) ಎಂದು ತಿಳಿಯತಕ್ಕದ್ದು. ಇಲ್ಲಿ ಗೃಹ್ಯಾಗ್ನಿಗೆ ಆಹಿತಾಗ್ನಿ” ಎಂಬ ಸಂಸ್ಥೆಯಿರುವದಿಲ್ಲ. ಆತನು “ಅನಾಹಿತಾಗ್ನಿ"ಯೆಂದೇ ಇಲ್ಲಿ ಅಭಿಪ್ರೇತನು, ಆಹಿತಾಗ್ನಿಯು ದೇಶಾಂತರದಲ್ಲಿ ಮರಣಪಟ್ಟರೆ ಮಂತ್ರವತ್ತಾಗಿ ದಾಹವಾಗುವ ಮೊದಲು ಪುತ್ರಾದಿಗಳಿಗೆ ಆಶೌಚ, ಸಂಧ್ಯಾವಂದನಾದಿ ನಿತ್ಯಕರ್ಮಲೋಪಗಳಿಲ್ಲ. ಮಂತ್ರವಾಗಿ ದಾಹವಾದ ಮೇಲೆ ಪುತ್ರಾದಿಗಳಿಗಷ್ಟೇ ಅಲ್ಲ; ಮಗಳು, ಮಗಳ ಮಗ ಮೊದಲಾದ ಪರಗೋತ್ರದವರಿಗಾದರೂ ಆಶೌಚವಿದೆ. ಮಂತ್ರವತ್ತಾದ ದಹನವೇ ಆಶೌಚಾರಂಭಕವಾದ್ದರಿಂದ ಇಲ್ಲಿ ಅತಿಕ್ರಾಂತವಾದ ಆಶೌಚದ ಅಭಾವವಾಗಲೀ ಅಥವಾ ಆಶೌಚ ಹ್ರಾಸವಾಗುವದಾಗಲೀ ಇರುವದಿಲ್ಲ. ಆದುದರಿಂದ ಆಹಿತಾಗ್ನಿಯಾದವನ ಶಾಖಾಸಂಸ್ಕಾರದಲ್ಲಾದರೂ ದಾಹದಿಂದ “ದಶಾಹ” ಆಶೌಚವುಂಟಾಗುವದು. ಅದು ದೇಶಾಂತರದಲ್ಲಾಗಲೀ ಕಾಲಾಂತರದಲ್ಲಾದರೂ ಸರಿಯೇ. ಧರ್ಮಸಿಂಧು ಅನಾಹಿತಾಗ್ನಿಯ ಮರಣದಲ್ಲಿ ಮರಣವಾದ ದಿನದಿಂದಾರಂಭಿಸಿ ಪುತ್ರಾದಿಗಳು ಆಶೌಚವನ್ನಾಚರಿಸತಕ್ಕದ್ದು. ಅನಾಹಿತಾಗ್ನಿಯ ದೇಶಾಂತರ ಮರಣದಲ್ಲಿ ಮರಣ ಶ್ರವಣಾನಂತರವೇ ಅತಿಕ್ರಾಂತಾಶೌಚವು ಪ್ರಾಪ್ತವಾಗುವದು. ಇಲ್ಲಿ ದಾಹಾದಿ ಪ್ರಶ್ನೆಯಿಲ್ಲ. ಅನಾಹಿತಾಗ್ನಿಯ ಅಸ್ಥಿದಾಹ, ಶಾಖಾದಾಹಗಳಲ್ಲಿ ಮೊದಲು ಆಶೌಚ ಸ್ವೀಕರಿಸದಿರುವ ಪತ್ನಿ, ಪುತ್ರರಿಗೆ ಶ್ರವಣಾನಂತರ ದಶಾಹ ಅತಿಕ್ರಾಂತಾಶೌಚವೇ ಇದೆ. ಆಶೌಚವನ್ನು ಮೊದಲು ಸ್ವೀಕರಿಸುವ ಭಾರ್ಯಾ, ಪುತ್ರರಿಗೆ ಕರ್ತೃವು ಬೇರೆಯವನಾಗಿದ್ದರೆ ದಾಹಕಾಲದಲ್ಲಿ “ಮೂರು ರಾತ್ರಿ"ಯು, ಸವತಿಯವರಿಗೂ ಅನ್ನೋನ್ಯ ಇದರಂತೆಯೇ, ಪತ್ನಿ ಸಂಸ್ಕಾರದಲ್ಲಿ ಪತಿಗೂ ಇದರಂತೆಯೇ. ಇವರಿಗಿಂತ ಹೊರತಾದ ಸಪಿಂಡರಿಗೆ ಮೊದಲು ಆಶೌಚ ತೆಗೆದುಕೊಳ್ಳದಿದ್ದರೆ ಅನಾಹಿತಾಗ್ನಿಯ ಸಂಸ್ಕಾರಕಾಲದಲ್ಲಿ “ತ್ರಿರಾತ್ರ"ವು. ಮೊದಲು ಆಶೌಚ ಬಳಸಿದ ಸಪಿಂಡರಿಗೆ ದಾಹಕಾಲದಲ್ಲಿ ಸ್ನಾನ ಮಾತ್ರವು. ಈ ಸಪಿಂಡಾದಿಗಳಿಗೆ ತ್ರಿರಾತ್ರ ಮೊದಲಾದವುಗಳೂ, ಪುತ್ರಾದಿಗಳಿಗೆ ದಶಾಹ ಮೊದಲಾದವುಗಳೂ ದಶಾಹಾನಂತರ “ಸಂಸ್ಕಾರ ಮಾಡುವಾಗ” ಎಂದು ತಿಳಿಯತಕ್ಕದ್ದು. ದಶಾಹ ಮಧ್ಯದಲ್ಲಿ ಸಂಸ್ಕಾರಮಾಡುವಿಕೆಯಲ್ಲಿ ಉಳಿದ ದಿನಗಳಿಂದಲೇ ಶುದ್ದಿಯು ಮತ್ತು ಕರ್ಮಸಮಾಪ್ತಿಯು, ಅಹಿತಾಗ್ನಿಯಾದವನಿಗೆ ಮಾತ್ರವೇ ದಶಾಹಮಧ್ಯದಲ್ಲಿ ಶರೀರದಾಹ, ಅದಾಹ ಅಥವಾ ಪರ್ಣಶರದಾಹದಲ್ಲಿ ಶೇಷದಿನಗಳಿಂದ ಶುದ್ಧಿಯಿಲ್ಲ, ಯಾಕೆಂದರೆ ಮಂತ್ರವತ್ತಾದ ದಾಹದಿನವೇ ಪ್ರಥಮ ದಿನವೆಂದು ಹೇಳಿದೆ. ದಶಾಹಾನಂತರ ದೇಶಾಂತರದಲ್ಲಿ ಮೃತರಾದ ಅನಾಹಿತಾಗ್ನಿಗಳ ಮರಣಶ್ರವಣದಿಂದ ಮೂರು ದಿನ ಆಶೌಚ ತೆಗೆದುಕೊಳ್ಳುವದಷ್ಟೇ! ಆದರೆ ಶ್ರವಣದ ನಂತರ ನಾಲ್ಕು-ಐದು ಇತ್ಯಾದಿ ದಿನಗಳಲ್ಲಿ ಸಂಸ್ಕಾರ ಪ್ರಾರಂಭವಾದರೆ ಸ್ನಾನಮಾತ್ರ. ಮೊದಲು ಆಶೌಚ ಸ್ವೀಕರಿಸದಿರುವವರು ತ್ರಿರಾತ್ರವನ್ನು ತೆಗೆದುಕೊಳ್ಳುವದು. ಭಾರ್ಯಾಪುತ್ರಾದಿಗಳಿಗೆ ಶ್ರವಣ ದಿನದಿಂದಾರಂಭಿಸಿ ದಶಾಹಾಶೌಚವು. ದ್ವಿತೀಯಾದಿ ದಿನಗಳಲ್ಲಿ ಪ್ರಾರಂಭವಾದರೆ ನಾಲ್ಕನೇ ದಿನ ಸಪಿಂಡರಿಗೆ ಶುದ್ದಿಯು, ಭಾರ್ಯಾದಿಗಳಿಗೆ ಶ್ರವಣ ದಿನದಿಂದ ದಶಾಹವೇ ಎಂದು ಊಹಿಸುವರು. ಅಂದರೆ ವಾರ್ತೆಯು ತಿಳಿಯದ ಕಾಲದಿಂದ ಮುಂದೆ ತಂದು ತಾಯಿಗಳದ್ದಾದರೆ ಹದಿನೈದು ವರ್ಷ ಪರ್ಯಂತ ಎಂದು ತಿಳಿಯುವದು. ದೇಶಾಂತರಗತನಾದವನನ್ನು ಹನ್ನೆರಡುವರ್ಷಗಳ ವರೆಗೆ ನಿರೀಕ್ಷೆ ಮಾಡಬೇಕೆಂದಿದೆ. ಹೀಗೆ ನಿರೀಕ್ಷೆಮಾಡಿ ಮೃತನಾದನೆಂದು ಭಾವಿಸಿ ಶಾಖಾದಹನ ಸಂಸ್ಕಾರವಾದರೂ ಇದರಂತ ಪುತ್ರಾದಿಗಳಿಗೆ ದಶಾಹವು ಸಪಿಂಡರಿಗೆ ತ್ರಿರಾತ್ರವು. ಹೀಗೆ ಊಹಿಸುವದು. ಪ್ರತೀಕ್ಷೆ-ಬೇರೆಯ ಪೂರ್ವವಯಸ್ಸಿನವರಾದರೆ ಇಪ್ಪತ್ತು ವರ್ಷ ನಿರೀಕ್ಷೆಯು, ಮಧ್ಯವಯಸ್ಸಿನವರಿಗೆ ಹದಿನೈದು, ಅಪರವಯಸ್ಸಿನವರಿಗೆ ಹನ್ನೆರಡು ವರ್ಷಗಳು. ಹೀಗೆ ಮರಣ ನಿರೀಕ್ಷಾಕಾಲವು. ಈ ಅವಧಿಯಲ್ಲಿ ಮರಣನಿಶ್ಚಯವು, ಅಸಂಭವವಾದರೆ ಯುಕ್ತಾದಿಗಳಿಂದ ಪ್ರತೀಕ್ಷೆಯನ್ನು ಮಾಡತಕ್ಕದ್ದು. ಆಶೌಚಸಂಪಾತದ ನಿರ್ಣಯ ಒಂದು ಆಶೌಚ ಪ್ರಾಪ್ತವಾಗಿದ್ದಾಗ ಇನ್ನೊಂದು ಅಥವಾ ಎರಡು ಮೂರು ಬೇರೆ ಆಶೌಚ ಅದರೊಳಗೇ ಬಂದರೆ ಅದಕ್ಕೆ ಆಶೌಚ ಸಂಪಾತ"ವನ್ನುವರು. ದಶಾಹ ಮೃತಾಶೌಚದಲ್ಲಿ ದಶಾಹದ ಅಥವಾ ತ್ರಿರಾತ್ರಾದಿ ಆಶೌಚ ಬಂದಲ್ಲಿ ಮೊದಲು ಬಂದ ಆಶೌಚದ ಅಂತ್ಯದಲ್ಲಿಯೇ ಪರಿಚ್ಛೇದ ೩ ಉತ್ತರಾರ್ಧ ಶುದ್ದಿಯಾಗುವದು. ಅದರಂತೆ ದಶಾಹ ಜನನಾಶೌಚದಲ್ಲಿ ದಶಾಹ ಅಥವಾ ಅದಕ್ಕಿಂತ ಕಡಿಮೆಯಾದ ಜನನಾಶೌಚಬಂದರೆ ಪೂರ್ವದ ಆಶೌಚ ಸಮಾಪ್ತಿಯಿಂದಲೇ ಶುದ್ಧಿಯು. ದಶಾಹಮೃತಾಶೌಚದಲ್ಲಿ ದಶಾಹ ಜನನಾಶೌಚ ಅಥವಾ ತ್ರಿರಾತ್ರ ಆಶೌಚ ಬಂದರೆ ಮೃತಾಶೌಚ ಸಮಾಪ್ತಿಯಿಂದಲೇ ಶುದ್ಧಿಯು, ತ್ರಿದಿನ ಮೃತಾಶೌಚದಲ್ಲಿ ಮೂರು ದಿನಗಳ ಅಥವಾ ಒಂದು ದಿನದ ಮೃತ-ಜನನಾಶೌಚಗಳು ಬಂದರೆ ಪೂರ್ವದಿಂದಲೇ ಶುದ್ಧಿಯು. ದಿನದ ಜನನಾ ಶೌಚದಲ್ಲಿ ತ್ರಿದಿನದ ಜನನಾಶೌಚಬಂದರೆ ಪೂರ್ವದಿಂದಲೇ ಶುದ್ದಿಯು ಜನನಾಶೌಚದಲ್ಲಿ ಸಮ ಅಥವಾ ಹೆಚ್ಚಿನ ಮೃತಾಶೌಚಗಳು ಹೋಗುವದಿಲ್ಲ. ಪಕ್ಷಿಣಾದಿ ರೂಪವಾದ ಮೃತಾಶೌಚದಲ್ಲಿ ತ್ರಿದಿನ ಅಥವಾ ದಶಾಹ ಜನನಾಶೌಚವು, ಮತ್ತು ತ್ರಿದಿನ ಮೃತಾಶೌಚದಲ್ಲಿ ದಶಾಹಜಾತಾಶೌಚವು ಹೋಗುವದಿಲ್ಲವೆಂದು ಬಹುಗ್ರಂಥಕಾರರ ಅಭಿಪ್ರಾಯವು ಒಬ್ಬ ಗ್ರಂಥಕಾರನು ಮೃತಾಶೌಚವು ಕಡಿಮೆಯದಾಗಿದ್ದು ಅಧಿಕವಾದ ಜಾತಾಶೌಚವು ಹೋಗುವದಿಲ್ಲವೆಂದು ಹೇಳಿರುವನು. ಅಂದರೆ ತ್ರಿದಿನ ಮೃತಾಶೌಚದಲ್ಲಿ ದಶರಾತ್ರದ ಜಾತಾಶೌಚವು ಹೋಗುವದಿಲ್ಲವೆಂದರ್ಥ. ಇದರಂತೆ ಪಕ್ಷಿಣಿಯಲ್ಲಿ ತ್ರಿದಿನ. ಏಕಾಹದಿಂದ ಪಕ್ಷಿಣೀ ಆಶೌಚವು ನಿವೃತ್ತವಾಗುವದಿಲ್ಲ. ತ್ರಿದಿನ ಜಾತಾಶೌಚದಿಂದ ದಶಾಹ ಜಾತಾಶೌಚವು ಹೋಗುವದಿಲ್ಲ. ಇಲ್ಲಿ ತಿಳಿಯಬೇಕಾದದ್ದೇನೆಂದರೆ- “ಸಂಪಾತ"ವೆಂದರೆ ಆಶೌಚವುಳ್ಳವರಿಗೆ ಇನ್ನೊಂದು ಆಶೌಚ ಬಂದದ್ದು ತಿಳಿದಮೇಲೆ ಅದರ ಅಸ್ತಿತ್ವವುಂಟಾಗುತ್ತದೆ ಎಂದರ್ಥ. ಅದರಿಂದ ಪೂರ್ವಾಶೌಚಮಧ್ಯದಲ್ಲಿ ಪರಾಶೌಚವು ಉಂಟಾಗಿದ್ದರೂ ಅದು ಮೊದಲು ಗೊತ್ತಾಗಿರದೆ ಪೂರ್ವಾಶೌಚದ ಅಂತ್ಯದಲ್ಲಿ ಜ್ಞಾತವಾದರೆ ಅದು ಪೂರ್ವಾಶೌಚದಿಂದ ನಿವೃತ್ತವಾಗುವದಿಲ್ಲ. ಯಾಕೆಂದರೆ ಅದು “ಸಂಪಾತ"ವೆಂದಾಗುವದಿಲ್ಲ. ಈ ಪೂರ್ವತ್ವ-ಪರತ್ವಗಳು ಉತ್ಪತ್ತಿಯಿಂದ ಆದವುಗಳೇ ಹೊರತು ಜ್ಞಾನಕೃತವಾದವುಗಳಲ್ಲ. ಆದುದರಿಂದ ಪೂರ್ವದಲ್ಲಿ, ಉತ್ಪನ್ನವಾಗಿದ್ದರೂ ಪರದಲ್ಲಿ ಉತ್ಪನ್ನವಾದದ್ದರ ಜ್ಞಾನದ ನಂತರ ಆ ಪೂರ್ವೋತ್ಪನ್ನ ಆಶೌಚಜ್ಞಾನವಾದರೂ ಅದು ಈ ಪರಾಶೌಚ ಜ್ಞಾನದ ನಂತರ, ಮಧ್ಯದಲ್ಲಿ ಜ್ಞಾತವಾದರೆ ಅದು ನಿವೃತ್ತವೇ ಆಗುವದು. (ಇದರ ವಿವರ ಎರಡು ಆಶೌಚಗಳು ಬಂದಿವೆ. ಒಂದು ಮೊದಲು ಆದದ್ದು; ಇನ್ನೊಂದು ಕಡಗಾದದ್ದು. ಕಡೆಗಾದ ಆಶೌಚವು ಜ್ಞಾತವಾಗಿ ಆಶೌಚ ಬಳಸಲು ಶುರುವಾಗಿದ್ದಾಗ ಮೊದಲು ಆದ ಆಶೌಚವು ತಿಳಿದುಬಂದಿದೆ. ಆಗ ಆ ಎರಡೂ ಆಶೌಚಗಳ ಉತ್ಪತ್ತಿಯು ಹೇಗೇ ಇರಲಿ, ತಿಳಿದ ಆಶೌಚಮಧ್ಯದಲ್ಲಿ ಇನ್ನೊಂದಾಶೌಚವು ತಿಳಿದರೆ ಮೊದಲು ತಿಳಿದ ಆಶೌಚದಿಂದಲೇ ತಿಳಿದ ಎರಡನೆ ಆಶೌಚವು ಹೋಗುವದು ಎಂದಭಿಪ್ರಾಯ.) ಸಂಪಾತವೆಂದರೇ ‘ಜ್ಞಾನಕೃತವು ಹೊರತು ಉತ್ಪತ್ತಿಕೃತವಲ್ಲ ಎಂದು ಸಿದ್ಧಾಂತವು. ದಶಾಹದ ಅಂತ್ಯದಿನದ ರಾತ್ರಿಯಲ್ಲಿ ನಿವೃತ್ತಿಯೋಗ್ಯವಲ್ಲದ ದಶಾಹಾಶೌಚ ಸಂಪಾತವಾದರೆ (ನಿವೃತ್ತಿಯೋಗ್ಯವಲ್ಲದ ಅಂದರೆ ಜನನದಲ್ಲಿ ಮೃತ ಹಾಗೂ ಸಪಿಂಡರ ದಶಾಹದಲ್ಲಿ ಮಾತಾಪಿತ್ರಾದಿಗಳ ದಶಾಹ ಇತ್ಯಾದಿ. ಇವುಗಳನ್ನು ಬಿಟ್ಟು ಎಂಬರ್ಥದಲ್ಲಿ “ಯೋಗ"ಎಂಬ ಪದವನ್ನು ಹೇಳಿದ್ದು. ಎರಡುದಿನ ಹೆಚ್ಚು ಆಶೌಚ ತೆಗೆದುಕೊಳ್ಳುವದು. ಹತ್ತನೆ ರಾತ್ರಿಯ ನಾಲ್ಕನೇ ಯಾಮದಲ್ಲಿ ನಿವೃತ್ತಿಯೋಗ್ಯವಾದ ಬೇರೆ ದಶಾಹ ಆಶೌಚಬಂದರೆ ಮೂರು ಹೆಚ್ಚಿನ ೪೮೬ ಧರ್ಮಸಿಂಧು ದಿನಗಳನ್ನು ಬಳಸತಕ್ಕದ್ದು. ದಶಾಹದ ಅಂತ್ಯರಾತ್ರಿ ಅಥವಾ ಚತುರ್ಥಯಾಮದಲ್ಲಿ ನಿವೃತ್ತಿಯೋಗ್ಯವಾದ ತ್ರಿರಾತ್ರ ಆಶೌಚ ಸಂಪಾತವಾದಲ್ಲಿ ಪೂರ್ವದಿಂದಲೇ ಶುದ್ದಿಯು ಹೊರತು ಎರಡುದಿನಾದಿ ಹೆಚ್ಚು ತೆಗೆದುಕೊಳ್ಳತಕ್ಕದ್ದಿಲ್ಲ. ಹೀಗೆ ತ್ರಿದಿನಾದಿ ಆಶೌಚಗಳಿಗಾದರೂ ನಿವೃತ್ತಿಯೋಗ್ಯಗಳಾಗಿ ಪರಸ್ಪರ ಮೂರನೇ ರಾತ್ರಿಯಲ್ಲಿ ಅಥವಾ ತ್ರಿರಾತ್ರಿಯ ಶೇಷದಲ್ಲಿ ಸಂಪಾತವಾದರೂ ಪೂರ್ವದಿಂದಲೇ ಶುದ್ದಿಯು. ದ್ವಿದಿನ, ತ್ರಿದಿನಾದಿ ಹೆಚ್ಚು ಬಳಸತಕ್ಕದ್ದಿಲ್ಲ. ಎರಡು ಮೂರುದಿನ ಹೆಚ್ಚಿಗೆ ಬಳಸಬೇಕಾದಾಗ ಬೇರೆ ದಶಾಹಾಶೌಚ ಸಂಪಾತವಾದಲ್ಲಿ ಪೂರ್ವರಾತ್ರ ಅಥವಾ ತ್ರಿರಾತ್ರಿಗಳಿಂದ ಶುದ್ಧಿಯಾಗುವದಿಲ್ಲ. ಹೆಚ್ಚಿಸಿದ ದ್ವಿರಾತ್ರಿಯಲ್ಲಾದರೆ ಪಕ್ಷಿಣಿಯು ಹೋಗುವದು. ಬೆಳಸಿದ ಮೂರು ರಾತ್ರಿಗಳಲ್ಲಾದರೆ ತ್ರಿರಾತ್ರಾಶೌಚನಿವೃತ್ತಿಯು. ಇನ್ನು ಭಾಗಿನೇಯಾದಿಗಳು, ಮಾತುಲ ಮೊದಲಾದವರ ಅಂತ್ಯಸಂಸ್ಕಾರ ಮಾಡಿದ್ದರಿಂದ ಪ್ರಾಪ್ತವಾದ ದಶಾಹಾಶೌಚದಲ್ಲಿ ಸಪಿಂಡರ ಮರಣನಿಮಿತ್ತಕವಾದ ದಶಾಹಾಶೌಚವು ಪಾತವಾದಲ್ಲಿ ಆಗ ಪೂರ್ವಾಶೌಚದಿಂದ ಪರಾಶೌಚ ನಿವೃತ್ತಿಯಾಗುವದಿಲ್ಲ. ಆದರೆ ಆ ಕರ್ಮಾಂಗ ಆಶೌಚವು ಅಸ್ಪೃಶ್ಯತಾಮಾತ್ರಕ್ಕೆ ಕಾರಣವಾಗಿ ಸಂಧ್ಯಾವಂದನಾದಿಗಳಿಗೆ ಲೋಪವಿರದ್ದರಿಂದ ಅದು ಲಘು ಆಶೌಚ"ವೆನ್ನಲ್ಪಡುವದು. ಲಘುವಿನಿಂದ ಗುರುವು ಹೋಗುವದಿಲ್ಲವಷ್ಟೇ? ಹೀಗೆ ತ್ರಿರಾತ್ರಸಂಪಾತದಲ್ಲಿಯಾದರೂ ಜನನ ತ್ರಿರಾತ್ರಿಯು ನಿವೃತ್ತವಾಗುವದು. ಮೃತಕತ್ರಿರಾತ್ರಿಯು ನಿವೃತ್ತವಾಗುವದಿಲ್ಲ, ಇತ್ಯಾದಿ ಊಹಿಸುವದು. ಪುತ್ರನಿಗೆ ಸಪಿಂಡರ ಆಶೌಚದಲ್ಲಿ ತಂದೆ-ತಾಯಿಗಳ ಆಶೌಚವು ಹೋಗುವದಿಲ್ಲ. ಹೀಗೆಯೇ ಹೆಂಡತಿಗೆ ಗಂಡನ ಆಶೌಚವು ಹೋಗುವದಿಲ್ಲ. ಕೆಲವರು ಪ್ರತಿಗಾದರೂ ಪತ್ನಿಯ ಆಶೌಚವು ಹೋಗುವದಿಲ್ಲವೆನ್ನುವರು. ತಾಯಿಯ ಆಶೌಚಮಧ್ಯದಲ್ಲಿ ತಂದೆಯ ಆಶೌಚವು ಬಂದರೆ ಪೂರ್ವಾಶೌಚದಿಂದಲೇ ಶುದ್ಧಿಯು, “ಸ್ಮತ್ಯರ್ಥಸಾರ” ಆದಿ ಗ್ರಂಥಗಳಲ್ಲಾದರೋ ತಂದೆಯ ಆಶೌಚವನ್ನು ಪೂರ್ಣವಾಗಿಯೇ ತೆಗೆದುಕೊಳ್ಳಬೇಕೆಂದಿದೆ. ತಂದೆಯ ಆಶೌಚಮಧ್ಯದಲ್ಲಿ ತಾಯಿಯ ಮರಣವಾದರೆ ತಂದೆಯ ಆಶೌಚವನ್ನು ಮುಗಿಸಿ ಒಂದು ಪಕ್ಷಿಣೀ ಆಶೌಚವನ್ನು ಹೆಚ್ಚಿಗೆ ತೆಗೆದುಕೊಳ್ಳಬೇಕು. ಈ ಪಕ್ಷಿಣೀವೃದ್ಧಿಯು ತಂದೆಯು ತೀರಿ ಹತ್ತು ದಿನಗಳೊಳಗೆ ತಾಯಿಯ ಮರಣ ಅಥವಾ ಮರಣ ಜ್ಞಾನವಾದರೆ ಮಾತ್ರ, ಹತ್ತನೇರಾತ್ರಿ ಅಥವಾ ಚತುರ್ಥಯಾಮದಲ್ಲಿ ಮಾತೃಮರಣವಾದಲ್ಲಿ ದ್ವಿರಾತ್ರ, ತ್ರಿರಾತ್ರಗಳೇ ಹೊರತು ಪಕ್ಷಿಣಿಯಲ್ಲ. ಅನಾಹಿತಾಗ್ನಿಯಾದ ಪತಿಯ ಮರಣದಲ್ಲಿ ತಾಯಿಯು ದ್ವಿತೀಯಾದಿ ದಿನಗಳಲ್ಲಿ ಸಹಗಮನಮಾಡಿದಲ್ಲಿಯೂ ಹೆಚ್ಚಾಗಿ ಪಕ್ಷಿಯನ್ನಾಚರಿಸತಕ್ಕದ್ದಿಲ್ಲ. ಪತಿಯ ಆಶೌಚಾಂತ್ಯದಲ್ಲಿಯೇ ಶುದ್ದಿಯು, ನವಶ್ರಾದ್ಧಪಿಂಡಾದಿಗಳನ್ನು ಒಂದೇ ಕಾಲದಲ್ಲಿ ಮುಗಿಸುವದು. ಪತಿಯ ಆಶೌಚಾನಂತರ ಸಹಗಮನ ಮಾಡಿದಲ್ಲಿ “ತ್ರಿರಾತ್ರ"ವು. ಈ ತ್ರಿರಾತ್ರವು ಸಪಿಂಡರಿಗೆ ಮಾತ್ರ. ಪುತ್ರನಿಗೆ ತಾಯಿಯ ಪೂರ್ಣ ಆಶೌಚವಿದೆ. ಹೀಗೆ ತೋರುತ್ತದೆ. ಸಹಗಮನದಲ್ಲಿ ಸಪಿಂಡರಿಗಾದರೂ ಪೂರ್ಣಾಶೌಚವೇ. ಎರಡು ಮೂರು ದಿನಗಳೊಳಗೆ ಸಹಗಮನವಾದಲ್ಲಿ ಅಥವಾ ಆಕೂಡಲೇ ಸಹಗಮನಮಾಡಿದಲ್ಲಿ ಮತ್ತು ಶವನು ಗಮನಮಾಡಿದಲ್ಲಿ “ತ್ರಿರಾತ್ರ"ವು ಎಂದು ತಿಳಿಯತಕ್ಕದ್ದೆಂದು “ಗೌಡರ ಮತವು ಇದೇ ಯುಕ್ತವು, ಸಂವಾತದಲ್ಲಾಗುವ ಈ ಪೂರ್ವಶುದ್ಧಿಯು ಬಾಣಂತಿ ಮತ್ತು ಸಮಂತ್ರಕ

ಪರಿಚ್ಛೇದ ೩ ಉತ ರಾರ್ಧ

೪೮೭ ದಾಹಕರ್ತೃವಿಗೆ ಇಲ್ಲ. ದೇಶಾಂತರದಲ್ಲಿ ಮೃತನಾದ ಪಿತೃವಿನ ವಾರ್ತೆಯನ್ನು ಕೇಳಿ ದಶಾಹ ಆಶೌಚವನ್ನಾಚರಿಸಿದಾಗ; ಆದರೆ ಅಸ್ಥಿಯ ಅಲಾಭ ಇತ್ಯಾದಿ ಕಾರಣಗಳಿಂದ ಸಂಸ್ಕಾರವಾಗದ ಹತ್ತು ದಿನಾನಂತರ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಸಂಸ್ಕಾರಕರ್ತೃವಾದ ಪುತ್ರನಿಗೆ ಕರ್ಮಾಂಗವಾಗಿ ದಶಾಹಾಶೌಚ ತೆಗೆದುಕೊಳ್ಳುವದಿದೆ. ಈ ಅತಿಕ್ರಾಂತ ಆಶೌಚಮಧ್ಯದಲ್ಲಿ ಸಪಿಂಡರ ಮರಣವಾದರೆ ಪೂರ್ವದ ಅಂತ್ಯದಲ್ಲಿ ಶುದ್ಧಿಯಾಗುವದಿಲ್ಲ. ಆಗ ತಾಯಿಯ ಮರಣವಾದರೂ ಅಧಿಕ ಪಕ್ಷಿಣೀ ಆಶೌಚ ತೆಗೆದುಕೊಳ್ಳುವದಲ್ಲ. ಅಂದರೆ ಆಗ ಬಂದ ಸಪಿಂಡ ಮತ್ತು ತಾಯಿಯ ಆಶೌಚವನ್ನು ಪೂರ್ಣವಾಗಿಯೇ ತೆಗೆದುಕೊಳ್ಳಬೇಕು. ಯಾಕಂದರೆ ಗತಕಾಲಕ್ಕಿಂತ ವರ್ತಮಾನಕಾಲವು ಬಲಿಷ್ಟವು ಎಂಬ ನ್ಯಾಯವಿದೆ. ಹೀಗೆ ದ್ವಾದಶ ವರ್ಷಾದಿ ನಿರೀಕ್ಷೆಯ ನಂತರ ಪುತ್ರಾದಿಗಳಿಂದ ಮಾಡಲ್ಪಟ್ಟ ಪಿತ್ರಾದಿ ಸಂಸ್ಕಾರಾಂಗ ಶಾವಾಶೌಚರ ಮಧ್ಯದಲ್ಲಿ ಬೇರೆ ಸಪಿಂಡರು ಮೃತರಾದರೆ ಅವರ ಆಶೌಚವನ್ನು ಪೂರ್ಣವಾಗಿಯೇ ತೆಗೆದುಕೊಳ್ಳಬೇಕು. ಹೀಗೆ ಇದೆಲ್ಲ “ಪೂರ್ವಶೇಷದಿಂದ ಶುದ್ಧಿಯು” ಎಂಬುದಕ್ಕೆ ಅಪವಾದವು ಎಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. ಜನನಾಶೌಚ ಅಥವಾ ಮೃತಾಶೌಚದಲ್ಲಿ ಮೃತಾಶೌಚ ಪ್ರಾಪ್ತವಾದಲ್ಲಿ ಪಿಂಡದಾನಾದಿ ಅಂತ್ಯಕರ್ಮಕ್ಕೆ ಪ್ರತಿಬಂಧಕವಿಲ್ಲವೆಂದು ಕೆಲವರನ್ನುವರು. ಪೂರ್ವಾಶೌಚದ ಅಂತ್ಯವಾದ ಮೇಲೆ ಜಾತಕರ್ಮಾದಿಗಳನ್ನು ಮಾಡತಕ್ಕದ್ದೆಂದು ಬೇರೆ ಕೆಲವರ ಮತವು. ತಾಯಿಯ ಸಂಬಂಧವಾದ ಪಕ್ಷಿಣೀ ಆಶೌಚಮಧ್ಯದಲ್ಲಿ ತಂದೆಯ ಮಹೈಕೋದ್ದಿಷ್ಟ. ವೃಷೋತ್ಸರ್ಗ, ಶಯ್ಯಾದಾನ ಮೊದಲಾದವುಗಳನ್ನು ಮಾಡಲಡ್ಡಿಯಿಲ್ಲ. ಬೇರೆ ಸಪಿಂಡರ ಆಶೌಚವಿರುವಾಗ ಏಕಾದಶಾಹಕಾರ್ಯವನ್ನು ಮಾಡಬಾರದೆಂಬುದು ಬಹುಗ್ರಂಥ ಸಂಮತವಾದದ್ದು. ಮಾಡಬಹುದೆಂಬದು ಎಲ್ಲಿಯೋ ಯಾರೋ ಹೇಳಿದ ಮತವು ಶವಸ್ಪರ್ಶ ಅನುಗಮನ ಮೊದಲಾದ ಸಂಸರ್ಗಾಶೌಚ ಸಂಸರ್ಗದ ಆಶೌಚದಲ್ಲಿ ನಿತ್ಯಕರ್ಮಾನುಷ್ಠಾನಕ್ಕೆ ಪ್ರತಿಬಂಧಕವಿಲ್ಲ. ಅಸ್ಪೃಶ್ಯತೆ ಮಾತ್ರ ಇದೆ. ಅದಾದರೂ ಅವನ ಪತ್ನಿ, ಪುತ್ರಾದಿಗಳಿಗಿಲ್ಲ. ಅದು ಸಂಸರ್ಗಮಾಡಿದವನಿಗೆ ಮಾತ್ರ. ಹೀಗೆಯೇ ಅವನ ಮನೆಯಲ್ಲಿರುವ ಅವನ ಸ್ವತ್ತಾದ ವಸ್ತುಗಳು ಅಗ್ರಾಹ್ಯಗಳಲ್ಲ. ಸಮಾನ ಜಾತಿಯವನ ಶವಸ್ಪರ್ಶವಾದರೆ “ಸಜ್ಯೋತಿ” ಆಶೌಚವು, ಹೀನವರ್ಣದವನಾದರೆ ಹೆಚ್ಚು ಆಶೌಚವು. ಇನ್ನು ಅನುಗಮನ ಅಂದರೆ ಶವದ ಬೆನ್ನಹಿಂದೆ ಸ್ಮಶಾನಕ್ಕೆ ಹೋಗುವದು; ಇದರ ವಿಷಯದಲ್ಲಿ ಸಜಾತೀಯ ಅಥವಾ ವಿಜಾತೀಯ ಶವಾನುಗನುನ ಮಾಡಿದರೆ ಸ್ನಾನಮಾಡಿ, ಅಗ್ನಿಸ್ಪರ್ಶ ಮಾಡಿ ಮೃತಪ್ರಾಶನ ಮಾಡುವದು. ಸ್ನಾನಮಾಡಿ ಪ್ರಾಣಾಯಾಮ ಮಾಡತಕ್ಕದ್ದು. ಬ್ರಾಹ್ಮಣನು ಶೂದ್ರಾನುಗಮನ ಮಾಡಿದಲ್ಲಿ ತ್ರಿರಾತ್ರ ಆಶೌಚವು ಮತ್ತು ನದಿಯಲ್ಲಿ ಸ್ನಾನ, ಧೃತಪ್ರಾಶನ, ನೂರು ಪ್ರಾಣಾಯಾಮ. ಇದರಲ್ಲಿ ನಿತ್ಯಕರ್ಮಲೋಪವಿಲ್ಲ. ಇನ್ನು ನಿರ್ಹರಣ ಅಂದರೆ ಶವವನ್ನು ಹೊರುವದು. ಇದರಲ್ಲಿ ಸ್ನೇಹಮೂಲಕವಾಗಿ ಸಜಾತೀಯನ ಶವವನ್ನು ಹೊತ್ತರೆ ಅವನ ಅನ್ನವನ್ನುಂಡರೆ ಮತ್ತು ಅವನ ಮನೆಯಲ್ಲಿ ವಾಸಮಾಡಿದರೆ ದಶಾಹ ಆಶೌಚವು. ಅವನ ಗೃಹದಲ್ಲಿ ವಾಸಮಾತ್ರ ಮಾಡಿದರೆ ಅಥವಾ ಬರೇ ಅನ್ನಭೋಜನ ಮಾತ್ರ ಮಾಡಿದರೆ ಗೃಹವಾಸಮಾಡದಿದ್ದಲ್ಲಿ ಏಕಾಹ ಆಶೌಚವು, ಗ್ರಾಮಾಂತರದಲ್ಲಿರುವವನ ಶವವನ್ನು ಹೊತ್ತು ೪೮೮ ಧರ್ಮಸಿಂಧು ಬೇರೆ ಗ್ರಾಮದಲ್ಲಿ ವಾಸಿಸುತ್ತಿದ್ದರೆ ಸಜ್ಯೋತಿ"ಯು. ಮೌಲ್ಯವನ್ನು ತೆಗೆದುಕೊಂಡು ಸಜಾತೀಯ ಶವವನ್ನು ಹೊತ್ತಿದ್ದರೆ “ದಶಾಹ"ವು. ಬೇರೆ ಜಾತಿಯವನಾದರೆ ಆ ಜಾತಿಗೆ ಸಮನಾದ ಆಶೌಚವು ಮೌಲ್ಯವನ್ನು ಸ್ವೀಕರಿಸಿ ವಿಜಾತೀಯ ಶವದಹನದಲ್ಲಿ ಶವದ ಜಾತಿಯ ಆಶೌಚದ ದ್ವಿಗುಣ ಆಶೌಚವು, “ಸೋದಕರ ಶವವಹನದಲ್ಲಿಯೂ ದಶಾಹವು. ಶವದ ಅಲಂಕಾರಾದಿಗಳನ್ನು ಮಾಡಿದ್ದರೆ ಪಾದಕೃಚ್ಛ ಪ್ರಾಯಶ್ಚಿತ್ತವು. ಅಜ್ಞಾನದಿಂದ ಮಾಡಿದರೆ ‘ಉಪವಾಸ’ವು, ಅಶಕ್ತನಾದರೆ ಸ್ನಾನಮಾತ್ರವು. ಧರ್ಮಾರ್ಥವಾಗಿ ಅನಾಥಶವವನ್ನು ಹೊತ್ತರ ಮತ್ತು ದಾಹಮಾಡಿದಲ್ಲಿ ಅಶ್ವಮೇಧಯಾಗದ ಪುಣ್ಯವು ಲಭಿಸುವದು, ಮತ್ತು ಸ್ನಾನದಿಂದ, ಶುದ್ಧಿಯ ಅಗ್ನಿಸ್ಪರ್ಶ- ಮೃತಪ್ರಾಶನಗಳು ಆವಶ್ಯಕಗಳು. ಧರ್ಮಾರ್ಥವಾಗಿಯಾದರೂ ಶೂದ್ರಶವವನ್ನು ಹೊತ್ತರ ಬ್ರಾಹ್ಮಣನಿಗೆ ಏಕಾಹಾಶೌಚವು. ಧರ್ಮಾರ್ಥ ಅನಾಥಶವದ ಅನುಗಮನ ಮೊದಲಾದವುಗಳಲ್ಲಿ ದೋಷವಿಲ್ಲ. ಇನ್ನು ಬ್ರಹ್ಮಚಾರಿಗಾದರೂ ಪಿತೃ, ಮಾತೃ, ಮಾತಾಮಹ, ಆಚಾರ್ಯ, ಉಪಾಧ್ಯಾಯ ಇವರ ಹೊರತಾದವರ ಶವವಹನಾದಿಗಳಲ್ಲಿ ವ್ರತಲೋಪವಾಗುವದು. ಹಿಂದೆ ಹೇಳಿದ ರೀತಿಯಿಂದ ಆಶೌಚವೂ ಇರುವದು. ನಂತರ ಆತನು ಕೃಚ್ಛಪ್ರಾಯಶ್ಚಿತ್ತ ಹಾಗೂ ಪುನರುಪನಯನವನ್ನು ಮಾಡಿಕೊಳ್ಳುವದು. ಬ್ರಹ್ಮಚಾರಿಯಾದವನು ತಂದೆ-ತಾಯಿಗಳ ಶವನಿರ್ವಹಣಾದಿಗಳನ್ನು ಮಾಡಿದರೂ ಆಶೌಚಿಗಳ ಅನ್ನವನ್ನೂ ಟಮಾಡಕೂಡದು. ಈ ವಿಷಯದಲ್ಲಿಯಾದರೂ ನಿತ್ಯ ಕರ್ಮಕ್ಕೆ ಲೋಪವಿಲ್ಲ. ದಾಹಾದಿಗಳಲ್ಲಿ ಸಮ ಅಥವಾ ಉತ್ಕೃಷ್ಟಜಾತಿಯ ಪ್ರೇತನಿಗೆ ಸ್ನೇಹಾದಿಕಾರಣದಿಂದ ದಹನ, ಜಲಾಂಜಲಿ ಮೊದಲಾದ ಎಲ್ಲ ಔರ್ಧ್ವ ದೈಹಿಕ ಕರ್ಮ ಮಾಡಿದಲ್ಲಿ ಆಯಾಯ ಜಾತಿಗೆ ಸಮನಾದ ಆಶೌಚವನ್ನು ತೆಗೆದುಕೊಳ್ಳುವದು. ಅಂತ್ಯದಲ್ಲಿ ಸ್ನೇಹ, ಲೋಭ ಮೊದಲಾದವುಗಳಿಗನುಸಾರವಾಗಿ ಗುರು ಇಲ್ಲವೆ ಲಘು ಪ್ರಾಜಾಪತ್ಯ ಮೊದಲಾದ ಮೂರು ಕೃಚ್ಛಗಳನ್ನಾಚರಿಸತಕ್ಕದ್ದು. ಸ್ನೇಹಾದಿಗಳಿಂದ ಸಮಜಾತಿಯವನ ದಾಹಮಾತ್ರ ಮಾಡಿ ಅವನ ಮನೆಯಲ್ಲುಳಿದರೆ “ತ್ರಿರಾತ್ರ” ಆಶೌಚವು. ಅವರ ಅನ್ನವನ್ನೂ ಟಮಾಡಿದರೆ ದಶರಾತ್ರಾಶೌಚವು, ವಾಸ, ಭೋಜನಗಳನ್ನು ಮಾಡದಿದ್ದರೆ ಅಥವಾ ದಹನಭೋಜನಗಳನ್ನು ಮಾಡದಿದ್ದರೆ ಏಕಾಹವು. ಹೀನವರ್ಣದವನು ಉತ್ತಮ ವರ್ಣದವನ ದಹನ ಮಾತ್ರ ಮಾಡಿದಲ್ಲಿ ಶವಜಾತಿಯ ಆಶೌಚವನ್ನು ತೆಗೆದುಕೊಳ್ಳುವರು. ಮೌಲ್ಯವನ್ನು ತೆಗೆದುಕೊಂಡು ಸಮಾನಜಾತಿಯವನ ದಹನಮಾಡಿದಲ್ಲಿಯೂ ದಶಾಹವೇ. ಮೌಲ್ಯದಿಂದ ಉತ್ತಮ ವರ್ಣದವನ ದಾಹದಲ್ಲಿ ದ್ವಿಗುಣ ಆಶೌಚವು. ಉತ್ತಮಜಾತಿಯವನು ಕನಿಷ್ಠ ಜಾತಿಯವನ ವಹನ, ಶವದಹನ ಮಾಡಿದಲ್ಲಿ ಆಯಾಯ ಜಾತ್ಯುಕ್ತ ಆಶೌಚವನ್ನು ತೆಗೆದುಕೊಳ್ಳುವದಲ್ಲದೆ ಕ್ಷತ್ರಿಯನಾದರೆ ದ್ವಿಗುಣ, ವೈಶ್ಯನಾದರ ತ್ರಿಗುಣ, ಶೂದ್ರನಾದರೆ ಚತುರ್ಗುಣ ಹೀಗೆ ಪ್ರಾಯಶ್ಚಿತ್ತ ಮಾಡಿಕೊಳ್ಳತಕ್ಕದ್ದು. ಮೌಲ್ಯವನ್ನು ತೆಗೆದುಕೊಂಡು ಹೀನವರ್ಣಾದಿಯವರ ದಾಹಾದಿಗಳನ್ನು ಮಾಡಿದರೆ ಪ್ರಾಯಶ್ಚಿತ್ತ ಮತ್ತು ಆಶೌಚಗಳನ್ನಾಚರಿಸುವರು. ಅವುಗಳನ್ನು ಹಿಂದೆ ಹೇಳಿದ್ದಕ್ಕಿಂತ ಎರಡು► ಪರಿಚ್ಛೇದ ೩ ಉತ್ತರಾರ್ಧ ಪಟ್ಟು ಮಾಡಬೇಕು. (ಇಲ್ಲಿ ಹೀನ ಅಂದರೆ ಶೂದ್ರನಿಗಿಂತ ನಿಕೃಷ್ಟನೆಂದರಿಯತಕ್ಕದ್ದು.) ಧರ್ಮಾರ್ಥವಾಗಿ ಸಮ ಅಥವಾ ಉತ್ಕೃಷ್ಟ ಜಾತಿಯ ಪ್ರೇತನ ದಹನಾದಿ ಎಲ್ಲ ಪ್ರೇತ ಕರ್ಮಗಳನ್ನು ಮಾಡಿದರೂ ಆಶೌಚವಿಲ್ಲ. ನಿತ್ಯಪಿಂಡಪ್ರದಾನಾದಿಗಳ ನಂತರ ಸ್ನಾನಮಾಡಿದ ಮಾತ್ರದಿಂದ ಶುದ್ಧನಾಗುವನು. ದ್ವಿಜನಾದವನು ಶೂದ್ರನಿಗೆ ಧರ್ಮಾರ್ಥವಾಗಿಯಾದರೂ ದಾಹಾದಿಗಳನ್ನು ಮಾಡಬಾರದು. ಇನ್ನು ಬ್ರಹ್ಮಚಾರಿಯಾದರೂ ಪಿತೃ, ಮಾತೃ ಮೊದಲಾದವರಿಗೆ ಬೇರೆ ಕರ್ತೃಗಳಿಲ್ಲದಾಗ ದಾಹಾದಿ ಅಂತ್ಯಕರ್ಮಗಳನ್ನು ಮಾಡತಕ್ಕದ್ದು. ಆಗ ಕರ್ಮಾಂಗವಾದ ದಶಾಹಾಶೌಚವನ್ನು ಆಚರಿಸತಕ್ಕದ್ದು. ಈ ಆಶೌಚವು ಬರೇ ಅಸ್ಪೃಶ್ಯತ್ವ ಲಕ್ಷಣದ್ದು. ಆಗಲಾದರೂ ಬ್ರಹ್ಮಚಾರಿಯು ಆಶೌಚಿಗಳ ಅನ್ನವನ್ನೂಟಮಾಡಬಾರದು. ಆಶೌಚಿಗಳ ಸ್ಪರ್ಶಮಾಡುತ್ತ ಅಲ್ಲಿ ವಾಸವನ್ನೂ ಮಾಡಬಾರದು. ಆ ಎರಡನ್ನೂ ಮಾಡಿದರೆ ಪ್ರಾಯಶ್ಚಿತ್ತ ಮತ್ತು ಪುನರುಪನಯನ ಮಾಡಿಕೊಳ್ಳತಕ್ಕದ್ದು. ಬ್ರಹ್ಮಚಾರಿಯು ಪೂರ್ವೋಕ್ತ ಪಿತ್ರಾದಿಗಳ ಹೊರತಾದವರ ದಹನಾದಿ ಅಂತ್ಯಕರ್ಮವನ್ನು ಮಾಡಿದರೆ ಕೃಚ್ಛತ್ರಯ ಪ್ರಾಯಶ್ಚಿತ್ತವನ್ನೂ ಪುನರುಪನಯನವನ್ನೂ ಆಶೌಂಚಾಂತದಲ್ಲಿ ಮಾಡತಕ್ಕದ್ದು, ತಂದೆ-ತಾಯಿಗಳ ದಹನಮಾತ್ರವನ್ನು ಮಾಡಿದಲ್ಲಿ ಏಕಾಹವು. ಈ ಎಲ್ಲವುಗಳಲ್ಲಿಯೂ ಬ್ರಹ್ಮಚಾರಿಗೆ ಸಂಧ್ಯಾ, ಅಗ್ನಿಕಾರ್ಯ ಮೊದಲಾದ ಕರ್ಮಗಳಿಗೆ ಲೋಪವಿಲ್ಲ. ಬ್ರಹ್ಮಚಾರಿ ಹೊರತಾದವನಿಗಾದರೂ ದಹನಾದಿ ನಿಮಿತ್ತಕವಾದ ಸಂಸರ್ಗಾಶೌಚದಲ್ಲಿ ಬ್ರಹ್ಮಯಜ್ಞಾದಿ ನಿತ್ಯಕರ್ಮಗಳಿಗೆ ಲೋಪವಿಲ್ಲೆಂದು ಹೇಳಿದೆ. ಅದರಲ್ಲಿ ದೇವಪೂಜಾ, ವೈಶ್ವದೇವಾದಿಗಳನ್ನು ಬೇರೆಯವನಿಂದ ಮಾಡಿಸುವದು. ತನಗೆ ಅಧಿಕಾರವಿದ್ದಷ್ಟನ್ನು ತಾನು ಮಾಡತಕ್ಕದ್ದು. ಬ್ರಹ್ಮಚಾರಿಯು ತಂದೆ ಮೊದಲಾದವರ ಪ್ರೇತಸಂಸ್ಕಾರವನ್ನು ತಾನು ಮಾಡದಿರುವಲ್ಲಿ ಅವನಿಗೆ ಆಶೌಚವಿಲ್ಲ. ಈ ಬ್ರಹ್ಮಚಾರಿಯ ಸ್ಥಿತಿಯಲ್ಲಿರುವಾಗ ಪಿತ್ರಾದಿ ಸಪಿಂಡರ ಮೃತಾಶೌಚವನ್ನು ಸಮಾವರ್ತನೆಯಾದಕೂಡಲೇ ಮೂರುರಾತ್ರಿ ತೆಗೆದುಕೊಳ್ಳುವದು. ರೋದನ ವಿಷಯ ಬ್ರಾಹ್ಮಣ ಮೊದಲಾದವರು ಸಮಾನವರ್ಣದವರ ಮರಣದಲ್ಲಿ ಅಸ್ಥಿಸಂಚಯನಕ್ಕಿಂತ ಮೊದಲು ರೋದನ (ಅಳುವದು) ಮಾಡಿದರೆ ಸ್ನಾನ ಮಾತ್ರ ಮಾಡತಕ್ಕದ್ದು. ಅನಂತರ ಮಾಡಿದರೆ “ಆಚಮನ” ಮಾಡುವದು. ಬ್ರಾಹ್ಮಣನಿಗೆ ಶೂದ್ರನ ವಿಷಯದಲ್ಲಿ ಅಸ್ಥಿ ಸಂಚಯನಕ್ಕಿಂತ ಮೊದಲು “ತ್ರಿರಾತ್ರ"ವು, ನಂತರವಾದರೆ “ಏಕರಾತ್ರ"ವು, ಶೂದ್ರನ ಮನೆಯಲ್ಲಿಯೇ ಉಳಿದು ಅಸ್ಥಿಸಂಚಯನಕ್ಕಿಂತ ಮೊದಲು ಅತ್ತರೆ ಏಕರಾತ್ರವು ಅನಂತರವಾದರೆ ಸ್ನಾನ ಮಾತ್ರ. ಸಪಿಂಡರಿಗೆ ಅನುಗಮನ, ರೋದನಾದಿಗಳಲ್ಲಿ ದೋಷವಿಲ್ಲ. ಹೇಳಿದ ಈ ರೋದನಾದಿ ವಿಶೇಷ ಆಶೌಚದಲ್ಲಿ ಕರ್ಮಕ್ಕೆ ಲೋಪವಿಲ್ಲ. ಈ ಎಲ್ಲದರಲ್ಲಿಯೂ ಹೇಳಿದಷ್ಟು ಕಾಲ ಆಶೌಚ ಬಳಸಿದರಾಗಲಿಲ್ಲ. ಅಶೌಚಾಂತದಲ್ಲಿ ಸ್ನಾನಮಾಡಿದರೇನೇ ಶುದ್ಧಿಯು, ಅಂತ್ಯ ಸಂಸ್ಕಾರಮಾಡುವ ಕರ್ತೃವು ಅಸ್ಥಿಸಂಚಯನಕ್ಕಿಂತ ಮೊದಲು ಸ್ತ್ರೀಸಂಗ ಮಾಡಿದಲ್ಲಿ ಚಾಂದ್ರಾಯಣ ಪ್ರಾಯಶ್ಚಿತ್ತವು. ಅಸ್ಥಿಸಂಚಯನದ ನಂತರವಾದರೆ ಮೂರು ಪ್ರಾಜಾಪತ್ಯಗಳು. ಉಳಿದ ಮೃತಾಶೌಚಿಗಳು ಸಂಚಯನದ ಒಳಗೆ ಸ್ತ್ರೀಸಂಗ ಮಾಡಿದಲ್ಲಿ ತ್ರಿರಾತ್ರ ಉಪವಾಸವು ನಂತರದಲ್ಲಾದರೆ ಏಕರಾತ್ರ ಉಪವಾಸವು. ಧರ್ಮಸಿಂಧು ಆಶೌಚಿಗಳ ಅನ್ನಭಕ್ಷಣದ ವಿಷಯ ಸಗೋತ್ರನಲ್ಲದವನು ಆಪತ್ತಿಲ್ಲದಾಗ ಬುದ್ದಿಪೂರ್ವಕವಾಗಿ ಒಂದೇಆವರ್ತಿಯಾದರೂ ಆಶೌಚಿಯ ಪಕ್ವವಾದ ಅನ್ನವನ್ನು ಭುಂಜಿಸಿದರೆ ಭೋಜನ ದಿನದಿಂದ ಹಿಡಿದು ಆ ಆಶೌಚ ಮುಗಿಯುವಷ್ಟುದಿನ ಆತನೂ ಆಶೌಚಿಯೇ ಎಂದೆಣಿಸಲ್ಪಡುವನು. ಆಶೌಚವು ಬ್ರಾಹ್ಮಣನಾದರೆ ಆಶೌಚಾಂತದಲ್ಲಿ ಸಾಂತವನ ಪ್ರಾಯಶ್ಚಿತ್ತವಾಗತಕ್ಕದ್ದು. ಶೂದ್ರಾಶೌಚದಲ್ಲಿಯಾದರೆ ಚಾಂದ್ರಾಯಣವು ಕ್ಷತ್ರಿಯಾದಿಗಳು ನಿರ್ದಿಷ್ಟವಾಗಿ ಕಲಿಯುಗದಲ್ಲಿಲ್ಲ ವಾದಕಾರಣ ಅದನ್ನಿಲ್ಲಿ ಬರೆಯುವದಿಲ್ಲ. ಕೆಲಕಡೆಯಲ್ಲಿ “ಕ್ಷತ್ರಿಯ” ರೆಂಬುದಾಗಿ ಬರೆದರೂ ತಿಳಿವಳಿಕೆಯ ಬಗ್ಗೆಯೇ ಹೊರತು ಪ್ರಯೋಜನಕ್ಕಾಗಲ್ಲ. ಹೀಗೆ ಪ್ರಾಯಶಃ ಉಪೇಕ್ಷಿಸಲ್ಪಡುತ್ತದೆ. ಬುದ್ಧಿಪೂರ್ವಕವಾಗಿ ಪದೇ ಪದೇ ಬ್ರಾಹ್ಮಣಾಶೌಚದಲ್ಲಿ ಭೋಜನಮಾಡಿದರೆ ಒಂದುಮಾಸ, ಶೂದ್ರಾಶೌಚದಲ್ಲಿ ಆರು ತಿಂಗಳು ಕೃಷ್ಣಾದಿ ವ್ರತಾಚರಣೆಯು. ಅಜ್ಞಾನದಿಂದ ಊಟಮಾಡಿದರೆ ಅನ್ನವು ಜೀರ್ಣವಾಗುವವರೆಗೆ ಆಶೌಚವು, ಬ್ರಾಹ್ಮಣರಾದರೆ ಒಂದುರಾತ್ರಿ, ಶೂದ್ರನಾದರೆ ಏಳುರಾತ್ರಿ ಉಪವಾಸವು ಮತ್ತು ಅನುಕ್ರಮವಾಗಿ ಹತ್ತು, ನೂರು ಪ್ರಾಣಾಯಾಮಗಳು. ಅಜ್ಞಾನದಿಂದ ಬಹಳಾವರ್ತಿ (ಅಭ್ಯಾಸ) ಆದರೆ ದ್ವಿಗುಣಪ್ರಾಯಶ್ಚಿತ್ತವು. ಆಪತ್ಕಾಲದಲ್ಲಿ ಅಜ್ಞಾನದಿಂದ ಭೋಜನವಾದರೆ ಆ ಹಗಲು ಮಾತ್ರ ಆಶೌಚವು ಮತ್ತು ಒಂದು ಪ್ರಾಣಾಯಾಮವು ಶೂದ್ರಾಶೌಚದಲ್ಲಿ ಸಾವಿರದ ಎಂಟು (೧೦೦೮) ಗಾಯತ್ರೀಜಪವು. ಬುದ್ಧಿಪೂರ್ವಕವಾಗಿ ಆಪತ್ತಿನಲ್ಲಾದರೆ “ಮೂರು ಅಘಮರ್ಷಣ” ಜಪವು. ೧೦೦೮ ಗಾಯತ್ರೀಜಪ. ಶೂದ್ರಾಶೌಚದಲ್ಲಿ ಪ್ರಾಜಾಪತ್ಯವು, ಶೂದ್ರನಿಗೆ ಬ್ರಾಹ್ಮಣನ ಆಶೌಚ ವಿಷಯದಲ್ಲಿ ಸ್ನಾನ ಮತ್ತು ಪಂಚಗವ್ಯಪ್ರಾಶನ. ಈ ಎಲ್ಲವೂ ಜನನಾಶೌಚದಲ್ಲಿ ಕಡಿಮೆಯಂದೆಣಿಸತಕ್ಕದ್ದು. ಹೀಗೆ ಆಹಿತಾಗ್ನಿಯಾದವ ಆಶೌಚದಲ್ಲಿಯಾದರೂ “ಕಡಿಮೆ"ಯೆಂದು ಸ್ಮೃತ್ಯರ್ಥಸಾರದಲ್ಲಿ ಹೇಳಿದೆ. ಈ ಹೇಳಿದ್ದೆಲ್ಲವೂ ಆಶೌಚಿಯ ಸ್ವಾಮಿತ್ವದಲ್ಲಿಯ ಅನ್ನದ ವಿಷಯವು. ಆಶೌಚಿಯ ಸ್ವಾಧೀನದ್ದಲ್ಲದ, ಬರೇ ಆಶೌಚಿಗಳ ಸ್ಪರ್ಶವಾದ ಅನ್ನಭಕ್ಷಣದ ವಿಷಯದಲ್ಲಿ ಜ್ಞಾನದಿಂದ ಭಕ್ಷಿಸಿದರೆ ಕೃಷ್ಣಪ್ರಾಯಶ್ಚಿತ್ತದಲ್ಲಿ ಅಜ್ಞಾನದಿಂದ ಮಾಡಿದರೆ ಅದರ ಅರ್ಧವು ಎಂದು ಸ್ಮತ್ಯರ್ಥಸಾರದಲ್ಲಿ ಹೇಳಿದೆ. ಆಶೌಚಿಯಿಂದ ಮುಟ್ಟಲ್ಪಟ್ಟ ಆಶೌಚಿಯ ಸ್ವಾಮಿತ್ವದ ಅನ್ನವನ್ನುಂಡರೆ ಆಶೌಚಿಸ್ವಾಮಿಕ ಅನ್ನಭಕ್ಷಣಪ್ರಾಯಶ್ಚಿತ್ತ ಹಾಗೂ ಆಶೌಚಿಸ್ಪಷ್ಟನಿಮಿತ್ತಕವಾದ ಪ್ರಾಯಶ್ಚಿತ್ತ ಹೀಗೆ ಎರಡೂ ಪ್ರಾಯಶ್ಚಿತ್ತಗಳನ್ನು ಕೂಡಿಯೇ ಮಾಡತಕ್ಕದ್ದು. ಆಶೌಚಿ ಸ್ವಾಮಿತ್ವದ ಆಮಾನ್ನವನ್ನು ಪ್ರತಿಗ್ರಹಮಾಡಿದರೆ ಈ ಹೇಳಿದ ಪ್ರಾಯಶ್ಚಿತ್ತದ ಅರ್ಧವು ಮತ್ತು ಆಶೌಚ ತೆಗೆದುಕೊಳ್ಳತಕ್ಕದ್ದಿಲ್ಲ. ಕೊಡುವವ, ಊಟಮಾಡುವವ ಇಬ್ಬರಿಗೂ ಆಶೌಚವು ಗೊತ್ತಿಲ್ಲದಿದ್ದರೆ ಈ ಜನನ ಅಥವಾ ಮರಣ ಆಶೌಚದಲ್ಲಿ ದೋಷವಿಲ್ಲ. ಇಬ್ಬರಲ್ಲೊಬ್ಬರಿಗೆ ಗೊತ್ತಿದ್ದರೂ ದೋಷಿಯಾಗುವರು. ದಾತೃವಿಗೆ ಗೊತ್ತಿದ್ದು ಭೋಕೃವಿಗೆ ತಿಳಿಯದಿದ್ದರೆ ಭೋಕೃವಿಗೆ “ಅಲ್ಪಪ್ರಾಯಶ್ಚಿತ್ತ"ವು, ದಾತೃವಿಗೆ ಗೊತ್ತಿಲ್ಲದೆ ಭೋಕ್ರವಿಗೆ ಗೊತ್ತಿದ್ದರೆ ಛೋಕ್ಷವಿಗೆ ಪೂರ್ಣಪ್ರಾಯಶ್ಚಿತ್ತ, ಭೋಜನನಿಮಿತ್ತಕವಾಗಿ ತೆಗೆದುಕೊಂಡ ಆಶೌಚದಲ್ಲಾದರೂ ಪರಿಚ್ಛೇದ ೩ ಉತ್ತರಾರ್ಧ ಕರ್ಮಕ್ಕೆ ಲೋಪವಿಲ್ಲ. ಅಲ್ಪ ಸಂಬಂಧದ ಆಶೌಚದಲ್ಲಿ ಸ್ನಾನವಿಷಯ ಯಾವದೇ ರೀತಿಯಿಂದ ಆಶೌಚಿಯ ಸಂಬಂಧವುಂಟಾದರೂ “ಸಜೈಲಸ್ನಾನ ವಾಗತಕ್ಕದ್ದೆಂದು “ತ್ರಿಂಶಚೊಕಿ” ಯಲ್ಲಿ ಹೇಳಿದೆ ಮತ್ತು ಸ್ಮತ್ಯರ್ಥಸಾರದಲ್ಲಿಯೂ ಹೇಳಿದೆ. ಇದರ ವಿವರ ಹೀಗಿದೆ: ಶಾಲಕ (ಪತ್ನಿಭ್ರಾತಾ) ಅಳಿಯ ಮೊದಲಾದ ಅಲ್ಪ ಸಂಬಂಧಿ ಆಶೌಚದಲ್ಲಾದರೂ “ಸಲಸ್ನಾನವನ್ನು ಹೇಳಿದ. ಎಲ್ಲ ಗುರು, ಲಘುಗಳಾದ ಮೃತಾಶೌಚಗಳಲ್ಲಿ ಕೂಡಲೇ ಸಲಸ್ನಾನ ಹಾಗೂ ಸಮಾಪ್ತಿ ಕಾಲದಲ್ಲಿ ಸ್ನಾನ ಹೀಗೆ ಮಾಡಬೇಕೆಂದಭಿಪ್ರಾಯ ಅಥವಾ ದಶಾಹಹೊರತಾದ ಪಕ್ಷಿಣೀ, ತ್ರಿದಿನಾದಿ ನಿಮಿತ್ತಕಗಳಾದ, ಅಲ್ಪಕಾಲ ಸಂಬಂಧ ಅಂದರೆ ಬಂಧುತ್ರಯ, ಮಾತುಲ, ಅನುಪನೀತ, ಸಪಿಂಡ ಮೊದಲಾದವರ ಮೃತಿಯಲ್ಲಿ ಅದು ದೇಶಾಂತರದಲ್ಲಾಗಲೀ, ಕಾಲಾಂತರದಲ್ಲಾಗಲೀ ಸ್ನಾನವು ಅಗತ್ಯವಾದದ್ದೇ ಮತ್ತು ಹತ್ತರದ ಕಾಲದಲ್ಲಿ ಪ್ರಾಪ್ತಿಯಾಗಿ ಅತಿಕ್ರಮಿಸಿದಾಗ ಸ್ನಾನವಾಗಬೇಕು. ಇಂಥ ಹತ್ತಿರದ ಕಾಲದಲ್ಲಿಯಾದರೂ ಸ್ನಾನಮಾತ್ರ ಹೇಳಿದ ವಿಷಯದಲ್ಲಿ ಕಾಲಾಂತರದಲ್ಲಿ ಸ್ನಾನಮಾಡುವ ಕಾರಣವಿಲ್ಲವೆಂದರ್ಥ. ಕೆಲ ಆಶೌಚಗಳು ಸ್ವಲ್ಪ ಆಶೌಚಕಾರಣವಾಗಿರದ ಸಂಬಂಧದಲ್ಲಿ ಅಂದರೆ ಪತ್ನಿಯ ಅಣ್ಣ-ತಮ್ಮಂದಿರ ಪುತ್ರ, ವಿವಾಹಿತ ಕಸ್ಯೆಗೆ ತಂದೆಯ ಅಣ್ಣ-ತಮ್ಮಂದಿರು, ಅವರ ಪುತ್ರರು ಇತ್ಯಾದಿ ಅಕ್ಕ-ತಂಗಿಯರಿಗೆ ಅಣ್ಣ-ತಮ್ಮಂದಿರ ಪುತ್ರರು ಇತ್ಯಾದಿ ಸಂಬಂಧಯುಕ್ತರಾದವರ ಮೃತಿಯಲ್ಲಿ ಆಶೌಚವಿಲ್ಲದಿದ್ದರೂ ಒಂದೇ ಸ್ನಾನಮಾತ್ರ ಹೇಳಿದೆ. ಇಂಥ ಯಾವದಾದರೊಂದು ಅಲ್ಪಸಂಬಂಧದಲ್ಲಿ ಆಶೌಚವಿಲ್ಲದಿದ್ದರೂ ಹತ್ತಿರದಲ್ಲಿದ್ದಾಗ ಸ್ನಾನಮಾಡತಕ್ಕದ್ದೆಂದಭಿಪ್ರಾಯ. ಈ ಹೇಳಿದ ಸತೈಲಸ್ನಾನ, ಆಶೌಚಾಂತಸ್ಥಾನ, ಅತಿಕ್ರಾಂತಸ್ನಾನ ಇತ್ಯಾದಿ ಮೂರುಪಕ್ಷಗಳೂ ಶಿಷ್ಟಾಚಾರದಲ್ಲಿ ಕಂಡುಬರುತ್ತವೆ. ಅದು ಯುಕ್ತವಾಗಿಯೂ ತೋರುತ್ತದೆ. ಆಶೌಚಾಪವಾದಗಳು ಅದು ಕರ್ತೃನಿಮಿತ್ತ, ಕರ್ಮನಿಮಿತ್ತ, ವಸ್ತುನಿಮಿತ್ತ, ಮೃತದೋಷನಿಮಿತ್ತ ಮತ್ತು ವಿಧಾನನಿಮಿತ್ತ ಎಂದು ಐದು ವಿಧವು, ಕರ್ತೃನಿಮಿತ್ತ ಹೇಗೆಂದರೆ ಯತಿಗಳಿಗೆ ಮತ್ತು ಬ್ರಹ್ಮಚಾರಿಗಳಿಗೆ ಸಪಿಂಡರ ಜನನ, ಮರಣಗಳಲ್ಲಿ ಆಶೌಚವಿಲ್ಲ. ಮಾತಾಪಿತೃಗಳ ಮರಣದಲ್ಲಾದರೋ ಯತಿ, ಬ್ರಹ್ಮಚಾರಿಗಳಿಗೆ ಸಲಸ್ನಾನಮಾತ್ರ ಅವಶ್ಯವೇ. ಬ್ರಹ್ಮಚಾರಿಗೆ ಸಮಾವರ್ತನೆಯ ನಂತರ ಬ್ರಹ್ಮಚರ್ಯದ ಕಾಲದಲ್ಲಿ ಮೃತರಾದ ಪಿತ್ರಾದಿ ಸಪಿಂಡರ “ದಿನಾಶೌಚ, ಜಲಾಂಜಲಿದಾನ” ಇವು ಕರ್ತವ್ಯಗಳೇ, ಶವಅನುಗಮನ, ದಹನ ನಿಮಿತ್ತಕವಾದ ಆಶೌಚವು ಬ್ರಹ್ಮಚಾರಿಗಾದರೂ ಇದ್ದದ್ದೇ, ಬ್ರಹ್ಮಚಾರಿಯು ಪಿತ್ರಾದಿಗಳ ಅಂತ್ಯಕರ್ಮಗಳನ್ನು ತಾನೇಮಾಡಿದಾಗ ಆಶೌಚವೂ ಇದೆ. ಪ್ರಾಯಶ್ಚಿತ್ತ ಮಾಡಿಕೊಳ್ಳುವಾಗ ಅನುಷ್ಠಾನ ಕಾಲದಲ್ಲಿ ಆಶೌಚ ಬಂದರೆ ಆಶೌಚವಿಲ್ಲ. ಪ್ರಾಯಶ್ಚಿತ್ತ ಮುಗಿದಮೇಲೆ ತ್ರಿರಾತ್ರ ಅತಿಕ್ರಾಂತಾಶೌಚ ತೆಗೆದುಕೊಳ್ಳಬೇಕು. ಕರ್ಮಾಂಗ ನಾಂದೀಶ್ರಾದ್ಧ ಮಾಡಿದಾಗ ಕರ್ಮಸಮಾಪ್ತಿ ಪರ್ಯಂತ ಆಕರ್ಮಾಚರಣೆಯ ಕಾಲದಲ್ಲಿ ಆಪತ್ತಿನಲ್ಲಿ ಆಶೌಚವಿಲ್ಲ. ಜಾತಾಶೌಚ ಅಥವಾ ೪೯೨ ಧರ್ಮಸಿಂಧು ಮೃತಾಶೌಚವಿದ್ದರೂ ಮರಣಸಮಯದಲ್ಲಿ ಆಶೌಚವಿಲ್ಲ. ಆಗ ದಾನಾದಿಗಳಿಗೆ ಪ್ರತಿಬಂಧಕವಿಲ್ಲ ವಿರಕ್ತರಾದವರು ಆ ಕಾಲದಲ್ಲಿ “ಆತುರಸಂನ್ಯಾಸವನ್ನಾದರೂ ತೆಗೆದುಕೊಳ್ಳಬಹುದು. ಹೀಗೆ ನಿರ್ಣಯಸಿಂಧ್ಯಾದಿಗಳಲ್ಲಿ ಹೇಳಿದೆ. ದೇಶದುರ್ಭಿಕ್ಷ, ಮಹೋತ್ಪಾತ ಮೊದಲಾದವುಗಳು ಸಂಭವಿಸಿದಾಗ, ಮಹಾಸಂಕಟ ಪ್ರಾಪ್ತವಾದಾಗ “ಸಧ್ಯಃ ಶೌಚವು. ಆಪತ್ತು ಕಳೆದಮೇಲೆ ಆಶೌಚದ ಅವಶಿಷ್ಟವನ್ನಾಚರಿಸುವದು. ಕರ್ಮನಿಮಿತ್ತದಿಂದ (ಅಪವಾದ) ಅನ್ನಸತ್ರವನ್ನು ನಡೆಸುವವರಿಗೆ, ಅನ್ನದಾನಾದಿಗಳಿಗೆ ಆಶೌಚವಿಲ್ಲ, ಪ್ರತಿಗ್ರಹಮಾಡುವವನಿಗೆ ಆಮಾನ್ನ ಸ್ವೀಕಾರಕ್ಕೆ ಆಶೌಚವಿಲ್ಲ. ಪಕ್ವಾನ್ನ ಭೋಜನಮಾಡಿದಲ್ಲಿ ಮೂರುರಾತ್ರಿ ಕ್ಷೀರಪಾನ ಮಾಡತಕ್ಕದ್ದು. ಸ್ವೀಕರಿಸಿದ ಅನಂತಾದಿವ್ರತ, ಏಕಾದಶೀ, ಪ್ರಾರಂಭಿಸಿರುವ ಕೃಚ್ಛಾದಿವ್ರತ ಇವುಗಳಲ್ಲಿ ಆಶೌಚವಿಲ್ಲ. ಅವುಗಳಲ್ಲಿ ಸ್ನಾನಾದಿ ಶಾರೀರಿಕ ನಿಯಮಗಳನ್ನು ತಾನು ಮಾಡುವದು. ಅನಂತಪೂಜಾದಿಗಳನ್ನು ಬೇರೆಯವರಿಂದ ಮಾಡಿಸಬೇಕು. ಬ್ರಾಹ್ಮಣಭೋಜನಾದಿಗಳನ್ನು ಆಶೌಚ ಮುಗಿದ ನಂತರ ಮಾಡುವದು. ರಾಜರಿಗೆ ಪ್ರಜಾಪಾಲನೆಯ ಕಾರ್ಯದಲ್ಲಿ ಆಶೌಚವಿಲ್ಲ. ಋತ್ವಿಜರಿಗೆ ಮಧುಪರ್ಕಪೂಜಾನಂತರದಲ್ಲಿ ಆಶೌಚವಿಲ್ಲ. ಆದುದರಿಂದ ಆಧಾನ, ಪಶುಬಂಧ ಮೊದಲಾದವುಗಳಲ್ಲಿ ಮಧುಪರ್ಕವನ್ನು ಹೇಳದಿದ್ದಾಗ ಅವುಗಳಲ್ಲಿ “ವರಣವಿದ್ದರೂ ಅವರನ್ನು ಬಿಟ್ಟು ಬೇರೆ ಋತ್ವಿಜರನ್ನು ನಿಮಂತ್ರಿಸತಕ್ಕದ್ದು. ದೀಕ್ಷೆ ಹೊಂದಿದ ಯಜಮಾನನಿಗೆ ದೀಕ್ಷೆಯ ನಂತರ ಅವಭಥದ ವರೆಗೆ ಯಜ್ಞಕಾರ್ಯದಲ್ಲಿ ಆಶೌಚವಿಲ್ಲ. ದೀಕ್ಷಿತ ಮತ್ತು ಋತ್ವಿಜರು ಕರ್ಮಮಧ್ಯದಲ್ಲಿ ಸ್ನಾನ ಮಾತ್ರ ಮಾಡತಕ್ಕದ್ದು. ಆಶೌಚದ ಅಭಾವವು ಅವನೃಥದ ವರೆಗೆ ಮಾತ್ರ. ಅವಭಥವನ್ನು ಆಶೌಚಾಂತದಲ್ಲೇ ಮಾಡುವದು. ಹೀಗೆ ನಿರ್ಣಯಸಿಂಧುವಿನ ಮತವು. ಕರ್ಮಾಂತದಲ್ಲಾದರೋ ಹಿಂದೆ ಹೇಳಿದ ನ್ಯಾಯದಿಂದ “ತ್ರಿರಾತ್ರ ಆಶೌಚ"ವು, ಹಸಿವೆಯಿಂದ ಕಂಗಾಲಾದ ಕುಟುಂಬಕ್ಕೆ ಪ್ರತಿಗ್ರಹಕ್ಕೆ ಆಶೌಚವಿಲ್ಲ. ಮರೆಯುವ ಸ್ವಭಾವದವರಿಗೆ ಅಧ್ಯಯನ ಮಾಡಿದ ವೇದವನ್ನು ಪಠಿಸುವಲ್ಲಿ ಆಶೌಚವಿಲ್ಲ. ವೈದ್ಯನಿಗೆ ನಾಡೀಪರೀಕ್ಷೆ ಮಾಡುವಾಗ ಆಶೌಚವಿಲ್ಲ. ಶ್ರಾದ್ಧದ ವಿಷಯವನ್ನು ಹಿಂದೆಯೇ ಹೇಳಿದ. ಮೂರ್ತಿ ಪ್ರತಿಷ್ಠೆ, ಚೌಲ, ಉಪನಯನ, ವಿವಾಹಾದಿ ಉತ್ಸವ, ಬಾವಿ ಕೆರೆಮೊದಲಾದವುಗಳ ಉತ್ಸರ್ಗ, ಕೋಟಿಹೋಮ, ತುಲಾಪುರುಷದಾನ ಇತ್ಯಾದಿ ಕರ್ಮಗಳಲ್ಲಿ ನಾಂದೀಶ್ರಾದ್ಧವಾದ ಮೇಲೆ ಆಶೌಚವಿಲ್ಲ. ಸಂಕಲ್ಪಿಸಿರುವ ಪುರಶ್ಚರಣಜಪ, ಮಧ್ಯದಲ್ಲಿ ಬಿಡುವಿಲ್ಲದ ಸಂಕಲ್ಪಮಾಡಿದ ಹರಿವಂಶಶ್ರಮಣ ಇತ್ಯಾದಿಗಳಲ್ಲಿ ಪ್ರಾರಂಭವಾದ ನಂತರ ಆಶೌಚವಿಲ್ಲ. ಕಾಲಾದಿ ನಿಯಮಗಳಿಲ್ಲದೆ ಮಾಡಿರುವ ಸ್ತೋತ್ರ, ಹರಿವಂಶಶ್ರವಣ ಮೊದಲಾದವುಗಳನ್ನು ಮಧ್ಯದಲ್ಲಿ ಆಶೌಚಬಂದಾಗ ಬಿಡತಕ್ಕದ್ದು. ಈ ಎಲ್ಲ ಆಶೌಚಾಪವಾದಗಳು ಅನ್ನಗತಿಯಿಲ್ಲದಾಗ ಮತ್ತು ಆವತ್ತಿರುವಾಗ “ಮಾತ್ರ” ಎಂದು ತಿಳಿಯತಕ್ಕದ್ದು. ಹೀಗೆ ನಿರ್ಣಯಸಿಂಧು, ನಾಗೋಜೀಯ ಮೊದಲಾದವುಗಳಲ್ಲಿ ಹೇಳಿದೆ. ಆದ್ದರಿಂದ ಅಗತಿಕ, ಸಗತಿಕಾದಿಗಳನ್ನಾಲೋಚಿಸಿಯೇ ಆಶೌಚಾಪವಾದಗಳನ್ನು ಯೋಚಿಸತಕ್ಕದ್ದು. ಈ ವಿಷಯದಲ್ಲಿ ಹೇಳತಕ್ಕದ್ದನ್ನೆಲ್ಲ ಹಿಂದೆಯೇ ಹೇಳಿದೆ. ಕೆಲವರು ವ್ರತಗಳಲ್ಲಿಯಂತೆ

ಪರಿಚ್ಛೇದ ೩ ಉತ್ತರಾರ್ಧ VEL ದೀಕ್ಷಾಬದ್ಧರಾದವರಿಗೆ, ಋತ್ವಿಜರಿಗೆ ಹಾಗೂ ಉತ್ಸವಾದಿಗಳನ್ನಾರಂಭಿಸಿದವರಿಗೂ, ಸಹಜವಾಗಿ ಆರಂಭವಾದದ್ದಾಗಿರುವದರಿಂದ ಸಂಕಟವಿಲ್ಲದಾಗಲೂ ಆಶೌಚವಿಲ್ಲ, ಹೀಗೆನ್ನುವರು. ಕನ್ನೆಗೆ ಋತುಪ್ರಾಪ್ತಿಯಾಗಬಹುದೆಂಬ ಶಂಕೆಯಿಂದ ಮುಂದೆ ಮುಹೂರ್ತವೂ ಸಿಗದಿರುವಾಗ ಜಾತಾಶೌಚದಲ್ಲಿ ಕೂಶ್ಚಾಂಡ ಹೋಮಾದಿಗಳನ್ನು ಮಾಡಿಕೊಂಡು ವಿವಾಹಾರಂಭವನ್ನಾದರೂ ಮಾಡಬಹುದೆಂದಿದೆ. ವಿವಾಹಾದಿಗಳಲ್ಲಿ ನಾಂದೀಶ್ರಾದ್ಧಾನಂತರ ಆಶೌಚಪ್ರಾಪ್ತವಾದಲ್ಲಿ ಪೂರ್ವಸಂಕಲ್ಪಿತವಾದ ಅನ್ನವನ್ನು ಅನ್ಯರ ಕಡೆಯಿಂದ ಬಡಿಸುವದು ಹಾಗೂ ಭೋಜನ ಮಾಡತಕ್ಕದ್ದು. ಅನ್ನ ಬಡಿಸುವವರನ್ನು ಮತ್ತು ಊಟಮಾಡುವವರನ್ನು ಹಾಗೂ ಅನ್ನವನ್ನು ಆಶೌಚಿಗಳು ಮುಟ್ಟಬಾರದು. ವಿವಾಹಾದಿಗಳಲ್ಲಿ ಅಥವಾ ಬೇರೆ ಸಮಾರಂಭಗಳಲ್ಲಿ ಬ್ರಾಹ್ಮಣರು ಭೋಜನಮಾಡುತ್ತಿರುವಾಗ ಬಡಿಸುವವನಿಗೆ ಆಶೌಚ ಪ್ರಾಪ್ತವಾದರೆ ಎಲೆಯಲ್ಲಿರುವ ಅನ್ನವನ್ನೂ ತ್ಯಜಿಸಿ ಅನ್ಯರ ಮನೆಯ ಜಲದಿಂದ ಆಚಮನಮಾಡಿದಲ್ಲಿ ಶುದ್ಧರಾಗುವರು. ಇತ್ಯಾದಿ ವಿಷಯಗಳನ್ನೆಲ್ಲ ಪೂರ್ವಾರ್ಧದಲ್ಲಿಯೇ ಹೇಳಿದೆ. ಇದರಂತೆ ಸಹಸ್ರಭೋಜನಾದಿಗಳಲ್ಲಿಯೂ ಪೂರ್ವಸಂಕಲ್ಪಿತವಾದ ಅನ್ನದ ವಿಷಯವನ್ನು ತಿಳಿಯತಕ್ಕದ್ದು. ಪಾರ್ಥಿವ ಶಿವಲಿಂಗಪೂಜೆಯಲ್ಲಿ ಆಶೌಚವಿಲ್ಲ. ಆಶೌಚಬಂದಾಗ ಸಂಧ್ಯಾವಂದನ, ಶೌತಸ್ಮಾರ್ತಹೋಮ ಇತ್ಯಾದಿ ಆಚರಣೆಯ ವಿಷಯವನ್ನು ಪೂರ್ವಾರ್ಧದಲ್ಲಿ ಹೇಳಿದೆ. ಅಗ್ನಿಸಮಾರೋಪವ್ರವರೋಹಣಗಳನ್ನು ಆಶೌಚ ಬಂದಾಗ ಮಾಡತಕ್ಕದ್ದಲ್ಲ. ಆದಕಾರಣ ಸಮಾರೋಪದ ನಂತರ ಆಶೌಚ ಪ್ರಾಪ್ತವಾದಲ್ಲಿ ಪುನರಾಧಾನವನ್ನೇ ಮಾಡತಕ್ಕದ್ದು. ಸಮಾರೋಪ, ಪ್ರತ್ಯವರೋಹಗಳನ್ನು ಅನ್ಯರ ಕಡೆಯಿಂದಲೂ ಮಾಡಿಸತಕ್ಕದ್ದಲ್ಲ. ಇದರಲ್ಲಿ ಆಶೌಚಕ್ಕೆ ಅಪವಾದವೂ ಇಲ್ಲ. ಪುನರಾಧಾನವೆಂದರೆ, ಯಗೈದಿಗಳಿಗೆ ಹನ್ನೆರಡು ದಿನ ಹೋಮಲೋಪವಾದಲ್ಲಿ, ಅನ್ಯರಿಗೆ ಮೂರುದಿನ ಲೋಪವಾದಲ್ಲಿ ಮಾಡತಕ್ಕ “ಪುನರಾಧಾನವೆಂದು ತಿಳಿಯತಕ್ಕದ್ದು. ಗ್ರಹಣನಿಮಿತ್ತಕವಾದ ಸ್ನಾನ, ಶ್ರಾದ್ಧ, ದಾನಾದಿಗಳಲ್ಲಿ ಆಶೌಚವಿಲ್ಲ. ನಿತ್ಯಕರ್ಮಗಳಲ್ಲಿ ಸ್ನಾನ, ಆಚಮನ, ಭೋಜನ ನಿಯಮಗಳ ಸಲುವಾಗಿ ಆಶೌಚವಿಲ್ಲ. ಅಸ್ಪೃಶ್ಯರ ಸ್ಪರ್ಶದ ಬಗ್ಗೆಯೂ ಆಶೌಚದ ನಿರ್ಬಂಧವಿಲ್ಲ. ಅಂದರೆ ಆಶೌಚವಿದೆಯೆಂದು ಅಸ್ಪಶ್ಯರನ್ನು ಸ್ಪರ್ಶಿಸಬಾರದೆಂದರ್ಥ. ವೈಶ್ವದೇವ, ಬ್ರಹ್ಮಯಜ್ಞ ದೇವಪೂಜಾದಿ ನಿತ್ಯ ಹಾಗೂ ನೈಮಿತ್ತಿಕ ಕಾಮ್ಮ ಕರ್ಮಗಳನ್ನು ಆಶೌಚದಲ್ಲಿ ಮಾಡತಕ್ಕದ್ದಲ್ಲ. ಭೋಜನಕಾಲದಲ್ಲಿ ಆಶೌಚಕ್ಕೆ ಅಪವಾದಕಗಳಾದ ಜನನ ಮರಣ ಆಶೌಚಗಳ ಶ್ರವಣವಾದರೆ ಬಾಯಿಯಲ್ಲಿದ್ದ ಅನ್ನವನ್ನು ಗುಳಿ ಸ್ನಾನಮಾಡತಕ್ಕದ್ದು, ಬಾಯಿಯಲ್ಲಿದ್ದ ಅನ್ನವನ್ನು ನುಂಗಿದರೆ “ಒಂದು ಉಪವಾಸ’ವು. ಎಲ್ಲ ಅನ್ನವನ್ನುಂಡರ “ತ್ರಿರಾತ್ರ ಉಪವಾಸ"ವು. ಹೀಗೆ ಕರ್ಮದಿಂದ ಆಶೌಚಗಳ ಅಸ್ತಿತ್ವ, ನಾಸ್ತಿತ್ವಗಳ ವಿಚಾರವು. ದ್ರವ್ಯವಶದಿಂದ ಅಪವಾದ ಪುಷ್ಪ, ಫಲ, ಗಡ್ಡೆ, ಉಪ್ಪು, ಜೇನು, ಮಾಂಸ, ತರಕಾರಿ, ಹುಲ್ಲು, ಕಟ್ಟಿಗೆ, ಉದಕ, ಕ್ಷೀರ, ಮೊಸರು, ತುಪ್ಪ, ಔಷಧ, ಎಳ್ಳು, ಎಳ್ಳೆಣ್ಣೆ, ಕಬ್ಬು, ಕಬ್ಬಿನಹಾಲು, ಬೆಲ್ಲ, ಅರಳು ಮೊದಲಾದ ಹುರಿದ ಧಾನ್ಯ, ಲಡ್ಡು ಮೊದಲಾದ ಭಕ್ಷ್ಯಗಳು ಇವುಗಳನ್ನು ಆಶೌಚವುಳ್ಳವನ ೪೯೪ ! ಧರ್ಮಸಿಂಧು ಕಡೆಯಿಂದ ಅಥವಾ ಆಶೌಚಿಗಳ ಮನೆಯಲ್ಲಿದ್ದವರ ಕಡೆಯಿಂದ ಸ್ವೀಕರಿಸಿದಲ್ಲಿ ದೋಷವಿಲ್ಲ. ಆಶೌಚಿಯ ಕೈಯಿಂದ ಸ್ವೀಕರಿಸಬಾರದು. ಅಷ್ಟೇ. ಅಂಗಡಿಯಲ್ಲಿ ವ್ಯಾಪಾರಿಗೆ ಆಶೌಚವಿದ್ದರೂ ಆತನ ಹಸ್ತದಿಂದ ಉಪ್ಪು ಮೊದಲಾದವುಗಳನ್ನು ಅಥವಾ ಆಮಾನ್ನ (ಹಸೀಧಾನ್ಯ, ಬೇಯಿಸದಿದ್ದ ಧಾನ್ಯ) ಇವುಗಳನ್ನು ಕ್ರಯಮಾಡಿದಲ್ಲಿ ದೋಷವಿಲ್ಲ. ನೀರು, ಮೊಸರು, ಅರಳು ಮೊದಲಾದವುಗಳನ್ನು ಕ್ರಯಿಸಿದರೂ ಆತನ ಹಸ್ತದಿಂದ ಸ್ವೀಕರಿಸಬಾರದು. ಮೃತದೋಷದಿಂದ ಅಪವಾದ ಶಾಸ್ತ್ರಾಜ್ಞೆಯ ಹೊರತಾಗಿ ಶಸ್ತ್ರ, ಅಗ್ನಿ, ವಿಷ, ಜಲ, ಕಲ್ಲು, ಕಡಿದದ್ದಾದರೆ, ಉಪವಾಸ ಇತ್ಯಾದಿಗಳಿಂದ ಬುದ್ಧಿ ಪೂರ್ವಕವಾಗಿ (ಸ್ಟೇಚ್ಛೆಯಿಂದ) ಆತ್ಮಹತ್ಯೆ ಮಾಡಿಕೊಂಡವರ ಆಶೌಚವನ್ನು ಆಚರಿಸತಕ್ಕದ್ದಿಲ್ಲ. ಈ ಆತ್ಮಹತ್ಯೆಯು ಕ್ರೋಧದಿಂದ ಅಥವಾ ಪರೋದ್ದೇಶದಿಂದ ಆಗಬಹುದು; ಅಥವಾ ಸ್ವತಃ ಇಷ್ಟಸಾಧನೆಯ ಭ್ರಮೆಯಿಂದ ಆಗಬಹುದು. ಅದರಂತೆ ಚೋರತನ ಮೊದಲಾದ ಅಪರಾಧದಿಂದ ರಾಜನಿಂದ ಗಲ್ಲಿಗೇರಿಸಲ್ಪಟ್ಟವನ, ಪರಸ್ತ್ರೀಗಮನದಿಂದ ಅವಳ ಪತಿಯಿಂದ ಹತನಾದವನ, ಸಿಡಿಲಿನಿಂದ ಮೃತನಾದವನ ಆಶೌಚವನ್ನು ಸ್ವೀಕರಿಸತಕ್ಕದ್ದಿಲ್ಲ. ಬೇರೆಯವರು ತಡೆದರೂ ಕೇಳದ ಗರ್ವದಿಂದ ನದಿಯನ್ನೀಸಿ, ವೃಕ್ಷವನ್ನೇರಿ, ಬಾವಿಯಲ್ಲಿ ಹಾರಿಕೊಂಡು ಇತ್ಯಾದಿಗಳ ಮೂಲಕ ಮೃತನಾದವನ ಆಶೌಚವನ್ನಾದರೂ ತೆಗೆದುಕೊಳ್ಳತಕ್ಕದ್ದಿಲ್ಲ. ಗೋವು ಮೊದಲಾದವುಗಳನ್ನು ಅಪಹರಿಸಲುದ್ಯುಕ್ತನಾಗಿ ಅಥವಾ ಕೊಲ್ಲಲುದ್ಯುಕ್ತನಾಗಿ, ಅವುಗಳಿಂದ ತಿವಿಯಲ್ಪಟ್ಟು ಮೃತನಾದವ, ಸರ್ಪ, ಉಗುರುಪ್ರಧಾನಗಳಾದ ಪ್ರಾಣಿಗಳು, ಕೋರೆದಾಡೆಯ ಪ್ರಾಣಿಗಳು, ಆನೆ, ಚೋರ, ಬ್ರಾಹ್ಮಣ, ಅಂತ್ಯಜ ಇತ್ಯಾದಿಗಳಿಂದ ಹತನಾದವನ ಆಶೌಚವನ್ನು ಸ್ವೀಕರಿಸತಕ್ಕದ್ದಿಲ್ಲ. ಮಹಾಪಾಪಮಾಡಿದವರು, ಅವರ ಸಂಸರ್ಗಿಗಳು, ಮಹಾಪಾಪಿಗಳಿಗೆ ಸಮಾನರಾದವರು, ಪತಿತರು, ನಪುಂಸಕರು ಇವರ ಮರಣದಲ್ಲಿ ಆಶೌಚವಿಲ್ಲ. ಇನ್ನು ಸ್ತ್ರೀ ವಿಷಯ:- ಪತಿಯನ್ನು ಕೊಂದವಳು, ಹೀನಜಾತಿಯಿಂದ ಸಂಗಹೊಂದಿದವಳು, ಗರ್ಭಹತ್ಕಾ ಮಾಡಿದವಳು, ವ್ಯಭಿಚಾರಿಣಿ ಮತ್ತು ಹಿಂದೆ ಹೇಳಿದ ರೀತಿಯಿಂದ ಆತ್ಮಹತ್ಯೆ ಮಾಡಿಕೊಂಡವಳು ಇತ್ಯಾದಿ ಪಾಪಿಸ್ತ್ರೀಯರು ಮರಣ ಹೊಂದಿದಲ್ಲಿ ಆಶೌಚವಿಲ್ಲ. ಇವರ ಶವಸ್ಪರ್ಶ, ರೋದನ, ವಹನ, ಮೊದಲಾದ ಅಂತ್ಯಕರ್ಮಗಳನ್ನು ಮಾಡತಕ್ಕದ್ದಿಲ್ಲ. ಈ ಸ್ಪರ್ಶಾದಿಗಳನ್ನು ಜ್ಞಾನದಿಂದ ಅಥವಾ ಅಜ್ಞಾನದಿಂದ ಇಲ್ಲವೆ ಪದೇ ಪದೇ ಮಾಡಿದಂತೆ ತಾರತಮ್ಯಾನುಸಾರ ಕೃಚ್ಛ, ಅತಿಕೃಚ್ಛ, ಸಾಂತಪನ, ಚಾಂದ್ರಾಯಣ ಇತ್ಯಾದಿ ಪ್ರಾಯಶ್ಚಿತ್ತಗಳನ್ನು ನಿರ್ಣಯಸಿಂಧು ಮೊದಲಾದವುಗಳಲ್ಲಿ ಹೇಳಿದ್ದನ್ನು ತಿಳಿದುಕೊಂಡು ಮಾಡತಕ್ಕದ್ದು. ಇಂಥವರ ಶರೀರವನ್ನು ಜಲದಲ್ಲಿ ಚಲ್ಲ ತಕ್ಕದ್ದು. ಸಂವತ್ಸರ ಕಳೆದ ನಂತರ ಪುತ್ರಾದಿಗಳು ಅವರ ಆತ್ಮಘಾತಾದಿ ಪಾಪಾನುಸಾರ ತಕ್ಕಪ್ರಾಯಶ್ಚಿತ್ತವನ್ನು ಮಾಡಿ ಮತ್ತು ನಾರಾಯಣ ಬಲಿಯನ್ನು ಮಾಡಿ ಪರ್ಣಶರದಾಹ (ಶಾಖಾಸಂಸ್ಕಾರ) ಪೂರ್ವಕವಾಗಿ ಆಶೌಚಗ್ರಹಣ ಹಾಗೂ ಔರ್ಧ್ವದೇಹಿಕ ಕಾರ್ಯಗಳನ್ನು ಮಾಡುವದು. ಕೆಲವರು ಪ್ರೇತಶರೀರವನ್ನು ದಾಹನಿಮಿತ್ತವಾಗಿ ಮೂರು ಚಾಂದ್ರಾಯಣವನ್ನು ಮಾಡಿ ಆಸ್ತಿಗಳನ್ನಿಟ್ಟುಕೊಂಡು ವರ್ಷದ ಕೊನೆಗೆ ಪೂರ್ವೋಕ್ತರೀತಿಯಿಂದ ಅರ್ಧ್ವದೇಹಿಕವನ್ನು ಮಾಡತಕ್ಕದ್ದೆನ್ನುವರು. ಇಲ್ಲವೆ ಲೌಕಿಕಾಗ್ನಿಯಿಂದ ಅಮಂತ್ರಕವಾಗಿ 14 ಪರಿಚ್ಛೇದ ೩ ಉತ್ತರಾರ್ಧ YEX ದಹನ ಮಾಡಿ ಸಂವತ್ಸರದ ಒಳಗಾದರೂ ಅಂಥ ಪ್ರಸಂಗದಲ್ಲಿ ಅಂದರೆ ತನ್ನ ಜೀವನವು ಸಂದಿಗ್ಧವಾಗಿರುವಾಗ ಅಥವಾ ಭಕ್ತಿಯುಂಟಾಗಿರುವಾಗ, ಪುತ್ರಾದಿಗಳು ಆಯಾಯ ಪಾಪಗಳಿಗೆ ಹೇಳಿದ ದ್ವಿಗುಣಪ್ರಾಯಶ್ಚಿತ್ತಪೂರ್ವಕವಾಗಿ ನಾರಾಯಣ ಬಲಿಯನ್ನು ಮಾಡಿ, ಶಾಖಾಸಂಸ್ಕಾರ ಅಥವಾ ಅಸ್ಥಿಸಂಸ್ಕಾರ ಮಾಡಿ, ಆಶೌಚ ಮತ್ತು ಔರ್ಧ್ವದೇಹಿಕವನ್ನು ಮಾಡತಕ್ಕದ್ದು, ಇದನ್ನಾದರೂ ಪ್ರಾಯಶ್ಚಿತ್ತಕ್ಕೆ ಅರ್ಹರಾದವರಿಗೆ ಮಾತ್ರ. ಘಟಸ್ಫೋಟದಿಂದ ಬಹಿಷ್ಕೃತರಾದವರಿಗೆ ದಾಸಿಯ ಮುಖಾಂತರ ಪತಿತೋದಕ ವಿಧಿಯನ್ನು ಮಾಡಿದ ನಂತರ ಸಪಿಂಡೀಕರಣ ರಹಿತವಾದ ಔಧ್ಯದೇಹಿಕವನ್ನು ಮಾಡತಕ್ಕದ್ದು. ಅವರ ಸಾಂವತ್ಸರಿಕವನ್ನಾದರೂ ಏಕೋದ್ದಿಷ್ಟ ವಿಧಿಯಿಂದಲೇ ಮಾಡತಕ್ಕದ್ದು. ಆತ್ಮಘಾತಿಗಳಾದವರಿಗೆ ಪುತ್ರಾದಿಗಳು ಮೃತನ ಜಾತಿಯ ವಧೋಕ್ತವಾದ ಬ್ರಹ್ಮಹತ್ಕಾದಿ ಪ್ರಾಯಶ್ಚಿತ್ತ ಸಹಿತವಾಗಿ ಚಾಂದ್ರಾಯಣ ಮತ್ತು ಎರಡು ತಪ್ತಕೃಚ್ಛ ಇವುಗಳನ್ನು ಮಾಡಿ ನಾರಾಯಣಬಲಿಪೂರ್ವಕವಾಗಿ ಅವರನ್ನು ದಹಿಸತಕ್ಕದ್ದು, ಆತ್ಮಘಾತಿಗಳಲ್ಲಿ - ಗೋವು, ಆನೆ, ವ್ಯಾಘ್ರಾದಿಗಳಿಂದ ಇತ್ಯಾದಿ ದುರ್ಮರಣವಾದವರ ಮತ್ತು ಪತಿತಾದಿ ಪೂರ್ವೋಕ್ತರಾದ ಎಲ್ಲರ ಮರಣದಿಂದಾರಂಭಿಸಿ ಆ ಸಂಬಂಧಿ ಆಶೌಚವಿಲ್ಲ. ಆಯಾಯ ಪ್ರಾಯಶ್ಚಿತ್ತಪೂರ್ವಕ ನಾರಾಯಣಬಲಿ ಸಹಿತ ಸಮಂತ್ರಕದಾಹವಾದಲ್ಲಿ ಆ ದಹನ ದಿನದಿಂದಲೇ ಆಶೌಚಸ್ವೀಕಾರವು, ಜಲ, ಆಗ್ನಿ ಮೊದಲಾದವುಗಳಿಂದ ಪ್ರಮಾದಮರಣ ಹೊಂದಿದವರಿಗೆ ಮರಣ ದಿನದಿಂದಲೇ ಆಶೌಚಸ್ವೀಕಾರವು. ಅದು ಮೂರುರಾತ್ರಿಯೆಂದು ಕೆಲವರ ಮತವು, ದಶಾಹವೆಂದು ಬಹುಗ್ರಂಥಕಾರರ ಮತವು, ಪ್ರಮಾದಮರಣವಾದರೂ ಅದು “ದುರ್ಮರಣ"ವಾಗಿರುವದರಿಂದ ಆ ನಿಮಿತ್ತಕವಾದ ಪ್ರಾಯಶ್ಚಿತ್ತ ಪೂರ್ವಕವಾಗಿಯೇ ದಹನಾದಿಗಳನ್ನು ಮಾಡತಕ್ಕದ್ದು. ಹೀಗೆ “ಸ್ಮೃತ್ಯರ್ಥಸಾರ"ದಲ್ಲಿ ಹೇಳಿದೆ. ಮತ್ತು ಚಾಂಡಾಲ, ಗೋವು, ಬ್ರಾಹ್ಮಣ, ಚೋರ, ಪಶು, ದಾಡೆಯಪ್ರಾಣಿ, ಸರ್ಪ, ಅಗ್ನಿ, ಜಲ ಮೊದಲಾದವುಗಳಿಂದ ಪ್ರಮಾದ ಮರಣವಾದರೆ ಚಾಂದ್ರಾಯಣ, ಎರಡು ತಪ್ತಕೃಚ್ಛ, ಹೀಗೆ ಪ್ರಾಯಶ್ಚಿತ್ತವನ್ನು ಮಾಡಿ ಅಥವಾ ಹದಿನೈದು ಕೃಚ್ಛಗಳನ್ನು ಮಾಡಿ ವಿಧಿವತ್ತಾಗಿ ದಹನ, ಆಶೌಚ ಉದಕದಾನ ಮೊದಲಾದವುಗಳನ್ನೂ ಮಾಡತಕ್ಕದ್ದೆಂದು ಹೇಳಿದೆ. ಪ್ರಾಣಾಂತಿಕ ಪ್ರಾಯಶ್ಚಿತ್ತ ಹೊಂದಿ ಮೃತರಾದವರ ಆಶೌಚವನ್ನು ದಶಾಹ ತೆಗೆದುಕೊಳ್ಳತಕ್ಕದ್ದಲ್ಲದೆ ಅವರ ಎಲ್ಲ ಪ್ರೇತಕಾರ್ಯಗಳನ್ನೂ ಮಾಡತಕ್ಕದ್ದು. ಯಾಕೆಂದರೆ ಪ್ರಾಯಶ್ಚಿತ್ತದಿಂದ ಅವನು ಶುದ್ಧನಾಗಿರುತ್ತಾನೆ. ಪ್ರಾರಂಭಿಸಿದ ಪ್ರಾಯಶ್ಚಿತ್ತಮಧ್ಯದಲ್ಲಿ ಮರಣವಾದರೂ ಶುದ್ಧನೆಂದೇ ತಿಳಿಯತಕ್ಕದ್ದು. ಆಹಿತಾಗ್ನಿಗಳಾದವರು ಪತಿತರಾಗಿ ಮೃತರಾದರೆ ಅಥವಾ ಗರ್ವಾದಿಗಳಿಂದ ಚಾಂಡಾಲ, ಶೃಂಗಿ, ಚೋರ ಇತ್ಯಾದಿಗಳ ಮೂಲಕ ಮೃತರಾದರೆ ಆಗ ವಿಶೇಷವಿದೆ. ಆ ತ್ರೇತಾಗ್ನಿಯನ್ನು ಜಲದಲ್ಲಿ ಹಾಕತಕ್ಕದ್ದು. ಅವಸಥ್ಯ ಅಗ್ನಿಯನ್ನು ನಾಲ್ಕು ದಾರಿ ಕೂಡಿದಲ್ಲಿ ಚಲ್ಲತಕ್ಕದ್ದು. ಪಾತ್ರೆಗಳನ್ನೆಲ್ಲ ಅಗ್ನಿಯಲ್ಲೇ ಹಾಕತಕ್ಕದ್ದು. ಹೀಗೆ ಸಾಗ್ನಿಕನಾದ ಪಾಪಿಯ ವಿಷಯದಲ್ಲಿ ವಿಶೇಷವು. ಅನಂತರ ಆತನು ಪ್ರಾಯಶ್ಚಿತ್ತಕ್ಕೆ ತಕ್ಕವನೋ ಅಲ್ಲವೋ ಎಂಬುದನ್ನು ತಿಳಿದುಕೊಂಡು ಹಿಂದೆ ಹೇಳಿದ ವ್ಯವಸ್ಥೆಯಿಂದ ಕಡೆದು ಉಂಟುಮಾಡಿದ ಅಗ್ನಿಯಿಂದ ಹೀಗೆ ದಾಹಾದಿ ಅಂತ್ಯಕರ್ಮಗಳನ್ನಾಚರಿಸತಕ್ಕದ್ದು. ಧರ್ಮಸಿಂಧು ಮಹಾಪಾತಕಿಯಾದ ಸಾಗ್ನಿಕನು ಜೀವಂತನಾಗಿದ್ದರೆ ಪುತ್ರಾದಿಗಳು ಆ ಅಗ್ನಿಯನ್ನು ಪ್ರಾಯಶ್ಚಿತ್ತವಾಗುವಲ್ಲಿಯ ವರೆಗೆ ಪಾಲಿಸತಕ್ಕದ್ದು. ಪ್ರಾಯಶ್ಚಿತ್ತಮಾಡಿಕೊಂಡ ಅಥವಾ ಮಾಡದಿರುವವನು ಮೃತನಾದಲ್ಲಿ ಅಗ್ನಿಗಳನ್ನು ಜಲದಲ್ಲಿ ಹಾಕತಕ್ಕದ್ದು, ಪಾತ್ರಗಳನ್ನು ಅಗ್ನಿಯಲ್ಲಿ ಚಲ್ಲುವದು. ಮಾಧವೀಯದಲ್ಲಿ ಆಹಿತಾಗ್ನಿಯ ದುರ್ಮರಣ ಮತ್ತು ಆತ್ಮಹತ್ಯೆಯಲ್ಲಿ ಅವನ ಶವವನ್ನು ಲೌಕಿಕಾಗ್ನಿಯಿಂದ ಅಮಂತ್ರಕವಾಗಿ ದಹನಮಾಡಿ ಅವನ ಅಸ್ಥಿಗಳನ್ನು ಹಾಲಿನಿಂದ ತೊಳೆದು ಆ ಪ್ರಾಯಶ್ಚಿತ್ತವನ್ನು ಮಾಡಿ ಶೌತಾಗ್ನಿಗಳಿಂದ ಸಮಂತ್ರಕ ದಹನಾದಿಗಳನ್ನು ಮಾಡತಕ್ಕದ್ದೆಂದು ಹೇಳಿದೆ. ನಿರಗ್ನಿಯ ದುರ್ಮರಣದಲ್ಲಿಯೂ ಹೀಗೇ ಯೋಚಿಸತಕ್ಕದ್ದು. ಸರ್ಪಹತನಾದವನಿಗೆ ವಿಶೇಷ ಪ್ರಮಾದ ಅಥವಾ ಸರ್ವಾದಿಗಳಿಂದ ಕೆಣಕಿ ಅದರಿಂದ ಮರಣವಾದಲ್ಲಿ ಆಶೌಚವಿಲ್ಲ. ಮುಂದೆ ಹೇಳುವ “ನಾಗಪೂಜಾವ್ರತವನ್ನು ಮಾಡಿ ನಾರಾಯಣಬಲಿ, ಸುವರ್ಣನಾಗ ದಾನ, ಪ್ರತ್ಯಕ್ಷ ಗೋದಾನಗಳನ್ನು ಮಾಡಿ ದಹನ, ಆಶೌಚಾದಿಗಳನ್ನು ಮಾಡತಕ್ಕದ್ದು. ಎಲ್ಲ ದುರ್ಮರಣದಲ್ಲಿ ಮತ್ತು ಪತಿತಾದಿಗಳ ಮರಣದಲ್ಲಿಯೂ ಆಯಾಯ ಪ್ರಾಯಶ್ಚಿತ್ತಾದಿಗಳನ್ನು ಮಾಡಿ ದಾಹ, ಆಶೌಚಾದಿಗಳನ್ನಾಚರಿಸತಕ್ಕದ್ದೆಂದು ಹೇಳಿದೆ. ಪ್ರಾಯಶ್ಚಿತ್ತ ಸ್ವರೂಪ ಬುದ್ಧಿಪೂರ್ವಕ ಆತ್ಮಹತ್ಯೆ ಮಾಡಿಕೊಂಡಲ್ಲಿ ಮೂವತ್ತು ಕೃಚ್ಛಪ್ರಾಯಶ್ಚಿತ್ತಗಳು. ಇವುಗಳನ್ನು ಜಾತಿವಧಪ್ರಾಯಶ್ಚಿತ್ತದೊಡನೆ ಮಾಡತಕ್ಕದ್ದು. ಅದು ಹೇಗೆಂದರೆ ಆತ್ಮಘಾತಿಯು ಬ್ರಾಹ್ಮಣನಾದರೆ ದ್ವಾದಶಾಬ್ಬ ಕೃಚ್ಛ ಮತ್ತು ಬ್ರಹ್ಮಹತ್ಯಾ ಪ್ರಾಯಶ್ಚಿತ್ತವು ಹಾಗೂ ಮೂವತ್ತು ಕೃಚ್ಛ, ಆತ್ಮಘಾತ ಪ್ರಾಯಶ್ಚಿತ್ತವು. ಇವುಗಳನ್ನು ಅವನ ಪುತ್ರಾದಿಗಳು ಮಾಡತಕ್ಕದ್ದು. ಬ್ರಾಹ್ಮಣಸ್ತ್ರೀಯು ಆತ್ಮಹತ್ಯೆ ಮಾಡಿಕೊಂಡರೆ ಬ್ರಾಹ್ಮಣವಧಪ್ರಾಯಶ್ಚಿತ್ತ ಮತ್ತು ಮೂವತ್ತು ಕೃಚ್ಛಗಳು. ಹೀಗೆಯೇ ಶೂದ್ರಾದಿಗಳ ಆತ್ಮಹತ್ಯೆಯಲ್ಲಿಯೂ ತಿಳಿಯತಕ್ಕದ್ದು. ಅಶಕ್ತಿಮೂಲಕ ಆತ್ಮಘಾತಮಾಡಿಕೊಂಡರೆ ಎರಡು ಚಾಂದ್ರಾಯಣ ಹಾಗೂ ನಾಲ್ಕು ತಪ್ತಕೃಚ್ಛಗಳು, ಪ್ರಮಾದದಿಂದ ಜಲಾದಿಗಳಲ್ಲಿ ಮರಣವಾದರೆ ಹದಿನೈದು ಕೃಚ್ಛಗಳು ಅಥವಾ ಚಾಂದ್ರಾಯಣಪೂರ್ವಕವಾಗಿ ಎರಡು ತಪ್ತಕೃಚ್ಛಗಳು. ಪತಿತನು ಮೃತನಾದರೆ ಹದಿನಾರು ಕೃಚ್ಛಗಳು, ಬ್ರಹ್ಮಹತ್ಯಾದಿ ಪಾಪಿಗಳಿಗೆ ಪ್ರಾಯಶ್ಚಿತ್ತಕ್ಕಿಂತ ಮೊದಲು ಮರಣವಾದರೆ ಆಯಾಯ ಪ್ರಾಯಶ್ಚಿತ್ತಗಳನ್ನು ಪುತ್ರಾದಿಗಳು ಮಾಡತಕ್ಕದ್ದು. ಪ್ರಾಯಶ್ಚಿತ್ತಕ್ಕೆ ಅನರ್ಹರಾದವರಿಗಾದರೋ “ಪತಿತೋದಕ ದಾನವಿಧಿ"ಯ ಹೊರತು ಪ್ರಾಯಶ್ಚಿತ್ತಾದಿಗಳಿಲ್ಲವೆಂದು ಹೇಳಿದೆ. ನಿರ್ಣಯಸಿಂಧುವಿನಲ್ಲಿ ಪ್ರಾಯಶ್ಚಿತ್ತಕ್ಕೆ ಯೋಗ್ಯರಲ್ಲದವರಿಗೂ ಪುತ್ರಾದಿಗಳು ನಾರಾಯಣಬಲಿಪೂರ್ವಕವಾಗಿ ಸಮಸ್ತ ಔರ್ಧ್ವದೇಹಿಕವನ್ನೂ ಸಪಿಂಡೀಕರಣ, ದರ್ಶಾದಿಶ್ರಾದ್ಧ, ಗಯಾವಿಶಾಸ್ತ್ರಗಳನ್ನೂ ಮಾಡತಕ್ಕದ್ದೆಂದು ಹೇಳಿದೆ. ಇದರಂತೆ ಕೇಂಛಜಾತಿಗೆ ಸೇರಿದವನಿಗೂ ಹೇಳಿದ. ಆದರೆ ಈ “ಪತಿತೋದಕವಿಧಿಯು ಪುತ್ರರಹಿತನಾದವನಿಗೆ ಹೇಳಿದ್ದು ಎಂದೂ ಹೇಳಿದೆ. ಇದೇ ಯುಕ್ತವು, ಅಲ್ಪಕಾಲ ಮಂಭನಾಗಿದ್ದು ಪ್ರಾಯಶ್ಚಿತ್ತಕ್ಕೆ ಯೋಗ್ಯನಾದಲ್ಲಿ ಅವನಿಗೆ ಪುತ್ರನು ಷೋಡಶಕೃಚ್ಛಾದಿ ಪ್ರಾಯಶ್ಚಿತ್ತವನ್ನು ಮಾಡಿ ಶಾಖಾಸಂಸ್ಕಾರಾದಿಗಳನ್ನು ಮಾಡತಕ್ಕದ್ದು. 34 ಪರಿಚ್ಛೇದ - ೩ ಉತ್ತರಾರ್ಧ ೪೯೭ ಪ್ರಮಾದಮರಣ ಹೊರತಾಗಿ ಚೋರತನ, ಪರಸ್ತ್ರೀಗಮನ ಮೊದಲಾದ ಕಾರಣಗಳಿಂದ ದುರ್ಮರಣವಾದರೆ ಎರಡು ಚಾಂದ್ರಾಯಣ ಅಥವಾ ತಪ್ತ ಕೃಚ್ಛವು. ಇವುಗಳನ್ನು ಮೂಲಗ್ರಂಥಗಳಿಂದ ತಿಳಿದು ಆಚರಿಸತಕ್ಕದ್ದು. ದುರ್ಮರಣಗಳಲ್ಲಿ ದಾನಾದಿ ವಿಧಾನ ವ್ಯಾಘ್ರಾದಿ ಕಾರಣಗಳಿಂದ ದುರ್ಮರಣವಾದರೆ “ಶಾತಪೋಕ್ತ ದಾನಾದಿ ವಿಧಾನಗಳನ್ನೂ ಮಾಡತಕ್ಕದ್ದು. ಹೇಗೆಂದರೆ ವ್ಯಾಘ್ರದಿಂದ ಹತನಾದರೆ ಬ್ರಾಹ್ಮಣಕನ್ಯಗೆ ವಿವಾಹಮಾಡಿಸುವದು. ಆನೆಯಿಂದ ಹತನಾದರೆ ನಾಲ್ಕು ನಿಷ್ಕ ಪರಿಮಾಣದ ಬಂಗಾರದಿಂದ ಆನೆಯ ಪ್ರತಿಮೆಯನ್ನು ಮಾಡಿಸಿ ದಾನಮಾಡುವದು. ರಾಜನಿಂದ ಹತನಾದರೆ ಸುವರ್ಣಪುರುಷದಾನವು ಚೋರಹತನಾದರೆ ಪ್ರತ್ಯಕ್ಷ ಧೇನುದಾನವು ವೈರಿಯಿಂದ ಹತನಾದರೆ ಬಸವನನ್ನು ದಾನಮಾಡುವದು. ಬಸವನಿಂದ ಹತನಾದರೆ ಯಥಾಶಕ್ತಿ ಹಿರಣ್ಯ ದಾನಮಾಡತಕ್ಕದ್ದು. ಹಾಸಿಗೆಯ ಮೇಲೆ ಮೃತನಾದರೆ ಹತ್ತಿಯಿಂದ ಮಾಡಿದ ಶಯ್ಯಾದಾನ ಮಾಡುವದು. ಅದರಲ್ಲಿ ನಿಷ್ಕಪರಿಮಾಣದ ಬಂಗಾರದ ವಿಷ್ಣು ಪ್ರತಿಮೆಯನ್ನಿಡತಕ್ಕದ್ದು. ಅಶುಚಿಯಾಗಿ ಮೃತನಾದರೆ ಎರಡು ನಿಮ್ಮ ಪ್ರಮಾಣದ ವಿಷ್ಣು ಪ್ರತಿಮಾ ದಾನವು, ಸಂಸ್ಕಾರಹೀನನಾಗಿ ಮರಣಪಟ್ಟರೆ ಬ್ರಾಹ್ಮಣಪುತ್ರನಿಗೆ ಉಪನಯನ ಮಾಡಿಸುವದು. ಕುದುರೆಯಿಂದ ಮೃತನಾದರೆ ಮೂರು ನಿಮ್ಮ ಬಂಗಾರದ ಕುದುರೆಯ ಪ್ರತಿಮಾದಾನವು. ನಾಯಿಯಿಂದ ಮೃತನಾದರೆ ‘ಕ್ಷೇತ್ರಪಾಲಪ್ರತಿಷ್ಠೆ ಮಾಡುವದು. ಹಂದಿಯಿಂದ ಮೃತನಾದರೆ ಕೋಣದ ದಾನವು. ಕೃಮಿಗಳಿಂದ ಹತನಾದರೆ ಐದು ಖಾರಿ ಪರಿಮಾಣದ ಗೋದಿಯ ದಾನವು, ವೃಕ್ಷದಿಂದ ಮೃತನಾದರೆ ವಸ್ತ್ರದಿಂದ ಕೂಡಿದ ಸುವರ್ಣವೃಕ್ಷ ದಾನವು. ಕೊಡುಳ್ಳ ಪ್ರಾಣಿಯಿಂದ ಮೃತನಾದರೆ ವಸ್ತ್ರಸಹಿತವಾದ ವೃಷಭ ದಾನವು ಗಾಡಿಯಿಂದ ಬಿದ್ದು ಮೃತನಾದರೆ ಸಲಕರಣೆಯಿಂದ ಯುಕ್ತವಾದ ಯಾವದಾದರೊಂದು ವಸ್ತುವಿನ ದಾನವು. O ದರೆಯಿಂದ ಹಾರಿ ಮೃತನಾದರೆ “ಧಾನ್ಯಪರ್ವತ” ದಾನವು. ಅಗ್ನಿಯಿಂದ ಮೃತನಾದರೆ ಕೆರೆಯ ಉತ್ಸರ್ಗವಿಧಿಯನ್ನಾಚರಿಸುವದು. ಕಟ್ಟಿಗೆಯಿಂದ ಮೃತಿಹೊಂದಿದರೆ ಧರ್ಮಾರ್ಥಸಭೆಯನ್ನು ಮಾಡಿಸುವದು. ಶಸ್ತ್ರದಿಂದ ಹತನಾದರೆ ಎಮ್ಮೆಯ ದಾನವು. ಕಲ್ಲುಗಳಿಂದ ಹತನಾದರೆ ಕರುವಿನಿಂದಯುಕ್ತವಾದ, ಹಾಲುಳ್ಳ ಗೋದಾನವು ವಿಷದಿಂದ ಮೃತನಾದರೆ ಬಂಗಾರನಿರ್ಮಿತ ಪೃಥ್ವಿಯ ದಾನವು, ಗಳಪಾಶದಿಂದ ಮೃತನಾದರೆ ಬಂಗಾರದ ಕಪಿಯ ದಾನವು, ಜಲದಲ್ಲಿ ಮೃತನಾದರೆ ಎರಡು ನಿನ್ನ ಬಂಗಾರದಿಂದ ನಿರ್ಮಿತವಾದ ವರುಣ ಪ್ರತಿಮಾ ದಾನವು, ಮೈಲಿರೋಗದಿಂದ ಮೃತನಾದರೆ ರುಚಿಕರವಾದ ಅನ್ನದಿಂದ ನೂರು ಬ್ರಾಹ್ಮಣರ ಭೋಜನವು. ಕುತ್ತಿಗೆಯಲ್ಲಿ ಅನ್ನದ ತುತ್ತು ಕಟ್ಟಿ ಮೃತನಾದರೆ “ಮೃತಧೇನು” ದಾನವು, ಉಬ್ಬಸರೋಗದಿಂದ ಮೃತಿಹೊಂದಿದರೆ ಎಂಟು ಕೃಚ್ಛಗಳು, ಅತಿಸಾರ (ನಿಲುಗಡೆಯಿಲ್ಲದ ಮಲವಿಸರ್ಜನ) ರೋಗದಿಂದ ಮೃತನಾದರೆ ಲಕ್ಷಗಾಯತ್ರೀಜಪವು, ಸಿಡಿಲು ಎರಗಿ ಮರಣವಾದರೆ ವಿದ್ಯಾದಾನವು ಅಂತರಾಳದಲ್ಲಿ ಮೃತನಾದರೆ ವೇದಪಾರಾಯಣವು. ಪತಿತನು ಮೃತನಾದರೆ ಹದಿನಾರು ಕೃಚ್ಛಗಳು, ಅಸ್ಪಶ್ಯರನ್ನು ಸ್ಪರ್ಶಮಾಡಿ ಮೃತನಾದರೆ ಉತ್ತಮವಾದ ಶಾಸ್ತ್ರಗ್ರಂಥದಾನವು. ಇತ್ಯಾದಿ. ಇವುಗಳಲ್ಲಿ ಶಯ್ಯಾಮರಣ, ಶೌಚಹೀನ, ಸಂಸ್ಕಾರಹೀನ ಮರಣ, ಕೃಮಿ, ಮೈಲಿಬೇನೆ. ೪೯೮ ಧರ್ಮಸಿಂಧು ಕುತ್ತಿಗೆಯಲ್ಲಿ ಗ್ರಾಸವು ಸಿಕ್ಕಿ, ಉಬ್ಬುಸ, ಅತಿಸಾರರೋಗ, ಶಾಕಿನ್ಯಾದಿಗ್ರಹ ಇತ್ಯಾದಿಗಳಿಂದ ಮರಣವಾದರೆ, ಅಂತರಿಕ್ಷಮರಣ, ಅಸ್ಪಶ್ಯಸ್ಪರ್ಶ ಮರಣ ಇವುಗಳಲ್ಲಾದರೂ ದಾನಾದಿ ವಿಧಿಗಳೇ ಹೊರತು ಪ್ರಾಯಶ್ಚಿತ್ತವಿಲ್ಲ ಮತ್ತು ನಾರಾಯಣಬಲಿಯೂ ಇಲ್ಲ. ವರ್ಷಾದಿಕಾಲಗಳನ್ನು ನಿರೀಕ್ಷಿಸತಕ್ಕದ್ದೂ ಇಲ್ಲ. ವ್ಯಾಘ್ರಾದಿನಿಮಿತ್ತಕವಾದ ಮತ್ತು ವಿಷ, ಜಲ, ಶಸ್ತ್ರಾದಿ ಕಾರಣಗಳಿಂದ ಉಂಟಾದ ಮರಣವು ಪ್ರಮಾದದಿಂದ, ದರ್ಪಾದಿಗಳಿಂದ ಅಥವಾ ಬುದ್ಧಿಪೂರ್ವಕವಾಗಿಯೂ ಇರಬಹುದು. ಹೀಗೆ ಅನೇಕ ವಿಧಗಳುಂಟು. ಅವುಗಳಿಗೆ ಹೇಳಿದ ಬೇರೆ ಬೇರೆ ರೂಪದ್ದಾದ ಪ್ರಾಯಶ್ಚಿತ್ತ, ನಾರಾಯಣಬಲಿ, ದಾನಾದಿವಿಧಿ ಇವೆಲ್ಲವನ್ನೂ ಕೂಡಿಯೇ ಮಾಡತಕ್ಕದ್ದು. ಇನ್ನು ಪುತ್ರಾದಿಗಳು ತಂದೆಯ ಜಲಾದಿ ದುರ್ಮರಣ ಪ್ರಾಯಶ್ಚಿತ್ತ ಬ್ರಹ್ಮಹತ್ಯಾದಿ ಆಯಾಯ ಪಾಪಗಳ ಪ್ರಾಯಶ್ಚಿತ್ತ ಅಥವಾ ಆತ್ಮಘಾತಾದಿ ಪ್ರಾಯಶ್ಚಿತ್ತ ಇವುಗಳನ್ನೆಲ್ಲ ಮಾಡಲಸಮರ್ಥನಾದರೆ ಆಗ ಹೇಳಿದ ದಾನಾದಿ ವಿಧಿಗಳನ್ನೂ, ನಾರಾಯಣ ಬಲಿಯನ್ನೂ ಮಾಡಿ ಔರ್ಧ್ವದೇಹಿಕವನ್ನು ಮಾಡತಕ್ಕದ್ದು. ಅತ್ಯಶಕ್ತಿಯಲ್ಲಿ ಕೇವಲ ನಾರಾಯಣಬಲಿಯನ್ನಾದರೂ ಮಾಡತಕ್ಕದ್ದು. ಅದರಿಂದಲೇ ಪುತ್ರಾದಿ ಸಪಿಂಡರಿಗೆ ಆಯಾಯ ಪ್ರಾಯಶ್ಚಿತ್ತಗಳನ್ನು ಮಾಡದಿದ್ದರೆ ನರಕಾದಿ ದುರ್ಗತಿಯು ಪ್ರಾಪ್ತವಾಗುವದೆಂದು ತಿಳಿಯತಕ್ಕದ್ದು. ವಿಧಿವಿಹಿತ ಜಲಾದಿ ಮರಣ ವಿಷಯದಲ್ಲಿ ಎಲ್ಲ ಜಾತಿಯ ರೋಗಿಗಳು ಅಥವಾ ಅರೋಗಿಗಳು ಭಾಗೀರಥೀಪ್ರವೇಶಾದಿಗಳಿಂದ ಮರಣವನ್ನು ಹೊಂದಿದರೆ “ಕಾಮಿಕ” ಯಾಗದ ಫಲವು ಬರುವದೆಂದು ಹೇಳಿದೆ. ಅರೋಗಿಯಾದ ಶೂದ್ರನಿಗಾದರೂ ಪ್ರಯಾಗದ ಹೊರತಾಗಿ ಜಲಾದಿಮರಣಕ್ಕೆ ಅನುಜ್ಞೆಯಿದೆ. ವ್ಯಾಧಿಷ್ಯ, ವೈದ್ಯನಿಂದ ತ್ಯಕ್ತನಾದ ಬ್ರಾಹ್ಮಣನು ವೃದ್ಧನಿರಲಿ, ಯುವಕನಾಗಿರಲಿ ತನ್ನ ದೇಹವನ್ನು ಜಲ, ಅಗಾದಿಗಳಲ್ಲಿ ತ್ಯಜಿಸಿದರೆ ಯಥೇಷ್ಟ ಫಲವನ್ನು ಹೊಂದುವನು. ಚಿಕಿತ್ಸೆಗೆ ಎಟುಕದ ಮಹಾರೋಗಪೀಡಿತನಾದವನು ಬದುಕಲು ಅಸಾಧ್ಯನಾಗಿದ್ದಾಗ ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸುವದು ಅಥವಾ ಉಪವಾಸದಿಂದ ಮರಣಹೊಂದುವದು. ಇಲ್ಲವೆ ಆಳವಾದ ಜಲರಾಶಿಯಲ್ಲಿ ಬೀಳುವದು, ಪರ್ವತಶಿಖರದಿಂದ ಬೀಳುವದು; ಅಥವಾ ಹಿಮವತ್ ಪರ್ವತಕ್ಕೆ ಮಹಾಪ್ರಸ್ಥಾನಮಾಡುವದು. (ಜೀವದ ಆಶೆಯನ್ನು ತೊರೆದು ದೇಹಬೀಳುವಲ್ಲಿವರೆಗೆ ಉತ್ತರಾಭಿಮುಖನಾಗಿ ಪ್ರಯಾಣಮಾಡುವದಕ್ಕೆ “ಮಹಾಪ್ರಸ್ಥಾನ"ವನ್ನುವರು.) ಪ್ರಯಾಗದಲ್ಲಿ ದೇಹತ್ಯಾಗಮಾಡುವವರು, ಆಲದಮರದ ಹೆಗಲಿನ ತುದಿಯಿಂದ ಬಿದ್ದು ಮರಣಹೊಂದುವದು ಹೀಗೆ ಮಾಡಿದರೆ “ಆತ್ಮಘಾತ"ವಂದಾಗುವದಿಲ್ಲ. ಇಷ್ಟೇ ಅಲ್ಲ, ಉತ್ತಮಲೋಕ ಪ್ರಾಪ್ತಿಯಾಗುವದು. ಸರ್ವಕಾಲ ವಿಧಿವಿಹಿತ ಮರಣಹೊಂದಿದ ಸರ್ವವರ್ಣದವರ ಆಶೌಚವನ್ನು ತ್ರಿದಿನ ಮಾಡತಕ್ಕದ್ದು. ಅವರು ಪುರುಷರಾಗಲೀ, ಸ್ತ್ರೀಯರಾಗಲಿ) ಅದರಂತೆ ಸಿಡಿಲಿನಿಂದ, ಅಗ್ನಿಯಿಂದ ಹತರಾಗಿದ್ದರೂ ಹೀಗೆಯೇ. ಎಷ್ಟು ಔಷಧೋಪಚಾರಮಾಡಿದರೂ ಗುಣವಾಗದಿದ್ದಾಗ ಕಾಶಿಯ ಭಾಗೀರಥಿಯ ಜಲದಮಧ್ಯ ನಿಂತವನಾಗಿ ಅಥವಾ ಕಾವ್ಯ, ಪಾಷಾಣಗಳ ಮಧ್ಯದಲ್ಲಿದ್ದು ಕಾಶಿಗೆ ಸಮ್ಮುಖನಾಗಿ ಪ್ರಾಣವನ್ನು ಬಿಟ್ಟರ, ಅವರಿಗೆ ಪ್ರಾಣಾಂತಿಕದಲ್ಲಿ ಪರಮೇಶ್ವರನು ಕರ್ಣಮೂಲವನ್ನು ಪ್ರವೇಶಿಸಿ ತಾರಕಪ್ರಣವಮಂತ್ರವನ್ನುಪದೇಶಿಸುವನೆಂದು ಪುರಾಣಾದಿಗಳಲ್ಲಿ ಘೋಷಿಸಲ್ಪಟ್ಟಿದೆ. ಹೀಗೆಪರಿಚ್ಛೇದ - ೩ ಉತ್ತರಾರ್ಧ YEE ಮಾಧವಾದಿ ನಿಬಂಧಗಳಲ್ಲಿಯೂ ಹೇಳಿದೆ. ಇಂಥ ಶಾಸ್ತಾನುಜ್ಞಾತವಾದ ಬುದ್ಧಿಪೂರ್ವಕ ಆತ್ಮಹತ್ಯೆಯಲ್ಲಿ ಗೃಹಸ್ಥರಿಗೆ ಮಾತ್ರ ಅಧಿಕಾರವು. ಯತಿಗೆ ಅಧಿಕಾರವಿಲ್ಲ. ಯಾಕೆಂದರೆ ಇದರಲ್ಲಿ “ತ್ರಿ ದಿನಾದಿ” ಆಶೌಚವಿಧಿಯಿದೆ. ಇದು ಕಾಮಕರ್ಮವಾದುದರಿಂದ ಯತಿಗೆ “ಕಾವ್ಯ’ದಲ್ಲಧಿಕಾರವಿಲ್ಲ. ಹೀಗೆ ನಿರ್ಣಯಸಿಂಧುರರ ಮತವು ಈಗಿನ ಕಾಲದ ಶಿಷ್ಟರು ರೋಗಾದಿಪೀಡೆಯನ್ನನುಭವಿಸಲಾರದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ತೀರ್ಥಾದಿಗಳಲ್ಲಿ ದೇಹವನ್ನು ತ್ಯಜಿಸುವರು. ಗೃಹಸ್ಥರೂ, ವಿಧುರರೂ ಹಾಗೆ ಮಾಡುವದೇ ಇಲ್ಲ. ಇನ್ನು ಕೆಲವರ ಮತವೇನೆಂದರೆ ಅಪರಿಹಾರ್ಯ ರೋಗಾದಿಗ್ರಸ್ತರಾದ ವೃದ್ಧಾದಿಗಳು ಪ್ರಯಾಗದ ಹೊರತಾಗಿ ಬುದ್ಧಿಪೂರ್ವಕ “ಆತ್ಮಘಾತ” ಮಾಡಬಾರದು. ದರೆಯಿಂದ ಬೀಳುವದು, ಅಗ್ನಿಯನ್ನು ಪ್ರವೇಶಿಸುವದು ಇತ್ಯಾದಿಗಳು ಕಲಿಯುಗದಲ್ಲಿ ವರ್ಜಗಳೆಂದು ಹೇಳಿರುವದರಿಂದ ಈ ವೃದ್ಧಾದಿಗಳ ಆತ್ಮಘಾತುಕ ಮರಣವೂ ಸಹ ಆಗತಕ್ಕದ್ದಲ್ಲವೆಂದೂ ಹೇಳುವರು. ಇವರ ಮತದಂತೆ ಮರಣಾಂತ ಪ್ರಾಯಶ್ಚಿತ್ತ, ಕಾಶಿಖಂಡದಲ್ಲಿ ಹೇಳಿದ ಬ್ರಾಹ್ಮಣಾದಿಗಳ ದೇಹತ್ಯಾಗ ಇವು ಯುಗಾಂತರ ವಿಷಯವಾಗುವದೇ ಹೊರತು ಕಲಿಯುಗದಲ್ಲಿ ಆಚರಿಸತಕ್ಕದ್ದಲ್ಲ. ಪ್ರಯಾಗದಲ್ಲಿಯ ಮರಣವೂ ಸ್ತ್ರೀಯರ ಸಹಗಮನವೂ ಕಲಿಯುಗದಲ್ಲಿ ಸರ್ವಸಮ್ಮತವಾದದ್ದು. ಈ ಎಲ್ಲದರಲ್ಲಿ ಸಹಗಮನ ಹೊರತಾಗಿ ವಿಧಿವಾಕ್ಯದಿಂದ ಅನುಜ್ಞಾತವಾದ ದೇಹತ್ಯಾಗದಲ್ಲಿ “ತ್ರಿರಾತ್ರ” ಆಶೌಚವೆಂಬದು ಬಹುಗ್ರಂಥ ಸಮ್ಮತವಾದದ್ದು. ಕೆಲವರು ದಶಾಹ ಆಶೌಚವಿದೆಯನ್ನುವರು. ಹೀಗೆ ಫಲಕಾಮನೆಯಿಂದ ವಿಹಿತವಾದ, ಕಾಮ್ಯವಾದ ಪ್ರಯಾಗಮರಣದಲ್ಲಿಯೂ ಎರಡು ಪಕ್ಷಗಳಿವೆಯೆಂದು ತಿಳಿಯತಕ್ಕದ್ದು. ಪತಿತಾದಿ ವಿಚಾರ ಘಟಸ್ಫೋಟದಿಂದ ಬಹಿಷ್ಕೃತನಾದವನ, ಮೇಂಟರಲ್ಲಿ ಸೇರಿಹೋದವ, ಪ್ರಾಯಶ್ಚಿತ್ತಕ್ಕೂ ಅನರ್ಹನಾಗುವಷ್ಟು ಪಾಪಮಾಡಿದವ ಹೀಗೆ ಈ ಮೂರುವಿಧಪತಿತರಿಗೆ “ಪತಿತೋದಕ” ವಿಧಿಯಿದೆ. ಕರ್ತೃವಿಗೆ ಇವರು ಮಾತಾಪಿತೃಗಳಲ್ಲದಿದ್ದರೆ ಪತಿತೋದಕವಿಧಿಯನಂತರ ಸಪಿಂಡೀಕರಣ ರಹಿತವಾದ ಅಂತ್ಯಕರ್ಮವಾಗತಕ್ಕದ್ದು. ಅವರು ತಂದೆತಾಯಿಗಳಾದಲ್ಲಿ ನಾರಾಯಣಬಲಿಪೂರ್ವಕವಾಗಿ ಸಪಿಂಡೀಕರಣಸಹಿತವಾದ ಎಲ್ಲ ಕರ್ಮವೂ ಆಗತಕ್ಕದ್ದೆಂದು ಹೇಳಿದೆ. “ಪತಿತೋದಕದಾನವಿಧಿ"ಯೆಂದರೆ ಸರ್ವರಸಂಗವನ್ನೂ ಮಾಡುವ ದಾಸಿಯನ್ನು ಕರೆದು ಅವಳಿಗೆ ಸಂಬಳವನ್ನು ಕೊಟ್ಟು ಅವಳ ಕೈಯಲ್ಲಿ ಅಶುದ್ಧವಾದ ತುಂಬಿದ ಘಟವನ್ನು ಕೊಟ್ಟು ಹೀಗೆ ಹೇಳತಕ್ಕದ್ದು. ಹೇದಾಸಿ! ಹೋಗು; ಕ್ರಯದಿಂದ ಎಳ್ಳನ್ನೂ, ಜಲದಿಂದ ತುಂಬಿದ ಈ ಘಟವನ್ನೂ ಶೀಘ್ರವಾಗಿ ತೆಗೆದುಕೊಂಡು ಬಾ. ಆಮೇಲೆ ದಕ್ಷಿಣಾಭಿಮುಖಳಾಗಿ ಕುಳಿತು ಎಡಪಾದದಿಂದ ತಿಲಸಹಿತವಾದ ಆ “ಘಟ"ವನ್ನು ಒದ್ದು ಬಿಡು. ಘಟವನ್ನೊದೆಯುವಕಾಲದಲ್ಲಿ ಅಮುಕ್ತಸಂದ್ರ ಪತಿತ ಪ್ರೇತ ಪಿಬ” ಎಂದು ಪದೇ ಪದೇ ಉಚ್ಚಾರಮಾಡು ಹೀಗೆ ದಾಸಿಯ ಕಡೆಯಿಂದ ಹೇಳಿಸುವದು. ದಾಸಿಯು ಆ ವಾಕ್ಯವನ್ನು ಕೇಳಿ ಮೂಲ್ಯವನ್ನು ತೆಗೆದುಕೊಂಡು ಹಾಗೆಯೇ ಮಾಡತಕ್ಕದ್ದು. ಹೀಗೆ ಮಾಡಿದಲ್ಲಿ ಪತಿತನಿಗೆ ತೃಪ್ತಿಯು. ಇಲ್ಲವಾದರೆ ತೃಪ್ತಿಯಿಲ್ಲ. ಈ ವಿಧಿಯನ್ನು ಪತಿತನ ಮೃತದಿನದಲ್ಲಿ ಮಾಡತಕ್ಕದ್ದು. ಹೀಗೆ ಪತಿತೋದಕವಿಧಿಯು, ಮೃತದೋಷ ನಿಮಿತ್ತಕವಾದ ROC ಧರ್ಮಸಿಂಧು ಆಶೌಚಾಪವಾದವನ್ನು ಪ್ರಸಂಗೋಚಿತವಾಗಿ ಇಲ್ಲಿ ಹೇಳಲಾಯಿತು. ವಿಧಾನದಿಂದ ಅಪವಾದ ಸನ್ಯಾಸಿಯು ಮೃತನಾದರೆ ಆಶೌಚ ತೆಗೆದುಕೊಳ್ಳತಕ್ಕದ್ದಿಲ್ಲ. ಅವನಿಗೆ ಪ್ರೇತಕರ್ಮ, ಉದಕದಾನ, ಆಶೌಚ, ಸಪಿಂಡೀಕರಣ ಮೊದಲಾದವುಗಳು ನಿಷಿದ್ಧಗಳು, ಸಪಿಂಡೀಕರಣದ ಬಗ್ಗಾಗಿ ಹನ್ನೊಂದನೇದಿನ ಪಾರ್ವಣಶ್ರಾದ್ಧವನ್ನು ಮಾತ್ರ ಮಾಡತಕ್ಕದ್ದು. ಪ್ರತಿಸಾಂವತ್ಸರಿಕಶ್ರಾದ್ಧ, ದರ್ಶಶ್ರಾದ್ಧ ಮೊದಲಾದವುಗಳು ಪಾರ್ವಣವಿಧಿಯಿಂದ ಪಿಂಡಸಹಿತವಾಗಿ ಆಗತಕ್ಕದ್ದೇ. ಈ ವಿಷಯದ ವಿಸ್ತರವು ಬೇರೆ ಗ್ರಂಥಗಳಲ್ಲಿದೆ. ಇದು ತ್ರಿದಂಡಿ, ಏಕದಂಡಿ, ಹಂಸ, ಪರಮಹಂಸ ಮೊದಲಾದ ಎಲ್ಲವರಿಗೂ ಸಮಾನವು ಹೀಗೆ ವಾನಪ್ರಸ್ಥನ ಮರಣದಲ್ಲಿಯೂ ಆಶೌಚವಿಲ್ಲ. ಜೀವಿಸಿರುವಾಗ ತಾನೇ ಶ್ರಾದ್ಧ ಮಾಡಿಕೊಂಡು ಮೃತನಾದರೆ ಸಪಿಂಡರಿಗೆ ಆಶೌಚವಿದೆಯೋ? ಇಲ್ಲವೋ? ಎಂಬುದಾಗಿ ವಿಕಲ್ಪವು. ಬ್ರಹ್ಮಚಾರಿಯ ಮರಣದಲ್ಲಿ ಆಶೌಚವಿದ್ದೇ ಇದೆ. ಯುದ್ಧದಿಂದ ಆದ ಮರಣದಲ್ಲಿಯಾದರೂ ಆಶೌಚವಿಲ್ಲವೆಂದು ಎಲ್ಲ ಗ್ರಂಥಗಳಲ್ಲಿ ಹೇಳಿದೆಯಾದರೂ ಬ್ರಾಹ್ಮಣರಲ್ಲಿ ಈ ಶಿಷ್ಟಾಚಾರವಿಲ್ಲ. ಹೀಗೆ ಐದು ರೀತಿಯಿಂದ “ಆಶೌಚಾವವಾದ"ವು ಹೇಳಲ್ಪಟ್ಟಿತು. ಇನ್ನು ಜೀವಂತನಿರುವಾಗಲೇ ಆಶೌಚವನ್ನು ತೆಗೆದುಕೊಳ್ಳುವ ಪ್ರಸಂಗವೂ ಇದೆ. ಪತಿತನ ಘಟಸ್ಫೋಟಕಾಲದಲ್ಲಿ ಎಲ್ಲ ಸಪಿಂಡರಿಗೆ “ಏಕಾಹ” ಆಶೌಚವಿದೆ. || ಇತ್ಯಾಶೌಚಂ ಸಾಪವಾದ ಯಥಾಮತಿ ನಿರೂಪಿತಂ | ಸಮರ್ಪಿತಂ ರುಕ್ಷ್ಮಿಣೀಶ ಶ್ರೀಮದ್ವಿಟ್ಠಲವಾದಯೋಃ || ಹೀಗೆ ಅವವಾದಸಹಿತವಾದ ಆಶೌಚಪ್ರಕರಣವನ್ನು ಯಥಾಮತಿ ಹೇಳಲಾಯಿತು. ರುಕ್ಷ್ಮಣೀಪತಿಯಾದ ವಿಟ್ಠಲನ ಪಾದಗಳಲ್ಲಿ ಇದು ಸಮರ್ಪಿತವಾಗಲಿ. ಇಲ್ಲಿಗೆ ಅಪವಾದ ಸಹಿತವಾದ ಆಶೌಚಪ್ರಕರಣವು ಮುಗಿಯಿತು. ಔರ್ಧ್ವದೇಹಿಕ ಪ್ರಾರಂಭದಲ್ಲಿ ಉಪಯುಕ್ತಗಳಾದ ನಾರಾಯಣಬಲಾದಿ ವಿಷಯ ಹಿಂದೆ ಹೇಳಿದ ದುರ್ಮರಣಗಳಲ್ಲಿ ಆತ್ಮಘಾತ, ಜಲಾದಿಮರಣ, ಪತಿತಾದಿಗಳ ಮರಣ ಇತ್ಯಾದಿಗಳಲ್ಲಿ ಹಿಂದ ಹೇಳಿದ ವ್ಯವಸ್ಥೆಯಿಂದ “ಅಮುಕ ಗೋತ್ರಕ್ಕೆ ಅಮುಕಶರ್ಮS ಮುಕರೋಷನಾಶಾರ್ಥ೦ ಔರ್ಧ್ವದೇಹಿಕೇ ಸಂಪ್ರದಾನ ಯೋಗ್ಯತಾಸಿಧ್ಯರ್ಥಂ ಅಮುಕಪ್ರಾಯಶ್ಚಿತ್ತ ಅಮುಕದಾನಂ ವಾ ಕರಿಷ್ಯ” ಇತ್ಯಾದಿ ಸಂಕಲ್ಪಪೂರ್ವಕವಾಗಿ ಆಯಾಮ ಪ್ರಾಯಶ್ಚಿತ್ತವನ್ನೂ ದಾನವನ್ನೂ ಮಾಡತಕ್ಕದ್ದು. ಅಶಕ್ತಿಯಲ್ಲಿ ದಾನಮಾತ್ರ ಮಾಡತಕ್ಕದ್ದು. ಆ ನಂತರ “ಅಮುಕ ಗೋತ್ರ ಅಮುಕಕರ್ಮಣ: ಅಮುಕರುರ್ಮರಣದೋಷನಾಶಾರ್ಡ್೦ ಔರ್ಧ್ವರಹಿಕ ಪ್ರದಾನಯೋಗ್ಯತಾಸಿಧ್ಯರ್ಥಂ ನಾರಾಯಣಬಲಿಂ ಕರಿಷ್ಯ ಹೀಗೆ ಸಂಕಲ್ಪಿಸಿ’ಪೂರ್ವಾರ್ಧ’ ದಲ್ಲಿ ಹೇಳಿದ (ಸಂತತಿಫಲಕಾಮನೆಯಿಂದ ಹೇಳಿದ) ನಾರಾಯಣಬಲಿಯಂತೆ ಎಲ್ಲವನ್ನೂ ಮಾಡತಕ್ಕದ್ದು. ಹೀಗೆ ಹೇಳಿದ್ದು ವರ್ಷಾಂತರದಲ್ಲಿ ಮಾಡತಕ್ಕ ವಿಷಯದ್ದು, ಸದ್ಯ ಮಾಡುವದಿದ್ದಲ್ಲಿ ಪೂರ್ವೋಕ್ತ ದ್ವಿಗುಣಪ್ರಾಯಶ್ಚಿತ್ತವನ್ನು ಸಂಕಲ್ಪಿಸಿ ಶುಕ್ಕೆಕಾದಾದಿ ಕಾಲವನ್ನಪೇಕ್ಷಿಸದೆಯೇ ನಂತರದಲ್ಲಿ ಹೇಳಿದ ಸಂಕಲ್ಪವನ್ನು ಮಾಡಿ ವಿಧಿಪೂರ್ವಕ ಸ್ಥಾಪಿತಗಳಾದ ಎರಡು ಕಲಶಗಳಲ್ಲಿ ಎರಡು ಬಂಗಾರದ

ಪರಿಚ್ಛೇದ ೩ ಉತ್ತರಾರ್ಧ ೫೦೧ ಪ್ರತಿಮೆಗಳನ್ನಿಟ್ಟು, ವಿಷ್ಣು, ವೈವಸ್ವತಯಮ ಇವರನ್ನಾವಾಹಿಸಿ ಪುರುಷಸೂಕ್ತ, ‘ಯಮಾಯಸೋಮಂ’ ಈ ಮಂತ್ರಗಳಿಂದ ಕ್ರಮವಾಗಿ ಷೋಡಶೋಪಚಾರಗಳಿಂದ ಪೂಜಿಸಿ ಅವುಗಳ ಪೂರ್ವಕ್ಕೆ ರೇಖೆಗಳನ್ನು ಬರೆದು ದಕ್ಷಿಣಾಗ್ರಗಳಾದ ದರ್ಭಗಳನ್ನು ಹಾಸಿ “ಶುಂಧಂತಾಂ ವಿಷ್ಣುರೂಪಿ ಅಮುಕತ” ಹೀಗೆ ಹೇಳಿ ಹತ್ತು ಸ್ಥಾನಗಳಲ್ಲಿ ಜಲವನ್ನು ಹನಿಸಿ ಮಧು, ಮೃತ ತಿಲ ಮಿಶ್ರವಾದ ಅನ್ನದಿಂದ ಹತ್ತು ಪಿಂಡಗಳನ್ನು ಆಮುಕಗೋತ್ರ ಅಮುಕಶರ್ಮನ್, ಪ್ರೇತ, ವಿಷ್ಣುವತ ಅಯಂತೇಪಿಂಡ: ಹೀಗೆ ದಕ್ಷಿಣಮುಖವಾಗುವಂತೆ ಮತ್ತು ಪ್ರಾಚೀನಾವೀತಿತ್ವ ಮೊದಲಾದ ಪೈತೃಕಧರ್ಮದಿಂದ ಕೊಡತಕ್ಕದ್ದು. ಗಂಧಾದಿಗಳಿಂದ ಪೂಜಿಸಿ ಉದ್ಘಾಸನಾಂತ ಮಾಡಿ ನದಿಯಲ್ಲಿ ಹಾಕತಕ್ಕದ್ದು. ಮರುದಿನ ಅಥವಾ ಸದ ಪೂರ್ವಸ್ಥಾಪಿತವಾದ ವಿಷ್ಣುವನ್ನು ಪೂಜಿಸಿ ಬ್ರಾಹ್ಮಣನಲ್ಲಿ, ಬ್ರಾಹ್ಮಣನ ಅಭಾವದಲ್ಲಿ ದರ್ಭೆಯ ಕೂರ್ಚದಲ್ಲಿ, ಪಾದಪ್ರಕ್ಷಾಳನಾದಿ ತೃಪ್ತಿಪ್ರಶ್ನದವರೆಗೆ ವಿಷ್ಣು ರೂಪ ಪ್ರೀತಾವಾಹನ ಪೂರ್ವಕವಾಗಿ ಮಾಡಿ ಬ್ರಾಹ್ಮಣ ಸಮೀಪದಲ್ಲಿ ರೇಖೆಗಳನ್ನು ಬರದು ದರ್ಭೆಗಳನ್ನು ಹಾಸಿ ಜಲವನ್ನು ಸಿಂಪಡಿಸಿ, ದರ್ಭೆಗಳಲ್ಲಿ ಉಪವೀತಿಯಾಗಿ ವಿಷ್ಣು, ಶಿವ, ಸಪರಿವಾರ ಯಮ, ಬ್ರಹ್ಮ ಹೀಗೆ ನಾಲ್ಕು ನಾಮಗಳಿಂದ ನಾಲ್ಕು ಪಿಂಡಗಳನ್ನು ಕೊಟ್ಟು ಅಪಸವ್ಯದಿಂದ “ವಿಷ್ಣುರೂಪಪ್ರೇತ ಅಮುಕಗೋತ್ರನಾಮ ಅಯಂತೇ ಪಿಂಡ:” ಹೀಗೆ ಐದನೇ ಒಂದು ಪಿಂಡವನ್ನು ಕೊಟ್ಟು ಪೂಜಿಸಿ ವಿಸರ್ಜಿಸುವದು. ಆಮೇಲೆ ಬ್ರಾಹ್ಮಣರ ಆಚಮನ ಮೊದಲಾದ ಶ್ರಾದ್ಧ ಶೇಷವನ್ನು ಮುಗಿಸಿದ ನಂತರ ಪ್ರೇತಬುದ್ಧಿಯಿಂದ ಬ್ರಾಹ್ಮಣನಿಗೆ ವಸ್ತ್ರಾಭರಣಾದಿಗಳನ್ನು ಕೊಟ್ಟು, ಬ್ರಾಹ್ಮಣನ ಕಡೆಯಿಂದ ಪ್ರೇತನಿಗೆ ತಿಲಾಂಜಲಿ ಕೂಡಿಸುವದು. ಅಮುಕ ಗೋತ್ರಾಯ ಆಮುಕ ಶರ್ಮ ವಿಷ್ಣು ರೂಈ ಪ್ರಶಾಯ ಆಯಂತಿಲಯಾಂಜಲಿ ಎಂದು ಕೂಡಿಸುವದು. ಬ್ರಾಹ್ಮಣ ಅಭಾವದಲ್ಲಿ ತಾನೇ ಕೊಡತಕ್ಕದ್ದು. ಆಮೇಲೆ ಬ್ರಾಹ್ಮಣರ ಕಡೆಯಿಂದ ಹೀಗೆ ಹೇಳಿಸಿಕೊಳ್ಳುವದು. “ಅನೇನ ನಾರಾಯಣಬಲಿಕರ್ಮಣಾ ಭಗವಾನ್ ವಿಷ್ಣು: ಇಮಮಮುಕಂ ಪ್ರೇಂ ಶುದ್ಧ ಮಪಾಪಂ ಅರ್ಹಂ ಕರೋತು” ಹೀಗೆ ಕಾಮ್ಯಪ್ರಯೋಗದಲ್ಲಿ ಮತ್ತು ಈ ಪ್ರೇತಪ್ರಯೋಗದಲ್ಲಿ ಸಂಕಲ್ಪ ಮತ್ತು ನಾಮಗೋತ್ರೋಚ್ಚಾರಗಳಲ್ಲಿ ವಿಶೇಷವಿದೆ. ಹಿಂದಿನದರಲ್ಲಿ “ಕಾವ್ಯಪಗೋತ್ರ ದೇವದತ್ತ ಪ್ರೇತ” ಇತ್ಯಾದಿ ಉಚ್ಚಾರವು. ಕಾವ್ಯನಾರಾಯಣಬಲಿಯ ಪ್ರೇತನು ಅನಿರ್ದಿಷ್ಟನಾಗಿರುವದರಿಂದ ಕಾಶ್ಯಪಗೋತ್ರ, ದೇವದತ್ತ, ಪ್ರೇತ ಹೀಗೆ ಹೇಳಬೇಕಾಗುವದು. ಈ ಪ್ರೇತನಾರಾಯಣ ಬಲಿಯಲ್ಲಿ ದುರ್ಮರಣಹೊಂದಿದವನ ನಾಮಗೋತ್ರಗಳು ಗೊತ್ತಿರುವದರಿಂದ ಆಯಾಯ ನಾಮಗೋತ್ರಗಳನ್ನೇ ಉಚ್ಚರಿಸುವದು. ಹೀಗೆ ಸಂಕಲ್ಪವಿಷಯದಲ್ಲಿಯೂ ಕಾರಣವು ಸ್ಪಷ್ಟವೇ ಇದೆ. ಹೀಗೆ ದುರ್ಮರಣದಲ್ಲಿ ನಾರಾಯಣಬಲಿ ಪ್ರಯೋಗವು. ಸರ್ಪದಿಂದ ಮೃತನಾದವನಿಗೆ ವ್ರತ ಪ್ರತಿತಿಂಗಳ ಶುಕ್ಲ ಪಂಚಮಿಯಲ್ಲಿ ಉಪವಾಸ ಅಥವಾ ನಕ್ಕವನ್ನು ಮಾಡಿ ಐದು ಹೆಡೆಯುಳ್ಳ ಹಿಟ್ಟಿನ ನಾಗವನ್ನು ಮಾಡಿ ಅನಂತ, ವಾಸುಕಿ, ಶಂಖ, ಪದ್ಮ, ಕಂಬಲ, ಕರ್ಕೋಟಕ, ಅಶ್ವತರ, ಧೃತರಾಷ್ಟ್ರ, ಶಂಖಪಾಲ, ಕಾಲಿಯ, ತಕ್ಷಕ, ಕಪಿಲ ಹೀಗೆ ಹನ್ನೆರಡು ನಾಮಗಳಿಂದ ೫೦೨ ಧರ್ಮಸಿಂಧು ಹನ್ನೆರಡು ಮಾಸಗಳಲ್ಲಿ (ಚೈತ್ರಾದಿ) ಪೂಜಿಸಿ ಪಾಯಸದಿಂದ ಬ್ರಾಹ್ಮಣ ಭೋಜನಮಾಡಿಸಿ ಸಂವತ್ಸರದ ಅಂತದಲ್ಲಿ ಬಂಗಾರದ ನಾಗ ಮತ್ತು ಪ್ರತ್ಯಕ್ಷಗೋವು ಇವುಗಳನ್ನು ದಾನಮಾಡಿ ನಾರಾಯಣಬಲಿಪೂರ್ವಕವಾಗಿ ದಾಹ, ಆಶೌಚಾದಿಗಳನ್ನು ಮಾಡತಕ್ಕದ್ದು; ಅಥವಾ “ನಮೋಅಸ್ತು ಸರ್ಪಭೋ ಈ ಮಂತ್ರದಿಂದ ಮೂರು ಆಹುತಿಗಳನ್ನು ಹೋಮಿಸತಕ್ಕದ್ದು. ಪಂಚಮಿಯಲ್ಲಿ ಸ್ವರ್ಣಪರಿಮಾಣದ ಬಂಗಾರದ ನಾಗಪ್ರತಿಮೆಯನ್ನು ಮಾಡಿ ಹಾಲು ಮತ್ತು ತುಪ್ಪದಿಂದ ತುಂಬಿದ ಪಾತ್ರೆಯಲ್ಲಿಟ್ಟು ಪೂಜಿಸಿ ಬ್ರಾಹ್ಮಣನಿಗೆ ದಾನಮಾಡುವದು. ಸರ್ಪದಿಂದ ಮೃತನಾದವನಿಗೆ ಈ ಪ್ರಾಯಶ್ಚಿತ್ತವನ್ನು ಪರಮೇಶ್ವರನು ಹೀಗೆ ಹೇಳಿರುವನು. ಇದನ್ನು ಮಾಡಿ ಮುಂದೆ ನಾರಾಯಣಬಲ್ಯಾದಿಗಳನ್ನು ಮಾಡತಕ್ಕದ್ದು. ಪಾಲಾಶ ಪ್ರತಿಕೃತಿದಾಹಾದಿ ವಿಧಿ (ಇದಕ್ಕೆ ಶಾಖಾಸಂಸ್ಕಾರವೆಂದು ಹೇಳುವರು.) ದೇಶಾಂತರದಲ್ಲಿ ಮೃತನಾದರೆ -ಪರಾಕದ್ವಯ ಅಥವಾ ಎಂಟು ಕೃಚ್ಛಗಳನ್ನು ಮಾಡಿ ಅಸ್ಥಿದಹನ ಮಾಡಬೇಕು. ಅಸ್ಥಿಗಳಿಗೆ ಚಾಂಡಾಲಾದಿಗಳ ಸ್ಪರ್ಶವಾದರೆ ಪಂಚಗವೋದಕಾದಿಗಳಿಂದ ತೊಳೆದು ದಹನಮಾಡತಕ್ಕದ್ದು. ಅಸ್ಥಿಯು ಸರ್ವಥಾ ಸಿಗದಿದ್ದಾಗ ಅವನಿಗೆ “ಪರ್ಣಶರ” (ಶಾಖಾಸಂಸ್ಕಾರ) ದಾಹ ಮಾಡತಕ್ಕದ್ದು. ಮುನ್ನೂರಾಅರವತ್ತು ದರ್ಭೆಗಳಿಂದ ದರ್ಭಮಯ ಪ್ರೇತವನ್ನು ಮಾಡತಕ್ಕದ್ದು; ಅಥವಾ ಅಷ್ಟೇ ಸಂಖ್ಯೆಯಿಂದ ಮುತ್ತುಗಲ ಸಮಿಧಗಳಿಂದ ಪ್ರೇತಶರೀರವನ್ನು ಮಾಡಬಹುದು. ನೆಲದ ಮೇಲೆ ಕೃಷ್ಣಾಜಿನವನ್ನು ಹಾಸಿ ದಕ್ಷಿಣಕ್ಕೆ ನೀಳವಾಗುವಂತ “ಶರ” (ತೃಣವಿಶೇಷ) ವನ್ನಿಟ್ಟು ಅದರಮೇಲೆ ಮುತ್ತುಗಲ ದೇಟುಗಳನ್ನು ಇಡುವದು. ಶಿರಸ್ಸಿನ ಸ್ಥಾನದಲ್ಲಿ ನಾಲ್ವತ್ತು, ಕುತ್ತಿಗೆಯಲ್ಲಿ ಹತ್ತು, ಪ್ರತಿಬಾಹುಗಳಿಗೆ ಐವತ್ತು-ಐವತ್ತು, ಹಸ್ತದ ಬೆರಳುಗಳಲ್ಲಿ ಹತ್ತು, ಎದೆಯಲ್ಲಿ ಇಪ್ಪತ್ತು, ಹೊಟ್ಟೆಯಲ್ಲಿ ಮೂವತ್ತು, ಶಿಶ್ನದಲ್ಲಿ ನಾಲ್ಕು, ಅಂಡಗಳಲ್ಲಿ ಮೂರು-ಮೂರು, ತೊಡೆಗಳಿಗೆ ಪ್ರತ್ಯೇಕವಾಗಿ ಐವತ್ತು-ಐವತ್ತು, ಮೊಣಕಾಲಿನಿಂದ ಪಾದತಲದ ವರೆಗೆ ಪ್ರತ್ಯೇಕವಾಗಿ ಹದಿನೈದು-ಹದಿನೈದು, ಪಾದದ ಬೆರಳುಗಳಿಗೆ ಹತ್ತು ಹೀಗೆ ಮುನ್ನೂರಾ ಅರವತ್ತು ದರ್ಭೆ ಅಥವಾ ಮುತ್ತುಗಲ ದೇಟುಗಳಿಂದ ಶರೀರವನ್ನು ಮಾಡಿ ಉಣ್ಣೆಯ ವಸ್ತ್ರದಿಂದ ಕಟ್ಟಿ ಹಿಟ್ಟನ್ನು ನೀರಿನಲ್ಲಿ ಕಲಸಿ ಲೇಪಿಸುವದು. ಶಕ್ತನಾದರೆ ನಾಳಿಕೇರಾದಿಗಳನ್ನೂ ಇಡಬಹುದು. ಹೇಗಂದರ-ಶಿರಸ್ಸಿನಲ್ಲಿ ತೆಂಗಿನಕಾಯಿ ಅಥವಾ ಸೋರೆಕಾಯಿಯನ್ನಿಡಬಹುದು. ಹಣೆಗೆ ಬಾಳೆ ಎಲೆ, ಹಲ್ಲುಗಳ ಸಲುವಾಗಿ ದಾಳಿಂಬಬೀಜಗಳು, ಕಿವಿಯಲ್ಲಿ ಬಳ ಅಥವಾ ಉರಗದ ಎಲೆ, ಕಣ್ಣುಗಳಲ್ಲಿ ಕವಡೆಗಳು, ಮೂಗಿನಲ್ಲಿ ಎಳ್ಳು ಹೂವು ನಾಭಿಯಲ್ಲಿ ಕಮಲ, ಸ್ತನಗಳಲ್ಲಿ ನಿಂಬೆಹಣ್ಣುಗಳು, ವಾತದ ಬಗ್ಗೆ ಮನಃಶಿಲಾ, ಪಿತ್ತದ ಸಲುವಾಗಿ ಅರದಾಳ, ಕಫದಲ್ಲಿ ಸಮುದ್ರದನೊರೆ, ರಕ್ತಕ್ಕಾಗಿ ಮಧು, ಮಲದ ಬಗ್ಗೆ ಗೋಮಯ, ಮೂತ್ರದಲ್ಲಿ ಗೋಮೂತ್ರ, ರೇತಸ್ಸಿಗೆ ಪಾದರಸ, ಅಂದದಲ್ಲಿ ಎರಡು ಬದನೆಕಾಯಿ, ಶಿಶ್ನಕ್ಕೆ ಕೆಂಪುಮೂಲಂಗಿ, ಕೇಶಗಳಲ್ಲಿ ಕಾಡುಹಂದಿಯ ಜಡೆ ಅಥವಾ ಆಲದ ಬೀಣು, ರೋಮಗಳಿಗಾಗಿ ಉಣ್ಣೆಯ ಕೂದಲು, ಮಾಂಸದ ಬಗ್ಗೆ ಉದ್ದಿನ ಹಿಟ್ಟಿನ ಲೇಪ ಹೀಗೆ ವಸ್ತುಗಳನ್ನಿಡಬಹುದು. ಪಂಚಗವ್ಯ, ಪಂಚಾಮೃತಗಳಿಂದಲೂ ಎಲ್ಲ ಕಡೆಗೆ ಸಿಂಪಡಿಸಿ “ಪುನರ್ನೂಲಿಸಂ ಅಸುನೀತೇ” ಈ ಮಂತ್ರಗಳಿಂದ ಪ್ರಾಣದ ಪ್ರವೇಶವನ್ನು ಭಾವಿಸುವದು; ಪರಿಚ್ಛೇದ - ೩ ಉತ್ತರಾರ್ಧ ೫೦೩ ಅಥವಾ “ಯಯಮಂ” ಈ ಸೂಕ್ತದಿಂದ “ಶುಕ್ರಮಸಿ’ ಎಂದು ಪಾದರಸವನ್ನು ಚೆಲ್ಲಿ “ಅಕ್ಷಿಭ್ಯಾಂ” ಮಂತ್ರದಿಂದ ಶರೀರವನ್ನು ಸ್ಪರ್ಶಿಸುವದು; ಮತ್ತು ಸ್ನಾನಮಾಡಿಸಿ ಗಂಧವನ್ನು ಲೇಪಿಸಿ ವಸ್ತ್ರ, ಉಪವೀತಗಳನ್ನು ತೊಡಿಸಿ “ಅಯಂಸದೇವದತ್ತ ಹೀಗೆ ಅಭಿಮಂತ್ರಣಮಾಡಿ “ಇದು ಇವನ ಉಪಾಸನೆಯು” ಎಂದು ಧ್ಯಾನಿಸಿ ವಿಧಿವತ್ತಾಗಿ ದಾಹಾದಿಗಳನ್ನು ಮಾಡತಕ್ಕದ್ದು. ಇಲ್ಲಿ ಆಹಿತಾಗ್ನಿಯಾದವನ ಅಸ್ತಿದಾಹ ಅಥವಾ ಶಾಖಾದಹನದಲ್ಲಿ ದಶಾಹ ಆಶೌಚವು, ಅನಾಹಿತಾಗ್ನಿಯ ಆಶೌಚವು “ತ್ರಿದಿನ’ವೆಂದು ಮೊದಲೇ ಹೇಳಿದೆ. ಹನ್ನೆರಡು ವರ್ಷಾದಿಗಳ ನಿರೀಕ್ಷಣೆಯ ನಂತರ ಶರದಾಹಾದಿ ಸಂಸ್ಕಾರಗಳನ್ನು ಮಾಡಿದಲ್ಲಿ ಆಗ ಮೂವತ್ತು ಕೃಚ್ಛ ಅಥವಾ ಮೂರು ಚಾಂದ್ರಾಯಣಗಳನ್ನು ಮಾಡಿ ದಹನಾದಿಗಳನ್ನು ಮಾಡತಕ್ಕದ್ದು. ಅತೀತಪ್ರೇತಸಂಸ್ಕಾರಕ್ಕೆ ಕಾಲ ಪ್ರತ್ಯಕ್ಷ ಶವಸಂಸ್ಕಾರದಲ್ಲಿ ದಿನಶೋಧಮಾಡತಕ್ಕದ್ದಿಲ್ಲ. ಆಶೌಚದಿನಗಳೊಳಗೆ ಸಂಸ್ಕಾರಮಾಡುವದಿದ್ದಲ್ಲಿ ಸಾಧ್ಯವಿದ್ದರೆ ದಿನಶೋಧವನ್ನು ಮಾಡತಕ್ಕದ್ದು, ಹತ್ತು ದಿನಗಳ ನಂತರ ಮಾಡುವದಕ್ಕೆ ದಿನಶೋಧ ಮಾಡಲೇಬೇಕು. ಸಂವತ್ಸರ ಕಳೆದ ನಂತರ ಮಾಡತಕ್ಕ ಪ್ರೇತಕಾರ್ಯಕ್ಕೆ ಉತ್ತರಾಯಣವು ಶ್ರೇಷ್ಠವು. ಅದರಲ್ಲಾದರೂ ಕೃಷ್ಣಪಕ್ಷವು ಉತ್ತಮ. ನಂದಾತಿಥಿ, ತ್ರಯೋದಶೀ, ಚತುರ್ದಶೀ, ದಿನಕ್ಷಯ ಇವು ತ್ಯಾಜ್ಯಗಳು. ಶುಕ್ರ, ಶನಿವಾರಗಳು ವರ್ಜಗಳು. ಮಂಗಳವಾರವಾದರೂ ವರ್ಜವೆಂದು ಕೆಲವರು ಹೇಳುವರು. ನಕ್ಷತ್ರಗಳಲ್ಲಿ ಭರಣಿ, ಕೃತ್ತಿಕಾ, ಆದ್ರ್ರಾ, ಆಶ್ಲೇಷಾ, ಮಘಾ, ಜೇಷ್ಯಾ, ಮೂಲ, ಧನಿಷ್ಠೆಯ ಉತ್ತರಾರ್ಧ ಹಾಗೂ ಶತಭಿಷ, ಪೂರ್ವಾಭದ್ರಾ, ಉತ್ರಾಭದ್ರಾ, ರೇವತಿ ಇವು ವರ್ಜಗಳು, ತ್ರಿಪುಷ್ಕರಯೋಗವೂ ವರ್ಜವು ಇವೆಲ್ಲ ಅತಿ ದುಷ್ಟಗಳಾದ ಕಾರಣ ಸರ್ವಥಾ ವರ್ಜಗಳು. ಕೃತಿಕಾ, ಪುನರ್ವಸು, ಉತ್ತರಾ, ವಿಶಾಖಾ, ಉತ್ರಾಷಾಢಾ, ಪೂರ್ವಾಭದ್ರಾ ಇವು ತ್ರಿಪಾದನಕ್ಷತ್ರಗಳು. ಈ ನಕ್ಷತ್ರಗಳು ಹಾಗೂ ದ್ವಿತೀಯಾ, ಸಪ್ತಮೀ, ದ್ವಾದಶೀ ಈ ತಿಥಿಗಳು; ಕುಜ, ಶನಿ, ರವಿವಾರಗಳು; ಹೀಗೆ ಹೇಳಿದ ನಕ್ಷತ್ರ, ತಿಥಿ, ವಾರಗಳು ಕೂಡಿದಲ್ಲಿ ಅದಕ್ಕೆ “ತ್ರಿಪುಷ್ಕರ"ವೆನ್ನುವರು. ಕೆಲವರು ರವಿವಾರದ ಸ್ಥಾನದಲ್ಲಿ ಗುರುವಾರವೆನ್ನುವರು. ಇದೇ ಹೇಳಿದ ತಿಥಿವಾರಗಳಲ್ಲಿ ಮೃಗಶಿರಾ, ಚಿತ್ರಾ, ಧನಿಷ್ಠಾ ಈ ನಕ್ಷತ್ರಗಳ ಯೋಗವಾದರೆ ಅದಕ್ಕೆ “ದ್ವಿಪುಷ್ಕರಯೋಗವನ್ನುವರು. ತ್ರಿಪುಷ್ಕರ ಯೋಗದಲ್ಲಿ ಬಡ್ಡಿ, ಲಾಭ, ನಷ್ಟ, ಅಪಹರಣ ಮತ್ತು ಮರಣಗಳಾದರೆ ತ್ರಿಗುಣಫಲವಾಗುವದು. ದ್ವಿಪುಷ್ಕರಯೋಗದಲ್ಲಾದರೆ ದ್ವಿಗುಣವು, ಆದುದರಿಂದ ಪ್ರೇತಕಾರ್ಯದಲ್ಲಿ ಅವೆರಡೂ ವರ್ಜಗಳು. ಹೇಳಿದ ತಿಥಿ-ವಾರ, ತಿಥಿ-ನಕ್ಷತ್ರ ಹೀಗೆ ಬರೇ ಎರಡರ ಯೋಗದಿಂದ ದ್ವಿಪುಷ್ಕರವಾಗುವದೆಂದು ಕೆಲ ಗ್ರಂಥಕಾರರ ಮತವು ಗುರು, ಶುಕ್ರಾಸ್ತ್ರ, ಪುಷ್ಕಮಾಸ, ಮಲಮಾಸ, ವೈಧೃತಿ, ವ್ಯತೀಪಾತ ಪರಿಘ, ಯೋಗಗಳು, ವಿಷ್ಟಿಕರಣ, ಚತುರ್ಥ, ಅಷ್ಟಮ, ದ್ವಾದಶಗಳಲ್ಲಿ ಚಂದ್ರನಿರುವಿಕೆ ಇವೆಲ್ಲ ವರ್ಜಗಳೇ. ರೋಹಿಣಿ, ಮೃಗಶಿರ, ಪುನರ್ವಸು, ಹುಬ್ಬಾ ಉತ್ರಾ, ಚಿತ್ರಾ, ವಿಶಾಖಾ, ಅನುರಾಧಾ, ಪೂರ್ವಾಷಾಢಾ, ಉತ್ರಾಷಾಢಾ, ಧನಿಷ್ಠಾ ಇವು ಅಲ್ಪದುಷ್ಪಗಳು, ಸಾಧ್ಯವಾದರೆ ಬಿಡುವದು ಲೇಸು. ಮಂಗಳವಾರವೂ ತ್ಯಾಜ್ಯವೆಂದು ಕೆಲವರ ಮತವು ಕರ್ತೃವಿನ ಮೂರೂ ಜನ್ಮನಕ್ಷತ್ರ ೫೦೪ ಧರ್ಮಸಿಂಧು ಮತ್ತು ಪ್ರತ್ಯರಿತಾರಾ ಇವುಗಳಲ್ಲಿ ಪರ್ಣಶರಾದಿ ದಹನವು ಇಷ್ಟವಾದದ್ದಲ್ಲ. ರವಿ, ಗುರು, ಚಂದ್ರವಾರಗಳು, ಅಶ್ವಿನೀ, ಪುಷ್ಯ, ಹಸ್ತ, ಸ್ವಾತಿ, ಶ್ರವಣ ಈ ನಕ್ಷತ್ರಗಳೂ ಪ್ರಶಸ್ತ್ರಗಳು, ಮಧ್ಯಮ. ತ್ಯಾಜ್ಯವಾದವುಗಳನ್ನು ಮೊದಲೇ ಹೇಳಿದೆ. ಏಕೋದ್ದಿಷ್ಟ ಶ್ರಾದ್ಧಕ್ಕೆ-ನಂದಾತಿಥಿ, ಶುಕ್ರವಾರ, ಚತುರ್ದಶೀ, ಮೂರು ಜನ್ಮತಾರಗಳು, ಪ್ರತ್ಯುರತಾರೆ ಇವು ನಿಂದ್ಯಗಳು, ಸಾಕ್ಷಾತ್ ಏಕಾದಶ ದಿನದಲ್ಲಿ ಮಾಡುವ ಏಕೋದ್ದಿಷ್ಟಶ್ರಾದ್ದಕ್ಕೆ ಯಾವ ದೋಷವೂ ಇಲ್ಲ. ಇದಕ್ಕೆ ಅಪವಾದ ಯುಗಾದಿ, ಮನ್ವಾದಿ, ಸಂಕ್ರಾಂತಿ, ಅಮಾವಾಸೆ ಇವುಗಳಲ್ಲಿ ಮಾಡುವ ಪ್ರೇತಕರ್ಮ ಅಥವಾ ಪುನಃ ಸಂಸ್ಕಾರಕ್ಕೆ ನಕ್ಷತ್ರಾದಿ ಶೋಧಮಾಡುವದವಶ್ಯವಿಲ್ಲ. ಅತಿಕ್ರಾಂತ ಪಿತೃಕಾರ್ಯವನ್ನು ಗುರು, ಶುಕ್ರಾಸ್ತ್ರ, ಪುಷ್ಯಮಾಸ, ಮಲಮಾಸ ಇವುಗಳಲ್ಲಿ ಮಾಡತಕ್ಕದ್ದಲ್ಲ. ಆದರೆ ಗಯಾ, ಗೋದಾವರಿಗಳಲ್ಲಿ ಈ ನಿಷೇಧವಿಲ್ಲ. ಹೀಗೆ ಪುನಃ ಸಂಸ್ಕಾರ ಕಾಲವು. ಶಾಖಾಸಂಸ್ಕಾರವಾದ ಮೇಲೆ ದೇಹದೊರಕಿದಾಗ ಸಾಗ್ನಿಕನಾದವನಿಗೆ ಶಾಖಾಸಂಸ್ಕಾರವಾದ ಮೇಲೆ ದೇಹವು ದೊರೆತರೆ ಶಾಖಾಸಂಸ್ಕಾರದಲ್ಲಿಯ ದಹನದ ಅರ್ಧಸುಟ್ಟಿರುವ ಕಟ್ಟಿಗೆಗಳಿಂದ ಅದನ್ನು ದಹನಮಾಡತಕ್ಕದ್ದು. ಅಂಥ ಕಟ್ಟಿಗೆಯು ದೊರಕದಿದ್ದರೆ ಲೌಕಿಕಾಗ್ನಿಯಿಂದ ದಹನಮಾಡಿ ಅವನ ಅಸ್ತಿಯನ್ನು ಮಹಾಜಲದಲ್ಲಿ ಹಾಕುವರು. ಹೀಗೆ ಬೇರೆ ನಿರಗ್ನಿಕರಿಗಾದರೂ ಪರ್ಣಶರದಾಹವಾದ ಮೇಲೆ ಶರೀರವು ದೊರಕಿದರೆ ಅಥವಾ ಅಸ್ಥಿಯು ಸಿಕ್ಕಿದರೂ ಇದರಂತೆಯೇ ಎಂದು ತಿಳಿಯತಕ್ಕದ್ದು. ಜೀವಿಸಿರುತ್ತಿದ್ದರೂ ಔರ್ಧದೇಹಿಕವಾದರೆ ಸಾಯದಿರುವವನನ್ನು ಸತ್ತನೆಂದು ಕೇಳಿ ಔರ್ಧ್ವದೇಹಿಕ ಕ್ರಿಯೆ ನಡೆದುಹೋದರೆ ಕ್ರಿಯೆಯನ್ನು ಹೊಂದಿದವನು ಸ್ಮೃತ್ಯುಕ್ತ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ಪುನಃ ಅಗಾಧಾನಮಾಡತಕ್ಕದ್ದು. ಈ ವಿಷಯದ “ಪುನಃಸಂಸ್ಕಾರಾದಿ ರೀತಿಯನ್ನು ಪೂರ್ವಾರ್ಧದಲ್ಲಿ ಹೇಳಿದ, ಆಧಾನಾಂತದಲ್ಲಿ “ಆಯುಷ್ಮತೀಷ್ಟಿ” ಯಾಗತಕ್ಕದ್ದು. ಅನಾಹಿತಾಗ್ನಿಗಾದರೆ “ಚರು"ವು ಕರ್ತವ್ಯವು. ಪತಿಯು ಜೀವಿಸಿರುವಾಗಲೇ ಮರಣವಾರ್ತೆಯನ್ನು ಕೇಳಿ ಸ್ತ್ರೀಯು ಸಹಗಮನಮಾಡಿದಲ್ಲಿ ಆ ಸಹಗಮನವನ್ನು ವಿಧಿಯುಕ್ತವೆಂದು ಹೇಳಲಾಗುವದಿಲ್ಲ. ಪತಿಯ ಮರಣವುಂಟಾದಾಗಲೇ ಸಹಗಮನಕ್ಕೆ ನಿಮಿತ್ತವೇ ಹೊರತು ಬರೇ ಮರಣವಾರ್ತೆಯು ನಿಮಿತ್ತವಲ್ಲ. ಆದುದರಿಂದ ಆ ಪತ್ನಿಗೆ ಆತ್ಮಘಾತಾದಿ ದೋಷಪ್ರಾಯಶ್ಚಿತ್ತಾದಿಗಳನ್ನು ಪುತ್ರಾದಿಗಳು ಮಾಡಿ ನಾರಾಯಣಬಲಿಪೂರ್ವಕವಾಗಿ ಔರ್ಧ್ವದೇಹಿಕವನ್ನು ಮಾಡತಕ್ಕದ್ದು. ಪತಿಗಾದರೋ ದಾಹಾದಿ ಔರ್ಧ್ವದೇಹಿಕವನ್ನು ಮಾಡಿದ ನಿಮಿತ್ತವಾಗಿ ಉಕ್ತ ಪುನಃಸಂಸ್ಕಾರಾದಿಗಳನ್ನು ಮಾಡತಕ್ಕದ್ದು. ಘಟಸ್ಫೋಟ ವಿಧಿ ಕೆಲವು ಕಡೆಯಲ್ಲಿ ಜೀವಿಸಿರುವಾಗಲೂ ಅಂತ್ಯಕರ್ಮ ಮಾಡುವದಿದೆ. ಹೇಗೆಂದರೆ- ಪ್ರಾಯಶ್ಚಿತ್ತವನ್ನಿನ್ನಿಸಿದ ಪತಿತನಿಗೆ ಘಟಸ್ಫೋಟವನ್ನು ಹೇಳಿದೆ. ಮಹಾಪಾತ ಅಥವಾ ಉಪಪಾತಕ ಮಾಡಿ ಪತಿತನಾದವನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳದಿದ್ದರೆ ಆಗ ಗುರು, ಬಾಂಧವರು ಮತ್ತು ರಾಜ ಇವರ ಸಮಕ್ಷಮ ಅವರು ಕರೆತಂದು ಪಾಪವನ್ನು ಪ್ರಕಟವಾಗುವಂತೆ ವಿವರಿಸಿ ಪರಿಚ್ಛೇದ ೩ ಉತ್ತರಾರ್ಧ ಪುನಃ ಪುನಃ “ಪ್ರಾಯಶ್ಚಿತ್ತವನ್ನು ಮಾಡಿಕೋ, ಸ್ವಾಚಾರವನ್ನು ಪಡೆದುಕೊ” ಎಂದು ಉಪದೇಶಮಾಡಬೇಕು. ಆತನು ಇನ್ನೂ ಕಿವಿಗೊಡದೆ ತಿರಸ್ಕರಿಸಿದರೆ ಆಗ ರಿಕ್ತಾದಿ ನಿಂತಿಥಿಗಳಲ್ಲಿ, ಸಾಯಾಹ್ನದಲ್ಲಿ, ಸಪಿಂಡರೂ, ಬಾಂಧವರೂ ಒಂದಾಗಿ ದಾಸಿಯ ಹಸ್ತದಿಂದ ತರಿಸಿದ ಹೊಲಸು ಜಲಾದಿಗಳಿಂದ ತುಂಬಿದ ಕೊಡವನ್ನು ಎಲ್ಲ ದಿಕ್ಕಿನಿಂದಲೂ ದಾಸ್ಯಾದಿಗಳ ಕಡೆಯಿಂದ ಸ್ಪರ್ಶಮಾಡಿಸುತ್ತ, ದಾಸಿಯ ಅಥವಾ ದಾಸನ ಎಡಪಾದದಿಂದ ಕತ್ತರಿಸಿದ ದರ್ಭಗಳನ್ನು ದಕ್ಷಿಣಾಗ್ರಮಾಡಿ ಅದರಲ್ಲಿ ಬೋರಲಾಗಿ ಬೀಳುವಂತೆ ಮಾಡತಕ್ಕದ್ದು. ದಾಸಿಯ ಸಹಿತವಾಗಿ “ಅಮುಂ ಅನುದಕಂ ಕರೋಮಿ” ಹೀಗೆ ಹೆಸರನ್ನುಚ್ಚರಿಸಿ ಹೇಳುತ್ತ ಪ್ರಾಚೀನಾವೀತಿಗಳಾಗಿಯೂ ತಲೆಗೂದಲನ್ನು ಬಿಡಿಸಿಕೊಂಡವರಾಗಿಯೂ ಆಗತಕ್ಕದ್ದು. ನಂತರ ಅಧಿಕಾರಿಯಾದ ಕರ್ತನು ದಹನವನ್ನುಳಿದು ಜೀವಂತನನ್ನೇ ಉದ್ದೇಶಿಸಿ ಪಿಂಡ, ಜಲಾಂಜಲಿ ಮೊದಲಾದ ಪ್ರೇತಕಾರ್ಯಗಳನ್ನು ಏಕಾದಶಾಹಾಂತವಾಗಿ ಮಾಡತಕ್ಕದ್ದು. ಎಲ್ಲ ಕಾರ್ಯವನ್ನೂ ಬರೇ ನಾಮದಿಂದ ಮಾಡತಕ್ಕದ್ದು. “ಮಿತಾಕ್ಷರಿ"ಯಲ್ಲಿ ಪ್ರೇತಕಾರ್ಯದ ನಂತರ ಘಟಸ್ಫೋಟವನ್ನು ಹೇಳಿದೆ. ಸರ್ವರಿಗೂ ಒಂದು ದಿನ ಆಶೌಚವು. ಘಟಸ್ಫೋಟಹೊಂದಿದವನೊಡನೆ ಸಂಭಾಷಣ, ಸ್ಪರ್ಶನ ಆದಿಗಳನ್ನು ಮಾಡಬಾರದು. ಮಾಡಿದರೆ ಅವರೂ ಪತಿತ ಸಮಾನರಾಗುವರು. ಘಟಸ್ಫೋಟದ ಪ್ರಯೋಜನವನ್ನು ಪೂರ್ವಾರ್ಧದ ಅಂತದಲ್ಲಿ ಹೇಳಿದೆ. ಘಟಸ್ಫೋಟ ನಿಶ್ಚಿತವಾದ ಮೇಲೆ ಘಟಸ್ಫೋಟದವರೆಗೆ ಪತಿತನ ಜ್ಞಾತಿಬಾಂಧವರಿಗೆ ಧರ್ಮಕಾರ್ಯಗಳಲ್ಲಿ ಅಧಿಕಾರವಿಲ್ಲವೆಂದು ಒಬ್ಬ ಗ್ರಂಥಕಾರನ ಮತವು. ಘಟಸ್ಫೋಟ ಹೊಂದಿದವನ ಪುನಃ ಗ್ರಾಹ್ಯ ವಿಧಾನ ಘಟಸ್ಫೋಟಹೊಂದಿದವನಿಗೆ ಪಶ್ಚಾತ್ತಾಪವಾಗಿದ್ದರೆ ಅದರ ಪ್ರಾಯಶ್ಚಿತ್ತಾಂತ್ಯದಲ್ಲಿ ಪುನಃ ಸೇರಿಸಿಕೊಳ್ಳುವ ವಿಧಾನ ಹೇಗೆಂದರೆ ಮೊದಲು ಶುದ್ಧಿಯ ಪರೀಕ್ಷೆಯನ್ನು ಮಾಡತಕ್ಕದ್ದು. ಪ್ರಾಯಶ್ಚಿತ್ತ ಮಾಡಿಕೊಂಡು ಜ್ಞಾತಿಗಳ ಸಮಕ್ಷಮ ಗೋವುಗಳಿಗೆ ಹುಲ್ಲಿನ ಪಿಂಡಿಗಳನ್ನು ಕೊಡತಕ್ಕದ್ದು. ಗೋವುಗಳು ಆ ಹುಲ್ಲನ್ನು ತಿಂದರೆ ಶುದ್ದಿಯು, ತಿನ್ನದಿದ್ದರೆ ಪುನಃ ಪ್ರಾಯಶ್ಚಿತ್ತ ಮಾಡತಕ್ಕದ್ದು. ಹೀಗೆ ಶುದ್ಧಿಯು ನಿಶ್ಚಿತವಾದ ನಂತರ ಹೊಸದಾದ ಬಂಗಾರ ಅಥವಾ ಮಣ್ಣಿನ ಘಟವನ್ನು ತರಿಸಿ ಶುದ್ಧವಾದ ಜಲವನ್ನು ತುಂಬಿ ಸಪಿಂಡರು ಆ ಘಟವನ್ನು ಸ್ಪರ್ಶಿಸಿ ಅಭಿಮಂತ್ರಿತ ಜಲಗಳಿಂದ ಪವಮಾನಮಂತ್ರ, ಆಪೋಹಿಷ್ಕಾ, ತರತ್ನಮಂದೀ ಇತ್ಯಾದಿ ಮಂತ್ರಗಳಿಂದ ಆ ಪತಿತನಿಗೆ ಸ್ನಾನ ಮಾಡಿಸಿ, ಅವನಿಂದ ಕೂಡಿ ಎಲ್ಲರೂ ಸ್ನಾನ ಮಾಡಿ ಆ ಜಲದ ಘಟವನ್ನು ಆತನಿಗೆ ಕೊಡತಕ್ಕದ್ದು. ಆತನಾದರೂ “ಶಾಂತಾ: ಶಾಂತಾಪೃಥಿವೀ ಶಾಂತಂವಿಶ್ವಂ ಅಂತರಿಕ್ಷಂ ಯೋರೋಚನಸ್ತ್ರಮಿಹ ಗ್ರಹಾಮಿ” ಎಂಬ ಯಜುರ್ಮಂತ್ರಗಳಿಂದ ಆ ಘಟವನ್ನು ಸ್ವೀಕರಿಸುವದು. ಆಮೇಲೆ ಅವನಿಂದ ಸಹಿತರಾಗಿ ಎಲ್ಲರೂ ಆ ಘಟದ ಜಲವನ್ನು ಕುಡಿಯತಕ್ಕದ್ದು. ನಂತರ ಆತನು ಕೂಶ್ಚಾಂಡ ಮಂತ್ರದಿಂದ ಆಜ್ಯಹೋಮಮಾಡಿ ಸುವರ್ಣವನ್ನೂ, ಗೋವನ್ನೂ ದಾನಮಾಡತಕ್ಕದ್ದು. ಅನಂತರ ಅವನಿಗೆ ಜಾತಕರ್ಮಾದಿ ಉಪನಯನದ ವರೆಗೆ ಅಥವಾ ವಿವಾಹಾಂತವಾಗಿ ಸಂಸ್ಕಾರಗಳನ್ನು ಮಾಡತಕ್ಕದ್ದು. ಹೀಗೆ ಮಾಡಿದ ಶುದ್ಧಿಯಿಂದ ಆತನು ಸ್ಪರ್ಶ, ಭೋಜನಾದಿ ವ್ಯವಹಾರಕ್ಕೆ ಅರ್ಹನಾಗುವನು. ಹೀಗೆ ಉಪಪಾತಕ ಇಲ್ಲವೆ ಮಹಾಪಾತಕದಲ್ಲಿ ಘಟಸ್ಫೋಟ ಹೊಂದಿದವನಿಗೆ ಶುದ್ದಿಯಾಗುವದೆಂದು ತಿಳಿಯತಕ್ಕದ್ದು. ಹೀಗೆ ಸಂಕ್ಷೇಪವಾಗಿ ಧರ್ಮಸಿಂಧು ಘಟಸ್ಫೋಟವಾದವನ ಶುದ್ಧಿ ವಿಷಯವು ಮುಗಿಯಿತು. ಅಂತ್ಯೇಷ್ಟಿ ನಿರ್ಣಯ ವಂದೇ ಶ್ರೀಮದನಂತಾಭಿಧ ಗುರುಚರಣೆ ಸತಾಂಮತೌಚರಣೆ | ಜನನೀಮಧಾನ್ನಪೂರ್ಣಾಂ ಸಂಪೂರ್ಣಾ೦ ಸದ್ದುರ್ವಂದ್ಯಾಂ ಶ್ರೀ ವಿಟ್ಠಲಂ ನಮಸ್ಕೃತ್ಯ ವಿಘ್ನ ಕಕ್ಷ ಹುತಾಶನಂ| ಅಂತ್ಯನಿರ್ಣಯ್ರಂ ವ ಸರ್ವಶಾಖೋಪಯೋಗಿನಂ।। ಸತ್ಪುರುಷರಿಗೆ ಸಮ್ಮತವಾದ ಆಚರಣೆಯುಳ್ಳ ಅನಂತನೆಂಬ ಅಭಿಧಾನವುಳ್ಳ ತಂದೆಯ ಚರಣಗಳನ್ನೂ ಸದ್ಗುಣ ಪರಿಪೂರ್ಣಳೂ, ಪೂಜ್ಯಳೂ ಆದ ಅನ್ನಪೂರ್ಣಾ ಎಂಬ ಹೆಸರಿನ ತಾಯಿಯನ್ನೂ ನಮಸ್ಕರಿಸುವನು. ವಿಘ್ನವೆಂಬ ಹುಲ್ಲಿನ ಬಣವಿಗೆ ಅಗ್ನಿಸಮಾನನಾದ ಶ್ರೀ ವಿಟ್ಠಲೇಶನನ್ನು ನಮಸ್ಕರಿಸಿ ಎಲ್ಲ ಶಾಖೆಯವರಿಗೂ ಉಪಯುಕ್ತವಾದ ಅಂತ್ಯೇಷ್ಟಿ ನಿರ್ಣಯವನ್ನು ಹೇಳುವೆನು. ಅಂತ್ಯಕ್ರಿಯೆಗೆ ಅಧಿಕಾರಿಗಳನ್ನು ಹಿಂದೆ ಶ್ರಾದ್ದ ಪ್ರಕರಣದಲ್ಲಿ ಹೇಳಲಾಗಿದೆ. ಯಾರೂ ಇಲ್ಲದಾಗ “ಧರ್ಮಪುತ್ರನು ಅಧಿಕಾರಿಯು. ಪ್ರಾಯಶ್ಚಿತ್ತ ದಶ ದಾನಾದಿಗಳು ಪುತ್ರಾದಿ ಅಧಿಕಾರಿಗಳು ತಂದೆ ಮೊದಲಾದವರಿಗೆ ಮರಣವು ಸನ್ನಿಹಿತವಾದದ್ದನ್ನು ತಿಳಿದುಕೊಂಡು ಸಾರ್ಧ, ಅಬ್ದ ಕೃಚ್ಛಾದಿ ಪ್ರಾಯಶ್ಚಿತ್ತ ಮತ್ತು ಮೋಕ್ಷಧೇನು ಮೊದಲಾದ ದಾನಗಳನ್ನು ಆತನ ಕಡೆಯಿಂದ ಮಾಡಿಸತಕ್ಕದ್ದು; ಅಥವಾ ಅವನನ್ನುದ್ದೇಶಿಸಿ ತಾನು ಮಾಡಬೇಕು. ಆ ವಿಷಯದ ಪ್ರಾಯಶ್ಚಿತ್ತ ಪ್ರಯೋಗವನ್ನು ಪ್ರಾಯಶ್ಚಿತ್ತ ಪ್ರಕರಣದಲ್ಲಿ ನೋಡತಕ್ಕದ್ದು. ಶಕ್ತಿಯಿದ್ದರೆ ದಶ ದಾನಾದಿಗಳನ್ನು ಮಾಡಬೇಕು. ಅದರಲ್ಲಿ “ಗವಾಮಂಗೇಷುತಿಂತಿ” ಇದು ಗೋದಾನ ಮಂತ್ರವು. “ಸರ್ವಸಸ್ಯಾಶ್ರಯಾಭೂಮಿ ವರಾಹೇಣ ಸಮುದ್ರತಾ ಅನಂತಸಸ್ಯಫಲದಾ ಅಂತಃಶಾಂತಿಂ ಪ್ರಯಚ್ಛಮೇ’’ ಇದು ಭೂದಾನಮಂತ್ರವು, “ಮಹರ್ಷಗೋ್ರತ್ರಸಂಭೂತಾ ಕಾಶ್ಯಪಸ್ಟ್ ತಿಲಾಃಸ್ಮೃತಾಃತಸ್ಮಾದೇಷಾಂ ಪ್ರದಾನೇನ ಮಮ ಪಾಪಂ ವ್ಯಪೋಹತು” ಹೀಗೆ ತಿಲದಾನವು. “ಹಿರಣ್ಯಗರ್ಭಗರ್ಭಸ್ಕಂ’ ಇದು ಹಿರಣ್ಯದಾನಮಂತ್ರವು, “ಕಾಮಧೇನುಷುಸಂಭೂತಂ ಸರ್ವಕ್ರತುಷು ಸಂಸ್ಕೃತಂ ದೇವಾನಾಮಾಜ್ಯ ಮಾಹಾರಂ ಆತಃಶಾಂತಿಂ ಪ್ರಯಚ್ಛಮೇ’ ಇದು ಆಜ್ಯಕ್ಕೆ ಮಂತ್ರವು. “ಶರಣಂ ಸರ್ವಲೋಕಾನಾಂ ಲಜ್ಞಾಯಾರಕ್ಷಣಂ ಪರಂ ಸುವೇಷಧಾರಿವಸ್ತ್ರತ್ವಮತಃ =ಮೇ"ಹೀಗೆ ವಸ್ತ್ರದಾನವು. “ಸರ್ವದೇವಮಯಂಧಾನಂ ಸರ್ವೋತ್ಪತ್ತಿಕರಂ ಮಹತ್ ಪ್ರಾಣಿನಾಂ ಜೀವನೋಪಾಯ ಮತಃ ಶಾಂತಿಪ್ರಯತ್ನಮೇ” ಹೀಗೆ ಧಾನ್ಯವು. ಬೆಲ್ಲಕ್ಕೆ, “ತಥಾರಸಾನಾಂ ಪ್ರವರ ಸದ್ಯವೇಕರಸೋ ಮತಃ|ಮವ ತಸ್ಮಾತ್ವರಾಂ ಲಕ್ಷ್ಮೀಂ ಸದಸ್ಯ ಗುಡಸರ್ವದಾ ರಜತಕ್ಕೆ ಪ್ರೀತಿರ್ಯತಃಪಿತೃಣಾಂಚ ವಿಷ್ಣು ಶಂಕರಯೋಃ ಸದಾ ಶಿವನೇತ್ರೋದ್ಭವಂ ರೂಪಮ=ಮ” ಲವಣಕ್ಕೆ - “ಯಸ್ಮಾದರಸಾಃ ಸರ್ವನೋತೃಷ್ಟಾ ಲವಣಂ ವಿನಾ|ಶಂಭೋ ಪ್ರೀತಿಕರಂ ನಿತ್ಯಮತಃ=ಮೇ” ಹೀಗೆ ದಶ ದಾನವು ಭೂಮಿದಾನ ಪ್ರಮಾಣಾದಿಗಳನ್ನು ಜನನಶಾಂತಿ ಪ್ರಕರಣದಲ್ಲಿ ಹೇಳಲಾಗಿದೆ.

ಪರಿಚ್ಛೇದ ೩ ಉತ್ತರಾರ್ಧ ೫೦೭ ಪ್ರಾಯಶ್ಚಿತ್ತಾದಿ ಕರ್ಮಗಳಲ್ಲಿ ವಿಷ್ಣು ಮೊದಲಾದವರ ನಾಮಕೀರ್ತನೆಯಿಂದ ಸಾಂಗತ್ಯ ಪ್ರಾಪ್ತಿಯಾಗುವದು. ಪ್ರಾಯಶ್ಚಿತ್ತಾದಿಗಳ ಅಸಂಭವವಾದರೂ ಮರಣಕಾಲದಲ್ಲಿ ವಿಷ್ಣು, ಶಿವ ನಾಮಕೀರ್ತನಮಾತ್ರದಿಂದ ಸಮಸ್ತಪಾಪವೂ ನಾಶವಾಗುವದಲ್ಲದೆ ಮೋಕ್ಷಪ್ರಾಪ್ತಿಯೂ ಆಗುವದು. ಶ್ರೀ ಹರಿಯ ಅವತಾರಗಳ ಗುಣ, ಕರ್ಮ, ವಿಲಾಸಾದಿಗಳು, ನಾಮಗಳು ಇವುಗಳನ್ನು ಪ್ರಾಣಪ್ರಯಾಣ ಸಮಯದಲ್ಲಿ ಪರವಶನಾಗಿದ್ದಾಗಲಾದರೂ ಉಚ್ಚರಿಸಿದರೆ ಅವನ ಜನ್ಮಾಂತರದ ಪಾಪಗಳೂ ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುವದೆಂದು “ಶ್ರೀ ಮದ್ಭಾಗವತ"ದಲ್ಲಿ ಹೇಳಿದೆ. ಮರಣ ಸಮಯದಲ್ಲಿ ತಂದೆ-ತಾಯಿಗಳ ಸಲುವಾಗಿ ದಾನಗಳನ್ನು ಕೊಡಿಸಿದರೆ ಗಯಾಶ್ರಾದ್ಧ, ಅಶ್ವಮೇಧಾದಿ ಯಜ್ಞಗಳಿಗಿಂತ ಹೆಚ್ಚಿನ ವುಣ್ಯವು ಲಭಿಸುವದು. ಆ ದಾನಗಳೆಂದರೆ ತಿಲಪಾತ್ರದಾನ, ಋಣಧೇನು, ಮೋಕ್ಷಧೇನು, ಪಾಪಧೇನು, ವೈತರಣಿಧೇನು, ಉತ್ಕಾಂತಿಧೇನು ದಾನಗಳು. ಮರಣವು ತೀರ ಸನ್ನಿಹಿತವಾಗಿದ್ದ ಕಾಲಕ್ಕೆ ಇಷ್ಟು ಮಹತ್ವವಿದೆ. ಅದೇನೆಂದರೆ ಆ ಕಾಲವು ವ್ಯತೀಪಾತ, ಸಂಕ್ರಾಂತಿ, ಸೂರ್ಯಗ್ರಹಣ, ಇಲ್ಲವೆ ಯಾವದೇ ಒಂದು ಮಹತ್ವದ ಪುಣ್ಯಕಾಲ ಇವುಗಳಿಗೆ ಅದು ಸಮಾನವಾದದ್ದು. ಮರಣೋನ್ಮುಖನಾದವನು ಹಿಂದೆ ಹೇಳಿದಂತೆ ಸವತ್ಸಗೋವನ್ನು ದಾನಮಾಡಬೇಕು; ಅಥವಾ ಬರೇ ಗೋವನ್ನಾದರೂ ಕೊಡಬಹುದು. ಅದು ನರಕದಿಂದ ಉದ್ಧರಿಸುವದು. ಶುಕ್ಲ ಪಕ್ಷ, ಹಗಲು, ನೆಲ ಅಥವಾ ಗಂಗಾನದಿ, ಉತ್ತರಾಯಣ ಇವು ಪ್ರಾಣೋತ್ಮಮಣಕ್ಕೆ ಯುಕ್ತಗಳು. ಇಂಥ ಸಮಯದಲ್ಲಿ ವಿಷ್ಣು ಸ್ಮರಣೆ ಮಾಡುತ್ತ ಪ್ರಾಣಬಿಡುವವರು ನಿಜವಾಗಿ ಧನ್ಯರು! ಇತ್ಯಾದಿ ವಚನಗಳಿವೆ. ಮರಣಹೊಂದುವವನು ದಾನಾದಿಗಳಲ್ಲಿ ಅಶಕ್ತನಾದಲ್ಲಿ ಪುತ್ರಾದಿಗಳು ದಾನಮಾಡತಕ್ಕದ್ದು. ತಿಲಪಾತ್ರದಾನ ವಿಧಿ ಯಥಾಶಕ್ತಿ ಕಂಚಿನ ಅಥವಾ ತಾಮ್ರಪಾತ್ರದಲ್ಲಿ ಎಳ್ಳನ್ನು ಹಾಕಿ ಸುವರ್ಣವನ್ನಿಟ್ಟು “ಮಮಜನ್ಮ ಪ್ರಕೃತಿ ಮರಣಾಂತಂ ಕೃತನಾನಾವಿಧಪಾಪ ಪ್ರಣಾಶಾರ್ಥ೦ ತಿಲಪಾತ್ರದಾನಂ ಕರಿ” ಹೀಗೆ ಸಂಕಲ್ಪಿಸಿ ಬ್ರಾಹ್ಮಣನನ್ನು ಪೂಜಿಸಿ “ಮಮಜನ್ಮಪ್ರಕೃತಿ ಮರಣಾಂತಂ ಕೃತ ನಾನಾವಿಧ ಪಾಪಪ್ರಣಾಶಾರ್ಥಂ ಇದಂ ತಿಲಪಾತ್ರ, ‘ಸುವರ್ಣಂ, ಸದಕ್ಷಿಣ ಅಮುಕ ಶರ್ಮ ತುಭಂ ಸಂಪ್ರದ ‘ತಿಖಾಃ ಪುಣ್ಯಾ ಪತ್ರಾಶ್ಚ ತಿಲಾಸರ್ವಕರಾಕೃತಾಶಾವಾಯರಿ ವಾಕೃಷ್ಣಾ ಋಗೋತ್ರ ಮುಗ್ಧವಾಗಿ ಯಾನಿಕಾನಿಚ ಪಾಪಾನಿ ಬ್ರಹ್ಮಹತ್ಯಾಸಮಾನಿಚಲಪಾತ್ರಪ್ರದಾನೇನ ಮಮ ಪಾಪಂ ವ್ಯಪೋಹತು ನಮಮ” ಎಂದು ಬ್ರಾಹ್ಮಣಹಸ್ತದಲ್ಲಿ ಜಲವನ್ನು ಬಿಡತಕ್ಕದ್ದು, ಪುತ್ರಾದಿಗಳು ಕರ್ತೃಗಳಾದಲ್ಲಿ “ಅಜನ್ಮಪ್ರಭತಿ ಅಪಾಪಂ ವ್ಯಪೋಹತು” ಹೀಗೆ ಉಚ್ಚರಿಸುವದು. ಋಣಧೇನುದಾನಮಂತ್ರ.“ಐಹಿಕಾಮುಷ್ಟಿಕಂ ಯಚ್ಚ ಸಪ್ತಜನ್ಮಾರ್ಜಿತಂ ಋಣಂ| ತತ್ಸರ್ವಂ ಶುದ್ಧಿ ಮಾಯಾತು ಗಾಮೇಕಾಂ ದದತೋ ಮಮ ಉಳಿದ ಗೋದಾನ ಮಂತ್ರಗಳೆಲ್ಲ ಸಾಮಾನ್ಯ ದ್ವಿತೀಯ ಪರಿಚ್ಛೇದದಲ್ಲಿ ಹೇಳಿದಂತೆಯೇ. ಮೋಕ್ಷಧೇನು ದಾನಮಂತ್ರ, “ಮೋಕ್ಷಂದೇಹಿ ಹೃಷಿಕೇಶ ಮೋಕ್ಷಂದೇಹಿ ಜನಾರ್ದನ ಮೋಕ್ಷಧೇನುಪ್ರದಾನೇನ ಮುಕುಂದ: ಪ್ರೀಯತಾಂ ಮಮ ಪಾಪಧೇನುದಾನಮಂತ್ರ. “ಆಜನವಾರ್ಜಿತಂ ಪಾಪಂ ಮನೋವಾಕ್ಕಾಯಕರ್ಮಭಿ:ತತ್ಸರ್ವಂ ನಾಶಮಾಯಾತು ಧರ್ಮಸಿಂಧು ಗೋಪ್ರದಾನೇನ ಕೇಶವ” ವೈತರಣೀವಿಧಿ ಅತ್ಯಾದಿ “ಅಮುಕ ಮಮ ಯಮದ್ವಾರಸ್ಥಿತ ವೈತರಣ್ಯಾಖ್ಯನದುತ್ತಾರಣಾರ್ಥಂ ಗೋದಾನಂ ಕರಿಷ್ಯ” ಹೀಗೆ ಸಂಕಲ್ಪಿಸಿ ಬ್ರಾಹ್ಮಣನನ್ನು ಪಾದಪ್ರಕ್ಷಾಳನ, ವಸ್ತ್ರ, ಗಂಧ, ಮಾಲ್ಯಾದಿಗಳಿಂದ ಅರ್ಚಿಸಿ “ಶಿವಾ ಆವಸಂತು ಸೌಮನಸ್ಯಮಸ್ತು ಅಕ್ಷತಂ ಚಾರಿಷ್ಟಂಚಾಸ್ತು ಯಾವಂ ತತ್ಪತಿಹತಮಸ್ತು” ಎಂದು ಹೇಳಿ “ಧೇನುಕೇತ್ವಂ ಪ್ರತೀಕ್ಷ ಸ್ವಯಮಾರೇ ಮಹಾಪಥೇ।ಉತ್ತಿ ತೀರ್ಪುರಹಂ ದೇವಿ ವೃತರಕ್ಕೆ ನಮೋಸ್ತುತೇ” ಹೀಗೆ ಧೇನುವನ್ನು ಪ್ರಾರ್ಥಿಸಿ “ವಿಷ್ಣು ರೂಪ ದ್ವಿ ಜಶ್ರೇಷ್ಠ ಭೂದೇವ ದ್ವಿಜ ಪಾವನ ತರ್ತುಂ ವೈತರಣೀಮತಾಂ ಕೃಷ್ಣಾಂಗಾಂ ಪ್ರದದಾಮ್ಯಹಂ” ಹೀಗೆ ಬ್ರಾಹ್ಮಣನನ್ನು ಪ್ರಾರ್ಥಿಸಿ “ವೈತರಣೀಸಂತರಣಾರ್ಥ ಕೃಷ್ಣವಾರ ಮಾಲ್ಯಾಲಂಕೃತಾಂ ಯಥಾಶಕ್ತಿ ದಕ್ಷಿಣಾಯುತಾಂ ತುಭ್ರಮಹಂ ಸಂಪ್ರದದೇ, “ಯಮಾರಪಥೇಘೋರೇ ಘೋರಾ ವೈತರಣೀನದೀ ತಾಂತರ್ತುಕಾಮೋ ಯಚ್ಛಾಮಿ ಕೃಷ್ಣಾಂ ವೈತರಣೀತು ಗಾಂಗೆ ನಮಮ” ಎಂದು ಬ್ರಾಹ್ಮಣಹಸ್ತದಲ್ಲಿ ಜಲವನ್ನು ಬಿಡತಕ್ಕದ್ದು. ಕಪ್ಪುಗೋವಿಲ್ಲದಿದ್ದರೆ ಬೇರೆ ಗೋವಾದರೂ ಆಗಬಹುದು; ಅಥವಾ ಗೋವಿನ ಅಭಾವದಲ್ಲಿ ದ್ರವ್ಯವನ್ನು ಕೊಡುವದು. ಪುತ್ರಾದಿಗಳು ಕರ್ತೃಗಳಾದರೆ ಮೊದಲಿನ ಮಂತ್ರದಲ್ಲಿ “ಉತ್ತಿರ್ಷುರಯಂ” ಎಂದು ಹೇಳತಕ್ಕದ್ದು. ಮೂರನೆಯ ಮಂತ್ರದಲ್ಲಿ “ತಾಂತರ್ತುಮಸ್ಯ” ಎಂದು ಹೇಳುವದು. ಉತ್ಕಾಂತಿಧೇನು ಇಮಾಂ ಅದೈತ್ಯಾದಿ “ಅಮುಕ ಸುಖೇನ ಪ್ರಾಣೋತ್ಮಮಣ ಪ್ರತಿಬಂಧಕ ಸಕಲಪಾಪಕ್ಷಯದ್ವಾರಾ ಸುಖೇನ ಪ್ರಾಕೋಮಾಯ ಯಥಾಶಕಲಂಕೃತಾಮಿಮಾ ಮುತ್ಕಾಂತಿರಂಜಿತಾಂ ಧೇನುಂ ರುದ್ರದೈವತಾಂ ಅಮುಕಶರ್ಮಣೇತುಭಂ ಸಂಪ್ರದದೇ” “ಗವಾಮಂಗೇಷು” ಈ ಮಂತ್ರವನ್ನು ಹೇಳಿ “ನಮಮ” ಎಂದು ಹೇಳತಕ್ಕದ್ದು. ಧೇನುವಿನ ಅಭಾವದಲ್ಲಿ ದ್ರವ್ಯವನ್ನು ಕೊಡುವದು. ಹೇಳಿದ ಪ್ರಾಯಶ್ಚಿತ್ತಾದಿ ದಾನಾಂತಕಾರ್ಯಗಳನ್ನು ಮಾಡದ ಪಿತೃವು ಮೃತಿಹೊಂದಿದರೆ ಪುತ್ರಾದಿಗಳು ಪ್ರಾಯಶ್ಚಿತ್ತವನ್ನು ಮಾಡಿ ದಾಹಾದಿಗಳನ್ನು ಮಾಡತಕ್ಕದ್ದು. ದಾನಗಳನ್ನು ಹನ್ನೊಂದನೇ ದಿನ ಮಾಡತಕ್ಕದ್ದು. ತಂದೆಯು ಪಾಪಿಯಾಗಿರಲಿಲ್ಲವೆಂದು ನಿಶ್ಚಯವಿದ್ದರೆ ಪ್ರಾಯಶ್ಚಿತ್ತದ ಅವಶ್ಯಕತೆಯಿಲ್ಲ. ಕೆಲವರು ಮರಣದ ನಂತರವಾದರೂ “ಉತ್ಕಾಂತಿ, ವೈತರಣೀ, ದಶದಾನ” ಇವುಗಳನ್ನು ಮಾಡಿ ಪ್ರೇತದಹನವನ್ನು ಮಾಡತಕ್ಕದ್ದೆಂದು ಹೇಳುವರು. ತುಲಸೀ, ಶಾಲಿಗ್ರಾಮಶಿಲೆ ಇವುಗಳನ್ನು ಸನ್ನಿಧಿಯಲ್ಲಿಡತಕ್ಕದ್ದು. ಕೆಲವರು ತಿಲ, ಲೋಹ, ಹಿರಣ್ಯ, ಹತ್ತಿ, ಲವಣ, ಭೂಮಿ, ಧೇನು, ಸಪ್ತಧಾನ್ಯ ಹೀಗೆ ಎಂಟು ದಾನಗಳನ್ನು ಮಾಡಬೇಕೆಂದು ಹೇಳುವರು. ಕೆಲಗ್ರಂಥಗಳಲ್ಲಿ ಪ್ರಾಣಪ್ರಯಾಣ ಸಮದಲ್ಲಿ “ಮಧುಪರ್ಕ’ದಾನವನ್ನೂ ಹೇಳಿದೆ. ಕ್ಷೌರನಿರ್ಣಯ ಪುತ್ರಾದಿ ಕರ್ತೃಗಳು ಅಂತ್ಯಕರ್ಮಾಧಿಕಾರಕ್ಕಾಗಿ ಕೃಚ್ಛತ್ರಯಾದಿಗಳನ್ನೂ, ಕೌರವನ್ನೂಪರಿಚ್ಛೇದ - ೩ ಉತ್ತರಾರ್ಧ ಅವಶ್ಯವಾಗಿ ಮಾಡಬೇಕು. ಮಾತಾಪಿತೃಗಳು, ಸವತಿತಾಯಿ, ತಂದೆಯ ಭ್ರಾತೃ, ಜೇಷ್ಠ ಭ್ರಾತೃ ಇತ್ಯಾದಿಗಳ ಅಂತ್ಯಸಂಸ್ಕಾರದಲ್ಲಿ ಗೌರವು ಆವಶ್ಯಕವು ಕರ್ತೃಗಳಲ್ಲದ ಇತರ ಪುತ್ರರಿಗಾದರೂ ಕ್ಷೌರವು ನಿತ್ಯವೇ, ಪತ್ನಿಗಾದರೂ ಅದೇದಿನ ಅಥವಾ ದಶಮ ದಿನದಲ್ಲಿ ಕ್ಷೌರವು ಅಗತ್ಯವಾದದ್ದು ಹಾಗೆ “ದತ್ತಕ’ನಾದರೂ ತನ್ನ ಪೂರ್ವಾಪರ ಮಾತಾಪಿತೃಗಳ ಮರಣದಲ್ಲಿ ಕ್ಷೌರವನ್ನು ಮಾಡಿಕೊಳ್ಳಬೇಕು. ರಾತ್ರಿ ಮರಣವಾದರೆ ದಹನ -ನಿತ್ಯಪಿಂಡಾಂತವಾಗಿ ಮಾಡಿ ಮಾರನೇದಿನ ಕ್ಷೌರಮಾಡಿಕೊಳ್ಳತಕ್ಕದ್ದು. ಪತ್ನಿ, ಪುತ್ರ, ಕನಿಷ್ಠಬ್ರಾತೃ ಇತ್ಯಾದಿಗಳ ಅಂತ್ಯಕರ್ಮಕ್ಕೆ ಕ್ಷೌರದ ಆವಶ್ಯಕತೆಯಿಲ್ಲ. ಉಳಿದವರಿಗೆ ಕೃತಾಕೃತವು. ಶವಕ್ಕೆ ಅಸ್ಪೃಶ್ಯಸ್ಪರ್ಶಾದಿಗಳಲ್ಲಿ ಪ್ರಾಯಶ್ಚಿತ್ತ ಸ್ಮಶಾನಕ್ಕೆ ಒಯ್ಯುವಾಗ ಶವಕ್ಕೆ ಶೂದ್ರಸ್ಪರ್ಶವಾದರೆ ಅಥವಾ ಶೂದ್ರರು ಶವವನ್ನು ಹೊತ್ತರೆ ಜಲಕುಂಭ, ಪಂಚಗವ್ಯಗಳನ್ನು ಮಂತ್ರಗಳಿಂದ ಅಭಿಮಂತ್ರಿಸಿ ಆ ಜಲದಿಂದ ಸ್ನಾನಮಾಡಿಸಿ ದಹನಮಾಡತಕ್ಕದ್ದು, ಮತ್ತು ಮೂರು ಕೃಚ್ಛಗಳನ್ನು ಮಾಡತಕ್ಕದ್ದು. ಬಾಣಂತಿ, ರಜಸ್ವಲೆ ಇವರ ಸ್ಪರ್ಶವಾದರೂ ಹೀಗೆಯೇ ಮಾಡತಕ್ಕದ್ದು. ಕೃಚ್ಛವನ್ನು ಮಾತ್ರ “ಹದಿನೈದು” ಮಾಡತಕ್ಕದ್ದು. ಶೂದ್ರನಿಂದ ಬ್ರಾಹ್ಮಣನ ದಹನವಾಗಿದ್ದರೆ ಪುತ್ರಾದಿಗಳು ಚಾಂದ್ರಾಯಣ, ಪರಾಕ, ಪ್ರಾಜಾಪತ್ಯ ಕೃಚ್ಛಗಳನ್ನು ಒಟ್ಟಿಗೆ ಮಾಡಿ ಅಸ್ಥಿಗಳನ್ನು ಪುನರ್ದಹನ ಮಾಡಬೇಕು. ಅಜ್ಜಿಯ ಅಭಾವದಲ್ಲಿ ಶಾಖಾಸಂಸ್ಕಾರ ಮಾಡುವದು. “ಊರ್ಧ್ವಚ್ಛಿಷ್ಟ, ಅಧರೋಚಿಷ್ಟ ಉಭಯೋಚ್ಛಿಷ್ಟ"ಗಳಲ್ಲಿ (ಊರ್ಧೋಚ್ಛಿಷ್ಟಾದಿ ಲಕ್ಷಣಗಳನ್ನು ಹಿಂದೆ ಹೇಳಿದೆ) ಮೂರು ಕೃಚ್ಛವು ಅಸ್ಪಶ್ಯರ ಸ್ಪರ್ಶದಲ್ಲಿ ಆರು ಕೃಚ್ಛಗಳು, ಅಂತರಾಳ ಮರಣದಲ್ಲಿ ಒಂಭತ್ತು, ಮಂಚದ ಮೇಲೆ ಮರಣವಾದರೆ ಹನ್ನೆರಡು, ಬಂದಿಖಾನೆಯಲ್ಲಿ ಮರಣವಾದರೆ ಹದಿನೈದು, ರಜಕಾದಿ ಸಪ್ತವಿಧ ಅಂತ್ಯಜ ಮೊದಲಾದವರ ಸ್ಪರ್ಶವಾದರೆ ಇಪ್ಪತ್ತೊಂದು ಕೃಚ್ಛಗಳು, ದೇಶಾಂತರದಲ್ಲಿ ಮರಣವಾದರೆ ಎರಡು ಪರಾಕ ಅಥವಾ ಎಂಟು ಕೃಚ್ಛಗಳು. ಆಶೌಚ ಮರಣದಲ್ಲಿಯೂ ಮೂರು ಕೃಚ್ಛಗಳು. ಶವವು ಅರ್ಧದಗ್ಧವಾದಾಗ ಚಿತಿಗೆ ಶೂದ್ರಸ್ಪರ್ಶವಾದರೆ ಮೂರು ಕೃಘ್ನವು, ಹೀಗೆ ಪುತ್ರಾದಿಗಳು ಪಿತ್ರಾದಿಗಳಿಗೆ ಪಾಪಿಯ ಪಾಪಾನುಸಾರವಾದ ಪ್ರಾಯಶ್ಚಿತ್ತ ಪ್ರಕರಣದಲ್ಲಿ ಹೇಳಿದ ಪ್ರಾಯಶ್ಚಿತ್ತ ಹಾಗೂ ದುರ್ಮರಣ, ಆತ್ಮಘಾತ ಮೊದಲಾದ ನಿಮಿತ್ತದಿಂದ ಹೇಳಿದ ಪ್ರಾಯಶ್ಚಿತ್ತ ಮತ್ತು ನಾರಾಯಣಬಲಿ ಇವುಗಳನ್ನು ಮಾಡಿಯೇ ಅಂತ್ಯಕರ್ಮವನ್ನು ಮಾಡತಕ್ಕದ್ದು. ಹೀಗೆ ಹೇಳಿದ ಪ್ರಾಯಶ್ಚಿತ್ತಾದಿಗಳನ್ನು ಮಾಡದೆ ದಹನಾದಿಗಳನ್ನು ಮಾಡಿದರೆ ಅದು ವ್ಯರ್ಥವಾಗುವದು; ಮತ್ತು ಕರ್ತೃ ಮತ್ತು ಮೃತರಿಬ್ಬರಿಗೂ ನರಕಪ್ರಾಪ್ತಿಯಾಗುವದು. ದಂಪತಿಗಳ ಏಕಕಾಲ ದಹನದಲ್ಲಿ ಪತ್ನಿಗೆ ಪತಿಯೊಡನೆ (ಇಬ್ಬರಾಗುವ ಕಾರಣ) ಮಂತ್ರವನ್ನು ದ್ವಿವಚನಾಂತವಾಗಿ ಹೇಳಿ ದಹನಮಾಡುವದು. ಪಿಂಡ ಮೊದಲಾದವುಗಳನ್ನು ಪತಿಪೂರ್ವಕವಾಗಿ ಮಾಡಬೇಕು. ಹೀಗೆ ಸವತಿಯರಿಗೂ ಸಹ ಒಂದೇ ಕಾಲದಲ್ಲಿ ಮೃತರಾದರೆ ಕೂಡಿಯೇ ದಹನಮಾಡತಕ್ಕದ್ದು. ಪಿಂಡಾದಿಗಳನ್ನು ಹಿರಿಯರ ಪೂರ್ವಕವಾಗಿ ಪ್ರತ್ಯೇಕವಾಗಿ ಮಾಡತಕ್ಕದ್ದು. ಹೀಗೆ ಪಿತಾಪುತ್ರರು ಇಬ್ಬರು ಅಣ್ಣ-ತಮ್ಮಂದಿರು ಇವರನ್ನು ಲೌಕಿಕಾಗ್ನಿಯಿಂದ ದಹಿಸುವಲ್ಲಿ ಕೂಡಿಯೇ ದಹನವು. ಪಿ೦ಡಾದಿಗಳನ್ನು ಪಿತೃಪೂರ್ವಕವಾಗಿ ಹಾಗೂ ಜೇಷ್ಠಾದಿಯಾಗಿ ಪ್ರತ್ಯೇಕ ಮಾಡುವದು. ಪುರುಷ ೫೧೦ ಧರ್ಮಸಿಂಧು ಬಾಲಕರು, ಸ್ತ್ರೀ ಬಾಲಕರು ಇವರ ದಹನ ಅಥವಾ ಖನನದಲ್ಲಿಯೂ ಹೀಗೆಯೇ ಮಾಡತಕ್ಕದ್ದೆಂದು “ನಾಗೋಜಿಭಟ್ಟಿಯ"ದಲ್ಲಿ ಹೇಳಿದೆ. ರಜಸ್ವಲಾ, ಗರ್ಭಿಣೀ ಮೊದಲಾದವರ ಮರಣದಲ್ಲಿ ಮತ್ತು ಸಹಗಮನ ವಿಷಯದಲ್ಲಿ ಮುಂದೆ ಹೇಳಲಾಗುವದು. ಮರಣಕಾಲದಲ್ಲಿ ಪುಣ್ಯಸೂಕ್ತಾದಿ ಶ್ರವಣ ಗೋಮಯದಿಂದ ಸಾರಿಸಿದ ನೆಲದಲ್ಲಿ ದರ್ಭಾಸನದಲ್ಲಿ ಕುಳಿತು ಅಥವಾ ದಕ್ಷಿಣಶಿರಸ್ಸನ್ನು ಮಾಡಿ ಮಲಗಿಯಾದರೂ ಗೋಪಿಚಂದನಾದಿ ಮೃತ್ತಿಕೆಯಿಂದ ತಿಲಕಮಾಡಿಕೊಂಡು ಶ್ರೀ ವಿಷ್ಣುವನ್ನು ಸ್ಮರಿಸುತ್ತಿರುವವನಾಗಿ ಪುಣ್ಯಸೂಕ್ತ, ಗೀತಾ, ಸಹಸ್ರನಾಮಾದಿ ಸ್ತೋತ್ರಗಳನ್ನು ಪಠಿಸಬೇಕು. ಅಶಕ್ತಿಯಲ್ಲಿ ಶ್ರವಣಮಾಡಬೇಕು. “ಮೃತತ್ವ ಪ್ರಾಪ್ತರ್ಥಂ ಪುಣ್ಯ ಸೂಕ್ತ ಸ್ತೋತ್ರಾದೀನಾಂ ಪಾಠಂ ಶ್ರವಣಂ ಕರಿಷ್ಯ” ಹೀಗೆ ಸಂಕಲ್ಪವು. ಪ್ರೋತೃವಿಗೆ ಅಗತ್ಯವಾದಲ್ಲಿ ಸಂಕಲ್ಪ ಶ್ರವಣಮಾಡಿಸುವದು “ಅಸ್ಯ ಅಮುಕಕರ್ಮಣ ಮೃತತ್ವ ಪ್ರಾಪ್ತಯೇsಮುಕಂ ಶ್ರಾವಯಿಷ್ಟೇ” ಹೀಗೆ ಸಂಕಲ್ಪಿಸತಕ್ಕದ್ದು. “ನಾನಾನಂ” ಎಂಬ ಸೂಕ್ತ, ಪುರುಷಸೂಕ್ತ, ವಿಷ್ಣು ಸೂಕ್ತ, ಉಪನಿಷತ್ತಿನ ಭಾಗಗಳು, ಇವುಗಳಿಗೆಲ್ಲ ‘ಪುಣ್ಯಸೂಕ್ತ’ವೆಂದು ಹೇಳುವರು. ರಾಮ-ಕೃಷ್ಣ ನಾಮಸ್ಮರಣೆಯಲ್ಲಿ ಜಾತಿಯ ಭೇದವಿಲ್ಲದ ಎಲ್ಲರಿಗೂ ಅಧಿಕಾರವು ಸಾಗ್ನಿಯಾದವನಿಗೆ ವಿಶೇಷ ಗೃಹ್ಯಾಗ್ನಿಯಿದ್ದವನಿಗೆ (ಔಪಾಸನಾಗಿ) ಗೃಹಾಗ್ನಿಯಿಂದಲೂ, ಶೌತಾಗ್ನಿಯಿರುವವನಿಗೆ ತ್ರೇತಾಗ್ನಿ (ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯ) ಯಿಂದಲೂ ದಹನಮಾಡತಕ್ಕದ್ದು. ಗೃಹಾಗ್ನಿಗಾಗಲೀ ಶೌತಾಗ್ನಿಗಾಗಲೀ ಕೃಷ್ಣಪಕ್ಷದಲ್ಲಿ ಮರಣವಾದರೆ ಆಗಲೇ ದರ್ಶಸಾಯಂಕಾಲ ಪರ್ಯಂತವಾಗಿ ಸಾಯಂಕಾಲಾಹುತಿಗಳನ್ನು ಒಂದಾವರ್ತಿಗ್ರಹಣದಿಂದಲೇ ಪಕ್ಷ ಹೋಮನ್ಯಾಯದಿಂದ ಹೋಮಮಾಡಿ ಪುನಃ ಸಂಕಲ್ಪಿಸಿ ಪ್ರತಿಪದಿಯ ಪರ್ಯಂತ ಪ್ರಾತರಾಹುತಿಗಳನ್ನು ಹೋಮಿಸಿ ದರ್ಶಯಾಗವನ್ನು ಮಾಡತಕ್ಕದ್ದು. ಯಾಗವು ಅಸಂಭವವಾದಲ್ಲಿ ಆಜ್ಯಸಂಸ್ಕಾರಮಾಡಿ ಸೃಚೆಯಲ್ಲಿ ಚತುರಾವೃತ್ತಿ ಗ್ರಹಣ ಮಾಡಿ ಪುರೋನುವಾಕ್ಕಾಯಾಜಾ ಮಂತ್ರಗಳಿಂದ ಒಂದೊಂದು ಪ್ರಧಾನಾಹುತಿಗಳನ್ನು ಹೋಮಿಸುವದು. ಸ್ಮಾರ್ತಾಗ್ನಿಯಲ್ಲಾದರೆ ಚತುಗ್ರ್ರಹೀತವಾದ ಆಜ್ಯದಿಂದ “ಅಗ್ನಯೇ ಸ್ವಾಹಾ, ಇಂದ್ರಾಗ್ನಿ ಭಾಗು ಸ್ವಾಹಾ” ಹೀಗೆ ನಾಮದಿಂದಲೇ ಎರಡು ಪ್ರಧಾನಾಹುತಿಗಳನ್ನು ಹೋಮಿಸುವದು. ಶುಕ್ಲಪಕ್ಷದಲ್ಲಿ ರಾತ್ರಿ ಮರಣವಾದರೆ ಸಾಯಂಕಾಲ ಹೋಮವಾಗಿರುವದರಿಂದ ಪ್ರಾತರ್ಹೋಮವನ್ನು ಮಾತ್ರ ಆಕರ್ಷಣ” ಮಾಡಿ ಆಗಲೇ ಹೋಮಿಸತಕ್ಕದ್ದು, ಈ ಶುಕ್ಲಪಕ್ಷದಲ್ಲಿ ಪೂರ್ಣಿಮಾಂತ ಮತ್ತು ಅಮಾಂತ ಹೋಮ ಅಥವಾ ಇಷ್ಟಿ ಪ್ರಧಾನವಾದ ಪೂರ್ಣಾಹುತಿ ಇವುಗಳನ್ನು ಮಾಡತಕ್ಕದ್ದಿಲ್ಲ. ಶುಕ್ರ ಪಕ್ಷದ ಹಗಲಿನಲ್ಲಿ ಮರಣದಾದರೆ ಯಾವ ಹೋಮದ “ಆಕರ್ಷಣ"ವೂ ಇಲ್ಲ. ಹೀಗೆ ಕೃಷ್ಣ ಪಕ್ಷದ ಮರಣದಲ್ಲಿಯಾದರೂ ದೈವವಶಾತ್ ಪೂರ್ಣಮಾಸೇಷ್ಟಿಯ ಉಲ್ಲಂಘನೆಯಾಗಿದ್ದರೆ ಹೋಮಾವ ಕರ್ಷ ಮತ್ತು ಪೂರ್ಣಾಹುತ್ಯಾದಿಗಳು ಕೃತಾಕೃತವು. ಯಾಕೆಂದರೆ ಅದು ಆರಂಭವಾಗಿರುವದಿಲ್ಲವೆಂದು ತೋರುತ್ತದೆ. ಮಾಡುವದಿದ್ದಲ್ಲಿ ಅತಿಕ್ರಾಂತಗಳಾದ ಪೂರ್ಣಾಹುತಿಗಳನ್ನು ಹೋಮಿಸಿ ಪಕ್ಷ ಹೋಮಗಳನ್ನು ಮಾಡಿ ದರ್ಶ ಪೂರ್ಣಾಹುತಿಗಳನ್ನು 35

ಪರಿಚ್ಛೇದ ೩ ಉತ್ತರಾರ್ಧ ಹೋಮಿಸುವದು. ಅರಣಿಯಲ್ಲಿ ಅಗ್ನಿಸಮಾರೋಪಮಾಡಿದ್ದಾಗ ಪತಿಯು ಮೃತನಾದರೆ ಪ್ರೇತನಿಗೆ ಸ್ಪರ್ಶಮಾಡಿ ಅಗ್ನಿಯನ್ನು ಕಡೆದು ಪ್ರತ್ಯವರೋಹಣದ ಜಪಮಾಡಿ ಹನ್ನೆರಡಾವರ್ತಿ ಧೃತವನ್ನು ತೆಗೆದುಕೊಂಡು ಅಮಂತ್ರಕವಾಗಿ ಹವನಮಾಡಿ ನಂತರ ಪ್ರೇತಕರ್ಮವನ್ನು ಮಾಡತಕ್ಕದ್ದು. ವಿಚ್ಛಿನ್ನವಾದ ಶೌತಾಗ್ನಿಯುಳ್ಳವನು ಮೃತನಾದರೆ ಪ್ರತಾಧಾನವನ್ನು ಮಾಡತಕ್ಕದ್ದು. ಅದು ಹೇಗೆಂದರೆ-ಪ್ರೇತನನ್ನು ಅಗ್ನಿಶಾಲೆಯಲ್ಲಿಟ್ಟು ಅರಣಿಯನ್ನು ಹತ್ತಿರದಲ್ಲಿರಿಸಿ “ಯಾಗ್ನಯೋಜುಸ್ವತೋ ಮಾಂಸಕಾಮಾ: ಸಂಕಲ್ಪಯಂತೇಜಮಾನಮಾಂತಂ ಜಾಯಂತುತೇಹವಿಷೇ ಸಾದಿತಾಯ ಸ್ವರ್ಗ ಲೋಕಮಿಮಂ ಪ್ರೇತಂ ನಯಂತು ಹೀಗೆ ಯಜುರ್ವೇದ ಮಂತ್ರದಿಂದ ಅದನ್ನು ಕಡೆದು ಅಗ್ನಿಯನ್ನು ಕುಂಡದಲ್ಲಿ ಚಲ್ಲಿ ಹನ್ನೆರಡಾವರ್ತಿ ತೆಗೆದುಕೊಂಡ ತುಪ್ಪದಿಂದ ಅಮಂತ್ರಕವಾಗಿ ಹೋಮಿಸಿ ಆ ಅಗ್ನಿಯಿಂದ ದಹನ ಮಾಡತಕ್ಕದ್ದು. ಅಗ್ನಿಯು ನಷ್ಟವಾದಾಗ, ಅರಣಿಯು ನಷ್ಟವಾದಾಗ ಪತಿಯು ಮೃತನಾದರೆ “ಮನೋಜ್ಯೋತಿ” ಈ ಋಕ್ಕಿನಿಂದ ಎರಡು ಅರಣಿಗಳನ್ನು ಸಂಗ್ರಹಿಸತಕ್ಕದ್ದು, ಉಳಿದದ್ದು ಹಿಂದಿನಂತೆಯೇ, ಸ್ಮಾರ್ತಾಗ್ನಿಯುಳ್ಳವನಿಗೆ ಸ್ಮಾರ್ತಾಗ್ನಿಯು ವಿಚ್ಛಿನ್ನವಾದರೆ ವಿಚಿತ್ರ ದಿನದಿಂದ ಹಿಡಿದು ಗಣನೆಯಿಂದ “ಪೂರ್ವಾರ್ಧ"ದಲ್ಲಿ ಹೇಳಿದ ರೀತಿಯಿಂದ ಪ್ರಾಯಶ್ಚಿತ್ತವನ್ನು ಆಗಲೇ ಮಾಡತಕ್ಕದ್ದು; ಅಥವಾ ಸಂಕಲ್ಪ ಮಾಡತಕ್ಕದ್ದು. ಪ್ರಾಯಶ್ಚಿತ್ತದ ನಂತರದಲ್ಲಿ ಹೋಮದ್ರವ್ಯವನ್ನೂ, ಸ್ಥಾಲೀಪಾಕದ್ರವ್ಯವನ್ನೂ ಕಳೆದ ಕಾಲವನ್ನೆಣಿಸಿ ದಾನಕೊಡತಕ್ಕದ್ದು, ನಂತರ ಅರಣಿಯಿರುವ ಪಕ್ಷದಲ್ಲಿ ಹಿಂದೆ ಹೇಳಿದಂತೆ ಅರಣಿಯನ್ನು ಕಡೆಯತಕ್ಕದ್ದು. ಇಲ್ಲದಿದ್ದ ಪಕ್ಷದಲ್ಲಿ “ಅಮುಕಶರ್ಮ ಅಗ್ನಿ ವಿಚ್ಛೇದನಿಮಿತ್ತಕಂ ದಾಹಾಯ ಅಗ್ನಿಸಿಧ್ಯರ್ಥಂ ಪ್ರತಾಧಾನಂ ಕರಿಷ್ಯ ಹೀಗೆ ಸಂಕಲ್ಪಿಸಿ ಅಗ್ನಿ ಕುಂಡದಲ್ಲಿ ಸಾಹಿತ್ಯವನ್ನು ಚೆಲ್ಲಿ ಲೌಕಿಕಾಗ್ನಿಯನ್ನು ಪ್ರತಿಷ್ಠಾಪಿಸಿ ಆಜ್ಯವನ್ನು ಸಂಸ್ಕರಿಸಿ “ಆಯಾಶ್ಚಾಗೇ “ಈ ಮಂತ್ರದಿಂದ “ಯಸ್ಯಾಗ್ನಯ” ಎಂಬ ಪೂರ್ವೋಕ್ತ ಮಂತ್ರದಿಂದಲೂ ಹೋಮಿಸಿ ನಾಲ್ಕು ವ್ಯಾಹೃತಿಗಳನ್ನು ಹೋಮಿಸುವದು. ಹೀಗೆ ಮಾಡಿದಲ್ಲಿ ಔಪಾಸನವು ಸಿದ್ಧಿಸುವದು. ಪತ್ನಿ ಮರಣದಲ್ಲಿಯೂ ಹೀಗೆಯೇ ಎಂದು “ಭಟ್ಟರ ಮತವು ವಿಧುರನಿಗಾದರೂ ಶೌತಾಗ್ನಿ, ಗೃಹ್ಯಾಗಿ, ಗ್ರಹಣವಿದ್ದಲ್ಲಿ ಅದಕ್ಕನುಗುಣವಾಗಿ ಆಯಾಯ ಅಗ್ನಿಗಳಿಂದ ದಹನ ಮಾಡತಕ್ಕದ್ದು. ವಿಧುರನಿಗೆ ಅಗ್ನಿಗ್ರಹಣಮಾಡಿದ ನಂತರದಲ್ಲಿ ಅದರ ವಿಚ್ಛೇದವಾದರೆ ಪೂರ್ವೋಕ್ತ ರೀತಿಯಿಂದ ಆಯಾಯ ಅಗ್ನಿಯನ್ನಾಧಾನ ಮಾಡತಕ್ಕದ್ದು. ಅಗ್ನಿ ಸ್ವೀಕರಿಸದಿರುವ ಸಪಕ ಹಾಗೂ ವಿಧುರರಿಗೆ ಮತ್ತು ಬ್ರಹ್ಮಚಾರಿ ಸಮಾವರ್ತನವಾದವರಿಗೆ ಅನುಪನೀತಪುತ್ರ, ಅವಿವಾಹಿತ ಕನ್ನೆ ಇವರಿಗೆ ನಿರಗ್ನಿಕನಾದವನ ಪತ್ನಿ ಹಾಗೂ ವಿಧವೆಯರಿಗೂ ಕಪಾಲಾಗ್ನಿ ಅಥವಾ ಲೌಕಿಕಾಗ್ನಿಯಿಂದ ದಹನವು, ಅಗ್ನಿವರ್ಣದ ಮಡಕೆಯ ಹಂಚಿನಲ್ಲಿ ಶಗಣಿ ಮೊದಲಾದವುಗಳಿಂದ ತಯಾರಿಸಿದ ಅಗ್ನಿಗೆ “ಕಪಾಲಾಗ್ನಿ"ಯನ್ನುವರು. ಲೌಕಾಗ್ನಿಗಾದರೂ ಅಂತ್ಯಜ, ಪತಿತ, ಸೂತಕಿ, ಚಿತಿ, ಹೇಸಿಗೆ ಇವುಗಳ ಸ್ಪರ್ಶವಾಗಕೂಡದು. ಅರ್ಥಾತ್ ಅಗ್ನಿಯು ಶುದ್ಧಸ್ಥಾನದ್ದಾಗಿರಬೇಕು. ದಹನಕ್ಕಾಗಿ ಶೂದ್ರನು ಅಗ್ನಿಯನ್ನು ತಂದರೆ ಅದರಂತೆ ತೃಣ, ಕಾವ್ಯ, ಹವಿಸ್ಸುಗಳನ್ನು ತಂದರೆ ಮೃತನಿಗೆ ಪ್ರೇತತ್ವವು ನಿವೃತ್ತವಾಗುವದಿಲ್ಲ. ಶೂದ್ರನಿಗೂ ಪಾಪವು ತಟ್ಟುವದು. ಆಹಿತಾಗ್ನಿ ದಂಪತಿಗಳಲ್ಲಿ ಮೊದಲು ಪತಿಯ ಮರಣವಾದಲ್ಲಿ ಪತಿಗೆ ಸರ್ವಾಗ್ನಿಯಿಂದ ೧೨ ಧರ್ಮಸಿಂಧು ದಹನವಾಗತಕ್ಕದ್ದು. ನಂತರ ಮೃತಳಾದ ಪತ್ನಿಗೆ ಕಡೆದ ಅಗ್ನಿ ಅಥವಾ ಕಪಾಲಾಗ್ನಿಯಿಂದ ದಾಹವಾಗತಕ್ಕದ್ದು. ಮೊದಲು ಪತ್ನಿಯು ಮೃತಳಾದರೂ ಸರ್ವಾಗ್ನಿಗಳಿಂದ ದಹನವು, ಎಲ್ಲ ಪಾತ್ರಗಳನ್ನೂ ಅವಳಿಗಾಗಿಯೇ ಅರ್ಪಿಸತಕ್ಕದ್ದು. ನಂತರ ಮೃತನಾದ ಪತಿಗೆ ಪುನರಾಧಾನದಿಂದ ಅಥವಾ ತ್ರೇತಾಗ್ನಿಯಿದ್ದರೆ ಅದರಿಂದ ದಹನವಾಗತಕ್ಕದ್ದೆಂದು ಕೆಲವರು ಹೇಳುವರು. ಯಾಜ್ಜಿಕರ ಆಚಾರವಾದರೂ ಹೆಚ್ಚಾಗಿ ಹೀಗೆಯೇ ಇದೆ. ಈ ವಿಷಯದಲ್ಲಿ ನಿರ್ಣಯ ಸಿಂಧುವು-ಸಾಗ್ನಿಕನಿಗೆ ಪತ್ನಿಮರಣದಲ್ಲಿ ಎರಡು ಪಕ್ಷಗಳಿವೆ. ಪುನರ್ವಿವಾಹದ ಇಚ್ಛೆಯಿದ್ದಲ್ಲಿ ಮೊದಲಿನ ಅಗ್ನಿಗಳಿಂದ ಪತ್ನಿಯನ್ನು ದಹಿಸಿ ಪುನಃ ವಿವಾಹಮಾಡತಕ್ಕದ್ದು. ನಂತರ ಆಧಾನವನ್ನೂ ಮಾಡತಕ್ಕದ್ದು. ಇದು ಒಂದು ಪಕ್ಷವು ಸದ್ದತ್ತಿಯಲ್ಲಿದ್ದ ಪತ್ನಿಯು ಮೃತಳಾದಲ್ಲಿ ಅಗ್ನಿಹೋತ್ರದ ಅಗ್ನಿಯಿಂದ ದಹಿಸತಕ್ಕದ್ದು, ಇತ್ಯಾದಿ ವಚನಗಳು ಪುನರ್ವಿವಾಹವನ್ನಪೇಕ್ಷಿಸಿದವರ ವಿಷಯವಾಗಿ ಹೇಳಿದ್ದು. ಪುನರ್ವಿವಾಹಕ್ಕೆ ಅಸಮರ್ಥನಾದರೆ ಕಡೆದ ಅಗ್ನಿಯಿಂದ ಅವಳನ್ನು ದಹಿಸಿ ಮೊದಲಿನ ಅಗ್ನಿಗಳಲ್ಲಿಯೇ ಅಗ್ನಿಹೋತ್ರಹೋಮ, ಇಷ್ಟಿ, ಚಾತುರ್ಮಾಸ್ಯ ಮೊದಲಾದವುಗಳನ್ನು ಮಾಡತಕ್ಕದ್ದು. ಸೋಮಯಾಗವನ್ನು ಮಾಡಬಾರದು. ಪೂರ್ವಾಗ್ನಿಯ ಒಂದು ಬಾಜುವಿನ ಅಗ್ನಿಯಿಂದ ದಹಿಸತಕ್ಕದ್ದೆಂದು ಯಜ್ಞಪಾರ್ಶ್ವ, ದೇವಯಾಜಿಕ ಮೊದಲಾದವರು ಹೇಳಿರುವರು. ಇನ್ನು “ಅಪಕೋಪಿ ಅಗ್ನಿಹೋತ್ರಮಾಹರೇತ್” ಹೀಗೆ ಶ್ರುತಿಸ್ಮೃತಿವಚನಗಳಿವೆಯಾದರೂ ಅವು ಪೂರ್ವಾಗ್ನಿಗಳಲ್ಲೇ ಅಗ್ನಿಹೋತ್ರವಾಗತಕ್ಕದ್ದೆಂಬ ಅಭಿಪ್ರಾಯವುಳ್ಳವುಗಳು. ಹೊರತು ಅಪಕನ ಆಧಾನಪರವಾಗಿ ಹೇಳಿದ್ದಲ್ಲ. ಅಪಕನಿಗೆ ಆಧಾನವನ್ನು ವಿಧಿಸುವ ಮೂಲ ವಚನಗಳಿರುವದಿಲ್ಲ. ವಿವಾಹಕ್ಕಶಕ್ತನಾದವನು “ಆತ್ಮಾರ್ಥಮಾಧೇಯಂ” ಎಂದು ಆಪಸ್ತಂಬ ಸೂತ್ರದಲ್ಲಿ ಹೇಳಿದ್ದರೂ ಪುನರ್ವಿವಾಹದ ಅಸಾಮರ್ಥ್ಯದಲ್ಲಿ ಪೂರ್ವಕೃತವಾದ ಅಾಧೇಯವನ್ನು ಆತ್ಮಾರ್ಥವಾಗಿಯೇ ಸ್ಥಾಪಿಸಿಕೊಳ್ಳತಕ್ಕದೇ ಹೊರತು ಪತ್ನಿಗೆ ಕೊಡುವ ಸಲುವಾಗಿ ಹೇಳಿದ್ದಲ್ಲ. ಬ್ರಾಹ್ಮಣಭಾಷ್ಯ ಅಪರಾರ್ಕ, ಅಶಾರ್ಕ, ರಾಮಾಂಡಾರ ಮೊದಲಾದ ಗ್ರಂಥಗಳ ಅಭಿಪ್ರಾಯವಾದರೂ ಹೀಗೆಯೇ ಇದೆ. ಅಪತ್ನಿಕನಿಗೆ ಆಧಾನವನ್ನು ಹೇಳುವವರ ಅಭಿಪ್ರಾಯವು ನಮಗೆ ಅರ್ಥವಾಗುವದಿಲ್ಲವೆಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. ಈ ಸಿಂಧುಕಾರರ ಮತವೇ ಯುಕ್ತವೆಂದು ನನಗೆ ತೋರುತ್ತದೆ. ಯಾಕರ ಆಚಾರವು ಒಳಗಿಂದೊಳಗೇ ವಿವಾಹವಾಗುವ ಇಚ್ಛೆಯ ಮೂಲಕವಾದದ್ದು. ಹೊರತು ಪ್ರಾಮಾಣಿಕವಾದದ್ದಲ್ಲ. ಪುನರ್ವಿವಾಹದ ಆಶೆಯಿಂದ ಸರ್ವವನ್ನೂ ಅಗ್ನಿಯಲ್ಲರ್ಪಿಸಿದ ನಂತರ ಮುಂದೆ ವಿವಾಹ ಅಸಂಭವವಾದಲ್ಲಿ ಸಿಂಧುಮತದಂತೆ ಆಧಾನದ ಅಭಾವವಾದ ಕಾರಣ ಮಂಥನಾಗ್ನಿಗೇ ಶರಣುಹೋಗಬೇಕಾಗುವದು. ಕೆಲವರ ಮತದಲ್ಲಿ ಪುನರಾಧಾನ ಹೇಳಿದೆ. ನಿರ್ಮಥ್ಯಾದಿಗಳಿಂದ ಮೊದಲು ಮೃತಳಾದವಳ ದಹನಮಾಡುವ ಪಕ್ಷದಲ್ಲಿ ಪೂರ್ವಾಗ್ನಿಗಳ ಉತ್ಸರ್ಗೆಷ್ಟಿಯಿಂದ ತ್ಯಾಗಮಾಡಿ ಪುನರಾಧಾನವನ್ನು ಮಾಡಿ ಅಗ್ನಿಹೋತ್ರವನ್ನು ಮಾಡತಕ್ಕದ್ದೆಂದು ಕಲವರು ಹೇಳುವರು. ಹೀಗೆಯ ಸ್ಮಾರ್ತಾಗ್ನಿಯಾದವನಿಗೆ ಪೂರ್ವದಲ್ಲಿ ಪಮರಣವಾದಲ್ಲಿಯೂ ಗೃಹ್ಯಾಗ್ನಿಯ ಏಕದೇಶದಿಂದ ಅವಳನ್ನು ದಹಿಸತಕ್ಕದ್ದು. ಅವಶಿಷ್ಟವಾದ ಅಗ್ನಿಯಲ್ಲಿ ನಿತ್ಯಹೋಮ, ಸ್ವಾಲೀಪಾಕ, ಅಗ್ರಯಣ ಇವುಗಳನ್ನು ಮಾಡತಕ್ಕದ್ದು. ಈ ಎಲ್ಲ 35

ಪರಿಚ್ಛೇದ ೩ ಉತ್ತರಾರ್ಧ ಶೌತ-ಸ್ಮಾರ್ತಗಳಲ್ಲಿ ಕುಶಪವಿಧಾನದಿಂದಲೇ (ಪತ್ನಿಗೆ ಬದಲಿಗೆ ದರ್ಭಕೂರ್ಚ) ಆಧಾನ ಮೊದಲಾದವುಗಳಲ್ಲಿ ಅಧಿಕಾರವುಂಟಾಗುವದು. ಅನೇಕ ಪತ್ನಿಯರಿರುವವನಿಗೆ ಶ್ರೇಷ್ಠ ಪತ್ನಿಯು ಜೀವಿಸಿರುತ್ತಿದ್ದು ಕನಿಷ್ಠ ಪತ್ನಿಯು ಮರಣವನ್ನು ಹೊಂದಿದರೆ ಕಡೆದ ಅಗ್ನಿ ಮೊದಲಾದವುಗಳಿಂದ ಅವಳನ್ನು ದಹನಮಾಡತಕ್ಕದ್ದು. ಹೊರತು ಶೌತಸ್ಮಾರ್ತ ಅಗ್ನಿಗಳಿಂದಲ್ಲ. ಕೆಲವರು ಮೊದಲು ಸರ್ವಾಗ್ನಿಗಳಿಂದ ಕನಿಷ್ಠಳನ್ನು ದಹಿಸಿ ಜೇಷ್ಠಳಿಂದ ಕೂಡಿ ಪುನರಾಧಾನವನ್ನು ಮಾಡತಕ್ಕದ್ದೆನ್ನುವರು. ಅದು ಅಗ್ನಿದ್ವಯಸಂಸರ್ಗವಿಷಯವಾಗಿ ಹೇಳಿದ್ದು, ಅಥವಾ ಬೇರೆ ವಿಷಯವಾಗಿ ಹೇಳಿದ್ದೆಂದು ತಿಳಿಯಬೇಕು. ದಾಹಕಾಲದಲ್ಲಿ ಅಂದರೆ ಯಜಮಾನನ್ನು ಚಿತೆಯಲ್ಲಿಟ್ಟು ಪಾತ್ರಗಳನ್ನು ಅದರಲ್ಲಿ ಹಾಕಿದ ನಂತರ ವೃಷ್ಣಾದಿಗಳಿಂದ ಅಗ್ನಿಯು ನಂದಿ ಹೋದರೆ ಪುನಃ ಅರ್ಧದಗ್ಧಗಳಾದ ಕಾವ್ಯಗಳನ್ನು ಕಡೆದು ಆ ಅಗ್ನಿಯಿಂದ ಆತನ ದಹನಮಾಡತಕ್ಕದ್ದು. ಸ್ಮಶಾನಕ್ಕೆ ಶವ ಒಯ್ಯುವದು ಬ್ರಾಹ್ಮಣನ ಶವವನ್ನು ನಗರದ ಪಶ್ಚಿಮ ದ್ವಾರದಿಂದ, ಶೂದ್ರನನ್ನು ದಕ್ಷಿಣದ್ವಾರದಿಂದ ಹೊರಹಾಕಿ ಸಮಾನಜಾತಿಯವರು ಸ್ಮಶಾನಕ್ಕೆ ಒಯ್ಯುವದು. ಶವದ ಮುಖವು ಮುಚ್ಚಿರಬೇಕು. ಒಯ್ಯುವಾಗ ಪೂರ್ವಕ್ಕೆ ಶಿರಸ್ಸಾಗುವಂತಿರಬೇಕು. ಶವದ ಮುಂಗಡೆಯಲ್ಲಿ ಪೂರ್ವೋಕ್ತವಾದ ಅಗ್ನಿಯಿರತಕ್ಕದ್ದು, ಮತ್ತು ಅದನ್ನು ಬೇರೆಯವರು ಹಿಡಿದುಕೊಳ್ಳುವದು. ಪ್ರೇತ ಅಗ್ನಿಗಳ ಮಧ್ಯದಲ್ಲಿ ಯಾರೂ ಇರಬಾರದು. ಎಲ್ಲ ದಾಯಾದಿಗಳೂ ಉಪವೀತವನ್ನು ಮಾಲಿಕೆಮಾಡಿಕೊಂಡು, ತಲೆಗೂದಲನ್ನು ಬಿಚ್ಚಿ ಹಿರಿಯರನ್ನು ಮುಂದೆಮಾಡಿಕೊಂಡು ಶವವನ್ನನುಸರಿಸಿ ಹೋಗತಕ್ಕದ್ದು. ಪ್ರೇತವನ್ನು ಬೆತ್ತಲೆಯಾಗಿ ದಹನ ಮಾಡಬಾರದು. ಶವದ ವಸ್ತ್ರವನ್ನು ಸ್ಮಶಾನವಾಸಿಗಳಿಗೆ ಕೊಡತಕ್ಕದ್ದು. ಪ್ರೇತನಿಗೆ ಕೇಶ, ನಖ ಮೊದಲಾದವುಗಳನ್ನು ವಪನಮಾಡಿಸಿ, ಸ್ನಾನಮಾಡಿಸಿ ಗಂಧಪುಷ್ಪಾದಿಗಳಿಂದಲಂಕರಿಸಿ ದಹನಮಾಡತಕ್ಕದ್ದು, ಹಗಲಿನಲ್ಲಿ ಮೃತನಾದರೆ ಹಗಲಿನಲ್ಲಿಯೇ ದಹನಮಾಡಬೇಕು. ರಾತ್ರಿ ಮೃತನಾದರೆ ರಾತ್ರಿಯಲ್ಲೇ ದಹನಮಾಡತಕ್ಕದ್ದು. ಇಲ್ಲವಾದರೆ ಅದು ಪರ್ಯುಷಿತ (ದೂಷಿತ) ವಂದಾಗುವದು. ಹೀಗೆ ಪರ್ಯುಷಿತವಾದ ಶವವನ್ನು ಪಂಚಗವ್ಯದಿಂದ ಸ್ನಾನಮಾಡಿಸಿ ಮೂರು ಪ್ರಜಾಪತ್ಯಗಳನ್ನು ಮಾಡಿ ದಹಿಸತಕ್ಕದ್ದು. ಮುಖದಲ್ಲಿರುವ ಏಳು ಛಿದ್ರಗಳು ಅಂದರೆ ಎರಡು ಕಿವಿ, ಎರಡು ಕಣ್ಣು, ಎರಡು ಮೂಗಿನ ರಂಧ್ರ, ಬಾಯಿ ಇವುಗಳನ್ನು ಬಂಗಾರದ ಚೂರುಗಳಿಂದ ಮುಚ್ಚತಕ್ಕದ್ದು. ಈ ಕ್ರಿಯೆಯಲ್ಲಿಯ ಪಾತ್ರನ್ಯಾಸ, ಮಂತ್ರವತ್ತಾದ ದಾಹಾದಿವಿಧಿ ಇವುಗಳನ್ನು ತಮ್ಮ-ತಮ್ಮ ಸೂತ್ರಾನುಸಾರಿಯಾದ ಶೌತ ಹಾಗೂ ಸ್ಮಾರ್ತ ಅಂತ್ಯೇಷ್ಟಿ ಪ್ರಯೋಗಗಳಿಂದ ತಿಳಿಯತಕ್ಕದ್ದು. ದಹನವಾದ ನಂತರ ಘಟಸ್ಫೋಟ (ಕೊಡವನ್ನೊಡೆಯುವರು) ಮೊದಲಾದವುಗಳನ್ನು ಮಾಡತಕ್ಕದ್ದು. ಅದನ್ನು ಕಲ್ಲಿನಿಂದ ಒಡೆಯುವಾಗ ಹೆಚ್ಚು ಕಡಿಮೆಯಾದರೂ ಪುನರಾವೃತ್ತಿ ಮಾಡಬಾರದು. ಆಮೇಲೆ ಸರ್ವರೂ ಚಿತೆಯನ್ನು ಅಪ್ರದಕ್ಷಿಣವಾಗಿ ಸುತ್ತಿ ಸಬೈಲಸ್ನಾನ ಮಾಡಿ ಆಚಮನ ಮಾಡತಕ್ಕದ್ದು. ಸಪಿಂಡ, ಸಮಾನೋದಕ, ಸಗೋತ್ರದವರಿಗೂ ಮಾತಾಮಹೀ, ಮಾತಾಮಹ, ೫೧೪ ಧರ್ಮಸಿಂಧು ಆಚಾರ್ಯ ಇವರಿಗೂ, ಪುತ್ರಿ, ತಂಗಿ ಇವರಿಗೂ (ಮರಣದಲ್ಲಿ) ಅವಶ್ಯವಾಗಿ ತಿಲಾಂಜಲಿಯನ್ನು ಕೊಡತಕ್ಕದ್ದು. ಅದು ಹೇಗೆಂದರೆ ವೃದ್ಧರನ್ನು ಮುಂದುಮಾಡಿಕೊಂಡು ದಕ್ಷಿಣಾಭಿಮುಖರಾಗಿ “ಅಮುಕಗೋತ್ರ, ನಾಮ, ಪ್ರೇತಸ್ಸತು"ಈ ಮಂತ್ರದಿಂದ ಅಂಜಲಿಯಿಂದ ಒಂದಾವರ್ತಿ ಕಲ್ಲಿನ ಮೇಲೆ ಚಲ್ಲುವದು. “ಆಪನಃ ಶೋಶುಚದಘಂ” ಎಂಬ ಮಂತ್ರದಿಂದ ಸ್ನಾನವನ್ನಷ್ಟೇ ಮಾಡುವದು. ಅದೇ ಮಂತ್ರದಿಂದ ಜಲಾಂಜಲಿ ಕೊಡತಕ್ಕದ್ದೆಂದು ಕೆಲವರನ್ನುವರು. ಸ್ತ್ರೀಯರಿಗೆ ಅಮಂತ್ರಕವಾಗಿ ಮಾಡುವದು. ಮಾತುಲ, ಪಿತೃಭಗಿನಿ, ಮಾತೃಭಗಿನಿ, ತಂಗಿಯ ಮಗ, ಮಾವ, ಮಿತ್ರ, ಯಾಜಕ ಮೊದಲಾದವರಿಗೆ ಉದಕದಾನವು ಕೃತಾಕೃತವು, ಮಾಡುವದಿದ್ದಲ್ಲಿ ಕಲ್ಲಿನ ಮೇಲೆ ಜಲಾಂಜಲಿ ಕೊಡತಕ್ಕದ್ದೆಂಬ ನಿಯಮವಿದೆ. ಪ್ರಾತ್ಯ, ಬ್ರಹ್ಮಚಾರಿ, ಪತಿತ, ವ್ರತಿ, ನಪುಂಸಕ, ಚೋರ ಇವರು ಜಲಾಂಜಲಿ ಕೊಡತಕ್ಕದ್ದಲ್ಲ. “ಪ್ರಾತ್ಯ"ರೆಂದರೆ ಉಕ್ತಕಾಲದಲ್ಲಿ ಉಪನಯನವಾಗದಿದ್ದವರು. “ವ್ರತಿ” ಎಂದರೆ ಪ್ರಾಯಶ್ಚಿತ್ತವನ್ನು ಪ್ರಾರಂಭಿಸಿರುವವನು. ಚೋರರೆಂದರೆ ಸುವರ್ಣ ಅಥವಾ ಅದಕ್ಕೆ ಸಮಾನವಾದ ವಸ್ತುಗಳನ್ನಪಹರಿಸುವವರು. ಇನ್ನು ಬ್ರಹ್ಮಚಾರಿಗಳು-ಮಾತೃ, ಪಿತೃ, ಪಿತಾಮಹ, ಮಾತಾಮಹ, ಗುರು, ಆಚಾರ್ಯ ಇತ್ಯಾದಿಗಳಿಗೆ ಉದಕದಾನ ಮಾಡಬಹುದು. ಪ್ರಾಯಶ್ಚಿತ್ತವನ್ನು ಪ್ರಾರಂಭಿಸಿದ್ದವರು ಮುಗಿದನಂತರ ಉದಕದಾನ ಮಾಡತಕ್ಕದ್ದು; ಮತ್ತು “ತ್ರಿರಾತ್ರ” ಆಶೌಚ ತೆಗೆದುಕೊಳ್ಳುವದು. ವಾತ್ಯಾದಿಗಳು ಪ್ರೇತಸ್ಪರ್ಶ, ವಹನ, ದಾಹ, ಪಿಂಡ ಇತ್ಯಾದಿಗಳನ್ನು ಮಾಡಬಾರದು. ಬೇರೆಯವರಿಲ್ಲದಿದ್ದರೆ ಬ್ರಹ್ಮಚಾರಿಗಳಾದರೂ ಪಿತ್ರಾದಿಗಳ ದಾಹ, ಆಶೌಚಾದಿಗಳನ್ನಾಚರಿಸತಕ್ಕದ್ದು. ಅಂತೂ ಕರ್ಮಲೋಪವಾಗಬಾರದು ಎಂದು ಹೇಳಿದೆ. ಉದಕದಾನವನ್ನು ಏಕವಸ್ತ್ರ ಹಾಗೂ ಅಪಸವ್ಯದಿಂದ ಮಾಡತಕ್ಕದ್ದು. ಉದಕಾಂಜಲಿ ಕೊಟ್ಟಾದ ನಂತರ ಪುನಃ ಸ್ನಾನಮಾಡಿ ವಸ್ತ್ರಗಳನ್ನು ಹಿಂಡಿ, ಕುಲದಲ್ಲಿ ವೃದ್ಧರಾದವರು ಪುತ್ರಾದಿಗಳನ್ನು ಪೂರ್ವೆತಿಹಾಸಾದಿಗಳಿಂದ ಸಮಾಧಾನಪಡಿಸಿ, ಬ್ರಾಹ್ಮಣರ ಅನುಮತಿಯನ್ನು ಪಡೆದು, ಕನಿಷ್ಠನನ್ನು ಮುಂದೆ ಮಾಡಿಕೊಂಡು, ಮನೆಗೆ ಹೋಗಿ ಕಹಿಬೇವಿನ ಎಲೆಗಳನ್ನು ಮೆಲ್ಲಗೆ ತಿಂದು, ಆಚಮನಮಾಡಿ ಅಗ್ನಿ, ಉದಕ, ಗೋಮಯಾದಿಗಳನ್ನು ಸ್ಪರ್ಶಿಸಿ ಬಾಗಿಲಿನ ಬುಡದಲ್ಲಿ ಕಲ್ಲನ್ನಿಟ್ಟು ಅದರ ಮೇಲೆ ಕಾಲನ್ನಿರಿಸಿ ಮನೆಯನ್ನು ಪ್ರವೇಶಿಸುವದು. ಕಹಿಬೇವಿನ ಎಲೆಯನ್ನು ತಿನ್ನುವದು ವಿಕಲ್ಪವು. ದಹನದ ಇಡೀದಿನ ಉಪವಾಸವಿರತಕ್ಕದ್ದು. ಅಸಮರ್ಥನಾದರೆ ಆಯಾಚಿತ ಅನ್ನ ಅಥವಾ ಹವಿಷ್ಯಾನ್ನದಿಂದ ಒಂದೇ ಭೋಜನ ಮಾಡತಕ್ಕದ್ದು. ಆಶೌಚದಲ್ಲಿ ಭೋಜನಾದಿ ನಿಯಮಗಳು ಆಶೌಚ ಮಧ್ಯದಲ್ಲಿ ಉದ್ದು, ಮಾಂಸ, ಮೋದಕ, ಮಧುರವಸ್ತು, ಲವಣ, ಹಾಲು, ಅಭ್ಯಂಗ, ತಾಂಬೂಲ, ಕಾರ ಇವು ವರ್ಜಗಳು, ಕಾರಗಳೆಂದರೆ ಎಳ್ಳು, ಪಚ್ಚೆಸರು ಇವುಗಳನ್ನು ಬಿಟ್ಟು ಶಿಂಬಧಾನ್ಯ, ಸಸ್ಯಗಳಲ್ಲಿ ಗೋಧಿ, ಹಾರಕ ಧಾನ್ಯ, ಕುತ್ತುಂಬರಿ, ಜೋಳ, ಶಮೀಧಾನ್ಯ (ಉದ್ದು, ಪಟ್ಟಿಸರು, ರಾಜಮಾಷ, ಹುರಳಿ, ಕಡಲೆ, ಯಳ್ಳು, ವಾಟಾಣಿ, ತೊಗರಿ ಈ ಎಂಟು ಧಾನ್ಯಗಳಿಗೆ ಶಮೀಧಾನ್ಯವನ್ನು ವರು) ಹುರಿದಧಾನ್ಯ, ಪಣ್ಯ, ಮೂಲಕ ಇವು ಕಾರಗಣಗಳಲ್ಲಿ ಬರುವವು ಕೆಲವರು-ಕಾರಗಳಲ್ಲಿ ಸೈಂಧಲವಣವು ಆಗಬಹುದನ್ನುವರು. ದರ್ಪಣ, ಸ್ತ್ರೀಸಂಗ ಪಗಡೆ ಆಟ ಮೊದಲಾದವು ನಗೆ ಚೇಷ್ಟೆ, ಅಳುವದು, ಎತ್ತರವಾದ ಆಸನದಲ್ಲಿ ಕೂಡುವದು ಪರಿಚ್ಛೇದ ೩ ಉತ್ತರಾರ್ಧ Ж ಇವುಗಳನ್ನು ಅಗತ್ಯವಾಗಿ ಬಿಡತಕ್ಕದ್ದು. ಬಾಲ, ವೃದ್ಧ, ರೋಗಿಗಳ ಹೊರತಾಗಿ ಹುಲ್ಲು ಚಾಪೆಯಿಂದ ಹಾಸಿದ ಭೂಮಿಯಲ್ಲಿ ವೃಥಕ್ಕಾಗಿ ಶಯನಮಾಡತಕ್ಕದ್ದು, ಕಂಬಳಿ ಮೊದಲಾದವುಗಳಿಂದ ಹಾಸಿದ ಭೂಮಿಯಲ್ಲಿ ಮಲಗಬಾರದು. ಸ್ನಾನಮಾಡಿ ಮೈ ಒರಿಸಿಕೊಳ್ಳಬಾರದು. ಅಸ್ಥಿಸಂಚಯನವಾದ ಮೇಲೆ ಪತ್ನಿ, ಪುತ್ರ ಹೊರತಾದವರಿಗೆ ಹಾಸಿಗೆ, ಆಸನ ಮೊದಲಾದ ಸೌಕರ್ಯಗಳಡ್ಡಿಯಿಲ್ಲ. ಸ್ತ್ರೀ ಸಂಗ ಮಾತ್ರ ವರ್ಜವು, ಅಸ್ಥಿ ಸಂಚಯನ ಇದನ್ನು ಸಮಂತ್ರಕ ದಾಹಮಾಡಿದ ದಿನದಿಂದ-ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಸಪ್ತಮ ಅಥವಾ ನವಮ ದಿನಗಳಲ್ಲಿ ಗೋತ್ರದವರಿಂದ ಕೂಡಿ ತಮ್ಮ ತಮ್ಮ ಸೂತ್ರೋಕ್ತಪ್ರಕಾರ ಮಾಡತಕ್ಕದ್ದು. ಅದರಲ್ಲಿ ದ್ವಿಪಾದ, ತ್ರಿಪಾದ ನಕ್ಷತ್ರ ಹಾಗೂ ಕರ್ತೃವಿನ ಜನ್ಮನಕ್ಷತ್ರಗಳನ್ನು ಬಿಟ್ಟು ಸಾಧ್ಯವಾದಲ್ಲಿ ರವಿ, ಕುಜ, ಶನಿವಾರಗಳನ್ನೂ ಬಿಡತಕ್ಕದ್ದು. ಪಾಲಾಶದಾಹ, ಅಸ್ಥಿದಾಹಗಳಲ್ಲಿ ಆ ಕೂಡಲೇ ಸಂಚಯನವಾಗತಕ್ಕದ್ದು. ಅಸ್ಥಿಗಳನ್ನು ಗಂಗಾಜಲದಲ್ಲಿ ಅಥವಾ ಬೇರೆ ತೀರ್ಥಗಳಲ್ಲಿ ಚಲ್ಲತಕ್ಕದ್ದು, ಆ ವಿಧಿಯನ್ನು ಮುಂದೆ ಹೇಳಲಾಗುವದು. ಅವುಗಳನ್ನು ಅರಣ್ಯದ ಮರದ ಬುಡದಲ್ಲಾಗಲೀ ಹುಗಿಯಬಹುದು. ಬೇರೆ ಕುಲದವನ ಅಸ್ಥಿಯನ್ನು ಒಯ್ದಲ್ಲಿ ಚಾಂದ್ರಾಯಣವನ್ನಾಚರಿಸತಕ್ಕದ್ದು. ದಯೆಯಿಂದ ಬೇರೆಯವನ ಅಸ್ಥಿಯನ್ನು ಒಯ್ದರೆ ಮಹಾಪುಣ್ಯವು ಲಭಿಸುವದು. ಅಸ್ತಿಗಳಿಗೆ ನಾಯಿ, ಹಂದಿ, ಶೂದ್ರಾದಿಗಳ ಸ್ಪರ್ಶವಾದಲ್ಲಿ ಪಂಚಗವ್ಯ, ಶಾಲಿಗ್ರಾಮ, ತುಳಸೀ ಇವುಗಳ ತೀರ್ಥದಿಂದ ಪ್ರೋಕ್ಷಿಸುವದು. ಆಶೌಚಮಧ್ಯದಲ್ಲಿ ತನ್ನ ಗೋತ್ರವದವರಿಂದ ಕೂಡಿ ಭೋಜನ ಮಾಡತಕ್ಕದ್ದಾದರೂ ಹಗಲುಮಾತ್ರ ಭೋಜನವನ್ನು ಮಣ್ಣಿನಪಾತ್ರ ಅಥವಾ ಪತ್ರಾವಳಿಯಲ್ಲಿ ಅಥವಾ ಎಲೆಗಳಲ್ಲಿ ಮಾಡಬಹುದು. ಲೋಹಾದಿಗಳಿಂದ ಮಾಡಿದ ತಟ್ಟೆಯಲ್ಲಿ ಉಣ್ಣಬಾರದು. ದಶಾಹ ಕೃತ್ಯ ದಾಹದಿನದಿಂದಾರಂಭಿಸಿ ದಶದಿನದ ಮಧ್ಯದಲ್ಲಿ ದರ್ಭೆಯಿಂದ ಹಾಸಿದ ಭೂಮಿಯಲ್ಲಿ ಹತ್ತು ಪಿಂಡಗಳನ್ನು ಅಮಂತ್ರಕವಾಗಿ ಕೊಡತಕ್ಕದ್ದು, ಕ್ಷತ್ರಿಯಾದಿಗಳಿಗೆ ಒಂಭತ್ತು ಪಿಂಡಗಳನ್ನು ಒಂಭತ್ತು ದಿನಗಳೊಳಗೆ ಕೊಡತಕ್ಕದ್ದು, ಹತ್ತನೇ ಪಿಂಡವನ್ನು ಆಶೌಚಾಂತದಲ್ಲಿ ಕೊಡತಕ್ಕದ್ದು, ಮೊದಲನೇ ದಿನ ಉಪಯೋಗಿಸಿದ ಪ್ರದೇಶದಲ್ಲಿಯೇ ಹತ್ತು ದಿನ ಪರ್ಯಂತದ ಕರ್ಮವನ್ನು ಮಾಡತಕ್ಕದ್ದು. ಕರ್ತನೂ ಸಹ ಆತನೇ. ಅಕ್ಕಿ ಮೊದಲಾದ ದ್ರವ್ಯ, ಉತ್ತರೀಯ, ಶಿಲಾ, ಪಾಕಪಾತ್ರಗಳಾದರೂ ಅವೇ ಇರತಕ್ಕದ್ದು. ಇವುಗಳಲ್ಲಿ ಯಾವದಾದರೊಂದು ವ್ಯತ್ಯಯವಾದರೆ ಅಷ್ಟನ್ನು ಮಾತ್ರ ಬೇರೆ ತೆಗೆದುಕೊಳ್ಳತಕ್ಕದ್ದು, ಶಿಲಾ ವ್ಯತ್ಯಾಸವಾದರೂ ಘಟಟಾದಿಗಳಲ್ಲಿ ಯಾವದನ್ನೂ ಬದಲಾಯಿಸತಕ್ಕದ್ದಲ್ಲವೆಂದು ಹೇಳಿರುವದು. ಯಾಕೆಂದರೆ ಅದು ಲೌಕಿಕಶಿಲೆಯಿರುವದು ಎಂದು ತಿಳಿಯತಕ್ಕದ್ದು. ಆದುದರಿಂದ ಪಿಂಡದಾನ, ತಿಲಾಂಜಲಿ ಮೊದಲಾದವುಗಳಿಗೆ ಆವೃತ್ತಿಯು, ಹೊರತು ದಹನಕ್ಕೆ ಆವೃತ್ತಿಯಿಲ್ಲ. (ಎರಡಾವರ್ತಿ ಮಾಡುವದಿರುವದಿಲ್ಲ) ಕೆಲವರು ಆಚಾರ್ಯನ ವ್ಯತ್ಯಾಸವಾದರೂ ಆವೃತ್ತಿಯನ್ನು ಹೇಳುವರು. ಪುತ್ರಾದಿ ಮುಖ್ಯಕರ್ತನ ಅಭಾವದಲ್ಲಿ ಪಿಂಡದಾನಾದಿ ಕ್ರಿಯೆಯನ್ನಾರಂಭಿಸಿರುವ ೫೧೬ ಧರ್ಮಸಿಂಧು ಅನ್ನಕರ್ತನೇ ದಶಾಹ ಪರ್ಯಂತವೂ ಕರ್ಮವನ್ನಾಚರಿಸಬೇಕು. ಆ ಮಧ್ಯದಲ್ಲಿ ಮುಖ್ಯಕರ್ತನು ಬಂದರೂ ಆತನಿಗೆ ಅಧಿಕಾರವಿಲ್ಲ. ಏಕಾದಶಾಹಾದಿಗಳನ್ನು ಮುಖ್ಯಾಧಿಕಾರಿಯಾದವನೇ ಮಾಡಬೇಕು. ಬೇರೆ ಅಮುಖ್ಯ ಕರ್ತನಿಂದ ಸಮಂತ್ರಕ ದಹನಮಾತ್ರವಾಗಿದ್ದರೆ, ಆ ಸಮಯ ಮುಖ್ಯ ಕರ್ತೃವು ಬಂದರೆ ಮುಖ್ಯಕರ್ತನಿಗೇ ಮುಂದಿನ ಪಿಂಡದಾನಾದಿ ದಶದಿನ ಕೃತ್ಯಗಳಲ್ಲಿ ಅಧಿಕಾರವು ಎಂದು ಮಿತಾಕ್ಷರಾದಿಗಳ ಮತವು. ಇನ್ನು ಕೆಲವರು ಪ್ರಥಮ ದಿನ ಪ್ರಾರಂಭಿಸಿದ ಕರ್ತನು ಸಗೋತ್ರನಾಗಲೀ ಅಸಗೋತ್ರನಾಗಲೀ ಆತನೇ ದಶಾಹಪರ್ಯಂತ ಪೂರ್ಣಸಂಸ್ಕಾರವನ್ನು ಮಾಡತಕ್ಕದ್ದನ್ನುವರು. ಪತ್ನಿಯು ಕರ್ತಳಾಗಿದ್ದು ಮಧ್ಯದಲ್ಲಿ ರಜಸ್ವಲೆಯಾದರೆ ಅವಳು ಶುದ್ಧಿಯ ನಂತರ ಮಾಡತಕ್ಕದ್ದು. ಕ್ರಿಯಾಕರ್ತನು ಅಸ್ವಸ್ಥನಾದರೆ ಬೇರೆಯವನು ಎಲ್ಲ ಕಾರ್ಯಗಳನ್ನು ಪುನಃ ಮಾಡತಕ್ಕದ್ದು. ಪಿಂಡದ ವಸ್ತುಗಳಲ್ಲಿ ಅಕ್ಕಿಯು ಮುಖ್ಯವು ಅದರ ಅಭಾವದಲ್ಲಿ ಫಲ, ಮೂಲ, ಕಾಯಿಪಲ್ಲೆ ಅಥವಾ ತಿಲದಿಂದ ಮಿಶ್ರಿತವಾದ ಹಿಟ್ಟು ಇವುಗಳಡ್ಡಿಯಿಲ್ಲ. ಪ್ರೇತಶಾಸ್ತ್ರಗಳಲ್ಲಿ ಪಿತೃಶಬ್ದ, ಸ್ವಧಾಶಬ್ದ, ಅನುಶಬ್ದಗಳನ್ನೂ ಪುಷ್ಪ, ಧೂಪ, ದೀಪ ದಾನಾದಿಗಳಲ್ಲಿ ಮಂತ್ರಗಳನ್ನೂ ಹೇಳತಕ್ಕದ್ದಿಲ್ಲ. ಮೂರು ದಿನ ಆಶೌಚದ ಶಾಖಾಸಂಸ್ಕಾರ ಮೊದಲಾದವುಗಳಲ್ಲಿ ಮೊದಲನೆ ದಿನ ಒಂದು ಪಿಂಡ, ಎರಡನೇ ದಿನ ನಾಲ್ಕು ಪಿಂಡ, ಮೂರನೇ ದಿನ ಐದು ಪಿಂಡ ಈ ಕ್ರಮದಲ್ಲಿ ಕೊಡತಕ್ಕದ್ದು. ಪುತ್ರನು ಶಾಖಾಸಂಸ್ಕಾರ ಮಾಡಿದಲ್ಲಿ ಅವನಿಗೆ ದಶಾಹ ಆಶೌಚವಿರುವದರಿಂದ ಆತನು ಮೂರು ದಿನಗಳ ಮಧ್ಯದಲ್ಲಿ ಪಿಂಡಸಮಾಪ್ತಿಯನ್ನು ಮಾಡತಕ್ಕದ್ದಲ್ಲ. ಪ್ರೇತನಿಗೆ ಮೊದಲನೇ ಪಿಂಡದಿಂದ ಶಿರಸ್ಸುಂಟಾಗುವದು. ಎರಡನೇ ಪಿಂಡದಿಂದ ಕಿವಿ, ನೇತ್ರ, ಮೂಗುಗಳೂ, ಮೂರನೇ ಪಿಂಡದಿಂದ ಕಂಠ, ಹೆಗಲು, ಭುಜ, ಎದೆಗಳೂ ನಾಲ್ಕನೆಯದರಿಂದ ಹೊಕ್ಕಳು, ಲಿಂಗ, ಮಲವಿಸರ್ಜನ ಸ್ಥಾನಗಳೂ, ಐದನೆಯದರಿಂದ ಮೊಣಕಾಲು, ಕಾಲುಗಂಟು, ಪಾದಗಳೂ ಆರನೆಯದರಿಂದ ಮರ್ಮಸ್ಥಾನಗಳೂ;ಏಳನೆಯದರಿಂದ ನಾಡಿಗಳೂ,ಎಂಟನೆಯದರಿಂದ ದಂತ, ರೋಮಗಳೂ;ಒಂಭತ್ತರಿಂದ ವೀರ್ಯವೂ, ಹತ್ತನೆಯದರಿಂದ ಪೂರ್ಣತೆಯಾಗಿ, ಹಸಿವೆಯಡಗಿ ತೃಪ್ತಿಯಾಗುವಿಕೆಯೂ ಉಂಟಾಗುವದು. ದಶಾಹಪರ್ಯಂತ ಜಲವನ್ನು ಅಂತರಿಕ್ಷದಲ್ಲಿಡಬೇಕು ಮತ್ತು ಮಣ್ಣಿನ ಮಡಕೆಯಲ್ಲಿ ಹಾಲನ್ನೂ ಇಡತಕ್ಕದ್ದು. “ಪ್ರೇತ ಅತ್ರಾಹಿ” ಎಂದು ನೀರನ್ನೂ “ಇದಂಪಿಬ” ಎಂದು ಹಾಲನ್ನೂ ಇಡತಕ್ಕದ್ದು, ಈ ವಿಧಾನವು ಕೃತಾಕೃತವು. ಪ್ರೇತನ ಉಪಯುಕ್ತತೆಗಾಗಿ ಹತ್ತು ರಾತ್ರಿವರ್ಯಂತ ತೈಲದಿಂದ ದೀಪವನ್ನೂ ಮಣ್ಣಿನಪಾತ್ರೆಯಲ್ಲಿ ಜಲವನ್ನೂ ಇಡುವಂತೆ ಮಾಡತಕ್ಕದ್ದು. ಭೋಜನ ಕಾಲದಲ್ಲಿ ಸಂಬೋಧನ ವಿಭಕ್ತಿಯಿಂದ ನಾಮಗೋತ್ರಗಳನ್ನುಚ್ಚರಿಸಿ ಊಟದ ಅನ್ನದೊಳಗಿಂದಲೇ ಒಂದು ಹಿಡಿ ಅನ್ನವನ್ನು ನೆಲದ ಮೇಲೆ ಪಿತೃಯಜ್ಞದ ಹಾಗೆ ಇಡತಕ್ಕದ್ದು. ಭೂಲೋಕದಿಂದ ಪ್ರೇತಲೋಕಕ್ಕೆ ಹೋಗುವದಕ್ಕಾಗಿ ಶ್ರಾದ್ಧ ಮಾಡಿದಲ್ಲಿ ಅದು ಮೃತನಾದವನಿಗೆ ಪರಲೋಕ ಮಾರ್ಗದಲ್ಲಿ “ಬುತ್ತಿಯಾಗುವದು. ದಶಾಹ ಮಧ್ಯದಲ್ಲಿ ಅಮಾವಾಸೆ ಬಂದರೆ ಪಿಂಡಾದಿಗಳ ಪ್ರಾರಂಭವಾಗಿದ್ದಾಗ ಮಧ್ಯದಲ್ಲಿ ಅಮಾವಾಸೆಯು ಪ್ರಾಪ್ತವಾದರೆ, ಆಗ ತಂದೆ ತಾಯಿಗಳ ಹೊರತಾದವರ ಎಲ್ಲ ದಶಾಹ ಕೃತ್ಯಗಳನ್ನು ಆಕರ್ಷಿಸಿ ಅಮಾವಾಸೆಯಲ್ಲಿಯೇ ಪರಿಚ್ಛೇದ ೩ ಉತ್ತರಾರ್ಧ ೫೧೭ ಮುಗಿಸಬೇಕು. ಮಾತಾಪಿತೃಗಳ ವಿಷಯದಲ್ಲಿ ಮೂರುದಿನಗಳೊಳಗೆ ಅಮವಾಸೆ ಬಂದರೆ “ಅಪಕರ್ಷವಿಲ್ಲ. ಮೂರು ರಾತ್ರಿಯ ನಂತರ ಅಮಾವಾಸೆಯು ಬಂದರೆ ಮಾತಾ-ಪಿತೃಗಳ ವಿಷಯಕ್ಕಾದರೂ ಎಲ್ಲವನ್ನೂ ದರ್ಶದಲ್ಲಿಯೇ ಮುಗಿಸತಕ್ಕದ್ದೆಂದು ಕೆಲವರನ್ನುವರು. ಕೆಲವರು ಮೂರು ರಾತ್ರಿ ಕಳೆದಮೇಲಾದರೂ ದರ್ಶ ಪ್ರಾಪ್ತವಾದರೆ ಔರಸಪುತ್ರನು ತಂದೆ-ತಾಯಿಗಳ ತಂತ್ರಸಮಾಪ್ತಿಯನ್ನು ಮಾಡತಕ್ಕದ್ದಲ್ಲವೆನ್ನುವರು. ಈ ವಿಷಯದಲ್ಲಿ ದೇಶಾಚಾರವು ಪ್ರಮಾಣವು ಎಂದು ನಿರ್ಣಯಸಿಂಧು ಮೊದಲಾದವುಗಳ ಮತವು. ದೈವವಶಾತ್ ದರ್ಶದ ಒಳಗೆ ಪಿಂಡದಾನಾದಿ ತಂತ್ರವು ಪ್ರಾರಂಭವಾಗದಿದ್ದಲ್ಲಿ ಆಗ ಸಮಂತ್ರಕನಾದ ದಾಹ ಮಾತ್ರವಾಗಿದ್ದರೂ ಆಗ ದರ್ಶಪ್ರಾಪ್ತವಾದರೆ ತಂತ್ರಸಮಾಪ್ತಿ ಮಾಡಬೇಕೆಂಬ ನಿಯಮವಿಲ್ಲ ಎಂದು ತೋರುತ್ತದೆ. ಅಮಾವಾಸೆಯ ನಂತರವೇ ತಂತ್ರದ ಆರಂಭ ಸಮಾಪ್ತಿ ಸಂಭವವಾಗುವದರಿಂದ “ಎರಡು ಚಂದ್ರರುಳ್ಳಕಾಲದಲ್ಲಿ ತಂತ್ರಗಳನ್ನು ಮಾಡಿದರೆ ಪುನಃ ಆಶೌಚ ತೆಗೆದುಕೊಳ್ಳತಕ್ಕದ್ದು"ಎಂದು ಹೇಳಿದ ದೋಷ ಪ್ರಸಕ್ತಿಯುಂಟಾಗುವದಿಲ್ಲ. ಹೀಗೆ ಅಮಾವಾಸೆಯಲ್ಲಿ ಅಪಕರ್ಷಮಾಡಿ ತಂತ್ರಸಮಾಪ್ತಿಯಾದರೂ ಅಗ್ನಿ ಮತ್ತು ಪಿಂಡವನ್ನು ಕೊಟ್ಟವನಿಗೆ ದಶಾಹ ಆಶೌಚವಿದ್ದೇ ಇದೆ. ಪುತ್ರಾದಿ ಸಪಿಂಡರಿಗಂತೂ ಆತ್ಯಂತಿಕವಾಗಿಯೇ ಇದೆ. ಹತ್ತುದಿನ ಪ್ರೇತಪಿಂಡಗಳನ್ನು ಕೊಟ್ಟು ಸ್ನಾನ ಮಾಡದೆ ಊಟಮಾಡಿದಲ್ಲಿ ಸಪಿಂಡರಲ್ಲದವರಿಗೆ ಮೂರುರಾತ್ರಿ ಉಪವಾಸವಾಗತಕ್ಕದ್ದು. ಸಪಿಂಡಕನಿಗೆ ಒಂದು ದಿನ ಉಪವಾಸವು. ಬುದ್ಧಿಪೂರ್ವಕವಾಗಿ ಮಾಡಿದರೆ ಎರಡುಪಟ್ಟು ಮಾಡಬೇಕು. ಪ್ರೇತಕೃತ್ಯ ಪ್ರಾರಂಭವಾದಮೇಲೆ ಸಂಚಯನದ ಒಳಗೆ ಸ್ತ್ರೀಸಂಗಮಾಡಿದಲ್ಲಿ ಚಾಂದ್ರಾಯಣ ವ್ರತಾಚರಣೆಮಾಡಬೇಕು. ಅದಕ್ಕೂ ಮೇಲಾದರೆ ಮೂರು ಕೃಚ್ಛವು, ಅನ್ಯ ಆಶೌಚಿಗಳಿಗೆ ಸಂಚಯನದ ಒಳಗೆ ಮೂರುರಾತ್ರಿ, ನಂತರವಾದರೆ ಒಂದು ದಿನ ಉಪವಾಸವು ನವಶ್ರಾದ್ದ ಪ್ರಥಮ, ತೃತೀಯ, ಪಂಚಮ, ಸಪ್ತಮ, ನವಮ, ಏಕಾದಶ ಈ ದಿನಗಳಲ್ಲಿ ಮಾಡುವ ಶ್ರಾದ್ಧಕ್ಕೆ “ನವಶ್ರಾದ್ಧ"ವನ್ನುವರು. ಆಶ್ವಲಾಯನರು ನವಶ್ರಾದ್ಧವು’ಐದು’ಎನ್ನುವರು. ಆಪಸ್ತಂಬರು ‘ಆರು’ಎನ್ನುವರು. ಬೇರೆಯವರು ಇವರಡರಲ್ಲಿ ವಿಕಲ್ಪವೆನ್ನುವರು. ಪಂಚ"ನವಶ್ರಾದ್ಧ “ಪಕ್ಷದಂತೆ ಏಕಾದಶಾಹದಲ್ಲಿ ನವಶ್ರಾದ್ಧ ಮಾಡತಕ್ಕದ್ದಲ್ಲ. ಈ ಶ್ರಾದ್ಧಗಳಿಗೆ “ವಿಷಮಶ್ರಾದ್ಧ “ವೆಂದೂ ಹೆಸರು. ನವಶಾಸ್ತ್ರಗಳನ್ನು ದಶಾಹದ ಒಳಗೆ ಮಾಡತಕ್ಕದ್ದು. ನವಮಿಶ್ರಾದ್ಧವನ್ನು ವತ್ಸರದಲ್ಲಿ ಮಾಡತಕ್ಕದ್ದು ಎಂದು ಬೇರೆ ಕಡೆಯಲ್ಲಿ ಹೇಳಿದೆ. ನವಶ್ರಾದ್ಧವನ್ನು ಮಾಡದಿದ್ದರೆ ಪ್ರೇತತ್ವದಿಂದ ನಿವೃತ್ತಿಯಿಲ್ಲ. ನವಶ್ರಾದ್ಧ, ತ್ರಿಪಕ್ಷ ಶ್ರಾದ್ಧ, ಷಾಣ್ಮಾಸಿಕ, ಮಾಸಿಕ ಇವುಗಳನ್ನು ಮಾಡದಿದ್ದ ಪುತ್ರನ ಪಿತೃಗಳು ಅಧೋಗತಿಯನ್ನು ಹೊಂದುವರು. ನವಶ್ರಾದ್ಧವನ್ನು ಅರ್ಥ್ಯ, ಧೂಪ, ದೀಪ, ಗಂಧ, ಪುಷ್ಪ ಇವುಗಳಿಂದ ರಹಿತವಾಗಿ ಮಾಡತಕ್ಕದ್ದು; ಮತ್ತು ಅಮಂತ್ರಕವಾಗಿಯೂ “ಅವನೇಜನ"ರಹಿತವಾಗಿಯೂ ಮಾಡತಕ್ಕದ್ದು. ಪ್ರೇತಶ್ರಾದ್ಧದಲ್ಲಿ ಆಶೀರ್ವಾದ, ದ್ವಿಗುಣದರ್ಭ, ಜಯಾಶೀರ್ವಾದ, ಸ್ವಸ್ತಿವಾಚನ, ಪಿತೃಶಬ್ದ, ಸ್ವಸಂಬಂಧ, ಶರ್ಮಶಬ್ದ, ಪಾತ್ರಸ್ಪರ್ಶ, ಅವಗಾಹ, ಉಲ್ಕುಕ ಉಲ್ಲೇಖನ, ತೃಪ್ತಿ ಪ್ರಶ್ನೆ, ವಿಕಿರ, ಶೇಷಪ್ರಶ್ನೆ, ಪ್ರದಕ್ಷಿಣ, ವಿಸರ್ಜನೆ, ಸೀಮಾಂತಗಮನ ಹೀಗೆ ಹದಿನೆಂಟು ವಿಷಯಗಳನ್ನು ಬಿಡತಕ್ಕದ್ದು. ೫೧೮ ಧರ್ಮಸಿಂಧು “ತಿಲೋಸಿ” ಎಂಬ ಮಂತ್ರದಲ್ಲಿ “ಸ್ವಧಾನಮಃ” ಮತ್ತು “ಪಿತೃ” ಶಬ್ದಗಳನ್ನು ಹೇಳತಕ್ಕದ್ದಲ್ಲ. ಆದರೆ ಪಿತೃ ಶಬ್ದ ಸ್ಥಾನದಲ್ಲಿ “ಪ್ರೀತ"ಶಬ್ದವನ್ನು ಹೇಳಿ ಅಥವಾ ಅಮಂತ್ರಕವಾಗಿ ತಿಲಗಳನ್ನು ಹಾಕತಕ್ಕದ್ದು, ಅರ್ಥ್ಯವನ್ನು ಅಮಂತ್ರಕವಾಗಿ ಕೊಡತಕ್ಕದ್ದು. “ಅಮುಸ್ವಾಹಾ” ಹೀಗೆ ಪ್ರೇತಶಬ್ದದಿಂದ ಪಾಣಿಹೋಮ ಮಾಡತಕ್ಕದ್ದು. ಋಗ್ನದಿಗಳ ಸರ್ವಕೋದ್ದಿಷ್ಟಗಳಲ್ಲಿ ಅಗೌ ಕರಣವಿದ್ದೇ ಇದೆ. ಅನ್ಯಶಾಖೆಯವರಿಗೆ ಆ ನಿಯಮವಿಲ್ಲ. ನಾಮೋಚ್ಚಾರಣೆ ಮಾಡಿ ಒಂದು ಪಿಂಡವನ್ನು ಹಾಕತಕ್ಕದ್ದು. ನಿನಯನಮಂತ್ರದಲ್ಲಿ ಊಹೆಯಿಂದ ಮಂತ್ರೋಚ್ಚಾರಣ ಮಾಡುವದು. ಅನುಮಂತ್ರಣಾದಿಗಳನ್ನು ಅಮಂತ್ರಕವಾಗಿಯೇ ಮಾಡತಕ್ಕದ್ದು. ವಿಸರ್ಜನೆಗೆ “ಅಭಿರಮ್ಮತಾಂ” ಎಂದು ಹೇಳುವದು. ಹೀಗೆ ನವಶ್ರಾದ್ಧಗಳ ಹೊರತಾದ ಏಕೋದ್ದಿಷ್ಟಗಳಲ್ಲಿ ಕ್ರಮವು. ನವಶ್ರಾದ್ಧದಲ್ಲಿ ಎಲ್ಲವೂ ಮಂತ್ರರಹಿತಗಳೇ ಎಂದು “ನಾರಾಯಣವೃತ್ತಿ"ಯಲ್ಲಿ ಹೇಳಿದೆ. ಏಕೋದ್ದಿಷ್ಟದಲ್ಲಿ ಪಾತ್ರೆಯನ್ನು ಅಂಗಾತವಾಗಿಡತಕ್ಕದ್ದು. ಪಾರ್ವಣದಲ್ಲಿ ಬೋರಲಾಗಿ ಪಾತ್ರವನ್ನಿಟ್ಟು ಅದರ ಮೇಲೆ ದರ್ಭೆಯನ್ನಿಡಬೇಕು. ಸಪಿಂಡೀಕರಣಾಂತ ಪ್ರೇತಕಾರ್ಯಗಳನ್ನು ಲೌಕಿಕಾಗ್ನಿಯಲ್ಲಿ ಮಾಡಬೇಕೆಂದು “ಆಶ್ವಲಾಯನರ ಮತವು. ನವಶ್ರಾದ್ಧಗಳನ್ನು ಸಾಧ್ಯವಾದಲ್ಲಿ ಅನ್ನದಿಂದ ಮಾಡತಕ್ಕದ್ದು. ಇಲ್ಲವಾದರೆ ಆಮದಿಂದ ಮಾಡುವದು. ವಿಘ್ನವುಂಟಾಗಿ ನವಶ್ರಾದ್ಧ ಮತ್ತು ಮಾಸಿಕ ಶ್ರಾದ್ಧಗಳು ತಪ್ಪಿಹೋದರೆ ಅವುಗಳನ್ನು ಮುಂದಿನ ಶ್ರಾದದಿನದಲ್ಲಿ ತಂತ್ರದಿಂದ ಕೂಡಿ ಮಾಡುವದು. ಶವಕಾರ್ಯದಲ್ಲಿ ಆಶೌಚಪ್ರಾಪ್ತಿಯಾದರೆ ನವಶ್ರಾದ್ಧಗಳನ್ನು ಬಿಡತಕ್ಕದ್ದಲ್ಲ. ಸಹಗಮನದಲ್ಲಿ ನವಶಾಸ್ತ್ರಗಳನ್ನೂ, ಸಪಿಂಡೀಕರಣವನ್ನೂ ಪ್ರತ್ಯೇಕವಾಗಿ ಮಾಡತಕ್ಕದ್ದು, ವೃಷೋತ್ಸರ್ಗವು ಪ್ರತ್ಯೇಕವಿಲ್ಲ. ಅದರ ಸಲುವಾಗಿ ಒಂದು ಆಕಳನ್ನು ದಾನಮಾಡತಕ್ಕದ್ದು. ಶೂದ್ರನಿಗೆ ಎಲ್ಲವನ್ನೂ ಅಮಂತ್ರಕವಾಗಿ ಬ್ರಾಹ್ಮಣನಿಗೆ ಮಾಡಿದಂತೆಯೇ ನಾಮದಿಂದ ಮಾಡತಕ್ಕದ್ದೆಂದು “ಸ್ಮತ್ಯರ್ಥಸಾರ"ದಲ್ಲಿ ಹೇಳಿದ. ಮೃತರಾದವರು ಹೆಚ್ಚಿನ ವಯಸ್ಸಿನವರಾಗಿದ್ದಾಗ ಕನಿಷ್ಠರಾದ ಸಪಿಂಡರು ಹತ್ತನೇ ದಿನದಲ್ಲಿ ಮುಂಡನ ಮಾಡಿಕೊಳ್ಳಬೇಕೆಂದು ಕೆಲಗ್ರಂಥಕಾರರು ಹೇಳುವರು. ಮಾತಾಪಿತೃಗಳು ಹಾಗೂ ಆಚಾರ್ಯ ಇವರ ಮೃತಿಯಲ್ಲಿ ಹತ್ತನೇ ದಿನದ ಕ್ಷೌರವು ಅವಶ್ಯವಾದದ್ದು. ಪತಿಯು ಮೃತನಾದಾಗ ಪತ್ನಿಗೂ ಈ ನಿಯವುವು ನಿಶ್ಚಿತವಾದದ್ದು. ಎಲ್ಲ ಪುತ್ರರಿಗೂ, ದಾಹಕರ್ತೃವಿಗೂ ದಾಹಾಂಗಭೂತವಾದ ಪ್ರಥಮ ದಿನದ ಮುಂಡನವೂ, ದಶಮ ದಿನದ ಮುಂಡನವೂ ಅಗತ್ಯವಾದದ್ದು. ಈ ವಿಷಯದಲ್ಲಿ ದೇಶಾಚಾರವನ್ನನುಸರಿಸತಕ್ಕದ್ದು. ರಾತ್ರಿಯಲ್ಲಿ ಮೃತನಾದವನಿಗೆ ರಾತ್ರಿಯಲ್ಲಿ ದಹನವಾದರೆ ರಾತ್ರಿಗೆ ಕ್ಷೌರನಿಷೇಧವಿರುವದರಿಂದ ಕರ್ತೃಗಳು ಮಾರನೇದಿನ ಬೆಳಿಗ್ಗೆ ಕ್ಷೌರಮಾಡಿಕೊಳ್ಳುವದು. ನಂತರ ಹತ್ತನೇದಿನವೂ ಗೌರವಾಗತಕ್ಕದ್ದು, ಮತ್ತು ಮೊದಲಿನ ವಸ್ತ್ರಗಳನ್ನೆಲ್ಲ ಶುದ್ಧಮಾಡಿ ಗೃಹಶುದ್ಧಿಯನ್ನೂ ಮಾಡಿ ಬಿಳೇ ಸಾಸಿವೆಗಳನ್ನು ಮತ್ತು ಎಳ್ಳು ಹಿಂಡಿಯನ್ನೂ ತಲೆಯಲ್ಲಿಟ್ಟುಕೊಂಡು ಶಿರಃಸ್ನಾನ ಮಾಡಿ ಹೊಸವಸ್ತ್ರಗಳನ್ನು ಧರಿಸಿ ಮೊದಲು ಉಟ್ಟ ವಸ್ತ್ರ ಹಾಗೂ ಪ್ರೇತನ ವಸ್ತ್ರಗಳನ್ನು ಅಂತ್ಯಜರಿಗೂ, ಆಶ್ರಿತರಿಗೂ ಕೊಟ್ಟು ಸುವರ್ಣಮೊದಲಾದ ಮಂಗಲವಸ್ತುಗಳನ್ನು ಸ್ಪರ್ಶಮಾಡಿ ಮನೆಯನ್ನು ಪ್ರವೇಶಿಸುವದು.ಪರಿಚ್ಛೇದ ೩ ತ್ತರಾರ್ಧ ಅಸ್ತಿಯನ್ನು ಚಲ್ಲುವ ವಿಧಿ ಮೊದಲು ಸಂಚಯನ ದಿನದಲ್ಲಿ ಅಸ್ಥಿಸ್ಥಾಪನಪ್ರಕಾರವನ್ನು ಹೇಳಲಾಗುವದು. ಪ್ರೇತಸ್ಥಾನದಲ್ಲಿ ಬಲಿಯನ್ನು ಕೊಟ್ಟು ಮೌನಿಯಾಗಿ ಹಾಲಿನಿಂದ ತೊಳೆದು ಮುಖ್ಯ ಮುಖ್ಯಗಳಾದ ಪ್ರೇತನ ಅವಯವಗಳ ಅಸ್ತಿಗಳನ್ನು ಪಂಚಗವ್ಯದಿಂದ ತೊಳೆದು ಬಿಳೇ ಮಡಿವಸ್ತ್ರದಿಂದ ಸುತ್ತಿ ಮಣ್ಣಿನ ಕೊಡದಲ್ಲಿ ಹಾಕಿ (ಹೊಸಮಡಕೆ) ವಸ್ತ್ರದಿಂದ ಮುಚ್ಚಿ ಅರಣ್ಯದಲ್ಲಿ ಅಥವಾ ವೃಕ್ಷದ ಬುಡದಲ್ಲಿ ಶುದ್ಧಸ್ಥಾನದಲ್ಲಿ ಸ್ಥಾಪಿಸುವದು. ಉಳಿದ ಸೂಕ್ಷ್ಮ ಅಸ್ಥಿ ಮತ್ತು ಭಸ್ಮವನ್ನು ಜಲದಲ್ಲಿ ಚಲ್ಲತಕ್ಕದ್ದು. ಆಮೇಲೆ ಗೋಮಯದಿಂದ ಭೂಮಿಯನ್ನು ಸಾರಿಸಿ ಪುಷ್ಪ ಧೂಪ, ದೀಪ, ಬಲಿ ಮೊದಲಾದವುಗಳಿಂದ ಪೂಜಿಸತಕ್ಕದ್ದು. ನಂತರ ಆ ಸ್ಥಾನದಿಂದ ಮೆಲ್ಲಗೆ ಒಟ್ಟು ತೀರ್ಥದಲ್ಲಿಯಾಗಲೀ, ಗಂಗಾಜಲದಲ್ಲಾಗಲೀ ಹಾಕತಕ್ಕದ್ದು. ಪುತ್ರ, ದೌಹಿತ್ಯ, ಭಾತೃ ಇವರೊಳಗೆ ಯಾರಾದರೂ ಅಸ್ಥಿಹಾಕಲು ಯೋಗ್ಯರು. ಮಾತೃಕುಲ, ಪಿತೃಕುಲಗಳ ಹೊರತಾದವರ ಅಸ್ಥಿಯನ್ನು ಒಯ್ಯಬಾರದು. ಒಯ್ದರೆ ಚಾಂದ್ರಾಯಣ ಪ್ರಾಯಶ್ಚಿತ್ತವಾಗತಕ್ಕದ್ದು. ಯಾವನ ಅಸ್ತಿಯು ಗಂಗಾಜಲದಲ್ಲಿ ಬೀಳುವದೋ ಅವನು ಸನಾತನ ಬ್ರಹ್ಮಲೋಕವನ್ನು ಹೊಂದುವನು. ಅವನಿಗೆ ಪುನರಾವೃತ್ತಿಯಿಲ್ಲ. ಗುರುಶುಕ್ರಾಸ್ತ್ರ, ಮಲಮಾಸಗಳಲ್ಲಿ ಗಂಗೆಯಲ್ಲಿ ಆಸ್ತಿ ಚಲ್ಲಬಾರದು. ಹೀಗೆ “ಗೌತಮ"ನು ಹೇಳಿರುವನು. ಹತ್ತು ದಿನಗಳೊಳಗೆ ಅಸ್ಥಿ ಚಲ್ಲುವದಕ್ಕೆ ಅಸ್ತಾದಿ ದೋಷವಿಲ್ಲ. ಮರಣದಿಂದ ಹತ್ತು ದಿನಗಳೊಳಗೆ ಗಂಗಾನದಿಯಲ್ಲಿ ಅಜ್ಜಿಯು ಬಿದ್ದರೆ ಗಂಗೆಯಲ್ಲಿ ಮರಣವಾದಂತೆಯೇ. ಅಂಥ ಪುಣ್ಯವು ಲಭಿಸುವದು. ತೀರ್ಥದಲ್ಲಿ ಅಕ್ಷೇಪ ಅಸ್ತಿಗಳನ್ನು ಹುಗಿದ ಭೂಮಿಯನ್ನು ಸಲ ಸ್ನಾನಪೂರ್ವಕವಾಗಿ ಪ್ರತ್ಯೇಕವಾಗಿ ಗೋಮೂತ್ರಾದಿಗಳಿಂದ ಪ್ರೋಕ್ಷಿಸುವದು. ಗಾಯತ್ರಿಯಿಂದ ಗೋಮೂತ್ರ, “ಗಂಧದ್ವಾರಾಂ” ಎಂಬದರಿಂದ ಗೋಮಯ, ‘ಆಪ್ಯಾಯಸ್ವ’ ಇದರಿಂದ ಹಾಲು, ‘ದಧಿಕ್ರಾವ’ ಇದರಿಂದ ಮೊಸರು, “ಮೃತಂಮಿಮಿಕ್ಕೇ” ಇದರಿಂದ ಮೃತ, ಇವುಗಳಿಂದ ‘ಉಪಸರ್ಪತಿಚತನೃಣಾಂ ಋಚಾಂ ಶಂಖ: ಪಿತರ: ತ್ರಿಷ್ಟುಪ್ ಭೂಪ್ರಾರ್ಥನೇಖನನೇಮೃದುದ್ಧರಣ ಅಗ್ರಹಣೇಷುಚ ಕ್ರಮೇಣ ವಿನಿಯೋಗ: ಈ ಋಕ್ಕುಗಳಿಂದ ಕ್ರಮದಿಂದ ಅಸ್ತಿಗ್ರಹಣಾಂತ ಕರ್ಮಗಳನ್ನು ಮಾಡಿ ತಾನು ಜಲಾಶಯದಲ್ಲಿ ಗೃಹೋಕ್ತವಿಧಿಯಿಂದ ಸ್ನಾನಮಾಡತಕ್ಕದ್ದು. ನಂತರ ಅಗ್ರಹಣಾಂತ ಕರ್ಮಗಳನ್ನು ಮಾಡಿ ತಾನು ಜಲಾಶಯದಲ್ಲಿ ಗೃಹೋಕ್ತವಿಧಿಯಿಂದ ಸ್ನಾನಮಾಡತಕ್ಕದ್ದು. ನಂತರ ಅಸ್ಥಿಶುದ್ಧಿಯನ್ನು ಮಾಡುವದು. ಅದು ಹೇಗೆಂದರೆ ಅಸ್ಥಿಗಳನ್ನು ಸ್ಪರ್ಶಿಶಿ"ಏತೋದ್ರಂ” ಇತ್ಯಾದಿ ಈ ಮಂತ್ರಗಳನ್ನೇ ಪುನರುಚ್ಚರಿಸಿ ಪಂಚಗವ್ಯದಿಂದ ಸ್ನಾನಮಾಡಿ ಮುಟ್ಟಿಕೊಂಡೇ ದಶಸ್ನಾನಗಳನ್ನು ಮಾಡತಕ್ಕದ್ದು, ಗಾಯತ್ರಾದಿ ಐದುಮಂತ್ರಗಳಿಂದ ಗೋಮೂತ್ರ, ಗೋಮಯ, ಕ್ಷೀರ, ದಧಿ, ಮೃತ ಇವುಗಳಿಂದ ಸ್ನಾನಮಾಡಿ “ದೇವಸ್ಯತ್ವಾ” ಮಂತ್ರದಿಂದ ದರ್ಭೆಯ ಜಲದಿಂದ, ‘ಮಾನಸ್ತೋಕೇ’ ಮಂತ್ರದಿಂದ, ಭಸ್ಮ, ‘ಅಶ್ವಕ್ರಾಂತೇ’ ಇದರಿಂದ ಮೃತ್ತಿಕೆ, ಮಧುವಾತಾ’ಮಂತ್ರದಿಂದ ಮಧು, ‘ಆಪೋಹಿಷ್ಣಾ’ ಮಂತ್ರದಿಂದ ಶುದ್ಧೋದಕ - ಹೀಗೆ ಇವುಗಳಿಂದ ಸ್ನಾನ ಮಾಡತಕ್ಕದ್ದು. ಹೀಗೆ ದಶಸ್ನಾನಗಳನ್ನು ಮಾಡಿ ಅಸ್ಥಿಗಳಿಗೆ ದರ್ಭೆಗಳಿಂದ ಮಾರ್ಜನಮಾಡತಕ್ಕದ್ದು. ೫೨೦ ಧರ್ಮಸಿಂಧು ಅದಕ್ಕೆ ಮಂತ್ರ-“ಅತೋದೇವಾ” ಈ ಋಕ್ಕು, ಮುಂದೆ ಸಪ್ತ ಸೂಕ್ತಗಳು- “ಏತೋಂದ್ರಂ, ಶುಚೀವೋ, ನತಮಂಹೋನ, ಇತಿವಾಇತಿ, ಸ್ವಾದಿಷ್ಠಯಾಮ, ಮಮಾವರ್ಚ್, ಕದ್ರುದ್ರಾಯ” ಹೀಗೆ ಸೂಕ್ತಗಳು. ಅಸ್ಥಿಯು ಯಾವನದೋ, ಯಾವನ ಸಪಿಂಡೀಕರಣಾಂತ ಕರ್ಮಗಳಾಗಿವೆಯೋ ಅವನನ್ನುದ್ದೇಶಿಸಿ ಅಸ್ತಿಕ್ಷೇಪಾಂಗಭೂತವಾದ ಪಾರ್ವಣವಿಧಿಯ ಶ್ರಾದ್ಧವನ್ನು ಹಿರಣ್ಯದಿಂದ ಮಾಡತಕ್ಕದ್ದು. ಪಿಂಡವನ್ನು ಹಿಟ್ಟಿನಿಂದ ಮಾಡುವದು. ದಶಾಹದ ಒಳಗೆ ಅಸ್ಥಿಹಾಕುವಾಗ ಏಕೋದ್ದಿಷ್ಟವಾಗಿ ಶ್ರಾದ್ದವು. ಆಮೇಲೆ ತಿಲತರ್ಪಣವನ್ನು ಮಾಡಿ ಪಂಚಗವ್ಯ, ಪಂಚಾಮೃತ ಶುದ್ಧೋದಕಗಳಿಂದ ಅಸ್ಥಿಯನ್ನು ತೊಳೆದು “ಯಕ್ಷಕರ್ದಮ” ದಿಂದ ಲೇಪಿಸಿ ಪುಷ್ಪಗಳಿಂದ ಪೂಜಿಸಿ ಚರ್ಮ, ಕಂಬಳಿ, ದರ್ಭೆ, ಭುಜಪತ್ರೆ, ಸಣಬಿನ ನಾರು, ಪಟ್ಟೆ ವಸ್ತ್ರ, ತಾಡಪತ್ರ ಈ ಏಳುವಸ್ತುಗಳಿಂದ ಸುತ್ತಿ ತಾಮ್ರದ ಸಂಪುಟದಲ್ಲಿಡತಕ್ಕದ್ದು. “ಯಕ್ಷಕರ್ದಮ"ವೆಂದರೆ-ಹನ್ನೆರಡು ಕರ್ಷಪ್ರಮಾಣದ ಗಂಧ ಮತ್ತು ಕುಂಕುಮ, ಆರುಕರ್ಷ ಕರ್ಪೂರ, ನಾಲ್ಕು ಕರ್ಷ ಕಸ್ತೂರಿ ಇವುಗಳನ್ನು ಕೂಡಿಸಿದ ಕಲ್ಕಕ್ಕೆ ಯಕ್ಷಕರ್ದಮವನ್ನುವರು. ಆಮೇಲೆ ಅಸ್ಥಿಗಳಲ್ಲಿ ಬಂಗಾರ, ಬೆಳ್ಳಿಚೂರುಗಳು, ಹವಳ, ನೀಲಮಣಿ ಇತ್ಯಾದಿಗಳನ್ನು ಹಾಕಿ ತನ್ನ ಸೂತ್ರೋಕ್ತವಾದ ವಿಧಿಯಿಂದ ಸ್ಥಂಡಿಲದಲ್ಲಿ ಅಗ್ನಿ ಪ್ರತಿಷ್ಠಾದಿಗಳನ್ನು ಮಾಡಿ ನೂರಾಎಂಟು ತಿಲಾಜ್ಯಾಹುತಿಗಳನ್ನು ಹೋಮಿಸತಕ್ಕದ್ದು. “ಉದೀರತಾಂಶಂಖ: ಪಿತರಷ್ಟುಪ್ ಅಸ್ಥಿ ಪ್ರಕ್ಷೇಪಾಂಗ ತಿಲಾಜ್ಯ ಹೋಮೇ ವಿನಿಯೋಗ: ಉದೀರತಾಮಿತಿಸೂಕ್ತಸ್ಯ ಚತುರ್ದಶ ಋಗ್ನಿ: ಪ್ರತ್ಯಚಮಾನ್ಯಾಹುತಿ:” ಹೀಗೆ ಸೂಕ್ತದ ಏಳಾವೃತ್ತಿಯಿಂದ ಉಳಿದ ಹತ್ತು ಆಹುತಿಗಳನ್ನು ಮೊದಲನೇ ಮಂತ್ರಾವೃತ್ತಿಯಿಂದ, ಅಂತು ನೂರೆಂಟು ತಿಲಾಹುತಿ, ನೂರೆಂಟು ಆಜ್ಞಾಹುತಿಗಳನ್ನು ಹೋಮಿಸತಕ್ಕದ್ದು. ಹಿಂದೆ ಹೇಳಿದ ಅಸ್ತಿಸಂಪುಟವನ್ನು ತಗೆದುಕೊಂಡು ತೀರ್ಥಕ್ಕೆ ಹೋಗುವದು. ಅಲ್ಲಿಯ ನಿಯಮವೆಂದರೆ:- ಮಲ-ಮೂತ್ರ ವಿಸರ್ಜನಕಾಲದಲ್ಲಿ ಮತ್ತು ಆಚಮನಕಾಲದಲ್ಲಿ ಅಸ್ತಿಗಳನ್ನು ಧರಿಸಬಾರದು. ಶೂದ್ರ, ಮೇಂಟ, ಅಂತ್ಯಜ ಮೊದಲಾದ ತನಗಿಂತ ಕೀಳುಜಾತಿಯವನನ್ನು ಅಸ್ಥಿಯನ್ನು ಧರಿಸಿಕೊಂಡಾಗ ಸ್ಪರ್ಶಮಾಡಬಾರದೆಂದು “ಕಾಶೀಖಂಡದಲ್ಲಿ ಹೇಳಿದೆ. ನಂತರ ತೀರ್ಥಕ್ಕೆ ಹೋಗಿ ತೀರ್ಥಪ್ರಾಪ್ತಿನಿಮಿತ್ತಕವಾದ ಸ್ನಾನಾದಿಗಳನ್ನು ಮಾಡಿ ಅಸ್ಟಿಗೂ ಸ್ನಾನಮಾಡಿಸಿ “ಅಮುಕ ಗೋತ್ರ ಅಮುಕಶರ್ಮ ಬ್ರಹ್ಮಲೋಕಾದಿಪ್ರಾಪ್ತಯೇ ಅಮುಕತೀರ್ಥ ಅಪ್ರಕ್ಷೇಪಂ ಕರಿಷ್ಯ ಹೀಗೆ ಸಂಕಲ್ಪಿಸಿ ಮುತ್ತುಗಲ ಎಲೆಗಳ ಕೊಟ್ಟೆಯಲ್ಲಿ ಪಂಚಗವ್ಯದಿಂದ ಅಸ್ಥಿಗಳನ್ನು ಪ್ರೋಕ್ಷಿಸಿ ಬಂಗಾರದ ಚೂರು, ಮಾಲೆ, ಮೃತ, ತಿಲ ಮಿಶ್ರಿತಗಳಾದ ಅಸ್ಥಿಗಳನ್ನು ಮಣ್ಣಿನ ಪಿಂಡದಲ್ಲಿಟ್ಟು, ದಕ್ಷಿಣದಿಕ್ಕನ್ನು ನೋಡುತ್ತಿರುವವನಾಗಿ “ನಮೋಸ್ತು ಧರ್ಮಾಯ” ಹೀಗೆ ಹೇಳುತ್ತಿರುವವನಾಗಿ ತೀರ್ಥದಲ್ಲಿಳಿದು ನಾಭಿಮಟ್ಟದ ಜಲದಲ್ಲಿ ನಿಂತು “ಸಮಪ್ರೀತೋsಸ್ತು” ಹೀಗೆ ಹೇಳಿ ತೀರ್ಥದಲ್ಲಿ ಚಲ್ಲತಕ್ಕದ್ದು. ಆಮೇಲೆ ಸ್ನಾನಮಾಡಿ ನೀರಿನಿಂದ ಹೊರಕ್ಕೆ ಬಂದು ಸೂರ್ಯನನ್ನು ನೋಡಿ ಹರಿಯನ್ನು ಸ್ಮರಿಸಿ ಬ್ರಾಹ್ಮಣನಿಗೆ ಯಥಾಶಕ್ತಿ ಬೆಳ್ಳಿಯ ದಕ್ಷಿಣೆಯನ್ನು ಅಮುಕಸ್ಯ ಅಸ್ಥಿಕ್ಷೇಪಃ ಕೃತಃ ತತ್ಸಾಂಗತಾರ್ಥಂ ರಜತಮಿದಂ ತುಭಂ ಸಂಪ್ರದದೇ” ಹೀಗೆ ಹೇಳಿ ಕೊಡತಕ್ಕದ್ದು. ಪರಿಚ್ಛೇದ ೩ ಉತ್ತರಾರ್ಧ ೫೨೧ ಏಕಾದಶಾಹ ಕೃತ್ಯ ಮೃತದಿನದಿಂದ ಹನ್ನೊಂದನೇ ದಿನದಲ್ಲಿ ಪ್ರಾತಃಕಾಲದಲ್ಲಿದ್ದು ಮನೆಯನ್ನು ಸಾರಿಸಿ ಮೈಲಿಗೆಯಾದ ಎಲ್ಲ ವಸ್ತ್ರಗಳನ್ನು ತೊಳೆದು, ಎಲ್ಲ ಸಪಿಂಡರೂ ಸಲಸ್ನಾನ ಮಾಡಿದ ನಂತರ ಸಂಧ್ಯಾವಂದನ, ಪಂಚಮಹಾಯಜ್ಞಾದಿ ಕರ್ಮಗಳನ್ನು ಮಾಡುವದು. ಅಷ್ಟರಮಟ್ಟಿಗೆ ಶುದ್ದಿಯಾಗುವದು. ಏಕಾದಶಾಹ ಸಂಗವಕಾಲದಲ್ಲಿ ಸ್ನಾನಮಾಡಿದರೆ ಶುದ್ಧಿಯಾಗುವದೆಂದು ಕೆಲವರು ಹೇಳುವರು. ಹನ್ನೊಂದನೇ ದಿನದಲ್ಲಿ ಪುತ್ರಾದಿಗಳಿಗೆ ಮತ್ತು ಕರ್ತೃವಿಗೆ ಪಂಚಮಹಾಯಜ್ಞಾದಿಗಳಲ್ಲಿ ಅಧಿಕಾರಪ್ರಾಪ್ತವಾಗುವದು. ಸಪಿಂಡರಿಗೆ ದರ್ಶ, ವಾರ್ಷಿಕಾದಿ ಶ್ರಾದ್ಧಗಳಲ್ಲಿಯೂ ಅಧಿಕಾರವಿದೆ. ಬರೇ ನಾಂದೀಶ್ರಾದ್ಧವಾದರೋ ನಾಲ್ಕು ತಲೆಮಾರಿನ ಸಪಿಂಡರಿಗೆ ಸಪಿಂಡೀಕರಣಕ್ಕಿಂತ ಮೊದಲು ಆಗುವದಿಲ್ಲ. ದಶಾಹಕರ್ಮ ಮಾಡಿದ ಅಮುಖ್ಯಕರ್ತನು ಅಥವಾ ಮುಖ್ಯರಾದ ಪುತ್ರಾದಿಕರ್ತೃಗಳು ವೃಷೋತ್ಸರ್ಗಾದಿ ಹನ್ನೊಂದನೇ ದಿನ ಮಾಡತಕ್ಕ ಎಲ್ಲ ಕರ್ಮಗಳನ್ನೂ ಮಾಡತಕ್ಕದ್ದು. ವೃಷೋತ್ಸರ್ಗ ಹನ್ನೊಂದನೇ ದಿನದಲ್ಲಿ ಪ್ರೇತನ ಸಲುವಾಗಿ ಅವಶ್ಯವಾಗಿ ವೃಷೋತ್ಸರ್ಗ ಮಾಡತಕ್ಕದ್ದು. ಇಲ್ಲವಾದರೆ ಎಷ್ಟು ಶ್ರಾದ್ಧಾದಿಗಳನ್ನು ಮಾಡಿದರೂ ಪ್ರೇತತ್ವ ನಿವೃತ್ತಿಯಾಗುವದಿಲ್ಲ. ಇಲ್ಲಿ ಎಲ್ಲವನ್ನೂ ತಾನೇ ಮಾಡತಕ್ಕದ್ದು. ಹೊರತು “ಕಾಮ್ಯಕೃಷೋತ್ಸರ್ಗ’ದಂತೆ ಆಚಾರ್ಯನನ್ನು ವರಿಸಿ ಆತನ ಮುಖಾಂತರ ಮಾಡತಕ್ಕದ್ದಲ್ಲ. ಇದನ್ನು ಮನೆಯಲ್ಲಿ ಮಾಡಬಾರದು. ಇದನ್ನು ದ್ವಾದಶ ದಿನದಲ್ಲಿಯೂ ಹೇಳಿರುವರು. ಕೆಲ ಗ್ರಂಥಗಳಲ್ಲಿ ಮೃತಾಹದಲ್ಲಿಯೂ ಹೇಳಿದೆ. ಎರಡು ವಿಷುವ ಸಂಕ್ರಮಣಗಳಲ್ಲಿ ಹಾಗೂ ಬಾಂಧವನ ಮೃತಾಹದಲ್ಲಿಯೂ ಮಾಡತಕ್ಕದ್ದೆಂದು ವಚನವಿದೆ. ಮಾತಾಪಿತೃಗಳ ಮೃತಾಹದಿಂದ ವರ್ಷಾಂತದ ವರೆಗೆ ವೃಷೋತ್ಸರ್ಗ ಮಾಡುವಾಗ “ವೃದ್ಧಿ ಶ್ರಾದ್ಧವನ್ನು ಮಾಡಬಾರದು. ವರ್ಷಾನಂತರದಲ್ಲಡ್ಡಿಯಿಲ್ಲ. “ನೀಲವೃಷದ ಲಕ್ಷಣ - ಕೆಂಪುಬಣ್ಣ ಮುಖದಲ್ಲಿ ಮತ್ತು ಬಾಲದಲ್ಲಿ ಬಿಳೇಬಣ್ಣ, ಕೊಳಚು, ಕೋಡುಗಳಲ್ಲಿಯೂ ಬಿಳೇಬಣ್ಣ - ಹೀಗಿದ್ದರೆ “ನೀಲವೃಷ"ವೆನ್ನುವರು; ಅಥವಾ ಪೂರ್ಣ ಬಿಳುಪಾಗಿದ್ದು ಮುಖ, ಬಾಲ ಮೊದಲಾದವು ಕಪ್ಪಾಗಿದ್ದರೆ ಅದೂ “ನೀಲವೃಷ"ವೆನ್ನಲ್ಪಡುವದು. ಇಲ್ಲವೆ ಎಲ್ಲವೂ ಕಪ್ಪಾಗಿದ್ದು ಮುಖಾದಿಗಳು ಬಿಳುಪಾಗಿದ್ದರೂ ನೀಲವೃಷವೆನ್ನುವರು. ಕೆಲವರು-ವೃಷಭದ ಅಭಾವದಲ್ಲಿ ಮಣ್ಣಿನಿಂದ ಅಥವಾ ಹಿಟ್ಟಿನಿಂದ ವೃಷಭವನ್ನು ಮಾಡಿ ಹೋಮಾದಿ ವಿಧಿಯಿಂದ ವೃಷೋತ್ಸರ್ಗವನ್ನು ಮಾಡತಕ್ಕದ್ದೆನ್ನುವರು. ಯಥೋಕ್ತ ವೃಷವು ಲಭಿಸದಿದ್ದಲ್ಲಿ ಎರಡು ವರ್ಷದ ಅಥವಾ ಒಂದು ವರ್ಷದ ವೃಷಭವನ್ನಾದರೂ ಉತ್ಸರ್ಗಮಾಡಬಹುದು. ವರ್ಷಕ್ಕಿಂತ ಹೆಚ್ಚಾದ ನಾಲ್ಕು ಅಥವಾ ಒಂದು ಹೆಂಗರುವನ್ನು ತರುವದು. ಪ್ರಯೋಗವನ್ನು ತಮ್ಮ-ತಮ್ಮ ಪ್ರಯೋಗಾನುಸಾರ ಮಾಡತಕ್ಕದ್ದು. ಎಡಗೈಯಿಂದ ಬಾಲವನ್ನು ಹಿಡಿದುಕೊಂಡು ಬಲಗೈಯಿಂದ ಜಲವನ್ನು ತೆಗೆದುಕೊಂಡು ತಿಲ ಮತ್ತು ದರ್ಭೆಗಳ ಸಹಿತವಾಗಿ ಪ್ರೇತನ ಗೋತ್ರವನ್ನುಚ್ಚರಿಸಿ “ಅಮುಕವಷ ಏಷಃ ಮಯಾದತ್ತ: ತಂತಾರಯತು” ಹೀಗೆ ಹೇಳುತ್ತ ಹಿರಣ್ಯ ಸಹಿತವಾದ ಜಲವನ್ನು ಭೂಮಿಯಲ್ಲಿ ಬಿಡತಕ್ಕದ್ದು. ಹೀಗೆ ಬಿಟ್ಟ ಬಸವವನ್ನು ಯಾರೂ ಉಪಯೋಗಿಸತಕ್ಕದ್ದಲ್ಲ. ಯಾರೂ ಬಂಧನದಲ್ಲಿಡಕೂಡದು, ಗದ್ದೆ ಮೊದಲಾದವುಗಳಲ್ಲಿ ೫೨೨ ಧರ್ಮಸಿಂಧು ಹೂಡತಕ್ಕದ್ದಲ್ಲ. ಬಿಟ್ಟ ಧೇನುವನ್ನು ಯಾರೂ ಕರೆಯಬಾರದು. ಪತಿ, ಪುತ್ರವತಿಯರಾದ ಸ್ತ್ರೀಯರಿಗೆ ವೃಷೋತ್ಸರ್ಗವಿಲ್ಲ. ಪ್ರಮೋತ್ಸರ್ಗ ಫಲಪ್ರಾಪ್ತಿಗಾಗಿ ಗೋದಾನಮಾಡುವದು, ಸ್ತ್ರೀಯರಿಗೆ ವೃಷೋತ್ಸರ್ಗ ಸ್ಥಾನದಲ್ಲಿ “ಗೋದಾನ” ಹೇಳಿದೆ. ವೃಷೋತ್ಸರ್ಗಸಾಂಗತಾಸಿದ್ಧಿಗಾಗಿ ತಿಲ, ಉದಕುಂಭ, ಧೇನು, ವಸ್ತ್ರ, ಹಿರಣ್ಯ ಹೀಗೆ ಐದು ದಾನಗಳನ್ನು ಹೇಳಿದೆ. ಬೇರೆ ಆಶೌಚ ಬಂದಿದ್ದರೆ ಅಂದರೆ ಹನ್ನೊಂದನೇದಿನ ಆಶೌಚಬಂದರೂ ವೃಷೋತ್ಸರ್ಗ, ಆದ ಮಾಸಿಕ, ಶಯ್ಯಾದಾನಾದಿಗಳನ್ನು ಮಾಡಲೇಬೇಕು. ಹೀಗೆ ವೃಷೋತ್ಸರ್ಗಮಾಡಿದರೆ ಅಶ್ವಮೇಧಯಾಗಮಾಡಿದ ಫಲವು ಸಿಗುವದು. ಯಾವಾತನ ಸಲುವಾಗಿ ನೀಲವೃಷಭವನ್ನು ಬಿಡುವರೋ, ಆತನು ಉತ್ಕೃಷ್ಟವಾದ ಸದ್ಧತಿಯನ್ನು ಹೊಂದುವನು. ವೃಷೋತ್ಸರ್ಗವು ಹಿಂದಿನ ಹತ್ತು ಮುಂದಿನಹತ್ತು ಪಿತೃಗಳನ್ನುದ್ಧರಿಸುವದು. ಹೀಗೆ ವೃಷೋತ್ಸರ್ಗವು. ಏಕಾದಶಾಹದಲ್ಲಿ ಮಹೂಕೋದ್ದಿಷ್ಟ ಶ್ರಾದ್ಧ ಈ ಮಹೈಕೋದ್ದಿಷ್ಟವು ಷೋಡಶಶಾಸ್ತ್ರಗಳಲ್ಲಿ ಬರುವದಿಲ್ಲ. ಪ್ರತ್ಯೇಕವಾದದ್ದು. ಆದ್ದರಿಂದಲೇ ಇದಕ್ಕೆ ಸರ್ವೈಕೋದ್ದಿಷ್ಟ ಪ್ರಕೃತಿರೂಪವಾದದ್ದು” ಎನ್ನುವರು. ಇದನ್ನು ಬೇಯಿಸಿದ ಅನ್ನದಿಂದಲೇ ಮಾಡತಕ್ಕದ್ದು. ಇದರಲ್ಲಿ ಸಾಧ್ಯವಾದರೆ ಬ್ರಾಹ್ಮಣಭೋಜನವನ್ನು ಮಾಡಿಸತಕ್ಕದ್ದು. ಅಸಂಭವದಲ್ಲಿ ಅಗ್ನಿಯಲ್ಲಿ ಹೋಮವು. “ಆದ್ಯವಿಕೋದ್ದಿಷ್ಟದಲ್ಲಿ ಬ್ರಾಹ್ಮಣ ಭೋಜನ ಅಥವಾ ಅಗ್ನಿಯಲ್ಲಿ ಹೋಮವು” ಎಂಬ ವಚನವಿದೆ. ಮೀಸೆಯನ್ನು ಬೋಳಿಸಿಕೊಳ್ಳುವದು; ಉಗುರುಗಳನ್ನು ತೆಗೆಯಿಸತಕ್ಕದ್ದು. ಬ್ರಾಹ್ಮಣನಿಗೆ ಸ್ನಾನ, ಅಭ್ಯಂಜನಾದಿಗಳನ್ನು ಮಾಡಿಸಬೇಕು. ವಿಧಿಪೂರ್ವಕವಾಗಿ ಕ್ಷಣ, ಪಾದ್ಯ, ಆರ್ಥ್ಯ, ಆಸನ, ಗಂಧ, ಪುಷ್ಪ, ಆಚ್ಛಾದನ ಇವುಗಳಿಂದುಪಚರಿಸುವದು. ಇಲ್ಲಿ ಧೂಪ, ದೀಪಗಳಿಲ್ಲ. “ಏಕೋದ್ದಿಷ್ಟಂ ದೇವಹೀನಂ” ಎಂಬ ಉಕ್ತಿಯಿರುವದರಿಂದ ವಿಶ್ವೇದೇವರು ಬೇಕಿಲ್ಲ. ಬ್ರಾಹ್ಮಣನಾದರೂ ಒಬ್ಬನೇ, ನಿಮಂತ್ರಣವು ಹಗಲಿನಲ್ಲಿಯೇ. ಅರ್ಘಪಾತ್ರವು ಒಂದೇ. “ಸ್ವಧಾ ನಮಃ ಪಿತೃ” ಶಬ್ಲೊಚ್ಚಾರಣೆಯಿಲ್ಲ. “ಪ್ರತಪ್ರೇತ ಇಮಾನ್ ಲೋಕಾನ್ ಪ್ರೀಣಯಾಹಿನ:” ಹೀಗೆ ಅರ್ತ್ಯಪಾತ್ರದಲ್ಲಿ ಮಂತ್ರವನ್ನೂಹಿಸುವದು. “ಅಭಿಶ್ರವಣ"ವಿಲ್ಲ. ಎಲ್ಲವನ್ನೂ ಪ್ರಾಚೀನಾವೀತಿಯಾಗಿಯೇ ಮಾಡತಕ್ಕದ್ದು. ಯಾಕೆಂದರೆ ಇಲ್ಲಿ ದೈವಕಾರ್ಯವೆಂಬುದೇ ಇಲ್ಲ. “ಅಗೌಕರಣವು ವಿಕಲ್ಪವು. ಪಾಣಿಹೋಮದಲ್ಲಿಯಾದರೂ ಆ ಅನ್ನದ ಭಕ್ಷಣವಿಲ್ಲ. ಅದನ್ನು ಅಗ್ನಿಯಲ್ಲಿ ಹಾಕತಕ್ಕದ್ದು. ಒಂದೇ ಪಿಂಡ. ಅನುಮಂತ್ರಣಾದಿಗಳಲ್ಲ ಅಮಂತ್ರಕವಾಗಿಯೇ ಆಗತಕ್ಕದ್ದು. “ಸ್ವದಿತ” ಎಂಬ ತೃಪ್ತಿ ಪ್ರಶ್ನೆಯು ಕಾತ್ಯಾಯನರಿಗಿದೆ. “ಅಕ್ಷಯ” ಸ್ಥಾನದಲ್ಲಿ “ಉಪತಿಷ್ಠತಾಂ” ಎನ್ನುವದು. “ಅಭಿರಮೃತಾಂ” ಎಂದು ವಿಸರ್ಜನಮಾಡುವದು. “ಅಭಿರತಾಃ ಸ್ಮ:” ಎಂದು ಬ್ರಾಹ್ಮಣರ ಪ್ರತಿವಚನವು. ಶ್ರಾದ್ಧ ಶೇಷಭೋಜನವಿಲ್ಲ. ಕೊನೆಯಲ್ಲಿ ಸ್ನಾನಮಾಡುವದು. ನವಶ್ರಾದ್ಧಕೋದ್ದಿಷ್ಟದಲ್ಲಿ ಸರ್ವವೂ ಅಮಂತ್ರಕವೇ ಎಂದು ಹೇಳಿದೆ. ಬ್ರಾಹ್ಮಣಾಭಾವದಲ್ಲಿ ಅಗ್ನಿಯಲ್ಲಿ ಏಕೋದ್ದಿಷ್ಟ ಮಾಡುವದು. ಹೇಗೆಂದರೆ ಅಗ್ನಿಯಲ್ಲಿ ಪಾಯಸವನ್ನು ಬೇಯಿಸಿ ಆಜ್ಯಭಾಗಾಂತದಲ್ಲಿ ಅಗ್ನಿಯ ಮುಂದೆ ಶ್ರಾದ್ಧಪ್ರಯೋಗವನ್ನು ಮಾಡಿ, ಅಗ್ನಿಯಲ್ಲಿ ಪ್ರೀತನನ್ನಾವಾಹಿಸಿ ಗಂಧಾದಿಗಳಿಂದ ಪೂಜಿಸಿ, “ಪೃಥ್ವಿತೇ ಪಾತ್ರ” ಇತ್ಯಾದಿಗಳಿಂದ ಅನ್ನವನ್ನು ಸಂಕಲ್ಪಿಸಿ “ಉದೀರತಾಮವರ” ಹೀಗೆ ಎಂಟು ಮಂತ್ರಗಳಿಂದ ಚತುರಾವೃತ್ತಿಯಿಂದ

ಪರಿಚ್ಛೇದ - ೩ ಉತ್ತರಾರ್ಧ ೫೨೩ ಮೂವತ್ತೆರಡು ಮೂವತ್ತೆರಡು ಆಹುತಿಗಳನ್ನು ಹೋಮಿಸಿ, ಪಿಂಡದಾನಾದಿ ಶ್ರಾದ್ಧವನ್ನು ಮುಗಿಸತಕ್ಕದ್ದು. ಹೀಗೆ ಸ್ತ್ರೀಯರಿಗೂ ಸಹ ಇದೇ ಕ್ರಮವು. ಆದ್ಯಮಾಸಿಕ “ಮಾಸಾ ಮಾಸಿಕಂ ಕಾರ್ಯಂ ಹೀಗೆ ವಚನವಿರುವದರಿಂದ ಮೃತದಿನವು ಅದ್ಯಮಾಸಿಕಕ್ಕೆ ಮುಖ್ಯಕಾಲವು. ಅದಕ್ಕೆ ಆಶೌಚ ಪ್ರತಿಬಂಧವಿರುವದರಿಂದ ಆಶೌಚಾಂತ ಅಂದರೆ ಏಕಾದಶದಿನದಲ್ಲಿ ಅತಿಕ್ರಾಂತವಾದ ಆ ಮಾಸಿಕವನ್ನು ಮಾಡತಕ್ಕದ್ದು, ಆದಕಾರಣ ಆದ್ಯಮಾಸಿಕ ಬ್ರಾಹ್ಮಣನನ್ನು ಭೋಜನ ಮಾಡಿಸತಕ್ಕದ್ದು; ಅಥವಾ ಅಗ್ನಿಯಲ್ಲಿ ಹವನ ಮಾಡತಕ್ಕದ್ದು. ಪುನಶ್ಚ ಬ್ರಾಹ್ಮಣಭೋಜನ ಮಾಡಿಸುವದು. ಈ ವಿಷಯದಲ್ಲಿ ಅದು ದ್ವಿರಾವೃತ್ತಿಯಾಗುವದು. ಹೀಗೆ ಪ್ರಥಮ ಮಾಸಿಕದ ಸಲುವಾಗಿ “ರಾವೃತ್ತಿ"ಯು ಹೇಳಲ್ಪಟ್ಟಿದೆ. ಈ “ದ್ವಿರಾವೃತ್ತಿರ್ಭವೇದಿಹ ಎಂಬ ಉಕ್ತಿಯು ಷೋಡಶಮಾಸಿಕಗಳನ್ನು ಸಪಿಂಡೀಕರಣಾಧಿಕಾರಕ್ಕಾಗಿ ಅಪಕರ್ಷಣ ಮಾಡಿ ದ್ವಾದಶಾಹಾದಿಗಳಲ್ಲಿ ಮಾಡುವ ಪಕ್ಷದಲ್ಲಿ ಎಂದು ಯೋಚಿಸಿಕೊಳ್ಳಬೇಕು. ಅದಲ್ಲದೆ ಅವುಗಳನ್ನು ಹನ್ನೊಂದನೇ ದಿನದಲ್ಲಿಯೇ ಮಾಡುವ ಪಕ್ಷದಲ್ಲಿ ಷೋಡಶಮಾಸಿಕಗಳ ಷೋಡಶಾವೃತ್ತಿ ಹಾಗೂ ಮಹೈ ಕೋದ್ದಿಷ್ಟ ಕೂಡಿ ಹದಿನೇಳಾವರ್ತಿಗಳಾಗುವ ಆವತ್ತು ಸಂಭವಿಸುವದು. “ದ್ವಿರಾವೃತ್ತಿರ್ಭವೇದಿಹ” ಈ ಉಕ್ತಿಯು ಅಸಂಗತವಾಗುವದು. ಮತ್ತೇನೆಂದರೆ ಸಪಿಂಡೈಧಿಕಾರಾರ್ಥ ಅಪಕರ್ಷಣಮಾಡಬೇಕಾದ ಮಾಸಿಕಗಳನ್ನು ದ್ವಾದಶಾಹದಲ್ಲಿ ಮಾಡಿದಲ್ಲಿ ಏಕಾದಶಾಹದಲ್ಲಿ ಮಹೈಕೋದ್ದಿಷ್ಟದ ನಂತರ ಅತಿಕ್ರಾಂತಂ ಆದ್ಯಮಾಸಿಕಂ ಕರಿಷ್ಟೇ” ಹೀಗೆ ಸಂಕಲ್ಪಿಸಿ ಆದಮಾಸಿಕವನ್ನು ಮಾತ್ರ ಅನ್ನದಿಂದ ಅಥವಾ ಆಮದಿಂದ ಬ್ರಾಹ್ಮಣ ಅಥವಾ ಕೂರ್ಚಬ್ರಾಹ್ಮಣನಲ್ಲಿ ಪ್ರೇತನನ್ನಾವಾಹಿಸಿ ಮಾಡತಕ್ಕದ್ದು. ಹೊರತು ಆದಮಾಸಿಕವನ್ನು ಅಗ್ನಿಯಲ್ಲಿ ಹೋಮಿಸತಕ್ಕದ್ದಲ್ಲ. ಯಾಕೆಂದರೆ “ಪುನಶ್ಚಭೋಜಯೇದ್ವಿಪ್ರಂ” ಅಂದರೆ ಪುನಶ್ಚ ಬ್ರಾಹ್ಮಣಭೋಜನ ಮಾಡಿಸತಕ್ಕದ್ದು ಎಂದು ವಿಶೇಷ ವಚನವಿರುವದರಿಂದ ಮಕೋದ್ದಿಷ್ಟ ಒಂದು, ಆದ್ಯಮಾಸಿಕ ಒಂದು ಹೀಗೆ ವಿಕೋದ್ದಿಷ್ಟದ ದ್ವಿರಾವೃತ್ತಿಯಾಗುವದು (ಹನ್ನೊಂದನೇ ದಿನ) ಸ್ಪಷ್ಟವೇ. ಆದ್ಯಮಾಸಿಕದ ಹೊರತಾಗಿ ಮಹೈಕೋದ್ದಿಷ್ಟಕ್ಕೇ ದ್ವಿರಾವೃತ್ತಿಯು ಎಂದು ಹೇಳುವದು ಭ್ರಾಂತಿಮೂಲಕವಾದದ್ದು. ಇಲ್ಲಿ ಕೆಲವರು ಅದ್ಯಾಭಿಕಕ್ಕಾದರೂ ಮೃತದಿನವೇ ಮುಖ್ಯ ಕಾಲವು ಅದು ಅತಿಕ್ರಾಂತವಾಗಿದ್ದುದರಿಂದ ಹನ್ನೊಂದನೇ ದಿನ ‘ಆದ್ಯಮಾಸಿಕಂ ಆದ್ಯಾತ್ಮಿಕಂ ಚ ತಂತ್ರಣ ಕರಿಷ್ಟೇ” ಹೀಗೆ ಸಂಕಲ್ಪಿಸಿ ಎರಡನ್ನೂ ತಂತ್ರದಿಂದ ಮಾಡತಕ್ಕದ್ದನ್ನುವರು. ಇನ್ನು ಕೆಲವರು - ಮಾಸಾದೌಮಾಸಿಕಂಕಾರ್ಯಂ ಆಬ್ಬಿಕಂ ವತ್ಸರೇಗ” ಹೀಗೆ ವಚನವಿರುವದರಿಂದ, ಎರಡನೇ ವರ್ಷಾರಂಭದಲ್ಲಿ ಪ್ರಥಮಾಕ ಮಾಡಬೇಕೇ ಹೊರತು, ಹನ್ನೊಂದನೇ ದಿನ ಮಾಡತಕ್ಕದ್ದಲ್ಲವೆಂದು ಹೇಳುವರು. ಹೀಗೆ ತ್ರಿಪಕ್ಷದಲ್ಲಿ, ಸಪಿಂಡೀಕರಣ ಮಾಡುವ ಪಕ್ಷದಲ್ಲಿ, ಏಕಾದಶಾಹದಲ್ಲಿ ಆದ್ಯಮಾಸಿಕ, ಊನಮಾಸದಲ್ಲಿ ಊನಮಾಸಿಕ, ದ್ವಿತೀಯಮಾಸಾರಂಭದಲ್ಲಿ ದ್ವಿತೀಯಮಾಸಿಕ, ಮೂರನೇಪಕ್ಷದಲ್ಲಿ ಪಾಕ್ಷಿಕಗಳನ್ನು ಏಕೋದ್ದಿಷ್ಟವಿಧಿಯಿಂದ ಮಾಡಿ, ಉಳಿದ ಹನ್ನೆರಡು ಮಾಸಿಕಗಳನ್ನು ಅಪಕರ್ಷಣಮಾಡಿ (ಹಾಗೆಯೇ ಏಕೋದ್ದಿಷ್ಟವಿಧಿಯಿಂದ) ೫೨೪ ಧರ್ಮಸಿಂಧು ಸಪಿಂಡೀಕರಣ ಮಾಡತಕ್ಕದ್ದು. ಹೀಗೆ ಬೇರೆ-ಬೇರೆ ಪಕ್ಷಗಳಲ್ಲಿ ಮಾಡುವಾಗಲೂ ಊಹಿಸಿಕೊಳ್ಳಬೇಕು. ಹನ್ನೊಂದನೇ ದಿನ ತಂತ್ರದಿಂದ ಷೋಡಶಮಾಸಿಕಾಪಕರ್ಷಣ ಮಾಡಿದಲ್ಲಿ ಮಹೈಕೋದ್ದಿಷ್ಟದ ನಂತರ ದೇಶಕಾಲಗಳನ್ನು ಸಂಕೀರ್ತಿಸಿ “ಅತಿಕ್ರಾಂತಂ ಆದ ಮಾಸಿಕಂ ಸಪಿಂಡಧಿಕಾರಾರ್ಥಂ ಅಪಕೃಷ್ಣ ಊನಮಾಸಿಕಾದೀನಿ ಊನಾಕಾಂತಾನಿ ಪಂಚದಶಮಾಸಿಕಾನಿ ಚ ತಂತ್ರಣ ಏಕೋದ್ದಿಷ್ಟವಿಧಿನಾ ಕರಿಷ್ಟೇ” ಹೀಗೆ ಸಂಕಲ್ಪಿಸಿ ತಂತ್ರದಿಂದ ಹದಿನಾರು ಮಾಸಿಕಗಳನ್ನು ಮಾಡತಕ್ಕದ್ದು. ಕೇಚಿನ್ಮತದಂತ-“ಅತಿಕ್ರಾಂತೇ ಆದ್ಯಮಾಸಿಕಾದಿ ಆಬ್ಲಿಕೇ ಊನಮಾಸಿಕಾದೀನಿ ಚ” ಹೀಗೆ ಸಂಕಲ್ಪಿಸುವದು. ಮಾಸಿಕಗಳು ಆದ್ಯ (೧), ಊನ (೨) ದ್ವಿತೀಯ (೩),ಪಾಕ್ಷಿಕ (೪),ತೃತೀಯ (೫), ಚತುರ್ಥ(೬) ಪಂಚಮ (೭), ಷಷ್ಟ (೮), ಊನಷಾಣ್ಮಾಸಿಕ (೯), ಸಪ್ತಮ (೧೦), ಅಷ್ಟಮ (೧), ನವಮ (೧೨), ದಶಮ (೧೩), ಏಕಾದಶ (೧೪), ದ್ವಾದಶ (೧೫), ಊನಾಕ (೧೬) ಹೀಗೆ ಕ್ರಮದಿಂದ ಷೋಡಶಮಾಸಿಕಗಳು, ರುದ್ರಗಣ ಶ್ರಾದ್ಧ ಏಕಾದಶಾಹದಲ್ಲಿ ಏಕಾದಶರುದ್ರರ ಉದ್ದೇಶದಿಂದ ರುದ್ರರೂಪ ಪ್ರೇತೋದ್ದೇಶದಿಂದ ಶ್ರಾದ್ಧವನ್ನು ಮಾಡತಕ್ಕದ್ದು. ರುದ್ಧೋದ್ದೇಶದಿಂದ ಮಾಡಿದರೆ ಸವ್ಯ, ಪ್ರೇತೋದ್ದೇಶದಿಂದ ಮಾಡಿದರೆ ಅಪಸವ್ಯವಾಗತಕ್ಕದ್ದು. ವೀರಭದ್ರ, ಶಂಭು, ಗಿರೀಶ, ಅಜೈಕಪಾತ್‌, ಅಹಿರ್ಬುಧ, ಪಿನಾಕೀ, ಅಪರಾಜಿತ, ಭುವನಾಧೀಶ್ವರ, ಕಪಾಲೀ, ಸ್ಥಾಣು, ಭಗ ಹೀಗೆ ಏಕಾದಶರುದ್ರರು. ಸಮರ್ಥನಾದವನು ಒಂದೊಂದು ರುದ್ರನಾಮತ್ತೊಬ್ಬೊಬ್ಬರಂತೆ ಹನ್ನೊಂದು ಬ್ರಾಹ್ಮಣರ ಭೋಜನ ಮಾಡಿಸುವದು. ಅಶಕ್ತನಾದವನು ಸರ್ವೋದ್ದೇಶದಿಂದ ಒಂದು ಬ್ರಾಹ್ಮಣಭೋಜನ ಮಾಡಿಸುವದು; ಅಥವಾ ಹನ್ನೊಂದು ಇಲ್ಲವೆ ಒಂದು ಆಮಾನ್ನವನ್ನು ಕೊಡುವದು. ಈ ಶ್ರಾದ್ಧದಲ್ಲಿ ಪಿಂಡದಾನ, ಅರ್ಘ, ಅಕರಣ, ವಿಕಿರ ಇವುಗಳನ್ನು ಮಾಡತಕ್ಕದ್ದಿಲ್ಲ. ಇದರಂತೆ ಅಷ್ಟವಸು ಶ್ರಾದ್ಧವನ್ನು ಮಾಡತಕ್ಕದ್ದು. ವಸುಶ್ರಾದ್ಧವು ಕೃತಾಕೃತವು ವಸುಗಳ ನಾಮಗಳನ್ನು ಬೇರೆ ಕಡೆಗೆ ನೋಡತಕ್ಕದ್ದು. ತ್ರಿದಿನಾಶೌಚದಲ್ಲಿ ಏಕಾದಶಾಹಕೃತ್ಯವನ್ನು ನಾಲ್ಕನೇದಿನ ಮಾಡತಕ್ಕದ್ದು. ಎರಡನೇ ದಿನ ಅಥವಾ ಮೊದಲನೇ ದಿನ ಅಸ್ಥಿಸಂಚಯನವು, ಐದನೇದಿನ ಸಪಿಂಡೀಕರಣವು. ಏಕಾದಶ ದಿನದಲ್ಲಾಗಲೀ ದ್ವಾದಶ ದಿನದಲ್ಲಾಗಲೀ ಪದದಾನಗಳನ್ನು ಮಾಡತಕ್ಕದ್ದು. ಅದರಿಂದ ಪ್ರೇತನಿಗೆ ಮಾರ್ಗವು ಸುಖಕರವಾಗುವದು. ಆಸನ, ಪಾದುಕಾ, ಛತ್ರ, ಉಂಗುರ, ನೀರುಗಿಂಡಿ, ಯಜ್ಞಪವೀತ, ತುಪ್ಪ,ವಸ್ತ್ರ, ಭೋಜನ, ಅನ್ನದ ಪಾತ್ರ ಹೀಗೆ ಹತ್ತು ವಸ್ತುಗಳಿಗೆ ಕೂಡಿ “ಪದ"ವೆಂಬ ಸಂಜ್ಞೆಯಿದೆ. ಇದರಂತೆ ತ್ರಯೋದಶ “ಪದದಾನ"ವೂ ಉಂಟು. ಇವುಗಳನ್ನು ಯಥಾಶಕ್ತಿ ದಾನಮಾಡುವದರಿಂದ ಪ್ರೇತನಿಗೆ ಹರ್ಷವಾಗುವದು. ಅನ್ನ, ಉದಕುಂಭ, ಪಾದುಕಾ, ಕಮಂಡಲು, ಛತ್ರ, ವಸ್ತ್ರ, ದಂಡ, ಲೋಹದಂಡ, ಅಗ್ನಿಷ್ಟಿಕ, ದೀಪಪಾತ್ರೆ, ತಿಲ, ತಾಂಬೂಲ, ಗಂಧ ಪುಷ್ಪಮಾಲೆ ಈ ಹದಿನಾಲ್ಕು “ಉಪದಾನಗಳು, ವೈತರಣೀಧೇನು, ಉತ್ಕಾಂತಿಧೇನು, ಮೋಕ್ಷಧೇನು, ಗೋವು, ಭೂಮಿ ಮೊದಲಾದ ದಶದಾನಗಳು. ತಿಲಪಾತ್ರದಾನ ಇತ್ಯಾದಿಗಳನ್ನೆಲ್ಲ ಪರಿಚ್ಛೇದ - ೩ ಉತ್ತರಾರ್ಧ ೫೨೫ ಮರಣ ಕಾಲದಲ್ಲಿ ಮಾಡಿರದಿದ್ದರೆ ಏಕಾದಶಾಹದಲ್ಲಿ ಅವುಗಳನ್ನು ಮಾಡತಕ್ಕದ್ದು. ಪ್ರೇತನ ಸಲುವಾಗಿ ಶಕ್ತಿಮಾನದಂತೆ ಅಶ್ವ, ರಥ, ಗಜ, ಧೇನು, ಮಹಿಷೀ, ಪಲ್ಲಕ್ಕಿ, ಶಾಲಿಗ್ರಾಮ, ಪುಸ್ತಕ, ಕಸ್ತೂರಿ, ಕುಂಕುಮ, ದಾಸಿಯರು, ರತ್ನ, ಆಭರಣ, ಶಯ್ಯಾ, ಛತ್ರ, ಚಾಮರ ಇತ್ಯಾದಿಗಳನ್ನು ಸಮರ್ಥನಾದವನು ಮಾಡಿದರೆ ಪ್ರೇತನಿಗೆ ಸುಖವು ಲಭಿಸುವದು. ಶಯ್ಯಾದಾನ ಏಕಾದಶಾಹದಲ್ಲಿ ಶಯ್ಯಾದಾನವಿಧಿ:- ಮೃತನು ಯಾವ ಯಾವ ವಸ್ತುಗಳನ್ನು ಉಪಯೋಗಿಸುತ್ತಿದ್ದನೋ ಮತ್ತು ಅವನಿಗೆ ಯಾವಯಾವದು ಇಷ್ಟವಾಗಿದ್ದಿತೋ ಅವೆಲ್ಲವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವದು. ಬಂಗಾರದಿಂದ ಪುರುಷಾಕೃತಿ ಪ್ರೇತ ಪ್ರತಿನಿಧಿಯಾದ ಪ್ರತಿಮೆಮಾಡಿ ಶಯ್ಕೆಯಲ್ಲಿಡಬೇಕು. ಹೇಳಿದಂತೆ ಸಕಲ ಸಂಭಾರದಿಂದ ಯುಕ್ತವಾದ ಶಯ್ಕೆಯನ್ನು ಪೂಜಿಸಿ ದಾನಮಾಡತಕ್ಕದ್ದು. ಆ ಸಲುವಾಗಿ ಮಂಚವನ್ನು ಘಟ್ಟಿಯಾದ ಮರದಿಂದ ತಯಾರಿಸಬೇಕು. ಅದಕ್ಕೆ ಆನೆಯದಂತದಿಂದ ಎಲೆ ಮೊದಲಾದವುಗಳನ್ನು ಚಿತ್ರಿಸತಕ್ಕದ್ದು, ಬಂಗಾರ, ರೇಷ್ಮೆ ವಸ್ತ್ರಗಳಿಂದ ರಮ್ಯವಾಗಿ ತೋರುವಂತೆ ಮಾಡಬೇಕು. ಹಂಸತೂಲಿಕೆಯಿಂದ (ಹಂಸಪಕ್ಷಿಯ ತುಪ್ಪಳ) ಹಾಸಿಗೆಯನ್ನು ತಯಾರಿಸಬೇಕು. ಅದರಿಂದ “ತಲೆಗಿಂಬು” ಇರತಕ್ಕದ್ದು. ಹೊದೆಯುವ ಚಾದರ ಮುಂತಾದವುಗಳಿರಬೇಕು. ಗಂಧ, ಧೂಪ ಮೊದಲಾದವುಗಳಿಂದ ಪರಿಮಳವುಂಟಾಗುತ್ತಿರಬೇಕು. ತಲೆಯ ಮೇಲ್ಗಡೆ ತುಪ್ಪದಿಂದ ತುಂಬಿದ ಕಲಶವನ್ನಿಡಬೇಕು. ತಾಂಬೂಲ, ಕುಂಕುಮ, ಚೂರ್ಣ, ಕರ್ಪೂರ, ಅಗರುಚಂದನಗಳಿಂದ ಯುಕ್ತವಾಗಿರಬೇಕು. ದೀಪ, ಪಾದುಕಾ, ಛತ್ರ, ಚಾಮರ, ಆಸನ, ಪಾತ್ರ, ಸಪ್ತಧಾನ್ಯ ಇವುಗಳೆಲ್ಲ ಹತ್ತಿರದಲ್ಲಿರತಕ್ಕದ್ದು. ಶಯನಕ್ಕೆ ಬೇಕಾದ ಉಪಕರಣಗಳೆಲ್ಲವೂ ಇರಬೇಕು. ಗಿಂಡಿ, ತಂಬಿಗೆ, ತಯಾರಿಸಿದ ಪಂಚವರ್ಣದ ಮೇಲ್ಪಟ್ಟು ಇರಬೇಕು. ಬ್ರಾಹ್ಮಣದಂಪತಿಗಳನ್ನಲಂಕರಿಸಿ ಅದರಲ್ಲಿ ಕೂಡ್ರಿಸಬೇಕು ಮತ್ತು ಪೂಜಿಸತಕ್ಕದ್ದು. ನಂತರ ಮಧುಪರ್ಕಮಾಡಿ ಪೂಜಿಸಿ ದಾನಕೊಡತಕ್ಕದ್ದು, ದಾನಮಂತ್ರ : “ಯಥಾನಕೃಷ್ಣಶಯನಂ ಶೂನ್ಯಂ ಸಾಗರಜಾತಯಾ | ಶಯ್ಯಾತಾಪ್ಯಶೂನ್ಯಾಸ್ತು ತಥಾ ಜನ್ಮನಿ ಜನ್ಮನಿಯಸ್ಮಾದಶೂನ್ಯಶಯನಂ ಕೇಶವ ಶಿವ ಚಶಯ್ಯಾತಾಪಶೂನಾನ್ನು ತಥಾ ಜನ್ಮನಿ ಜನ್ಮನಿ” ಹೀಗೆ ಹೇಳಿ ಎಲ್ಲವನ್ನೂ ಕೊಟ್ಟು ನಮಸ್ಕರಿಸಿ ವಿಸರ್ಜಿಸುವದು. ಪದ್ಮಪುರಾಣದಲ್ಲಿ: ಲಲಾಟದ ಅಸ್ತಿಯನ್ನು ಚೂರ್ಣ ಮಾಡಿ ಪಾಯಸ ಸಹಿತವಾಗಿ ಬ್ರಾಹ್ಮಣದಂಪತಿಗಳಿಗೆ ಭೋಜನ ಮಾಡಿಸುವದು;ಎಂದಿದೆ. ಇದು ಸನಾತನ ವಿಧಿಯು;ಎಂದು ಹೇಳಿದೆ. ಇದು ದೇಶಾಚಾರದಲ್ಲಿಲ್ಲ. ಯಾವದಾದರೊಂದು ದೇಶದಲ್ಲಿದ್ದರೂ ಇರಬಹುದು! ಶಯ್ಯಾದಾನದ ಪ್ರಭಾವದಿಂದ ಆತನು ಇಂದ್ರಗೃಹದಲ್ಲಿಯೂ, ಲೋಕಪಾಲಕರ ಗೃಹದಲ್ಲಿಯೂ ಸುಖವಾಗಿ ವಾಸಿಸುವನಲ್ಲದೆ ಪ್ರಳಯ ಪರ್ಯಂತ ಅಖಂಡ ಸುಖವನ್ನನುಭವಿಸುವನು. ಪ್ರೇತಶಯ್ಯಾ ಪ್ರತಿಗ್ರಹಮಾಡಿದವನು ಮನುಷ್ಯ ಜನ್ಮವನ್ನೇ ಕೆಡಿಸಿಕೊಳ್ಳುವನು; ಮತ್ತು ಪುನಃಸಂಸ್ಕಾರಕ್ಕೆ ಯೋಗ್ಯನಾಗುವನು. ಉದಕುಂಭದಾನ ಪುತ್ರಾದಿಗಳು ಏಕಾದಶಾಹದಿಂದ ಸಂವತ್ಸರ ಪರ್ಯಂತವಾಗಿ ಪ್ರತಿದಿನ ಜಲ ಮತ್ತು ಧರ್ಮಸಿಂಧು ಅನ್ನದಿಂದ ಯುಕ್ತವಾದ ಕುಂಭದಾನ ಮಾಡಬೇಕು. ಸಂವತ್ಸರದ ಒಳಗೆ ಸಪಿಂಡೀಕರಣವಾದರೂ ಉದಕುಂಭದಾನ ಹಾಗೂ ಮಾಸಿಕಶ್ರಾದ್ಧಗಳನ್ನು ಮಾಡಬೇಕು. ನೂರಾರು ಶ್ರಾದ್ಧಗಳನ್ನು ಮಾಡಿದರೂ ಉದಕುಂಭದಾನವಿಲ್ಲದಿದ್ದರೆ ಅವರು ದರಿದ್ರರೂ, ದುಃಖಿಗಳೂ ಆಗಿ ಸಂಸಾರಸಾಗರದಲ್ಲಿ ತೊಳಲಾಡುವರು. ಸಂವತ್ಸರಪರ್ಯಂತ ನಿರ್ಮತ್ಸರನಾಗಿ ಉದಕುಂಭದಾನಮಾಡಿದವನು ಅಶ್ವಮೇಧದ ಯಜ್ಞದ ಫಲವನ್ನು ಹೊಂದುವನು. ಈ ಉದಕುಂಭಶ್ರಾದ್ಧವನ್ನು ಸಪಿಂಡೀಕರಣ ಪರ್ಯಂತ ಏಕೋದ್ದಿಷ್ಟ ವಿಧಿಯಿಂದ ಮಾಡತಕ್ಕದ್ದು. ಸಪಿಂಡೀಕರಣದ ನಂತರ ಪಾರ್ವಣವಿಧಿಯಿಂದ ಮಾಡುವದು. ಇದನ್ನು ತ್ರಯೋದಶ ದಿನದಿಂದಾರಂಭಿಸಿ ಮಾಡತಕ್ಕದ್ದೆಂದು “ಭಟ್ಟ"ರ ಮತವು, ಅನ್ನಪಿಂಡದಾನವು ಕೃತಾಕೃತವು. ಇದು ವಿಶ್ವದೇವರಹಿತವಾದದ್ದು. “ಈ ಸೋದ ಕುಂಭಪಾರ್ವಣಶ್ರಾದ್ದವು ದೇವರಹಿತವೂ, ಶ್ರಾದ್ಧಧರ್ಮರಹಿತವೂ ಆಗಿದ್ದು ಪ್ರತ್ಯಾಭಿಕಶ್ರಾದ್ಧ ಪರ್ಯಂತ ಪ್ರತಿದಿನ ಸಂಕಲ್ಪವಿಧಿಯಿಂದ ಮಾಡತಕ್ಕದ್ದು” ಹೀಗೆ ವಚನವಿದೆ. ಪ್ರಾಯಶ್ಚಿತ್ತಾಂಗ ವಿಷ್ಣು ಶ್ರಾದ್ಧದಂತೆ ಈ ಶ್ರಾದ್ಧದಲ್ಲೂ ಎಲ್ಲ ಶ್ರಾದ್ಧಧರ್ಮವಿರುವದಿಲ್ಲ. ಬರೇ ವಾಚನಿಕ (ಶ್ರಾದ್ಧದ ಹೆಸರು ಮಾತ್ರ) ವಾಗಿರುವದು. ಆದ್ದರಿಂದ ಸಾಂಕಲ್ಪಿಕ ವಿಧಿಯಿಂದ ಸಂಕಲ್ಪ, ಕ್ಷಣ, ಪಾದ್ಯ, ಆಸನ, ಗಂಧ, ಆಚ್ಛಾದನ ಪರ್ಯಂತ ಪೂಜನ, ಅನ್ನ ಪರಿವೇಷಣದ ವರೆಗೆ ಮಾಡಿ “ಪೃಥ್ವಿಪಾತ್ರಂ’ ಇತ್ಯಾದಿ ಹೇಳಿ “ವಿಷ ಉದಕುಂಭ ಇದಮನ್ನಂ ದತ್ತಂ ಚ” ಇತ್ಯಾದಿಗಳಿಂದ ಅನ್ನತ್ಯಾಗ ಮಾಡತಕ್ಕದ್ದು. ಕೊನೆಗೆ ತಾಂಬೂಲ, ದಕ್ಷಿಣಾದಿಗಳನ್ನು ಕೊಡುವದು. ಈ ಶ್ರಾದ್ಧದಲ್ಲಿ ಬ್ರಹ್ಮಚರ್ಯಾ, ಪುನರ್ಭೋಜನಾದಿ ನಿಯಮವಿಲ್ಲ. ನಾಂದೀಶ್ರಾಧ್ವನಿಮಿತ್ತವಾಗಿ ಮಾಸಿಕಾಪಕರ್ಷವಾದರೆ ಉದಕುಂಭಶ್ರಾಸ್ತ್ರಗಳನ್ನೂ ಅಪಕರ್ಷಣ ಮಾಡತಕ್ಕದ್ದು. ಯಾಕೆಂದರೆ ಅದೂ ಪ್ರೇತಶ್ರಾದ್ಧವು. ಉದಕುಂಭ ಶ್ರಾದ್ಧವಿಧಿ ಪ್ರತಿದಿನ ಸೋದಕುಂಭ ಅನ್ನದಾನದಲ್ಲಿ ಶಕ್ತಿಯಿಲ್ಲದಿದ್ದರೆ ಒಂದೇ ದಿನ ಅಷ್ಟು ಆಮಾನ್ನ ಮತ್ತು ಉದಕುಂಭ ಅಥವಾ ಅಷ್ಟು ಆಮಾನ್ನೋದಕುಂಭನಿಯ ಇವುಗಳಿಂದ ಅಪಕರ್ಷಣಮಾಡಿ ಶ್ರಾದ್ಧವನ್ನು ಮಾಡತಕ್ಕದ್ದು. ಸಂವತ್ಸರ ಮಧ್ಯದಲ್ಲಿ ಪ್ರತಿದಿನ ಉದಕುಂಭಶ್ರಾದ್ಧ ಮಾಡುವವನಿಗೆ ಆಶೌಚ ಬಂದರೆ ಅಷ್ಟು ಶ್ರಾದ್ಧೆಗಳು ದರ್ಶಾದಿಗಳಂತೆ ಲೋಪವಾಗುವವು. (ಪುನಃ ಮಾಡತಕ್ಕದ್ದಿಲ್ಲ) ಆಶೌಚಾನಂತರ ತೊಂದರೆಯಿಂದ ಮಾಡಲಾಗದಿದ್ದರೆ ಅವುಗಳನ್ನು ಮುಂದಿನ ಉದಕುಂಭದಿಂದ ಕೂಡಿ ತಂತ್ರದಿಂದ ಅತಿಕ್ರಾಂತ ಉದ ಕುಂಭ ಶ್ರಾದ್ಧವನ್ನು ಮಾಡತಕ್ಕದ್ದು. “ಅತಿಕ್ರಾಂತೋದಕುಂಭಶ್ರಾದ್ಧಾನಿ ಅದ್ಯತನೋದಕುಂಭಶ್ರಾದ್ಧಂಚ ತಂತ್ರೇಣ ಕರಿಷ್ಯ” ಹೀಗೆ ಸಂಕಲ್ಪಿಸುವದು. ಪ್ರಥಮ ಸಂವತ್ಸರದಲ್ಲಿ ದೀಪದಾನವೂ ಹೇಳಲ್ಪಟ್ಟಿದೆ. ಪರಲೋಕಮಾರ್ಗವು ತೀರ ಇಕ್ಕಟ್ಟಿನದು. ಸಂವತ್ಸರ ಮುಗಿಯುವ ವರೆಗೆ ಪ್ರೇತನ ಸುಖಕಾಮನೆಯಿಂದ ಪ್ರತಿದಿನ ದೀಪವನ್ನಿಡತಕ್ಕದ್ದು. ದೇವಸ್ಥಾನದಲ್ಲಿ ಅಥವಾ ಬ್ರಾಹ್ಮಣನ ಮನೆಯಲ್ಲಿ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ದೀಪವನ್ನಿಡತಕ್ಕದ್ದು. ಪಿತೃಸಂಬಂಧವಾದದ್ದನ್ನು ಜಲದಿಂದ ಸಂಕಲ್ಪಿಸಿ ದಕ್ಷಿಣಮುಖವಾಗಿ ಸುಸ್ತಿರವಾಗಿಡತಕ್ಕದ್ದು. ಪರಿಚ್ಛೇದ - ೩ ಉತ್ತರಾರ್ಧ ಷೋಡಶಮಾಸಿಕ ಮತ್ತು ಕಾಲಗಳು 8.92 ಪ್ರತಿ ತಿಂಗಳಿಗೊಂದರಂತೆ ಹನ್ನೆರಡು ಊನಮಾಸ, ಪಕ್ಷ, ಉನಷಾಣ್ಮಾಸಿಕ, ಊನಾಬ್ಲಿಕ ಹೀಗೆ ಹದಿನಾರು ಮಾಸಿಕಗಳು ಈ ವಿಷಯದಲ್ಲಿ ಬೇರೆ ಬೇರೆ ಮತಗಳನ್ನು ನಿರ್ಣಯಸಿಂಧುವಿನಲ್ಲಿ ಹೇಳಿದೆ. ಮಾಸದ ಆದಿಯಲ್ಲಿ ಮಾಸಿಕ ಮಾಡುವದು. ಆದರೆ ಆದ್ಯಮಾಸಿಕವನ್ನು ಏಕಾದಶಾಹದಲ್ಲಿ ಮಾಡುವದು. (ಆಶೌಚವಾದ ಕಾರಣ ನಿವೃತ್ತಿಯಲ್ಲಿ ಮಾಡುವದು) ಊನಮಾಸಿಕವನ್ನು ಒಂದು ಅಥವಾ ಎರಡು ಇಲ್ಲವೆ ಮೂರುದಿನ ಕಡಿಮೆಯಿರುವಾಗ ಮಾಡತಕ್ಕದ್ದು. ಉನಾಬ್ದ, ಊನಷಾಣ್ಮಾಸಿಕಗಳನ್ನೂ ಹೀಗೆಯೇ ಮಾಡತಕ್ಕದ್ದು. ಪಾಕ್ಷಿಕವನ್ನು ತ್ರಿಪಕ್ಷದಲ್ಲಿ ಮಾಡುವದು ಅಥವಾ ಊನಮಾಸಿಕವನ್ನು ದ್ವಾರಶಾಹದಲ್ಲಿಯಾದರೂ ಮಾಡಬಹುದು. ಊನಮಾಸಿಕ, ಊನ ಷಾಣ್ಮಾಸಿಕ, ಊನಾದ್ದಿಕಗಳನ್ನು ಒಂದು ದಿನವಿರುವಾಗ ಅಂದರೆ ಪಂಚಮಿಯಲ್ಲಿ ಮೃತನಾದವನ ಮಾಸಿಕವನ್ನು ತೃತೀಯೆಯಲ್ಲಿಯೂ, ಎರಡು ದಿನ ಊನವಾಗಿ ಮಾಡಿದಲ್ಲಿ ದ್ವಿತೀಯಯಲ್ಲಿಯೂ, ಮೂರುದಿನ ಊನವಾಗಿ ಮಾಡುವಲ್ಲಿ ಪ್ರತಿಪದಿಯಲ್ಲಿಯೂ ಮಾಡತಕ್ಕದ್ದೆಂದು ಕೆಲವರ ಮತವು. ಮಾಧವಮತದಂತೆ ಊನಷಾಣ್ಮಾಸಿಕ, ಊನಾಬ್ದಕಗಳನ್ನು ಮೃತಾಹಕ್ಕಿಂತ ಮುಂಚಿನ ದಿನ ಮಾಡಬೇಕು; ಮತ್ತು ಪಾಕ್ಷಿಕವನ್ನು ತ್ರಿಪಕ್ಷ ಕಳೆದ ನಂತರ ಮೃತಾಹದಲ್ಲಿ ಮಾಡುವದು. ಆಹಿತಾಗ್ನಿಗೆ ವಿಶೇಷ ಆಹಿತಾಗ್ನಿಗೆ ಸಂಸ್ಕಾರವಾದ ದಿನವೇ ಮುಖ್ಯಮೃತಾಹವೆಂದು ತಿಳಿದು ತಪಾಕ್ಷಿಕ ಪರ್ಯಂತ ಮಾಸಿಕಗಳನ್ನು ಸಂಸ್ಕಾರ ಮಾಡಿದ ತಿಥಿಯಲ್ಲೂ ಅದಕ್ಕೂ ಮುಂದಿನ ಮಾಸಿಕ ಹಾಗೂ ಪ್ರತ್ಯಾಭಿಕ ಇವುಗಳನ್ನು ಮೃತತಿಥಿಯಲ್ಲಿ ಮಾಡತಕ್ಕದ್ದು. ಹೀಗಿರುವದರಿಂದ ಶ್ರೀಮಾಸಕ್ಕಿಂತ ಮುಂದೆ ಸಂಸ್ಕಾರವಾದರೆ ಆದ್ಯಮಾಸಿಕವನ್ನು ದಾಹದಿಂದ ಹನ್ನೊಂದನೇ ದಿನ ಮಾಡತಕ್ಕದ್ದು. ಹೀಗೆ ತೋರುತ್ತದೆ. ತ್ರಿಪಕ್ಷಪರ್ಯಂತದ ಮಾಸಿಕಗಳನ್ನು ಸಂಸ್ಕಾರವಾದ ತಿಥಿಯಲ್ಲಿ ಮಾಡಿ ಉಳಿದ ಅತಿಕ್ರಾಂತ ಮಾಸಿಕಗಳನ್ನು ಮೃತತಿಥಿಯಲ್ಲಿ ಪ್ರಾಪ್ತವಾಗಿದ್ದ ಮಾಸಿಕದಿಂದ ಕೂಡಿ ಮಾಡತಕ್ಕದ್ದು. ಊನಾದ್ಧದಲ್ಲಿ ವರ್ಜಗಳು ದ್ವಿಪುಷ್ಕರ, ತ್ರಿಪುಷ್ಕರಯೋಗ, ನಂದಾತಿಥಿ, ಅಮಾವಾಸೆ, ಶುಕ್ರವಾರ, ಚತುರ್ದಶೀ, ಕೃತ್ತಿಕಾ ಇವುಗಳಲ್ಲಿ ಊನಮಾಸಿಕವನ್ನು ಮಾಡಬಾರದು. ತ್ರಿಪುಷ್ಕರ-ದ್ವಿಪುಷ್ಕರ ಯೋಗಗಳ ಲಕ್ಷಣವನ್ನು ಹಿಂದೆಯೇ ಹೇಳಿದ. “ಆದ್ಯಮಾಸಿಕ ಮತ್ತು ಆದ್ಯಾಬ್ಲಿಕಗಳನ್ನು ಏಕಾದಶಾಹದಲ್ಲಿ ಮಾಡತಕ್ಕದ್ದೆಂಬುದೊಂದು ಪಕ್ಷ”, “ಆದ್ಯಮಾಸಿಕವನ್ನು ಮಾತ್ರ ಹನ್ನೊಂದನೇದಿನ, ಪ್ರಥಮಾಬ್ಲಿಕವನ್ನು ದ್ವಿತೀಯ ವರ್ಷಾರಂಭ ದಿನ ಮಾಡತಕ್ಕದ್ದೆಂದು ಇನ್ನೊಂದು ಪಕ್ಷ” ಹೀಗೆ ಹೇಳಿದೆ. ಈ ಷೋಡಶಶ್ರಾದ್ಧಗಳನ್ನು ವರ್ಷಾಂತದಲ್ಲಿ ಸಪಿಂಡೀಕರಣ ಮಾಡುವದಿದ್ದಲ್ಲಿ ಹೇಳಿದ ಆಯಾಯ ಕಾಲಗಳಲ್ಲಿಯೇ ಏಕೋದ್ದಿಷ್ಟವಿಧಿಯಿಂದ ಮಾಡತಕ್ಕದ್ದು. “ಷೋಡಶಶಾಸ್ತ್ರಗಳನ್ನು ಮಾಡದೆ ಸಪಿಂಡೀಕರಣ ಮಾಡಬಾರದು”. ಹೀಗೆ ವಚನವಿರುವದರಿಂದ ಷೋಡಶಶ್ರಾದ್ಧ ಹೊರತಾಗಿ ಸಪಿಂಡೀಕರಣಕ್ಕೆ ಅಧಿಕಾರ ಬರುವದಿಲ್ಲ. ಇವುಗಳನ್ನು ಪಕ್ವಾನ್ನದಿಂದ ಅಥವಾ ಆಮಾನ್ನದಿಂದ ಮಾಡತಕ್ಕದ್ದು. ಒಂದೇ ಕಾಲದಲ್ಲಿ ಪಾಕದಿಂದ ಮಾಡುವದಿದ್ದರೆ ಎಲ್ಲವುಗಳಿಗೂ ಕೂಡಿ ಒಂದೇ ಪಾಕವು, ಹದಿನಾರು ಬ್ರಾಹ್ಮಣರು, ಹದಿನಾರು ಅರ್ಘಗಳು, ಹದಿನಾರು ಪಿಂಡಗಳು. ಇವುಗಳನ್ನೂ ದ್ವಾದಶಾಹಾದಿಗಳಲ್ಲಿ ಸಪಿಂಡೀಕರಣ ಪೂರ್ವದಲ್ಲಿ ಮಾಡಿದ್ದರೂ ಪುನಃ ೫೨೮ ಧರ್ಮಸಿಂಧು ಸಪಿಂಡೀಕರಣದ ನಂತರ ಆಯಾಯ ಕಾಲಗಳಲ್ಲಿ ಪಾರ್ವಣವಿಧಿಯಿಂದ ಮಾಡತಕ್ಕದ್ದು. ಸಂವತ್ಸರದ ಒಳಗೆ ಸಪಿಂಡೀಕರಣವಾದ ಮೇಲಾದರೂ ಪುನಃ ವಿಧಿಯುಕ್ತವಾಗಿ ಷೋಡಶಮಾಸಿಕಶ್ರಾದ್ಧಗಳಾಗತಕ್ಕದ್ದು. ಸಂವತ್ಸರದ ಒಳಗೆ ಸಪಿಂಡೀಕರಣವಾಗುವದಿದ್ದಲ್ಲಿ ಮಾಸಿಕಗಳು ದ್ವಿರಾವೃತ್ತವಾಗುವವು ಎಂದು ಗೌತಮನು ಹೇಳಿರುವನು. ಇತ್ಯಾದಿ ವಚನಗಳಿವೆ. ಷೋಡಶಮಾಸಿಕಗಳು ದ್ವಿರಾವೃತ್ತಿ ಹೊಂದುವದು-ಏಕಾದಶಾಹದಲ್ಲಿ ಸಪಿಂಡೀಕರಣವಾದರೆ ಮಾತ್ರ. ಯಾಕೆಂದರೆ ಅದರಲ್ಲಿ ಆದ್ಯಮಾಸಿಕವಿರುತ್ತದೆ. ದ್ವಾದಶಾಹದಲ್ಲಿ ಸಪಿಂಡೀಕರಣವಾದಲ್ಲಿ ಪಂಚದಶಮಾಸಿಕಗಳ ದ್ವಿರಾವೃತ್ತಿಯಾಗುವದು. ತ್ರಿಪಕ್ಷದಲ್ಲಿ ಸಪಿಂಡೀಕರಣವಾಗುತ್ತಿದ್ದರೆ ಆದ್ಯಮಾಸಿಕ, ಊನಮಾಸಿಕ, ದ್ವಿತೀಯ ಮಾಸಿಕಗಳು ಸ್ವಕಾಲದಲ್ಲಾಗಿರುವದರಿಂದ, ಅದರಿಂದ ಮುಂದೆ ಆಗುವ ಮಾಸಿಕಗಳು ಮಾತ್ರ “ರಾವೃತ್ತವಾಗುತ್ತವೆ. ಯಾಕೆಂದರೆ ಉಳಿದವುಗಳಿಗೆ “ಕಾಲ"ವಿಲ್ಲದಿರುವದರಿಂದ ತ್ರಯೋದಶಮಾಸಿಕಗಳಿಗೆ ಮಾತ್ರ ದ್ವಿರಾವೃತ್ತಿಯು. ಹೀಗೆ ಬೇರೆ ಪಕ್ಷಗಳಲ್ಲಿಯಾದರೂ ಯಥಾಸಂಭವ ಊಹಿಸತಕ್ಕದ್ದು. ದ್ವಾದಶಾಹದಲ್ಲಿ ಸಪಂಡೀಕರಣ ಮಾಡಿ ತ್ರಯೋದಶಾದಿಗಳಲ್ಲಿ ಆದ್ಯಮಾಸಿಕಸಹಿತ ಷೋಡಶಮಾಸಿಕಗಳ ಪುನರಾವೃತ್ತಿಯಾಗಬೇಕೆಂದು ಹೇಳುವವರು ಭ್ರಾಂತರೇ ಸರಿ. ಮರಣದಿನದಿಂದ ಹಿಡಿದು ದ್ವಾದಶಮಾಸಗಳ ಮಧ್ಯದಲ್ಲಿ ಯಾವದಾದರೂ ಮಾಸವು ಅಧಿಕವಾದಾಗ ಆ ಮಾಸಕ್ಕೆ ಸಂಬಂಧಿಸಿದ ಮಾಸಿಕಶ್ರಾದ್ಧವನ್ನು ಅಧಿಕ ಮತ್ತು ಶುದ್ಧ ಹೀಗೆ ಎರಡೂ ಮಾಸಗಳಲ್ಲಿ ಮಾಡತಕ್ಕದ್ದು. ಆಗ ಹದಿನೇಳು ಮಾಸಿಕಗಳಾದಂತಾಗುವದು. ಮಲಮಾಸದಲ್ಲಿ ಮೃತನಾದವನಿಗೆ ಏಕಾದಶಾಹದಲ್ಲಿ ಆದ್ಯಮಾಸಿಕವನ್ನು ಮಾಡಿ ದ್ವಿತೀಯ ಶುದ್ಧಮಾಸದ ಮೃತತಿಥಿಯಲ್ಲಿ ಪುನಃ ಅದನ್ನು ಮಾಡಿ ಸ್ವಲ್ಪ ಊನವಾದ ದ್ವಿತೀಯಮಾಸದಲ್ಲಿ ಊನಮಾಸಿಕವನ್ನೂ, ತೃತೀಯಮಾಸದ ಆರಂಭದಲ್ಲಿ ದ್ವಿತೀಯ ಮಾಸಿಕವನ್ನೂ, ಎರಡುವರೆ ಮಾಸದ ಅಂತ್ಯದಲ್ಲಿ ಪಾಕ್ಷಿಕ"ವನ್ನೂ ಮಾಡತಕ್ಕದ್ದು. ಸಪಿಂಡಿಯ ನಂತರ ಅಮಷ್ಟಮಾಸಿಕಗಳನ್ನು ಆಯಾಯ ಕಾಲಗಳಲ್ಲೇ ಮಾಡತಕ್ಕದ್ದು, ನಾಲ್ಕು ತಲೆಮಾರಿನ ಸಪಿಂಡರಲ್ಲಿ ನಾಂದೀಶ್ರಾದ್ಧ ಪ್ರಾಪ್ತವಾದಲ್ಲಿ ಯಾವ ಮಾಸದಲ್ಲಿ ನಾಂದಿಯಾಗುವದೋ ಆ ಮಾಸದಲ್ಲಿಯೇ ಒಂದೇ ದಿನ ಮುಂದಿನ ಸರ್ವಮಾಸಿಕಗಳನ್ನೂ ಅಪಕರ್ಷಣದಿಂದ ಮಾಡತಕ್ಕದ್ದು. ಎಲ್ಲ ಪ್ರೇತಶ್ರಾದ್ಧ ಹಾಗೂ ಸಪಿಂಡೀಕರಣವನ್ನಾದರೂ ನಾಂದೀಶ್ರಾದ್ಧದ ಸಲುವಾಗಿ ಅಪಕರ್ಷಿಸಿ ಮಾಡತಕ್ಕದ್ದು. ಹೀಗೆ ಉಕ್ತಿಯಿದೆ. ಈ ಅಪಕರ್ಷಣಶ್ರಾದ್ಧದಲ್ಲಿ ಒಂದೇ ಪಾಕವು. ಷೋಡಶಶ್ರಾದ್ಧ ಮಾಡುವ ಪಕ್ಷದಲ್ಲಿ ಹದಿನಾರು ಬ್ರಾಹ್ಮಣರು, ನಾಲ್ವತ್ತೆಂಟು ಪಿಂಡಗಳು (ಪಾರ್ವಣವಾದ್ದರಿಂದ) ಪುರೂರವಾದ್ರ್ರವ ವಿಶ್ವೇದೇವರ ಸಲುವಾಗಿ ಒಬ್ಬ ಬ್ರಾಹ್ಮಣನು. ಹೀಗೆ ಎಲ್ಲವನ್ನೂ ಮಾಡುವದು. ಮಾಸಿಕ ಸಂಖ್ಯಾನುಸಾರವಾಗಿ ಬ್ರಾಹ್ಮಣಾದಿಗಳನ್ನೂ ಹಿಸುವದು. ಕೆಲವರು ಪಾಕವು ಪ್ರತ್ಯೇಕವಾಗಬೇಕೆನ್ನುವರು. ಉದಕುಂಭಶ್ರಾಸ್ತ್ರಗಳಿಗಾದರೂ ಅನುಮಾಸಿಕದಂತ ಪ್ರೇತೋದ್ದೇಶಕಗಳಾದ ಕಾರಣ ಅವುಗಳನ್ನೂ ಅಪಕರ್ಷಣ ಮಾಡಬಹುದೆಂದು ಹೇಳುವರು. ಶ್ರಾದ್ಧ ಹೊರತಾಗಿ ಅನುಮಾಸಿಕಗಳ ಅಪಕರ್ಷಣಮಾಡಿದರೆ ಮಹಾದೋಷವೆಂದು “ಉಶನಸನು ಹೇಳಿರುವನು, ಮತ್ತು ನಾಂದೀಶ್ರಾದ್ಧದ ಸಲುವಾಗಿಯಲ್ಲದೆಪರಿಚ್ಛೇದ ೩ ಉತ್ತರಾರ್ಧ ೫೨೯ ಪ್ರೇತಶ್ರಾದ್ಧಗಳನ್ನಪಕರ್ಷಿಸಿದರೆ ಶ್ರಾದ್ಧ ಕರ್ತನು ಪಿತೃಗಳಿಂದ ಕೂಡಿ ಘೋರ ನರಕಯಾತನೆಯನ್ನನುಭವಿಸುವನು; ಎಂದೂ ಹೇಳಿರುವನು. ನಾಲ್ಕು ತಲೆಮಾರಿನ ಸಪಿಂಡರಲ್ಲಿ “ಆಧಾನಾ” ದಿ ಪ್ರಾಪ್ತಿನಿಮಿತ್ತಕವಾಗಿ ಆದರೂ ಅಪಕರ್ಷಣ ಮಾಡತಕ್ಕದ್ದು. ಈ ವಿಷಯದಲ್ಲಿ ವಿಶೇಷವನ್ನು ಪೂರ್ವಾರ್ಧದಲ್ಲಿ ಹೇಳಿದೆ. ಮಾಸಿಕಾದಿಗಳು ಸೂತಕಾದಿಗಳಿಂದ ತಡೆದು ನಿಂತಿದ್ದರೆ ಸೂತಕಾಂತದಲ್ಲಿ ಮಾಡುವ ಮಾಸಿಕದಿಂದ ಕೂಡಿ ತಂತ್ರದಿಂದ ಮಾಡತಕ್ಕದ್ದೆಂದು ಹೇಳಿದೆ. ಸಪಿಂಡೀಕರಣ ವಿಚಾರ, ಸಪಿಂಡನ ಕಾಲ “ಸಾಗ್ನಿಕನಾದ ಪುತ್ರನು ಸಪಿಂಡೀಕರಣವನ್ನು ಮಾಡದ ಪಿತೃಯಜ್ಞವನ್ನು ಮಾಡಬಾರದು” ಹೀಗೆ ಉಕ್ತಿಯಿರುವದರಿಂದ ಪಿತ್ರಾದಿ-ಮಾತ್ರಾದಿ ಮೂರು ಪಿತೃಗಳ ಮಧ್ಯದಲ್ಲಿ ಯಾವನಾದರೊಬ್ಬನು ಮರಣಹೊಂದಿದರೆ ಸಾಗ್ನಿಕನಾದವನು ದ್ವಾದಶಾಹದಲ್ಲಿ ಸಪಿಂಡೀಕರಣವನ್ನು ಮಾಡಿ, ಮುಂದೆ ಬರುವ ಅಮಾವಾಸೆಯಲ್ಲಿ ಪಿಂಡಪಿತೃಯಜ್ಞಾದಿಗಳನ್ನು ಮಾಡತಕ್ಕದ್ದು, ಇಲ್ಲಿ ಸಾಗ್ನಿಕನೆಂದರೆ ಬರೇ “ಶ್ರತಾಗ್ನಿ"ಯಂದು ತಿಳಿಯತಕ್ಕದ್ದಲ್ಲ. ಸ್ಮಾರ್ತಾಗ್ನಿಯುಳ್ಳವನನ್ನೂ ಇಲ್ಲಿ ಹಿಡಕೊಂಡಿದೆ. ಅವನಿಗಾದರೂ ಪಿಂಡಪಿತೃಯಜ್ಞಾದಿಗಳ ಆವಶ್ಯಕತೆಯಿರುತ್ತದೆ. ಪ್ರೇತನು ಸಾಗ್ನಿಕನಿದ್ದರೆ ತ್ರಿಪಕ್ಷದಲ್ಲೇ ಸಪಿಂಡೀಕರಣ ಮಾಡತಕ್ಕದ್ದು. “ಪ್ರೇತನು ಆಹಿತಾಗ್ನಿಯಾಗಿ ಕರ್ತನು ನಿರಗ್ನಿಕನಾದರೆ ತ್ರಿಪಕ್ಷದಲ್ಲಿ ಸಪಿಂಡೀಕರಣ ಮಾಡತಕ್ಕದ್ದು.” ಹೀಗೆ ಉಕ್ತಿಯಿದೆ. ಇಲ್ಲಿ “ಸಾಗ್ನಿ” ಅಂದರೆ “ಶ್ರತಾಗಿ” ಎಂದು ತಿಳಿಯಬೇಕು. ಇಬ್ಬರೂ ಸಾಗ್ನಿಕರಾದರೆ ದ್ವಾದಶಾಹದಲ್ಲೇ ಮಾಡತಕ್ಕದ್ದೆಂದು ವಚನವಿದೆ. ಇಬ್ಬರೂ ಅನಗ್ನಿಗಳಾದರೆ ಬೇರೆ ಬೇರೆ ಕಾಲಗಳಲ್ಲಿ ಮಾಡಬಹುದು. ಯಜಮಾನನು ಅನಗ್ನಿಯಾಗಿ, ಪ್ರೇತನೂ ಅನಗ್ನಿಯಾದರೆ ಸಂವತ್ಸರದ ಅಂತದಲ್ಲಾದರೂ ಮಾಡಲಡ್ಡಿಯಿಲ್ಲ. ಹನ್ನೊಂದನೇ ತಿಂಗಳಲ್ಲಿ, ಆರನೇ ಮಾಸದಲ್ಲಿ, ಮೂರನೇ ತಿಂಗಳಲ್ಲಿ, ತ್ರಿಪಕ್ಷದಲ್ಲಿ, ಮಾಸಾಂತ್ಯದಲ್ಲಿ ಅಥವಾ ದ್ವಾದಶಾಹದಲ್ಲಿ ಇಲ್ಲವೆ ಏಕಾದಶಾಹದಲ್ಲಿ ಇವು ಮಾಡುವ ಕಾಲಗಳು ಮತ್ತು ನಾಂದೀಶ್ರಾದ್ಧ ಪ್ರಾಪ್ತವಾದಾಗ ಅದೂ ಒಂದು ಕಾಲವೇ ಇಲ್ಲಿ ವೃದ್ಧಿ ನಿಮಿತ್ತಕವಾದ ಅಪಕರ್ಷವು ನಿರಗ್ನಿಯಾದವನಿಗೆ ಹೇಳಿದೆ. ಆದಾಗ್ಯೂ ಸಾಗ್ನಿಕನಿಗೂ ಸಂಭವವಾದಲ್ಲಿ ಯೋಜಿಸತಕ್ಕದ್ದು, ಇಲ್ಲಿ ವೃದ್ಧಿ ಶಬ್ದವು ಚೌಲ, ಉಪನಯನ, ವಿವಾಹಗಳಿಗೆ ಮಾತ್ರ ಹೇಳಿದ್ದು. ಸೀಮಂತಾದಿ ಸಂಸ್ಕಾರಗಳಲ್ಲಿ ವೃದ್ಧಿ ಶ್ರಾದ್ಧವನ್ನೇ ಲೋಪಮಾಡತಕ್ಕದ್ದು. ಹೊರತು ಅದಕ್ಕಾಗಿ ಸಪಿಂಡನ ಅಪಕರ್ಷ ಮಾಡತಕ್ಕದ್ದಲ್ಲವೆಂದು ಕೆಲವರು ಹೇಳುವರು. ಬೇರೆ ಕೆಲವರು ಗರ್ಭಾಧಾನ, ಪುಂಸವನಾದಿ, ಅನ್ನಪ್ರಾಶನಾಂತವಾದ ಸಂಸ್ಕಾರಗಳಲ್ಲಿ ಅವುಗಳನ್ನು ಮಾಡದಿದ್ದರೆ ದೋಷವುಂಟಾಗುವದರಿಂದ ಅವುಗಳಿಗೆ ಆವಶ್ಯಕವಾದ ವೃದ್ಧಿ ಶ್ರಾದ್ಧವೂ ಆವಶ್ಯಕವಾಗುವದರಿಂದ “ಸಪಿಂಡೀಕರಣ"ದ ಅಪಕರ್ಷವಾಗತಕ್ಕದ್ದೆಂದು ಹೇಳುವರು; ಮತ್ತು ನಾಲ್ಕು ತಲೆಮಾರಿನ ಸಪಿಂಡರಲ್ಲಿ ಸಪಿಂಡೀಕರಣವಾಗದಿದ್ದರೆ ಗರ್ಭಾಧಾನಾದಿಗಳನ್ನೂ ಮಾಡಕೂಡದು; ಎಂದೂ ಹೇಳುವರು. ಆದುದರಿಂದ ಪಿತಾಮಹನ ಮರಣವಾದರೆ ಪೌತ್ರನಿಗೆ ನಾಂದೀಶ್ರಾದ್ಧ ಪ್ರಾಪ್ತವಾದಲ್ಲಿಯೂ “ಅಪಕರ್ಷ” ವಾಗತಕ್ಕದ್ದು, ಸಪಿಂಡೀಕರಣ ಮತ್ತು ಅನುಮಾಸಿಕಗಳು ಅಪಕೃಷ್ಟಗಳು ಎಂದಭಿಪ್ರಾಯ. ಹೀಗೆ ಆವಶ್ಯಕ ವೃದ್ಧಿಶ್ರಾದ್ಧವಾಗಬೇಕಿದ್ದ ಕರ್ಮವು ಪ್ರಾಪ್ತವಾದಾಗ ಕನಿಷ್ಠನಾದ ಪುತ್ರನಾಗಲೀ, ಭ್ರಾತೃವಾಗಲೀ, ಅನ್ಯಭ್ರಾತೃ ಪುತ್ರನಾಗಲೀ, M&O ಧರ್ಮಸಿಂಧು ಅನ್ಯಸಪಿಂಡನಾಗಲೀ, ಗೌಣಕರ್ತನಾದ ಶಿಷ್ಯನಾಗಲೀ ಕುಲಪ್ರಾಪ್ತವಾದ ನಾಂದಿಸಿದ್ದಿಗಾಗಿ ಸಪಿಂಡನಾದಿಗಳ ಅಪಕರ್ಷವನ್ನು ಮಾಡತಕ್ಕದ್ದು. ಅದರಲ್ಲಿ ಮಾಡಿದಲ್ಲಿ ಮುಖ್ಯನಾದ ಪುತ್ರನಿಗೆ (ಪುತ್ರಾದಿಗಳಿಗೆ) ಪುನಃಕರಣ ಮಾಡತಕ್ಕದ್ದಿಲ್ಲ. ವೃದ್ಧಿ ನಿಮಿತ್ತಕವಾಗಿ ಮಾಡಿದಲ್ಲಿ ಪುನಃ ಅಪಕರ್ಷಣವಿರುವದಿಲ್ಲ. “ಯೇವಾಭದ್ರಂ ದೂಷಯಂತ ಸ್ವಧಾಭಿಃ ಅಂದರೆ ಯಾರು ಸ್ವಧಾಶಬ್ದದಿಂದ ಮಂಗಲವನ್ನು ಕೆಡಿಸುವರೋ ಇತ್ಯಾದಿಯಾಗಿ ಕೃತಿಗಳಲ್ಲಿ ದೋಷವನ್ನು ಹೇಳಿದೆ. ಆದುದರಿಂದ ವೃದ್ಧಿ ಶ್ರಾದ್ಧವಾದ ಮೇಲೆ ಅಪಕರ್ಷ ಮಾಡಬಾರದೆಂದರ್ಥ. ವೃದ್ಧಿ ಶ್ರಾದ್ಧ ಹೊರತಾಗಿ ಗೌಣಕರ್ತನಿಂದ ಸಪಿಂಡೀಕರಣಾದಿಗಳು ಮಾಡಲ್ಪಟ್ಟಿದ್ದರೆ ಮುಖ್ಯಾಧಿಕಾರಿ ಪುತ್ರಾದಿಗಳಿಂದ ಅದನ್ನು ಪುನಃ ಮಾಡತಕ್ಕದ್ದು. ಏಕಾದಶಾಹಾಂತ ಕರ್ಮಗಳಿಗಾದರೆ ಪುನಃ ಕರಣವಿಲ್ಲವೆಂದು ಹೇಳಿದೆ. ಇಲ್ಲಿ “ಆವಶ್ಯಕ ಈ ಪದದಿಂದ ಅನನ್ಯಗತಿಕವಾದ “ವೃದ್ಧಿ ಕರ್ಮ” ಎಂದು ತಿಳಿಯತಕ್ಕದ್ದು. ಅವಕಾಶವಿರುವ ಉಪನಯನಾದಿಗಳಲ್ಲಿಯೂ, ವಿವಾಹಾದಿಗಳಲ್ಲೂ ಅಪಕರ್ಷಮಾಡತಕ್ಕದ್ದಿಲ್ಲ. ಅವಕಾಶವಿರುವ ಇಷ್ಟ (ಯಜ್ಞಾದಿಗಳು) ಪೂರ್ತ (ಕರ, ಬಾವಿ ಮೊದಲಾದ ಪುಣ್ಯಕರ್ಮ) ಮೊದಲಾದವುಗಳಲ್ಲಿಯೂ ಅಪಕರ್ಷಣವಿಲ್ಲ. ಹೀಗೆ ವ್ಯವಸ್ಥೆಯನ್ನು ಯೋಜಿಸತಕ್ಕದ್ದು. ಕುಲಧರ್ಮಗಳು ಅನಂತವಾಗಿವೆ. ಪುರುಷರ ಆಯುಸ್ಸು ಕ್ಷೀಣವಾಗುತ್ತಿರುವದು. ಶರೀರವು ಅಸ್ಥಿರವಾದದ್ದು. ಆದಕಾರಣ ದ್ವಾದಶಾಹವೇ ಸಪಿಂಡೀಕರಣಕ್ಕೆ ಯೋಗ್ಯವಾದ ಕಾಲವು, ಇಲ್ಲಿ ಕುಲಧರ್ಮ ಎಂಬ ಪಾದದಿಂದ “ವೃದ್ಧಿ ಶ್ರಾದ್ಧಯುಕ್ತವಾದ ಕರ್ಮ” ಎಂದು ಗ್ರಹಿಸತಕ್ಕದ್ದು, ಹೊರತು ಪಂಚಯಜ್ಞ ದೇವಪೂಜಾ, ಶ್ರಾದ್ಧಾದಿಗಳಲ್ಲ. ಇವು ವರ್ಣಧರ್ಮಗಳಾದ್ದರಿಂದ ನಿತ್ಯಗಳಾಗಿರುವವು. ಇವುಗಳಿಗೆ ಸಪಿಂಡೀಕರಣ ನಿಮಿತ್ತಕವಾದ ಪ್ರತಿಬಂಧಕವಿರುವದಿಲ್ಲ. ಸಪಿಂಡೀಕರಣಕ್ಕಿಂತ ಪೂರ್ವದಲ್ಲಿ ಪಂಚಯಜ್ಞಾದಿ ಧರ್ಮಗಳನ್ನು ಮಾಡತಕ್ಕದ್ದಲ್ಲವೆಂದು ಯಾವ ಸ್ಮೃತಿಯಲ್ಲೂ ಕಂಡುಬರುವದಿಲ್ಲ. ಇದರಿಂದ ಸಪಿಂಡೀಕರಣವಾಗದಿದ್ದರೆ ಸಪಿಂಡರಲ್ಲಿ ದೇವಪೂಜಾ, ಶ್ರಾದ್ಧಾದಿ ಧರ್ಮಗಳಿಗೆ “ಪ"ವೆಂದು ಹೇಳುವವರ ಮಾತು ನಿರ್ಮೂಲವಾದ್ದರಿಂದ ಉಪೇಕ್ಷಿಸತಕ್ಕದ್ದು. ಇದರಲ್ಲಿ “ದ್ವಾದಶಾಹ” ಎಂಬ ಪದದಿಂದ ಆಶೌಚ ಸಮಾಪ್ತಿಯ ನಂತರದ ದಿವಸ ಎಂದು ತಿಳಿಯತಕ್ಕದ್ದು. ಈ ಕಾರಣದಿಂದ ತ್ರಿದಿನ ಆಶೌಚದಲ್ಲಿ ಐದನೇದಿನ ಸಪಿಂಡೀಕರಣವು “ದ್ವಾದಶಾಹಾದಿ ಕಾಲಗಳಲ್ಲಿ ಪ್ರಮಾದವಶದಿಂದ ಸಪಿಂಡೀಕರಣವಾಗದಿದ್ದರೆ, ಮುಂದೆ ಉಕ್ತಕಾಲಗಳಲ್ಲಿ ಮಾಡತಕ್ಕದ್ದು. ಈ ಮುಂದಿನ ಕಾಲದಲ್ಲಿ ಮಾಡುವಿಕೆಯು ಸಾಗ್ನಿಕ ಮತ್ತು ನಿರಗ್ನಿಕರಿಗೆ ಸಮಾನವಾದದ್ದು.” ಸಪಿಂಡೀಕರಣವನ್ನು ಉಕ್ತಕಾಲದಲ್ಲಿ ಮಾಡಲಾಗದಿದ್ದರೆ ಹಸ್ತ, ಆದ್ರ್ರಾ, ರೋಹಿಣೀ, ಅನುರಾಧಾ ಈ ನಕ್ಷತ್ರಗಳಲ್ಲಿ ಮಾಡತಕ್ಕದ್ದು. ಇದಾದರೂ ಇಬ್ಬರಿಗೂ ಸಾಧಾರಣವಾದದ್ದು. “ಸ್ಮತ್ಯರ್ಥಸಾರದಲ್ಲಿ ವರ್ಷಾಂತದಲ್ಲಿ ಸಪಿಂಡೀಕರಣ ಮಾಡುವ ಪಕ್ಷದಲ್ಲಿ ವರ್ಷಾಂತ್ಯ ದಿನದಲ್ಲಿ ಮೊದಲು ಸಂವತ್ಸರ ವಿಮೋಕ್ಷ ಶ್ರಾದ್ಧವನ್ನು ಮಾಡಿ ಸಪಿಂಡೀಕರಣವನ್ನೂ ಮಾಡಿ ಮಾರನೇದಿನ ಮೃತತಿಥಿಯಲ್ಲಿ ವಾರ್ಷಿಕವನ್ನು ಮಾಡತಕ್ಕದ್ದೆಂದು ಹೇಳಿದ. ಹೀಗೆ ಸಪಿಂಡೀಕಾಲ ವಿಚಾರವು. ಪುತ್ರನು ಪರದೇಶದಲ್ಲಿರುತ್ತಿದ್ದರೂ ಮನೆಯಲ್ಲಿ ಬೇರೆಯವರು ಸಪಿಂಡೀಕರಣಮಾಡತಕ್ಕದ್ದಲ್ಲ. ಪರಿಚ್ಛೇದ ೩ ಉತ್ತರಾರ್ಧ ೫೩೧ ಪುತ್ರರಲ್ಲಾದರೂ ಜೇಷ್ಠನು ವಿದೇಶದಲ್ಲಿದ್ದರೆ ಕನಿಷ್ಕನು ಮಾಡತಕ್ಕದ್ದಲ್ಲ. ಜೇಷ್ಠನ ಅಸನ್ನಿಧಿಯಲ್ಲಿ ಕನಿಷ್ಕನು ಷೋಡಶಶ್ರಾದ್ಧಗಳನ್ನು ಮಾಡಲಡ್ಡಿಯಿಲ್ಲ.ಅದನ್ನು ಪುನಃ ಮಾಡತಕ್ಕದ್ದಿಲ್ಲ. ಆದರೆ ಕನಿಷ್ಕನು ಸಾಗ್ನಿಕನಾದರೆ (ಆಹಿತಾಗ್ನಿ) ಸಪಿಂಡನವನ್ನು ಮಾಡಲೇಬೇಕು. ವೃದ್ಧಿ ಶ್ರಾದ್ಧ ನಿಮಿತ್ತಕವಾಗಿ ಮಾಡುವ ಸಪಿಂಡೀಕರಣವನ್ನು ಕನಿಷ್ಠನಾದರೂ ಮಾಡಬಹುದೆಂದು ಹೇಳಿದೆ. ನಾಂದಿಯ ಹೊರತಾಗಿ ಕನಿಷ್ಠಾದಿಗಳು ಸಪಿಂಡನವನ್ನು ಮಾಡಿದರೂ ಜೇಷ್ಠಪುತ್ರನು ಪುನಃ ಮಾಡತಕ್ಕದ್ದು. ಆಹಿತಾಗ್ನಿಯಾದ ಕನಿಷ್ಕನು ಪಿತೃಯಜ್ಞಾರ್ಥವಾಗಿ ಸಪಿಂಡವನ್ನು ಮಾಡಿದ್ದರೂ ಜೇಷ್ಠನು ಪುನಃ ಮಾಡತಕ್ಕದ್ದೆಂದು ತೋರುತ್ತದೆ. ಪುನಃ ಕರಣಮಾಡುವದಿದ್ದಲ್ಲಿ ಪ್ರೇತ ಶಬ್ದವನ್ನು ಹೇಳತಕ್ಕದ್ದಲ್ಲ. ದೇಶಾಂತರದಲ್ಲಿರುವ ಪುತ್ರರಿಗೆ ಶ್ರವಣವಾದ ಕೂಡಲೇ ವಪನವನ್ನು ಹೇಳಿದೆ, ಮತ್ತು ದಶಾಹ ಆಶೌಚವನ್ನೂ ಹೇಳಿದೆ. ಅದು ಮುಗಿದ ನಂತರ ಸಪಿಂಡೀಕರಣ ಮಾಡತಕ್ಕದ್ದು. ವುಮ ಮರಣ (ಹಿಂದಿನವರು ಜೀಮಿಸಿರುವಾಗ ಮುಂದಿನವರ ಮರಣ) ತಂದೆಯು ಮೃತನಾಗಿದ್ದು ಪಿತಾಮಹ (ಅಜ್ಜನು ಜೀವಿಸಿರುತ್ತಿದ್ದರೆ ಆಗ ಸಪಿಂಡೀಕರಣದಲ್ಲಿ ಪ್ರಪಿತಾಮಹ ಪೂರ್ವಕವಾಗಿ ಮೂರು ಪಿಂಡಗಳನ್ನು ಕೊಡತಕ್ಕದ್ದು, ಆ ಪಿಂಡಗಳಲ್ಲಿ ಪಿತೃಪಿಂಡವನ್ನು ಕೂಡಿಸತಕ್ಕದ್ದು. ತಾಯಿಯು ಮೃತಳಾಗಿ ಪಿತಾಮಹಿಯು ಜೀವಿಸಿರುವಾಗಲೂ ಪ್ರಪಿತಾಮಹೀ ಮೊದಲಾದ ಮೂರು ಪಿಂಡಗಳಲ್ಲಿ ತಾಯಿಯ ಪಿಂಡವನ್ನು ಸಂಯೋಜಿಸತಕ್ಕದ್ದು. ಪ್ರಪಿತಾಮಹನು ಜೀವಂತನಾಗಿದ್ದರೆ ಅವನ ನಂತರದ ಪಿತ್ರಾದಿಗಳಿಗೆ ಪಿಂಡವನ್ನು ಕೊಡತಕ್ಕದ್ದು. ‘ವುತೃಮದಿಂದ ಮೃತರಾದವರಿಗೆ ಸಪಿಂಡೀಕರಣವಿಲ್ಲ’ ಎಂಬ ವಚನವಿದೆಯಾದರೂ ಅದು ಮಾತಾ, ಪಿತೃ, ಪ ಇವರ ಹೊರತಾದವರ ವಿಷಯವಾಗಿ ಹೇಳಿದ್ದು, ಪ್ರಪಿತಾಮಹಾದಿಗಳಿಂದ ಕೂಡಿ ಪಿತೃವಿನ ಸಪಿಂಡನ ಮಾಡಿದಲ್ಲಿ ನಂತರ ಪಿತಾಮಹನು ಮರಣಹೊಂದಿದಾಗಲೂ ಪುನಃ ಪಿತಾಮಹನಿಂದ ಕೂಡಿ ಪಿತೃವಿನ ಸಪಿಂಡೀಕರಣ ಮಾಡತಕ್ಕದ್ದು. ಇನ್ನು ಪಿತೃವಿನ ಸಪಿಂಡನಕ್ಕಿಂತ ಮೊದಲು ಪಿತಾಮಹನು ಮೃತನಾದರೆ ಆಗ ಪಿತಾಮಹನ ಸಪಿಂಡನವನ್ನು ಮಾಡಿ ಪಿತಾಮಹಾದಿಗಳಿಂದ ಕೂಡಿ ಪಿತೃವಿನ ಸಪಿಂಡೀಕರಣ ಮಾಡತಕ್ಕದ್ದು. ಪಿತೃವಿನ ಮರಣಾನಂತರದಲ್ಲಿ ಪಿತಾಮಹ ಅಥವಾ ಪ್ರಪಿತಾಮಹರು ಮೃತರಾದರೆ ಮುಖ್ಯ ಅಧಿಕಾರಿಯು ದೇಶಾಂತರದಲ್ಲಿದ್ದರೆ ಬೇರೆ ಅಮುಖ್ಯ ಪುತ್ರರು ದಾಹಾದಿ ಏಕಾದಶಾಹಾಂತ ಕರ್ಮವನ್ನು ಮಾಡಿ ಪಿತಾಮಹ, ಪ್ರಪಿತಾಮಹರು ಸಪಿಂಡೀಕರಣವನ್ನು ಹೊಂದದಿದ್ದರೂ ಅವರಿಂದ ಕೂಡಿ ಪಿತೃವಿನ ಸಪಿಂಡೀಕರಣವನ್ನು ಮಾಡತಕ್ಕದ್ದು. ಪಿತಾಮಹ, ಪ್ರಪಿತಾಮಹರಿಗೆ ಬೇರೆ ಪುತ್ರರಿಲ್ಲದಿದ್ದರೆ ಮೊಮ್ಮಗ ಅಥವಾ ಪ್ರಪೌತ್ರರು ಅವರ ಸಪಿಂಡನವನ್ನು ಮಾಡಿಯೇ ತಂದೆಯ ಸಪಿಂಡೀಕರಣ ಮಾಡತಕ್ಕದ್ದು, ಪಿತಾಮಹನಿಗೆ ಬೇರೆ ಪುತ್ರರಿಲ್ಲದಿದ್ದರೆ ಪೌತ್ರನು ಸಪಿಂಡನ ಷೋಡಶ ಅನುಮಾಸಿಕಾಂತವಾಗಿ ಮಾತ್ರ ಮಾಡತಕ್ಕದ್ದು, ಪಿತಾಮಹನ ವಾರ್ಷಿಕಾದಿಗಳನ್ನು ಮಾಡುವ ಅವಶ್ಯಕತೆಯಿಲ್ಲ. ಅವನ ವಾರ್ಷಿಕಾದಿಗಳನ್ನು ಮಾಡಿದಲ್ಲಿ ಹೆಚ್ಚಿನ ಫಲವು ಸಿಗುವದು, ಪಿತೃವಿನ ದಶಾಹಕೃತವು ನಡೆಯುವಾಗ ಪುತ್ರನು ಮೃತನಾದರೆ ಆಗ ಅವನ ಪುತ್ರನು ತನ್ನ ತಂದೆಯ ಔರ್ಧ್ವದೇಹಿಕವನ್ನು ಮಾಡಿ ಪಿತಾಮಹನ ಎಲ್ಲ ಔರ್ಧ್ವದೇಹಿಕವನ್ನು ಪುನ: ಮಾಡತಕ್ಕದ್ದು. ದಶಾಹವು ಕಳೆದುಹೋಗಿದ್ದರೆ ಪುನರಾವೃತ್ತಿ ಬೇಡ, ಬೇರೆ ಪುತ್ರರಿಲ್ಲದಾಗ ಪಿತಾಮಹನ ಸಪಿಂಡದ x2.9 ಧರ್ಮಸಿಂಧು ನಂತರ ಪಿತೃವಿನ ಸಪಿಂಡನವಾಗತಕ್ಕದ್ದೆಂದು ಹೇಳಿದೆ. ಅಶಕ್ತಿಯಮೂಲಕ ತಂದೆಯಿಂದ ಅನುಜ್ಞೆಪಡದ ಪೌತ್ರನು ಪಿತಾಮಹನ ದಶಾಹಕರ್ಮವನ್ನು ಪ್ರಾರಂಭಿಸಿದಲ್ಲಿ ನಂತರ ತಂದೆಯು ತೀರಿಕೊಂಡರೆ ತಂದೆಯ ಆಶೌಚವನ್ನು ತೆಗೆದುಕೊಂಡೇ ಆ ಪೌತ್ರನು ಪಿತಾಮಹನ ಔರ್ಧ್ವದೇಹಿಕವನ್ನು ಮಾಡತಕ್ಕದ್ದು. ಪ್ರಾರಂಭವಾಗಿರುವದರಿಂದ ತಂದೆಯ ದಶಾಹಾದಿ ಕರ್ಮವನ್ನೂ ಮಾಡತಕ್ಕದ್ದು. ಯಾಕೆಂದರೆ ಅದು ಪ್ರಾಪ್ತವಾದದ್ದು. ಸ್ತ್ರೀಯರ ವಿಷಯದಲ್ಲಿ ಪಿತಾಮಹೀ ಮೊದಲಾದವರಿಂದ ಕೂಡಿ ತಾಯಿಯ ಸಪಿಂಡೀಕರಣ ಮಾಡತಕ್ಕದ್ದು. ಕೆಲವರು ತಂದೆಯ ಮರಣಾನಂತರ ತಾಯಿಯು ಮೃತಳಾದರೆ ತಂದೆಯಿಂದ ಕೂಡಿಯೇ ತಾಯಿಯ ಸಪಿಂಡನವಾಗತಕ್ಕದ್ದೆಂದು ಹೇಳುವರು. ಮಗಳ ಮಗನು ಸಪಿಂಡನ ಕರ್ತೃವಾದರೆ ಮಾತಾಮಹನಿಂದ ಕೂಡಿ ಸಪಿಂಡನವಾಗತಕ್ಕದ್ದೆಂದೂ ಹೇಳುವರು. ಸಹಗಮನದಲ್ಲಿಯಾದರೆ ಪತಿಯಿಂದ ಕೂಡಿಯೇ ಸಪಿಂಡೀಕರಣವಾಗತಕ್ಕದ್ದು. ಬೇರೆಯವನಿಂದ ಸಪಿಂಡೀಕರಣವಾಗಿದ್ದರೆ ಅನ್ನಷ್ಟಕ, ಪ್ರತಿವಾರ್ಷಿಕಾದಿ ಶ್ರಾದ್ಧ ಕರ್ತನು ಪಿತಾಮಹೀ ಮೊದಲಾದವರಿಂದ ಕೂಡಿಯೇ ಮಾತೃಪಾರ್ವಣವನ್ನು ಮಾಡತಕ್ಕದ್ದು. ಇಲ್ಲಿ ಕೆಲವರು ಸ್ವಪುತ್ರ, ಸವತೀಪುತ್ರ ಹಾಗೂ ಪತಿ ಇವರ ಅಭಾವದಲ್ಲಿ ಸ್ತ್ರೀಯರಿಗೆ ಸಪಿಂಡನವಿಲ್ಲವೆನ್ನುವರು. ಪತಿಯಿಂದ ಕೂಡಿ ಸಹಗಮನ ಮಾಡಿದಲ್ಲಿ “ಭತ್ರ್ರಾಸಹ ಪಸಂಯೋಜನ"ವೆಂಬ ಪಕ್ಷದಲ್ಲಿ ಎರಡು ಮತಗಳಿರುತ್ತವೆ. ಪಿತೃಪಿಂಡವನ್ನು ಪಿತಾಮಹಾದಿ ಮೂರು ಪಿಂಡಗಳಲ್ಲಿ ಕೂಡಿಸಿ ಆಮೇಲೆ ತಾಯಿಯ ಪಿಂಡವನ್ನು ಪಿತಾಮಹಾದಿಗಳಲ್ಲಿ ಸಂಯೋಜಿಸತಕ್ಕದ್ದು. ‘ಇದೊಂದು ಪಕ್ಷ.’ ಮೊದಲು ತಾಯಿಯ ಪಿಂಡವನ್ನು ಪಿತೃಪಿಂಡದಲ್ಲೇ ಕೂಡಿಸಿ ಈ ಮಾತೃಪಿಂಡದಿಂದ ಏಕೀಕೃತವಾದ ಪಿತೃಪಿಂಡವನ್ನು ಪಿತಾಮಹಾದಿಗಳಲ್ಲಿ ಕೂಡಿಸತಕ್ಕದ್ದು. ಇದು ‘ಇನ್ನೊಂದು ಪಕ್ಷ.’ ಈ ಎರಡನೇ ಪಕ್ಷವೇ ಯುಕ್ತವಾದದ್ದು. ಕೆಲವರು-ಸಹಗಮನವಾದಲ್ಲಿ ಅಥವಾ ಒಂದೇ ದಿನದಲ್ಲಿ ಮರಣವಾದಲ್ಲಿ ಸ್ತ್ರೀಗೆ ಸಪಿಂಡನವಿಲ್ಲ. ತಂದೆಗೆ ಮಾಡಿದ ಸಪಿಂಡೀಕರಣದಲ್ಲಿ ಪತ್ನಿಗೂ ಮಾಡಿದಂತಾಗುವದೆಂದು ಬೇರೆ ಒಂದು ಪಕ್ಷವನ್ನೂ ಹೇಳುವರು. ಯಾರೂ ಇಲ್ಲದಾಗ ಪತ್ನಿಯರು ತಮ್ಮ ಪತಿಗಳಿಗೆ ಅಮಂತ್ರಕವಾಗಿ ಸಪಿಂಡೀಕರಣ ಮಾಡತಕ್ಕದ್ದು, ನಂತರ ಪಾರ್ವಣಶ್ರಾದ್ಧ ಮಾಡುವದು. ಬ್ರಹ್ಮಚಾರಿಗಳಿಗೆ, ಪುತ್ರರಿಲ್ಲದವರಿಗೆ ಮತ್ತು ವ್ಯುತಮದಿಂದ ಮೃತರಾದವರಿಗೂ ಸಪಿಂಡನವನ್ನು ಮಾಡತಕ್ಕದ್ದಲ್ಲವೆಂದು ಬೇರೆ ಒಂದು ಮತವಿದೆ. ಆದರೆ ಈ ಯಾವ ಪಕ್ಷದಲ್ಲಿಯಾದರೂ ಸಪಿಂಡನ ಮಾಡಬಾರದೆಂಬ ಪಕ್ಷವು ಶಿಷ್ಟರ ಆಚರಣೆಯಲ್ಲಿಲ್ಲ. ಯತಿಗಳಿಗೆ ಸಪಿಂಡೀಕರಣವಿಲ್ಲ. ಆದರೆ ಆ ಸ್ನಾನದಲ್ಲಿ ಏಕಾದಶಾಹದಲ್ಲಿ ಪಾರ್ವಣಮಾಡತಕ್ಕದ್ದು. ಈ ಸಪಿಂಡೀಕರಣವು ಪಾರ್ವಣ ಏಕೋದ್ದಿಷ್ಟರೂಪವಾದದ್ದು. ಆದುದರಿಂದ ಪಿತಾಮಹಾದಿ ಮೂವರಸಲುವಾಗಿ ಮೂರು ಬ್ರಾಹ್ಮಣರು, ಮೂರು ಆರ್ಥ್ಯಗಳು, ಮೂರು ಪಿಂಡಗಳು. ಪ್ರೇತನ ಸಲುವಾಗಿ ಒಂದು ಬ್ರಾಹ್ಮಣ. ಇಲ್ಲಿ ಕಾಮ ಕಾಲ ಸಂಜಿತ ವಿಶ್ವದೇವರು. ಪ್ರೇತನಾದ ತಂದೆಯ ಅರ್ಘಪಾತ್ರವನ್ನು ಪಿತಾಮಹಾದಿ ಮೂರು ಪಿಂಡಗಳಲ್ಲಿ ಸಂಯೋಜಿಸತಕ್ಕದ್ದು, ಸಾಗ್ನಿಕನಾದವನಿಗಾದರೂ ಪಿತೃಬ್ರಾಹ್ಮಣನಲ್ಲಿ ಪಾಣಿಹೋಮವು.

ಪರಿಚ್ಛೇದ ೩ ಉತ್ತರಾರ್ಧ ೫೩೩ ಸಪಿಂಡೀಕರಣಶ್ರಾದ್ಧವನ್ನು ಅನ್ನದಿಂದಲೇ ಮಾಡತಕ್ಕದ್ದು. ಆಮಾನ್ನವಾಗಬಾರದು. ಇದರಂತ ಅನುಮಾಸಿಕಗಳನ್ನಾದರೂ ಅನ್ನದಿಂದಲೇ ಮಾಡುವದು. ಪಾಥೇಯ ಶ್ರಾದ್ಧ “ಸಪಿಂಡೀಕರಣವಾದ ನಂತರ ಪ್ರೇತನು ಪಿತೃಲೋಕಕ್ಕೆ ಹೋಗುವನು. ಆದಕಾರಣ ಸಪಿಂಡೀಕರಣದ ಮಾರನೇದಿನ “ಪಾಥೇಯಶ್ರಾದ್ಧವನ್ನು ಮಾಡತಕ್ಕದ್ದು. “ಹೀಗೆ ವಚನವಿರುವದರಿಂದ ಹದಿಮೂರನೇ ದಿನದಲ್ಲಿ ಪಾಥೇಯಶ್ರಾದ್ಧವನ್ನು ಮಾಡಿ ಪುಣ್ಯಾಹಾದಿಗಳನ್ನು ಮಾಡಿ ವರ್ಷಪರ್ಯಂತವಾಗಿ ಪ್ರತಿದಿನವೂ ಉದಕುಂಭಶ್ರಾದ್ಧವನ್ನು ಮಾಡತಕ್ಕದ್ದು. ಅಸಮರ್ಥನಾದರೆ ಮಾಸಿಕ ಶ್ರಾದ್ಧಗಳಲ್ಲಿ ಒಂದೊಂದು ಉದಕುಂಭವನ್ನು ಕೊಡುವದು. ಸಪಿಂಡೀಕರಣಾನಂತರದಲ್ಲಿ ಮಾಡುವ ಅನುಮಾಸಿಕಗಳನ್ನು ಪಾರ್ವಣವಿಧಿಯಿಂದಲೇ ಮಾಡತಕ್ಕದ್ದು. ನಾಂದೀಶ್ರಾದ್ಧ ಪ್ರಾಪ್ತಿಯಲ್ಲಿ ಅವುಗಳ ಅಪಕರ್ಷಣವನ್ನೂ ಮಾಡತಕ್ಕದ್ದು. ಅದು ನಾಲ್ಕು ತಲೆಮಾರಿನ ಸಪಿಂಡರೊಳಗಾದರೆ ಮಾತ್ರ ಎಂಬುದನ್ನು ಹಿಂದೆ ಹೇಳಿದೆ. ಹೀಗೆ ವರ್ಷಪರ್ಯಂತ ಮಾಡಿ ವರ್ಷಾಂತ್ಯ ದಿನದಲ್ಲಿ ಸಂವತ್ಸರ ವಿಮೋಕಶ್ರಾದ್ಧವನ್ನು ಪಾರ್ವಣವಿಧಿಯಿಂದ ಮಾಡತಕ್ಕದ್ದು. ಇದಕ್ಕೆ ‘ಅಲ್ಲಪೂರ್ತಿ ಶ್ರಾದ್ಧ ಎಂದೂ ಹೇಳುವರು. ವೃದ್ಧಿ ಶ್ರಾದ್ಧ, ಸಪಿಂಡೀಕರಣ, ಪ್ರತಶ್ರಾದ್ಧ ಹಾಗೂ ಅನುಮಾಸಿಕ ಶ್ರಾದ್ಧ ಇವುಗಳಲ್ಲಿ ಮತ್ತು ಸಂವತ್ಸರವಿಮೋಕಶ್ರಾದ್ಧದಲ್ಲಿ ತಿಲತರ್ಪಣಮಾಡತಕ್ಕದ್ದಿಲ್ಲ. ಈ ಸಂವತ್ಸರಾಂತ ಶ್ರಾದ್ಧವು ಊನಾಬ್ಬಿ ಕಾಂತ ಷೋಡಶಶ್ರಾದ್ಧಗಳ ಹೊರತಾದದ್ದೆಂದು ತಿಳಿಯತಕ್ಕದ್ದು. ಇದು ಪ್ರತಶ್ರಾದ್ಧವಲ್ಲದ ಕಾರಣ ವೃದ್ಧಿನಿಮಿತ್ತವಾಗಿಯಾದರೂ ಇದನ್ನು ಅಪಕರ್ಷಮಾಡತಕ್ಕದ್ದಿಲ್ಲ. ವರ್ಷಾಂತ್ಯದಿನದಲ್ಲಿ ಶಕ್ಕನುಸಾರ ಭೂರಿಬ್ರಾಹ್ಮಣ ಭೋಜನ ಮಾಡಿಸತಕ್ಕದ್ದೆಂದು “ಅಂತೈಷ್ಟಿಪದ್ಧತಿ"ಯಲ್ಲಿ ಭಟ್ಟರು ಹೇಳುತ್ತಾರೆ. ಇದು ಯುಕ್ತವಾದದ್ದೇ. ‘ಪಿತೃ’ವು ಜೀವಿಸಿರುವಾಗ ಅವನ ಆಜ್ಞೆಯನ್ನು ಪಾಲಿಸುವದು. ಪ್ರತಿವಾರ್ಷಿಕಾದಿಗಳಲ್ಲಿ ಭೂರಿಭೋಜನ ಮಾಡಿಸುವದು. ಗಂಗೆಯಲ್ಲಿ ಪಿಂಡದಾನಮಾಡುವದು. ಈ ಮೂರರಿಂದ ಪುತ್ರನಿಗೆ “ಪುತ್ರತ್ವ"ಪ್ರಾಪ್ತವಾಗುತ್ತದೆ (ನಿಜವಾದ ಪುತ್ರನೆಂದನ್ನಿಸಿಕೊಳ್ಳುತ್ತಾನೆ) ಹೀಗೆ ವಚನವಿದೆ. ಇದರಿಂದ “ಭೂರಿಭೋಜನ” ಈ ಪದದಿಂದ ಪ್ರತ್ಯಾಭಿ ಕಶ್ರಾದ್ಧಕ್ಕೆ ಇದು ಹೊರತಾದದ್ದು. ಯಾಕೆಂದರೆ ಇದು ಬಹು ಬ್ರಾಹ್ಮಣರಿಂದಾಗುವದಿದೆ. (ಶ್ರಾದ್ಧದಲ್ಲಿಯಾದರೆ ಬ್ರಾಹ್ಮಣರು ನಿಯತವಾಗಿರುವರು) ಶ್ರಾದ್ಧಕುರ್ಯಾನ್ನವಿಸ್ತರಂ” ಹೀಗೆ ವಿಸ್ತರವನ್ನು ಶ್ರಾದ್ಧದಲ್ಲಿ ನಿಷೇಧಿಸುವದರಿಂದಲೂ ಶ್ರಾದ್ಧಕ್ಕೆ ಭೂರಿಭೋಜನ ಪದವು ಅಷ್ಟು ಹೊಂದುವದಿಲ್ಲ. ಪ್ರಥಮ ವರ್ಷದಲ್ಲಿ ನಿಷಿದ್ಧಗಳು ಮಾತಾಪಿತೃಗಳ ಮರಣದಲ್ಲಿ ಸಂವತ್ಸರಪರ್ಯಂತವಾಗಿ ಪರಾನ್ನ, ಗಂಧ, ಮೂಲ್ಯ ಇತ್ಯಾದಿಗಳ ಉಪಭೋಗ, ಮೈಥುನ, ಅಭ್ಯಂಗಸ್ನಾನ ಇವುಗಳನ್ನು ಬಿಡತಕ್ಕದ್ದು, ಋತುಕಾಲದಲ್ಲಿ ಪತ್ನಿಗಮನಕ್ಕಡ್ಡಿಯಿಲ್ಲ, ಋತ್ವಿಜಕರ್ಮ, ಲಕ್ಷ ಹೋಮ, ಮಹಾದಾನಾದಿ ಕಾಮ್ಮ ಕರ್ಮಗಳು, ತೀರ್ಥಯಾತ್ರಾ, ವಿವಾಹಾದಿ ವೃದ್ಧಿಯುಕ್ತವಾದ ಕರ್ಮಗಳು ಮತ್ತು ಶಿವಪೂಜೆಯನ್ನು ಬಿಡತಕ್ಕದ್ದು. ಸಂದ್ಯೋಪಾಸನ, ದೇವಪೂಜಾ, ಪಂಚಮಹಾಯಜ್ಞ ಇವುಗಳಿಗೆ ಹೊರತಾದ ಎಲ್ಲ ಕರ್ಮವನ್ನೂ ೫೩೪ ಧರ್ಮಸಿಂಧು ಬಿಡತಕ್ಕದ್ದು. ಮೃತ ತಂದೆತಾಯಿಗಳುಳ್ಳವನ ದೇಹದಲ್ಲಿ ಅಶುಚಿತ್ವವಿರುವದು. ಆದಕಾರಣ ಸಂವತ್ಸರ ಪರ್ಯಂತ ದೇವತಾಕಾರ್ಯ, ಪಿತೃಕಾರ್ಯಗಳು ವರ್ಜಗಳೆಂದು ಕೆಲವರು ಹೇಳುವರು. ಮಹಾತೀರ್ಥಕ್ಕೆ ಹೋಗುವದು, ಉಪವಾಸವ್ರತಗಳು, ಬೇರೆಯವರ ಸಪಿಂಡೀಕರಣಶ್ರಾದ್ಧ ಇವುಗಳನ್ನು ಸಂವತ್ಸರ ಪರ್ಯಂತ ತಿಳಿದವನು ಬಿಡತಕ್ಕದ್ದು. ಇದಕ್ಕೆ ಅಪವಾದವು-ಮಾತಾಪಿತೃಗಳು ಮೃತರಾಗಿ ವರ್ಷದ ಒಳಗಾದರೂ ಪತ್ನಿ, ಪುತ್ರ, ಮೊಮ್ಮಗ, ಅಣ್ಣ ತಮ್ಮಂದಿರು, ಅವರ ಪುತ್ರರು, ಸೊಸೆ, ತಾಯಿ, ತಂದೆಯ ಭ್ರಾತೃಗಳು ಇವರ ಸಪಿಂಡೀಕರಣವನ್ನು ಮಾಡಲಡ್ಡಿಯಿಲ್ಲ. ಇವರ ಹೊರತು ಬೇರೆಯವರ ಸಪಿಂಡನವನ್ನು ಮಾಡಕೂಡದು. ಹನ್ನೊಂದು ದಿನಪರ್ಯಂತದ ಪ್ರೇತಶ್ರಾದ್ಧವನ್ನು ಯಾವಾಗಲೂ ಮಾಡಬಹುದು. ತಂದೆ-ತಾಯಿಗಳು ಮೃತರಾದಾಗ ಅನ್ಯರ ಪಾರ್ವಣಶ್ರಾದ್ಧವನ್ನು ಮಾಡಬಾರದು. ಮೃತರಾದವರ ಸಲುವಾಗಿ ಗಯಾಶ್ರಾದ್ಧ ಮಾಡುವದಾದರೆ ಪೂರ್ಣ ವರ್ಷ ಪೂರ್ತಿಯಾದಮೇಲೇ ಪ್ರಶಸ್ತವು. “ತೀರ್ಥಶ್ರಾದ್ಧ, ಗಯಾಶ್ರಾದ್ಧ, ಬೇರೆ ವೈತೃಕಾರ್ಯ ಇವುಗಳನ್ನು ತಾಯಿ-ತಂದೆಗಳು ಮೃತರಾಗಿ ಸಂವತ್ಸರದ ಒಳಗೆ ಮಾಡಬಾರದು” ಎಂದು ಗರುಡಪುರಾಣದಲ್ಲಿ ಹೇಳಿದೆ. ಕೆಲವರು ಇದು ವರ್ಷಾಂತದಲ್ಲಿ ಸಪಿಂಡನಮಾಡುವ ಪಕ್ಷದಲ್ಲಿ ಹೇಳಿದ್ದು, ಹೊರತು ದ್ವಾದಶಾಹದಲ್ಲಿ ಆದಾಗ ಹೇಳಿದ ನಿಷೇಧವಲ್ಲವೆಂದು ಹೇಳುವರು. ಬೇರೆ ಕೆಲವರು ದ್ವಾದಶಾಹದಲ್ಲಿ ಸಪಿಂಡೀಕರಣವಾದರೂ ಇವೆಲ್ಲ ನಿಷಿದ್ಧಗಳೇ ಎಂದು ಹೇಳುವರು. ಅದಕ್ಕೆ ವ್ಯವಸ್ಥೆಯು- ವೃದ್ಧಿ ಪ್ರಾಪ್ತಿಯ ಹೊರತಾಗಿ ಮೊದಲು ಸಪಿಂಡೀಕರಣದ ಅಪಕರ್ಷವಾದರೂ ಪ್ರೇತನಿಗೆ ಪಿತೃತ್ವಪ್ರಾಪ್ತಿಯು ವರ್ಷಾಂತದಲ್ಲೇ ಸಪಿಂಡೀಕರಣವಾದರೂ ಸಂವತ್ಸರದ ನಂತರ ಪ್ರೇತದೇಹವನ್ನು ತ್ಯಜಿಸಿ ಭೋಗದೇಹವನ್ನು ಹೊಂದುತ್ತಾನೆ. ಇತ್ಯಾದಿ ವಚನಗಳಿರುವದರಿಂದ ಸಪಿಂಡೀಕರಣವಾದ ಮಾತ್ರದಿಂದ ವೃದ್ಧಿ, ದೈವ, ಪಿತೃಕಾರ್ಯಗಳಲ್ಲಿ ಅಧಿಕಾರವಿಲ್ಲ. ವೃದ್ಧಿ ನಿಮಿತ್ತಕವಾದ ಅಪಕರ್ಷವಾದರೂ ವೃದ್ಧಿಶ್ರಾದ್ಧಾದಿಗಳಿಗೆ ಅಧಿಕಾರ ಕೊಡುತ್ತದೆ. ಆದ್ದರಿಂದಲೇ “ಕಾಲತತ್ವ ನಿರ್ಣಯ"ದಲ್ಲಿ ಆಪತ್ತಿನಲ್ಲಿ ಮರಣಹೊಂದಿದ ಪಿತೃಗಳುಳ್ಳ ಪುತ್ರಾದಿಗಳ ಸಂಸ್ಕಾರ ಮೊದಲಾದ ಮಾಂಗಲಿಕಕಾರ್ಯ ಹಾಗೂ ಮೃತ ಮಾತಾಪಿತೃಗಳುಳ್ಳವನ ಸ್ವಪುತ್ರಾದಿಗಳ ಸಂಸ್ಕಾರ ಇವುಗಳನ್ನು ಪ್ರಥಮ ವರ್ಷದಲ್ಲಿಯಾದರೂ ಮಾಡತಕ್ಕದ್ದೆಂದು ಹೇಳಿದೆ. ದರ್ಶ, ಮಹಾಲಯ ಮೊದಲಾದವುಗಳಿಗೂ ನಿತ್ಮತರ್ಪಣಕ್ಕೂ ಹೀಗೆಯೇ ವ್ಯವಸ್ಥೆಯನ್ನು ತಿಳಿಯತಕ್ಕದ್ದು. (ವೃದ್ಧಿ ನಿಮಿತ್ತಕ ಅಪಕರ್ಷವಾದಲ್ಲಿ ದರ್ಶಾದಿಗಳನ್ನೂ ಮಂಗಲಕಾರ್ಯವನ್ನೂ ಮಾಡತಕ್ಕದ್ದು. ಸ್ಟೇಚ್ಛೆಯಿಂದ ಸಪಿಂಡೀ ಅಪಕರ್ಷವಾದಲ್ಲಿ ದರ್ಶಾದಿಗಳನ್ನು ವರ್ಷದ ಅಂತದಲ್ಲಿ ಮಾಡತಕ್ಕದ್ದು. ಹೀಗೆ ವ್ಯವಸ್ಥೆಯು.) ಧನಿಷ್ಠಾಪಂಚಕ ಮರಣ “ಪಂಚಕ” ವೆಂದರೆ- ಧನಿಷ್ಠೆಯ ಉತ್ತರಾರ್ಧದಿಂದ ರೇವತ್ಯಂತ ನಾಲ್ಕುವರ ನಕ್ಷತ್ರಗಳು. ಅದರಲ್ಲಿ ದಾಹವನ್ನು ನಿಷೇಧಿಸಿರುವದರಿಂದ ದರ್ಭಮಯವಾದ ಗೊಂಬೆಗಳನ್ನು ಮಾಡಿ ಅವುಗಳಿಗೆ ಗೋಧಿಯಹಿಟ್ಟನ್ನು ಲೇಪಿಸಿ ಐದು ಉಣ್ಣೆಯ ಸೂತ್ರಗಳಿಂದ ಸುತ್ತಿ ಅವುಗಳಿಂದ ಕೂಡಿ ದಹನ ಮಾಡತಕ್ಕದ್ದು. ಅದರಲ್ಲಿ ತಿಥ್ಯಾದಿಗಳನ್ನು ಸಂಕೀರ್ತಿಸಿ “ಅಮುಕಸ್ಯ ಧನಿಷ್ಠಾಪಂಚಕಾದಿ ಪರಿಚ್ಛೇದ - ೩ ತ್ತರಾರ್ಧ ಮರಣಸೂಚಿತ ವಂಶಾರಿಷ್ಟ ವಿನಾಶಾರ್ಥ೦ ಪಂಚಕವಿಧಿಂ ಕರಿಷ್ಯ ಹೀಗೆ ಸಂಕಲ್ಪಿಸಿ, ಹೇಳಿದ ಪ್ರತಿಮೆಗಳನ್ನು ನಕ್ಷತ್ರಮಂತ್ರಗಳಿಂದ ಅಭಿಮಂತ್ರಿಸಿ ಗಂಧ, ಪುಷ್ಪಗಳಿಂದ ಪೂಜಿಸುವದು. ಅವುಗಳನ್ನು ದಾಹಸಮಯದಲ್ಲಿ ಪ್ರೇತನ ಮೈಯಲ್ಲಿಡುವದು. ಮೊದಲನೇ ಪ್ರತಿಮೆಯನ್ನು ಶಿರಸ್ಸಿನಲ್ಲೂ, ಎರಡನೇದನ್ನು ನೇತ್ರಗಳಲ್ಲೂ, ಮೂರನೇದನ್ನು ಎಡದ ಹೊಟ್ಟೆಯಲ್ಲೂ, ನಾಲ್ಕನೇದನ್ನು ನಾಭಿಯಲ್ಲಿಯೂ, ಐದನೇದನ್ನು ಪಾದಗಳಲ್ಲೂ ಇಡತಕ್ಕದ್ದು, ಅವುಗಳ ಮೇಲೆ ನಾಮಮಂತ್ರಗಳನ್ನು ಹೇಳಿ ತುಪ್ಪದ ಆಹುತಿಯನ್ನು ಹಾಕತಕ್ಕದ್ದು. ಆ ನಾಮಗಳೆಂದರೆ-ಕ್ರಮದಿಂದ ಪ್ರೇತವಾಹ, ಪ್ರೇತಸಖ, ಪ್ರೇತಭೂಮಿಪ, ಪ್ರೇತಹರ್ತಾ ಇವೇ ನಾಮಗಳು, ಆಮೇಲೆ ಜಲವನ್ನು ಕೊಟ್ಟು “ಯಮಾಯ ಸೋಮಂ” “ತಂಬಕಂ” ಈ ಎರಡು ಮಂತ್ರಗಳಿಂದ ಪ್ರತ್ಯೇಕವಾಗಿ ಪ್ರತಿಮೆಗಳಲ್ಲಿ ಆಜ್ಞಾಹುತಿಗಳನ್ನು ಹಾಕತಕ್ಕದ್ದು, ನಂತರ ಪ್ರೇತನ ಮುಖದಲ್ಲಿ ಪಂಚರತ್ನಗಳನ್ನಿಟ್ಟು ಗೊಂಬೆಗಳಿಂದ ಸಹಿತವಾಗಿ ಪ್ರೇತನನ್ನು ದಹಿಸತಕ್ಕದ್ದು. ಸೂತಕದ ಅಂತದಲ್ಲಿ ತಿಲಹೋಮ ಹಾಗೂ ಮೃತಾಹುತಿಗಳನ್ನು ಕೊಟ್ಟು ಕಂಚಿನ ಪಾತ್ರೆಯಲ್ಲಿ ಎಳ್ಳೆಣ್ಣೆಯನ್ನು ಹಾಕಿ ತನ್ನ ಪ್ರತಿಬಿಂಬವನ್ನು ನೋಡಿ ಬ್ರಾಹ್ಮಣನಿಗೆ ಕೊಡತಕ್ಕದ್ದು ಮತ್ತು ಶಾಂತಿಯನ್ನೂ ಮಾಡತಕ್ಕದ್ದು, ಇಲ್ಲಿ ವಿಶೇಷವೇನೆಂದರೆ- ಬೇರೆ ನಕ್ಷತ್ರಗಳಲ್ಲಿ ಮರಣವಾಗಿ ಪಂಚಕದಲ್ಲಿ ದಾಹಮಾಡುವದಿದ್ದಲ್ಲಿ ‘ಪ್ರತಿಮಾವಿಧಿ’ಯೇ ಹೊರತು ‘ಶಾಂತಿ’ಯ ಅಗತ್ಯವಿಲ್ಲ. ಪಂಚಕದಲ್ಲಿ ಮರಣವಾಗಿ ಅಶ್ವಿನಿಯಲ್ಲಿ ದಾಹಮಾಡುವ ಪ್ರಸಂಗದಲ್ಲಿ “ಶಾಂತಿಯೇ ಹೊರತು ಪ್ರತಿಮಾವಿಧಿ ಬೇಡ, ಶಾಂತಿಗಾಗಿ ಲಕ್ಷಹೋಮ, ರುದ್ರಜನ ಇವುಗಳೊಳಗೆ ಒಂದನ್ನು ಶಕ್ರನುಸಾರ ಮಾಡತಕ್ಕದ್ದು. ಇಲ್ಲವೆ ಕುಂಭದಲ್ಲಿ ಯಮಪ್ರತಿಮೆಯನ್ನಿಟ್ಟು ಪೂಜಿಸಿ ತಮ್ಮ-ತಮ್ಮ ಶಾಖೆಯ ಪ್ರಯೋಗದಂತೆ ಅಗ್ನಿ ಪ್ರತಿಷ್ಠಾಪನ, ಅನ್ಯಾಧಾನ, ಚರುಶ್ರಪಣಾಂತವಾಗಿ ಮಾಡಿ ಆಜ್ಯಭಾಗಾಂತದಲ್ಲಿ ನಾಮಗಳಿಂದ ಹದಿನಾಲ್ಕು ಚರುಹೋಮವನ್ನು ಮಾಡತಕ್ಕದ್ದು. ಯಮಾಯಸ್ವಾಹಾ (೧), ಧರ್ಮರಾಜಾಯಸ್ವಾಹಾ(೨) ಮೃತ್ಯವೇ (೧), ಅಂತಕಾಯ (೪) ವ್ಯವುತಾಯ (೫), ಕಾಲಾಯ (೬), ಸರ್ವಭೂತಕ್ಷಯಾಯ (೭), ಔದುಂಬರಾಯ (೮), ದರಾಯ (೯),ನೀಲಾಯ (೧೦), ಪರಮೇಷ್ಟಿನೇ (೧೧), ವೃಕೋದರಾಯ (೧೨), ಬ್ರಾಯ (೧೩), ಚಿತ್ರಗುಪ್ಪಾಯ (೧೪) ಹೀಗೆ ಹೋಮಮಾಡಿ ಶೇಷವನ್ನು ಮುಗಿಸಿ ಕಪ್ಪಾದ ವಸ್ತ್ರ ಸಹಿತವಾದ ಮತ್ತು ನಿಷ್ಕಪ್ರಮಾಣದ ಸುವರ್ಣಯುತವಾದ ಕರೇಗೋವನ್ನು “ಯಮೋ ಮೇ ಪ್ರೀಯತಾಂ’ ಎಂದು ಬ್ರಾಹ್ಮಣನಿಗೆ ಕೊಡತಕ್ಕದ್ದು. ತ್ರಿಪಾದನಕ್ಷತ್ರದಲ್ಲಿ ಮರಣವಾದರೂ ಇದೇ ಕ್ರಮವು, ಭದ್ರಾತಿಥಿ, ರವಿ, ಕುಜ, ಶನಿವಾರಗಳು, ತ್ರಿಪಾದನಕ್ಷತ್ರ ಇವುಗಳ ಯೋಗವಾದರೆ ತ್ರಿಪುಷ್ಕರ"ಯೋಗವನ್ನುವರು. ಇವುಗಳ ಪೈಕಿ ಎರಡರ ಯೋಗವಾದಲ್ಲಿ ಅಥವಾ ಹೇಳಿದ ವಾರಗಳಿಗೆ ದ್ವಿಪಾದನಕ್ಷತ್ರ ಯೋಗವಾದಲ್ಲಿ “ದ್ವಿಪುಷ್ಕರಯೋಗವಾಗುವದು. ತ್ರಿಪಾದ ನಕ್ಷತ್ರಗಳೆಂದರೆ-ಪುನರ್ವಸು, ಉತ್ರಾಷಾಢಾ, ಕೃತ್ತಿಕಾ, ಉತ್ರಾ, ಪೂರ್ವಾಭದ್ರಾ, ವಿಶಾಖಾ ಇವು ತ್ರಿಪಾದ ನಕ್ಷತ್ರಗಳು, ತ್ರಿಪುಷ್ಕರ, ದ್ವಿಪುಷ್ಕರ ಯೋಗದಲ್ಲಿ ಮೃತರಾದರೆ ಮೂರುಕೃಚ್ಛ ಪ್ರಾಯಶ್ಚಿತ್ತ ಮಾಡಿ ಗೋಧಿಹಿಟ್ಟಿನಿಂದ ತಯಾರಿಸಿರುವ ಪ್ರತಿಮೆಗಳನ್ನು ಮಾಡಿ ಅದರಿಂದ ಕೂಡಿ ಪ್ರೇತನನ್ನು ದಹಿಸತಕ್ಕದ್ದು. ಆ ಮೂರು ಪ್ರತಿಮೆಗಳನ್ನು ಪ್ರೇತನ બી. ಧರ್ಮಸಿಂಧು ಮೇಲಿಡುವದು. ನಂತರ ಆಜ್ಯಾಹುತಿ ಹಾಕುವದು. ಇತ್ಯಾದಿ ಮೊದಲು ಹೇಳಿದಂತೆಯೇ ಬಂಗಾರ, ವಜ್ರ, ನೀಲ, ಪದ್ಮರಾಗ, ಮುತ್ತು ಹೀಗೆ ಐದು ರತ್ನಗಳನ್ನು ಮುಖದಲ್ಲಿ ಹಾಕತಕ್ಕದ್ದು. ರತ್ನಗಳಿಲ್ಲದಿದ್ದರೆ ಅರ್ಧಕರ್ಷಪ್ರಮಾಣದ ಬಂಗಾರವನ್ನು ಹಾಕತಕ್ಕದ್ದು. ಬಂಗಾರದ ಅಭಾವದಲ್ಲಿ ತುಪ್ಪವನ್ನು ಹಾಕತಕ್ಕದ್ದು. ಈ ದ್ವಿಪುಷ್ಕರ, ತ್ರಿಪುಷ್ಕರ ಯೋಗದಲ್ಲಾದ ದಹನ, ಮರಣಗಳಲ್ಲಿ ಅದು ತ್ರಿಗುಣ, ದ್ವಿಗುಣವಾಗುವದು. ಖನನದಲ್ಲಿಯೂ ಹೀಗೆಯೇ ಹೇಳಿದೆ. ಈ ದೋಷಶಾಂತಿಗಾಗಿ ಹೇಳಿದ ಶಾಂತ್ಯಾದಿಗಳನ್ನು ಮಾಡತಕ್ಕದ್ದು. ಸುವರ್ಣದಕ್ಷಿಣೆ ಅಥವಾ ಕಪ್ಪು ವಸ್ತ್ರವನ್ನು ದಾನಮಾಡತಕ್ಕದ್ದು. ಇದರಿಂದ ಶುಭವಾಗುವದು. ಮೃತನಾದವನನ್ನು ಸ್ಮಶಾನಕ್ಕೆ ಒಯ್ದ ಮೇಲೆ ಪುನಃ ಜೀವ ಬಂದು ಆತನು ಯಾವನಾದರೊಬ್ಬನ ಮನೆಯನ್ನು ಪ್ರವೇಶಿಸಿದಲ್ಲಿ ಆ ಮನೆಯ ಯಜಮಾನನಿಗೆ ಮರಣವಾಗುವದು. ಆಗ ಹಾಲು, ತುಪ್ಪಗಳಿಲ್ಲದಿದ್ದ ಅತ್ತಿ ಸಮಿಧಗಳಿಂದ ಗಾಯತ್ರಿಯಿಂದ ಅಷ್ಟೋತ್ತರ ಸಹಸ್ರ ಹೋಮಮಾಡತಕ್ಕದ್ದು. ಕೊನೆಗೆ ಕಪಿಲಗೋದಾನಮಾಡುವದು ಮತ್ತು ತಿಲಪೂರಿತವಾದ ಪಾತ್ರೆಯನ್ನು ದಾನಮಾಡುವದು. ಎಂಭತ್ತೊಂದು ಪಲ ತೂಕದ ಅಥವಾ ಅದರ ಅರ್ಧ ಪ್ರಮಾಣದ ಇಲ್ಲವೆ ಕಾಲುಪ್ರಮಾಣದ ಅಥವಾ ಒಂಭತ್ತುಪಲ ಅಥವಾ ಆರು ಇಲ್ಲವೆ ಮೂರು ಪಲ ಪ್ರಮಾಣದ ಕಂಚಿನಪಾತ್ರ ದಾನಮಾಡತಕ್ಕದ್ದು. ಬ್ರಹ್ಮಚಾರಿ ಮರಣ ಬ್ರಹ್ಮಚಾರಿಯು ಮೃತನಾದರೆ-ದ್ವಾದಶ ಅಥವಾ ಆರು ಕೃಚ್ಛ ಇಲ್ಲವೆ ಮೂರು ಕೃಚ್ಛ ಪ್ರಾಯಶ್ಚಿತ್ತವಾಗಬೇಕು. ದೇಶಕಾಲಗಳನ್ನುಚ್ಚರಿಸಿ “ಆಮುಕಗೋತ್ರ ಅಮುಕನಾಮ್ಮೋ ಬ್ರಹ್ಮಚಾರಿಣೋ ಮೃತಸ್ಯ ವ್ರತವಿಸರ್ಗಂ ಕರಿಷ್ಠ ತದಂಗ ನಾಂದೀಶ್ರಾದ್ಧಂ ಕರಿಷ್ಯ ಹೀಗೆ ಸಂಕಲ್ಪಿಸಿ ಹಿರಣ್ಯದಿಂದ ನಾಂದೀಶ್ರಾದ್ಧವನ್ನು ಮಾಡಿ ಅಗ್ನಿಪ್ರತಿಷ್ಠಾದಿ ಆಘಾರಾಂತ ಮಾಡಿ, ನಾಲ್ಕು ವ್ಯಾಹೃತಿಗಳಿಂದ ಆಹೋಮವನ್ನು ಮಾಡಿ “ಅಗ್ನಯೇ ವ್ರತಪತಯೇ ಸ್ವಾಹಾ, ಅಗ್ನಯೇ ವ್ರತಾನುಷ್ಠಾನ ಘಲಸ೦ಪಾದನಾಯ ಸ್ವಾಹಾ, ವಿಶ್ವೇ ದೇವೇಭ್ಯ: ಸ್ವಾಹಾ” ಹೀಗೆ ಮೂರು ಆಜ್ಯಾಹುತಿಗಳನ್ನು ಹೋಮಿಸಿ ಸ್ಪಷ್ಟಕೃದಾದಿಗಳನ್ನು ಮುಗಿಸಿ ಪುನಃ ದೇಶಕಾಲಗಳನ್ನು ಸ್ಮರಿಸಿ “ಅಮುಕ ಔರ್ಧ್ವದೇಹಿಕಾಧಿಕಾರ ಸಿಧ್ಯರ್ಥಂ ಆರ್ಕವಿವಾಹಂ ಕರಿಷ್ಯ” ಹೀಗೆ ಸಂಕಲ್ಪಿಸಿ ಹಿರಣ್ಯದಿಂದ ನಾಂದೀಶ್ರಾದ್ಧವನ್ನು ಮಾಡಿದನಂತರ ಎಕ್ಕೆಗಿಡದ ಸಮೀಪಕ್ಕೆ ಒಯ್ದು ಅಥವಾ ಎಕ್ಕೆಗಿಡದ ಶಾಖೆಯನ್ನು ಹಿಡಿದುಕೊಂಡು ಎಕ್ಕೆಗಿಡ ಮತ್ತು ಬ್ರಹ್ಮಚಾರಿ ಇವರಿಗೆ ಅರಿಶಿನದಿಂದ ಲೇಪಿಸಿ ಹಳದಿಯ ಸೂತ್ರದಿಂದ ಸುತ್ತಿ ಎರಡು ವಸ್ತ್ರಗಳಿಂದ ಮುಚ್ಚಿ ಅಗ್ನಿ ಪ್ರತಿಷ್ಠಾದಿ ಆಘಾರಾಂತವಾದ ಮೇಲೆ ಆಜ ಹೋಮ ಮಾಡತಕ್ಕದ್ದು, ಅಗ್ನಯೇ ಸ್ವಾಹಾ, ಬೃಹಸ್ಪತಯೇ ಸ್ವಾಹಾ, ವಿವಾಹ ವಿಧಿಯೋಜಕಾಯಸ್ವಾಹಾ, ಯಸ್ಮತ್ವಾಕಾಮಕಾಮಾಯ ವಯಂ ಸಮ್ರಾಚ್ಯಜಾಮಹೇ ತಮಸ್ಮಭಂ ಕಾಮಂ ದಾಥೇದಂ ತ್ವಂಸ್ಕೃತಂ ಪಿಬಸ್ವಾಹಾ ಕಾಮಾಯೇದಂ” ಆಮೇಲೆ ವ್ಯಸ್ತ, ಸಮಸ್ತ ವ್ಯಾಹೃತಿಹೋಮ ಮಾಡತಕ್ಕದ್ದು. ಹೀಗೆ ಎಂಟು ಆಹುತಿಗಳಾದ ಮೇಲೆ ಸ್ತಿಷ್ಟಕೃರಾದಿಗಳನ್ನು ಮಾಡಿ ಎಕ್ಕೆಗಿಡದ ಶಾಖೆಯನ್ನೂ ಬ್ರಹ್ಮಚಾರಿಯ ಶವವನ್ನೂ ಉಮಿಯ ಬೆಂಕಿಯಿಂದ ವಿಧಿವತ್ತಾಗಿ ದಹಿಸತಕ್ಕದ್ದು, ಸ್ನಾತಕನ ಮರಣದಲ್ಲಿಯೂ ಹೀಗೆಯೇ ಎಂದು · ಪರಿಚ್ಛೇದ ೩ ಉತ್ತರಾರ್ಧ ಕೆಲವರನ್ನುವರು. ಇದು “ನಿರ್ಮೂಲ’ವೆಂದು ಕೆಲವರನ್ನುವರು. ಸೂತಕಾಂತದಲ್ಲಿ ಮೂವತ್ತು ಬ್ರಹ್ಮಚಾರಿಗಳಿಗೆ ಕೌಪೀನ, ಕೃಷ್ಣಾಜಿನ, ಕಿವಿಯುಂಗುರ, ಪಾದುಕಾ, ಛತ್ರ, ಗೋಪಿಚಂದನ, ಮಾಲೆ, ಮಣಿ, ಹವಳದ ಸರ, ಯಜ್ಞಪವೀತ ಮೊದಲಾದ ಯಥಾಸಂಭವ ವಸ್ತುಗಳನ್ನು ದಾನಮಾಡತಕ್ಕದ್ದು. ಕುಷ್ಕ ಮರಣ ಕುಷ್ಠರೋಗಿಯು ಮೃತನಾದಲ್ಲಿ ಶವವನ್ನು ಭೂಮಿಯಲ್ಲಿ ಹುಗಿಯುವದು ಅಥವಾ ನೀರಲ್ಲಿ ಹಾಕುವದು, ದಾಹ, ಜಲಾಂಜಲಿ ಮೊದಲಾದವುಗಳಿಲ್ಲ. ಪಿಂಡದಾನಾದಿಗಳೂ ಇಲ್ಲ. ಕ್ರಿಯಾಚರಣೆಯಿಲ್ಲ. ಸ್ನೇಹವಶನಾಗಿ ದಹನಮಾಡಿದರೆ ಯತಿಚಾಂದ್ರಾಯಣ ಪ್ರಾಯಶ್ಚಿತ್ತ ಮಾಡಬೇಕು ಮತ್ತು ಶಕ್ರನುಸಾರ ಷಡಬ್ದಾದಿ ಪ್ರಾಯಶ್ಚಿತ್ತವನ್ನು ಮಾಡಿ ದಹನ ಮಾಡತಕ್ಕದ್ದು. ಹಾಗೆ ಮಾಡದೆ ದಹನ ಮಾಡಕೂಡದು. ರಜಸ್ವಲಾ ಮರಣ ರಜಸ್ವಲೆಯು ಮೃತಳಾದರೆ ಸಂಸ್ಕಾರಾದಿಗಳನ್ನು ಮಾಡಬಾರದು. ತ್ರಿರಾತ್ರಿ ಕಳೆದ ಮೇಲೆ ಸ್ನಾನಮಾಡಿಸಿ ಅವಳನ್ನು ಶವಧರ್ಮದಂತ ದಹನಮಾಡತಕ್ಕದ್ದು; ಅಥವಾ ರಜಸ್ವಲೆ, ಹಡೆದ ಸ್ತ್ರೀ ಇವರ ಮಲವನ್ನೆಲ್ಲ ಸ್ವಚ್ಛಮಾಡಿ ಸ್ನಾನ ಮಾಡಿಸಿ ಕಟ್ಟಿಗೆಯಂತೆ ಭಾವಿಸಿ ಅಮಂತ್ರಕವಾಗಿ ದಹನಮಾಡಿ ಅಸ್ಥಿಗಳನ್ನು ಮಂತ್ರಾಗ್ನಿಯಿಂದ ದಹನಮಾಡತಕ್ಕದ್ದು. ಈ ಎರಡೂ ವಿಷಯಗಳಲ್ಲಿ ಮೂರು ಚಾಂದ್ರಾಯಣ ಪ್ರಾಯಶ್ಚಿತ್ತವಾಗಲೇಬೇಕು. ಇನ್ನು ಆಗಿಂದಾಗಲೇ ಮಂತ್ರವಾಗಿ ದಾಹಮಾಡುವ ಇಚ್ಛೆಯಿದ್ದಲ್ಲಿ “ಆತ್ಯಾದಿ ಅಮುಕಗೋತ್ರಾಯಾ ರಜಸ್ವಲಾವಾ ಮರಣನಿಮಿತ್ತ ಪ್ರತ್ಯವಾಯಪರಿಹಾರಾರ್ಥಂ ಔರ್ಧದೇಹಿಕ ಯೋಗ್ಯತಾರ್ಥಂಚ ಚಾಂದ್ರಾಯಣಪ್ರಾಯಶ್ಚಿತ್ತ ಪೂರ್ವಕ ಶೂರ್ಪಣ ಅಷ್ಟೋತ್ತರಶತಾನಾರಿಕಾರಯಿಷ್ಟೇ ಹೀಗೆ ಸಂಕಲ್ಪಿಸಿ ಚಾಂದ್ರಾಯಣತ್ರಯವನ್ನು ಪ್ರತ್ಯಾಮ್ಮಾಯರೂಪದಿಂದ ಮಾಡಿ ಗೋಧಿಯ ಹಿಟ್ಟಿನಿಂದ ಪ್ರೇತಕ್ಕೆ ಲೇಪಿಸಿ ತಾನು ಸ್ನಾನಮಾಡಿ ಗೆರ್ಸಿಯಜಲದಿಂದ ನೂರೆಂಟಾವರ್ತಿ ಸ್ನಾನಮಾಡಿಸತಕ್ಕದ್ದು. ಆಮೇಲೆ ಭಸ್ಮ, ಗೋಮಯ, ಮೃತ್ತಿಕ, ದರ್ಭೆ ಇವುಗಳ ಜಲದಿಂದ ಮತ್ತು ಪಂಚಗವ್ಯ, ಶುದ್ಧೋದಕಗಳಿಂದಲೂ ಸ್ನಾನಮಾಡಿಸಿ ಮೊದಲಿನ ವಸ್ತ್ರವನ್ನು ಬಿಸಾಡಿ ಬೇರೆ ವಸ್ತ್ರದಿಂದ ಸುತ್ತಿ ದಹನ ಮಾಡತಕ್ಕದ್ದು, ಹಡೆದವಳ ವಿಷಯದಲ್ಲಿಯೂ ಹೀಗೆಯೇ ಮಾಡಬೇಕು. ಹಡೆದ ಮೂರುದಿನಗಳೊಳಗೆ ಮರಣವಾದಲ್ಲಿ ಮೂರು ಅಬ್ಬ ಕೃಚ್ಛ ಪ್ರಾಯಶ್ಚಿತ್ತ ಮಾಡಬೇಕು. ಮುಂದೆ ಮೂರುದಿನಗಳಲ್ಲಾದರೆ “ಏಕಾಬ “ವು ಹತ್ತನೇ ದಿನ ಸಂಸ್ಕಾರದಲ್ಲಾದರೆ “ಕೃಚ್ಛತ್ರಯ” ವೆಂದು ಕೆಲಕಡೆಯಲ್ಲಿ ವಿಶೇಷ ಹೇಳಿದೆ. ತಿಂಗಳ ಪರ್ಯಂತವೂ “ಮೂರು ಕೃಚ್ಛವೆಂದು ಇನ್ನು ಕೆಲವರು ಹೇಳುವರು. ಮಿತಾಕ್ಷರಿಯಲ್ಲಿ ಕುಂಭದಲ್ಲಿ ಜಲವನ್ನು ತೆಗೆದುಕೊಂಡು ಪಂಚಗವ್ಯವನ್ನು ಹಾಕಿ ಪುಣ್ಯಾಹಮಂತ್ರ, ಆಪೋಹಿಷ್ಕಾ, ವಾಮದೇವ್ಯ, ವಾರುಣಾದಿ ಮಂತ್ರಗಳಿಂದ ಅಭಿಮಂತ್ರಿಸಿ ಪೂರ್ವೋಕ್ತ ಮಂತ್ರಗಳಿಂದ ಸ್ನಾನಮಾಡಿಸಿ ವಿಧಿಪೂರ್ವಕವಾಗಿ ಬಾಣಂತಿಯ ಪ್ರೇತವನ್ನು ದಹನಮಾಡತಕ್ಕದ್ದು. ಹೀಗೆ ವಿಶೇಷವನ್ನು ಹೇಳಿದೆ. ಹೀಗೆ ರಜಸ್ವಲಾ, ಸೂತಿಕಾ ಇವರ ವಿಧಾನವು ೫೩೮ ಧರ್ಮಸಿಂಧು ಗರ್ಭಿಣೀ ಮರಣ ಗರ್ಭಿಣಿಯು ಮೃತಳಾದರೆ ಶುದ್ದಿಗಾಗಿ ಮೂವತ್ತು ಮೂರು ಕೃಚ್ಛಗಳನ್ನು ಮಾಡಿ ಗೋವು, ಭೂಮಿ, ಸುವರ್ಣಗಳನ್ನು ದಾನಮಾಡಿ ಗರ್ಭವನ್ನು ಪ್ರತ್ಯೇಕ ಮಾಡಿ ಅವಳನ್ನು ದಹನಮಾಡತಕ್ಕದ್ದು, ಗರ್ಭಸಹಿತ ದಹನ ಮಾಡಿದರೆ ಆಯಾಯ ವಧಪ್ರಾಯಶ್ಚಿತ್ತವಾಗಬೇಕು. ಕರ್ತೃವಿಗೂ ‘ಅಬ್ಬತ್ರಯ” ಪ್ರಾಯಶ್ಚಿತ್ತವಾಗಬೇಕು. ಸ್ತ್ರೀಯರ ಸಹಗಮನ ಸ್ತ್ರೀಯರು ಪತಿಯರೊಡನೆ ಸಹಗಮನಮಾಡಿದಲ್ಲಿ ಸತಿಪತಿಯರಿಬ್ಬರ ಸರ್ವಪಾಪಗಳು ನಾಶಹೊಂದುವವು ಮತ್ತು ನರಕದಿಂದ ಅವರು ಪಾರಾಗುವರು. ಸ್ವರ್ಗಪ್ರಾಪ್ತಿ ಮೊದಲಾದ ಪುಣ್ಯಫಲವು ಸಿಗುವದು. ಕೊನೆಗೆ ಮುಕ್ತಿಯೂ ಆಗುವದು. ಸ್ತ್ರೀಯರಿಗೆ ಜನ್ಮಾಂತರಗಳಲ್ಲಿಯೂ ಸೌಭಾಗ್ಯ, ಧನ, ಪುತ್ರಾದಿಗಳು ವೃದ್ಧಿಯಾಗುವವು. ಶರೀರದಲ್ಲಿ ಮೂರುವರೆ ಕೋಟಿ ರೋಮಗಳಿವೆ. ಅಷ್ಟು ವರ್ಷ ಕಾಲಪರ್ಯಂತ ಸ್ವರ್ಗಲೋಕದಲ್ಲಿ ಪುರಸ್ಕೃತರಾಗುವರು. ತಾಯಿಯ, ತಂದೆಯ ಹಾಗೂ ತಾನು ಸೇರಿದ ಹೀಗೆ ಮೂರು ಕುಲಗಳನ್ನು ಪವಿತ್ರ ಮಾಡುವಳು. ಹೀಗೆ ಪತಿಯೊಡನೆ ಸಹಗಮನ ಮಾಡಿದ ಸ್ತ್ರೀ ಮಹಿಮೆಯನ್ನು ಬಹುವಾಗಿ ಹೇಳಿದೆ. ಅದನ್ನು “ಮಿತಾಕ್ಷರಾ’ದಿ ಗ್ರಂಥಗಳಲ್ಲಿ ವಿಸ್ತಾರವಾಗಿ ನೋಡಬಹುದು. ನಿಷ್ಕಾಮಳಾಗಿ ಸಹಗಮನ ಮಾಡಿದರೆ ಮುಕ್ತಿಯು ಸಿಗುವದು. ಸಕಾಮಳಾಗಿ ಮಾಡಿದರೆ ಸ್ವರ್ಗಾದಿ ಫಲ ಪ್ರಾಪ್ತಿಯಾಗುವದು. ಹೀಗೆ ನಿಷ್ಕಾಮ- ಸಕಾಮ ಸಹಗಮನದಲ್ಲಿ ವ್ಯವಸ್ಥೆ ಹೇಳಬಹುದು. ಸಹಗಮನ ಪ್ರಯೋಗ ದೇಶಕಾಲಗಳನ್ನು ಸ್ಮರಿಸಿ “ಮಾತೃ-ಪಿತೃ-ಶ್ವಶುರಾದಿಕುಲಪೂತ, ಬ್ರಹ್ಮಹತ್ಯಾದಿ ದೋಷದೂಷಿತತ್ವ, ಪತಿಪೂತತ್ವ, ಪತೃವಿಯೋಗಾರುಂಧತೀಸಮಾಚಾರ, ಸಾರ್ಧಕೋಟಿತ್ರಯಸಹಸ್ರ ಸಂವತ್ಸರ ಸ್ವರ್ಮಹೀಯಮಾನ ಆದಿ ಪುರಾಣೋಕಾನೇಕ ಫಲಪ್ರಾಪ್ತ ಶ್ರೀ ಲಕ್ಷ್ಮೀನಾರಾಯಣ ಪ್ರೀತಿದ್ದಾರಾ ವಿಮುಕ್ತಿಪ್ರಾಪ್ತಯೇ ಪುತಾನ್ಯಾರೋಹಣಂ ಕರಿಷ್ಯ ಹೀಗೆ ಸಂಕಲ್ಪಿಸಿ ಅರಿಶಿನ, ಕುಂಕುಮ, ವಸ್ತ್ರ, ಫಲಾದಿಯುಕ್ತಗಳಾದ ಶೂರ್ಪ (ವಾಯನ)ಗಳನ್ನು ಸುವಾಸಿನಿಯರಿಗೆ ಕೊಡತಕ್ಕದ್ದು. “ಲಕ್ಷ್ಮೀನಾರಾಯರೇ ಬಲಸತ್ವಗುಣಾಶ್ರಯ: ಗಾಢಂಸಂಚಮದಯಾತ್ ವಾಯನ್ಯ: ಪರಿತೋಷಿತ:ಸೋಪಸ್ಕರಾಣಿ ಶೂರ್ಪಾಣಿ ವಾಯ: ಸಂಯುತಾನಿ ಲಕ್ಷ್ಮೀನಾರಾಯಣಪ್ರೀತ್ಯ ಸತ್ಯಕಾಮಾದರಾಮ್ಯಹಂ| ಅನೇನ ಸೋಪಸ್ಕರ ಶೂರ್ಪದಾನೇನ ಲಕ್ಷ್ಮೀನಾರಾಯಣ್‌ ಪ್ರೀಯತಾಂ” ಹೀಗೆ ಮಂತ್ರವನ್ನು ಹೇಳಿಕೊಡತಕ್ಕದ್ದು. ನಂತರ ಸೆರಗಿನಲ್ಲಿ ಪಂಚರತ್ನ, ಕಪ್ಪು ಕಾಡಿಗೆಗಳನ್ನು ಕಟ್ಟಿ ಬಾಯಿಯಲ್ಲಿ ಮುತ್ತನ್ನು ಇಟ್ಟುಕೊಂಡು ಅಗ್ನಿಸಮೀಪಕ್ಕೆ ಹೋಗಿ ಅಗ್ನಿ ಪ್ರಾರ್ಥನೆಯನ್ನು ಮಾಡತಕ್ಕದ್ದು. “ಸ್ವಾಹಾಸಂಶ್ಲೇಷಣನಿರ್ವಿಂಣ ಶರ್ವಗೋತ್ರ ಹುತಾಶನ ಸತ್ವಮಾರ್ಗಪ್ರದಾನೇನ ನಯಮಾಂ ಪುರಂತಿಕಂ” ಹೀಗೆ ಪ್ರಾರ್ಥಿಸಿ ಅಗ್ನಿಯಲ್ಲಿ ಆಜ್ಯದಿಂದ ಹೋಮಿಸುವದು. “ಆಗ್ನ ತೇಜೋಧಿಪತಯೇ ಸ್ವಾಹಾ|ವಿಷ್ಯವೇಪತ್ಯಾಧಿಪತಯೇ ಸ್ವಾಹಾಕಾಲಾಯ ಧರ್ಮಾಧಿಪತಯೇ ಸ್ವಾಹಾಪೃಥಿವ್ಯ ಲೋಕಾಧಿಷ್ಠಾತ್ರ ಸ್ವಾಹಾ|ಅರಸಾಧಿಷ್ಠಾತೃಭ್ಯ: ಸ್ವಾಹಾಪರಿಚ್ಛೇದ - ೩ ಉತ್ತರಾರ್ಧ 1 MLE ವಾಯವೇ ಬಲಾಧಿಪತಯೇ ಸ್ವಾಹಾ| ಆಕಾಶಾಯ ಸರ್ವಾಧಿಪತಯೇ ಸ್ವಾತಾಲಾಯ ಧರ್ಮಾಧಿಷ್ಠಾತ್ರ ಸ್ವಾಹಾ| ಅಸರ್ವಸಾಕ್ಷಿಭ್ಯ: ಸ್ವಾಹಾ| ಬ್ರಹ್ಮಣೀ ವೇದಾಧಿಪತಾಹಾ| ರುದ್ರಾಯ ಸ್ಮಶಾನಾಧಿಪತಯೇ ಸ್ವಾಹಾ|” ಹೀಗೆ ಹನ್ನೊಂದು ಆಹುತಿಗಳನ್ನು ಹೋಮಿಸಿ ಅಗ್ನಿಪ್ರದಕ್ಷಿಣ ಮಾಡಿ ಅರೆಯುವ ಕಲ್ಲನ್ನು ಪೂಜಿಸಿ ಅಂಜಲಿಯಲ್ಲಿ ಪುಷ್ಪವನ್ನು ಹಿಡಿದುಕೊಂಡು ಅಗ್ನಿಯನ್ನು ಪ್ರಾರ್ಥಿಸುವದು. “ಮಗ್ನ ಸರ್ವಭೂತಾನಾಂ ಅಂತಶ್ಚರ ಸಾಕ್ಷಿವತ್ ತ್ವಮೇವ ದೇವ ಜಾನೀಷೇನವಿದುರ್ಯಾನಿ ಮಾನುಷಾ|| ಅನುಗಚ್ಛಾಮಿ ಭರ್ತಾರಂ ವೈಧವ್ಯಭಯ ಪೀಡಿತಾ ಸತ್ಯ ಮಾರ್ಗಪ್ರದಾನೇನ ನಯ ಮಾಂ ಭರ್ತುರಂತಿಕಂ” ಹೀಗೆ ಮೆಲ್ಲನೆ ಮಂತ್ರವನ್ನುಚ್ಚರಿಸಿ ಅಗ್ನಿಪ್ರವೇಶಮಾಡತಕ್ಕದ್ದು. ಬ್ರಾಹ್ಮಣರಾದರೂ ಇಮಾನಾರೀರ ವಿಧವಾ’ ಈ ಮಂತ್ರವನ್ನು “ಇಮಾಃ ಪತಿವ್ರತಾಃ ಪುಣ್ಯಾಃ ಸ್ತ್ರೀಯೋಯಾಯಾಃ ಸುಶೋಭಿತಾ: ಸಹಭರ್ತೃಶರೀರೇಣ ಸಂವಿಶಂತು ವಿಭಾವಸುಂ” ಹೀಗೆ ಪಠಿಸತಕ್ಕದ್ದು, ಪ್ರೇತನ ಉತ್ತರಪಾರ್ಶ್ವದಲ್ಲಿ ಮಲಗಿದ ಅವಳು ಭಯಗ್ರಸ್ತಳಾದರೆ ಮೈದುನ ಇಲ್ಲವೆ ಶಿಷ್ಯನು “ಉದೀರ್ಷ್ಟ” ಈ ಮಂತ್ರದಿಂದ ಅವಳನ್ನು ಏಳಿಸತಕ್ಕದ್ದು. ಮೃತಪತಿಯನ್ನನುಸರಿಸಿ ಸಹಗಮನಕ್ಕಾಗಿ ಸ್ಮಶಾನಕ್ಕೆ ಹೋದರೆ ಅವಳ ಪ್ರತಿಹೆಜ್ಜೆಗೂ ಅಶ್ವಮೇಧದ ಫಲವು ಲಭಿಸುವದು. ಇನ್ನು ಬ್ರಾಹ್ಮಣಸ್ತ್ರೀಗೆ ಸಹಗಮನವನ್ನು ಕೆಲಕಡೆಗಳಲ್ಲಿ ನಿಷೇಧಿಸಿದೆ. ಅವಳು ಮೃತಪತಿಯೊಡನೆ ಸತಿಹೋದಲ್ಲಿ ತಾನು ಆತ್ಮಘಾತುಕಳೂ ಪತಿಯನ್ನು ನರಕಕ್ಕೆ ನೂಕುವವಳೂ ಆಗುವಳೆಂದು ಹೇಳಿದೆಯಾದರೂ ಅದು ಪೃಥಕ್ ಚಿತೆಯಾದರೆ ಮಾತ್ರ ಎಂದು ತಿಳಿಯುವದು. ಪತಿಗೆ ಮಂತ್ರದಿಂದ ಅಗ್ನಿಸಂಸ್ಕಾರವಾದಮೇಲೆ ಅನಂತರ ಸಹಗಮನಮಾಡುವದಕ್ಕೆ “ಪೃಥಕ್ ಚಿತಿ"ಯನ್ನುವರು. ಅಗ್ನಿಸಂಸ್ಕಾರದ ಮೊದಲು ಅದು ಅಸ್ಥಿ ಸಂಸ್ಕಾರವಿರಲಿ ಅಥವಾ ಶಾಖಾಸಂಸ್ಕಾರವಿರಲಿ ಒಟ್ಟಿಗೆ ಸಹಗಮನ ಮಾಡಿದರೆ ಅದಕ್ಕೆ “ಏಕಚಿತಿಯಂದೇ ಹೇಳುವರು. ಯಾಕೆಂದರೆ ಆ ಅಸ್ತಿ ಮೊದಲಾದವುಗಳಿಗೆ ಪತಿಸ್ಥಾನ ಪ್ರಾಪ್ತಿಯಿರುತ್ತದೆ. ಆದಕಾರಣ ಅದು ಪತಿಶರೀರಕ್ಕೆ ಸಮಾನವಾದದ್ದು. “ಏಕಚಿತಿ"ಯು ಎಲ್ಲ ವರ್ಣದವರಿಗೂ ಸಾಧಾರಣವಾದದ್ದು. “ಪೃಥಕ್ ಚಿತಿ"ಯನ್ನು ಕ್ಷತ್ರಿಯ, ವೈಶ್ಯ, ಶೂದ್ರರಿಗೇ ಹೇಳಿದ್ದು, ಹೊರತು ಬ್ರಾಹ್ಮಣಸ್ತ್ರೀಗೆ ಹೇಳಿದ್ದಲ್ಲ. ಪೃಥಕ್‌ಚಿತಿಯನ್ನು ಪತಿಯು ದೇಶಾಂತರಕ್ಕೆ ಹೋಗಿ ಮೃತನಾದಲ್ಲಿ ಪತಿವ್ರತೆಯಾದವಳು ಅವನ ಎರಡು ಪಾದುಕೆಗಳನ್ನು ತನ್ನ ಎದೆಯಲ್ಲಿಟ್ಟುಕೊಂಡು ಅಗ್ನಿಯನ್ನು ಪ್ರವೇಶಿಸುವದು. ಪತಿತ ಅಥವಾ ಪ್ರಾಯಶ್ಚಿತಾರ್ಥವಾಗಿ ಮೃತನಾದವನ ಸಂಗಡ ಸಹಗಮನ ಮಾಡತಕ್ಕದ್ದಲ್ಲ. ಇನ್ನು “ಬ್ರಹ್ಮಹತ್ಯಾಮಾಡಿದವನಾಗಲೀ, ಕೃತಘ್ನನಾಗಿರಲಿ, ಮಿತ್ರಹತ್ಯಾ ಮಾಡಿದವನಿರಲಿ ಪತಿಯ ಸಂಗಡ ಸಹಗಮನ ಮಾಡಿದಲ್ಲಿ ಆ ಸ್ತ್ರೀಯು ಪವಿತ್ರಳಾಗುವಳು " ಎಂಬ ವಾಕ್ಯವು ಅನ್ಯಜನ್ಮದಲ್ಲಿ ಮಾಡಿದ ಬ್ರಹ್ಮಹತ್ಯಾದಿ ಪಾಪಶುದ್ಧಿಯ ಪರವಾದದ್ದು. ಒಂದು ದಿನ ಪ್ರಯಾಣಸಾಧ್ಯವಾದ ದೂರದಲ್ಲಿ ಪತಿಯು ಮೃತನಾದರೆ ಅವಳು ಬರುವವರೆಗೆ ಅವನ ದಹನ ಮಾಡಬಾರದು. ರಜಸ್ವಲಾದಿಗಳ ಸಹಗಮನ ರಜಸ್ವಲೆಯಾದ ಮೂರನೇದಿನ ಪತಿಯ ಮರಣವಾದಲ್ಲಿ ಅವಳ ಸಹಗಮನಕ್ಕಾಗಿ ೫೪೦ ಧರ್ಮಸಿಂಧು ಬ್ರಾಹ್ಮಣರು ಒಂದು ದಿನ ಕಾಯತಕ್ಕದ್ದು. ರಜಸ್ವಲೆಯಾಗಿ ಮೊದಲನೇ ದಿನ ಅಥವಾ ಎರಡನೇ ದಿನವಾದಲ್ಲಿ ಲೌಕಿಕಾಗ್ನಿಯಿಂದ ಅಮಂತ್ರಕವಾಗಿ ಅವನ ದಹನಮಾಡತಕ್ಕದ್ದು, ಮತ್ತು ರಜಸ್ವಲಾಶುದ್ಧಿ ಅಂದರೆ ಐದನೇ ದಿನ ಆತನ ಅಸ್ಥಿಯೊಡನೆ ಸಹಗಮನ ಮಾಡತಕ್ಕದ್ದು. ರಜಸ್ವಲೆಯಾದವಳು ದೇಶಕಾಲವಶದಿಂದ ಆಗಲೇ ಸಹಗಮನದ ಇಚ್ಛೆಮಾಡಿದಲ್ಲಿ ಆ ಕಾಲದಲ್ಲಿ ಒಂದು “ದ್ರೋಣ” (೮ ಪಾಯಲಿ) ಭತ್ತವನ್ನು ತೆಗೆದುಕೊಂಡು ಒನಕೆಗಳಿಂದ ಕುಟ್ಟುತ್ತ ಅದರ ಆಘಾತದಿಂದ ಎಲ್ಲ ರಜಸ್ಸು ನಿವೃತ್ತಿಯಾದಮೇಲೆ ಪಂಚಮೃತ್ತಿಕೆಗಳಿಂದ ಶೌಚಮಾಡಿ ದಿನಕ್ರಮದಿಂದ ಮೂವತ್ತು, ಇಪ್ಪತ್ತು, ಹತ್ತು ಧೇನುದಾನಮಾಡಿ ಬ್ರಾಹ್ಮಣನ ವಚನದಿಂದ ಶುದ್ಧಿಯನ್ನು ಪಡೆದು ಸಹಗಮನಮಾಡತಕ್ಕದ್ದು, ಭತ್ತವನ್ನು ಕುಟ್ಟುವದರಿಂದ ರಜೋ ನಿವೃತ್ತಿಯಾಗುವದೆಂಬುದು ಅತೀಂದ್ರಿಯ ವಿಷಯವಾದ್ದರಿಂದ “ಅದು ಯುಗಾಂತರದಲ್ಲಿಯ ಪದ್ಧತಿ” ಯೆಂದು ತಿಳಿಯುವದು ಯುಕ್ತವೆಂದು ತೋರುತ್ತದೆ. ಜನನ-ಮರಣ ಆಶೌಚಗಳಲ್ಲಿ ಪತಿಯು ಮೃತನಾದರೆ “ಸಹಗಮನ"ವಿಲ್ಲವೆಂದು ಕೆಲವರನ್ನುವರು. “ಕಾಲತತ್ವ ವಿವೇಚನೆಯಲ್ಲಿ ಮೊದಲು ಉಂಟಾದ ಆಶೌಚದಲ್ಲಿ ಪತಿಯ ಮರಣವಾದಲ್ಲಿ ಪತ್ನಿಯರು ಆಶೌಚವತಿಯರಾದರೂ ಸಹಗಮನವಾಗುತ್ತದೆ. ಆದರೆ ಬಾಣಂತಿ, ರಜಸ್ವಲೆ ಇವರು ಮಾತ್ರ ಸಹಗಮನಮಾಡಬಾರದೆಂದು ಹೇಳಿದೆ. ಇದೇ ಯುಕ್ತವಾಗಿ ತೋರುತ್ತದೆ. ಈ ಸಹಗಮನವು ಗರ್ಭಿಣೀ, ಸಣ್ಣ ಬಾಲಕರುಳ್ಳವಳು, ಹಡೆದವಳು, ರಜಸ್ಸುಂಟಾಗದಿದ್ದವಳು, ಪತಿತಳು, ವ್ಯಭಿಚಾರಿಣಿ, ವತಿಯಲ್ಲಿ ದುಷ್ಟಭಾವನೆಯುಳ್ಳವಳು ಇತ್ಯಾದಿ ಸ್ತ್ರೀಯರು ಸಹಗಮನಮಾಡತಕ್ಕದ್ದಲ್ಲ. ಕೆಲವರು ಈ ವಿಷಯದಲ್ಲಿ ಪತಿವ್ರತೆಯರಿಗೆ ಮಾತ್ರ ಅಧಿಕಾರವೆಂದು ಹೇಳುವರು; ಮತ್ತು ಕಾಮ, ಕ್ರೋಧ, ಭಯಾದಿಗಳಿಂದ ಅಥವಾ ಅಜ್ಞಾನದಿಂದ ಪತಿಗೆ ಯಾವಾಗಲೂ ಪ್ರತಿಕೂಲರಾಗಿದ್ದವರಾದರೂ ಪತಿಯೊಡನೆ ಸಹಗಮನ ಮಾಡುವದರಿಂದ “ಪವಿತ್ರರಾಗುವರೆಂದು ವಚನವಿದ್ದರೂ ಅದು ಕೇವಲ ಅರ್ಥವಾದ"ವೆಂದು ಹೇಳುವರು. (ಸಹಗಮನ ಮಹಿಮೆಯನ್ನು ಹೇಳುವದಕ್ಕಾಗಿ ಹೇಳಿದ್ದು ಎಂದರ್ಥ. ಸಹಗಮನದಲ್ಲಿ ಪಿಂಡಾದಿ ವಿಚಾರ ಪತಿಮರಣದ ಆಶೌಚಮಧ್ಯದಲ್ಲಿ ಪ್ರತ್ಯೇಕ ಚಿತಿಆರೋಹಣ ಮಾಡಿದಲ್ಲಿ ಅಥವಾ ಆಶೌಚದ ನಂತರ ಚಿತಿಆರೋಹಣ ಮಾಡಿದಲ್ಲಿ “ತ್ರಿರಾತ್ರ"ಆಶೌಚವಿದೆ. ಪಿಂಡಾದಿಗಳನ್ನೂ ಆಚರಿಸತಕ್ಕದ್ದು. ಸಹಗಮನದಲ್ಲಿ ಅವಳ ಪಿಂಡಾದಿಗಳನ್ನೂ ಆಶೌಚವನ್ನೂ ಪತಿಪಿಂಡ ಆಶೌಚ ಮೊದಲ್ಗೊಂಡು ಕ್ರಮದಿಂದ ಮಾಡತಕ್ಕದ್ದು, ಅನ್ವಾರೋಹಣವಾದರೆ ಪತ್ನಿಗೆ ಪ್ರತ್ಯೇಕ ಪಿಂಡ, ತಿಲಾಂಜಲಿಗಳನ್ನು ಕೊಡತಕ್ಕದ್ದು. ಪಿಂಡದಾನ ಕಾರ್ಯ ಹಾಗೂ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಪ್ರತ್ಯೇಕವಾಗಿಯೇ ಮಾಡತಕ್ಕದ್ದು. ಅನಾರೋಹಣಮಾಡಿದಾಗ ಸ್ತ್ರೀಗೆ ಪ್ರತ್ಯೇಕವಾಗಿ ಪಿಂಡಕೊಡತಕ್ಕವಿಲ್ಲ ಮತ್ತು ಜಲಾಂಜಲಿಗಳನ್ನಾದರೂ ಪ್ರತ್ಯೇಕ ಶಿಲೆಯಲ್ಲಿ ಕೊಡತಕ್ಕದ್ದಿಲ್ಲ. ಒಂದೇ ಕಲ್ಲಿನಲ್ಲೇ ಕೊಡತಕ್ಕದ್ದು, ಆ ಮಧ್ಯದಲ್ಲಿ ಅವಯವ ಪಿಂಡಮಾಡುವ ಸಲುವಾಗಿ ಮಾಡುವ ಪಾಕವನ್ನು ಒಂದೇ ಮಾಡಿ ಪಿಂಡವನ್ನು ಪ್ರತ್ಯೇಕವಾಗಿ ಮಾಡತಕ್ಕದ್ದು, ನವಶಾಸ್ತ್ರಗಳನ್ನೂ ಪ್ರತ್ಯೇಕವಾಗಿಯೇ ಮಾಡತಕ್ಕದ್ದು, ಸಪಿಂಡೀಕರಣವನ್ನಾದರೂ ಪ್ರತ್ಯೇಕವಾಗಿಯೇ ಮಾಡತಕ್ಕದ್ದು. ಪರಿಚ್ಛೇದ ೩ ಉತ್ತರಾರ್ಧ ಸಹಗಮನದಲ್ಲಿ “ವೃಷೋತ್ಸರ್ಗ” ಒಂದೇ, ಸ್ತ್ರೀಯ ವೃಷೋತ್ಸರ್ಗದ ಸಲುವಾಗಿ ಗೋದಾನ ಮಾಡುವದು. ಸಪಿಂಡೀಕರಣವನ್ನಾದರೂ ಮಾಡತಕ್ಕದ್ದಿಲ್ಲ; ಅಥವಾ ಪತಿಯೊಡನೆಯೇ ಮಾಡತಕ್ಕದ್ದು; ಅಥವಾ ಪತಿ ಆದಿಯಾಗಿ ಮೂರು ಪಿತೃಗಳಿಂದ ಕೂಡಿ ಮಾಡತಕ್ಕದ್ದು. ಇತ್ಯಾದಿ ಅನೇಕ ಮತಾಂತರಗಳಿವೆ. ಮಾಸಿಕ, ಸಾಂವತ್ಸರಿಕಾದಿಗಳಲ್ಲಿ ಏಕಪಾಕ, ಏಕಕಾಲ ಇತ್ಯಾದಿ ವ್ಯವಸ್ಥೆಯನ್ನೂ ಶ್ರಾದ್ಧ ಪ್ರಕರಣದಲ್ಲಿ ಹೇಳಿದೆ. ಹೀಗೆ ಸಹಗಮನ ವಿಚಾರವು. ಕಾಶೀನಾಥ ಉಪಾಧ್ಯಾಯ ಇತ್ಯಮಂತ್ಯಕ್ರಿಯಾವಿಧಿಂ | ನಿರ್ಣೀಯ ಭಗವತ್ಪಾದೇ ಚಾರ್ಪಯತ್ತರಿಶುದ್ಧಯೇ ಹೀಗೆ ಕಾಶೀನಾಥ ಉಪಾಧ್ಯಾಯನು ಅಂತ್ಯಕ್ರಿಯಾವಿಧಿಯನ್ನು ನಿರ್ಣಯಿಸಿ ಅದರ ಶುದ್ದಿಗಾಗಿ ಭಗವಂತನ ಪಾದದಲ್ಲಿ ಅರ್ಪಿಸಿರುವನು. ಇಲ್ಲಿಗೆ “ಅಂತ್ಯನಿರ್ಣಯ"ವು ಮುಗಿಯಿತು. ವಿಧವಾ ಧರ್ಮಗಳು ಪತಿಯು ಮೃತನಾದರೆ ಪತ್ನಿಯರಿಗೆ ಎರಡು ವಿಧಿಗಳನ್ನು ಹೇಳಿದೆ. ಚೆನ್ನಾಗಿ ವೈಧವ್ಯಧರ್ಮವನ್ನು ಪಾಲಿಸುವದೊಂದು ಮತ್ತು ಸಹಗಮನಮಾಡುವದು. ಪತಿಯ ಮರಣದ ನಂತರ ಯಾವಾಗಲೂ ವೈಧವ್ಯವನ್ನು ಸರಿಯಾಗಿ ಪಾಲಿಸಿದರೆ ಪುನಃ ಅದೇ ಪತಿಯನ್ನು ಹೊಂದಿ ಸ್ವರ್ಗಸುಖವನ್ನನುಭವಿಸುವಳು. ಶೀಲಪಾಲನೆಯು ಅತ್ಯಾವಶ್ಯಕವು. ಶೀಲಭ್ರಷ್ಟಳಾದರೆ ಅಧೋಗತಿಯನ್ನು ಹೊಂದುವಳು. ಪತ್ನಿಯ ಈ ಅವಗುಣದಿಂದ ಸ್ವರ್ಗದಲ್ಲಿರುವ ಪತಿಯು ಕಳಗೆ ಬೀಳುವನು. ಅವಳ ಮಾತಾಪಿತೃಗಳೂ ಭ್ರಾತ್ರಾದಿಗಳೂ ಸಹ ಸ್ವರ್ಗದಿಂದ ಚ್ಯುತರಾಗುವರು. ವಿಧವೆಗೆ ತಲೆಯನ್ನು ಮುಂಡನಮಾಡಿಕೊಳ್ಳುವದು ಆವಶ್ಯಕವು. ಹಾಗಲ್ಲದೆ ತಲೆಗೂದಲಿನ ಗಂಟನ್ನು ಮಾಡಿಕೊಂಡರೆ ಅದೇ ಪತಿಯನ್ನು ಬಂಧಿಸುವ ಹಗ್ಗವಾಗಿ ಪರಿಣಮಿಸುವದು. ಏಕಭುಕ್ತ, ಉಪವಾಸ, ವ್ರತ ಇವುಗಳನ್ನಾಚರಿಸತಕ್ಕದ್ದು. ಮಂಚ, ಹಾಸಿಗೆಗಳಲ್ಲಿ ಮಲಗಿದರೆ ಪತಿಯನ್ನು ನರಕಕ್ಕೆ ತಳ್ಳುವಳು. ಎಣ್ಣೆಯಿಂದ ಮೈಯ್ಯನ್ನುಜ್ಜಿಕೊಳ್ಳುವದು, ಪರಿಮಳ ವಸ್ತುಗಳನ್ನು ಬಳಸುವದು ಇತ್ಯಾದಿಗಳು ತ್ಯಾಜ್ಯಗಳು. ಪ್ರಾಣಹೋಗುತ್ತಿದ್ದರೂ ಎತ್ತುಗಳ ಗಾಡಿಯನ್ನು ಹತ್ತಬಾರದು. ರವಿಕೆಯನ್ನು ತೊಡಬಾರದು. ವೈಶಾಖ, ಕಾರ್ತಿಕ, ಮಾಘ ಇವುಗಳನ್ನು ವಿಶೇಷ ನಿಯಮಗಳನ್ನಾಚರಿಸತಕ್ಕದ್ದು. ತಾಂಬೂಲ, ಅಭ್ಯಂಗ, ಕಂಚಿನಪಾತ್ರೆಯಲ್ಲಿ ಭೋಜನ, ಚಂದನಾದಿ ಲೇಪನ ಇತ್ಯಾದಿಗಳನ್ನು ಯತಿ ಹಾಗೂ ವಿಧವೆಯು ಬಿಡತಕ್ಕದ್ದು, ಅಪುತ್ರಳಾದ ವಿಧಯವೆಯು ಪತಿ ಮೊದಲಾದ ಮೂರು ಪಿತೃಗಳಿಗೆ ಪ್ರತಿದಿನ ತಿಲ ದರ್ಭೋದಕಗಳಿಂದ ತರ್ಪಣ ಮಾಡತಕ್ಕದ್ದು, ಶ್ರಾದ್ಧಾದಿ ವಿಷಯವನ್ನು ಹಿಂದೆಯೇ ಹೇಳಿದ. ಸಂನ್ಯಾಸ ಪ್ರಕರಣ ಬ್ರಹ್ಮಚರ್ಯೆಯನ್ನು ಪಾಲಿಸಿ ಸಮಾವರ್ತನೆಯ ನಂತರ ವಿವಾಹಿತನಾಗಿ ಪುತ್ರರನ್ನುತ್ತಾದಿಸಿ ಯಜ್ಞಯಾಗಾದಿಗಳನ್ನು ನಿರ್ವತಿ್ರಸಿ ವಾನಪ್ರಸ್ತಾಶ್ರಮವನ್ನೂ ಮುಗಿಸಿ ಸಂನ್ಯಾಸಸ್ವೀಕರಿಸುವದು. ಇದು ಎಲ್ಲ ಆಶ್ರಮಗಳನ್ನನುಭವಿಸಿ ಆಗತಕ್ಕ “ಸಮುಚ್ಚಯ ಪಕ್ಷ"ವು, ಬ್ರಹ್ಮಚರ್ಯೆಯಿಂದಲೇ ೫೪೨ ಧರ್ಮಸಿಂಧು ಸಂನ್ಯಾಸಹೊಂದುವದು ಅಥವಾ ಗೃಹಸ್ಥಾಶ್ರಮದಿಂದ ಇಲ್ಲವೆ ವಾನಪ್ರಸ್ಥದಿಂದ ಸಂನ್ಯಾಸಹೊಂದುವದು ಇದೂ ಒಂದು ಕ್ರಮ. ಇನ್ನು ಅವ್ರತಿಯಾಗಲೀ, ಪ್ರತಿಯಾಗಲೀ, ಸ್ನಾತಕ, ಅಸ್ನಾತಕನಾಗಿರಲಿ, ಸಾಗ್ನಿಕ ಅಥವಾ ನಿರಗ್ನಿಕನಾಗಿರಲಿ ಯಾವಾಗ ತೀವ್ರವೈರಾಗ್ಯವುಂಟಾಗುವದೋ ಅದೇ ದಿನ ಸಂನ್ಯಾಸಹೊಂದತಕ್ಕದ್ದು. (ಯದಹರೇವ ವಿರಜೇತ್ತದಹರೇವ ಪ್ರವ್ರಜೇತ್) ಹೀಗೆ ಆಶ್ರಮ ಸ್ವೀಕಾರದಲ್ಲಿ ವಿಕಲ್ಪವು. ಬ್ರಹ್ಮಚರ್ಯದಿಂದಿದ್ದು ಸನ್ಯಾಸಹೊಂದಬಹುದು. ಗೃಹಸ್ಥಾಶ್ರಮದಲ್ಲಿಯಾದರೂ ಸಂನ್ಯಾಸಿಯಾಗಬಹುದು. ವಾನಪ್ರಸ್ಥನಾದರೂ ಸಂನ್ಯಾಸಿಯಾಗಬಹುದು. ಆತುರ (ಮರಣೋನ್ಮುಖ)ನಾದವನು, ದುಃಖಿತ, ಚೋರ, ವ್ಯಾಘ್ರಾದಿಗಳಿಂದ ಪೀಡಿತನಾದವನೂ ಸಂನ್ಯಾಸ ಸ್ವೀಕರಿಸಬಹುದು. ಆತುರ ಸಂನ್ಯಾಸಕ್ಕೆ ವಿಧಿನಿರ್ಬಂಧವಿಲ್ಲ. ಕ್ರಿಯೆಯಿಲ್ಲ. ಬರೇ “ಪ್ರೇಷ"ವನ್ನುಚ್ಚರಿಸಿ ಸಂನ್ಯಾಸ ಸ್ವೀಕರಿಸತಕ್ಕದ್ದು, ದಂಡ ಗ್ರಹಣಾದಿರೂಪವಾದ “ವಿವಿದಿಷಾ” ಸಂನ್ಯಾಸದಲ್ಲಿ ಬ್ರಾಹ್ಮಣನಿಗೆ ಮಾತ್ರ ಅಧಿಕಾರವಿದೆ. “ವಿದ್ವತ್ಸನಾಸ"ಕ್ಕೆ ಕ್ಷತ್ರಿಯ, ವೈಶ್ಯರಿಗಾದರೂ ಅಧಿಕಾರವಿದೆ. “ಕಲಿಯುಗದಲ್ಲಿ ಸಂನ್ಯಾಸನಿಷೇಧ " ಹೇಳಿದ್ದು “ತ್ರಿದಂಡಿ ಸಂನ್ಯಾಸ ವಿಷಯದಲ್ಲಿ ಮಾತ್ರ” ಎಂದು ಪ್ರಾಚೀನರು ಹೇಳುವರು. ಸಂನ್ಯಾಸದಲ್ಲಿ ಕುಟೀಚಕ, ಬಹೂದಕ, ಹಂಸ, ಪರಮಹಂಸ ಹೀಗೆ ನಾಲ್ಕು ವಿಧವು ಇವುಗಳಲ್ಲಿ ಮುಂದು ಮುಂದಿನದು ಶ್ರೇಷ್ಠವು. ಅಂದರೆ ಕುಟೀಚಕಕ್ಕಿಂತ ಬಹೂದಕ, ಬಹೂದಕಕ್ಕಿಂತ ಹಂಸ ಹೀಗೆ, ಮನೆಯ ಹೊರಗೆ ಅಥವಾ ಮನೆಯಲ್ಲುಳಿದು ಕಾಷಾಯವಸ್ತ್ರವನ್ನುಟ್ಟು, ತ್ರಿದಂಡಗಳನ್ನು ಧರಿಸಿ, ಶಿಖಾ, ಯಜೋಪವೀತಾದಿಗಳನ್ನು ಧರಿಸಿದ, ಬಂಧುಗಳಲ್ಲಿ ಅಥವಾ ಮನೆಯಲ್ಲಿ ಊಟಮಾಡುತ್ತಿರುವ ಆತ್ಮನಿಷ್ಠನಾದ ಈ ಸಂನ್ಯಾಸಿಗೆ “ಕುಟೀಚಕನನ್ನುವರು. ಪುತ್ರಾದಿಗಳನ್ನು ಬಿಟ್ಟು ಏಳು ಮನೆಗಳಲ್ಲಿ ಭಿಕ್ಷಾಚರಣೆಮಾಡಿ ಹಿಂದೆ ಹೇಳಿದ ಕಾಷಾಯ ವಸ್ತ್ರಧಾರಣಾದಿಗಳನ್ನು ಮಾಡಿದವನು “ಬಹೂದಕನು. ಪೂರ್ವೋಕ್ತ ವೇಷಧಾರಿಯಾಗಿದ್ದರೂ ಒಂದೇ ದಂಡವನ್ನು ಧರಿಸಿದವನು “ಹಂಸ"ನು, ಶಿಖಾ, ಯಜ್ಞಪವೀತಾದಿಗಳನ್ನು ತ್ಯಜಿಸಿ ಏಕದಂಡಿಯಾಗಿರುವವನು “ಪರಮಹಂಸ"ನು. ಕಾಷಾಯವಸ್ತ್ರವು ನಾಲ್ವರಿಗೂ ಸಮಾನವು, ಹಂಸ, ಪರಮಹಂಸರೊಳಗೆ ಶಿಖಾ ಯಜ್ಞಪವೀತಗಳ ಇರುವಿಕೆ ಹಾಗೂ ಇಲ್ಲದಿರುವಿಕೆಗಳಿಂದ ಭೇದವು. ಈ ಇಬ್ಬರಿಗೂ ದಂಡವೊಂದೇ, ಪರಮಹಂಸನಿಗೆ “ವಿವಿದಿಷಾ” ಅವಸ್ಥೆಯಲ್ಲಿ ದಂಡವು ಆವಶ್ಯಕವು. “ವಿದ್ವತ್ತಾವಸ್ಥೆಯಲ್ಲಿ ಕೃತಾಕೃತವು. ದಂಡವಿಲ್ಲ, ಶಿಖೆಯಲ್ಲ, ಆಚ್ಛಾದನವಿಲ್ಲ. ಹೀಗೆ “ಪರಮಹಂಸನ ಆಚರಣೆಯು” ಎಂದು ಶ್ರುತಿಯಲ್ಲಿ ಹೇಳಿದೆ. ವೈರಾಗ್ಯವಿಲ್ಲದೆ ಜೀವನಕ್ಕಾಗಿ ಸಂನ್ಯಾಸದೀಕ್ಷೆಯನ್ನು ಹೊಂದಿದರೆ ನರಕ ಪ್ರಾಪ್ತಿಯಾಗುವದು. ಏಕದಂಡವನ್ನಾಶ್ರಯಿಸಿ ಬಹುಜನರು ಜೀವಿಸುವರು. ಜೀವನಕ್ಕಾಗಿ ಈ ವೇಷತಾಳಿದರೆ ಅವರು ರೌರವ ನರಕದಲ್ಲಿ ಬೀಳುತ್ತಾರೆ. ಎಲ್ಲವನ್ನೂ ಭಕ್ಷಿಸುವನು, ಏನನ್ನೂ ತಿಳಿಯನು ಇಂಥವನು ಬರೇ ಕಟ್ಟಿಗೆಯ ದಂಡವನ್ನು ಹಿಡಿದುಕೊಂಡ ಮಾತ್ರಕ್ಕೆ ಸಂನ್ಯಾಸ ಸಿದ್ದಿಸುವದೇ? ಘೋರನರಕವೇ ಅವನಿಗೆ ಗತಿಯಾಗುವದೆಂದು. ಇತ್ಯಾದಿ ಸ್ಮೃತಿ ವಚನಗಳಿವೆ.

ಪರಿಚ್ಛೇದ ೩ ಉತ್ತರಾರ್ಧ ೫೪೩ 37 ಸಂನ್ಯಾಸಗ್ರಹಣ ವಿಧಿ ಅದಕ್ಕೆ ಉತ್ತರಾಯಣವು ಪ್ರಶಸ್ತವು ಆತುರನಿಗಾದರೋ ದಕ್ಷಿಣಾಯನವಾದರೂ ಅಡ್ಡಿಯಿಲ್ಲ. ಆದಿಯಲ್ಲಿ ಗೃಹ್ಯಾಗ್ನಿಯುಕ್ತನಾದ ಮತ್ತು ಗೃಹ್ಯಾಗಿರಹಿತನಾದ ವಿಧುರನ, ಇವರ ಸಲುವಾಗಿ ಪ್ರಯೋಗವು ಹೇಳಲ್ಪಡುತ್ತದೆ. ಶಾಂತ, ದಾಂತ ಮೊದಲಾದ ಗುಣವುಳ್ಳ ಗುರುವನ್ನು ಹುಡುಕಿ ಅವನ ಸನ್ನಿಧಿಯಲ್ಲಿ ಮೂರು ಮಾಸಪರ್ಯಂತ ಉಳಿದು ಯತಿಧರ್ಮಗಳನ್ನು ಚೆನ್ನಾಗಿ ನೋಡಿ ಗಾಯತ್ರೀಜಪ, ರುದ್ರಜಪ, ಕೂಷ್ಮಾಂಡಾಗಿ ಹೋಮಗಳಿಂದ ಶುದ್ಧಿಯನ್ನು ಹೊಂದಿ ರಿಕ್ತಾ ತಿಥಿಯಲ್ಲಿ ದೇಶಕಾಲಗಳನ್ನು ಸ್ಮರಿಸಿ “ಅಮುಕಸ್ಯ ಮಮ ಕರಿಷ್ಯಮಾಣ ಸಂಸ್ಕಾನೇ ಅಧಿಕಾರಾರ್ಥಂ ಚತುಃಕೃಚ್ಛಾತ್ಮಕಂ ಪ್ರಾಯಶ್ಚಿತ್ತಂ ಪ್ರತಿಕೃಚ್ಛಂ ತತ್ಯಾಮ್ನಾಯಕ ಗೋನಿಸ್ಮಯದ್ವಾರಾ ಅಹಮಾಚರಿಪೇ ಕೃಚ್ಛಪ್ರತ್ಯಾಮ್ಯಾಯ ಗೋನಿಯದ್ರವ್ಯಂ ವಿಪ್ರೇಭೋ ದಾತುಮಹಮುಜೇ” ಹೀಗೆ ಸಂಕಲ್ಪಪೂರ್ವಕವಾಗಿ ನಿಷ್ಕಪ್ರಮಾಣದ ರಜತ ಅದರ ಅರ್ಧ ಇವುಗಳಲ್ಲಿ ಯಾವದಾದರೊಂದು ಪ್ರತಿಧೇನುವಿನ ಸಲುವಾಗಿಯೂ ಕೊಡತಕ್ಕದ್ದು, ಏಕಾದಶೀ ಅಥವಾ ದ್ವಾದಶಿಯಲ್ಲಿ ಬ್ರಹ್ಮರಾತ್ರಿಯಿರುವಾಗ ಶ್ರಾದ್ಧಗಳನ್ನಾರಂಭಿಸತಕ್ಕದ್ದು. ಆಶ್ರಮರಹಿತನಾದವನಿಗೆ ನಾಲ್ಕು ಕೃಚ್ಛಗಳು, ಇತರರಿಗೆ ತಪ್ತಕೃಚ್ಛವು ಎಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ. ತನ್ನ ನವಶ್ರಾದ್ಧ, ಷೋಡಶಶ್ರಾದ್ಧ, ಸಪಿಂಡೀಕರಣಶ್ರಾದ್ದ ಇವುಗಳನ್ನು ಸಾಗ್ನಿಯಾದವನು ಪಾರ್ವಣವಿಧಿಯಿಂದ, ನಿರಗ್ನಿಯಾದವನು ಏಕೋದ್ದಿಷ್ಟವಿಧಿಯಿಂದ ಮಾಡತಕ್ಕದ್ದೆಂದು ಕೆಲವರನ್ನುವರು. ಹಾಗಲ್ಲವೆಂದು ಕೆಲವರ ಹೇಳಿಕೆ. ಅಷ್ಟಶ್ರಾದ್ಧಗಳು ಆಪಸ್ತಂಬ, ಹಿರಣ್ಯಕೇಶೀಯ ಮೊದಲಾದವರು ಅಕರಣ ಪಿಂಡಾದಿರಹಿತವಾಗಿ ಸಾಂಕಲ್ಪಿಕಪ್ರಯೋಗದಿಂದ ಅಷ್ಟಶ್ರಾದ್ಧಗಳನ್ನು ಮಾಡತಕ್ಕದ್ದು. ಆಶ್ವಲಾಯನಾದಿಗಳಿಗೆ ಪಿಂಡಸಹಿತವಾದ ಪಾರ್ವಣಪ್ರಯೋಗವು. ಮೊದಲು ಸವ್ಯದಿಂದ ಯವಸಹಿತವಾದ ಜಲದಿಂದ ಶ್ರಾದ್ಧಾಂಗತರ್ಪಣ ಮಾಡತಕ್ಕದ್ದು. “ಬ್ರಹ್ಮಾಣಂ ತರ್ಪಯಾಮಿ, ವಿಷ್ಣುಂತರ್ಪಯಾಮಿ, ಮಹೇಶ್ವರ ತರ್ಪಯಾಮಿ, ದೇವರ್ಷಿನ್, ಬ್ರಹ್ಮರ್ಷಿನ್, ಕ್ಷತ್ರರ್ಷಿನ್, ವನ್, ರುದ್ರಾನ್, ಆದಿತ್ಯಾನ್, ಸನಕ, ಸನಂದನಂ, ಸನಾತನ, ಪಂಚಮಹಾಭೂತಾನಿ, ಚಕ್ಷುರಾರಿಕರಣಾನಿ, ಭೂತಗ್ರಾಮಂ, ತರಂ, ಪಿತಾಮಹಂ, ಪ್ರಪಿತಾಮಹಂ, ಮಾತರಂ, ಪಿತಾಮಹೀಂ, ಪ್ರಪಿತಾಮಹೀಂ, ಆತ್ಮಾನಂ, ತರಂ, ಪಿತಾಮಹಂ ಹೀಗೆ ನದ್ಯಾದಿಗಳಲ್ಲಿ ತರ್ಪಣ ಮಾಡಿ ಮನೆಗೆ ಬಂದು ದೇಶಕಾಲಗಳನ್ನು ಸ್ಮರಿಸಿ ‘ಕರಿಷ್ಯಮಾಣ ಸಂನ್ಯಾಸಾಂಗನ ಅಶ್ರಾಜ್ಞಾನಿ ಪಾರ್ವಣ ವಿಧಿನಾ ಅನ್ನೇನ, ಆಮೇನ ವಾ, ಕರಿಷ್ಟೇ” ಹೀಗೆ ಸಂಕಲ್ಪಿಸಿ ಕ್ಷಣವನ್ನು ಕೊಡುವದು. ಇಲ್ಲಿ ಎಲ್ಲವನ್ನೂ ನಾಂದಿ ಶ್ರಾದ್ಧದಂತೆಯೇ ಮಾಡತಕ್ಕದ್ದು, ಕಾರಣ ಅಪಸವ್ಯವಿಲ್ಲ. ತಿಲಸ್ಥಾನದಲ್ಲಿ ಯವಗಳು. ಇಬ್ಬರಿಬ್ಬರಂತೆ ಬ್ರಾಹ್ಮಣರು. ಅದರಂತೆ ವಿಶ್ವೇದೇವರ ಬಗ್ಗೆ ಇಬ್ಬರು ಬ್ರಾಹ್ಮಣರು. ಎಂಟು ಶ್ರಾದ್ಧಕ್ಕಾಗಿ ಹದಿನಾರು, ವಿಶ್ವೇದೇವರ ಬಗ್ಗೆ ಎರಡು. ಅಂತೂ ಹದಿನೆಂಟು ಬ್ರಾಹ್ಮಣರಾಗುವರು. “ಸತ್ಯವನ್ನು ಸಂಜಿಕಾ ವಿಶ್ವೇದೇವಾ ನಾಂದೀಮುಖಾ: ಸ್ಟಾನೇ ಕ್ಷಣ: ಕರ್ತವ್ಯ: ಹೀಗೆ ಒಬ್ಬನನ್ನು ವರಿಸಿದ ನಂತರ ಇನ್ನೊಬ್ಬನನ್ನು ವರಿಸುವರು. ಮುಂದೆಯೂ ಹೀಗೆಯೇ, “ಪ್ರಥಮೇ ದೇವಶಾ ಬ್ರಹ್ಮವಿಷ್ಣು ಮಹೇಶ್ವರಾ ನಾಂದೀಮುಖಾ: ಪ್ಲಾನೇ ಕ್ಷಣ: (೧), ದ್ವಿತೀಯ ಋಷಿಶ್ರಾದೇ ದೇವರ್ಷಿ ಧರ್ಮಸಿಂಧು ಬ್ರಹ್ಮರ್ಷಿ ಕ್ಷತ್ರರ್ಷಯ: ನಾಂದೀ(೨), ತೃತೀಯೇ ದಿವ್ಯಶ್ರಾದ್ಧ ವಸುರುದ್ರಾದಿತ್ಯಾನಾಂದೀ(೩), ಚತುರ್ಥ ಮನುಷ್ಯಶ್ರಾದ್ಧ ಸನಕ, ಸನಂದನ, ಸನಾತನ ನಾಂದೀ (೪), ಪಂಚಮ ಭೂತಶ್ರಾದ್ಧ ಪೃಥಿವ್ಯಾದಿ ಪಂಚಮಹಾಭೂತಾನಿ ಏಕಾದಶ ಚಕ್ಷುರಾದಿ ಕರಣಾನಿ ಚತುರ್ವಿಧ ಭೂತಗ್ರಾಮಾ ನಾಂದೀಮುಖಾ (೫), ಷಷ್ಟೇ ಪಿತೃಶ್ರಾದ್ಧ ಪಿತೃ ಪಿತಾಮಹ ಪ್ರಪಿತಾಮಹಾ ನಾಂದೀ (೬), ಸಪ್ತಮೇ ಮಾತೃಶ್ರಾದ್ಧ ಮಾತೃಪಿತಾಮಹೀ ಪ್ರಪಿತಾಮಹೋ ನಾಂದೀ (೭), ಅಷ್ಟಮೀ ಆತ್ಮಶ್ರಾದ್ಧ ಆತ್ಮ, ಪಿತೃ, ಪ್ರಪಿತಾಮಹಾ ನಾಂದೀ (೮) ಆತ್ಮಾ, ಅಂತರಾತ್ಮಾ, ಪರಮಾತ್ಮಾ” ಹೀಗೆಂದು ಕೆಲವರು ಹೇಳುವರು. ಹೀಗೆ ಇಬ್ಬರಿಬ್ಬರನ್ನು ವರಿಸುವದು. ಎಲ್ಲ ಕಡೆಗೆ ನಾಂದೀಮುಖಾಃ ಎಂಬ ವಿಶೇಷಣವನ್ನು ಹೇಳತಕ್ಕದ್ದು. ಸತ್ಯವಸು ಅಥವಾ ದಕ್ಷಕ್ರತು ಇವರು ವಿಶ್ವೇದೇವತೆಗಳು. ನಂತರ ಎಲ್ಲರಿಗೂ ಪಾದ್ಯವನ್ನು ಕೊಟ್ಟು ಪೂರ್ವಮುಖ ಅಥವಾ ಉತ್ತರಮುಖ ಮಾಡಿ ಕೂಡ್ರಿಸಿ ಪ್ರಾರ್ಥಿಸುವದು. “ಸಂನ್ಯಾರ್ಸಾಮಹಂಶ್ರಾಂ ಕುರ್ವಬೂತದ್ವಿಜೋತ್ತಮಾ:|ಅನುಜ್ಞಾಂಪ್ರಾಪ್ಯಯುಷ್ಮಾಕಂ ಸಿಕ್ಕಿಂ ಪ್ರಾಪ್ಸಾಮಿ ಶಾಶ್ವತೀಂ” ಹೀಗೆ ಹೇಳಿದ ನಂತರ “ಕುರು” ಎಂದು ಬ್ರಾಹ್ಮಣರು ಅನುಜ್ಞೆ ಹೇಳುವದು. ನಂತರ ಯವ ಮತ್ತು ದೂರ್ವಾದಿಗಳ ಯುಗಗಳನ್ನು ಹಿಡಿದುಕೊಂಡು ಜಲದಾನಪೂರ್ವಕವಾಗಿ ಸಂಬೋಧನ ವಿಭಕ್ತಿಯಿಂದ ಇದಮಾಸನಂ” ಎಂದು ಎಂಟೂ ವಿಪ್ರರಲ್ಲಿ, ಆಸನವನ್ನು ಕೊಡುವದು. ಆಮೇಲೆ ಆಶ್ವಲಾಯನರಿಗೆ “ಅರ್ಘಪಾತ್ರ"ವನ್ನು ಆಸಾದನ ಮಾಡತಕ್ಕದ್ದು. ಆಪಸ್ತಂಬಾದಿಗಳಿಗೆ ಸಾಂಕಿಕ ವಿಧಿಯಾದುದರಿಂದ “ಅರ್ಘ"ವಿಲ್ಲ. ವಿಶ್ವೇದೇವರ ಸಲುವಾಗಿ ಒಂದು, ಎಂಟು ಪಾರ್ವಣಗಳಿಗೆ ಎಂಟು ಹೀಗೆ ಒಂಭತ್ತು ಪಾತ್ರಗಳ ಆಸಾದನವು. ಎರಡು ದರ್ಭಗಳ ಪವಿತ್ರವನ್ನು ಆ ಪಾತ್ರೆಯಲ್ಲಿಟ್ಟು “ಶನ್ನೋದೇವಿ” ಎಂದು ಜಲವನ್ನು ಹಾಕಿ ವಿಶ್ವೇದೇವ ಪಾತ್ರದಲ್ಲಿ “ಯವೋಸಿ"ಎಂದು ಯವಗಳನ್ನೂ, ಎಂಟುಪಾತ್ರಗಳಲ್ಲಿ “ತಿಲೋಸಿ ಎಂಬ ಮಂತ್ರದ ಬಗ್ಗೆ “ಯವೋಸಿ ಸೋಮದೇವ ಗೋಸವೇ ದೇವನಿರ್ಮಿತಃ ಪ್ರತ್ನವದ್ಧಿ: ಪ್ರತ: ಪುಷ್ಮಾನಾಂದೀಮುಖ್ಯಾನ್ ದೇವಾನ್ ಪ್ರೀಣಯಾಹಿನಃ ಸ್ವಾಹಾನಮ:” ಹೀಗೆ ಪ್ರಥಮಪಾತ್ರೆಯಲ್ಲಿ ಹೇಳತಕ್ಕದ್ದು. ಎರಡನೇದರಲ್ಲಿ ನಾಂದೀಮುಖಾನ್ ಋಷೀನ್, ಮೂರನೇದರಲ್ಲಿ ನಾಂದೀಮುಖಾನ್ ದಿವ್ಯಾನ್ ನಾಲ್ಕನೇದರಲ್ಲಿ ನಾಂದೀಮುಖಾನ್ ಮನುಷ್ಯಾನ್, ಐದನೇದರಲ್ಲಿ ನಾಂದೀಮುಖಾನಿ ಭೂತಾನಿ ಶ್ರೀ. ಷಷ, ಸಪ್ತಮ, ಅಷ್ಟಮಗಳಲ್ಲಿ ನಾಂದೀ ಪಿತ್ತೂನ್ ಪ್ರೀಣಯ ಇತ್ಯಾದಿ ಒಂದೊಂದು ಪಾತ್ರೆಯನ್ನು ಎರಡೆರಡು ವಿಭಾಗಗಳನ್ನು ಮಾಡಿ ಎಲ್ಲ ಕಡೆಯಲ್ಲಿ “ಯಾದಿವಾ” ಈ ಮಂತ್ರವನ್ನು ಹೇಳಿದ ನಂತರ “ವಿಶ್ವೇದೇವಾ ನಾಂದೀಮುಖಾಃ ಇದವೋ ಅರ್ಘ” ಹೀಗೆ ಅರ್ಭ್ಯವನ್ನು ಕೊಟ್ಟು ಬ್ರಹ್ಮ ವಿಷ್ಣು ಮಹೇಶ್ವರಾ ನಾಂದೀಮುಖಾಃ ಇದುವೋ ಅರ್ಘ ಸ್ವಾಹಾನಮ: ಇತ್ಯಾದಿಗಳಿಂದ ಯಥಾವತ್ತಾಗಿ ಷೋಡಶ ಬ್ರಾಹ್ಮಣರ ಹಸ್ತಗಳಲ್ಲಿ ಕೊಡತಕ್ಕದ್ದು. “ಯಾವಿವ್ಯಾ” ಇದನ್ನು ಜಲವನ್ನು ಹಾಕುವಾಗ ಹೇಳಬೇಕು. ಪಾತ್ರವನ್ನು ತಲೆಕೆಳಗಾಗಿ ಮಾಡಿ ಗಂಧಾದಿ ಆಚ್ಚಾದನಾಂತ ಪೂಜೆಯನ್ನು ಮಾಡತಕ್ಕದ್ದು. ಅಲ್ಲಿ ಎಲ್ಲ ಕಡೆಗೆ ಸಂಬುದ್ಧಿ ವಿಭಕ್ತಿಯಿಂದ ಯುಕ್ತವಾಗಿ ‘ನಾಂದೀಮುಖ’ ಈ ವಿಶೇಷಣವನ್ನು ಹಚ್ಚಿ ಉಚ್ಚಾರ 378

ಪರಿಚ್ಛೇದ ೩ ಉತ್ತರಾರ್ಧ
ಮಾಡತಕ್ಕದ್ದು. ಭೋಜನಪಾತ್ರೆ (ಎಡೆ)ಗಳನ್ನು ಹಾಕಿ ಬ್ರಹ್ಮಾದಿ ಷೋಡಶ ಬ್ರಾಹ್ಮಣರ ಹಸ್ತಗಳಲ್ಲಿ “ಅಗ್ನಯೇ ಕವ್ಯವಾಹನಾಯ ಸ್ವಾಹಾ| ಸೋಮಾಯ ಪಿತೃಮತೇಸ್ವಾಹಾ’ ಈ ಎರಡು ಮಂತ್ರಗಳಿಂದ ಎರಡು ಆಹುತಿಗಳನ್ನು ಕೊಡತಕ್ಕದ್ದು. ಇದು ಆಪಸ್ತಂಬಾದಿಗಳಿಗಿಲ್ಲ. ಅಭಿಘಾರಮಾಡಿ ಅನ್ನವನ್ನು ಬಡಿಸಿ, ಅನ್ನದ ಅಭಾವದಲ್ಲಿ ಆಮ ಅಥವಾ ಅದರ ನಿಷ್ಕ್ರಿಯ ವಸ್ತುವನ್ನು ಪ್ರೋಕ್ಷಿಸಿ “ಪೃಥ್ವಿತೇ ಪಾತ್ರಂ” ಇತ್ಯಾದಿಗಳಿಂದ ಆಯಾಯ ದೇವತೆಗಳಿಗನುಸಾರವಾಗಿ ಅನ್ನ ಅಥವಾ ಆಮ ತ್ಯಾಗಮಾಡುವದು. “ದೇವಾಸೋ ಪ್ರಜಾಪತೀನ ಬ್ರಹ್ಮಾರ್ಪಣಂಬ್ರಹ್ಮ ಅನೇನ ಅಷ್ಟಶ್ರಾದ್ದೇನ ನಾಂದೀಮುಖಾ ದೇವಾದಯಃ ಸ್ತ್ರೀಯಂತಾಂ” ನಂತರ ಆಪೋಶನ ಕೊಡುವದು. ಭೋಜನ ಕಾಲದಲ್ಲಿ ಚಿತ್ರಬಲಿ ಹಾಕತಕ್ಕದ್ದಿಲ್ಲ. ಬಲಿ ಕೊಡತಕ್ಕದ್ದಿಲ್ಲ.
ಭೋಜನದ ನಂತರ ತೃಪ್ತರಾದ ಮೇಲೆ “ಉಪಾಸ್ಯೆ ಅಕ್ಷನ್ನಮೀ ಸಂಪನ್ನಂ” ಎಂದು ಕೇಳುವದು. ಎಲ್ಲರೂ “ರುಚಿರಂ” ಎಂದು ಹೇಳುವದು. ಇದು ಆಮಾನ್ನ ಕೊಡುವ ಪಕ್ಷದಲ್ಲಿಲ್ಲ. ಆಚಮನದ ನಂತರ ಜವ, ಅರಳು, ದಧಿ, ಬೊಗರಿ ಫಲ ಇವುಗಳಿಂದ ಯುಕ್ತವಾದ ಅನ್ನದಿಂದ ನಾಲ್ವತ್ತೆಂಟು ಪಿಂಡಗಳನ್ನು ಮಾಡಿ ಪೂರ್ವದಿಕ್ಕಿಗೆ ನೀಟಾಗಿಯೂ ಉತ್ತರದ ಪಕ್ಕಕ್ಕ ಸರಿದವುಗಳಾಗಿಯೂ ಇರುವ ಎಂಟು ರೇಖೆಗಳನ್ನು ಮಾಡಿ ನೀರಿನಿಂದ ಸಿಂಪಡಿಸಿ ದರ್ಭ ಅಥವಾ ದೂರ್ವೆಗಳನ್ನು ಹಾಸಿ ಇಪ್ಪತ್ತುನಾಲ್ಕು ಪಿಂಡಗಳ ಸ್ಥಾನದಲ್ಲಿ ಜಲಸೇಚನ ಮಾಡುವದು. ಅದು ಹೇಗೆಂದರೆ- “ಶುಂಧಂತಾಂ ಬ್ರಹ್ಮಾಣೋ ನಾಂದೀಮುಖಾಃ, ಶುಂಧಂತಾಂ ವಿಷ್ಣವೋನಾಂದೀ, ಶುಂಧಂತಾಂ ಮಹೇಶ್ವರಾನಾಂ” ಹೀಗೆ ಪ್ರಥಮ ರೇಖೆಯಲ್ಲಿ ಪ್ರೋಕ್ಷಿಸುವದು. ಅದರ ಉತ್ತರದ ರೇಖೆಯಲ್ಲಿ ‘ಶುಂಧಂತಾಂ ದೇವರ್ಷಯೋನಾಂ’ ಇತ್ಯಾದಿ ಊಹಿಸುವದು. ಆಮೇಲೆ ‘ಬ್ರಹ್ಮಣೇ ನಾಂದೀಮುಖಾಯಸ್ವಾಹಾ’ ಎಂದು ಒಂದು ಪಿಂಡವನ್ನು ಕೊಟ್ಟು ಎರಡನೇದರಲ್ಲಿ ಹೀಗೆಯೇ ಕೊಡತಕ್ಕದ್ದು; ಅಥವಾ ಅಮಂತ್ರಕವಾಗಿ ಇಡತಕ್ಕದ್ದು. ಪ್ರತಿದೇವನಿಗೆ ಎರಡು ಪಿಂಡಗಳು, ಹೀಗೆ ಮುಂದೆಯೂ ‘ವಿಷ್ಣವೇ ನಾಂದೀಮುಖಾಯ ಸ್ವಾಹಾ|’ ಇತ್ಯಾದಿಯಾಗಿ ಸ್ವಾಹಾಂತವಾಗಿ ಪಿಂಡಪ್ರದಾನ ಮಂತ್ರಗಳನ್ನೂಹಿಸಿಕೊಳ್ಳುವದು. ‘ಅಪಿತರೋ ಮಾದಯಧ್ವಂ’ ಇತ್ಯಾದಿ ಮಾಡಿ ಪುನಃ ಶುಂಧಂತಾಂತವಾದ ತಂತ್ರವನ್ನು ಮಾಡುವದು. ಅಂಜನ, ಅಭ್ಯಂಜನಗಳು ಕೃತಾಕೃತಗಳು. ಪಿಂಡಗಳನ್ನು ಗಂಧಾದಿಗಳಿಂದ ಪೂಜಿಸಿ ನಮಸ್ಕರಿಸಿ “ಉಪಸಂಪನ್ನಂ” ಎಂದು ವಿಸರ್ಜಿಸಿ ಬ್ರಾಹ್ಮಣರಿಗೆ ದಕ್ಷಿಣೆದಾನಾದಿ ತಂತ್ರಗಳನ್ನು ಮಾಡತಕ್ಕದ್ದು. ಆಪಸ್ತಂಬಾದಿಗಳಿಗೆ ಈ ಪಿಂಡದಾನಾದಿ ತಂತ್ರಗಳಿಲ್ಲ. ಕಾತ್ಯಾಯನರಿಗೆ ಆಶ್ವಲಾಯನರಂತೆಯೇ, ಅಷ್ಟಶ್ರಾದ್ಧಗಳಾದ ಮೇಲೆ ಆ ದಿನ ಅಥವಾ ಮಾರನೇ ದಿನದಲ್ಲಿ ಆರು ಶಿಖೆಗಳ ಕೇಶಗಳನ್ನಿಟ್ಟು ಕಂಕುಳ, ರಹಸ್ಯಸ್ಥಾನಗಳನ್ನು ಬಿಟ್ಟು ಕೇಶ, ಮೀಸೆ, ಗಡ್ಡ, ಉಗುರು ಮೊದಲಾದವುಗಳನ್ನು ವಪನ ಮಾಡಿ ಕೌಪೀನ, ಹೊದೆಯುವ ವಸ್ತ್ರ ಮತ್ತು ಹೋಮದ್ರವ ಇವಿಷ್ಟನ್ನು ಬಿಟ್ಟು ಉಳಿದ ತನ್ನ ಸ್ವತ್ತನ್ನು (ಧನಾದಿ) ಬ್ರಾಹ್ಮಣರಿಗೆ ಮತ್ತು ಪುತ್ರಾದಿಗಳಿಗೂ ಕೊಟ್ಟುಬಿಡತಕ್ಕದ್ದು, ಕೌಪೀನ ಮೊದಲಾದವುಗಳನ್ನು ಸೈರಿಕಧಾತುವಿನಿಂದ (ಗಿರಿಯಲ್ಲಿರುವ ಕಾವಿಬಣ್ಣದಕಲ್ಲು) ರಂಜಿಸಿ, ತೊಗಟೆಯಲ್ಲಿರುವ ಶಿರಸ್ಸು, ಹುಬ್ಬು, ಲಲಾಟ ಇವುಗಳಲ್ಲಿ ಯಾವದಕ್ಕಾದರೂ ಮುಟ್ಟುವಂತಿರುವ, ಬುಡಸಹಿತವಾದ, ಬೆರಳಿನಷ್ಟು ಗಾತ್ರವಾಗಿರುವ, ಬ್ರಾಹ್ಮಣರೇ ತಂದಿರುವ, ಹನ್ನೊಂದು, ಒಂಭತ್ತು, ನಾಲ್ಕು ಅಥವಾ ಏಳು ಗಂಟುಗಳುಳ್ಳ
ಧರ್ಮಸಿಂಧು
ಮುದ್ರೆಯಿಂದ ಯುಕ್ತವಾದ, ಬಿದಿರಿನ ದಂಡವನ್ನು ಸಂಪಾದಿಸಿ, ಶಂಖದಕದಿಂದ “ಓಂಕಾರ, ಪುರುಷಸೂಕ್ತ, ಕೇಶವಾದಿನಾಮ” ಇತ್ಯಾದಿಗಳಿಂದ ಅಭಿಷೇಕಮಾಡಿ ಸ್ಥಾಪಿಸತಕ್ಕದ್ದು. ಆಮೇಲೆ ಕಮಂಡಲು, ಕೌಪೀನ, ಆಚ್ಛಾದನ, ತುಂಡುಪಂಜೆ, ಪಾದುಕಾ ಇವುಗಳನ್ನು ಸ್ಥಾಪಿಸುವದು. ಶಿಕ್ಕದಲ್ಲಿಡುವ ಪಾತ್ರಾದಿಗಳನ್ನೂ ಸ್ಥಾಪಿಸತಕ್ಕದ್ದೆಂದು ಕೆಲವರನ್ನುವರು.
ಸಂನ್ಯಾಸಗ್ರಹಣ ಪ್ರಯೋಗ
ದೇಶಕಾಲಗಳನ್ನು ಸಂಕೀರ್ತಿಸಿ"ಅಶೇಷದುಃಖ ನಿವೃತ್ತಿ, ನಿರತಿಶಯಾನಂದಪ್ರಾಪ್ತಿ, ಪರಮ ಪುರುಷಾರ್ಥಪ್ರಾಪ್ತಿಯೇ ಪರಮಹಂಸಾಖ್ಯ ಸಂನ್ಯಾಸಗ್ರಹಣಂ ಕರಿಷ್ಯ, ತದಂಗತಯಾ ಗಣಪತಿಪೂಜನ, ಪುಣ್ಯಾಹವಾಚನ, ಮಾತೃಕಾಪೂಜನ, ನಾಂದೀಶ್ರಾದ್ಧಾನಿ ಕರಿಷ್ಯ ಹೀಗೆ ಸಂಕಲ್ಪಿಸಿ ನಾಂದ್ಯಾದಿಗಳನ್ನು ಮಾಡಿ ಹೀಗೆ ಪಠಿಸುವದು, “ಬ್ರಹ್ಮಣೇನಮಃ, ವಿಷ್ಣು ವೇನಮಃ, ರುದ್ರಾಯನಮಃ, ಸೂರ್ಯಾಯನಮಃ , ಸೋಮಾಯ ನಮಃ, ಆತ್ಮನೇನಮಃ, ಅಂತರಾತ್ಮನೇನಮಃ, ಪರಮಾತ್ಮನೇನಮಃ, ಅಗ್ನಿಮೀಳೇ ಇಷೇತ್ರೋರ್ಜೆತ್ವಾ ಅಗ್ನ ಆಯಾಹಿ ಶನ್ನೋದೇವಿ ಇವುಗಳ ಪಠನ ಮಾಡಿ ಮೂರು ಮುಷ್ಟಿ ಹಿಟ್ಟನ್ನು ಓಂಕಾರದಿಂದ ಮೂರು ಆವರ್ತಿ ಪ್ರಾಶನಮಾಡಿ ನಾಭಿಯನ್ನು ಮುಟ್ಟಿಕೊಳ್ಳುವದು. “ಆತ್ಮನೇ ಸ್ವಾಹಾ, ಅಂತರಾತ್ಮನೇ, ಪರಮಾತ್ಮನೇ, ಪ್ರಜಾಪತಯೇ ಸ್ವಾಹಾ’ ಈ ಮಂತ್ರಗಳಿಂದ ನಾಭಿಸ್ಪರ್ಶಮಾಡಿ, ಹಾಲು ಮೊಸರು ಬೆರಸಿದ ತುಪ್ಪ ಅಥವಾ ಬರೇಜಲ ಇವನ್ನು “ತ್ರಿವ್ಯದಸಿ ಎಂದು ಮೊದಲು ಪ್ರಾಶನ, ‘ಪ್ರವೃದಸಿ’ ಎಂದು ಎರಡನೇ ಪ್ರಾಶನ, ‘ವಿವೃದಸಿ’ ಎಂದು ಮೂರನೇ ಪ್ರಾಶನಗಳನ್ನು ಮಾಡತಕ್ಕದ್ದು, ಪುನಃ “ಆವಃ ಪುನಂತು ” ಎಂದು ಜಲಪ್ರಾಶನಮಾಡಿ, ಆಚಮನಮಾಡಿ “ಉಪವಾಸಂ ಕರಿಷ್ಯ” ಹೀಗೆ ಸಂಕಲ್ಪಿಸತಕ್ಕದ್ದು.
ಸಾವಿತ್ರಿ ಪ್ರವೇಶ
"
“ಓಂ ಭೂಃ ಸಾಂ ಪ್ರವಿಶಾಮಿ, ಓಂ ತತ್ಸವಿತುರ್ವರೇಣ್ಯಂ ಓಂ ಭುವಃ ಸಾಂ ಪ್ರವಿಶಾಮಿ, ಓಂ ಭರ್ಗೋದೇವಸ್ಯ ಓಂ ಸ್ವ: ಸಾಂ ಪ್ರವಿಶಾಮಿ, ಓಂ ಧಿಯೋಯೋನಃ ಪ್ರಚೋದಯಾತ್ ಓಂ ಭೂರ್ಭುವಪ್ಪ: ಸಾಂ ಪ್ರವಿಶಾಮಿ ಓಂ ತತ್ಸವಿತು=ಯಾಮ್ " ಹೀಗೆ ಸಾವಿತ್ರೀಪ್ರವೇಶವಾದಮೇಲೆ ಸೂರ್ಯಾಸ್ತಕ್ಕಿಂತ ಮೊದಲು ಗೃಹ್ಯಾಗ್ನಿಯನ್ನು ಪ್ರದೀಪ್ತಮಾಡಿ ಅಗ್ನಿ ವಿವೃತ್ತಿಯಾದವನು ಅಥವಾ ನಿರಗ್ನಿಯಾದವನು ಅಥವಾ ವಿಧುರಾದಿಗಳು ಪುನಃ ಸಂಧಾನ ವಿಧಿಯಿಂದ “ಪೃಷ್ಟೋದಿವಿ” ವಿಧಾನದಿಂದ ಅಗ್ನಿಯನ್ನುತ್ಪಾದಿಸತಕ್ಕದ್ದು. ಈ “ಪೃಷ್ಟೋದಿವಿ” ವಿಧಾನವನ್ನು ಹಿಂದೆ ಕಾತ್ಯಾಯನರ ವೈಶ್ವದೇವ ಪ್ರಸಂಗದಲ್ಲಿ ಹೇಳಲಾಗಿದೆ.
ಅಸ್ತಾತ್ತೂರ್ವ ಬ್ರಹ್ಮಾನ್ಯಾಧಾನ
“ಸಂನ್ಯಾಸಂ ಕರ್ತುಂ ಬ್ರಹ್ಮಾನಾಧಾನಂ ಕರಿಷ್ಯ ಹೀಗೆ ಸಂಕಲ್ಪಿಸಿ ಅಗ್ನಿಧ್ಯಾನಾದಿ ಆಜ್ಯವನ್ನು ಸಂಸ್ಕರಿಸಿ ಸಕ್‌ಸವ ಸಂಮಾರ್ಜನ ಮಾಡಿ ಸೃಜೆಯಲ್ಲಿ ನಾಲ್ಕಾವರ್ತಿ ತುಪ್ಪವನ್ನು ತೆಗೆದುಕೊಂಡು ‘ಓಂ ಸ್ವಾಹಾ’ ಎಂದು ಹೋಮಿಸಿ ‘ಪರಮಾತ್ಮನ ಇದ’’ ಎಂದು ತ್ಯಾಗಮಾಡಿ ನಂತರ ಪರಿಷೇಚನಾದಿಗಳನ್ನು ಮಾಡುವರು. ಹೀಗೆ ಬ್ರಹ್ಮಾನ್ನಾಧಾನವು. ಸಾಯಂಸಂಧ್ಯಾ, ಹೋಮ, ವೈಶ್ವದೇವಗಳನ್ನು ಮಾಡಿ ಅಗ್ನಿ ಸನ್ನಿಧಿಯಲ್ಲಿ ಜಾಗರಣೆ ಮಾಡಬೇಕು. ಪ್ರಾತಃಕಾಲದಲ್ಲಿ ನಿತ್ಯಹೋಮವನ್ನು ಮಾಡಿದ ನಂತರ ವೈಶ್ವದೇವಾದಿಗಳನ್ನು ಮಾಡಿ ಅಗ್ನಯ ಅಥವಾ ವೈಶ್ವಾನರ

ಪರಿಚ್ಛೇದ ೩ ಉತ್ತರಾರ್ಧ " ೫೪೭ ಸ್ಥಾಲೀಪಾಕವನ್ನು ಮಾಡತಕ್ಕದ್ದು. “ಆರಾಮಾಗಿ ಸಂವ್ಯಾಸವೂರ್ನಾಡು ಆಕ್ಷೇಯ ಸ್ಟಾಲೀಪಾ ಕಂ ಕರಿಷ್ಟೇ ಹೀಗೆ ಸಂಕಲ್ಪವು ಅಧ್ಯಾನ, ಯು ಆನ ನಂತರ “ಪ್ರಧಾನಮಗ್ನಿಂ ಚರುಣಾ ಶೇಷಾ ಇತ್ಯಾದಿ; ಅಗ್ನಯೇತ್ವಾಜುಷ್ಟಂ ನಿರ್ವಪಾಮಿ ಇತ್ಯಾದಿ ನಾಮದಿಂದ ನಿರ್ವಾಪಾದಿಗಳನ್ನು ಮಾಡತಕ್ಕದ್ದು. ನಾಮದಿಂದಲೇ ‘ಪ್ರಧಾನ ಹೋಮ"ವು. ವೈಶ್ವಾನರಪಕ್ಷದಲ್ಲಿಯೂ ಹೀಗೆಯೇ ತಿಳಿಯತಕ್ಕದ್ದು. ಆಮೇಲೆ “ತರತ್ನಮಂದೀ” ಎಂಬ ಮಂತ್ರವನ್ನು ಹೇಳಿ ಕುಶ, ಬಂಗಾರ, ಜಲಗಳಿಂದ ಸ್ನಾನಮಾಡಿ ದೇಶಕಾಲಗಳನ್ನುಚ್ಚರಿಸಿ “ಸಂನ್ಯಾಸಾಂಗಳು ಪ್ರಾಣಾದಿಹೋಮಂ ಪುರುಷಸೂಕ್ತ ಹೋಮಂ ವಿರಜಾಮಂಚ ತಣ ಕರಿ ಹೀಗೆ ಸಂಕಲ್ಪಿಸಿ ಅನಾಧಾನದಲ್ಲಿ ಆಜೈನ ನಂತರದಲ್ಲಿ “ಪ್ರಾಣಾದಿ ಪಂಚದೇವರ್ತಾ ಸಮರ್ವಾ: ಪರುಷಂ ಪುರುಷಸೂಕ್ತನ ಪ್ರತ್ಯಚಂ ಷೋಡಶವಾರಂ ಸಮಿರ್ವಾ: ಪ್ರಾಣಾದನವಿಂತ ದೇವರು: ವಿರಜಾಮಂತ್ರಃ ಪ್ರತಿದ್ರವ್ಯಂ ಏಕೈಕಸಂಖ್ಯ ಸಮಿರ್ವಾಹುತಿಭಿಃ ಪ್ರಜಾಪತಿಂ ಸಕ್ಕರಾಜ್ಯನ ಶೇಷಣ” ಇತ್ಯಾದಿ ಅನ್ನಾಧಾನ ಮಾಡಿ ನೂರಾಅರವತ್ತು ಬಾರಿ ಅಮಂತ್ರಕವಾಗಿ ನಿರ್ವಾಪಮಾಡಿ ಹಾಗೆಯೇ ಪ್ರೋಕ್ಷಿಸಿ ಬೇಯಿಸಿ ಆಯ್ಕೆಭಾಗ ಹೂಮಾಂತದಲ್ಲಿ “ಪ್ರಾಣಾಯಸ್ವಾಹಾ’ ಈ ಐದು ಮಂತ್ರಗಳಲ್ಲಿ ಸಮಿಚ್ಚರ್ವಾಜ್ಯಗಳಿಂದ ಒಂದೊಂದಾವರ್ತಿ ಹೋಮಿಸಿ ಅಯಾಯ ದೇವತೆಗಳಿಗನುಸಾರ ತ್ಯಾಗವನ್ನು ಹೇಳಿ “ಸಹಸ್ರ ಶೀರ್ಷಾ” ಈ ಹದಿನಾರು ಮಂತ್ರಗಳಿಂದ ಪ್ರತಿಮಂತ್ರದಿಂದಲೂ ಪ್ರತ್ಯೇಕವಾಗಿ ಸಮಿಚ್ಚರ್ವಾಜ್ಯಗಳನ್ನು ಹೋಮಿಸುವದು. “ಪುರುಷಾಯ ಇದನಮ” ಎಂದು ತ್ಯಾಗವನ್ನು ಹೇಳುವದು. ವಿರಜಾಮ “ಪ್ರಾಣಾಪಾನವ್ಯಾನದಾನ ಸಮಾನಾ ಮ ಜ್ಯೋತಿರಂ ವಿರಜಾವಿಪಾಷ್ಮಾಭ್ಯಾಸದ್ದು ಸ್ವಾಹಾ|ಪ್ರಾಣಾದಿ ಇದಂ ವಾಲ್ಮನಶ್ಯರು: ಶೈತ್ರ ಜಿಹ್ವಾಣ ರೇತೋಬುಧ್ಯಾ ಕೂತಿ: ಸಂಕಲ್ಪಾ ಮೇ ಶುದ್ಧಂತಾಂ ಜ್ಯೋತಿರಹಂ ವಿರಜಾ=ವಾಗಾದಿ ಇದರತ್ವ‌ ಚರ್ಮಮಾಗು ಸರುಧಿರಮೇದೋ ಮಜ್ಞಾಸ್ನಾಯವೋsನಿಮ ಶುದ್ಧತಾಂ ಗಾದಿ ಇದಂಶಿರವಾದ ಪಾದ ಪಾರ್ಶ್ವ ಪೃಘೋರೂದರ ಜಂಘ ಶಿಶೋಪಸ್ಥ ಪಾಯವೋಮಶುದ್ಧತಾಂ=ಶಿರ ಆದಿಭ್ಯ ಇದಂ ಪುರುಷ ಹರಿತ ಪಿಂಗಲ ಲೋಹಿತಾಕ್ಷ ದೇಹಿದೇಹಿರದಾಪಯಿತಾ ಶುದ್ಧಂತಾಂ ಪುರುಷಾದಿ ಇದಂ ಪೃಥಿವ್ಯಾಪತ್ತೇಜೋ ವಾಯ್ಯಾಕಾಶಾಮ ಶುದ್ಧಂತಾಂ ಪೃಥಿವ್ಯಾದಿಭ್ಯ ಇದಂಶಬ್ದ ಸ್ಪರ್ಶ ರೂಪರಸಗಂಧಾಮ ಶುಧ್ಯಂತಾಂ ಶಬ್ದಾದಿತ್ಯ ಇದಂ ಮನೋವಾಕ್ಕಾಯ ಕರ್ಮಾಣಿಮೇ ಶುದ್ಧತಾರಿ ಮನ ಆದಿ ಕರ್ಮಭ್ಯ ಇದಂತೆ ಅವ್ಯಕ್ತಭಾವೃರಹಂಕಾರರ್ಜ್ಯೋತಿರಹಂ=ಅವ್ಯಕ್ತಾದಿಭ್ಯ ಇದಂ ಆತ್ಮಾದ ಶುಧ್ಯಂತಾಂ=ಆತ್ಮನ ಇದಂ ಅಂತರಾತ್ಮಾ ಶುಲ್ಕಂಂ ಅಂತರಾತ್ಮನ ಇದಂ ಪರಮಾತ್ಮಾಮ=ಪರಮಾತ್ಮನ ಇದಂ | ಕಧೇಸ್ವಾಹಾ ರುದ ಇದಂತೆ ಕಪಾಸಾಯಸ್ವಾಹಾ| ಕುತ್ರಿಪಾಸಾಯೇದಂ ವಿವಿಸ್ವಾಹಾ=ವಿವಿದ್ಯಾಇದಂ ವಿಧಾನಾಯಸ್ವಾಹಾಯಾನಾಯೇದಂ | ಕಷೋತ್ಕಾಯಸ್ವಾಹಾ=ಕಷೋತ್ಕಾಯದಂತೆ ಕಪಾಸಾಮುಲು ಜೈ ಮಲಕ್ಷ್ಮೀಂ ನಾಶಯ ಮ್ಯಹಂ ೫೪೮ ಧರ್ಮಸಿಂಧು ಅಭೂತಿಮಸಮೃದ್ಧಿಂಚ ಸರ್ವಾಂನಿರ್ಣುರವೇ ಪಾಸ್ನಾನನ್ನು ಸ್ವಾಹಾ| ಅಗ್ನಯ ಇದಂ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯಮಾನಂದಮಯ ಮಾತಾಮೇ ಶುದ್ಧಂತಾಂ=ಅನ್ನಮಯಾದಿಭ್ಯ ಇದಂ” ಹೀಗೆ ಸಮಿಚ್ಚರ್ವಾಜ್ಯಾಹುತಿಗಳಿಂದ ಪ್ರತಿದ್ರವ್ಯದಿಂದ ನಾಲ್ವತ್ತು ಆಹುತಿಗಳನ್ನು ಹೋಮಿಸಿ “ಯದಿಷ್ಟಂ ಯಚ್ಚ ಪೂರ್ತಯಜ್ಞಾಪದ್ಮನಾಪದಿಗೆ ಪ್ರಜಾಪತನ್ಮನಸಿ ಜುಹೋಮಿ ವಿಮುಕ್ತSಹಂ ದೇವಕಿಲ್ಪಿಷಾತ್ಸಾಹಾ” ಹೀಗೆ ಆಜ್ಯವನ್ನು ಹೋಮಿಸಿ ‘ಪ್ರಜಾಪತಯ ಇದ’ ಎಂದು ತ್ಯಾಗ ಹೇಳಿ ನಂತರ ಪುರುಷಸೂಕ್ತ ಹಾಗೂ ಅಗ್ನಿಮೀಳೇ ಇತ್ಯಾದಿ ನಾಲ್ಕು ವೇದಾದಿಗಳನ್ನು ಜಪಿಸಿ ಸ್ಪಷ್ಟಕೃದಾದಿ ಹೋಮಶೇಷವನ್ನು ಮುಗಿಸಿ, ಬ್ರಹ್ಮ, ಆಚಾರ್ಯಾದಿಗಳಿಗೆ ಗೋವು ಹಿರಣ್ಯ, ವಸ್ತ್ರಾದಿಗಳನ್ನು ಕೊಟ್ಟು “ಸಂಮಾಸಿಂಚಂತು ಮರುತಃ” ಈ ಮಂತ್ರದಿಂದ ಗೃಹ್ಯಾಗ್ನಿಯ ಉಪಸ್ಥಾನಮಾಡಿ ಅದರಲ್ಲಿ ಮರದ ಪಾತ್ರಗಳನ್ನೆಲ್ಲ ದಹಿಸತಕ್ಕದ್ದು. ಲೋಹಪಾತ್ರೆಗಳನ್ನು ಗುರುವಿಗೆ ಕೊಡತಕ್ಕದ್ದು, ಆಮೇಲೆ ತನ್ನಲ್ಲಿ “ಅಯಂತೇಯೋನಿ” ಎಂಬ ಮಂತ್ರದಿಂದ “ಯಾತೇಅಗ್ನಿಯಷ್ಠಿಯಾಸ್ತಯಹಾರೋಹಾತ್ಮಾತ್ಮಾನಂ” ಇತ್ಯಾದಿ ಯಜುರ್ಮಂತ್ರದಿಂದಲೂ ಇವುಗಳನ್ನ ಮೂರಾವರ್ತಿ ಹೇಳಿ ಅಗ್ನಿಜ್ವಾಲೆಗಳನ್ನು ಮೂರಾವರ್ತಿ ಪ್ರಾಶನ ಮಾಡಿ ಸಮಾರೋಪಮಾಡತಕ್ಕದ್ದು. ಕೃಷ್ಣಾಜಿನವನ್ನು ತೆಗೆದುಕೊಂಡು ಮನೆಯಿಂದ ಹೊರಟು “ಸರ್ವಭವಂತು ವೇದಾದ್ಯಾ: ಸರ್ವಭವಂತು ಸೋಮವಾಸರ್ವಪುತ್ರಮುಖಂ ದೃಷ್ಟಾ ಸರ್ವಭವಂತು ಭಿಕ್ಷುಕಾಃ” ಹೀಗೆ ಪುತ್ರಾದಿಗಳಿಗೆ ಆಶೀರ್ವಾದ ಮಾಡಿ “ನಮೇಕಶ್ಚಿನ್ನಾಹಂ ಕಸ್ಯಚಿತ್’ (ನನಗೆ ಯಾರೂ ಇಲ್ಲ, ಯಾರಿಗೂ ನಾನಿಲ್ಲ) ಹೀಗೆ ಪುತ್ರಾದಿಗಳಿಗೆ ಹೇಳಿ ವಿಸರ್ಜನ ಮಾಡತಕ್ಕದ್ದು. ಜಲಾಶಯಕ್ಕೆ ಹೋಗಿ ಅಂಜಲಿಯಿಂದ ಜಲವನ್ನು ತೆಗೆದುಕೊಂಡು “ಆಶುಃ ಶಿಶಾನ” ಎಂಬ ಸೂಕ್ತದಿಂದ ಅಭಿಮಂತ್ರಿಸಿ ಸರ್ವಾಭೋದೇವತಾಭ್ಯಃಸಾಹಾ- ಎಂದು ಎಲ್ಲ ತ್ಯಾಗವನ್ನೂ ಮಾಡತಕ್ಕದ್ದು. ಸರ್ವ ತ್ಯಾಗವಿಧಿ ತಿಥ್ಯಾದಿಗಳನ್ನು ಸ್ಮರಿಸಿ “ಅಪರೋಕ್ಷ ಬ್ರಹ್ಮಾವಾಪ್ತಯೇ ಸಂನ್ಯಾಸಂಕರೋಮಿ” ಹೀಗೆ ಸಂಕಲ್ಪಿಸಿ ಜಲಾಂಜಲಿಯನ್ನು ಹಿಡಿದುಕೊಂಡು “ಓಂ ವಿಷಹವಾ ಅಗ್ನಿ: ಸೂರ್ಯಪ್ರಾಣಂ ಗಚ್ಛಸ್ವಾಹಾ| ಓಂ ಸ್ವಾಂಯೋನಿಂಗಚ್ಛಸ್ವಾಹಾ|ಓಂ ಆಪೋವೈ ಗಚ್ಛಾಹಾ” ಎಂಬ ಮೂರು ಮಂತ್ರಗಳಿಂದ ಜಲದಲ್ಲಿ ಮೂರು ಅಂಜಲಿಗಳನ್ನು ಕೊಡತಕ್ಕದ್ದು, ಪುತ್ರೇಷಣಾ (ಪುತ್ರಾಪೇಕ್ಷೆ),ವಿಶ್ಲೇಷಣಾ (ಧನಾಪೇಕ್ಷೆ,) ಲೋಕೇಷಣಾ (ಜನಾಪೇಕ್ಷೆ)ಸರ್ವಷಣಾ (ಸರ್ವಾಪೇಟೆ) ಗಳನ್ನು ನಾನು ತ್ಯಜಿಸಿದನು. ‘ಅಭಯಂ ಸರ್ವಭೂತೇಭೋ ಮತ್ತ; ಸ್ವಾಹಾ’ ಎಂದು ಅಂಜಲಿಯನ್ನು ನೀರಿನಲ್ಲಿ ಚಲ್ಲುವದು. ಪುನಃ ಹೀಗೆ ಅಭಯದಾನಮಾಡಿ “ಯಂಚಿತ್ ಬಂಧನಂ ಕರ್ಮ ಕೃತಮಜ್ಞಾನತೋ ಮಯಾ ಪ್ರಮಾದಾಲಸ್ಕ ಲೋಕೋತ್ಕಂ ತತ್ಸರ್ವಂ ಸಂತ್ಯಜ ಹಂತ್ಯಕ್ತ ಸರ್ವೋ ವಿಶುದ್ಧಾತ್ಮಾ ಗತಸ್ನೇಹ ಶುಭಾಶುಭ ವಿಷಜಾಮೃತಂ ಸರ್ವ೦ ಕಾಮಭೋಗಸುಖಾದಿಕಂ ವಿವಾದಂಚ ಗಂಧಮಾಲ್ಯಾನುಲೇಪನ ಭೂಷಣ ನರ್ತನಂಗೇಯಂ ದಾನಮಾದಾನಮೇವಚ ನಮಸ್ಕಾರಂ ಜಪಂಹೋಮಂ ಯಾಶ್ಚಾ: ಕ್ರಿಯಾಮಮ ನಿತ್ಯಂ ನೈಮಿತ್ತಿಕಂ ಕಾಮ್ಯಂ ವರ್ಣಧರ್ಮಾಕ್ರಮಾಶ್ಚಯೇ ಸರ್ವಮೇವ ಪರಿತ್ಯಜ್ಯಪರಿಚ್ಛೇದ ೩ ಉತ್ತರಾರ್ಧ ೫೪೯ ದರಾಮಭಯದಕ್ಷಿಣಾಂಪಾಂಕರಾಭ್ಯಾಂ ವಿಹರನ್ ನಾಹಂವಾಕ್ಕಾಯನ ಮಾನ: ಕರಿಪಾಣಿನಾಂಪೀಡಾಂ ಪ್ರಾಣಿನಃಸಂತು ನಿರ್ಭಯಾಃ” ಹೀಗೆ ಹೇಳತಕ್ಕದ್ದು. ಅಂದರೆ ಬಂಧನಕಾರಕವಾದ ಕರ್ಮಗಳನ್ನು ಜ್ಞಾನದಿಂದ ಅಥವಾ ಅಜ್ಞಾನದಿಂದ ಮಾಡಿರಲಿ ಅದನ್ನೆಲ್ಲ ತ್ಯಜಿಸುವನು. ಕಾಮಭೋಗ ಸುಖವಿಲಾಸಗಳನ್ನೆಲ್ಲ ಹಾಗೂ ರೋಷ, ತೋಷ, ವಿವಾದ, ಗಂಧಮಾಲ್ಯಾದಿ ಸೇವನ, ಆಭರಣ, ನರ್ತನ, ಗಾಯನ ಇತ್ಯಾದಿ ಮತ್ತು ನಮಸ್ಕಾರ, ಜಪ, ಹೋಮ, ದಾನ, ಪ್ರತಿಗ್ರಹ, ನಿತ್ಯ, ನೈಮಿತ್ತಿಕ, ಕಾಮ, ವರ್ಣಧರ್ಮ ಈ ಎಲ್ಲವನ್ನೂ ತ್ಯಜಿಸುವೆನು. ವಾಕ್ಕಾಯಮನಗಳಿಂದ ಪ್ರಾಣಿಗಳ ಪೀಡೆಯನ್ನು ಮಾಡುವದಿಲ್ಲ. ಎಲ್ಲ ಪ್ರಾಣಿಗಳು ನಿರ್ಭಯವಾಗಿರಲಿ. ಇತ್ಯಾದಿ. ಸೂರ್ಯಾದಿ ದೇವತೆಗಳನ್ನೂ, ಬ್ರಾಹ್ಮಣರನ್ನೂ ಸಾಕ್ಷಿರೂಪದಿಂದ ಧ್ಯಾನಿಸಿ ನಾಭಿಯ ಮಟ್ಟದ ಜಲದಲ್ಲಿ ಪೂರ್ವಾಭಿಮುಖನಾಗಿ ಹಿಂದೆ ಹೇಳಿದಂತೆ ಸಾವಿತ್ರಿ ಪ್ರವೇಶ ಮಾಡಿ “ತರತ್ನಮಂದೀ” ಎಂಬ ಸೂಕ್ತವನ್ನು ಪಠಿಸಿ “ಪುತ್ರೇಷಣಾಯಾ ವಿತ್ತೇಷಣಾಯಾ ಲೋಕೇಷಣಾಯಾಶ್ಚವು ತೋಹಂ ಭಿಕ್ಷಾಚರ್ಯಂ ಚರಾಮಿ” ಹೀಗೆ ಜಲದಲ್ಲಿ ಹೋಮಿಸುವದು. ಪ್ರೇಷೋಚ್ಚಾರ “ಓಂ ಭೂಃ ಸನ್ಯಸ್ತಂ ಮಯಾ ಓಂಭುವ: ಸದ್ಯಸ್ತಂ ಮಯಾ ಓಂ ಸ್ವ: ಸಂ ಮಯಾ” ಹೀಗೆ ಮೂರುಬಾರಿ ಮಂದ್ರ, ಮಧ್ಯ, ಉಚ್ಚ ಸ್ವರಗಳಿಂದ ಹೇಳಿ (ಇದಕ್ಕೆ ಪ್ರೇಷೋಚ್ಚಾರವನ್ನುವರು) ‘‘ಅಭಯಂ ಸರ್ವಭೂತಬ್ಬೋ ಮತ್ತಃ ಸ್ವಾಹಾ ಎಂದು ಜಲವನ್ನು ಜಲದಲ್ಲಿ ಚಲ್ಲಿ ಶಿಖೆಯನ್ನು ಕಿತ್ತು ಯಜ್ಞಪವೀತವನ್ನು ಎತ್ತಿ ಹಿಡಿದು “ಆಪೋವ್ರ ಸರ್ವಾ ದೇಮಾ: ಸರ್ವಾಭೋ ದೇವತಾಭ್ ಜುಹೋಮಿ ಸ್ವಾಹಾ ಓಂ ಭೂಸ್ವಾಹಾ” ಎಂದು ಜಲಸಹಿತವಾಗಿ ಜಲದಲ್ಲಿ ಚಲ್ಲತಕ್ಕದ್ದು ಮತ್ತು ಪ್ರಾರ್ಥಿಸಬೇಕು. “ಪ್ರಾಹಿಮಾಂ ಸರ್ವಲೋಕೇಶ ವಾಸುದೇವ ಸನಾತನ ಸಂ ಮೇ ಜಗದ್ಯೋನೇ ಪುಂಡರೀಕಾಕ್ಷಮೋಕ್ಷದಯುಷ್ಟುಚ್ಚರಣಮಾಪನ್ನ ಪ್ರಾಹಿಮಾಂ ಪುರುಷೋತ್ತಮ” ಆಮೇಲೆ ದಿಗಂಬರನಾಗಿ ಉತ್ತರಾಭಿ ಮುಖವಾಗಿ ಐದು ಹೆಜ್ಜೆಗಳನ್ನು ನಡೆಯತಕ್ಕದ್ದು. ವಿವಿದಿಷಾಸಂನ್ಯಾಸಿಯಾದರೆ ಅವನಿಗೆ ಆಚಾರ್ಯನು ನಮಸ್ಕಾರಮಾಡಿ ಕಾಷಾಯ, ಕೌಪೀನ, ಆಚ್ಛಾದನ, ವಸ್ತ್ರಗಳನ್ನು ಕೊಟ್ಟು ದಂಡವನ್ನು ಕೊಡತಕ್ಕದ್ದು, ಸಂನ್ಯಾಸಿಯು ಕೌಪೀನವಸ್ತ್ರಗಳನ್ನು ಧರಿಸಿ ‘ಓಂ ಇಂದ್ರವಸ್ರೋಸಿ ಸಖೇಮಾಂ ಗೋಪಾಯ” ಎಂದು ದಂಡವನ್ನು ಸ್ವೀಕರಿಸತಕ್ಕದ್ದು. “ವಾರ್ತಘ್ನ:ಶರ್ಮಮೇಭವ ಯತ್ನಾಪಂ ತನ್ನಿವಾರಯ” ಓಂಕಾರ ಅಥವಾ ಗಾಯತ್ರಿಯಿಂದ ಕಮಂಡಲುವನ್ನು ಸ್ವೀಕರಿಸುವದು. “ಇದಂವಿಷ್ಣು” ಎಂದು ಆಸನವನ್ನು ಸ್ವೀಕರಿಸುವದು. ಆಮೇಲೆ ಕೈಯ್ಯಲ್ಲಿ ಸಮಿಧವನ್ನು ಹಿಡಿದು ಗುರುವಿಗೆ ನಮಸ್ಕಾರಮಾಡಿ ಗರುಡಾಸನದಲ್ಲಿ ಕುಳಿತು ಗುರುವನ್ನು ಕುರಿತು ಹೇಳುವದು. “ಪ್ರಾಯಪ್ಪ ಭೂ ಜಗನ್ನಾಥ ಗುರೋ ಸಂಸಾರಿ ನನಾದಂ ಮಾಂ ಕಾಲದಷ್ಟಂಚ ತಾಮಹಂ ಶರಣಂಗತ: ಯೋಬ್ರಹ್ಮಾಣಂ ವಿರಥಾ ಪೂರ್ವಂ ಯೋವ್ಯವೇದಾಂಶ್ಚ ಪ್ರತಿ ತ ತಂಹದೇವಮಾತ್ಮ ಬುದ್ಧಿ ಪ್ರಕಾಶಂ ಮುತ್ತುರ್ವಶರಣಮಹಂ ಪ್ರಪದ್ಯೋಗಿ ಹೀಗೆ ಗುರುವನ್ನು ಪ್ರಾರ್ಥಿಸಿ ಬಲದ ಮೊಣಕಾಲನ್ನೂರಿ ಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ “ಆಧೀಹಿಭಗವೋಬ್ರಹ್ಮ” ಹೀಗೆ ಹೇಳತಕ್ಕದ್ದು. 250 ಧರ್ಮಸಿಂಧು ಗುರುವು ತನ್ನನ್ನು ಬ್ರಹ್ಮರೂಪನನ್ನಾಗಿ ಭಾವಿಸಿ ಜಲದಿಂದ ತುಂಬಿದ ಶಂಖವನ್ನು ಹನ್ನೆರಡು ಓಂಕಾರಗಳಿಂದ ಅಭಿಮಂತ್ರಿಸಿ ಅದರಿಂದ ಶಿಷ್ಯನನ್ನು ಅಭಿಷೇಕಮಾಡಿ “ಶನ್ನೋಮಿತ್ರ” ಎಂದು ಶಾಂತಿಯನ್ನು ಪಠಿಸಿ ಅವನ ಶಿರಸ್ಸಿನಲ್ಲಿ ಹಸ್ತವನ್ನಿಟ್ಟು ಪುರುಷಸೂಕ್ತವನ್ನು ಜಪಿಸಿ ಶಿಷ್ಯನ ಹೃದಯದಲ್ಲಿ ಹಸ್ತವನ್ನಿಟ್ಟು “ಮಮವ್ರತೇ ಹೃದಯಂತೇ ದಧಾಮಿ” ಇತ್ಯಾದಿ ಮಂತ್ರವನ್ನು ಜಪಿಸಿ ಬಲದ ಕಿವಿಯಲ್ಲಿ ಓಂಕಾರವನ್ನುಪದೇಶಿಸಿ ಅದರ ಸಲುವಾಗಿ “ಪಂಚೀಕರಣ” ಮೊದಲಾದವುಗಳನ್ನು ತಿಳಿಸಿ"ಪ್ರಜ್ಞಾನಂಬ್ರಹ್ಮ ಅಯಾ ಮಾತ್ಮಾಬ್ರಹ್ಮ ತತ್ವಮಸಿ ಅಹಂಬ್ರಹ್ಮಾಸ್ಮಿ” ಎಂಬ ಋಗ್ವದಾದಿ ಮಹಾವಾಕ್ಯಗಳಲ್ಲಿ ಯಾವದಾದರೊಂದನ್ನು ಶಿಷ್ಯನ ಶಾಖಾನುಸಾರವಾಗಿ ಉಪದೇಶಿಸಿ ಅದರ ಸಲುವಾಗಿ ಬೋಧಿಸತಕ್ಕದ್ದು. ನಂತರ ‘ತೀರ್ಥ’ ‘ಆಶ್ರಮ’ ಮೊದಲಾದ ಸಂಪ್ರದಾಯಾನುಸಾರ ನಾಮಕರಣ ಮಾಡತಕ್ಕದ್ದು. ಆಮೇಲೆ ಪರ್ಯಂಕ ಶೌಚವನ್ನು ಮಾಡಿಸಿ ಯೋಗಪಟ್ಟವನ್ನು ಕೊಡತಕ್ಕದ್ದು. ಪರ್ಯಂಕಶೌಚ “ಪರ್ಯಂಕಶೌಚ” ವಿಧಿಯನ್ನು ಯಾವನಾದರೊಬ್ಬ ‘ಗೃಹಸ್ತ’ನು ಮಾಡಿಸಬೇಕಾಗುವದು. ಪುಣ್ಯದಿನದಲ್ಲಿ ಗೃಹಸ್ಥನು ತನ್ನ ಮುಂದೆ ಸಂನ್ಯಾಸಿಯಾಗತಕ್ಕವನನ್ನು ಕೂಡ್ರಿಸಿ ಗುರುವಿನ ಅಪ್ಪಣೆಯಿಂದ “ಪರ್ಯಂಕಶೌಚ"ವನ್ನು ಮಾಡತಕ್ಕದ್ದು. “ಯತಯೇ ಪರ್ಯಂಕಶೌಚಂ ಕರಿಷ್ಯ ಹೀಗೆ ಸಂಕಲ್ಪಿಸಿ ಎಡಭಾಗದಲ್ಲಿ ಪೂರ್ವಾಗ್ರವಾಗಿ ಮಾಡಿದ ಐದು ಮೃತ್ತಿಕೆಯ ಭಾಗಗಳನ್ನು ಅದರಂತ ಬಲಭಾಗದಲ್ಲಿಯೂ ಐದು ಮೃತ್ತಿಕೆಯ ಭಾಗಗಳನ್ನು ಸ್ಥಾಪಿಸಿ ಎರಡೂಕಡೆಗಳಲ್ಲಿ ಶುದ್ಧೋದಕವನ್ನಿಟ್ಟುಕೊಂಡು ಎಡಭಾಗದಲ್ಲಿಯ ಮೊದಲನೆಯ ಮಣ್ಣಿನಭಾಗದಿಂದ ಮಣ್ಣನ್ನು ತೆಗೆದುಕೊಂಡು ನೀರಿನಿಂದಕೂಡಿ ಯತಿಯ ಎರಡೂ ಮೊಣಕಾಲುಗಳನ್ನು ತನ್ನ ಎರಡೂ ಕೈಗಳಿಂದ ತೊಳೆಯತಕ್ಕದ್ದು. ಕೊನೆಗೆ ತೊಳದು ಮುಗಿಯುವಷ್ಟರೊಳಗೆ ಆ ಮಣ್ಣು ಖರ್ಚಾಗಬೇಕು. ಮುಂದೆಯೂ ಹೀಗೆಯೇ, ಬಲಭಾಗದಲ್ಲಿರುವ ಮೊದಲಿನ ತುಂಡಿನ ಅರ್ಧಭಾಗದಿಂದ ತನ್ನ ಎಡಗೈಯನ್ನೂ ಮಣ್ಣು, ನೀರುಗಳಿಂದ ಹತ್ತಾವರ್ತಿ ತೊಳೆದುಕೊಂಡು ಮತ್ತೊಂದು ಅರ್ಧಭಾಗದಿಂದ ಅದೇ ಜಲದಿಂದ ಎರಡೂ ಹಸ್ತಗಳನ್ನು ಹತ್ತಾವರ್ತಿ ತೊಳೆಯತಕ್ಕದ್ದು. ಇದರಂತ ಐದೂ ಮಣ್ಣಿನ ಭಾಗಗಳಿಂದ ಮಾಡಬೇಕು. ಮುಂದೆಯೂ ಹೀಗೆಯೇ ಊಹಿಸುವದು. ಸಂಖ್ಯೆಯಲ್ಲಿ ವಿಶೇಷವಿದೆ- ಎಡದ ಎರಡನೇ ಭಾಗದಿಂದ ನಾಲ್ಕು ಬಾರಿ ಯತಿಯ ಎರಡೂ ಮೊಣಕಾಲುಗಳನ್ನು ಒಂದೇಸಲ ತೊಳೆದು, ಬಲದ ಎರಡನೇ ಭಾಗಾರ್ಧದಿಂದ ಏಳಾವರ್ತಿ ಎಡಹಸ್ತವನ್ನು, ಬೇರೆ ಅರ್ಧ ಭಾಗದಿಂದ ನಾಲ್ಕಾವರ್ತಿ ಎರಡೂ ಹಸ್ತಗಳನ್ನು ತೊಳೆಯತಕ್ಕದ್ದು. ಎಡದ ಮೂರನೇ ಭಾಗದಿಂದ ಯತಿಯ ಕಣಕಾಲುಗಳನ್ನು ಮೂರಾವರ್ತಿ, ಬಲದ ಅರ್ಧ ಭಾಗದಿಂದ ಎಡದ ಹಸ್ತವನ್ನು ಆರಾವರ್ತಿ, ಎರಡೂ ಹಸ್ತಗಳನ್ನು ನಾಲ್ಕು ಆವರ್ತಿ ತೊಳೆಯತಕ್ಕದ್ದು. ಎಡಭಾಗದ ನಾಲ್ಕನೇ ಭಾಗದಿಂದ ಯತಿಯ ಪಾದಗಳ ಪೃಷ್ಠಭಾಗಗಳನ್ನು ಎರಡಾವರ್ತಿ ತೊಳೆಯುವದು. ಎಡದ ಐದನೇ ಭಾಗದಿಂದ ಒಂದಾವರ್ತಿ, ಯತಿಯ ಎರಡೂ ಅಂಗಾಲುಗಳನ್ನು, ಬಲದ ಐದನೆಯ ಅರ್ಧದಿಂದ ಎರಡಾವರ್ತಿ, ಎಡಪಾದ ತಲವನ್ನು ಇನ್ನೊಂದರ್ಧದಿಂದ ಒಂದಾವರ್ತಿ ಪಾದತಲವನ್ನು ತೊಳೆಯತಕ್ಕದ್ದು. ಪರಿಚ್ಛೇದ • ೩ ಉತ್ತರಾರ್ಧ ೫೫೧ ಯೋಗ ಪಟ್ಟ ಹೀಗೆ ಪರ್ಯಂಕಶೌಚವನ್ನು ಮುಗಿಸಿಕೊಂಡ ಯತಿಯು ಕಟಿಶೌಚವನ್ನು ಮಾಡಿ ಕಟಿಸೂತ್ರ ಕೌಪೀನಗಳನ್ನು ಧರಿಸಿ ತಲೆಯು ಮುಚ್ಚುವಂತ ವಸ್ತ್ರಪರಿವೇಷ್ಟಿತನಾಗಿ, ಗುರುವಿನ ಆಜ್ಞೆಯಿಂದ ಉಚ್ಚಾಸನದಲ್ಲಿ ಕುಳಿತು ಸಭಿಕರಿಂದ ಕೂಡಿ ವೇದಾಂತ ವಿಚಾರವಾಗಿ ಕಿಂಚಿತ್ ಉಪನ್ಯಾಸಮಾಡತಕ್ಕದ್ದು. ಗುರುವಾದ ಯತಿಯು ಶಿಷ್ಯಯತಿಯ ಶಿರಸ್ಸಿನಲ್ಲಿ ಪುರುಷ ಸೂಕ್ತವನ್ನು ಹೇಳಿ ಶಂಖದಿಂದ ಅಭಿಷೇಕಮಾಡಬೇಕು; ಮತ್ತು ವಸ್ತ್ರ, ಗಂಧ, ಪುಷ್ಪ, ಧೂಪ, ದೀಪ ನೈವೇದ್ಯಗಳಿಂದ ಪೂಜಿಸಿ ಮೇಲ್ಗಡೆಗೆ ವಸ್ತ್ರವನ್ನು ಎತ್ತಿ ಹಿಡಿದು ಯತಿಗಳಿಂದ ಕೂಡಿ “ವಿಶ್ವರೂಪಾಧ್ಯಾಯ” ಅಂದರೆ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯವನ್ನು “ಪಶ್ಯಾಮಿದೇವಾನ್” ಇದರಿಂದಾರಂಭಿಸಿ “ಭುಂಕ್ಷರಾಜಂಸಮೃದ್ದಂ” ಎಂಬಲ್ಲಿಯ ವರೆಗೆ ಪಠಿಸಿ ಹಿಂದೆ ಇಟ್ಟ ಹೆಸರನ್ನು ಘೋಷಿಸತಕ್ಕದ್ದು. ಆಮೇಲೆ ಶಿಷ್ಯನಿಗೆ-ಇನ್ನು ಮುಂದೆ ನೀನು ಸಂನ್ಯಾಸಾಧಿಕಾರಿಗಳಿಗೆ ಸಂನ್ಯಾಸದೀಕ್ಷೆಯನ್ನು ಕೊಡತಕ್ಕದ್ದು, ಮತ್ತು ದೀಕ್ಷೆಗೆ ತಕ್ಕಂತೆ ಯೋಗಪಟ್ಟ ಮೊದಲಾದವುಗಳನ್ನು ಮಾಡತಕ್ಕದ್ದು. ಹಿರೇ ಯತಿಗಳಿಗೆ ನಮಸ್ಕರಿಸತಕ್ಕದ್ದೆಂದು ಹೇಳತಕ್ಕದ್ದು. ಆಮೇಲೆ ಗುರುವು ಕಟಿಸೂತ್ರವನ್ನೂ ಪಂಚಮುದ್ರೆಯಿಂದಲಂಕೃತವಾದ ಮೊದಲಿನ ದಂಡವನ್ನೂ ಶಿಷ್ಯನಿಗೆ ಕೊಟ್ಟು ಸಂಪ್ರದಾಯದಂತೆ ಶಿಷ್ಯಯತಿಗೆ ನಮಸ್ಕಾರ ಮಾಡತಕ್ಕದ್ದು. ಶಿಷ್ಯಯತಿಯು “ನಾರಾಯಣ” ಎಂದು ಹೇಳಿ ಉಚ್ಚಾಸನದಿಂದ ಎದ್ದು ಅದರಲ್ಲಿ ಗುರುವನ್ನು ಕೂಡ್ರಿಸಿ ಯಥಾವಿಧಿಯಾಗಿ ನಮಸ್ಕರಿಸಿ ಉಳಿದ ಯತಿಗಳಿಗೂ ನಮಸ್ಕಾರ ಮಾಡತಕ್ಕದ್ದು. ಹೀಗೆ ಗೃಹ್ಯಾಗ್ನಿಯುಳ್ಳ ಮತ್ತು ವಿಧುರಾದಿಗಳ ವಿವಿದಿಷಾ ಸಂನ್ಯಾಸ ಪ್ರಯೋಗವು. ಅಗ್ನಿಹೋತ್ರಿಗಳಾದವರಿಗೆ ವಿಶೇಷ ಶೌತಾಗ್ನಿಗಳು ವಿಚ್ಛಿನ್ನಗಳಾದರೆ ಪಾವಮಾನೇಷ್ಟಿಯ ಅಂತವಾಗಿ ಅಥವಾ ಪೂರ್ಣಾಹುತ್ಯಂತವಾಗಿ ಪುನರಾಧಾನವನ್ನು ಮಾಡಿ ಪ್ರಾಯಶ್ಚಿತ್ತ, ಸಾವಿತ್ರೀಪ್ರವೇಶ ಇತ್ಯಾದಿಗಳನ್ನು ಹಿಂದೆ ಹೇಳಿದಂತೆಯೇ ಮಾಡತಕ್ಕದ್ದು. ಬ್ರಹ್ಮಾನ್ನಾಧಾನವು - ಮೂರು ಅಗ್ನಿಗಳನ್ನು ಪ್ರಜ್ವಲಿಸಿ ಸಂಸ್ಕಾರಮಾಡಿದ ಆಜ್ಯವನ್ನು ಸೃಚೆಯಲ್ಲಿ ನಾಲ್ಕಾವರ್ತಿ ತುಂಬಿಕೊಂಡು ಆಹವನೀಯಾಗ್ನಿಯಲ್ಲಿ “ಓಂ ಸ್ವಾಹಾ” ಎಂದು ಪೂರ್ಣಾಹುತಿ ಮಾಡುವದು. “ಪರಮಾತ್ಮನ ಇದು” ಎಂದು ತ್ಯಾಗವು ಸಾಯಂ ಸಂಧ್ಯಾ ಅಗ್ನಿ ಹೋತ್ರ ಹೋಮಾಂತದಲ್ಲಿ ಗಾರ್ಹಪತ್ಯಾಗ್ನಿಯ ಉತ್ತರಪಾರ್ಶ್ವದಲ್ಲಿ ಎರಡೆರಡರಂತೆ ಪಾತ್ರಾ ಸಾಜನ ಮಾಡಿ ಆಹವನೀಯದ ಬಲಗಡೆಯಲ್ಲಿ ಕೌಪೀನು ದಂಡಾದಿಗಳನ್ನಾಸಾದನ ಮಾಡುವದು-ರಾತ್ರಿಯಲ್ಲಿ ಜಾಗರಣ, ಮರುದಿನ ಪ್ರಾತಃ ಕಾಲದ ಹೋಮಾದಿಗಳನ್ನು ಮಾಡುವದು. ಹುಣ್ಣಿವೆಯಲ್ಲಿ ಬ್ರಹ್ಮಾನಾಧಾನವಾದರೆ ಪೌರ್ಣಿಮಾಸೇಷ್ಟಿಯನ್ನು ಮಾಡಿ ದರ್ಶಷ್ಟಿಯನ್ನು ಸಹ ಪಕ್ಷಹೋಮ-ಅಪಕರ್ಷಣಪೂರ್ವಕವಾಗಿ ಆಗಲೇ ಮಾಡತಕ್ಕದ್ದು. ಹುಣ್ಣಿಮೆ ಅಥವಾ ಅಮಾವಾಸ್ಯೆಯಲ್ಲಿ ದೇಶಕಾಲಗಳನ್ನು ಸ್ಮರಿಸಿ “ಸಂನ್ಯಾಸ ಪೂರ್ವಾಂಗಭೂತಯಾ ಪ್ರಾಜಾಪತ್ಯೇಷ್ಮಾ ವೈಶ್ವಾನರ್ಯಾಚ ಸಮಾನ ತಂತ್ರಣ ಯ” ಹೀಗೆ ಸಂಕಲ್ಪಿಸಿ ಎರಡು ಇಷ್ಟಿಗಳನ್ನು ಕೂಡಿ ಮಾಡತಕ್ಕದ್ದು, ಇಲ್ಲಿ ವೈಶ್ವಾನರ ಉದ್ದೇಶದಿಂದ HH ಧರ್ಮಸಿಂಧು “ದ್ವಾದಶಕಪಾಲವುರೋಡಾಶ” ಮಾಡತಕ್ಕದ್ದು. ‘ಪ್ರಾಜಾಪತ್ಯ ಚರು’ ವನ್ನು ವಿಷ್ಣು ದೇವತಾಕವಾದ ನವಕಪಾಲ ಪುರೋಡಾಶ” ಮಾಡುವದು; ಅಥವಾ ಕೇವಲ ಪ್ರಾಜಾಪತ್ಯೇಷ್ಟಿ ಮಾಡತಕ್ಕದ್ದು. ಇದರ ಪ್ರಯೋಗವನ್ನು ತಮ್ಮ ತಮ್ಮ ಸೂತ್ರಾನುಸಾರ ಊಹಿಸತಕ್ಕದ್ದು. ಇಲ್ಲಿ ಬೋಧಾಯನ ಸೂತ್ರಾನುಸಾರವಾಗಿ ಸ್ವಲ್ಪ ಹೇಳಲಾಗುವದು, ಪವನ, ಪಾವನ, ಪುಣ್ಯಾಹವಾಚನಾದಿ ಪೂರ್ವಾಂಗಗಳನ್ನು ಮುಗಿಸಿ ಕೇವಲ ವೈಶ್ವಾನರೇ ಅಥವಾ ಕೇವಲ ಪ್ರಾಜಾಪತ್ಯೇಷ್ಟಿಯ ಸಂಕಲ್ಪ ಮಾಡುವದು. ಶ್ರೀಹಿಮಯವಾದ ಪುರೋಡಾಶವು ದ್ರವ್ಯವು. ಐದು ಪ್ರಯಾಜಗಳು, ಅಗ್ನಿವೈಶ್ವಾನರ ಅಥವಾ ಪ್ರಜಾಪತಿಯು ದೇವತೆಯು, ಹದಿನೈದು ಸಾಮಿಧೇನುಗಳು. ವ್ರತಗ್ರಹಣವಾದ ನಂತರ ಅಧ್ವರ್ಯುವು ಆಜ್ಯವನ್ನು ಸಂಸ್ಕರಿಸಿ ಸೃಚೆಯಲ್ಲಿ ನಾಲ್ಕಾವರ್ತಿ ಆಜ್ಯವನ್ನು ಹಾಕಿಕೊಂಡು “ಪೃಥಿವೀಹೋತಾ” ಇತ್ಯಾದಿ ಚತುರ್ಹೋತೃಹೋಮವನ್ನು ಹಾಗೂ ಕೂಷ್ಮಾಂಡ ಹೋಮ, ಸಾರಸ್ವತ ಹೋಮಗಳನ್ನೂ ಮಾಡಿ “ನಿರ್ವಾಪಾದಿಗಳನ್ನು ಮಾಡತಕ್ಕದ್ದು. ವೈಶ್ವಾನರೇಷ್ಠಿಗೆ “ದ್ವಾದಶಕಪಾಲಪುರೋಡಾಶ"ವು. ಪ್ರಾಜಾಪತ್ಯದಲ್ಲಿ ‘ಚರು’ವು. “ವೈಶ್ವಾನರಾಯ ಪ್ರತಿವೇದಯಾಮ” ಎಂದು ಪುರೋನುವಾಕ್ಯವು. (ಪಕ್ಷಹೋಮ ಮಾಡುವಾಗ ಪ್ರಧಾನಮಂತ್ರಕ್ಕೆ ಜೋಡಿಸಿ ಹೇಳುವ ವಾಕ್ಯ) “ವೈಶ್ಯಾನರಃ ಪವಮಾನ: ಪವಿತ್ರ:” ಎಂದು ಯಾಜ್ಞೆಯು. (ಸ್ವಾಹಾಂತವಾಗಿ ಹವನಮಾಡುವಾಗ ಹೇಳುವ ಪ್ರಧಾನದೇವತಾಮಂತ್ರ) ಪ್ರಾಜಾಪತ್ಯದಲ್ಲಿ ಪ್ರಧಾನವು ಉಪಾಂಶುಧರ್ಮಕವಾದದ್ದು. (ಉಪಾಂಶು-ಇನ್ನೊಬ್ಬರಿಗೆ ಕೇಳಿಸದಷ್ಟು ಅಸ್ಪಷ್ಟವಾಗಿ ಹೇಳುವದು) ಸುಭೂಃ ಸ್ವಯಂಭೂಃ ಇತ್ಯಾದಿಗಳು ಅನುವಾಕ್ಯಗಳು, “ಪ್ರಜಾಪತೇನತ್ವದೇತಾ” ಎಂದು ಯಾಜ್ಞೆಯು, ಆಮೇಲೆ ಸೃವೆಯಿಂದ ಎರಡೂ ಇಷ್ಟಿಗಳಲ್ಲಿ ಎಂಟು ಉಪಹೋಮಗಳು. “ವೈಶ್ವಾನರೋನ ಊತಯಃ ಆ ಪ್ರಯಾತು ಪರಾವತಃ ಅಗ್ನಿರುತ್ತೇನವಾಹಸಾಸ್ವಾಹಾ||” ಎಲ್ಲ ಮಂತ್ರಗಳಿಗೂ ‘ವೈಶ್ವಾನರಾಯೇದಂ’ಎಂದು ತ್ಯಾಗವು. “ರುತಾವಾನಂ ವೈಶ್ವಾನರಮೃತಸ್ಯ ಜ್ಯೋತಿಷ ಪ್ರತಿಂಗೆ ಅಜಂಘರ್ಮಮೀಮಹೇಸ್ವಾಹಾ|೨| ವೈಶ್ವಾನರಸದಸ |೩| ಪೃಷ್ಟೋದಿವಿಷ್ಟೂ ಅಗ್ನಿ:1೪ ಜಾತೋಯದನ್ನೇ|೫| ತಮಗೇ ಶೋಚಿಷಾ|| ಅಸ್ಮಾಕಮಗ್ನ ೭೧ ವೈಶ್ವಾನರಸುಮತ” |೮| ಆಮೇಲೆ ಆ ಅಗ್ನಿಯನ್ನು “ಸಹಸ್ರಶೀರ್ಷಾ” ಎಂಬ ಸೂಕ್ತದಿಂದ ಉಪಸ್ಥಾನ ಮಾಡತಕ್ಕದ್ದು. ನಂತರ ಸ್ಪಷ್ಟಕೃದಾದಿ ಹೋಮಶೇಷವನ್ನು ಮುಗಿಸಿ “ಸರ್ವೋರುದ್ರಃ” ವಿಶ್ವಂ ಭೂತಂ- ಎಂಬ ಎರಡು ಮಂತ್ರಗಳಿಂದ ಅಗ್ನಿಯನ್ನು ಉತ್ಸರ್ಜಿಸುವದು “ಆಯುರ್ದಾ” ಎಂಬ ಮಂತ್ರದಿಂದ ದರ್ಭಸ್ತಂಬದಲ್ಲಿರುವ ಯಜಮಾನನ ಭಾಗದಿಂದ ಸ್ವಲ್ಪವನ್ನು ತಕ್ಕೊಂಡು “ಸಹಸ್ರಶೀರ್ಷಾ” ಎಂಬ ಅನುವಾಕದಿಂದ ಪ್ರಾಶನಮಾಡಿ “ಓಮಿತಿ ಬ್ರಹ್ಮ-ಓಮಿತೀದಂಸರ್ವಂ” ಎಂಬ ಮಂತ್ರದಿಂದ ಹುತಶೇಷವನ್ನು ಆಹವನೀಯ ಅಗ್ನಿಯಲ್ಲಿ ಚಲ್ಲತಕ್ಕದ್ದು. ಹೀಗೆ ವೈಶ್ವಾನರಾದಿಗಳಲ್ಲಿ ಯಾವದಾದರೊಂದು ಇಷ್ಟಿಯನ್ನು ಮಾಡಿ ಔಪಾಸನಾಗ್ನಿಯಲ್ಲಿ ಸರ್ವಾಧಾನಪಕ್ಷದಲ್ಲಿ ‘ದಕ್ಷಿಣಾಗ್ನಿಯಲ್ಲಿ ಪ್ರಾಣಾದಿಹೋಮ, ವಿರಜಾಹೋಮಾಂತವಾಗಿ ಮಾಡತಕ್ಕದ್ದು. ಉಳಿದದ್ದನ್ನೆಲ್ಲ ಮೊದಲು ಹೇಳಿದಂತೆ ಮಾಡುವದು. ಆಹವನೀಯ ಅಗ್ನಿಯಲ್ಲಿ -ಅರಣೀ, ಮುಸಲ, ಒರಳುಕಲ್ಲು ಇವುಗಳನ್ನು ಬಿಟ್ಟು ಉಳಿದ ಮರದ ಪಾತ್ರೆಗಳನ್ನು ದಹನ ಪರಿಚ್ಛೇದ • ೩ ಉತ್ತರಾರ್ಧ 99998 ಮಾಡತಕ್ಕದ್ದು. ನಂತರ ತನ್ನಲ್ಲಿ ಆಹವನೀಯ ಅಗ್ನಿಯ ಸಮಾರೋಪ ಮಾಡುವದು. (ಮೊದಲಿನಂತೆ)ಎರಡು ಅರಣಿಗಳನ್ನು ಗಾರ್ಹಪತ್ಯದಲ್ಲಿ ಹಾಕಿ, ಅದರ ಸಮಾರೋಪವನ್ನು ಮಾಡಿ, ದಕ್ಷಿಣಾಗ್ನಿಯಲ್ಲಿ ಒನಕೆ, ಒರಳು ಕಲ್ಲುಗಳನ್ನು ಹಾಕಿ ದಕ್ಷಿಣಾಗ್ನಿಯನ್ನು ಸಮಾರೋಪಮಾಡತಕ್ಕದ್ದು. ಆಮೇಲೆ ಔಪಾಸನಾಗ್ನಿಯ ಸಮಾರೋಪವು ಹೀಗೆ ಅದರ ಕ್ರಮವಿದೆ. ಈ ವಿಷಯದಲ್ಲಿ ವಿಶೇಷವನ್ನು ಬೇರೆ ಕಡೆಗೆ ನೋಡುವದು. ಹೀಗೆ ಸಾಗ್ನಿಕ ಪ್ರಯೋಗವು. ಸ್ನಾತಕನಿಗೆ ಬ್ರಹ್ಮಾನಾಧಾನ, ವಿರಜಾಹೋಮಾದಿಗಳಿಲ್ಲದಿದ್ದರೂ ನಡೆಯುವದು. ಯಾಕೆಂದರೆ ಆತನಿಗೆ ಅಗ್ನಿಯಿರುವದಿಲ್ಲ. ಆತುರ ಸಂನ್ಯಾಸ ಆತುರಸಂನ್ಯಾಸದಲ್ಲಿ ಸಂಕಲ್ಪ, ಪ್ರೇಮೋಚ್ಚಾರ, ಅಭಯದಾನ ಈ ಮೂರು ಪ್ರಧಾನ ವಿಷಯಗಳಾಗಿದ್ದು ಅತ್ಯಾವಶ್ಯಕಗಳು. ಅಷ್ಟಶ್ರಾದ್ಧಾದಿ ದಂಡ ಗ್ರಹಣಾಂತವಾದ ಅಂಗಕಾರ್ಯಗಳನ್ನು ಯಥಾಸಂಭವ ಮಾಡುವದು. ಅದರ ಪ್ರಯೋಗವು - ಮಂತ್ರಸ್ನಾನವನ್ನು ಮಾಡಿ ಶುದ್ಧವಸ್ತ್ರವನ್ನು ಧರಿಸಿ “ಜ್ಞಾನಪ್ರಾಪ್ತಿದ್ವಾರಾ ಮೋಕ್ಷ ಸಿಧ್ಯರ್ಥಂ ಆತುರವಿಧಿನಾ ಸಂನ್ಯಾಸಮಹಂ ಕರಿಷ್ಟೇ” ಹೀಗೆ ಸಂಕಲ್ಪವು. ಐದು ಶಿಖೆಯ ಕೇಶಗಳನ್ನುಳಿಸಿ ವಪನಮಾಡಿಕೊಂಡು ಸ್ನಾನಮಾಡಿ ಸಂಧ್ಯಾದಿ ಔಪಾಸನಾಂತವಾಗಿ ಯಥಾಸಂಭವಮಾಡಿ, ಆತ್ಮನಲ್ಲಿ ಸಮಾರೋಪಣಮಾಡತಕ್ಕದ್ದು. ಅಗ್ನಿವಿಚ್ಛತ್ತಿಯಾದವರಿಗೆ ಪುನರಾಧಾನ ಸಂಭವದಲ್ಲಿ ಸಮಾರೋಪವು. ಇಲ್ಲವಾದರೆ ಸಮಾರೋಪವಿಲ್ಲ. ವಿಧುರಾದಿಗಳಿಗೆ ಅಗ್ನಿಯ ಅಭಾವವಿರುವ ಕಾರಣದಿಂದಲೇ ಸಮಾರೋಪದ ಆವಶ್ಯಕತೆಯಿಲ್ಲ. ಆಮೇಲೆ ಜಲವನ್ನು ತೆಗೆದುಕೊಂಡು ಜಲದಲ್ಲಿ ಹೋಮಿಸುವದು. “ಏಷಹವಾ ಅಗೇರ್ಯ: ಪ್ರಾಣ: ಪ್ರಾಣಂಗಳ್ಳಸ್ವಾಹಾ|೧! ಆಪೋವೈ ಸರ್ವಾದೇವತಾಂ ಸರ್ವಾಭೋ ದೇವತಾಭೋಜು ಹೋಮಿಸ್ವಾಹಾ|೨| ಮತ್ತು ಭೂಸ್ವಾಹಾ " ಎಂದು ಜಲದಲ್ಲಿ ಜಲದಿಂದ ಹೋಮಿಸಿ ಹುತಶೇಷವಾದ ಜಲವನ್ನು “ಆಶು:ಶಿಶಾನ” ಎಂಬ ಸೂಕ್ತದಿಂದ ಅಭಿಮಂತ್ರಿಸಿ’ಪುತ್ರಷಣಾ, ವಿತ್ತೇಷಣಾ, ಲೋಕೇಷಣಾ ಮಯಾತ್ಮಾ: ಸ್ವಾಹಾ” ಎಂದು ಸ್ವಲ್ಪ ಕುಡಿಯುವದು. “ಅಭಯಂ ಸರ್ವಭೂತೇಭೋ ಮತ್ತಃ ಸ್ವಾಹಾ” ಎಂದು ಎರಡನೇ ಬಾರಿ ಕುಡಿಯುವದು “ಸನ್ಯಸ್ತಂಮಯಾ” ಎಂದು ಮೂರನೇ ಬಾರಿ ಪೂರ್ಣ ಕುಡಿಯುವದು, ನಂತರ ಹಿಂದೆ ಹೇಳಿದಂತೆ “ಸಾವಿತ್ರೀಪ್ರವೇಶ, ಪ್ರೇಷೋಚ್ಛಾರ” ವಿಧಾನ ಮಾಡತಕ್ಕದ್ದು. “ಅಭಯಂ ಸರ್ವಭೂತೇಭೋ ಮತ್ತಃ ಸ್ವಾಹಾ” ಎಂದು ಪೂರ್ವದಿಕ್ಕಿನಲ್ಲಿ ಜಲವನ್ನು ಬಿಡತಕ್ಕದ್ದು. ಶಿಖೆಯನ್ನು ಕಿತ್ತು, ಯಜ್ಞಪವೀತವನ್ನು ಹರಿದು “ಭೂಃ ಸ್ವಾಹಾ” ಎಂದು ಜಲದಲ್ಲಿ ಹೋಮಿಸುವದು. ನಂತರ ಪುತ್ರನ ಮನೆಯನ್ನು ತ್ಯಜಿಸುವದು. (ನಂತರ ಅಲ್ಲಿ ಉಳಿಯಬಾರದೆಂದರ್ಥ) ತೀವ್ರ ಆತುರತೆಯಿದ್ದಾಗ “ಪ್ರೇಷೋಚ್ಚಾರಣ ಮಾತ್ರವಾದರೂ ಸಾಕಾಗುವದು. ಮುಂದೆ ಬದುಕಿ ಉಳಿದರೆ ಮಹಾವಾಕ್ಕೋಪದೇಶ, ದಂಡಗ್ರಹಣಾದಿಗಳನ್ನು ಮಾಡತಕ್ಕದ್ದು. ಹೀಗೆ ಆತುರವಿಧಿಯಿಂದ ಸಂನ್ಯಾಸದಲ್ಲಿ ಮೃತನಾದವನಿಗೆ ಯತಿಯಂತೆಯೇ ಸಂಸ್ಕಾರವಾಗತಕ್ಕದ್ದು. ೫೫೪ ಧರ್ಮಸಿಂಧು ಮೃತನಾದ ಯತಿ ಸಂಸ್ಕಾರ ಪುತ್ರ ಅಥವಾ ಶಿಷ್ಯನು ಸ್ನಾನಮಾಡಿ ವಪನ ಹಾಗೂ ಕೃಚ್ಛತ್ರಯಗಳನ್ನು ಅಧಿಕಾರಾರ್ಥವಾಗಿ ಮಾಡತಕ್ಕದ್ದು. ಪುತ್ರ ಹೊರತಾದವರಿಗೆ ವಪನವು ಕೃತಾಕೃತವು. ದೇಶಕಾಲಗಳನ್ನು ಸ್ಮರಿಸಿ “ಬ್ರಹ್ಮಭೂತಸ್ಯ ಯತಃ ಶೌನಕೂಕ್ರವಿಧಿನಾ ಸಂಸ್ಕಾರಂ ಕರಿಷ್ಯ ಹೀಗೆ ಸಂಕಲ್ಪಿಸಿ ಹೊಸಕಲಶವನ್ನು ತೀರ್ಥದಿಂದ ತುಂಬಿ “ಗಂಗೇಚಯಮುನೇ-ನಾರಾಯಣ: ಪರಂಬ್ರಹ್ಮ ಯಚ್ಚಕಿಂಚಜ್ಜಗತ್ಸರ್ವಂ” ಎಂಬ ಮಂತ್ರಗಳಿಂದ ಅಭಿಮಂತ್ರಿಸಿ ರುದ್ರಸೂಕ್ತ, ವಿಷ್ಣು ಸೂಕ್ತ, ಆಪೋಹಿಷ್ಟಾದಿಗಳಿಂದ ಯತಿಗೆ ಸ್ನಾನಮಾಡಿಸಿ ಗಂಧಾದಿಗಳಿಂದ ದೇಹವನ್ನು ಪೂಜಿಸಿ ಮಾಲ್ಯಾದಿಗಳಿಂದಲಂಕರಿಸಿ ವಾದ್ಯಘೋಷಾದಿಗಳಿಂದ ಕೂಡಿ ಶುದ್ಧ ಪ್ರದೇಶಕ್ಕೆ ಒಯ್ಯತಕ್ಕದ್ದು. ಜಲದಲ್ಲಿ ಅಥವಾ ಸ್ಥಲದಲ್ಲಿ ಸುಸ್ಥಿತಿಯಲ್ಲಿಡತಕ್ಕದ್ದು. ಸ್ಥಲದಲ್ಲಿಡುವ ಪಕ್ಷದಲ್ಲಿ ಸ್ಥಳವನ್ನು ವ್ಯಾಹೃತಿಯಿಂದ ಪ್ರೋಕ್ಷಿಸಿ ದಂಡಪರಿಮಾಣದ ಹೊಂಡವನ್ನು ಮಾಡಿ ಮಧ್ಯದಲ್ಲಿ ಒಂದುವರ ಮೊಳದ ಅಳತೆಯ ಸೂಕ್ಷ್ಮವಾದ ತಗ್ಗನ್ನು ಮಾಡಿ ಸಪ್ತವ್ಯಾಹೃತಿಗಳಿಂದ ಪಂಚಗವ್ಯವನ್ನು ಮೂರಾವರ್ತಿ ಪ್ರೋಕ್ಷಿಸುವದು. ಜಲದಲ್ಲಿಡುವ ಪಕ್ಷದಲ್ಲಿ ನದಿಯಲ್ಲಿ ಪಂಚಗವ್ಯವನ್ನು ಚಲ್ಲಿ ದರ್ಭೆಗಳನ್ನು ಹಾಸಿ ಗಾಯತ್ರಿಯಿಂದ ದೇಹವನ್ನು ಪ್ರೋಕ್ಷಿಸಿ ಶಂಖೋದಕದಿಂದ, ಪುರುಷಸೂಕ್ತದಿಂದ ಮತ್ತು ನೂರೆಂಟು ಓಂಕಾರಗಳಿಂದ ಸ್ನಾನಮಾಡಿಸಿ ಅಷ್ಟಾಕ್ಷರ ಮಂತ್ರವನ್ನು ಹೇಳಿ, ಷೋಡಶೋಪಚಾರಗಳಿಂದ ಪೂಜಿಸಿ, ತುಳಸಿಮಾಲೆ ಮೊದಲಾದವುಗಲಿಂದ ಅಲಂಕರಿಸಿ, “ವಿಶ್ಲೋಹವ್ಯಂರಕ್ಷಸ್ವ” ಎಂದು ದೇಹವನ್ನು ಹೊಂಡ ಅಥವಾ ನದಿಯಲ್ಲಿ ಹಾಕುವದು. “ಇದಂವಿಷ್ಣು” ಈ ಮಂತ್ರದಿಂದ ದಂಡವನ್ನು ಮೂರು ತುಂಡುಮಾಡಿ ಬಲಹಸ್ತದಲ್ಲಿಡುವದು. “ಹಂಸಃಶುಚಿಷತ್” ಈ ಮಂತ್ರ ಮತ್ತು “ಪರೇಣನಾಕಂ ನಿಹಿತಂ ಗುಹಾಯಾಂ ಬಿಬ್ರಾಜದೇತತಯೋ ವಿಂಶತಿ! ವೇದಾಂತವಿಜ್ಞಾನಸುನಿಶ್ಚಿತಾರ್ಥಾ: ಸಂನ್ಯಾಸಯೋಗಾದೃತಯಃ ಶುದ್ಧಸತ್ವಾ!” ಎಂದು ಹೃದಯವನ್ನು ಮುಟ್ಟಿಕೊಂಡು ಪಠಿಸುವದು ಹುಬ್ಬುಗಳ ಮಧ್ಯದಲ್ಲಿ ಪುರುಷಸೂಕ್ತವನ್ನು ಪಠಿಸುವದು. ಶಿರಸ್ಸಿನಲ್ಲಿ “ಬ್ರಹ್ಮಜಜ್ಞಾನಂ” ಎಂದು ಪಠಿಸುವದು. ಭೂರ್ಭುವಃಸ್ವ: ಹೀಗೆ ಹೇಳಿ ತಲೆಯನ್ನು ಶಂಖದಿಂದ ಒಡೆಯುವದು. ಇಲ್ಲವೆ “ಭೂಮಿರ್ಭೂಮಿಮಗಾನ್ಮಾತಾ ಮಾತರಮಷ್ಯಗಾತ್ ಭೂಯಾತ್ಮಪುತ್ರ: ಪಶುಭಿರ್ಯೊನೋ ದೃಷ್ಟಿ ಸಭಿವ್ಯತಾಂ” ಎಂಬ ಮಂತ್ರದಿಂದ ಕೂಡಲಿ ಮೊದಲಾದವುಗಳಿಂದ ಒಡೆಯತಕ್ಕದ್ದು. ಶಿರಸ್ಸನ್ನು ಒಡೆಯಲು ಅಸಮರ್ಥನಾದರೆ ತಲೆಯಲ್ಲಿ ಬೆಲ್ಲದ ಪೆಂಟೆ ಮೊದಲಾದವುಗಳನ್ನಿಟ್ಟು ಅದನ್ನು ಒಡೆಯುವರು. ಹೊಂಡವನ್ನು ಪುರುಷಸೂಕ್ತವನ್ನು ಪಠಿಸುತ್ತ ಉಪ್ಪಿನಿಂದ ತುಂಬತಕ್ಕದ್ದು, ನರಿ, ನಾಯಿ ಮೊದಲಾದವುಗಳಿಂದ ರಕ್ಷಿಸುವ ಸಲುವಾಗಿ ಮಳಲು, ಮಣ್ಣು ಮೊದಲಾದವುಗಳಿಂದ ತುಂಬತಕ್ಕದ್ದು. ನಾದಿಗಳಲ್ಲಿ ಹಾಕುವದಾದರೆ ಶಿರಸ್ಸನ್ನು ಭೇದಿಸಿದ ನಂತರ ದರ್ಭೆಗಳಿಂದ ಮುಚ್ಚಿ ವ್ಯಾಹೃತಿಗಳಿಂದ ಅಭಿಮಂತ್ರಿಸಿ ಕಲ್ಲನ್ನು ಕಟ್ಟಿ “ಓಂ ಸ್ವಾಹಾ” ಎಂದು ಜಲದ ಗುಂಡಿಯಲ್ಲಿ ಮುಳುಗಿಸುವದು. “ಅಗ್ನಿನಾಗ್ನಿಪ, ತಂಗೇ ಅಗ್ನಿನಾ, ತಂಮರ್ಜಯಂತ ಸುಕ್ರತುಂ, ಯಜ್ಞನಯವಂ” ಹೀಗೆ ಪರಿಚ್ಛೇದ - ೩ ಉತ್ತರಾರ್ಧ ನಾಲ್ಕು ಮಂತ್ರಗಳಿಂದ ಹಾಗೂ “ಚಿತ್ತಿಃಸೈಕ್ ಇತ್ಯಾದಿಗಳಿಂದಲೂ ದಶಹೋತ್ರಾದಿ ಸಂಜ್ಞಕಯಜುರ್ಮಂತ್ರಗಳಿಂದಲೂ ಅಭಿಮಂತ್ರಣಮಾಡತಕ್ಕದ್ದು. “ಅತೋದೇವಾ” ಎಂಬ ಮಂತ್ರವನ್ನು ಜಪಿಸಿ, “ನಾವು ಪಾಪದಿಂದ ಮುಕ್ತರಾದೆವು, ಅಶ್ವಮೇಧಾದಿ ಫಲ ಭಾಗಿಗಳಾದವು” ಹೀಗೆ ಭಾವಿಸಿ “ಅವಭ್ರಥ” ಬುದ್ಧಿಯಿಂದ ಅನುಸರಿಸಿ ಹೋದವರೆಲ್ಲರೂ ಸ್ನಾನಮಾಡಿ ಗಂಧಾದಿಗಳನ್ನು ಧರಿಸಿ ಉತ್ಸಾಹಯುಕ್ತರಾಗಿ ಮನೆಯನ್ನು ಸೇರತಕ್ಕದ್ದು, ಪರಮಹಂಸನಿಗೆ ಸ್ಥಳದಲ್ಲಿ ಸಮಾಧಿಮಾಡುವದು ಮುಖ್ಯವು, ಜಲದಲ್ಲಿ ಮಧ್ಯಮವು ‘ಕುಟೀಚಕ’ನನ್ನು ದಹಿಸತಕ್ಕದ್ದು. ‘ಬಹೂದಕ’ನನ್ನು ಹುಗಿಯತಕ್ಕದ್ದು. ‘ಹಂಸ’ನನ್ನು ಜಲದಲ್ಲಿ ಹಾಕುವದು. ‘ಪರಮಹಂಸ’ನನ್ನು ಹುಗಿಯತಕ್ಕದ್ದು. ಹೀಗೆ ವಚನವಿದೆ. “ಪರಮಹಂಸಂ ಪ್ರಕೀರಯೇತ್” ಎಂದು ಪಾಠಭೇದವಿದೆ. ಹೀಗೆ ಬ್ರಹ್ಮಭೂತನಾದ ಯತಿಗೆ ಏಕೋದ್ದಿಷ್ಟ ಜಲದಾನ, ಪಿಂಡ, ಆಶೌಚ, ಪ್ರೇತಕಾರ್ಯ, ಇದಲ್ಲದೆ ವಾರ್ಷಿಕಾದಿಗಳು ಇವುಗಳನ್ನು ಮಾಡತಕ್ಕದ್ದಿಲ್ಲವೆಂದು ವಚನವಿದೆ. ನಂತರ ಕರ್ತನು ಸ್ನಾನಮಾಡಿ ಆಚಮನಮಾಡಿ “ಸಿದ್ಧಿಂಗತಸ್ಯಬ್ರಹ್ಮಭೂತಭಿಕ್ಷ ತೃಪ್ತರ್ಥಂ ತರ್ಪಣಂ ಕರಿಷ್ಯಹೀಗೆ ಸಂಕಲ್ಪಿಸಿ ಸವ್ಯವಾಗಿ ದೇವತೀರ್ಥದಿಂದ ಆತ್ಮಾನಂ, ಅಂತರಾತ್ಮಾನಂ, ಪರಮಾತ್ಮಾನಂ ಎಂದು ನಾಲ್ಕು ನಾಲ್ಕು ಬಾರಿ ತರ್ಪಣ ಮಾಡತಕ್ಕದ್ದು, ಶುಕ್ಲಪಕ್ಷದಲ್ಲಿ ಮೃತನಾದ ಯತಿಗೆ ಕೇಶವಾದಿ ಹನ್ನೆರಡು ನಾಮಗಳಿಂದ “ಕೇಶವಂತರ್ಪಯಾಮಿ” ಇತ್ಯಾದಿ, ಕೃಷ್ಣಪಕ್ಷದಲ್ಲಾದರೆ “ಸಂಕರ್ಷಣಂ ತರ್ಪಯಾಮಿ ಇತ್ಯಾದಿ ಹನ್ನೆರಡು ನಾಮಗಳಿಂದ ತರ್ಪಣವು. ಈ ತರ್ಪಣವನ್ನು ಹಾಲಿನಿಂದ ಮಾಡತಕ್ಕದ್ದೆಂದು ಕೆಲವರು ಹೇಳುವರು. ನಂತರ “ಸಿದ್ಧಿಂಗತಸ್ಯ ಭಿಕೋಃ ತೃಪ್ತರ್ಥಂ ನಾರಾಯಣಪೂಜನಂ ಬಲಿದಾನ ಮೃತದೀಪದಾನಂ ಚ ಕರಿಷ್ಟೇ” ಹೀಗೆ ಸಂಕಲ್ಪಿಸಿ ದೇವಮಂದಿರದ ಮೇಲೆ ಅಥವಾ ನದೀತೀರದಲ್ಲಿ ಮೃಣ್ಮಯಲಿಂಗವನ್ನು ಮಾಡಿ ಪುರುಷಸೂಕ್ತದಿಂದ ಮತ್ತು ಅಷ್ಟಾಕ್ಷರಗಳಿಂದಲೂ ಷೋಡಶೋಪಚಾರವನ್ನು ಮಾಡಿ ತುಪ್ಪವನ್ನು ಕೂಡಿಸಿದ ಪಾಯಸಬಲಿಯನ್ನು ಕೊಟ್ಟು ಮತ್ತು ದೀಪವನ್ನು ಹೊತ್ತಿಸಿ ಪಾಯಸಬಲಿಯನ್ನು ಜಲದಲ್ಲಿ ಹಾಕುವದು. ನಂತರ “ಓಂಬ್ರಹ್ಮಣೇನಮ:” ಎಂದು ಶಂಖದಿಂದ ಎಂಟು ಅರ್ಥ್ಯಗಳನ್ನು ಕೊಟ್ಟು ಮನೆಗೆ ಹೋಗತಕ್ಕದ್ದು. ಇದು ಮೊದಲದಿನದ ಕೃತ್ಯವು ಇದರಂತೆ ಹತ್ತುದಿನ ಪರ್ಯಂತ ಪ್ರತಿದಿನ ತರ್ಪಣ, ಲಿಂಗಪೂಜನ, ಪಾಯಸಬಲಿ, ದೀಪದಾನ ಇವುಗಳನ್ನು ಮಾಡತಕ್ಕದ್ದು. ಹನ್ನೊಂದನೇ ದಿನ ಪಾರ್ವಣಶ್ರಾದ ಮಧ್ಯಾಹ್ನದಲ್ಲಿ ನದ್ಯಾದಿಗಳಲ್ಲಿ ಶ್ರಾದ್ಧಾಂಗ ತಿಲತರ್ಪಣಮಾಡಿ ದೇಶಕಾಲಗಳನ್ನು ಸ್ಮರಿಸಿ ಪ್ರಾಚೀನಾವೀತಿಯಾಗಿ “ಅಮುಕಗೋತ್ರಸ್ಯ ಅನುಕಶರ್ಮ ಬ್ರಹ್ಮಭೂತಕ್ಕೆ ಅತು: ಕರಿಷ್ಠಮಾಣ ದರ್ಶಾದಿ ಸರ್ವಶ್ರಾದ್ಧಾಧಿಕಾರಾರ್ಥಂ ಅಡ್ಕ ಪಾರ್ವರಾಶ್ರಾದ್ಧಂ ಕರಿಷ್ಯ” ಹೀಗೆ ಪುತ್ರಾದಿಗಳು ಸಂಕಲ್ಪ ಮಾಡತಕ್ಕದ್ದು. ಶಿಷ್ಯನಾದರೆ “ಬ್ರಹ್ಮಭೂತಗುಲೋ ಪ್ರತ್ಯಬ್ದಾದಿ ಶ್ರಾದ್ಧಾಧಿಕಾರಾರ್ಥಂ ತತ್ಸ ಸಂಬಂಧಿ ನಾಮಗೋಳ್ಳೋದ್ದೇಶತಾ ಸಿಧ್ಯರ್ಥಂ ಚ ಪಾರ್ವಣ ಶ್ರಾದ್ಧಂ ಹೀಗೆ ಸಂಕಲ್ಪಿಸುವದು. ಉಳಿದದ್ದಲ್ಲ ಸಮಾನವು, ಪುರೂರವಾದ್ರ್ರವಸಂಜ್ಞಕ ವಿಶ್ವೇದೇವತೆಗಳು, ಪಿತೃಪಿತಾಮಹ ಪ್ರಪಿತಾಮಹರನ್ನು ನಾಮಗೋತ್ರ ಸಹಿತವಾಗಿ ಉಚ್ಚರಿಸುವದು. ಎಲ್ಲ ಕಡೆಗೆ ಪಿತೃಶಬ್ದಕ್ಕೆ RML ಧರ್ಮಸಿಂಧು “ಬ್ರಹ್ಮಭೂತ” ಎಂದು ಜೋಡಿಸಬೇಕು. ಉಳಿದದ್ದೆಲ್ಲ ಪ್ರತ್ಯಬ್ದಶ್ರಾದ್ಧಂತೆಯೇ, ಕೆಲವರು ಶಿಷ್ಯನು ಕರ್ತನಾದರೆ ಆತ್ಮ, ಅಂತರಾತ್ಮ, ಪರಮಾತ್ಮ ಇವರನ್ನುದ್ದೇಶಿಸಬೇಕು; ಮತ್ತು ಸಾಧು, ಗುರು, ಸಂಜ್ಞಕ ವಿಶ್ವೇದೇವತೆಗಳು, ಮತ್ತು “ಸವ್ಯ"ವಾಗಿಯೇ ಮಾಡಬೇಕು. ಹೀಗೆ ದೇವಧರ್ಮಕವಾದ ನಾಂದೀಶ್ರಾದ್ಧದಂತೆ ಏಕಾದಶದಿನದಲ್ಲಿ ಪಾರ್ವಣಶ್ರಾದ್ಧ ಮಾಡಬೇಕೆಂದು ಹೇಳುವರು. ಈ ಎಲ್ಲ ವಿಷಯಗಳ ವಿಸ್ತರವನ್ನು “ತೋರೋ” ಕೃತ ‘ಸಂನ್ಯಾಸ ಪದ್ಧತಿ’ಯಲ್ಲಿ ನೋಡತಕ್ಕದ್ದು. ಹನ್ನೆರಡನೇ ದಿನ ನಾರಾಯಣಬಲಿ ದೇಶಕಾಲಾದಿಗಳನ್ನುಚ್ಚರಿಸಿ “ಸಿದ್ಧಿಂಗತಸ್ಯ ಭಿಕೋ ಸಂಭಾವಿತ ಸರ್ವಪಾಪ ಕ್ಷಯಪೂರ್ವಕಂ ವಿಷ್ಣುಲೋಕಾವಾಪ್ತಿ ದ್ವಾರಾ ಶ್ರೀ ನಾರಾಯಣ ಪ್ರೀತ್ಯರ್ಥಂ ನಾರಾಯಣ ಬಲಿಂ ಕರಿಷ್ಯ ಹೀಗೆ ಸಂಕಲ್ಪಿಸಿ ಹದಿಮೂರು ಯತಿ ಅಥವಾ ಬ್ರಾಹ್ಮಣರನ್ನು ನಿಮಂತ್ರಿಸಿ ಶುಕ್ಲ ಪಕ್ಷದ ಮರಣದಲ್ಲಿ ‘ಕೇಶವರೂಪಗುರ್ವಡ್್ರ ತೈಯಾಕ್ಷಣಃ ಕರ್ತವ್ಯ: ಹೀಗೆ ದಾಮೋದರಾಂತವಾಗಿ ಕೇಶವಾದಿ ಹನ್ನೆರಡುನಾಮಗಳಿಂದ ಕ್ಷಣವನ್ನು ಕೊಡತಕ್ಕದ್ದು. ಕೃಷ್ಣ ಪಕ್ಷದಲ್ಲಾದರೆ ಸಂಕರ್ಷಣಾದಿ ಹನ್ನೆರಡು ನಾಮಗಳಿಂದ ‘ಕ್ಷಣಃಕರ್ತವ್ಯ: ಹೀಗೆ ವರಿಸಿ ಹದಿಮೂರನೆಯವನಿಗೆ ‘ವಿಷ್ಣರ್ಥಂ ತ್ವಯಾಕ್ಷಣ: ಕರ್ತವ್ಯ: ಹೀಗೆ ನಿಮಂತ್ರಣ ಮಾಡುವದು. ನಂತರ ಪಾದಗಳನ್ನು ತೊಳೆದು ಪೂರ್ವಾಭಿಮುಖವಾಗಿ ಅವರನ್ನು ಕೂಡ್ರಿಸುವದು ಬ್ರಾಹ್ಮಣರ ಸಮ್ಮುಖದಲ್ಲಿ ಸ್ಪಂಡಿಲದಲ್ಲಿ ಅಗ್ನಿಸ್ಥಾಪನೆ ಮಾಡಿ ಅನ್ನಾಧಾನದಲ್ಲಿ ‘ಚಕ್ಷುಷೀ ಆಜೇನ’ ವರೆಗೆ ಮುಗಿಸಿ ‘ಅಗ್ನಿಂ, ವಾಯುಂ, ಸೂರ್ಯಂ, ಪ್ರಜಾಪತಿಂ ಚ ವ್ಯಸ್ತ, ಸಮಸ್ತವ್ಯಾಹೃತಿಭಿಃ ಏಕೈಕ ಪಾಯಸಾಹುತ್ತಾ ವಿಷ್ಣುಂ ಅತೋದೇವಾ ಇತಿ ಷಡ್ಲಿ: ಪ್ರಕೃಚಂ ಏಕೈಕ ಪಾಯಸಾಹುತ್ಯಾ ಶುಕ್ಲ ಕೇಶವಾದಿ ದ್ವಾದಶದೇವತಾಃ ಕೃಷ್ಣ ಸಂಕರ್ಷಣಾದಿ ದ್ವಾದಶದೇವತಾಃ ಏಕೈಕಪಾಯಸಾಹುತ್ಯಾ ಶೇಷಣ’ ಇತ್ಯಾದಿ ನೂರಾಐವತ್ತೆರಡು ತಂಡುಲ ಮುಷ್ಟಿಗಳನ್ನು ನಿರ್ವಾಪಮಾಡಿ ಬಲಿಗೆ ಸಾಕಾಗುವಷ್ಟು ತಂಡುಲವನ್ನಾಗಿಸಿ ಮೂವತ್ತೆಂಟು ಆಹುತಿಗಳಿಗೆ ಸಾಕಾಗುವಷ್ಟು ಮತ್ತು ಪುರುಷನ ಆಹಾರಪರಿಮಿತವಾದಷ್ಟನ್ನು ವಿಷ್ಣುವಿನ ನೈವೇದ್ಯಕ್ಕಾಗಿ ಬೇರಡಿಸಿ ಹಾಲಿನಿಂದ ಬೇಯಿಸಿ ಆಜ್ಯಭಾಗಾಂತದಲ್ಲಿ ಅಗ್ನಿಯ ಪೂರ್ವಭಾಗದಲ್ಲಿ ಶಾಲಿಗ್ರಾಮವನ್ನಿಟ್ಟು ವಿಷ್ಣುವನ್ನು ಪುರುಷಸೂಕ್ತ ಮತ್ತು ಅಷ್ಟಾಕ್ಷರಗಳಿಂದ ಷೋಡಶೋಪಚಾರಪೂಜೆ ಮಾಡಿ ಸೃಚೆಯಿಂದ ಅಥವಾ ಹಸ್ತದಿಂದ ಅನಾಧಾನಾನುಸಾರವಾಗಿ ಹೋಮ ಮತ್ತು ತ್ಯಾಗಗಳನ್ನು ಮಾಡತಕ್ಕದ್ದು. ಹೀಗೆ ಶುಕ್ಲ ಮತ್ತು ಕೃಷ್ಣಭೇದದಿಂದ ಕೇಶವಾದಿ ಹನ್ನೆರಡು ಅಥವಾ ಸಂಕರ್ಷಣಾದಿ ಹನ್ನೆರಡು ಅಂತೂ (ಅಸ್ವಾಧಾನದಂತೆ-ಅಗ್ನಿ, ವಾಯು, ಸೂರ್ಯ, ಪ್ರಜಾಪತಿ ಈ ನಾಲ್ಕು, ವಿಷ್ಣುವಿಗೆ ಅತೋದೇವಾ ಇತ್ಯಾದಿ ಆರು. ನಾರಾಯಣನಿಗೆ ಪ್ರತಿಮಂತ್ರದಂತೆ ಹದಿನಾರು, ಕೇಶವಾದಿ ಅಥವಾ ಸಂಕರ್ಷಣಾದಿ ಹನ್ನೆರಡು) ಮೂವತ್ತೆಂಟು ಆಹುತಿಗಳನ್ನು ಹೋಮಿಸಿ ಸ್ವಿಷ್ಟಕೃಗಾದಿ ಹೋಮಶೇಷವನ್ನು ಮುಗಿಸಿ, ಪುನಃ ಸಾಲಿಗ್ರಾಮವನ್ನು ಪೂಜಿಸಿ ಎಷ್ಟು ಗಾಯತ್ರಿಯಿಂದ ವಿಷ್ಣುವಿಗೆ ಅರ್ಘವನ್ನು ಕೊಟ್ಟು ಹುತಶೇಷ ಪಾಯಸದಿಂದ ವಿಷ್ಣುವಿಗೆ ಬಲಿಯನ್ನು ಕೊಟ್ಟು ನಿಮಂತ್ರಿತರಾದ ಹದಿಮೂರು ಬ್ರಾಹ್ಮಣರಿಗೆ ಕೇಶವಾದಿ ಮಂತ್ರದಿಂದ” ಕೇಶವರೂಪಿಗುರವೇ ಇದಮಾಸನಂ’ ಇತ್ಯಾದಿ ಆಸನ, ಗಂಧ, ಪುಷ್ಪ, ಧೂಪ, ದೀಪ, ಆಚ್ಛಾದನೆಗಳನ್ನು ಕೊಟ್ಟು, ಹದಿಮೂರನೇ ಬ್ರಾಹ್ಮಣನಲ್ಲಿ ಪರಿಚ್ಛೇದ ೩ ಉತ್ತರಾರ್ಧ ೫೫೭ ಪುರುಷಸೂಕ್ತದಿಂದ ಪ್ರತಿಮಂತ್ರದ ಅಂತ್ಯದಲ್ಲಿ “ವಿಷ್ಣು ವೇನಮ:” ಇತ್ಯಾದಿಗಳಿಂದ ವಿಷ್ಣುವನ್ನು ದೀಪಾಂತವಾಗಿ ಉಪಚಾರಗಳಿಂದ ಪೂಜಿಸುವದು. ಚತುರಶ್ರವಾದ ಮಂಡಲದಲ್ಲಿ ಹದಿಮೂರು ಭೋಜನಪಾತ್ರಗಳನ್ನಿಟ್ಟು ಅಭಿಘಾರಮಾಡಿ ಅನ್ನವನ್ನು ಪರಿಷೇಚನ ಮಾಡಿ “ಪೃಥಿವೀತೇಪಾತ್ರಂ’ ಇತ್ಯಾದಿಗಳಿಂದ ಕೇಶವಾದಿ ಹನ್ನೆರಡರ ಉದ್ದೇಶದಿಂದ ಮತ್ತು ವಿಷ್ಣುವಿನ ಉದ್ದೇಶದಿಂದ ಅನ್ನತ್ಯಾಗವನ್ನು ಮಾಡಿ ‘ಅತೋದೇವಾ, ಓಂತದ್ರಹ್ಮ, ಓಂತದ್ವಾಯುಃ, ಬ್ರಹ್ಮಾರ್ಪಣಂ” ಇತ್ಯಾದಿ ಆಪೋಶನಾದಿ ಪ್ರಾಣಾಹುತಿಯಾದ ಮೇಲೆ ನಾರಾಯಣಾದಿ ಉಪನಿಷತ್ತುಗಳ ಭಾಗಗಳನ್ನು ಪಠಿಸುವದು. ತೃಪ್ತಿ ಪ್ರಶ್ನೆಯ ನಂತರ ಆಚಮನವಾದ ಮೇಲೆ ಪೂರ್ವಾಗ್ರಗಳಾದ ದರ್ಭೆಗಳನ್ನು ಹರವಿ, ಅಷ್ಟಾಕ್ಷರದಿಂದ ಅಕ್ಷತೋದಕವನ್ನು ಕೊಟ್ಟು ‘ಕೇಶವರೂಪಿಣೇ ಗುರವೇ ಅಯಂ ಪಿಂಡಃ ಸ್ವಾಹಾ ನಮಃ’ ಹೀಗೆ ಹನ್ನೆರಡು ಪಿಂಡಗಳನ್ನು ಕೊಡತಕ್ಕದ್ದು. ಕೃಷ್ಣಪಕ್ಷದಲ್ಲಾದರೆ ಸಂಕರ್ಷಣಾದಿ ಹನ್ನೆರಡು ಪಿಂಡಗಳು. ವಿಷ್ಣುವನ್ನು ಪೂಜಿಸಿ ಪುರುಷಸೂಕ್ತದಿಂದ ಸ್ತುತಿಸಿ ವಿಸರ್ಜಿಸುವದು. ಬ್ರಾಹ್ಮಣರಿಗೆ ತಾಂಬೂಲ ದಕ್ಷಿಣಾದಿಗಳನ್ನು ಕೊಟ್ಟು ಹದಿಮೂರನೇ ಬ್ರಾಹ್ಮಣನಿಗೆ “ನಾಭ್ಯಾ ಆಸೀತ್” ಇತ್ಯಾದಿ ಮೂರು ಮಂತ್ರಗಳಿಂದ ಫಲತಾಂಬೂಲ ದಕ್ಷಿಣಾದಿಗಳನ್ನು ಕೊಟ್ಟು ನಮಸ್ಕರಿಸಿ, ಸ್ಥಾಪಿಸಿದ ಶಾಲಿಗ್ರಾಮ ಮೂರ್ತಿಯನ್ನು ಆಚಾರ್ಯನಿಗೆ ಕೊಡತಕ್ಕದ್ದು. ಹೀಗೆ ನಾರಾಯಣ ಬಲಿಯು, ಹನ್ನೆರಡನೇ ಅಥವಾ ಹದಿಮೂರನೇ ದಿನ ಆರಾಧನ ದೇಶಕಾಲಗಳನ್ನು ಸ್ಮರಿಸಿ “ಶ್ರೀ ನಾರಾಯಣ ಪ್ರೀತ್ಯರ್ಥಂ ಆರಾಧನಂ ಕರಿಷ್ಟೇ” ಹೀಗೆ ಸಂಕಲ್ಪಿಸಿ “ಗುರ್ವಥ್ರ ಕ್ಷಣ ಕರ್ತವ್ಯ” ಇದರಂತೆ “ಪರಮಗುರ್ವಥ್ರ, ಪರಮೇಷ್ಠಿಗುರ್ವಥ್ರ, ಪರಾತ್ಪರಗುರ್ವಥ್ರ” ಹೀಗೆ ನಾಲ್ಕು ಬ್ರಾಹ್ಮಣರನ್ನು ನಿಮಂತ್ರಿಸಿ ಶುಕ್ಲಪಕ್ಷದಲ್ಲಿ ಕೇಶವಾದಿ ನಾಮಗಳಿಂದ, ಕೃಷ್ಣಪಕ್ಷದಲ್ಲಿ ಸಂಕರ್ಷಣಾದಿ ನಾಮಗಳಿಂದ ಹನ್ನೆರಡು ಬ್ರಾಹ್ಮಣರನ್ನು ನಿಮಂತ್ರಿಸತಕ್ಕದ್ದು. ಹೀಗೆ ಹದಿನಾರು ಬ್ರಾಹ್ಮಣರು ಅಥವಾ ಯತಿಗಳು, ಅಸಮರ್ಥನಾದರೆ ಯಥಾಶಕ್ತಿ ಬ್ರಾಹ್ಮಣರನ್ನು ನಿಮಂತ್ರಿಸಿ ಹೇಗೋ ಹಾಗೆ ಹದಿನಾರು ಕ್ಷಣಗಳನ್ನು ಕೊಡುವದು. ಹದಿನಾರು ಬ್ರಾಹ್ಮಣರ ಪಾದಪ್ರಕಾಳನ ಮಾಡಿ, ಆಚಮನ ಮಾಡಿ, ಪಾದಗಳನ್ನು ತೊಳೆದ ಜಲವನ್ನು ಬೇರೆ ಪಾತ್ರದಲ್ಲಿಟ್ಟು ಗಂಧ, ಪುಷ್ಪಾದಿಗಳಿಂದ ಪೂಜಿಸುವದು. ಬ್ರಾಹ್ಮಣರನ್ನು ಪೂರ್ವ ಅಥವಾ ಉತ್ತರ ಮುಖವಾಗಿ ಕೂಡ್ರಿಸಿ ಷೋಡಶೋಪಚಾರ ಅಥವಾ ಪಂಚೋಪಚಾರಗಳಿಂದ ಪೂಜಿಸಿ ಸೋವಸ್ಕರವಾದ ಅನ್ನವನ್ನು ಬಡಿಸಿ ಗಾಯತ್ರಿಯಿಂದ ಪ್ರೋಕ್ಷಿಸಿ “ಗುರವೇ ಇದಮನ್ನಂ ಪರಿವಿಷ್ಟಂ ಪರಿವೇಕ್ಷ್ಯಮಾಣಂಚ ಆ ತೃಪ್ತ: ಸ್ವಾಹಾ ಹವ್ಯಂ ನ ಮಮ ಹೀಗೆ ಪರಮಗುರ್ವಾದಿಗಳಿಗೂ ಅನ್ನತ್ಯಾಗವನ್ನು ಮಾಡಿ ಬ್ರಹ್ಮಾರ್ಪಣಾದಿಗಳನ್ನು ಮಾಡತಕ್ಕದ್ದು. ಅವರ ಭೋಜನ, ಆಚಮನದ ನಂತರ ತಾಂಬೂಲ, ದಕ್ಷಿಣಾ, ವಸ್ತ್ರಾದಿಗಳಿಂದ ಅರ್ಚಿಸುವದು. ಇಲ್ಲಿ ಕೆಲವರು ಪೂರ್ವಾಸ್ಥಾಪಿ ಪಿತವಾದ ಪಾದೋದಕ ತೀರ್ಥವನ್ನು ಪೂಜಿಸುವರು. ಅದು ಹೇಗೆಂದರೆ-ತೀರ್ಥಪಾತ್ರೆಯನ್ನು ಅಕ್ಕಿ ಮೊದಲಾದವುಗಳಿಂದ ಮಾಡಿದ ಮಂಡಲದಲ್ಲಿಟ್ಟು ಪುರುಷಸೂಕ್ತದಿಂದ “ತೀರ್ಥರಾಜಾಯನಮ:” ಎಂದು ಷೋಡಶೋಪಚಾರಗಳಿಂದ ಪೂಜಿಸಿ ಆ 9940 ಧರ್ಮಸಿಂಧು ಪಾತ್ರೆಯನ್ನು ಶಿರಸ್ಸಿನಲ್ಲಿಟ್ಟು ಬಂಧುಗಳಿಂದ ಕೂಡಿ ಬ್ರಾಹ್ಮಣರ ಪ್ರದಕ್ಷಿಣ ಮಾಡಿ “ಗುರುಬ್ರ್ರಹ್ಮಾ ಗುರುರ್ವಿಷ್ಟು” ಎಂದು ನಮಸ್ಕರಿಸಿ ಪ್ರಥಮ ಬ್ರಾಹ್ಮಣನ ಹಸ್ತದಿಂದ ಆ ತೀರ್ಥವನ್ನು ಪ್ರಾಶನ ಮಾಡತಕ್ಕದ್ದು. ಅದಕ್ಕೆ ಮಂತ್ರವು ಅವಿದ್ಯಾಮೂಲಶಮನಂ ಸರ್ವಪಾಪಪ್ರಣಾಶನಂ ಪಿಬಾಮಿ ಗುರುಪರ್ಥಂ ಪುತ್ರ ಪೌತ್ರ ಪ್ರವರ್ಧನಂ ನಂತರ ಕರ್ಮವನ್ನು ಈಶ್ವರಾರ್ಪಣ ಮಾಡಿ ಮಿತ್ರರಿಂದೊಡಗೂಡಿ ಭೋಜನಮಾಡುವದು. ಸಂವತ್ಸರ ಪರ್ಯಂತ ಪ್ರತಿವಾಸದಲ್ಲಿ ಮೃತ ತಿಥಿ ಯಲ್ಲಿ ಹೀಗೆಯೇ ಆರಾಧನ ಮಾಡಬೇಕಲ್ಲದೆ ಮಾಸಿಕಶ್ರಾದ್ಧ ಮಾಡತಕ್ಕದ್ದಲ್ಲ. ಪ್ರತಿಸಾಂವತ್ಸರಿಕವನ್ನಾದರೆ ಪಾರ್ವಣ ವಿಧಿಯಿಂದ ಮಾಡಿ ಆರಾಧನವನ್ನು ಮಾಡತಕ್ಕದ್ದು. ಆಮೇಲೆ ದರ್ಶ-ಮಹಾಲಯಾದಿ ಶ್ರಾದ್ಧಗಳನ್ನಾದರೂ ಸರ್ವಸಾಮಾನ್ಯವಾಗಿ ಮಾಡುವದು. ಅದರಲ್ಲೇನೂ ವಿಶೇಷವಿಲ್ಲ. ಹೀಗೆ ಆರಾಧನ ವಿಧಿಯು ನಾರಾಯಣಬಲಿ, ಪಾರ್ವಣ ಶ್ರಾದ್ಧಾದಿ ದಿನ ವಿಚಾರ ನಾರಾಯಣಬಲಿ, ಪಾರ್ವಣಶ್ರಾದ್ಧಗಳನ್ನು ಒಂದೇದಿನ ಮಾಡುವದಿದ್ದಲ್ಲಿ ಏಕಾದಶ ಅಥವಾ ದ್ವಾದಶದಿನದಲ್ಲಿ ಮೊದಲು ನಾರಾಯಣಬಲಿಯನ್ನು ಮಾಡಿ ನಂತರ ಪಾರ್ವಣಶ್ರಾದ್ಧವನ್ನು ಮಾಡತಕ್ಕದ್ದು. ಎರಡು ದಿನಗಳಿಂದ ಮಾಡುವದಿದ್ದಲ್ಲಿ ಏಕಾದಶದಲ್ಲಿ ಪಾರ್ವಣ, ದ್ವಾದಶ ದಿನದಲ್ಲಿ ನಾರಾಯಣಬಲಿ ಹೀಗೆ ಮಾಡತಕ್ಕದ್ದು. ಹನ್ನೆರಡನೇ ಅಥವಾ ಹದಿಮೂರನೇದಿನ ಆರಾಧನವಾಗತಕ್ಕದ್ದು. ಊನಮಾಸಿಕಾದಿ ಕಾಲಗಳಲ್ಲಿಯಾದರೂ “ಆರಾಧನ"ವಾಗತಕ್ಕದ್ದೆಂದು ಕೆಲವರು ಹೇಳುವರು. ಪಾರ್ವಣಶ್ರಾದ್ಧವನ್ನು ಮಾತ್ರ ಏಕಾದಶಾಹ ಮತ್ತು ಪ್ರತಿವಾರ್ಷಿಕಗಳಲ್ಲೇ ಮಾಡಬೇಕು. ಅದು ಪುತ್ರಾದಿಗಳಿಗಷ್ಟೇ ಅತ್ಯಾವಶ್ಯಕವು. ಶಿಷ್ಠಾದಿಗಳಿಗಗತ್ಯವಿಲ್ಲ. ಪುತ್ರರಿಲ್ಲದ ಯತಿಗೆ ಶಿಷ್ಯನು ಪ್ರತ್ಯಬ್ದ ಪಾರ್ವಣವನ್ನು ಮಾಡತಕ್ಕದ್ದು. ನಾಮಗೋತ್ರಗಳ ಉಚ್ಚಾರದ ಅಧಿಕಾರಕ್ಕಾಗಿ, ಏಕಾದಶಾಹದಲ್ಲಿ ಶಿಷ್ಯನಾದರೂ ಪಾರ್ವಣ ಶ್ರಾದ್ಧವನ್ನು ಮಾಡತಕ್ಕದ್ದು. ನಾರಾಯಣಬಲಿಯನ್ನು ದ್ವಾದಶಾದಿ ದಿನಗಳಲ್ಲಿ ಮಾಡಲಾಗದಿದ್ದಲ್ಲಿ ಶುಕ್ಲಪಕ್ಷದ ದ್ವಾದಶೀ, ಶ್ರವಣ ನಕ್ಷತ್ರ, ಪಂಚಮೀ, ಹುಣ್ಣಿವೆ ಅಥವಾ ಅಮಾವಾಸೆ ಇವು ಗೌಣಕಾಲಗಳು. ಇವುಗಳಲ್ಲಿ ಮಾಡಬಹುದು. ಇವುಗಳಲ್ಲಾದರೂ ಹಿಂದು-ಹಿಂದಿನ ಕಾಲಗಳು ಶ್ರೇಷ್ಠಗಳು. ಅಂದರೆ ಅಮಾವಾಸೆಗಿಂತ ಹುಣ್ಣಿವೆ, ಹುಣ್ಣಿಮೆಗಿಂತ ಪಂಚಮೀ ಇತ್ಯಾದಿಗಳು ಪ್ರಶಸ್ತಿಗಳು. ಯತಿಸಂಸ್ಕಾರಾಧಿಕಾರ ಮೊದಲಾದ ವಿಚಾರ ಪತ್ನಿ, ಕನ್ಯಾ ಅಥವಾ ಸೊಸೆ ಇವರು ಯತಿಸಂಸ್ಕಾರ ಕರ್ತೃಗಳಾದರೆ ಕೃಚ್ಛತ್ರಯಾಚರಣೆ ಮಾಡಬೇಕು. ವಿಧವೆಯರಾದರೆ ವಪನಪೂರ್ವಕ ಕೃತ್ಯವನ್ನು ಮಾಡತಕ್ಕದ್ದು. ದೇಶಾಂತರದಲ್ಲಿರುವ ಪುತ್ರನು ಯತಿಯಾದ ತಂದೆಯು ಮುಕ್ತನಾದ ವಾರ್ತೆಯನ್ನು ಕೇಳಿದಕೂಡಲೇ ವಪನಪೂರ್ವಕ ಸ್ನಾನಮಾಡಿ ಕ್ಷೀರತರ್ಪಣ, ಪೂಜಾ ಮೊದಲಾದ ದಶಾಹಕೃತ್ಯ ಮಾಡಿ ಏಕಾದಶಾಹಾದಿಗಳಲ್ಲಿ ಪಾರ್ವಣ ನಾರಾಯಣ ಬಲ್ಯಾದಿ ಎಲ್ಲ ಕಾರ್ಯವನ್ನೂ ಯಥಾವತ್ತಾಗಿ ಮಾಡತಕ್ಕದ್ದು. ಹಿರಿಯನು ಸನ್ನಿಹಿತವಾಗಿದ್ದು ಸಂಸ್ಕಾರ ಮಾಡಿದಲ್ಲಿ ಕಿರಿಯನು ಮಾಡತಕ್ಕದಿಲ್ಲ. ಶುಕ್ಲ -ಕೃಷ್ಣಾದಿ ಭೇದದಿಂದ ಕೇಶವಾದಿ-ಸಂಕರ್ಷಣಾದಿಗಳನ್ನುಚ್ಚರಿಸಬೇಕೆಂದು ಹಿಂದೆಯೇ ಹೇಳಿದೆ. ಮೃತತಿಥಿಯನ್ನೇ ಮುಖ್ಯವಾಗಿ ಹಿಡಿಯಬೇಕಲ್ಲದೆ ವಾರ್ತಾಶ್ರವಣದಿನವು ಮೃತತಿಥಿಯೆಂದು ಹಿಡಿಯತಕ್ಕದ್ದಲ್ಲ.30 ಪರಿಚ್ಛೇದ ೩ ಉತ್ತರಾರ್ಧ ೫೫೯ ಮೃತತಿಥಿಯು ಗೊತ್ತಾಗದಿದ್ದರೆ ವಾರ್ತಾತಿಥಿಯನ್ನು ಹಿಡಿಯಬಹುದು. ಯತಿಸಂಸ್ಕಾರ ಮಾಡಿದರೆ ಸಹಸ್ರ ಅಶ್ವಮೇಧದ ಫಲವಿದೆ. ಯತಿಗೆ ಸಂಸ್ಕಾರವಿಲ್ಲದೆ ಹಾದಿಪಾಲಾದರೆ ಆ ದೇಶಕ್ಕೆ ನೆಮ್ಮದಿಯಿಲ್ಲ. ಧರ್ಮವು ಲೋಪಹೊಂದುವದು. ದುರ್ಭಿಕ್ಷ, ಮರಣಾದಿಗಳುಂಟಾಗುವವು. ಗುರುವು ಮೃತನಾದಾಗ ಶಿಷ್ಯನು ಉಪವಾಸ ಮಾಡತಕ್ಕದ್ದು, ಯತಿಗೆ ತನ್ನ ಪುತ್ರಾದಿಗಳು ಮರಣಹೊಂದಿದರೂ ಸ್ನಾನಾದಿಗಳನ್ನು ಮಾಡತಕ್ಕದ್ದಿಲ್ಲ. ಯತಿಯು ತನ್ನ ತಂದೆ-ತಾಯಿಗಳ ಮರಣವಾರ್ತೆಯನ್ನು ಕೇಳಿದಾಗ ಸ್ನಾನಮಾತ್ರದಿಂದ ಶುದ್ಧನಾಗುವನು. ಪ್ರಸಂಗವಶಾತ್ ಯತಿಧರ್ಮಗಳು ಬೆಳಿಗ್ಗೆ ಎದ್ದು “ಬ್ರಹಸ್ಪತಿ“ಸೂಕ್ತವನ್ನು ಪಠಿಸಿ ದಂಡಾದಿಗಳನ್ನೂ ಮೃತ್ತಿಕೆಯನ್ನೂ ತೆಗೆದುಕೊಂಡು ಮಲಮೂತ್ರಗ್ರಗಳಲ್ಲಿ ಗೃಹಸ್ಥನ ನಾಲ್ಕುಪಟ್ಟು ಶೌಚವನ್ನು ಮಾಡಿ, ಆಚಮನಮಾಡಿ, ಪರ್ವತಿಥಿ, ದ್ವಾದಶೀ ಇವುಗಳನ್ನು ಬಿಟ್ಟು ಓಂಕಾರದಿಂದ ದಂತಧಾವನವನ್ನು ಮಾಡಿ, ಮಣ್ಣಿನಿಂದ ಟೊಂಕದ ಹೊರಭಾಗದಲ್ಲಿ ತೊಳೆದು ಜಲತರ್ಪಣ ಹೊರತಾಗಿ ಸ್ನಾನ ಮಾಡಿ ಪುನಃ ಕಣಕಾಲುಗಳನ್ನು ತೊಳೆದು, ವಸ್ತ್ರಾದಿಗಳನ್ನು ಧರಿಸಿ ಓಂಕಾರದಿಂದ ಪ್ರಾಣಾಯಾಮ ಮಾರ್ಜನಾದಿಗಳನ್ನು ಮಾಡಿ, ಕೇಶವಾದಿ ನಾಮಗಳನ್ನು “ನಮಃ” ಅಂತವಾಗಿ ಹೇಳಿ, ತರ್ಪಣಮಾಡಿ, ‘ಭೂಸ್ತರ್ಪಯಾಮಿ ಭುವಃತರ್ಪಯಾಮಿ ಸುವಃ ತರ್ಪಯಾಮಿ ಭೂರ್ಭುವಃಸುವಃ ತರ್ಪಯಾಮಿ ಹೀಗೆ ವ್ಯಸ್ತ-ಸಮಸ್ತ ವ್ಯಾಹೃತಿಗಳಿಂದ ‘ಮಹಜನಃ’ ಎಂಬಲ್ಲಿ ವರಗೆ ತರ್ಪಣಕೊಡತಕ್ಕದ್ದು. ಸೂರ್ಯೋಪಸ್ಥಾನಾದಿಗಳನ್ನೂ ತ್ರಿಕಾಲವಿಷ್ಣುಪೂಜಾದಿಗಳನ್ನೂ ನಿರ್ಣಯ ಸಿಂಧು ಮೊದಲಾದ ಗ್ರಂಥಗಳಿಂದ ತಿಳಿಯತಕ್ಕದ್ದು. ವಿಶೇಷಗಳನ್ನು ಮಾಧವಾದಿಗ್ರಂಥಗಳಲ್ಲಿ ನೋಡತಕ್ಕದ್ದು, ಮನೆಯಲ್ಲಿ ಹೊಗೆಯಾಡದ, ಒನಕೆಯ ಶಬ್ದವಿಲ್ಲದ, ಆರಿದ ಬೆಂಕಿಕೊಂಡವುಳ್ಳ, ಊಟಮಾಡಿಮುಗಿದ, ಹೆಚ್ಚು ಅಪರಾಹ್ನವಾದ ಕಾಲದಲ್ಲಿ ಯತಿಯು ನಿತ್ಯಭಿಕ್ಷೆಯನ್ನಾಚರಿಸತಕ್ಕದ್ದು. ಗ್ರಂಥಾಂತರಗಳಲ್ಲಿ ಭಿಕ್ಷೆಯ ಅನೇಕ ಪ್ರಕಾರಗಳನ್ನು ಹೇಳಿದೆ. “ವಿವಿದಿಷ್ಟು” ಸಂನ್ಯಾಸಿಗೆ “ಮಾಧುಕರಿ” ಭಿಕ್ಷೆಯು ಮುಖ್ಯವಾದದ್ದು. ದಂಡವಸ್ತ್ರಾದಿ ರಹಿತರಿಗೆ ಹಸ್ತವೇ ಪಾತ್ರವು, ಉಳಿದ ಪಕ್ಷಗಳಲ್ಲಿ ಅಶಕ್ತರಾದವರಿಗೆ ಹೇಳಿದ್ದು, ಮಾಧುಕರಿ ಪಕ್ಷದಲ್ಲಿ ದಂಡಾದಿಗಳನ್ನು ಹಿಡಿದುಕೊಂಡು ಐದು ಅಥವಾ ಏಳು ಮನೆಗಳಿಂದ ಭಿಕ್ಷೆಯನ್ನು ಬೇಡಿ ಅನ್ನವನ್ನು ಪ್ರೋಕ್ಷಿಸಿ “ಭೂಃಸ್ವಧಾನಮ:” ಇತ್ಯಾದಿ ವ್ಯಸ್ತ ಸಮಸ್ತ ವ್ಯಾಹೃತಿಗಳಿಂದ ಸೂರ್ಯಾದಿ ದೇವತೆಗಳಿಗೆ ಮತ್ತು ಪ್ರಾಣಿಗಳಿಗಾಗಿ ಭೂಮಿಯಲ್ಲಿ ಸ್ವಲ್ಪ ಹಾಕಿ ವಿಷ್ಣುವಿಗೆ ನಿವೇದಿಸಿ ಉಳಿದ ಶೇಷಾನ್ನವನ್ನು ಭೋಜನ ಮಾಡತಕ್ಕದ್ದು. ಚಂಡೀ-ವಿನಾಯಕ ಮೊದಲಾದ ದೇವರ ನೈವೇದ್ಯವನ್ನು ಭೋಜನಮಾಡಬಾರದು. ಭೋಜನದ ನಂತರ ಆಚಮನ ಮಾಡಿ ಹದಿನಾರು ಪ್ರಾಣಾಯಾಮಗಳನ್ನು ಮಾಡತಕ್ಕದ್ದು. ಹೀಗೆ ಸಂಕ್ಷೇಪವು. (ಆ ವಚನಸಂಗ್ರಹಗಳನ್ನು ಇಲ್ಲಿ ಹೇಳಲಾಗುವದು)“ಯತಿಹಸ್ತದಲ್ಲಿ ಜಲವನ್ನು ಕೊಟ್ಟು ಭಿಕ್ಷೆಯನ್ನು ಕೊಡಬೇಕು. ಪುನಃ ಜಲವನ್ನು ಕೊಡಬೇಕು. ಹೀಗೆ ಮಾಡಿದ ಆ ಭಕ್ಷ್ಯವು ಪರ್ವತಸಮಾನವಾಗುವದು. ಜಲವು ಸಮುದ್ರಸದೃಶವಾಗುವದು. (ಅಷ್ಟು ಅದರ ಮಹಿಮೆಯೆಂದರ್ಥ) ಮಳೆಗಾಲವನ್ನು ಬಿಟ್ಟು ಯತಿಯು-ಗ್ರಾಮದಲ್ಲಿ ಒಂದು ರಾತ್ರಿ ಉಳಿಯತಕ್ಕದ್ದು. ನಗರದಲ್ಲಿ ಐದು ರಾತ್ರಿ ಉಳಿಯಬಹುದು. ವರ್ಷಕಾಲದಲ್ಲಿ ನಾಲ್ಕು ತಿಂಗಳ ಧರ್ಮಸಿಂಧು ಪರ್ಯಂತ ಒಂದೇ ಕಡೆಯಲ್ಲುಳಿಯತಕ್ಕದ್ದು. ಚಾತುರ್ಮಾಸ್ಯ) ಜಿತೇಂದ್ರಿಯರಾದ ಯತಿಗಳಿಗೆ ಎಂಟು ತಿಂಗಳು ವಿಹಾರ (ಪರಿಭ್ರಮಣ) ಕಾಲವು, ಮಹಾಕ್ಷೇತ್ರವನ್ನು ಹೊಂದಿದವರಿಗೆ ವಿಹಾರದ ನಿಯಮವಿಲ್ಲ. ಭಿಕ್ಷಾಟನ, ಜಪ, ಸ್ನಾನ, ಧ್ಯಾನ, ಶೌಚ, ದೇವತಾರ್ಚನ, ಈ ಆರು ನಿಯಮಗಳು ರಾಜದಂಡದಂತೆ ಪಾಲಿಸಲ್ಪಡಬೇಕು. ಮಂಚ, ಬಿಳವಸ್ತ್ರ, ಸ್ತ್ರೀಸಂಬಂಧದ ಚರ್ಚೆ, ಚಾಂಚಲ್ಯ, ಹಗಲುನಿದ್ರೆ, ಮತ್ತು ವಾಹನ, ಈ ಆರು ವಿಷಯಗಳು ಯತಿಗಳ ಪತನಕ್ಕೆ ಕಾರಣಗಳು, ವ್ಯರ್ಥವಾಗಿ ಬಡಬಡಿಸುವದು, ಪಾತ್ರಗಳ ಮೇಲೆ ಆಶ, ವಸ್ತುಗಳನ್ನು ಕೂಡಿಹಾಕುವದು, ಶಿಷ್ಯರನ್ನು ಸಂಗ್ರಹಿಸುವದು, ಹವ್ಯ, ಕವ್ಯ, ಪರಾನ್ನ ಇವುಗಳನ್ನು ಯತಿಯಾದವನು ತ್ಯಾಜ್ಯ ಮಾಡಬೇಕು. ಮಣ್ಣು, ಬಿದಿರು, ಸೋರೆ, ಇವು ಯತಿಯ ಪಾತ್ರೆಗಳು, ಯಾವಾಗಲೂ ತೀರ್ಥವಾಸಿಯಾಗಿಯೇ ಇರಬಾರದು. ಉಪವಾಸದಲ್ಲಾಸಕ್ತನೂ ಆಗಬಾರದು. ಸದಾ ಅಧ್ಯಯನಶೀಲನೂ ಆಗಬಾರದು. ಮತ್ತು ವ್ಯಾಖ್ಯಾನ ಮಾಡುತ್ತಿರಬಾರದು. ಈ ವಾಕ್ಯವು ವೇದಾರ್ಥದ ಹೊರತಾದ ವಿಷಯವಾಗಿ ಹೇಳಿದ್ದು. ವೇದಾರ್ಥದ ಸಲುವಾಗಿ ಸದಾ ಅಧ್ಯಯನವನ್ನೂ ವ್ಯಾಖ್ಯಾನವನ್ನೂ ಮಾಡಬಹುದು. ಹೀಗೆ ಸಂಕ್ಷಿಪ್ತವಾಗಿ ಹೇಳಿದ ಯತಿಧರ್ಮಗಳು. ಇನ್ನೂ ಬಹಳಷ್ಟು ಯತಿಧರ್ಮಗಳಿವೆ. ಅವುಗಳನ್ನೆಲ್ಲ “ಮಾಧವೀಯ, ಮತ್ತು “ಮಿತಾಕ್ಷರ ಮೊದಲಾದ ಗ್ರಂಥಗಳಿಂದ ತಿಳಿಯತಕ್ಕದ್ದು. ಗ್ರಂಥೋಪಸಂಹಾರ II ನಿಬಂಧSಯಂ ಧರ್ಮಸಿಂಧು ಸಾರನಾಮಾಸುಬೋಧನಃ | ಅಮುನಾಪ್ರೀಯತಾಂ ಶ್ರೀಮದ್ವಿಟ್ಟಲೋ ಭಕ್ತವತ್ಸಲಃ || ಇದು “ಧರ್ಮಸಿಂಧುಸಾರವೆಂಬ ಸುಬೋಧಕರವಾದ ನಿಬಂಧವು. ಇದರಿಂದ ಭಕ್ತವತ್ಸಲನಾದ ವಿಟ್ಠಲನು ಪ್ರೀತನಾಗಲಿ, || ಪ್ರೇಮಾ ಸುಗ್ರಿಗ್ರ್ರಂಥ: ಸೇವ್ಯ: ಶಬ್ದಾರ್ಥತ: ಸರೋಷೋಪಿ ಸಂಶೋಧೃವಾಪಿ ಹರಿಣಾ ಸುರಾಮಮುನಿಸುವ ಪೃಥುಕಮುರಿವ ಇದರಲ್ಲಿ ಶಬ್ದ, ಅರ್ಥ ಮೊದಲಾದವುಗಳಲ್ಲಿ ಕೆಲ ದೋಷವಿರಬಹುದು. ಆದರೂ ಸಜ್ಜನರಾದ ವಿದ್ವಾಂಸರು ಸಂಶೋಧನಮಾಡಿ ಶ್ರೀ ಕೃಷ್ಣನು ಸುದಾಮನಿಂದ ಕೊಡಲ್ಪಟ್ಟ ಹೊಟ್ಟು ಅವಲಕ್ಕಿಯ ಮುಷ್ಟಿಯನ್ನು ಪ್ರೀತಿಯಿಂದ ಸೇವಿಸಿದಂತೆ ಈ ಗ್ರಂಥವನ್ನು ಮೆಚ್ಚಿಕೊಳ್ಳುವದು. || ಶ್ರೀ ಕಾಲ್ಕುಪಾಧ್ಯಾಯವರೋ ಮಹಾತ್ಮಾ ಬಭೂವ ವಿದ್ವದ್ವಿಜರಾಜರಾಜ: || || ತಸ್ಮಾದುಪಾಧ್ಯಾಯ ಕುಲಾವತಂಸೌ ಯಜೇಶ್ವರೋSನಂತ ಇಮಾವಭೂತಾಂ || ಈ ಹಿಂದೆ ವಿದ್ವದ್ರಾಹ್ಮಣೋತ್ತಮರಲ್ಲಿ ಅತ್ಯಂತ ಶ್ರೇಷ್ಠನೂ, ಮಹಾತ್ಮನೂ ಆದ “ಕಾಶುಪಾಧ್ಯಾಯ"ನಂಬವನು ಆಗಿ ಹೋದನು. ಆತನಿಂದ ಉಪಾಧ್ಯಾಯ ಕುಲಕ್ಕೆ ಭೂಷಣಪ್ರಾಯರಾದ “ಯಜೇಶ್ವರ” ಮತ್ತು “ಅನಂತ” ನಂಬವರಿಬ್ಬರು ಜನಿಸಿದರು. |ಯಜೇಶ್ವರೋಯಜ್ಞವಿಧಾನದ ದೈವವೇದಾಂಗಸು ಶಾಸ್ತ್ರಶಿಕ್ಷ 31 ಪರಿಚ್ಛೇದ ೩ ಉತ್ತರಾರ್ಧ || ಭಕ್ರೋತ್ತಮೋsನಂತಗುಣೈಕಧಾಮಾ ನಂತಾಯೋನಂತಕಲಾವತಾರ! ಇವರಲ್ಲಿ “ಯಜೇಶ್ವರ’ ನು ಸಮಸ್ತ ಯಜ್ಞವಿಧಾನವನ್ನು ಬಲ್ಲಾದವನು, ದೈವಜ್ಞನು, ವೇದ ವೇದಾಂಗ ಶಾಸ್ತ್ರಾದಿಗಳನ್ನು ಚೆನ್ನಾಗಿ ಅಭ್ಯಾಸಮಾಡಿದವನು. “ಅನಂತನು ಭಕ್ತರಲ್ಲಿ ಶ್ರೇಷ್ಠನು. ಅನೇಕ ಸದ್ಗುಣಗಳಿಂದ ಯುಕ್ತನಾದವನು, ಸಾಕ್ಷಾತ್ ಅನಂತನ ಅಂಶಾವತಾರಿಯು! || ಏತ್ಮಜನ್ಮಭುವಂ ಸ್ವಕೀಯಾಂ ತಾಂ ಕೌಂಕಣಾಖ್ಯಾಂ ಸುವಿರಕ್ತಶಾಲೀ || || ಶ್ರೀ ಪಾಂಡುರಂಗ ವಸತಿಂ ವಿಧಾಯ ಭೀಮಾತಟೇ ಮುಕ್ತಿಮಗಾತುಭಾ ಈ ಅನಂತೋಪಾಧ್ಯಾಯನು ಏನೋ ಕಾರಣದಿಂದ ವಿರಕ್ತನಾಗಿ ಸ್ವಕೀಯವಾದ ಕೊಂಕಣ ಪ್ರಾಂತದಲ್ಲಿರುವ ಜನ್ಮ ಭೂಮಿಯನ್ನು ತ್ಯಜಿಸಿ ಭೀಮಾನದಿಯ ತಟದಲ್ಲಿರುವ ಫಂಡರಪುರದ ಪಾಂಡುರಂಗನ ಸನ್ನಿಧಿಯಲ್ಲುಳಿದು ಭಕ್ತಿ ಪ್ರಭಾವದಿಂದ ಅಲ್ಲೇ ಮುಕ್ತಿಯನ್ನು ಹೊಂದಿದನು. || ತಸ್ಮಾನಂತಾಭಿಧಾನಕ್ಕೊಪಾಧ್ಯಾಯಸ್ಯ ಸುತಃ ಕೃತೀ | ಕಾಶೀನಾಥಾಭಿದೋ ಧರ್ಮಸಿಂಧುಸಾರಂ ಸಮಾತನೋತ್ || ಆ ಅನಂತೋಪಾಧ್ಯಾಯನ ಪುತ್ರ, ಆದ್ದರಿಂದಲೇ ಪುಣ್ಯವಂತನಾದ “ಕಾಶೀನಾಥ’ ಎಂಬ ಉಪಾಧ್ಯಾಯನು ಈ ಧರ್ಮಸಿಂಧುಸಾರವೆಂಬ ಗ್ರಂಥವನ್ನು ರಚಿಸಿದನು. ಇತಿ ಶ್ರೀ ಮತ್ಯಾಶುಪಾಧ್ಯಾಯ ಸೂರಿಸೂನು ಯಜೇಶ್ವರೋಪಾಧ್ಯಾಯಾನುಜಾ ನಂತೋಪಾಧ್ಯಾಯ ಸೂರಿಸುತ ಕಾಶೀನಾಥೋಪಾಧ್ಯಾಯ ವಿರಚಿತೇ ಧರ್ಮಸಿಂಧುಸಾರೇ ತೃತೀಯ ಪರಿಚ್ಛೇದೋತ್ತರಾರ್ಧಂ ಸಮಾಪ್ತಂ || ಶ್ರೀ ಗುರು ಪಾಂಡುರಂಗಾರ್ಪಣಮಸ್ತು|| ಇತಿ ಧರ್ಮ ಸಿಂಧು ಸಮಾಪ್ತ: ಇಲ್ಲಿಗೆ ತೃತೀಯ ಪರಿಚ್ಛೇದದ ಉತ್ತರಾರ್ಧವು ಮುಗಿಯಿತು. ಪರಿಶಿಷ್ಟ - ೧ ೫೬೫ ಧರ್ಮಸಿಂಧು ಪರಿಶಿಷ್ಟ (೧) ಆಶೌಚ ಸಂಗ್ರಹ “ಧರ್ಮಸಿಂಧು"ವಿನಲ್ಲಿಯ ಆಶೌಚಪ್ರಕರಣವು ಸರ್ವಧರ್ಮಶಾಸ್ತ್ರ ಸಮ್ಮತವೆಂದು ಆಸೇತು ಹಿಮಾಚಲಪರ್ಯಂತ ಪ್ರಸಿದ್ಧವಾಗಿದೆ. ಧರ್ಮಸಿಂಧು ಪುಸ್ತಕದಲ್ಲಿಯ ಆಶೌಚಪ್ರಕರಣದಲ್ಲಿ ವಿಷಯವನ್ನು ಸವಿಸ್ತರ ಹೇಳಿದೆಯಾದರೂ ಇಂಥವನು ಮೃತನಾದರೆ ಇಂಥಿಂಥವರಿಗೆ ಇಂತಿಷ್ಟು “ಆಶೌಚವೆಂಬುದನ್ನು ಕೂಡಲೇ ತಿಳಿಯುವದು ಕಷ್ಟಕರವಾಗಿರುವದರಿಂದ ಈ ಆಶೌಚ ಪಟ್ಟಿಕೆಯನ್ನು ಶೀಘ್ರಬೋಧಕ್ಕಾಗಿ ಕೊಡಲಾಗಿದೆ. ಧರ್ಮಸಿಂಧುವಿನ ಈ ಆಶೌಚಪಟ್ಟಿಕೆಯನ್ನು ಕೆಲ ಪ್ರಯೋಗಗ್ರಂಥಗಳಲ್ಲೂ ಬರೆದದ್ದನ್ನು ನೋಡಬಹುದು. ಧರ್ಮಸಿಂಧು ಆಶೌಚನಿರ್ಣಯದಸಲುವಾಗಿ ಅನೇಕ ವಿದ್ವಜ್ಜನರು ಮೆಚ್ಚುಗೆಯನ್ನು ಪ್ರದರ್ಶಿಸಿದ್ದಾರೆ. “ತ್ರಿಂಶಚೊಕೀಯ ರಘುನಾಥವೃತ್ತಿಗೆ ಟಿಪ್ಪಣೆ ಬರೆದಿರುವ ಸುಪ್ರಸಿದ್ಧ ವಿದ್ವಾನ್’ ಮಾರುಲಕರ ಶಂಕರಶಾಸ್ತ್ರಿ’ಗಳು ‘ಆಶೌಚಸಂಪಾತ’ ದಲ್ಲಿಯ ಟಿಪ್ಪಣೆ ಬರೆಯುವಾಗ “ಜನನಾಶೌಚೀನ ಸಮೇನವಾಧಿಕೇನವಾ ಮೃತಾಶೌಚಂ ನಾತಿ - ಇತಿ ಧರ್ಮಸಿಂಧೇ ಉಕ್ತಂ ಸಾಧು ಸಂಗಚ್ಯತೇ” ಎಂದು ಬರೆದು ಇದು ಸಕಲ ಆಶೌಚಗ್ರಂಥಗಳ ಸಾರವೆಂಬುದನ್ನು ಸೂಚಿಸಿರುವದು ಇದರ ಯೋಗ್ಯತೆಗೆ ಸಾಕ್ಷಿಯೆನ್ನಬಹುದು. ಪೂರ್ವಪಕ್ಷ-ಉತ್ತರ ಪಕ್ಷವಾದವನ್ನೆಬ್ಬಿಸದೆ ನಿಷ್ಕೃಷ್ಟವಾದದ್ದನ್ನು ಬರೆಯುವ ಈ ಶೈಲಿಯು ಅಪೂರ್ವವೆನ್ನಬಹುದು. ಇದು ಆಶೌಚಪ್ರಕರಣಕ್ಕಷ್ಟೇ ಸೀಮಿತವಾದದ್ದಲ್ಲ. ಪೂರ್ಣ ಧರ್ಮವಿಷಯಗಳಿಗೂ ಇದನ್ನು ಅನ್ವಯಿಸಬಹುದು. ಇರಲಿ. ಗರ್ಭನಾಶ-ಜನನಾದ್ಯಾಶೌಚ ಗರ್ಭಸ್ರಾವದಲ್ಲಿ -ಮೂರು ತಿಂಗಳೊಳಗಾದರೆ ತಾಯಿಗೆ ತ್ರಿರಾತ್ರ ಆಶೌಚ. ನಾಲ್ಕನೇ ತಿಂಗಳಾದರೆ ನಾಲ್ಕು ರಾತ್ರಿ ಅಸ್ಪೃಶ್ಯತ್ವರೂಪವಾದ ಆಶೌಚ, ಪಿತ್ರಾದಿ ಸಪಿಂಡರಿಗೆ ಸ್ನಾನದಿಂದ ಶುದ್ಧಿಯು, ಇದು ಎಲ್ಲ ವರ್ಣದವರಿಗೂ ಸಾಧಾರಣವಾದದ್ದು. (ಇಲ್ಲಿ ಷಾಟ್ಸ್‌ರುಷ, ಪಾಂಚಪೌರುಷ ಇತ್ಯಾದಿ ವಿಶೇಷಣವನ್ನು ಹೇಳದಿರುವ ಎಲ್ಲ ಕಡೆಯಲ್ಲಿಯೂ ‘ಸಪಿಂಡ’ ಅಂದರೆ ಏಳು ತಲೆಮಾರಿನ ಒಳಗಿನ ದಶಾಹ ಆಶೌಚಗಳಾದ “ದಾಯಾದರು” ಎಂದೇ ತಿಳಿಯಬೇಕು.) ಗರ್ಭಪಾತದಲ್ಲಿ - ಪಂಚಮ, ಷಷ್ಠ ಮಾಸಗಳಲ್ಲಿ ಗರ್ಭಪಾತವಾದರೆ ತಾಯಿಗೆ ಮಾಸಸಂಖ್ಯಾನುಸಾರ ಐದು ಮತ್ತು ಆರು ದಿನಗಳು (ಅನುಕ್ರಮದಿಂದ ಅಂದರೆ ಐದನೇ ತಿಂಗಳಲ್ಲಿ ಗರ್ಭಪಾತವಾದರೆ ಐದು… ಹೀಗೆ ) ಅಸ್ಪೃಶ್ಯತಾ ರೂಪವಾದ ಆಶೌಚವು. ಪಿತ್ರಾದಿ ಸಪಿಂಡರಿಗೆ ಮೂರು ದಿನ “ಜನನಾಶೌಚ"ವೆಂದು ಗ್ರಹಿಸುವದು. ಮೃತಾಶೌಚವಲ್ಲ. ಇದೂ ಸರ್ವವರ್ಣ ಸಮಾನವಾದದ್ದು. おとと ಧರ್ಮಸಿಂಧು ಸಪ್ತಮ ಮಾಸದಿಂದ ಪ್ರಸವದಲ್ಲಿ - ತಾಯಿ ಮತ್ತು ಪಿತ್ರಾದಿ ಸಪಿಂಡರಿಗೆ ಸಂಪೂರ್ಣ ಜನನಾಶೌಚವು. ಬ್ರಾಹ್ಮಣನಿಗೆ ಹತ್ತು ದಿನ, ಕ್ಷತ್ರಿಯನಿಗೆ ಹನ್ನೆರಡು ದಿನ, ವೈಶ್ಯನಿಗೆ ಹದಿನೈದು ದಿನ, ಶೂದ್ರನಿಗೆ ಒಂದು ಮಾಸ ಹೀಗೆ ಆಶೌಚವು, ಸಂಕರಜಾತಿಯವರಿಗೆ ಶೂದ್ರರಂತೆಯೇ. ವಿಜ್ಞಾನೇಶ್ವರನು"ಸಂಕರ ಜಾತಿಯವರಿಗೆ ಆಶೌಚವೆಂಬುದೇ ಇಲ್ಲ. ಸ್ನಾನಮಾತ್ರ ಮಾಡುವದು” ಎಂದು ಹೇಳಿರುವನು. ಅಥವಾ ಎಲ್ಲ ವರ್ಣದವರಿಗೂ ದಶಾಹ ಆಶೌಚವು, ಜನನಾಶೌಚದಲ್ಲಿ ಬಾಣಂತಿಗೆ ಹತ್ತು ದಿನ ಅಸ್ಪೃಶ್ಯವಿದೆ. ಕನೋತ್ಪತ್ತಿಯಲ್ಲಿ ನಾಲ್ವತ್ತು ದಿನ, ಪುತ್ರೋತ್ಪತ್ತಿಯಲ್ಲಿ ಮೂವತ್ತು ದಿನಗಳು. ಬಾಣಂತಿಗೆ ಕರ್ಮಾಧಿಕಾರವಿರುವದಿಲ್ಲ. ಕನ್ಯಾ ಅಥವಾ ಪುತ್ರೋತ್ಪತ್ತಿಯಲ್ಲಿ -ತಂದೆ, ಸವತಿತಾಯಿ ಇವರಿಗೆ ಸಲಸ್ನಾನವಾಗುವದಕ್ಕಿಂತ ಮುಂಚೆ ಅಸ್ಪೃಶ್ಯತ್ವವಿದೆ. ಜನನಾಶೌಚದಲ್ಲಿ ಪಿತ್ರಾದಿ ಸಪಿಂಡರಿಗೆ ಕರ್ಮಗಳಲ್ಲಧಿಕಾರವಿಲ್ಲ. ಹೊರತು ಅಸ್ಪೃಶ್ಯತೆಯಿಲ್ಲ. ಅಂದರೆ ಕರ್ಮಾದಿಗಳಿಂದ ಹೊರತಾದ ಕಾಲದಲ್ಲಿ ಸ್ಪರ್ಶವಾದಲ್ಲಿ ದೋಷವಿಲ್ಲ. ನಾಳಚ್ಛೇದಕ್ಕಿಂತ ಮೊದಲು ತಂದೆಗೆ ಜಾತಕರ್ಮ, ದಾನ ಇವುಗಳಲ್ಲಧಿಕಾರವಿದೆ. ಇದರಂತೆ ಐದನೇ, ಆರನೇ, ಹತ್ತನೇ ದಿನಗಳಲ್ಲಿ ದಾನ, ಜನ್ಮದಾಪೂಜಾ ಮೊದಲಾದವುಗಳಲ್ಲಧಿಕಾರವಿದೆ. ಆಗ ಪ್ರತಿಗ್ರಹಮಾಡಿದ ಬ್ರಾಹ್ಮಣರಿಗೂ ದೋಷವಿಲ್ಲ. ಶಿಶುವು ಮೃತವಾಗಿ ಜನಿಸಿದರೆ-ಸಪಿಂಡರಿಗೆ ಅದು ಸಂಪೂರ್ಣ ಜನಾಶೌಚವೆಂದೇ ಅರಿಯುವದು. ಮೃತಾಶೌಚವಿಲ್ಲ. ಜನನವಾದ ನಂತರ ನಾಲಚ್ಛೇದಕ್ಕಿಂತ ಮೊದಲು ಶಿಶುಮರಣವಾದರೆ ಪಿತ್ರಾದಿ ಸಪಿಂಡರಿಗೆ ಮೂರು ದಿನ ಜನನಾಶೌಚವು. ತಾಯಿಗೆ ದಶಾಹವೇ. ಆದರೆ ಮೃತಾಶೌಚವಿಲ್ಲ. (ಈ ಸಂಪ್ರದಾಯವು ಈ ಕಡೆಯಲ್ಲಿಲ್ಲ. ಮಾತೃವನ್ನುಳಿದು ಪಿತೃವಿಗೆ ಮಾತ್ರ ತ್ರಿರಾತ್ರವನ್ನುವದು ಅಶಾಸ್ತ್ರವೆಂದೇನೂ ಅಲ್ಲ. ಆದರೆ ದೇಶಾಚಾರಕ್ಕೆ ಕಟ್ಟುಬೀಳಬೇಕಾಗುವದು ಮತ್ತು ಆಶೌಚ ನಿರ್ಣಯದಲ್ಲಿ ಅನೇಕ ಮತಭೇದಗಳಿರುವ ಕಾರಣ ಸಂಪ್ರದಾಯದಂತೆ ಮಾಡಬೇಕಾಗುವದು.) ನಾಳಚ್ಛೇದದ ನಂತರ ಹತ್ತು ದಿನಗಳೊಳಗೆ ಶಿಶುಮರಣವಾದರೆ ಸಪಿಂಡಾದಿಗಳಿಗೆ ಸಂಪೂರ್ಣವಾಗಿಯೇ ಜನನಾಶೌಚವು. ಮರಣಾಶೌಚವಿಲ್ಲ. ಜನನದಲ್ಲಿ “ಅತಿಕ್ರಾಂತಾಶೌಚ"ವಿಲ್ಲ. (ಅಂದರೆ ಹತ್ತು ದಿನ ಕಳೆದ ಮೇಲೆ ಗೊತ್ತಾದಾಗ ಪುನಃ ಆಶೌಚ ಬಳಸತಕ್ಕದ್ದಿಲ್ಲ ಎಂದರ್ಥ.) ಆದರೆ ತಂದೆಯು ದೂರದೇಶದಲ್ಲಿದ್ದು ತನಗೆ ಪುತ್ರಾದಿಗಳು ಜನಿಸಿದ ವಾರ್ತಾಶ್ರವಣವಾದರೆ ಸ್ನಾನವಾಗಲೇಬೇಕು. ಪಿತೃಗೃಹದಲ್ಲಿ ಕನೈಯು ಪ್ರಸೂತಳಾದರೆ, ತಂದೆ-ತಾಯಿಗಳಿಗೆ ಮತ್ತು ಆ ಮನೆಯಲ್ಲಿರುವ ಅಣ್ಣ ತಮ್ಮಂದಿರಿಗೂ ಒಂದು ದಿನ ಆಶೌಚವು. ಪಿತೃಗೃಹದಲ್ಲಿರುವ ತಂದೆಯ ಅಣ್ಣ-ತಮ್ಮಂದಿರು ಮೊದಲಾದ ಎಲ್ಲ ಸಪಿಂಡರಿಗೂ “ಒಂದು ದಿನ"ವೆಂದು “ಸ್ಮೃತ್ಯರ್ಥಸಾರ"ದಲ್ಲಿ ಹೇಳಿದೆ. ಇದರಂತೆ ಅಣ್ಣ-ತಮ್ಮಂದಿರ ಮನೆಯಲ್ಲಿ ಅಕ್ಕ-ತಂಗಿಯರು ಪ್ರಸೂತರಾದರೂ ಅವರಿಗೆ “ಏಕಾಹ"ವು. “ಮಾಧವ"ನು-ಪಿತೃಗೃಹದಲ್ಲಿ ಕನ್ಯಾಪ್ರಸೂತಿಯಾದರೆ ತಂದೆ ತಾಯಿಗಳಿಗೆ “ಮೂರು ರಾತ್ರಿ”, ಆ ಮನೆಯಲ್ಲಿರುವ ಅಣ್ಣ-ತಮ್ಮಂದಿರು ಮೊದಲಾದವರಿಗೆ “ಏಕಾಹ"ವೆಂದು ಹೇಳಿರುವನು. ಕನೈಯು ಪತಿಗೃಹದಲ್ಲಿ ಪ್ರಸೂತಳಾದರೆ ಪಿತ್ರಾದಿಗಳಿಗೆ ಆಶೌಚವಿಲ್ಲ. ಪರಿಶಿಷ್ಟ - ೧ ೫೬೭ ಮೃತಾಶೌಚ ಮೃತಾಶೌಚವಿರುವವರಿಗೆ ಅಸ್ಪೃಶ್ಯತೆಯಿದೆ ಮತ್ತು ಕರ್ಮಾಧಿಕಾರವಿಲ್ಲ. ಪುತ್ರನ ಮರಣದಲ್ಲಿ ಹುಟ್ಟಿದ ದಶಾಹಾನಂತರ ನಾಮಕರಣಕ್ಕಿಂತ ಮೊದಲು ಮರಣವಾದಲ್ಲಿ ಸಪಿಂಡರು ಸ್ನಾನಮಾತ್ರದಿಂದ ಶುದ್ಧರಾಗುವರು. ಮಾತಾ-ಪಿತೃಗಳಿಗೆ ಮತ್ತು ಸವತೀತಾಯಿಗೆ"ತ್ರಿರಾತ್ರ ಆಶೌಚ"ವು. (ಇದಾದರೂ ಈ ಕಡೆಯಲ್ಲಿ ಆಚಾರದಲ್ಲಿಲ್ಲ. ಮಾತಾಪಿತೃಗಳು ದಶಾಹ ಆಶೌಚ ತೆಗೆದುಕೊಳ್ಳುವ ಸಂಪ್ರದಾಯವಿದೆ. ಸಪಿಂಡರು ಆಶೌಚವನ್ನು ತೆಗೆದುಕೊಳ್ಳುವದಿಲ್ಲ. ನಾಮಕರಣಕ್ಕಿಂತ ಮೊದಲು ಮರಣವಾದರೆ ಖನನವು ಅಗತ್ಯವು ನಾಮಕರಣಾನಂತರ ಚೌಲಪರ್ಯಂತ ಅಥವಾ ಮೂರು ವರ್ಷ ತುಂಬುವದರೊಳಗೆ ಮರಣವಾದರೆ ದಾಹವನ್ನಾದರೂ ಮಾಡಬಹುದು. ಇಲ್ಲವೆ ಖನನವನ್ನಾದರೂ ಮಾಡಬಹುದು. ನಾಮಕರಣಾನಂತರ ದಂತೋತ್ಪತ್ತಿಗಿಂತ ಮೊದಲು ಪುತ್ರ ಮರಣವಾದರೆ ದಾಹಮಾಡಿದಲ್ಲಿ ಸಪಿಂಡರಿಗೆ “ಏಕಾಹವು. ಖನನವಾದಲ್ಲಿ ಸ್ನಾನದಿಂದ ಶುದ್ಧಿಯು, ಮಾತಾ-ಪಿತೃಗಳಿಗೆ ಮತ್ತು ಸವತಿತಾಯಿಗೆ ದಹನ, ಖನನ ಎರಡರಲ್ಲೂ “ತ್ರಿರಾತ್ರ"ವು. ಇಲ್ಲಿ ನಾಮಕರಣವೆಂದರೆ “ಹನ್ನೆರಡು ದಿನಗಳ ಕಾಲ"ವೆಂದು ತಿಳಿಯತಕ್ಕದ್ದು. “ದಂತ ಜನನ"ವೆಂದರೆ- “ಏಳನೇ ತಿಂಗಳು” ಎಂದು ತಿಳಿಯತಕ್ಕದ್ದು. ಆದಕಾರಣ ದ್ವಾದಶ ದಿನಗಳಿಂದ ಹಿಡಿದು ಆರು ತಿಂಗಳ ಅಖೈರ ವರೆಗೆ “ಏಕಾಹ ಆಶೌಚವು. ಹೀಗೆ ಅರ್ಥಮಾಡಬೇಕು. ಏಳನೇ ತಿಂಗಳಿಂದ ಹಿಡಿದು ಚೌಲಪರ್ಯಂತ ಅಥವಾ ಮೂರು ವರ್ಷಗಳೊಳಗೆ ದಾಹ ಅಥವಾ ಖನನವಾದರೆ ಸಪಿಂಡರಿಗೆ “ಏಕಾಹವು. ಕೆಲವರು ಖನನದಲ್ಲಿ ಏಕಾಹ, ದಾಹದಲ್ಲಿ ತ್ರಿರಾತ್ರ ಎಂದು ಹೇಳುವರು. ಮಾತಾ ಪಿತೃಗಳಿಗೆ ಮತ್ತು ಸವತಿತಾಯಿಗೆ ದಹನ -ಖನನಗಳೆರಡರಲ್ಲೂ “ತ್ರಿರಾತ್ರ’ವು. ಪ್ರಥಮ ವರ್ಷಾದಿಗಳಲ್ಲಿ ಚೌಲವಾಗಿರುವ ಪುತ್ರನು ಮೃತನಾದರೆ ಪಿತ್ರಾದಿ ಎಲ್ಲರಿಗೂ ತ್ರಿದಿನ ಆಶೌಚ ಮತ್ತು ದಾಹ ಇವು ಆವಶ್ಯಕವು. ಮೂರು ವರ್ಷಗಳ ನಂತರ ಚೌಲವಾಗಲೀ, ಆಗದಿರಲಿ, ಉಪನಯನಕ್ಕಿಂತ ಮೊದಲು ಮರಣವಾದರೆ ಪಿತ್ರಾದಿ ಎಲ್ಲ ಸಪಿಂಡರಿಗೂ ತ್ರಿರಾತ್ರಾಶೌಚ ಹಾಗೂ ದಹನಗಳು ಅಗತ್ಯಗಳು, ಸೋದಕ ದಾಯಾದರಿಗೆ (ಏಳು ತಲೆಗಳನಂತರ ಹದಿನಾಲ್ಕು ತಲೆಗಳ ವರೆಗಿನ ದಾಯಾದಿಗಳು) ಉಪನಯನವಾಗದಿದ್ದವನ ಮರಣದಲ್ಲಿ ಆಶೌಚವಿಲ್ಲ. ಬರೇ ಸ್ನಾನಮಾತ್ರ. ಮೂರು ವರ್ಷ ಪರ್ಯಂತ ಇದೇ ಆಶೌಚವು. ಶೂದ್ರನಿಗೆ ಉಪನಯನಸ್ಥಾನದಲ್ಲಿ ವಿವಾಹವು ಮೂರು ವರ್ಷದ ನಂತರ ವಿವಾಹ ಪರ್ಯಂತ ಅಥವಾ ಹದಿನಾರು ವರ್ಷ ಪರ್ಯಂತ ಶೂದ್ರನು ಮರಣಹೊಂದಿದರೆ “ತ್ರಿದಿನ” ಆಶೌಚವು. ನಂತರ ಜಾತ್ಯುಕ್ತಾಶೌಚವು, ಉಪನಯನವಾಗದಿರುವವನ ಮರಣದಲ್ಲಿ ಅತಿಕ್ರಾಂತ ಆಶೌಚವಿಲ್ಲ. ಆದರೆ ಸ್ನಾನಮಾತ್ರ ಇದೆ ಎಂದು “ಸ್ಮತ್ಯರ್ಥ ಸಾರ"ದಲ್ಲಿ ಹೇಳಿದೆ. ಔರಸಪುತ್ರನ ಮರಣದಲ್ಲಿ ವರ್ಷದ ಅಂತ್ಯದಲ್ಲಿ ತಿಳಿದರೂ ಮಾತಾ-ಪಿತೃಗಳಿಗೆ ತ್ರಿರಾತ್ರವು. ಉಪನಯನವಾಗದಿರುವ ಪುತ್ರ, ವಿವಾಹವಾಗದಿರುವ ಕನ್ಯಾ ಇವರಿಗೆ ತಂದೆತಾಯಿಗಳ ಹೊರತಾದವರ ಮರಣದಲ್ಲಿ ಆಶೌಚ ತೆಗೆದುಕೊಳ್ಳುವದಿರುವದಿಲ್ಲ. ಅನ್ಯರ ಆಶೌಚಗ್ರಹಣಕ್ಕೆ ಉಪನಯನವಾದವರೂ, ವಿವಾಹಿತರಾದ ಕನ್ನೆಯರೂ ಅಧಿಕಾರಿಗಳಾಗುವರು. ಧರ್ಮಸಿಂಧು ಪುತ್ರಿಯ ಮರಣದಲ್ಲಿ, ಹುಟ್ಟಿದ ದಶಾಹಾನಂತರದಲ್ಲಿ ಮೂರು ವರ್ಷಗಳೊಳಗೆ ಮರಣವಾದಲ್ಲಿ ತ್ರಿಪುರುಷ ಸಪಿಂಡ ( ಮೂರು ತಲೆಮಾರಿನ) ರೊಳಗಿನ ದಾಯಾದಿಗಳಿಗೆ ಸ್ನಾನದಿಂದ ಶುದ್ಧಿಯು. ಮಾತಾಪಿತೃ ಹಾಗೂ ಸವತಿತಾಯಿಗೆ ಜನನದಿಂದ ಆರು ತಿಂಗಳೊಳಗೆ ಮರಣವಾದಲ್ಲಿ “ಏಕಾಹವು, ಏಳು ತಿಂಗಳಿಂದ ಹಿಡಿದು ಮುಂದೆ ಆದರೆ “ತ್ರಿರಾತ್ರ’ವು. ವಿಜ್ಞಾನೇಶ್ವರನಾದರೋ ಏಕಾದಶದಿನದಿಂದ ಮುಂದೆ ಮೂರು ವರ್ಷ ಪರ್ಯಂತವಾಗಿ ಮಾತಾ-ಪಿತೃಗಳಿಗೆ “ತ್ರಿರಾತ್ರಿಯೇ ಎಂದು ಹೇಳುವನು. ಸೋದಕರಿಗೆ ಅವಿವಾಹಿತ ಕನ್ಯಾಮರಣದಲ್ಲಿ “ಸ್ನಾನಮಾತ್ರ"ವು. ಕನ್ನೆಯ ಮೂರುವರ್ಷದ ನಂತರ ವಾಗ್ದಾನದ ಒಳಗೆ ಮರಣವಾದರೆ ತ್ರಿಪುರುಷ ಸಪಿಂಡರಿಗೆ ಏಕಾಹ"ವು. ವಾಗ್ದಾನಾನಂತರ ವಿವಾಹದ ಒಳಗೆ ಕನ್ಯಾಮರಣವಾದರೆ ತಂದೆಯ ಹಾಗೂ ಪತಿಯ ಸಪಿಂಡ ದಾಯಾದಿಗಳಿಗೆ “ತ್ರಿರಾತ್ರವು. ಇಲ್ಲಿ ಸಾಪಿಂಡವೆಂದರೆ ಏಳುತಲೆಯ ವರೆಗಿನ ದಾಯಾದರೆಂದು ತಿಳಿಯುವದು. ದಾಹಾದಿಗಳನ್ನು ಅಮಂತ್ರಕವಾಗಿ ಮಾಡತಕ್ಕದ್ದು. ವಿವಾಹಾನಂತರ ಮರಣವಾದರೆ ಪತಿಯ ಸಪಿಂಡರಿಗೆ ‘ದಶಾಹ’ವು. ವಿವಾಹಾನಂತರ ಕನ್ನೆಯು ಪಿತೃಗೃಹದಲ್ಲಿ ಮೃತಿಹೊಂದಿದರೆ ಮಾತಾಪಿತೃ, ಸಾಪತ್ನ ಮಾತೃ, ಸವತಿಯ ಅಣ್ಣ-ತಮ್ಮಂದಿರು ಹಾಗೂ ಆ ಕನೈಯ ಅಣ್ಣ ತಮ್ಮಂದಿರು ಇವರಿಗೆ “ತ್ರಿರಾತ್ರ"ವು. ಆ ಮನೆಯಲ್ಲಿರುವ ತಂದೆಯ ಅಣ್ಣ, ತಮ್ಮ ಮೊದಲಾದವರಿಗೆ ‘ಏಕಾಹ’ವು. ಆ ಮನೆಯಲ್ಲಿರುವ ಸಪಿಂಡರಿಗೂ ‘ಏಕಾಹ’ ಎಂದು ಕೆಲವರ ಮತವು, ಕನೈಯು ಗ್ರಾಮಾಂತರದಲ್ಲಿ ಮೃತಳಾದರೆ “ಪಕ್ಷಿಣೀ” ಎಂದು ಕೆಲವರನ್ನುವರು. ವಿವಾಹಿತ ಕನ್ನೆಯು ಪತಿಗೃಹದಲ್ಲಿ ಮರಣಹೊಂದಿದರ ತಾಯಿ ತಂದೆ, ಸಪತ್ನಮಾತೃ ಇವರಿಗೆ ‘ತ್ರಿರಾತ್ರ’ವು. ಅಣ್ಣ ತಮ್ಮಂದಿರಿಗೆ “ಪಕ್ಷಿಣಿ"ಯು. (ಪಕ್ಷಿಣೀ ಮೊದಲಾದ ಲಕ್ಷಣಗಳನ್ನು ಹಿಂದೆ ಆಶೌಚ ಪ್ರಕರಣದಲ್ಲಿ ಹೇಳಿದೆ. ತಂದೆಯು ಅಣ್ಣ-ತಮ್ಮಂದಿರಿಗೆ “ಏಕಾಹ“ವೆಂದು ಕೆಲವರ ಮತವು. ವಿವಾಹಿತ ಅಕ್ಕ-ತಂಗಿಯರ ಮರಣದಲ್ಲಿ ಅಣ್ಣ-ತಮ್ಮಂದಿರ ಮನೆಯಲ್ಲಿ ಮರಣವಾದರೆ ಉಪನೀತ ಅಣ್ಣ ತಮ್ಮಂದಿರಿಗೆ “ತ್ರಿರಾತ್ರ"ವು. ಬೇರೆ ಗೃಹದಲ್ಲಿ ಮರಣವಾದರೆ “ಪಕ್ಷಿಣಿ”ಯು, ಗ್ರಾಮಾಂತರದಲ್ಲಾದರೆ “ಏಕಾಹವು. ಅವಳು ಅತ್ಯಂತ ದುರ್ಗುಣವುಳ್ಳವಳಾದರೆ ಒಂದೇ ಗ್ರಾಮದಲ್ಲಾದರೂ “ಸ್ನಾನ ಮಾತ್ರ"ವು. ಹೀಗೆ ಸವತಿ ಭಾತೃಗಳಿಗೂ ತಿಳಿಯುವದು. ಅವಳ ಅಕ್ಕ-ತಂಗಿಯರೂ ಹೀಗೆಯೇ ಎಂದು ತೋರುತ್ತದೆ. ಮಾತಾಪಿತೃಗಳ ಮರಣದಲ್ಲಿ ಅನುಪನೀತರಾದ ಪುತ್ರರಿಗೂ, ಅವಿವಾಹಿತ ಕನೈಯರಿಗೂ ‘ದಶಾಹ’ ಆಶೌಚವು. ಅನ್ಯರ ಮರಣದಲ್ಲಿ ಈ ಅನುಪನೀತ ಪುತ್ರ ಹಾಗೂ ಅವಿವಾಹಿತ ಕನೈಯರಿಗೆ ಆಶೌಚವಿಲ್ಲ. ವಿವಾಹಿತಳಾದ ಕನ್ನೆಗೆ ಮಾತಾಪಿತೃಗಳ ಮರಣದ ದಶಾಹದ ಒಳಗೆ ‘ತ್ರಿರಾತ್ರ’ವು. ದಶಾಹದ ನಂತರ ಅಥವಾ ಕಾಲಾಂತರ -ಸಂವತ್ಸರಾನಂತರ ಜ್ಞಾತವಾದರೆ ‘ಪಕ್ಷಿಣಿ’ಯು, ಔರಸಪುತ್ರನಿಗೆ ದೇಶಾಂತರ ಅಥವಾ ಕಾಲಾಂತರದಲ್ಲಿ ಜ್ಞಾತವಾದರೂ ‘ದಶಾಹ’ವೇ. ದತ್ತಕನಿಗೆ ಪೂರ್ವಾಪರ ಪಿತೃಗಳ ಮರಣದಲ್ಲಿ “ತ್ರಿರಾತ್ರ"ವು, ದತ್ತಕನು ಸಗೋತ್ರದವನೇ ಆದರ “ದಶರಾತ್ರ"ವು, ತಂದೆ ತಾಯಿಗಳ ಔರ್ಧ್ವದೇಹಿಕ ಸಂಸ್ಕಾರಮಾಡಿದಾಗ ಕರ್ಮಾಂಗವಾಗಿ ದಶಾಹವನ್ನೇ ತೆಗೆದುಕೊಳ್ಳುವದು. ಬೇರೆ ಅಧಿಕಾರಿಗಳಿಲ್ಲದಿದ್ದಾಗ ಬ್ರಹ್ಮಚಾರಿಗಳು ತಂದೆ-ತಾಯಿಗಳ ದಾಹಾದಿ ಅಂತ್ಯಕರ್ಮವನ್ನು ಮಾಡತಕ್ಕದ್ದು. ಆಗ ಅವರಿಗಾದರೂ ಕರ್ಮಾಂಗವಾಗಿ ದಶಾಹ ಆಶೌಚವಿದೆ. ಮತ್ತು ಅಸ್ಪಶ್ಯತೆಯೂ ಪರಿಶಿಷ್ಟ - ೧ XLE ಇದೆ. ಆದರೂ ಬ್ರಹ್ಮಚಾರಿಯು ಆ ಆಶೌಚಿಗಳ ಅನ್ನಭೋಜನ ಮಾಡಬಾರದು. ಆಶೌಚಿಗಳ ಸ್ಪರ್ಶಮಾಡುತ್ತ ಅವರೊಡನೆ ವಾಸಮಾಡಬಾರದು. ಪಿತ್ರಾದಿಗಳ ದಾಹಮಾತ್ರ ಮಾಡಿದರೆ ಏಕಾಹ ಆಶೌಚವು. ಈ ಎಲ್ಲದರಲ್ಲಿಯೂ ಬ್ರಹ್ಮಚಾರಿಯಾದವನಿಗೆ ಸಂಧ್ಯಾ -ಅಗ್ನಿ ಕಾರ್ಯಾದಿ ಕರ್ಮಲೋಪವಿಲ್ಲ. ಬ್ರಹ್ಮಚಾರಿಗೆ ಪಿತ್ರಾದಿಗಳ ಅಂತ್ಯಕರ್ಮಮಾಡದಿರುವಲ್ಲಿ ಪಿತ್ರಾದಿಗಳ ಮರಣದಲ್ಲಿ ಆಶೌಚವಿರುವದಿಲ್ಲ. ಬ್ರಹ್ಮಚಾರಿಯಾದವನು ಸಮಾವರ್ತನೆಯಾದ ನಂತರ ಮೊದಲು ಮೃತರಾದ ಪಿತ್ರಾದಿ ಸಪಿಂಡರ ಬಗ್ಗೆ “ತ್ರಿರಾತ್ರ” ಆಶೌಚವನ್ನಾಚರಿಸತಕ್ಕದ್ದು. ಸವತಿತಾಯಿಯ ಮರಣದಲ್ಲಿ ವಿವಾಹಿತ ಕನ್ಯಗೆ ದಶಾಹದ ಒಳಗೆ “ತ್ರಿರಾತ್ರ"ವು. ದಶಾಹಾನಂತರ ಕಾಲಾಂತರ ಅಥವಾ ಸಂವತ್ಸರಾಂತ್ಯದಲ್ಲಾದರೂ “ಪಕ್ಷಿಣಿಯು, ಪುತ್ರನಿಗೆ ದಶಾಹಾನಂತರ ಜ್ಞಾತವಾದರ (ಸವತಿ ಪುತ್ರ) ದೇಶಕಾಲಾಪೇಕ್ಷೆಯಿಲ್ಲದ ತ್ರಿರಾತ್ರವು. ತಂದೆಯ ತಂದೆ, ತಂದೆಯ ಅಣ್ಣ ತಮ್ಮಂದಿರ ಮರಣದಲ್ಲಿ ವಿವಾಹಿತ ಕಣ್ಣಿಗೆ “ಸ್ನಾನಮಾತ್ರ”, ವಿವಾಹಿತ ಅಣ್ಣತಮ್ಮಂದಿರ ಮರಣದಲ್ಲಿ ಅಕ್ಕ ತಂಗಿಯರ ಮನೆಯಲ್ಲಿ ಅವರು ಮೃತರಾದರೆ ಅಕ್ಕ ತಂಗಿಯರಿಗೆ “ತ್ರಿರಾತ್ರ"ವು ಬೇರೆ ಗೃಹದಲ್ಲಿ ಮರಣವಾದರೆ “ಪಕ್ಷಿಣಿ"ಯು ಗ್ರಾಮಾಂತರದಲ್ಲಾದರೆ “ಏಕಾಹ"ವು. ಅತಿ ನಿಕೃಷ್ಟರಾದಲ್ಲಿ ಗ್ರಾಮದಲ್ಲಾದರೂ ಸ್ನಾನಮಾತ್ರ. ಸವತೀ ಅಕ್ಕ ತಂಗಿಯರಿಗೂ ಸಹ ಹೀಗೆಯೇ, ಅನುಪನೀತ ಅಣ್ಣ-ತಮ್ಮಂದಿರ ಮರಣದಲ್ಲಿ ಅಕ್ಕ-ತಂಗಿಯರಿಗೆ ಆಶೌಚವಿಲ್ಲ. ತಾಯಿಯ ಅಣ್ಣ ತಮ್ಮಂದಿರ ಮರಣದಲ್ಲಿ ಅಕ್ಕ ತಂಗಿಯರ ಪುತ್ರನಿಗೆ ಮತ್ತು ಕನ್ನೆಗಾದರೂ ‘ಪಕ್ಷಿಣಿ’ಯು, ಆ ಮಾವನು ಎಲ್ಲ ಸಹಕಾರ ಕೊಟ್ಟವ (ಉಪಕಾರಕ) ನಾಗಿದ್ದರೆ ಮತ್ತು ಅವನು ಸ್ವಗೃಹದಲ್ಲಿ ಮೃತನಾದರೆ “ತ್ರಿರಾತ್ರ"ವು, ಅನುಪನೀತನಾದ ಮಾತುಲನ ಮರಣದಲ್ಲಿ ಮತ್ತು ಅವನ ಗ್ರಾಮಾಂತರ ಮರಣದಲ್ಲೂ “ಏಕರಾತ್ರ"ವು, ಸವತೀತಾಯಿಯ ಅಣ್ಣತಮ್ಮಂದಿರ ಮರಣದಲ್ಲಿಯೂ ಇದರಂತೆಯೇ. ಸೋದರಮಾವನ ಪತ್ನಿಯ ಮರಣದಲ್ಲಿ, ಪತಿಯು ಅಕ್ಕ-ತಂಗಿಯರ ಪುತ್ರ, ಪುತ್ರಿಯರಿಗೆ “ಪಕ್ಷಿಣಿ"ಯು, ಸವತೀತಾಯಿಯ ಅಣ್ಣ ತಮ್ಮಂದಿರ ಪತ್ನಿಯ ಮರಣದಲ್ಲಾದರೋ ಆಶೌಚವಿಲ್ಲ. ಅಕ್ಕ ತಂಗಿಯರ ಪುತ್ರರ ಮರಣದಲ್ಲಿ ಅವರು ಉಪನೀತರಾಗಿ ಮರಣ ಹೊಂದಿದರೆ ಸೋದರಮಾವನಿಗೂ ಅವನ ಅಕ್ಕ ತಂಗಿಯರಿಗೂ “ತ್ರಿರಾತ್ರ"ವು. ಇದರಂತೆ ಸವತಿ ಅಕ್ಕ-ತಂಗಿಯರ ಪುತ್ರರ ಮರಣದಲ್ಲಿಯೂ ತಿಳಿಯುವದು. ಅನುಪನೀತ ಅಕ್ಕ-ತಂಗಿಯರ ಪುತ್ರರ ಮರಣದಲ್ಲಿ ಸೋದರಮಾವನಿಗೆ, ಅವನ ಅಕ್ಕ-ತಂಗಿಯರಿಗೂ “ಪಕ್ಷಿಣಿಯು, ಸವತಿ ಭಗಿನಿ ಪುತ್ರರಿಗೂ ಇದರಂತೆಯೇ, ‘ಅನುಪನೀತ’ ಎಂಬ ಪದದಿಂದ ‘ಉಪನಯನ ಮಾತ್ರ ಆಗದಿದ್ದವನು’ X20 ಧರ್ಮಸಿಂಧು ಎಂದರಿಯುವದು. ಚೌಲವಾಗಿರುವ ಅಥವಾ ಮೂರು ವರ್ಷಕ್ಕಿಂತ ಹೆಚ್ಚಾಗಿದ್ದವನು ಎಂದು ತಿಳಿಯತಕ್ಕದ್ದಾಗಿ ತೋರುತ್ತದೆ. ಹೀಗೆ ಮುಂದೆಯೂ “ಅನುಪನೀತ” ಎಂದು ಬಂದಲ್ಲಿ ಅದರ ಅರ್ಥವನ್ನು ಹೀಗೆಯೇ ತಿಳಿಯತಕ್ಕದ್ದು. ಅಕ್ಕತಂಗಿಯರ ಪುತ್ರಿಯರ ಮರಣದಲ್ಲಿ, “ಸ್ನಾನಮಾತ್ರ"ವೆಂದು ತೋರುತ್ತದೆ. ತಾಯಿಯ ತಂದೆಯ ಮರಣದಲ್ಲಿ ಮಗಳ ಮಗ ಅಥವಾ ಪುತ್ರಿ ಇವರಿಗೆ “ತ್ರಿರಾತ್ರ"ವು. ಗ್ರಾಮಾಂತರದಲ್ಲಾದರೆ “ಪಕ್ಷಿಣಿ"ಯು. ತಾಯಿಯ ತಾಯಿಯ ಮರಣದಲ್ಲಿ - ಮಗಳ ಮಗ ಅಥವಾ ಪುತ್ರಿಗೆ “ಪಕ್ಷಿಣಿ"ಯು. ಮಗಳ ಮಗನ ಮರಣದಲ್ಲಿ, ಉಪನೀತನಾಗಿ ಮರಣಪಟ್ಟಲ್ಲಿ ತಾಯಿಯ ತಂದೆಗೆ ಮತ್ತು ತಾಯಿಯ ತಾಯಿಗೆ “ತ್ರಿರಾತ್ರ"ವು. ಅನುಪನೀತನ ಮರಣದಲ್ಲಿ ತಾಯಿಯ “ತಂದೆ- ತಾಯಿ"ಗಳಿಗೆ “ಪಕ್ಷಿಣಿಯು, ಮಗಳ ಮಗಳ ಮರಣದಲ್ಲಿ ಆಶೌಚವಿಲ್ಲವೆಂದು ತೋರುತ್ತದೆ. ಹೆಂಡತಿಯ ತಾಯಿತಂದೆಗಳ ಮರಣದಲ್ಲಿ - ಅಳಿಯನಿಗೆ ಸನ್ನಿಧಿಯಲ್ಲಾದರೆ “ತ್ರಿರಾತ್ರ"ವು. ಅಸನ್ನಿಧಿಯಲ್ಲಿ ಪಕ್ಷಿಣಿ"ಯು. ಅವರು ಉಪಕಾರಕರಾಗಿದ್ದರೆ ಅಸನ್ನಿಧಿಯಲ್ಲಾದರೂ ‘ತ್ರಿರಾತ್ರ’ವು. ಗ್ರಾಮಾಂತರದಲ್ಲಾದರೆ ‘ಏಕರಾತ್ರ’ವು, ಹೆಂಡತಿಯು ಮೃತಳಾಗಿ ಅತ್ತೆ-ಮಾವಂದಿರ ವಿಚ್ಛೇದವಾದರೆ ಮತ್ತು ಅವರು ಉಪಕಾರಕರಾಗಿರದಿದ್ದರೆ ಅವರ ಮರಣದಲ್ಲಿ “ಪಕ್ಷಿಣಿ"ಯು. ಅಥವಾ “ಏಕಾಹ"ವೆಂದು ತೋರುತ್ತದೆ. ಅಳಿಯನ ಮರಣದಲ್ಲಿ ಅತ್ತೆ ಮಾವಂದಿರಿಗೆ “ಏಕರಾತ್ರ” ಅಥವಾ ಸ್ನಾನದಿಂದ ಶುದ್ದಿ. ಸ್ವಗೃಹದಲ್ಲಿ ಅಳಿಯನ ಮರಣವಾದರೆ “ತ್ರಿರಾತ್ರ"ವು. ಪತ್ನಿಯ ಅಣ್ಣ-ತಮ್ಮಂದಿರ ಮರಣದಲ್ಲಿ, ಅಕ್ಕ-ತಂಗಿಯರ ಪತಿಗೆ “ಏಕಾಹ"ವು. ಪತ್ನಿಯ ಅಣ್ಣ-ತಮ್ಮಂದಿರು ಅನುಪನೀತರಾಗಿ ಮರಣಪಟ್ಟರ “ಸ್ನಾನಮಾತ್ರ”. ಉಪನೀತರಾಗಿದ್ದರೂ ಗ್ರಾಮಾಂತರದಲ್ಲಿ ಮೃತರಾದರೆ “ಸ್ನಾನ"ವು. ಪತ್ನಿಯ ಮರಣಕಾರಣದಿಂದ ಸಂಬಂಧ ವಿಚ್ಛತ್ತಿಯಾಗಿದ್ದವನ ಮರಣದಲ್ಲಿಯೂ ಸ್ನಾನ’ವು ಎಂದು “ನಾಗೋಜಿ ಭಟೀಯ"ದಲ್ಲಿ ಹೇಳಿದೆ. ಪತ್ನಿಯ ಅಣ್ಣ ತಮ್ಮಂದಿರ ಪುತ್ರರ ಮರಣದಲ್ಲಿ, ಅವಳ ಅಂದರೆ ಆ ಅಣ್ಣ ತಮ್ಮಂದಿರ ಅಕ್ಕ ತಂಗಿಯರ ಪತಿಗೆ “ಸ್ನಾನವು. ಪತ್ನಿಯ ಅಣ್ಣ-ತಮ್ಮಂದಿರ ಪುತ್ರಿಯ ಮರಣದಲ್ಲಿ ’ ಪತ್ನಿಯ ಅಣ್ಣ ತಮ್ಮ೦ದಿರ ಮರಣದಲ್ಲಿಯಂತೆ “ಏಕಾಹ"ವೆಂದು ಒಬ್ಬ ಗ್ರಂಥಕಾರನು ಹೇಳಿರುವನು. ತಾಯಿಯ ಅಕ್ಕ-ತಂಗಿಯರ ಮರಣದಲ್ಲಿ- ಅಕ್ಕ-ತಂಗಿಯರ ಪುತ್ರಾದಿಗಳಿಗೆ “ಪಕ್ಷಿಣಿ"ಯು. ಇದರಂತೆ ಸವತಿತಾಯಿಯ ಅಕ್ಕ-ತಂಗಿಯರ ಮರಣದಲ್ಲೂ ತಿಳಿಯುವದು. ಸ್ವಗೃಹದಲ್ಲಿ ಇವರ ಮರಣವಾದರೆ ‘ತ್ರಿದಿನ"ವು.ಪರಿಶಿಷ್ಟ - ೧ ೫೭೧ ತಂದೆಯ ಅಕ್ಕ-ತಂಗಿಯರ ಮರಣದಲ್ಲಿ- ಅಣ್ಣ ತಮ್ಮಂದಿರ ಪುತ್ರ-ಪುತ್ರಿಯರಿಗೆ ‘ಪಕ್ಷಿಣಿ’ಯು, ತಂದೆಯ ಸವತಿಯ ಅಕ್ಕತಂಗಿಯರ ಮರಣದಲ್ಲಾದರೂ ಸ್ನಾನ ಮಾತ್ರ. ಸ್ವಗೃಹದಲ್ಲಿ ಅವರ ಮರಣವಾದರೆ ತ್ರಿದಿನವು ಅಣ್ಣ ತಮ್ಮಂದಿರ ಪುತ್ರ-ಪುತ್ರಿಯರ ಮರಣದಲ್ಲಿ ತಂದೆಯ ಅಕ್ಕ-ತಂಗಿಯರಿಗೆ ಸ್ನಾನಮಾತ್ರವು. ಆತ್ಮಬಂಧುತ್ರಯ ಮರಣದಲ್ಲಿ - ಆತ್ಮಬಂಧುತ್ರಯವೆಂದರೆ ತನ್ನ ತಂದೆಯ ಅಕ್ಕ- ತಂಗಿಯರ ಪುತ್ರರು, ತನ್ನ ತಾಯಿಯ ಅಕ್ಕ-ತಂಗಿಯರ ಪುತ್ರರು, ತನ್ನ ತಾಯಿಯ ಅಣ್ಣ ತಮ್ಮಂದಿರ ಪುತ್ರರು ಇವರ ಮರಣದಲ್ಲಿ, ಇವರೊಳಗೆ ಉಪನೀತರಾದವರ ಮರಣದಲ್ಲಿ “ಪಕ್ಷಿಣಿಯು. ಅನುಪನೀತ ಅಥವಾ ದುರ್ಗುಣಿಗಳ ಮರಣದಲ್ಲಿ ಏಕಾಹವು ತನ್ನ ಮನೆಯಲ್ಲಿ ಮರಣವಾದರೆ “ತ್ರಿರಾತ್ರ"ವು. ತನ್ನ ಮರಣವಾದಲ್ಲಿ ಈ ಬಂಧುತ್ರಯದವರಿಗೂ ಇದರಂತೆಯೇ ಆಶೌಚವು- ಯಾಕೆಂದರೆ ಸಂಬಂಧವು ಸಮಾನವಾದದ್ದಾಗುವದು. ತಂದೆಯ ಅಕ್ಕ-ತಂಗಿಯರ ಪುತ್ರಿಯರೂ ಆತ್ಮ ಬಂಧುತ್ರಯದೊಳಗೆ ಬರುತ್ತಿದ್ದರೂ ಆ ಪುತ್ರಿಯರು ಈ ಬಂಧುತ್ರಯದವರ ಮರಣದಲ್ಲಿ “ಸ್ನಾನಮಾತ್ರ” ಮಾಡತಕ್ಕದ್ದೆಂದು ನಿರ್ಣಯಸಿಂಧ್ಯಾದಿಗಳ ಅಭಿಪ್ರಾಯವು. ಭಟ್ಟಿಮತದಲ್ಲಿಯಾದರೋ ಅವರಾದರೂ ಬಂಧುತ್ರಯ ಆಶೌಚವನ್ನು ತೆಗೆದುಕೊಳ್ಳತಕ್ಕದ್ದೆಂದು ಹೇಳಿದೆಯಾದರೂ ಅದಕ್ಕೆ ಬಹುಶಿಷ್ಟಾಚಾರವು ವಿರುದ್ಧವಾಗಿರುವದರಿಂದ ಅದು ಸರಿಯಲ್ಲವೆಂಬ ಸಿಂಧುವಿನ ಅಭಿಪ್ರಾಯವು ಯುಕ್ತವಾಗಿ ತೋರುತ್ತದೆ. ಪಿತೃಬಂಧುತ್ರಯದ ಮರಣದಲ್ಲಿ “ಪಿತೃಬಂಧುತ್ರಯ"ವೆಂದರೆ ತಂದೆಯ ತಂದೆಯ ಅಕ್ಕ-ತಂಗಿಯರ ಪುತ್ರರು, ತಂದೆಯ ತಾಯಿಯ ಅಕ್ಕತಂಗಿಯರ ಮಕ್ಕಳು, ತಂದೆಯ ಸೋದರಮಾವನ ಪುತ್ರರು ಇವರ ಮರಣದಲ್ಲಿ, ಮರಣಪಟ್ಟವರು ಉಪನೀತರಾಗಿದ್ದರೆ “ಪಕ್ಷಿಣಿ"ಯು, ಅನುಪನೀತ ಅಥವಾ ನಿರ್ಗುಣದವರಾಗಿದ್ದರೆ ಏಕಾಹ"ವು, ಸ್ವಗೃಹದಲ್ಲಿ ಮರಣವಾದರೆ “ತ್ರಿರಾತ್ರ"ವು ತನ್ನ ಮರಣದಲ್ಲಿ ಈ ಪಿತೃ ಬಂಧುತ್ರಯಕ್ಕೆ ಆಶೌಚವಿಲ್ಲ. ಯಾಕೆಂದರೆ ಅಂಥ ಸಂಬಂಧ ಅವರಿಗಿರುವದಿಲ್ಲ. ಮಾತೃ ಬಂಧುತ್ರಯ ಮರಣದಲ್ಲಿ “ಮಾತೃಬಂಧುತ್ರಯ"ವೆಂದರೆ - ತಾಯಿಯ ತಂದೆಯ ಅಕ್ಕತಂಗಿಯರ ಪುತ್ರರು, ತಾಯಿಯ ತಾಯಿಯ ಅಕ್ಕತಂಗಿಯರ ಪುತ್ರರು, ತಾಯಿಯ ಸೋದರಮಾವನ ಪುತ್ರರು ಇವರ ಮರಣದಲ್ಲಿ, ಉಪನೀತರಾಗಿದ್ದರೆ “ಪಕ್ಷಿಣೀ”, ಅನುಪನೀತ ಅಥವಾ ಗುಣರಹಿತರಾಗಿದ್ದರೆ “ಏಕಾಹ’ವು ಸ್ವಗೃಹದಲ್ಲಾದರೆ “ತ್ರಿರಾತ್ರ’ವು ತನ್ನ ಮರಣದಲ್ಲಿ ಮಾತೃ ಬಂಧುತ್ರಯಕ್ಕೆ ಆಶೌಚವಿಲ್ಲ. ಯಾಕೆಂದರೆ ಅಂಥ ಸಂಬಂಧವಿರುವದಿಲ್ಲ. ದತ್ತಕನ ಮರಣದಲ್ಲಿ ಜನಕ ತಾಯಿ ತಂದೆ ಮತ್ತು ದತ್ತಕ ತೆಗೆದುಕೊಂಡ ಮಾತಾ- ಪಿತೃಗಳು ಇವರಿಗೆ “ತ್ರಿರಾತ್ರ"ವು, ಸಪಿಂಡರಿಗೆ “ಏಕಾಹವು ನೀಲಕಂಠ ಪಂಡಿತರಿಂದ ರಚಿತವಾದ ೫೭೨ ಧರ್ಮಸಿಂಧು “ದತ್ತಕ ನಿರ್ಣಯ"ದಲ್ಲಿ . ಉಪನೀತನಾದ ದತ್ತಕನ ಮರಣದಲ್ಲಿ ಪಾಲಕ ಪಿತ್ರಾದಿ ಸಪಿಂಡರಿಗೆ ದಶಾಹಾದಿ ಆಶೌಚವಿದೆಯಂದೇ ಹೇಳಿದೆ. ಇದು “ಸಪಿಂಡ ಸಮಾನೋದಕರಿಗಿಂತ ಹೊರತಾದವನು ದತ್ತಕನಾದರೆ” ಎಂದು ಹೇಳಿದ್ದು. ಯಾಕೆಂದರೆ ಸಪಿಂಡ ಸಮಾನೋದಕರಲ್ಲೊಬ್ಬನು ದತ್ತಕನಾದರೆ ಯಥಾವತ್ತಾದ ಆಶೌಚವಿದೆಯೆಂದು ಹೊಸದಾಗಿ ಹೇಳಬೇಕಾಗಿಲ್ಲ. ದತ್ತಕನ ಪುತ್ರ ಪೌತ್ರಾದಿಗಳ ಜನನ-ಮರಣದಲ್ಲಿ ಪೂರ್ವಾಪರ ಸಪಿಂಡರಿಗೆ “ಏಕಾಹ"ವು. ಸಗೋತ್ರ, ಸಪಿಂಡ, ಸೋದಕರೊಳಗೊಬ್ಬನಾದ ದತ್ತಕನ ಮರಣದಲ್ಲಿ (ಸಗೋತ್ರ ಸಪಿಂಡರಾದರೆ “ದಶಾಹ” ಸೋದಕದತ್ತನಾದರೆ “ತ್ರಿರಾತ್ರ”) ದಶಾಹ, ತ್ರಿರಾತ್ರ ಮೊದಲಾದ ಯಥಾಪ್ರಾಪ್ತವಾದಂತೆ “ಆಶೌಚ"ವು. ತಂದೆಯ ಅಕ್ಕ ತಂಗಿ ಮೊದಲಾದವರ ಕನೈಯರ ಮರಣದಲ್ಲಿ, ಅವರು ವಿವಾಹಿತರಾಗಿದ್ದರೆ “ಏಕಾಹವು. ಅವಿವಾಹಿತರಾಗಿದ್ದರೆ “ಸ್ನಾನ ಮಾತ್ರ"ವೆಂದು ನಿರ್ಣಯಸಿಂಧುವಿನ ಅಭಿಪ್ರಾಯ. ನಾಗೋಜಿಭಟ್ಟರ ಮತದಲ್ಲಿ ವಿವಾಹಿತರ ಮರಣದಲ್ಲಿ “ಪಕ್ಷಿಣೀ”, ಅವಿವಾಹಿತರ ಮರಣದಲ್ಲಿ ಏಕಾಹವು ಇತ್ಯಾದಿ. ಆಚಾರ್ಯನ ಮರಣದಲ್ಲಿ ಆಚಾರ್ಯನೆಂದರೆ ಉಪನಯನ ಮಾಡಿ ವೇದಗಳನ್ನಭ್ಯಾಸ ಮಾಡಿಸಿದವನು ಮತ್ತು ಸ್ಮಾರ್ತಕರ್ಮಗಳನ್ನು ನೆರವೇರಿಸುವ ಪುರೋಹಿತನು “ಆಚಾರ್ಯ"ನೆನಿಸುವನು. ಇವನ ಮರಣದಲ್ಲಿ “ತ್ರಿರಾತ್ರ"ವು. ಗ್ರಾಮಾಂತರದಲ್ಲಿ ಮರಣವಾದರೆ “ಪಕ್ಷಿಣಿ"ಯು. ಆಚಾರ್ಯ ಪತ್ನಿ ಪುತ್ರರ ಮರಣದಲ್ಲಿ-ಏಕಾಹ"ವು. ಗುರು ಮರಣದಲ್ಲಿ - ಗುರುವು ಮಂತ್ರೋಪದೇಶಕನಾದರೆ “ತ್ರಿರಾತ್ರ’ವು ಗ್ರಾಮಾಂತರದಲ್ಲಿ ಮರಣವಾದರೆ “ಪಕ್ಷಿಣಿ"ಯು, ಎಲ್ಲ ವೇದಾಧ್ಯಾಪಕನಾದರೆ “ಪಕ್ಷಿಣಿ"ಯು ಅನೂಚಾನನ ಮರಣದಲ್ಲಿ ‘ಅನೂಚಾನ’ ಅಂದರೆ - ಶಾಸ್ತ್ರಗಳನ್ನಭ್ಯಾಸಮಾಡಿಸಿದವ ಮತ್ತು ವ್ಯಾಕರಣ ಜ್ಯೋತಿಃಶಾಸ್ತ್ರಾದಿ “ಅಂಗ"ಗಳನ್ನಭ್ಯಾಸ ಮಾಡಿಸಿದವ ಅನೂಚಾನನು. ಇವನ ಮರಣದಲ್ಲಿ ಏಕಾಹವು. ಉಪಾಧ್ಯಾಯನ ಮರಣದಲ್ಲಿ- ವೇದದ ಕಲ ಭಾಗಗಳನ್ನು ಕಲಿಸಿದವನು"ಉಪಾಧ್ಯಾಯನು. ಇವನ ಮರಣದಲ್ಲಿ ‘ಏಕಾಹ’ವು. ಸಹಾಧ್ಯಾಯಿಯ ಮರಣದಲ್ಲಿ ಕೂಡಿ ಅಧ್ಯಯನ ಮಾಡಿದ ಸಹಪಾಠಿಯ ಮರಣದಲ್ಲಿ ‘ಪಕ್ಷಿಣಿ’ಯು. ಶಿಷ್ಯನ ಮರಣದಲ್ಲಿ ಉಪನಯನ ಮಾಡಿ ಅಧ್ಯಯನಮಾಡಿಸಲ್ಪಟ್ಟವನು ‘ಶಿಷ್ಯ’ನು. ಇವನ ಮರಣದಲ್ಲಿ ಗುರುವಿಗೆ ‘ತ್ರಿರಾತ್ರ’ವು. ಅಧ್ಯಯನವು ಮುಗಿದಿದ್ದರೆ ‘ಪಕ್ಷಿಣಿ’ಯು. ಬೇರೆಯವನು ಉಪನಯನಮಾಡಿ ತಾನು ಬಹುಕಾಲ ಅಭ್ಯಾಸ ಮಾಡಿಸಿದ್ದರೆ ‘ಏಕಾಹ’ವು. ಪರಿಶಿಷ್ಟ - ೧ · 929 ಮರಣ ಹೊಂದಿದ ಋತ್ವಿಜರ ಮರಣದಲ್ಲಿ ಋತ್ವಿಜರ ಮರಣದಲ್ಲಿ ಋಜಕಾರ್ಯವು ಮುಗಿಯದಿದ್ದಾಗ ಮೃತನಾದರೆ ಯಜಮಾನನಿಗೆ ‘ತ್ರಿರಾತ್ರ’ವು. ಗ್ರಾಮಾಂತರದಲ್ಲಾದರೆ ‘ಪಕ್ಷಿಣಿ’ಯು, ಕರ್ಮಸಮಾಪ್ತಿಯಾಗಿದ್ದು ಒಂದೇ ಗ್ರಾಮದಲ್ಲಿ ಮೃತನಾದರೆ ‘ಪಕ್ಷಿಣಿ’ಯು. ಗ್ರಾಮಾಂತರದಲ್ಲಾದರೆ ‘ಏಕಾಹ’ವು. ಯಾಜನ ಮರಣದಲ್ಲಿ ಯಾಜ್ಯ ಅಂದರೆ ಕರ್ಮದಲ್ಲಿ ಯಜಮಾನನಾದವ. ಇವನ ಮರಣದಲ್ಲಿ ಋತ್ವಿಗಾದಿಗಳಿಗೆ ಋತ್ವಿಜನ ಮರಣದಂತೆಯೇ. ಪ್ರೋತ್ರಿಯನ ಮರಣದಲ್ಲಿ, ಅರ್ಥಸಹಿತವಾಗಿ ವೇದಾಧ್ಯಯನ ಮಾಡಿರುವವ, ಶೌತ ಸ್ಮಾರ್ತ ಕರ್ಮ ನಿಷ್ಠನಾದವನು ‘ಪ್ರೋತ್ರಿಯನು. ಇವನ ಮರಣದಲ್ಲಿ ಮಿತ್ರತ್ವ, ಹತ್ತರದಲ್ಲಿ ಮನೆಯಿರುವವ ಇತ್ಯಾದಿ ಸಂಬಂಧವುಳ್ಳವರಿಗೆ “ತ್ರಿರಾತ್ರ"ವು. ಇವುಗಳಾವದಾದರೊಂದೇ ಸಂಬಂಧವಿದ್ದಲ್ಲಿ “ಪಕ್ಷಿಣಿ"ಯು, ಸಂಬಂಧವಿಲ್ಲದಿದ್ದರೆ “ಏಕಾಹವು. ಸವರ್ಣಮಿತ್ರನ ಮರಣದಲ್ಲಿ-ಸಜಾತಿಯ ಮಿತ್ರನ ಮರಣದಲ್ಲಿ “ಏಕಾಹ ವು. ಯತಿಯ ಮರಣದಲ್ಲಿ ಎಲ್ಲ ಸಪಿಂಡರಿಗೆ “ಸ್ನಾನ ಮಾತ್ರ"ವು. ಅಸಪಿಂಡನ ಮರಣದಲ್ಲಿ ದಾಯಾದನಲ್ಲದ ಯಾವನೋ ಒಬ್ಬನು ತನ್ನಷ್ಟಕ್ಕೆ ತಾನು ಮನೆಯಲ್ಲಿದ್ದು ಮೃತನಾದರೆ ಮನೆಯವರಿಗೆ “ಏಕಾಹವು ತನ್ನ ಇಚ್ಛೆಯಿಂದ ಇಟ್ಟುಕೊಂಡ ಪರಕೀಯನು ತನ್ನ ಮನೆಯಲ್ಲಿ ಮೃತನಾದರೆ “ತ್ರಿರಾತ್ರ"ವು. ಆಶೌಚ ಪ್ರಯೋಜಕನ ಮರಣದಲ್ಲಿ ಯಾವದಾದರೊಂದು ದೂರದ ಸಂಬಂಧದಿಂದ ಅಲ್ಪ ಆಶೌಚಕ್ಕೆ ನಿಮಿತ್ತನಾದವನು “ಆಶೌಚ ಪ್ರಯೋಜಕನು. ಅವನ ಮರಣದಲ್ಲಿ, ಸ್ವಗೃಹದಲ್ಲಿ ಮರಣವಾದರೆ “ತ್ರಿರಾತ್ರ"ವು. ಇಲ್ಲಿ ಎಲ್ಲ ಕಡೆಗಳಲ್ಲಿ “ಸ್ವಗೃಹ” ಅಂದರೆ “ಆಶೌಚ ತೆಗೆದುಕೊಳ್ಳಬೇಕಾಗಿದ್ದವನ ಗೃಹ” ಎಂದು ತಿಳಿಯುವದು. ಗ್ರಾಮಾಧಿಪತಿ, ದೇಶಾಧಿಪತಿಗಳ ಮರಣದಲ್ಲಿ - “ಸಜ್ಯೋತಿ” ಆಶೌಚವು ಹಗಲಿನಲ್ಲಿ ಮರಣವಾದರೆ ರಾತ್ರಿ ಸ್ನಾನಾನಂತರ ಶುದ್ಧಿ, ರಾತ್ರಿಯಲ್ಲಾದರೆ ಹಗಲಿನಲ್ಲಿ ಸ್ನಾನಾನಂತರ ಶುದ್ಧಿ, ಇದಕ್ಕೆ “ಸಜ್ಯೋತಿಯನ್ನುವರು. ಗ್ರಾಮಮಧ್ಯದಲ್ಲಿ ಮರಣ ಎಲ್ಲಿಯವರೆಗೆ ಶವವು ಇರುವದೋ ಅಷ್ಟು ಕಾಲ ಗ್ರಾಮಾಶೌಚವು. ಗೋವು ಮೊದಲಾದ ಪಶುಗಳ ಮರಣದಲ್ಲಿ, ಎಲ್ಲಿವರೆಗೆ ಮನೆಯಲ್ಲಿ ಶವವಿರುವದೋ ಅಷ್ಟು ಕಾಲ ಗೃಹಾಶೌಚವು. ಧರ್ಮಸಿಂಧು ಬ್ರಾಹ್ಮಣನ ಮನೆಯಲ್ಲಿ ನಾಯಿಯ ಮರಣ- ಮನೆಯಲ್ಲಿ ನಾಯಿಯು ಮೃತವಾದರೆ ಮನೆಗೆ ದಶರಾತ್ರ ಆಶೌಚವು. ಬ್ರಾಹ್ಮಣನ ಮನೆಯಲ್ಲಿ ಶೂದ್ರನ ಮರಣ ಮನೆಯಲ್ಲಿ ಶೂದ್ರನು ಮೃತನಾದರೆ ಮನೆಗೆ ಒಂದು ತಿಂಗಳು ಆಶೌಚವು. ಬ್ರಾಹ್ಮಣನ ಮನೆಯಲ್ಲಿ ಶೂದ್ರನ ಮರಣ- ಮನೆಯಲ್ಲಿ ಶೂದ್ರನು ಮೃತನಾದರೆ ಮನೆಗೆ ಒಂದು ತಿಂಗಳು ಆಶೌಚವು. ಬ್ರಾಹ್ಮಣನ ಮನೆಯಲ್ಲಿ ಪತಿತನ ಮರಣ- ಮನೆಯಲ್ಲಿ ಪತಿತನು ಮರಣಪಟ್ಟರೆ ಎರಡು ತಿಂಗಳು ಆಶೌಚವು. ಬ್ರಾಹ್ಮಣನ ಮನೆಯಲ್ಲಿ ಮೇಂಛಾದಿಗಳ ಮರಣ ಇದರಲ್ಲಿ ಮನೆಗೆ ನಾಲ್ಕು ತಿಂಗಳು ಆಶೌಚವು. ಸ್ವಾಮಿ(ಒಡೆಯ)ಯ ಮರಣದಲ್ಲಿ ಮನೆಯ ಒಡೆಯನ ಮರಣವಾದರೆ ಮನೆಯಲ್ಲಿ ಹುಟ್ಟಿದ, ವಿಕ್ರಯಕ್ಕೆ ಪಡೆದ, ಋಣಭಾರದಿಂದ ಬಿಡಲ್ಪಟ್ಟ ಮತ್ತು ಆಕಸ್ಮಿಕವಾಗಿ ಲಬ್ಬನಾದ ಇತ್ಯಾದಿ “ದಾಸ"ರಿಗೆ ಆಯಾಯ ಜಾತ್ಯುಕ್ತ ಆಶೌಚವು. ಯುದ್ಧದಲ್ಲಿ ಮರಣವಾದಲ್ಲಿ - ಆಯುಧದ ಹೊಡೆತದಿಂದ ಕೂಡಲೇ ಮೃತನಾದಲ್ಲಿ ಸಪಿಂಡಾದಿಗಳಿಗೆ ಸ್ನಾನವು. ಹೊರತು ಆಶೌಚವಿಲ್ಲ. ದಶಾಹಾದಿ ಅಂತ್ಯಕರ್ಮವನ್ನು ಕೂಡಲೇ ಮುಗಿಸುವದು. ಯುದ್ಧದಲ್ಲಿಯ ಗಾಯದಿಂದ ಬೇರೆ ಕಾಲದಲ್ಲಿ ಮರಣವಾದರೆ “ಏಕಾಹ"ವು. ಮೂರು ದಿನಗಳ ನಂತರ ಯುದ್ಧದ ಗಾಯದಿಂದ ಮೃತನಾದರೆ ಅಥವಾ ಯುದ್ಧರಂಗದಿಂದ ಒಂಮುಖನಾಗಿ ಮೃತನಾದರೆ ಇಲ್ಲವೆ ಕಪಟದಿಂದ ಹತನಾದರೆ “ತ್ರಿರಾತ್ರ"ವು. ಯುದ್ಧದ ಆಘಾತದಿಂದ ಏಳು ದಿನಗಳ ನಂತರ ಮೃತನಾದರೆ “ದಶಾಹ” ಎಂದು ಹೇಳುವರು. ಆದರೆ ಯುದ್ಧದಲ್ಲಿ ಹತನಾದವನ “ಸದೃಶೌಚ"ವನ್ನು ಲೋಕದಲ್ಲಿ ಮನ್ನಿಸದಿರುವದರಿಂದ ಶಿಷ್ಟರು ಅನುಮತಿಸುವದಿಲ್ಲ. ಅಂದರೆ ಸದ್ಯಃಶೌಚ ಆಚಾರವಿರುವದಿಲ್ಲ. ಪ್ರಯಾಗಾದಿಗಳಲ್ಲಿ ಮರಣ ಪ್ರಯಾಗ ಮೊದಲಾದ ತೀರ್ಥದಲ್ಲಿ ಕಾಮ್ಯವಾಗಿ ಮರಣಹೊಂದಿದರೆ ಜ್ಞಾತಿಗಳಿಗೆ “ಸ್ನಾನ ಮಾತ್ರ”. ಪ್ರಾಯಶ್ಚಿತಾರ್ಥವಾಗಿ ಅಗಾದಿಗಳಲ್ಲಿ ಮರಣಹೊಂದಿದರೆ “ಏಕಾಹ"ವು. ಮಹಾರೋಗದಿಂದುಂಟಾದ ಪೀಡೆಯನ್ನು ಸಹಿಸಲಾರದ ಜಲಾದಿಗಳಲ್ಲಿ ಬಿದ್ದು ಮರಣಹೊಂದಿದರೆ “ತ್ರಿರಾತ್ರ"ವು. ಇದಕ್ಕಾದರೂ ಶಿಷ್ಯರು ಸಮ್ಮತಿಸುವದಿಲ್ಲ. ಕಾರಾಗೃಹದಲ್ಲಿ ಮರಣ- ಮರಣಹೊಂದಿದವನ ಆಶೌಚವನ್ನು “ಏಕರಾತ್ರ"ವಾಗಿ ತೆಗೆದುಕೊಳ್ಳುವದು ಎಂದಿದ್ದರೂ ಶಿಷ್ಟಾಚಾರವಿಲ್ಲ. ಪರಿಶಿಷ್ಟ

  • O ೫೭೫ ಸಪಿಂಡರ ಮರಣದಲ್ಲಿ ಏಳುತಲೆಮಾರಿನ ದಾಯಾದಿಗಳಲ್ಲಿ ಉಪನಯನವಾದ ನಂತರ ಮರಣ ಹೊಂದಿದವರ ಆಶೌಚವನ್ನು ಎಲ್ಲ ಸಪಿಂಡರೂ “ದಶಾಹ” ತೆಗೆದುಕೊಳ್ಳುವದು. ದತ್ತಕನಾದರೋ, ಪೂರ್ವಾಪರ (ಜನಕ, ಪಾಲಕ ಕುಲದ) ಸಪಿಂಡರ ಮರಣದಲ್ಲಿ “ಏಕಾಹ ಆಶೌಚವನ್ನು ತೆಗೆದುಕೊಳ್ಳತಕ್ಕದ್ದು. ಬ್ರಹ್ಮಚಾರಿಯು ಸಮಾವರ್ತನೆಯ ನಂತರ ಬ್ರಹ್ಮಚರ್ಯವ್ರತಕಾಲದಲ್ಲಿ ಮೃತರಾದ ಸಪಿಂಡರ ಆಶೌಚವನ್ನು “ತ್ರಿದಿನ ತೆಗೆದುಕೊಳ್ಳುವದು. ಒಂದೇ ದೇಶದೊಳಗಾದ ಸಪಿಂಡರ ಮರಣದಲ್ಲಿ ಒಂದೇ ದೇಶದೊಳಗೆ ದಶಾಹಾನಂತರ ಸಪಿಂಡರ ಮರಣವು ಜ್ಞಾತವಾದರೆ ಅದು ಮೂರು ತಿಂಗಳೊಳಗಾದರೆ “ತ್ರಿರಾತ್ರ"ವು ಆರು ತಿಂಗಳೊಳಗಾದರೆ “ಪಕ್ಷಿಣಿ"ಯು. ಒಂಭತ್ತು ತಿಂಗಳೊಳಗಾದರೆ “ಏಕರಾತ್ರ’ವು ನಂತರ ವರ್ಷದೊಳಗಾದರೆ ಸಜ್ಯೋತಿಯು. ಅಥವಾ ಸ್ನಾನ ಮಾತ್ರವು. ಮಾಧವ ಮತದಂತೆ ಮೂರು ಪಕ್ಷ ಪರ್ಯಂತ ತ್ರಿರಾತ್ರವು. ಆರು ತಿಂಗಳ ಪರ್ಯಂತ ಪಕ್ಷಿಣೀ, ವರ್ಷ ಪರ್ಯಂತ ಏಕರಾತ್ರವು, ವರ್ಷದ ನಂತರ “ಸ್ನಾನಮಾತ್ರ” ಎಂದು ಹೇಳಿದೆ. ಆಪತ್ತು, ಅನಾಪತ್ತುಗಳನ್ನು ನೋಡಿಕೊಂಡು ಆಚರಿಸುವದು. ದೇಶಾಂತರದಲ್ಲಿ ಸಪಿಂಡರ ಮರಣ ದೇಶಾಂತರ ಪ್ರಮಾಣವನ್ನು ಹಿಂದೆಯೇ ಹೇಳಿದ. ದಶಾಹದ ನಂತರ ಸಪಿಂಡರು ಮೃತರಾದ ಸಂಗತಿಯು ತಿಳಿದಾಗ ಮೂರುಪಕ್ಷದ ಒಳಗೆ “ತ್ರಿರಾತ್ರ"ವು ಆರು ತಿಂಗಳ ಪರ್ಯಂತ “ಪಕ್ಷಿಣೀ”, ನವಮಾಸ ಪರ್ಯಂತ “ಏಕಾಹ"ವು. ವರ್ಷ ಪರ್ಯಂತ"ಸಜ್ಯೋತಿಯು. ಹೀಗೆ ಮಾಧವ ಮತವು ವಿಜ್ಞಾನೇಶ್ವರನಾದರೋ -ದೇಶಾಂತರದಲ್ಲಿ ಸಪಿಂಡರ ಮರಣವಾದರೆ, ಅದು ಹತ್ತು ದಿನಗಳ ನಂತರ ತಿಳಿದರೆ “ಸ್ನಾನ ಮಾತ್ರ” ಎಂದು ಹೇಳಿರುವನು. ಇಲ್ಲಿ ಮಾಧವ ಮತವೇ ಯುಕ್ತವು. ೫೭೬ ಪರಿಶಿಷ್ಟ - ೨ “ಏಕಾದಶೀ ನಿರ್ಣಯ ಪಟ್ಟಿಕೆ ಇಲ್ಲಿ ನ್ಯೂನತ್ವ” ಅಂದರೆ ಸೂರ್ಯೋದಯಕ್ಕಿಂತ ಮೊದಲು ಮುಗಿಯುವಿಕೆ, “ಸಮತ್ವ” ಅಂದರೆ ಸೂರ್ಯೋದಯ ಸಮಯ ಮುಗಿಯುವಿಕೆ. ಅರವತ್ತು ಘಟೀ ರೂಪವಾದದ್ದು. “ಆಧಿಕ್ಯ” ಅಂದರೆ ಸೂರ್ಯೋದಯದ ನಂತರ ಇರುವಿಕೆ. ಕೋಷ್ಟಕ = ೧ ವೈಷ್ಣವರ - ಶುದ್ಧಿಕಾದಶೀ ಭೇದಗಳು ಪರಿಶಿಷ್ಟ - ೨ JE O 990 O O O O 9905 ವಿವರಣೆ ಇದು ಉಭಯಾಧಿಕ್ಕವುಳ್ಳ ಶುದ್ಧವಾದದ್ದು. ವೈಷ್ಣ‌ ವರು ಮತ್ತು ಸ್ಮಾರ್ತರು ಈ ಏಕಾದಶಿಯಲ್ಲಿ ಉಪವಾಸ ಮಾಡುವದು. ಇದು ಉಭಯಾಧಿಕ್ಕವುಳ್ಳ ಶುದ್ಧ ಏಕಾದಶೀ, ವೈಷ್ಣವ ಮತ್ತು ಸ್ಮಾರ್ತರ ಉಪವಾಸ. ಇದು ಶುದ್ಧಾ ದ್ವಾದಶೀ ಮಾತ್ರಾಧಿಕಾ, ಇಲ್ಲಿ ವೈಷ್ಣ ವರು ದ್ವಾದಶಿಯಲ್ಲೂ ಸ್ಮಾರ್ತರು ಪೂರ್ವದಿನದಲ್ಲಿಯೂ ಉಪವಾಸ ಮಾಡುವದು. ಇದು ಅನುಭಯಾಧಿಕ ಶುದ್ಧ. ವೈಷ್ಣವ ಹಾಗೂ ಸ್ಮಾರ್ತರಿಗೆ ಏಕಾದಶಿಯಲ್ಲು ಪವಾಸ ಇದೂ ಅನುಭಯಾಧಿಕ ಶುದ್ಧ. ಸ್ಮಾರ್ತ, ವೈಷ್ಣವರಿಗೆ ಏಕಾದಶಿಯಲ್ಲುಪವಾಸ, ಇದು ಶುದ್ಧದ್ವಾದಶೀ ಮಾತ್ರಾಧಿಕ ಶುದ್ಧ, ವೈಷ್ಣವರಿಗೆ ಪರ, ಸ್ಮಾರ್ತರಿಗೆ ಪೂರ್ವ ಉಪವಾಸ. ಇದು ಏಕಾದಶೀ ಮಾತ್ರಾಧಿಕ ಶುದ್ಧ, ವೈಷ್ಣವರಿಗೆ ದಶಮಿ ವಿಷಯ ಶುದ್ಧಮ್ಮನಾ ನ್ಯೂನದ್ವಾದಶಿಕಾ ** ಏಕಾದ ದ್ವಾರ . ಉದಾಹರಣ E 922 O 292 Sabe ಶುದ್ಧಟ್ಯೂನಾ ಸಮದ್ವಾದಶಿಕಾ Ж ೬೦ ಉದಾ ਸਰਸ O

O 2905 ಶುದ್ಧಟ್ಯೂನಾ ಅಧಿಕ ದ್ವಾದಶಿಕಾ goog 距 లుదా O O ಶುದ್ಧಸಮಾ ನ್ಯೂನಾದಶಿಕಾ 9999 O ಉದಾ 9999 992 ಶುದ್ಧ ಸಮಾ ಸಮದ್ವಾದಶಿಕಾ ಶುದ್ಧಸಮಾ ಅಧಿಕ ದ್ವಾದಶಿಕಾ 90 ಉದಾ 982 O O O 995 HE LO ಉದಾ 2009 IRS ಶುದ್ಧಾಧಿಕಾ ನ್ಯೂನಾರುಕ 距 0. C 9822 ವಿಷಯ ರ ಪ. ว่ ಉದ O FER ಉದಾ O ೫೭೮ ಏಕಾದ CC C *. ದ್ವಾದಶೀ 13 Hes O ವೈಷ್ಣವರ ವಿದೈಕಾದಶೀ ಭೇದಗಳು Hes ಏಕಾದಶೀ O HE ದ್ವಾದಶೀ ೦ ೦ C C ವಿವರಣೆ ಪರ, ಸ್ಮಾರ್ತರಿಗೆ ಪೂರ್ವ ಉಪೋಷ್ಯ. ಇದೂ ಏಕಾದಶೀಮಾತ್ರಾಧಿಕ ಶುದ್ಧ. ವೈಷ್ಣವರಿಗೆ ಪರ ಸ್ಮಾರ್ತರಿಗೆ ಪೂರ್ವ ಉಪೋಷ. ಇದು ಶುದ್ಧ ಉಭಯಾಧಿಕ್ಯವುಳ್ಳದ್ದು. ವೈಷ್ಣವ, ಸ್ಮಾರ್ತರಿಗೆಲ್ಲ ಪರವೇ ಉಪೋಷ, ವಿವರಣೆ ಇದು ಉಭಯಾಧಿಕ್ಯವುಳ್ಳ ವಿದ್ದಾ. ಇಲ್ಲಿ ಸ್ಮಾರ್ತ- ರಿಗೆ ಏಕಾದಶಿಯಲ್ಲೇ ಉಪವಾಸ ಹೊರತು ದ್ವಾದಶಿಯಲ್ಲಲ್ಲ, ವೈಷ್ಣವರಿಗಾದರೋ ವಿದ್ಧವಾದ ಕಾರಣ ದ್ವಾದಶಿಯಲ್ಲು ಪವಾಸವು ಇದಾದರೂ ಅನುಭಯಾಧಿಕ್ಯವತೀ ವಿದ್ದಾ. ಸ್ಮಾರ್ತರಿಗೆ ಏಕಾದಶಿಯಲ್ಲಿ, ವೈಷ್ಣವರಿಗೆ ದ್ವಾದಶಿಯಲ್ಲು ಪವಾಸವು ಇದು ದ್ವಾದಶೀಮಾತ್ರಾಧಿಕ ವಿದ್ಧಾ, ಸ್ಮಾರ್ತರಿಗೆ ಏಕಾದಶಿಯಲುಪವಾಸವೆಂದು ಮಾಧವಮತ, ಹೇಮಾದ್ರಿಯ ಮತದಂತೆ ಎಲ್ಲರಿಗೂ ಪರದಲ್ಲು ಪವಾಸವು ಮಮುಕ್ಷು ಸ್ಮಾರ್ತರಿಗೆ ಪರದಲ್ಲಿ ಎಂದು ಕೇಚಿನ್ಮತ, ಇದು ಅನುಭಯಾಧಿಕ್ಯವತಿ ವಿದ್ದಾ. ಸ್ಮಾರ್ತರಿಗೆ ಏಕಾದಶಿ, ವೈಷ್ಣವರಿಗೆ ದ್ವಾದಶಿಯಲ್ಲುಪವಾಸವು भ ಉದಾ O ಶುದ್ಧಾಧಿಕಾ ಸಮದ್ವಾದಶಿಕಾ ಶುದ್ರಾಧಿಕಾ ಅಧಿಕಾದಶಿಕಾ ಕೋಷ್ಟಕ -೨ ದಶಮಿ ವಿದ್ದ ನ್ಯೂನದ್ವಾದಶಿಕಾ O E ಉದಾ 992 2405 O ವಿದ್ಧನ್ಯೂನಾ ಸಮದ್ವಾದಶಿಕಾ H ಉದಾ 222 ವಿನ್ಯೂನಾ ಅಧಿಕಾದಶಿಕಾ ಉದಾ COCO ವಿದ್ದಸಮಾ ನ್ಯೂನದ್ವಾದಶಿಕಾ gob ಉದಾ 292 CO ಧರ್ಮಸಿಂಧು ಉದಾ 212 ವಿದ್ಧಸಮಾ ಸಮದ್ವಾದಶಿಕಾ ವಿದ್ದ ಸಮಾ ಅಧಿಕ ದ್ವಾದಶಿಕಾ ದಶಮಿ C O ಏಕಾದಶೀ と。 O 2005 ಉದಾ 2995 O ವಿದ್ಧಾಧಿಕ ನ್ಯೂನದ್ವಾದಶಿಕಾ ಉದಾ 2Res C ಉದಾ 2005 ವಿದ್ಯಾಧಿಕ ಸಮದ್ವಾದಶಿಕಾ ವಿದ್ಯಾಧಿಕಾ ಅಧಿಕಾದಶಿಕಾ ಉದಾ HE Sabe ದ್ವಾದಶೀ ವಿವರಣೆ ಪರಿಶಿಷ್ಟ - ೨ Lo O ೫೮ ಕ್ಷಯ Sabe ಇದೂ ಅನುಭಯಾಧಿಕ್ಯವತೀ ವಿದ್ದಾ. ಸ್ಮಾರ್ತರಿಗೆ ಏಕಾದಶಿ, ವೈಷ್ಣವರಿಗೆ ದ್ವಾದಶಿಯಲ್ಲು ಪವಾಸವು ಇದು ದ್ವಾದಶೀಮಾತ್ರಾಧಿಕ ವಿದ್ದಾ. ಇಲ್ಲಿ ಸ್ಮಾತರಿಗೆ ಏಕಾದಶಿಯಲ್ಲಿಂದು ಮಾಧವಮತ, ಹೇಮಾದ್ರಿಮತದಂತ ಸರ್ವರಿಗೂ ಪರದಿನ ಮುಮುಕ್ಷಸ್ಮಾರ್ತರಿಗೆ ಪರವೆಂದು ಕೇಚಿನ್ಮತವ ಇದು ಏಕಾದಶೀಮಾತ್ರಾಧಿಕ ವಿದ್ಧಾ, ಸ್ಮಾರ್ತಗೃಹಸ್ಥ ರಿಗೆ ಪೂರ್ವಯತಿ, ನಿಷ್ಕಾಮ ಸ್ಮಾರ್ತಗೃಹಸ್ಥ, ವಾನಪ್ರಸ್ಥ, ವಿಧವಾ, ವೈಷ್ಣವ ಇವರಿಗೆ ಪರದಲ್ಲು ಪೋಷವು, ವಿಷ್ಣು ಪ್ರೀತಿಕಾಮ ಸ್ಮಾರ್ತರಿಗೆ ಎರಡೂ ದಿನ ಉಪವಾಸವೆಂದು ಕೆಲವರು ಹೇಳುವರು. ಇದಾದರೂ ಮೇಲಿನಂತೆಯೇ.

ಇದು ಉಭಯಾಧಿಕ್ಯವತಿ ವಿದ್ದಾ. ಇಲ್ಲಿ ಸರ್ವಸ್ಮಾರ್ತ ವೈಷ್ಣವರೂ ಅವಶಿಷ್ಟವಾದ ಪರದಲ್ಲಿಯೇ ಉಪವಾಸ ಮಾಡುವದು. O C C ი ೫೭೯ ಸ್ಮಾರ್ತರ ಶುದ್ಧಕಾದಶೀ ಭೇದಗಳು HE Sabe ಏಕಾದಶೀ ದಾರ ಶುದ್ಧನ ನ್ಯೂನಾದಶಿಕಾ E *2 O O ಶುದ್ಧನಾ ಸಮದ್ವಾದಶಿಕಾ SRE 292 O O 2005 O ಶುದ್ಧನಾ ಅಧಿಕ ದ್ವಾದಶಿಕಾ ಉದಾ 2905 O ಶುದ್ಧ ಸಮಾ ನ್ಯೂನಾದಶಿಕಾ ಉದಾ 992 O 2005 ಶುದ್ಧ ಸಮಾ ಸಮ ದ್ವಾದಶಿಕಾ ಉದಾ 222 O ಶುದ್ದ ಸಮಾ ಅಧಿಕ ದ್ವಾದಶಿಕಾ ಉದಾ O 90€ E HE 20 20 O ವಿವರಣೆ ಅನುಭಯಾಧಿಕ್ಯವತೀ ಶುದ್ಧಾ, ಸ್ಮಾರ್ತರಿಗೆ ಏಕಾದಶಿಯಲ್ಲಿ ಉಪವಾಸವು, ವೈಷ್ಣವರಿಗೆ ದ್ವಾದಶಿಯಲ್ಲು ಪವಾಸವು ಇದೂ ಸಹ ಮೇಲೆ ಬರದಂತೆಯೇ. ಇದು ದ್ವಾದಶೀಮಾತ್ರಾಧಿಕಾ ಶುದ್ಧಾ, ಸ್ಮಾರ್ತರಿಗೆ ಏಕಾದಶಿಯು ಉಪೋಷ್ಯ ಎಂದು ಮಾಧವ ಮತ. ಹೇಮಾದ್ರಿಮತದಂತೆ ಸರ್ವರಿಗೂ ಪರವಾದ ದ್ವಾದಶಿಯು ಉಪೋ, ಮೋಕ್ಷೇಚ್ಚು ಸ್ಮಾರ್ತರಿಗೆ ಪರದಲ್ಲಿ ಉಪವಾಸವೆಂದು ಕೆಲವರ ಮತವು ಇದು ಅನುಭಯಾಧಿಕ್ಯವತೀ ಶುದ್ಧಾ. ಇಲ್ಲಿ ಸ್ಮಾರ್ತ ರಿಗೆ ಏಕಾದಶಿ, ವೈಷ್ಣವರಿಗೆ ದ್ವಾದಶಿ ಉಪೋಷ್ಯ, ಇದಾದರೂ ಮೇಲಿನಂತೆಯೇ. ಇದು ದ್ವಾದಶೀಮಾತ್ರಾಧಿಕಾ ಶುದ್ಧಾ, ಸ್ಮಾರ್ತರಿಗೆ ಏಕಾದಶಿಯಲ್ಲಿ ಎಂದು ಮಾಧವ ಮತವು. ಹೇಮಾದ್ರಿಯಂತೆ ಸರ್ವರಿಗೂ ಪರದ್ವಾದಶಿಯಲ್ಲಿ. ಮುಮುಕ್ಷು ಸ್ಮಾರ್ತರಿಗೂ ಸಹ ಎಂದು ಕೆಲವರ ಮತ. ಧರ್ಮಸಿಂಧುಪರಿಶಿಷ್ಟ - ೨ ಶುದ್ಧಾಧಿಕಾ ನ್ಯೂನದ್ವಾದಶಿಕಾ ಶುದ್ಧಾಧಿಕಾ ಸಮದ್ವಾದಶಿಕಾ ಶುದ್ಧಾಧಿಕಾ ಅಧಿಕ ದ್ವಾದಶಿಕಾ O ಉದಾ Sabe E ಉದಾ O 6 6 6 6 6 8 ಏಕಾದಶೀ O C ದ್ವಾದಶೀ E 94e5 2005 Joes ವಿವರಣೆ ಇದು ಶುದ್ಧಾ ಏಕಾದಶೀ ಮಾತ್ರಾಧಿಕಾ, ಸ್ಮಾರ್ತಗೃಹಸ್ಥರಿಗೆ ಕ್ಷಯ/ ಪೂರ್ವ, ಯತಿ ವೈಷ್ಣವಾದಿಗಳಿಗೆ ಪರವು ಉಪೋಷ್ಯ. ಇದಾದರೂ ಮೇಲೆ ಬರೆದಂತೆಯೇ. 9985 ಕ್ಷಯ ಇದು ಉಭಯಾಧಿಕ್ಯವತೀ ಶುದ್ಧಾ, ಇಲ್ಲಿ ಸ್ಮಾರ್ತ, ವೈಷ್ಣವರೆಲ್ಲವರೂ ಪರವಾದ ಏಕಾದಶಿಯಲ್ಲಿಯೇ ಉಪವಾಸ ಮಾಡುವದು. ಸ್ಮಾರ್ತರ ವಿದ್ದಕಾದಶೀ ಭೇದಗಳು ದಶಮಿ ದ್ವಾದಶೀ E 995 E F 驰 ಕ್ಷಯ 999 ವಿದ್ಧನ್ಯೂನಾ ಸಮುದ್ದಾದಶಿಕಾ LO 距 99es ಉದಾ 驰 ಕ್ಷಯ 939 ವಿದ್ಧಕ್ಕೂನಾ ಅಧಿಕಾದಶಿಕಾ F 9925 20 ಉದಾ ವಿರಸಮಾನನಾ ದ್ವಾದಶಿಕಾ ಉ ವಿರಸಮಾ ಸಮಾದುಕಾ LO ಉ O 929 E 9RE 蹬 O ವಿವರಣೆ ಇದು ಅನುಭಯಾಧಿಕ ವಿದ್ದಾ, ಸ್ಮಾರ್ತರಿಗೆ ಏಕಾದಶಿ ವೈಷ್ಣವರಿಗೆ ದ್ವಾದಶಿಯಲ್ಲಿ ಉಪವಾಸ. ಇದಾದರೂ ಮೇಲಿನಂತೆಯೇ. ಇದು ದ್ವಾದಶೀಮಾತ್ರಾಧಿಕ ವಿಲ್ಲಾ. ಸ್ಮಾರ್ತರಿಗಾದರೂ ದ್ವಾದಶಿಯಲ್ಲೇ ಉಪವಾಸವು ಇದು ಅನುಭಯಾಧಿಕ್ಯವ ವಿದ್ದಾ. ಇಲ್ಲಿ ಸ್ಮಾರ್ತರಿಗೆ ಏಕಾದಶೀ, ವೈಷ್ಣವರಿಗೆ ದ್ವಾದಶಿಯಲ್ಲುಪವಾಸ. ಇದಾದರೂ ಮೇಲಿನಂತೆಯೇ ೫೮೧ ರಶ LO LC SE ಸಿದ್ದ ಸಮಾ ಅಧಿಕ ದ್ವಾದಶಿಕಾ ಪದಾಧಿಕಾ ನ್ಯೂನವಾದುಕಾ ವಿದ್ಯಾ ಧಿಕಾ ಸಮದ್ರಾವಶಿಕಾ ವಿದ್ಯಾಧಿಕಾ ಅಧಿಕ ದ್ವಾದಶಿಕಾ Sou C O 6 C O C 0 C ಕಾರ ŁO â O ದ್ವಾದಶೀ O ವಿವರಣೆ ಇದು ದ್ವಾದಶೀಮಾತ್ರಾಧಿಕ್ಯವತಿ ವಿದ್ದಾ. ಸ್ಮಾರ್ತ ರಿಗೂ ದ್ವಾದಶಿಯಲ್ಲೇ ಉಪವಾಸ, ಇದು ದ್ವಾದಶೀಮಾತ್ರಾಧಿಕ ವಿದ್ದಾ. ಇಲ್ಲಿ ಸ್ಮಾರ್ತ ಕೈಯ ಗೃಹಸ್ಥರಿಗೆ ಪೂರ್ವ, ಯತ್ಯಾದಿ ವೈಷ್ಣವರಿಗೆ ಪರ, ವಿಷ್ಣು ಪ್ರೀತಿಕಾಮರಿಗೆ ಎರಡೂದಿನ ಉಪೋಷ್ಯ. ಕ್ಷಯ C O ಇದಾದರೂ ಮೇಲಿನಂತೆಯೇ. ಇದು ಉಭಯಾಧಿಕ್ಯವತೀ ವಿದ್ದಾ. ಇಲ್ಲಿ ಸರ್ವ ಸ್ಮಾರ್ತ-ವೈಷ್ಣವರಿಗೆ ಪರದಲ್ಲಿ ಉಪವಾಸ. C O C

  • 5 ಕೆ ಕೆ ಧರ್ಮಸಿಂಧು ಪರಿಶಿಷ್ಟ - ೩ ಪಾರಿಭಾಷಿಕ ಪದಕೋಶ ‘ಧರ್ಮಸಿಂಧು’ವಿನಲ್ಲಿ ಬಂದ ಪಾರಿಭಾಷಿಕ ಪದಗಳಿಗೆ ಕನ್ನಡ ಅರ್ಥ ವಿವರಣೆ ಒದಗಿಸುವ ಅನುವಾದಕರ ಆಶಯವನ್ನು ಈ ಸಲದ ಮುದ್ರಣದಲ್ಲಿ ಈಡೇರಿಸಲಾಗಿದೆ. ಈ ಕಾವ್ಯದಲ್ಲಿ ಸಹಕರಿಸಿದ ವಿದ್ವಾನ್ ವೇದಮೂರ್ತಿ ನಾರಾಯಣಭಟ್ಟ ಕಡೇಮನೆ ಇವರಿಗೆ ಮತ್ತು ಮುದ್ರಣ ಪ್ರತಿಗಳನ್ನು ಒದಗಿಸಿದ ವೇ.ಮೂ ಶಿವರಾಮ ಭಟ್ಟ, ಪ್ರಧಾನ ಅರ್ಚಕರು ಇಡಗುಂಜಿ, ಶ್ರೀ ಎಂ.ವಿ. ಯಾಜಿ, ಸಾಲೇಬೈಲು, ಶ್ರೀ ಗಣೇಶ ಪಂಡಿತ ಇವರುಗಳಿಗೆ ಕೃತಜ್ಞತೆಗಳು. -ಗಂಗಾಧರ ಶಾಸ್ತ್ರೀ ನಾಜಗಾರ ಅಪರಾಹ್ನ ಅಧಿಕಮಾಸ ಅನನ್ಯ ಗತಿಕ ಅಯಾಚಿತ ಅನಾಧಾನ ಅಯಾತಯಾಮ ಅಪ್ರೌಕರಣ ಶ್ರಾದ್ಧ ಅವಿಧವಾನವಮಿ ಅನುಕಲ್ಪ ಅಪರಾಜಿತಾಪೂಜಾ ಅವಧಾನ ಧರ್ಮ ಧರ್ಮಸಿಂಧು – ಪಾರಿಭಾಷಿಕ ಪದಕೋಶ ಅಆ ಕಾರಗಳು ದಿನದ ಐದು ಭಾಗಗಳಲ್ಲಿಯ ನಾಲ್ಕನೇ ಭಾಗ ಸಂಕ್ರಾಂತಿ ಬಾರದೇ ಇದ್ದ ಚಾಂದ್ರಮಾಸ ಮಾಡಲೇಬೇಕಾದ ಅನಿವಾರ್ಯತೆ ಬೇರೆಯವರಲ್ಲಿ ಯಾಚಿಸದ ಆತಿಥ್ಯ ಭೋಜನ ಪಕ್ಷಾಂತದಲ್ಲಿ ಉಪವಾಸವಿದ್ದು ಅನುಸರಿಸಬೇಕಾದ ಕರ್ಮವಿಶೇಷ ಕಡದ ಇರುವದು. ಹೋಮಸಹಿತ ಶ್ರಾದ್ಧ ಮಹಾಲಯ ಪಕ್ಷ ನವಮಿ ಪಠ್ಯಾಯ ವ್ಯವಸ್ಥೆ (ಉದಾ- ನವರಾತ್ರಿ ಪೂರ್ಣ ವ್ರತ ಆಚರಿಸಲಾಗದ ಸಂದರ್ಭ 7, 5, 3, 1 ದಿವಸ ಆಚರಿಸುವದು) ವಿಜಯ ದಶಮಿಯಂದು ಗ್ರಾಮದ ಈಶಾನ್ಯದಿಕ್ಕಿನಲ್ಲಿ ಸಲ್ಲಿಸುವ ವಿಶೇಷ ಪೂಜಾಕ್ರಮ. ಹೋಮಕ್ಕಾಗಿ ಒಂದೇ ಮಂತ್ರವನ್ನು ಎರಡಾವರ್ತಿ ಅಥವಾ ಎರಡು ಪ್ರತ್ಯೇಕ ಮಂತ್ರಗಳ ಮಧ್ಯ’ಓಂ’ ಕಾರವನ್ನು ಪುತವಾಗಿ R ೫೮೪ ಪರಿಶಿಷ್ಟ - ೩ ಅರ್ಕವಿವಾಹ ಅಹತ: ಅಭಿವಾದನ ಅಗ್ನಿದತ್ತಾ ಅನನ್ಯ ಪೂರೈಕಾ ಅಭ್ಯುದಯ ಕರ್ಮ ಅತಿಚಾರ ಅರ್ಥ ಅಗ್ರವಿಧಿಷ್ಟು ಅಧಿವೇದನ ಅಗ್ನಿ ಸಮಾರೋಪ ಅಗ್ನಿ ಉಪಘಾತ ಅಗ್ನಿ ಅಧಾನ ಅಪಸವ್ಯ ಅಸಂಸೃಷ್ಟ ಅನುಕಲ್ಪ ಅಸಂಚಯನ ಅಮಾನ್ನ ಆನಂದಯೋಗ ಆದರ ಆಶೌಚಸಂಪಾತ ಉಪವಾರ ಉಲಿನೀ

ಸೇರಿಸುವದು. 3ನೇ ವಿವಾಹ ದೋಷ ನಿವಾರಣೆಗೆ ಎಕ್ಕೆಗಿಡದೊಂದಿಗೆ (3ನೇ) ವಿವಾಹ ಮಾಡುವದು. ಬೇರೆ ಉದ್ದೇಶಕ್ಕೆ ಬಳಸಿರದ ಹೊಸ ಬಿಳೇ ವಸ್ತ್ರ, ವಿಧ್ಯುಕ್ತ ವಿಧಾನದಲ್ಲಿ ಮಾಡುವ ನಮಸ್ಕಾರ. ಅಗ್ನಿಯನ್ನು ಪ್ರಮಾಣೀಕರಿಸಿ ಬೇರೆಯವರಿಗೆ ಮಾತುಕೊಟ್ಟವಳು. ಅನ್ಯ ಪುರುಷರಲ್ಲಿ ಮನಸ್ಸಿಡದ, ಅಗ್ನಿಸಾಕ್ಷಿ ವಚನ ಕೊಡದ, ಸಪ್ತಪದಿ ತುಳಿಯದ, ಭೋಗಿಸಲ್ಪಡದ, ಗರ್ಭವತಿಯಲ್ಲದ ಹರಯದ ಸ್ತ್ರೀ, ನಾಂದೀಸಮಾರಾಧನ ಪೂರೈಕ ಮಾಡುವ ಮಂಗಲ ಕಾರ್ಯ, ಗುರುಗ್ರಹವು ಒಂದು ರಾಶಿಯಲ್ಲಿ ಅತಿ ಶೀಘ್ರ ಕ್ರಮಿಸುವದು. ವರನಿಂದ ಗೋವನ್ನು ಪಡೆದು ಮಾಡುವ ವಿವಾಹ. ಅವಿವಾಹಿತಳ ವಿವಾಹಿತ ತಂಗಿ. ಪ್ರತಿಕೂಲ ಪತ್ನಿಯನ್ನು ಬಿಟ್ಟು ಬೇರೆ ಮದುವೆ ಆಗುವದು. ಸಮಿಧವನ್ನು ಕಾಯಿಸಿ ಅಗ್ನಿಯನ್ನು ಆಹ್ವಾನಿಸಿ ಇಡುವದು. ಹೋಮಾಗ್ನಿಗೆ ನಾಯಿ, ಕಾಗ ಇತ್ಯಾದಿ ಸ್ಪರ್ಶವಾಗುವದು. ವಿಧ್ಯುಕ್ತ ಅಗ್ನಿಗ್ರಹಣ ಮಾಡುವದು. ಅಪ್ರದಕ್ಷಿಣ ಕ್ರಮ. ಹಿಸ ಆಗದ ಬೇರೆ ಅಡಿಗೆ ಮಾಡಿದವ. ಮುಖ್ಯಕ್ರಿಯೆ ಸಾಧನೆಗಾಗಿ ಗೌಣಕ್ರಿಯೆ ಅನಿವಾರ್ಯವಾಗುವದು. ದಾಹಸ್ಥಳದಿಂದ ಅಸ್ಥಿಯನ್ನು ವಿಧ್ಯುಕ್ತ ಆರಿಸುವದು. ಅಕ್ಕಿ, ಬೇಳೆ ಇತ್ಯಾದಿ ಬೇಯಿಸುವ(ಒಣ) ವಸ್ತುಗಳು, ಜೇಷ್ಠ ಶುದ್ಧ ನವಮಿ ಬುಧವಾರ ವ್ಯತೀಪಾತಯೋಗ, ಹಸ್ತಾನಕ್ಷತ್ರ ಕೂಡಿಬರುವದು. ಕನ್ಯಾಪೋಷಕನಿಗೆ ಹೇರಳ ಹಣಕೊಟ್ಟು ಹಣ್ಣನ್ನು ಪಡೆಯುವದು. ಒಂದು ಆಶೌಚ ಮುಗಿಯುವ ಮಧ್ಯೆ ಬರುವ ಆಶೌಚಗಳು. ಪ್ರತಿ ಪಕ್ಷದ ಆದಿಯಲ್ಲಿ (ಪ್ರತಿಪತ್) ಮಾಡುವ ಯಾಗ ವಿಶೇಷ. en ದಿನವಿಡೀ ಭೋಜನರಹಿತನಾಗಿರುವದು. ಶುದ್ಧಾಧಿಕವಾಗಿರುವ ಏಕಾದಶಿಯು ದ್ವಾದಶಿಯೊಂದಿಗೆ ಪಾರಿಭಾಷಿಕ ಪದಕೋಶ ಉಪಾಕರ್ಮ ಉದ್ಯಾಪನ ಉಪೋಷಣ ಉಪಸಂಗ್ರಹಣ ಉಪನಿಷದ್‌ವ್ರತ ಸೇರುವದು. ೫೮ ಬ್ರಹ್ಮಚಾರಿ ಗೃಹಸ್ಥರು ಕಲಿತ, ಕಲಿಯಲಿರುವ ವೇದಾಧ್ಯಯನ ಸಂಬಂಧಿ ಹೋಮ ಪೂರ್ವಕ ಕೃತ್ಯ. ಸಂಪೂರ್ಣ ಫಲಪ್ರಾಪ್ತಿಗಾಗಿ ದೇವತಾ ಪ್ರೀತ್ಯರ್ಥ ವ್ರತಾರಂಭ ಮಧ್ಯ-ಅಂತ್ಯದಲ್ಲಿ ಮಾಡುವ ವ್ರತಹವನ. ಉಪವಾಸ ತನ್ನ ಗೋತ್ರ ಇತ್ಯಾದಿ ಹೇಳುತ್ತ ಗುರು ಅಥವಾ ತಂದೆತಾಯಿಗಳ ಬಲ ಹಸ್ತದಿಂದ ಬಲಪಾದ, ಎಡಹಸ್ತದಿಂದ ಎಡಪಾದ ಸ್ಪರ್ಶಿಸುವದು. ವಟುವು 15ನೇ ವರ್ಷದಲ್ಲಿ ಮಾಡುವ ವ್ರತ. ಬಾವಿ, ಕೆರೆಗಳನ್ನು ಶುದ್ದೀಕರಿಸುವ ವಿಧ್ಯುಕ್ತ ಕರ್ಮಗಳು. ಉಲ್ಕಾಪಾತಾದಿ ದರ್ಶನ ಉತ್ಪರ್ಗ ಉತ್ಪಾತ ಉತ್ತರೀಯ ಉತ್ತರಪೂರ್ವ ಕ್ರಿಯೆ ಉತ್ತರ ಮಧ್ಯಕ್ರಿಯ ಉತ್ತರೋತ್ತರ ಕ್ರಿಯೆ ಸಪಿಂಡೀಕರಣ ಎರಡೂ ತುದಿಗಳನ್ನು ಗಂಟಿಕ್ಕಿದ ಮಾಲಾಕೃತಿ-ವಸ್ತ್ರ ಮೃತದಿನದಿಂದ ಹತ್ತನೇ ದಿನದ ಪಠ್ಯಂತದ ಕ್ರಿಯ ಹನ್ನೊಂದನೇ ದಿವಸದ ಕ್ರಿಯೆ ಏಕಭುಕ್ತ ಏಕೋದ್ದಿಷ್ಟ ಮಧ್ಯಾಹ್ನದಲ್ಲಿ ಮಾತ್ರ ಊಟಮಾಡುವದು. ಒಂದೇ ಪಿತೃವನ್ನು ಉದ್ದೇಶಿಸಿ ಪಿಂಡ ಪ್ರದಾನ ಮಾಡುವ ವಿಧಿ. ಋತುಕಾಲ ಕಾಮ್ಯ ಕ್ಷಯಮಾಸ ಕಪಾಲವೇಧ ಕರಿ ಕಪಿಲಾಷ ಸ್ತ್ರೀ ಮುಟ್ಟಿನಿಂದ 16ದಿನಗಳ ಕಾಲ ಅಪೇಕ್ಷಿತ ಫಲ ಪಡೆಯಲು ಮಾಡುವ ಹೋಮ ವ್ರತ ಇತ್ಯಾದಿ ಧಾರ್ಮಿಕ ವಿಧಿ. ಒಂದು ಚಾಂದ್ರಮಾಸದಲ್ಲಿ ಎರಡು ಸಂಕ್ರಾಂತಿ ಬರುವದು. ದಶಮಿಯ ಅರ್ಧರಾತ್ರಿ ಮಿಕ್ಕಿರುವದು ವೈಶಾಖ ಅಮಾವಾಸ್ಯೆಯ(ಭಾವುಕ) ಮರುದಿನ. ಭಾದ್ರಪದ ಕೃಷ್ಣ ಷಷ್ಠಿಯಂದು ವ್ಯತೀಪಾತ, ರೋಹಿಣಿ ನಕ್ಷತ್ರ ಯೋಗ. ೫೮೬ ಕುಮಾರಿ ಕುಮಾರಿ ಕಲ್ಯಾಣ ಕಾಲೇ ಕೃಮಿಭೋಜಿ ಕರಕ ಚತುರ್ಥಿ ಇರಿದಿನಗಳು ಕೃಚ್ಛ ಕುಹೂ ಕುಮಾರ ಕುಂಡ ಕ್ಷಯಪಕ್ಷ ಕ್ಷಯ ವರ್ಷ ಕುಶಪ ಕುಟೀಚಕ ಕಾರಟೀವೇಷ ·

3ರಿಂದ 10ರ ವಯಸ್ಸಿನ ಹುಡುಗಿಯರು 3ವರ್ಷದ ಬಾಲಕಿ ನಾಲ್ಕು ವರ್ಷದ ಬಾಲಕಿ ಧರ್ಮಸಿಂಧು ಆರು ವರ್ಷದ ಬಾಲಕಿ (ನವರಾತ್ರಿಯಲ್ಲಿ ಪೂಜಿಸುವ ಬಾಲಕಿಯರ ಒಂಭತ್ತು ವಿಶೇಷ ಸಂಜ್ಞೆಗಳು-ಕುಮಾರಿಕಾ, ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಳಿ, ಚಂಡಿಕಾ, ಶಾಂಭವಿ, ದುರ್ಗಾ, ಭದ್ರಾ, (ಅನುಕ್ರಮವಾಗಿ ೩೪,೫,೬೭೮,೯,೧೦ ವರ್ಷಗಳ ಬಾಲಕಿಯರು) ಕಾರ್ತಿಕ ಮಾಸದಲ್ಲಿ ಕಂಚಿನಪಾತ್ರೆಯಲ್ಲಿ ಊಟ ಮಾಡುವವ. ಆಶ್ವಿನ ಕೃಷ್ಣ ಚತುರ್ಥಿ, ಗ್ರಹಣ, ವೈಶಾಖ ಅಮಾವಾಸ್ಯೆ, ಹೋಳಿಹುಣ್ಣಿವೆ, ಅಯನ ಸಂಕ್ರಾಂತಿ, ಪ್ರೇತದಹನ ದಿನ ಮತ್ತು ಮುಂದೆ ಮೂರುದಿನ. ಧಾರ್ಮಿಕ ಕರ್ಮಾಧಿಕಾರಕ್ಕಾಗಿ ಅಥವಾ ಪಾಪ ಪರಿಹಾರಕ್ಕಾಗಿ ಕಷ್ಟದಿಂದ ಮಾಡಬೇಕಾದ ಧಾರ್ಮಿಕ ಪ್ರಾಯಶ್ಚಿತ್ತ. ಅಮಾವಾಸ್ಯೆಯ ಕೊನೆಯ ಮೂರು ಯಾಮಗಳು, ಐದರಿಂದ ಹತ್ತು ವರ್ಷವರಂತ (ಮತಭೇದವಿದೆ) ತಂದೆ ಜೀವಂತವಿದ್ದು ಪರಪುರುಷನಿಂದ ಹುಟ್ಟಿದವ ಹದಿಮೂರು ದಿನಗಳ ಪಕ್ಷ ಅತಿಚಾರ ಹೊಂದಿದ ಗ್ರಹ, ವಕ್ರಾಗಮನದಿಂದ ಹಿಂದಿನ ರಾಶಿಗೆ ಬಾರದೇ ಇರುವದು. ಧಾರ್ಮಿಕ ವಿಧಿ ಆಚರಿಸಲು ಮೃತ ಪತ್ನಿಯ ಬದಲಿಗೆ ಕಲ್ಪಿಸುವ ದರ್ಭಕೂರ್ಚ. ಕಾಷಾಯ ವಸ್ತ್ರ ಧರಿಸಿ, ಯಜ್ಞಪವೀತ ಧರಿಸಿ ಮನೆಯಲ್ಲಿಯೇ ಇರುವ ಆತ್ಮನಿಷ್ಠ ಸಂನ್ಯಾಸಿ (ಸಂನ್ಯಾಸ ಪ್ರಭೇದ-ಬಹೂದಕ, ಹಂಸ, ಪರಮಹಂಸ) ಕಾಷಾಯ ಧರಿಸಿ ಏಳು ಮನೆ ಭಿಕ್ಷೆ ಎತ್ತಿ ಬದುಕುವ ಸಂನ್ಯಾಸಿ ಬಹೂದಕ. ನಿಯಮಯುಕ್ತರಾಗಿ ಏಕದಂಡ ಧಾರಿಗಳಾಗಿರುವ ಸಂನ್ಯಾಸಿ ಹಂಸ, ಸರಸಂಗ ಪರಿತ್ಯಾಗಿಗಳಾಗಿ ಏಕದಂಡ ಧಾರಿಣಿ ಮತ್ತು ಸಂನ್ಯಾಸದ ಎಲ್ಲಾ ನಿಯಮ ಪಾಲನೆ ಮಾಡಿದ ಸಂನ್ಯಾಸಿ ಪರಮ ಹಂಸ ಸಂನ್ಯಾಸಿಗಳ ಪತನಕ್ಕೆ ಕಾರಣಗಳು 1)ಮಂಚ 2)ಬಿಳಿವಸ್ತ್ರ 3)ಸ್ತ್ರೀ ಸಂಬಂಧ ಚರ್ಚೆ 4) ಚಾಂಚಲ್ಯ 5)ಹಗಲು ನಿದ್ರೆ 6)ವಾಹನ ಸಂಚಾರ, ತೀರ್ಥಯಾತ್ರೆಯ ವೇಷ ಪಾರಿಭಾಷಿಕ ಪದಕೋಶ ಕಾರ್ತಿಕ, ವ್ಯತೀಪಾತಾದಿ ಯೋಗಗಳಲ್ಲಿ ಮಾಡುವ ಸ್ನಾನ. ಹನ್ನೆರಡು ದಿನ ಕುಟುಂಬಕ್ಕೆ ಸಾಲುವಷ್ಟು ಧಾನ್ಯ ಸಂಗ್ರಹ. ಆರುದಿನ ಕುಟುಂಬಕ್ಕೆ ಸಾಲುವ ಧಾನ್ಯ. ಕಾಮ್ಯಸ್ನಾನ ಕುಂಭೀಧಾನ್ಯ ಕಾಯತೀರ್ಥ ಅನಾಮಿಕ, ಕನಿಷ್ಠ ಬೆರಳುಗಳ ಮೂಲ ಗೋದಾನ ವ್ರತ ಗೌಣಕಾಲ ಗ್ರಹಣ ಪುಣ್ಯಕಾಲ ಗಜಚ್ಛಾಯಾ ಗಂಡಾಂತ ಗೋಲಕ 16ನೇ ವರ್ಷದಲ್ಲಿ ಮಾಡುವ ವ್ರತ ಮುಖ್ಯವಲ್ಲದ ಕಾಲ ಗ್ರಹಣಗಳು ದೃಗ್ಗೋಚರಿಸುವ ಕಾಲ ಸೂರನು ಹಸ್ತಾ ನಕ್ಷತ್ರದಲ್ಲಿದ್ದು ತ್ರಯೋದಶಿಯಂದು (ಮಹಾಲಯ) ಚಂದ್ರನು ಮಘಾನಕ್ಷತ್ರದಲ್ಲಿರುವ ಯೋಗ ರೇವತಿ, ಆಶ್ಲೇಷಾ, ಜೇಷ್ಠಾದ ಅಂತ್ಯದ ಎರಡು (ಮೂರುವರ), ಅಶ್ವಿನಿ ಮಘ ಮೂಲಾಗಳ ಮೊದಲ ಎರಡು ಘಟಿ. ಮರಣಾನಂತರ ಆತನ ಪತ್ನಿಗೆ ಹುಟ್ಟುವ ಮಗು. ಸ್ವ ಇಚ್ಛೆಯಿಂದ ತಾವೇ ವಿವಾಹವಾಗುವದು. 53 ಘಟ ದಶಮಿ ಗ್ರಾಮಗಳಲ್ಲಿ ಶವ ಇರುವಷ್ಟು ಕಾಲ. ಗಾಂಧರ್ವ ಗ್ರಸ್ತವೇಧ ಗರ್ಭಸ್ರಾವ ನಾಲ್ಕು ತಿಂಗಳೊಳಗೆ ಗರ್ಭಕಳೆದರೆ, ಗರ್ಭಪಾತ ಐದು, ಆರು ತಿಂಗಳಲ್ಲಿ ಗರ್ಭನಷ್ಟ ಗ್ರಾಮಾಶೌಚ ಗೌಣಸ್ನಾನ ಗೋಚರ ಘೋರವೇರ ಘಟಿಯಂತ್ರ ಘಟಸ್ಫೋಟ ಚಾಂದ್ರಮಾನ ಚಾಂದ್ರಮಾಸ ಒದ್ದೆ ಬಟ್ಟೆಯಿಂದ ಮೈ ಒರೆಸಿ ಸ್ವಚ್ಛಗೊಳಿಸಿಕೊಳ್ಳುವದು. ಚಂದ್ರರಾಶಿಯಿಂದ ಗ್ರಹಗಳನ್ನು ಗುರುತಿಸುವ ಕ್ರಮ. 59 ಘಟ ದಶಮಿ. ಗಳಿಗೆ (ಕಾಲ) ಮಾಪನ ಯಂತ್ರ ಮಹಾಪಾತಕಿಗಳನ್ನು ಪ್ರತ್ಯೇಕಿಸುವ ವಿಧಿ น ಚಂದ್ರನ ಗತಿಗನುಸಾರ ಅಳತ ಸೂರನೊಟ್ಟಿಗೆ ಇದ್ದ ಚಂದ್ರ, ತನ್ನ ಪರಿಧಿಯಲ್ಲಿ ಸಂಚರಿಸಿ ಪುನಃ ಸೂರನಿದ್ದಲ್ಲಿ ಸೇರುವದು. (ಶುಕ್ಲ ಪ್ರತಿಪದೆಯಿಂದ ಅಮಾವಾಸ್ಯೆ) ಧರ್ಮಸಿಂಧು ಛಾಯಾವಧ ಚೂಡಾಮಣ ಜಯಾ ಜಯಂತಿ ಜೀವಕ ಜಾಗರ (ಜಾಗರಣೆ) ಜಾತಕರ್ಮ ಜನ್ಮದಾ 52 ಘಟಿ ದಶಮಿ ರವಿವಾರ ಸೂರಗ್ರಹಣ, ಸೋಮವಾರ ಚಂದ್ರಗ್ರಹಣ ಸಂಭವಿ ಸುವದು. ಜ ದ್ವಾದಶಿ ದಿನ ಪುಷ್ಯಾ ನಕ್ಷತ್ರ, ದ್ವಾದಶಿ ದಿನ ಪುನರ್ವಸು ನಕ್ಷತ್ರ. ತಂದೆ ಜೀವಂತ ಇರುವಾತ. ಹಗಲು ಅರ್ಚಿಸಿದ ದೇವತಾ ಪ್ರೀತ್ಯರ್ಥವಾಗಿ ರಾತ್ರಿಯಲ್ಲಿ ಗೀತ, ನೃತ್ಯ, ಪುರಾಣ ಕಥನ, ಶ್ರವಣಗಳಲ್ಲಿ ಕಾಲಕ್ಷೇಪ ಮಾಡುವದು. ಗರ್ಭದ ನೀರು ಕುಡಿದ ದೋಷ ಪರಿಹಾರ ಮತ್ತು ಆಯುಷ್ಯ, ಮೇಧಸ್ಸಿನ ಅಭಿವೃದ್ಧಿಗಾಗಿ ಮಗು ಜನಿಸಿದಾಗ ಮಾಡುವ ಕರ್ಮ ವಿಶೇಷ. ‘ಜನ್ಮದಾ’ ಎಂಬ ದೇವತೆ ಕುರಿತು ಮಗು ಮತ್ತು ತಾಯಿಯ ಆಯುರಾರೋಗ್ಯ, ರಕ್ಷಣೆಯನ್ನು ಅನಿಷ್ಟಶಾಂತಿ ಪೂರೈಕ ಮಾಡುವ ಪೂಜೆ. ತ್ರಿಸ್ಪರ್ಶಾ ತಿಥಿಪ್ರಾಸ ತ್ರಿಮೂರ್ತಿ ಕಪ್ರಸವ ತ್ರಿಕರಣ ತಾಹಿಕ ತರುಪುತ್ರಕ ತಿಥಿಖರ ಸೂರ-ಚಂದ್ರರ ಅಂತರದಿಂದ ಉಂಟಾದ ಕಾಲಮಾನ. ಎರಡು ಸೂಯ್ಯೋದಯಕ್ಕೂ ದ್ವಾದಶಿ ಸಿಗದ ಸಂದರ್ಭ. ಪಕ್ಷದಲ್ಲಿ 14 ಅಥವಾ 13 ದಿವಸ ಬರುವದು 3 ವರ್ಷದ ಬಾಲಕಿ (ನವರಾತ್ರಿ ಪೂಜಾಸಂಕೇತ) 3 ಹೆಣ್ಣಿನ ನಂತರ ಗಂಡು ಅಥವಾ 3 ಗಂಡಿನ ನಂತರ ಹೆಣ್ಣು ಜನಿಸುವದು. ಮಾತು, ಮನಸ್ಸು, ದೇಹ. ಜೇಷ್ಠರಾದ ವಧೂವರರಿಗೆ ಜೋಷ್ಟಮಾಸ, ನಕ್ಷತ್ರ ಸಂಯೋಗವಾದರೆ, ಕುಟುಂಬಕ್ಕೆ 3ದಿನ ಸಾಲುವಷ್ಟು ಧಾನ್ಯ. ಆಲ ಇತ್ಯಾದಿ ಮರಗಳನ್ನು ಮಗನೆಂದು ಸ್ವೀಕರಿಸುವದು. ಕ್ಷಯ ತಿಥಿ. ಪಾರಿಭಾಷಿಕ ಪದಕೋಶ HUE ದೈವ ದಾನ ದರ್ಶಶ್ರಾರ ದುರ್ಗಾ ದೀಪಾವಳ ದರ್ಶ ದ್ರವ್ಯ ದೈವವಿವಾಹ ದಿಧಿಷು ದಶಹರಾ ದೌಹಿತ್ರ ದರ್ಭಬಟು ನಿತ್ಯಕರ್ಮ ನೈಮಿತ್ತಿಕ ನಾಕ್ಷತ್ರಮಾಸ ನಕ್ಕ ನಿರ್ಜಲಾ ನಾಂದಿ ನಿಶ್ಚಿತ ನಾಲದ ವೃದ್ಧಿ ತಿಥಿ ದೇವರಿಗೆ ಸಂಬಂಧಿಸಿದ ವಿಷಯ, ನಿಯಮ (ಉದಾ: ನವರಾತ್ರಿಯಲ್ಲಿ ಹಗಲು ಊಟಮಾಡದೆ ರಾತ್ರಿ ಊಟ ಮಾಡುವದು). ತನ್ನ ಅಧಿಕಾರವನ್ನು ತ್ಯಾಗಪೂರ್ವಕ ಬೇರೆಯವರ ಸ್ವತ್ತಿಗೆ ಒಳಪಡಿಸುವದು. ಅಮವಾಸ್ಯೆಯ ದಿನ ಮಾಡುವ ಪಿತೃಕಾರ, 9 ವರ್ಷದ ಬಾಲಕಿ. ಆಶ್ವಿನ ಕೃಷ್ಣ ಚತುರ್ದಶಿ, ಅಮವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪಾಡ್ಯ. ಅಮವಾಸ್ಯೆಯ ನಡುಭಾಗ (ಮಧ್ಯದ ಐದು ಯಾಮ) ಹೋಮಾಹುತಿಗೆ ಉಪಯೋಗಿಸುವ ವಸ್ತು. ಯಜ್ಞದಲ್ಲಿ ಋತ್ವಿಕ್ ಕಾವ್ಯದಲ್ಲಿ ತೊಡಗಿದ ವ್ಯಕ್ತಿಗೆ ಅಲಂಕೃತ ಕನ್ನೆಯನ್ನು ವಿವಾಹ ಮಾಡುವದು. ವಿವಾಹಿತಳ ಅವಿವಾಹಿತ ಅಕ್ಕ, ಜೇಷ್ಠ ಶುಕ್ಲ ದಶಮಿ, ಮಗಳ ಮಗ. ಬ್ರಾಹ್ಮಣರ ಅಭಾವದ ಅನಿರ್ವಾಹ ಪ್ರಸಂಗದಲ್ಲಿ ಪಿತೃಸ್ಥಾನ- ಗಳಲ್ಲಿ ದರ್ಭಕೂರ್ಚ ಇರಿಸುವದು. ನಕಾರ ವ್ಯಕ್ತಿ ಅನುಸರಿಸಬೇಕಾದ ಧಾರ್ಮಿಕ ಕರ್ತವ್ಯ (ಸ್ನಾನ, ಸಂಧ್ಯಾ, ಶ್ರಾದ್ಧ ಇತ್ಯಾದಿ). ಕಾರಣಗಳಿಂದುಂಟಾದ ನಿರ್ದಿಷ್ಟ ಧಾರ್ಮಿಕ ವಿಧಿ (ನಾಮಕರಣ, ಷಷ್ಟ’ ಇತ್ಯಾದಿ). ಚಂದ್ರನಿಗೆ ೨೭ ನಕ್ಷತ್ರಗಳಲ್ಲಿ ಸಂಚರಿಸಲು ತಗಲುವ ಅವಧಿ. ಹಗಲು ಊಟ ಮಾಡದ ರಾತ್ರಿ ಊಟಮಾಡುವ ಧಾರ್ಮಿಕ ವಿಧಿ. ಜೇಷ್ಠ ಶುಕ್ಲ ಏಕಾದಶಿ. ವಿವಾಹಾದಿ ಮಂಗಲ ಕಾವ್ಯಗಳಲ್ಲಿ ಪಿತೃ ವರ್ಗಕ್ಕೆ ಸಲ್ಲಿಸುವ ಉಪಚಾರ. ರಾತ್ರಿ ಪ್ರಮಾಣದ ಅರ್ಧ’ಪ’ಕಾರ. ನವಜಾತ ಶಿಶುವಿನ ಹೊಕ್ಕಳ ಬಳ್ಳಿ ಕತ್ತರಿಸುವದು. ನಿರ್ಮಾಲ್ಯ ನಮಸಂಜನ ನವಮಿಶ್ರ ನಗ್ನ ಧರ್ಮಸಿಂಧು ಪುನಃ ಉಪಯೋಗಕ್ಕೆ ಅನರ್ಹವಾದದ್ದು. ಮೃತದಿನದಿಂದ ಹತ್ತುದಿನ ಪಿಂಡಪ್ರದಾನ. ಹನ್ನೊಂದನೇ ದಿನದಿಂದ ವರ್ಷಪೂರ್ವ (ನ್ಯೂನಾಕ) ಏಕೋದ್ದಿಷ್ಟ ವಸ್ತ್ರ ಧರಿಸದ, ಅಥವಾ ಹೊಲಸು ವಸ್ತ್ರಾದಿ ಹತ್ತು ವಿಧವಾದ ವಸ್ತ್ರ ಧರಿಸುವದು. ಪೂರ್ಣಾ ಪ್ರಾತಃಕಾಲ ಪಕ್ಷಿಣ ಪ್ರತಿನಿಧಿ ಪದ್ಮಕ ಪಾರಣೆ ಪಕ್ಷ ಪ್ರಲಯವೇಧ ಪಕ್ಷವರ್ಧಿನಿ ಪಿನಾಶಿನಿ ಪುರಶ್ಚರಣ ಪ್ರಪಾದಾನ ಪವಿತ್ರಾರೋಹಣ ಪಾಣ

ದಿನಪೂರ್ತಿ ಇರುವ ಒಂದೇ ತಿಥಿ. ಮೃತ ತಂದೆ-ತಾಯಿ ಇತ್ಯಾದಿ ಪೂರ್ವಜರಿಗೆ ಸಂಬಂಧಿಸಿದ ವಿಷಯ. ದಿನದ ಐದು ಭಾಗದಲ್ಲಿಯ ಮೊದಲ ಭಾಗ. (ದಿವಾಮಾನ 30 ಘಟಿ ಇದ್ದಲ್ಲಿ ಮೊದಲ 6 ಘಟಿ) ನಿರ್ದಿಷ್ಟ ಕಾಲ (ಹುಟ್ಟು, ಸಾವು ಇತ್ಯಾದಿ) ರಾತ್ರಿ ಆಗಿದ್ದಲ್ಲಿ ರಾತ್ರಿ ಮತ್ತು ಹಿಂದು ಮುಂದಿನ ಹಗಲು, ಹಗಲು ಆಗಿದ್ದಲ್ಲಿ ಆ ಹಗಲು ಮತ್ತು ಹಿಂದುಮುಂದಿನ ರಾತ್ರಿ. ಹಿಡಿದ ವ್ರತಗಳನ್ನು ಪೂರೈಸಲು ಅಸಮರ್ಥನಾದಾಗ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, (ಮಗ, ಹೆಂಡತಿ, ಗಂಡ, ಸಹೋದರ ಇತ್ಯಾದಿ) ಷಷ್ಠಿ, ಸಪ್ತಮಿ, ರವಿವಾರ ಕೂಡಿದಾಗ, ವ್ರತೋಪವಾಸಗಳ ಬಳಿಕ ದೇವರ ಪ್ರಸಾದಾನ್ನ ಭೋಜನ. ಅಂಜೂರದ ಗಿಡ. 57 ಘಟಿ ದಶಮಿ. ಹುಣ್ಣಿಮೆ, ಅಮಾವಾಸ್ಯೆ ವೃದ್ಧಿ ಆದಾಗ, ದ್ವಾದಶಿ ದಿನ ರೋಹಿಣಿ ನಕ್ಷತ್ರ. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ಚೈತ್ರಾದಿ ಮಾಸಗಳಲ್ಲಿ ದಾರಿ ಹೋಕರಿಗೆ ಬೆಲ್ಲ ನೀರು ಅಥವಾ ಪಾನಕ ಇತ್ಯಾದಿಗಳನ್ನು ದಾನ ಮಾಡುವದು. 9 ಎಳೆಗಳಿಂದ ಕೂಡಿದ ಹತ್ತಿಯ ದಾರದಿಂದ ವಿಧ್ಯುಕ್ತರೀತಿ ತಯಾರಿಸಿ, ವಿಧ್ಯುಕ್ತ ಕಾಲದಲ್ಲಿ ದೇವರಿಗೆ ಅರ್ಪಿಸುವದು. ತಂದೆ, ಅಜ್ಜ, ಮುತ್ತಜ್ಜು ಇತ್ಯಾದಿ ಪಿತೃವರ್ಗ, ಮಾತೃವರ್ಗ, ಸಪಕ, ಮಾತಾಮಹವರ್ಗ,ಪಾರಿಭಾಷಿಕ ಪದಕೋಶ ಪುರೋದಾಶ ಪ್ರಬೋಧೋತ್ಸವ ಪ್ರತ್ಯವಾಯ ಪ್ರಸವ ವೈಕೃತ ಪುತ್ರಕಾಮೇಷ್ಟಿ ಪ್ರತ್ಯಭಿವಾದನ ಪೌಷ್ಟಿಕ ಪ್ರತಿವಚನ ಪ್ರತ್ಯುದ್ವಾಹ ಪ್ರೇತಕರ್ಮ ಪ್ರಜಾಪತ್ಯ ವಿವಾಹ ಪೈಶಾಚವಿವಾಹ ಪರಿವೇಕಾ ಪರಿಮಿತಿ ಪುಂಸವನ ಅನವಲೋಚನ) - ಪೋಷ್ಟವರ್ಗ ಪಿತೃತೀರ್ಥ ಪಂಚನಾ ಪರ್ಯತ ಪರಮಹಂಸ ಪ್ರಸಂಗ ಸಿದ್ದಿ ಪಾಕಪರಿಕ್ರಿಯ ಪತಿತೋದಕವಿಧಿ: ಭಾವುಕ ‘ಆಹಿತಾಗ್ನಿ’ ಉಪಾಸಕರು ಹೋಮಕ್ಕೆ ಸಿದ್ಧಪಡಿಸಿದ ವಿಶೇಷಾನ್ನ. ಚಾತುರ್ಮಾಸ ವ್ರತ ಮುಗಿಸುವ ದಿನ.ವಿಷ್ಣುವು ಸುಪ್ತಾವಸ್ಥೆಯಿಂದ ಜಾಗೃತಗೊಳ್ಳುವ ಸಂದರ್ಭ ಉತ್ಸವ ವಿಧಿ ಉಲ್ಲಂಘನೆಯಿಂದುಂಟಾಗುವ ದೋಷ, ಕರ್ತವ್ಯ ಚ್ಯುತಿ ದೋಷ. ಮನುಷ್ಯ ಅಥವಾ ಪ್ರಾಣಿ ಗರ್ಭಗಳಿಂದ ಹುಟ್ಟುವ ವಿಕೃತ ಜನನ. ಸಂತಾನ ಪ್ರಾಪ್ತಿಗಾಗಿ ನಡೆಸುವ ಯಾಗ ನಮಸ್ಕರಿಸಿದಾತನನ್ನು ಆಶೀರ್ವದಿಸುವ ಕ್ರಿಯೆ ಅಭ್ಯುದಯಕ್ಕಾಗಿ ಮಾಡುವ ಹೋಮ, ಪೂಜೆ ಇತ್ಯಾದಿ. ಕರ್ತೃವಿನ ವಿಜ್ಞಾಪನೆಗೆ ಪ್ರತ್ಯುತ್ತರ. ತನ್ನ ಮಗಳನ್ನು ಬೇರೆಯವನ ಮಗನಿಗೆ ಕೊಟ್ಟು ಅವನ ಮಗಳನ್ನು ತನ್ನ ಮಗನಿಗೆ ವಿವಾಹ ಮಾಡಿಕೊಳ್ಳುವದು. ಸಪಿಂಡೀಕರಣಕ್ಕೆ ಮೊದಲು ಮಾಡುವ ಉತ್ತರ ಕ್ರಿಯೆ. ತನ್ನ ಮಗಳ ವಿನಹ ಬೇರೆ ಮದುವೆ ಆಗದೆ, ಸಂನ್ಯಾಸ ಸ್ವೀಕರಿಸದೆ ಜೀವನ ನಡೆಸುವದಾಗಿ ಕನ್ಯಾಪಿತೃವಚನ ಪಡೆಯುವದು. ಮನಸಾ ಒಲಿಯದ ವಧುವನ್ನು ಅಪಹರಿಸಿ ಬಲಾತ್ಕಾರದಿಂದ ವಿವಾಹ ಆಗುವದು. ಅವಿವಾಹಿತ ಅಣ್ಣನಿರುವಾಗ ವಿವಾಹಿತ ತಮ್ಮ. ತಮ್ಮ ವಿವಾಹಿತನಾಗಿದ್ದು ಆತನ ಅವಿವಾಹಿತ ಅಣ್ಣ, ಗರ್ಭಸಂಸ್ಕಾರ. ಅವಲಂಬಿತ ಕುಟುಂಬದ ಸದಸ್ಯರು. ಅಂಗುಷ್ಠ ಮತ್ತು ತೋರು ಬೆರಳುಗಳ ಮಧ್ಯ. ಕುಟ್ಟುವದೇ ಮೊದಲಾದ ಐದು ಕ್ರಿಯೆಗಳು. ಹಳಸಲು, ಹಿಂದಿನ. ಸರಸಂಗ ಪರಿತ್ಯಾಗಿಗಳಾಗಿ ಏಕದಂಡ ಧಾರಣೆ ಇತ್ಯಾದಿ ಸಂನ್ಯಾಸದ ಎಲ್ಲಾ ನಿಯಮ ಪಾಲನೆ ಮಾಡುವ ಪರಮೋಚ್ಚ ಸಂನ್ಯಾಸ ಒಂದೇ ಉದ್ದೇಶ ಸಾಧನೆಯ ಎರಡು ಧಾರ್ಮಿಕ ವಿಧಿಗಳಿಂದ, ಒಂದೇ ದಿನದಲ್ಲಿ ಆಚರಿಸುವ ಮೂಲಕ ಅಂತರ್‌ಭಾವಸಿದ್ಧಿ ಉಂಟಾಗುವದು. ಮಂತ್ರ ಸಹಿತ ಪಾಕಪ್ರೋಕ್ಷಣ. ಮಕ್ಕಳಿಲ್ಲದವರಿಗೆ ಮಾಡುವ ಮೃತ ಸಂಸ್ಕಾರ ಬ ವೈಶಾಖ ಅಮಾವಾಸ್ಯೆ, ೫೯೨ ಧರ್ಮಸಿಂಧು ಭದ್ರಾ ಬ್ರಹಸ್ಪತಿ ಅದ್ಭುತ ಬ್ರಾಹ್ಮಣ ಪರಿಷತ್ತು ಬ್ರಹ್ಮಕೂರ್ಚ ಹವನ ಬ್ರಾಹ್ಮವಿವಾಹ ಬಾಲಕ ಬುದಾದ್ಭುತ ಬ್ರಾಹ್ಮತೀರ್ಥ ಬಹೂದಕ 10ವರ್ಷದ ಬಾಲಕಿ (ನವರಾತ್ರಿ ಕನ್ಯಾಸಂಕೇತ) ಮೃಗವು ಸರ್ಪ, ಕಪ್ಪೆ, ಮನುಷ್ಯಾಕೃತಿ ಶಿಶುವನ್ನು ಹಡೆಯುವದು. ಧಾರ್ಮಿಕ ಸಮಸ್ಯೆ ಪರಿಹಾರಕ್ಕಾಗಿ ನಿರ್ಣಯ ಕೈಕೊಳ್ಳಬಲ್ಲ ನಾಲ್ಕು ಅಥವಾ ಹೆಚ್ಚಿನ ಗುಂಪು, ಪ್ರಾಯಶ್ಚಿತ್ತ ರೂಪವಾದ ಪಂಚಗವ್ಯ ಹೋಮ. ಯೋಗ್ಯ ವರನಿಗೆ ಸಾಲಂಕೃತ ಮಗಳನ್ನು ವಿಧ್ಯುಕ್ತವಿವಾಹ ಮಾಡುವದು. 1ರಿಂದ 5ವರ್ಷದ ಒಳಗಿನವ ಗರ್ಭಪಾತ, ಅವಳಿ ಸದಂತ ಜನನ, ಹುಟ್ಟಿದಾಕ್ಷಣ ಸಾಯುವದು. ಅಂಗುಷ್ಠದ ಬುಡ. ಕಾಷಾಯ ವಸ್ತ್ರಧಾರಣೆ ಮಾಡಿ ಏಳುಮನೆ ಭಿಕ್ಷೆ ಮೂಲಕ ಜೀವಿಸುವದು. ಮಧ್ಯಾಹ್ನ ಮೈಥುನ ಮಹಾವೇಧ ಮಹಾಪ್ರಲಯವೇಧ ಮಹಾವಾರಣೀ ಮಹಾಜೇಷ್ಠಯೋಗ ಮಹಾಲಯ ಮಹಾಕಾರ್ತಿಕೀ ಮಹಾನಾಮ್ಮಿ ವ್ರತ ಮಹಾವ್ರತ ಮನೋದು ಮುಂಡನ ಮಧುಪರ ಮಾಧುಕರೀ ಮ ದಿನದ ಐದು ಭಾಗದಲ್ಲಿಯ ಮೂರನೇ ಭಾಗ. ಗಂಡು ಅಥವಾ ಹೆಣ್ಣು ಸ್ಮರಣೆ ಇತ್ಯಾದಿ ಅಷ್ಟವಿಧ ಕಾಮನೆಗಳಲ್ಲಿ ಕೆಲವು ಅಥವಾ ಎಲ್ಲವನ್ನೂ ಹೊಂದಲು ಅಪೇಕ್ಷಿಸುವದು. 56ಘಟಿ ದಶಮಿ. 58 ಘಟ ದಶಮಿ. ವಾರುಣಿಯು ಶನಿವಾರ ಬಂದಾಗ, ಜೇಷ್ಟ ಪೂರ್ಣಿಮೆಯಂದು ಬ್ರಹಸ್ಪತಿ ಚಂದ್ರರು ಜೇಷ್ಠಾ ನಕ್ಷತ್ರದಲ್ಲಿದ್ದು ರವಿಯು ರೋಹಿಣಿ ನಕ್ಷತ್ರದಲ್ಲಿರುವದು. ಭಾದ್ರಪದ ಕೃಷ್ಣಪಕ್ಷ. ಕಾರ್ತಿಕ ಹುಣ್ಣಿಮೆಯಂದು ಚಂದ್ರನು ರೋಹಿಣಿ ನಕ್ಷತ್ರದಲ್ಲಿರುವದು. ವಟುವು 13ನೇ ವರ್ಷದಲ್ಲಿ ಮಾಡುವ ವ್ರತ, ವಟುವು 14ನೇ ವರ್ಷದಲ್ಲಿ ಮಾಡುವ ವ್ರತ. ಬೇರೆ ಪುರುಷನನ್ನು ವರಿಸಲು ಯೋಚಿಸಿದವಳು. ಚೌಲ, ಉಪನಯನಾದಿಗಳಲ್ಲಿ ಮಾಡುವ ಕ್ಷೌರ ಕರ್ಮ, ಹಾಲು, ಮೊಸರು, ತುಪ್ಪ, ಜೇನುತುಪ್ಪಗಳ ಮಿಶ್ರಣದಿಂದ ಮಾಡುವ ಧಾರ್ಮಿಕ ಉಪಚಾರ. © ಸಂನ್ಯಾಸಿಗಳು 5 ಅಥವಾ 7 ಮನಗಳಿಂದ ಭಿಕ್ಷೆ ಎತ್ತುವದು. (ಯತಿಗಳ ಜೀವನ ಕ್ರಮ ಇದಾಗಿದ್ದು ಇತರ ನಿಯಮಗಳಾದ ಮಂಚ, ಬಿಳಿವಸ್ತ್ರ, ಸ್ತ್ರೀ ಸಂಬಂಧ ಚರ್ಚೆ, ಚಾಂಚಲ್ಯ, ಹಗಲು ಪಾರಿಭಾಷಿಕ ಪದಕೋಶ ಮುಸಲಸ್ನಾನ ಮಹಾಪ್ರಸ್ಥಾನ ಯುನ್ಮತಿಥಿ ಯಾಮ ಯವೀಯುನೀ ಯಕ್ಷಕರ್ದಮ મહ ನಿದ್ದೆ, ವಾಹನ ಮೂಲಕ ಸಂಚಾರ- ಇತ್ಯಾದಿ ಯಾವುದನ್ನು ಉಲ್ಲಂಘಿಸಿದರೂ ಸಂನ್ಯಾಸಿಗಳು ಪತಿತರಾಗುತ್ತಾರೆ.) ಶರೀರದ ಹೊಲಸನ್ನು ತೊಳೆಯಲು ವಿಧಿರಹಿತ ಸ್ನಾನ. ಜೀವದ ಆಸೆಯನ್ನು ತ್ಯಜಿಸಿ ಸಾಯುವ ಪರ್ಯಂತ ಉತ್ತರಾಭಿಮುಖವಾಗಿ ಸಾಗುವದು. ಸಮ ಮತ್ತು ವಿಷಮ ಸಂಖ್ಯೆಗಳ ತಿಥಿಗಳು ಯುಗಗಳು, (ಉದಾ- ಬಿದಿಗೆ ತದಿಗೆ ಸಮ, ತದಿಗೆ-ಚತುರ್ಥಿ ಸಮವಲ್ಲ) ಏಳೂವರ ಘಟಿ. (3ತಾಸಿನ ಅಳತೆ) ಯಜ್ಞಾದಿಗಳಲ್ಲಿ ಬಳಸುವ ಮರದ ವಿಶಿಷ್ಟ ಆಕೃತಿ ಉಳ್ಳ ಕಂಬ. ವಯಸ್ಸು, ದೇಹತೂಕಗಳಿಂದ ಕಡಿಮೆಯಾದವಳು. ಕಸ್ತೂರಿ, ಕುಂಕುಮ ಇತ್ಯಾದಿ. ರೋಹಿಣೀ ರಾಕ್ಷಸ ವೇಧ ರಾಕ್ಷಸ ವಿವಾಹ ರೋದನ ಶ್ರಾದ್ಧ ರುದ್ರಗಣ ಲೋಹಾಭಿಸಾರಿಕಾ ಲೇಪಭಾಗಿಗಳು ಲಘು ಆಶೌಚ 5ವರ್ಷದ ಬಾಲಕಿ, (ನವರಾತ್ರಿ ಪೂಜಾ ಸಂಜ್ಞೆ) 60ಘಟ ದಶಮಿ. ಬಲಾತ್ಕಾರದಿಂದ ಆದ ವಿವಾಹ. ನಿರ್ಗತಿಕನು ಅರಣ್ಯಕ್ಕೆ ಹೋಗಿ (ಸಮಂತ್ರಕ) ಪಿತೃಗಳನ್ನು ಕೂಗುವದು. ಪ್ರೇತೋದ್ದೇಶದಿಂದ ಆಹ್ವಾನಿತ ಏಕಾದಶ ರುದ್ರವರ್ಗ, ನವರಾತ್ರಿ ಪ್ರತಿಪದೆಯಿಂದ ಅಷ್ಟಮಿ ಪಠ್ಯಂತ ರಾಜರು ಶಸ್ತ್ರ, ರಾಜೋಪಚಾರ ಸಾಮಗ್ರಿಗಳನ್ನು ಪೂಜಿಸುವದು. ಪಿಂಡಭಾಗಿಗಳಿಂದ ಮುಂದಿನ ಮೂರು ಪಿತೃಗಳು, ಮಾತುಲಾದಿಗಳಿಂದ ಉಂಟಾದ ಆಶೌಚ. ವಿಷ್ಟು ಶೃಂಖಲ ಯೋಗ - ವಿದ್ಯಾ · ಭಾದ್ರಪದ ಶುಕ್ಲ ಏಕಾದಶಿ, ದ್ವಾದಶಿ, ಶ್ರವಣ ಸಂಯೋಗ ಹಗಲಿನ ಕೆಲಭಾಗ ಮಾತ್ರ ಇರುವ ತಿಥಿ. ವ್ರತ ವೈಷ್ಣವ ನಿರ್ದಿಷ್ಟ ನಿಯಮ, ಪೂಜಾ ಇತ್ಯಾದಿ ಸ್ವರೂಪದ ಕರ್ಮಾಚರಣೆ ವಿಷ್ಣು ಸಂಬಂಧಿ ದೀಕ್ಷೆ ಹೊಂದಿದವರು, (ಏಕಾದು ತಿಥಿ ನಿರ್ಣಯದಲ್ಲಿ) ಧರ್ಮಸಿಂಧು ವೇಧಾ ಮಂಜು ವಿಜಯಾ ವ್ಯತಿಷಂಗ ವಾರುಣೀ ವಿಷುವ ವಾಜಿನಿ ರಾಜನ ವರ್ಧಾಪನವಿಧಿ ವೇದಿ ವಚನ ವಾಗತ್ತಾ, ವ್ರತಗಳು ವೈಶ್ವದೇವ ವೃಕ್ಷಾರೋಪಣ ವಿರಜಾಮ ವೃಷೋತ್ಸರ್ಗ ವಿವಿದಿಷಾ ವಾರಶೂಲ ಏಕಿರಂಡ ಶಾಂತಿ ಶಾಂಭವಿ ಶಿಶು ಶುದ್ಧಾ ತಿಥಿ ಶೈವ 56 ಘಟಿ ದಶಮಿ. ದ್ವಾದಶಿಯು ದಿನಪೂರ್ತಿ ಇದ್ದರೆ. ದ್ವಾದಶಿಯ ದಿನ ಶ್ರವಣ ನಕ್ಷತ್ರ. ಎರಡು ವಿಧಿಗಳನ್ನು ಹೊಂದಿಸಿಕೊಂಡು ಮಾಡುವ ವಿಧಿ (ದರ್ಶ ಶ್ರಾದ್ಧ, ಪಿಂಡ ಪಿತೃಯಜ್ಞ ಚೈತ್ರ ಕೃಷ್ಣ ಚತುರ್ದಶಿಯಂದು ಶತಭಿಷಾ ನಕ್ಷತ್ರಯೋಗ. ತುಲಾ, ಮೇಷ ಸಂಕ್ರಾಂತಿಗಳು, ನವರಾತ್ರಿಯಲ್ಲಿ ರಾಜರು ಕುದುರೆಗೆ (ಉಚ್ಚಶ್ರವರೈವತ) ಸಲ್ಲಿಸುವ ವಿಶೇಷ ಪೂಜೆ, ಮಕ್ಕಳ ಆಯುರ್ವೃಧರ್ಥ ಮಾಡುವ ವಿಧ್ಯುಕ್ತ ಕರ್ಮ. ಉಪನಯನ, ವಿವಾಹ ಇತ್ಯಾದಿ ಉದ್ದೇಶಗಳಿಗಾಗಿರುವ ನಿರ್ದಿಷ್ಟ ಎತ್ತರ ಸ್ಥಳ (ವೇದಿಕೆ) ಕರ್ತೃವು ಹೇಳುವ ವಿಜ್ಞಾಪನೆ. ಬೇರೆ ಪುರುಷನಲ್ಲಿ ಮದುವೆ ಆಗುವದಾಗಿ ಮಾತುಕೊಟ್ಟವಳು. (ಬ್ರಹ್ಮಚಾರಿ) ಮಹಾನಾಯ್ಕ, ಮಹಾವ್ರತ, ಗೋದಾನ ವ್ರತ. ದೇವಯಜ್ಞ ಭೂತಯಜ್ಞ ಪಿತೃಯಜ್ಞ. ವಿಧ್ಯುಕ್ತ ಕಾಲದಲ್ಲಿ ಸಸಿ ಇತ್ಯಾದಿ ನಡುವದು. ಸಂನ್ಯಾಸ ಸ್ವೀಕರಿಸುವವರ ದೇಹ ಮತ್ತು ಚಿತ್ತ ಹಾಗೂ ಸಮಸ್ತ ಇಂದ್ರಿಯ ಶುದ್ಧಿಗಾಗಿ ಮಾಡುವ ಹೋಮ. ಪ್ರೇತದ ಸಲುವಾಗಿ ವಿಧ್ಯುಕ್ತವಾಗಿ ಪೂಜಿಸಿ ಎತ್ತನ್ನು ಬಿಡುವದು. ದಂಡಧಾರಣ ರೂಪವಾದ ಸಂನ್ಯಾಸ ಸ್ವೀಕಾರ. ಪ್ರಯಾಣ ನಿಷಿದ್ಧ ವಾರ, ಗೋಧಿ, ದರ್ಭ, ಅನ್ನಗಳ ಮಿಶ್ರಣವನ್ನು ಮಂತ್ರಪೂರ್ವಕ ನಿರ್ದಿಷ್ಟ ಸ್ಥಳದಲ್ಲಿ ವಿಧಿವತ್ತಾಗಿ ಬೀರುವದು. ಶ, ಷ, ಸ ಅನಿಷ್ಟ ನಿವಾರಣೆಗಾಗಿ ಮಾಡುವ ಹೋಮ, ಪೂಜೆ ಇತ್ಯಾದಿ. 8 ವರ್ಷದ ಬಾಲಕಿ, (ನವರಾತ್ರಿ ಪೂಜಾ ಸಂಜ್ಞೆ) ವಿಧಿ ನಿಯಮ ಪಾಲಿಸುತ್ತ ಅತ್ಯಾಸಕ್ತನಾಗಿ ಪಿತ್ರಾದಿಗಳ ಮೃತತಿಥಿ ಆಚರಣೆ. ಅನ್ನಪ್ರಾಶನ ಮಾಡಿಸಿಕೊಳ್ಳುವ ಮಗು. (ಹಲ್ಲು ಬರುವ ಪರಂತದ ವಯಸ್ಸು) ಹಗಲು ಪೂರ್ತಿ ಇರುವ ತಿಥಿ. ಶಿವಪೂಜಕರು. ಪಾರಿಭಾಷಿಕ ಪದಕೋಶ ಶೀಲೋಂಛನ ಶಾಲಿನೀ ಶಸ್ತನ ಶಾಖಾಸಂಸ್ಕಾರ ಸಖಂಡಾ ಸಂಗಮ ಸಾಯಾಹ್ನ ಸೌರಮಾನ ಪೌರಮಾಸ ಸಾವನಮಾಸ ಸ್ಮಾರ್ತ ಸ್ಥಾಲೀಪಾಕ ಸಬ್ಸಿಲಸ್ನಾನ ಸಂಧ್ಯೆ ಸಂನ್ಯಾಸಿ ಮಹಾಲಯ ಸಮಾವರ್ತನೆ ಸಾಪ ಮಾತೃ ಸೀಮಂತ(ಉನ್ನಯನ) ಸೂತಿಕಾಗೃಹ ಸಿನಿವಾಲಿ ಸೂರಾದ್ಭುತ ಸ್ಟಂಡಿಲ ಪಜ್ಯೋತಿ ಆಶೌಚ ಸರ್ವತ್ಯಾಗ ಸದ್ಯ ಸಂಸೃಷ್ಟಿ ಸಂಕ್ರವ ಹಂಪ

ತಾನಾಗಿ ಉದುರಿದ ಧಾನ್ಯ ಸಂಗ್ರಹಿಸಿ ಜೀವಿಸುವದು. ಇನ್ನೊಬ್ಬರಲ್ಲಿ ಕೈಚಾಚದ ಕುಟುಂಬವನ್ನು ಪೋಷಿಸುವದು. ಎರಡು ದಿನ ಸಾಲುವಷ್ಟು ಧಾನ್ಯ ಸಂಗ್ರಹ. ೫೯೫ ದೇಶಾಂತರ ಇತ್ಯಾದಿ ಮೃತ ಸಂದರ್ಭದಲ್ಲಿ ದರ್ಭ ಇತ್ಯಾದಿಗಳಿಂದ ಶರೀರಾಕೃತಿ ರಚಿಸಿ ಮಾಡುವ ಉತ್ತರ ಕ್ರಿಯೆ. ದಿನದಲ್ಲಿ ಅಪೂರ್ಣವಾದ ತಿಥಿ. ದಿನದ 5ಭಾಗದಲ್ಲಿಯ 2ನೇ ಭಾಗ. ದಿನದ 5 ನೇ ಭಾಗ, (5 ಭಾಗದಲ್ಲಿ ) ಸೂರನ ಗತಿಗನುಗುಣವಾಗಿ ಎಣಿಸುವ ಮಾನ. ಒಂದು ರಾಶಿಯಲ್ಲಿ ಸೂರ ಸಂಚರಿಸುವ ಕಾಲ. 30ದಿನಗಳ ಮಾಸ, ವೈಷ್ಣವ ದೀಕ್ಷೆ ಪಡೆಯದವರು. ಯಾಗಕ್ಕಾಗಿ ಸಿದ್ಧಪಡಿಸುವ ವಿಶೇಷ ಚರು. ತೊಟ್ಟ ಬಟ್ಟೆ ಸಹಿತ ಮಾಡುವ ಸ್ನಾನ. ಸೂದಯ ಪೂರ ಘಟಿ, ಅಸ್ತದ ನಂತರ 3ಘಟಿ. ಭಾದ್ರಪದ ಕೃಷ್ಣ ದ್ವಾದಶಿ. ಬ್ರಹ್ಮಚಾರಿಯು ಅಧ್ಯಯನ, ಗುರುದಕ್ಷಿಣೆ ಮುಗಿಸಿ ಅನುಜ್ಞೆ ಪಡೆದು ವ್ರತದ ಕೊನೆಯಲ್ಲಿ ಮಾಡುವ ಸ್ನಾನ. ಮೊದಲ ಹೆಂಡತಿಯ ಮಗನಿಗೆ ತಂದೆಯ ಎರಡನೆ ಹೆಂಡತಿಯಾ ದವಳು ಸಾವಮ್ಮ ಮಾತೃ ಸ್ತ್ರೀ ಸಂಸ್ಕಾರ, ಗರ್ಭಾಭಿವೃದ್ಧಿ, ಭೂತ-ಪೈಶಾಚಿಕ ಬಾಧಾನಿವಾರಣೆ, ಸೌಭಾಗ್ಯ ಪ್ರಾಪ್ತಿಗಾಗಿ ಮಾಡುವ ಕರ್ಮವಿಶೇಷ ಬಾಣಂತಿ ಮನ. ಅಮಾವಾಸ್ಯೆಯ ಪ್ರಥಮ ಯಾಮ. ತಲೆ ಇಲ್ಲದೆ ಅಥವಾ 2-3 ತಲೆ ಸಹಿತ ಹುಟ್ಟುವದು. ಹೋಮಗಳಲ್ಲಿ ಉಪಯೋಗಿಸುವ ಸಂಸ್ಕಾರಗೊಂಡ ಪಾತ್ರ. ಹೋಮಕ್ಕಾಗಿ ರಂಗವಲ್ಲಿ ಇತ್ಯಾದಿಗಳಿಂದ ನಿರ್ದಿಷ್ಟ ರೀತಿಯಲ್ಲಿ ನಿರ್ಮಿಸಿದ ಹೋಮದ ಸ್ಥಳ. ದೇಶಾಧಿಪತಿ ಇತ್ಯಾದಿ ಮರಣಾಶೌಚ, ; ಪುತ್ರ, ವಿತ್ತ, ಜನ, ಪ್ರಾಪಂಚಿಕ ಸುಖವನ್ನು ತ್ಯಜಿಸುವದು. ಪ್ರದಕ್ಷಿಣಾಕ್ರಮ. ಒಮ್ಮೆ ಬೇರೆ ಅಡಿಗೆ ಮಾಡುವ ಮೂಲಕ ಪ್ರತ್ಯೇಕಗೊಂಡವ, ಪುನಃ ಒಟ್ಟಾದ ವ್ಯಕ್ತಿ. ದರ್ಭೆಯ ತುದಿಯಿಂದ ಅರ್ಘಪಾತ್ರಕ್ಕೆ ಬೀಳುವ ಜಲ. ಕ ನಿಯಮ ಯುಕ್ತರಾಗಿ, ಏಕದಂಡಧಾರಿಗಳಾಗಿರುವ ಸಂನ್ಯಾಸಿಗಳು.